Page #1
--------------------------------------------------------------------------
________________
೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರು
ಪಂಪ ಮಹಾಕವಿ ವಿರಚಿತ
ಪಂಪ ಭಾರತಂ
ಗದ್ಯಾನುವಾದ ಎನ್. ಅನಂತರಂಗಾಚಾರ್
ಮನುಷ್ಯ ಜಾತಿ ತಾನೊಂದೆ ವಲಂ
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು-೫೬೦೦೧೮
Page #2
--------------------------------------------------------------------------
________________
೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರು
ಪಂಪಮಹಾಕವಿ ವಿರಚಿತ ಪಂಪ ಭಾರತಂ
(ವಿಕ್ರಮಾರ್ಜುನ ವಿಜಯಂ)
ಗದ್ಯಾನುವಾದ ಎನ್. ಅನಂತರಂಗಾಚಾರ್
ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ
ಬೆಂಗಳೂರು- ೫೬೦೦೧೮
Page #3
--------------------------------------------------------------------------
________________
Pampakavi
Virachita-PAMPABHARATAM-(Vikramarjuna
Vijayam) Original with Prose rendering by : Sri N. Anantharangachar published by: Kannada Sahitya Parishattu, Pampa Mahakavi Road, Chamarajapete, Bengaluru-560018
Pages: 787+iv Price : Rs. 300-00 : 2016
ಮುದ್ರಣ ವರ್ಷ
ಪ್ರತಿಗಳು
ಬೆಲೆ
© ಹಕ್ಕುಗಳನ್ನು ಕಾಯ್ದಿರಿಸಿದೆ.
ಪ್ರೊ ಧರಣೇಂದ್ರ ಕುರಕುರಿ
ಪ್ರೊ. ಎಂ. ಕೃಷ್ಣಗೌಡ ಶ್ರೀ ರಂಜಾನ್ ದರ್ಗಾ ಡಾ. ಹನುಮಾಕ್ಷಿ ಗೋಗಿ ಡಾ. ಬಿ.ಕೆ. ರವಿ
ܗܘܦ :
ಡಾ. ತಮಿಳ್ ಸೆಲ್ವಿ ಶ್ರೀ ವೀರಭದ್ರ ಸಿಂಪಿ
ಸಮ್ಮೇಳನಾಧ್ಯಕ್ಷರು
ನಿರ್ದೇಶಕರು
: 0000
ಅಧ್ಯಕ್ಷರು
: ಮುನ್ನೂರು ರೂಪಾಯಿಗಳು
ಸದಸ್ಯರು
ಶ್ರೀ ಜರಗನಹಳ್ಳಿ ಶಿವಶಂಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಪ್ರಕಟಣಾ ಸಮಿತಿ
ಡಾ. ಮನು ಬಳಿಗಾರ್
ಡಾ. ಎಚ್.ಎಲ್. ಪುಷ್ಪ ಶ್ರೀ ಜೆ.ಎನ್. ಶಾಮರಾವ್ ಶ್ರೀ ಎ.ಆರ್. ಉಜ್ಜನಪ್ಪ
ಶ್ರೀ ಸಂಜಯ ಅಡಿಗ
ಶ್ರೀ ಪಾರಂಪಳ್ಳಿ ನರಸಿಂಹ ಐತಾಳ್ ಡಾ. ರಾಜಶೇಖರ ಹತಗುಂದಿ
ಮುಖಪುಟ ಕಲಾವಿನ್ಯಾಸ : ಶ್ರೀ ಯು.ಟಿ. ಸುರೇಶ್
ಮುದ್ರಣ
ಶ್ರೀ ವ.ಚ. ಚನ್ನೇಗೌಡ ಶ್ರೀ ಪಿ. ಮಲ್ಲಿಕಾರ್ಜುನಪ್ಪ ಶ್ರೀ ಬಿ.ಎನ್.ಪರಡ್ಡಿ, ಸಂಯೋಜನಾಧಿಕಾರಿಗಳು
ಡಾ. ಸಿದ್ಧಲಿಂಗಯ್ಯ
೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಶ್ರೀ ಕೆ.ಎ. ದಯಾನಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
: ಬಿ.ಎಂ.ಶ್ರೀ, ಅಚ್ಚುಕೂಟ ಆಫ್ಸೆಟ್ ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - ೧೮
Page #4
--------------------------------------------------------------------------
________________
ಅಧ್ಯಕ್ಷರ ನುಡಿ ಕನ್ನಡ ಸಾಹಿತ್ಯ ಪರಿಷತ್ತು ನಾಡು, ನುಡಿ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರಮಿಸುತ್ತಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ೧೯೧೫ ರಿಂದ ಇಲ್ಲಿಯವರೆಗಿನ ಸುದೀರ್ಘ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಕ್ಷೇತ್ರವನ್ನು ವೈವಿಧ್ಯಮಯವಾಗಿ ವಿಸ್ತರಿಸಿಕೊಂಡಿದೆ. ಅದರಲ್ಲಿ ಕನ್ನಡಿಗರಿಗೆ ಅತ್ಯುತ್ತಮ ಸಾಹಿತ್ಯವನ್ನು ಕಾಲಕಾಲಕ್ಕೆ ಒದಗಿಸಿಕೊಡುವುದೂ ಪ್ರಮುಖವಾದುದಾಗಿದೆ. ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಒಳಗೊಳ್ಳುವಂಥ ಸಾವಿರಾರು ಕೃತಿಗಳನ್ನು ಪರಿಷತ್ತು ಹೊರತಂದಿದೆ. ಜನರಿಗೆ ಬೇಕಾದ ಉಪಯುಕ್ತ ಹಾಗೂ ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ಕೊಡಬೇಕೆನ್ನುವ ಎಚ್ಚರವನ್ನು ಪರಿಷತ್ತು ಕಾದುಕೊಂಡಿದೆ. ಕನ್ನಡ ಭಾಷೆ, ಲಿಪಿ, ಸಂಸ್ಕೃತಿ ಕುರಿತ ಗ್ರಂಥಗಳು, ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳ ಗದ್ಯಾನುವಾದಗಳು, ಕವಿಕಾವ್ಯ ವಿಚಾರ ಸಂಕಿರಣಗಳ ಪ್ರಬಂಧಗಳು, ಜೀವನ ಚರಿತ್ರೆ, ಜಾನಪದ, ಶಾಸನ, ಆರೋಗ್ಯ ವಿಜ್ಞಾನ, ಮನೋವಿಜ್ಞಾನದಂಥ ವಿಭಿನ್ನ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸುವಲ್ಲಿ ಆಸಕ್ತಿ ತೋರಿದೆ. ಬೇಡಿಕೆ ಹೆಚ್ಚಾಗಿರುವ ಮತ್ತು ಮಾರಾಟವಾದ ಪುಸ್ತಕಗಳನ್ನು ಮರುಮುದ್ರಣದ ಮೂಲಕ ಸಹೃದಯರಿಗೆ ತಲುಪಿಸುತ್ತಿದೆ.
- ಪ್ರಸ್ತುತ 'ಪಂಪ ಮಹಾಕವಿ ವಿರಚಿತ ಪಂಪ ಭಾರತಂ' (ವಿಕ್ರಮಾರ್ಜುನ ವಿಜಯಂ) ಗ್ರಂಥವು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಖಿಲ ಭಾರತ ೮೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮರುಮುದ್ರಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಎಂದಿನ ಪ್ರೀತ್ಯಾದರಗಳಿಂದ ಈ ಕೃತಿಯನ್ನು ಸಹೃದಯ ಕನ್ನಡಿಗರು ಸ್ವೀಕರಿಸುತ್ತಾರೆಂದು ನಂಬಿದ್ದೇನೆ. ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದ ಬಿ.ಎಂ.ಶ್ರೀ. ಅಚ್ಚುಕೂಟದ ಸಿಬ್ಬಂದಿ ವರ್ಗಕ್ಕೂ, ಈ ಕೆಲಸದಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು.
೦೧-೧೦-೨೦೧೬
ಡಾ. ಮನು ಬಳಿಗಾರ್
ಅಧ್ಯಕ್ಷರು
Page #5
--------------------------------------------------------------------------
________________
ವಿಷಯ ಸೂಚಿ
೧೨೪
೧೬೯
೨೦೮
೨೫೭
ಈ
ಉಪೋದ್ಘಾತ ೧. ಪ್ರಥಮಾಶ್ವಾಸಂ ೨. ದ್ವಿತೀಯಾಶ್ವಾಸಂ ೩. ತೃತೀಯಾಶ್ವಾಸಂ ೪. ಚತುರ್ಥಾಶ್ವಾಸಂ ೫. ಪಂಚಮಾಶ್ವಾಸಂ
ಷಷ್ಠಾಶ್ವಾಸಂ ೭. ಸಪ್ತಮಾಶ್ವಾಸಂ ೮. ಅಷ್ಟಮಾಶ್ವಾಸಂ ೯. ನವಮಾಶ್ವಾಸಂ ೧೦. ದಶಮಾಶ್ವಾಸಂ ೧೧. ಏಕಾದಶಾಶ್ವಾಸಂ ೧೨. ದ್ವಾದಶಾಶ್ವಾಸಂ ೧೩. ತ್ರಯೋದಶಾಶ್ವಾಸಂ ೧೪. ಚತುರ್ದಶಾಶ್ವಾಸಂ
ಅನುಬಂಧ
&೬೭
C
೪೫೧
೫೦೦
.
೫೫೯
೬೩೬
G
೭೦೮
ಶಬ್ದಕೋಶ
2
បូ
Page #6
--------------------------------------------------------------------------
________________
ಉಪೋದ್ಘಾತ ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ.೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ ಹಿಂದೆ ಕನ್ನಡ ಸಾಹಿತ್ಯವು ಯಾವುದೋ ಒಂದು ರೀತಿಯಲ್ಲಿದ್ದಿರಬೇಕು. ರಾಜ್ಯದ ಆಡಳಿತಗಳ ಸಂಘಟ್ಟದಿಂದಲೂ ಸಾಮಾಜಿಕ ಜೀವನದ ಚಳುವಳಿಗಳಿಂದಲೂ ಸಾಹಿತ್ಯದಲ್ಲಿ ಕ್ರಮೇಣ ಬದಲಾವಣೆಗಳು ತೋರಿ ಬರತೊಡಗಿದವು. ಒಂದು ಕಾಲವು ಇನ್ನೊಂದು ಕಾಲವಾಗಿ ಪರಿವರ್ತನೆಯಾಗುವಾಗ ಇವೆರಡು ಕಾಲಗಳ ಸಂಘಟನೆಗಳಿಂದಲೂ ಪರಸ್ಪರ ಸಮಾಗಮಗಳಿಂದಲೂ ಸಮಾಜದಲ್ಲಿ ಅನೇಕ ಹೊಸವಿಚಾರಗಳು ತಲೆದೋರಿ ತತ್ಪಲವಾಗಿ ಕೃತಿಗಳು ಹೊರಬಿದ್ದು ವ್ಯವಹಾರದಲ್ಲಿ ಬರುವುವು. ಆದರೆ ಈ ಎರಡು ಕಾಲಗಳ ಸಂಧಿಸಮಯದಲ್ಲಿ ಸಿಕ್ಕಿಕೊಂಡಿರುವ ಕಾಲದ ಪರಿಸ್ಥಿತಿಯು ಬಹುವಿಲಕ್ಷಣವಾಗಿರುವುದು. ಜನಾಂಗವು ಪೂರ್ವಕಾಲದ ನಡವಳಿಕೆಗಳನ್ನು ಒಂದೇ ಸಲ ಬಿಟ್ಟು ಬಿಡುವುದಿಲ್ಲ. ಇದಕ್ಕೆ ಹೆಚ್ಚು ಕಾಲ ಬೇಕಾಗುತ್ತದೆ. ಈ ಮಧ್ಯೆ ಪೂರ್ವದ ನಡತೆಗಳನ್ನು ಬಿಡದಂತೆಯೂ ಹೊಸ ಚಳುವಳಿಗಳನ್ನು ಸಂಪೂರ್ಣವಾಗಿ ನಿರಾಕರಿಸದಂತೆಯೂ ಹಾಗೂ ಹೀಗೂ ಇರತಕ್ಕದ್ದು ಸ್ವಭಾವ. ಕ್ರಮೇಣ ಹಳೆಯ ಚಾಳಿಗಳೆಲ್ಲ ಮಾಯವಾಗಿ ನವೀನ ಪದ್ಧತಿಗಳು ಸಮಾಜದಲ್ಲಿ ಊರಿಕೊಳ್ಳುವುವು. ಆಮೇಲೆ ಅವುಗಳಿಗೆ ಪೂರ್ಣ ಆಶ್ರಯವು ದೊರೆತು ಅವುಗಳು ಸರ್ವತೋಮುಖವಾಗಿ ಬೆಳೆದು ತತ್ಕಾಲದ ಪ್ರಚಲಿತ ಪದ್ಧತಿಗಳಾಗಿ ಪರಿಣಮಿಸುವುವು. ಕರ್ಣಾಟಕದ ಹತ್ತನೆಯ ಶತಮಾನದ ಸ್ಥಿತಿಯೂ ಹೀಗೆಯೇ. ೯-೧೦ನೆಯ ಶತಮಾನಗಳ ಹಿಂದೆ ಕರ್ಣಾಟಕ ಸಾಹಿತ್ಯವು ಹೇಗಿತ್ತೆಂಬುದನ್ನು ಖಚಿತವಾಗಿ ನಿರ್ಧರಿಸಲು ಸಾಕಷ್ಟು ಸಲಕರಣೆಗಳು ಇನ್ನೂ ದೊರೆತಿಲ್ಲ . ಲಬ್ದವಾದ ಕೆಲವು ಗ್ರಂಥಗಳ ಸಹಾಯದಿಂದಲೂ ಶಾಸನಗಳ ನೆರವಿನಿಂದಲೂ ಹೇಗಿದ್ದಿತೆಂಬುದನ್ನು ಊಹಿಸಲು ಅವಕಾಶವಿದೆ.
ಸುಮಾರು ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಉತ್ತರದೇಶದಲ್ಲಿ ತಲೆದೋರಿದ ವೀರಕ್ಷಾಮದ ನಿಮಿತ್ತ ದಕ್ಷಿಣಕ್ಕೆ ವಲಸೆ ಬಂದ ಭದ್ರಬಾಹುವಿನ ತಂಡದವರು ಅಲ್ಲಿಂದ ಮುಂದಕ್ಕೆ ತಮ್ಮ ದಿಗಂಬರಪಂಥವನ್ನು ದಕ್ಷಿಣದಲ್ಲಿ ಬೆಳಸಿಕೊಂಡು ಬಂದರು. ಶ್ರವಣ ಬೆಳುಗೊಳವು ಅವರ ಕೇಂದ್ರವಾಯಿತು. ಅಲ್ಲಿಂದ ಅವರು ತಮ್ಮಧರ್ಮಪ್ರಸಾರವನ್ನು ಉದಾರವಾಗಿ ಮಾಡತೊಡಗಿದರು. ವೈಧಿಕಧರ್ಮಕ್ಕೆ ನೇರವಿರೋಧವಾಗಿದ್ದ ಬೌದ್ಧ ಜೈನಧರ್ಮಗಳಲ್ಲಿ ಬೌದ್ಧಮತವು ಜನರ ಮೇಲೆ ವಿಶೇಷ ಪ್ರಭಾವಶಾಲಿಯಾಗದೆ ೮-೯ನೆಯ ಶತಮಾನದ ವೇಳೆಗೆ ನಾಮಾವಶೇಷವಾಗಿರಬೇಕು. ಜೈನರಿಗೆ ಹಿಂದೆ, ಕರ್ಣಾಟಕದಲ್ಲಿ ದ್ರಾವಿಡಸಂಸ್ಕೃತಿಯೂ ಒಂದು ಬೌದ್ಧಸಾಹಿತ್ಯವೂ ಇದ್ದಿರಬೇಕು. ಇವೆರಡೂ ಆ ಕಾಲಕ್ಕೆ ಹಿಂದೆಯೇ ಮಾಯವಾಗಿರಬೇಕು. ಜೈನರಾದರೋ ಬೌದ್ದರಂತಲ್ಲದೆ ತಮ್ಮ ಮತ ಧರ್ಮಗಳನ್ನು ದೇಶಕಾಲಕ್ಕೆ ಅನ್ವಯಿಸುವಂತೆ ಮಾರ್ಪಡಿಸಿಕೊಂಡು ಅವುಗಳಿಂದ ತಾವೂ ಪ್ರಭಾವಿತರಾಗಿ ದೇಶೀಯರ ಮನಸ್ಸನ್ನು ಆಕರ್ಷಿಸಿದರು. ಜೈನ ಸಂನ್ಯಾಸಿಗಳು ವಿರಕ್ತರೂ ಆಚಾರಶೀಲರೂ ಆಗಿದ್ದುದರಿಂದ ರಾಜ ನಿರ್ಮಾಪಕರಾಗಿ
Page #7
--------------------------------------------------------------------------
________________
೨ | ಪಂಪಭಾರತಂ ಅವರ ಆದರ ಪೋಷಣೆಗೂ ಅವರ ಸಾಮಂತರ ಮತ್ತು ಅಧಿಕಾರಿಗಳ ಗೌರವಕ್ಕೂ ಪಾತ್ರರಾದರು. ಜೈನರ ಪಂಚಾಣುವ್ರತಗಳೂ, ದಾನಧರ್ಮಗಳೂ, ಪ್ರಜಾಸಮೂಹದ ಆದರ ಗೌರವಗಳಿಗೆ ಪಾತ್ರವಾಗಿ ಅವರ ಜೈನಧರ್ಮವು ಮನರಂಜಕವಾಯಿತು. ವೈದಿಕ ಪಂಥಕ್ಕೆ ಸರಿಹೋಗುವ ಅವರ ಆಚಾರ ವ್ಯವಹಾರಗಳೂ, ಜಾತಿಪದ್ಧತಿಗಳೂ ಕಾಲಾನುಕ್ರಮದಲ್ಲಿ ವೈದಿಕ ಆಕಾರಗಳನ್ನೇ ತಾಳಿದವು. ಜೈನಪಂಡಿತರೂ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿದ್ದ ತಮ್ಮಮತಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷೆಗಳಿಗೆ ಅಳವಡಿಸಿ ಪರಿವರ್ತಿಸಿ ತಮ್ಮ ಶಾಸ್ತ್ರಗ್ರಂಥಗಳನ್ನು ಆಗ ಪ್ರಚಾರದಲ್ಲಿದ್ದ ಇತರ ಶಾಸ್ತ್ರಗ್ರಂಥಗಳ ಮಾದರಿಯಲ್ಲಿ ರಚಿಸಿ ಇತರ ಪಂಡಿತರೊಡನೆ ವಾಕ್ಕಾರ್ಥಮಾಡಿ ಅವರನ್ನು ಜಯಿಸಿ ಅವರಿಂದ ತಾವೂ ಜಯಿಸಲ್ಪಟ್ಟು ತಮ್ಮ ಶಾಸ್ತ್ರಗ್ರಂಥಗಳನ್ನು ಜೀವಂತವಾಗಿ ಬೆಳಸಿಕೊಂಡು ಬಂದರು.
ಜೈನರು ಕರ್ಣಾಟಕದಲ್ಲಿ ಕಾಲೂರಿದ ಮೇಲೆ ಅವರ ಪ್ರಾಬಲ್ಯವು ಕ್ರಮಕ್ರಮವಾಗಿ ಹೆಚ್ಚುತ್ತ ಹೋಗಿ ಕಾಲಕ್ರಮದಲ್ಲಿ ಕರ್ಣಾಟಕವು ಅವರ ಒತ್ತಂಬಕ್ಕೆ ಒಳಪಟ್ಟು ತನ್ನ ನಿಜವಾದ ದ್ರಾವಿಡಸಂಸ್ಕೃತಿಯನ್ನು ತ್ಯಜಿಸಿರಬೇಕೆಂದು ಹೇಳಬಹುದು. ಮತಾಭಿಮಾನಿಗಳಾದ ಜೈನರು ತಮಗಿಂತ ಹಿಂದೆ ಇದ್ದ ಗ್ರಂಥಗಳನ್ನು ಇಲ್ಲದ ಹಾಗೆ ಮಾಡಿದುದರಿಂದಲೋ ಸರಿಯಾಗಿ ರಕ್ಷಿಸದೇ ಇದ್ದುದರಿಂದಲೋ ಆಗಿನ ಗ್ರಂಥಗಳಲ್ಲ ನಾಶವಾಗಿರಬೇಕು. ಆದರೆ ಒಂದು ವಿಷಯವನ್ನು ಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರ ಬೇಕು. ಅದುವರೆಗಿದ್ದ ಗ್ರಂಥಗಳಲ್ಲಿ ಅನಾದರಣೆಯನ್ನು ತೋರಿದರೂ ಜೈನರು ಕನ್ನಡದಲ್ಲಿ ಅನಾದರಣೆಯನ್ನು ತೋರಲಿಲ್ಲ. ಅವರು ಕನ್ನಡಭಾಷೆಯನ್ನು ಮೆಚ್ಚಿ ಅದನ್ನು ಚೆನ್ನಾಗಿ ವ್ಯಾಸಂಗಮಾಡಿ ಅದರಲ್ಲಿ ಪಾಂಡಿತ್ಯವನ್ನು ಪಡೆದು ತನ್ಮೂಲಕವಾಗಿ ತಮ್ಮಮತತತ್ವಗಳನ್ನು ಜನಸಾಮಾನ್ಯರಿಗೆ ಬೋಧಿಸತೊಡಗಿದರು. ಕರ್ಣಾಟಕದ ದ್ರಾವಿಡಸಂಸ್ಕೃತಿಯ ಸ್ಥಾನದಲ್ಲಿ ತಮ್ಮ ಸಂಸ್ಕೃತಿಯನ್ನು ನೆಲೆಗೊಳಿಸಿದರು. ಮೇಲೆಯೇ ತಿಳಿಸಿರುವಂತೆ ತಮ್ಮ ಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷೆಗಳಿಗೆ ಭಾಷಾಂತರಿಸಿ ಪಂಡಿತಪಾಮರರಿಗೆ ಸುಲಭವಾಗಿ ದೊರಕುವಂತೆ ಮಾಡಿದರು. ಸಮಂತಭದ್ರ ಕವಿಪರಮೇಷ್ಠಿ ಪೂಜ್ಯಪಾದ ಮೊದಲಾದವರು ಸಂಸ್ಕೃತಭಾಷೆಯಲ್ಲಿಯೇ ತಮ್ಮ ಗ್ರಂಥಗಳನ್ನು ರಚಿಸಿ ತಮ್ಮ ಪ್ರಭಾವವನ್ನು ನೆಲೆಗೊಳಿಸಿದಂತೆ ಕಾಣುತ್ತದೆ. ಅವರಿಂದ ಮುಂದೆ ಬಂದವರು ಸಂಸ್ಕೃತ ಕನ್ನಡ ಭಾಷೆಗಳೆರಡನ್ನೂ ಮತಪ್ರಚಾರಕ್ಕಾಗಿ ಉಪಯೋಗಿಸಿಕೊಂಡು ಕರ್ಣಾಟಕವನ್ನು ಸ್ವಾಧೀನಪಡಿಸಿಕೊಂಡರು. ಒಂಬತ್ತನೆಯ ಶತಮಾನದಲ್ಲಿದ್ದ ನೃಪತುಂಗನು ಕನ್ನಡದಲ್ಲಿ ಅನೇಕ ಗದ್ಯಪದ್ಯಾತ್ಮಿಕ ಗ್ರಂಥಗಳು ತನ್ನ ಕಾಲದಲ್ಲಿದ್ದವೆಂದು ಹೇಳಿ ಕೆಲವು ಕವಿಗಳ ಹೆಸರನ್ನು ಸೂಚಿಸಿದ್ದಾನೆ. ಆದರೆ ಆ ಕವಿಗಳ ಕೃತಿಗಳಾವುವೂ ಉಪಲಬ್ಧವಾಗಿಲ್ಲ.
- ಕರ್ಣಾಟಕ ರಾಜಮನೆತನಗಳಲ್ಲಿ ಕದಂಬ, ಗಂಗ ಮತ್ತು ರಾಷ್ಟ್ರಕೂಟರು ಜೈನಧರ್ಮದ ಪ್ರಭಾವಕ್ಕೆ ಒಳಪಟ್ಟವರು. ಅವರು ಜೈನಗುರುಗಳಿಗೂ ಬಸದಿಗಳಿಗೂ ಅನೇಕ ದತ್ತಿಗಳನ್ನು ಬಿಟ್ಟಿದ್ದಾರೆ. ಅವರ ಪ್ರಭಾವಕ್ಕೆ ಒಳಗಾಗಿ ತಾವೂ
Page #8
--------------------------------------------------------------------------
________________
ಉಪೋದ್ಘಾತ | ೩ ಜೈನಮತವನ್ನವಲಂಬಿಸಿದ್ದಾರೆ. ಗಂಗರ ದಂಡನಾಯಕನಾದ ರಾಚಮಲ್ಲನೇ ಶ್ರವಣಬೆಳುಗೊಳದ ಗೊಮ್ಮಟವಿಗ್ರಹವನ್ನು ಸ್ಥಾಪಿಸಿದವನು. ನೃಪತುಂಗ ಅಮೋಘವರ್ಷ ಮತ್ತು ಕೃಷ್ಣರು ವೀರಜೈನರೇ ಆಗಿದ್ದರು. ನಾಲ್ಕನೆಯ ಇಂದ್ರನು ಶ್ರವಣಬೆಳುಗೊಳದಲ್ಲಿ ಸಲ್ಲೇಖನವ್ರತದಿಂದ ನಿರ್ವಾಣಹೊಂದಿದಂತೆ ತಿಳಿದುಬರುತ್ತದೆ. ಹತ್ತನೆಯ ಶತಮಾನದಲ್ಲಿ ಚಾಳುಕ್ಯದೊರೆಯಾದ ತೈಲಪನು ಇಮ್ಮಡಿಕಕ್ಕನನ್ನು ಸೋಲಿಸಿ ದಕ್ಷಿಣದಲ್ಲಿ ರಾಜ್ಯಾಧಿಪತ್ಯ ವನ್ನು ವಹಿಸಿಕೊಂಡು ಪುನಃ ಚಾಳುಕ್ಯರಾಜ್ಯವನ್ನು ಸ್ಥಾಪಿಸಿದನು. ಚಾಳುಕ್ಯರು ಶೈವರೇ ಆದರೂ ಜೈನಮತದಲ್ಲಿ ಪೂರ್ಣವಾದ ಸಹಾನುಭೂತಿಯನ್ನು ತೋರಿದರು.
- ಆದಿಕಾಲದ ಕನ್ನಡಕವಿಗಳು ತಮ್ಮ ಕಾವ್ಯರಚನೆಗೆ ಆ ಕಾಲದ ಸಂಸತಕಾವ್ಯಗಳನ್ನು ಮಾದರಿಯನ್ನಾಗಿ ಅಂಗೀಕಾರ ಮಾಡಿದರು. ಆಗಿನ ಕಾಲಕ್ಕೆ ಸಂಸ್ಕೃತಸಾಹಿತ್ಯದ ಉನ್ನತ ಕಾಲ ಆಗಿ ಹೋಗಿತ್ತು. ಕಾವ್ಯಲಕ್ಷಣಗಳನ್ನು ಕುರಿತು ಅನೇಕ ಗ್ರಂಥಗಳು ತಲೆದೋರಿದ್ದವು. ಅವುಗಳ ಕಾವ್ಯಗಳ ದೋಷಗಳನ್ನು ಖಚಿತವಾಗಿ ನಿಷ್ಕರ್ಷೆ ಮಾಡಿದ್ದವು. ಭಾವದ ತೀವ್ರತೆಯೂ ಸರಳತೆಯೂ ಮಾಯವಾಗಿ ರೀತಿ, ಗುಣಾಲಂಕಾರಗಳಿಗೂ ಕವಿಸಮಯಗಳಿಗೂ ಪ್ರಾಶಸ್ತವುಂಟಾಗಿದ್ದಿತು. ಆನಂದವರ್ಧನನ ಧ್ವನಿತತ್ವವು ಪ್ರತಿಪಾದಿತವಾಗಿದ್ದರೂ ರೂಢಿಗೆ ಬಂದಿರಲಿಲ್ಲವೆಂದು ಕಾಣುತ್ತದೆ. ನೃಪತುಂಗನ ಕಾಲಕ್ಕೆ ಕನ್ನಡಭಾಷೆಯಲ್ಲಿ ಒಂದು ಹೊಸ ಪರಿವರ್ತನೆಯು ತಲೆದೋರಿದ್ದಿತು. ಕಾವ್ಯಗಳೂ ಹೊಸರೀತಿಯಲ್ಲಿ ರಚಿತವಾಗುತ್ತಿದ್ದವು. ಕನ್ನಡದಲ್ಲಿ ಕಾವ್ಯಗಳನ್ನು ಬರೆಯುವ ಕವಿಗಳು ಸಂಸ್ಕೃತಭಾಷೆಯಲ್ಲಿ ತಮಗಿದ್ದ ಹೆಚ್ಚಾದ ಪಾಂಡಿತ್ಯದಿಂದ ಕನ್ನಡಭಾಷೆಯಲ್ಲಿ ಸಂಸ್ಕೃತವನ್ನು ವಿಶೇಷವಾಗಿ ತುಂಬ ತೊಡಗಿದರು. ಆ ಭರದಲ್ಲಿ ಕನ್ನಡನುಡಿಯ ಗಡಿಯ ಮರ್ಯಾದೆಯೂ ಮೀರಿ ಕನ್ನಡಕಾವ್ಯಗಳೆಲ್ಲ ಸಂಸ್ಕೃತ ಮಯವಾಗುವುದಕ್ಕೆ ಪ್ರಾರಂಭವಾದುವು. ಈ ಪರಿಸ್ಥಿತಿಯನ್ನು ನೋಡಿ ನೃಪತುಂಗನು ವ್ಯಸನಪಟ್ಟ, ಕನ್ನಡದಲ್ಲಿ ಸಂಸ್ಕೃತವನ್ನು ಎಷ್ಟರಮಟ್ಟಿಗೆ ಮೇಳನ ಮಾಡಬಹುದು; ಬೆರಸುವಾಗ ಯಾವ ನಿಯಮವನ್ನನುಸರಿಸಬೇಕು ಮೊದಲಾದ ವಿಷಯಗಳನ್ನೊಳಗೊಂಡ 'ಕವಿರಾಜಮಾರ್ಗ' ವೆಂಬ ಲಕ್ಷಣಗ್ರಂಥವೊಂದನ್ನು ರಚಿಸಿದನು. ಕನ್ನಡ ಲಕ್ಷಣಗ್ರಂಥಗಳಲ್ಲಿ ಇದೇ ಮೊತ್ತಮೊದಲನೆಯದು. ಈ ಲಕ್ಷಣಗ್ರಂಥವನ್ನನುಸರಿಸಿ ಹೊಸಮಾದರಿಯ ಗ್ರಂಥಗಳು ಹೊರಬೀಳತೊಡಗಿರಬೇಕು. ಕರ್ನಾಟಕದಲ್ಲಿ ಎಲ್ಲೆಲ್ಲಿಯೂ ಸಾಹಿತ್ಯಾಭಿಮಾನವು ತಲೆದೋರಿ ಹತ್ತನೆಯ ಶತಮಾನದ ವೇಳೆಗೆ ಕನ್ನಡದಲ್ಲಿ ಬೆಳ್ಳಿಯ ಬೆಳಸು ತಲೆದೋರಿತು. ವೀರಾಗ್ರೇಸರರೂ ತ್ಯಾಗವೀರರೂ ಆದ ರಾಜರುಗಳೂ ಅವರ ಮಂತ್ರಿ ಸೇನಾಪತಿಗಳೂ ಕವಿಗಳಿಗೆ ಪೋಷಕವಾದುದಲ್ಲದೆ ಸ್ವಯಂ ಕವಿಗಳಾದರು. ರಾಜರುಗಳೇ ಅಲ್ಲದೆ ಧರ್ಮಾಭಿಮಾನಿಗಳನೇಕರು ಕವಿಗಳಿಗೆ ಆಶ್ರಯದಾತರಾದರು, ಕವಿಗಳು ಕಲಿಗಳೂ ಆಗಿ ತಮಗೆ ದೊರೆತ ಆಶ್ರಯವನ್ನು ಸದುಪಯೋಗಿಸಿಕೊಂಡು ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿ ಮಾಡುವುದಕ್ಕೂ ತಮ್ಮಧರ್ಮಋಣವನ್ನು ಪೂರ್ಣಮಾಡುವುದಕ್ಕೂ ಲೌಕಿಕ ಮತ್ತು ಧಾರ್ಮಿಕ ಗ್ರಂಥಗಳನ್ನು ರಚಿಸಿದರು. ಆಗಿನ ಕಾಲದ ಗಂಗ, ರಾಷ್ಟ್ರಕೂಟ,
Page #9
--------------------------------------------------------------------------
________________
`೪ | ಪಂಪಭಾರತ ಚಾಳುಕ್ಯರಾಜರ ವಿಶೇಷ ಪ್ರೋತ್ಸಾಹದಿಂದ ಕನ್ನಡರತ್ನತ್ರಯರೆಂದು ಪ್ರಸಿದ್ಧರಾದ ಪಂಪ ಪೊನ್ನ ರನ್ನರು ವೀರರಸಪ್ರಧಾನವಾದ ರಾಮಾಯಣ ಭಾರತ ಕಥೆಗಳ ಮೂಲಕ ತಮ್ಮ ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿಸಿದರೂ ಶಾಂತಿರಸಪ್ರಧಾನವಾದ ತೀರ್ಥಂಕರರ ಚರಿತ್ರೆಗಳನ್ನು ರಚಿಸಿ ತಾವು ಜಿನಸಮಯದೀಪಕರಾದುದೂ ಇದಕ್ಕೆ ಪ್ರತ್ಯಕ್ಷಸಾಕ್ಷಿ. ಇವರ ಕೃತಿಗಳ ಮಣಿವೆಳಗಿನಿಂದಲೇ ಆ ಕಾಲದ ಸಾಹಿತ್ಯಪ್ರಪಂಚವು ಜ್ವಾಜ್ವಲ್ಯಮಾನವಾಗಿದೆ
ಪಂಪ: ಕನ್ನಡರತ್ನತ್ರಯರಲ್ಲಿ ಮೊದಲಿಗ ಪಂಪ, ಕಾಲದೃಷ್ಟಿಯಿಂದಲ್ಲದಿದ್ದರೂ ಯೋಗ್ಯತೆಯ ದೃಷ್ಟಿಯಿಂದ ಈತನು ಕನ್ನಡದ ಆದಿಕವಿ. ಅಲ್ಲದೆ ಕವಿವೃಷಭ, "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪಂ' ಎಂಬ ನಾಗರಾಜನ ಉಕ್ತಿಯು ಅಕ್ಷರಶಃ ಸತ್ಯ. ಈತನ ಕಾವ್ಯಗಳು 'ಮುನ್ನಿನ ಕಬ್ಬಗಳೆಲ್ಲವನು ಇಕ್ಕಿ ಮೆಟ್ಟಿದು' ದಲ್ಲದೆ ಅಲ್ಲಿಂದ ಮುಂದೆ ಬಂದವುಗಳಿಗೆ ಮಾರ್ಗದರ್ಶಕವಾದುವು. ಕನ್ನಡಿಗರ ಸುದೈವದಿಂದ ಪಂಪನು ತನ್ನ ಕಾವ್ಯಗಳಲ್ಲಿ ತನ್ನ ಪೋಷಕನ, ತನ್ನ ಮತ್ತು ತನ್ನ ಕಾವ್ಯಗಳ ವಿಷಯಕವಾದ ಪೂರ್ಣ ವಿವರಗಳನ್ನು ಕೊಟ್ಟಿದ್ದಾನೆ. ಅವುಗಳ ಸಹಾಯದಿಂದ ವಾಚಕರು ಕೃತಿಗಳ, ಕೃತಿಕರ್ತನ, ಮತ್ತು ಕೃತಿಭರ್ತನ ಪೂರ್ಣ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗಿದೆ.
ಪೂರ್ವಸಮುದ್ರತೀರದಲ್ಲಿದ್ದ ತೆಲುಗುದೇಶಕ್ಕೆ ಸೇರಿದ ವೆಂಗಿಪುವಿನಲ್ಲಿ ವಸಂತ, ಕೊಟ್ಟೂರು, ನಿಡುಗುಂದಿ, ವಿಕ್ರಮಪುರ ಎಂಬ ಅಗ್ರಹಾರಗಳಿದ್ದುವು. ಅವುಗಳಲ್ಲಿ ಅಗ್ರಗಣ್ಯನೂ ಊರ್ಜಿತಪುಣ್ಯನೂ ವತ್ಸಗೋತ್ರೋದ್ಭವನೂ ನಯಶಾಲಿಯೂ ಸಕಲಶಾಸ್ತ್ರಾರ್ಥಮತಿಯೂ ಆದ ಮಾಧವಸೋಮಯಾಜಿ ಎಂಬ ಬ್ರಾಹ್ಮಣನಿದ್ದನು. ಆತನು ಅನೇಕ ಯಜ್ಞಗಳನ್ನು ಮಾಡಿ ಸರ್ವಕ್ರತುಯಾಜಿಯಾದನು. ಆತನ ಯಜ್ಞಕುಂಡಗಳಿಂದ ಹೊರಟ ಹೋಮಧೂಮವು ದಿಗ್ವನಿತೆಯರಿಗೆ ಕೃತಕಕುರುಳಿನಂತೆಯೂ ತ್ರಿಭುವನಕಾಂತೆಗೆ ಕಂಠಾಭರಣದಂತೆಯೂ ಶೋಭಿಸುತ್ತಿದ್ದರೂ ಅವುಗಳಲ್ಲಿ ಆಹುತಿ ಮಾಡಿದ ಪಶುಹತ್ಯಾದೋಷದಿಂದ ಆತನ ಧವಳಕೀರ್ತಿ ಕರಿದಾಯಿತೆಂದು ಕವಿಯ ಕೊರಗು. ಆತನ ಮಗ ಅಭಿಮಾನಚಂದ್ರ. ಇವನು ಅರ್ಥಿಗಳು ಯಾಚಿಸಿದ ಸಾರವಸ್ತುಗಳನ್ನೆಲ್ಲ ನಿರ್ಯೋಚನೆಯಿಂದಿತ್ತು ಗುಣದಲ್ಲಿ ಪುರುಷೋತ್ತಮನನ್ನೂ ಮೀರಿಸಿದನು. ಭುವನಭವನಖ್ಯಾತನಾದ ಅಭಿಮಾನಚಂದ್ರನ ಮಗ ಕೊಮರಯ್ಯ. ಈತನು ವೇದವೇದಾಂಗಪಾರಗ, ಪುರಾತನಚರಿತ. ಈತನಿಗೆ ಗುಣಮಣಿರತ್ನಾಕರನೂ ಅಜ್ಞಾನತಮೋನೀಕರನೂ ಆದ ಅಭಿರಾಮದೇವರಾಯನೆಂಬುವನು ತನಯ. ಈತನು 'ಜಾತಿಯೊಳೆಲ್ಲ ಉತ್ತಮಜಾತಿಯ ವಿಪ್ರಕುಲಂಗೆ ನಂಬಲೇಮಾತೋ ಜಿನೇಂದ್ರ ಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತಜ್ಞಾತಿಯನುತ್ತರೋತ್ತರಂಮಾಡಿ ನೆಗಚ್ಚೆದನ್.' ಇತ್ತೀಚೆಗೆ ಲಬ್ದವಾದ ಪಂಪನ ತಮ್ಮನಾದ ಜಿನವಲ್ಲಭನ ಗಂಗಾಧರಂ ಶಾಸನದಿಂದ ಅಭಿರಾಮದೇವರಾಯನಿಗೆ ಭೀಮಪಯ್ಯನೆಂಬ ಹೆಸರೂ ಇದ್ದಂತೆ ತೋರುತ್ತದೆ. ಪಂಪನ ತಾಯಿ ಅಣ್ಣಿಗೇರಿಯ ಸಿಂಘಣ ಜೋಯಿಸನ ಮಗಳಾದ ಅಬ್ಬಣಬ್ಬೆ, ಇವರ ಮಗನೇ
Page #10
--------------------------------------------------------------------------
________________
ಉಪೋದ್ಘಾತ | ೫ ಕವಿತಾಗುಣಾರ್ಣವನಾದ ಪಂಪ, ಪಂಪನಿಗೆ ಜಿನವಲ್ಲಭನೆಂಬ ಒಬ್ಬ ತಮ್ಮನಿದ್ದನು. ಇವನು ಪಂಪನಂತೆಯೇ ಕವಿಯೂ ಪಂಡಿತನೂ ಆಗಿದ್ದನು. ವೆಂಗಿಪಳುವು ತೆಲುಗುದೇಶದ ಒಂದು ಭಾಗವಾಗಿದ್ದರೂ ಅವನು ಆ ಪ್ರಾಂತ್ಯದ ಅಂದರೆ ವೆಂಗಿಮಂಡಲದ-ವೇಮಲ ವಾಡದ ಚಾಳುಕ್ಯರ ಆಶ್ರಯದಲ್ಲಿದ್ದರೂ ಪಂಪನ ತಾಯಿಯ ತವರೂರಾದ ಅಣ್ಣಿಗೇರಿಯು ಕನ್ನಡದೇಶವೇ ಆದುದರಿಂದ ಪಂಪನಿಗೆ ಮೊದಲಿನಿಂದಲೂ ಕನ್ನಡದೇಶದ ನಿಕಟ ಸಂಬಂಧವಿದ್ದಿರಬೇಕು.
ಪಂಪನು ದುಂದುಭಿಗಭೀರನಿನದ, ದುಂದುಭಿಸಂವತ್ಸರೋದ್ಭವ, 'ಕದಳೀಗರ್ಭಶ್ಯಾಮಂ ಮೃದು ಕುಟಿಲ ಶಿರೋರುಹಂ, ಸರೋರುಹವದನಂ ಮೃದು ಮಧ್ಯಮತನು, ಹಿತಮಿತ ಮೃದುವಚನಂ, ಲಲಿತಮಧುರಸುಂದರವೇಷಂ || ವತ್ಸಕುಲತಿಲಕನ್, ಅಭಿಜನ ವತ್ಸಲನ್, ಅಭಿಮಾನಮೂರ್ತಿ, ಕುಕವಿಯಶೋನಿ ರ್ಮತ್ಸರನ್, ಅಮೃತಮಯೋಕ್ತಿ, ಶ ರತ್ನಮಯಸುಧಾಂಶುವಿಶದಕೀರ್ತಿವಿತಾನಂ'
ಆತನು ಲಲಿತಾಲಂಕರಣ, ರಸಿಕ, ಶಿಸ್ತುಗಾರ, ಸ್ವಾಭಿಮಾನಿ ಎಂದರೂ ಒಪ್ಪುತ್ತದೆ. ತಾನು ವನಿತಾಕಟಾಕ್ಷಕುವಲಯವನಚಂದ್ರನಾಗಿದ್ದುದನ್ನು, ಕೇರಳವಿಟೀಕಟೀ ಸೂಾರುಣಮಣಿಯಾಗಿದ್ದುದನ್ನು, ಮಲಯ ಮತ್ತು ಆಂಧ್ರ ಯುವತಿಯರು ತನ್ನ ರೂಪಕ್ಕೆ ಮಾರುಹೋಗಿ ತನಗೆ ಅಧೀನರಾಗಿದ್ದುದನ್ನು ಆತನು ನಿಸ್ಸಂಕೋಚವಾಗಿ ಹೇಳಿಕೊಂಡಿದ್ದಾನೆ. ಸ್ತ್ರೀಲಾವಣ್ಯದ ಆಕರ್ಷಣೆಯ ಒಳಗುಟ್ಟು ಆತನಿಗೆ ಗೊತ್ತು. ಆದುದರಿಂದಲೇ ಆತನು ತನ್ನ ಕಾವ್ಯದಲ್ಲಿ 'ಸಾರಂ ಅನಂಗಜಂಗಮಲತಾಲಲಿತಾಂಗಿಯರಿಂದಮಿ ಸಂಸಾರಂ' ಎಂದು ಘೋಷಿಸಿರುವುದು. ಸಂಸಾರಸಾರೋದಯನಾದ ಆತನಿಗೆ ಭೋಗಸಾಮಗ್ರಿಗಳಾದ ಸ್ನಾನ, ಅನುಲೇಪನ, ಪುಷ್ಪಧಾರಣ, ಭೋಜನ, ತಾಂಬೂಲಚರ್ವಣ, ದುಕೂಲಾಚ್ಚಾದನ, ವನವಿಹಾರ, ಜಲಕ್ರೀಡಾದಿ ಸಮಸ್ತ ವಿಷಯಗಳಲ್ಲಿಯೂ ಅತ್ಯತಿಶಯವಾದ ಅನುಭವವೂ ರಸಿಕತೆಯೂ ಇತ್ತೆಂದು ಕಾಣುತ್ತದೆ. ಈ ಅನುಭವದ ವೈಭವವನ್ನು ನೋಡಬೇಕು 'ಆದಿಪುರಾಣದ ಹನ್ನೊಂದನೆಯ ಆಶ್ವಾಸದಲ್ಲಿ ಬರುವ ಭರತ ಚಕ್ರವರ್ತಿಯ ಚೈತ್ರಯಾತ್ರಾ ಸಂದರ್ಭದಲ್ಲಿ, ಆದರೂ ಪಂಪನಿಗೆ ಭೋಗದ ಮಿತಿಯೂ ತ್ಯಾಗದ ಹಿತವೂ ಚೆನ್ನಾಗಿ ತಿಳಿದಿತ್ತು. ಧರ್ಮಾರ್ಥಕಾಮಗಳ ಇತಿಮಿತಿಯು ಸ್ಪಷ್ಟವಾಗಿತ್ತು. ಅದನ್ನೇ ಅವನು ಮುಂದಿನ ಪದ್ಯಭಾಗದಲ್ಲಿ ವಿಶದಪಡಿಸಿದ್ದಾನೆ.
ಧರ್ಮ೦ ಪ್ರಧಾನಂ, ಅರ್ಥ
ಧರ್ಮಾಂಘ್ರಪಥಳಂ, ಅವರ್ಕ ರಸಮದು ಕಾಮಂ |
ಪಂಪನ ಬಾಲ್ಯದ ವಿವರಗಳೇನೂ ತಿಳಿದಿಲ್ಲ. ಈತನ ವಿದ್ಯಾಭ್ಯಾಸವು ಸರ್ವತೋಮುಖವಾಗಿರಬೇಕು. ರಾಮಾಯಣ, ಮಹಾಭಾರತ, ಮತ್ತು ಜೈನಧರ್ಮ
Page #11
--------------------------------------------------------------------------
________________
೬ | ಪಂಪಭಾರತಂ ಗ್ರಂಥಗಳ ಪರಿಚಯ ಈತನಿಗೆ ವಿಶೇಷವಾಗಿತ್ತು. ಪ್ರಾಕೃತ ಸಂಸ್ಕೃತ ಭಾಷೆಗಳಲ್ಲಿಯೂ ಪೂರ್ಣಪಾಂಡಿತ್ಯವಿತ್ತು. ಸಂಗೀತ, ನೃತ್ಯ, ಶಿಲ್ಪ, ವೈದ್ಯ, ಅರ್ಥಶಾಸ್ತ್ರ, ಕಾಮಶಾಸ್ತ್ರ, ನೀತಿಶಾಸ್ತ್ರ ಮೊದಲಾದುವುಗಳನ್ನು ಇವನು ಅಭ್ಯಾಸ ಮಾಡಿದ್ದಿರಬೇಕು. ಈತನ ಗುರು ಕೊಂಡಕುಂದಾನ್ವಯಕ್ಕೆ ಸೇರಿದ ದೇವೇಂದ್ರಮುನಿ. ಈತನಲ್ಲಿ ಪಂಪನಿಗೆ ಬಹಳಭಕ್ತಿ, ಆದುದರಿಂದಲೇ ಅವನು ತನ್ನನ್ನು ಆದಿಪುರಾಣದಲ್ಲಿ 'ದೇವೇಂದ್ರಮುನೀಂದ್ರವಂದ್ಯ ಪರಮಜಿನೇಂದ್ರಮುಖವಾಕ್ಚಂದ್ರಿಕಾಪ್ರಸರಪ್ರಸಾದೋದೀರ್ಣಸೂಕ್ತಿಕಲ್ಲೋಲ ಮಾಲಾಕೀರ್ಣಕವಿತಾಗುಣಾರ್ಣವಂ' ಎಂದು ಕರೆದುಕೊಂಡಿದ್ದಾನೆ. ಈ ದೇವೇಂದ್ರಮುನಿಯು ಶ್ರವಣಬೆಳಗೊಳದಲ್ಲಿದ್ದನೆಂಬುದು ಶಾಸನಗಳಿಂದ ತಿಳಿದು ಬರುತ್ತದೆ. ಪಂಪನು ವೆಂಗಿಪಟುವಿನಿಂದ ಇಲ್ಲಿಗೆ ಬಂದು ನೆಲಸಿ ಈ ಗುರುವಿನ ಪಾದದಡಿಯಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಈ ಕಾಲದಲ್ಲಿಯೇ ಅವನಿಗೆ “ಆರಂಕುಸಮಿಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ' 'ಕೋಗಿಲೆಯಾಗಿ ಮೇಣ್ ಮಣಿದುಂಬಿಯಾಗಿ ಪುಟ್ಟುವುದು ನಂದನದೊಳ್ ಬನವಾಸಿದೇಶದೊಳ್' ಎಂಬುದಾಗಿ ಅವನು ನಾನಾ ರೀತಿ ಹಾತೊರೆಯುವ ಬನವಾಸಿದೇಶದ ಸಂಬಂಧ ವುಂಟಾಗಿರಬೇಕು.
ಪಂಪನ ವಿದ್ಯಾವೈದುಷ್ಯದಿಂದ ಆಕರ್ಷಿತನಾದ, ಆಗ ವೆಂಗಿಮಂಡಲದ ಪಶ್ಚಿಮದ ಕಡೆ ಕನ್ನಡಸೀಮೆಗೆ ಸಮೀಪವಾದ ಲೆಂಬುಳಪಾಟಕವೆಂಬ ಪಟ್ಟಣದಲ್ಲಿ ರಾಜ್ಯವಾಳುತ್ತಿದ್ದ ರಾಷ್ಟ್ರಕೂಟರ ಮೂರನೆಯ ಕೃಷ್ಣನ ಸಾಮಂತರಾಜನಾದ ಅರಿಕೇಸರಿಯು ಪಂಪನನ್ನು ತನ್ನ ಆಸ್ಥಾನಕ್ಕೆ ಪ್ರೀತಿಯಿಂದ ಬರಮಾಡಿಕೊಂಡು ವಿಶೇಷವಾಗಿ ಮನ್ನಿಸಿ ಅವನಿಂದ ಗ್ರಂಥಗಳನ್ನು ಬರೆಯಿಸಿ ಪಂಚರತ್ನಗಳನ್ನೂ ಉಡುಗೊರೆಗಳನ್ನೂ ಧರ್ಮಪುರವೆಂಬ ಶಾಸನಾಗ್ರಹಾರವನ್ನೂ ದಯಪಾಲಿಸಿದನು. ಅಲ್ಲದೆ ತನ್ನ ಗುಣಾರ್ಣವನೆಂಬ ಬಿರುದಿಗೆ ಒಪ್ಪುವಂತೆ ಅವನಿಗೆ 'ಕವಿತಾಗುಣಾರ್ಣವ' ನೆಂಬ ಬಿರುದನ್ನು ಕೊಟ್ಟನು. ಅವನ ಆಶ್ರಯದಲ್ಲಿ ಪಂಪನು ಆತ್ಮತೃಪ್ತಿಗಾಗಿಯೂ ತನ್ನ ಧರ್ಮಋಣದ ಪರಿಹಾರಕ್ಕಾಗಿಯೂ ಶಕವರ್ಷ ೮೬೩ಕ್ಕೆ ಸರಿಯಾದ ಪ್ಲವಸಂವತ್ಸರದಲ್ಲಿ ತನ್ನ ೩೯ನೆಯ ವಯಸ್ಸಿನಲ್ಲಿ ಅಂದರೆ ಕ್ರಿ. ಶ. ೯೪೧ರಲ್ಲಿ ಪ್ರಶಸ್ತವಾದ ತಿಥಿವಾರನಕ್ಷತ್ರಗಳಿಂದ ಕೂಡಿದ ಶುಭಮುಹೂರ್ತದಲ್ಲಿ ಆದಿತೀರ್ಥಂಕರನ ಚರಿತ್ರೆಯಾದ 'ಆದಿಪುರಾಣ'ವನ್ನು ಬರೆದು ಮುಗಿಸಿದನು. ಇದಾದ ಕೆಲವು ದಿನಗಳಾದ ಮೇಲೆ ತನ್ನ ಆಶ್ರಯದಾತನ ಕೀರ್ತಿಸ್ಥಾಪನೆಗಾಗಿ 'ವಿಕ್ರಮಾರ್ಜುನ ವಿಜಯ' ಅಥವಾ 'ಪಂಪಭಾರತ'ವೆಂಬ ಮತ್ತೊಂದು ಗ್ರಂಥವನ್ನೂ ರಚಿಸಿದನು. ಒಂದನ್ನು ಮೂರುತಿಂಗಳುಗಳಲ್ಲಿಯೂ ಮತ್ತೊಂದನ್ನು ಆರು ತಿಂಗಳುಗಳಲ್ಲಿಯೂ ರಚಿಸಿದನೆಂದೂ ಒಂದರಲ್ಲಿ ಜಿನಾಗಮವನ್ನೂ ಇನ್ನೊಂದರಲ್ಲಿ ಲೌಕಿಕವನ್ನೂ ಬೆಳಗಿರುವೆನೆಂದೂ ಕವಿಯೇ ಹೇಳಿಕೊಂಡಿದ್ದಾನೆ.
- ಆದಿಪುರಾಣ-ನಮಗೆ ದೊರೆತಿರುವ ಪಂಪನ ಕೃತಿಗಳಲ್ಲಿ ಇದು ಮೊದಲನೆಯ ಕೃತಿ. (ಇದಕ್ಕೆ ಹಿಂದೆ ಪಂಪನು ಇನ್ನೂ ಕೆಲವು ಕೃತಿಗಳನ್ನು ರಚಿಸಿರಬಹುದು). ಇದು
Page #12
--------------------------------------------------------------------------
________________
ಉಪೋದ್ಘಾತ | ೭ ಒಂದು ಧಾರ್ಮಿಕ ಗ್ರಂಥ. ಪ್ರಥಮತೀರ್ಥಂಕರನಾದ ಪುರುದೇವನ ಕಥೆ. ಇದರಲ್ಲಿ ಧರ್ಮದ ಜೊತೆಗೆ ಕಾವ್ಯಧರ್ಮವನ್ನೂ ನಿರೂಪಿಸುತ್ತೇನೆಂದು ಪಂಪನೇ ಹೇಳುತ್ತಾನೆ. ಧರ್ಮಗ್ರಂಥವಾದ ಇದರಲ್ಲಿ ಪುರಾಣದ ಅಷ್ಟಾಂಗಗಳಾದ ಲೋಕಾಕಾರಕಥನ, ನಗರ ಸಂಪತ್ಪರಿವರ್ಣನ, ಚತುರ್ಗತಿಸ್ವರೂಪ, ತಪೋಧ್ಯಾನವ್ಯಾವರ್ಣನ ಮೊದಲಾದುವುಗಳನ್ನು ಒಂದೂ ಬಿಡದೆ ಶಾಸ್ತ್ರೀಯವಾದ ರೀತಿಯಲ್ಲಿ ವರ್ಣಿಸಬೇಕು. ಅಲ್ಲದೆ ಪಂಪನ ಆದಿಪುರಾಣಕ್ಕೆ ಮೂಲ, ಜಿನಸೇನಾಚಾರ್ಯರ ಸಂಸ್ಕೃತ ಪೂರ್ವಪುರಾಣ. ಆ ವಿಸ್ತಾರವಾದ ಪುರಾಣವನ್ನು ಅದರ ಮೂಲರೇಖೆ, ಉದ್ದೇಶ, ಸ್ವರೂಪ-ಯಾವುದೂ ಕೆಡದಂತೆ ಸಂಗ್ರಹಿಸುವುದು ಮಾತ್ರ ಅವನ ಕಾರ್ಯ. ಆದುದರಿಂದ ಈ ಗ್ರಂಥದಲ್ಲಿ ಅವನಿಗೆ ತನ್ನ ಪ್ರತಿಭಾಕೌಶಲವನ್ನು ಪ್ರಕಾಶಿಸಲು ವಿಶೇಷ ಅವಕಾಶವಿಲ್ಲ. ಆದರೂ ಪಂಪನು ತನ್ನ ಕಾರ್ಯವನ್ನು ಬಹುಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಆತನು ಪೂರ್ವಪುರಾಣಕ್ಕೆ ಬಹುಮಟ್ಟಿಗೆ ಋಣಿ. ಜಿನಸೇನಾಚಾರ್ಯರ ಕಥಾಸರಣಿಯನ್ನೇ ಅಲ್ಲದೆ ಭಾವಗಳನ್ನೂ ವಚನಗಳನ್ನೂ ವಚನಖಂಡಗಳನ್ನೂ ಪದ್ಯಭಾಗಗಳನ್ನೂ ವಿಶೇಷವಾಗಿ ಉಪಯೋಗಿಸಿ ಕೊಂಡಿದ್ದಾನೆ. ಆತನ ಗ್ರಂಥದ ಬಹುಭಾಗ ಪೂರ್ವಪುರಾಣದ ಅನುವಾದವಿದ್ದಂತೆಯೇ ಇದೆ. ಅಷ್ಟಾದರೂ ಅಲ್ಲಿ ಪಂಪನ ಕೈವಾಡ ಪ್ರಕಾಶವಾಗದೇ ಇಲ್ಲ. ಧರ್ಮಾಂಗಗಳನ್ನು ಬಿಟ್ಟು ಕಾವ್ಯಾಂಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಪಂಪನ ಪ್ರತಿಭಾಪಕ್ಷಿ ಗರಿಗೆದರಿ. ಗಗನವಿಹಾರಿಯಾಗುತ್ತದೆ. ತನ್ನ ಸ್ವತಂತ್ರವಿಲಾಸದಿಂದ ವಾಚಕರ ಮೇಲೆ ಪ್ರತ್ಯೇಕವಾದ ಸಮ್ಮೋಹನಾಸ್ತವನ್ನು ಬೀರಿ ಮಂತ್ರಮುಗ್ಧರನ್ನಾಗಿಸುತ್ತದೆ. ಸಂಗ್ರಹ ಮತ್ತು ಅನುವಾದ ಕಾರ್ಯದಲ್ಲಂತೂ ಆತನು ಅತಿನಿಪುಣ, ಆದಿತೀರ್ಥಂಕರನ ಭವಾವಳಿಗಳನ್ನೂ ಪಂಚಕಲ್ಯಾಣಗಳನ್ನೂ ಕವಿಯು ಬಹು ಎಚ್ಚರಿಕೆಯಿಂದ ಸಂಗ್ರಹಿಸಿ ಸುಂದರವಾಗಿ ವರ್ಣಿಸಿದ್ದಾನೆ. ಜಿನಸೇನನ ಮಹಾಸಾಗರದಿಂದ ಆಣಿಮುತ್ತುಗಳನ್ನು ಆಯುವುದರಲ್ಲಿ ತನ್ನ ಕೌಶಲವನ್ನು ಪ್ರದರ್ಶಿಸಿದ್ದಾನೆ. ಕಥೆಗೆ ನೇರ ಸಂಬಂಧ ಪಡೆದ ಭಾಗಗಳನ್ನಜ್ಜ ತನ್ನ ವಿವೇಕಯುತವಾದ ಕತ್ತರಿಪ್ರಯೋಗದಿಂದ ತೆಗೆದುಹಾಕಿ ಗ್ರಂಥದ ಪೂರ್ವಾರ್ಧದಲ್ಲಿ ವಿಸ್ತ್ರತವಾಗಿರುವ ಭವಾವಳಿಗಳಲ್ಲಿ ಏಕಪ್ರಕಾರವಾಗಿ ಹರಿದು ಬರುವ ಸೂತ್ರಧಾರೆಯನ್ನು ಸ್ಪಷ್ಟಿಕರಿಸಿದ್ದಾನೆ. ಮೊದಲನೆಯ ಐದು ಜನ್ಮಗಳಲ್ಲಿ ಜೀವದ ಒಲವು ಐಹಿಕ ಭೋಗ ಸಾಮ್ರಾಜ್ಯದ ಕಡೆ ಅಭಿವೃದ್ಧಿಯಾಗುತ್ತ ಬಂದು ವ್ರತದಿಂದ ತಪಸ್ಸಿನಿಂದ ಕಡೆಯ ಐದು ಭವಗಳಲ್ಲಿ ಕ್ರಮಕ್ರಮವಾಗಿ ಆ ಭೋಗಾಭಿಲಾಷೆಯು ಮಾಯವಾಗಿ ತ್ಯಾಗದಲ್ಲಿ ಲೀನವಾಗಿ ಅನಂತವಾದ ಮೋಕ್ಷ ಸಿದ್ದಿಯಾಗುವುದನ್ನು ಕವಿಯು ಬಹುರಮಣೀಯವಾಗಿ ವರ್ಣಿಸಿದ್ದಾನೆ. ಗ್ರಂಥದ ಉತ್ತರಾರ್ಧದಲ್ಲಿ ತೀರ್ಥಂಕರನ ಅನೇಕ ಪುತ್ರರಲ್ಲಿ ಪ್ರಸಿದ್ದರಾದ ಭರತ ಬಾಹುಬಲಿಗಳ ಕಥೆ ಉಕ್ತವಾಗಿದೆ. ಇದರಲ್ಲಿ ಅಧಿಕಾರಲಾಲಸೆಯ, ಕೀರ್ತಿಕಾಮನೆಯ, ವೈಭವಮೋಹದ ಪರಮಾವಧಿಯನ್ನೂ ಅದರಿಂದ ವೈರಾಗ್ಯ ಹುಟ್ಟಬಹುದಾದ ರೀತಿಯನ್ನೂ ಬಹು ಕಲಾಮಯವಾಗಿ ಚಿತ್ರಿಸಿದ್ದಾನೆ. 'ಭೋಗಂ ರಾಗಮನಾಗಿಸಿದೊಡಂ ಹೃದ್ರೋಗಮನುಂಟುಮಾಡುಗುಂ' 'ಅಮರೇಂದ್ರೋನ್ನತಿ,
Page #13
--------------------------------------------------------------------------
________________
೮ ) ಪಂಪಭಾರತಂ ಖೇಚರೇಂದ್ರವಿಭವ, ಭೋಗೀಂದ್ರ ಭೋಗ ಇವೆಲ್ಲಮಧ್ರುವ, ಅಭೀಷ್ಟಸುಖಪ್ರದಮ ದೊಂದೆ ಮುಕ್ತಿಸ್ಥಾನಂ' ಅದಕ್ಕೆ ಭೋಗವನ್ನು ತ್ಯಾಗದಲ್ಲಿಯೂ ವೈಭವವನ್ನು ವೈರಾಗ್ಯದಲ್ಲಿಯೂ ಲೀನಗೊಳಿಸುವುದೇ ಸಾಧನ 'ಜಿನಧರ್ಮಮಾರ್ಮಂ' 'ಜನಚರಣಮ ಶರಣಂ' ಇದೇ ಕಾವ್ಯದುದ್ದಕ್ಕೂ ಅನುರಣಿತವಾಗುತ್ತಿರುವ ಪಲ್ಲವಿ. ಈ ಭಾವವನ್ನು ವಾಚಕರ ಹೃದಯದಲ್ಲಿ ಪ್ರವೇಶಮಾಡಿಸುವ ಕಾರ್ಯದಲ್ಲಿ ಕವಿ ಕೃತಕೃತ್ಯನಾಗಿದ್ದಾನೆ. ಈ ಗ್ರಂಥದಲ್ಲಿ ಬರುವ ಚಿತ್ರಪರಂಪರೆ, ಭಾವಗಳ ಒಳತೋಟಿ, ಪಾತ್ರಗಳ ವ್ಯಕ್ತಿತ್ವವರ್ಣನಾ ವೈಖರಿ, ನಾಟಕೀಯತೆ ಇವು ಎಂತಹವನನ್ನಾದರೂ ಮುಗ್ಧಗೊಳಿಸುತ್ತವೆ. ಅದರ ಸ್ವಾರಸ್ಯದ ಸವಿಯನ್ನು ಅನುಭವಿಸುವುದಕ್ಕೆ ಕಾವ್ಯವನ್ನು ಸಿಂಹಾವಲೋಕನಕ್ರಮದಿಂದಲಾದರೂ ಪರಿಚಯಮಾಡಿಕೊಳ್ಳುವುದೊಂದೇ ಮಾರ್ಗ.
ಆದಿಪುರಾಣದ ವಿಹಾರವಿಮರ್ಶೆ: ವೈರಾಗ್ಯಮೂರ್ತಿಯಾದ ಆದಿ ತೀರ್ಥಂಕರನಿಗೆ ಆ ಪರಿಪಾಕವುಂಟಾಗಬೇಕಾದರೆ ಹತ್ತು ಜನ್ಮಗಳಲ್ಲಿ ತೊಳಲಬೇಕಾಯಿತು. ಮೊದಲನೆಯ ಜನ್ಮದಲ್ಲಿ ಆತನು ಸಿಂಹಪುರದಲ್ಲಿ ಶ್ರೀಷೇಣ ಮತ್ತು ಸೌಂದರಿಯರ ಮಗನಾಗಿ ಹುಟ್ಟಿದನು. ಪ್ರಾಪ್ತವಯಸ್ಕನಾಗಲು ತಂದೆಯು ರಾಜ್ಯವನ್ನು ನ್ಯಾಯಪ್ರಾಪ್ತವಾಗಿ ತನಗೆ ಕೊಡದೆ ಜನಪ್ರಿಯನಾದ ಕಿರಿಯ ಮಗನಿಗೆ ಕೊಟ್ಟನು. ಇದರಿಂದ ಜಯವರ್ಮನಿಗೆ ವಿಶೇಷ ನೋವುಂಟಾಯಿತು. ಈ ಜನ್ಮದಲ್ಲಿ ಪಡೆಯಲಾರದ ವೈಭವವನ್ನು ಮುಂದಿನ ಜನ್ಮದಲ್ಲಾದರೂ ಪಡೆದು ಈಗ ನನಗುಂಟಾದ ಅಭಿಭವವನ್ನು ನೀಗುತ್ತೇನೆಂದು, ಸ್ವಯಂಪ್ರಭುಗುರು ಪಾದಮೂಲದಲ್ಲಿ ಜಿನದೀಕ್ಷೆಯನ್ನು ಪಡೆದು ಘೋರತಪಸ್ಸಿನಲ್ಲಿ ನಿರತನಾದನು. ಆ ಕಾಲಕ್ಕೆ ಸರಿಯಾಗಿ ಅಂತರಿಕ್ಷದಲ್ಲಿ ನಳೊಡಗೂಡಿ ಸಮಸ್ತ ವೈಭವದಿಂದ ಹೋಗುತ್ತಿದ್ದ ವಿದ್ಯಾಧರನ ವಿಲಾಸಕ್ಕೆ ಮಾರುಹೋಗಿ ತಾನೂ ಅದನ್ನು ಪಡೆಯಬೇಕೆಂದಾಸ ಪಟ್ಟನು. ತಪಸ್ಸಿನಿಂದ ಪಡೆಯಬೇಕಾಗಿದ್ದ ಅನಲ್ಪಸುಖವನ್ನು ಮಾರಿ ಅಲ್ಪಸುಖಕ್ಕೆ ಮನಸೋತು ಗತಜೀವಿತನಾಗಿ ಅಳಕಾಪುರದ ಅತಿಬಳರಾಜನಿಗೂ ಆತನ ಮಹಾದೇವಿ ನಯನಮನೋಹರಿ ಮನೋಹರಿಗೂ ಮಹಾಬಳನೆಂಬ ಮಗನಾಗಿ ಹುಟ್ಟಿದನು. ತನು ಸಮಸ್ತ ವಿದ್ಯಾಧರ ವಿದ್ಯಾಸಾಗರನೂ ಅಶೇಷ ಶಾಸ್ತಪರಿಣತನೂ ಯವ್ವನಪರಿಪೂರ್ಣನೂ ಆಗಲಾಗಿ ಪೂರ್ವಜನ್ಮದ ತಪಸ್ಸಿನ ಫಲದಿಂದ
ಮೊಗಮುತ್ತುಲ್ಲ ಸರೋಜಹಾಸಿ, ನಯನಂ ನೀಲಾಂಬುಜಸ್ಪರ್ಧಿ, ಬಾ ಹುಗಳಾಜಾನುವಿಳಂಬಿಗಳ, ತೊಡೆಗಳುಂ ರಂಭಾಮ್ಮದುಸ್ತಂಭ ಶೋ ಭೆಗಳಂ ಗೆಲವು, ವಕ್ಷಮಂಬರಚರ ಶ್ರೀ ಗೇಹವೆಂಬೊಂದೆ ರೂ
ಪ ಗಡಂ, ನೋಡಲೊಡಂ ಮರುಳೊಳಿಸುಗುಂ ವಿದ್ಯಾಧರಸ್ತೀಯರಂ ಹೀಗೆ ವಿದ್ಯಾರೂಪಬಲಸಂಪನ್ನನಾದ ಕುಮಾರನಿಗೆ ಅತಿಬಳನು ಯುವರಾಜ ಪಟ್ಟವನ್ನು ಕಟ್ಟಲು
ಲಲಿತಾಲಂಕರಣಪ್ರಸನ್ನ ರಸವತ್ತೇಯಂಗಳೊಳ್ ಮೂಡುತುಂ, ಮುಲುಗುತ್ತು, ಖಚರೀಜನಾನನನವಾಂಭೋಜಂಗಳೊಳ್ ಕಂಪನೀ
Page #14
--------------------------------------------------------------------------
________________
ಉಪೋದ್ಘಾತ | ೯ ಅಳುತುಂ, ನಂದನರಾಜಿಯೋಳ್ ನಲಿಯುತುಂ, ತದ್ರಾಜಹಂಸಂ, ನಿರಾ
ಕುಳಮೀ ಮಾಟಗಳಿಂದೆ, ಪೊಬ್ರುಗಳೆದಂ, ಸಂಸಾರಸಾರೋದಯಂ | ಹೀಗಿರಲು ಒಂದು ದಿನ ರಾಜನು ಸಕಲವೈಭವದಿಂದ ಸಭಾಸ್ಥಾನದಲ್ಲಿದ್ದಾಗ ಆತನ ಮಂತ್ರಿಯಾದ ಸ್ವಯಂಬುದ್ದನೆಂಬುವನು ರಾಜನ ಅಭ್ಯುದಯಕಾಂಕ್ಷಿಯಾಗಿ ಅವನನ್ನು ಕುರಿತು
“ನಿನ್ನೀ ವಿದ್ಯಾಧರಲಕ್ಷ್ಮಿ ಪುಣ್ಯಜನಿತಂ ವಿದ್ಯಾಧರಾಧೀಶ್ವರಾ' ಭವವಾರಾಶಿನಿಮಗ್ನರಂ ದಯೆ ದಮಂ ದಾನಂ ತಪಂ ಶೀಲಮಂ ಬಿವ ಮಯಾಗಿರೆ ಸಂದ ಧರ್ಮಮೆ ವಲಂ ಪೊತ್ತುಗುಂ, ಮುಕ್ತಿಪ ರ್ಯವಸಾನಂಬರಮಾನುಷಂಗಿಕಫಲಂ, ಭೂಪೇಂದ್ರ, ದೇವೇಂದ್ರ ರಾ ಜವಿಲಾಸಂ ಪೆಜತಲ್ಕು, ನಂಬು, ಖಚರಕ್ಷಾಪಾಲಚೂಡಾಮಣೀ || ಎಂದು ಧರ್ಮಪ್ರಭಾವವನ್ನು ತತ್ಸಲಸ್ವಭಾವವನ್ನು ತಿಳಿಸಲು ಅಲ್ಲಿಯೇ ಇದ್ದ ಮಹಾಮತಿ ಸಂಭಿನ್ನಮತಿ ಶತಮತಿಗಳೆಂಬ ಇತರ ಮಂತ್ರಿಗಳು ತಮ್ಮಲೋಕಾಯತಿಕ ಯೋಗಾಚಾರ ಮಾಧ್ಯಮಿಕಮತಕ್ಕನುಗುಣವಾಗಿ ಜೀವಾಭಾವವನ್ನೂ ಐಹಿಕ ಸುಖಪಾರಮ್ಯವನ್ನೂ ಬೋಧಿಸಲು ಸ್ವಯಂಬುದ್ದನು ಅನುಭೂತ ಶ್ರುತದೃಷ್ಟರೇಚರ ಕಥಾನೀಕಗಳಿಂದಲೂ ಯುಕ್ತಿಯಿಂದಲೂ ಜೀವಸಿದ್ದಿಯನ್ನು ನಿಶ್ಚಯಿಸಿ ಪರಪಕ್ಷದೂಷಣಪುರಸ್ಸರವಾಗಿ ಸ್ವಪಕ್ಷವನ್ನು ಸಾಧಿಸಲು ಮಹಾಬಳನು ಸ್ವಯಂಬುದ್ಧನೇ ತನಗೆ ವಿಶ್ವಾಸಭೂಮಿಯಾಗಲು ಆತನ ಮಾರ್ಗವನ್ನೇ ಅನುಸರಿಸಿ ಅನೇಕ ವರ್ಷಕಾಲ ರಾಜ್ಯಭಾರ ಮಾಡಿ ಕೊನೆಯಲ್ಲಿ ಘೋರ ತಪಶ್ಚರಣೆಯ ಮೂಲಕ ಪ್ರಾಯೋಪಗಮನವಿಧಿಯಿಂದ ಶರೀರಭಾರವನ್ನಿಳಿಸಿ ಅನಲ್ಪಸುಖನಿವಾಸವೆನಿಸಿ ದೀಶಾನುಕಲ್ಪದಲ್ಲಿ ಲಲಿತಾಂಗದೇವನಾಗಿ ಹುಟ್ಟಿದನು. ಅಲ್ಲಿದ್ದ ಅನೇಕ ಮನೋನಯನವಲ್ಲಭೆಯರಲ್ಲಿ
'ಅದು ಸುಖದೊಂದು ಪಿಂಡಂ, ಅದು ಪುಣ್ಯದ ಪುಂಜಂ, ಅದಂಗಜಂಗೆ ಬಾಯ್ ಮೊದಲದು ಚಿತ್ತಜಂಗೆ ಕುಲದೈವಂ, ಅಂಗಜಚಕ್ರವರ್ತಿಗೆ ತಿದ ಪೊಸವಟ್ಟಂ, ಅಂತದು ಮನೋಜನ ಕೈಪಿಡಿ'
ಎಂಬ ರೂಪಿನ ಗಾಡಿಯಿಂದ ಕೂಡಿದ ಸ್ವಯಂಪ್ರಭೆಯು ಅವನ ಮನಸ್ಸನ್ನು ಸೂರೆಗೊಂಡಳು.
ನಗುಮರಾಂಗನಾಜನದ ರೂಪುಗಳೆಲ್ಲಮದೀಕೆಯದೊಂದು ದೇ ಸೆಗೆ ನಿಮಿರ್ವೊಂದು ಪುರ್ವಿನ ನಯಕ್ಕಮಮರ್ವೊಂದ ದಗುಂತಿಗೊಂದು ಭಂ ಗಿಗೆ ನೆಗಳೊಂದು ಮೆಚ್ಚಿನ ತೊದಳುಡಿಗಷ್ಟೊಡಮೆಯ್ವಾರವೇ ನೊಗಸುವವೆಂದು ತಳಗಲನಾಕೆಯನಾ ಲಲಿತಾಂಗವಲ್ಲಭಂ ||
ವ್ರತದಿಂದ ಪಡೆದ ಇಂದ್ರಲೋಕವೈಭವವು ಮನಕ್ಕಾಹ್ಲಾದವನ್ನುಂಟುಮಾಡುವ ಆ ಸತಿಯಿಂದ ಸಾರ್ಥಕವಾಯಿತೆಂದು ಲಲಿತಾಂಗದೇವನು ಸಂತೋಷಪಟ್ಟನು.
Page #15
--------------------------------------------------------------------------
________________
೧೦ | ಪಂಪಭಾರತಂ
ಅಣಿಮಾದ್ಯಷ್ಟಗುಣಪ್ರಭೂತವಿಭವಂ, ದೇವಾಂಗನಾ ಮನ್ಮಥ ಪ್ರಣಯಪ್ರಿಣಿತಮಾನಸಂ, ಸುರವಧೂಲೀಲಾವಧೂತಪ್ರತಿ ಕ್ಷಣ ಚಂಚಚ್ಚಮರೀರುಹಂ, ಪಟುನಟಪ್ರಾರಬ್ಬಸಂಗೀತಕಂ ತಣಿದಂ ಸಂತತಮಿಂತು ದಿವ್ಯಸುಖದೊಳ್ ಸಂಸಾರಸಾರೋದಯಂ ||
ಆದರೆ ಈ ತಣಿವು ಎಷ್ಟು ಕಾಲ! ಆತ್ಮ ಪುಣೋಪಾರ್ಜಿತಾಮರಲೋಕವಿಭವ ಮುಗಿಯುತ್ತ ಬಂದು ಆರು ತಿಂಗಳು ಮಾತ್ರ ಉಳಿಯಿತು. ಲಲಿತಾಂಗದೇವನು ಮುಡಿದಿದ್ದ ಹೂಮಾಲೆ ಬಾಡಿತು. ದೇಹಕಾಂತಿ ಮಸುಕಾಯಿತು. ಆಭರಣಗಳು ಕಾಂತಿಹೀನವಾದವು. ತನ್ನ ಅವಸಾನಕಾಲದ ಸೂಚನೆಯುಂಟಾಯಿತು. ಅಲ್ಲಿಯ ಭೋಗವನ್ನು ಬಿಡಲಾರದೆ ಸುತ್ತಲಿನ ಕಲ್ಪವೃಕ್ಷಗಳನ್ನೂ ವಿಮಾನದ ಮಣಿಕಟ್ಟನ್ನೂ ಭೂಮಿಕೆಗಳನ್ನೂ ತನ್ನನ್ನು ಉಳಿಸಿಕೊಳ್ಳಬೇಕೆಂದು ಬೇಡಿದನು. ಕೊನೆಗೆ ತನ್ನ ಕಾಮಸಾಮ್ರಾಜ್ಯಸರ್ವಸ್ವಭೂತೆಯಾದ ನಲ್ಲಳ ಮುಖವನ್ನು ನೋಡಿ 'ಮೆಗ್ಗಳೆರಡಾದೊಡಮೇನ್ ಅಸುವೊಂದೆ ನೋå ಡೆಂಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನುಯ್ದಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇಶ್ ಸ್ವಯಂಪ್ರಭೆ' ಎಂದು ಅಂಗಲಾಚಿದನು. ಆಗ ಆ ಪ್ರಲಾಪವನ್ನು ಕೇಳಿ ಸಾಮಾನಿಕದೇವರು ಬಂದು
ನಿನಗೊರ್ವಂಗವಸ್ಥಾಂತರಮಮರಜನಕ್ಕೆಲ್ಲಮೀ ಪಾಂಗ, ಕಾರು
ನಿನಾದಂ ನಿನ್ನನಾದಂ ನಗಿಸುಗುಮೆದುಯ್ದಂತಕಂಗಿಲ್ಲ, ದೇವಾಂ ಗನೆಯರ್ ಮಾಯಾಂಪರೇ ಪೇಮ್ ಜನನ ಮೃತಿ ಜರಾತಂಕ ಶೋಕಾಗ್ನಿಯಂದಾ ವನುಮೀ ಸಂಸಾರದೊಳ್ ಬೇಯದನೊಳನೆ, ಶರಣ್ ಧರ್ಮದಿಂದೊಂದುಮುಂಟೆ!
“ಅಘಮೋರಿಯಲ್ಲದುಳೆದ ಗೆಲಲಾರ್ಕುಮೆ ಮೃತ್ಯುರಾಜನಂ' ಎಂದು ಎಚ್ಚರಿಸಲು ಲಲಿತಾಂಗನು ತನ್ನ ಉಳಿದ ಆಯಸ್ಸನ್ನು ಜಿನಾರ್ಚನೆಯಲ್ಲಿಯೇ ಕಳೆದು ಶರತ್ಸಮಯದ ಮೋಡದಂತೆ ಕರಗಿ ಉತ್ಪಲಖೇಟವೆಂಬ ಪುರದಲ್ಲಿ ವಜ್ರಬಾಹು ಮತ್ತು ವಸುಂಧರೆಯರಿಗೆ ವಜ್ರಜಂಘನೆಂಬ ಮಗನಾಗಿ ಹುಟ್ಟಿದನು. ಸ್ವಯಂಪ್ರಭೆಯೂ ಇನಿಯನಗಿಯನ್ನು ಸಹಿಸಲಾರದೆ
ಮದನನ ಕೈದುವದನ್, ಅನಂಗನ ಕೈಪೊಡೆಯೆಲ್ಲಿದಂ, ವಿಳಾ ಸದ ಕಣಿಯಲ್ಲಿದಂ, ಚದುರ ಪುಟ್ಟದನೆಲ್ಲಿದನೆಲ್ಲಿದಂ, ಎನೋ ದದ ಮೊದಲೆಲ್ಲಿದಂ, ಸೊಬಗಿನಾಗರಮೆಲಿದನ್, ಇಚ್ಛೆಯಾಣನೆ
ಇದನ್, ಎರ್ದೆಯಾಣನನ್ನರಸನಲ್ಲಿದನೋ ಲಲಿತಾಂಗವಲ್ಲಭಂ || ಎಂದು ಪ್ರಾಣವಲ್ಲಭವಿಯೋಗಶೋಕೊದ್ರೇಕವ್ಯಾಕುಳೆಯಾಗಿ ಮಹತ್ತರ ದೇವಿಯರ ಸೂಚನೆಯ ಪ್ರಕಾರ ಮರುಭವದಲ್ಲಿ ಇನಿಯನನ್ನು ಪಡೆಯುವುದಕ್ಕಾಗಿ ಜಿನಪತಿಯನ್ನು ಪೂಜಿಸಿ ಗುರುಪಂಚಕವನ್ನು ನೆನೆದು ಉತ್ಪನ್ನಶರೀರೆಯಾಗಿ ಪುಂಡರೀಕಿಣಿಯಲ್ಲಿ ವಜ್ರದಂತನಿಗೂ ಲಕ್ಷಿಮತೀಮಹಾದೇವಿಗೂ ಕಾಮನ ಮಂತ್ರ ದೇವತೆಯಂತೆ ಅತ್ಯಂತ ಸೌಂದರ್ಯದಿಂದ ಕೂಡಿದ ಶ್ರೀಮತಿಯೆಂಬ ಮಗಳಾಗಿ ಹುಟ್ಟಿ ನವಯವ್ವನಲಕ್ಷ್ಮಿಯನ್ನು ತಾಳಿದಳು. ಹಿಂದಿನ ಜನ್ಮದ ವಾಸನೆ ಶ್ರೀಮತಿ
Page #16
--------------------------------------------------------------------------
________________
ಉಪೋದ್ಘಾತ | ೧೧. ವಜ್ರಜಂಘರಿಬ್ಬರನ್ನೂ ಬೆನ್ನಟ್ಟಿ ಬರುತ್ತದೆ. ಇಬ್ಬರೂ ಪರಸ್ಪರ ಸಮಾಗಮಕ್ಕೆ ಹಾತೊರೆಯುತ್ತಾರೆ. ಶ್ರೀಮತಿಯು ತನ್ನ ಹಿಂದಿನ ಜನ್ಮದ ನೆನಪುಗಳನ್ನೆಲ್ಲ ಚಿತ್ರಿಸಿದ್ದ ಚಿತ್ರಪಟದ ಸಹಾಯದಿಂದ ಅವಳ ಸಖಿಯಾದ ಪಂಡಿತೆಯೆಂಬುವಳು ಅವರಿಬ್ಬರನ್ನೂ ಒಟ್ಟುಗೂಡಿಸುತ್ತಾಳೆ. ತಂದೆಯಾದ ವಜ್ರದಂತನು ಮಗಳ ವಿವಾಹವನ್ನು ಅತಿ ವಿಜೃಂಭಣೆಯಿಂದ (ಈ ವಿವಾಹದ ವೈಭವವನ್ನು ಮೂಲದಲ್ಲಿಯೇ ಓದಿ ತೃಪ್ತಿಪಡಬೇಕು). ನಡೆಸಿ ಮಗಳನ್ನು ಅಳಿಯನೊಡನೆ ಕಳುಹಿಸುತ್ತಾನೆ. ಇಲ್ಲಿ ಪಂಪನಿಗೆ ಮಹಾಕವಿ ಕಾಳಿದಾಸನ ಶಾಕುಂತಲದ ನಾಲ್ಕನೆಯ ಅಂಕದ ನಾಲ್ಕು ಶ್ಲೋಕಗಳು ಸ್ಮರಣೆಗೆ ಬರುವುವು. ಅವುಗಳಲ್ಲಿ ಒಂದೆರಡರ ಸಾರವನ್ನು ಬಟ್ಟಿಯಿಳಿಸಿದ್ದಾನೆ. ರಾಜಾಧಿರಾಜನಾದ ವಜ್ರದಂತನು ಅಳಿಯನ ಮೊಗವನ್ನು ನೋಡಿ
ಬಗೆದುಂ ನಿನ್ನನ್ವವಾಯೋನ್ನತಿಯನ್, ಇವಳ ಸ್ನೇಹಸಂಬಂಧಮಂ ನೀಂ ಬಗೆದು, ಸಂದಮ್ಮನಣಂ ಬಗದುಮಳೆಯದೇನಾನುಮೆಂದಾಗಳುಂ ಮೆ ಲ್ಯಗೆ ನೀಂ ಕಳ್ಳಿಪುದಮ್ಮ ನನೆದೆರ್ದೆಗಿಡದಂತಾಗೆ ಪಾಲಿಪುದಿಂತೀ
ಮೃಗಶಾಪೇಕ್ಷಾಕ್ಷಿಯಂ ಮನ್ನಿಸುವುದಿನಿತನಾಂ ಬೇಡಿದೆಂ ವಜ್ರಜಂಘಾ || ಎಂದೂ ಲಕ್ಷೀಮತಿಮಹಾದೇವಿಯು ಪ್ರಿಯಾತ್ಮಜೆಯ ಮುಖವನ್ನು ಅತಿಪ್ರೀತಿಯಿಂದ ನೋಡಿ
ಮನಮಣಿದಂಜಿ ಬೆರ್ಚಿ ಬೆಸಕೆಯ್, ನಿಜವಲ್ಲಭನೇನನೆಂದೊಡಂ , ಕಿನಿಸದಿರ್, ಒಂದಿದಗ್ರಮಹಿಷೇಪದದಲ್ಲಿ ಸದಸ್ಯೆಯಾಗು, ನಂ ದನರನಗಣ್ಯಪುಣ್ಯಧನರಂ ಪಡೆಯೆಂದಮರ್ದಪ್ತಿಕೊಂಡು ತ
ತನುಜೆಯಗಲೆಯೊಳ್ ನಗಪಿದರ್, ಬಸಮಗ್ಗದ ಬಾಷ್ಪವಾರಿಯಂ ||
ಅಲ್ಲದೆ ಅನಂತ ಸಾಮಂತಾಂತಃಪುರಪರಿವಾರದೊಡನೆ ಕೂಡಿ ಅವರನ್ನು ಸ್ವಲ್ಪ .. ದೂರ ಕಳುಹಿಸಿ ಬರುವ ಸಂದರ್ಭದಲ್ಲಿ
ಪೊಡವಡುವಪ್ಪಿಕೊಳ್ಳ, ನೆನೆಯುತ್ತಿರಿಮೆಂಬ, ಸಮಸ್ತವಸ್ತುವಂ ಕುಡುವ, ಪಲರ್ಮೆಯಿಂ ಪರಸಿ ಸೇಸೆಯನಿಕುವ, ಬುದಿವೇಂ ಕೆ. ಯೆಡೆ ನಿಮಗೆಂದೊಡಂಬಡಿಪ, ನರಗಿಗೆ ಕಣ್ಣನೀರ್ಗಳಂ |
ಮಿಡಿವ ಬಹುಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್ ಶ್ರೀಮತಿವಜ್ರಜಂಘರು ತಮ್ಮೂರನ್ನು ಸೇರಿದರು. ಅತಿವೈಭವದಿಂದ ಅನೇಕ ಸಮಸ್ತ ಭೋಗಗಳನ್ನು ಅನುಭವಿಸಿದರು. ಹೀಗಿರುವಲ್ಲಿ ಒಂದು ದಿನ ರಾತ್ರಿ ಶಯ್ಯಾಗೃಹದಲ್ಲಿ ಈ ದಂಪತಿಗಳು ಮಲಗಿರುವಾಗ ಸೆಜ್ಜೆವಳನು ಕೇಶಸಂಸ್ಕಾರಕ್ಕೆಂದು ಧೂಪಗುಂಡಿಗೆಯಲ್ಲಿ ಅಳವರಿಯದೆ ವಾಸನಾದ್ರವ್ಯವನ್ನಿಕ್ಕಿ ಆ ಸೆಜ್ಜೆವನೆಯ ಗವಾಕ್ಷಜಾಲಗಳನ್ನು ತೆರೆದಿಡಲು ಮರೆತುಬಿಟ್ಟನು. ಇದರ ಹೊಗೆ ಸುತ್ತಿ ಶ್ರೀಮತಿ ವಜ್ರಜಂಘರು ಪ್ರಾಣ ಬಿಟ್ಟರು.
ಮೊದಲೊಳ್ ನೀಳ್ಳು ಪೊದಟ್ಟು ಪರ್ವಿ ಪದಪಂ ಕೈಕೊಂಡು ಮಂದೈಸಿ ಮಾ ಇದೆ ತನ್ನಂದದೊಳೇಳೆಗುಂದದೆ ನಿರುದ್ಯೋಚ್ಛಾಸಮಪ್ಪನ್ನೆಗಂ ಪುದಿನಾ ದಂಪತಿಯ ಪುದುಂಗೊಳಿಸಿ, ಲೋಕಾಶರ್ಯಮಂ ಮಾಡಿ ಕೊಂ ದುದು ಕೃಷ್ಣಾಗರುಢಪಧಮನಿವಹಂ ಕೃಷ್ಕರಗಂ ಕೊಲ್ವವೊಲ್ |
Page #17
--------------------------------------------------------------------------
________________
೧೨ | ಪಂಪಭಾರತಂ
ಭೋಗಾಂಗಮಾಗಿಯುಂ ಕೃ ಪ್ಲಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ ಭೋಗಿಗಳನಿಂತು ಸಂಸ್ಕೃತಿ ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ | ಅನಿತು ಸುಖದನಿತು ಭೋಗದ ಮನುಜಯುಗಂ ನೋಡೆ ನೋಡೆ ತತ್ಕ್ಷಣದೊಳ್ ತಾ ನಿನಿತೊಂದು ದೆಸೆಯನೆಯ್ದಿದುದು
ಆದರೂ 'ತೋಳಂ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮನಂದೊಡೆಗಳೆದರ್ ಓಪರೋಪಗೊಳೊಡಸಾಯಲ್ಪಡೆದರ್' ಇನ್ನಿದಕ್ಕಿಂತ ಭಾಗ್ಯವೇನು ಬೇಕು?
ಹೀಗೆ ಸಹಮರಣದಿಂದ ಸತ್ತ ಶ್ರೀಮತಿವಜ್ರಜಂಘರ ಪ್ರೇಮಸಂಬಂಧ ಮುಂದಿನ ಜನ್ಮದಲ್ಲಿಯೂ ಅನುವರ್ತಿಸುತ್ತದೆ. ಅವರ ಭೋಗಕಾಂಕ್ಷೆಯೂ ಕಡಿಮೆಯಾಗುವುದಿಲ್ಲ. ಪುನಃ ಭೋಗಭೂಮಿಯಲ್ಲಿಯೇ ಹುಟ್ಟುತ್ತಾರೆ. ಹಿಂದಿನ ಸ್ವಯಂಬುದ್ದನೇ ಪ್ರೀತಿಂಕರನೆಂಬ ರೂಪದಿಂದ ಬಂದು
ಸೂಕ್ತಂ ಭವ್ಯಜನಪ್ರ ವ್ಯಕ್ತಂ ಜೈನಾಗಮೋಕ್ತಮಿಂ ನಿನಗೆ ಮದೀ ಯೋಕ್ತಮಿದರ್ದಯೊಳ್ ನೆಲಸುಗೆ ಮುಕ್ತಿಶ್ರೀಹಾರವಿಭ್ರಮಂ ಸಮ್ಮತ್ವಂ || ಎಂದೆಂದೂಡಮ್ಮ ನೀನುಂ. ಸಂದಯಮಣಮಲ್ಲದಿದನೆ ನಂಬಿನಿತಂ ನಿ | ನ್ನೊಂದಿದ ನಾರೀರೂಪದ ದಂದುಗದೊಳ್ ತೊಡರ್ದು ಬಿಡದೆ ನವೆಯುತ್ತಿರ್ಪೆ |
ಎಂದು ಪ್ರತಿಬೋಧಿಸುತ್ತಾನೆ. ಸಮ್ಯಕದ ಮಹಿಮೆಯಿಂದ ಶ್ರೀಮತಿ ವಜ್ರಜಂಘರು ತಮ್ಮ ಭೋಗತೃಷ್ಠೆಯನ್ನು ಕಡಿಮೆಮಾಡಿಕೊಂಡು ಬೇರೆಬೇರೆ ಜನ್ಮಗಳಲ್ಲಿ ಹುಟ್ಟಿ ತಪಶ್ಚರ್ಯೆಗಳಿಂದಲೂ ವ್ರತೋಪವಾಸಾದಿಗಳಿಂದಲೂ ಸಂಸ್ಕೃತರಾಗಿ ಪೂರ್ಣವಾಗಿ ಭೋಗವಿಮುಖರಾಗುತ್ತಾರೆ. ಕೊನೆಗೆ ವಜ್ರಜಂಘನು ಮಹಾಬಳನಿಂದ ಒಂಬತ್ತನೆಯ ಭವದಲ್ಲಿ ಅಹಮಿಂದ್ರನಾಗಿ ಸರ್ವಾರ್ಥಸಿದ್ದಿಯೆಂಬ ಸ್ವರ್ಗದಿಂದಿಳಿದು ಬಂದು ತೀರ್ಥಂಕರನಾಗಿ ಜನಿಸಲು ಹದಿನಾಲ್ಕನೆಯ ಮನುವಾದ ನಾಭಿರಾಜನ ಪತ್ನಿಯಾದ ಮರುದೇವಿಯ ಗರ್ಭದಲ್ಲಿ ಸೇರುತ್ತಾನೆ. ತೀರ್ಥಂಕರನುದಯಿಸುವುದನ್ನು ಇಂದ್ರನು ತಿಳಿದು ಅಯೋಧ್ಯಾಪುರವನ್ನು ನಿರ್ಮಿಸಿ ಆರುತಿಂಗಳು ಮುಂಚೆಯೇ ವಸುಧಾರೆಯನ್ನು ಕರೆಯಿಸಿ ದೇವತಾಸ್ತ್ರೀಯರಿಂದ ಜಿನಾಂಬಿಕೆಯ ಗರ್ಭಸಂಶೋಧನವನ್ನು ಮಾಡಿಸಿರುತ್ತಾನೆ. ತೀರ್ಥಂಕರನುದಯಿಸುವನು. ಇಂದ್ರನಿಗೆ ಆಸನಕಂಪವಾಗುವುದು. ಸೌಧರ್ಮೆಂದ್ರನು ಶಚಿಯ ಮೂಲಕ ತಾಯಿಯ ಹತ್ತಿರ ಮಾಯಾಶಿಶುವನ್ನಿಡಿಸಿ ಜಿನಶಿಶುವನ್ನು ಐರಾವತದ ಮೇಲೇರಿಸಿಕೊಂಡು ಹೋಗಿ ಸಕಲಾಮರರೊಡನೆ ಮೇರುಪರ್ವತದಲ್ಲಿ ಜನ್ಮಾಭಿಷೇಕವನ್ನು ಮಾಡಿ ಆನಂದನೃತ್ಯವನ್ನು ಮುಗಿಸಿ ಮಗುವನ್ನು
Page #18
--------------------------------------------------------------------------
________________
ಉಪೋದ್ಘಾತ | ೧೩ ಅಯೋಧ್ಯೆಗೆ ಕರೆದುತಂದು ತಾಯಿತಂದೆಗಳಿಗೊಪ್ಪಿಸಿ ವೃಷಭಸ್ವಾಮಿಯೆಂದು ಹೆಸರಿಟ್ಟು ತನ್ನ ಲೋಕಕ್ಕೆ ತೆರಳುವನು. ಬಾಲಕನು ಸಹೋತ್ಪನ್ನಮತಿಶ್ರುತಾವಧಿಜ್ಞಾನ ಬೋಧನಾದುದರಿಂದ ಪ್ರತ್ಯಕ್ಷೀಕೃತ ಸಕಲವಾಹ್ಮಯನಾಗಿ ಪ್ರತಿದಿನಪ್ರವೃದ್ಧಮಾನ ತನೂವಯೋವಿಭವನಾಗಲು ಅವನ ಯವ್ವನವು ಅತಿಮನೋಹರವಾಗುವುದು. ಆದರೂ ಚಂಚಲೆಯಾದ ರಾಜ್ಯಲಕ್ಸಿಯಲ್ಲಿಯೂ ಸಾರವಿಲ್ಲದ ಸಂಸಾರದಲ್ಲಿಯೂ ಪರಮನಿಗೆ ಅನಾದರಣೆವುಂಟಾಯಿತು. ಆಗ ತಂದೆಯಾದ ನಾಭಿರಾಜನು ಮಗನ ಪರಿಪೂರ್ಣಯವನಶ್ರೀಯನ್ನು ನೋಡಿ
ಇದು ದಲ್, ಅವಸ್ತುವನ್ನದೆ, ಮದುಕಿಯನೊಯ್ಯನೆ ಕೇಳು, ದಿವ್ಯಚಿ ಇದೊಳವಧಾರಿಸೆಂತನೆ ಜಗದ್ಗುರು ಲೋಹಿತಾರ್ಥದಿಂದ ಸ ಲೈುದು ವಲಮಿಂತಿದಂ ಬಗೆದು ಪುತ್ರಕಳತ್ರಪರಿಗ್ರಹಕ್ಕೆ ಮಾ ಣದೆ ಬಗೆದರ್ಪುದು, ಒಲ್ಲೆನಿದನೆಂದೊಡೆ ಸೃಷ್ಟಿಯ ಕೆಟ್ಟುಪೋಗದೇ ||
ಶಾಂತಾತ್ಮ ಮದುವೆನಿಲ್ ನೀ ನಿಂತೆನ್ನ ಗೃಹಸ್ಥ ಧರ್ಮದಿಂದಂ ನೀನೆಂ ತಂತೆ ಸಲೆ ನೆಗಳ ಜಗತೀ
ಸಂತತಿ ನಿನ್ನ ಧರ್ಮಸಂತತಿ ನಿಲ್ಕುಂ ||
ಎಂದು ಒತ್ತಾಯಪಡಿಸಲು ಆತನ ಉಪರೋಧಕ್ಕಾಗಿಯೂ ಪ್ರಜಾನುಗ್ರಹಕ್ಕಾಗಿಯೂ ಯಶಸ್ವತೀ ಮತ್ತು ಸುನಂದೆ ಎಂಬ ಎರಡು ಕನ್ಯಾರತ್ನಗಳನ್ನು ಪುರುದೇವನು ವರಿಸುವನು. ಮೊದಲನೆಯವಳಲ್ಲಿ ಭರತನೂ ಬ್ರಹ್ಮಯೂ ಎರಡನೆಯವಳಲ್ಲಿ ಬಾಹುಬಲಿ ಸೌಂದರಿಯರಲ್ಲದೆ ಒಟ್ಟು ನೂರುಪುತ್ರರೂ ಇಬ್ಬರು ಪುತ್ರಿಯರೂ ಜನಿಸಿದರು. ವೃಷಭನಾಥನು ಇವರೆಲ್ಲರಿಗೂ ಮತ್ತು ಇತರರಿಗೂ ಸಮಸ್ತ ವಿದ್ಯೆಗಳನ್ನು ಉಪದೇಶಮಾಡಿ ಕೃತಯುಗವನ್ನು ಪ್ರಾರಂಭಿಸಿ ರಾಜ್ಯಾಭಿಷಿಕ್ತನಾಗಿ ವಿವಿಧ ರಾಜವಂಶಗಳನ್ನು ಸ್ಥಾಪಿಸಿ ಅನೇಕ ಸಹಸ್ರವರ್ಷಗಳ ಕಾಲ ಆಳಿ ಭೂಮಂಡಲದಲ್ಲಿ ಸಕಲ ಸಂಪತ್ಸಮೃದ್ಧಿಯನ್ನುಂಟುಮಾಡಿದನು. ಆಗ ಆದಿದೇವನ ಪರಿನಿಷ್ಟ್ರಮಣ ಕಾಲ ಪ್ರಾಪ್ತವಾಯಿತು. ಇದನ್ನರಿತು ದೇವೇಂದ್ರನು ಸಂಗೀತ ಮತ್ತು ನೃತ್ಯಪ್ರಸಂಗದಿಂದ ಪ್ರತಿ ಬೋಧಿಸಲು ಸಕಲ ದೇವಾನೀಕದ ಜೊತೆಯಲ್ಲಿ ಬಂದು ಪರಮನ ಅಪ್ಪಣೆಯನ್ನು ಪಡೆದು ದೇವಗಣಿಕೆಯಾದ ತನ್ನಿಂದ ನಿಚ್ಚವೂ ಮೆಚ್ಚನ್ನು ಪಡೆಯುತ್ತಿರುವ ನೀಳಾಂಜನೆಯೆಂಬುವಳ ನೃತ್ಯಕ್ಕೆ ಏರ್ಪಡಿಸಿದನು. ಇಲ್ಲಿ ಪಂಪನ ಕೈವಾಡ ಅತ್ಯದ್ಭುತವಾಗಿದೆ. ಇಂತಹ ಚಿತ್ರ ಅಖಂಡ ಕನ್ನಡಸಾಹಿತ್ಯದಲ್ಲಿ ಅತಿ ವಿರಳ. ಇದನ್ನು 'ಆದಿಪುರಾಣ'ದ ಸಾರವೆನ್ನಬಹುದು.
ಮದನನ ಬಿಲ್ಗೊಳಮಾತನ ಸುದತಿಯ ಬೀಣೆಯೊಳಮಸವ ದನಿಯುಮನಿಟಿಸಿ ಮೈದು ದಲ್, ಎನಿಸಿದುದು, ಸುರತೂ ರ್ಯದ ರವದೊಳ್ ಪುದಿದ ಸುರವಧ್ರಗೀತರವಂ ||
..
Page #19
--------------------------------------------------------------------------
________________
೧೪ | ಪಂಪಭಾರತಂ
ಅಮರ್ದಿನ ಮಯೊಳಗೆಸೆದಪು ದಮ್ಮತಾಂಬುನಿನದಮನಿಸಿ ಸಭೆಯಿನಹೋ ಗೀ ತಮಹೋ ವಾದಿತಮೆನಿಸಿದು ದಮರೀಜನಗೀತಮ್ಮರವಾದಿತಮಾಗಳ್ || ಕಲಗೀತಂ ವಾದ್ಯ ನೃತ್ಯ ಲೀಲೆ ಪೆಣರ್ಗೊಪ್ರದೀಕೆಗಲ್ಲದೆ.... ಎನಿಸಿದ ನೀಲಾಂಜನೆ ಕ ರ್ಬಿನ ಬಿಲ್ಲಂ ಮಸೆದ ಮದನನಲರ್ಗಣೆ ಬರ್ದುಕಿ ತೆನಿಸುತೋಳಶೋಕಲ್ ಚೋರಿ ಕನೆ ನಿಖಿಲಜನಾಂತರಂಗಮಂ ರಂಗಮುಮಂ || ರಸ ಭಾವಾನುನಯಂಗಳ್ ಪೊಸವ, ಪುಗಿಲ್ ಪೊಸವೆ, ಚೆಲ್ವಿಗಳ್ ಪೊಸವ, ನಯಂ ಪೊಸವ, ಕರಣಂಗಳುಂ ನಿ ಪ್ರೊಸವೆನೆ ಪೊಸಯಿಸಿದಳಾಕೆ ನಾಟ್ಯಾಗಮಮಂ || ಕುಡುಪುಂ ಕಯ್ಯುಂ ಜತಿಯೊಳ್ ತಡವಡವರೆ ವಾದಕಂಗೆ ಪುರ್ವಿ೦ ಜತಿಯಿಂ ತೊಡರದೆ ನಡಯಿಸಿ ಪುರ್ವನೆ ಕುಡುಪನೆ ನರ್ತಕಿಯ ಸಭೆಗೆ ವಾದಕಿಯಾದಳ್ || ಸುರಗಣಿಕಾನಾಟ್ಕರಸಂ ಪರಮನ ಚಿತ್ತಮುಮನೆಯೇ ರಂಜಿಸಿದುದು ವಿ ಸುರಿತಸ್ಥಟಿಕಂ ಶುದ್ಧಾಂ
ತರಂಗಮೇನನ್ಯರಾಗದಿಂ ರಂಜಿಸದೇ ||
ಆದರೇನು? ಆ ಮಧುರಾಕಾರೆಗೂ ಆಯುರಂತವು ತಲೆದೋರಿತು. ಮಿಂಚಿನ ಹಾಗೆ ಇದ್ದಕ್ಕಿದ್ದ ಹಾಗೆಯೇ ಅದೃಶ್ಯಳಾದಳು. ಒಡನೆಯೇ ಇಂದ್ರನು ರಸಭಂಗಭಯದಿಂದ ಅವಳಂತೆಯೇ ಇದ್ದ ಮತ್ತೊಬ್ಬಳನ್ನು ಒಬ್ಬರಿಗೂ ತಿಳಿಯದಂತೆ ಏರ್ಪಡಿಸಿದನು. ಸಭೆಯವರೆಲ್ಲರೂ ನೀಳಾಂಜನೆಯೇ ಅಭಿನಯಿಸುತ್ತಿರುವಳೆಂದು ಭ್ರಾಂತಿಯಿಂದ ನೋಡುತ್ತಿದ್ದರು. ಆದರೆ ವಿದ್ಯಾನಿಳಯನಾದ ಪುರುದೇವನು ತಕ್ಷಣ ಅದನ್ನರಿತು ದೇಹಾನಿತ್ಯತೆಗೆ ಆಶ್ಚರ್ಯಪಟ್ಟು
ನಾರೀರೂಪದ ಯಂತ್ರ ಚಾರುತರಂ ನೋಡನೋಡೆ ಕರಗಿದುದೀ ಸಂ ಸಾರದನಿತ್ಯತೆ ಮನದೊಳ್ ಬೇರೂಆದುದೀಗಳಿಂತಿದಂ ಕಡೆಗಣಿಪಂ || ಕೋಟಿ ತೇಜದಿಂದಮೆಸೆವೀ | ನಾಟಕಮಂ ತೋಟಿ ಮಾಲ್ಗಳಿಲ್ಲ ಬಗೆಯೊಳ್ ನಾಟುವಿನಮಮರಿ, ಸಂಸ್ಕೃತಿ ನಾಟಕಮುಮನನಗೆ ನೆಲೆಯೆ ತೋಚಿದಳೀಗಳ್
Page #20
--------------------------------------------------------------------------
________________
ತನು ರೂಪ ವಿಭವ ಯವ್ವನ
ಧನ ಸೌಭಾಗ್ಯಾಯುರಾದಿಗಳೆಣ್ಣೆ ಕುಡುಮಿಂ ಚಿನ ಪೊಳಪು ಮುಗಿಲ ನೆಲಿಂ
ದನ ಬಿಲ್ ಬೊಬ್ಬುಳಿಕೆಯುವು ಪರ್ವಿದ ಭೋಗಂ ||
ಕಷ್ಟಂ ದುಃಖಾನಿಲಪರಿ
ಪುಷ್ಪಂ ಚಿಃ ಗತಿಚತುಷ್ಟಯಂ ಪ್ರಾಣಿಗೆ ಸಂ ತುಷ್ಟತೆಯನೆಯೆ ಪಡೆದುದ
ಉಪೋದ್ಘಾತ | ೧೫
ಭೀಷ್ಟಸುಖಪ್ರದಮದೊಂದೆ ಮುಕ್ತಿಸ್ಥಾನಂ ||
ಎಂದು ಸಂಸಾರ ಶರೀರ ಭೋಗ ವಿರಕ್ತಾಂತರಂಗವಾಗಿ ವಸುಂಧರಾ ರಾಜ್ಯವಿಮೋಹವೆಂಬ ನಿಗಳವನ್ನು ಪರಿದು ಅಯೋಧ್ಯಾ ಪೌದನಪುರಗಳಲ್ಲಿ ಭರತಬಾಹುಬಲಿಗಳನ್ನಿರಿಸಿ ವೃಷಭನಾಥನು ತಾನು ತಪೋರಾಜ್ಯದಲ್ಲಿ ನಿಂತನು. ಇತ್ತ ಭರತನು ಜಗತೀರಾಜ್ಯದಲ್ಲಿ ನಿಂತನು. ಪುರುದೇವನಿಗೆ ಕೇವಲ ಜ್ಞಾನೋತ್ಪತ್ತಿಯಾಯಿತು. ಭರತನಿಗೆ ಆಯುಧಶಾಲೆಯಲ್ಲಿ ಚಕ್ರರತ್ನದ ಉತ್ಪತ್ತಿಯೂ ಭರತನ ಪತ್ನಿಯಾದ ಮಹಾದೇವಿಗೆ ಪುತ್ರರತ್ನದ ಉತ್ಪತ್ತಿಯೂ ಏಕಕಾಲದಲ್ಲುಂಟಾದುವು. ಭರತ ಬಾಹುಬಲಿಗಳು ಪುರುಪರಮೇಶ್ವರನಲ್ಲಿಗೆ ಬಂದು ತಮ್ಮೋಪದೇಶವನ್ನು ಪಡೆದರು. ಬ್ರಹ್ಮಯೂ ಸೌಂದರಿಯೂ ದೀಕ್ಷೆಗೊಂಡರು. ಆದಿದೇವನ ಸಮವಸರಣ, ತದಂಗವಾದ ಭಗವದ್ವಿಹಾರ, ಜಗತ್ತಿಗೆ ಧರ್ಮವರ್ಷ-ಒಂದಾದಮೇಲೊಂದು ಸಾಂಗವಾಗಿ ನಡೆದುವು.
ಇನ್ನು ಭರತ ಚಕ್ರವರ್ತಿಯು ಚಕ್ರಪೂಜೆಮಾಡಿ ಷಟ್ಕಂಡಮಂಡಳವನ್ನು ಜಯಿಸಲು ದಿಗ್ವಿಜಯಕ್ಕೆ ಹೊರಡುವನು. ಇಲ್ಲಿ ಪಂಪನು ಕಾವ್ಯಧರ್ಮದ ಮರ್ಮವನ್ನು ಪ್ರಕಾಶಿಸಲು ತನ್ನ ಸರ್ವಸ್ವವನ್ನೂ ವ್ಯಯಮಾಡಿದ್ದಾನೆ. ಶರತ್ಕಾಲ, ಪ್ರಸ್ಥಾನಭೇರಿ, ಅಂತಃಪುರವಿಭ್ರಮ, ವಾರನಾರೀವಿಳಾಸ, ಆರೋಗಣೆಯ ವೈಭವ, ತಾಂಬೂಲ ಚರ್ವಣದ ಬೆಡಗು, ಚತುರಂಗಸೈನ್ಯದ ವಿಸ್ತಾರ, ಮಂದಾನಿಳದ ಮಾಧುರ್ಯ, ಗಂಗಾ ನದಿಯ ಸೌಂದರ್ಯ, ತತ್ತೀರಪ್ರದೇಶದ ವನವಿಹಾರ, ಪುಷ್ಪಾಪಚಯ, ಗಾನಲಹರಿ, ಲತಾನರ್ತನ, ಜಲಕ್ರೀಡೆ, ಸೂರ್ಯಾಸ್ತ, ಸಂಧ್ಯಾರಾಗ, ಚಂದ್ರೋದಯ, ಕೌಮುದಿ ಮಹೋತ್ಸವ, ಚಂದ್ರಿಕಾವಿಹಾರ, ಸುಖಶಯನ, ಪ್ರಭಾತ ಕೃತ್ಯ, ಮೊದಲಾದವುಗಳ ವರ್ಣನೆಗಳು ಒಂದಾದ ಮೇಲೊಂದು ಕಣ್ಣೆದುರಿಗೆ ನುಸುಳಿ ಹೃದಯವನ್ನು ಸೂರೆಗೊಂಡು ವಾಚಕರನ್ನು ಬೇರೊಂದು ಪ್ರಪಂಚಕ್ಕೆ ಸೆಳೆಯುತ್ತವೆ.
.
ಭರತ ಚಕ್ರವರ್ತಿಯು ಮುಂದೆ ನಡೆದು ಷಟ್ಕಂಡಮಂಡಳವನ್ನು ಚಕ್ರದ ಸಹಾಯದಿಂದ ಅನಾಯಾಸವಾಗಿ ಗೆದ್ದು ಗರ್ವೊದ್ದೀಪಿತನಾಗಿ ವೃಷಭಾದ್ರಿಗೆ ನಡೆದು ಅದರ ನೆತ್ತಿಯಲ್ಲಿ ತನ್ನ 'ವಿಶ್ವವಿಶ್ವಂಭರಾವಿಜಯ' ಪ್ರಶಸ್ತಿಯನ್ನು ಕೆತ್ತಿಸಲು ಆಸೆಯಿಂದ
ನೋಡಲಾಗಿ
ಅದಳನೇಕ ಕಲ್ಪ ಶತಕೋಟಿಗಳೊಳ್ ಸಲೆಸಂದ ಚಂ ದದ ಚಲದಾಯದಾಯತಿಯ ಬೀರದ ಚಾಗದ ಮಾತುಗಳ ಪೊದ
Page #21
--------------------------------------------------------------------------
________________
೧೬ | ಪಂಪಭಾರತಂ
ಅದವಿರೆ ತತ್ವಶಸ್ತಿಗಳೊಳಂತವನೊಯ್ಯನೆ ನೋಡಿನೋಡಿ ಸೋ |
ರ್ದುದು ಕೊಳೆಗೊಂಡ ಗರ್ವರಸಮಾ ಭರತೇಶ್ವರಚಕ್ರವರ್ತಿಯಾ ||
ಅವನ ಗರ್ವಮೇರುವು ಚೂರ್ಣಿಕೃತವಾಯಿತು. ಆದರೂ ಸಾಂಪ್ರದಾಯಕವಾಗಿ ಹಿಂದಿನ ದೊರೆಗಳಲ್ಲೊಬ್ಬನ ಪ್ರಶಸ್ತಿಯನ್ನು ತನ್ನ ದಂಡದಿಂದ ಸೀಂಟಿ ಕಳೆದು ಅಲ್ಲಿ ತನ್ನದನ್ನು ಬರೆಸಿ ಮುಂದೆ ಅಯೋಧ್ಯಾಭಿಮುಖವಾಗಿ ನಡೆದನು.
ಅಯೋಧ್ಯೆಯ ಬಾಗಿಲಲ್ಲಿ ಆತನ ಚಕ್ರರತ್ನ ನಿಂತು ಬಿಟ್ಟಿತು. ಭರತನಿಗೆ ಆಶ್ಚರ್ಯವಾಯಿತು. ಪುರೋಹಿತರನ್ನು ಕರೆದು ಕಾರಣವನ್ನು ಕೇಳಲು ಹೊರಗಿನ ಸಮಸ್ತರನ್ನು ಗೆದ್ದರೂ ಒಳಗಿರುವ ಆತನ ತಮ್ಮಂದಿರು ಅಧೀನವಾಗದಿದ್ದುದರಿಂದ ಜೈತ್ರಯಾತ್ರೆ ಪೂರ್ಣವಾಗಲಿಲ್ಲವೆಂದು ತಿಳಿಸಿದರು. ವಿಜಯೋನ್ಮತ್ತನಾದ ಚಕ್ರವರ್ತಿಗೆ ಅವರನ್ನು ಗೆಲ್ಲಬೇಕೆಂಬ ತವಕ. ತನಗೆರಗಬೇಕೆಂದು ಅವರಿಗೆ ಹೇಳಿಕಳುಹಿಸಿದ. ದೂತನ ನುಡಿಯನ್ನು ಕೇಳಿದ ಅವರು
ಪಿರಿಯಣ್ಣಂ, ಗುರು, ತಂದೆಯೆಂದೆಂಗುವಂ ಮುನ್ನೆಲ್ಲಂ, ಇಂತೀಗಳಾ, ಳರಸೆಂಬೊಂದು ವಿಭೇದಮಾದೊಡಜಕಂ ಚಃ ಕಷ್ಟಮಲ್ಲೇ ವಸುಂ ಧರೆಗಯ್ಯಂ ದಯೆಗೆಯ್ಯ ಮುಂ ಪಡೆದುದರ್ಕಿಂತೀತನೊಳ್ ತೊಟ್ಟ ಕಿಂ ಕರಭಾವಂ ನಮಗಕ್ಕಿಗೊಟ್ಟು ಮಡಗೂಲಂದಮಂ ಪೋಲದೇ ||
ಎಂದು ಜುಗುಪ್ಪೆಗೊಂಡು ರಾಜ್ಯತ್ಯಾಗಮಾಡಿ ತಂದೆಯಲ್ಲಿಗೆ ಹೋಗಿ ದೀಕ್ಷೆಯನ್ನು ಪಡೆದರು. ಇದನ್ನು ಕೇಳಿಯೂ ಭರತನಿಗೆ ವಿವೇಕವುಂಟಾಗಲಿಲ್ಲ. 'ಎನ್ನ ತೇಜಸ್ಸುರಿತಕ್ಕೆ ಸೆಣಸಿನೊ ಮಾಲರಿಗುಂ ಸೈರಿಸದು ತೇಜಮಾ ಭುಜಬಲಿಯಾ' 'ಸಾಮದಿಂದಳವಡಿಸಿ ನೋಡುವೆ, ಸಾಮದೊಳಂ ಪದವಡದೊಡೆ ಬಡೆಕಿರ್ದಪುದಿ ಪದವಡಿಸಲೆನ್ನ ಬಯಕೆಯ ದಂಡಂ' ಎಂದು ನಿಶ್ಚಯಿಸಿ ಬುದ್ದಿವೃದ್ಧನೂ ವಯೋವೃದ್ಧನೂ ಆದ ಮಹತ್ತರನ ಕೈಯಲ್ಲಿ ಲೇಖವನ್ನು ಅಟ್ಟಿದನು. ಲೇಖವನ್ನು ನೋಡಿದ ಬಾಹುಬಲಿಯು ಕೋಪಗರ್ಭಸ್ಮಿತನಾಗಿ
* ಪಿರಿಯಣ್ಣಂಗೆಆಗುವುದೇಂ
ಪರಿಭವವೇ ಕೀತಿ ನೆತ್ತಿಯೋಳ್ ಬಾಳಂ ನಿ ರ್ನೆರಮೂತಿ ಚಲದಿನೆ೦ಗಿಸ 'ಅರೆ ಭರತಂಗೆಂಗುವೆಕಮಂಜಮೆಯಲ್ಲೇ | - ಭರತಂ ಷಡ್ಯಂಡಭೂವಲ್ಲಭನೆನೆ ಸಿರಿಯಂ ಗಂಟಲೊಳ್ ಕೇಳು ರಾಗಂ ಬೆರಸಿರ್ಪಿ ನನ್ನ ಸಾಲ್ಕುರಿ, ಕರೆದೊಡೆ ಬೆಸನೇನೆಂಬ ಜೀಯೆಂಬ ದೇವಂ ಬರಸೆಂಬಾಳೆಂಬ ದೈನ್ಯಕೆಲವೂ ತನುವನಾನೊಡ್ಡುವಂತಾದಿದೇವಂ " ಪುರುದೇವಂ ದೇವದೇವಂ ಕುಡೆ ಪಡೆದ ನೆಲಕ್ಕಾರೊಳಂ ಪಂಥಮುಂಟೇ ||
'ತಾಂ ಚಕ್ರೇಶನಾದೊಡಂ ತನ್ನಾಕ್ರಮಣಮನನ್ನೊಳೇಕೆ ಕೆಮ್ಮನೆ ತೋರ್ಪಂ , ಆಜಿಗೆ ಬಂದೊಡ್ಡಲೆ ಪೇಳ್, ಸಂಗರನಿಕಷದೊಳೆಮ್ಮಂದಮಂ ನೀನೆ ಕಾಣೋ' ಎಂದು ಹೇಳಿ ಕಳುಹಿಸಿ ಬಿಟ್ಟನು. ಭರತನ ಸಭಾಸದರು 'ಷಡ್ಕಂಡಭೂಮಂಡಲಮೆರಗಿದುದೇ ಸಾಲುಂ, ನಿನ್ನ ತಮ್ಮ ನಿನಗೆಆಗಂ, ಈ ಆಕ್ಷೇಪಮಂ ಮಾಣ,' ಎಂದು ಎಷ್ಟು ಹೇಳಿದರೂ
Page #22
--------------------------------------------------------------------------
________________
ಉಪೋದ್ಘಾತ | ೧೭ ಕೇಳದೆ ಭರತನು 'ಎಮ್ಮ ದಾಯಾದನುಂ ಕೋಪದಿನೆನ್ನೊಳ್ ಕಾದಲೆಂದು ಬರಿಸಿದ ಸಮರಾಟೋಪದಿಂ ನಿಂದೊಡಂ ಮಾಣ್ಣುದು ಸೂತ್ತು, ಎಮ್ಮಸಾಪತನ ಭುಜಬಲಮಂ ನೋಂ' ಎಂದು ಯುದ್ಧವನ್ನೇ ನಿಶ್ಚಯಿಸಿದನು. ಘೋರಸಂಗ್ರಾಮಕ್ಕೆ ಸಿದ್ಧತೆಗಳಾದುವು. ಆಗ ಮಂತ್ರಿಮುಖ್ಯರು ಚರಮದೇಹಧಾರಿಗಳಾದ ಇವರ ಯುದ್ಧದಲ್ಲಿ ಅನೇಕ ಪ್ರಜಾನಾಶವಾಗುವುದರಿಂದ ಅದನ್ನುಳಿದು ಧರ್ಮಯುದ್ಧಗಳಾದ ದೃಷ್ಟಿಯುದ್ಧ, ಜಲಯುದ್ಧ ಮತ್ತು ಬಾಹುಯುದ್ಧಗಳಲ್ಲಿ ಅಣ್ಣತಮ್ಮಂದಿರು ತಮ್ಮ ಜಯಾಪಜಯಗಳನ್ನು ನಿಷ್ಕರ್ಷಿಸಿಕೊಳ್ಳಬೇಕೆಂದು ಪ್ರಾರ್ಥಿಸಿಕೊಂಡರು. ಅದಕ್ಕೆ ಇಬ್ಬರೂ ಒಪ್ಪಿದರು. ದೃಷ್ಟಿಜಲ ಯುದ್ಧಗಳಲ್ಲಿ ಬಾಹುಬಲಿಗೇ ನಿರಾಯಾಸವಾಗಿ ಜಯ ಲಭಿಸಿತು. ಬಾಹುಯುದ್ಧದಲ್ಲಿ ಬಾಹುಬಲಿಯು ಅಣ್ಣನನ್ನು ಒಂದೇ ಸಲ ಮೇಲಕ್ಕೆತ್ತಿ ಬಡಿಯುವಷ್ಟರಲ್ಲಿ ವಿವೇಕಯುತವಾಗಿ
ಭರತಾವನೀಶ್ವರಂ, ಗುರು
ಪಿರಿಯಣ್ಣಂ ಚಕ್ರವರ್ತಿ ಮಹಿಮಾಕರನೀ ದೊರೆಯನುಮಳವಡೆಯ ವಸುಂ
ಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ
ಎಂದು ನಿಧಾನವಾಗಿ ಕೆಳಕ್ಕಿಳಿಸಿದನು. ಭರತನಿಗೆ ಕೋಪವು ಮೇರೆಮೀರಿತು. ತಮ್ಮನ ಮೇಲೆ ಚಕ್ರವನ್ನೇ ಪ್ರಯೋಗಿಸಿ ಬಿಟ್ಟನು. ಚಕ್ರವು ಆತನಿಗೆ ಸ್ವಲ್ಪವೂ ಘಾತ ಮಾಡದೆ ಆತನನ್ನು ಮೂರು ಪ್ರದಕ್ಷಿಣೆ ಮಾಡಿ ಅವನ ಬಲಪಾರ್ಶ್ವದಲ್ಲಿ ನಿಂತಿತು. ದೇವಲೋಕದಿಂದ ಪುಷ್ಪವೃಷ್ಟಿಯಾಯಿತು. ಭರತನು ಮಾಡಬಾರದುದನ್ನು ಮಾಡಿದನೆಂದು ಹೇಳುತ್ತಿದ್ದ ಕುಲವೃದ್ಧರ ಮಾತುಗಳು ಭರತನನ್ನು ನಾಚಿಸಿದುವು. ಭರತನು ತಲೆತಗ್ಗಿಸಿ ನಿಂತುಕೊಂಡನು. ಆಗ ಬಾಹುಬಲಿಗೆ ಅದ್ಭುತವಾದ ವೈರಾಗ್ಯವು ತಲೆದೋರಿತು.
ಸೋದರರೊಳ್ ಸೋದರರಂ
ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು ತ್ಪಾದಿಸುವುದು ಕೋಪಮನ್ ಅಳ
ವೀ ದೊರತನೆ ತೊಡರ್ವುದೆಂತು ರಾಜ್ಯಶ್ರೀಯೊಳ್
ಕಿಡುವೊಡಲ ಕಿಡುವ ರಾಜ್ಯದ ಪಡೆಮಾತುಗೊಳಲಮನ್ನ ಮಯ್ಯಗಿದಪುದೀ ಗಡೆ ಜೈನದೀಕ್ಷೆಯಂ ಕೊಂ ಡಡಿಗರಿಗಿಸುವಂ ಸಮಸ್ತಸುರಸಮುದಯಮಂ ||
ಎಂದು ನಿಶ್ಚಯಿಸಿ ಅಣ್ಣನನ್ನು ಕುರಿತು 'ನೆಲಸುಗೆ ನಿನ್ನ ವಕ್ಷದೊಳ್ ನಿಶ್ಚಲಮಾ ರಾಜ್ಯಲಕ್ಷ್ಮಿ', 'ಭೂವಲಯಮನಯ್ಯನಿತ್ತುದುಮಾಂ ನಿನಗಿತ್ತೆಂ ನೀನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಡಿ ಮಾಸದೇ' ಎಂದು ವಿಜ್ಞಾಪಿಸಿ ತಪಸ್ಸಿಗೆ ಹೊರಟು ತಂದೆಯಾದ ಆದಿದೇವನ ಸಮೀಪಕ್ಕೆ ಬಂದು ನಮಸ್ಕರಿಸಿ 'ಹಿಂದೆ ಯುವರಾಜ ಪದವಿಯನ್ನು ದಯಪಾಲಿಸಿದ್ದಿರಿ; ಈಗ ಅಭ್ಯುದಯಕರವಾದ ಪ್ರವ್ರಜ್ಯದ ಪದವಿಯ ಯುವರಾಜಪದವಿಯನ್ನು ದಯಪಾಲಿಸಿ ಎಂದು ಪ್ರಾರ್ಥಿಸಿ ಪಡೆದು ಘೋರತಪಸ್ಸಿನಲ್ಲಿ
Page #23
--------------------------------------------------------------------------
________________
೧೮ | ಪಂಪಭಾರತಂ ನಿರತನಾದನು. ಆದರೂ ಬಾಹುಬಲಿಯ ಮನಸ್ಸಿನಲ್ಲಿ ತಾನು ಭರತನ ನೆಲದಲ್ಲಿ ನಿಂತಿರುವೆನೆಂಬ ಚಿಂತೆಯಿಂದ ಶಾಂತಿಯುತ್ಪನ್ನವಾಗಿರಲಿಲ್ಲ. ಅದನ್ನರಿತು ಭರತನೇ ಬಂದು 'ಈ ನೆಲನೀನೆನಗಿತ್ತ ನೆಲ, ನಿನ್ನದೇ ವಿನಾ ನನ್ನದಲ್ಲ' ಎಂದು ಭಕ್ತಿಪೂರ್ವಕವಾಗಿ ತಿಳಿಸಿದ ಮೇಲೆ ಶಾಂತಚಿತ್ತನಾಗಿ ತಪೋನಿಷ್ಠನಾದನು.
ಭರತನ ಬಾಹುಬಲದ ಆಡಂಬರವೆಲ್ಲಿ ಬಾಹುಬಲಿಯ ವೈರಾಗ್ಯದ ವೈಭವವೆಲ್ಲಿ? ಧರ್ಮಚಕ್ರದ ದಿಗ್ವಿಜಯದ ಮುಂದೆ ಚಕ್ರವರ್ತಿಯ ದಿಗ್ವಿಜಯ ಬೊಬ್ಬುಳಿಕೆ; ನಿಸ್ಸಾರ. ಮುಂದೆ ಭರತನು ಅನೇಕ ಕಾಲ ರಾಜ್ಯವಾಳುತ್ತಾನೆ. ವಿಪ್ರವರ್ಣವನ್ನು ಸ್ಥಾಪಿಸಿ ಅವರ ಕರ್ಮಾದಿಗಳನ್ನು ನಿಷ್ಕರ್ಷೆ ಮಾಡುತ್ತಾನೆ. ಆದರೂ ಜೈನಧರ್ಮದ ಅವನತಿಯ ಅರಿವಾಗುತ್ತದೆ. ಅಷ್ಟರಲ್ಲಿ ಆದಿತೀರ್ಥಂಕರನ ಪರಿನಿರ್ವಾಣಕಲ್ಯಾಣ ಸಮೀಪಿಸುತ್ತದೆ. ಭರತನು ಅಲ್ಲಿಗೆ ಹೋಗಿ ಜಿನಸ್ತೋತ್ರ ಮಾಡುತ್ತಾನೆ. ಧರ್ಮದ ಸಾರವನ್ನು ತಿಳಿಯುತ್ತಾನೆ. ವಿಯೋಗಾಗ್ನಿಯಿಂದ ಬೇಯುತ್ತಿರುವ ಭರತನನ್ನು ವೃಷಭಸೇನಾಗ್ರಹಣಿಗಳು ಸಮಾಧಾನ ಮಾಡುತ್ತಾರೆ. ಭರತನು ತನ್ನ ರಾಜ್ಯವನ್ನು ತ್ಯಜಿಸಿ ತಪೋನಿರತನಾಗಿ ಮೋಕ್ಷಲಕ್ಷ್ಮೀಪತಿಯಾಗುತ್ತಾನೆ.
ಇದುವರೆಗಿನ ಒಂದು ವಿಹಾರವಿಮರ್ಶೆಯಿಂದ ಪಂಪನ ಕೈಚಳಕ ಯಥೋಚಿತವಾಗಿ ಅರ್ಥವಾಗುತ್ತದೆ. ಧರ್ಮ ಮತ್ತು ಕಾವ್ಯಧರ್ಮಗಳ ಮೇಳನ ಪರಿಸ್ಪುಟವಾಗುತ್ತದೆ. ಜೈನರಿಗೆ ಅಲ್ಲದೇ ಜೈನೇತರರಿಗೂ ಅದರ ಸೊಬಗು ಮನವರಿಕೆಯಾಗುತ್ತದೆ. ಆದಿಪುರಾಣದಲ್ಲಿ ಪಂಪನು ಮಾಣಿಕ್ಯಜಿನೇಂದ್ರಬಿಂಬವನ್ನು ಕಡೆದು ದಿವ್ಯಚೈತ್ಯವನ್ನು ಕಟ್ಟಿರುವುದು. ನಿಜ, ಅದಕ್ಕಿಂತಲೂ ಸಾಹಿತ್ಯೋಪಾಸಕರಿಗೆ ಆತನು ನಿರ್ಮಿಸಿರುವ ಭವ್ಯರಸಮಂದಿರಗಳು ಚಿರಸ್ಥಾಯಿಯಾಗಿ ಸರ್ವಾದರಣೀಯವಾಗಿವೆ. ಇದನ್ನೇ ಪಂಪನು ಮುಂದಿನ ಪದ್ಯಗಳಲ್ಲಿ ಬಹು ಸ್ವಾರಸ್ಯವಾಗಿಯೂ ವಿಸ್ತಾರವಾಗಿಯೂ ವಿಶದಪಡಿಸಿದ್ದಾನೆ.
- ಪಂಪಭಾರತ : ಇದು ಪಂಪನ ದ್ವಿತೀಯ ಕೃತಿ. ಇದಕ್ಕೆ ವ್ಯಾಸ ಮಹಾಮುನಿಯ ಸಂಸ್ಕೃತ ಮಹಾಭಾರತವೇ ಮೂಲವೆಂಬುದು ಅವನೇ ಹೇಳಿಕೊಂಡಿರುವ “ವ್ಯಾಸಮುನೀಂದ್ರ ರುಂದ್ರವಚನಾಮೃತವಾರ್ಧಿಯನೀಸುವೆಂ' ಎಂಬ ವಾಕ್ಯದಿಂದಲೇ ಪ್ರತಿಪಾದಿತವಾದರೂ ಪಂಪನ ಕಾಲಕ್ಕೆ ಹಿಂದೆ ಕೆಲವು ಕನ್ನಡ ಭಾರತಗಳಿದ್ದು ಅವು ಪಂಪನ ಮೇಲೆ ಪ್ರಭಾವ ಬೀರಿರಬಹುದೆಂದು ಊಹಿಸಬಹುದಾಗಿದೆ. ನಾಗವರ್ಮನ “ಕಾವ್ಯಾವಲೋಕನ'ದಲ್ಲಿ ಲಕ್ಷವಾಗಿ ಕೊಟ್ಟಿರುವ ಕೆಲವು ಪದ್ಯಗಳು ಯಾವುದೋ ಕನ್ನಡ ಭಾರತದಿಂದ ಉದ್ದರಿಸಲ್ಪಟ್ಟುದಾಗಿ ಕಾಣುತ್ತದೆ. ಅಲ್ಲದೆ ಪಂಪನೇ 'ಮುಂ ಸಮಸ್ತ ಭಾರತಮನಪೂರ್ವಮಾಗೆ ಪೇಟ್ಟಿ ಕವೀಶ್ವರರಿಲ್ಲ' ಎಂದು ಹೇಳಿ ತನ್ನ ಭಾರತವನ್ನು 'ಸಮಸ್ತ ಭಾರತಂ' ಎಂದು ಹೇಳಿಕೊಂಡಿರುವುದರಿಂದ ಇವನಿಗೆ ಹಿಂದೆ ಕೆಲವರು ಭಾರತದ ಕೆಲಕೆಲ ಭಾಗಗಳನ್ನು ಕನ್ನಡದಲ್ಲಿ ರಚಿಸಿದ್ದರೆಂದೂ ಸಂಪೂರ್ಣವಾಗಿ ಭಾರತವನ್ನು ರಚಿಸಿದವರಲ್ಲಿ ಇವನೇ ಮೊದಲಿಗನೆಂದೂ ಊಹಿಸಬಹುದಾಗಿದೆ. 'ಕವಿವ್ಯಾಸನೆಂಬ
Page #24
--------------------------------------------------------------------------
________________
ಉಪೋದ್ಘಾತ | ೧೯ ಗರ್ವಮೆನಗಿಲ್ಲ' ಎಂದು ಪಂಪನು ಹೇಳಿರುವುದರಿಂದ ಇವನಿಗೆ ಹಿಂದೆ ಕವಿವ್ಯಾಸನೆಂಬುವನೊಬ್ಬನಿದ್ದು ಭಾರತವನ್ನು ರಚಿಸಿರಬಹುದು. ಆದರೆ ನಮಗೆ ದೊರೆತಿರುವ ಪುರಾತನ ಸಮಗ್ರ ಕನ್ನಡ ಭಾರತ 'ವಿಕ್ರಮಾರ್ಜುನವಿಜಯ'ವೊಂದೇ.
ಪಂಪನಿಗೆ ಧಾರ್ಮಿಕಪುರಾಣವಾದ 'ಆದಿಪುರಾಣ'ಕ್ಕಿಂತ ಲೌಕಿಕಕಾವ್ಯವಾದ 'ವಿಕ್ರಮಾರ್ಜುನ ವಿಜಯ'ದ ರಚನೆಯಲ್ಲಿ ಹೆಚ್ಚು ಸ್ವಾತಂತ್ರ್ಯವಿದೆ. ಅವನ ಪ್ರತಿಭಾಪ್ರಸರಣಕ್ಕೆ ಇಲ್ಲಿ ಹೆಚ್ಚಿನ ಅವಕಾಶವಿದೆ. ಅವನ ಅನಾದೃಶವಾದ ಲೋಕಾನುಭವಸಂಪತ್ತನ್ನು ಪ್ರದರ್ಶಿಸುವ ಗ್ರಂಥವಿದು. ತನ್ನ ಪೋಷಕನಾದ ಅರಿಕೇಸರಿಯ ಕೀರ್ತಿಯನ್ನು ಸ್ಥಿರಪಡಿಸುವುದಕ್ಕಾಗಿಯೂ 'ಸಮಸ್ತ ಭಾರತಮನಪೂರ್ವಮಾಗೆ ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೇಳ್ಕೊಡೆ ಪಂಪನೆ ಪೇಟ್ಟಂ' ಎಂದು ಒತ್ತಾಯ ಮಾಡಿದ ಪಂಡಿತರನ್ನು ಸಂತೋಷಪಡಿಸುವುದಕ್ಕಾಗಿಯೂ ಭಾರತದ ಕಥಾವಸ್ತುವನ್ನು ಆ ಕಾಲದ ವಾತಾವರಣಕ್ಕೆ ಹೊಂದುವಂತೆ ವೀರರಸದಲ್ಲಿ ಎರಕ ಹೊಯ್ದು ಕಾವ್ಯಕ್ಕೆ ತಕ್ಕಂತೆ ಕಥೆಯನ್ನು ಮಾರ್ಪಡಿಸಿ ಕನ್ನಡ ಸಾಹಿತ್ಯದೇವಿಗೆ 'ವಿಕ್ರಮಾರ್ಜುನ ವಿಜಯ'ವೆಂಬ ಒಂದು ರತ್ನಕಂಠಿಯನ್ನು ನಿರ್ಮಿಸಿದನು. ಹೀಗೆ ಅರಿಕೇಸರಿಯ ಕೀರ್ತಿಯನ್ನು ಬೆಳಗುವುದಕ್ಕೆ ಹೊರಟಿದ್ದುದರಿಂದಲೂ 'ಬೆಳಗುವೆನಿಲ್ಲಿ ಲೌಕಿಕ ವಂ' ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡುದರಿಂದಲೂ ಪಂಪನು ತನ್ನ ಭಾರತವನ್ನು ಮೂಲಭಾರತದ ಕಥೆಯಂತೆ ನಡೆಸಲು ಸಾಧ್ಯವಿಲ್ಲದೆ ತನ್ನ ಪ್ರತಿಭಾಶಕ್ತಿಯಿಂದ ಕಥೆಯನ್ನು ಕುಗ್ಗಿಸಿಯೂ ಹಿಗ್ಗಿಸಿಯೂ ಮಾರ್ಪಡಿಸಿಯೂ ಕೆಲವೆಡೆಯಲ್ಲಿ ಅಜ್ಞಾತವಾಗಿ ಜೈನಸಂಪ್ರದಾಯಕ್ಕೆಳೆದೂ ಇದ್ದಾನೆ. ಹೀಗೆ ಮಾಡುವುದರಲ್ಲಿ ವಿಸ್ತರಣೆಯಿಂದ ಕೆಲವೆಡೆಗಳಲ್ಲಿ ಮುಗ್ಗರಿಸಿರುವುದೂ ಉಂಟು. ಮತ್ತೆ ಕೆಲವೆಡೆಗಳಲ್ಲಿ ಮೂಲಭಾರತದ ಕಥೆಗೆ ಮತ್ತಷ್ಟು ಮಿರುಗುಕೊಟ್ಟು ಹೊಳೆಯುವಂತೆಯೂ ಮಾಡಿರುವನು.
ಪಂಪಭಾರತ 'ಸಮಸ್ತ ಭಾರತ'. ಇದನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು. ಅದು ಸಂಪೂರ್ಣ ಅಥವಾ ಸಮಗ್ರಭಾರತ ಎಂಬುದು ಅದರ ಮೊದಲನೆಯ ಅರ್ಥ. ಮೂಲಭಾರತದ ಕಥೆಯ ವಾತಾವರಣಕ್ಕೆ ತನ್ನ ಕಾಲದ ವಾತಾವರಣವನ್ನು ಹೊಂದಿಸಿ ಹೇಳಿರುವುದು ಎಂಬುದು ಮತ್ತೊಂದರ್ಥ. ಹಾಗೆಯೇ ಭಾರತದಲ್ಲಿ ಕಥೆಯ ಜೊತೆಗೆ ತನ್ನ ಪ್ರಭುವಿನ ಕಥೆಯನ್ನೂ ಹಾಸುಹೊಕ್ಕಾಗಿ ಕೂಡಿಸಿ ಕಥಾರಚನೆ ಮಾಡಿರುವ ಗ್ರಂಥ ಎಂಬುದು ಮೂರನೆಯ ವ್ಯಾಖ್ಯಾನ, ಈ ಕೊನೆಯ ಅರ್ಥವು ಹೆಚ್ಚು ಆದರಣೀಯವಾಗಿದೆ. ಅದನ್ನು ಸಮನ್ವಯಗೊಳಿಸುವುದಕ್ಕಾಗಿ ಪಂಪನು ತನ್ನ ಕತೆಗೆ ನಾಯಕರನ್ನು ಆರಿಸುವುದರಲ್ಲಿ ಬಹಳ ಜಾಣೆಯನ್ನು ತೋರಿಸಿದ್ದಾನೆ. ವ್ಯಾಸಭಾರತದ ಪ್ರಕಾರ ಮೇಲುನೋಟಕ್ಕೆ ಧರ್ಮರಾಜನೇ ನಾಯಕನೆಂದು ಕಂಡು ಬಂದರೂ ಪಂಚಪಾಂಡವರಲ್ಲಿ ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ಪ್ರಮುಖರಾಗಿ ನಾಯಕಸ್ಥಾನಕ್ಕೆ ಅರ್ಹರಾಗುತ್ತಾರೆ. ಆದುದರಿಂದ ಪಂಪನು ಬಹುವಿವೇಕದಿಂದ ಪಾಂಡವ ಮಧ್ಯಮನೂ ಅತುಲ ಪರಾಕ್ರಮಿಯೂ ಆದ ಅರ್ಜುನನನ್ನು ನಾಯಕನನ್ನಾಗಿ ಮಾಡಿ
Page #25
--------------------------------------------------------------------------
________________
೨೦ | ಪಂಪಭಾರತಂ ಕಥೆಯನ್ನು ಅವನ ಸುತ್ತಲೂ ನೆಯ್ದಿದ್ದಾನೆ. ಆದುದರಿಂದಲೇ ಗ್ರಂಥಕ್ಕೆ “ವಿಕ್ರಮಾರ್ಜುನವಿಜಯ'ವೆಂದು ಹೆಸರಿಟ್ಟು ತನ್ನ ಆಶ್ರಯದಾತನಾದ ಇಮ್ಮಡಿ ಅರಿಕೇಸರಿಯನ್ನು ಅರ್ಜುನನೊಂದಿಗೆ ಅಭೇದವಾಗಿ ಸಂಯೋಜಿಸಿ ವರ್ಣಿಸಿದ್ದಾನೆ. ಹೀಗೆ ಮಾಡುವುದರಲ್ಲಿ ಪಂಪನಿಗೆ ಕಾರಣವಿಲ್ಲದೆ ಇಲ್ಲ. ಅರಿಕೇಸರಿಯು ವೀರಾಗ್ರೇಸರ, ಈತನ ವೃತ್ತಾಂತ ಅವನ ವೇಮಲವಾಡದ ಶಿಲಾಶಾಸನದಿಂದಲೂ (ಕ್ರಿ.ಶ. ಸು ೯೨೭) ಅವನ ಮೊಮ್ಮಗನಾದ ಮೂರನೆಯ ಅರಿಕೇಸರಿಯ ಪರಭಣಿ ಶಾಸನದಿಂದಲೂ (ಕ್ರಿ. ಶ. ೯೬೬) ಪಂಪನ ತಮ್ಮನಾದ ಜಿನವಲ್ಲಭನ ಗಂಗಾಧರಂ ಶಾಸನದಿಂದಲೂ ಯಥೋಚಿತವಾಗಿ ವಿಶದವಾಗುತ್ತದೆ. ಪಂಪನ ಮಾತುಗಳು ಈ ವಿಷಯವನ್ನು ದೃಢೀಕರಿಸುತ್ತವೆ. ಅರಿಕೇಸರಿಯು ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದ. ಬಾಲ್ಯದಿಂದಲೂ 'ಪರಬಲದ ನೆತ್ತರ ಕಡಲೊಳಗಣ ಜಿಗುಳೆ ಬಳೆದ ತೇಜದೊಳೆ ಬಳೆದ. ಮುಂದೆ ತನ್ನ ಅಧಿರಾಜನಾದ ಗೋವಿಂದರಾಜನಿಗೆ ವಿರೋಧವಾಗಿ ನಿಂತು ಅವನ ಸಾಮಂತನಾದ ವಿನಯಾದಿತ್ಯನಿಗೆ ಆಶ್ರಯವನ್ನಿತ್ತಿದ್ದ ದುರ್ಮಾರ್ಗಿಯಾದ ಗೋವಿಂದರಾಜನನ್ನು ರಾಜ್ಯಭ್ರಷ್ಟನನ್ನಾಗಿ ಮಾಡುವುದಕ್ಕೆ ಇತರ ಸಾಮಂತರೊಡನೆ ತಾನೂ ಸೇರಿ ಆ ಕಾರ್ಯವನ್ನು ಸಾಧಿಸಿ ಆ ಸ್ಥಾನದಲ್ಲಿ ರಾಷ್ಟ್ರಕೂಟರಲ್ಲಿ ಪ್ರಸಿದ್ಧನಾದ ಮೂರನೆಯ ಕೃಷ್ಣನನ್ನು ಸ್ಥಾಪಿಸಲು ಸಹಾಯಮಾಡಿದ್ದ. ಇಂತಹವನ ವಿಷಯದಲ್ಲಿ ಪಂಪನಿಗೆ ಗೌರವವು ಹುಟ್ಟುವುದು ಸಹಜವೇ. ಸಾಲದುದಕ್ಕೆ ಅರಿಕೇಸರಿಯೂ ಪಂಪನೂ ಸ್ನೇಹಿತರು, ಸಮಾನವಾದ ಗುಣಶೀಲಗಳನ್ನುಳ್ಳವರು. ತನ್ನ ಸ್ವಾಮಿಯಂತೆಯೇ ಪಂಪನೂ, ಧಾವಳಯನಿಳಿ೦ಪನೂ ಚತುರಂಗಬಲಭಯಂಕರನೂ' ಆಗಿ 'ನಿಜಾಧಿನಾಥನಾಹವದೊಳರಾತಿನಾಯಕರ ಪಟ್ಟನೆ ಪಾಕಿಸ್ಸಂದ' ಪೆಂಪುಳ್ಳವನು, ಸಾಲದುದಕ್ಕೆ ಅರಿಕೇಸರಿಯೂ ಪಂಪನ ಸ್ನೇಹಿತರಂತಿದ್ದವರು. ಅವರಿಬ್ಬರಲ್ಲಿ ಎಂದೂ ಸ್ವಾಮಿ ನೃತ್ಯಭಾವ ತೋರಿಲ್ಲ. ಅದನ್ನು ಪಂಪನು ಪ್ರಕಾರಾಂತರದಿಂದ ದುರ್ಯೋಧನನು ಕರ್ಣನಿಗೆ ಹೇಳುವ ಮಾತಿನಲ್ಲಿ ಸ್ಪಷ್ಟಮಾಡಿದ್ದಾನೆ. ಇಂತಹ ಪ್ರೀತಿಪಾತ್ರನಾದ ಆಶ್ರಯದಾತನನ್ನು ಭಾರತಶ್ರೇಷ್ಠನಾದ ಅರ್ಜುನನಿಗೆ ಹೋಲಿಸಿ ಅವರ ಪರಸ್ಪರ ಗುಣಗಳನ್ನು ಇಬ್ಬರಲ್ಲಿಯೂ ಆರೋಪಿಸಿ ತನ್ನ ಉಪ್ಪಿನ ಋಣವನ್ನು ತೀರಿಸುವುದಕ್ಕಾಗಿ ಅದ್ಭುತವಾದ ಕಾಣಿಕೆಯನ್ನು ಅರ್ಪಿಸಿದ್ದಾನೆ. ಅಂದಮಾತ್ರಕ್ಕೆ ಪಂಪನು ಅರಿಕೇಸರಿಯ ಸಂಬಳದ ವಂದಿಯಲ್ಲ ಅಭಿಮಾನಮೂರ್ತಿ. 'ಪೆರೀವುದೇಂ, ಪೆಡಿ ಮಾಡುವುದೇಂ, ಪೆಲಿಜೆಂದಮಪ್ಪುದೇಂ' ಎಂದು 'ಆದಿಪುರಾಣ'ದಲ್ಲಿ ಘಂಟಾಘೋಷವಾಗಿ ಸಾರಿದ್ದಾನೆ.
ಪಂಪನು ಅರ್ಜುನ ಅರಿಕೇಸರಿಗಳನ್ನು ಅಭೇದದಿಂದ ವರ್ಣಿಸಿದ್ದಾನೆ. ಅರ್ಜುನನ ಅಪರಾವತಾರವೇ ಅರಿಕೇಸರಿಯೆಂಬುದು ಪಂಪನ ಕಲ್ಪನೆ. ಭಾರತಯುದ್ದದಲ್ಲಿ ಯಮನಂದನನು ಕರ್ಣನಿಂದ ತಾಡಿತನಾಗಿ ಸೋತು ತನ್ನ ಪಾಳೆಯಕ್ಕೆ ಹಿಂದಿರುಗಿ ಬಂದು ತನಗಾದ ಪರಾಭವಕ್ಕವಯಿಸಿ ಅರ್ಜುನನ ಮೇಲೆ ಕೋಪಿಸಿಕೊಳ್ಳುವನು. ಆಗ ಅರ್ಜುನನು
Page #26
--------------------------------------------------------------------------
________________
ಉಪೋದ್ಘಾತ | ೨೧ ನರಸಿಂಗಂಗಂ ಜಾಕ ಬರಸಿಗಮಳವೊದವೆ ಪುಟ್ಟ ಪುಟ್ಟಿಯುಮರಿಕೇ. * ಸರಿಯೆನೆ ನೆಗಟ್ಟುಮರಾತಿಯ
ಸರಿದೊರೆಗಂ ಬಂದೆನಪ್ರೊಡಾಗಳ ನಗಿರೇ | ಎಂದು ಹೇಳುವುದನ್ನು ನೋಡಿದರೆ ಈ ಅಭೇದಕಲ್ಪನೆ ವಿಶದವಾಗುವುದು. ಅಲ್ಲದೆ ಕುಂತಿಯೂ ಪಾಂಡುವೂ ಅರ್ಜುನನಿಗೆ ನಾಮಕರಣವನ್ನು ಮಾಡುವಾಗ ಅವನ ಅಷ್ಟೋತ್ತರ ಶತನಾಮಗಳಲ್ಲಿ 'ಚಾಳುಕ್ಯವಂಶೋದ್ಭವಂ', 'ರಿಪುಕುರಂಗ ಕಂಠೀರವಂ', 'ಅಮ್ಮನ ಗಂಧವಾರಣಂ', 'ಸಾಮಂತ ಚೂಡಾಮಣಿ' ಮೊದಲಾದ ಅರಿಕೇಸರಿಯ ನಾಮಾವಳಿಗಳನ್ನು ಇಟ್ಟು ಆಶೀರ್ವದಿಸುವರು. ಪ್ರಪಂಚವನ್ನೆಲ್ಲ ಏಕಚಕ್ರಾಧಿಪತ್ಯದಿಂದ ಆಳಿದ ಮೂರುಲೋಕದ ಗಂಡನಾದ ಸವ್ಯಸಾಚಿಯು ಒಮ್ಮೊಮ್ಮೆ ಸಾಮಂತ ಚೂಡಾಮಣಿಯಾಗುವನು. ಇದು ಕೆಲವೆಡೆಗಳಲ್ಲಿ ಆಭಾಸವಾಗಿ ಕಾಣುವುದು. ಅರ್ಜುನನು ದೇಶಾಟನೆಗೆ ಹೊರಟು ದ್ವಾರಕಾಪಟ್ಟಣದಲ್ಲಿ ಕೃಷ್ಣನ ಅನುಮತಿಯ ಪ್ರಕಾರ ಸುಭದ್ರೆಯನ್ನು ಅಪಹರಿಸಿಕೊಂಡು ಹೋಗುವನಷ್ಟೆ. ಆ ಸಂದರ್ಭದಲ್ಲಿ ಪಂಪನು ಸುಭದ್ರೆಯನ್ನು ಅರ್ಜುನನು ಕೊಂಡು ಹೋದರೆಂದು ಹೇಳದೆ ಸಾಮಂತಚೂಡಾಮಣಿಯು ಕೊಂಡೊಯ್ದನೆಂದು ಹೇಳುವುದು ಮನಸ್ಸಿಗೆ ಅಷ್ಟು ಸಮರ್ಪಕವಾಗಿಲ್ಲ. ಪಂಪನು ಅರಿಕೇಸರಿಯನ್ನು ಅರ್ಜುನನಲ್ಲಿ ಹೋಲಿಸಿರುವುದು ಮನದೊಲವಿನಿಂದಲ್ಲವೆಂದೂ ಅವನಲ್ಲಿ ನಿಜವಾಗಿಯೂ 'ವಿಪುಳಯಶೋವಿತಾನಗುಣ'ವಿದ್ದಿತೆಂದೂ ಹೇಳುವನಾದರೂ ಮೂರುಲೋಕದ ಗಂಡನು ಸಾಮಂತ ಚೂಡಾಮಣಿಯಾದುದೇಕೆ ಎಂದು ಯೋಚಿಸಬೇಕಾಗುವುದು. ಅರಿಕೇಸರಿಯಾದ ಅರ್ಜುನನು ಸೋಲುವ ಪ್ರಸಂಗ ಬಂದಾಗಲೂ ಪ್ರತಿಪಕ್ಷದ ಇದುರಲ್ಲಿ ಅವನ ಸಾಹಸವು ಸಾಗದ ಸಂದರ್ಭವೊದಗಿದಾಗಲೂ ಪಂಪನು ಬಹುಕಾಲ ವಿಳಂಬಮಾಡದೆ ಅಲ್ಲಿಂದ ಬಲು ಬೇಗ ನುಸುಳಿಕೊಳ್ಳುವನು. ಆಗ ವೈರಿಗಜಘಟಾರಿಘಟನಂ', 'ವಿದ್ವಿಷ್ಟವಿದ್ರಾವಣಂ', 'ಅರಾತಿಕಾಲಾನಲಂ,' 'ರಿಪುಕುರಂಗ ಕಂಠೀರವಂ' ಎಂಬ ಬಿರುದುಗಳು ಮಾಯವಾಗುವುವು. ಅಷ್ಟಮಾಶ್ವಾಸದಲ್ಲಿ ಯಕ್ಷನ ಮಾಯೆಯಿಂದ ಕೊಳದ ತಡಿಯಲ್ಲಿ ನೀರು ಕುಡಿದು ಆರೂಢಸರ್ವಜ್ಞನು ನಿಶ್ಲೇಷ್ಟಿತನಾಗಿ ನೆಲದಲ್ಲೊರಗಿದಾಗ ಪಂಪನು ಹೇಳುವುದು ಬಹು ಚಮತ್ಕಾರವಾಗಿದೆ.
ಆ ಕಮಳಾಕರಮಂ ಪೊ ಕ್ಯಾಕಾಶಧ್ವನಿಯನುಜದ ಕುಡಿದರಿಭೂಪಾ ನೀಕಭಯಂಕರನುಂ ಗಡ ಮೇಕೆಂದಳೆಯಂ ಬುಲ್ಲು ಜೊಲ್ಲಂ ಧರೆಯೊಳ್'
ಎಂದು ಹೇಳುವನು. ಹಾಗೆಯೇ ಅರ್ಜುನನ ಸಾಹಸಕಾರ್ಯಗಳನ್ನು ವರ್ಣಿಸುವಾಗ ಅವನ ವಾಗೈಖರಿ ಪ್ರಜ್ವಲಿತವಾಗುವುದು. ಒಂದೆರಡು ಪದ್ಯಗಳಲ್ಲಾದರೂ ಬಹು ಹೃದಯಂಗಮವಾಗಿ ವರ್ಣಿಸುವನು. ವಿದ್ವಿಷ್ಟ ವಿದ್ರಾವಣನು ಮತ್ಯಯಂತ್ರಭೇದನ ಮಾಡಿದುದೂ ಅಂಗಾರವರ್ಮನನ್ನು ಅಂಗದಪರ್ಣನನ್ನೂ ಸೋಲಿಸಿದುದೂ
Page #27
--------------------------------------------------------------------------
________________
೨೨ | ಪಂಪಭಾರತಂ ದುರ್ಯೋಧನನನ್ನು ಕೋಡಗಗಟ್ಟುಗಟ್ಟಿ ಎಳೆದೊಯುತ್ತಿದ್ದ ಚಿತ್ರಸೇನನನ್ನು ಪರಾಭವಿಸಿದುದೂ ಸ್ವಲ್ಪಮಾತಿನಲ್ಲಿ ವರ್ಣಿತವಾದರೂ ಅವನ ಪೂರ್ಣಸಾಹಸವು ವ್ಯಕ್ತವಾಗುವಂತಿವೆ. ಭಾರತಯುದ್ಧದಲ್ಲಿ ಅರ್ಜುನನು ಭೀಷ್ಮದ್ರೋಣ ಕರ್ಣಾದಿಗಳಲ್ಲಿ ಪ್ರದರ್ಶಿಸಿದ ಸಾಮರ್ಥ್ಯವನ್ನಂತೂ ಪಂಪನು ತನ್ನ ಕವಿತಾಶಕ್ತಿಯನ್ನೆಲ್ಲಾ ವೆಚ್ಚಮಾಡಿ ಬಹು ಆಕರ್ಷಕವಾಗಿ ವರ್ಣಿಸಿದ್ದಾನೆ. ಕೊನೆಗೆ ತಾನು ಮಾಡಿದ ವರ್ಣನೆಯಿಂದ ತೃಪ್ತಿಹೊಂದದೆ ಸಾಹಸಾಭರಣನ ಅದ್ಭುತವಾದ ಸಾಹಸವನ್ನು ಪಶುಪತಿಯ ಬಾಯಿಂದಲೇ ಹೊರಡಿಸಿರುವನು. ಕರ್ಣಾರ್ಜುನರು ಯುದ್ಧಮಾಡುತ್ತಿದ್ದುದನ್ನು ನೋಡುತ್ತಿದ್ದ ದೇವೇಂದ್ರನಿಗೂ ದಿವಸೇಂದ್ರನಿಗೂ ತಮ್ಮತನಯರ ಕಾರ್ಯದ ವಿಷಯದಲ್ಲಿ ನಡೆಯುತ್ತಿದ್ದ ಜಗಳವು ಹರನ ಕಿವಿಗೂ ಬೀಳಲು ಈಶ್ವರನು ಹೀಗೆನ್ನುವನು.
ಜಗಳಮಿಂ ದಿನಕರ, ಪೊಣ ರ್ದು ಗೆಲ್ವನೇ ನಿಜತನೂಭವಂ ಹರಿಗನೊಳೇಂ ಬಗೆಗೆಟ್ಟೆಯೊ ಧುರದೊಳವಂ
ಮಿಗಿಲೆನಗೆ ನಿನಗೆ ಪಗಲೊಳೇಂ ಕುಲೆಯೇ ಕೊನೆಗೆ ಯುದ್ಧದಲ್ಲಿ ಅರಿನೃಪರನ್ನೆಲ್ಲ ನಿರ್ಮೂಲ ಮಾಡಿದ ಮೇಲೆ ಯಥಾವತ್ತಾಗಿ ವಿಕ್ರಮಾರ್ಜುನನಿಗೇ ಪಟ್ಟಾಭಿಷೇಕವಾಗುವುದು. ಧರ್ಮನಂದನನೂ ದೇವಕೀನಂದನನೂ ಇಂದ್ರನಂದನನನ್ನು ಕುರಿತು
ಪ್ರಾಯದ ಪಂಪ ಪಂಪು, ಎಮಗೆ ಮೀಜದರಂ ತವ ಕೊಂದ ಪೆಂಪು ಕ ಟ್ಯಾಯದ ಪೆಂಪು ಶಕ್ರನೊಡನೇಜೆದ ಪಂಪು, ಇವು ಪಂಪುವೆತ್ತು ನಿ ಟ್ನಾಯುಗಳಾಗಿ ನಿನ್ನೊಳಮರ್ದಿದರ್ುವು ನೀಂ ತಲೆವೀಸದೆ ಉರ್ವರಾ ಶ್ರೀಯನಿದಾಗದೆನ್ನದೆ, ಒಳಕೊಳ್ ಪರಮೋತೃವದಿಂ ಗುಣಾರ್ಣವಾ
ಎಂದು ಹೇಳಿ ಅವನನ್ನು ಪಟ್ಟಾಭಿಷೇಕಕ್ಕೆ ಒಡಂಬಡಿಸುವರು. ಅದರೊಡನೆ ಸುಭದ್ರೆಗೆ ಮಹಾದೇವಿಪಟ್ಟವಾಗುವುದು. ಇದಕ್ಕೂ ಪಂಪನಿಗೆ ಸಾಕಷ್ಟು ಆಧಾರಗಳಿವೆ. ಅರಿಕೇಸರಿಯ ಹೆಂಡತಿಯಾದ ರೇವಕನಿರ್ಮಡಿಯೆಂಬ ಲೋಕಾಂಬಿಕೆಯು ಸುಭದ್ರೆಯಂತೆಯೇ ಯದುವಂಶಕ್ಕೆ ಸೇರಿದವಳು. ಅರಿಕೇಸರಿಯೂ ಅರ್ಜುನನಂತೆಯೇ ಲೋಕಾಂಬಿಕೆಯನ್ನು ಅವರ ಬಂಧುಗಳ ಇಷ್ಟಕ್ಕೆ ವಿರೋಧವಾಗಿ ಗುಪ್ತವಾಗಿ ಹರಣಮಾಡಿಕೊಂಡು ಬಂದು 'ಪ್ರಿಯಗಳ್ಳ'ನೆಂಬ ಬಿರುದನ್ನು ಪಡೆದಿರಬಹುದು. ಅರಿಕೇಸರಿಗೂ ಲೋಕಾಂಬಿಕೆಯ ಅಣ್ಣನಾದ ಇಂದ್ರನಿಗೂ ಇದ್ದ ವೈಷಮ್ಯವೂ ಅರ್ಜುನ ಬಲರಾಮನ ವೈಮನಸ್ಯದ ಹೋಲಿಕೆಯನ್ನು ಪಡೆದಿರಬಹುದು. ಆದರೂ ಅಖಂಡಭಾರತಕಥಾದೃಷ್ಟಿಯಿಂದ ಸುಭದ್ರಾಮಹಾದೇವಿಯ ಪಟ್ಟಾಭಿಷೇಕ ಅಷ್ಟು ಉಚಿತವಾಗಿ ಕಾಣುವುದಿಲ್ಲ. ಮೊದಲಿನಿಂದಲೂ ವಿಕ್ರಮಾರ್ಜುನನ ಪ್ರೀತಿಗೆ ಪಾತ್ರಳಾಗಿ ಸರ್ವದಾ ಅವನೊಡನಿದ್ದು ವಸ್ತ್ರಾಪಹರಣ ಕೇಶಾಪಕರ್ಷಣಗಳಿಗೆ ಸಿಕ್ಕಿ ಕಾಡುಮೇಡುಗಳಲ್ಲಿ ಅಲೆದು ಅಜ್ಞಾತವಾಸದಲ್ಲಿ ಪರರ ಸೇವೆಯಲ್ಲಿದ್ದು ಪಡಬಾರದ ಕಷ್ಟಪಟ್ಟು ಮಹಾಭಾರತಕ್ಕೆ ಆದಿಶಕ್ತಿಯೂ ಕುರುಕುಲಜೀವಾಕರ್ಷಣಕಾರಣಳೂ ಆಗಿದ್ದ ಬ್ರೌಪದಿಯನ್ನು ಬಿಟ್ಟು
Page #28
--------------------------------------------------------------------------
________________
ಉಪೋದ್ಘಾತ | ೨೩ ಸುಖವಾಗಿ ಅರಮನೆಯ ಅಂತಃಪುರದಲ್ಲಿದ್ದ ಸುಭದ್ರೆಗೆ ಮಹಾದೇವಿ ಪಟ್ಟಕಟ್ಟುವುದು ಅನುಚಿತವಾಗಿಯೇ ಕಾಣುತ್ತದೆ. ಪಂಪನು ಪ್ರಾರಂಭದಲ್ಲಿ ಬ್ರೌಪದಿಯ ವಿಷಯವನ್ನು ಪ್ರಸ್ತಾಪಿಸಿ ಕೊನೆಗೆ ಅವಳ ಹೆಸರನ್ನೇ ಎತ್ತದೆ ಸುಭದ್ರೆಗೆ ಪಟ್ಟಾಭಿಷೇಕ ಮಾಡಿಸುವನು. ವಾಸ್ತವವಾಗಿ ನೋಡುವುದಾದರೆ ದೌಪದಿಗುಂಟಾದ ಅಪಮಾನವೇ ಭಾರತಯುದ್ಧಕ್ಕೆ ಮೂಲಕಾರಣ. ಅವಳಿಗೆ ಕೊನೆಯಲ್ಲಿ ಸ್ಥಾನವಿಲ್ಲದಿರುವುದು ಸಮರ್ಪಕವಲ್ಲ, ಪಂಪನು ಅರ್ಜುನನನ್ನು ಕಥಾನಾಯಕನನ್ನಾಗಿ ಮಾಡಿಕೊಂಡಾಗ ನಾಯಿಕೆಯ ವಿಷಯದಲ್ಲಿ ಅವನಿಗೆ ಸ್ವಲ್ಪ ತೊಡಕುಂಟಾಗಿರಬೇಕು. ವೀರಾವೇಶವುಳ್ಳವಳೂ ಪಂಚಪತಿತ್ವವನ್ನುಳ್ಳವಳೂ ಕೇಶಾಪಕರ್ಷಣಾದಿ ಅವಮಾನಗಳಿಗೆ ಸಿಕ್ಕಿದವಳೂ ಆದ ದೌಪದಿಯು ಅವನ ದೃಷ್ಟಿಯಿಂದ ಕಥಾನಾಯಿಕೆಯಾಗಿರುವುದಕ್ಕೆ ಅರ್ಹಳಲ್ಲವೆಂದು ತೋರಿರಬೇಕು. ಆದುದರಿಂದ ಅವನು ಸುಭದ್ರೆಯನ್ನೇ ನಾಯಿಕೆಯನ್ನಾಗಿ ಮಾಡಿರುವನು. ಈ ವಿಷಯವನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ಪಂಪನು ಬ್ರೌಪದಿಯ ವಿವಾಹವನ್ನು ಒಂದೆರಡು ಪದ್ಯಗಳಲ್ಲಿ ಮುಗಿಸಿ ಸುಭದ್ರಾಪರಿಣಯವನ್ನು ಒಂದು ಆಶ್ವಾಸವನ್ನಾಗಿ ವಿಸ್ತರಿಸಿರುವುದು. ಪಂಪನು ಸುಭದ್ರೆಗೆ ರಾಜ್ಪದವಿಯನ್ನು ಕೊಟ್ಟರೂ ನಮಗೇನೋ ದೌಪದಿಯೇ ಆ ಸ್ಥಾನಕ್ಕೆ ಅರ್ಹಳೆನ್ನಿಸುತ್ತದೆ.
ಮತ್ತೊಂದು ವಿಷಯ, ದೌಪದಿಯ ಪಂಚಪತಿತ್ವವೂ ಲೌಕಿಕದೃಷ್ಟಿಯಿಂದ ಅಷ್ಟು ಸಮಂಜಸವಲ್ಲವೆಂದೇನೋ ಪಂಪನು ಅದನ್ನು ಮಾರ್ಪಡಿಸಿರುವನು. ಅವನ ಅಭಿಪ್ರಾಯದಂತೆ ಬ್ರೌಪದಿಯನ್ನು ಮದುವೆಯಾಗುವವನು ಅರ್ಜುನನೊಬ್ಬನೇ, ಐವರಲ್ಲಿ ವಿದ್ವಿಷ್ಟವಿದ್ರಾವಣನು ಕೈ ಹಿಡಿದ ಸ್ತ್ರೀಯ ಭೋಗದಲ್ಲಿ ಇತರರು ಭಾಗಿಗಳಾಗುವುದು ಹಾಸ್ಯಾಸ್ಪದವೆಂಬುದಾಗಿ ಆತನಿಗೆ ತೋರಿರಬೇಕು. ಬ್ರೌಪದಿಯ ಹೋಲಿಕೆ ಮತ್ತು ರಾಜೀಪದವಿ ರಾಣಿಯಾದ ಲೋಕಾಂಬಿಕೆಗೂ ಹಿತವಾಗಿದ್ದಿರಲಾರದು. ಆದುದರಿಂದ ಅದನ್ನು ತಪ್ಪಿಸುವುದಕ್ಕೆ ಪ್ರಯತ್ನಪಟ್ಟು ಅನೇಕ ಕಡೆ ತೊಂದರೆಗೆ ಸಿಕ್ಕಿ ಪೂರ್ವವಾಸನಾ ಬಲದಿಂದ ತನ್ನನ್ನೇ ತಾನು ಮರೆತಿದ್ದಾನೆ.
ಪಾಂಚಾಲಿಗೆ ಬಂದೊದಗುವ ಆಪತ್ಕಾಲಗಳಲ್ಲೆಲ್ಲಾ ಆಕೆಯನ್ನು ಕಾಪಾಡುವುದು ಪಂಪನ ಪ್ರಕಾರ ಆಕೆಯ ಪತಿಯಾದ ಅರ್ಜುನನಿಗಿಂತಲೂ ಭೀಮಸೇನನೇ ಹೆಚ್ಚು. ಕಪಟವ್ಯೂತದಲ್ಲಿ ಧರ್ಮರಾಯನು ಎಲ್ಲರನ್ನೂ ಸೋತ ಮೇಲೆ ದೌಪದಿಯ ವಿಡಂಬನವಾಗುವ ಕಾಲದಲ್ಲಿ ಆ ಅನ್ಯಾಯವನ್ನು ನೋಡುತ್ತಿದ್ದಾಗ ಪ್ರೇಕ್ಷಕರಿಗೂ ಸಹಿಸ ಲಸಾಧ್ಯವಾದ ಆಕ್ರೋಶವುಂಟಾಗುವುದು. ಆಗ ಪಾಂಡವರು ಅಣ್ಣನ ನನ್ನಿಗೆ ಸಿಕ್ಕಿಬಿದ್ದು ಸುಮ್ಮನೆ ಕುಳಿತುಕೊಳ್ಳುವರು. ಆ ಸಂದರ್ಭದಲ್ಲಿ ಬ್ರೌಪದಿಯು ತನಗಾದ ಅಪಮಾನದ ಸಿಗ್ಗಿನಿಂದ
ಮುಡಿಯಂ ಪಿಡಿದೆದವನಂ ಮಡಿಯಿಸಿ ಮತ್ತವನ ಕರುಳ ಏಣಿಲಿಂದೆನ್ನಂ ಮುಡಿಯಿಸುಗೆ, ಆ ಮುಡಿಯಂ ದಲ್ ಮುಡಿಯೆಂ ಗಳಂ, ಈಗಳಿಂತೆನ್ನಯ ಮುಡಿಯಂ
Page #29
--------------------------------------------------------------------------
________________
೨೪ | ಪಂಪಭಾರತಂ
ಎಂದು ಹೇಳಿದುದನ್ನು ಕೇಳಿ ಭೀಮಸೇನನು ಕೋಪೋದ್ರೇಕವನ್ನು ತಡೆಯಲಾರದೆ ನವಮೇಘನಾದದಿಂದ ಹೀಗೆಂದು ಪ್ರತಿಜ್ಞೆ ಮಾಡುವನು:
ಮುಳಿಸಿಂದು ನುಡಿದೊಂದು ನಿನ್ನ ನುಡಿಸಿ ಆರಾಗದೆಂಬರ್ ಮಹಾ ಪ್ರಳಯೋಲೋಪಮ ಮದ್ಧದಾಹತಿಯಿನ್, ಅತ್ಯುಗ್ರಾಜಿಯೊಳ್ ಮುನ್ನಮೀ || ಖಳ ದುಶ್ಯಾಸನನಂ ಪೊರಳ್ಳಿ ಬಸಿಲಿಂ ಪೋಳಿ ಬಂಬಲ್ಲರು ಛಳಿನ್, ಆನಿ ವಿಳಾಸದಿಂ ಮುಡಿಯಿಪಂ ಪಂಕೇಜಪತೇಕ್ಷಣೇ | ಕುಡಿವೆಂ ದುಶ್ಯಾಸನೋರಸ್ಥಳಮನ್, ಅಗಲೆ ಪೋಅಣ್ಣಾರ್ದು ಪೊ | ಕುಡಿವೆಂ ಪಿಂಗಾಕ್ಷನೂರುದ್ವಯಮನ್, ಉರುಗದಾಘಾತದಿಂ ನುಚ್ಚುನೂರಾ ಗೊಡವೆಂ ತತ್ನರಶಿಪ್ರಕಟಮಕುಟಮಂ ನಂಬು ನಂಬೆನ್ನ ಕಣ್ಣಿಂ ಕಿಡಿಯುಂ ಕೆಂಡಂಗಳು ಸೂಸಿದವುವು, ಅಹಿತರಂ ನೋಡಿ ಪಂಕೇಜವಕ್ಕೆ ||
ಎಂದು ಗರ್ಜಿಸಿ ದಿಕ್ಷಾಲಕರ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿ 'ವಿಳಯಕಾಳಜಳಧರ ನಿನಾದದಿಂ' ಮೊಳಗುವನು. ಈ ಕೋಪಾಟೋಪದ ಮಧ್ಯದಲ್ಲಿ ಪಂಪನ ಪ್ರಕಾರ ಪತಿಯಾದ ಅರ್ಜುನನು ಒಂದು ಮಾತನ್ನೂ ಆಡದೆ ಕುಳಿತಿರುವನು. ಇದು ಆಭಾಸವಾಗಿ ಕಾಣುವುದಿಲ್ಲವೆ? ಈ ಸಂದರ್ಭದಲ್ಲಿ ಭೀಮನಾಡಿದ ಮಾತನ್ನೇ ಪ್ರಕಾರಾಂತರವಾಗಿ ಅರ್ಜುನನೇ ಹೇಳಿದ್ದರೆ ಇನ್ನೂ ಹೆಚ್ಚು ಸಮಂಜಸವಾಗುತ್ತಿದ್ದಿತಲ್ಲವೆ? ಈ ಸಮಯದಲ್ಲಿ ಪಂಪನು ತನ್ನ ಮಾರ್ಪಾಟನ್ನು ಮರೆತು ಮೂಲಭಾರತದಲ್ಲಿದ್ದುದನ್ನು ಇದ್ದಂತೆಯೇ ಹೇಳಿ ಬಿಟ್ಟಿದ್ದಾನೆ.
ಮುಂದೆ ಇನ್ನೆರಡು ಸ್ಥಳಗಳಲ್ಲಿ ಪಂಪನು ಹೀಗೆಯೆ ಮುಗ್ಗರಿಸಿರುವನು. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಕೀಚಕನು ಬ್ರೌಪದಿಯಲ್ಲಿ ಅತ್ಯಾಚಾರನಡೆಸಲು ಪ್ರಯತ್ನ ಪಟ್ಟಾಗ ಬ್ರೌಪದಿಯು ರಾತ್ರಿಯ ವೇಳೆಯಲ್ಲಿ, ಅದೂ ಕಟೀಕಾಂತದಲ್ಲಿ ದುರುಳದಮನಕ್ಕೆ ಮೊರೆಯಿಟ್ಟದ್ದು ಭೀಮನಲ್ಲಿ ಅರ್ಜುನನಲ್ಲಲ್ಲ. ಇದು ಮೊದಲಿಗಿಂತಲೂ ಹೆಚ್ಚು ಪಂಪನ ವಿಸ್ತರಣೆಯನ್ನು ವ್ಯಕ್ತಗೊಳಿಸುತ್ತದೆ. ಅರ್ಜುನನು ಬೃಹನ್ನಳೆಯಾಗಿದ್ದುದರಿಂದ ದೌಪದಿಯು ಹೀಗೆ ಮಾಡಿದಳೆಂದು ಹೇಳಲಾಗುವುದಿಲ್ಲ. ಇದೇ ರೂಪದಲ್ಲಿದ್ದಾಗಲೇ ಅರ್ಜುನನು ಉತ್ತರಗೋಗ್ರಹಣಕಾಲದಲ್ಲಿ ಯುದ್ಧ ಮಾಡಿ ಎಲ್ಲರನ್ನೂ ಸೋಲಿಸಲಿಲ್ಲವೆ? ತಮ್ಮಗುಟ್ಟು ರಟ್ಟಾಗುವುದೆಂದು ಹೀಗೆ ಮಾಡಿದನೆಂದು ಭಾವಿಸಿದರೂ ಆಗಲೂ ಅರ್ಜುನನೇ ಈ ಕೆಲಸವನ್ನು ಮಾಡಿದ್ದರೆ ಹೆಚ್ಚು ಸಮಂಜಸವಾಗಿ ಕಾಣುತ್ತಿತ್ತು. ಇಲ್ಲಿಯೂ ವಿಸ್ತರಣೆಯೇ ಇದಕ್ಕೆ ಕಾರಣ.
ಕೊನೆಗೆ ಭೀಮಸೇನನು ದುಶ್ಯಾಸನನನ್ನು ಸಂಹರಿಸಿ ತನ್ನ ಪೂಣೆಯನ್ನು ಪೂರೈಸಿದ ಮೇಲೆ 'ದ್ರುಪದಾತ್ತಜೆಗೆ ಬಲೆಯನಟ್ಟಿ ಜಯವನಿತೆ ಬರ್ಪಂತೆ ಬಂದ ತನ್ನ ತಳೋದರಿಯಂ ಕೆಲದೊಳ್ ಕುಳ್ಳಿರಿಸಿ ಪೊಸೆದು ಜಡೆಗೊಂಡಿರ್ದ ಕೇಶಮಂ ಪಸರಿಸಿ ವೈರಿಯ ಪಲ್ಲ ಪಣಿಗೆಯಿಂ ಬಾಚಿ ದುಶ್ಯಾಸನನ ಕರುಳಿ ಪೊಸ ಬಾಸಿಗಮಾಗೆ ಕೃಷ್ಣಯಂ ಮುಡಿಯಿಸಿ,
Page #30
--------------------------------------------------------------------------
________________
ಉಪೋದ್ಘಾತ | ೨೫ ಅವಳ ಮೊಗಮಂ ನೋಡಿ ಮುಗುಳಗೆ ನಕ್ಕು' ಅವಳಲ್ಲಿ ಪ್ರಣಯಮೋಹವಂ ಬೀರಿ ಮಾತನಾಡುವನು. ಬ್ರೌಪದಿಯಾದರೋ ಭೀಮನಲ್ಲಿ ತನ್ನ ಅನುರಾಗವನ್ನು ವ್ಯಕ್ತಪಡಿಸುವಳು. ಈ ಸಂದರ್ಭಗಳಲ್ಲೆಲ್ಲಾ ಅರ್ಜುನನು ಪ್ರೇಕ್ಷಕನು ಮಾತ್ರನಾಗಿರುವನು. ಸಾಕ್ಷಾತ್ಪತಿಯೇ ಇದುರಿನಲ್ಲಿರುವಾಗ, ಅದರಲ್ಲಿಯೂ ಅವನು ಮೂರು ಲೋಕದ ಗಂಡನಾಗಿರುವಾಗ ಬ್ರೌಪದಿಯನ್ನು ರಕ್ಷಿಸಲು ಮೈದುನನಾದ ಭೀಮಸೇನನು ಈ ರೀತಿ ನಡೆದುಕೊಂಡುದು ವಿಸ್ಮಯಜನಕವಲ್ಲವೆ? ಈ ಸಮಯಗಳಲ್ಲೆಲ್ಲ ಪಂಪನು ಭೀಮಸೇನನು ದೌಪದಿಯ ಮೈದುನನೆಂಬುದನ್ನು ಮರೆತು ಪತಿಯೆಂಬ ಪೂರ್ವವಾಸನೆಯಿಂದಲೇ ಭ್ರಾಂತನಾಗಿದ್ದಾನೆ. ಅವನು ಮನಸ್ಸು ಮಾಡಿದ್ದರೆ ಈ ಸಂದರ್ಭಗಳನ್ನು ವ್ಯತ್ಯಾಸಮಾಡಲಾಗದಿರಲಿಲ್ಲ.
ಪಂಪನಲ್ಲಿ ಜೈನ ವೈದಿಕ ಸಂಸ್ಕಾರಗಳು ಮಿಳಿತವಾಗಿವೆ. ಅವನು ಭಾರತವನ್ನು ರಚಿಸುತ್ತಿರುವುದು, ವೈದಿಕನಾದ-ಶೈವನಾದ ಅರಿಕೇಸರಿಗಾಗಿ, ಅವನು ಅದನ್ನು ಜ್ಞಾಪಕದಲ್ಲಿಟ್ಟುಕೊಂಡು ಶಿವಭಕ್ತಿಗೆ, ಪೂಜೆಗೆ, ಸ್ತೋತ್ರಕ್ಕೆ ಅಲ್ಲಲ್ಲೇ ಅವಕಾಶ ವನ್ನುಂಟುಮಾಡಿಕೊಂಡಿದ್ದಾನೆ. ಆದರೂ ತನ್ನ ಜೈನಸಂಸ್ಕಾರ ಅತಿಯಾಗಿಲ್ಲದಿದ್ದರೂ ಆಗಾಗ ಸ್ವಲ್ಪ ಹೆಡೆಯೆತ್ತಿ ಕಥಾಭಿತ್ತಿಯಲ್ಲಿಯೂ ಪಾತ್ರಪರಿಕಲ್ಪನೆಯಲ್ಲಿಯೂ ತನ್ನ ಪ್ರಭಾವವನ್ನು ಬೀರಿದೆ. 'ಪಂಪ ಭಾರತ'ವೂ 'ಜಿನಪದಾಂಭೋಜವರಪ್ರಸನ್ನವಾದುದು. ಪಂಪನಿಗೆ ವ್ಯಾಸರು, ವ್ಯಾಸಭಟ್ಟಾರಕರು. ವಿಷ್ಣು ಕೃಷ್ಣರು ಅಭವ, ಅಜ, ಅಜಿತ, ಅನಂತರು. ಅರ್ಜುನನ ಜನೋತ್ಸವದ ವರ್ಣನೆಯಲ್ಲಿ ತೀರ್ಥಂಕರರ ಜನೋತ್ಸವದ ಛಾಯೆಯಿದೆ. ಅರ್ಜುನನು ತಪಸ್ಸು ಮಾಡುವಾಗ ಇಂದ್ರನಿಗೆ ಆಸನಕಂಪವಾಗುತ್ತದೆ. ಸಂಸಾರಾಸಾರತೆಯ ಮತ್ತು ಭವಾವಳಿಗಳ ಸೂಚನೆ ಆಗಾಗ ಕಂಡುಬರುತ್ತದೆ. ಜನ್ಮಾಂತರಸ್ಕರಣೆ, ಜಾತಿಸ್ಮರತ್ವ, ಬಲದೇವ ವಾಸುದೇವರ ಜೋಡಿ ಇವೂ ಅಲ್ಲಲ್ಲಿ ಇವೆ. ಇವೆಲ್ಲಕ್ಕಿಂತಲೂ ಪಂಪನ ಜೈನಮತಪ್ರಭಾವ ವಿಶೇಷ ಕಂಡುಬರುವುದು ಶ್ರೀಕೃಷ್ಣನ ಪಾತ್ರರಚನೆಯಲ್ಲಿ, ಹಿಂದುಗಳಿಗೆ ಭಾರತವು ಪಂಚಮವೇದ, ಅದರ ಮೂಲಶಕ್ತಿ ಶ್ರೀಕೃಷ್ಣ, ಕೆಲವು ಕವಿಗಳಂತೂ ಭಾರತವನ್ನು ಕೃಷ್ಣಚರಿತೆಯೆಂದೇ ಕರೆದಿರುವುದೂ ಉಂಟು. ಜೈನರಿಗೆ ಭಾರತದಲ್ಲಾಗಲಿ ಕೃಷ್ಣ ಭಗವಂತನಲ್ಲಾಗಲಿ ಈ ಪೂಜ್ಯಮನೋಭಾವವಿಲ್ಲ. ಅವರ ಪ್ರಕಾರ ಕೃಷ್ಣನು ಗುಣಾವಗುಣಮಿಶ್ರಿತನಾದ ಒಬ್ಬ ಸಾಮಾನ್ಯಮನುಷ್ಯ-ವಾಸುದೇವ. ಈ ಜೈನಮತದ ಪ್ರಭಾವದ ಫಲವಾಗಿ ಪಂಪನು ಮಹಾಭಾರತದ ಬೃಹದ್ದೇವತೆಯಾದ ಶ್ರೀಕೃಷ್ಣನ ವಿಷಯದಲ್ಲಿ ತನ್ನ ಆ ತೀರ್ಥಂಕರನ ವಿಷಯದಲ್ಲಿದ್ದ ಶ್ರದ್ಧಾಭಕ್ತಿಗಳಿಲ್ಲದುದರಿಂದ ಅವನನ್ನು ಸಾಮಾನ್ಯವ್ಯಕ್ತಿಯಂತೆ ಚಿತ್ರಿಸಿ ಅವನ ಪ್ರಾಮುಖ್ಯವಿರುವ ಸನ್ನಿವೇಶಗಳನ್ನೆಲ್ಲಾ ತೇಲಿಸಿಬಿಟ್ಟು ಕೊನೆಗೆ ಆತನ ಗೀತೋಪದೇಶವನ್ನು 'ವಿಕ್ರಮಾರ್ಜುನನೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದು ದಿವ್ಯಸ್ವರೂಪಮಂ ತೋಲೆ..ನಿನಗೊಡ್ಡಿ ನಿಂದುದನಿದನೋವದೆ ಕೊಲ್ಗೊಡೆ ನೀನುಮೆನ್ನ ಕಜ್ಜದೊಳೆಸಗೆಂದು ಸೈತಜಿತನಾದಿಯ ವೇದರಹಸ್ಯದೊಳ್ ನಿರಂತರದ ಪರಿಚರ್ಯೆಯಿಂ ನೆಲೆಯೆ ಯೋಜಿಸಿದಂ ಕದನತ್ರಿಣೇತ್ರನಂ' ಎಂಬ
Page #31
--------------------------------------------------------------------------
________________
೨೬ | ಪಂಪಭಾರತಂ ಭಾಗದಿಂದ ಮುಗಿಸಿಬಿಟ್ಟಿದ್ದಾನೆ. ಕೊನೆಗೆ ಮಹಾಭಾರತವು ಲೋಕಪೂಜ್ಯವಾಗುವುದಕ್ಕೆ ಕಾರಣರಾದ ವ್ಯಕ್ತಿಗಳನ್ನು ತಿಳಿಸುವ
ಚಲದೊಳ್ ದುರ್ಯೊಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ ಬಲದೊಳ್ ಮದ್ರೇಶನುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ
ರ್ಮಲಂ ಚಿತ್ತಂ ಧರ್ಮಪುತ್ರಂ ಮಿಗಿಲ್, ಇವರ್ಗಳಿನೀ ಭಾರತಂ ಲೋಕಪೂಜ್ಯಂ || ಎಂಬ ಪದ್ಯದಲ್ಲಿಯೂ ಕೂಡ ಕೃಷ್ಣನ ಹೆಸರಿಗೆ ಒಂದು ಸ್ಥಾನವಿಲ್ಲ. ವ್ಯಾಸಭಾರತದ ದೃಷ್ಟಿಯಿಂದ ನೋಡುವುದಾದರೆ ಈ ಸಂಗತಿ ಸ್ವಲ್ಪ ಊನವಾಗಿಯೇ ಕಾಣುತ್ತದೆ. (ಇದು ಲೌಕಿಕಕಾವ್ಯವಾದುದರಿಂದ ಲೌಕಿಕವನ್ನು ಮೀರಿದ ಕೃಷ್ಣನ ಹೆಸರನ್ನು ಇದರಲ್ಲಿ ಸೇರಿಸಿಲ್ಲವೆಂದೂ ಭಾರತದ ಕೆಲವೆಡೆಯಲ್ಲಿ ಬರುವ ಕೃಷ್ಣನ ಶಕ್ತಿ ವೈಭವಗಳ ವರ್ಣನೆ ಪಂಪನಿಗೆ ಕೃಷ್ಣನಲ್ಲಿ ಪೂರ್ಣಭಕ್ತಿಯಿತ್ತೆಂದು ಸೂಚಿಸುವುದೆಂದೂ ಕೆಲವರು ಅಭಿಪ್ರಾಯಪಡುವುದು ಅಷ್ಟು ಸಮರ್ಪಕವಾಗಿ ಕಾಣುವುದಿಲ್ಲ)
ಇನ್ನು ಕೆಲವೆಡೆಗಳಲ್ಲಿ ಪಂಪನ ಬದಲಾವಣೆಗಳು ಕಥಾಸಂವಿಧಾನಕ್ಕೆ ವಿಶೇಷ ಹೊಳಪನ್ನು ತರುವುವು. ವ್ಯಾಸಭಾರತದ ವಸ್ತ್ರಾಪಹರಣದ ಕಥೆಯು ಲೌಕಿಕದೃಷ್ಟಿಯಿಂದ ಅನುಚಿತವಾದುದೆಂದು ಭಾವಿಸಿ ಪಂಪನು ಅದನ್ನು ಬಿಟ್ಟು ಕೇಶಾಪಕರ್ಷಣದ ವಿಚಾರವನ್ನು ಮಾತ್ರ ಹೇಳಿ ಕೊನೆಯಲ್ಲಿ ದುಶ್ಯಾಸನನ ವಧಾನಂತರ
ಇದರೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದಾಡಿತ್ತು, ಆಡಂಗಿತ್ತಿದಳೆ ಕರುರಾಜಾನ್ವಯಂ, ಮತ್ಸತಾಪ ಕಿದಳೆ ನೋಡಗುರ್ವುರ್ವಿದುದು, ಇದುವೆ ಮಹಾಭಾರತಕ್ಕಾದಿಯಾಯ್ತು ಆ
ಬದಳಾಕ್ಷಿ ಪೇಟ, ಸಾಮಾನ್ಯಮ, ಬಗೆಯೆ, ಭವತ್ಯೇಶಪಾಶಪ್ರಪಂಚಂ || ಎಂದು ಹೇಳಿ ವೇಣೀಸಂಹಾರವನ್ನು ಮುಗಿಸುವುದು ಸ್ವಾರಸ್ಯವಾಗಿದೆ.
ಹಾಗೆಯೇ ಬ್ರೌಪದಿಯು ದುಶ್ಯಾಸನದಿಂದ ಸಭೆಗೆ ಸೆಳೆಯಲ್ಪಟ್ಟಾಗ ಕರ್ಣನು ನೋಡಿ ನಕ್ಕನೆಂದೂ ಸಲ್ಲದ ಮಾತುಗಳನ್ನಾಡಿದನೆಂದೂ ವ್ಯಾಸಭಾರತದಲ್ಲಿರುವುದನ್ನು ಬಿಟ್ಟಿರುವುದೂ ಕರ್ಣನನ್ನು ರಾಜ್ಯಲಕ್ಷ್ಮಿಬಿಡಲಾರಳೆಂಬುವುದೂ 'ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ಲೆ ಭಾರತಂ' ಎಂದು ಹೇಳುವುದೂ ಕರ್ಣನ ಪಾತ್ರಕ್ಕೆ ಗೌರವವನ್ನು, ಮಹಿಮೆಯನ್ನು ಕೊಡುವುದಲ್ಲದೆ ಒಟ್ಟಿನಲ್ಲಿ ಬಹಳ ಗಂಭೀರವಾಗಿದೆ.
ಪಂಪಭಾರತದಲ್ಲಿ ಇನ್ನೂ ಕೆಲವು ಹೊಸಸಂಗತಿಗಳಿವೆ. ಯುಧಿಷ್ಠಿರನ ಆಜ್ಞಾನುಸಾರ ಯಕ್ಷನ ವಿಷಸರೋವರಕ್ಕೆ ನೀರು ತರಲು ಹೋದ ಭೀಮಾರ್ಜುನ ನಕುಲ ಸಹದೇವರು ಯಕ್ಷನ ಪ್ರಶ್ನೆಗೆ ಉತ್ತರಕೊಡದೆ ನೀರನ್ನು ಕುಡಿದು ಮೈಮರೆತು ಬೀಳುವರು. ದುರ್ಯೊಧನನ ಪುರೋಹಿತನಾದ ಕನಕಸ್ವಾಮಿಯು ಪಾಂಡವರನ್ನು ಕೊಲ್ಲಲು ಕಳುಹಿಸಿದ ಕೀರ್ತಿಗೆಯು ಬಂದು ಕೊಳದ ತಡಿಯಲ್ಲಿ ಬಿದ್ದಿದ್ದ ನಾಲ್ವರನ್ನೂ ತಿಂದು ಮುಗಿಸುವನೆಂದೆಣಿಸಿ ಕೈಹಾಕುವುದು ಅವರನ್ನು ಆ ಅವಸ್ಥೆಗೆ ತಂದ ದೈವವು ಪ್ರತ್ಯಕ್ಷವಾಗಿ ಆ ಉಗ್ರದೇವತೆಯನ್ನು
Page #32
--------------------------------------------------------------------------
________________
ಉಪೋದ್ಘಾತ | ೨೭ ನೀನು ದೂರಹೋಗು ಎನ್ನಲು 'ನಾನು ನನ್ನ ಮಾತಿನಂತೆ ನಡೆದುಕೊಳ್ಳಬೇಕು, ಯಾರನ್ನು ಭಕ್ಷಿಸಲಿ, ಎಂದು ಕೇಳುವುದು. ಆಗ ಯಕ್ಷನು 'ಎಲೈ ಪಿಶಾಚಿಯೇ ನಿನ್ನನ್ನು ಯಾವನು ಹುಟ್ಟಿಸಿದನೋ ಅವನನ್ನೇ ತಿನ್ನು' ಎಂದು ಹೇಳಲು ಆ ದೇವತೆಯು ಹಾಗೆಯೇ ಹಿಂದಿರುಗಿ 'ಕನಕನ ಬೇಳ್ವ ಕನಕನಿಗೇ ತಟ್ಟಿತು' ಎಂದು ಜನರಾಡಿಕೊಳ್ಳುವಂತೆ ಅವನನ್ನೇ ತಿಂದು ಬಿಟ್ಟಿತು. ಈ ಕಥೆಯು ಪಂಪಭಾರತದಲ್ಲಿದೆ, ಮೂಲಭಾರತದಲ್ಲಿಲ್ಲ. ಅರ್ಜುನನಿಗೆ 'ಕಿರೀಟಿ'ಯೆಂಬ ಹೆಸರು ಬರಲು ಪಂಪನು ಕೊಟ್ಟಿರುವ ಕಾರಣವೂ ವ್ಯಾಸಭಾರತದಲ್ಲಿಲ್ಲ. ಕೃಷ್ಣಪರಮಾತ್ಮನು ಸಂಧಾನಕ್ಕೆ ಬಂದ ಕಾಲದಲ್ಲಿ ದುರ್ಯೋಧನನು ವಿದುರನನ್ನು ಹೀಯಾಳಿಸಲು ವಿದುರನು ರೇಗಿ
ಕಡು ಮುಳಿದು ನಿನ್ನ ತೊಡೆಗಳ ನುಡಿವೆಡೆಯೊಳ್ ಭೀಮಸೇನನಾ ಪದದೊಳ್ ಪಿಡಿಯಿಂದಿರ್ದೆನಿದಂ ಪಿಡಿಯೆಂ ಪೋಗೆಂದು ಸಭೆಯೊಳುಡಿದಂ ಬಿಲ್ಲು ||
ಎಂದು ಹೇಳುವುದೂ ಪಂಪನದೇ. ಕರ್ಣನು ಕುಂತಿಯ ಮಗನೆಂದು ದುರ್ಯೋಧನನು ತಿಳಿದುಕೊಂಡುದು ಸತ್ಯಂತಪರೆಂಬ ದಿವ್ಯಜ್ಞಾನಿಗಳಿಂದ ಎಂದು ಹೇಳುವ ಕೃಷ್ಣನ ಮಾತುಗಳಿಗೆ ಮೂಲಭಾರತದಲ್ಲಿ ಆಧಾರವಿಲ್ಲ. ಈ ಬದಲಾವಣೆಗಳಿಗೆಲ್ಲ ಸರಿಯಾದ ಕಾರಣವನ್ನು ಊಹಿಸುವುದು ಸಾಧ್ಯವಿಲ್ಲ. ಇವುಗಳನ್ನು ನೋಡಿದರೆ ಪಂಪನೇ ಮೂಲಭಾರತದಿಂದ ಈ ಬದಲಾವಣೆಗಳನ್ನು ಮಾಡಿಕೊಂಡನೊ ಅಥವಾ ಹೀಗೆ ಕಥಾಶರೀರದಲ್ಲಿ ವ್ಯತ್ಯಾಸವನ್ನು ಹೊಂದಿದ್ದ ಬಹುಶಃ ಜೈನಸಂಬಂಧಿಯಾದ ಬೇರೊಂದು ಭಾರತವೇ ಪಂಪನ ಕಾಲದಲ್ಲಿದ್ದಿತೋ ಎಂಬ ಸಂಶಯವು ಹುಟ್ಟುವುದು ಸರಿಯಾದ ಆಧಾರಗಳು ಸಿಕ್ಕುವವರೆಗೆ ಹೀಗೆ ನಿರ್ಧರಿಸಲು ಸಾಧ್ಯವಿಲ್ಲ.
'ಪಂಪಭಾರತ'ದಲ್ಲಿ ಪೂರ್ವಕವಿಗಳಿಂದ ಸ್ವೀಕರಣವಿಚಾರ: ಪಂಪನು ಮೇಲೆ ಹೇಳಿದಂತೆ ಮೂಲಭಾರತದ ಕಥೆಯಲ್ಲಿ ಹಲವು ವ್ಯತ್ಯಾಸಗಳನ್ನು ಮಾಡಿರುವುದಲ್ಲದೆ ಕನ್ನಡದ ಸಂಪತ್ತೂ ಸ್ವಾರಸ್ಯವೂ ಸ್ಪುಟವಾಗುವಂತೆ ಸಂಸ್ಕೃತದ ಶ್ರೇಷ್ಠಕವಿಗಳಾದ ಕಾಳಿದಾಸ, ಭಾರವಿ, ಶ್ರೀಹರ್ಷ, ಭಟ್ಟ ನಾರಾಯಣ ಮೊದಲಾದವರ ಕೃತಿಗಳಿಂದ ಕೆಲವು ಭಾಗಗಳ ಸಾರವನ್ನು ತನ್ನ ಕಾವ್ಯದಲ್ಲಿ ಪ್ರಯೋಗಿಸಿದ್ದಾನೆ. ನಾಲ್ಕನೆಯ ಆಶ್ವಾಸದಲ್ಲಿ ಬರುವ ಮಲಯಪರ್ವತದ ವರ್ಣನೆಯು ನಾಗಾನಂದದ ಮಲಯಪರ್ವತದ ವರ್ಣನೆಯ ಅನುವಾದವಿರಬೇಕು. ಪಂಚಮಾಶ್ವಾಸದಲ್ಲಿ ವಿರಹಜ್ವಾಲೆಯಿಂದ ತಪ್ತಳಾದ ಸುಭದ್ರೆಯನ್ನು ಅರ್ಜುನನು ಮರೆಯಾಗಿ ನಿಂತು ನೋಡುತ್ತ ಅವರ ಸರಸಲ್ಲಾಪಗಳನ್ನು ಕೇಳುವ ಸನ್ನಿವೇಶವನ್ನು ಕಾಳಿದಾಸನ 'ಶಾಕುಂತಲ'ದಿಂದ ತೆಗೆದುಕೊಂಡಿರಬೇಕು. ಸಪ್ತಮಾಶ್ವಾಸದ ಇಂದ್ರಕೀಲಪ್ರಕರಣವು ಭಾರವಿಯ 'ಕಿರಾತಾರ್ಜುನೀಯದ ಸಾರಾಂಶವೆಂದು ಹೇಳಬಹುದು. ಕರ್ಣಾಶ್ವತ್ಥಾಮರ ವಾಗ್ಯುದ್ದವು 'ವೇಣೀಸಂಹಾರ' ನಾಟಕದ ಛಾಯೆಯಿಂದ ಕೂಡಿದೆ. ಹೀಗೆ ಪುಪನು ಸಮಯೋಚಿತವಾಗಿ ಸಂಸ್ಕೃತದ ಉದ್ದಾಮಕವಿಗಳ
Page #33
--------------------------------------------------------------------------
________________
೨೮ | ಪಂಪಭಾರತಂ ಉದಾತ್ತವಾದ ಪ್ರತಿಭೆಯನ್ನು ತನ್ನ ಕಾವ್ಯದಲ್ಲಿ ಪ್ರತಿಬಿಂಬಿಸಿ ಕನ್ನಡವನ್ನು ಸಂಪದ್ಯುಕ್ತವಾಗಿ ಮಾಡಿದ್ದಾನೆ. ಭಾವವನ್ನು ಇತರರಿಂದ ತೆಗೆದುಕೊಂಡಿದ್ದರೂ ನಿರೂಪಣರೀತಿಯನ್ನು ತನ್ನದನ್ನಾಗಿಯೇ ಮಾಡಿಕೊಂಡಿರುವುದು ಅವನ ವೈಶಿಷ್ಟ.
ಪಂಪಭಾರತದ ಕಥಾಸರಣಿ : ಪಂಪನಿಗೆ ಸಮಗ್ರಭಾರತವನ್ನು ಬರೆಯುವ ಭರದಲ್ಲಿ ಹೆಚ್ಚು ವಿವರಗಳನ್ನು ತುಂಬುವುದಕ್ಕೆ ಅವಕಾಶವಿಲ್ಲ, 'ಪೆಲಿವುಮುಪಾಖ್ಯಾನ ಕಥೆಗಳೊಳಮೊಂದಂ ಕುಂದಲೀಯದೆ ಪೇಯ್ಯಂ' ಎಂದು ಹೇಳುವನಾದರೂ ಎಷ್ಟೋ ವಿಷಯಗಳನ್ನು ಬಹುಕೌಶಲದಿಂದ ಕ್ರೋಡೀಕರಿಸಿ ಒಂದೆರಡು ಮಾತುಗಳಲ್ಲಿ ಕಾವ್ಯಕ್ಕೆ ಸರಿಹೋಗುವಂತೆಯೂ ಆಯಾ ಸನ್ನಿವೇಶಗಳ ಮಹತ್ವವೂ ಪಾತ್ರಗಳ ವ್ಯಕ್ತಿತ್ವವೂ ಚೆನ್ನಾಗಿ ಸ್ಪುರಿಸುವಂತೆಯೂ ಮೂಲಗ್ರಂಥದ ಆಶಯ ಕೆಡದಂತೆಯೂ ಮೂಲರೇಖೆಗಳನ್ನು ಮಾತ್ರ ಎಳೆದಿರುವನು. ಮೊದಲು ಪಾಂಡವ ಕೌರವ ಜನನದಿಂದ ಹೊರಟು ಅವರ ಬಾಲಕೇಳಿ, ಭೀಮ ದುರ್ಯೊಧನರ ದ್ವೇಷಕ್ಕೆ ಕಾರಣ, ಲಾಕ್ಷಾಗೃಹದಹನ, ಹಿಡಿಂಬಾಸುರವಧೆ, ಬ್ರೌಪದೀಪರಿಣಯ, ಇಂದ್ರಪ್ರಸ್ಥಗಮನ, ಇವುಗಳವರೆಗೆ ಕಥಾಸರಣಿಯಲ್ಲಿ ಎಲ್ಲಿಯೂ ಎಡರು ಬಾರದಂತೆ ಸರಿಪಡಿಸಿಕೊಂಡು ನಿರೂಪಿಸುತ್ತ ಹೋಗಿರುವನು. ಇಲ್ಲಿಂದ ಮುಂಧೆ. ಮೂಲಭಾರತದ ಪ್ರಕಾರ ನಾರದಾದೇಶದಂತೆ ಅರ್ಜುನನನ್ನು ಭೂಪ್ರದಕ್ಷಿಣೆಗೆ ಕಳುಹಿಸಬೇಕು. ಹಾಗೆ ಇಲ್ಲಿ ಮಾಡಲು ಸಾಧ್ಯವಿಲ್ಲ. ಬ್ರೌಪದಿಯ ಪತಿಯು ಅರ್ಜುನನೊಬ್ಬನೇ ಎಂಬ ವಿಷಯದಲ್ಲಿ ಪಂಪನು ಜಾಗರೂಕನಾಗಿರುವನು. ಅಲ್ಲದೆ “ವರ್ಣಕ ಕತೆಯೊಳೊಡಂಬಡಂ ಪಡೆಯೆ' ಹೇಳಬೇಕು ತಾನೆ? ಆದುದರಿಂದ ಅರ್ಜುನನ ಪ್ರಯಾಣಕ್ಕೆ ಪಂಪನು ಬೇರೆಯ ಕಾರಣವನ್ನು ಕಲ್ಪಿಸಿರುವನು..ಅದು 'ದಿಗಂಗನಾ ಮುಖಾವಲೋಕನಕ್ಕಾಗಿ'. ಅರ್ಜುನನು ದಿಗ್ವಿಜಯಾರ್ಥವಾಗಿ ಹೊರಟು ಸಮಸ್ತ ರಾಷ್ಟ್ರಗಳಲ್ಲಿ 'ಆತ್ಮೀಯ ಶಾಸನಾಯತ್ತಂ' ಮಾಡುತ್ತ ಬರುವನು. ಇಲ್ಲಿ ಪಂಪನಿಗೆ ಅನೇಕ ದೇಶಗಳನ್ನು, ತನ್ನ ವಿಸ್ತಾರವಾದ ಅನುಭವವನ್ನು ವರ್ಣಿಸುವುದಕ್ಕೆ ಅವಕಾಶ ಸಿಕ್ಕುವುದು. ಅರ್ಜುನನು ಮುಂದೆ ಹೊರಟು ಗೋಕರ್ಣ ಬನವಾಸಿಗಳನ್ನು ದಾಟಿ ದ್ವಾರಕಾಪುರವನ್ನು ಸೇರಿ ಅಲ್ಲಿ ತನ್ನ ಹಲವು ಜನ್ಮಗಳ ಕೆಳೆಯ ನಾದ ಕೃಷ್ಣನು ತನ್ನನ್ನು ಇದಿರ್ಗೊಳ್ಳಲು ಪುರಪ್ರವೇಶಮಾಡುವನು. ಪುರಸ್ತ್ರೀಯರು ಫಲ್ಗುಣನ ರೂಪಾತಿಶಯವನ್ನು ನೋಡಿ “ಗುಣಾರ್ಣವನೀತನೇ' ಎಂದು ಬೆರಗುಗೊಂಡು ನೋಡುವರು. ಅಲ್ಲಿಂದ ಮುಂದೆ ಸುಭದ್ರಾರ್ಜುನರ ಅನುರಾಗ, ಸೂರ್ಯಾಸ್ತಮಯ, ರಾತ್ರಿ, ಚಂದ್ರೋದಯ, ಅರ್ಜುನ - ಚಂದ್ರಿಕಾವಿಹಾರ, ವೇಶ್ಯಾವಾಟಿಕೆ , ಪಾನಗೋಷ್ಠಿ, ಸುಭದ್ರೆಯ ವಿರಹ, ಸುಭದ್ರಾಪರಿಣಯ-ಮೊದಲಾದವುಗಳಲ್ಲಿ ವರ್ಣಕಕಾವ್ಯದ ಲಕ್ಷಣಗಳನ್ನು ಪೂರ್ತಿ ಗೊಳಿಸುವುದಕ್ಕೆ ಸಹಾಯಕವಾಗುವುದು. ಇವುಗಳ ವರ್ಣನೆಗಳಿಂದ ಆಶ್ವಾಸಗಳು ತುಂಬಿ ತುಳುಕಾಡುವುವು. ಕಥೆಯ ಬೆಳವಣಿಗೆಗೆ-ಅನುಸ್ಮತವಾದ ಪ್ರವಾಹಕ್ಕೆ- ಇದು ಸ್ವಲ್ಪ ಕುಂದನ್ನು, ಅಡಚಣೆಯನ್ನು ಉಂಟುಮಾಡಿದರೂ ಪಂಪನ ಅಪಾರವಾದ ಅನುಭವದ ಪ್ರದರ್ಶನಕ್ಕೂ ಆಳವಾದ ರಸಿಕತೆಗೂ, ಉತ್ತಮವಾದ ವರ್ಣನಾಕೌಶಲಕ್ಕೂ ಇವು
Page #34
--------------------------------------------------------------------------
________________
ಉಪೋದ್ಘಾತ | ೨೯ ಕೈಗನ್ನಡಿಯಂತಿವೆ. ಇವುಗಳನ್ನು ಪ್ರತ್ಯೇಕವಾಗಿ ಓದಿದರೆ ಸ್ವತಂತ್ರ ಭಾವಗೀತೆಗಳಂತೆಯೇ ಇವೆ. ಇವನ್ನು ಓದುವಾಗ ಭಾರತವನ್ನು ಓದುತ್ತಿರುವ ಅರಿವೇ ಇರುವುದಿಲ್ಲ. ಚಿತ್ರದ ಮೇಲೆ ಚಿತ್ರ, ಏಕಪ್ರಕಾರವಾದ ಚಿತ್ರಪಟದ ಸುರುಳಿಯನ್ನು ಬಿಚ್ಚಿದಂತೆ ಕಣ್ಣುಮುಂದೆ ಹಾದು ಹೋಗಿ ಕಣ್ಮನಗಳನ್ನು ತೃಪ್ತಿಗೊಳಿಸಿ ವಾಚಕರನ್ನು ಮುಗ್ಧರನ್ನಾಗಿಸುವುವು. ಮುಂದೆ ಅರ್ಜುನನೂ ಸುಭದ್ರೆಯೂ ಇಂದ್ರಪ್ರಸ್ಥವನ್ನು ಪ್ರವೇಶಿಸುವುದು, ಸುಭದ್ರಾವಿವಾಹ, ಅಭಿಮನ್ಯುವಿನ ಜನನ, ಮೃಗಯಾವಿಹಾರ-ಇವೇ ಮೊದಲಾದುವು ಬಹು ರಸಭರಿತವಾಗಿಯೂ ಮಿತಿಯರಿತೂ ವರ್ಣಿತವಾಗಿವೆ.
ಮುಂದೆ ಅರ್ಜುನನ ಅನ್ಯಾದೃಶವಾದ ಪೌರುಷವನ್ನು ವ್ಯಕ್ತಗೊಳಿಸುವ ಖಾಂಡವದಹನದ ದೃಶ್ಯ ಕಣ್ಣಿಗೆ ಬೀಳುವುದು. ಇಲ್ಲಿ ಕವಿಯು ಪ್ರಸ್ತುತವಿಷಯವನ್ನು ಮನದಟ್ಟಾಗುವಂತೆ ವರ್ಣಿಸುವ ವೈಖರಿಯೂ ಗ್ರಹಿಸಲಸಾಧ್ಯವಾದುದನ್ನು ಶಬ್ದಗಳ ಸಂವಿಧಾನದಿಂದ ಚಿತ್ರಿಸುವ ನೈಪುಣ್ಯವೂ ಬಹು ಶ್ಲಾಘನೀಯವಾಗಿವೆ.
ಇನ್ನು ಮೇಲೆ ಕಥೆಯು ಹೆಚ್ಚು ವ್ಯತ್ಯಾಸವಾಗದೆ ಯಥಾಕ್ರಮವಾಗಿ ರಾಜಸೂಯಾರಂಭದಿಂದ ಪಾಂಡವರ ಅರಣ್ಯಪ್ರವೇಶದವರೆಗೆ ಬಹು ಜಾಗ್ರತೆಯಿಂದ ಸಾಗುವುದು. ಮೂಲಭಾರತದ ಪ್ರಕಾರ ಧರ್ಮನಂದನನು ಅರಣ್ಯಪ್ರವೇಶ ಮಾಡಿದೊಡನೆಯೇ ಋಷಿಗಳು ಬಂದು ಧರ್ಮೋಪದೇಶವನ್ನು ಮಾಡಬೇಕು. ಪಂಪನು ಈ ರಗಳೆಯನ್ನು ಬಿಟ್ಟಿದ್ದಾನೆ. ಹೇಗೂ ಹನ್ನೆರಡು ವರ್ಷಗಳು ಕಳೆಯಬೇಕು. ಅದಕ್ಕಾಗಿ. ಕೆಲವು ಆಖ್ಯಾನಗಳನ್ನು ಮಾತ್ರ ಪಂಪನು ನಿರೂಪಿಸುವನು. ಇಷ್ಟರಲ್ಲಿ ಅರ್ಜುನನು ಇಂದ್ರಕೀಲದಲ್ಲಿ ತಪಸ್ಸುಮಾಡಿ ಶಿವನಿಂದ ಪಾಶುಪತಾಸ್ತವನ್ನು ಪಡೆದು ಬರುವನು. ಮುಂದೆ ಅಜ್ಞಾತವಾಸ, ಗೋಗ್ರಹಣ, ಕೃಷ್ಣದೌತ್ಯ, ಯುದ್ದನಿರ್ಣಯ ಮೊದಲಾದವುಗಳೆಲ್ಲ ಸಂಕ್ಷೇಪವಾಗಿಯೂ ಲಲಿತವಾಗಿಯೂ ನಿರೂಪಿತವಾಗಿವೆ.
. ಇವೆಲ್ಲ ಹತ್ತು ಆಶ್ವಾಸಗಳಲ್ಲಿ ಮುಗಿಯುವುವು. ಪಂಪನು ಮುಂದಿನ ಆಶ್ವಾಸಗಳನ್ನು ಪೂರ್ಣವಾಗಿ ಯುದ್ಧಕ್ಕಾಗಿಯೇ ಉಪಯೋಗಿಸಿಕೊಂಡಿರುವನು. ಮನಸ್ಸು ಮಾಡಿದ್ದರೆ ಇದನ್ನು ಇನ್ನೂ ಕಡಮೆಮಾಡಬಹುದಾಗಿತ್ತು. ಆದರೆ ಸಾಹಸಾಭರಣನ ಯುದ್ಧಕೌಶಲವನ್ನು ವಿಸ್ತಾರವಾಗಿ ವರ್ಣಿಸಬೇಕೆಂದೋ ಸಮಸ್ತ ಭಾರತವನ್ನು ತಪ್ಪದೇ ಹೇಳಬೇಕೆಂದೋ ಯುದ್ಧರಂಗದಲ್ಲಿ ತನಗಿದ್ದ ಅಪಾರವಾದ ಪರಿಚಯವನ್ನು ಪ್ರದರ್ಶನ ಮಾಡಬೇಕೆಂದೋ ಆ ಭಾಗವನ್ನು ವಿಸ್ತರಿಸಿದ್ದಾನೆ. ಈ ಭಾಗದಲ್ಲಿಯೇ ಭಾರತದ ಪ್ರಭಾವವ್ಯಕ್ತಿಗಳಾದ ಭೀಷ್ಮ, ದ್ರೋಣ, ಕರ್ಣ, ದುರ್ಯೊಧನ, ದುಶ್ಯಾಸನ, ಶಲ್ಯ, ಅರ್ಜುನ, ಭೀಮ, ಧರ್ಮರಾಯ, ಅಭಿಮನ್ಯು, ಸೈಂಧವ, ಶ್ವೇತ ಮೊದಲಾದವರ ಉದ್ದಾಮ ಸಾಹಸದ, ಔನ್ನತ್ಯದ, ಮಹಾನುಭಾವತ್ವದ, ತ್ಯಾಗದ ವಿವಿಧ ಪರಿಚಯಗಳು ಮನದಟ್ಟಾಗುವುದು. ಕೌರವರ ಪಕ್ಷದ ವೀರಾಧಿವೀರರೆಲ್ಲರೂ ಯುದ್ಧರಂಗದಲ್ಲಿ ಮಡಿಯುವರು. ಪಾಂಡವರಿಗೆ ಜಯವು ಲಭಿಸುವುದು. ಅರ್ಜುನನ ಪಟ್ಟಾಭಿಷೇಕದೊಂದಿಗೆ ಕಾವ್ಯವು ಪರಿಸಮಾಪ್ತಿ ಗೊಳ್ಳುವುದು,
Page #35
--------------------------------------------------------------------------
________________
೩೦ | ಪಂಪಭಾರತಂ
: ಪಂಪನ ಶೈಲಿ-ಒಬ್ಬ ಕವಿಯ ವ್ಯಕ್ತಿತ್ವವೂ ಮಹತ್ವವೂ ಅವನ ಶೈಲಿಯಲ್ಲಿ . ಪ್ರತಿಬಿಸುತ್ತದೆ ಎಂದು ತಿಳಿದವರು ಹೇಳುತ್ತಾರೆ. ಇದು ಬಹುಮಟ್ಟಿಗೆ ನಿಜ. ಅವನ ಆವೇಶ, ಅವನ ಮನೋಭಾವ, ಅವನ ಲೋಕಾನುಭವ, ಅವನ ಪ್ರತಿಭಾಸಂಪನ್ನತೆ, ಜ್ಞಾನ, ವಾಗೋರಣೆ ವ್ಯಕ್ತಿತ್ವ-ಪ್ರತಿಯೊಂದೂ ಅವನ ಶೈಲಿಯಲ್ಲಿ ಸ್ಪುಟವಾಗಿ ಎದ್ದು ಕಾಣುತ್ತವೆ. ಕವಿಯು ಹುಲುಗ ವಿಯಾದರೆ ಹಿಂದಿನ ಕಾವ್ಯಗಳನ್ನೇ ಮಾದರಿಯಾಗಿಟ್ಟುಕೊಂಡು ಅವುಗಳ ಸಾರವನ್ನು ಗ್ರಹಿಸದೆ ನಿರ್ಜಿವವಾದ ಕಟ್ಟಡವನ್ನು ತೆಗೆದುಕೊಂಡು ಶಬ್ದಗಳ ಜೋಡಣೆಯಿಂದ ಶುಷ್ಕವಾಗಿ ಪಡಿಯಚ್ಚನ್ನು ನಿರ್ಮಿಸುತ್ತಾನೆ. ಅದರಲ್ಲಿ ಸತ್ವವಿರುವುದಿಲ್ಲ, ಜೀವವಿರುವುದಿಲ್ಲ, ಮನುಷ್ಯನ ಭಾವನಾಡಿಗಳನ್ನು ಮೀಟುವ ಆವೇಶವಿರುವುದಿಲ್ಲ, ಕವಿಯು ಅರ್ಥವಿಲ್ಲದ ಕವಿಸಮಯಗಳನ್ನು ಒಂದರಮೇಲೊಂದನ್ನು - ಮೂಟೆ ಮೂಟೆಯಾಗಿ ತುಂಬಿ ಜುಗುಪ್ಪೆಯನ್ನುಂಟುಮಾಡುತ್ತಾನೆ. ಹಾಗಲ್ಲದೆ ಕವಿಯು ಪ್ರಜ್ಞಾಶಾಲಿಯೂ ಕಲ್ಪನಾಚತುರನೂ ಪ್ರತಿಭಾಸಂಪನ್ನನೂ ಅನುಭವಶಾಲಿಯೂ ಆದರೆ ಕಾವ್ಯದಲ್ಲಿ ಒಂದು ವಿಧವಾದ ಆವೇಶವನ್ನು ತುಂಬಿ ವಾಚಕನ ಮೇಲೆ ತನ್ನದೇ ಆದ ಸಮ್ಮೋಹನಾಸ್ತವನ್ನು ಬೀರಿ ತನ್ನವನನ್ನಾಗಿ ಮಾಡಿಕೊಳ್ಳುತ್ತಾನೆ. ಸಾಧಾರಣವಾಗಿ ಕನ್ನಡ ಕವಿಗಳನೇಕರಿಗೆ ಈ ಕಾವ್ಯಮರ್ಮ ತಿಳಿಯದೆಂಬ ಅಪಪ್ರಥೆಯಿದೆ. ಆದರೆ, ಕವಿತಾಗುಣಾರ್ಣವನಾದ ಪಂಪನ ವಿಷಯವೇ ಬೇರೆ. ಆತನು ಕವಿವೃಷಭ. ಕವಿಯಾಗಿದ್ದಂತೆಯೇ ಕಲಿಯೂ ಆಗಿದ್ದವನು ಕನ್ನಡ, ಸಂಸ್ಕೃತ, ಪ್ರಾಕೃತ, ಅಪಭ್ರಂಶಗಳ ಪೂರ್ಣಪಾಂಡಿತ್ಯವುಳ್ಳವನು. ಜೀವನದ ವಿವಿಧಕ್ಷೇತ್ರಗಳ ಪ್ರತ್ಯಕ್ಷಾನುಭವವನ್ನುಳ್ಳವನು. ವೈದಿಕ ಮತ್ತು ಜೈನ ಸಂಸ್ಕಾರಗಳ ಮೇಳವನ್ನುಳ್ಳವನು. ರಸಿಕತೆಯನ್ನೂ ರಾಜಾಶ್ರಯವನ್ನೂ ಆತ್ಮಾಭಿಮಾನವನ್ನೂ ಆನಂದಾನುಭವವನ್ನೂ ಉಳ್ಳವನು. ತನ್ನ ಹಿಂದಿನ ಗ್ರಂಥಗಳ ಮಾದರಿಯಲ್ಲಿ ಗ್ರಂಥರಚನೆಗೆ ಹೊರಟಿದ್ದರೂ ಅವುಗಳ ಸಾರವನ್ನು ಉಪಯೋಗಿಸಿಕೊಂಡಿದ್ದರೂ ಮಾರ್ಗ ಮತ್ತು ಶೈಲಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದಾನೆ. ಮುಂದಿನ ಕವಿಗಳಿಗೆ ಮಾರ್ಗದರ್ಶಕನಾಗಿದ್ದಾನೆ. ಆದುದರಿಂದ ಅವನ ಶೈಲಿಯಲ್ಲಿ ಪ್ರತ್ಯೇಕ ವ್ಯಕ್ತಿತ್ವವಿದೆ. ಒಂದು ಮೋಹಕಶಕ್ತಿಯಿದೆ. ಅವನು ಯಾವುದನ್ನು ಚಿತ್ರಿಸಿದರೆ ಮನದಟ್ಟಾಗುವಂತೆ ಚಿತ್ರಿಸುತ್ತಾನೆ. ಅದನ್ನು ಓದುತ್ತ ಓದುತ್ತ ವಾಚಕನೂ ಮುಗ್ಧನಾಗಿ ಅಲ್ಲಿಯ ಪಾತ್ರಗಳು ಮತ್ತು ಸನ್ನಿವೇಶಗಳಲ್ಲಿ ಐಕ್ಯನಾಗುವನು. ಕಥಾಶರೀರದಲ್ಲಿ ತಾನೂ ಭೂಮಿಕೆಯಾಗಿ ಬಿಡುವನು. ಪಂಪನ ಯಾವ ವರ್ಣನೆಯನ್ನು ತೆಗೆದುಕೊಂಡರೂ ಹೀಗೆಯೇ. ಬನವಾಸಿಯ ವರ್ಣನೆಯನ್ನು ನೋಡಿ. ಅದರ ವೈಭವವನ್ನು ಓದಿದ ಕೂಡಲೆ ವಾಚಕನೂ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಕೋಗಿಲೆಯಾಗಿಯೋ ಹುಟ್ಟಬೇಕೆಂದು ಆಶಿಸುವನು. ಸುಭದ್ರಾಪರಿಣಯಕ್ಕೆ ಮುಂಚಿನ ಚಂದ್ರಿಕಾವಿಹಾರದಲ್ಲಿ ವೇಶ್ಯಾವಾಟಿಕೆಯ ವರ್ಣನೆಯನ್ನು ಓದುತ್ತಿದ್ದರೆ ತಾನೂ ಆ ಬೀದಿಯಲ್ಲಿ ಸಂಚರಿಸುತ್ತಿರುವಂತೆ ಭ್ರಾಂತಿಗೊಳ್ಳುವನು ದುಶ್ಯಾಸನನು ದೌಪದಿಯ ಕೇಶಗ್ರಹಣ ಮಾಡಿ ಸೆಳೆದುಕೊಂಡು ಬರುವುದನ್ನು ವಾಚಿಸಿದಾಗ ಪಾಪಿ ದುಶ್ಯಾಸನನನ್ನು ಸೀಳಿ ಬಿಡೋಣವೇ
Page #36
--------------------------------------------------------------------------
________________
ಉಪೋದ್ಘಾತ | ೩೧ ಎಂಬ ಆಕ್ರೋಶವನ್ನು ತಾಳುವನು. ಭೀಮಸೇನನು ಕಾಲಮೇಘದಂತೆ ಗರ್ಜಿಸಿ ಆರ್ಭಟಮಾಡುವುದನ್ನು ಓದುತ್ತಿದ್ದರೆ ಹೃದಯದಲ್ಲಿ ನಡುಕ ಹುಟ್ಟಿ ಸಬನಾಗುವನು. ಬಿದ್ದ ಚಕ್ರವರ್ತಿಯ ಮುಡಿಯನ್ನು ಭೀಮನು ಒದೆಯುತ್ತಿರುವುದನ್ನು ಓದುತ್ತಿದ್ದರೆ 'ಛೀ ಭೀಮಾ ನಿನಗೆಷ್ಟು ದುರಹಂಕಾರ! ನೀನು ಮೂರ್ಛಿತನಾಗಿದ್ದಾಗ ದುರ್ಯೊಧನನು ನಿನ್ನಲ್ಲಿ ಕರುಣೆಯನ್ನು ತೋರದಿದ್ದಿದ್ದರೆ ನೀನೇನಾಗುತ್ತಿದ್ದೆ, ಅವನು ನಿನ್ನಲ್ಲಿ ತೋರಿಸಿದ ಕರುಣೆಗೆ ಇದೇ ಪ್ರತಿಫಲ' ? ಎಂದು ಹೇಳಲುದ್ಯುಕ್ತನಾಗುವನು. ಗದಾಯುದ್ದದ ಪ್ರಾರಂಭದಲ್ಲಿ ಹಲಾಯುಧನು ದುರ್ಯೊಧನನನ್ನು ಕುರಿತು 'ನೀ ಮರುಳನಮನೇಕೆ ಮಾಡಿದಯ್' ಎಂಬುದಕ್ಕೆ ಅವನು 'ಪಾಂಡುತನಯ ನಿರ್ದೋಷಿಗಳ್, ಮಧ್ವಂಧು ಶೋಕಾಗ್ನಿಯಿಂದುರಿದಪ್ಟೆಂ' ಎನ್ನುತ್ತಿದ್ದರೆ ದುರ್ಯೊಧನ, ನೀನು ನಿಜವಾಗಿಯೂ ಮಹಾನುಭಾವನೇ ಅಹುದು' ಎನ್ನುವನು. ಕೊನೆಗೆ ಪಂಪನು ವಿಕ್ರಮಾರ್ಜುನನ ಪಟ್ಟಾಭಿಷೇಕ ಮಹೋತ್ಸವವನ್ನು ವರ್ಣಿಸುವಾಗ ಅವನೂ ಅದರಲ್ಲಿ ಭಾಗಿಯಾಗಿ ". ಪಾಂಡವರು ಹಸ್ತಿನಾಪುರವನ್ನು ಪ್ರವೇಶಿಸುವಾಗ ಅವರನ್ನು ಸ್ವಾಗತಿಸುವ ಪಲ್ಲವಿತವಾದ ಆಮ್ರವನವನ್ನು ಕಣ್ಣಾರೆ ನೋಡುವನು. ಗುಡಿತೋರಣಗಳಿಂದ ವಿರಾಜಿಸುವ ಬೀದಿಗಳಲ್ಲಿ ಓಡಾಡುವನು. ಸಂಸಾರಸಾರೋದಯನ ಒಡೋಲಗದಲ್ಲಿ ವೈತಾಳಿಕರೂ ಮಂಗಳಪಾಠಕರೂ ಒಂದೇ ಕೊರಳಿನಿಂದ ಮಂಗಳವನ್ನೋದುತ್ತ 'ಅರಿಗಂಗೀಗೆ ಮಂಗಳಮಂಗಳಮಹಾಶ್ರೀಯಂ ಜಯ ಶ್ರೀಯುಮಂ' ಎಂದು ಘೋಷಿಸುತ್ತಿದ್ದರೆ ತಾನೂ ಅವರೊಡನೆ 'ಅರಿಕೇಸರಿಗೆ ಜೈ' ಎನ್ನುತ್ತಾನೆ. ಇದೆಲ್ಲ ಏತರಿಂದ? ಪಂಪನ ಅನ್ಯಾದೃಶವಾದ ಕಾವ್ಯರಚನಾ ಪ್ರೌಢಿಮೆಯಿಂದಲ್ಲವೇ? ಅವನು ಯಾವುದನ್ನು ವರ್ಣಿಸಿದರೂ ತಾನು ಮೊದಲು ಅದನ್ನು ಚಿತ್ರಿಸಿಕೊಂಡು ಅದರ ಪ್ರತಿಬಿಂಬ ವಾಚಕರಿಗೆ ತೋರುವಂತೆ, ಸಹಜವಾದ ಸ್ವಾಭಾವಿಕವಾದ ಮಾತಿನಿಂದ ಹೇಳುತ್ತ ಹೋಗುವುದರಿಂದ ಆಯಾ ವರ್ಣನೆಗಳನ್ನು ಓದುತ್ತಿದ್ದಾಗ ಆಯಾ ಚಿತ್ರಗಳೇ ವಾಚಕರೆದುರಿಗೆ ಜೀವದುಂಬಿ ನಲಿಯುವಂತೆ ಭಾಸವಾಗುತ್ತದೆ...
ಪಂಪನ ಕಾವ್ಯತತ್ ಕವಿತಾಗುಣಾರ್ಣವನು ಉತ್ತಮಕಾವ್ಯದ ತಿರುಳನ್ನೂ ತನ್ನ ಕಾವ್ಯದ ಮೂಲತತ್ವವನ್ನೂ ತಾನೇ ಮುಂದಿನ ಪದ್ಯಗಳಲ್ಲಿ ಶ್ರುತಪಡಿಸಿದ್ದಾನೆ.
ಮೃದು ಪದಗತಿಯಿಂ ರಸಭಾ ವದ ಪೆರ್ಚಿಂ ಪವನಿತೆಯೋಲೆ ಕೃತಿಸೌಂದ ರ್ಯದ ಚಾತುರ್ಯದ ಕಣಿಯನೆ ವಿದಗಬುಧಜನಮನ್, ಅಲೆಯಲೆವೀಡಾ || ಕಿವಿಯಂ ಬಗೆವುಗುವೊಡೆ ಕೊಂ ಕುವೆತ್ತ ಪೊಸನುಡಿಯ ಪುಗುಗುಂ... ಮೃದುಮಧುರವಚನರಚನೆಯೊಳ್, ಉದಾತ್ತಂ, ಅರ್ಥಪ್ರತೀತಿಯಂ ಕೇಳೋ ಜನ ಕೈದಿರೊಳ್ ಕುಡದಂದದು... ಕವಿಯ ಮನದೊಳಿರ್ದಂತವಲಂ ||
Page #37
--------------------------------------------------------------------------
________________
೩೨ | ಪಂಪಭಾರತಂ
ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದು, ಒಂದಿ ದೇಸಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ಳುದು ತಳ್ಕೊಡೆ ಕಾವ್ಯಬಂಧಂ, ಒಪ್ಪುಗುಂ, ಆ ಸಕಳಾರ್ಥಸಂಯುತಂ, ಆಳಂಕೃತಿಯುಕ್ತಂ, ಉದಾತ್ತವೃತ್ತಿ ವಿನ್ಯಾಸಂ, ಅನೇಕ ಲಕ್ಷಣಗುಣಪ್ರಭವಂ, ಮೃದುಪಾದಮಾದ ವಾಕ್ಸಿ ಸುಭಗಂ ಕಳಾಕಳಿತಂ
ಪಂಪನು ರಾಜದ್ರಾಜಕಮೆನಿಸಿದ ಪುಲಿಗೆರೆಯ ತಿರುಳುಗನ್ನಡದಲ್ಲಿ ತನ್ನ ಕಾವ್ಯಗಳನ್ನು ರಚಿಸಿದ್ದಾನೆ. ಅದರಲ್ಲಿ ಪೊಸದೇಸಿಯಿದೆ, ಬೆಡಂಗಿದೆ, ಅರ್ಥವ್ಯಕ್ತಿಯಿದೆ, ಅದು 'ವಿದಿತಂ ಪ್ರಾತೀತಿಕಂ, ಕೋಮಲಂ, ಅತಿಸುಭಗಂ, ಸುಂದರಂ, ಸೂಕ್ತಿಗರ್ಭ೦, ಮೃದುಸಂದರ್ಭ೦, ವಿಚಾರಕ್ಷಮಂ, ಉಚಿತಪದಂ, ಶ್ರವ್ಯಂ, ಆರ್ಯಾಕುಲಂ, ವ್ಯಾಪ್ತದಿಗಂತಂ ಕಾವ್ಯಂ' ಎಂದು ಕವಿಜನ ಮೆಚ್ಚಿದ್ದಾರೆ. ಇದು ನಿಚ್ಚಂ ಪೊಸತರ್ಣವಂಬೊಲ್ ಅತಿ ಗಂಭೀರಂ, ಲಲಿತಪದವುಳ್ಳುದು, ಪ್ರಸನ್ನ ಕವಿತಾಗುಣ ಪೂರ್ಣವಾದುದು. ಆತನಿಂದ ಮುಂದೆ ಬಂದ ಕವಿಗಳು ಜಾತಿಮತ ಪಕ್ಷಪಾತವಿಲ್ಲದೆ 'ಸುಭಗಕವಿ ಪಂಪನಿಂ ವಾಗ್ವಿಭವೋನ್ನತಿ ನೆಗಟ್ಟುದು, ರಸಿಕಾಗ್ರಣಿ ಹಂಪದೇವ, 'ಸತ್ಯವಿಹಂಪನ ಕೃತಿ ಸೌಂದರೀಸುಭಗಂ', 'ಪಂಪನ ರೀತಿ', 'ಪಂಪನಿಂಪು,' 'ಪಂಪನ ಗುಣಂ', 'ಪಂಪನೊಂದಸದೃಶಮಪ್ಪ ರಸಭಾವಂ,' ಎಂದು ಪಂಪನ ಶೈಲಿಯ ಅಸಾಧಾರಣಶಕ್ತಿಯನ್ನು ತಮ್ಮ ತಮ್ಮ ಅನುಭವಾನುಸಾರವಾಗಿ ಸ್ತೋತ್ರಮಾಡಿದ್ದಾರೆ. ಆ ಒಂದೊಂದು ಗುಣವನ್ನೂ ಪ್ರತ್ಯೇಕವಾಗಿ ನಿರ್ದೆಶಿಸಿ ತೋರಿಸುವುದು ಕಷ್ಟವಾದ ಕಾರ್ಯ. ಕೆಲವು ಪ್ರಧಾನವಾದ ಗುಣಗಳ ಸ್ಕೂಲ ಪರಿಚಯವನ್ನು ಮಾತ್ರ ಮಾಡಿಸಲು ಪ್ರಯತ್ನಪಡಬಹುದು.
ಪಂಪನ ಶೈಲಿಯ ಪ್ರಧಾನಗುಣ ಪ್ರಸಾದ, ಗಾಂಭೀರ್ಯ, ಅರ್ಥವ್ಯಕ್ತಿ, ಕೊಂಕುನುಡಿ, ಧ್ವನಿ, ಮೃದುಪದರಚನೆ, ಹಿತಮಿತ ಮೃದುವಚನಪೂರ್ಣತೆ ಮತ್ತು ಸಂಯಮ. ಅವನು ಎಂದೂ ಆಡಂಬರಕ್ಕೂ ಆರ್ಭಟಕ್ಕೂ ಪ್ರಯತ್ನಪಡುವುದಿಲ್ಲ. ಆದುದರಿಂದಲೇ ಅವನ ಕಾವ್ಯದಲ್ಲಿ ವಿಶೇಷವಾದ ಓಜಸ್ಸಾಗಲಿ ಪದಮೈತ್ರಿಯಾಗಲಿ ಕಾಣಲಾಗುವುದಿಲ್ಲ. ಈ ಎರಡು ಗುಣಗಳೂ ಶಕ್ತಿಕವಿಯಾದ ರನ್ನನಿಗೆ ಮೀಸಲು. ಚಿತ್ತಸ್ಥೆರ್ಯದಿಂದ ಮೃದುಪದಗತಿಯಿಂದ ಪೂರ್ವನಿಷ್ಠವಾದ ಆದರ್ಶಸಾಧನೆಗಾಗಿ ಸಂಯಮದಿಂದ ಸಾಗುವುದು ಪಂಪನ ಸ್ವಭಾವ, ಬಾಹುಬಲಿಯು ಅಣ್ಣನಾದ ಭರತನಿಗೆ ತಿಳಿಸುವ ಮುಂದಿನ ಪ್ರಾರ್ಥನೆ ಈ ಗುಣಗಳನ್ನು ಉದಹರಿಸುತ್ತದೆ.
ನೆಲಸುಗೆ ನಿನ್ನ ವಕ್ಷದೊಳೆ ನಿಚ್ಚಳಮೀ ಭಟಖಡ್ಗಮಂಡಳೋ ತೈಲವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷಿ ಭೂ ವಲಯಮನಯ್ಯನಿತ್ತುದುಮನ್, ಆಂ ನಿನಗಿತ್ತೆನ್, ಇದೇವುದಣ್ಣ ನೀ ನೊಲಿದ ಲತಾಂಗಿಯಂ ಧರೆಗಂ, ಆಟಿಸಿದಂದು ನೆಗಟ್ ಮಾಸದೇ ||
ಉಭಯಭಾಷಾಪಂಡಿತನಾದ ಪಂಪನಿಗೆ ಸಂಸ್ಕೃತದಲ್ಲಿ ವ್ಯಾಮೋಹ ಹೆಚ್ಚು. ಆತನು ತನ್ನ ಕಾವ್ಯಗಳನ್ನು ರಚಿಸಿದುದು ಪಂಡಿತರನ್ನು ಮೆಚ್ಚಿಸುವುದಕ್ಕಾಗಿಯೂ ಅಹುದು.
Page #38
--------------------------------------------------------------------------
________________
ಉಪೋದ್ಘಾತ | ೩೩ ಅಚ್ಚಗನ್ನಡಶೈಲಿಯಲ್ಲಿ ಬರೆಯುವುದು ಇನ್ನೂ ಅವನ ಕಾಲಕ್ಕೆ ರೂಢಿಗೆ ಬಂದಿರಲಿಲ್ಲ. ಅಷ್ಟೇ ಅಲ್ಲದೆ ಸಂಸ್ಕೃತಪಂಡಿತರಾದ ಕನ್ನಡ ಕವಿಗಳು ತಮ್ಮ ಕನ್ನಡ ಕಾವ್ಯಗಳಲ್ಲಿಯೂ ಸಂಸ್ಕೃತವನ್ನು ತುಂಬುವುದು ಒಂದು ಗುಣವೆಂದು ಭಾವಿಸಿದ್ದರು. ಆದುದರಿಂದ ಪಂಪನ ಕಾವ್ಯವು ಸಂಸ್ಕೃತಮಯವಾಗಿರುವುದು ಆಶ್ಚರ್ಯವೇನೂ ಅಲ್ಲ. ಅವನು ಕೆಲವೆಡೆಗಳಲ್ಲಿ ಪೂರ್ಣವಾಗಿ ಸಂಸ್ಕೃತವೃತ್ತಗಳನ್ನೇ ರಚಿಸಿರುವನು. ಮುಂದಿನ ಈಶ್ವರನ ಪ್ರಾರ್ಥನೆಯನ್ನು
ನೋಡಿ:
ಪ್ರಚಂಡಲಯತಾಂಡವ ಕ್ಷುಭಿತಯಾಶು ಯಾನಯಾ ಸದಿಳಯಯಾ ಭುವಾ ಸಗಿರಿ ಸಾಕಾರದ್ವೀಪಯಾ ಕುಲಾಲಕರನಿರ್ಭರ ಭ್ರಮಿತ ಚಕ್ರಲೀಲಾಯಿತಂ ಸಸರ್ವಜಗತಾಂ ಗುರುಃ, ಗಿರಿಸುತಾಪತಿಃ ಪಾತು ವಃ ||
ಆದಿಪುರಾಣದಲ್ಲಿ ಬರುವ ಮುಂದಿನ ಆರೋಗಣೆಯ ವರ್ಣನೆಯು ಅವನ ಸಂಸ್ಕೃತ ಗದ್ಯದ ವೈಖರಿಯನ್ನು ವಿಶದಪಡಿಸುವುದು.
ಭರತಮಹೀಶಂ ಭೋಜನಭೂಮಿಗೆ ರಾಜಹಂಸವಿಳಾಸದಿಂ ಬಿಜಯಂಗೆಯು ಸಕಲ ವಿದ್ಯಾಪ್ರವೀಣಗುರುಜನಾರ್ಯಜನವಿಳಾಸಿನೀಜನಪರಿವೃತನ್ ಅತಿಮೃದುರಸನಾಮರ್ದನ ಮಾತ್ರ ದ್ರಾವಣೀಯಧೃತಪೂರಮುಮಂ ಅಲ್ಲದಶನದಂಶಮಾತ್ರಖಂಡನೀಯಮಂಡಕಮುಮಂ ಅತ್ಯಂತ ಕೋಮಲತಾಲುತಳಸಂಘಟ್ಟ ಮಾತ್ರಕ್ಕೇದನೀಯಮೋದಕಮುಮಂ, ಅನಿಷ್ಠುರೋ ಪುಟಮಧ ಸಂಧಾರಣಮಾತಚೂರ್ಣನೀಯಶಾಕವರ್ತಿಕಮುಮಂ, ಅತಿ ದೂರೋಚ್ಛಾಸ ವಿಕಾಸನಾಸಾಂಜಲಿಪುಟ ಪೀಯಮಾನದುಗ್ಧ ಹಯ್ಯಂಗವೀನಮುಮಂ, ನೀಹಾರಶಕಲಧವಲಪರಿಣತಕಪಿತ್ಥಫಲಪರಿಮಳ ಮಧುರದಧಿಯುಮಂ, ಏಕೀಭೂತಸಕಲಭುವನಶಿಶಿರ ದ್ರವ್ಯಸಂಚಾರದ್ರವ ಶಂಖಾಕಾರ ಶಿಖರಿಣೀರಮಣೀಯಮುಂ ಅಮೃತಪಿಂಡಾಯಮಾನ ಅಪಿಂಡದುಗ್ಧಸ್ನಿಗ್ಧಮುಮಪ್ಪ ಮನೋ
ಹರಾಹಾರಮಂ ||
ಪಂಪಭಾರತದಲ್ಲಿಯೇ ಹದಿನಾಲ್ಕನೆಯ ಆಶ್ವಾಸದಲ್ಲಿ ಅರಿಗನಿಗೆ ವಂದಿಮಾಗಧರು ಓದುವ ಮಂಗಳವೃತ್ತಗಳು ಸಂಪೂರ್ಣವಾಗಿ ಸಂಸ್ಕೃತಶ್ಲೋಕಗಳಾಗಿಯೇ ಇವೆ.
ಆದರೂ ಪಂಪನಿಗೆ ಅದರ ಇತಿ ಮಿತಿ ಗೊತ್ತು. ಅದಕ್ಕಾಗಿಯೇ ಅವನು ಪುರಾಣ ಕಾವ್ಯವಾದ 'ಆದಿಪುರಾಣ'ದಲ್ಲಿ ತುಂಬಿರುವಷ್ಟು ಸಂಸ್ಕೃತಶಬ್ದಗಳನ್ನೂ ಪಾರಿಭಾಷಿಕ ನುಡಿಗಟ್ಟನ್ನೂ ಲೌಕಿಕ ಕಾವ್ಯವಾದ 'ವಿಕ್ರಮಾರ್ಜುನ ವಿಜಯ'ದಲ್ಲಿ ತುಂಬಿಲ್ಲ. ಸಂಸ್ಕೃತ ಶಬ್ದಗಳಿಂದ ಒಂದು ವಿಧವಾದ ಘೋಷವೂ, ಆರ್ಭಟವೂ, ಢಣಢಣತ್ಕಾರವೂ ಬರುವುದೆಂಬುದು ಆತನಿಗೆ ತಿಳಿದ ವಿಷಯ. ಆದುದರಿಂದ ವೀರರಸಪ್ರಧಾನವಾದ ಭೇರಿಯ ನಾದ, ಧೀರ ಪ್ರತಿಜ್ಞೆ, ಘೋರಯುದ್ಧ ಜಯಘೋಷಣ-ಈ ಸಂದರ್ಭಗಳಲ್ಲಿ ಮಾತ್ರ ಸಂಸ್ಕೃತ ಶಬ್ದಗಳನ್ನು ಉಪಯೋಗಿಸಿಕೊಂಡು ಮಿಕ್ಕೆಡೆಗಳಲ್ಲೆಲ್ಲ ಕನ್ನಡ ಪದಗಳನ್ನೇ ಉಪಯೋಗಿಸಿ ಉತ್ಕೃಷ್ಟ ಭಾಷಾಸರಣಿಯಲ್ಲಿ ಕಾವ್ಯವನ್ನು ರಚಿಸಿದ್ದಾನೆ. ಇವನ ಗ್ರಂಥಗಳಲ್ಲಿ-ಅದರಲ್ಲಿಯೂ ಪಂಪಭಾರತದಲ್ಲಿ ಸಿಕ್ಕುವಷ್ಟು ಅಚ್ಚಗನ್ನಡ ಶಬ್ದಗಳು ಮತ್ತಾವ ಕನ್ನಡ ಕೃತಿಗಳಲ್ಲಿಯೂ ಸಿಕ್ಕಲಾರದೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಆದರೂ
Page #39
--------------------------------------------------------------------------
________________
೩೪ | ಪಂಪಭಾರತಂ ಅವನ ಕೆಲವು ಸಮಾಸಪದ: ತು ಬಹುದೀರ್ಘವಾಗಿ ಅರ್ಥಕ್ಕೆ ತೊಡಕನ್ನುಂಟು ಮಾಡಿ ಉಚ್ಚಾರಣೆಗೂ ಕಷ್ಟವಾಗುವುವ, ಲಘುವಾಗಿ ಸರಳವಾಗಿದ್ದಾಗ ಅರ್ಥಪೂರ್ಣವೂ ಸುಶ್ರಾವ್ಯವೂ ಆಗಿರುತ್ತವೆ.
'ಬಾಣಾಸನ ಬಾ» ಪಾಣಿ ಕರ್ಣ೦ ಬಂದಂ' 'ಕಷ್ಟಂ ದುಃಖಾನಿಳಪರಿ
ಪುಷ್ಟಂ' 'ಸಂಸ್ಕೃತಿ ಭೋಗಂಗಳ್ ಭೋಗಿ ಭೋಗದಿಂ ವಿಷಮಂಗಳ' ಹಿಂದೆಯೇ ತಿಳಿಸಿರುವಂತೆ ಪಂಪನ ಹಿರಿಮೆ ಅವನ ವಿವಿಧ ರೀತಿಯ ವರ್ಣನೆಗಳು. ಅವನ ಅನ್ಯಾದೃಶವಾದ ಲೋಕಾನುಭವವೇ ಇದಕ್ಕೆ ಕಾರಣ. ತನ್ನ ಕಾಲದ ಎಲ್ಲ ಕ್ಷೇತ್ರಗಳ ವಿವಿಧ ಪರಿಚಯವೂ ಅವನಿಗಿದೆ. ಆದುದರಿಂದಲೇ ಅವನು ಪರಮಾಣುವಿನಿಂದ ಪರಮೇಶ್ವರನವರೆಗೆ ಯಾವುದನ್ನಾದರೂ ಪ್ರತ್ಯಕ್ಷೀಕರಿಸಬಲ್ಲ. ಸಾಸಿವೆಯಲ್ಲಿ ಸಾಗರವನ್ನು ತುಂಬಲು ಬಲ್ಲ. ಮಧುವನ್ನು ಮೇರುವಾಗಿಸಲೂ ಬಲ್ಲ. ವ್ಯಕ್ತಿ, ಸನ್ನಿವೇಶ, ಋತು, ಬೇಟೆ, ವೇಶ್ಯಾವಾಟಿ, ಪಾನಗೋಷ್ಠಿ, ಯುದ್ಧ ಮೊದಲಾದ ಯಾವುದರ ವರ್ಣನೆಯಾದರೂ ಮೂರ್ತಿಮತ್ತಾಗಿ ಎದುರಿಗಿರುವಂತೆ ಭಾಸವಾಗುವುದು. ಮಯನನ್ನು ಸನ್ಮಾನಿಸಿ ಕಳುಹಿಸಿದನಂತರ ಧರ್ಮಪುತ್ರನು ತನ್ನ ನಾಲ್ವರು ತಮ್ಮಂದಿರೊಡಗೂಡಿ ಓಲಗಗೊಂಡಿರುವಾಗ ಇಂದ್ರಲೋಕದಿಂದ ಬಂದ ನಾರದರ ಚಿತ್ರವಿದು.
ಸರಿಗೆಯೋಳ್ ಸಮೆದಕ್ಷಮಾಲಿಕೆ, ಪೊನ್ನ ಮುಂಜಿ, ತೋಳಪ್ಪ ಕ ಪುರದ ಭಸರಜನಿಪುಂಡಕಮೊದ್ರೆ, ಪಿಂಗಜಟಾಳಿ ತಾ ವರೆಯ ಸೂತ್ರದೊಳಾದ ಜನವಿರಂ, ದುಕೂಲದ ಕೋವಣಂ ಕರಮೊಡಂಬಡೆ ನೋಟಕರ್ಕಳನಾ ತಪಸ್ವಿ ಮರುಳಿದಂ ||
ಹಾಗೆಯೇ ಪಾಶುಪತಾಸ್ತವನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಿರುವ ಸೌಮ್ಯ ಭಯಂಕರನಾದ ಅರ್ಜುನನ ಚಿತ್ರ ಮತ್ತೂ ಸ್ಪಷ್ಟವಾಗಿದೆ.
ಅದಿರದ ಚಿತ್ತಂ, ಅಳ್ಳದ ಮನಂ ಬಗೆಗೊಳ್ಳದೆ ಮೋಹಂ, ಎತ್ತಿದ ಕ ಟಿದ ಜಡೆ, ತೊಟ್ಟ ರತ್ನಕವಚಂ, ಕೊರಳೊಳ್ ಸಲೆ ಕೊದ ಬಿಲ್ ಪ್ರಯ ಇದೆ ಬಿಗಿದಿರ್ದೆರಣೆ ಮಿಸುಪ್ಪಸಿಖೇಟಕಂ, ಅಂತವೊಂದುಗುಂ ದದೆ ನಿಲೆ ನೋಟ್ಟಿ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ ||
ಪಂಪನ ಸನ್ನಿವೇಶಚಿತ್ರಗಳೂ ಹೀಗೆಯೇ. ವಾಚಕರ ಮುಂದೆ ಪ್ರತ್ಯಕ್ಷವಾಗಿ ಬಂದು ನಿಲ್ಲುವುವು. ಏಕಚಕ್ರಪುರದಲ್ಲಿ ಸುರನಿಗೆ ಆಹಾರವನ್ನು ಕಳುಹಿಸುವುದಕ್ಕೆ ಜನಗಳಿಲ್ಲದೆ ವ್ಯಸನ ಪಡುತ್ತಿರುವ ಬ್ರಾಹ್ಮಣನ ಮನೆಯ ದೃಶ್ಯ ಎಷ್ಟು ಹೃದಯ ವಿದ್ರಾವಕವಾಗಿದೆ!
ಅಬಕುಡಲಾದ ಕೂಸು ನಲದೋಳ್ ಪೊರಳುತ್ತಿರೆ, ಧರ್ಮಪತ್ನಿ ಬಾ ಯಳೆದು ಕೊರಲೆ ಪಾಯು ಪರಿದಾಡುವ ಬಾಲಕನಾದ ಶೋಕದಿಂ ಗಟಗಟ ಕಣ್ಣನೀರ್ ಸುರಿಯ, ಚಿಂತಿಪ ಪಾರ್ವನ ಶೋಕದೊಂದು ಪೋಂ ಪುತಿಯನೆ ನೋಡಿ ನಾಡ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ 1
Page #40
--------------------------------------------------------------------------
________________
ಉಪೋದ್ಘಾತ | ೩೫
ದುರ್ಯೋಧನನು ಕಾಲವಂಚನೆಗಾಗಿ ಮುಳುಗಿರಲು ಬಂದ ವೈಶಂಪಾಯನ ಸರೋವರದ ದೃಶ್ಯ ಅತ್ಯಂತ ಭಯಂಕರವಾಗಿದೆ.
ಇದು ಪಾತಾಳಬಿಲಕ್ಕೆ ಬಾಗಿಲ್, ಇದು ದಲ್ ಘೋರಾಂಧಕಾರಕ್ಕೆ ಮಾ ಡಿದ ಕೂಪಂ, ಪಂತು, ಇದುಗ್ರಲಯಕಾಳಾಂಭೋಧರಚ್ಛಾಯೆ ತಾ ನೆ ದಲ್, ಎಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಣಿನಿಂ ಪುದಿದಿರ್ದು ಸರೋವರಂ ಬಕಬಳಾಕಾನೀಕ ರಾವಾಕುಳಂ ||
ಮಹಾಕಾವ್ಯಗಳ ಪ್ರಧಾನವಾದ ಅಷ್ಟಾದಶವರ್ಣನೆಗಳಲ್ಲಿ ಋತುವರ್ಣನೆ ಒಂದು ಪ್ರಧಾನವಾದ ಭಾಗ, ಆದುದರಿಂದ ಎಲ್ಲ ಕವಿಗಳೂ ಅವನ್ನು ತಮ್ಮ ಕಾವ್ಯಗಳಲ್ಲಿ ಉಪಯೋಗಿಸದೇ ಇರುವುದಿಲ್ಲ. ಆದರೆ ಅವೆಲ್ಲ ಸಾಂಪ್ರದಾಯಿಕವಾದ ಕವಿಸಮಯಗಳ ಮಾಲೆಯಾಗಿರುತ್ತವೆ. ಆದರೆ ಅವೇ ಋತುವರ್ಣನೆಗಳು ಪಂಪನ ಕಾವ್ಯಗಳಲ್ಲಿ ಬಹುನವೀನವಾಗಿಯೂ ಅನುಭವಯೋಗ್ಯವಾಗಿಯೂ ಇವೆ. ಮುಂದಿನದು ವರ್ಷಾ ಕಾಲದ ವರ್ಣನೆ : 'ಕರಿಯ ಮುಗಿಲ್ಗಳಿಂ ಗಗನಮಂಡಲಮೊಟ್ಟರೆ, ಸೋಗೆಯಿಂ ವನಾಂತರಮೆಸೆದೊಪ್ಪೆ, ತೋರ್ಪ ಮೊಳೆವುಳಿನ್ ಈ ಧರಣೀವಿಭಾಗಮೊಪ್ಪಿರೆ, ಪೊಸವೇಟಕಾರ ಎರ್ದೆಗಳು ಪೊಸಕಾರ ಪೊಡರ್ಪು ಕಂಡು ಅದೇಂ ಕರಿತುವು ಅದೇಂ ಕಲಕಿದುವು ಅದೇಂ ಕುಳಿಗೊಂಡವು ಅದೇಂ ಕನಲವೊ' 'ಪಯೋಧರಕಾಲದೊಳ್ ಎರಡು ತಡಿಯುಮಂ ಪೊಯ್ದು ಪರಿವ ತೊರೆಗಳುಮಂ ತೊವಲು ಸೊಗಯಿಸುವ ಅಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸುವಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ, ಬಲಿಗೆ ದಳದಂತೆ ಉಪಾಶ್ರಯಂಬಡೆದಳಂಕರಿಸಿದ ಇಂದ್ರಗೋಪಂಗಳುಮಂ, ಕಿಸುಗಾಡ ನೆಲಂಗಳೆಳದಳಿರ ಬಣ್ಣಮಂ ಕೆಲ್ಗೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು'.
ಇದು ವಸಂತಋತುವಿನ ವರ್ಣನೆ :
ಅಲರ್ವದಿರ್ಮುತ್ತೆ ಪೂತ ಪೊಸಮಲ್ಲಿಗೆ, ಕಂಪನವುಂಕುತಿರ್ಪ ತೆಂ ಬೆಲರುಮಿದಂ ಗೆಲಲ್ ಬಗೆದ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ ಗಿಲೆ, ನನ್ನೆದೋಟಿ ನುಣ್ಣೆವ ಮಾಮರನ್, ಒರ್ಮೊದಲಿಲ್ಲದುಣುವು ಯ್ಯಲ ಪೊಸಗಾವರಂ ಪುಗಿಲೊಳೇನೆಸೆದ ಬಸಂತಮಾಸದೊಳ್
ಅಷ್ಟೇ ಅಲ್ಲ! 'ಬಳ್ಳಳ ಬಳೆದ ಮಿಳಿರ್ವಶೋಕೆಯ ತಳಿಗಳುಮಂ ಮಾಮರಂ ಗಳುಮಂ ಮರದಿಂದ ಮರಕ್ಕೆ ದಾಂಗುಡಿಯಿಡುವ ಮಾಧವೀಲತೆಗಳುಮಂ ನನೆಯ ಬಿರಿಮುಗ್ಗುಳಳ ತುಲಗಲೊಳೆಗಿ ತುಲುಗಿದ ಕಲ್ಪಲತೆಗಳುಮಂ ಭೋರ್ಗರೆದು ಮೊರೆವ ತುಂಬಿಗಳುಮಂ, ರಂಗವಲಿಯಿಕ್ಕಿದಂತೆ ಪುಳಿನಸ್ಥಳಗಳೊಳ್ ಉದಿರ್ದ ಕಲೆವೂಗಳುಮಂ ನಿಜನಿಗೊಂಡು ಸೊಗಯಿಸುವ ನಿಡಗನ ನಿಜದಳಿರ ಗೊಂಚಲ್ಗಳುಮಂ ಕಳಿಕಾಂಕುರಂ ಗಳುಮಂ ಸೊನೆಯ ಸೋನೆಗಳುಮಂ ಒಳಕೊಂಡು ವನಂಗಳ್ ಅನಂಗಂಗೆ ತೊತ್ತುವೆಸಂಗೆಯ್ದುವು.' ಶರತ್ಕಾಲದ ವರ್ಣನೆ ಇನ್ನೂ ಸೊಗಸು. 'ಅಳಿ ಬಿರಿದಿರ್ದ
Page #41
--------------------------------------------------------------------------
________________
೩೬ | ಪಂಪಭಾರತಂ ಜಾದಿಯೊಳೆ ಪಲೊರೆಯುತ್ತಿರೆ ಹಂಸೆ ಪೂತ ಪೂಗೊಳದೊಳೆ ರಾಗಿಸುತ್ತಿರೆ, ಶುಕಾವಳಿ ಬಂಧುರ ಗಂಧಶಾಳಿ ಸಂಕುಳದೊಳೆ ಪಾಯ್ದು ವಾಯ್ದು ನಲಿಯುತ್ತಿರೆ ಚಕೋರಂ ಇಂದು ಮಂಡಳಗಳಿತಾಮೃತಾಸವಮನುಂಡುಸುರುತ್ತಿರೆ ಚೆಲ್ಲು ಶಾರದಂ-ಪುಳಿಯೊಳೆ ಕರ್ಚಿದ ಬಾಳ-ಬಣ್ಣಮನೆ ಪೋಲ್ವಾಕಾಶಂ, ಆಕಾಶಮಂಡಳಮಂ ಪರ್ವಿದ ಬೆಳುಗಿಲ್ ಮುಗಿಲ * ಬೆಳ್ಳು ಒಳೊಕ್ಕು ತಳ್ಕೊಯ್ಯ ಬಳ್ವಳ ನೀಳಿರ್ದ ದಿಶಾಳಿ, ಶಾಳಿವನ ಗಂಧಾಂಧದ್ವಿರೇಘಾಳಿ ಕಣ್ಣೂಳಿಸಿತ್ತು ಒರ್ಮೆಯೆ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ'
ಮೃಗಯಾವಿನೋದದಲ್ಲಿಯೂ ಪಂಪನಿಗೆ ವಿಶೇಷ ಪರಿಚಯವಿದ್ದಿರಬೇಕು. ಪರ್ವೆಂಟೆ, ಕಿಲುವೇಂಟೆ, ದೀವದ ವೇಂಟೆ, ಪಂದಿವೇಂಟೆ ಮೊದಲಾದವುಗಳ ವೈವಿಧ್ಯವನ್ನೂ ಬೇಂಟೆಯ ನಾಮ್, ಬೇಂಟೆವಸದನಂ, ಬೇಂಟೆಯ ಬಲೆಗಳ ಲಕ್ಷಣಗಳನ್ನೂ ಬೇಂಟೆಯ ಬಿನದ, ಬೇಂಟೆಯ ತಂತ್ರ, ಬೇಂಟೆಯ ಪ್ರಯೋಜನಗಳನ್ನೂ ಕಟ್ಟುವಂತೆ ವರ್ಣಿಸಿದ್ದಾನೆ. ಅವನ ಬೇಟೆಗಾಜರು, ನೆಲನುಂ ಗಾಳಿಯುಂ ಕೆಯ್ಯುಂ ಮೃಗಮನಡೆದು ಕಾಲಾಳೊಳಂ ಕುದುರೆಯೊಳಮೊಳಗಂ ಬರಲ್ ಬಲ್ಲರ್' ಪರ್ವೆಂಟೆ ಮತ್ತು ದೀವದ ಬೇಂಟೆಯ ವಿಷಯವನ್ನು ತಿಳಿಸುವುದಾದರೆ 'ಗಾಳಿಯುಂ ಕಲವುಂ ಮುಖವುಂ ಕಾಪುಂ ಮೇಪುಂ ತೋಡುಂ ಬೀಡುಂ ದೆಸೆಯುಂ ಕೊಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಯಂ ಕೆದುಂ ಪೆರ್ಚು೦ ಕುಂದುಮನಳೆದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ ಅಡಂಗಲುಂ ಅಡಂಗಿಸಲುಂ ಒಡ್ಡಲುಂ ಒಡ್ಡಿಸಲುಂ ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ ಮಾಣಿಸಲುಂ ಏನಿದುದನ್ ಏಜೆಸಲುಂ ಜಾಣನಾಗಿ ಮೈಕೊಂಬುಮನ್ ಆನಾಣೋಗುಮಂ ಎರಶ್ನಿಚ್ಛೆಯುಮರ'ಮೂರು ಪೋತ್ತಮಂ ಮೃಗದ ಮೂಚೆರವುಮಂ ಆಯಿಆರಯ್ಕೆಯುಮಂ ಗಾಳಿಯುಮಂ ಎಜಿಂಕೆಯುಮಂ ಬಲ್ಲರಾಗಿ ನಂಬಿದ ಬರುವುಮಂ ನಂಬದ ಬರವುಮಂ ಅಳೆದುಂ ಅಲೆಯದುದ ಅಲೆಯಿಸಲುಂ ಅಲೆದುದು ತೊಲಗಿಸಲು ನಂಬದುದು ನಂಬಿಸಲುಂ ನಂಬಿದುದಂ ಬಿಡಿಸಲುಂ ಒಳಪುಗುವುದರ್ಕೆಡೆಮಾಡಲು ಎಡೆಯಾಗದ ಮೃಗಮಂ' ಅವುಂಕಿಸಲು ಒಲ್ಲುಂ ಒಲ್ಲದ ನಲ್ಲರಂತೆ ಮಿಡುಕಿಸಲು ಪಣವೊಡ್ಡಿದರಂತೆ ಅಡ್ಡಮಾಡಲುಂ ಎಸೆದ ದೆಸೆಗಳೆ ಓಡಿಸಲುಂ ಬಲ್ಲರ್'.
ಬೇಟೆಯಿಂದಾಗುವ ಪ್ರಯೋಜನವನ್ನು ಮುಂದಿನ ಪದ್ಯದಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ
ಪಸಿವು ದೊರಕೊಳ್ಳುಂ, ಉಣಿಸುಗಳಿನಿಕೆಯುರಿ, ಆವಂದದೂಳ್ ಕನಲ್ಲಾ ಮಯ್ಯನ್ ಅಸಿಯನಾಗಿಪುದು, ಉಳಿದುವಪ್ಪುದು ಬಗೆಗೊಳಲಪ್ಪುದು ಮೃಗದ ಮಯೊಳ್ ನಿಸದಮಸೆವುದಂ ಬಲ್ಲಾಳ ಬಲ್ಕಿ ತನ್ನೊಳಂ, ಇಸುತ ಲೇಸಪ್ಪುದು ಬಸನಮಂದು, ಅಳಿಯದೆ, ಏಳಿಸುವರ್ ಬೇಂಟೆಯಂ, ಬೇಂಟೆಯ ಬಿನದಂಗಳರಸಿ
ಸ್ವಯಂ ಯೋಧನಾಗಿ ಯುದ್ಧರಂಗದ ಪ್ರತ್ಯಕ್ಷಾನುಭವವಿದ್ದ ಪಂಪನಿಗೆ ' ಯುದ್ಧವರ್ಣನೆ ನೀರು ಕುಡಿದಂತೆ. ಅಲ್ಲಿ ಅವನು ಕಾಣದ ಕಾಣೆಯಿಲ್ಲ, ನೋಡದ
Page #42
--------------------------------------------------------------------------
________________
ಉಪೋದ್ಘಾತ | ೩೭ ನೋಟವಿಲ್ಲ, ತಿಳಿಯದ ತಂತ್ರವಿಲ್ಲ, ಅರಿಯದ ಆಯುಧಗಳಿಲ್ಲ. ಯುದ್ಧಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಯುದ್ಧ ಪ್ರಯಾಣ ಸಿದ್ಧತೆ, ಭೇರಿ, ವೀರಾಲಾಪ, ಧೀರಪ್ರತಿಜ್ಞೆ ಬೀಳ್ಕೊಡುಗೆ, ಧ್ವಜಸಂಚಳನ, ರಥಚೀತ್ಕಾರ, ಭಟರ ಸಿಂಹನಾದ, ಉತ್ಕಟಜ್ಯಾರವ, ಶರಾಸಾರದ ತೀವ್ರತೆ, ವೈವಿಧ್ಯ, ಚೋದಕರ ವೇಗ, ಹಶ್ವರಥ ಪದಾತಿಗಳ ಯುದ್ಧ ಪ್ರತಿಯುದ್ಧ, ಬಿದ್ದವರ ಕೊರಗು, ಎದ್ದವರ ಮೊಳಗು, ಪ್ರೇಕ್ಷಕರ ಪ್ರೇರಣೆ, ದೇವತೆಗಳ ಪುಷ್ಪವೃಷ್ಟಿ-ಇವು ಒಂದೊಂದರ ಅತಿ ವಿಶದ ವಿವರಗಳನ್ನು ಗ್ರಂಥದಲ್ಲಿ ಕಾಣಬಹುದು. ಕಣಯ, ಕಂಪಣ, ಮುಸಲ, ಮುಸುಂಡಿ, ಮುದ್ದರ, ತೋಮರ, ಭಿಂಡಿವಾಳ, ಹಂತಿ, ಬಾಳ್, ಕಕ್ಕಡೆ, ಬುಂಧುರ, ಪಂಚರಾಯುಧ, ಆವ್ರುತಿ, ಮಾಳಜಿಗೆ, ಜಾಯಿಲ, ಪರಶು, ಶರ, ಸಂಕು, ಇಟ್ಟಿ, ಪಾರುಂಬಳೆ, ಮಾರ್ಗಣೆ-ಇವು ಆಯುಧಗಳು, ನಿರ್ವಾಯ, ನರುವಾಯ, ಮುಂಮೊನೆ, ನೆರಕೆ, ನಾರಾಚ, ತಗರ್ತಲೆ, ಕಣೆ, ಕಕ್ಕಂಬು, ಪೆಜ್ಯಮುರುಗ, ಕಲ್ಲಂಬು, ಬಟ್ಟಿನಂಬು, ಪಾಯಂಬು, ಮೊನೆಯಂಬು, ಕಿಂಬು, ಬೆಳಸೆಯಂಬು ಇವು ಬಾಣವಿಶೇಷಗಳು. ವಂಚನೆ, ಕೇಣ, ಆಸನ, ಕೊಸ, ದೆಸೆ, ದಿಟ್ಟಿ, ಮುಟ್ಟಿ, ಕಲ ಜಿಂಕೆ, ನಿವರ್ತನ, ಜಾಳ್ಮೆ ಏರ್ವೆಸನ್, ಪುಸಿವಂಚನೆ, ಪುಸಿ, ಅಗಲಿತು, ತಕ್ಕುದಕ್ಕುಪಗೆ, ಕಲ್ಪನೆ, ಕೆಯ್ದಕುಸುರಿ, ನುಸುಳ್, ತಳಗೋಂಟೆ, ಮೊದಲಾದವು ಯುದ್ಧತಂತ್ರಗಳು. ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬುವು ಆಸನಗಳು. ಮಂಡಳ, ಸವ್ಯ, ಅಪಸವ್ಯ ಭ್ರಾಂತ, ಉದ್ಘಾಂತ, ಸ್ಥಿತ, ಚಕ್ರ, ಸ್ಪಂದನ ಬಂಭನ ಇವು ರಥಕಲ್ಪಗಳು. ಪಾತ, ಲಕ್ಷ್ಮ, ಶೀಘ್ರ, ಘಾತ, ಬಹುವೇಗ, ವಿದ್ಯಾಧರಕರಣ ಇವು ಗದಾಯುದ್ಧದ ಪಟ್ಟುಗಳು. ಶರಸಂಕರ್ಷಣ, ಆಕರ್ಷಣ, ಹರಣಾದಿಗಳು ವಿವಿಧ ಶರಕಲ್ಪಕಳಾಪರಿಣತಿಗಳು, ಸಂಧಿ, ನಿಗ್ರಹ, ಯಾನ, ಆಸನ, ಸಂಶ್ರಯ, ದೈಧೀಭಾವಗಳು ಷಾಡುಣ್ಯಗಳು. ಮೂಲ, ನೃತ್ಯ, ಸುಹೃತ್, ಶ್ರೇಣಿ, ಮಿತ್ರ, ಆಟವಿಕ ಇವು ಷದ್ವಿಧ ಬಲಗಳು, ಪ್ರಭುಸಿದ್ಧಿ, ಮಂತ್ರಸಿದ್ಧಿ ಉತ್ಸಾಹಸಿದ್ಧಿ ಇವು ಸಿದ್ಧತ್ರಯಗಳು. ಇವುಗಳನೇಕದರ ರೂಪರೇಖೆಗಳನ್ನು ಇಂದು ನಿಷ್ಕರ್ಷಿಸುವುದು ಸುಲಭಸಾಧ್ಯವಲ್ಲ.
ಯುದ್ಧಕ್ರಿಯೆಗಳ ವರ್ಣನೆಗಳೂ ಬಹುಮುಖವಾಗಿಯೂ ಆಕರ್ಷಕವಾಗಿಯೂ ಇವೆ- 'ಪ್ರಯಾಣಭೇರಿಯಂ ಪೊಯ್ದಿದಾಗಳ್ ಸುರೇಂದ್ರಾಚಳಂ ನಡುಗಿತ್ತು. ಅರ್ಕನಳುರ್ಕೆಗೆಟ್ಟು ನಭದಿಂ ತೊಳಂ. ಮರುಳಪ್ಪಿದಳ್ ಮೃಡನಂ ಗೌರಿ, ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್ ನಡುಗಿತ್ತು, ವಿಲಯಕಾಲಜಳನಿಧಿ ತಳರ್ವಂತೆ ಸುಯೋಧನನ ಸೇನೆ ತಳರ್ದುದು, ಪೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಂ,' 'ಸೈನ್ಯಪಾದೋತರಜಮಂಬರಸ್ಥಳಮಂ ಮುಟ್ಟೆ ತೆಳುಗೆಟ್ಟು ಕೆಸರಾಯ್ತಾಕಾಶಗಂಗಾಜಲಂ', 'ಕರಿಘಟೆಗಳ ಕರ್ಣತಾಳಹತಿಯಿಂ ಕುಲಗಿರಿಗಳಾಡಿದುವು' ಎರಡುಂ ಬೀಡುಗಳೊಳ್ ಕೊಳ್ಳಿ ಬೀಸಿದಾಗಳ್ ಉರಿಮುಟ್ಟಿದರಳೆಯಂತಂಬರಮುರಿದತ್ತು.' 'ಸಿಡಿಲೊಳ್ ತಳ್ಳು ಪೋರ್ವ ಸಿಡಿಲಂತೆ ಬಾಳೊಳ್ ಬಾಳ್ ಪಳಂಚಿದುದು. ಪಲರ್ ಪಡವಳ್ಳರ ಮಾತುಗಳೆ 'ಮಂದರಕ್ಷುಭಿತದುಗ್ಧಪಯೋಧಿಗಭೀರನಾದಮಂ ಕೆಸ್ಕೊಂಡವು' 'ಸಿಡಿಲೇಟಿಯುಮಂ
Page #43
--------------------------------------------------------------------------
________________
೩೮ | ಪಂಪಭಾರತಂ ಕೋಸಗಿದ ಪುಲಿಯ ಪಿಂಡುಮನನುಕರಿಸಿದುವು ಸಂದಣಿಗಳ್', 'ಕಾಯ್ತಿರುಮಸಗಿದಂತೆ ಮಸಗಿದ ಧನುರ್ಧರರ್' ಭೂತಳಮಳ್ಳಾಡೆ ಕೆಸು ಕಡಿತದ ತೆಲಿದಿಂ ಶ್ವೇತ ಗಂಗಾಸುತನ ಒಡ್ಡಣಂ ನಿಂದವು. ಪ್ರಳಯಕಾಲಜಾತೋತ್ಸಾತವಾತನಿರ್ಘಾತದಿಂದ ತುಳ್ಳಾಡಿ ತಳ್ಳಂಕಗುಟ್ಟುವ ಜಳನಿಧಿಗಳಂತೆ ಉಭಯಸೈನ್ಯಗಳು ಮೇರೆದಪ್ಪಿದವು. ತಿಳೆದಿಕ್ಕಿದಂತೆ ತಲೆಗಳ್ ಪಡೆದುರುಳಿದುವು' 'ಮುಗಿಲ್ಗಳಿಟ್ಟೆಡೆಗಳೊಳ್ ತೊಡದಿರ್ದ ತಲೆಗಳ್ ಜೇನ ಪುಟ್ಟಿಗಳನೆ ಪೋಲವು'. ಪ್ರಳಯಕಾಲದಂದು ಮೂಡುವ ಪರ್ವರಾದಿತ್ಯರ ತೇಜಮುಮಂ ಮಹೇಶ್ವರ ಭೈರವಾಡಂಬರಮುಮಂ ಯುಗಾಂತ ಕಾಲಾಂತಕನ ಮಸಕಮುಮಂ ಸುರಾಪಗಾತ್ಮಜಂ ತನ್ನೊಳಳವಡಿಸಿಕೊಂಡಂ' 'ಮಯ್ಯೋಳುಡಿದಂಬು ಗಳುಮನೆಲ್ಯುಮಂ ನಟ್ಟುಡಿದ ಬಾಳಕಕ್ಕಡೆಯುಡಿಗಳುಮನಯಸ್ಕಾಂತಮಂ ತೋಳೆತೋಟಿ ತೆಗೆಯುತ್ತಿರ್ದರ್'. “ಪಂಕುಳಿಗೊಂಡ ಸಿಂಹಮಂ ಮುತ್ತುವಂತೆ ಧರ್ಮಪುತ್ರಂ ಶಿಖಂಡಿಯಂ ಮುಂದಿಟ್ಟು ಭೀಷ್ಮನಂ ಮುತ್ತಿದಂ' 'ನಟ್ಟ ಕೂರ್ಗಣೆಯ ಬಿಳ್ಕೊರೆಯಿಂದೆ ಬಬಿಲ್ಲನುರ್ವಿ ಪೆರ್ವಿದಿರಿ ಸಿಡುಂಬಿನೊಳ್ ಪುದಿದೊಂದು ಕುಳಾಚಳದಂತೆ ಸಿಂಧುಜಂ' 'ಸಿಡುಂಬಿನ ಪೊದಳೊಳಗೆ ಮದೋಣಗಿದ ಮೃಗರಾಜನಂತೆ ಶರಶಯನದೊಳ್ ತೋರಿದಂ' 'ವಿಳಯಕಾಲ ಜಳಧರಂಗಳೆಲ್ಲವೊಂದಾಗಿ ಕುಲಗಿರಿಯಂ ಮುತ್ತುವಂತೆ ಕಳಿಂಗರಾಜ ಗಜಘಟೆ ಭೀಮನಂ ಮುತ್ತಿದುವು. ಗಜಾಸುರನೊಳ್ ಆಸುರಂ ಬೆರಸುತಾಗುವಂಧಕಾರಾತಿಯಂತೆ ಭೀಮಸೇನ ಪೊಣರ್ದಂ' 'ಮಹಾಮಕರಂ ಸಮುದ್ರದೊಳ್ ಪರಿವಂತೆವೋಲಾ ಸುಪ್ರತೀಕಗಜಂ ಪರಿದುದು', 'ಒಣಗಿದುದೊಂದು ಪೆರ್ವಿದಿರ ಪೆರ್ವೊದರಿಂದಮಾಚಿದುರ್ವುವಾ ಶುಶುಕ್ಷಣಿಯವೊಲ್ ಅಭಿಮನ್ಯುವಿನ ಕೂರ್ಗಣೆ ಪಾಯ್ತು ನುಂಗಿದವು' ಅದರ್ವ ' ನೂರುಂ ಪೊನ್ನ ತಾಳ್ ಸೂಯೊಳ್ ಬೀಳಂತೆ ಬಿದ್ದಿರ್' ಇವು ಕೆಲವು ಮಾದರಿಗಳು ಮಾತ್ರ. ವರ್ಣನೆಗಳ ವೈಭವವನ್ನು ಮೂಲವನ್ನು ಓದಿಯೇ ಆಸ್ವಾದಿಸಬೇಕು.
ಚುದ್ರಿಕಾವಿಹಾರ, ಮಧುಪಾನ, ವಿಹಾರಗಳೂ ಮಹಾಕಾವ್ಯದ ಅಂಗವಾದ ಅಷ್ಟಾದಶವರ್ಣನೆಗಳ ಭಾಗಗಳು, ಲೌಕಿಕ ಕಾವ್ಯ' ವನ್ನು 'ಸಮಸ್ತಭಾರತ'ವನ್ನು ಬರೆಯಲು ಹೊರಟ ಕವಿತಾಗುಣಾರ್ಣವನು ಈ ಭಾಗಗಳಲ್ಲಿ ತತ್ಕಾಲದ ಸಮಾಜಚಿತ್ರದ ಒಂದು ಕಿರುದೃಶ್ಯವನ್ನು ಕೊಡಲು ಪ್ರಯತ್ನಪಟ್ಟಿದ್ದಾನೆ. ಸುಭದ್ರಾಹರಣದ ಹಿಂದಿನ ರಾತ್ರಿ ಅರ್ಜುನನು ತನ್ನ ವಿರಹ ವೇಗವನ್ನು ಆರಿಸಿಕೊಳ್ಳುವುದಕ್ಕಾಗಿ ವಿಟ ವಿದೂಷಕರೊಡನೆ ಚಂದ್ರಿಕಾವಿಹಾರಕ್ಕಾಗಿ ಹೊರಟು, ಮಾಲೆಗೇರಿ, ವೇಶ್ಯಾವಾಟಿ ಮತ್ತು ಪಾನಭೂಮಿಗಳ " ಮೂಲಕ ಹಾದು ಹೋಗುವನು. ಅಲ್ಲಿ ಅವನಿಗಾದ ಅನುಭವವನ್ನು ಪಂಪನು ಅತ್ಯಂತ ರೋಮಾಂಚಕಾರಿಯಾಗುವಂತೆ ವರ್ಣಿಸಿದ್ದಾನೆ. ಮೊದಲು ಅರ್ಜುನನು ಪೆಂಡವಾಸಗೇರಿಯನ್ನು ಪ್ರವೇಶಿಸಿದ ತಕ್ಷಣ ಅಲ್ಲಿರುವವರೆಲ್ಲರೂ ಸೌಭಾಗ್ಯದ ಭೋಗದ ಚಾಗದ ರೂಪಾದ ಮಾನಿಸರಂತೆ ಕಾಣುವರು. ಮೊದಲು ಅವನ ಕಣ್ಣಿಗೆ ಬೀಳುವುದು ಹೂವಿನ ಸಂತೆ. 'ಅದು ಆರು ಋತುಗಳ ಪೂಗಳನೊಂದು ಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದೋಜಿನ ಸಾಲೆ'ಯಂತಿದೆ. ಮಾಲೆಗಾರ್ತಿಯರು
Page #44
--------------------------------------------------------------------------
________________
ಉಪೋದ್ಘಾತ | ೩೯ ಹೂವನ್ನು ಮಾಲೆ ಹಾಕುತ್ತಿದ್ದಾರೆ. ಅವರ ಜೋಡುಗೆಯ್ಯಗಳನ್ನು ನೋಡಿದರೆ ಅದು ಹೂವನ್ನು ಮಾರುವಂಗವಲ್ಲ. 'ಮನೆಯಾಜ್ರನಂ ಮಾಡುವಂದಂ' ಎನ್ನಿಸುತ್ತದೆ ಅರ್ಜುನನಿಗೆ. ಕಣ್ಮುಚ್ಚಿ ಮಲಗಿದ ಗಂಡನೆದುರಿಗೆ ಹೆಂಡತಿಯೊಬ್ಬಳು ಮಿಂಡನೊಡನೆ ಗೊಡ್ಡಾಟವಾಡುತ್ತಿದ್ದಾಳೆ. ಹಾದರದಲ್ಲಿ ಸಂಸಾರಸಾರಸತ್ವಸ್ವವನ್ನೂ ಗೆಲ್ಲುವ ರುಚಿಯಿದ್ದಿರಬೇಕು. ಇಲ್ಲದಿದ್ದರೆ ತಲೆ ಮೂಗುಗಳನ್ನಾದರೂ ಒತ್ತೆಯಿಟ್ಟು ಇಲ್ಲಿಗೆ ಬರುತ್ತಿದ್ದರೆ ? ಎನ್ನುತ್ತಾನೆ ಅರಿಗ, ಅವರ ಸಂಭಾಷಣೆಯ ವೈಭವವೆಷ್ಟು! ಕುಹಕಕೇಳಿಗಳೆಷ್ಟು! ಸರಸಸಲ್ಲಾಪಗಳೆಷ್ಟು! ನೋವುನುಲಿತಗಳೆಷ್ಟು! ಎಷ್ಟು ರೀತಿಯ ಬೊಜಂಗರು! ಅರಬೋಜಂಗ, ಕಿರುಕುಳ ಬೊಜಂಗ, ಪೊರ್ಕುಳಿ ಬೊಜಂಗ, ಪೊಲೀಲ ಬೊಜಂಗ, ಕತ್ತುರಿ ಬೊಜಂಗರು,' ಅವರ ಬಿಯದಳವಿಗೆ ಮನಮೆಚ್ಚಿ ಬರುತ್ತಿದ್ದರೆ ಮುಂದೆ 'ಕಳ್ಳಿನೊಳಮರ್ದಿನೊಳಂ ಪುಟ್ಟಿದ ಪೆಂಡಿರಂತೆ ಸೊಗಯಿಸುವ ಪಲರು ಮೊಳ್ಕೊಂಡಿರೊಂದೆಡೆಯೊಳಿರ್ದು ಕಾಮದೇವನೆಂಬ ಬಳಮರ್ದುಕಾಲನ ಮಾಡಿದ ಮರ್ದಿನಂತೆ ಬೆಳೆದು ದಳಂಬಡೆದು ಮೂನೂಲುವತ್ತು ಜಾತಿಯ ಕಳಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಯ ಮಾಳ್ಳೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಗಳಂ ಮಂತ್ರಿಸಿ ನೆಲದೊಳೆದು, ತಲೆಯೊಳ್ ತಳಿದು, ಕಳ್ಳಿನೊಳ್ ಬೊಟ್ಟನಿಟ್ಟುಕೊಂಡು, ಕೆಲದರ್ಗೆಲ್ಲಂ ಬೊಟ್ಟಿಟ್ಟು, ಕಿಳೆಯರ್ಪಿರಿಯರಜೆದು ಪೊಡೆವಟ್ಟು ಧರ್ಮಗಳುಡಿವರ್ಗೆಲ್ಲಂ ಮೀಸಲ್ಗಳ್ಳನೆಯದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಟೆಕಿಚೆದೆಳೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲದಲ್ಲಣಿಗೆಯ ಚಕ್ಕಣಂಗಳಂ ಮರೀಚಿ, ಚಿಂತಾಮಣಿ, ಕಕ್ಕರ ಮೊದಲಾದ ಸವಿಸವಿದುವುಗಳ ರುಚಿಯನ್ನು ನಾನಾರೀತಿಯಾಗಿ ವಿಮರ್ಶೆಮಾಡಿ ಕಾಂತೆಯರು ಕಾಮಾಂಗವನ್ನು ಕುಣಿಯುತ್ತಾರೆ. ತೃಪ್ತಿಯಾಗಿ ಕುಡಿದು ಪ್ರಜ್ಞೆತಪ್ಪಿ, ನಿರ್ವಸ್ತಳಾಗಿ ಕುಣಿಯುತ್ತಾಳೆ, ಹಾಡುತ್ತಾಳೆ, ತೊದಲುತ್ತಾಳೆ, ಸೂಳೆಗೇರಿಗೆ ಹೋಗುವನೊಬ್ಬನನ್ನು ಸ್ನೇಹಿತನೊಬ್ಬನು ತಡೆಯುತ್ತಾನೆ. ಬೇರೊಬ್ಬ ಹೆಂಡತಿಯು ಅಲ್ಲಿಗೆ ಹೋಗುತ್ತಿದ್ದ ಗಂಡನನ್ನು ಕಣ್ಣೀರಿನ ಸಂಕೋಲೆಯಿಂದ ಬಿಗಿಯುತ್ತಿದ್ದಾಳೆ. ಕುಂಟಣಿಯ ಹಿಂಸೆಯಿಂದ ವಿಶೇಷ ಧನವನ್ನು ಸಂಪಾದಿಸುತ್ತಿದ್ದ ಸೂಳೆಯೊಬ್ಬಳು ಪಲ್ಲಿಲಿವಾಯನಾದ ಮುದುಕನೊಬ್ಬನ ಲೋಳೆಪೊನಲ್ಗಳಿಗೆ ಅಸಹ್ಯ ಪಡುತ್ತಿದ್ದಾಳೆ. ಈ ವರ್ಣನೆಗಳು ಮೂಲ ಕಥಾಪ್ರವಾಹಕ್ಕೆ ಅಡ್ಡಿಯಾದರೂ ಆಕರ್ಷಕವಾಗಿ ಆ ಕಾಲದ ಸಮಾಜದ ಚಿತ್ರವನ್ನು ಕೊಡುವುದಕ್ಕೆ ಬಹಳ ಸಹಾಯಕವಾಗಿವೆ.
ಪಂಪನ ಶೈಲಿಯು ದಿಣ್ಣೆಯಿಂದ ತಡೆಯಿಲ್ಲದೆ ಹರಿಯುವ ನದಿಯಂತೆ ಬಹುಶೀಘ್ರಗಾಮಿಯಾಗಿರುತ್ತದೆ. ಮಿತವಾದ ಭಾಷೆಯಿಂದ ವಿಶೇಷವಾದ ಕಥಾಭಾಗವು ಒಂದರ ಹಿಂದೆ ಒಂದು ಓಡುವುದು. ಮುಂದಿನ ವಚನವನ್ನು ಗಮನಿಸಿ :
'ನಿಮ್ಮಮನಕ್ಕೆ ಕೊಕ್ಕರಿಕೆಯಾಗೆಯುಂ ಪಾಜೆಗೆ ಗೆಂಟಾಗೆಯುಂ ನೆಗಟ್ಟಿಮಲ್ಲೆಂದು
Page #45
--------------------------------------------------------------------------
________________
೪೦ | ಪಂಪಭಾರತಂ ಪೊಡಮಟ್ಟು ಕುಂತಿಯಂ ವಿದುರನ ಮನೆಯಲಿರು ಸುಭದ್ರೆಯನಭಿಮನ್ಯುವೆರಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳುಪಿ ನಿಜಜನಂಬೆರಸು ಗಂಗೆಯಂ ಪಾಯ್ಡದು ಪಡುವಣದೆಸೆಯ ಕಾಮ್ಯಕವನದ ಬಟ್ಟೆಯಂ ತಗುಳು ಪೋಗೆವೋಗೆ' ಇಲ್ಲಿ ಎಷ್ಟು ವಿಷಯಗಳು ಅಡಕವಾಗಿವೆ!
* ಪಂಪನ ಅನೇಕ ಪದ್ಯಗಳು ಛಂದೋಬದ್ಧವಾದ ಗದ್ಯದಂತೆ ಸರಳವಾಗಿ ಹರಿಯುತ್ತಿರುವುದು ಪಂಪನ ಶೈಲಿಯು ಶ್ಲಾಘನೀಯವಾಗುವುದಕ್ಕೆ ಮತ್ತೊಂದು ಕಾರಣ. ಅವನ ಪದ್ಯಗಳು ಒಂದರ ಮುಂದೊಂದು ಬರುವ ವಾಕ್ಯಮಾಲೆಗಳಾಗಿರುವವಲ್ಲದೆ ಅನೇಕ ಕಡೆಗಳಲ್ಲಿ ಪದ್ಯದಲ್ಲಿಯ ವಾಕ್ಯವು ಆ ಪದ್ಯದಲ್ಲಿಯೇ ಮುಗಿಯದೆ ಮುಂದೆ ಬರುವ ಗದ್ಯಪ್ರಾಂತದಲ್ಲವತರಿಸಿ ಪರಿಸಮಾಪ್ತವಾಗುವುದು : ಮುಂದಿನ ಎರಡು ಪದ್ಯಗಳು ಇವಕ್ಕೆ ಉತ್ತಮ ಉದಾಹರಣೆಗಳು. ,
ಬಲಿಯಂ ಕಟ್ಟಿದನಾವನ್, ಈ ಧರಣಿಯಂ ವಿಕ್ರಾಂತದಿಂದಂ ರಸಾ ತಲದಿಂಧದನಾವನ್, ಅಂದು ನರಸಿಂಹಾಕಾರದಿಂ ದೈತ್ಯನಂ ಚಲದಿಂ ಸೀಳವನಾವನ್, ಅಬಿಮಥನಪ್ರಾರಂಭದೊಳ್ ಮಂದರಾ ಚಲಮಂ ತಂದವನಾವನ್, ಆತನೆ ವಲಂ ತಕ್ಕಂ ಪೇಜರ್ ತಕ್ಕರೇ || ದಿವಿಜೇಂದ್ರ ಸುಖಮಿರ್ದನೆ, ದಿತಿಸುತವಾಬಾಧೆಗಳ ದೇವರ್ಗಿ ಇವಲಾ, ಷೋಡಶರಾಜರಿರ್ಷ ತಾನೇನ್, ಎಮನ್ವಯಕ್ಷಾ ಪರಾ ವವಿಳಾಸಂಗಳೊಳಿರ್ಪರ್, ಏ ದೊರತು ತಾನೆಮ್ಮಯ್ಯನಶ್ವರಮಂ ತಿವೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಜಗರ್ಭಾತ್ಮಜಾ || ಈ ಪದ್ಯಗಳು ಎಷ್ಟು ಸುಲಭವಾಗಿವೆ ! ಸರಳವಾಗಿವೆ!
ಪಂಪನು ಕಥಾಶರೀರದಲ್ಲಿ ಬಹು ಭಾಗವನ್ನು ಸಂವಾದರೂಪದಲ್ಲಿ ಬರೆದಿರುವುದು ಅವನ ಕಾವ್ಯಕ್ಕೆ ಒಂದು ಪ್ರತ್ಯೇಕವಾದ ಚೈತನ್ಯವನ್ನುಂಟುಮಾಡಿದೆ. ಪಾತ್ರಗಳಾಡುವ ಭಾಷೆ ಬಹುಸರಳವಾಗಿದೆ. ಆದರೂ ಪೂರ್ಣವಾದ ತೂಕದಿಂದ ಕೂಡಿದೆ. ಅವು ಶಲ್ಯದ ಮೊನೆಯಂತೆ ನೇರವಾಗಿ ಹೃದಯವನ್ನು ಭೇದಿಸಿ ಪ್ರವೇಶಮಾಡುವುವು. ಅಗ್ರಪೂಜಾಸಂದರ್ಭದಲ್ಲಿ ಶಿಶುಪಾಲನು ಧರ್ಮರಾಜನಿಗೆ ಆಡಿದ ಮಾತುಗಳಿವು.
ಮನದೊಲವರಮುಳ್ಳೂಡ ಕುಡು ಮನೆಯೊಳ್ ಹರಿಗಗ್ರಪೂಜೆಯಂ ಯಜ್ಞದೊಳೀ ಮನುಜಾಧೀಶ್ವರ ಸಭೆಯೊಳ್ ನೆನೆಯಲುಮಾಗದು ದುರಾತ್ಮನಂ ಬೆಸಗೊಳ್ತಾ | - ಅಳವಡೆಯದೆದ್ದು ಬಳಬಳ ಬಳೆವಿನೆಗಂ ಪಚ್ಚಪಸಿಯ ತುಳುಕಾಳಿಂಗೆ ಗಳಿಕೆಯನೆ ಮಾಡಿ ನೀನುಂ ಪಟಿಯಂ ಕಟ್ಟದೆಯೊ ಭೂಪಂ ರಿನಿಬರ ಕೊರಳೊಳ್ ದೇವರನಡಿಗೆಗಿಸಿ ಸಕ ಲಾವನಿತಳದಧಟರ ಪಡಲ್ವಡಿಸಿದ ಶಾ
Page #46
--------------------------------------------------------------------------
________________
ಉಪೋದ್ಘಾತ | ೪೧ ರಾವಷ್ಟಂಭದೊಳಾನಿರೆ ಗೋವಳಿಗಂಗಪೂಜೆಯಂ ನೀಂ ಕುಡುವಾ || ಕುಡುವೇಲ್ವಿನ ಕುಡುವನ ಕುಡೆ ಪಡೆವನ ಹೆಂಪೇಂ ನೆಗಟಿವಡೆಗುಮೊ ಪೇಲ್ವಂ ಕುಡುವೇಲಮ ಕುಡುವಣ್ಣಂ ಕುಡುಗೆಮ ಕುಡೆ ಕೊಲ್ವ ಕಲಿಯನಚಿಯಕ್ಕುಂ || ಎಂದನಿತಳೊಳೆ ಮಾಣದೆ ಗೀರ್ವಾಣಾರಿಯಸುರಾರಿಯನಿಂತೆಂದಂದೊರೆಯಕ್ಕುಮೆ ನಿನಗೆ ಯುಧಿ ಪಿರನರ್ಪಮನತೆ ಶಂಖದೊಳ್ ಪಾಲೆದಂ ತಿರೆ ಮಲಿನಮಿಲ್ಲದೂಳ್ಳುಲ ದರಸುಗಳಿರೆ ನೀನುಮಗ್ರಪೂಜೆಯನಾಂಪಾ | ಮನೆ ನಿನಗೆ ನಂದಗೋಪಾಲನ ಮನೆ ತುಜುಗಾರ್ತಿ ನಿನಗೆ ಮನವೆಂಡಿತಿ ಪ ಚನೆ ಪಸಿಯ ಗೋವನ್ಯ ಕರ ಮನಯದೆ ನಿನ್ನಳವಿಗಳವನಣಿಯದೆ ನೆಗ || ಮೀನ್, ಆವೆ ಪಂದಿಯೆಂದೆನಿ ತಾನುಂ ತನಾಗಿ ಡೊಂಬವಿದ್ಯಯನಾಡಲ್ ನೀನಳಿವೆ, ಉರದಿದಿರ್ಚಿದೋ ಡಾನಳಿವೆಂ ನಿನ್ನಲ್ಲಿ ದಸೆವಲಿಗೆಯ್ಯಮ್ || ಅಳಿಯದಿದಂ ಮಾಡಿದೆನ್, ಎ ನೈಟಿಯಮಿಕೆಗೆ ಸೈರಿಸೆಂದು ನೀಂ ಸಭೆಯೊಳ್ ಕಾ
ಲೈಂಗು, ಎಜಗು ಕೊಲೈನ್ ಒಂದೆ ಪದ್ಯದಲ್ಲಿ ನಿರೂಪಿತವಾಗಿರುವ ಭೀಮ-ಭಗದತ್ತರ ಸಂಭಾಷಣೆಯನ್ನು ಗಮನಿಸಿ :
ತೊಲಗು, ಇದು ಸುಪ್ರತೀಕಗಜಂ, ಆಂ ಭಗದತ್ತನೆನ್, ಇಲ್ಲಿ ನಿನ್ನ ತೋ ಜ್ವಲದ ಪೊಡರ್ಪು ಸಲ್ಲದು, ಎಲೆ ಸಾಯದೆ ಪೋಗು, ಎನೆ ಕೇಳು ಭೀಮನ್ ಆ೦ ತೂಲೆಯದಿರ್, ಉರಿನೋಳ್ ನುಡಿವೆ, ಈ ಕರಿಸೂಕರಿಯಲು -ಪತ್ನಿ ಗಂ
ಟಲನೊಡೆಯೊತ್ತಿ ಕೊಂದಹೆನ್, ಇದದರಮ್ಮನುಂ, ಎನ್ನನಾಂಪುದೇ ||
ಈ ಪದ್ಯಗಳಲ್ಲಿ ಪ್ರಕಾಶಿತವಾದ ದೇಶಿಯ ಸೊಬಗನ್ನು ಯಾರಾದರೂ ಮೆಚ್ಚಬಹುದು.
ಚಂದ್ರಸೂರ್ಯರ ಉದಯಾಸ್ತಗಳನ್ನು ಕಥಾಸಂವಿಧಾನದಲ್ಲಿ ಸೇರಿಸಿ ಉತ್ತೇಕ್ಷಿಸಿ ಹೇಳುವುದು ಪಂಪನ ಸಂಪ್ರದಾಯ. ಇವು ಕಥಾಶರೀರದಲ್ಲಿ ಸೇರಿಕೊಂಡು ಉತ್ತೇಕ್ಷೆಯೆಂಬ ಭಾವವನ್ನೆ, ಮರಸಿಬಿಡುತ್ತದೆ. ಮುಂದಿನದು ಈ ಮಾದರಿಯ ಸೂಯ್ಯೋದಯ ವರ್ಣನೆ
Page #47
--------------------------------------------------------------------------
________________
೪೨ | ಪಂಪಭಾರತಂ
ಅದಟಂ ಸಿಂಧುತನೂಭವಂ ವಿಜಯನೊಲ್ ಮಾರ್ಕೊಂಡಣಂ ಕಾದಲಾ ಅದೆ ಬೆಂಬಿಡೆ ಕಾದಲೆಂದು ಬೆಸನಂ ಪೂಣಂ ಗಡಂ ದ್ರೋಣನಂ ತರುವಂ ನೋಡುವೆನೆಂದು ಕಣ್ ತಣಿವಿನಂ ನೋಡಿ ಬರ್ಪಂತೆಂಬಂ
ದುದಯಾದೀಂದ್ರಮನೇ ಭಾನು ಪೊಮಟೊಟ್ಟಿತ್ತನೀಕಾರ್ಣವಂ ||
ಮುಂದಿನ ಕರ್ಣವಧಾನಂತರದ ಸೂರ್ಯಾಸ್ತಮಯದ ವರ್ಣನೆಯೂ ಇಂತಹುದೆ
ಪಬಯಿಗೆಯನುಡುಗಿ ರಥಮಂ ಪಲವನನೆಸಗಿಟ್ಟು ಸುತಶೋಕದ ಪೊಂ ಪುಟಿಯೊಳ್ ಮೆಯ್ಯತೆಯದೆ ನೀ ರಿವಂತಿಲ್, ಇಟೆದನಪರಗಳಧಿಗೆ ದಿನಪಂ |
ಸಹಜವಾಗಿ ನೀರುಕುಡಿದಂತೆ ಮಾತನಾಡುವುದು ಪಂಪನ ಪದ್ದತಿಯಾದುದರಿಂದ ಅವನು ಜನಸಾಮಾನ್ಯರಲ್ಲಿ ರೂಢಿಯಲ್ಲಿರುವ ಪದಗಳನ್ನೂ ವಾಕ್ಯಗಳನ್ನೂ ನುಡಿಕಟ್ಟನ್ನೂ ದೇಶೀಯಶಬ್ದಗಳನ್ನೂ ತನ್ನ ಕಾವ್ಯದಲ್ಲಿ ವಿಶೇಷವಾಗಿ ಉಪಯೋಗಿಸಿದ್ದಾನೆ. 'ಪುಣ್ಯಭಾಜನಂತೆಗೆ ನೂಕೆ ಪಾಸು' 'ರಾಜಹಂಸ ಮಾನಸಸರೋವರವನಲ್ಲದೆ ಪೆಜತನೇಕೆ ಬಯಸುಗುಂ' 'ಕಕೇನಾರ್ಥಿ ಕೋದರಿದ್ರಃ' ಪನಿಪುಲ್ಲಂ ನಕ್ಕೆ ತೃಷ್ಣಮೋದಪುದೇ!' 'ನಿಯತಿಃ ಕೇನಲಂಫ್ಯತೆ' 'ಏನಾಗದೋ ಪಾಪದ ಫಳಂ ಎಯ್ದಿವಂದ ದಿವಸದೊಳಾರ್ಗ೦, ಆನೆಯ ಕೋಡುಬಾಗದು' 'ಪಗೆಯಿಳೆಯ ಬಂದರ ಮೂಗನರಿದರೆಂಬಂತೆ' 'ಬೇರೊಲ್ ಬೇರನೆಳೆಯದಿರ್', 'ಸೆಟ್ಟಿಯ ಬಳ್ಳಂ ಕಿಟೆದು', 'ಕಮ್ರಯೋಜಂ ಬಿಲ್ಗೊಜನೆಂಬುದು ಮಾಡುವೆನೆ' ಬೆಳ್ಳಾಳೆ ಪೊಳಪುದೋಚುವುದು ಒಳ್ಳಾಳೊಪೊಡರ್ಪುದೋಚುವುದು' 'ಪೆಣನನಿಳೆದು ಪಗೆಗೊಂಡರ್' 'ಎಂತಪ್ಪರೊಳಂ ಮುಳಿಸಚೆವನಾಗಲೇನಿತ್ತಪುದೇ ? “ಅಪಾಂಡವಂ ಮಾಡದಂದು ಬಿಲ್ಲೆಯನ ಪುತ್ರನಲ್ಲೆಂ 'ಗುರುವಿಯೋಗಭರಂ ಗುರುವಾಗದಿರ್ಕುಮೆ' 'ಪಗೆಯನೇಂ ಗಳ ಪಟ್ಟಮೆ ಪಾರಿ ತಿಂಗುಮೆ', 'ನಿನ್ನ ಕೆಯ್ಯುವೆನಿತುಂ ಬಿಸುಟಿರ್ದ ಲೆಕ್ಕಮೆ' 'ವಿಷಮೊಳೆಗುಳೊಡಂ ಒಳ್ಳೆಯೆ, ಕಾಳಿಯನಾಗನಾಗದು' 'ನೃಪಚಿತ್ತ ವೃತ್ತಿ ಸಂಚಲಂ ಅದಳೆಂದಂ ಓಲಗಿಸಿ ಬಾಜ್ವುದೆ ಕಷ್ಟಂ ಇಳಾಧಿನಾಥರಂ' 'ತೋಳ್ತರ ಮೊಲೆವಾಲನುಂಡ ಗುಣಮನ್ ಆರ್ ಕೆಡಿಪರಾ ನರೇಂದ್ರರೊಳ್', 'ಮೇಲಪ್ಪ ಪಗೆಗಂಜಿ ಕೊಂದಂತೆ, ಖಳನೊಳವಿಂಗೆ ಕುಪ್ಪೆವರಂ' 'ಪಗೆಗೆ ಸಂತಸವಾಗಿರೆ ಮಾರಿ ಸುಯ್ಯುಮೆ “ಅತ್ಯಾಧರಸ್ಸಂಭ್ರಮಮುತ್ಪಾದಯತಿ' 'ಪಡೆ ನೋಡಲ್ ಬಂದವರಂ ಗುಡಿವೊರಿಸಿದರ್ 'ದೈವಮನಾರಯ್ಯ ಮೋಳೆ ಬಾಲ್ ನೆವರ್, 'ಮೋಹಮಯನಿಗಳಂ ಕಳತ್ರಂ' “ಪಾವುಗಳುಳ್ಳ ಪಗೆಯಂ ಮಳೆಯವು' 'ಸಿಂಹಮಾಡುವವರ ಬಾಲಮನಾಡಿದರ್', “ಏಂ ಮಹಾಪುರುಷರಾಜ್ಞಾಲಂಘನಂ ಗೆಯ್ದರೇ ?' ಕೆಯ್ಯಳಿದ ಮನೆವಾರ್ತೆಗೆ ಬುದ್ದಿಪೇಟಿಲೆಡೆಯಿಲ್ಲ' 'ಉಪ್ಪಿಕ್ಕಿದೊಡೆ ತುಪ್ಪಕ್ಕೆ ಮೇಳಡಿತು' `ಬಡಿಗಂಡನಿಲ್ಲ ಪಾಲಂ ಕಂಡಂ' 'ನೋಂತರ ಪಗೆವರನೆಟಿಟಿದಂತಾಯ್ತು' 'ಕೇಶದ ಫಲಮೆರ್ದೆಗೊಳ್ಳದೆ' 'ಕನಕನ ಬೇಳೆ ಕನಕನನ್ ತಿಂದುದು' 'ಪರವೆಣೈ ಒಲ್ಲಂಗಮೇನಾಗದು' 'ಪಾದರದೊಳ್
Page #48
--------------------------------------------------------------------------
________________
ಉಪೋದ್ಘಾತ | ೪೩ ಸತ್ತಂಗತ್ವಿನ್ನರಾರ್', 'ಏವುದೊ ಶುಚಿಯಿಲ್ಲದವನ ಗಂಡುಂ ತೊಂಡುಂ' 'ಏಂ ಮಹಪಾಳರೊಳಾದ ಕಾವ್ಯಗತಿಗಳ್ ಬಗೆಯ ಬಹುಪ್ರಕಾರವೋ' 'ಮೆಲ್ಲು ಬಲ್ಲನಚೆಗುಂ 'ಕಾಯ್ದ ಬೆನ್ನೀರ್ ಮನೆಸುಡದು' 'ತನ್ನಿಕ್ಕಿದ ತತ್ತಿಯನೆ ಪಾವು ನೊಣೆವಂತಕ್ಕುಂ' 'ಶೂರಂ ಭೇದೇನ ಯೋಜಯೇತ್? “ಎನಿತಾದೊಡಮೇಂ ಪ್ರಭು ಪೊಲ್ಲಕೆಯುಮೆ' 'ಭಾನುವೆ ಸಾಲದೆ ಪಗಲೆನಿತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ' 'ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ' 'ನಷ್ಟಂ ನಷ್ಟಂ ಮೃತಂ ಮೃತಂ' 'ಆರ್ಗುಮೇಂ ಬಿದಿಯ ಕಟ್ಟಿದುದಂ ಕಳಿಯಲಾರ್ಗಮೇಂ ತೀರ್ದಪುದೇ' 'ಕಣ್ಮುರುಡಾದೊಡಮೇನೂ ಕುರುಡಾಗಲೆಲ್ಕು ನಿಮ್ಮ ಬುದ್ದಿಯುಂ' 'ಕೊಂದರ್ ಕೊಲೆ ಸಾವರ್' 'ಜಗದ್ವಾ ಪಾರಮೀಶ್ವರೇಜ್ಜೆ' ಇವುಗಳಲ್ಲಿ ಅನೇಕವು ಪ್ರತ್ಯೇಕವಾದ ನಾಣ್ಣುಡಿಯಾಗಿ ರಂಜಿಸುವುವು. ಇವುಗಳನ್ನು ಉಪಯೋಗಿಸಿರುವುದರಿಂದ ಕಾವ್ಯಕ್ಕೆ ಒಂದು ಆತ್ಮೀಯತೆಯುಂಟಾಗಿದೆ.
ಪಂಪನು 'ರೂಪಕರಾಜ್ಯದ ಚಕ್ರವರ್ತಿ.' ಅವನ ಉಪಮಾ ರೂಪಕೋತೇಕ್ಷೆಗಳು ಹಲವು ಕ್ಷೇತ್ರಗಳಿಂದ ಆಯ್ದುಕೊಂಡವು. ಅವುಗಳಲ್ಲಿ ಪ್ರತಿಯೊಂದರಲ್ಲಿಯೂ ಜೀವವಿದೆ, ಭಾರವಿದೆ, ಅರ್ಥಪುಷ್ಟಿಯಿದೆ ಮತ್ತು ವೈವಿಧ್ಯವಿದೆ. ಉಪಮಾನಗಳೆಲ್ಲವೂ ಬಹುಮಟ್ಟಿಗೆ ಮನುಷ್ಯನ ಸುತ್ತಮುತ್ತಲಿನ ಆವರಣದಿಂದ ಆರಿಸಿಕೊಂಡವು.ವಾಚಕನು ಪ್ರತಿಯೊಂದನ್ನೂ ಪ್ರತ್ಯಕ್ಷವಾಗಿ ಅನುಭವಿಸಿ ಉಪಮೇಯದ ಸ್ಪಷ್ಟಚಿತ್ರವನ್ನು ಕಾಣಬಹುದು. 'ಪಂದೆಯಂ ಪಾವಡರ್ದಂತೆ' 'ಪೊಳ್ಳುಮರನಂ ಕಿರ್ಚಳುರ್ವಂತೆ “ಉರಿಮುಟ್ಟಿದರಳೆಯಂತೆ' “ತಣಿಯುಂಡಮರ್ದ೦ ಗೋಮೂತ್ರದಿಂದ ಬಾಯೂಸಿದ ವೋಲ್' 'ಡೊಂಬರ ಕೋಡಗದಂತೆ' 'ಕೀಲೊಳ್ ಕಿಚ್ಚುಪುಟ್ಟಿ ಭೋರ್ಗರೆದುರಿವಂತೆ' 'ಆಡದಿರ್ದ ಮಡುವಂ ಪೋಲ್ಲಂ' 'ಬಾಳೆಯ ಬನಮಂ ಕಾಡಾನೆವೊಯ್ದಂತೆ' 'ದೇಗುಲಕೆ ಪೆರ್ಮರನಂ ಕಡಿವಂತೆ,' “ಕುರುಡಂ ಕಣ್ಣೆತ್ತವೊಲ್' 'ಕಯ್ಯಕೂಸನಿಕ್ಕಿದವೋಲ್' 'ಆನೆ ಮೆಟ್ಟಿದ ಕುಳುಂಪೆಯ ನೀರಂತೆ' 'ಪಣಿಯ ಬೇವಿನೆಣ್ಣೆಯೊಳ್ ತೊಯ್ದಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ' 'ಕರಿಕಳಭ ಗರ್ಜನೆಗೇಳ ಮೃಗರಾಜನಂತೆ' 'ಕೃಶಾನುವ ನೆಲಿಲಳುರದಂತೆ' 'ಕಳಭಂ ವನಪಥಮಂ ಯೂಥಪತಿಗೆ ತೋರ್ಪಂತೆ' 'ಪುಳಿಯೊಳ್ ಕರ್ಚಿದ ಬಾಳ ಬಣ್ಣದಂತೆ', 'ಬಳೆಯಂ ಪೇರಾನೆ ಮೆಟ್ಟಿದಂತೆ' (ನೆಯ್ದಿಲ ಕಾವಂ ತುದಿಗೆಯ್ದೆ ಸೀಳ್ಯ ತೆರಿದಿಂ 'ಸಿಡಿಲೊಳ್ ಪೋರ್ವ ಸಿಡಿಲಂತೆ', 'ನೆಲನುಮಾಕಾಶಮುಮೊಂದೊಂದರೋಳ್ ತಾಗಿದಂತೆ' 'ತನ್ನ ಸಗ್ಗಮನೇಯುವುದನನುಕರಿಸುವಂತೆ' 'ಪರ್ದೆಗೆ ಸುರುಳು ಬೀಳ್ವ ಕಿರುವಕ್ಕಿಯವೋಲ್' “ಕಲ್ವಚೆಯೊಳ್ ಭೋರ್ಗರೆವ ತೊಜಯವೋಲ್' ಬಳ್ಳಳ ಬಳೆದುರಿವ ಕೇಸುರಿಯಂತೆ' 'ದೃಢಕಠಿಣ ಹೃದಯನಪ್ಪ ಹಿರಣ್ಯಾಕ್ಷನರಮಂ ಪೋಲ್ವಂತೆ', 'ಸುಟ್ಟುರೆಯೊಳಗಣ ತರಗೆಲೆಯಂತೆ' 'ಬಡಿಗೊಂಡು ಮಸಗಿ ಭೈತ್ರಮನೊಡೆವ ಮಹಾಮಕರದಂತೆ' 'ದಿನಕರನ ಬಣಿದಪ್ಪಿದ ಕಿರಣಂಗಳ್ ಕಲಿಯಂ ಕಂಡಳ್ಳಿ ತನ್ನ ಮಅಯಂ ಪೊಕ್ಕಂತೆ' 'ಆವುಗೆವುರಿಯಂತೆ' 'ಕೃಪೆಯಂ ಜವಂ ಬಿಸುಟಂತೆ' 'ದಳಂಗಳ್ ಕೋಲಾಟಮಾಡುವಂತೆ,
Page #49
--------------------------------------------------------------------------
________________
೪೪ | ಪಂಪಭಾರತಂ 'ಪ್ರಳಯದುರಿಯನುರುಳಿಮಾಡಿದಂತೆ', 'ಕಿಡಿಗಳ ಬಳಗಮನೋಳಗುಮಾಡಿದಂತೆ, 'ಕಾರಮುಗಿಲ್ ಬಿಮಿಂಚಿಂದುಳ್ಳುವವೋಲ್' 'ಚದುರಂಗದ ಮಣೆಯನಲುಗಿದಂತೆ' 'ಚತುದರ್ಶಭುವನಂಗಳೆಲ್ಲಮಂ ತೆರಳಿ ತೇರೈಸಿ ನುಂಗುವಂತೆ', 'ಜವಂಗೆ ಬಿರ್ದಿಕ್ಕುವಂತೆ, ಅರಾತಿಗೆ ಮಿಟ್ಟು ಬರ್ಪಂತೆ' 'ಶಿಖಾಕಳಾಪಂಗಳೊಳ್ ಪಡಪುಡನಲ್ಲೆ ಸಾಯ್ತ ಪತಂಗದಂತೆ' (ಪೆಂಕೊಳಿಯ ಸಿಂಹಮಂ ಮುತ್ತುವಂತೆ' 'ಪೆರ್ವಿದಿರ ಸಿಡಿಂಬಿನೊಳ್ ಪುದಿದ ಕುಳಾಚಳದಂತೆ', 'ಸಿಡುಂಬಿನ ಪೊದಲ್ ಮದೋಣಗಿದ ಮೃಗರಾಜನಂತೆ', 'ಮಹಾಮಕರಂ ಸಮುದ್ರದೊಳ್ ಪರಿವವೋಲ್' 'ಇಂದ್ರನೀಲಮಂ ಮುತ್ತಿನೋಳಿಯೊಳ್ ಕೋಟಿಲಿಕ್ಕಿದ ಮಾಲೆಯಂತೆ, ಅಚೆಯೆ ನೊಂದ ಸಿಂಗದ ಮೇಲೆ ಬೆರಗಳೆಯದ ಬೆಳ್ಳಾಳ್ ಪಾಯ್ತಂತೆ” “ತಿಕೊಂಡ ಜೋಳದಂತೆ' 'ಆಗಾಮಿಪ ಸಂಗ್ರಾಮರಂಗಕ್ಕೆ ಪಾತ್ರಗಳಂ ಸಮೆಯಿಸುವ ಸೂತ್ರಧಾರನಂತೆ' 'ತಾರಾಗಣಗಳ ನಡುವಣ ಸಕಲ ಕಳಾಧರನಂತೆ' 'ಮದನನ ಕೆಯ್ಯಂ ಬರ್ದುಂಕಿ ಬಂದ ಅರಲಂಬು ಬರ್ಪಂತೆ' 'ಪಲರು ಮಂಬಂತೊಡೆ ನಡುವಿರ್ದೊಂದು ಪುಲ್ಲೆಯಂತೆ' 'ತೆಂಕಣಗಾಳಿಯ ಸೋಂಕಿನೊಳ್ ನಡುಮಂಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ ತೊಡರ್ದವೋಲ್' “ಕಾಯ್ದ ಪುಡಿಯೊಳಗೆ ಬಿಸುಟೆಳೆವಾಣಿಯಂತೆ' 'ಏಶ್ಚವಾಡಿವದ ಸಸಿಯಂತೆ' “ ಕೃರಗನುಂ ಪಿಡಿದ ಬೆಳ್ಳಾಳಂತೆ,' 'ಮುತ್ತ ಮೆಣಸಂ ಕೋದಂತೆ' ಕಾಮದೇವನೇವಮಂ ಕೆಯ್ಯೋಂಡು ಸೀಂತಂತೆ' 'ಮೋಹರಸಮೆ ಕಣ್ಣಿಂ ತುಳುಕುವಂತೆ' 'ಅಶೇಷಧರಾಭಾರಮಂ ಶೇಷಂ ತಾಳುವಂತೆ.' 'ಗಾಳಿಗೊಡ್ಡಿದ ಪುಲ್ಲ ಪನಿಗಳಂತೆ' 'ಪುಲ್ಲ ಸೂಡನಿಡಾಡುವಂತೆ'. 'ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ,' ಎಂಬಿವೇ ಮೊದಲಾದ ಉಪಮಾನಗಳೂ 'ಪರಿದುದು ವಸಂತಗಜಂ' ಎಂಬಂತಹ ರೂಪಕಗಳೂ 'ಕಾಸಿದಿಟ್ಟಿಗೆಯ ರಜಂಬೊಲಿರೆ ಸಂಧ್ಯೆ' 'ಚಂದ್ರನು ಸಂಧ್ಯೆಯನ್ನು ಕೂಡಲು ರೋಹಿಣಿಯು ಕೋಪಗೊಂಡು ಒದ್ದುದರಿಂದ ಅವಳ ಕಾಲಿನ ಅಲತಿಗೆಯು ಮೆತ್ತಿಕೊಳ್ಳಲು ಚಂದ್ರಬಿಂಬವು ಕೆಂಪಾಗಿತ್ತು “ಕತ್ತಲೆಯೆಂಬ ಆನೆಯ ಕೋಡಿನ ಇರಿತದಿಂದ ಅವನ ಎದೆಯಲ್ಲಿದ್ದ ಹರಿಣವು ಗಾಯಗೊಂಡ ರಕ್ತದಿಂದ ಚಂದ್ರನು ಕೆಂಪಾಗಿ ಕಾಣಿಸಿಕೊಂಡನು' ಎಂಬಂತಹ ಅನೇಕ ಉತ್ತೇಕ್ಷೆಗಳೂ ಕಾವ್ಯದ ಮಧ್ಯೆ ಅನೇಕೆಡೆಗಳಲ್ಲಿ ಬಹಳ ಆಕರ್ಷಕವಾಗಿವೆ.
- ಪಂಪನ ಸಾಮರ್ಥ್ಯ ನಿಜವಾಗಿ ಎದ್ದು ಕಾಣುವುದು ಆತನ ಪಾತ್ರ-ಚಿತ್ರಣದಲ್ಲಿ. ಆತನ ಪ್ರತಿಯೊಂದು ಪಾತ್ರದಲ್ಲಿಯೂ ಪ್ರತ್ಯೇಕವಾದ ವ್ಯಕ್ತಿತ್ವವಿದೆ, ಪ್ರತಿಯೊಂದೂ ತನ್ನದೇ ಆದ ಗುಣಗಳನ್ನು ವ್ಯಕ್ತಪಡಿಸಿಕೊಂಡು ಆ ಗುಣಗಳಿಂದಲೇ ಮನೋಹರವಾಗಿದೆ. ಒಂದು ಕಡೆ ಮಹಾಭಾರತದ ಸೂತ್ರಧಾರನಂತಿರುವ ಕೃಷ್ಣಪರಮಾತ್ಮ(ಪಂಪನು ಅವನನ್ನು ಭಾರತದ ಪೂಜ್ಯವ್ಯಕ್ತಿಗಳ ಸಾಲಿನಲ್ಲಿ ಸೇರಿಸಿಲ್ಲದಿದ್ದರೂ ಅವನಿಲ್ಲದೆ ಕಥೆ ಮುಂದೆ ಸಾಗುವುದೇ ಇಲ್ಲ) ಮತ್ತೊಂದು ಕಡೆ ಧರ್ಮವೇ ಮೂರ್ತಿವೆತ್ತಂತಿರುವ ಧರ್ಮರಾಜ, ಅಚಲಿತ ಪ್ರತಿಜ್ಞಾರೂಢನಾದ ಗಾಂಗೇಯ, ಧನುರ್ಧರಾಗ್ರಗಣ್ಯನಾದ ದ್ರೋಣಾಚಾರ್ಯ, ಭಾರತಯುದ್ದಕ್ಕೆ ಆದಿಶಕ್ತಿಯೆನಿಸಿದ ಬ್ರೌಪದಿ-ಇವರೊಬ್ಬೊಬ್ಬರೂ ತಮ್ಮ ಒಂದೊಂದು
Page #50
--------------------------------------------------------------------------
________________
ಉಪೋದ್ಘಾತ | ೪೫ ಗುಣದಿಂದಲೇ ಪ್ರಪಂಚದಲ್ಲಿ ಆಚಂದ್ರಾರ್ಕವಾದ ಕೀರ್ತಿಯನ್ನು ಪಡೆದಿದ್ದಾರೆ. ಪಂಪನು ಬಹುಶಃ ತನ್ನ ಕಾಲದಲ್ಲಿ ಪ್ರಧಾನ ಮೌಲ್ಯಗಳಾಗಿದ್ದಿರಬಹುದಾದ ಛಲ, ನನ್ನಿ, ಗಂಡು, ಬಲ, ಉನ್ನತಿ, ಚಾಪವಿದ್ಯೆ, ಸಾಹಸ, ಧರ್ಮ ಈ ಗುಣಗಳಿಗೆ ಪ್ರಸಿದ್ಧ ಪ್ರತಿನಿಧಿಗಳಾಗಿದ್ದ ದುರ್ಯೊಧನ, ಕರ್ಣ, ಭೀಮ, ಶಲ್ಯ, ಭೀಷ್ಮ ದ್ರೋಣ, ಅರ್ಜುನ ಮತ್ತು ಧರ್ಮರಾಜರನ್ನು ಹೆಸರಿಸಿ ಅವರಿಂದ ಭಾರತವು ಲೋಕಪೂಜ್ಯವಾಗಿದೆ ಎಂದು ಹೇಳಿದ್ದಾನೆ. ಇವರೊಡನೆ ಕೃಷ್ಣ, ಅಭಿಮನ್ಯು, ಘಟೋತ್ಕಚ, ಶ್ವೇತ ಮೊದಲಾದವರ ಅದ್ಭುತ ವ್ಯಕ್ತಿತ್ವಗಳು ಕಾವ್ಯದಲ್ಲಿ ಮೂಡಿ ಬಂದಿವೆ. ಇವರಲ್ಲಿ ಪ್ರಧಾನವಾದ ಕೆಲವರ ಪಾತ್ರ ಚಿತ್ರಣವನ್ನು ಪರಿಶೀಲಿಸಬಹುದು.
ಮಹಾಭಾರತದ ಪ್ರಧಾನ ವ್ಯಕ್ತಿ ಶ್ರೀಕೃಷ್ಣ. ಆತನ ಹೆಸರನ್ನು ವಾಚ್ಯವಾಗಿ ಪಂಪನು ಎತ್ತಿ ಸೂಚಿಸದಿರುವುದಕ್ಕೆ ಕಾರಣಗಳನ್ನು ಊಹಿಸುವುದು ಸುಲಭವಲ್ಲಿ ಹೆಸರಿಸದಿದ್ದರೂ ಆತನ ಕೈವಾಡ, ಪ್ರಭಾವ, ಪ್ರಾಮುಖ್ಯ ಪಂಪಭಾರತದಲ್ಲಿ ಎಲ್ಲಿಯೂ ಕಡಿಮೆಯಾಗಿಲ್ಲ. ಆತನಿಲ್ಲದಿದ್ದರೆ ಭಾರತದ ಕಥೆಯೇ ನಡೆಯುತ್ತಿರಲಿಲ್ಲವೆಂಬಷ್ಟು ಸ್ಥಾನವನ್ನು ಕವಿ ಅವನಿಗೆ ಕಲ್ಪಿಸಿದ್ದಾನೆ. 'ಮಮ ಪ್ರಾಣಾ ಹಿ ಪಾಂಡವಾಃ' ಎಂಬುದಾಗಿ ಮೂಲಭಾರತದಲ್ಲಿ ಬರುವ ಆತನ ಉಕ್ತಿಗೆ ಇಲ್ಲಿ ಊನ ಬಂದಿರುವಂತೆ ಕಾಣುವುದಿಲ್ಲ. ಬ್ರೌಪದೀಸ್ವಯಂವರದಲ್ಲಿ ಪಾಂಡವರನ್ನು ಮೊದಲು ಕಂಡ ಆತನು ಅರ್ಜುನನ ಪಟ್ಟಾಭಿಷೇಕದವರೆಗೆ ಉದ್ದಕ್ಕೂ ಪಾಂಡವರ ಪ್ರಧಾನ ಶಕ್ತಿಯಾಗಿದ್ದಾನೆ. ಪಾಂಡವರು ಯಾವ ಕೆಲಸ ಮಾಡಬೇಕಾದರೂ ಅವನನ್ನು ವಿಚಾರಿಸದೆ ತೊಡಗುವುದಿಲ್ಲ. ಅವರ ಎಲ್ಲ ಸಹಾಯ ಸಂಪತ್ತುಗಳೂ ವಿಪತ್ಪರಿಹಾರಗಳೂ ಅವನಿಂದಲೇ ಉಂಟಾಗುವುವು. ಸುಭದ್ರಾಪರಿಣಯಕ್ಕೆ ಕಾರಣನಾದವನು ಆತನು. ರಾಜಸೂಯವನ್ನು ನಡೆಸಿದವನು ಆತನು, ಖಾಂಡವದಹನ ಪ್ರಸಂಗದಲ್ಲಿ ನೆರವಾಗಿದ್ದವನು, ಪಾಶುಪತಾದಿ ಅಮೌಲ್ಯಅಸ್ತಗಳನ್ನು ದೊರಕಿಸಿದವನು. ದುರ್ಯೋಧನನಿಗೆ ದೂತನಾಗಿ ಹೋಗಿ ಸಂಧಿಗಾಗಿ ಪ್ರಯತ್ನಪಟ್ಟವನು ಅವನೇ. ಭೇದೋಪಾಯದಿಂದ ಕರ್ಣನ ಶಕ್ತಿಯನ್ನು ಕುಂದಿಸಿದವನೂ, ಕುಂತಿಯ ಮೂಲಕ ಪಾಂಡವರಿಗೆ ಅವನಿಂದ ರಕ್ಷಣೆಯನ್ನು ದೊರಕಿಸಿದವನೂ ಅವನೇ. ಯುದ್ದದಲ್ಲಿ ವೀರಾಧಿವೀರರಾದ ಭೀಷ್ಮ ದ್ರೋಣ ಕರ್ಣ ಶಲ್ಯ ಮೊದಲಾದ ಎಲ್ಲ ನಾಯಕರನ್ನೂ ಜಯಿಸುವ ಉಪಾಯವನ್ನು ಹೇಳಿಕೊಟ್ಟವನೂ ಅವನೇ. ಪಾಂಡವರಿಗೆ ಯುದ್ಧದಲ್ಲಿ ಉಂಟಾದ ಎಲ್ಲ ವಿಪತ್ತುಗಳೂ ಅವನಿಂದಲೇ ಪರಿಹಾರವಾದುವು. ಅವನು ಅಜಿತ, ಅನಂತ, ಮಧು ಮಥನ, ನಾರಾಯಣ ಎಂಬುದು ಉಭಯಪಕ್ಷಗಳಿಗೂ ತಿಳಿದಿತ್ತು. ಹಾಗೆಯೇ ಎಲ್ಲರಿಗೂ ಅವನಲ್ಲಿ ಪೂರ್ಣವಾದ ಭಕ್ತಿಯಿತ್ತು. ಅವನ ಉಪದೇಶದಂತೆ ನಡೆದುಕೊಳ್ಳಿ ಎಂದು ದ್ರೋಣ ಭೀಷ್ಮಾದಿಗಳು ಪಾಂಡವರಿಗೆ ತಿಳಿಸುತ್ತಾರೆ. ದುರ್ಯೊಧನನಿಗೂ ಕೂಡ ಅವನ ನೆರವು ಅವಶ್ಯಕವೆಂದು ತಿಳಿದಿತ್ತು. ಅವನನ್ನು ಗೆಲ್ಲುವುದು ಕಷ್ಟಸಾಧ್ಯವೆಂಬ ಅರಿವೂ ಇತ್ತು ಎಂದು ಸ್ಪಷ್ಟವಾಗಿ ತಿಳಿಸಿದನು. ಕೊನೆಗೆ ಸಾಯುವಾಗ 'ಆಗದು ಪಾಂಡವರಂ ಗೆಲಲ್ ಪುರಾತನಪುರುಷಂ ಮುರಾರಿ ಕೆಲದೊಳ್
Page #51
--------------------------------------------------------------------------
________________
೪೬ | ಪಂಪಭಾರತಂ ನಿಲೆ' ಎನ್ನುವನು. ಪಂಪನ ಕೃಷ್ಣನು ಭಗವಂತನೇ ಆದರೂ ಮಾನವನಂತೆಯೇ ಅರ್ಜುನನ ಪರಮಮಿತ್ರನಾಗಿ ಉಚ್ಚರಾಜಕಾರಣಪಟುವಾಗಿ ನಡೆದುಕೊಳ್ಳುತ್ತಾನೆ. ಕೊನೆಗೆ ವಿಬುಧವನಜವನಕಳಹಂಸನಾದ ಧರ್ಮರಾಜನು ಪುರುಷೋತ್ತಮನನ್ನು ಕುರಿತು
ನಿನ್ನ ದಯೆಯಿಂದಂ, ಅರಿನ್ನಪ ರಂ, ನೆರೆ ಕೊಂದೆಮಗೆ ಸಕಳ ರಾಜಶ್ರೀಯುಂ ನಿನ್ನ ಬಲದಿಂದ ಸಾರ್ದುದು
ನಿನ್ನುಪಕಾರಮನದೇತಜಿತೋಳ್ ನೀಗುವೆನೋ ||
ಎಂದು ಅನುನಯವಚನ ರಚನಾಪರಂಪರೆಗಳಿಂದ ಮುಕುಂದನನ್ನು ದ್ವಾರಾವತಿಗೆ ಕಳುಹಿಸಿಕೊಡುತ್ತಾನೆ.
ಅರ್ಜುನನು ಪಂಪಭಾರತದ ಕಥಾನಾಯಕ. ಆದುದರಿಂದಲೇ ಅದಕ್ಕೆ 'ವಿಕ್ರಮಾರ್ಜುನ ವಿಜಯ' ಎಂದು ಕವಿ ನಾಮಕರಣ ಮಾಡಿದ್ದಾನೆ. ಅವನ ಅಪರಾವತಾರನೆಂದು ಭಾವಿಸಿದ ಅರಿಕೇಸರಿಯ ವೀರ್ಯ ಶೌರ್ಯ ಔದಾರ್ಯಗಳನ್ನು ಅದ್ದೂರಿಯಿಂದ ಚಿತ್ರಿಸುವುದಕ್ಕಾಗಿಯೇ ಪಂಪನು ಈ ಕಾವ್ಯವನ್ನು ರಚಿಸಿದುದು. ಆದುದರಿಂದ ಅವನ ಪಾತ್ರರಚನೆಯಲ್ಲಿ ಕವಿತಾಗುಣಾರ್ಣವನು ತನ್ನ ಸರ್ವಶಕ್ತಿಯನ್ನು ವ್ಯಯಮಾಡಿದ್ದಾನೆ. ಎರಡು ಮಕ್ಕಳಾಗಿದ್ದರೂ ಕುಂತಿ ಸರ್ವ ಲಕ್ಷಣಸಂಪನ್ನನಾದ ಮತ್ತೊಬ್ಬನಿಗೆ ಆಸೆಪಡುತ್ತಾಳೆ. ವ್ರತೋಪವಾಸವನ್ನು ಮಾಡುತ್ತಾಳೆ, ಇಂದ್ರನನ್ನು ಪ್ರಾರ್ಥಿಸುತ್ತಾಳೆ. ಇಂದ್ರನು 'ಕುಲಗಿರಿಗಳ ಬಣ್ಣುಮಂ ಧರಾತಳದ ತಿಣ್ಣುಮಂ ಆದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ, ಮದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮಂ, ಈಶ್ವರನ ಪ್ರಭುಶಕ್ತಿಯುಮಂ, ಜವನ ಬಲ್ಲಾಳನಮುಮಂ ಸಿಂಹದ ಕಲಿತನಮುಮಂ ಅವರವರ ದೆಸೆಗಳಿಂ ತೆಗೆದೊಂದುಗೂಡಿಸಿ ಕುಂತಿಯ ಗರ್ಭಪುಟೋದರದೊಳ್ ತನ್ನ ದಿವ್ಯಾಂಶವೆಂಬ ಮುಕ್ತಾಫಲಬಿಂದುವಿನೊಡನೆ ಸಂಕ್ರಮಿಸಿ' ಇಡುತ್ತಾನೆ. ಕುಂತಿಗೆ ಷೋಡಶಸ್ವಪ್ನವಾಗುತ್ತದೆ. ಗ್ರಹಗಳೆಲ್ಲವೂ ತಂತಮುಚ್ಚಸ್ಥಾನಗಳಲ್ಲಿದ್ದ ಶುಭಮುಹೂರ್ತದಲ್ಲಿ ತೇಜೋಮಯನಾದ ಶಿಶುವುದಿಸಿದನು, ದೇವದುಂದುಭಿ ಮೊಳಗಿತು. ಮೂವತ್ತುಮೂಲದೇವರೂ ಇಂದ್ರನೊಡಗೂಡಿ ಜನೋತ್ಸವವನ್ನು ಮಾಡಿ, ಮುಂಡಾಡಿ ನೂರೆಂಟು ನಾಮಗಳಿಂದ ನಾಮಕರಣೋತ್ಸವವನ್ನು ಮಾಡಿದರು. ಭೀಷ್ಮನ ತೋಳ ತೊಟ್ಟಿಲಿನಲ್ಲಿ ಬೆಳೆದನು. ಕುಶಾಗ್ರಬುದ್ದಿಯಾದ ಗುಣಾರ್ಣವನು ಕೃಪಾಚಾರ್ಯನ ಪಕ್ಕದಲ್ಲಿ ಉಳೊದುಗಳನ್ನೆಲ್ಲ ಕಲಿತನು. ದ್ರೋಣಾಚಾರ್ಯರಲ್ಲಿ ಅಭ್ಯಸಿಸಿ ಪಾರಂಗತನಾದನು. ದ್ರುಪದನನ್ನು ಪರಾಭವಿಸಿ ಗುರುದಕ್ಷಿಣೆಯನ್ನಿತ್ತನು. ಅಲ್ಲಿ ಕರ್ಣನ ಪರಿಚಯವಾಯಿತು. ಹಾಗೆಯೇ ಅವನೊಡನೆ ಸ್ಪರ್ಧೆಯೂ ಪ್ರಾರಂಭವಾಯಿತು. ಕೆಲಕಾಲ ಸಹೋದರರೊಡನೆ ವಾರಣಾವತದಲ್ಲಿ ಸುಖವಾಗಿ ವಾಸಿಸಿದನು. ಅರಗಿನ ಮನೆಯ ಪ್ರಸಂಗದಿಂದ ಬೇರೆ ಬೇರೆ ಕಡೆಯಲ್ಲಿದ್ದು ಛತ್ರಪತಿ ಪುರದಲ್ಲಿ ಮತ್ಯಭೇದನದಿಂದ ಬ್ರೌಪದಿಯನ್ನು ವರಿಸಿದನು. ಅಲ್ಲಿಂದ ಮುಂದೆ ಪಂಪನು ಭಾರತದ ಬಹುಭಾಗವನ್ನು
Page #52
--------------------------------------------------------------------------
________________
ಉಪೋದ್ಘಾತ / ೪೭ ಅವನ ಪ್ರಶಂಸೆಗಾಗಿಯೇ ಮೀಸಲಾಗಿಸಿದ್ದಾನೆ. ಸುಭದ್ರಾಹರಣ, ಖಾಂಡವದಹನ, ಇಂದ್ರಕೀಲಗೋಗ್ರಹಣ, ಸೈಂಧವವಧೆ, ಕರ್ಣಾರ್ಜುನರ ಯುದ್ಧಪ್ರಕರಣಗಳಲ್ಲಿ ಅವನ ಸಾಹಸಪರಾಕ್ರಮಗಳು ಅದ್ಭುತವಾಗಿ ವರ್ಣಿತವಾಗಿವೆ. ಇತಿಹಾಸವ್ಯಕ್ತಿಯಾದ ಅರಿಕೇಸರಿಯ ಪ್ರಶಂಸೆಯೇ ಪ್ರಧಾನವಾದ ಗುರಿಯಾದುದರಿಂದ ಅವನ ಪ್ರತಿನಿಧಿಯಾದಪೂರ್ವಾವತಾರವಾದ ಇವನನ್ನು ಅವನ ಬಿರುದು ಬಾವಲಿಗಳಿಂದಲೇ ಸಂದರ್ಭ ಸಿಕ್ಕಿದಾಗಲೆಲ್ಲ ಕವಿ ಹೊಗಳುತ್ತಾನೆ. ಗ್ರಂಥಾದಿಯ ನಾಂದಿ ಪದ್ಯಗಳಲ್ಲಿ ಆಶ್ವಾಸದ ಆದಿ ಅಂತ್ಯ ಪದ್ಯಗಳಲ್ಲಿ ಅವನ ಶ್ಲಾಘನರೂಪವಾದ ವಿಷಯಗಳೇ ಉಕ್ತವಾಗಿವೆ. ಆಚಾರ್ಯರಾದ ದ್ರೋಣರೂ ಪಿತಾಮಹರಾದ ಭೀಷ್ಮರೂ ಅವನನ್ನು ಜಯಿಸುವುದು ಅಸಾಧ್ಯವೆನ್ನುತ್ತಾರೆ. ಅವನಿಗೆ ಗುರುಹಿರಿಯರಲ್ಲಿದ್ದ ವಿಧೇಯತೆ ಬಹು ಶ್ಲಾಘನೀಯವಾದುದು. ಅಣ್ಣನ ಮಾತಿನ ಪ್ರಕಾರ ದುರ್ಯೊಧನನನ್ನು ಗಂಧರ್ವನಿಂದ ಬಿಡಿಸಿ ತರುತ್ತಾನೆ. ಕರ್ಣ ದುರ್ಯೊಧನಾದಿಗಳಿಗೂ ಅವನ ಪರಾಕ್ರಮ ತಿಳಿಯದ ವಿಷಯವಲ್ಲ. ತಮ್ಮ ಕಡೆಯವರಿಗೆ ಆಪತ್ತೊದಗಿದಾಗಲೆಲ್ಲ ಅದನ್ನು ಪರಿಹಾರ ಮಾಡುವವನು ಅವನೇ. ಅವನ ಶಕ್ತಿಸಾಮರ್ಥ್ಯಗಳನ್ನು ಅರಿಯದವರಿಲ್ಲ, ಅವನಿಗೆ ದೈವಾನುಗ್ರಹ ಪೂರ್ಣವಾಗಿದೆ. ಇಂದ್ರನು ಅವನಿಗಾಗಿ ಕರ್ಣನಿಂದ ಕವಚಕುಂಡಲಗಳನ್ನು ಕಸಿದುಕೊಂಡ. ತನ್ನ ಗಂಟಲನ್ನಿಕ್ಕಿದರೂ ಶಿವನು ಇವನಿಗೆ ಪಾಶುಪತಾಸ್ತವನ್ನು ಇತ್ತನು. ಗೌರಿಯು ತಲ್ಲಟಿಯಾಗಿ ಅಂಜಲಿಕಾಸ್ತ್ರವನ್ನೂ ಕೊಟ್ಟಳು. ಇಂದ್ರನು ಅರ್ಧಾಸನವನ್ನಿತ್ತು ರಾಕ್ಷಸರ ಸಂಹಾರಕ್ಕೆ ಅವನ ನೆರವನ್ನು ಪಡೆದನು. ಅಗ್ನಿ ಅವನಿಂದ ಖಾಂಡವ ವನವನ್ನಪೇಕ್ಷಿಸಿ ತೃಪ್ತಿ ಪಡೆದನು. ಅವನ ಸೌಂದರ್ಯವು ಅತ್ಯಂತ ಮೋಹಕವಾದುದು. ರಂಭಾದಿ ದೇವವೇಶ್ಯಯರೂ ಅವನಿಗೆ ಸೋಲುತ್ತಾರೆ. ಆದರೆ ತನ್ನ ಶೌಚಗುಣದಿಂದ ಅವರ ಬಲೆಗೆ ಬೀಳದೆ ರಂಭೆಯಿಂದ ಶಾಪವನ್ನು ಪಡೆದರೂ ತನಗೆ ಅನುಕೂಲವಾದ ಸಂದರ್ಭದಲ್ಲಿ ಅದನ್ನು ಉಪಯೋಗಿಸಿಕೊಳ್ಳುತ್ತಾನೆ. ಮೊದಲಿನಿಂದ ಕೊನೆಯವರೆಗೆ ಪೂರ್ವಜನ್ಮದಲ್ಲಿ ನರ ನಾರಾಯಣರ ಸಂಬಂಧವನ್ನು ಪಡೆದಿದ್ದ ಮುಕುಂದನು ಅವನಿಗೆ ಪ್ರೇರಕನೂ ಪೋಷಕನೂ ಆಗಿ ಅವನ ಪೆಂಪನ್ನು ಪೂರ್ಣವಾಗಿ ಪ್ರದರ್ಶಿಸಿ ಯುದ್ದಾಂತ್ಯದಲ್ಲಿ ಧರ್ಮರಾಯನು ಅರ್ಜುನನನ್ನು ಕುರಿತು
ಪ್ರಾಯದ ಪಂಪ ಪಂಪು, ಎಮಗೆ ಮೀಟಿದರಂ ತವ ಕೊಂದ ಪೆಂಪು, ಕ. ಟ್ಯಾಯದ ಪಂಪು, ಶಕ್ರನೊಡನೆಳೆದ ಪೆಂಪಿವು ಹೆಂಪುವೆತ್ತು ನಿ ಟ್ನಾಯುಗಳಾಗಿ ನಿನ್ನೊಳಮರ್ದಿದರ್ುವು, ನೀಂ ತಲೆವೀಸದೆ, ಉರ್ವರಾ ಶ್ರೀಯನಿದಾಗದು ಎನ್ನದೆ ಒಳಕೊಳ್ ಪರಮೋತ್ಸವದಿಂ ಗುಣಾರ್ಣವಾ ||
ಎಂದಾಗ ದೇವಕೀಪುತ್ರನು “ಅಶೇಷಧರಾಭಾರಮಂ ಶೇಷಂ ತಾಳುವಂತೆ ವಿಕ್ರಮಾರ್ಜುನಂಗಲ್ಲದೆ ಪೆಲಿಂಗೆ ತಾಳಲರಿದು; ಇದರ್ಕಾನುಮೊಡಂಬಡುವೆನ್' ಎಂದು ಹೇಳಿ ಅವನ ಪಟ್ಟಾಭಿಷೇಕಕಾರ್ಯವನ್ನು ತನ್ನ ಮೇಲ್ವಿಚಾರಣೆಯಲ್ಲಿಯೇ ನಡೆಸುವನು. ಪಂಪನು ವಿಕ್ರಮಾರ್ಜುನನ ಪಾತ್ರವನ್ನು ಅದ್ಭುತವಾದ ರೀತಿಯಲ್ಲಿ ಚಿತ್ರಿಸಿ ಕಾವ್ಯದ ನಾಮವಾದ 'ವಿಕ್ರಮಾರ್ಜುನ ವಿಜಯ'ವೆಂಬುದನ್ನು ಸಾರ್ಥಕವನ್ನಾಗಿಸಿದ್ದಾನೆ.
Page #53
--------------------------------------------------------------------------
________________
೪೮ / ಪರಿಪಭಾರತಂ
ಹಾಗೆಂದ ಮಾತ್ರಕ್ಕೆ ಅವನಷ್ಟು ಪ್ರಧಾನವಾದ ಇತರ ಪಾತ್ರಗಳಿಗೆ ಪಂಪನು ಸೂಕ್ತಸ್ಥಾನವನ್ನು ದೊರಕಿಸಿಲ್ಲವೆಂದು ತಿಳಿಯಬೇಕಿಲ್ಲ. ಭಾರತದ ಕಥೆಯಲ್ಲಿ ಅರ್ಜುನನಷ್ಟೆ ಪ್ರಾಶಸ್ತ್ರವುಳ್ಳವನು ಭೀಮಸೇನ. ಕೆಲವೆಡೆಗಳಲ್ಲಿ ಅವನ ಪಾತ್ರ ಅರ್ಜುನನಿಗಿಂತ ಹೆಚ್ಚು ಉಜ್ವಲವಾಗಿದೆ. ವಾಸ್ತವವಾಗಿ ಭಾರತಯುದ್ಧ ಮುಗಿದು ಪಾಂಡವರಿಗೆ ರಾಜ್ಯಪ್ರಾಪ್ತಿಯಾಗುವುದು, ದುರ್ಯೊಧನನ ಊರುಭಂಗ ಕಿರೀಟಭಂಗ ಪ್ರತಿಜ್ಞೆಗಳನ್ನು ಪೂರ್ಣ ಮಾಡುವುದರಿಂದ, ಅದು ಪೂರ್ಣವಾಗುವುದು ಭೀಮನಿಂದ. ಆದುದರಿಂದ ಪಂಪನು ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಭೀಮನ ಪೌರುಷಪ್ರದರ್ಶನದ ಸನ್ನಿವೇಶಗಳನ್ನೆಲ್ಲ ಪ್ರಭಾವಶಾಲಿಯಾಗುವ ಹಾಗೆ ವರ್ಣಿಸಿದ್ದಾನೆ. ಲಾಕ್ಷಾಗೇಹದಾಹ, ಹಿಡಿಂಬಾಸುರವಧೆ, ದ್ಯೋತಪ್ರಸಂಗದಲ್ಲಿನ ಭೀಷ್ಮಪ್ರತಿಜ್ಞೆ ಕೀಚಕವಧೆ, ಭಗದತ್ತ ಯುದ್ಧ ಸುಪ್ರತೀಕವಧೆ, ಜರಾಸಂಧವಧೆ, ದುಶ್ಯಾಸನ ರಕ್ತಪಾನ, ದುರ್ಯೊಧನನ ಊರುಭಂಗ, (ಗದಾಯುದ್ದ ವೇಣೀ ಸಂಹಾರ ಮೊದಲಾದೆಡೆಗಳಲ್ಲಿ ಅವನ ಸಾಹಸ ಎದ್ದು ಕಾಣುವುದು. ಅವನ್ನು ಓದುತ್ತಿರುವಾಗ ನಾವು 'ವಿಕ್ರಮಾರ್ಜುನ ವಿಜಯ' ವನ್ನೋದುತ್ತಿದ್ದೇವೆ ಎಂಬ ಅರಿವೇ ಮರೆವಾಗುವುದು.
ಭೀಮಾರ್ಜುನರ ಪಾತ್ರಗಳ ರಚನೆಯಲ್ಲಿ ಪಂಪನು ಅಷ್ಟು ಶ್ರಮಪಟ್ಟಿರುವಂತೆ ಕಾಣುವುದಿಲ್ಲ. ಏಕೆಂದರೆ ಈ ಪಾತ್ರಗಳ ವಿಷಯದಲ್ಲಿ ಮೂಲ ಭಾರತದಲ್ಲಿಯೇ ಸರಿಯಾದ ಸೌಷ್ಟವವಿದೆ. ದೈವಬಲವೂ ಅವರ ಕಡೆಯೇ ಇದೆ. ಧರ್ಮವೂ ಅವರನ್ನೇ ಆಶ್ರಯಿಸಿದೆ. ಅರ್ಜುನನಿಗೆ ಹೋಲಿಸಿರುವ ಅರಿಕೇಸರಿರಾಜನು ವೀರನೇ ಅಹುದು, ಮೂಲಭಾರತ ದಲ್ಲಿರುವಂತೆ ಇಲ್ಲಿಯ ಭೀಮಾರ್ಜುನರೂ ಆಗಾಗ ಕೃಷ್ಣನ ಬೆಂಬಲಕ್ಕೆ ಕಾಯುತ್ತ ಧರ್ಮದ ಹೆಸರಿನಲ್ಲಿ ಅಧರ್ಮದಲ್ಲಿಯೂ ಕಾಲಿಡುವುದುಂಟು. ಆಗ ಅವರು ವಾಚಕರ ಅಸಮ್ಮತಿಗೂ ಪಾತ್ರವಾಗುವ ಸಂಭವವುಂಟು. ಆಗ ಅವರಲ್ಲಿ ನಮ್ಮ ಪೂರ್ಣಸಹಾನುಭೂತಿ ಯಿರುವುದಿಲ್ಲ.
ಪ್ರತಿನಾಯಕರಾದ ಕರ್ಣ ದುರ್ಯೋಧನರು ಪಂಪನ ಹೃದಯವನ್ನು ಸೂರೆಗೊಂಡಿದ್ದಾರೆ. ಪಂಪನು ಅವರ ಪೌರುಷಕ್ಕೆ ಮೆಚ್ಚಿದ್ದಾನೆ. ಅವರ ದುಃಸ್ಥಿತಿಗೆ ಮರುಗಿದ್ದಾನೆ, ಸಹಾನುಭೂತಿಯಿಂದ ಕಣ್ಣೀರುಗರೆದಿದ್ದಾನೆ. ಅದರಲ್ಲಿಯೂ ಕರ್ಣನ ಸನ್ನಿ, ತ್ಯಾಗ, ಅಣುಗಳನ್ನು ಅತ್ಯತಿಶಯವಾಗಿ ಪ್ರಶಂಸಿಸಿದ್ದಾನೆ. ಅವನ ದೃಷ್ಟಿಯಲ್ಲಿ ಕರ್ಣನ ದುರಂತಕಥೆಯೆ ಭಾರತ, ಅದನ್ನೇ ಅವನು 'ಕರ್ಣಂಗೊಂಡಿತ್ತು ದಲ್ ಭಾರತಂ' ಎಂಬ ಅರ್ಜುನನ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾನೆ. ಕರ್ಣನಲ್ಲಿ ತನಗಿರುವ ಬಹು ಉಚ್ಚಭಾವವೂ ಸಹಾನುಭೂತಿಯೂ ವಾಚಕರಲ್ಲಿ ನಿರರ್ಗಳವಾಗಿ ಕೋಡಿವರಿವಂತೆ ಅವನ ಪಾತ್ರವನ್ನು ಚಿತ್ರಿಸಿದ್ದಾನೆ.
ಕರ್ಣನ ಕಥೆ, ಕರುಣದ ಕಥೆ. ಅವನೊಬ್ಬ ದುರಂತವ್ಯಕ್ತಿ. ಬಾಲೆಯೊಬ್ಬಳ ಹುಡುಗಾಟದ ಅವಿವೇಕದ ಫಲವಾಗಿ ಕರ್ಣನು ಜನಿಸಿದನು. ಕೊಡಗೂಸುತನದ ಭಯದಿಂದ ತಾಯಿ ನಿಧಾನಮನೀಡಾಡುವಂತೆ ಕೈಯ ಕೂಸನ್ನು ಗಂಗೆಯಲ್ಲಿ ಈಡಾಡಿದಳು.
Page #54
--------------------------------------------------------------------------
________________
ಉಪೋದ್ಘಾತ | ೪೯ ಗಂಗಾದೇವಿ ಆ ಕೂಸನ್ನು ಮುಳುಗಲೀಯದೆ ತನ್ನ ತೆರೆಗೈಗಳಿಂದ ದಡವನ್ನು ಸೇರಿಸಿದಳು. ಸೂತನೊಬ್ಬನದನ್ನು ಕಂಡು ನಿಧಿ ಕಂಡವನಂತೆ ಸಂತೋಷಿಸಿ ಎತ್ತಿ ಸಲಹಿದ ಆ ಮಗುವಿಗೆ ಸುಷೇಣ, ಕರ್ಣನೆಂಬ ಅನ್ವರ್ಥನಾಮಗಳಾದುವು. ಸೂತಪುತ್ರನಾಗಿಯೇ ಬೆಳೆದನಾದರೂ ಆತನ ಚಾಗದ ಬೀರದ ಮಾತು ದೇವೇಂದ್ರನನ್ನು ಮುಟ್ಟಿತು. ಮುಂದೆ ಅರ್ಜುನನಿಗೂ ಅವನಿಗೂ ಒದಗುವ ದ್ವಂದ್ವಯುದ್ಧವನ್ನು ದಿವ್ಯಜ್ಞಾನದಿಂದ ತಿಳಿದು ಮಗನ ಸಹಾಯಕ್ಕಾಗಿ ಅವನೊಡನೆ ಹುಟ್ಟಿದ ಕವಚಕುಂಡಲಗಳನ್ನು ಇಂದ್ರನು ಯಾಚಿಸಿದನು. ತಾನೆ 'ಕೊಳ್ಳೆಂದರಿದೀಡಾಡಿದನಿಂದ್ರಂಗೆ ರಾಧೇಯಂ' ಬಳಿಕ ರೇಣುಕಾನಂದನನಲ್ಲಿ ವಿದ್ಯಾಪಾರಂಗತನಾದ. ಅಲ್ಲಿಯೂ ಇಂದ್ರನ ಕುತಂತ್ರದಿಂದ ಕರ್ಣನಿಗೆ ಹಿಂಸೆಯಾಯಿತು. ಶಾಪಹತನಾಗಿ ಹಿಂತಿರುಗಿದ. ದ್ರೋಣಾಚಾರ್ಯರ ಅಸ್ತವಿದ್ಯಾಶಿಕ್ಷಣದ ವೈಭವವು ಅವನ ಕಿವಿಗೂ ಬಿದ್ದಿತು. ಕೌರವರ್ಗೆಲ್ಲಂ ಪ್ರಾಣಂ ಬರ್ಪಾಕೃತಿಯೊಳೆ ಬಾಣಾಸನ ಬಾಣಪಾಣಿ ಕರ್ಣ ಅಲ್ಲಿಗೆ ಹೋದ. ವಿಕ್ರಮಾರ್ಜುನನಿಗೂ ಇವನಿಗೂ ಸೆಣಸು ಮೊದಲಾಯಿತು. ಒಂದು ದಿನ ಬಾಲಕರ ವಿದ್ಯಾಪರೀಕ್ಷಣದ ಸಂದರ್ಭದಲ್ಲಿ ಕರ್ಣನೂ ಶರಪರಿಣತಿಯಿಂದ ಅತಿರಥಮಥನನೊಡನೆ ಸ್ಪರ್ಧಿಸಿದ. ಆಗ ದ್ರೋಣ ಕೃಪಾಚಾರ್ಯರು ಮಧ್ಯೆ ಬಂದು “ನಿನ್ನ ತಾಯ ತಂದೆಯಂ ಭಾವಿಸದೆ ಕರ್ಣ ನುಡಿವಂತೆ ಆವುದು ಸಮಕಟ್ಟು ನಿನಗಂ ಅರಿಕೇಸರಿಗಂ' ಎಂದು ಅವನ ಕುಲವನ್ನು ಅವಹೇಳನ ಮಾಡಿದರು. ದುರ್ಯೋಧನನಿಗೆ ಅದು ಸಹಿಸಲಿಲ್ಲ. 'ಕುಲಮೆಂಬುದುಂಟೆ, ಬೀರಮೆ ಕುಲಮಲ್ಲದೆ, ಕುಲಮನಿಂತು ಪಿಕ್ಕದಿರಿಂ, ಈಗಳೆ ಕುಲಜನಂ ಮಾಡಿ ತೋರ್ಪೆನ್' ಎಂದು ಅವನಿಗೆ ಅಂಗರಾಜ್ಯಾಭಿಷೇಕವನ್ನು ಮಾಡಿ ಕರ್ಣನನ್ನು ಕುರಿತು “ನೀನೆನಗೊಂದನೀಯಲ್ವೆಟ್ಟುದು'
ಪೊಡಮಡುವರ್, ಜೀಯ ಎಂಬರ್ ಕುಡು, ದಯೆಗೆಯ್, ಏಂ ಪ್ರಸಾದಂ, ಎಂಬಿವು ಪೆರೋಲ್ ನಡೆಗೆ, ಎಮ್ಮ ನಿನ್ನ ಯೆಡೆಯೊಳ್ ನಡೆಯಲ್ವೇಡ, ಎನಗೆ ಕೆಳೆಯನ್ನೆ ರಾಧೇಯ 1 ಎಂದು ಬೇಡಿಕೊಂಡ. ಮುಂದೆ ಅವರ ಮೈತ್ರಿ ಅನ್ಯಾದೃಶವಾಯಿತು. ಕರ್ಣನ ಸ್ವಾಮಿಭಕ್ತಿಯೂ ಕೊನರಿ ಮೊಗ್ಗಾಯ್ತು. ಈ ಮಧ್ಯೆ ಕೌರವ ಪಾಂಡವರ ದ್ವೇಷ ಬೆಳೆದು ವನವಾಸ ಅಜ್ಞಾತವಾಸಗಳು ಮುಗಿದುವು. ಕೃಷ್ಣನ ಸಂಧಿಯ ಪ್ರಯತ್ನವೂ ವಿಫಲವಾಯಿತು. ಇಲ್ಲಿಂದ ಮುಂದೆ ಈಗಾಗಲೇ ತಲೆದೋರಿದ್ದ ಕರ್ಣನ ದುರಂತತೆ ಇಮ್ಮಡಿಯಾಯಿತು. ಸಾಮೋಪಾಯವು ಸಾಗದಿರಲು ಕೃಷ್ಣನು ಕರ್ಣನನ್ನು ಭೇದಿಸಲು ಅವನ ಮನೆಗೇ ಬಂದು ರಥದಿಂದಿಳಿದು ಅವನನ್ನು ಬಹು ಸ್ನೇಹದಿಂದ ಸಂಬೋಧಿಸಿ ಸ್ವಲ್ಪ ದೂರ ದಾರಿ ಕಳುಹಿಸಿ ಬರುವೆಯಂತೆ ಬಾ ಎಂದು ಕರೆದುಕೊಂಡು ಹೋಗಿ ಏಕಾಂತವಾಗಿ ಒಂದು ಕಡೆ ನಿಂತು
ಭೇದಿಸಲೆಂದೆ ದಲ್ ನುಡಿದರ್ ಎನ್ನದಿರು, ಒಯ್ಯನೆ ಕೇಳ ಕರ್ಣ ನಿ ನಾದಿಯೊಳಬ್ಬೆ ಕೊಂತಿ, ನಿನಗಮ್ಮನ್ ಅಹರ್ಪತಿ, ಪಾಂಡುನಂದನರ್ ಸೋದರರ್, ಎಯ್ದ ಮಯುನನೆ ನಾನ್, ಪೆಜತೇನ್ ಪಡೆಮಾತೊ ನಿನ್ನದೀ | ಮೇದಿನಿ, ಪಟ್ಟಮುಂ ನಿನತೆ, ನೀನಿರೆ ಮತ್ತೆ ಪೆಜರ್ ನರೇಂದ್ರರೇ?11
Page #55
--------------------------------------------------------------------------
________________
೫೦ | ಪಂಪಭಾರತಂ
ದುರ್ಯೊಧನನು ಈ ವೃತ್ತಾಂತವನ್ನು ಸತ್ಯಂತಪರೆಂಬ ದಿವ್ಯಜ್ಞಾನಿಗಳಿಂದ ತಿಳಿದು 'ಪಾಟಿಸುವೆನ್, ಒಯ್ಯನೆ ಮುಳೊಳೆ ಮುಳ್ಳನೆಂದು ತಾನ್ ಈ ನಯದಿಂದೆ ಪೆರ್ಚಿ ಪೊರೆದುಕೊಳಂದೊಡನುಂಡನಲ್ಲವೆ?' ಎಂದು ವಿಷಬೀಜವನ್ನು ಬಿತ್ತಿದನು. ಕರ್ಣನಿಗೆ ಎಂತಹ ಧರ್ಮಸಂಕಟ! ಸ್ವಲ್ಪ ಮನಸ್ಸನ್ನಿಳಿಸಿದ್ದರೆ ಭಾರತದ ಗತಿ ಹೇಗೆ ತಿರುಗುತ್ತಿತ್ತು! ಕರ್ಣನೆಂದಿಗೂ ಜಗ್ಗುವವನಲ್ಲ. ಅವನಲ್ಲಿ ಸಂತೋಷವೂ ದುಃಖವೂ ಏಕಕಾಲದಲ್ಲಿ ತಲೆದೋರಿದುವು. 'ಏಕೆ ಪೇಳ್ವೆರೊ' ಸುಯೋಧನನ್, ಎನಗೊಳಿದ ಕೃತಮಂ ಪೆವಿಗಿಕ್ಕಿ ನೆಗ ಮಾಸೆ ನಣ್ಣಿನ ನೆಪದಿಂದ ಪಾಂಡವರನ್, ಆನ್ ಒಳಪೊಕ್ಕೊಡೆ ನೀಮೆ ಪೇಸಿರೇ?” “ಭೂಪೋತ್ತಮನಂ ಬಿಸುಟ್ಟು ಇರದೆ ನಿಮೊಳೆ ಪೊಕ್ಕೊಡೆ ಬೇಡನಲ್ಲನೇ'? ಎಂದು ಖಡಾಖಂಡಿತವಾಗಿ ತಿಳಿಸಿ ತನ್ನಲ್ಲಿಯೇ 'ಕುರುಪತಿಗಿಲ್ಲ ದೈವಬಲಂ, ಸೋದರರನೆಂತು ಕೊಲ್ವೆಂ? ಅಲ್ಕತೊಳೆನ್ನಂ ಪೊರೆದು ಎಯ್ದೆ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ? ಎನ್ನೊಡಲಂ ನಾಂ ತವಿಪೆಂ'. ಈ ಇಬ್ಬಗೆಯಾದ ಸಮಸ್ಯೆಯೂ ಈ ಕಠಿಣ ನಿರ್ಧಾರವೂ ಭಾರತದಲ್ಲಿ ಮತ್ತಾರಿಗೂ ಇಲ್ಲ. ದುದ್ಯೋಧನನ ಪಕ್ಷೀಯರಲ್ಲನೇಕರು ಉಪ್ಪಿನ ಋಣಕ್ಕಾಗಿ ಶರೀರವನ್ನು ಒಡೆಯನಿಗೆ ಒತ್ತೆಯಿಟ್ಟು ಹೃದಯವನ್ನು ಪಾಂಡವರಿಗೆ ಧಾರೆಯೆರೆದಿದ್ದರು. ರಾಜನು ಆಕ್ಷೇಪ ಮಾಡಿದಾಗ ಭರದಿಂದ ಕಾದಿದರೂ ಅವರ ಸಹಾಯದಿಂದಲೇ ಪಾಂಡವರು ಜಯಶಾಲಿಗಳಾದರು; ಕರ್ಣನದು ಹಾಗಲ್ಲ. ಸ್ವಾಮಿಭಕ್ತಿಗೂ ಕರ್ತವ್ಯನಿಷ್ಠೆಗೂ ಸೋದರಪ್ರೇಮಕ್ಕೂ ಮಧ್ಯೆ ನಡೆದ ಹೋರಾಟ, ವಿಧಿಯೇ ಉದ್ದೇಶಪೂರ್ವಕವಾಗಿ ಆ ಸ್ಥಿತಿಯನ್ನು ತಂದೊಡ್ಡಿತೆಂದು ಕಾಣುತ್ತದೆ. ಕರ್ಣವಧಾನಂತರ ಪಾಂಡವರು ದುಃಖ ಪಡುವಾಗ ಹೇಳುವಂತೆ ಮೊದಲೇ ಅವರಿಗೆ ಅವನ ಸಂಬಂಧ ತಿಳಿಸಿದ್ದರೆ ಅವನನ್ನೇ ರಾಜನನ್ನಾಗಿ ಮಾಡಿ ತಾವು ಅವನ ಸೇವೆ ಮಾಡಲು ಸಿದ್ದರಾಗಿದ್ದರು. ದುಧನ ನಾದರೋ ಅದಕ್ಕಿಂತಲೂ ಮಿಗಿಲಾಗಿ ಧರಾತಳಮಂ ಅವನಿಗಿತ್ತು ಅವನು ಕೊಟ್ಟಿದ್ದನ್ನು ಪ್ರಸಾದವೆಂದು ಸ್ವೀಕರಿಸಿ ಮನೋಮುದದಿಂದ ಇರಬೇಕೆಂದಿದ್ದ. ವಿಧಿಯು ಅದಕ್ಕೆ ಅವಕಾಶ ಕೊಡಲಿಲ್ಲ. ಇಲ್ಲದ ತೊಡಕುಗಳನ್ನು ತಂದೊಡ್ಡಿ ಅವನನ್ನೇ ಆಹುತಿಯನ್ನಾಗಿ ತೆಗೆದುಕೊಂಡಿತು.
ಕೃಷ್ಣನು ಅಲ್ಲಿಗೇ ಬಿಡಲಿಲ್ಲ. ಕುಂತಿಯನ್ನು ಕರ್ಣನಲ್ಲಿಗೆ ಕಳುಹಿಸಿದ, ಅವಳು ಬಂದು ನಿನ್ನನುಜರ್ ನಿನ್ನಂ ಬೆಸಕೆಯ್ಯ ನೀನೆ ನೆಲನನಾಳ್ವುದು ಕಂದ' ಎಂದು ಬೇಡಿದಳು. ತಂದೆಯಾದ ದಿನಪನು ಬಂದು 'ಅಂದಿನಂತೆ ಇಂದೂ ಮೋಸ ಹೋಗಬೇಡ.' ಎಂದು ಎಚ್ಚರಿಸಿದ. ಕರ್ಣನಾದರೋ ಮುಗುಳಗೆ ನಕ್ಕು
ಪಾಟಿಯನೊಕ್ಕು, ಆಳನ ಗೆಯ್ದ ಸತ್ಯ ತಮುಮಂ ಪಿಂತಿಕ್ಕಿ ಜೋಳಕ್ಕೆ ತ ಪಿಯುಂ, ಇನ್ ಬಾಟ್ಟುದೆ? ಪೂಣ್ಣು ನಿಲ್ಲದಿಕೆಯಂ ಬಾಳ್ವಿಂತು ವಿಖ್ಯಾತ ಕೀ ರ್ತಿಯವೊಲ್, ಈಯೊಡಲ್, ಅಬ್ಬೆ ಪೇಟೆಂ ಎನಗೇಂ ಕಲ್ಪಾಂತರಸ್ಥಾಯಿಯೇ ಮೀಂಗುಲಿಗನಾಗಿಯುಂ, ಅಣಂ, ಆ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ ದಂಗೆನಗೆ ಬಿಸುಡಲಕ್ಕುಮೆ ನೀಂ ಗಳ ಪಂಚಲನೆ ಬಿಸುಡಿಂ, ಇನ್ ಎನ್ನೆಡೆಯೊಳ್
Page #56
--------------------------------------------------------------------------
________________
ಉಪೋದ್ಘಾತ | ೫೧ ಪಿಡಿಯಂ ಪುರಿಗಣೆಯಂ ನರನ್, ಎಡೆಗೊಂಡೊಡಂ, ಉಟದ ನಿನ್ನ ಮಕ್ಕಳನ್, ರ್ಇ, ಏ ರ್ದೊಡಂ ಅಟಿಯಂ ಪರ್ಜಸಮನೆ
ಪಿಡಿದು, ಎನ್ನನೆ ರಣದೊಳ್, ಅಚವೆಂ ಇರದಡಿಯಂ
ಎಂತಹ ನಿರ್ಧಾರ! ಮುಂದೆ ಯುದ್ಧವೇ ಕೈಗಟ್ಟಿತು. ಕರ್ಣನ ಸ್ವಾಮಿನಿಷ್ಠೆ ಸ್ವಲ್ಪವೂ ಸಡಿಲವಾಗಲಿಲ್ಲ. ಕುರುಕುಲಪಿತಾಮಹರಾದ ಭೀಷ್ಮರಿಗೆ ಪ್ರಥಮ ಸೇನಾಪಟ್ಟಾಭಿಷೇಕ ವಾಯಿತು. ಕರ್ಣನಿಗೆ ಆ ವಿಷಯದಲ್ಲಿ ಬಹಳ ಅಸಮಾಧಾನ. ಅವರು ಈ ಕಾವ್ಯದಲ್ಲಿ ಮನಸ್ಸು ಮಾಡುವುದಿಲ್ಲವೆಂದು, ಸ್ವಾಮಿಗೆ ಜಯ ಲಭಿಸುವುದಿಲ್ಲವೆಂದು ಅವನ ಸಂದೇಹ.
ಆದಿಯೊಳವರುಂ ಪಿರಿದೊಂ ದಾದರದಿಂ ನಡಸಿದ, ಅಜ್ಜರಪ್ಪರ್, ಅದಳೆಂದಂ ಕಾದರ್, ಇವರವರೋ, ಅವರುಂ
ಕಾದ ನೆರೆದಿವರೋಳ್...... - ಸತ್ಯವನ್ನು ಮರೆಮಾಚುವುದರಿಂದೇನು ಪ್ರಯೋಜನ! ಸ್ವಾಮಿಹಿತಕ್ಕೆ ಭಂಗಬಂದರೆ ಕರ್ತವ್ಯಪರಾಜುಖನಾದ ಹಾಗಾಗಲಿಲ್ಲವೇ? ಆದುದರಿಂದ ಧೈಯ್ಯದಿಂದಲೇ ಕರ್ಣನು “ಗುರುಗಳಂ ಕುಲವೃದ್ಧರಂ ಆಜಿಗುಯ್ದು ಕೆಮ್ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ, ಪಗೆವರ ನಿಟೈಲ್ವಂ ಮುಲೆವೊಡೆನಗೆ ಪಟ್ಟಂಗಟ್ಟಾ' ಎಂದು ನಿಸ್ಸಂಕೋಚದಿಂದ ಹೇಳುತ್ತಾನೆ.
- ದ್ರೋಣಾಚಾರರು ಕರ್ಣನ ಹೃದಯವನ್ನು ಅರಿಯಲಿಲ್ಲ. ಕುಲಜರೂ ಭುಜಬಲಯುತರೂ ಆದ ಭೀಷರನ್ನು ಹೀಗೆ ತೆಗಳಿದನಲ್ಲಾ ಎಂದು ಕುಲಜರಂ.... ಈ ಸಭಾಮಧ್ಯದೊಳಗ್ಗಲಿಸಿದ ಮದದಿಂ ನಾಲಗೆ ಕುಲಮಂ ತುಬ್ಬುವವೋಲ್ ಉಳಿದೆ ನೀಂ ಕೆಡೆನುಡಿದೆ' ಎಂದು ಅವನ ಕುಲದ ವಿಷಯವಾಗಿ ಕೆಣಕಿದರು. ಕರ್ಣನಿಗೆ ರೇಗಿಹೋಯಿತು.
ಕುಲಮನೆ ಮುನ್ನ, ಉಗ್ಗಡಿಪಿರೇಂ ಗಳ, ನಿಮ್ಮ ಕುಲಂಗಳಾಂತು ಮಾ ರ್ಮಲೆವರನ್, ಅಟ್ಟಿ ತಿಂಬುವ, ಕುಲಂ ಕುಲಮಲ್ತು ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣು ಕುಲಂ ಬಗವಾಗಳೀಗಳ ಈ ಕಲಹದೊಳಣ್ಣ ನಿಮ್ಮ ಕುಲಂ, ಆಕುಲಮಂ, ನಿಮಗುಂಟುಮಾಡುಗುಂ ||
ಗಂಗಾಸುತಂ ಪೃಥಾಸುತ ರಂ ಗೆಲ್ಗೊಡೆ ತಪಕೆ ಪೋಪನ್, ಅವರ್ಗಳ ಕೈಯೊಳ್ ಗಾಂಗೇಯನ್, ಅಟೆದೂಡ, ಆಂತರನ್,
ಆಂ ಗೆಲೆ ತಳ್ಳಿದೆವೆನ್, ಅನ್ನೆಗಂ ಬಿಲ್ವಡಿಯಂ. ಎಂದು ಪ್ರತಿಜ್ಞೆ ಮಾಡುವನು. ಭೀಷ್ಮರೇನು ಸಾಮಾನ್ಯರೇ ? ಮುದಿಸಿಂಹ, ಅನನ್ಯ ಸಾಮಾನ್ಯವಾದ ಅನುಭವ. ಸ್ವಲ್ಪವೂ ಉದ್ರೇಕಗೊಳ್ಳದೆ ನಿಧಾನದಿಂದ
Page #57
--------------------------------------------------------------------------
________________
೫೨ | ಪಂಪಭಾರತಂ
ಕಲಿತನದುರ್ಕು, ಜವ್ವನದ ಸೊರ್ಕು, ನಿಜೇಶನ ನಚ್ಚು ಮಿಕ್ಕ ತೋ ಛಲದ ಪೊಡರ್ಪು ಕರ್ಣ ನಿನಗುಳನಿತು, ಏನ್, ಎನಗುಂಟೆ, ಭಾರತಂ | ಕಲಹಂ, ಇದಿರ್ಚುವನ್ ಹರಿಗಂ, ಅಪೊಡೆ ಮೊಕ್ಕಳಮೇಕೆ, ನೀಂ ಪಳಂ | ಚಲೆದಪೆಯ ಸೂಯ್ ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್ ||
ಎಂದು ಬಹು ವ್ಯಂಗ್ಯವಾಗಿ ನುಡಿದು ತಾವು ಅಘಟನ ಘಟನಾಸಾಮರ್ಥ್ಯದಿಂದ ಯುದ್ಧ ಮಾಡುವುದಾಗಿ ಪ್ರತಿಜ್ಞೆ ಮಾಡುವರು. ಈ ಸನ್ನಿವೇಶ ಕರ್ಣನ ಪಾತ್ರದ ಒಂದು ಮುಖಮಾತ್ರ. ಈಗ ಹೀಗೆ ವರ್ತಿಸಿದವನು ಬೇರೊಂದು ಸಮಯದಲ್ಲಿ ಹೇಗೆ ನಡೆದುಕೊಳ್ಳುತ್ತಾನೆ! ಭೀಷರು ಶರಶಯ್ಯಾಗತರಾಗಲು ದುರ್ಯೊಧನಾದಿಗಳು ಮುಂದೆ ಕರ್ಣನಿಗೆ ಸೇನಾಪತ್ಯಾಭಿಷೇಕವನ್ನು ನಿರ್ಧರಿಸುತ್ತಾರೆ. ಆಗ ಕರ್ಣನು 'ಸುರಸಿಂಧೂದ್ಭವನಿಂ ಬಲೆಕ್ಕೆ ಪುರಾರ್ ಸೇನಾಧಿಪತ್ಯಕ್ಕೆ ತಕ್ಕರ್, ಲೋಕೈಕಧನುರ್ಧರಂ ಕಳಶಜಂ ತಕ್ಕಂ' ನದೀನಂದನ ಅವರಿಗೆ ಪಟ್ಟವನ್ನು ಕಟ್ಟಿ; ನಾನು ಅವರಿಗೆ ಸಹಾಯಕನಾಗಿ ಯುದ್ಧ ಮಾಡುತ್ತೇನೆ ಎಂದು ಹೇಳಿ, ತನ್ನ ಪ್ರತಿಜ್ಞೆಯನ್ನು ಲಕ್ಷ್ಯ ಮಾಡದೆ ಯುದ್ಧ ಮಾಡಿ ತನಗೆ ಇದಿರಾದ ಧರ್ಮರಾಜ ಭೀಮಸೇನರನ್ನು ಸಾಯಿಸದೆ ಬಡಿದು ತಾಯಿಗೆ ತಾನು ಕೊಟ್ಟ ವಾಗ್ದಾನಕ್ಕನುಗುಣವಾಗಿ ಅವರನ್ನು ಕೊಲ್ಲದೆ ತನ್ನ ಪರಾಕ್ರಮವನ್ನು ಮೆರೆಯುತ್ತಾನೆ. ಧೃಷ್ಟದ್ಯುಮ್ಮನಿಂದ ದ್ರೋಣಾಚಾರರು ಹತರಾಗುತ್ತಾರೆ. ಸೇನಾಧಿಪತ್ಯಕ್ಕೆ ಕರ್ಣನ ಸರದಿ ಬರುತ್ತದೆ. ಪಟ್ಟಾಭಿಷಿಕ್ತನಾದ ದಿನ ಪ್ರಾತಃಕಾಲ ನಿತ್ಯಕರ್ಮಾನುಷ್ಠಾನವನ್ನು ತೀರಿಸಿಕೊಂಡು ನಿತ್ಯದಾನಕ್ಕೆಂದು ತರಿಸಿದ ಹದಿನೆಂಟು ಕೋಟಿ ಹೊನ್ನುಗಳನ್ನು ದೀನಾನಾಥರಿಗೆ ಕೊಡುಗೈಯಿಂದ ದಾನಮಾಡಿ ಸುವರ್ಣರಥವನ್ನು ಹತ್ತಿ ಓರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿಟೆದು ಮೂರು ಸೂಳ್ ಬಲವಂದು ತದೀಯ ಪಾದಪದ್ಮಂಗಳಂ ತನ್ನ ತಲೆಯೆಸೂಳಿಟ್ಟುಕೊಂಡು
ಆನ್ ಮಾತಳೆಯದೆ, ಮುಳಿದುಂ ನಿಮ್ಮಡಿಯಂ ನುಡಿದನ್, ಉಜದೆ, ಏಳಿಸಲ್, ಏನ್ ಎಮ್ಮಳವೆ? ಮಜವುದು, ಆ ಮನ ದುಮ್ಮಚ್ಚರಮನ್, ಅಜ್ಞ ನಿಮ್ಮನ್, ಎರೆಯಲೆ ಬಂದಂ” ಧುರದೊಳ್ ನಿಮ್ಮಡಿಯುಂ ಗೆಲ್ಲಲ್, ಅರಿಯದರನ್, ಆ ಪಾಂಡುಸುತರನ್, ಎಮ್ಮಂದಿಗರ್, ಅ ಚರಿಯಲ್ಲಿ ಗೆಲ್ವೆವೆಂಬುದು
ಹರಿಗನೊಳ, ಉರದೆ, ಎಂತುಂ, ಎನ್ನ ಚಲಮನೆ ಮಜವಂ ಎಂದು ಅವರ ಕ್ಷಮೆಯನ್ನು ಬೇಡುವನು. ಅದಕ್ಕೆ ಭೀಷ್ಮಾಚಾದ್ಯರು 'ನುಡಿವುದು ಪತಿಭಕ್ತಿಯ ಪೆಂಪಿಂ ನೀಂ ನುಡಿದಯ್ ಪೆಜತಂದದಿಂ ನುಡಿದೆಯ, ಎಂದುದೇಂ ತಪ್ಪಾದುದೇ? ಎಮೊವಜರ್ ಜಸಂಬಡೆದ ಭಾರ್ಗವರಪ್ಪದಚೆಂದಂ ನಾಂ ನಂಟರುಮಂಗ ಮಹೀಪತಿ ಅಲ್ಲದೆಯುಂ ನೀಂ ನಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮ್ಮನೈಸೆ'
Page #58
--------------------------------------------------------------------------
________________
ಉಪೋದ್ಘಾತ | ೫೩ ನಿನ್ನನೆ ನಚ್ಚಿದಂ ಕುರುಮಹೀಪತಿ ನಿನ್ನ ಶರಾಳಿಗಳೆ ಮು ಸ್ನಂ, ನಡುಗುತ್ತಮಿರ್ಪುದು ಅರಿಸಾಧನಸಂಪದಂ ಅಂತ ಶಸ್ತ್ರಸಂ ಪನ್ನನೆ ಆಗಿ ಶಲ್ಯನನ ಸಾರಥಿಯಾಗಿ ಮಾಡಿ ಕಾದು ನೀಂ
ಎಂದು ತಮ್ಮನನ್ನುಪದೇಶಿಸಿ ಆಶೀರ್ವಾದಮಾಡಿ ಗೆಲ್ಲುವ ಉಪಾಯವನ್ನು ಸೂಚಿಸಿ ಕಳುಹಿಸುತ್ತಾರೆ. ಅದರಂತೆ ದುಧನನು ಶಲ್ಯನನ್ನು ಕರ್ಣನ ಸಾರಥಿಯಾಗಿರುವಂತೆ ಪ್ರಾರ್ಥಿಸುತ್ತಾನೆ. ಅದಕ್ಕೆ ಮದ್ರರಾಜನು ಕಿನಿಸಿ ಕಿಂಕಿಣಿ ವೋಗಿ ಹೀಗೆ ಹೇಳುತ್ತಾನೆ.
ಒಂದೆ ಕಡಂಗಿ ತೇರನೆಸಗೆಂಬುವನ್ ಅಂಬಿಗನ್, ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಳುಕಾಳಿನಾಗೆ ಮ ತೃ ಂದನ ಚೋದನಕ್ರಮಮದುಂ ಪೊಲೆಯಂಗಮರ್ದಿಕರ್ುಂ ಅಂತುಟಂ ನೀ ದಯೆಗೆಯ್ದು ಪೇಳೆ ಇದನಾರ್ ಪವರ್ ಫಣಿರಾಜಕೇತನಾ
ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜನಿಕೇತನನಿಂತೆಂದಂ:ಮಾವ, ಸಾಮಾನ್ಯ ಮನುಜನಲ್ಲನಂಗಮಹೀಶಂ
ಕುಲಹೀನನೆ ಅಪ್ಲೋಡ ಕೇ ವಲಬೋಧಂ ಪರಶುರಾಮನ್, ಏನ್, ಈಗುಮ ನಿ ರ್ಮಲಿನಕುಲಂಗಲ್ಲದೆ ಪಿಡಿ ಯಲಲ್ಲದಂತಪ್ಪ ದಿವ್ಯ ಬಾಣಾವಳಿಯಂ ಮಣಿಕುಂಡಲಮುಂ ಕವಚಂ ಮಣಿಯದ ಚಾರಿತ್ರಮುಗ್ರತೇಜಮುಮೀ, ಒ qುಣಮುಂ ಕಲಿತನಮುಂ, ಇವೇಂ ಪ್ರಣತಾರೀ ಸೂತಸುತನೊಳೊಡವುಟ್ಟುಗುಮೆ ಕಲಿತನದ ನೆಗಟ್ಟಿ ಕಸವರ ಗಲಿತನದ ಪೊದಲ್ಲಿ ಪರಮಕೋಟಿಗೆ ಪರಾರ್ ಸಲೆ ಕರ್ಣನಲ್ಲದೆನಿಸುವ ಕಲಿತನಮುಂ ಹರಿಗೆ ಕವಚಮಿತ್ತುದೆ ಪೇಯ್ದುಂ
ಎಂದು 'ಶಲ್ಯನ ಹೃಚ್ಚಲ್ಯಮಂ ಕಲೆ' ನುಡಿಯಲು ಅವನ ಸಾರಥ್ಯದಲ್ಲಿ ತನ್ನ ಪರಾಕ್ರಮವನ್ನು ಅದ್ವಿತೀಯನಾಗಿ ಮೆರೆಯುತ್ತಾನೆ. ಕರ್ಣಾರ್ಜುನ ಕಾಳಗವು ಲೋಕತ್ರಯಕ್ಕೂ ಆಶ್ಚರ್ಯವನ್ನುಂಟುಮಾಡಿತು. ಮೊದಲಿನ ಒಪ್ಪಂದದ ಪ್ರಕಾರ ತನ್ನ ಮಾತಿನಂತೆ ತಲೆಗೆ ಗುರಿಯಿಟ್ಟ ಬಾಣವನ್ನು ಇಳಿಸಿ ಎದೆಗೆ ಹೊಡೆಯದುದರಿಂದ ಶಲ್ಯನು ಕೋಪಗೊಂಡು ಸಾರಥ್ಯವನ್ನು ನಡೆಸದೆ ತೇರನ್ನಿಳಿದು ಹೊರಟುಹೋಗುವನು. ಕರ್ಣನು ತಾನೇ ತೇರನ್ನು ನಡೆಸಿಕೊಂಡು ಏಕಾಂಗಶೌರದಿಂದ ಯುದ್ಧ ಮಾಡುವನು. ಧರಿತ್ರಿ ಅವನ ತೇರಿನ ಚಕ್ರವನ್ನು ನುಂಗುವಳು. ರಥದಿಂದಿಳಿದು ಗಾಲಿಯನ್ನೆತ್ತುವಷ್ಟರಲ್ಲಿಯೇ ಅವನನ್ನಿಸುವಂತೆ ಮುಕುಂದನು ಅರ್ಜುನನನ್ನು ಬೋಧಿಸಲು ಅರ್ಜುನನಿಗೆ ಎಂದೂ ಇಲ್ಲದ ಮರುಕತೋರಿ
Page #59
--------------------------------------------------------------------------
________________
೫೪ | ಪಂಪಭಾರತಂ
ಬಳುವಂ, ಸಾರಥಿಯಿಲ್ಲ ಮೆಯ್ಕೆ ಮಣಿಯುಂ ತಾನಿಲ್ಲ ಎಂತೀಗಳ್, ಆನ್ ಇಲೆವೆಂ ನೋಡಿರೆ ಮತ್ತನೊಂದನ್, ಎಸಲುಂ ಕಯೇುದು, ಏಕೆಂದುಂ, ಆಂ ಅಳಿಯಂ, ಕೂರ್ಮಯ ಮಿಕ್ಕು ಬಂದಪುದು, ಇದರ್ಕೆಗೆಝಿನ್, ಏನೆಂರ್ಬೆ ಆ೦
ಮದಂ ಮುನ್ನಿನದೊಂದು ವೈರಮನ್, ಇದಿಂತೇ ಕಾರಣಂ ಮಾಧವಾ || ಎಂದು ಅಂಗಲಾಚುವನು. ಕೃಷ್ಣನು ಅವನಿಗೆ ಮರ್ಮೊದ್ಘಾಟನವಾಗುವ ಮಾತುಗಳನ್ನಾಡಿ ರೇಗಿಸುವನು. ಅರ್ಜುನನು ಉತ್ಸಾಹಗೊಂಡು ಕರ್ಣನನ್ನು ಕುರಿತು
ಎನ್ನ ಪಸರ್ಗೆಟ್ಟು ಸೈರಿಸ ದನ್ನಯ್, ಅದೆಂತೀಗಳನ್ನ ರೂಪಂ ಕಂಡುಂ ನಿನ್ನರಸನಣುಗದಮ್ಮನ
ನಿನ್ನ ತನೂಭವನ ಸಾವುಗಂಡುಂ ಮಾಗ್ವಾ?....!! 'ಸೆಟ್ಟಿಯ ಬಳ್ಳಂ ಕಿತೆದೆಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದ್ದೆ! ಮಾನಿಸರೇನಿನ್ಮೂಲ ವರ್ಷಮಂ ಬತ್ತಿಪರೇ' ಎಂದು ತನ್ನನುದ್ಘಾಟಿಸಿ ನುಡಿದೊಡೆ ಉಮ್ಮಚ್ಚರದೊಳ್ ಕರ್ಣನು ಮುಗುಳಗೆಯೊಡನೆ ಹೀಗೆಂದನು.
ಕಸವರದ ಸವಿಯುಮಂ ಭಯ ರಸಕದ ಸವಿಯುಮನದಂತುಂ ಆನಳಿಯದುದಂ ವಸುಮತಿಯವುದು ನೀಂ ಪುರು ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಲುಗುಯೇ?ll
ಒಡಲುಂ ಪ್ರಾಣಮುಮಂಬಿವು ಕಿಡಲಾದುವು; ಜಸಮದೊಂದೆ ಕಿಡದು, ಅದನಾಂ ಬ
ಡಿವಿಡಿದು ನಗನ್, ಉಟೆದಟ ವಡಮಾತಂ ಮಾಡಿ ನೀನೆ ಕೆಮ್ಮನೆ ನುಡಿವೆ || ಬಿದಿವಸದಿಂದ ಪುಟುವುದು, ಪುಟಿಯುವಂ ಬಿದಿ, ಪುಟಿದಂದಿವಂ ಗಿದು ಬಿಯಂ, ಒಳಿವಂಗಿದು, ವಿನೋದಮಿವಂಗಿದು, ಸಾವ ಪಾಂಗಿವಂ ಗಿದು, ಪಡೆಮಾತಿವಂಗಿದು ಪರಾಕ್ರಮವೆಂಬುದನ್, ಎಲ್ಲ ಮಾಯಿಂ ಬಿದಿ ಸಮಕಟ್ಟಿ ಕೊಟ್ರೊಡೆ, ಎಡೆಯೊಳ್ ಕೆಡಿಸಲ್ ಕುಡಿಸಲ್ ಸಮರ್ಥರಾರ್ ||
ಎಂದೀ ಬಾಯಾತಿನೊಳ್, ಏ ವಂದಪುದು, ಅಣು ಅಣು ಕಾದುಕೊಳ್ಳುತುಂ ಭೋ ರಂದಿಸೆ ಪೊಸಮನೆಯಂಬಿನ ತಂದಲ ಬೆಳ್ಳರಿಗಳ್, ಇರದೆ ಕವಿದುವು ನರನಂ ||
ಪರಬಲಮಥನನಿಗೆ ಆಕ್ರೋಶವು ತಡೆಯದಾಯಿತು. ತಕ್ಷಣವೇ ಭುವನ-ಭವನ ಸಂಹಾರಕಮಪ್ಪ ಅಂಜಲಿಕಾಸ್ತಮನ್ ಅಮೋಘಾಸ್ತ ಧನಂಜಯನ್ ಆಕರ್ಣಾಂತಂಬರಂ ತೆಗೆದು ಕರ್ಣನ ಕುಧರಸಂಧಿಯಂ ನಿಟ್ಟಿಸಿ ಇಸಲ್ ಬಿಟ್ಟುದು ಭರದ ಸಿಡಿಲ್ಲ ಕರ್ಣೋತ್ತ . ಮಾಂಗಂ' ಆಗ
Page #60
--------------------------------------------------------------------------
________________
ಉಪೋದ್ಘಾತ | ೫೫ ಕುಡುಮಿಂಚಿನ ಸಿಡಿಲುರುಳಿಯೊಳ್, ಒಡಂಬಡಂ ಪಡೆಯ ಕರ್ಣನೊಡಲಿಂದಾಗಳ್ ನಡೆ ನೋಡೆನೋಡೆ ದಿನಪನೋಲ್ ಒಡಗೂಡಿದುದೊಂದು ಮೂರ್ತಿ ತೇಜೋರೂಪಂ |
ಇಂತಹ ಕರ್ಣನ ಅದ್ಭುತ ಜೀವನ ಪಂಪನ ಹೃದಯವನ್ನು ಸೂರೆಗೊಂಡಿತು. ಅರಾತಿಕಾಲಾನಲನ ಸಮಕ್ಷಮದಲ್ಲಿಯೇ ಮನಮುಟ್ಟುವಂತೆ ನಿರ್ಭಯವಾಗಿ ಆತನ ಚಮರಶ್ಲೋಕವನ್ನು ಹಾಡಿ ಆತನಲ್ಲಿರುವ ಪಕ್ಷಪಾತವನ್ನು ಕವಿತಾಗುಣಾರ್ಣವನು ಪ್ರದರ್ಶಿಸಿದನು.
ನೆನೆಯದಿರಣ್ಣ ಭಾರತದೊಳಿಂ ಪುರಾರುಮನ್, ಒಂದಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ, ಕರ್ಣನೂಲ್, ಆರ್ ದೂರ, ಕರ್ಣನೇಜು, ಕ ರ್ಣನ ಕಡು ನನ್ನಿ, ಕರ್ಣನಳವು, ಅಂಕದ ಕರ್ಣನ ಚಾಗಮಂದು ಕ ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲೈ ಭಾರತಂ ||
ಪಂಪನ ದುರ್ಯೋಧನನು ವೀರಾಗ್ರೇಸರ, ಆತ್ಮಾಭಿಮಾನಿ, ಅವನಲ್ಲಿ ಸತ್ಪುರುಷನಲ್ಲಿರಬೇಕಾದ ಅನೇಕಗುಣಗಳಿವೆ. ಆದರೆ ಅವನಲ್ಲಿರುವ ಛಲವೂ ಪಾಂಡವರಲ್ಲಿ ಅವನಿಗಿದ್ದ ದ್ವೇಷ ಮಾತ್ಸರ್ಯಗಳೂ ಅವನ ನಾಶಕ್ಕೆ ಕಾರಣವಾಗುವುವು. ಆದುದರಿಂದಲೇ ಅವನಲ್ಲಿ ವಾಚಕರಿಗೆ ಸಹಾನುಭೂತಿಯುಂಟಾಗುತ್ತದೆ. ಅವನ ಅನ್ಯಾದೃಶವಾದ ಮಿತ್ರಪ್ರೇಮ, ಗುರುಜನವಿಧೇಯತೆ, ಸೋದರಪ್ರೇಮ ಮೊದಲಾದ ಆಭಿಜಾತ್ಯಗುಣಗಳು ಚಿತ್ತಾಕರ್ಷಕವಾಗಿವೆ. ಇವನ್ನು ಪಂಪನು ಅವನ ಪಾತ್ರಚಿತ್ರಣದಲ್ಲಿ ಬಹುಸ್ಪಷ್ಟವಾಗಿ ಚಿತ್ರಿಸಿದ್ದಾನೆ. ..
ಪ್ರಾರಂಭದಲ್ಲಿ ಭಾರತಯುದ್ದದವರೆಗೆ ಪಂಪನ ದರ್ಯೊಧನನೂ ಹೆಚ್ಚು ಕಡಿಮೆ ವ್ಯಾಸರ ದುರ್ಯೋಧನನಂತೆಯೇ ಇರುವನು. ಪಂಪನು ದುರ್ಯೋಧನನ ದುರ್ಗುಣಗಳನ್ನು ಎತ್ತಿತೋರಿಸದಿದ್ದರೂ ಮೂಲಭಾರತದಂತೆಯೇ ಇಲ್ಲಿಯೂ ದುರ್ಯೊಧನನಲ್ಲಿ ಒಂದು ವಿಧವಾದ ದ್ವೇಷ, ಮಾತ್ಸರ್ಯ, ಕುಯುಕ್ತಿ, ಅಧರ್ಮ ಪ್ರವರ್ತನೆ ಮೊದಲಾದುವು ಕಂಡು ಬರುವುವು. ಪಂಪನು ಅವನ ಪ್ರಧಾನವಾದ ಗುಣ ಛಲವೆಂದು ಹೇಳಿದ್ದಾನೆ. ಛಲಕ್ಕೆ ಮೂಲಕಾರಣ ಮಾತ್ಸರ್ಯ. ಅವನ ಹುಟ್ಟು ಮಾತ್ಸರ್ಯದಿಂದಲೇ ಪ್ರಾರಂಭವಾಗುವುದು. ಕುಂತಿಗೆ ತನಗಿಂತ ಮೊದಲೇ ಸಂತಾನ ಪ್ರಾಪ್ತಿಯಾಯಿತೆಂಬ ಮಾತ್ಸರ್ಯದಿಂದಲೇ ಕೌರವರ ಅಕಾಲ ಜನನವಾಗುವುದು. ವಿದ್ಯಾಭ್ಯಾಸ ಮತ್ತು ಕ್ರೀಡಾವಿನೋದಗಳಲ್ಲಿ ಪಾಂಡವರ ಕೈ ಮೇಲಾದುದು ಅವರ ಮಾತ್ಸರ್ಯವನ್ನು ಹೆಚ್ಚಿಸುವುದು. ತಂದೆಗೆ ರಾಜ್ಯ ಪ್ರಾಪ್ತವಾಗದಿದ್ದುದೂ ಪಾಂಡವರು ಹೋದೆಡೆಗಳಲ್ಲೆಲ್ಲಾ ಅಭಿವೃದ್ದಿಯಾಗುತ್ತಿದ್ದುದೂ ಮಾತ್ಸರ್ಯದ ಪರಮಾವಧಿಯಾಗಿ ಪರಿಣಮಿಸಿ ಪಾಂಡವರಲ್ಲಿ ವೈರವೂ ಅವರ ನಿರ್ಮೂಲನಕಾರ್ಯದಲ್ಲಿ ನಾನಾ ರೀತಿಯ ಪ್ರಯತ್ನಗಳೂ ಪ್ರಾರಂಭವಾಗುವುವು. ಮೊದಲು ಅವರಿಗೆ ಬೇರೆಯೆಡೆಯಲ್ಲಿರಲು ಏರ್ಪಾಟು, ಆಮೇಲೆ ಅರಗಿನ ಮನೆಯಲ್ಲಿ ಕೊನೆಗಾಣಿಸುವ ಸಂಚು, ಸಂಚು
Page #61
--------------------------------------------------------------------------
________________
೫೬ | ಪಂಪಭಾರತಂ ಫಲಿಸದಿರುವಾಗ ವೈರವಾಗಿ ಪರಿಣಮಿಸಿ ಉದ್ದಿಷ್ಟ ಕಾರ್ಯಸಿದ್ದಿಯಾಗದಿದ್ದಾಗ' ಛಲದ ರೂಪವನ್ನು ತಾಳುತ್ತದೆ. ದೂತಪ್ರಸಂಗ ಬ್ರೌಪದೀಕೇಶಾಪಕರ್ಷಣ ಪಾಂಡವರ ವನವಾಸ ಅಜ್ಞಾತವಾಸಗಳಲ್ಲಿ ಛಲವೂ ಮತ್ತಷ್ಟು ರೂಢಮೂಲವಾಗಿ, ಪಾಂಡವರನ್ನು ಆದಷ್ಟು ಹಿಂಸಿಸುವುದೂ ಅವರ ಕಷ್ಟವನ್ನು ನೋಡಿ ತಾನು ಸುಖಿಸುವುದೂ ದುರ್ಯೊಧನನ ಪರಮಧೇಯವಾಗುತ್ತದೆ. ಭೀಷ್ಮದ್ರೋಣಾದಿ ಹಿರಿಯರು ತನ್ನನ್ನೇ ಭರ್ತೃನೆ ಮಾಡುವುದು ಛಲದ ಸಾಧನೆಗೆ ಮತ್ತಷ್ಟು ಪ್ರಚೋದಕವಾಗುವುದು. ಅಂಗಾರವರ್ಮ ಮತ್ತು ಅಂಗದಪರ್ಣರ ಪ್ರಸಂಗವು ಆತ್ಮಾಭಿಮಾನವನ್ನು ತಲೆಯೆತ್ತುವಂತೆ ಮಾಡುತ್ತದೆ. ಕೃಷ್ಣ ದೌತ್ಯವು ನಿಷ್ಪಲವಾಗಲು ಯುದ್ದವು ಅನಿವಾರ್ಯವಾಗುವುದು. ಭೀಷ್ಮದ್ರೋಣಾದಿನಾಯಕರ ಅವಲಂಬನದಿಂದ ಜಯವನ್ನು ಗಳಿಸಲು ದುರ್ಯೊಧನನು ಪ್ರಯತ್ನಿಸುವನು. ಅಲ್ಪಕಾಲದಲ್ಲಿಯೆ ಅವರೆಲ್ಲ ಪಾಂಡವಪಕ್ಷಪಾತಿಗಳು, ಅಥವಾ ಮರೆಯ ಪಾಂಡವರು ಎಂಬ ಶಂಕೆಹುಟ್ಟುವುದು. ಯುದ್ಧದಲ್ಲಿ ಪುತ್ರಮಿತ್ರ ಬಾಂಧವರೆಲ್ಲ ಅಳಿಯುವರು. ಬಾಲ್ಯದಿಂದ ಒಡಲೆರಡು ಅಸುವೊಂದೆಂಬಂತಿದ್ದ ಕರ್ಣನೂ ದೈವಾಧೀನವಾಗುವನು. ಏಕಾದಶಾಹಿಣಿಯಲ್ಲಿ ತಾನೊರ್ವನೆ ಉಳಿಯುವನು. ಅವನೊಡನೆ ಅವನ ಅಭಿಮಾನವೊಂದೆ ಉಳಿಯುವುದು. ಇಲ್ಲಿಂದ ಮುಂದೆ ಪಂಪನ ದುರ್ಯೋಧನನ ಪಾತ್ರವು ವ್ಯತ್ಯಸ್ತವಾಗುವುದು. ಆ ಪಾತ್ರದ ನಿಜವಾದ ವ್ಯಕ್ತಿತ್ವವು ಪ್ರಕಾಶಕ್ಕೆ ಬರುವುದು. ಕರ್ಣವಧಾನಂತರ ಪಂಪನ ದುರ್ಯೋಧನನು ಸಂಜಯ ದ್ವಿತೀಯನಾಗಿ ರಣರಂಗದಲ್ಲಿ ಹೊರಡುವನು. ಸೂರ್ಯಪುತ್ರನ ಮರಣವಾರ್ತೆಯನ್ನು ಕೇಳಿ ಮೂರ್ಛಿತನಾಗಿ ಎಚ್ಚೆತ್ತು ಅವನಿಗಾಗಿ ದುಃಖಪಡುವನು. ಇವನ ಸ್ನೇಹದ ಉತ್ಕಟಾವಸ್ಥೆಯೆಷ್ಟು!
ನೀನುಮಗ, ಇನ್ನೆನಗೆ ಪೇಟಿನ್ ಪೆರಾರ್, ಎನಗಾಸೆ, ನಿನ್ನಂ ನಾನುಂ ಆಗಲ್ಲೆನೇ ಕೆಳೆಯ, ಬೆನ್ನನೆ ಬಂದಪೆನ್, ಆಂತರಂ ಯಮ ಸ್ಥಾನಮನೆಯ್ದಿಸುತ್ತ ಇದುವೆ ದಂದುಗಂ, ಎಂತರ್ದಮುಟ್ಟಿ ಕೂರ್ತು ಪೇಶ್ ಮಾನಸವಾಲನ್, ಅಂಗವಿಷಯಾಧಿಪ ನೀಂ ಪೊಅಗಾಗೆ ಬಾಳ್ವೆನೇ? | ಒಡಲೆರಡು, ಒಂದೆ ಜೀವಂ, ಇವರ್ಗೆ, ಎಂಬುದನ್, ಎಂಬುದು ಲೋಕಂ, ಈಗಳಾ ನುಡಿ ಪುಸಿಯಾಯು ನಿನ್ನದು ಕಿರೀಟಿಯ ಶಾತಶರಂಗಳಿಂದ ಪೋ ಪೊಡಂ, ಎನಗಿನ್ನುಂ ಈ, ಒಡಲೊಳಿರ್ದುದು ನಾಣಿಲಿಜೀವಂ, ಎಂದೂಡ, ಆ ವೆಡೆಯೊಳ್ ನಿನ್ನೊಳ್ ಎನ್ನ ಕಡುಗೂರ್ಮೆಯುಂ, ಅಜುಂ, ಅಂಗವಲ್ಲಭಾ ಅತಿಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನ್, ಆನ್ ಅಳವಂ, ಮುನ್ನಡೆದಿರ್ದು೦, ಎನ್ನರಸನ್, ಆನ್, ಏಕಿತ್ತೆನಿಲ್ಲ, ಏಕೆ, ಪೇಟ್ಟು ಅಜೆಪಿ ಒಲ್ಲೆನುಮಿಲ್ಲ ಕಾರ್ಯವಶದಿಂ ಕೂರ್ಪಂತವೋಲ್ ನಿನ್ನನ್ ಆಂ
ನೆಣಿತಿ ಕೊಂದಂ, ಮುಳಿಸಿಂದಂ, ಅಂಗನೃಪತೀ ಕೌಂತೇಯರೇಂ ಕೊಂದರೇ || ಎಂದು ಕರ್ಣನ ಮರಣಕ್ಕಾಗಿ ಬಾಯಲೆದು ಪಳಯಿಸುವನು.
Page #62
--------------------------------------------------------------------------
________________
ಉಪೋದ್ಘಾತ | ೫೭
ಅಷ್ಟರಲ್ಲಿ ದುಃಖತಪ್ತನಾದ ಮಗನನ್ನು ನೋಡಲು ಅವನ ಮಾತಾಪಿತೃಗಳಾದ ಧೃತರಾಷ್ಟ್ರಗಾಂಧಾರಿಯರು ಬರುವುದನ್ನು ಕೇಳಿ ಅವರ ಮುಖವನ್ನು ನೋಡುವುದಕ್ಕೆ ನಾಚಿ 'ಸಂಧಿಯನ್ ಒಲ್ವುದೆ ಕಜ್ಜಂ ಎಂಬವರ್ಗಳ ಮಾತುಗೇಳ್ವನಿತನ್, ಇನ್ನೆನಗೆ ಬಿದಿ ಮಾಡಿತಾಗದೇ' ಎಂದು ಹಲುಬುತ್ತಿರುವಷ್ಟರಲ್ಲಿಯೇ ಅಲ್ಲಿಗೆ ತಾಯಿತಂದೆಗಳು ಬರುವರು, ದುರ್ಯೋಧನನು ಬಹು ವಿನಯಪೂರ್ವಕ ನಮಸ್ಕಾರಮಾಡುವನು. ಅವರು ಇವನನ್ನು ಹರಸಿ 'ನೀನಿದ್ದರೆ ಉಳಿದವರೆಲ್ಲ ಇದ್ದಹಾಗೆಯೆ, ದಯವಿಟ್ಟು ನೀನು ಪಾಂಡವರಲ್ಲಿ ಸಂಧಿಮಾಡಿಕೊಂಡು ಸುಖವಾಗಿ ಬಾಳು' ಎನ್ನುವರು. ದುರ್ಯೋಧನನಿಗೆ ಅದು ಸರ್ವಥಾ ಇಷ್ಟವಿಲ್ಲ.
ತಲೆದೋಯಲ್ಯ, ಅಣಂ, ಅಳ್ಳಿ ವೈರಿನೆಲನಂ - ಪೋಪೊಕ್ಕೆನ್, ಎಂಬನ್ನೆಗಂ ಚಲದಿಂದೆಯುವ ಕರ್ಣನುಗ್ರರಥಮಂ ಮುಂ ನುಂಗಿದೀ ದ್ರೋಹಿಯೊಳ್ ನೆಲದೊಳ್ ಪಂಬಲೆ? ಮತ್ತಂ, ಎನ್ನ ಮುಳಿಸಿಂಗೆ, ಆಂ ಕಾದುವೆಂ, ಪೇಸಿದಂ ನೆಲಗಂಡಂತೆ ನೆಲಕ್ಕೆ, ಗೆಲ್ಲೊಡಂ, ಅದಂ ಚಃ ಮತ್ತಂ, ಆನಾಳ್ವೆನೇ?11 ತಪ್ಪದು ಕರ್ಣನ ಬಟಿಕೆ ಸಂಧಿಯ ಮಾತನಗೆ, ಆತನಿಲ್ಲದೆ, ಎಂ ತಪ್ಪುದೊ ರಾಜ್ಯಂ, ಈ ಗದೆಯುಂ, ಈ ಭುಜಾದಂಡಮುಳ್ಳಿನಂ ಕೊನ ರ್ತಪುದೊ ಪೇಟೆಂ, ಎನ್ನ ಪಗೆ, ನೋವಾದಂಜುವುದೇಕೆ? ನಿಂದರೇಂ ತಪ್ಪುದೂ ಪೇಟೆಂ, ಅಯ್ಯ, ನೊಸಲೊಳ್ ಬರೆದಕ್ಕರಂ, ಆ ವಿಧಾತನಾ ||
ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯವನ್ನು ಸೂಚಿಸಿ ಅವರನ್ನು ಗೌರವದಿಂದ ಬೀಳ್ಕೊಟ್ಟು ತಾನು ಮಹಾಸತ್ವನಾದುದರಿಂದ ಶಾಂತಿಯುತನಾಗಿ ಶಲ್ಯನಿಗೆ ಸೇನಾಧಿಪತ್ಯಾಭಿಷೇಕವನ್ನು ಮಾಡಿ ಕಳುಹಿಸುವನು, ಶಲ್ಯನೂ ಯುದ್ಧದಲ್ಲಿ ಮಡಿಯುವನು. ಇಲ್ಲಿ ವ್ಯಾಸಭಾರತದ ದುರ್ಯೋಧನನು ಪಲಾಯನದಲ್ಲಿ ಮನಸ್ಸುಮಾಡಿ ಮಡುವನ್ನು ಕುರಿತು ಓಡುವನು. ಆದರೆ ಪಂಪನ ದುರ್ಯೋಧನನಾದರೋ ಮದ್ರನಾಥನು ಭಕ್ಷ್ಮೀಭೂತನಾದುದನ್ನು ಕೇಳಿ
ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರರಾ ಜಾದಿ ಮಹೀಭುಜ ಧುರದೊಳ್, ಎನ್ನಯ ದೂಸನ್ ಆಟಿ ಮಟ್ಟಿದಂ ತಾದರ್, ಒಂದ ಮಯ್ಯುಟಿದುದು, ಎನಗಾವುದು ಮೆಟ್ಟದು, ಎಮ್ಮೆ ಮುಂ ದಾದ ವಿರೋಧಿಸಾಧನಮನ್, ಎನ್ನ ಗದಾಶನಿಯಿಂದ, ಉರುಳುವಂ ||
ಎಂದು 'ನಿಜಭುಜವಿಕ್ರಮೈಕಸಹಾಯಕನಾಗಿ ಗದೆಯಂ ಕೊಂಡು ಸಂಗ್ರಾಮಕ್ಕೆ ಏಕಾಕಿಯೆಂದೇಳಿಸಿದ ಸಂಜಯನಂ ನೋಡಿ ಮುನಿದು' ನೆಣದ ಪಳ್ಳಗಳನ್ನು ಪಾಯ್ದು ನೆತ್ತರ ತೊಲೆಗಳನ್ನು ದಾಟಿ ಯುದ್ಧರಂಗದಲ್ಲಿ ಹೋಗುತ್ತಿರಲಾಗಿ ಮರುಳುಗಳು ತನ್ನನ್ನು ಮರುಳೆಂದು ಕರೆಯಲು ಅದಕ್ಕೆ ಮುಗುಳಗೆ ನಕ್ಕು 'ಎನ್ನಂ ವಿಧಾತ್ರಂ ಮರುಳಾಡಿದ ಕಾರಣದಿಂದಂ ಈ ಮರುಳ ಕಣ್ಣಿಗೆ ಆಂ ಮರುಳಾಗಿ ತೋಟೆದೆನೆಂದು ನೊಂದುಕೊಂಡು ಮುಂದೆ 'ಧೃಷ್ಟದ್ಯುಮ್ನಕಚಗ್ರಹವಿಲುಳಿತಮೌಳಿಯುಂ ತದೀಯಕೌಕ್ಷೇಯಕಥಾ ವಿದಾರಿತಶರೀರನುಮಾಗಿ ಬಿಟ್ಟೆರ್ದ ಶರಾಚಾರ್ಯರ' ಕಾಣುವನು. ತತ್ಕ್ಷಣವೇ ಅವನ ಗುರುಭಕ್ತಿಯ ಎಲ್ಲೆಯು ಮಿತಿ ಮೀರುವುದು.
Page #63
--------------------------------------------------------------------------
________________
೫೮ ) ಪಂಪಭಾರತಂ
ನೆಗಟ್ಟುದು ಬಿಲ್ಲ ಬಿನ್ನಣಂ, ಇಳಾವಳಯಕ್ಕೆ ಸಮಸ್ತ ಧಾತ್ರಿ ಕೆ ಯುಗಿವುದು ನಿಮ್ಮದೊಂದು ಪೆಸರ್ಗಳೊಡ, ನಿಮ್ಮ ಸರಲ್ಲಿ ದೇವರುಂ ಸುಗಿವರ್, ಅಯೋನಿಸಂಭವರಿರ್, ಎನ್ನೆಯ ದೂರ್ಸನ್, ಎನ್ನ ಕರ್ಮದಿಂ ಪಗೆವರಿನ್, ಅಕ್ಕಟಾ ನಿಮಗ, ಈ, ಇರವಾದುದೆ ಕುಂಭಸಂಭವಾ |
ಎಂದು ಅವರ ಪರಾಕ್ರಮವನ್ನು ಕೊಂಡಾಡಿ ತನ್ನ ನೈಜವಾದ ಗುರುಭಕ್ತಿಯನ್ನು ಪ್ರದರ್ಶಿಸಿ ಅವರಿಗೆ ನಮಸ್ಕರಿಸುವನು. ಮುಂದೆ 'ವೃಕೋದರನಿಂ ನಿಶ್ಲೇಷಪೀತರುಧಿರನಪ್ಪ ದುಶ್ಯಾಸನನನ್ನು ಕಂಡು 'ಸೋದರನ, ಅಲೊಳ್ ಕಣ್ಣ ನೀರ್ಗಳಂ ಸುರಿದು
ನಿನ್ನಂ ಕೊಂದನ ಬಸಿಲಿಂ ನಿನ್ನಂ ತೆಗೆಯದೆಯುಂ, ಅವನ ಕರುಳಂ ಪರ್ದಿ೦ ಮುಂ, ನುಂಗಿಸಿ ನೋಡದೆಯುಂ ಮುನ್ನಮೆ ಯುವರಾಜ ನಿನ್ನನ್, ಆಂ ನೋಡಿದನೇ?
ಎಂದು ಮರುಗುವನು. ಮುಂದೆ ವೃಷಸೇನನ ದೇಹವನ್ನು ಕಂಡು ಕರ್ಣನನ್ನೇ ನೆನೆದು ಅವನ ಶರೀರವನ್ನು ಹುಡುಕಿ ಆ ಕಳೇಬರವನ್ನು ನೋಡಿ ಸೈರಿಸಲಾರದೆ ಮೂರ್ಛ ಹೋಗಿ ಪುನಃ ಎಚ್ಚೆತ್ತು ಎದೆದೆರೆದು ದುಃಖಿಸಿ ಮುನ್ನಡೆದು ಶರಶಯ್ಯಾಗತರಾಗಿದ್ದ ಭೀಷರನ್ನು ಕಾಣಲು ಅವರು ದುರ್ಯೋಧನನು ಬಂದ ಬರವಿನಿಂದಲೇ ಸಮರ ವೃತ್ತಾಂತವನ್ನು ತಿಳಿದು ನಿನಗಮೀಯಿರವಾದುದೇ' ಎಂದು ದುಃಖಿಸಿ ನಿನ್ನಗೆಯ್ದ ನಿಯೋಗ ಮಾವುದು ಗೆಯ್ಯಲ್ ಬಗೆದಪೆ ಎನೆ, ಅರಿನ್ಯಪರನ್ನು ತರಿದೊಟ್ಟುವುದಲ್ಲದೆ ಮತ್ತೇನು? ಭವತ್ವದಸರೋಜಮನಾಂ ಬಲಗೊಂಡು ಮತ್ತಮಾಜಿಗೆ ನಡೆಯಲೆ ಬಂದಂ' ಎಂದು ಹೇಳಿದ ದುರ್ಯೊಧನನಳವಿಂಗೆ ಮನಗೊಂಡು ಮಗನೇ ನಿನಗಪ್ರೊಡೆ ದೈವ ಪ್ರತಿಕೂಲಂ, ಮೈತ್ರೇಯರ್ ಕೊಟ್ಟ ಊರುಭಂಗಶಾಪಮನಿವಾರಿತಂ, ಎನ್ನ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮಂ ಅಳೆದು ಬಲೆಯಂ ನಿನ್ನ ನೆಗದು ನೆಗಲ್ವುದು' ಎಂದು ನುಡಿದ ಪಿತಾಮಹನ ನುಡಿಗಳಿಗೆ ಕುರುರಾಜನ ಉತ್ತರವಿದು
ಶರಶಯಾಗ್ರದೊಳಿಂತು ನೀಮಿರೆ, ಘಟಪ್ರೋದ್ಧೂತನಂತಾಗೆ ವಾ ಸರನಾಥಾತ್ಮಜನ್, ಅಂತು ಸಾಯ ರಣದೊಳ್, ದುಶ್ಯಾಸನಂ ತದ್ವಕೋ ದರನಿಂದೆ, ಅಂತದ ಸೈರಿಸಿಯುಂ ಸಂಧಾನಮಂ ವೈರಿಭೂ ಪರೆಳಿಂ ಸಂಧಿಸಿ ಪೇಟೆಂ, ಆರ್ಗ ಮೆಳವಂ ಸಂಪತ್ತುಮಂ ಶ್ರೀಯುಮಂ ||
ಈ ಮಾತನ್ನು ಕೇಳಿ ಭೀಷ್ಕರು ವಿಸ್ಮಿತರಾಗಿ ಅದೊಂದು ದಿವಸ ವೈಶಂಪಾಯನ ಸರೋವರದಲ್ಲಿ ಮುಳುಗಿ ಕಾಲಯಾಪನೆ ಮಾಡುತ್ತಿದ್ದು ಮುಂದೆ ಅವನ ಸಹಾಯಕ್ಕೆ ಕಾದಿ ಗೆಲ್ಲತಕ್ಕದ್ದು ಎಂದು ಹಿತೋಪದೇಶ ಮಾಡಿ ಜಳಮಂತ್ರೋಪದೇಶಮಾಡಲು ಅವರ ಮಾತನ್ನು ಮೀರಲಾರದೆ ಬಹಳ ಕಷ್ಟದಿಂದ ಸರೋವರದಲ್ಲಿ ಹೋಗಿ ಮುಳುಗಿಕೊಳ್ಳುವನು. ವ್ಯಾಸಭಾರತದ ದುರ್ಯೋಧನನಿಗೂ ಪಂಪನ ದುರ್ಯೋಧನನಿಗೂ ಎಷ್ಟು ಅಂತರ!
ಇಷ್ಟರಲ್ಲಿ ಭೀಮನು ದುರ್ಯೋಧನನನ್ನು ಅರಸುತ್ತಾ ಬರುವನು. ಕಿರಾತರು
Page #64
--------------------------------------------------------------------------
________________
ಉಪೋದ್ಘಾತ | ೫೯ wಳದ ತಡಿಯಲ್ಲಿ ದುರ್ಯೋಧನನ ಹೆಜ್ಜೆಯ ಗುರುತನ್ನು ತೋರಿಸಲು ಪಾಂಡವರು ಅಲ್ಲಿಗೆ ಹೋಗಿ ದುರ್ಯೋಧನನನ್ನು ಕೊಳದಿಂದ ಹೊರಗೆ ಹೊರಡಿಸಲು ಮರ್ಮೋದ್ಘಾಟಕವಾಗಿ ಮಾತನಾಡುವರು. “ಎನ್ನ ಸರಂಗಳಲ್ಲದೆ ಈ ಬೂತು ಪೊಮಡುವನಲ್ಲಂ. ಈತಂಗಾನ ಬಲ್ಲೆನ್, ಉಸಿರದಿರಿಂ' ಎಂದು ಸಕಳ ದಿಗ್ವಳಯ ಭರಿತ ಮಹಾಸಿಂಹನಾದದಿಂದ ಗರ್ಜಿಸಿದ ಭೀಮಸೇನನ ಆರ್ಭಟವನ್ನು ಕೇಳಿ ಸೈರಿಸಲಾರದ್ದೆ 'ಕಿಡುಗುಂ ಮಚ್ಚರ್ಯಂ' ಎಂದು ಉದ್ಧತಂ ರೌದ್ರಗದಾದಂಡಮಂ ಪ್ರಚಂಡಮಂ ಆಗಿ ಸೆಜಗಿಲ್ಲದ ಕಲಿತನದಿಂ ಕೂಳದಿಂ ಪೊಣಮಟ್ಟು' ಬರುವನು. ಅವನನ್ನು ನೋಡಿ ಧರ್ಮನಂದನನು ಈಗಲೂ ಭೂಮಿಯನ್ನು ವಿಭಾಗಿಸಿಕೊಂಡು ಸ್ನೇಹದಿಂದಿರೋಣವೆನ್ನುವನು. ಛಲದಂಕಮಲ್ಲನೂ ಅಚಲಿತಮನಸ್ಕನೂ ಆದ ದುರ್ಯೋಧನನಿಗೆ ಇದು ಒಪ್ಪಿಗೆಯಾಗುವುದಿಲ್ಲ. ಒಡನೆಯೇ ರಾಜರಾಜನು ದುಶ್ಯಾಸನನನ್ನು ಕೊಂದ ಭೀಮನು ಇನ್ನೂ ಜೀವದಿಂದಿರುವಾಗ ಸಂಧಿಯೇ? ಯುದ್ಧವನ್ನೆ ಕೈಗೆತ್ತಿಕೊಂಡಿದ್ದೇನೆ' ಎಂದು ಹೇಳುವನು. ಅಷ್ಟರಲ್ಲಿ ತೀರ್ಥಯಾತ್ರೆಯನ್ನು ಮುಗಿಸಿಕೊಂಡು ಅಲ್ಲಿಗೆ ಬಂದ ಬಲದೇವನು ತನಗೆ ನಮಸ್ಕಾರ ಮಾಡಿದ ಕೌರವಚಕ್ರವರ್ತಿಗೆ ಆಶೀರ್ವದಿಸಿ ಅವನನ್ನು ಆ ಸ್ಥಿತಿಗೆ ತಂದ ಮುರಾಂತಕನನ್ನೂ ಪಾಂಡವರನ್ನೂ ನೋಡಿ ಕೋಪಿಸಿಕೊಂಡು ಮಾನವೇರುವಾದ ದುರ್ಯೋಧನನನ್ನು ಕುರಿತು 'ನೀಂ ಮರುಳನಮನೇಕೆ ಮಾಡಿದೆ? ಎಂದು ಕೇಳಲು ಅವನು ಹೀಗೆಂದು ಉತ್ತರ ಕೊಡುವನು
ಹರಿಯೆಂದಂದಂ, ಅದಂತೆ, ಪಾಂಡುತನಯ ನಿರ್ದೋಷಿಗಳ್, ತಥಮಿಂ ತು, ರಣಸ್ಥಾನದೊಳ್, ಇನ್ನೆರಟ್ಟುಡಿವೆನೆ? ಮದ್ದಂಧುಶೋಕಾಗ್ನಿಯಿಂದೆ. ಉರಿದಪ್ಟೆಂ, ತೊಡರ್ದೆನ್ಸನ್, ಇಂ ಬಿಡು, ವಿರೋಧಿಕ್ಷಾಪರ್, ಎ ಗದಾ
ಪರಿಘಾಘಾತದಿಂ, ಅಟ್ಟೆ ತಟ್ಟೆ ಮಡಿದು, ರ್ಇ, ಅಜಾಡದೇಂ ಪೋಪರೇ ? ಎಂತಹ ಮಾತು! ಮಹಾನುಭಾವನಿಗೆ ಮಾತ್ರ ಸಾಧ್ಯ.
ಮುಂದೆ ಗದಾಯುದ್ಧವು ಪ್ರಾರಂಭವಾಗುವುದು. ಭೀಮ ದುರ್ಯೋಧನರಿಬ್ಬರೂ ಸಿಡಿಲೆರಗುವಂತೆ ಎರಗಿ ಯುದ್ಧಮಾಡುವರು. ಭೀಮನು ದುರ್ಯೋಧನನ ಗದಾಪ್ರಹಾರದಿಂದ ಅಚೇತನನಾಗಿ ನೆಲಕ್ಕೆ ಬೀಳುವನು. ಆ ಸಮಯದಲ್ಲಿ ಪಾಂಡವ ವಿರೋಧಿಯಾದ ದುರ್ಯೋಧನನು ಭೀಮನನ್ನು ಹೊಡೆದು ಮುಗಿಸಿ ಬಿಡಬಹುದಾಗಿತ್ತು. ಆದರೆ ಪಂಪನ ಕೌರವ ಧರ್ಮಿಷ್ಠ, ಅಧರ್ಮಯುದ್ದದಲ್ಲಿ ಕೈ ಹಾಕಲು ಅವನಿಗೆ ಮನಸ್ಸು ಬಾರದು. ಆದುದರಿಂದ ಅವನು “ಬಿದ್ದಿನನ್ ಇದೆಯೆನ್' ಎಂದು ಪವಮಾನ ಮಾರ್ಗದೊಳ್ ಅಲ್ಪಾಂತರದೊಳ್ ಗದೆಯಂ ಬೀಸಿದನ್', ಗದೆಯ ಗಾಳಿಯಿಂದೆಚೈತ್ರ ಭೀಮನು ಪುನಃ ಗದಾಯುದಕ್ಕೆ ಪ್ರಾರಂಭ ಮಾಡಿ ಕೃಷ್ಣನ ಸೂಚನೆಯ ಪ್ರಕಾರ ಕುರುರಾಜನ ತೊಡೆಗಳೆರಡನ್ನೂ ಒಡೆಯುವನು. ಧಾರ್ತರಾಷ್ಟ್ರನು ಇಳಾತಳದಲ್ಲಿ ಕೆಡೆಯುವನು. “ಭೀಮಸೇನ ಚರಣಪ್ರಹರಣಗಳಿತ ಶೋಣಿತಾದ್ರ್ರಮೌಳಿಯುಮಾಗಿ ಕೋಟಲೆಗೊಳ್ಳುತ್ತಿದ್ದ ಕೌರವೇಶ್ವರನಲ್ಲಿಗೆ ಅಶ್ವತ್ಥಾಮನ್ನು ಬಂದು 'ಎನ್ನ ಬಂಚಿಸಿ ಪೋದುದರೊಳ್ ನಿನಗೆ
Page #65
--------------------------------------------------------------------------
________________
೬೦ | ಪಂಪಭಾರತಂ
ಪಗೆವರಿಂದಿನಿತೆಡಾಯ್ತು ಆದಿತ್ಯತೇಜ ಬೆಸಸು, ಇದಿರಾದ ಪೃಥಾಸುತನುವೆಯಲೀಯದೆ ಕೊಲ್ವೆಂ' ಎನ್ನಲು ಫಣಿಕೇತನನು ನೆತ್ತರ ಧಾರೆಯಿಂ ಮೆತ್ತಿದ ಕಣ್ಣಳನೊತ್ತಂಬದಿಂ ತೆರೆದು ಅಶ್ವತ್ಥಾಮನ ಮೊಗಮಂ ನೋಡಿ
ಎನಗಿನಿತೊಂದವಸ್ಥೆ ವಿಧಿಯೋಗದಿನಾದುದು, ಇದರ್ಕೆ ನೀನು
ಲ್ಕು, ಇನಿತು ಮನಃಕ್ಷತಂಬಡದಿರು, ಆಗದು ಪಾಂಡವರಂ ಗೆಲಲ್ ಪುರಾ ತನಪುರುಷಂ ಮುರಾರಿ ಕೆಲದೊಳ್ ನಿಲೆ, ನೀಂ ಕೊಲಲಾರ್ಪೊಡ, ಆಗದಂ ಬೆನೆ ತಲೆದೊಟ್ಟ ವೈರಿಗಳನ್ ಎನ್ನಸುವುಳ್ಳಿನಂ, ಎಯ್ದೆ ವಾ ಗಡಾ ||
ಎಂತಹ ಛಲ! ಅಸಾಧ್ಯವೆಂದು ಚೆನ್ನಾಗಿ ತಿಳಿದಿದ್ದರೂ ಕೊನೆಯ ಆಸೆ ! ಅಶ್ವತ್ಥಾಮನು ಪಾಂಡವರ ನಿಕ್ಕಿ, ಒಸಗೆವಾತನೀಗಳ್ ಕೇಳಿಸುವೆನ್ ಎಂದು ಹೋಗಿ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿ ಅವರು,ಮಾಂಗಗಳನ್ನು ಕತ್ತರಿಸಿ ಸೂರ್ಯೋದಯಕ್ಕೆ ಸರಿಯಾಗಿ ದುರ್ಯೋಧನನಲ್ಲಿಗೆ ಬಂದು 'ಕೊಳೋ ನಿನ್ನ ನಚ್ಚನ ಪಾಂಡವರ ತಲೆಗಳನ್' ಎಂದು ಮುಂದಿಡಲು ದುರ್ಯೋಧನನು ನೋಡಿ
ಬಾಲಕಮಳಂಗಳಂ ಕಮ
ಳಾಲಯದಿಂ ತಿಳೆದು ತರ್ವವೋಲ್ ತಂದೆ ನೀಂ ಬಾಲಕರ ತಲೆಗಳ ಅಕ್ಕಟ
ಬಾಲಕ ವಧದೋಷಮಂತು ನೀಂ ನೀಗಿದ ||
ಎಂದು ನಿಟ್ಟುಸಿರು ಬಿಟ್ಟು ತನ್ನ ಕೊನೆಯುಸಿರನ್ನೆಳೆಯುವನು. ಈ ವಿಧವಾದ ಸಾವು ಸಾವಲ್ಲ, ಸೋಲು ಸೋಲಲ್ಲ. ಒಂದು ವಿಧವಾದ ವಿಜಯವೇ! ಈ ತೆರನಾದ ಮರಣವು ಅವಮಾನಕರವಾದುದಲ್ಲ, ಕೀರ್ತಿಕರ, ಹೇಡಿಯಂತೆ ಸಂಧಿಮಾಡಿಕೊಂಡು ತನುಜಾನುಜರ ಸಾವಿರ ಮನಃಕ್ಷತದಿಂದ ಸದಾ ಕೊರಗುತ್ತ ಜೀವಿಸುವುದಕ್ಕಿಂತ ವೀರ ಕ್ಷತ್ರಿಯನಂತೆ ಅಭಿಮಾನವನ್ನೇ, ಛಲವನ್ನೇ, ಹಗೆಯನ್ನೇ ಮುಂದಿಟ್ಟು ಧೈರ್ಯದಿಂದ ಕಾದಿ ಸಾಯುವುದು ಎಷ್ಟೋ ಮೇಲು. ಹೀಗೆ ಸತ್ತವನು ಸರ್ವರ ಶ್ಲಾಘನೆಗೂ ಅರ್ಹ. ಅದಕ್ಕಾಗಿಯೇ ಕವಿತಾಗುಣಾರ್ಣವನು ಅಭಿಮಾನಘನತೆಗೆ ಮೆಚ್ಚಿ ಮುಂದಿನ ಅವನ ಚರಮಗೀತೆಯನ್ನು ಹಾಡಿದನು.
ನುಡಿದುದನ್, ಎದ್ದ ತುತ್ತತುದಿಯೆಲ್ಲುವಿನಂ ನುಡಿದಂ, ವಲಂ ಚಲಂ ಬಿಡಿದುದನ್, ಎಯ್ದೆ ಮುಂ ಪಿಡಿದುದಂ ಪಿಡಿದಂ, ಸಲೆ ಪೂಣ ಪೂಣೆ ನೇ ರ್ಪಡೆ ನಡೆವನ್ನೆಗಂ ನಡೆದನ್, ಅಳ್ಳದ ಬಳ್ಳದೆ ತನ್ನೊಡಲ್ ಪಡ ಲ್ವಡುವಿನಂ, ಅಣುಗುಂದನೆ ದಲ್, ಏನಭಿಮಾನಧನಂ ಸುಯೋಧನಂ ||
ಹೀಗೆ ಎಲ್ಲ ದೃಷ್ಟಿಯಿಂದಲೂ ಪಂಪನು ಪ್ರತಿಭಾಶಾಲಿಯಾಗಿದ್ದುದರಿಂದಲೇ ಅವನ ತರುವಾಯ ಬಂದ ಕವಿಗಳಿಗೆ ಅವನು ಪ್ರೇರಕನಾದನು. ಪಂಪನ ದುರ್ಯೋಧನನಿಂದ ಆಕರ್ಷಿತನಾದ, ಮುಂದೆ ಬಂದ ಕವಿಚಕ್ರವರ್ತಿ ರನ್ನನು ದುರ್ಯೋಧನನನ್ನೇ ಪ್ರತಿನಾಯಕನನ್ನಾಗಿ ಮಾಡಿ 'ಸಾಹಸಭೀಮ ವಿಜಯ'ವೆಂಬ ಉತ್ತಮ ಗ್ರಂಥವನ್ನು ರಚಿಸಿದನು. ಅವನ ದೃಷ್ಟಿಯಿಂದ ಅದು ಭೀಮವಿಜಯವಾದರೂ ವಾಚಕರಿಗೆ 'ರಾಜರಾಜವಿಜಯ'ದಂತೆಯೇ ಭಾಸವಾಗುವುದು. ರನ್ನನ ಕವಿಚಕ್ರವರ್ತಿತ್ವಕ್ಕೆ ಪಂಪನು
Page #66
--------------------------------------------------------------------------
________________
ಉಪೋದ್ಘಾತ | ೬೧ ಬಹುಮಟ್ಟಿಗೆ ಕಾರಣ. ಅವನ 'ಗದಾಯುದ್ಧ'ವು ಪಂಪಭಾರತದ ಹದಿಮೂರನೆಯ ಆಶ್ವಾಸದ ೧೦೮ ಪದ್ಯಗಳಲ್ಲಿ ಶಲ್ಯವಧೆಯ ವಿಚಾರವಾದ ೨೮ ಪದ್ಯಗಳನ್ನುಳಿದ ಭಾಗಗಳ ವಿಸ್ತರಣವೇ ಆಗಿದೆ. ವಸ್ತುವರ್ಣನೆ, ಶೈಲಿ ಮೊದಲಾದವುಗಳಲ್ಲಿ ಬಹುಭಾಗ ಪಂಪನದಾಗಿರುತ್ತದೆ. ರನ್ನನ ದುರ್ಯೊಧನನ ಪಾತ್ರಚಿತ್ರಣ ಪಂಪನ ಪ್ರೇರಣೆಯಿಂದಲೇ ಆಗಿರಬೇಕು.
ಕೊನೆಯಲ್ಲಿ ಈ ಪ್ರಬಂಧವನ್ನು ಮುಗಿಸುವ ಮೊದಲು ಪಂಪನ ದೇಶಾಭಿಮಾನದ ವಿಷಯವಾಗಿ ಒಂದು ಮಾತನ್ನು ಹೇಳುವುದು ಆವಶ್ಯಕ. ಆಂಗ್ಲಭಾಷೆಯ ಗದ್ಯಗ್ರಂಥಕಾರರಲ್ಲಿ ಉದ್ದಾಮನಾದ ಮಯರ್ಸ್ ಎಂಬುವನು ವರ್ಡ್ಸ್ವರ್ತ್ ಕವಿಯ ಜೀವನ ಚರಿತ್ರೆಯನ್ನು ಬರೆಯುತ್ತ ಅವನ ದೇಶಾಭಿಮಾನವನ್ನು ಕುರಿತು ಚರ್ಚಿಸುವಾಗ ಹೀಗೆಂದು ಹೇಳುವನು-ಸ್ವದೇಶದ ಹಿತಕ್ಕಾಗಿಯೂ ಏಳಿಗೆಗಾಗಿಯೂ ಶರೀರವನ್ನರ್ಪಿಸಿ ಹೋರಾಡುವ ವೀರರು ಹೇಗೆ ದೇಶಾಭಿಮಾನಿಗಳೊ ಹಾಗೆಯೇ ಕವಿಯು ಅಂತಹ ದೇಶಾಭಿಮಾನಿಯೆಂದು ಕರೆಯಿಸಿಕೊಳ್ಳಲರ್ಹನು. ಇವನು ಕವಚವನ್ನು ಧರಿಸಿ ಬಿಲ್ಲು ಬಾಣಗಳನ್ನು ಹಿಡಿದು ರಥವನ್ನೇರಿ ಯುದ್ಧರಂಗದಲ್ಲಿ ವೈರಿಗಳೊಡನೆ ಯುದ್ಧ ಮಾಡಬೇಕಾಗಿಲ್ಲ. ಕವಿಯಾದವನು ದೇಶಕ್ಕಾಗಿ ಹೋರಾಡುವ ದೇಶಭಕ್ತರ ಸಾಹಸಕಾರ್ಯಗಳನ್ನು ತನ್ನಲ್ಲಿರುವ ಕವಿತಾಶಕ್ತಿಯಿಂದ ಗ್ರಂಥರೂಪದಲ್ಲಿ ಚಿರಸ್ಥಾಯಿಯಾಗಿ ಮಾಡುವುದರಲ್ಲಿ ನಿರತನಾಗುವುದು ತನ್ನ ದೇಶಾಭಿಮಾನದ ಹೆಗ್ಗುರುತು. ಯಾವ ಕವಿಯಲ್ಲಿ ಈ ತೆರನಾದ ದೇಶಾಭಿಮಾನವಿರುವುದಿಲ್ಲವೋ ಅಂತಹವನು ಇಂತಹ ಕಾವ್ಯವನ್ನು ರಚಿಸಲಾರ. ರಚಿಸಿದರೂ ನಿರ್ಜಿವವೂ ಕಲಾರಹಿತವೂ ಆಗುತ್ತದೆ ಎಂದು ಹೇಳಿ ವರ್ಡ್ಸ್ವರ್ತ್ ಕವಿಯನ್ನು ದೇಶಾಭಿಮಾನಿಗಳ ಗುಂಪಿನಲ್ಲಿ ಸೇರಿಸಿರುವನು. ಇದು ವಾಸ್ತವವಾದ ಅಂಶ. ಇಂತಹವರು ಯಾವಾಗಲೂ ದೇಶಕ್ಕಾಗಿ ಮಡಿಯಲು ಸಿದ್ದರಾಗಿರುತ್ತಾರೆ. ಇಂತಹ ದೇಶಾಭಿಮಾನವು ಪಂಪನಲ್ಲಿ ತುಂಬಿ ತುಳುಕುತ್ತಿರುವುದು ಅವನ ಕಾವ್ಯಗಳಲ್ಲಿ ಸ್ವಯಂಪ್ರಕಾಶವಾಗಿದೆ.
ಪಂಪನ ದೇಶವಾತ್ಸಲ್ಯಗಳನ್ನು ವ್ಯಕ್ತಗೊಳಿಸುವ ಪದ್ಯಗಳು ಅವನ ಕಾವ್ಯಗಳಲ್ಲಿ ನಮಗೆ ಹೇರಳವಾಗಿ ಸಿಕ್ಕುವುವು. ಅರ್ಜುನನು ದಿಗ್ವಿಜಯಾರ್ಥವಾಗಿ ಬರುತ್ತಾ ಬನವಾಸಿಯನ್ನು ಸೇರುವನು. ಈ ದೇಶವನ್ನು ನೋಡಿ ಅವನ ಹೃದಯವು ಆನಂದಭರಿತವಾಗುವುದು. ಅಲ್ಲಿ ನೆಲೆಗೊಂಡಿದ್ದ ಬಗೆಬಗೆಯ ಸಂಪತ್ತು, ಪುಷ್ಪವಾಟಿ, ಕಾಸಾರ, ಲತಾಗೃಹ, ನಂದನವನ-ಇವು ಯಾವ ದಾರಿಗನಿಗಾದರೂ ಆನಂದ ವನ್ನುಂಟುಮಾಡುವುದು, ಅಲ್ಲಿಯ ನಿವಾಸಿಗಳು ಸ್ವರ್ಗಸುಖವನ್ನನುಭವಿಸುತ್ತಿರುವರು. ಇಂತಹ ನಾಡಿನಲ್ಲಿ ಒಂದು ಸಲ ಜನ್ಮವೆತ್ತುವುದೂ ಪುಣ್ಯಫಲದಿಂದಲೇ, ಇದಕ್ಕಾಗಿ ಮನುಷ್ಯನು ಎಷ್ಟು ತಪಸ್ಸು ಮಾಡಿದರೂ ಸಾರ್ಥಕವೇ. 'ತುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ಬನವಾಸಿ ದೇಶದೊಳ್'! ಇದೇ ಅಲ್ಲವೇ ಹುಟ್ಟಿದುದಕ್ಕೆ ಸಾರ್ಥಕ! ಪಂಪನು ಬಾಲ್ಯದಲ್ಲಿ ಬನವಾಸಿಯಲ್ಲಿ ಬಹುಕಾಲ ಇದ್ದು ಅದರ
Page #67
--------------------------------------------------------------------------
________________
೬೨ | ಪಂಪಭಾರತಂ ಸವಿಯನ್ನುಂಡಿರಬೇಕು. ಆದುದರಿಂದಲೇ ಅವನೆಲ್ಲಿದ್ದರೂ ಅದರ ನೆನಪು ಬಂದೇ ಬರುತ್ತದೆ. ಅದಕ್ಕಾಗಿಯೇ ಅವನು ಇಂದ್ರಪ್ರಸ್ಥಪುರದಿಂದ ದೇಶಾಟನೆಗೆ ಹೊರಟುಬಂದ ಅರ್ಜುನನ ಬಾಯಲ್ಲಿ ಅದರ ಮೇಲೆಯನ್ನು ಹಾಡಿಸಿರುವುದು. ಅಲ್ಲಿರುವವರೆಲ್ಲರೂ 'ಚಾಗದ, ಭೋಗದ, ಅಕ್ಕರದ, ಗೇಯದ, ಗೊಟ್ಟಿಯ, ಅಲಂಪಿನ, ಇಂಪುಗಳೆ, ಆಗರವಾದ ಮಾನಿಸರೆ. ಅಲ್ಲಿಯ 'ಅಮರ್ದಂ ಮುಕ್ಕುಳಿಪಂತುಟಪ್ಪ ಸುಸಿಲ್ ಬಂದಿಂಪ ತಗುಲ್ಲೊಂದು ಗೇಯಮುಂ ಆದ ಅಕ್ಕರಗೊಟ್ಟಿಯುಂ ಚದುರದ, ಒಳ್ವಾತುಂ ಕುಳಿ ಕೋಟ್ಟಿ ಜೊಂಪಮುಂ' ಎಂತಹವರನ್ನೂ ಆಕರ್ಷಿಸುತ್ತದೆ. ಆದುದರಿಂದಲೇ
ತೆಂಕಣ ಗಾಳಿ ಸೋಂಕಿದೊಡಂ, ಒಳ್ಳುಡಿಗೇಳ್ಕೊಡಂ ಇಂಪನಾಳ ಗೇ ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಂ, ಆದ ಕೆಂದಲಂ ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಂ ಏನನೆಂಬೆನ್ ಆ ರಂಕುಸಮಿಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ ||
ಎಂದು ಪಂಪನು ಹಾತೊರೆಯುತ್ತಿರುವುದು. ಪಂಪನ ದೇಶವಾತ್ಸಲ್ಯದ ಪರಾಕಾಷ್ಠೆ ಇಲ್ಲಿ ಬಹು ಸ್ಪಷ್ಟವಾಗಿ ಎದ್ದು ಕಾಣುತ್ತದೆ.
* ಪಂಪನು ಅರಿಕೇಸರಿಯನ್ನು ಕಥಾನಾಯಕನನ್ನಾಗಿ ಮಾಡಿರುವುದೂ ದೇಶಾಭಿಮಾನದಿಂದಲೇ ಕನ್ನಡನಾಡಿನ ವೀರರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿ ಮಾಡುವುದಕ್ಕಾಗಿಯೇ, ಖಾಂಡವದಹನಪ್ರಕರಣದಲ್ಲಿ ಪಂಪನು ಅರಿಕೇಸರಿಯ ಸತ್ಯಸಂಧತೆಯನ್ನು ವ್ಯಕ್ತಗೊಳಿಸುವ ಮುಂದಿನ ಎರಡು ಪದ್ಯಗಳನ್ನು ಕೊಟ್ಟಿದ್ದಾನೆ.
ಎರದನ ಪೆಂಪು ಪೇಡನಲಂ, ಪೊಣರ್ವಾತನ ಹೆಂಪು ಪೇಡಾ ಸುರಪತಿ, ಕೊಟ್ಟ ತಾಣದಡೆ ಪೇಡಂ , ಆ ಯಮುನಾನದೀತಟಾಂ ತರಂ ಒಸೆದಿತ್ಯನಾನ್ ಎಲಿಯೆ ಕೇಳೆನ್, ಇಳಾಧರ ನೀನ್ ಇದರ್ಕೆ ಮಾ ತೆರಡಣಮಾಡಲಾಗದು, ಇದು ಸೈಪಿನೊಳಲ್ಲದೆ ಕೂಡಿ ಬರ್ಕುಮೇ ? ಒತ್ತಿ ತುಂಬಿ ನಿಂದ ರಿಪುಭೂಜಸಮಾಜದ ಬೇರ್ಗಳಂ ನಭ ತದೆ ಬಂದು ತನ್ನ ಮಜವೊಕೊಡೆ ಕಾಯದೆ ಚಾಗದೋಳಿನ ಚೈತ್ರದೆ ಮಾಣು ಬಾ ಪುಲುಮಾನಸನೆಂಬನ್, ಅಜಾಂಡಮೆಂಬುದೊಂ ದತ್ತಿಯ ಪಣೋಳಿರ್ಪ ಪುಟುವಲ್ಲದೆ ಮಾನಸನೇ ಮುರಾಂತಕಾ ||
ಈ ಪದ್ಯಗಳನ್ನು ಬರೆಯುತ್ತಿರುವಾಗ ಪಂಪನ ಆದರ್ಶರಾಜನ ಚಿತ್ರ ಹೇಗಿದ್ದಿರಬೇಕು? ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಈ ಪಂಪನ ವಾಗ್ವಿಲಾಸವನ್ನು - ಹೋಲುವ ಕವೀಂದ್ರರಾರಿದ್ದಾರೆ? ಆದುದರಿಂದಲೇ ಪಂಪನು ನಾಡೋಜನಾದುದು. ಆದುದರಿಂದಲೇ ಅವನ ಕಾವ್ಯಗಳು ಮುನ್ನಿನ ಕಾವ್ಯಗಳನ್ನು ಇಕ್ಕಿ ಮೆಟ್ಟಿದುದು.
ಒಟ್ಟಿನಲ್ಲಿ 'ಪಂಪನ ಕವಿತಾಧೋರಣೆಯು ಅಸಾಮಾನ್ಯವಾದುದು. ಈತನ ನವೀನ ಕಲ್ಪನೆಗಳ ಪ್ರಾವೀಣ್ಯತೆಯೂ ರಸಾನುಗುಣವಾಗಿ ವಸ್ತುವನ್ನು (ಕಥಾಶರೀರವನ್ನು ರಚಿಸುವ ಮತ್ತು ವಸ್ತುವಿಗೆ ತಕ್ಕಂತೆ ರಸವನ್ನು ಹಿಳಿದು ಬೆರೆಯಿಸುವ ಕೌಶಲವೂ ರಸಕ್ಕೆ ತಕ್ಕಂತೆ ಛಂದಸ್ಸನ್ನು ಯೋಜಿಸುವ ಪ್ರೌಢಿಮೆಯೂ, ಕಾವ್ಯದ ಒಟ್ಟು ಮೆಯ್ಯ ಅಂದವು ಸ್ವಲ್ಪವೂ
Page #68
--------------------------------------------------------------------------
________________
.: ಉಪೋದ್ಘಾತ | ೬೩ ಕೆಡದಂತೆ ಅಂಗೋಪಾಂಗಗಳನ್ನು ಹೊಂದಿಕೆಗೊಳಿಸುವ ಚತುರತೆಯೂ ಪಾತ್ರಗಳಿಗೆ ಜೀವಕಳೆಯನ್ನು ತುಂಬಿ ಮೈವೆತ್ತು ಎದುರಿಗೆ ನಿಲ್ಲುವಂತೆ ಮಾಡುವ ರಚನಾಚಮತ್ಕಾರವೂ, ಅನೌಚಿತ್ಯಗಳನ್ನು ತಕ್ಕಂತೆ ಮಾರ್ಪಡಿಸಿ ಸಹಜಗೊಳಿಸುವ ಶಕ್ತಿಯೂ, ಪ್ರಾಚೀನಕಾವ್ಯಗಳಲ್ಲಿ ದೊರೆಯುವ ಸಾರವಾದ ಆಶಯಗಳನ್ನು ಆರಿಸಿ ತೆಗೆದು ತಕ್ಕಂತೆ ಮಾರ್ಪಡಿಸಿ ಸೇರಿಸಿಕೊಳ್ಳುವ ಪ್ರಜ್ಞಾವೈಭವವೂ, ಅಭಿಪ್ರಾಯವು ಥಟ್ಟನೆ ಮನಸ್ಸಿಗೆ ಹಿಡಿಯುವಂತೆ ಮಾಡುವ ಸಾಮರ್ಥ್ಯವೂ, ಸನ್ನಿವೇಶಕ್ಕೊಪ್ಪುವಂತೆಯೂ ಮಿತಿಮೀರದಂತೆಯೂ ಓದುಗರಲ್ಲಿ ನಿರ್ಮಲಭಕ್ತಿ ಮೂಡುವಂತೆಯೂ ಮಾಡುವ ಸ್ತೋತ್ರಪಾಠಗಳ ಗಾಂಭೀರ್ಯವೂ, ಬಳಕೆಯಲ್ಲಿರುವ ಗಾದೆಗಳನ್ನು ಒಪ್ಪುವಂತೆ ಅಲ್ಲಲ್ಲಿ ಪ್ರಯೋಗಿಸುವ ಔಚಿತ್ಯವೂ, ಅನೇಕ ವಾಕ್ಯಗಳಲ್ಲಿ ಹೇಳಬೇಕಾದ ವಿಷಯವನ್ನು ಕೆಲವೇ ಮಾತುಗಳಲ್ಲಿ ಅಡಗಿಸಿ ಅರ್ಥವಾಗುವಂತೆ ಅಂದವಾಗಿ ಹೇಳುವ ನೈಪುಣ್ಯವೂ, ಬಹುಪದ ಪ್ರಯೋಗದಕ್ಷತೆಯೂ, ಶೈಲಿಯ ಸರಳತೆಯೂ, ಬಂಧದ ಬಿಕ್ಕಟ್ಟೋ, ವರ್ಣನೆಗಳ ರಮ್ಯತೆಯೂ, ಅಲಂಕಾರಗಳ ಸಹಜಭಾವವೂ ಕಾವ್ಯಾಂಗಗಳಾದ ಇತರ ಸದ್ಭಾವಗಳ ರಚನವಿಚಕ್ಷಣತೆಯೂ ಈ ಕವಿಯನ್ನು 'ಕರ್ಣಾಟಕ ಕವಿತಾ ಸಾರ್ವಭೌಮನನ್ನಾಗಿ ಮಾಡಿರುವುವು' (ಪಂಪಭಾರತದ ಉಪೋದ್ಘಾತ, ಕರ್ಣಾಟಕ ಸಾಹಿತ್ಯಪರಿಷತ್ತಿನ ಪ್ರಕಟಣೆ ೧೯೩೧)
“ಛಂದಸ್ಸಿನ ವಿಚಾರ :- ಉಭಯಭಾಷಾಪಂಡಿತನಾದ ಪಂಪನು ತನ್ನ ಎರಡು ಕಾವ್ಯಗಳಲ್ಲಿ ವಿವಿಧ ಜಾತಿಯ ಕನ್ನಡ ಸಂಸ್ಕೃತ ಛಂದಸ್ಸುಗಳನ್ನು ಉಪಯೋಗಿಸಿದ್ದಾನೆ. ಅವುಗಳಲ್ಲಿ ಕನ್ನಡದ ಜಾಯಮಾನಕ್ಕೆ ಹೊಂದಿಕೊಂಡಿರುವ ಸಂಸ್ಕೃತದ ಆರ್ಯಾ ಪ್ರಾಕೃತದ ಸ್ಕಂದಕಕ್ಕೆ ಹೊಂದಿಕೊಂಡಿರುವ ಕಂದಪದ್ಯಗಳೇ ಹೆಚ್ಚಿನ ಭಾಗದವು. ಪಂಪಭಾರತದ ೧೬೦೭ ಮತ್ತು ಆದಿಪುರಾಣದ ೧೬೩೦ ಪದ್ಯಗಳಲ್ಲಿ ಕ್ರಮವಾಗಿ ಅವು ೭೩೦ ಮತ್ತು ೯೫೦ ಆಗಿರುತ್ತವೆ. ಅವುಗಳನ್ನು ಬಿಟ್ಟರೆ ಕನ್ನಡದಲ್ಲಿ ಸುಪ್ರಸಿದ್ಧವಾದ ಆರು ಸಂಸ್ಕೃತವೃತ್ತಗಳಾದ ಉತ್ಪಲಮಾಲೆ, ಶಾರ್ದೂಲ, ಸ್ರಗ್ಧರೆ ಮತ್ತು ಅವುಗಳ ಮಾರ್ಪಾಟೇ ಆಗಿರುವ ಚಂಪಕಮಾಲಾ, ಮತ್ತೇಭವಿಕ್ರೀಡಿತ ಮಹಾಸ್ರಗ್ಧರೆಗಳು ಪ್ರಧಾನಸ್ಥಾನವನ್ನು ಪಡೆದಿರುತ್ತವೆ. ಇವುಗಳಲ್ಲಿಯೂ ಚಂಪಕಮಾಲೆಗೆ ಅಗ್ರಸ್ಥಾನ. ಪಂಪಭಾರತದಲ್ಲಿಯೇ ಸುಮಾರು ೪೧೦ ಸಂಖ್ಯಾಕವಾಗಿವೆ. ಅವುಗಳಲ್ಲರ್ಧ ಮತ್ತೇಭವಿಕ್ರೀಡಿತವೂ ಅದರಲ್ಲರ್ಧ, ಉತ್ಪಲಮಾಲೆಯೂ ಇವೆ. ಈ ಸುಪ್ರಸಿದ್ಧವಾದ ಆರು ವೃತ್ತಗಳಲ್ಲದೆ ಪೃಥ್ವಿ, ತರಳ, ಹರಿಣ, ಮಲ್ಲಿಕಾಮಾಲೆ, ಖಚರಪುತ, ಅನವದ್ಯ ಮೊದಲಾದ ವೃತ್ತಗಳು ಉಪಯುಕ್ತವಾಗಿವೆ. ಅಪರೂಪವಾಗಿ ಮಂದಾಕ್ರಾಂತ, ಅನುಷ್ಟುಪ್, ಪುಷ್ಟಿತಾಗ್ರಗಳನ್ನು ಕವಿಯು ಉಪಯೋಗಿಸಿದ್ದಾನೆ.
- ಕನ್ನಡ ಅಂಶಛಂದಸ್ಸಾದ ಅಕ್ಕರ ಮತ್ತು ಪಿರಿಯಕ್ಕರಗಳನ್ನು ಯಶಸ್ವಿಯಾಗಿ ಬಳಸಿದ್ದಾನೆ. ಆದರೆ ಇವುಗಳಿಗೆ ವಿಶೇಷ ವ್ಯತ್ಯಾಸ ಕಾಣುವುದಿಲ್ಲ. ಮೂರು ರೀತಿಯ, ರಗಳೆಗಳೂ ಇಲ್ಲಿ ಪ್ರಯೋಗವಾಗಿವೆ. ತ್ರಿಪದಿಯು ಬಹು ಅಪರೂಪವಾಗಿ
Page #69
--------------------------------------------------------------------------
________________
೬೪ | ಪಂಪಭಾರತಂ ಉಪಯುಕ್ತವಾಗಿದೆ. ಪಂಪನ ಛಂದೋವಿಲಾಸದಲ್ಲಿ ಇರುವ ವೈಶಿಷ್ಟ, ಅವನಿಗೆ ಎಲ್ಲೆಲ್ಲಿ, ಯಾವ ಯಾವ ಪ್ರಕರಣದಲ್ಲಿ ಯಾವ ಯಾವ ಛಂದಸ್ಸನ್ನು ಉಪಯೋಗಿಸಬೇಕೆಂಬ ವಿವೇಕ ಜ್ಞಾನ. ಅವನ ಈ ಜಾಣೆಯಿಂದ ವರ್ಣಿತ ವಸ್ತುಗಳಿಗೆ ವಿಶೇಷ ಅರ್ಥ ವ್ಯಕ್ತಿತ್ವವೂ ನಾದಮಾಧುರ್ಯವೂ ಉಂಟಾಗುತ್ತದೆ. ಚಂಪೂಕೃತಿಗಳಾದ ಇವನ ಕೃತಿಗಳಲ್ಲಿ ಗದ್ಯಕ್ಕೂ ಪದ್ಯದಷ್ಟೇ ಪ್ರಭಾವವಿರುತ್ತದೆ. ಅನೇಕ ಗದ್ಯಭಾಗಗಳು ಛಂದೋರಹಿತವಾದ ಪದ್ಯಗಳಂತೆ ವಿಶೇಷನಾದಮಯವಾಗಿಯೂ ಇವೆ. ಅವನು ಮಾರ್ಗಿ ಮತ್ತು ದೇಸಿಗಳೆರಡಕ್ಕೂ ಸಮಾನವಾದ ಸ್ಥಾನವನ್ನೇ ಕೊಟ್ಟಿರುವುದರಿಂದ ಸಂಸ್ಕೃತ ಮತ್ತು ದೇಸೀ ಶಬ್ದಗಳ ಜೋಡಣೆ ಬಹು ರಂಜಕವಾಗಿರುತ್ತದೆ. ಅವನ ಕಾವ್ಯತತ್ವವನ್ನು ಸಿದ್ದಾಂತಗೊಳಿಸುತ್ತವೆ. ಆದರೂ ಕಥಾನಿರೂಪಣೆಗೆ ಗದ್ಯವೂ ವರ್ಣನೆಗೆ ಪದ್ಯವೂ ಹೆಚ್ಚು ಹೊಂದಿಕೊಳ್ಳುವಂತೆ ಕಾಣುತ್ತದೆ. ಗದ್ಯಭಾಗದಲ್ಲಿ ಸಂಸ್ಕೃತ ಪದಗಳ ಮತ್ತು ಸಮಾಸಗಳ ಭಾಗ ಹೆಚ್ಚಿರುತ್ತದೆ. ಇಷ್ಟಾದರೂ ಶಾಸ್ತ್ರಗ್ರಂಥವಾದ ಆದಿಪುರಾಣದಲ್ಲಿರುವಷ್ಟು ಗದ್ಯಭಾಗವು ಲೌಕಿಕ ಕಾವ್ಯವಾದ ಪಂಪಭಾರತ ದಲ್ಲಿಲ್ಲ. ಆದುದರಿಂದಲೇ ಇದು ಪುರಾಣಕ್ಕಿಂತ ಹೆಚ್ಚು ಭಾವಪೂರ್ಣವಾಗಿದೆ.
ಗ್ರಂಥಪಾಠ ಮತ್ತು ಮುದ್ರಣಗಳು : ಪಂಪಭಾರತವು ಅತ್ಯುತ್ತಮ ಗ್ರಂಥವಾದರೂ ಅದರ ಶುದ್ಧಪಾಠವನ್ನು ನಿಷ್ಕರ್ಷಿಸಲು ಸಾಕಷ್ಟು ಹಸ್ತಪ್ರತಿಗಳು ಲಭ್ಯವಾಗಿಲ್ಲ. ಇದನ್ನು ಮೊತ್ತ ಮೊದಲನೆಯ ಸಲ ಮೈಸೂರುಪ್ರಾಚ್ಯಸಂಶೋಧನೆಯ ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದ ಮಿ ರೈಸ್ ಸಿ.ಐ.ಇ. ಅವರು ಪ್ರಾಕ್ತನವಿಮರ್ಶವಿಚಕ್ಷೆಣರಾದ ಆರ್. ನರಸಿಂಹಾಚಾರ್ಯರ ಸಹಾಯದಿಂದ ೧೮೯೮ರಲ್ಲಿ ಮೊದಲನೆಯ ಸಲ ಪ್ರಕಟಿಸಿದರು. ಆ ಮುದ್ರಣವನ್ನು ಅವರು ಮೈಸೂರು ಅರಮನೆಯ ಸರಸ್ವತೀಭಂಡಾರದ ಓಲೆ ಪ್ರತಿ ಮತ್ತು ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಸೊಸೈಟಿಯ ಮತ್ತೊಂದು ತಾಳೆಯೋಲೆಯ ಪ್ರತಿಗಳ ಸಹಾಯದಿಂದ ಸಂಶೋಧಿಸಿದರು. ಮುಂದೆ ಬಹು ಕಾಲ ಅದರ ಪುನರ್ಮುದ್ರಣವಾಗಲಿಲ್ಲ. ೧೯೧೭ನೆಯ ವರ್ಷದಲ್ಲಿ ಸರ್ಕಾರದವರ ಅಭಿಪ್ರಾಯದಂತೆ ಕರ್ಣಾಟಕದ ಸಾಹಿತ್ಯ ಪರಿಷತ್ತಿನವರು ಪಂಡಿತರುಗಳ ಸಹಾಯದಿಂದ ಪ್ರಕಟಿಸಲು ಒಪ್ಪಿಕೊಂಡರು. ಮ! ರಾ। ಗಳಾದ ಎಸ್. ತಿಮ್ಮಪ್ಪಯ್ಯಶಾಸ್ತ್ರಿಗಳು, ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್ಯರು, ಕಾನಕಾನ ಹಳ್ಳಿಯ ವರದಾಚಾರ್ಯರು, ಮೈಸೂರು ಸೀತಾರಾಮಶಾಸ್ತಿಗಳು-ಇವರುಗಳನ್ನೊಳಗೊಂಡ ಪಂಡಿತಮಂಡಳಿ ಈ ಕಾರ್ಯವನ್ನು ಆರಂಭಿಸಿತು. ಮುಂದೆ ಶ್ರೀ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಪ್ರಧಾನ ಸಂಪಾದಕರಾದರು. ಅವರಿಗೆ ಪಂಡಿತ ಕೆ. ಭುಜಬಲಿಶಾಸ್ತಿಗಳು ಉತ್ತರಭಾರತದ ಆರಾ ಎಂಬ ಪುಸ್ತಕ ಭಂಡಾರದಲ್ಲಿದ್ದ ಪ್ರತಿಯನ್ನು ಕಳುಹಿಸಿ ಕೊಟ್ಟರು. ಸಂಪಾದಕರು ಮೇಲಿನ ಪಂಡಿತ ಮಂಡಳಿಯ ಸದಸ್ಯರ ಮತ್ತು ಇತರ ಪ್ರಸಿದ್ದ ಕನ್ನಡ ಪಂಡಿತರುಗಳಾದ ಬಿ.ಎಂ. ಶ್ರೀಕಂಠಯ್ಯ, ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ಎ. ಎನ್. ನರಸಿಂಹಯ್ಯ, ಡಿ. ವಿ. ಗುಂಡಪ್ಪ, ಬಿ. ಕೃಷ್ಣಪ್ಪ, ಬಿ. ರಾಮರಾವ್, ಶಾಂತಿರಾಜಶಾಸ್ತಿಗಳು-ಇವರ ನೆರವಿನಿಂದ ಕಡಬದ ನಂಜುಂಡಶಾಸ್ತಿಗಳು ಮತ್ತು ಟಿ. ಎಸ್. ವೆಂಕಣ್ಣಯ್ಯ ಇವರುಗಳ
Page #70
--------------------------------------------------------------------------
________________
ಉಪೋದ್ಘಾತ | ೬೫ ಸಹಾಯ ಸಂಪಾದಕತ್ವದಲ್ಲಿ ೧೯೩೧ರಲ್ಲಿ ಉತ್ತಮ ಸಂಸ್ಕರಣವೊಂದನ್ನು ಪ್ರಕಟಿಸಿದರು. ಕಾಲಾನುಕಾಲದಲ್ಲಿ ಪ್ರತಿಗಳು ಮುಗಿಯಲು ಮೈಸೂರುವಿಶ್ವವಿದ್ಯಾನಿಲಯದವರು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಭಾಗಶಃ ಇದನ್ನು ಮುದ್ರಿಸಿ ಸಹಾಯ ಮಾಡಿದರು. ಈ ಉತ್ತಮಕೃತಿಯ ಪ್ರತಿಗಳ ಲಭ್ಯವೇ ಇಲ್ಲದುದರಿಂದ ವಿಶ್ವವಿದ್ಯಾನಿಲಯದವರು ಪರಿಷತ್ತಿನ ಪ್ರಕಟಣೆಯನ್ನೇ ಆಧಾರವಾಗಿಟ್ಟುಕೊಂಡು ೧೯೭೩ರಲ್ಲಿ ಅದರ ಪುನರ್ಮುದ್ರಣ ಮಾಡಿದರು. ಪ್ರಕೃತ ಅನುವಾದವು ಈ ಮುದ್ರಣದ ಪಾಠವನ್ನು ಅಂಗೀಕರಿಸಿದೆ. ಬೇರೆ ಯಾವ ಕೈ ಬರೆಹಗಳ ಸಹಾಯವೂ ದೊರೆತಿಲ್ಲವಾದುದರಿಂದ ಇದೇ ಮುದ್ರಣದಲ್ಲಿ ಕೊಟ್ಟಿರುವ ಕೆಲವು ಅಡಿ ಟಿಪ್ಪಣಿಯ ಪಾಠಾಂತರಗಳ ಪುನರ್ವಿಮರ್ಶೆಯಿಂದ ಕೆಲವು ಪಾಠಾಂತರಗಳನ್ನು ಉಪಯೋಗಿಸಿಕೊಂಡು ಅನುವಾದಿಸಿದೆ. ಅವರಿಗೆ ಸಂದೇಹಗಳಿದ್ದ ಅನೇಕ ಪಾಠಗಳು ನಮಗೂ ಹಾಗೆಯೇ ಉಳಿದಿರುವುದು ಅನಿವಾರ್ಯವಾಗಿದೆ.
- ಎನ್. ಅನಂತರಂಗಾಚಾರ್
Page #71
--------------------------------------------------------------------------
________________
-
Page #72
--------------------------------------------------------------------------
________________
Coll
ಚoll
ಪ್ರಥಮಾಶ್ವಾಸಂ
ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ ಜೀಯನ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ | ತೀಯ ಸುಪುಷ್ಪಪಟ್ಟಮನೊಡಂಬಡೆ ತಾಳಿಯುಮಿಂತುದಾತ್ತ ನಾ ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ *
ಮುಳಿಸು ಲಲಾಟನೇತ್ರಶಿಖಿ ಮೆಚ್ಚಿ ವಿನೂತ ರಸಪ್ರಸಾದಮು ಜಳ ಜಸಮಂಗಸಂಗತ ಲಸದ್ಧಸಿತಂ ಪ್ರಭುಶಕ್ತಿ ಶಕ್ತಿ ನಿ| ರ್ಮಳಮಣಿಭೂಷಣಂ ಫಣಿವಿಭೂಷಣಮಾಗೆ ನೆಗಯಂ ಪುದುಂ ಗೊಳಿಸಿದನೀಶ್ವರಂ ನೆಗಟ್ಟುದಾರ ಮಹೇಶ್ವರನೀಗ ಭೋಗಮಂ ||
*
C
G
೧. ಅಮೃತಮಥನ ಕಾಲದಲ್ಲಿ ಉದ್ಭವಿಸಿದ ಲಕ್ಷ್ಮಿಯನ್ನು ಶ್ರಮವಿಲ್ಲದೆ ಪಡೆದ, ಬಲಿಚಕ್ರವರ್ತಿಯಿಂದ ಬೇಡಿ ಭೂಮಿಯನ್ನು ಪಡೆದ, ಪುಷ್ಪಪಟ್ಟವೆಂಬ ಸಾಮಾನ್ಯ ಶಿರೋಭೂಷಣವನ್ನು ಪಡೆದ ನಾರಾಯಣನಂತಲ್ಲದೆ ಶತ್ರುಸೈನ್ಯವೆಂಬ ಸಮುದ್ರದ `ಮಂಥನದಿಂದ ಜಯಲಕ್ಷ್ಮಿಯನ್ನು ಬೇಡದೆ ಶತ್ರುರಾಜರುಗಳನ್ನು ಮೆಟ್ಟಿ ಭೂಮಿಯನ್ನೂ ತನ್ನ ಯೋಗ್ಯತೆಗೆ ಅನುಗುಣವಾದ ಸುಪುಷ್ಪಪಟ್ಟವೆಂಬ ಶಿರೋಭೂಷಣವನ್ನು ಪಡೆದು ಉದಾತ್ತನಾರಾಯಣನೆನಿಸಿಕೊಂಡಿರುವ ದೇವನಾದ ಅರಿಕೇಸರಿಯು ನಮಗೆ ಸೌಖ್ಯರಾಶಿಯನ್ನು ಕೊಡಲಿ, ೨. ಅರಿಕೇಸರಿಯ ಕೋಪವೇ ಈಶ್ವರನ ಹಣೆಗಣ್ಣಿನ ಬೆಂಕಿಯಾಗಿರಲು ಅವನ ಮೆಚ್ಚಿಗೆಯೇ ಶ್ಲಾಘವೂ ರಸಯುಕ್ತವೂ ಆದ ಅವನ ಪ್ರಸಾದ. ಅರಿಕೇಸರಿಯ ಯಶಸ್ಸೇ ಈಶ್ವರನು ಶರೀರಕ್ಕೆ ಲೇಪಿಸಿಕೊಂಡಿರುವ ಕಾಂತಿಯುಕ್ತವಾದ ವಿಭೂತಿಯಾಗಿರಲು ಅರಿಕೇಸರಿಯ ಶಕ್ತಿತ್ರಯಗಳಲ್ಲಿ ಒಂದಾದ ಪ್ರಭುಶಕ್ತಿ ಈಶ್ವರನ ಶಕ್ತಿದೇವತೆಯಾಗಿರಲು ಇವನ ನಿರ್ಮಲವಾದ ರತ್ನಭೂಷಣಗಳೇ ಅವನ ನಾಗಭೂಷಣವಾಗಿರಲು ವಿಶೇಷ ಪ್ರಸಿದ್ಧಿಯನ್ನು ತನ್ನಲ್ಲಿ ಅಳವಡಿಸಿಕೊಂಡಿರುವ ಈಶ್ವರನೂ ಉದಾರಮಹೇಶ್ವರನೆಂದು ಪ್ರಸಿದ್ಧಿಯನ್ನು ಪಡೆದಿರುವ ಅರಿಕೇಸರಿಯೂ ಸೌಖ್ಯರಾಶಿಯನ್ನು ಕೊಡಲಿ.
ವಕ್ತವ್ಯವಿಶೇಷ : ಈ ಪದ್ಯದಲ್ಲಿ ಬರುವ 'ಪುಷ್ಪಪಟ್ಟ'ವೆಂಬುದು ಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದ ಶಬ್ದ. ರಾಜರೂ ದೇವತೆಗಳೂ ಧರಿಸುವ ಶಿರೋವೇಷ್ಟನಗಳಲ್ಲಿ ಜಟಾ, ಮೌಳಿ, ಕಿರೀಟ, ಕರಂಡ, ಶಿರಸ್ತ್ರಕ, ಕುಂಡಲ, ಕೇಶಬಂಧ, ಧಮ್ಮಿಲ, ಅಲಕ, ಚೂಡ, ಮಕುಟ, ಪಟ್ಟ ಎಂಬ ಹನ್ನೆರಡು ವಿಧಾನಗಳಿವೆ. ಅರಿಕೇಸರಿಯು ಸಾಮಾನ್ಯ ಸಾಮಂತ ರಾಜನಲ್ಲದುದರಿಂದ ಸುಪುಷ್ಪಪಟ್ಟವನ್ನು ಧರಿಸಿದ್ದಾನೆ, ಇವುಗಳಲ್ಲಿ ಪಟ್ಟವೆಂಬುದು ಪತ್ರಪಟ್ಟ, ರತ್ನಪಟ್ಟ, ಪುಷ್ಪವೃಷ್ಟಿ ಎಂದು ಮೂರು ವಿಧ. ಇಲ್ಲಿಯ ಪುಷ್ಪವೃಷ್ಟಿಯೆಂಬ ಪಾಠವನ್ನು ಪುಷ್ಪಪಟ್ಟ ಎಂದು ತಿದ್ದಿಕೊಳ್ಳಬೇಕು.
Page #73
--------------------------------------------------------------------------
________________
೬೮ / ಪಂಪಭಾರತಂ
ಈ || ಚಂಡ ವಿರೋಧಿಸಾಧನ ತಮಸ್ತಮಮೋಡೆ ವಿಶಿಷ್ಟ ಪದಿನೀ
ಪಂಡಮರಲ್ಲು ರಾಗದಿನೊಲ್ಲಿರೆ ಯಾಚಕ ಭಂಗಕೋಟಿ ಕೈ | ಕೊಂಡು ನಿರಂತರಂ ತಗುಳು ಕೀರ್ತಿಸಿ ಮಿಕೈಸೆವ ಪ್ರಚಂಡ ಮಾ ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾರೀಚಿಯಿಂ ಚಂ || ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದಟ್ಟು ಸ ನಿಹಿತವೆನಿಪ್ಪಪೂರ್ವ ಶುಭಲಕ್ಷಣ ದೇಹದೊಳೊಳನಾಳು ಸಂ | ದಹಿಕಟಕ ಪ್ರಸಾದದ ಮನೋಜನುಮಂ ಗೆಲೆವಂದನಾಗಳುಂ ಸಹಜಮನೋಜನೋಜನೆಮಗೀಗ ವಿಚಿತ್ರ ರತೋತ್ಸವಂಗಳಂ ||
&
ಚಂ || ಕ್ಷಯಮಣಮಿಲ್ಲ ಕೇಟ್ಟು ಕಡೆಗಂಡವನಾವನುಮಿನಲ್ ತದ ಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ | ಜಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದರಂಗದೇ ಬ್ಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ || ೫
೩. ಕ್ರೂರಿಗಳಾದ ಶತ್ರುಸೈನ್ಯವೆಂಬ ಕತ್ತಲೆಯ ಮೊತ್ತವು ಓಡಿಹೋಗುತ್ತಿರುವ ವಿಶೇಷ ಗುಣಗಳಿಂದ ಕೂಡಿದ ತಾವರೆಯ ಸಮೂಹವು (ಅರಿಕೇಸರಿಯ ಪರವಾಗಿ ಪದಿನೀ ಜಾತಿಯ ಸ್ತ್ರೀಯರ ಸಮೂಹವು ಅರಳಿ ಪ್ರೀತಿಸಿ ಸಂತೋಷದಿಂದಿರಲು, ತಿರುಕನೆಂಬ ದುಂಬಿಗಳ ಸಮೂಹವು ತೃಪ್ತಿಯಿಂದ ಎಡಬಿಡದೆ ಹಿಂಬಾಲಿಸಿ ಹೊಗಳುತ್ತಿರಲು ಅತ್ಯಧಿಕವಾಗಿ ಪ್ರಕಾಶಿಸುತ್ತಿರುವ ಸೂರ್ಯನೂ ಪ್ರಚಂಡ ಮಾರ್ತಂಡನೆಂಬ ಬಿರುದಿನಿಂದ ಕೂಡಿದ ಅರಿಕೇಸಕರಿಯೂ ತಮ್ಮ ಮಾತೆಂಬ ಕಿರಣದಿಂದ ನನ್ನ ಹೃದಯಕಮಲವನ್ನು ಅರಳಿಸಲಿ, ೪. ತನ್ನ ಹುಟ್ಟಿನಿಂದಲೇ ಸಹಜವಾಗಿ ಬಂದ ಸೌಂದರ್ಯದಿಂದಲೂ ಎಂದೂ ಸೋಲದ ಸಂಭೋಗಕ್ರೀಡೆಯಿಂದಲೂ ಅಪೂರ್ವವಾದ ಶುಭಲಕ್ಷಣಗಳಿಂದ ಕೂಡಿದ ಶರೀರದ ವೈಭವದಿಂದಲೂ ಸರ್ಪಭೂಷಣನಾದ ಈಶ್ವರನ ಪ್ರಸಾದದಿಂದಲೂ ಕೂಡಿ ಸಹಜಮನ್ಮಥನಿಗೂ ಆಚಾರ್ಯನಾಗಿರುವ ಅರಿಕೇಸರಿಯು ಯಾವಾಗಲೂ ರಮಣೀಯವೂ ವೈವಿಧ್ಯಮಯವೂ ಆದ ಸುಖ ಸಂತೋಷಗಳನ್ನು ದಯಪಾಲಿಸಲಿ. (ಮನ್ಮಥನು ಶರೀರವಿಲ್ಲದವನು; ಈಶ್ವರನ ಕೋಪಕ್ಕೆ ಪಾತ್ರನಾದವನು; ರತಿಯ ಸಂಭೋಗಕ್ರೀಡೆಯಲ್ಲಿ ಸೀಮಿತನಾದವನು. ಅರಿಕೇಸರಿಯಾದರೋ ಸೌಂದರ್ಯದಿಂದ ಕೂಡಿದ ಶರೀರವುಳ್ಳವನೂ ಈಶ್ವರಾನುಗ್ರಹಕ್ಕೆ ಪಾತ್ರವಾದವನೂ ವಿವಿಧ ಸಂಭೋಗಕೇಳಿಯುಳ್ಳವನೂ ಆಗಿರುವುದರಿಂದ ಇವನು ಮನ್ಮಥನಿಗೂ ಆಚಾರ್ಯನಾಗಿದ್ದಾನೆ ಎಂಬುದು ಭಾವ) ೫. ಸ್ವಲ್ಪವೂ ನಾಶವಿಲ್ಲದ, ಯಾರಿಂದಲೂ ಅದರ ಕೊನೆಯನ್ನು ತಿಳಿಯುವುದಕ್ಕಾಗದ, ತನಗೆ ತಾನೆ ಅಕ್ಷಯನಿಧಿಯಾಗಿರುವ, ಅವಳನ್ನು ಸೇವಿಸಿದವರಿಗೆ ಅಸಾಧ್ಯವಾವುದೂ ಇಲ್ಲವೆನಿಸುವ, ಸಮಸ್ತ ವಾಹ್ಮಯಕ್ಕೂ ತಾಯಿಯಾದ ಸರಸ್ವತೀದೇವಿಯು ಕಮಲದಂತಿರುವ ಮುಖವೆಂಬ ರಂಗಸ್ಥಳದ ಏಳಿಗೆಯನ್ನೊಡಗೊಂಡು ಅರಿಕೇಸರಿಗೆ ಸಂತೋಷದಿಂದ ನಿಷ್ಕಲ್ಮಷವಾದ ಬುದ್ಧಿಯನ್ನು
Page #74
--------------------------------------------------------------------------
________________
ಪ್ರಥಮಾಶ್ವಾಸಂ | ೬೯ ತಿಸುಳದೊಳುಚ್ಚಳಿಪ್ಪ ಪೂಸ ನೆತ್ತರೆ ಕೆಂದಳಿರಾಗೆ ಕಣ್ಣಗು ರ್ವಿಸುವಿನಮೊಕ್ಕು ನೇಲ್ಯ ಕರುಳ್ಳಿ ಯೆ ಬಾಳಮ್ಮಾಳಮಾಗೆ ಮಿ || ಕಸುರರ ಮೆಯ್ಯಳಾದ ವಿರಹಾಗ್ನಿಯನಾಜಿಸುತಿಂತ ತನ್ನ ಕೂ ರಸಿಯೊಳಡುರ್ತು ಕೊಂದಸಿಯಳಿ[ರ್ಕ]ಸಿಯೊಳ್ ಪಡಮಚ್ಚೆ ಗಂಡನಾ || ೬
ಮಲ್ಲಿಕಾಮಾಲೆ || ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ
ಚಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆ | ೩೩ಜೋನ್ನತಿಯಿಂದಮಾ ಪತಿಯೆಂದು ಮೆಚ್ಚಿ ವಿನಾಯಕಂ | ತಾನ್ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ ||
೭
ಚಂ || ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್||
ಪುಗುವುದು ಪೊಕ್ಕ ಮಾರ್ಗದೊಳೆ ತಳ್ಳುದು ತಡೆ ಕಾವ್ಯಬಂಧಮೊ | ಪುಗುಮೆಳಮಾವು ಕೆಂದಳಿರ ಪೂವಿನ ಬಿಜಿಯಿಂ ಬಬಿಲ್ಲು ತುಂ ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತವೋಲ್ | ೮
ದಯಪಾಲಿಸಲಿ. ೬. ತನ್ನ ತ್ರಿಶೂಲದಿಂದ ಮೇಲಕ್ಕೆ ಚಿಮ್ಮುತ್ತಿರುವ ಹೊಸರಕ್ತವೇ ಕೆಂಪಾದ ಚಿಗುರಾಗಿರಲು ಕಣ್ಣಿಗೆ ಭಯವನ್ನುಂಟುಮಾಡುತ್ತ ಹೊರಕ್ಕೆ ಸೂಸಿ ನೇತಾಡುತ್ತಿರುವ ಕರುಳುಗಳ ಸಮೂಹವೇ ಎಳೆಯ ತಾವರೆಯ ದಂಟಾಗಿರಲು ಹದ್ದುಮೀರಿದ ರಾಕ್ಷಸರ ದೇಹದಲ್ಲುಂಟಾದ ಅಗಲಿಕೆಯೆಂಬ ಬೆಂಕಿಯನ್ನು ಅವು ಆರಿಸುತ್ತ ತನ್ನ ಹರಿತವಾದ ಕತ್ತಿಯನ್ನು ಆಶ್ರಯಿಸಿಕೊಂಡಿರುವ ಕೃಶಾಂಗಿಯಾದ ದುರ್ಗಿಯು ಪಡೆಮಚ್ಚಗಂಡನೆಂಬ ಬಿರುದುಳ್ಳ ಅರಿಕೇಸರಿಯ ಕತ್ತಿಯನ್ನು ಸೇರಿಕೊಂಡಿರಲಿ. ೭. ಮಧುಪಾಶ್ರಯಂ (ಅಂದರೆ ದುಂಬಿಗಳಿಗೆ ಅವಲಂಬನ ವಾದುದು- ಬಾಹ್ಯಾರ್ಥದಲ್ಲಿ ಧ್ವನಿಯಲ್ಲಿ ಮದ್ಯಪಾನ ಮಾಡುವವರಿಗೆ ಅವಲಂಬನವಾದುದು) ಅರಿಕೇಸರಿಯ ದಾನವು (ವಸ್ತುಗಳನ್ನು ಪ್ರದಾನಮಾಡುವುದುಕೊಡುಗೆಯು) ವಿಬುಧಾಶ್ರಯಂ ಅಂದರೆ ವಿದ್ವಾಂಸರಿಗೆ ಅವಲಂಬನವಾದುದು. ಆದುದರಿಂದ ಈ ರಾಜನಾದ ಅರಿಕೇಸರಿಯು ತನ್ನ ಮೇಲೆಯಿಂದ ನನ್ನನ್ನು ಗೆದ್ದಿದ್ದಾನೆ ಎಂಬ ಮೆಚ್ಚಿಗೆಯಿಂದ ವಿನಾಯಕನು ಗುಣಾರ್ಣವನೆಂಬ ಬಿರುದಾಂಕಿತನಾದ ಈ ಅರಿಕೇಸರಿಯ ವಿಷಯಕವಾದ ಈ ಕಾವ್ಯವನ್ನು ನಯವಾಗಿ ವಿಸ್ತರಿಸಲಿ. ೮. ಕಾವ್ಯವು ನವನವೋಜ್ವಲವಾಗಿರಬೇಕು. ಮೃದು ಶಬ್ದಗಳ ಜೋಡಣೆಯಿಂದ ಕೂಡಿರಬೇಕು. ಅಚ್ಚಗನ್ನಡ ಶೈಲಿಯಲ್ಲಿ ರಚಿತವಾಗಿರಬೇಕು. ಸಂಸ್ಕೃತ ಶೈಲಿಯೊಂದಿಗೆ ಹೊಂದಿಕೊಂಡಿರಬೇಕು. ಹೀಗೆ ಸೇರಿಕೊಂಡಿದ್ದರೆ ಕಾವ್ಯರಚನೆಯು ವಸಂತಕಾಲದಲ್ಲಿ ಮಾವಿನ ಮರವು ಕೆಂಪಾದ ಚಿಗುರು ಮತ್ತು ಹೂವುಗಳ ಭಾರದಿಂದ ಜೋತುಬಿದ್ದು - ತುಂಬಿಗಳಿಂದ ಆವೃತವಾಗಿ ಕೋಗಿಲೆಯ ಕೂಜನದಿಂದ ಪ್ರಕಾಶಿಸುವ ಹಾಗೆ
Page #75
--------------------------------------------------------------------------
________________
೭೦) ಪಂಪಭಾರತಂ ಉ || ಆ ಸಕಳಾರ್ಥ ಸಂಯುತಮಳಂಕೃತಿಯುಕ್ತಮುದಾತ್ತ [ವೃತ್ತಿ] ವಿ
ನ್ಯಾಸಮನೇಕ ಲಕ್ಷಣಗುಣಪ್ರಭವ ಮೃದುಪಾದಮಾದ ವಾ | ೬ ಸುಭಗಂ ಕಳಾಕಳಿತಮಂಬ ನೆಗಟಳೆಯನಾಳ ಕಬ್ಬಮಂ || ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ ||
ಚಂ | ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಲ
ಕವಿ ನೃಪನೀತನೊಳ್ಳಿದನೆನಲ್ ದೊರೆಯಲು ನೆಗಟಿವೆತ್ತ ಸ | ತೃವಿಗಳ ಮೋಡಶಾವಪರೋಳಿಯೊಳಂ ಕವಿತಾಗುಣಾರ್ಣವಂ ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುಮಾ ಗುಣಾರ್ಣವಂ || ೧೦
ಚಂ || ಕತೆ ಪಿರಿದಾದೊಡಂ ಕತೆಯ ಮೆಯ್ಲಿಡಲೀಯದೆ ಮುಂ ಸಮಸ್ತ ಭಾ
- ರತಮನಪೂರ್ವಮಾಗೆ ಸಲೆ ಪೇಟ್ಟಿ ಕವೀಶ್ವರರಿಲ್ಲ ವರ್ಣಕಂ | ಕತೆಯೊಳೊಡಂಬಡಂ ಪಡೆಯ ಪೇಳ್ಕೊಡೆ ಪಂಪನೆ ಪೇಟ್ಟುಮಂದು ಪಂ ಡಿತರೆ ತಗುಟ್ಟು ಬಿಚ್ಚಣಿಗೆ ಪೇಲೊಡರ್ಚಿನೀ ಪ್ರಬಂಧಮಂ || ೧೧
ಶೋಭಾಯಮಾನವಾಗಿರುತ್ತದೆ. ೯. ಸಮಸ್ತವಾದ ಅರ್ಥಗಳನ್ನೊಳಗೊಂಡಿರುವುದೂ ಅಲುಕಾರಗಳಿಂದ ಕೂಡಿದುದೂ ಉತ್ತಮವಾದ ವೃತ್ತಿ ವಿನ್ಯಾಸದಿಂದ ಯುಕ್ತವಾದುದೂ ಮೃದುಪದಪಾದಗಳನ್ನುಳ್ಳ ವಾಕ್ಸಂಪತ್ತಿನಿಂದ ಸುಂದರವಾಗಿ ಕಲಾನ್ವಿತವಾದುದೂ ಎನಿಸಿಕೊಂಡಿರುವ ಕಾವ್ಯವನ್ನೂ ಕಸ್ಯೆಯನ್ನೂ ಅರಿಕೇಸರಿಗಲ್ಲದೆ ಅಪಾತ್ರರಾದ ಮತ್ತಾರಿಗೋ ಅರ್ಪಿಸುವುದೇ ? (ಕನೈಯ ವಿಷಯವಾಗಿ ಅರ್ಥಮಾಡುವಾಗ ಅರ್ಥ ಎಂಬ ಶಬ್ದಕ್ಕೆ ಐಶ್ವರ್ಯವೆಂದೂ ವೃತ್ತಿಯೆಂಬ ಶಬ್ದಕ್ಕೆ ನಡವಳಿಕೆಯೆಂದೂ ಪಾದವೆನ್ನುವುದಕ್ಕೆ ಕಾಲು ಎಂದೂ ತಿಳಿಯಬೇಕು. ಕಾವ್ಯದೃಷ್ಟಿಯಿಂದ ವೃತ್ತಿಯೆಂಬ ಶಬ್ದಕ್ಕೆ ಅಭಿದಾ, ವ್ಯಂಜನಾ ಮತ್ತು ಲಕ್ಷಣಾ ಎಂಬ ಶಕ್ತಿಗಳಾಗಲಿ ಕೈಶಿಕೀ, ಭಾರತೀ, ಸಾತ್ವತೀ, ಆರಭಟೀ ಎಂಬ ವೃತ್ತಿಗಳಾಗಲಿ ಆಗಬಹುದು). ೧೦. ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡಿರುವವರ ಸಾಲಿನಲ್ಲಿ ಕವಿಯೆಂದಾಗಲಿ ಸಾಮಾನ್ಯವಾಗಿ ರಾಜರೆಂಬ ಹೆಸರನ್ನು ಮಾತ್ರ ಧರಿಸಿರುವವರ ಗುಂಪಿನಲ್ಲಿ ರಾಜನೆಂದಾಗಲಿ ಕರೆಸಿಕೊಳ್ಳುವುದು ವಿಶೇಷವೇನೂ ಇಲ್ಲ. ಸತ್ಕವಿಗಳ ಸಾಲಿನಲ್ಲಿ ಪಂಪನು ಕವಿತಾಗುಣಾರ್ಣವನೆಂದೂ, ಷೋಡಷರಾಜರ ಶ್ರೇಣಿಯಲ್ಲಿ ಅರಿಕೇಸರಿಯು ಗುಣಾರ್ಣವನೆಂದೂ ಪ್ರಸಿದ್ಧರಾಗಿದ್ದಾರೆ. ೧೧. ಕಥೆಯ ವಸ್ತುವು ಹಿರಿದಾಗಿದ್ದರೂ ಅದರ ವಸ್ತುವಿನ್ಯಾಸವು ನಷ್ಟವಾಗದಂತೆ ಸಮಗ್ರಭಾರತದ ಕತೆಯನ್ನು ಅಪೂರ್ವವಾಗಿ ಹೇಳಿದ ಕವಿಗಳು ಕಳೆದ ಕಾಲದಲ್ಲಿ ಇದುವರೆಗೆ ಯಾರೂ ಇಲ್ಲ. ವರ್ಣನಾಂಶಗಳಾದ ಅಷ್ಟಾದಶ ವರ್ಣನೆಗಳೂ ಕಥಾಂಶಗಳೊಡನೆ ಸಮಂಜಸವಾಗಿ ಹೊಂದಿಕೊಳ್ಳುವಂತೆ ಹೇಳುವುದಾದರೆ ಪಂಪನು ಮಾತ್ರ ಶಕ್ತಿ ಎಂದು ಪಂಡಿತರು ಒಂದೇ ಸಮನಾಗಿ ಹೇಳಿ ಸ್ತೋತ್ರಮಾಡುತ್ತಿರಲು ಈ ಉತ್ತಮ ಕಾವ್ಯವನ್ನು ಹೇಳಲು ತೊಡಗಿದ್ದೇನೆ.
Page #76
--------------------------------------------------------------------------
________________
ಪ್ರಥಮಾಶ್ವಾಸಂ | ೭೧
ಚಂ || ಲಲಿತಪದಂ ಪ್ರಸನ್ನ ಕವಿತಾಗುಣವಿಲ್ಲದೆ ಪೂಣ್ಣು ಪೇಟ್ಟಿ ಬೆ | ಛಳ ಕೃತಿಬಂಧಮುಂ ಬರೆಪಕಾರ ಕೈಗಳ ಕೇಡು ನುಣ್ಣನ || ಪಳಕದ ಕೇಡು ಪೇಟಿಸಿದೊಡರ್ಥದ ಕೇಡನೆ ಪೇಟ್ಟು ಬೀಗಿ ಪೊ | ಟ್ಟಳಿಸಿ ನೆಗುಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೆ | ಈ | ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳು ಮನನೋ | ವಾಸಮನೆಯ ಪೇಳ್ಪನದಲ್ಲದೆ ಗರ್ವಮೆ ದೋಷಮ ಗಂ ದೋಷಮೆ ಕಾಣೆನೆನ್ನುವ ಮಾಯೆ ಪೇಳ್ವೆನಿದಾವ ದೋಷಮೋ ||೧೩
ಚಂ || ವಿಪುಳ ಯಶೋವಿತಾನ ಗುಣಮಿಲ್ಲದನಂ ಪ್ರಭು ಮಾಡಿ ಪೂರ್ವ ಭೂ ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ ಮಿಪರುಮನೊನೊಳ್ ತಗುಳೆವಂದೊಡೆಯ ಕಥೆಯೊಳ್ ತಗುಳ್ಳಿ ಪೋ ಲಿಪೊಡೆನಗಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್ || ೧೪
ಕಂ || ಶ್ರೀಮಚ್ಚಳುಕ್ಯ ವಂಶ
ܦܘ
ವೋಮಾಮೃತಕಿರಣನೆನಿಪ ಕಾಂತಿಯನೊಳಕೊಂ | ಡೀ ಮಹಿಯೊಳಾತವಂಶಶಿ
ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗಂ ||
೧೫
೧೨. ಲಲಿತವಾದ ಶಬ್ದಗಳೂ ಪರಿಶುದ್ಧವಾದ ಗುಣಗಳೂ ಇಲ್ಲದೆ ಕಾವ್ಯವನ್ನು ಬರೆಯಬೇಕೆಂಬ ಒಂದು ಹಟದಿಂದಲೇ ರಚಿಸಿದ ದಡ್ಡರ ಕೃತಿರಚನೆ ಅದೊಂದು ಕಾವ್ಯರಚನೆಯೇನು ? ಅದು ಬರಹಗಾರನ ಕೈಗೆ ಶ್ರಮವನ್ನುಂಟುಮಾಡತಕ್ಕದ್ದು; ಬರೆಯಲ್ಪಡಬೇಕಾಗಿರುವ ನಯವಾದ ಓಲೆಗರಿಗಳ ದಂಡ! ವಾಚನಮಾಡಿದರೆ ಅರ್ಥಕ್ಕೆ ಹಾನಿಯನ್ನುಂಟುಮಾಡುವ ಕಾವ್ಯರಚನೆ ಮಾಡಿ ಉಬ್ಬಿ ಅಹಂಕಾರದಿಂದ ಯಶಸ್ಸಿಗಾಗಿ ಹಾತೊರೆಯುತ್ತಿರುವ ಬಣಗುಕವಿಯು ಕವಿಯೆಂಬ ಗಣನೆಗೆ ಬರತಕ್ಕವನೆ ? ೧೩. ನಾನು ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯವೆಂಬ ಅಮೃತ ಸಾಗರವನ್ನು ಈಜುತ್ತೇನೆ. ಆದರೆ ಕವಿ ವ್ಯಾಸನೆಂಬ ಗರ್ವ ಮಾತ್ರ ನನಗಿಲ್ಲ. ಗುಣಾರ್ಣವನಾದ ಅರಿಕೇಸರಿಯ ಸಭಾವವು ನನ್ನ ಮನೋಮಂದಿರವನ್ನು ಪ್ರವೇಶಿಸಿರುವುದರಿಂದ ಈ ಕಾವ್ಯವನ್ನು ಹೇಳುತ್ತಿದ್ದೇನೆ. ಈ ರೀತಿಯಾದ ಪ್ರೀತಿಪ್ರದರ್ಶನವು ದೋಷವಾಗುತ್ತದೆಯೇ ? ನನಗೆ ತಿಳಿದಷ್ಟು ನಾನು ಹೇಳುತ್ತೇನೆ. ಇದರಲ್ಲಿ ಯಾವ ದೋಷವಿದೆ? ೧೪. ಹಿಂದಿನ ಕೆಲವು ಕವಿಗಳು ವಿಸ್ತಾರವಾದ ಯಶೋರಾಶಿಯಿಲ್ಲದವನನ್ನು ತಮ್ಮ ಕಾವ್ಯದ ನಾಯಕನನ್ನಾಗಿ ಮಾಡಿ ಪ್ರಾಚೀನ ರಾಜರ ಸದ್ಗುಣಗಳನ್ನೆಲ್ಲ ಅವರಲ್ಲಿ ಆರೋಪಣೆ ಮಾಡಿ ಹೋಲಿಸುತ್ತಾರೆ. ಆದರೆ ಗುಣಾರ್ಣವನಾದ ಅರಿಕೇಸರಿಯು ತನ್ನ ಸದ್ಗುಣಗಳಿಂದ ಪೂರ್ವಕಾಲದ ರಾಜರನ್ನು ಸೋಲಿಸುತ್ತಿರುವುದರಿಂದ ಮಹಾಭಾರತದ ಕಥೆಯಲ್ಲಿ ಅವನ ಕಥೆಯನ್ನು ಸೇರಿಸಿ ಗುಣಾರ್ಣವ ಮಹಾರಾಜನನ್ನು ಅರ್ಜುನನಲ್ಲಿ ಹೊಂದಿಸಿ ವರ್ಣಿಸಲು ನನಗೆ ಪ್ರೀತಿಯಾಯಿತು. ೧೫. ಸಂಪದ್ಯುಕ್ತವಾದ ಚಾಳುಕ್ಯವಂಶವೆಂಬ ಆಕಾಶಕ್ಕೆ
Page #77
--------------------------------------------------------------------------
________________
೭೨) ಪಂಪಭಾರತಂ
ಆತಂ ನಿಜಭುಜವಿಜಯ ಖ್ಯಾತಿಯನಾಳಾಳನಧಿಕಬಲನವನಿಪತಿ | ವಾತ ಮಣಿಮಕುಟಕಿರಣ ಜ್ಯೋತಿತಪಾದಂ ಸಪಾದಲಕ್ಷ ಕ್ಷಿತಿಯಂ ! : ಏನಂ ಪೇಟ್ಟುದೊ ಸಿರಿಯು ದ್ವಾನಿಯನೆಣ್ಣೆಯೊಳೆ ತೀವಿ ದೀರ್ಷಿಕೆಗಳನಂ | ತಾ ನೃಪತಿ ನಿಚ್ಚಲಯೂ ಜಾನೆಯನವಗಾಹಮಿರಿಸುವಂ ಬೋದನದೊಳ್ || ಶ್ರೀಪತಿಗೆ ಯುದ್ಧಮಲ್ಲ ಮ ಹೀಪತಿಗೆ ನೆಗಟಿ ಪುಟ್ಟ ಪುಟ್ಟಿದನಖಿಳ | ಕ್ಷಾಪಾಲ ಮಾಳಿಮಣಿ ಕಿರ ಕಾಪಾಳಿತ ನಖಮಯೂಖರಂಜಿತ ಚರಣಂ || ಅರಿಕೇಸರಿಯೆಂಬಂ ಸುಂ ದರಾಂಗನತ್ಯಂತ ವಸ್ತುವಂ ಮದಕರಿಯಂ | ಹರಿಯಂ ಪಡಿವಡೆಗುರ್ಚಿದೆ ಕರವಾಳನೆ ತೋಟ ನೃಪತಿ ಗೆಲ್ಲಂಗೊಂಡಂ ||
ಚಂದ್ರನೆನಿಸುವ ತೇಜಸ್ಸಿನಿಂದ ಕೂಡಿ ತನ್ನ ವಂಶಕ್ಕೆ ಶಿರೋಭೂಷಣನಾಗಿರುವ ಯುದ್ಧಮಲ್ಲನೆಂಬುವನು ಈ ಭೂಮಿಯಲ್ಲಿ ಕೀರ್ತಿವಂತನಾಗಿ ಪ್ರಸಿದ್ಧನಾದನು. ೧೬. ಆತನು ತನ್ನ ಭುಜಬಲದ ವಿಜಯದ ಖ್ಯಾತಿಯನ್ನು ಹೊಂದಿ ಅಧಿಕಬಲನೂ ರಾಜಸಮೂಹದ ರತ್ನಖಚಿತವಾದ ಕಿರೀಟಗಳ ಕಾಂತಿಯಿಂದ ಬೆಳಗಲ್ಪಟ್ಟ ಪಾದವುಳ್ಳವನೂ ಆಗಿ ಸಪಾದಲಕ್ಷ ಭೂಮಿಯನ್ನು ಆಳಿದನು. ೧೭. ಆತನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಬಾವಿಗಳನ್ನು ಎಣ್ಣೆಯಲ್ಲಿ ತುಂಬಿ ಪ್ರತಿದಿನವೂ ಐನೂರಾನೆಗಳನ್ನು ಮಜ್ಜನ ಮಾಡಿಸುತ್ತಾನೆ ಎಂದರೆ ಆತನ ಐಶ್ವರ್ಯಾತಿಶಯವನ್ನು ಏನೆಂದು ಹೇಳುವುದೋ, ೧೮, ಐಶ್ವರ್ಯವಂತನಾದ ಈ ಯುದ್ಧಮಲ್ಲ ಮಹಾರಾಜನಿಗೆ ಕೀರ್ತಿ ಹುಟ್ಟಿದ ಹಾಗೆ ಸಮಸ್ತರಾಜರ ಕಿರೀಟಗಳ ರತ್ನಕಾಂತಿಯಿಂದ ಪೋಷಿತವಾದ ಕಾಲಿನುಗುರುಗಳ ಕಿರಣಗಳಿಂದ ಪ್ರಕಾಶಿಸುತ್ತಿರುವ ಪಾದಗಳನ್ನುಳ್ಳ ೧೯. ಅರಿಕೇಸರಿಯೆಂಬ ಸುಂದರಾಂಗನಾದ ಮಗನು ಹುಟ್ಟಿದನು. ಆ ರಾಜನು ತನಗೆ ಪ್ರತಿಭಟಿಸಿದ ಸೈನ್ಯಕ್ಕೆ ತನ್ನ ಒರೆಯಿಂದ ಹೊರಗೆಳೆದ ಕತ್ತಿಯನ್ನೇ ತೋರಿ ವಿಶೇಷ ಬೆಲೆಬಾಳುವ ವಸ್ತುಗಳನ್ನೂ ಮದ್ದಾನೆಗಳನ್ನೂ ಕುದುರೆಗಳನ್ನೂ ಲಾಭವಾಗಿ: ಪಡೆದನು. ಈ ಅರಿಕೇಸರಿಯು ರಾಷ್ಟ್ರಕೂಟರಾಜನಾದ ನಿರುಪಮದೇವನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳ ಸಮೇತವಾಗಿ ವೆಂಗಿಮಂಡಲವನ್ನು ಗೆದ್ದು ಸ್ವಬಾಹುಬಲದಿಂದ ತನ್ನ ಪ್ರತಿಷ್ಠೆಯನ್ನು ಸಮಸ್ತದಿಕ್ಕಿನ ಗೋಡೆಗಳಲ್ಲಿಯೂ
Page #78
--------------------------------------------------------------------------
________________
ಪ್ರಥಮಾಶ್ವಾಸಂ | ೭೩ ನಿರುಪಮ ದೇವನ ರಾಜ್ಯದೂ ಳರಿಕೇಸರಿ ವೆಂಗಿವಿಷಯಮಂ ತ್ರಿ ಕಳಿಂಗಂ | ಚಿರಸೊತ್ತಿಕೊಂಡು ಗರ್ವದ ಬರೆಯಿಸಿದಂ ಪೆಸರನಖಿಳ ದಿಗ್ವಿತಿಗಳೊಳ್ || ಕ್ಷತ್ರಂ ತೇಜೋಗುಣಮಾ ಕ್ಷತ್ರಿಯರೂ ನೆಲಸಿ ನಿಂದುದಾ ನಗಾದಿ | ಕ್ಷತ್ರಿಯರೊಳಮಿಲೆನಿಸಿದು ದೀ ತ್ರಿಜಗದೊಳಸಗಿ ಸಕಮರಿಕೇಸರಿಯಾ | ಅರಿಕೇಸರಿಗಾತ್ಯಜರರಿ ನರಪ ಶಿರೋದಳನ ಪರಿಣತೋಗ್ರಾಸಿ ಭಯಂ | ಕರಕರರಾಯಿರ್ವರೋಳಾರ್ ದೊರೆಯನೆ ನರಸಿಂಹ ಭದ್ರದೇವರ್ ನೆಗದ್ದರ್ || ಅವರೋಲ್ ನರಸಿಂಗಂಗತಿ ಧವಳಯಶಂ ಯುದ್ಧಮಲ್ಲನಗ್ರಸುತಂ ತ | ದ್ಭುವನ ಪ್ರದೀಪನಾಗಿ ರ್ದವಾರ್ಯವೀರ್ಯಂಗೆ ಬದ್ದಗಂ ಪಿರಿಯ ಮಗಂ || ೨೩ ಪುಟ್ಟಿದೊಡಾತನೊಳುವೊಡ ವುಟ್ಟಿದುದಳಿವಿಂಗೆ ಪಂಪು ಪಂಪಿನೊಳಾಯಂ | ಕಚ್ಚಾಯದೊಳಳವಳವಿನೊ ಕೊಟ್ಟಜೆ ಪುಟ್ಟದುದು ಪೋಲ್ಡರಾರ್ ಬದ್ದೆಗನಂ || . ೨೪
ಕ೦ll.
ಬರೆಯಿಸಿದನು. ೨೦. ಕ್ಷತ್ರಿಯೋಚಿತವಾದ ಶೌರ್ಯಪ್ರತಾಪಾದಿ ತೇಜೋಗುಣಗಳು ಆ ಕ್ಷತ್ರಿಯರ ವಂಶದಲ್ಲಿ ಸ್ಥಿರವಾಗಿ ನಿಂತುದು ಈ ಅರಿಕೇಸರಿಯ ಮಹತ್ಕಾರ್ಯಗಳಿಂದ. ಇವನ ಕಾರ್ಯಗಳು ಮೂರು ಲೋಕಗಳಲ್ಲಿ ಪ್ರಸಿದ್ದರಾದ ಪ್ರಾಚೀನ ರಾಜರುಗಳಲ್ಲಿಯೂ ಇಲ್ಲವೆಂದೆನಿಸಿತು. ೨೨. ಆ ಅರಿಕೇಸರಿಗೆ ಶತ್ರುರಾಜರ ತಲೆಯನ್ನು ಸೀಳುವುದರಲ್ಲಿ ಸಮರ್ಥವೂ ಹರಿತವೂ ಆದ ಕತ್ತಿಯಿಂದ ಭಯಂಕರವಾದ ಬಾಹುಗಳನ್ನುಳ್ಳ ಇವರಿಗೆ ಸಮಾನರಾಗಿದ್ದಾರೆ ಎನ್ನಿಸಿಕೊಂಡ ನರಸಿಂಹ ಭದ್ರದೇವರೆಂಬ ಇಬ್ಬರು ಮಕ್ಕಳು ಪ್ರಸಿದ್ಧರಾದರು. ೨೩. ಅವರಲ್ಲಿ ನರಸಿಂಹನಿಗೆ ನಿರ್ಮಲಯಶಸ್ಸಿನಿಂದ ಕೂಡಿದ ಇಮ್ಮಡಿ ಯುದ್ಧಮಲ್ಲನು ಹಿರಿಯ ಮಗ. ಪ್ರಪಂಚಕ್ಕೆಲ್ಲ ತೇಜೋವಂತನೂ ಅಸಮಪ್ರತಾಪಶಾಲಿಯೂ ಆಗಿದ್ದ ಆ ಯುದ್ಧಮಲ್ಲನಿಗೆ ಬದ್ದೆಗನು (ಭದ್ರದೇವನು) ಹಿರಿಯ ಮಗ. ೨೪. ಹೀಗೆ ಹುಟ್ಟಿದ ಭದ್ರದೇವನಿಗೆ ಜೊತೆಯಲ್ಲಿಯೇ ಜ್ಞಾನವೂ ಜ್ಞಾನದೊಡನೆ ಹಿರಿಮೆಯೂ ಹಿರಿಮೆಯೊಡನೆ ದ್ರವ್ಯಲಾಭಾದಿಗಳೂ ಅವುಗಳೊಡನೆ ಪರಾಕ್ರಮಾತಿಶಯಾದಿಗಳೂ ಹುಟ್ಟಿದುವು. (ಇಂತಹ) ಭದ್ರದೇವನನ್ನು
Page #79
--------------------------------------------------------------------------
________________
೭೪ | ಪಂಪಭಾರತ
ಬಲ್ವರಿಕೆಯೊಳರಿನೃಪರ ಪ ಡಡ ತಳಿದು ರಣದೊಳಾ ವಿಕ್ರಮಮಂ | ಸೋನಮಾವರ್ಜಿಸಿದಂ ನಾಲ್ವತ್ತೆರಡಚಿಕೆಗಾಳೆಗಂಗಳೊಳೀತಂ 11
೨೫ ಚಂ|| ವನಧಿಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪಂ
ಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದು | ರ್ವನಲಿದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀ
ಮನನನಿಗರ್ವದಿಂ ಪಿಡಿಯ ಮೆಯ್ದಲಿ ಬದ್ದೆಗನನ್ನನಾವನೋ | ೨೬ ಮ! ಮುಗಿಲು ಮುಟ್ಟಿದ ಪೆಂಪು ಪಂಪನೊಳಕೊಂಡುದ್ಯೋಗಮುದ್ರೋಗದೊಳ್
ನೆಗಬ್ದಾಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗು | ರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪನ್ನೆಗಂ ಸಂದನೀ
ಜಗದೊಳ್ ಬದ್ದೆಗನನ್ನನಾವನಿಕುಂ ಭೂಕೋಟಿಯಿಂ ಕೋಟಿಯಂ ||೨೭ ಕಂ || ಮೇರುವ ಪೊನ್ ಕಲಾಂಘಿಷ
ದಾರವೆ ರಸದೂಳಿವು ಪರುಷವೇದಿಯ ಕಣಿ ಭಂ | ಡಾರದೊಳುಂಟೆನೆ ಕುಡುವ ನಿ ವಾರಿತ ದಾನಕ್ಕೆ ಪೋಲ್ಡರಾರ್ ಬದ್ದೆಗನಂ ||
ಹೋಲುವವರಿದ್ದಾರೆ? ೨೫. ಈ ಭದ್ರದೇವನು ಬಲವಾದ ಧಾಳಿಯಲ್ಲಿ ಶತ್ರುರಾಜರು ಚದುರಿ ಓಡಿಹೋಗುವಂತೆ ಪ್ರತಿಭಟಿಸಿ ತನ್ನ ಶೌರ್ಯವನ್ನು ಜನಗಳೆಲ್ಲ ಕೊಂಡಾಡುವಂತೆ ಯುದ್ಧಮಾಡಿ ನಲವತ್ತೆರಡು ಸುಪ್ರಸಿದ್ದ ಕಾಳಗಗಳಲ್ಲಿ ತನ್ನ ಪ್ರತಾಪವನ್ನು ಪ್ರಕಟಿಸಿದನು. ೨೬. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲದಲ್ಲಿ ಇವನೊಬ್ಬನೇ ಯಾರಿಗೂ ಸೋಲದ ವೀರ ಎಂಬ ಹಿರಿಮೆಯನ್ನು ಗಳಿಸಿದ್ದಲ್ಲದೆ ತನ್ನನ್ನು ಪ್ರತಿಭಟಿಸಿದವರನ್ನು ಪರಾಕ್ರಮದಿಂದ ಎದುರಿಸಿ ಭಯಂಕರವಾಗಿ ಇರಿದು ಯುದ್ದಮಾಡಿದ ಭೀಮನೆಂಬ ರಾಜನನ್ನು ನೀರಿನಲ್ಲಿ ಮುಳುಗಿಸಿ ಮೊಸಳೆಯನ್ನು ಹಿಡಿವಂತೆ ವಿಶೇಷ ದರ್ಪದಿಂದ ಹಿಡಿದಿರುವಾಗ ಈ ಶೂರನಾದ ಭದ್ರದೇವನಂತಹ (ಶೂರ) ನಾವನಿದ್ದಾನೆ. ೨೭ . (ಈ ಭದ್ರದೇವನ) ಅತ್ಯುನ್ನತವಾದ ಹಿರಿಮೆಯೂ ಹಿರಿಮೆಯಲ್ಲಿ ಕೂಡಿಕೊಂಡ ಕಾರ್ಯಕಲಾಪಗಳಲ್ಲಿ ಹುದುಗಿ ಕೊಂಡಿರುವ ಆಜ್ಞಾಫಲವೂ ಅದರಲ್ಲಿ ಸೇರಿರುವ ಭಯವೂ ಭಯದಿಂದ ಆಶ್ಚರ್ಯ ಗೊಳ್ಳುತ್ತಿರುವ ಶತ್ರುಸಮೂಹವೂ ಅವನ ಕೀರ್ತಿಗೆ ಆಶ್ರಯವಾಗುತ್ತಿರಲು ಆ ಭದ್ರ ದೇವನು ಭೂಮಂಡಲದಲ್ಲಿ ಸುಪ್ರಸಿದ್ದನಾದನು. ಒಂದು ಸಲ ಹುಬ್ಬುಹಾರಿಸುವುದ ರಿಂದ ಕೋಟ್ಯಂತರ ಸೈನ್ಯವನ್ನು ಇಳಿಸಿಬಿಡುವ ಅವನಂಥವರು ಬೇರೆ ಯಾರಿದ್ದಾರೆ? ೨೮. ಆ ಭದ್ರದೇವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವೂ ಕಲ್ಪವೃಕ್ಷದಾರಾಮವೂ ಸಿದ್ದರಸದೂಟೆಯೂ ಸ್ಪರ್ಶಶಿಲೆಯ ಗಣಿಯೂ ಇವೆಯೆಂದರೆ ಅವಿಚ್ಛಿನ್ನವಾದ ದಾನಕ್ಕೆ
Page #80
--------------------------------------------------------------------------
________________
ಪ್ರಥಮಾಶ್ವಾಸಂ (೭೫
ತರಳ || ಸುರಭಿ ದೇವತೆಯೆಂಬ ಕಾಪಿನೆ ಮಾಣುದೇಳುವುದೊಂದೆಂ ದಿರದ ಮಾಣ್ಣುದು ದೇವ ವಾರಣವೇ ಉಂಟವು ಪೋದೊಡಾ | ಖರಕರಂಗರಿದಂದ ಮಾಣ್ಣಿರೆ ಮಾಣ್ಣುವಾ ಹರಿ ನೀನೆ ಪೇ ಅರಿಯವೆಂದಿವು ಭದ್ರದೇವರ ಬಾಗದೊಳೊಗಾದುವೇ ||
ಕಂ || ಆ ಬದ್ದೆಗಂಗೆ ವೈರಿತ
ಮೋಬಳ ದಶಶತಕರಂ ವಿರಾಜಿತ ವಿಜಯ |
ಶ್ರೀ ಬಾಹು ಯುದ್ಧಮಲ್ಲನಿ
೪ಾ ಬಹು ವಿಧರಕ್ಷಣ ಪ್ರವೀಣ ಕೃಪಾಣಂ ||
ಆತ್ಮಭವನನಾರಾಧಿಪ
ನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾ | ಹಾತರನಿಸಿ ನೆಗಟ್ಟಿ ಮ
ಹಾತಂ ನರಸಿಂಹನಳವಿನೊಳ್ ಪರಮಾತಂ ||
ಮಾಂಕರಿಸದಳವು ಗುರು ವಚ
ನಾಂಕುಶಮಂ ಪಾಟಿಯೆಡೆಗೆ ಪೂಣರ್ದರಿಬಲಮಂ | ಕಿಂಕೊಳೆ ಮಾಡೆಗಣಮ ನಿ
ರಂಕುಶಮನಿಸಿದುದು ಮುನಿಸು ಭದ್ರಾಂಕುಶನಾ ||
ತಳಸಂದು ಲಾಲರೊಳ್ ತ
ಧ್ವಜೆದೇಂ ಪೇಟೆ ಕೇಳು ಮಂಡಲಮಿನ್ನು | ತಿರುನೀರಿಕ್ಕುವುದೆನಿಸಿದ
ತಪ್ಪಿಸಲವಿನ ಚಲದ ಬಲದ ಕಲಿ ನರಸಿಂಹಂ ||
೨೯
೩೦
೩೧
8.9
೩೩
ಭದ್ರದೇವನನ್ನು ಹೋಲುವರಾರಿದ್ದಾರೆ. ೩೦-೩೧. ಆ ಭದ್ರದೇವನಿಗೆ ಶತ್ರುಗಳೆಂಬ ಕತ್ತಲೆಗೆ ಸೂರ್ಯನ ಹಾಗಿರುವವನೂ ಪ್ರಕಾಶಮಾನಳಾದ ವಿಜಯಲಕ್ಷ್ಮಿಯಿಂದ ಕೂಡಿದ ಬಾಹುವುಳ್ಳವನೂ ಭೂಮಿಯನ್ನು ನಾನಾ ರೀತಿಯಲ್ಲಿ ರಕ್ಷಣ ಮಾಡುವ ಸಾಮರ್ಥ್ಯವುಳ್ಳ ಕತ್ತಿಯುಳ್ಳವನೂ ಆದ (ಮೂರನೆಯ) ಯುದ್ಧಮಲ್ಲನು ಮಗನಾದನು. ಆ ಯುದ್ಧಮಲ್ಲ ಮಹಾರಾಜನ ಮಗನಾದ ನರಸಿಂಹನು ಪ್ರಸಿದ್ಧರಾದ ನಹುಷ, ಪೃಥು, ಭಗೀರಥ, ನಳರೆಂಬ ಮಹಾತ್ಮರನ್ನು ಮಹಿಮೆಯಲ್ಲಿ ಮೀರಿಸಿದ ಪ್ರಸಿದ್ಧಿಯುಳ್ಳವನೂ ಜ್ಞಾನದಲ್ಲಿ ಸಾಕ್ಷಾತ್ ಪರಮಾತ್ಮನೂ ಆದವನು. ೩೨. ಭದ್ರ ಜಾತಿಯ ಆನೆಗಳಿಗೆ ಅಂಕುಶಸ್ವರೂಪನಾದ ಆ ನರಸಿಂಹನ ಜ್ಞಾನವು ಕ್ರಮಪರಿಪಾಲನಾ ಸಂದರ್ಭದಲ್ಲಿ ಗುರುವಚನವೆಂಬ ಅಂಕುಶವನ್ನು ನಿರಾಕರಿಸುವುದಿಲ್ಲ. ಆದರೆ ಪ್ರತಿಭಟಿಸಿದ ಶತ್ರುವನ್ನು ಇದಿರಿಸುವ ಸಂದರ್ಭದಲ್ಲಿ ಭದ್ರಾಂಕುಶನ ಕೋಪವು ತಡೆಯಿಲ್ಲದುದು ಎಂದೆನಿಸಿಕೊಂಡಿತು. (ಅಂದರೆ ನ್ಯಾಯ ಪರಿಪಾಲನೆಯಲ್ಲಿ ಅವನ ವಿವೇಕವು ಗುರುಜನರ ಆದೇಶವನ್ನು ಉಲ್ಲಂಘಿಸುತ್ತಿರದಿದ್ದರೂ ಶತ್ರುಸೈನ್ಯ ದೊಡನೆ ಯುದ್ಧಮಾಡುವಾಗ ಅವನ ಕೋಪವು ಯಾವ ಅಂಕೆಗೂ ಸಿಕ್ಕುತ್ತಿರಲಿಲ್ಲ). ೩೩. ನರಸಿಂಹನು ಎಂದೋ ಹಟದಿಂದ ಲಾಟದೇಶದ (ದಕ್ಷಿಣ ಗುಜರಾತು) ಮೇಲೆ
Page #81
--------------------------------------------------------------------------
________________
೭೬ | ಪಂಪಭಾರತಂ
ಸಿಂಗಂ ಮಸಗಿದವೊಲ್ ನರ ಸಿಂಗಂ ತಳಿಯ ನಗದ್ದೆ ನೆತ್ತರ್ ನಭದೊಳ್ | ಕೆಂಗುಡಿ ಕವಿದಂತಾದುದಿ ದೇಂ ಗರ್ವದ ಪಂಪೂ ಸಕಲಲೋಕಾಶ್ರಯನಾ ||
ಏಳುಂ ಮಾಳಮುಮಂ ಪಾ ಆಟಿ ತಗುಳಿದು ನರಗನುರಿಪಿದೊಡ ಕರಿಂ | ಕೇತಿಸಿದಾತನ ತೇಜದ ಬೀಬಿಲನನುಕರಿಪುವಾದುವೊಗೆದುರಿವುರಿಗಳ್ ||
೩೫
ವಿಜಯಾರಂಭ ಪುರಸ್ಕರ ವಿಜಯಗಜಂಗಳನೆ ಪಿಡಿದು ಪೂರ್ಜರ ರಾಜ | ಧ್ವಜಿನಿಯನಿದೋಡಿಸಿ ಭುಜ ವಿಜಯದ ವಿಜಯನುಮನಿಸಿದಂ ನರಸಿಂಹಂ ||
ಸಿಡಿಲವೊಅಗುವ ನರಗನ ಪಡೆಗಗಿದುಮ್ಮಳದಿನುಂಡೆಡೆಯೊಳುಣ್ಣದೆಯುಂ | ಕಡೆದೆಡೆಯೊಳ್ ಕಡೆಯದೆ ನಿಂ ದೆಡೆಯೊಳ್ ನಿಲ್ಲದಯುಮೋಡಿದಂ ಮಹಿಪಾಲಂ ||
೩೭
ಬಿದ್ದು ಯುದ್ದಮಾಡಿದ ವಿಷಯವನ್ನು ಇಂದು ಹೇಳಲು ಅದನ್ನು ಕೇಳಿ ಆ ಲಾಟದೇಶದವರು ಇನ್ನೂ ಆ ಸತ್ತವರಿಗೆ ತರ್ಪಣೋದಕವನ್ನು ಕೊಡುತ್ತಿದ್ದಾರೆ ಎನ್ನಿಸಿಕೊಳ್ಳುವ ದೃಢಸಂಕಲ್ಪದ, ಛಲದ ಬಲದ ಕಲಿಯಾದವನು ನರಸಿಂಹ. ೩೪. ನರಸಿಂಹನು ಸಿಂಹದಂತೆ ರೇಗಿ ಮೇಲೆ ಬಿದ್ದು ಯುದ್ಧಮಾಡಲು ಆಗ ಚಿಮ್ಮಿದ ರಕ್ತವು ಆಕಾಶದಲ್ಲಿ ಕೆಂಪುಬಾವುಟಗಳು ಮುಚ್ಚಿಕೊಂಡಂತಾಯಿತು. ಸಕಲ ಲೋಕಕ್ಕೂ ಆಶ್ರಯದಾತನಾದ ಆತನ ಗರ್ವದ ಹಿರಿಮೆ ಅದೆಂತಹುದೋ? ೩೫. ನರಸಿಂಹನು ಸಪ್ತಮಾನಲಗಳನ್ನು (ಮಾಳವದೇಶದ ಏಳು ಭಾಗಗಳನ್ನು ಹಾರಿಹೋಗುವಂತೆ ಪ್ರತಿಭಟಿಸಿ ಕರಿಕೇಳುವಂತೆ ಸುಡಲು ಆಗ ಎದ್ದ ಉರಿಯು ಅವನ ತೇಜಸ್ಸಿನ ಬೀಳಲುಗಳನ್ನು ಅನುಕರಿಸಿದುವು. ೩೬. ನರಸಿಂಹನು ತನ್ನ ಜೈತ್ರಯಾತ್ರೆಯಲ್ಲಿ ವಿಜಯಸೂಚಕವಾದ ಮುಂಗುಡಿಯ ಆನೆಗಳನ್ನು ಹಿಂಬಾಲಿಸಿ ಘರ್ಜರದೇಶದ ರಾಜನ ಸೈನ್ಯವನ್ನು ಹೊಡೆದೋಡಿಸಿ ತನ್ನ ಭುಜಬಲದ ಜಯದಿಂದ ಅರ್ಜುನನನ್ನು ಮೀರಿಸುವಂಥವನಾದನು. ೩೭. ಸಿಡಿಲೆರಗುವ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಊಟಮಾಡಿದ ಸ್ಥಳದಲ್ಲಿ ಪುನಃ ಊಟಮಾಡದೆಯೂ ಮಲಗಿದ ಕಡೆಯಲ್ಲಿ ಪುನಃ ಮಲಗದೆಯೂ ನಿಂತಡೆಯಲ್ಲಿ
Page #82
--------------------------------------------------------------------------
________________
೩೮
ಪ್ರಥಮಾಶ್ವಾಸಂ | ೭೭ ಗಂಗಾವಾರ್ಧಿಯೊಳಾತ್ತತು ರಂಗಮುಮಂ ಮಿಸಿಸಿ ನಗು ಡಾಳಪ್ರಿಯನೊಳ್ | ಸಂಗತ ಗುಣನಸಿಲತೆಯನ
ಸಂಗೊಳೆ ಭುಜವಿಜಯಗರ್ವದಿಂ ಸ್ಥಾಪಿಸಿದಂ | ಕಂ 1 ಆ ನರಸಿಂಹಮಹೀಶ ಮ.
ನೋನಯನಪ್ರಿಯ ಎಳನೀಳಾಳಕೆ ಚಂ | ದ್ರಾನನೆ ಜಾಕವ್ವ ದಲಾ ಜಾನಕಿಗಗ್ಗಳಮೆ ಕುಲದೊಳಂ ಶೀಲದೊಳಂ | ಪೊಸತಲರ್ದ ಬಿಳಿಯ ತಾವರೆ ಯೆಸಳ ನಡುವಿರ್ಪ ಸಿರಿಯುಮಾಕೆಯ ಕೆಲದೊಳ್ | ನಸು ಮಸುಳ್ಳು ತೋರ್ಪಳೆನೆ ಪೋ ಲಿಸುವೊಡೆ ಜಾಕವ್ವಗುಟಿದ ಪೆಂಡಿರ್ ದೂರೆಯೇ | ಆ ಜಾಕವ್ವಗಮಾ ವಸು ಧಾ ಜಯ ಸದ್ವಲ್ಲಭಂಗಮತಿ ವಿಶದ ಯಶೋ || ರಾಜಿತನೆನಿಪರಿಕೇಸರಿ ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ |
೪೧ -
೩೯
ನಿಲ್ಲದೆಯೂ ಪಲಾಯನ ಮಾಡಿದನು. ೩೮. ಅಲ್ಲದೆ ನರಸಿಂಹನು ಗಂಗಾನದಿಯಲ್ಲಿ ತನ್ನ ಕುದುರೆಯನ್ನು ಮಜ್ಜನಮಾಡಿಸಿ ಪ್ರಸಿದ್ದವಾದ ಉಜ್ಜಯನಿಯಲ್ಲಿ ಗುಣಶಾಲಿ ಯಾದ ಅವನು ತನ್ನ ಕತ್ತಿಯನ್ನು ಶತ್ರುಗಳ ಪ್ರಾಣಾಪಹರಣಕ್ಕಾಗಿ ಭುಜವಿಜಯ ಗರ್ವದಿಂದ ಸ್ಥಾಪಿಸಿದನು. ೩೯. ಆ ನರಸಿಂಹರಾಜನ ಮನಸ್ಸಿಗೂ ಕಣ್ಣಿಗೂ ಪ್ರಿಯ ಳಾದವಳೂ ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳ ವಳೂ ಆ ಜಾಕಲ್ವೆಯಲ್ಲವೇ! ಆಕೆಯು ಕುಲದಲ್ಲಿಯೂ ಶೀಲದಲ್ಲಿಯೂ ಸೀತಾ ದೇವಿಗೂ ಅಧಿಕಳಾದವಳೇ ಸರಿ. ೪೦. ಹೊಸದಾಗಿ ಅರಳಿದ ಬಿಳಿಯ ತಾವರೆಯ ದಳದ ಮಧ್ಯದಲ್ಲಿರುವ ಲಕ್ಷ್ಮಿದೇವಿಯೂ ಆಕೆಯ ಪಕ್ಕದಲ್ಲಿ ಸ್ವಲ್ಪ ಕಾಂತಿಹೀನಳಾಗುತ್ತಾಳೆ ಎನ್ನಲು ಉಳಿದ ಸ್ತ್ರೀಯರು ಆ ಜಾಕವ್ವಗೆ ಹೋಲಿಸಲು ಸಮಾನರಾಗುತ್ತಾರೆಯೇ. ೪೧-೪೨, ಆ ಜಾಕವ್ವಗೆ ಭೂಮಂಡಲಾಧಿಪತಿಶ್ರೇಷ್ಠನಾದ ನರಸಿಂಹನಿಗೂ ತನ್ನ ತೇಜಸ್ಸೆಂಬ ಬೆಂಕಿಯಲ್ಲಿ ಮುಳುಗಿದ ಶತ್ರುರಾಜರೆಂಬ ಪತಂಗಗಳನ್ನುಳ್ಳವನೂ ನಿರ್ಮಲವಾದ ಯಶಸ್ಸಿನಿಂದ ಕೂಡಿದವನೂ ಆದ (ಇಮ್ಮಡಿ) ಅರಿಕೇಸರಿಯೆಂಬ ರಾಜನು ಹುಟ್ಟಿದನು. ಹಾಗೆ ಅವನು ಹುಟ್ಟಿದ ಕೂಡಲೇ ತ್ಯಾಗದ ಪಂಪಿನಲ್ಲಿಯೂ ವೀರದ ವೈಭವದಲ್ಲಿಯೂ ಮಗನೆಂದರೆ ಇವನೇ ಮಗ ಎಂದೆಲ್ಲರೂ ಹೊಗಳುವ ಹಾಗೆ ಪ್ರಸಿದ್ದಿ ಪಡೆಯಲು ಈ ಅರಿಕೇಸರಿಯಿಂದ ಪ್ರಪಂಚವೆಂಬ ಮಂದಿರಕ್ಕೆ ಕೊಂಬು
1. ಇಲ್ಲಿ ಡಾಳಪ್ರಿಯನೊಳ್ ಎಂಬ ಪಾಠಕ್ಕೆ ಅರ್ಥವಾಗುವುದಿಲ್ಲ..
Page #83
--------------------------------------------------------------------------
________________
೭೮ / ಪಂಪಭಾರತಂ
ಮಗನಾದನಾಗಿ ಚಾಗದ ನೆಗಚ್ಯೊಳ್ ಬೀರದೇಬಿಯೊಳ್ ನೆಗಟಿ ಮಗಂ | ಮಗನನೆ ಪುಟ್ಟಲೊಡಂ ಕೋ
ಜಿಗಗೊಂಡುದು ಭುವನಭವನಮರಿಕೇಸರಿಯೊಳ್ | ' ೪೨ ತರಳ || ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ದಳಿದಾಗಳಾ
ಮದಗಜಾಂಕುಶದಿಂದ ಪರ್ಚಿಸಿ ನಾಭಿಯಂ ಮದದಂತಿ ದಂ || ತದೊಳೆ ಕಟ್ಟಿದ ತೊಟ್ಟಿಲಂ ನಯದಿಂದಮೇಟಿಗೆ ಬಾಳಕಾ
ಲದೊಳೆ ತೊಟ್ಟಿಲಿಗಂ ಗಜಪ್ರಿಯನಪ್ಪುದಂ ಸಲೆ ತೋಚಿದಂ ೪೩ ಕಂII ರುಂದ್ರಾಂಭೋಧಿ ಪರೀತ ಮ :
“ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ತಾ | ದಿಂದ ತಾನನ ಸಲೆ ನೆಗ ಆಂದೇಂದ್ರನ ತೋಳೆ ತೊಟ್ಟಿಲಾಗಿರೆ ಬಳದಂ || - ೪೪ ಅಮಿತಮತಿ ಗುಣದಿನ ವಿ ಕ್ರಮಗುಣದಿಂ ಶಾಶ್ವಪಾರಮುಂ ರಿಪುಬಳ ಪಾ | ರಮುಮೊಡನೆ ಸಂದುವೆನಿಸಿದ. ನಮೇಯ ಬಲಶಾಲಿ ಮನುಜ ಮಾರ್ತಾಂಡ ನೃಪಂ || ೪೫ ಉಡವಣಿ ಪಳಯದ ಮುನ್ನಮ ತೊಡಗಿ ಚಲಂ ನೆಗಟಿ ರಿಪುಬಲಂಗಳನೆ ಪಡ | ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತಂದೊಳೆ ಬಳೆದಂ || ೪೬ ಹುಟ್ಟಿದ ಹಾಗಾಯಿತು. (ಅಂದರೆ ಇವನಿಂದ ಪ್ರಪಂಚಕ್ಕೆಲ್ಲ ಹಿರಿಮೆಯುಂಟಾಯಿತು' ಎಂದು ಭಾವ), ೪೩. ಅರಿಕೇಸರಿಯು ಹುಟ್ಟಿದ ಕೂಡಲೆ ಆ ಶಿಶುವಿಗೆ ಆನೆಯ ಮದೋದಕದಿಂದಲೇ ಲೋಕರೂಢಿಯಂತೆ (ಸಂಪ್ರದಾಯಾನುಸಾರವಾಗಿ) ಬೆಚ್ಚ ನೀರೆರೆದು ಮದಗಜಾಂಕುಶದಿಂದ ಹೊಕ್ಕಳ ಕುಡಿಯನ್ನು ಕತ್ತರಿಸಿ ಮದಗಜದಂತ ದಿಂದ ಮಾಡಿದ ತೊಟ್ಟಿಲಿನಲ್ಲಿ ಮಲಗಿಸಲು ಅವನು ತೊಟ್ಟಿಲ ಕೂಸಾಗಿದ್ದ ಕಾಲದಿಂದಲೂ ತಾನು 'ಗಜಪ್ರಿಯ'ನಾಗುವುದನ್ನು ಪ್ರಕಾಶಪಡಿಸಿದನು. ೪೪. ಈ ಅರಿಕೇಸರಿಯು ಸಾಕ್ಷಾತ್ ಇಂದ್ರನೇ ತಾನೆಂದು ಪ್ರಸಿದ್ದಿ ಪಡೆದ ಇಂದ್ರರಾಜನ : ತೋಳೆಂಬ ತೊಟ್ಟಿಲಿನಲ್ಲಿ ಬೆಳೆದನು. ವಿಸ್ತಾರವಾದ ಸಮುದ್ರದಿಂದ ಸುತ್ತುವರಿಯಲ್ಪಟ್ಟ
ಈ ಭೂಮಿಯಲ್ಲಿ ಇಂಥವರು ಮತ್ತಾರಿದ್ದಾರೆ? ೪೫, ಅಳತೆಗೆ ಸಿಲುಕದ ಭುಜಬಲವುಳ್ಳ ಈ ಮನುಜಮಾರ್ತಾಂಡನೃಪನು (ಮನುಷ್ಯರಲ್ಲಿ ಸೂರ್ಯನಂತಿರುವ ರಾಜನು) ತನ್ನ ವಿಶೇಷವಾದ ಬುದ್ವಿಗುಣದಿಂದಲೂ ಅಸಾಧ್ಯವಾದ ಪರಾಕ್ರಮದಿಂದಲೂ ಶಾಸ್ತ್ರದ ಎಲ್ಲೆಯನ್ನೂ ಶತ್ರುಬಲದ ಎಲ್ಲೆಯನ್ನೂ ಜೊತೆಯಲ್ಲಿಯೇ ದಾಟಿದನು. ಎಂದರೆ ಶಾಸ್ತ್ರವಿದ್ಯೆಯನ್ನೂ ಶಸ್ತವಿದ್ಯೆಯನ್ನೂ ಏಕಕಾಲದಲ್ಲಿ ಕಲಿತನು. ೪೬. ಈತನು ತನ್ನ ಸೊಂಟಕ್ಕೆ ಕಟ್ಟಿರುವ ಮಣಿಗಳು ಹರಿದು ಹೋಗುವುದಕ್ಕೆ ಮುಂಚಿನಿಂದಲೂ ಅಂದರೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗಿ
Page #84
--------------------------------------------------------------------------
________________
. ಪ್ರಥಮಾಶ್ವಾಸಂ | ೭೯ ಮೇಲೆಲ್ಲ ಬಲಂ ಕೋಟಿಗೆ ಮೇಲಷ್ಟೊಡಮನವನಿತೆ ನೆಗಟ್ಯೂರ್ವಗಂ | ಮೇಲಿಡಮಕ್ಕೆಂದುಂ ಸೋಲವು ಕಣ್ ಪರಬಲಾಬ್ಬಿಗಂ ಪರವಧುಗಂ ||
೪೭', ಧುರದೊಳ್ ಮೂಜುಂ ಲೋಕಂ ನೆರೆದಿರೆಯುಂ ಕುಡುವ ಪೊಜಕೊಳ್ ಮೇರುವೆ ಮುಂ | ದಿರೆಯುಂ ಬೀರದ ಬಿಯದಂ ತರಕ್ಕೆ ಕಿಳದೆಂದು ಚಿಂತಿಪಂ ಪ್ರಿಯಗಳಂ | ಸಮನೆನಿಸುವರ್ ಪ್ರಶಸ್ತಿ ಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚಮಹಾ ಶ |
ಮಹಾ ಸಾಮಂತರೆನಲ್ ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್' 10 ಚಾಗದ ಕಂಬಮಂ ನಿಲಿಸಿ ಬೀರದ ಶಾಸನಮಂ ನೆಗಟ್ಟಿ ಕೋ ಜೋಗದ ಮಂಡಲಂಗಳನೆ ಕೊಂಡು ಜಔತಯಂಗಳೊಳ್ ಜಸ | ಕ್ಯಾಗರಮಾದ ಬದ್ದೆಗನಿನಾ ನರಸಿಂಹನಿನತ್ತ ನಾಲ್ವೆರಲ್ ಮಗು ಪೋದು ಚಾಗದೂಳಮೊಂದಿದ ಬೀರದೂಳಂ ಗುಣಾರ್ಣವಂ ||
೫೦
ನಿಂದಲೂ ಹಟಸ್ವಭಾವದಿಂದ ಕೂಡಿ ಶತ್ರುಸೈನ್ಯಗಳನ್ನೆಲ್ಲ ಕೆಳಗುರುಳುವ ಹಾಗೆ ಮಾಡಿ ಶತ್ರುಸೇನೆಯ ರಕ್ತಸಮುದ್ರದ ಮಧ್ಯದಲ್ಲಿರುವ ಜಿಗುಳೆಯು ಬೆಳೆಯುವ ಹಾಗೆ ಬೆಳೆದನು. ೪೭. ತನ್ನ ಮೇಲೆ ದಂಡೆತ್ತಿ ಬಂದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿದ್ದರೂ ಪರಸ್ತ್ರೀಯು ಪ್ರಸಿದ್ದರೂಪವತಿಯಾದ ಊರ್ವಶಿಯನ್ನು ಮೀರಿದ್ದರೂ ಅವನ ಕಣ್ಣು ಮಾತ್ರ ಯಾವಾಗಲೂ ಶತ್ರುಸೇನಾಸಮುದ್ರಕ್ಕೂ ಪರವನಿತೆಗೂ ಸೋಲುವುದಿಲ್ಲ. ೪೮. ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಆ ಅರಿಕೇಸರಿಯು ಯುದ್ದದಲ್ಲಿ ತನಗೆ ಮೂರುಲೋಕವೂ ಒಟ್ಟುಗೂಡಿ ಎಂದು ಎದುರಿಸಿದರೂ ಅದು ತನ್ನ ಪರಾಕ್ರಮದ ವ್ಯಾಪ್ತಿಗೆ ಕಿರಿದೆಂದೇ ಭಾವಿಸುತ್ತಾನೆ. ಹಾಗೆಯೇ ದಾನಮಾಡುವ ಹೊತ್ತಿನಲ್ಲಿ ಸುವರ್ಣ ಪರ್ವತವಾದ ಮೇರುಪರ್ವತವೇ ತನ್ನ ಮುಂದೆ ಇದ್ದರೂ ತನ್ನ ವ್ಯಯಶಕ್ತಿಗೆ ಅಲ್ಪವೆಂದೇ ಎಣಿಸುತ್ತಾನೆ. ೪೯. ಬಿರುದಾವಳಿಗಳನ್ನು ಹೊಗಳುವ ಪ್ರಸ್ತಾಪದಲ್ಲಿ ಮಾತ್ರ ಪಂಚಮಹಾಶಬ್ದಗಳನ್ನು (ಕೊಂಬು, ತಮಟೆ, ಶಂಖ, ಭೇರಿ, ರಾಜಘಂಟ) ಸಂಪಾದಿಸಿರುವ ಮಹಾಸಾಮಂತರು ಅರಿಕೇಸರಿಯೊಡನೆ ಸಮಾನರೆನಿಸಿಕೊಳ್ಳುತ್ತಾರೆಯೇ? ೫೦. ದಾನಶಾಸನಗಳನ್ನೂ ವೀರಸೂಚಕವಾದ ಪ್ರತಾಪಶಾಸನಗಳನ್ನೂ ಸ್ಥಾಪಿಸಿ ಅಧೀನವಾಗದ ರಾಜ್ಯಸಮೂಹಗಳನ್ನೆಲ್ಲ ವಶಪಡಿಸಿಕೊಂಡು ಮೂರುಲೋಕಗಳನ್ನೂ ತನ್ನ ಕೀರ್ತಿಗೆ ಆವಾಸಸ್ಥಾನ ಮಾಡಿ ಕೊಂಡ ಭದ್ರದೇವನಿಗಿಂತಲೂ ನರಸಿಂಹನಿಗಿಂತಲೂ ಸರ್ವವ್ಯಾಪಿಯಾದ
Page #85
--------------------------------------------------------------------------
________________
೮೦) ಪಂಪಭಾರತ ಮliz|ಎನೆ ಸಂದುಂ ವೀರವೈರಿಕ್ಷಿತಿಪಗಜಘಟಾಟೋಪಕುಂಭಸ್ಥಳೀಭೇ
ದನನುಗೋದ್ರಾಸಿ ಭಾಸ್ಕದ್ದುಜಪರಿಘನನಾರೂಢಸರ್ವಜ್ಞನಂ ವೈ | ರಿ ನರೇಂದ್ರೋದ್ಧಾಮ ದರ್ಪೊದ್ದಳನನನ ಕಥಾನಾಯಕಂ ಮಾಡಿ ಸಂದ ರ್ಜುನನೊಳ್ ಪೋಲೀ ಕಥಾಭಿತ್ತಿಯನನುನಯದಿಂ ಪೇಬಲೆಂದುಕೊಂಡಂll
೫೧
ವ ಅದೆಂತನೆ-ಸಮುನಿಷ ರತ್ನಮಾಲಾ ಪ್ರಭಾಭೀಲಾರುಣ ಜಲಪ್ತವಾವಿಳ ವಿಳೋಳವೀHರಯ ಪ್ರದಾರಿತ ಕುಳಾಚಲೋದಧಿಪರೀತವಾಗಿರ್ದ ಜಂಬೂದ್ವೀಪ ದೂಳಗುಂಟು ನಾಡು ಕುರುಜಾಂಗಣನಾಮದಿಂ ಅಂತಾ ಕುರುಜಾಂಗಣ ವಿಷಯದೊಳ್
ಚಂ || ಜಲಜಲನೊಲ್ಕುತಿರ್ಪ ಪರಿಕಾಲ ಪರಿಕಾಲೊಳಳುರ್ಕಗೊಂಡ ನೈ
ದಿಲ ಪೊಸವೂ ಪೊದು ಪೊಸ ನೈದಿಲ ಕಂಪನೆ ಬೀಟಿ ಕಾಯ ಕಂ | ಗೊಲೆಯೊಳೆ ಜೋಲ್ವ ಶಾಳಿ ನವಶಾಳಿಗೆ ಪಾಯ್ಸ ಶುಕಾಳಿ ತೋಜ ಕೆ ಝೂಲಗಳಿನೊಪ್ಪಿ ತೋಟಿ ಸಿರಿ ನೋಡುಗುಮಾ ವಿಷಯಾಂತರಾಳದೊಳ್ ||
ದಾನಗುಣದಲ್ಲಿಯೂ ಅವನಲ್ಲಿ ಸಹಜವಾಗಿರುವ ವೀರ್ಯಗುಣದಲ್ಲಿಯೂ ಗುಣಾರ್ಣವ ಬಿರುದಾಂಕಿತನಾದ ಅರಿಕೇಸರಿಯು ನಾಲ್ಕು ಬೆರಳಷ್ಟು ಮೇಲಾಗಿದ್ದಾನೆ. ೫೧. ಎಂದು ಪ್ರಸಿದ್ಧನಾದವನೂ ಶತ್ರುರಾಜರ ಆನೆಗಳ ಸಮೂಹದ ಬಲಿಷ್ಟವಾದ ಕುಂಭಸ್ಥಳವನ್ನು ಸೀಳುವವನೂ ಭಯಂಕರವೂ ಬಲಿಷ್ಠವೂ ಆದ ಕತ್ತಿಯಿಂದ ಪ್ರಕಾಶಮಾನವಾದ ತೋಳೆಂಬ ಪರಿಘಾಯುಧವುಳ್ಳವನೂ ಆರೂಢಸರ್ವಜ್ಞನೆಂಬ ಬಿರುದುಳ್ಳವನೂ ವೈರಿರಾಜರ ವಿಶೇಷವಾದ ಅಹಂಕಾರವನ್ನು ಅಡಗಿಸುವವನೂ ಆದ ಅರಿಕೇಸರಿಯನ್ನೇ ಈ ಕತೆಗೆ ನಾಯಕನನ್ನಾಗಿ ಮಾಡಿ ಪ್ರಸಿದ್ಧನಾದ ಅರ್ಜುನನೊಡನೆ ಹೋಲಿಸುವ ಈ ಕಥಾಚಿತ್ರವನ್ನು ಹೇಳಬೇಕೆಂದು ಪ್ರೀತಿಯಿಂದ ಅಂಗೀಕಾರ ಮಾಡಿದ್ದೇನೆ. ವು ಅದು ಹೇಗೆಂದರೆ ವಿಶೇಷವಾಗಿ ಪ್ರಕಾಶಿಸುತ್ತಿರುವ ವಿಧವಿಧವಾದ ರತ್ನಗಳ ಕಾಂತಿಯಿಂದ ಭೇದಿಸಲ್ಪಟ್ಟ ಕೆಂಪುನೀರಿನಿಂದ ಕಲುಷಿತವೂ ಚಂಚಲವೂ ಆದ ಅಲೆಗಳ ವೇಗದಿಂದ ಸೀಳಲ್ಪಟ್ಟ ಕುಲಪರ್ವತಗಳನ್ನುಳ್ಳ, ಸಮುದ್ರದಿಂದ ಆವೃತವೂ ಆದ ಜಂಬೂದ್ವೀಪದಲ್ಲಿ ಕುರುಜಾಂಗಣವೆಂಬ ಹೆಸರಿನಿಂದ ಕೂಡಿದ ನಾಡೊಂದುಂಟು. ಹಾಗಿರುವಾಗ ಕುರುಜಾಂಗಣ ದೇಶದಲ್ಲಿ ೫೨. ಜಲಜಲ ಎಂದು ಶಬ್ದ ಮಾಡುತ್ತ ಪ್ರವಾಹವಾಗಿ ಹರಿಯುವ ಕಾಲುವೆಗಳು, ಆ ಕಾಲುವೆಗಳಲ್ಲಿ ಹರಡಿಕೊಂಡಿರುವ ಹೊಸದಾದ ನೆಯ್ದಿಲೆಯ ಹೂವು, ಸುತ್ತಲೂ ವ್ಯಾಪಿಸಿರುವ ಹೊಸನೆಯ್ದಿಲ ಹೂವಿನ ಸುಗಂಧವನ್ನು ಸೂಸಿ ಫಲ ಬಿಟ್ಟಿರುವ ಕೆಂಪುಗೊಂಚಲಿನ ಜೋತುಬಿದ್ದಿರುವ ಬತ್ತ, ಆ ಹೊಸ ಬತ್ತಕ್ಕೆ ಹಾಯ್ದು ಬರುವ ಗಿಣಿಗಳ ಗುಂಪು - ಇವು ಕಾಣುತ್ತಿರಲು ಆ ಗದ್ದೆಗಳಿಂದ ಮನೋಹರವಾಗಿ ತೋರುವ ಆ ದೇಶದಲ್ಲಿ ಲಕ್ಷ್ಮೀದೇವಿಯು ಸದಾ ನಲಿದಾಡುತ್ತಿದ್ದಾಳೆ. ಅಂದರೆ ಆ ಭಾಗವು ಸದಾ
Page #86
--------------------------------------------------------------------------
________________
ಪ್ರಥಮಾಶ್ವಾಸಂ | ೮೧ ಬೆಳೆದಂಗಿರ್ದ ಕೆಲನೆ ಕೆಲ್ಯೂಲನಂ ಬಳಸಿರ್ದ ಪೂತ ಪೂ ಗೋಳಗಳ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ | ವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂ
ಗಳೆ ವಿಷಯಾಂಗನಾಲುಳಿತ ಕುಂತಳದಂತವೊಲೊಪ್ಪಿ ತೋಜುಗುಂ ೫೩ ಚಂ || ಲಳಿತ ವಿಚಿತ್ರ ಪತ್ರ ಫಲ ಪುಷ್ಟಯುತಾಟವಿ ಸೊರ್ಕಿದಾನೆಯಂ
ಚಳವುದು ದೇವಮಾತೃಕಮೆನಿಪ್ಪ ಪೊಲಂ ನವಗಂಧಶಾಳಿಯಂ | ಬೆಳೆವುದು ರಮ್ಮ ನಂದನ ವನಾಳಿ ವಿಯೋಗಿಜನಕ್ಕೆ ಬೇಟಮಂ
ಬಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್ || ೫೪ ಕ೦ll, ಆವಲರುಂ ಪಣುಂ ಬೀ
ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ | - ಮಾವುಗಳುಮಂದೂಡಿನ್ ಪಟ ತಾವುದು ಸಂಸಾರ ಸಾರಸರ್ವಸ್ವ ಫಲಂ || ಮಿಡಿದೂಡ ತನಿಗರ್ವು ರಸಂ ಬಿಡುವುವು ಬರಿದೂಂದು ಮುಗುಳ ಕಂಪಿಳಿ ಮೊಗಂ | ಗಿಡುವುವು ತುಂಬಿಗಳುಮೆ ವಡುವುವು ಕುಡಿದೊಂದು ಸಣ್ಣ ರಸದೊಳೆ ಗಿಳಿಗಳ್ || ೫೬
೫೫
ಸಂಪದ್ಭರಿತವಾಗಿದೆ ಎಂದು ಭಾವ. ೫೩. (ಆ ದೇಶದಲ್ಲಿ ಎಲ್ಲಿ ನೋಡಿದರೂ) ಬೆಳೆದ ತೆನೆಯ ಭಾರದಿಂದ ಬಾಗಿರುವ ಗದ್ದೆಗಳೇ, ಆ ಗದ್ದೆಗಳನ್ನು ಬಳಸಿಕೊಂಡಿರುವ ಹೂವಿನಿಂದ ಕೂಡಿರುವ ಕೊಳಗಳೇ, ಆ ಹೂಗೋಳಗಳ ಸುತ್ತಲಿರುವ ವಿಚಿತ್ರವಾದ ತೋಟದ ಸಮೂಹಗಳೇ. ಆ ತೋಟವನ್ನು ಆವರಿಸಿಕೊಂಡಿರುವ ಮದಿಸಿದ ದುಂಬಿಗಳ ಗುಂಪುಗಳ ಆ ದೇಶವೆಂಬ ಸ್ತ್ರೀಯ ವಕ್ರವಾದ ಮುಂಗುರುಳಿನಂತೆ ಕಾಣುತ್ತದೆ. ೫೪. ಆ ನಾಡಿನ ಒಳಭಾಗದಲ್ಲಿ ಸುಂದರವೂ ವಿವಿಧವೂ ಆದ ಎಲೆ ಹಣ್ಣು ಹೂವುಗಳಿಂದ ಕೂಡಿದ ಕಾಡು ಮದ್ದಾನೆಗಳನ್ನು ಬೆಳೆಸುತ್ತದೆ. ಮಳೆಯಿಂದಲೇ ಬೆಳೆಯುವ ಹೊಲಗಳು ಸುವಾಸನಾಯುಕ್ತವಾದ ಬತ್ತವನ್ನು ಬೆಳೆಸುತ್ತವೆ. ರಮ್ಯವಾದ ತೋಟದ ಸಾಲುಗಳು ವಿರಹಿಗಳಿಗೆ ಪ್ರೀತಿಯನ್ನು ಹೆಚ್ಚಿಸುತ್ತವೆ. ಆ ದೇಶದ ನಾಡಿನಲ್ಲಿಯೂ ಕಾಡಿನಲ್ಲಿಯೂ ಬೆಳೆಯುವ ಬೆಳಸು ಇನಿದಾದ ಬೆಳಸಾಗಿವೆ. ೫೫. (ಅಲ್ಲಿಯ) ಹೂವು ಹಣ್ಣು ಮಲ್ಲಿಗೆಗಳೂ ರಸಯುಕ್ತವಾದ ಮಾವುಗಳೂ ಎಂದೂ ಮುಗಿದುಹೋಗವು ಎಂದಮೇಲೆ ಸಂಸಾರಸಾರ ಸರ್ವಸ್ವಫಲ ಬೇರೆ ಯಾವುದಿದೆ? ೫೬, ಆ ನಾಡಿನ ರಸಯುಕ್ತವಾದ ಕಬ್ಬು ಬೆರಳಿನಿಂದ ಮಿಡಿದರೇ ರಸವನ್ನು ಚೆಲ್ಲುತ್ತದೆ. ದುಂಬಿಗಳು ಅರಳಿದ ಒಂದು ಹೂವಿನ ವಾಸನೆಯಿಂದಲೇ ತೃಪ್ತಿಹೊಂದಿ ಮುಖವನ್ನು ತಿರುಗಿಸುವುವು. ಗಿಳಿಗಳು ಒಂದು ಹಣ್ಣಿನ ರಸವನ್ನು ಕುಡಿಯುವುದರಿಂದಲೇ ಅಜೀರ್ಣವನ್ನು ಹೊಂದುವುವು. ಅಂದರೆ ಅಲ್ಲಿಯ ಕಬ್ಬು, ಹೂವು, ಹಣ್ಣು ರಸಯುಕ್ತವಾಗಿವೆ.
Page #87
--------------------------------------------------------------------------
________________
೮೨) ಪಂಪಭಾರತಂ
ಸುತ್ತಿಗೆದ ರಸದ ತೋಳಿಗಳೆ ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ ! ನತ್ರ ಮದಕರಿ ವನಂಗಳ ಸುತ್ತಲುಮಾ ನೆಲದ ಸಿರಿಯನೇನಂ ಪೊಗಂ || -
೫೭
ವ|| ಅಂತು ಸೊಗಯಿಸುವ ಕುರುಜಾಂಗಣ ವಿಷಯಕ್ಕೆ ರಾಜದ್ರಾಜಧಾನಿಯಾಗಿರ್ದು ಹರಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂತೆ ದಿಕ್ಕರಿಕಟತಟಕ್ಕೆ ಮದಲೇಖೆಯಿರ್ಪಂತ ಕೈಟಭಾರಾತಿಯ ವಿಶಾಲೊರಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರವೆಂಬುದು ಪೊಬಿಲಲ್ಲಿ
ರಗಳೆ || ಅದರ ಪೊವೊಲೀಲ ವಿಶಾಳ ಕನಕ ಕೃತಕ ಗಿರಿಗಳಿಂ ಫಳಪ್ರಕೀರ್ಣತರುಗಳಿಂ
ನನೆಯ ಕೊನೆಯ ತಳಿರ ಮುಗುಳ ವನಲತಾನಿಕುಂಜದಿಂ ಪ್ರಸೂನ ರಜದ ಪುಂಜದಿಂ ಗಗನತಳಮೆ ಪಳೆದು ಬಿಟ್ಟುದೆನಿಪ ಬಹುತಟಾಕದಿಂ ಕುಕಿ ನಲಿವ ಕೋಕದಿಂ ಸುರಿವ ಸುರಯಿಯರಲ ಮುಗುಳೆ ಮೊಗಸಿದಳಿಕುಳಂಗಳಿಂ ತೊದಲ್ನ ಶಿಶು ಶುಕಂಗಳಿಂ ತೆಗೆಯ ಬೀರರವದ ಮೇಲೆ ಪರಿವ ಮದಗಜಗಳಿಂ ಚಳತ್ತುರಂಗಮಂಗಳಿಂ ಲವಣ ಜಳಧಿ ಬಳಸಿದಂತೆ ಬಳಸಿದಗದ ನೀಳದಿಂದುದಗ್ರ ಕನಕಶಾಳದಿಂ
೫೭. ಆ ನಾಡಿನ ಸುತ್ತಲೂ ಸಿದ್ದರಸದ ಮಡುಗಳೇ, ಮುತ್ತುರತ್ನಗಳಿಂದ ಮಾಡಿದ ಮನೆಗಳೇ, ಮದ್ದಾನೆಗಳಿಂದ ಕೂಡಿದ ಕಾಡುಗಳೇ, ಆ ನೆಲದ ಸಂಪತ್ತನ್ನು ಏನೆಂದು ಹೊಗಳಲಿ. ವ|| ಹಾಗೆ ಸೊಗಯಿಸುತ್ತಿರುವ ಕುರುಜಾಂಗಣದೇಶಕ್ಕೆ ಪ್ರಕಾಶಮಾನವಾದ ರಾಜಧಾನಿ ಹಸ್ತಿನಾಪುರ. ಅದು ಈಶ್ವರನ ಜಟೆಯ ಸಮೂಹಕ್ಕೆ ಚಂದ್ರಲೇಖೆಯ ಹಾಗೆಯೂ ದಿಗ್ಗಜಗಳ ಗಂಡಸ್ಥಲಕ್ಕೆ ಮದಲೇಖೆಯ ಹಾಗೆಯೂ ವಿಷ್ಣುವಿನ ವಿಶಾಲವಾದ ವಕ್ಷಸ್ಥಳಕ್ಕೆ ಕೌಸ್ತುಭಮಣಿಯ ಹಾಗೆಯೂ ಸೊಗಯಿಸುತ್ತಿದೆ. ಆ ಪಟ್ಟಣದಲ್ಲಿ ೫೮. ಆ ಪಟ್ಟಣದ ಹೊರಭಾಗದಲ್ಲಿರುವ ಚಿನ್ನದಿಂದ ಮಾಡಿದ ಕೃತಕಪರ್ವತಗಳಿಂದಲೂ ಹಣ್ಣುಗಳಿಂದಲೂ ತುಂಬಿರುವ ಗಿಡಗಳಿಂದಲೂ ಹೂವು, ಕುಡಿ, ಚಿಗುರು, ಮೊಗ್ಗುಗಳಿಂದ ಕೂಡಿದ ತೋಟದ ಬಳ್ಳಿಮಾಡಗಳಿಂದಲೂ ಹೂವಿನ ಪರಾಗದ ರಾಶಿಗಳಿಂದಲೂ ಆಕಾಶಪ್ರದೇಶವೇ ಹರಿದು ಕೆಳಗೆ ಬಿದ್ದಿದೆ ಎನ್ನಿಸಿಕೊಳ್ಳುವ ವಿಶೇಷವಾದ ಸರೋವರಗಳಿಂದಲೂ ಶಬ್ದಮಾಡುತ್ತಿರುವ ಕೋಗಿಲೆಗಳಿಂದಲೂ ತಾನಾಗಿ ಸುರಿಯುತ್ತಿರುವ ಸುರಗಿಯ ಹೂವಿನ ಮೊಗ್ಗುಗಳಿಗೆ ಮುತ್ತಿಕೊಂಡಿರುವ ದುಂಬಿಯ ಸಮೂಹದಿಂದಲೂ ತೊದಲುಮಾತನಾಡುತ್ತಿರುವ ಗಿಳಿಯ ಮರಿಗಳಿಂದಲೂ ವೀರಶಬ್ದಗಳಿಂದ ಮುನ್ನಡೆಸಲು ಮುಂದಕ್ಕೆ ನುಗ್ಗುತ್ತಿರುವ ಮದ್ದಾನೆಗಳಿಂದಲೂ ಚಲಿಸುತ್ತಿರುವ ಕುದುರೆಗಳಿಂದಲೂ ಲವಣಸಮುದ್ರವೇ ಬಳಸಿಕೊಂಡಂತೆ ಸುತ್ತುವರಿದಿರುವ ಕಂದಕಗಳ ಹರವಿನಿಂದಲೂ, ಎತ್ತರವಾದ ಚಿನ್ನದ ಗೋಡೆಯಿಂದಲೂ ಒಳಭಾಗದಲ್ಲಿ
Page #88
--------------------------------------------------------------------------
________________
ಪ್ರಥಮಾಶ್ವಾಸಂ | ೮೩ ದೊಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ ಸರಾಗವಾದ ರಾಗದಿಂ ದಿವಮನೇಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ ಸದಾನಿಕೇತನಂಗಳಿಂ ಧನದ ಭವನಮೆನಿಪ ಸಿರಿಯ ಬಚರಾಪಣಂಗಳಿಂ ಪೊದಟ್ಟ ಕಾವಣಂಗಳಿಂ ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಗ ಹೃದಯಹಾರಿಯಿಂ | ಕನಕ ಗೋಪುರಂಗಳೊಳಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂ ಸುರತಸುಖದ ಬಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾ ವಿನೋದನೀಡದಿಂ ಕನಕಶೈಲಮೆನಿಸಿ ನೆಗಟ್ಟಿ ಭೂಮಿಪಾಲಭವನದಿಂ ಸಮಸ್ತ ವಸ್ತುಭುವನದಿಂ 11೫೮||
ವ|| ಅಂತು ಮೂಜುಲೋಕದ ಚೆಲ್ವೆಲ್ಲಮಂ ವಿಧಾತ್ರನೊಂದೆಡೆಗೆ ತೆರಳಿದಂತೆ ಸಮಸ್ತವಸ್ತುವಿಸ್ತಾರಹಾರವಾಗಿರ್ದ ಹಸ್ತಿನಪುರವೆ ನಿಜವಶಾವಳಂಬವಾಗ ನಗು ಭರತಕುಲತಿಲಕರ ವಂಶಾವತಾರಮೆಂತಾದುದೆಂದೂಡ* ಕಂ || ಜಳರುಹನಾಭನ ನಾಭಿಯ
ಜಳ ಬುದ್ಗುದದೊಳಗೆ ಸುರಭಿ ಪರಿಮಳ ಮಿಳಿತೋ | ಝುಳಿತಾಳಿ ಜಲಜಮಾಯ್ತಾ ಜಳಜದೊಳೊಗದಂ ಹಿರಣ್ಯಗರ್ಭ ಬ್ರಹ್ಮ |
೫೯ ಕಮಲೋದ್ದವನಮಳಿನ ಹೃ ತಮಲದೊಳೊಗೆದರ್ ಸುರೇಂದ್ರ ಧಾರಕರಾವಾ | ಗಮಳರ್ ನೆಗಟ್ಟಿರ್ದರ್ ಪುಲ ಹ ಮರೀಚತ್ಯಂಗಿರಃ ಪುಳಸ್ಯ ಕ್ರತುಗಳ್ |
ಕುಲಪರ್ವತವೆನಿಸಿಕೊಳ್ಳುವ ದೇವಸ್ಥಾನಗಳ ಐಶ್ವರ್ಯದಿಂದಲೂ ಸ್ವರ್ಗವನ್ನೇ ಹಾಸ್ಯಮಾಡುವ ಹಾಗೆ ಚಲಿಸುತ್ತಿರುವ ಧ್ವಜಗಳಿಂದಲೂ ದಾನಮಾಡುವವರ ಮನೆಗಳಿಂದಲೂ, ಕುಬೇರ ಭವನಗಳೆನಿಸಿಕೊಂಡಿರುವ ಸಂಪದ್ಯುಕ್ತವಾದ ವೈಶ್ಯರ ಅಂಗಡಿಗಳಿಂದಲೂ ವ್ಯಾಪಿಸಿಕೊಂಡಿರುವ ಚಪ್ಪರಗಳಿಂದಲೂ ವಿಟ ಜನರು ಸಿಕ್ಕಿಕೊಳ್ಳುವ ಸಂಕೋಲೆಯಂತೆಯೂ ಪಂಡಿತರ ಹೃದಯವನ್ನು ಸೂರೆಗೊಳ್ಳುವಂತೆಯೂ ಇರುವ ಸೂಳೆಗೇರಿಯಿಂದಲೂ ಚಿನ್ನದ ಗೋಪುರ ದೊಳಗಿರುವ ಎರಡು ಕಡೆಯ ನೃತ್ಯಶಾಲೆಗಳಿಂದಲೂ ವಿಲಾಸವತಿಯರಾದ ಸ್ತ್ರೀಯರ ಸಮೂಹದಿಂದಲೂ ಸಂಭೋಗಸುಗಾತಿಶಯದಿಂದ ಕೂಡಿದ ಲತಾಗೃಹಗಳಿಂದಲೂ ಆರಾಮಗೃಹಗಳಿಂದಲೂ ಮೇರುಪರ್ವತವೆನಿಸಿಕೊಂಡು ಪ್ರಸಿದ್ದಿಯಾಗಿರುವ ಅರಮನೆಗಳಿಂದಲೂ ಭಂಡಾರಗಳಿಂದಲೂ ವರ ಮೂರುಲೋಕದ ಸೌಂದರ್ಯವನ್ನು ಬ್ರಹ್ಮನು ಒಂದು ಕಡೆ ರಾಶಿ ಮಾಡಿದ ಹಾಗೆ ಸಮಸ್ತ ವಸ್ತು ವಿಸ್ತಾರದಿಂದ ಮನೋಹರವಾಗಿದ್ದ ಹಸ್ತಿನಾಪಟ್ಟಣದಲ್ಲಿ ಭರತವಂಶಶ್ರೇಷ್ಠರು ರಾಜ್ಯಭಾರ ಮಾಡುತ್ತಿದ್ದರು. ಅವರ ಹುಟ್ಟು ಹೇಗಾಯಿತೆಂದರೆ ೫೯. ವಿಷ್ಣುವಿನ ಹೊಕ್ಕುಳ ನೀರಿನ ಗುಳ್ಳೆಯಲ್ಲಿ ಸುಗಂಧಯುಕ್ತವೂ ದುಂಬಿಗಳಿಂದ ಆವೃತವೂ ಆದ ಕಮಲವು ಹುಟ್ಟಿತು. ಆ ಕಮಲದಲ್ಲಿ ಹಿರಣ್ಯಗರ್ಭ ಬ್ರಹ್ಮನು ಹುಟ್ಟಿದನು. ೬೦. ಬ್ರಹ್ಮನ ಪರಿಶುದ್ಧವಾದ ಹೃದಯಕಮಲದಲ್ಲಿ ಶ್ರೇಷ್ಠವಾದ ನೀರಿನ ಕಮಂಡಲವನ್ನು ಧರಿಸಿದ
Page #89
--------------------------------------------------------------------------
________________
೮೪ | ಪಂಪಭಾರತಂ
ವl ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟದವರ್ಮಕಳೊಳಗೆ ಮರೀಚಿಯ ಮಗ ಕಶ್ಯಪನನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನಾತನ ಮಗನವಾರ್ಯವೀರ್ಯ೦ ಸೂರ್ಯನಾತನಿಂದವ್ಯವಚ್ಛವಾಗಿ ಬಂದ ವಂಶಂ ಸೂರ್ಯವಂಶಮಂಬುದಾಯ್ತು
ಕಂ | ಅತ್ರಿಯ ಪಿರಿಯ ಮಗಂ ಭುವ
ನತ್ರಯ ಸಂಗೀತ ಕೀರ್ತಿ ಸೋಮಂ ಸಕಲ | ಕೃತಕುಲಪೂಜ್ಯನಮಳ ಚ ರಿತ್ರಂ ಪೋದ್ದಾಮ ಸೋಮವಂಶಲಲಾಮಂ |
ಆ ಸೋಮವಂಶಜರ್ ಪಲ ರಾಸುಕರಂಬೆರಸು ನಗು ಜಸದಿಂ ಜಗಮಂ | ಬಾಸಣಿಸಿ ಪೋದೂಡಧಿಕ ವಿ ಳಾಸಂ ಪೌಷ್ಠಂತಿ ಭರತನೆಂಬಂ ನೆಗಟ್ಟಂ ||
ಚಾರುಚರಿತ್ರಂ ಭರತನ ಪಾರಗುಣಂ ತನ್ನ ಹೆಸರೊಳಮರ್ದಸೆಯ ಯಶೋ | ಭಾರಂ ಕುಲಮುಂ ಕಥೆಯು ಭಾರತಮನ ನೆಗಟ್ಟಿನಂತು ನೆಗಟ್ಟುದು ಭೂಪರ್ ||
ಶುದ್ಧ ವಾಕ್ಕುಳ್ಳ ಪುಲಹ, ಮರೀಚಿ, ಅತ್ರಿ, ಅಂಗಿರಸ್, ಪುಲಸ್ಯ ಮತ್ತು ಕ್ರತು ಎಂಬುವರು ಹುಟ್ಟಿದರು. ವ|| ಹಾಗೆ ಹಿರಣ್ಯಗರ್ಭ ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಆರುಜನ ಮಕ್ಕಳಲ್ಲಿ ಮರೀಚಿಯ ಮಗನಾದ ಕಶ್ಯಪನು ಅನೇಕಲೋಕಗಳ ಉತ್ಪತ್ತಿಯೆಂಬ ನಾಟಕಕ್ಕೆ ಸೂತ್ರಧಾರನಾದನು. ತಡೆಯಿಲ್ಲದ ಪರಾಕ್ರಮದಿಂದ ಕೂಡಿದವನು ಅವನ ಮಗ ಸೂರ್ಯನೆಂಬುವನು. ಆತನಿಂದ ಏಕಪ್ರಕಾರವಾಗಿ ನಡೆದುಬಂದ ವಂಶ ಸೂರ್ಯವಂಶವೆಂಬುದಾಯಿತು. ೬೧. ಮೂರು ಲೋಕದಲ್ಲಿಯೂ ಹಾಡಲ್ಪಟ್ಟ ಕೀರ್ತಿಯುಳ್ಳವನೂ ಸಮಸ್ತಕ್ಷತ್ರಿಯಸಮೂಹದಲ್ಲಿ ಪೂಜ್ಯನಾದವನೂ ಪರಿಶುದ್ಧವಾದ ನಡತೆಯುಳ್ಳವನೂ ಅತ್ಯತಿಶಯವಾದ ಸೋಮವಂಶ ಶ್ರೇಷ್ಠನೂ ಆದ ಸೋಮನೆಂಬುವನು ಅತ್ರಿಯ ಹಿರಿಯ ಮಗ. ೬೨. ಆ ಸೋಮವಂಶದಲ್ಲಿ ಹುಟ್ಟಿದ ಅನೇಕರು ಅತ್ಯತಿಶಯವೂ ಪ್ರಸಿದ್ಧವೂ ಆದ ಕೀರ್ತಿಯಿಂದ ಲೋಕವನ್ನೆಲ್ಲ ಮುಚ್ಚಿ ಮರಣ ಹೊಂದಲಾಗಿ ಅತ್ಯಂತವಿಳಾಸದಿಂದ ಕೂಡಿದ ದುಷ್ಯಂತನ ಮಗನಾದ ಭರತನೆಂಬುವನು ಪ್ರಸಿದ್ಧನಾದನು. ೬೩. ಸಚ್ಚರಿತ್ರನೂ, ಅಪಾರಗುಣಯುತನೂ ಯಶಸ್ಸಿನ ಭಾರದಿಂದ ಕೂಡಿದವನೂ ಆದ ಭರತನು ತನ್ನ ಕುಲವೂ ಕಥೆಯೂ ತನ್ನ ಹೆಸರಿನಲ್ಲಿ ಸೇರಿ ಭಾರತವೆಂದು ಪ್ರಸಿದ್ದಿಯಾಗುವ ಹಾಗೆ
Page #90
--------------------------------------------------------------------------
________________
ಪ್ರಥಮಾಶ್ವಾಸಂ | ೮೫ ಭರತನನೇಕಾಧ್ವರ ಭರ ನಿರತಂ ಜಸಮುಚಿಯ ಕಟಿಯ ಭೂಪರ್ ಪಲರಾ | ದರಿಸಿದ ಧರಣೀಭರಮಂ ಧರಿಯಿಸಿದಂ ಪ್ರತಿಮನೆಂಬನಪ್ರತಿಮಬಲಂ || ಅಂತಾ ಪ್ರತಿಮಂಗೆ ಸುತರ್ ಶಂತನು ಬಾಹಿಕ ವಿನೂತ ದೇವಾಪಿಗಳೋ | ರಂತ ಧರೆ ಪೊಗಳ ನಗರ ನಂತ ಬಳ ಪರಬಳ ಪ್ರಭೇದನ ಶೌರ್ಯರ್ ||
೬೫ ವ|| ಅವರೊಳಗೆ ದೇವಾಪಿ ನವಯವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದ , ಪ್ರತಿಮನುಂ ಪ್ರತಾಪಪ್ರಸರಪ್ರಕಟಪಟುವಾಗಿ ಪಲವುಕಾಲಮರಸುಗಯು ಸಂಸಾರಾಸಾರತಗೆ ದೇಸಿ ತಪೋವನಕ್ಕಭಿಮುಖನಾಗಲ್ಬಗೆದು
ಕಂತು ಶರ ಭವನನಾ ಪ್ರಿಯ ಕಾಂತಾ ಭೂವಿಭ್ರಮ ಗ್ರಹಾಗ್ರಹವಶದಿಂ | ಭ್ರಾಂತಿಸದುಪಶಾಂತಮನಂ ಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ | - ೬೬ ಶಂತನುಗಮಮಳ ಗಂಗಾ ಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪ | ಭ್ರಾಂತಿಯೋಳಿ ಬಂದು ನಿರ್ಜಿತ
ಕಂತುವನಂತು ಹುಟ್ಟಿದ ಗಾಂಗೇಯಂ | ಪ್ರಖ್ಯಾತನಾದನು. ರಾಜರು ಹೀಗೆ ಪ್ರಸಿದ್ದರಾಗಬೇಕು. ೬೪. ಅನೇಕಯಜ್ಞಕಾರ್ಯ ಗಳಲ್ಲಿ ಆಸಕ್ತನಾದ ಭರತನು ಕೀರ್ತಿಶೇಷನಾಗಿ ಸಾಯಲು ಅನೇಕರಾಜರು ಪ್ರೀತಿಸಿದ ಭೂಭೂರವನ್ನು (ರಾಜ್ಯಭಾರವನ್ನು) ಅಪ್ರತಿಮಬಲನಾದ ಪ್ರತಿಮನೆಂಬುವನು ಧರಿಸಿದನು. ೬೫. ಹಾಗೆ ಆ ಪ್ರತಿಮನಿಗೆ ಕೊನೆಯಿಲ್ಲದ ಬಲವುಳ್ಳವರೂ ಶತ್ರುಸೈನ್ಯವನ್ನು ವಿಶೇಷವಾಗಿ ಭೇದಿಸುವ ಶೌರ್ಯವುಳ್ಳವರೂ ಆದ ಬಾಸ್ತಿಕ, ವಿನೂತ, ದೇವಾಪಿ ಗಳೆಂಬ ಮಕ್ಕಳು ಲೋಕವು ಏಕಪ್ರಕಾರವಾಗಿ ಹೊಗಳುವಂತೆ ಪ್ರಸಿದ್ಧರಾದರು. ವ|| ಅವರಲ್ಲಿ ದೇವಾಪಿಯು ಹೊಸದಾದ ಯವ್ವನಪ್ರಾರಂಭದಲ್ಲಿಯೇ ತಪಸ್ಸು ಮಾಡುವುದ ರಲ್ಲಿ ಆಸಕ್ತನಾದನು. ಪ್ರತಿಮನೂ ಕೂಡ ಪ್ರತಾಪವನ್ನು ಪ್ರಕಟಿಸುವುದರಲ್ಲಿ ಸಮರ್ಥ ನಾಗಿ ಅನೇಕಕಾಲ ರಾಜ್ಯಭಾರಮಾಡಿ ಸಂಸಾರದ ಅಸಾರತೆಗೆ ಅಸಹ್ಯಪಟ್ಟು ತಪೋ ವನಕ್ಕಭಿಮುಖನಾದನು ೬೬. ಮನ್ಮಥನ ಬಾಣಗಳಿಗೆ ವಾಸಸ್ಥಾನವಾದ ಬತ್ತಳಿಕೆಯ ಹಾಗಿದ್ದ ಆ ಪ್ರತಿಮನು ತನ್ನ ಪ್ರೀತಿಪಾತ್ರರಾದ ಸ್ತ್ರೀಯರ ಹುಬ್ಬಿನ ವಿಲಾಸವೆಂಬ ಗ್ರಹಕ್ಕೆ ವಶನಾಗಿ ಭ್ರಮಗೊಳ್ಳದೆ ಸಮಾಧಾನಚಿತ್ತನಾಗಿ ಸಮಸ್ತರಾಜ್ಯ ಸಂಪತ್ತನ್ನೂ ಶಂತನುವಿಗೆ ಕೊಟ್ಟನು. ೬೭. ಶಂತನುವಿಗೂ ಪರಿಶುದ್ಧಳಾದ ಗಂಗಾದೇವಿಗೂ ಎಂಟನೆಯ ವಸುವು ವಸಿಷ್ಠನ ಶಾಪದಿಂದ ರೂಪಿನಲ್ಲಿ ಮನ್ಮಥನನ್ನು ಸೋಲಿಸುವ ಸೌಂದರ್ಯದಿಂದ ಕೂಡಿ ಭೀಷ್ಮನಾಗಿ ಹುಟ್ಟಿದನು.
Page #91
--------------------------------------------------------------------------
________________
೮೬ | ಪಂಪಭಾರತಂ
ವll ಅಂತು ಭುವನಕೆಲ್ಲಮಾಯಮುಮಳವುಮವುಮಣ್ಣುಂ ಪುಟ್ಟುವಂತೆ ಪುಟ್ಟ ನವವನಂ ನೆಹಿತೆಯ ನೆಲೆಯಶಾ || ಸಾಲಪ್ರಾಂಶು ವಿಶಾಲಲೋಲನಯನಂ ಪ್ರೋದ್ಯಷಸ್ಕಂಧನು
ನೀಲತಂಕಜವಕ್ತನಾಯತ ಸಮಗೋರಸ್ಥಳಂ ದೀರ್ಘ ಬಾ | ಹಾಲಂಬಂ ಭುಜವೀರ್ಯವಿಕ್ರಮಯುತಂ ಗಂಗಾತ್ಮಜಂ ಜಯ ಶ್ರೀಲೋಲಂ ಜಮದಗ್ನಿರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ || ೬೮ |
ವ|| ಅಂತು ಕಲ್ಕು ಮುನ್ನಮೆ ಚಾಪವಿದೈಯೊಳಾರಿಂದಮೂತನೆ ಭಾರ್ಗವನೆನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜ ಕಂಠಿಕಾಪರಿಕಲಿತ ಕಂಠಲುಂಠನುಮಾಗಿ ಪ್ರಮಾಣನಿಜಭುಜದಂಡದಂಡಿತಾರಾತಿಮಂಡಲನುವಾಗಿ ಗಾಂಗೇಯಂ ಸುಖದೊಳರಸು ಗೆಯುತ್ತಿರ್ಪನ್ನೆಗಮಿತ್ತ ಗಂಗಾದೇಶದೊಳುಪರಿಚರವಸುವೆಂಬರಸಂ ಮುಕ್ಕಾವತಿಯೆಂಬ ತೋಣಿಯೊಳ್ ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟದ ಗಿರಿಜೆಯೆಂಬ ಕನ್ನೆಯನಾತಂ ಕಂಡು ಕಟಂಗೊಂಡು ಮದುವೆಯಂ ನಿಂದೊಂದು ದಿವಸಮಿಂದ್ರನೋಲಗಕ್ಕೆ ಪೋಗಿ ಋತುಕಾಲಪ್ರಾಪ್ತಿಯಾಗಿರ್ದ ನಲ್ಲಳಲ್ಲಿಗೆ ಬರಲ್ ಪಡೆಯದಾಕೆಯಂ ನೆನೆದಿಂದ್ರಿಯ (ರಣೆಯಾದೊಡದನೊಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳೊಪಳಗಟ್ಟಿದೊಡದಂ ತರ್ಪರಗಿಳಿಯನೊಂದು ಗಿಡುಗಡೆಗೊಂಡು ಜಗುನೆಯಂ ಪಾಯಾಗಳುಗಿಬಗಿ ಮಾಡಿದಾಗಳದು ಕೈಯಿಂ ಬರ್ದು೦ಕಿ ತೊಳಿಯೊಳಗೆ ಬಿಡದನೊಂದು ಬಾಳೆಮಾನುಂಗಿ ಗರ್ಭಮಂ ತಾಳಿದೊಡೊಂದು ದಿವಸಮಾ ಮಾವನೊರ್ವ ಜಾಲಗಾಲಿಂ
೬೮. ಸಾಲವೃಕ್ಷದಂತೆ ಎತ್ತರವಾಗಿರುವವನೂ ವಿಸ್ತಾರವೂ ವಿಲಾಸದಿಂದ ಕೂಡಿ ದುದೂ ಆದ ಕಣ್ಣುಳ್ಳವನೂ ಗೂಳಿಯಂತೆ ಎತ್ತರವಾದ ಹೆಗಲುಳ್ಳವನೂ ಉದ್ದವಾದ ತೋಳುಗಳಿಗೆ ಅವಲಂಬನವಾದ ಬಾಹುವೀರ್ಯಪರಾಕ್ರಮವುಳ್ಳವನೂ ವಿಜಯ ಲಕ್ಷಿಯಲ್ಲಿ ಆಸಕ್ತನಾಗಿರುವವನೂ ಆದ ಭೀಷ್ಮನು ಪರಶುರಾಮನಲ್ಲಿ ಬಿಲ್ವಿದ್ಯೆಯನ್ನು ಕಲಿತನು. ವl ಹಾಗೆ ಕಲಿತು ಮೊದಲೇ ಬಿಲ್ವಿದ್ಯೆಯಲ್ಲಿ ಇವನೇ ಎಲ್ಲರಿಗಿಂತಲೂ ಉತ್ತಮನೆನಿಸಿಕೊಂಡ ಪರಶುರಾಮನಿಗೆ ತಾನೇ ಆಚಾರ್ಯನಾಗಿ ಯುವರಾಜಪದವಿಗೆ ಸೂಚಕವಾದ ಕತ್ತಿನ ಹಾರದಿಂದ ಕೂಡಿದ ಕೊರಳ ಚಲನೆಯುಳ್ಳವನೂ ತನ್ನ ನೀಳವೂ ದಪ್ಪವೂ ಆದ ಭುಜದಂಡದಿಂದ ಶಿಕ್ಷಿಸಲ್ಪಟ್ಟ ಶತ್ರುಸಮೂಹವುಳ್ಳವನೂ ಆಗಿ ಭೀಷ್ಮನು ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಗಂಗಾದೇಶದಲ್ಲಿ ಉಪರಿಚರವಸುವೆಂಬುವನು ಮುಕ್ತಾವತಿಯೆಂಬ ನದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಕೋಳಾಹಳಪರ್ವಕ್ಕೆ ಹುಟ್ಟಿದ ಗಿರಿಜೆಯೆಂಬ ಕನೈಯನ್ನು ಆತನು ನೋಡಿ, ನೋಡಿದ ಕೂಡಲೇ ದೇಹವಶನಾಗಿ ಪ್ರೀತಿಸಿ ಮದುವೆಯಾದನು. ಒಂದು ದಿವಸ ಆತನು ಇಂದ್ರನ ಸಭೆಗೆ ಹೋಗಿ ಋತುಕಾಲಪ್ರಾಪ್ತಿಯಾಗಿದ್ದ ತನ್ನ ಪ್ರಿಯಳಲ್ಲಿಗೆ ಬರಲು ಸಾಧ್ಯವಾಗದೆ ಅವಳನ್ನು ನೆನೆದು ರೇತಸ್ಕಲನವಾಗಲು ಅದನ್ನು ಒಂದು ಬಾಳೆಯ ಎಲೆಯಲ್ಲಿ ಸುತ್ತಿ ತಾನು ಸಾಕಿದ ಗಿಳಿಯ ಕಯ್ಯಲ್ಲಿ ಕಳುಹಿಸಿದನು. ಅದನ್ನು ತರುತ್ತಿದ್ದ ಅರಗಿಳಿಯನ್ನು ಒಂದು ಗಿಡುಗನು ಅಡ್ಡಗಟ್ಟಿ ಯಮುನಾನದಿಯನ್ನು ದಾಟುವಾಗ ಹಿಂಸೆ ಮಾಡಲು ಅದರ ಕಮ್ಮಿಂದ ಜಾರಿಕೊಂಡು ನೀರಿನಲ್ಲಿ ಬಿದ್ದಿತು. ಅದನ್ನು ಒಂದು ಬಾಳೆಮೀನು ನುಂಗಿ
Page #92
--------------------------------------------------------------------------
________________
ಪ್ರಥಮಾಶ್ವಾಸಂ | ೮೭ ಜಾಲದೊಳ್ ಪಿಡಿದಲ್ಲಿಗರಸಪ್ಪ ದಾಶನಲ್ಲಿಗುಯ್ದು ತೋಟದೊಡದಂ ವಿದಾರಿಸಿ ನೋಟಿನ್ನೆಗಂ ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡೆತ್ತಿಕೊಂಡು ಮತ್ಸಗಂಧಿಯುಂ ಮತ್ಸ ಗಂಧನುಮಂದು ಹೆಸರನಿಟ್ಟು ನಡಪಿ ಯಮುನಾನದೀತೀರದೊಳಿರ್ಪನ್ನೆಗಮಲ್ಲಿಗೊರ್ಮ ಬ್ರಹರ ಮೊಮ್ಮನಪ್ಪ ವೃದ್ಧ ಪರಾಶರ ಮುನೀಂದ್ರನುತ್ತರಾಪಥಕ್ಕೆ ಪೋಗುತ್ತುಂ ಬಂದು ತೊಜಿಯ ತಡಿಯೊಳೊಡಮಂ ನಡೆಯಿಸುವ ಮತ್ಸ ಗಂಧಿಯಂ ಕಂಡೆಮ್ಮನೀ ತೋಯಂ ಪಾಯಿಸೆಂಬುದುಂ ಸಾಸಿರ್ವರೇಣಿದೂಡಲ್ಲದೀಯೊಡಂ ನಡೆಯದೆಂಬುದುಮಾಮನಿಬರ ಬಣ್ಣುಮಪ್ಪ ಮೇಸೆಂದೂಡಂತೆ ಗೆಯ್ಯನೆಂದೋಡಮೇಳೆಸಿ ನಡೆಯಿಸುವಲ್ಲಿ ದಿವ್ಯಕನೈಯನರ್ತು ನೋಡಿಮ|| ಮನದೊಳ್ ಸೋಲ್ಕು ಮುನೀಂದ್ರನಾಕೆಯೊಡಲೀ ದುರ್ಗಂಧವೋಪಂತ ಯೋ
ಜನ ಗಂಧಿತ್ವಮನಿತ್ತು ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂ | ಜನಲಂಪಣನೀಯ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾ ಮುನಿಪಂ ಪುಟ್ಟಿದನಂತು ದಿವ್ಯಮುನಿಗಳ್ಗೆಯೊಡಂ ತೀರದೇ || ೬೯
ವ|| ಅಂತು ನೀಲಾಂಬುದ ಶ್ಯಾಮನುಂ ಕನಕ ಪಿಂಗಳ ಜಟಾಬಂಧಕಳಾಪನುಂ ದಂಡ[ಕಪಾಳಹಸ್ತನುಂ ಕೃಷ್ಣಮೃಗತ್ವಕ್ಷ]ರಿಧಾನನುಮಾಗೆ ವ್ಯಾಸಭಟ್ಟಾರಕಂ ಪುಟ್ಟುವುದು ಮಾತನನೊಡಗೊಂಡು ಸತ್ಯವತಿಗೆ ಪುನಃ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನಿತ್ತಲ್
ಗರ್ಭವನ್ನು ಧರಿಸಿತು. ಅದನ್ನು ಒಬ್ಬ ಬೆಸ್ತರವನು ಬಲೆಯಲ್ಲಿ ಹಿಡಿದು ಅಲ್ಲಿಯ ರಾಜನಲ್ಲಿಗೆ ತೆಗೆದುಕೊಂಡುಹೋಗಿ ತೋರಿದನು. ಅವನು ಅದನ್ನು ಸೀಳಿ ನೋಡಿ ಮೀನಿನ ಗರ್ಭದಲ್ಲಿದ್ದ ಬಾಲೆಯನ್ನೂ ಬಾಲಕನನ್ನೂ ಕಂಡು ಎತ್ತಿಕೊಂಡು ಮತ್ಯಗಂಧಿ ಮತ್ಯಗಂಧನೆಂಬ ಹೆಸರನ್ನಿಟ್ಟು ಸಲಹಿ ಯಮುನಾತೀರದಲ್ಲಿರುತ್ತಿದ್ದನು. ಅಲ್ಲಿಗೆ ಒಂದು ಸಲ ಬ್ರಹ್ಮನ ಮೊಮ್ಮಗನಾದ ವೃದ್ಧಪರಾಶರನೆಂಬ ಋಷಿಯು ಉತ್ತರದೇಶಕ್ಕೆ ಹೋಗುತ್ತ ಒಂದು ನದಿಯ ದಡದಲ್ಲಿ ದೋಣಿಯನ್ನು ನಡೆಸುತ್ತಿದ್ದ ಮತ್ಯಗಂಧಿಯನ್ನು ನೋಡಿ ನೀನು ನಮ್ಮನ್ನು ಈ ನದಿಯನ್ನು ದಾಟಿಸು ಎಂದು ಕೇಳಿದನು. ಅದಕ್ಕೆ ಆ ಕನೈಯು ಸಾವಿರ ಜನರು ಹತ್ತದ ಹೊರತು ಈ ದೋಣಿಯು ನಡೆಯುವುದಿಲ್ಲ ಎಂದಳು. ಋಷಿಯು ನಾವು ಅಷ್ಟು ಜನರ ಭಾರವಾಗುತ್ತೇವೆ ಏರಿಸು ಎಂದನು. ಹಾಗೆಯೇ ಮಾಡುತ್ತೇನೆ ಎಂದು ಹತ್ತಿಸಿಕೊಂಡು ನಡೆಸುತ್ತಿರುವಾಗ ಆ ದಿವ್ಯಕಸ್ಯೆಯನ್ನು ಪ್ರೀತಿಸಿ ನೋಡಿ -೬೯. ಆ ಋಷಿಶ್ರೇಷ್ಠನು ಮನಸ್ಸಿನಲ್ಲಿ ಆಕೆಗೆ ಸೋತು ಆಕೆಯ ಶರೀರದ ಆ ದುರ್ವಾಸನೆಯು ಹೋಗುವ ಹಾಗೆ ಯೋಜನದೂರದವರೆಗೆ ವ್ಯಾಪಿಸುವ ಸುವಾಸನೆಯನ್ನು ಕೊಟ್ಟು ಮಂಜನ್ನೇ ತೆರೆಯನ್ನಾಗಿ ಮಾಡಿ ಪ್ರೀತಿಯಿಂದ ಅವಳೊಡನೆ ಕೂಡಲು ಜ್ಞಾನಸ್ವರೂಪನಾದ ಋಷಿಶ್ರೇಷ್ಠನು ಹುಟ್ಟಿದನು. ಮುನೀಂದ್ರರಾದವರು ಏನು ಮಾಡಿದರೂ ತಡೆಯುತ್ತದೆಯಲ್ಲವೆ? ವ ಹಾಗೆ ಕರಿಯ ಮೋಡದಂತೆ ಕರಗಿರುವವನೂ ಹಳದಿ ಮತ್ತು ಕೆಂಪುಮಿಶ್ರವಾದ ಬಣ್ಣದ ಜಟೆಯ ಸಮೂಹವುಳ್ಳವನೂ ಕಯ್ಯಲ್ಲಿ ಯೋಗದಂಡ ಭಿಕ್ಷಾಪಾತ್ರೆಗಳನ್ನು ಧರಿಸಿರುವವನೂ ಕೃಷ್ಣಾಜಿನದ ಹೊದಿಕೆಯುಳ್ಳವನೂ ಆಗಿ ಪೂಜ್ಯನಾದ
Page #93
--------------------------------------------------------------------------
________________
೮೮) ಪಂಪಭಾರತಂ ಮ|| ಮೃಗಯಾವ್ಯಾಜದಿನೊರ್ಮೆ ಶಂತನು ತೋರ್ಪಂ ಪಳಂಚಲೆ ತ:
ಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಚೋಲ್ ಸೋಲು ಕಂಡೂಲ್ಲು ನ | ಲೆಗೆ ದಿಂಬಿಡಿವಂತವೋಲ್ ಪಿಡಿದು ನೀನ್ ಬಾ ಪೋಪಮೆಂದಂಗೆ ಮ ಗೆ ತಕ್ಕಕೆ ನಾ ಬೇಡುವೊಡೆ ನೀವಮ್ಮಯ್ಯನಂ ಬೇಡಿರೇ
೭೦ ವ|| ಎಂಬುದುಂ ಶಂತನು ಪೋಲಲ್ಲಿ ಮಗುಟ್ಟು ವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡ ಪರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಏರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡವೆಮ್ಮ ಮಗಳ ಪುಟ್ಟಿದಾತಂ ರಾಜ್ಯಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ರೊಡೆ ಕುಡುವೆಮೆನೆ ತದ್ವತ್ತಾಂತಮಂ ಮಂತ್ರಿಗಳಿಂ ಶಂತನು ಕೇಳುಮll ಕ್ರಮಮಂ ವಿಕ್ರಮದಿಂದ ತಾಳುವ ಮಗಂ ಗಾಂಗೇಯನಿರ್ದಂತ ನೋ |
ಡ ಮರುಳ ಶಂತನು ತನದೊಂದು ಸವಿಗಂ ಸೋಲಕ್ರಮಿತಂ ನಿಜ 1 . ಕ್ರಮಮಂ ತನ್ನಯ ಬೇಟದಾಕೆಯ ಮಗಂಗೆಂಬೊಂದಪಖ್ಯಾತಿ ಲೋ ಕಮನಾವರ್ತಿಸ ಬಡನ್ನ ಕುಲಮುಂ ತಕೂರ್ಮಯುಂ ಮಾಸದೇ | ೭೧
ವ್ಯಾಸಮಹರ್ಷಿಯು ಹುಟ್ಟಲಾಗಿ ಅವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಸತ್ಯವತಿಗೆ ಪುನಃ ಕನ್ಯಾಭಾವವನ್ನು ದಯಮಾಡಿ ಕೊಟ್ಟು ಪರಾಶರಋಷಿಯು ಹೊರಟು ಹೋದನು. ಈ ಕಡೆ ೭೦. ಒಂದು ದಿನ ಬೇಟೆಯ ನೆಪದಿಂದ ಸುತ್ತಾಡಿ ಬರುತ್ತಿದ್ದ ಶಂತನುವು ಜಿಂಕೆಯ ಮರಿಯ ಕಣ್ಣಿನಂತೆ ಕಣ್ಣುಳ್ಳ ಯೋಜನಗಂಧಿಯ ವಾಸನೆಯು ಅವನನ್ನು ಮುಟ್ಟಲಾಗಿ (ಅದರಿಂದ ಆಕರ್ಷಿತನಾಗಿ) ದುಂಬಿಯ ಹಾಗೆ ಸೋತು ಹೋಗಿ ಅವಳನ್ನು ಪ್ರೀತಿಸಿದನು. ತನ್ನ ಪ್ರೀತಿಗೆ ಸಾಕ್ಷಿಯಾಗಿ ದಿವ್ಯವನ್ನು ಹಿಡಿಯುವ ಹಾಗೆ ಅವಳ ಕೈಹಿಡಿದು 'ನೀನು ಬಾ ಹೋಗೋಣ' ಎನ್ನಲು ಆ ಕನ್ಯಯು ನಾಚಿಕೊಂಡು ಮೆಲ್ಲಗೆ ನೀವು ನನ್ನನ್ನು ಬೇಡುವುದಾದರೆ ನಮ್ಮ ತಂದೆಯನ್ನು ಪ್ರಾರ್ಥಿಸಿ ಎಂದಳು. ವಗ ಶಂತನು ಪಟ್ಟಣಕ್ಕೆ ಹಿಂದಿರುಗಿ ಬಂದು ಅವಳ ತಂದೆಯಾದ ದಾಶರಾಜನಲ್ಲಿಗೆ ಕನೈಯನ್ನು ಬೇಡುವುದಕ್ಕಾಗಿ ಹೆಗ್ಗಡೆಗಳನ್ನು ಕಳುಹಿಸಿದನು. ದಾಶರಾಜನು ಭೀಷ್ಕನು ರಾಜನ ಹಿರಿಯಮಗನೂ ಕ್ರಮಪ್ರಾಪ್ತವಾದ ಹಕ್ಕುದಾರಿಕೆಗೆ ಅರ್ಹನೂ ಆಗಿರುವಾಗ ನಮ್ಮ ಮಗಳನ್ನು (ಶಂತನುವಿಗೆ) ಮದುವೆ ಮಾಡಿಕೊಡು ವುದಿಲ್ಲ. ನನ್ನ ಮಗಳಿಗೆ ಹುಟ್ಟಿದವನು ರಾಜ್ಯಕ್ಕೊಡೆಯನೂ ಹಿರಿಯ ಮಗನೂ ರಾಜ್ಯಕ್ಕೆ ಕ್ರಮವಾದ ಅರ್ಹನೂ ಆಗುವುದಾದರೆ ಕೊಡುವೆವು ಎಂದನು. ಆ ವೃತ್ತಾಂತ ವನ್ನು ಶಂತನುವು ಮಂತ್ರಿಗಳಿಂದ ಕೇಳಿ ೭೧. ಪರಾಕ್ರಮದಿಂದ ಕ್ರಮಪ್ರಾಪ್ತವಾದುದನ್ನು ಧರಿಸುವ (ಧರಿಸಲು ಯೋಗ್ಯನಾದ) ಮಗನಾದ ಭೀಷ್ಮನಿರುವಾಗ, ನೋಡಯ್ಯ, ಅವಿವೇಕಿಯಾದ ಶಂತನುವು ತನ್ನ ಒಂದು ಭೋಗಕ್ಕೂ ಮೋಹಪರವಶತೆಗೂ ತನ್ನ ಕ್ರಮಪ್ರಾಪ್ತವಾದ ರಾಜ್ಯವನ್ನು ತನ್ನ ಮೋಹದಾಕೆಯ ಮಗನಿಗೆ ಕೊಟ್ಟನು ಎಂಬ ಒಂದು ಅಪಯಶಸ್ಸು ಲೋಕವನ್ನು ಆವರ್ತಿಸುವ ಹಾಗೆ ಬಾಳಿದರೆ ನನ್ನ ಕುಲವೂ
Page #94
--------------------------------------------------------------------------
________________
ಪ್ರಥಮಾಶ್ವಾಸಂ | ೮೯ ವ|| ಎಂದು ತನ್ನ ನಾಣಾಪನೆ ಬಗದತನು ಪರಿತಾಪಿತಶರೀರನುಮಾಗಿ ಶಂತನು ಕರಂಗೆರ್ದಗಿಡೆ ತದ್ವತ್ತಾಂತಮಲ್ಲಮಂ ಗಾಂಗೇಯನದುಉ ಎನ್ನಯ ದೂಸಂ ನೃಪತಿ ಬೇಡಿದುದಂ ಕುಡಲೊಲ್ಲಂದಂಗಳೋ
ತನ್ನ ವಿಮೋಹದಿಂದ ದಪಂ ಪತಿ ಸತ್ತಡ ಸತ್ತ ಪಾಪಮ್ | ನನ್ನರಕಂಗಳೊಳ್ ತಡೆಯದುಗುಮವುದು ರಾಜ್ಯಲಕ್ಷ್ಮಿ ಪೋ
ತನ್ನಯ ತಂದೆಯಂದುದನೆ ಕೊಟ್ಟು ವಿವಾಹಮನಿಂದ ಮಾಡುವಂ || ೭೨
ವ|| ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆವಂದಾತನ ಮನದ ತೊಡರ್ಪಂ ಪಿಂಗ ನುಡಿದುಉ || ನೀಡಿರದೀವುದೀ ನಿಜ ತನೂಜೆಯನೀ ವಧುಗಾದ ಪುತ್ರರೊಳ್
ಕೂಡುಗೆ ರಾಜ್ಯಲಕ್ಷ್ಮಿ ಮೋಯಿನಗಂತದು ಪೆಂಡಿರೆಂಬರೊಲ್ | ಕೂಡುವನಲೈನಿಂದು ಮೊದಲಾಗಿರೆ ನಿಕ್ಕುವಮಂದು ರಾಗದಿಂ ಕೂಡಿದನುಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ || ೭೩
ವ|| ಅಂತು ಶಂತನುವುಂ ಸತ್ಯವತಿಯುಮನೋನ್ಯಾಸಕ್ತಚಿತ್ತರಾಗಿ ಕೆಲವು ಕಾಲಮಿರ್ಪನ್ನೆಗಮವರ ಬೇಟದ ಕಂದಳಂತ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ ಪುಟ್ಟ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ
ಅತಿಶಯವಾದ ಯೋಗ್ಯತೆಯೂ ಮಾಸಿಹೋಗುವುದಿಲ್ಲವೇ? ವlಎಂದು ತನ್ನ ಮಾನಸಂರಕ್ಷಣೆಯನ್ನೆ ಯೋಚಿಸಿ ಕಾಮಸಂತಾಪದಿಂದ ಕೂಡಿದ ಶರೀರವುಳ್ಳವನಾಗಿ ಶಂತನು ಕರಗಿ ಎದೆಗೆಟ್ಟಿರಲು ಆ ವೃತ್ತಾಂತವೆಲ್ಲವನ್ನೂ ಭೀಷ್ಕನು ತಿಳಿದು ೭೨. ನನ್ನ ಕಾರಣದಿಂದ ರಾಜನೂ ನನ್ನ ಒಡೆಯನೂ ಆದ ಶಂತನುವು ಬೇಡಿದುದನ್ನು ಕೊಡಲಾರದ ಕಾಮದಿಂದುಂಟಾದ ದುಃಖದಿಂದ ಸಾಯುತ್ತಾನೆ. ಪತಿ ಸತ್ತರೆ ಸತ್ತ ಪಾಪವು ನನ್ನನ್ನು ತಡೆಯದೆ ನರಕದಲ್ಲಿ ಮುಳುಗಿಸುತ್ತದೆ. ಈ ರಾಜ್ಯಲಕ್ಷ್ಮಿ ಏನು ಮಹಾದೊಡ್ಡದು, ಹೋಗಲಿ; ಈ ದಿನವೇ ನನ್ನ ತಂದೆಯು ಹೇಳಿದುದನ್ನೇ ಕೊಟ್ಟು ಮದುವೆಯನ್ನು ಮಾಡಿಸುವೆನು. ವ|| ಎಂದು ನಿಶ್ಚಯಿಸಿ ಭೀಷ್ಮನು ದಾಶರಾಜನಲ್ಲಿಗೆ ಬಂದು ಆತನ ಮನಸ್ಸಿನ ಸಂದೇಹ ನಿವಾರಣೆಯಾಗುವ ಹಾಗೆ ಹೇಳಿ ೭೩. ಸಾವಕಾಶಮಾಡದೆ ನಿಮ್ಮ ಮಗಳನ್ನು (ಎನ್ನ ತಂದೆಯಾದ ಶಂತನುವಿಗೆ) ಕೊಡಿರಿ. ಈ ವಧುವಿಗೆ ಹುಟ್ಟಿದ ಮಕ್ಕಳಲ್ಲಿಯೇ ರಾಜ್ಯಲಕ್ಷಿಸೇರಲಿ. ಅದರ ಸಂಬಂಧ ನನಗಿಲ್ಲ: ಈ ದಿನ ಮೊದಲಾಗಿ ಹೆಂಗಸು ಎನ್ನುವವರಲ್ಲಿ ಕೂಡುವವನಲ್ಲ: ಇದು ನಿಶ್ಚಯ ಎಂದು ಆತ್ಮಸಂತೋಷದಿಂದ ಸತಿಯಾದ ಸತ್ಯವತಿಯನ್ನು ಕರೆದು ತಂದು ಪತಿಯಾದ ಶಂತನುವಿನಲ್ಲಿ ಭೀಷ್ಮನು ಕೂಡಿಸಿದನು ವ ಹಾಗೆ ಶಂತನುವೂ ಸತ್ಯವತಿಯೂ ಪರಸ್ಪರಾಸಕ್ತಮನಸ್ಸುಳ್ಳವರಾಗಿ ಕೆಲವು ಕಾಲವಿರುವಷ್ಟರಲ್ಲಿ ಅವರ ಪ್ರೇಮದ ಮೊಳಕೆ ಗಳ ಹಾಗೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳು ಹುಟ್ಟಿ ಮಹಾಪ್ರಚಂಡರೂ ಪ್ರತಾಪಶಾಲಿಗಳೂ ಆಗಿ ಬೆಳೆಯುತ್ತಿರಲು ಶಂತನುವು ಪರಲೋಕಪ್ರಾಪ್ತನಾದನು.
Page #95
--------------------------------------------------------------------------
________________
೯೦ | ಪಂಪಭಾರತಂ
ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚೆ ಕುರುಕ್ಷೇತ್ರಮಂ ಕಳಂಬೆಟ್ಟು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ
ಮ|| ಸಕಳ ಕ್ಷತ್ರಿಯ ಮೋಹದಿಂ ನಿಜಭುಜ ಪ್ರಾರಂಭದಿಂ ಪೋಗಿ ತಾ ಗಿ ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನಂಕದೊಂದುಗ್ರಸಾ | ಯಕದಿಂ ನಾಯಕರಂ ಪಡಲ್ವಡಿಸುತುಂ ತಾಂ ತಂದನಂದಂಬೆಯಂ ಬಿಕೆಯಂಬಾಲೆಯರೆಂಬ ಬಾಲೆಯ[ರನೇಂ] ಭೀಷ್ಮ ಯಶೋಭಾಗಿಯೋ ||
29
ವ|| ಅಂತು ತಂದು ತನ್ನ ತಮ್ಮಂ ವಿಚಿತ್ರವೀರ್ಯಂಗಾ ಮೂವರ್ಕನ್ನೆಯರಂ ಪಾಣಿ ಗ್ರಹಣಂಗೆಯ್ದಾಗಳೆಲ್ಲರಿಂ ಪಿರಿಯಾಕೆ ನಿನ್ನನಲ್ಲದೆ ಪೆರನೊಲ್ಲೆನೆಂದಿರ್ದೊಡೆ ಮತ್ತಿನಿರ್ವರುಮಂ ಮದುವೆಯಂ ಮಾಡಿ ಗಾಂಗೇಯನಂಬೆಯನಿಂತೆಂದಂ
1100
|
ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ ದಾತ್ತ ಸಮಸ್ತ ಲೋಕಮಳದಂತಿರೆ ಪೂನಗಾಗದಂಗಜೋ ತ್ಪತ್ತಿ ಸುಖಕ್ಕೆ ಸೋಲಲಟೆಗುಂ ಪುರುಷವ್ರತಮಾಗಳಬ್ಬೆಯಂ | ದತ್ತಿಗೆಯೆಂಬ ಮಾತನನಗೇನೆನಲಕ್ಕು ಪಂಕಜಾನನೇ |
2.99
ಭೀಷ್ಮನು ಅವನಿಗುಚಿತವಾದ ಪರಲೋಕ (ಉತ್ತರ) ಕ್ರಿಯೆಗಳನ್ನು ಮಾಡಿ ತಾನು ಮೊದಲೇ ನುಡಿದ ಮಾತುಕಟ್ಟೆಂಬ ಅರಮನೆಗೆ ಅಸ್ತಿಭಾರವನ್ನು ಹಾಕುವ ಹಾಗೆ ಚಿತ್ರಾಂಗದನಿಗೆ ಪಟ್ಟವನ್ನು ಕಟ್ಟಿ ರಾಜ್ಯಭಾರ ಮಾಡಿಸುತ್ತಿದ್ದನು. ಅಷ್ಟರಲ್ಲಿ ಒಬ್ಬ ಗಂಧರ್ವನೊಡನೆ ಚಿತ್ರಾಂಗದನು ದ್ವಂದ್ವಯುದ್ಧವನ್ನುಂಟುಮಾಡಿಕೊಂಡು ಕುರುಕ್ಷೇತ್ರವನ್ನೇ ರಣಭೂಮಿಯನ್ನಾಗಿ ಮಾಡಿ ಕಾದಿ ಸತ್ತನು. ಭೀಷ್ಮನು ವಿಚಿತ್ರವೀರ್ಯನನ್ನು ರಾಜ್ಯಭಾರವನ್ನು ವಹಿಸಲು ಸಮರ್ಥನನ್ನಾಗಿ ಮಾಡಿ ೭೪. ಎಲ್ಲ ಕ್ಷತ್ರಿಯರಿಗೂ ಸಹಜವಾಗಿ ಆಶೆಯಿಂದ ತನ್ನ ಬಾಹುಬಲ ಪ್ರದರ್ಶನಕ್ಕಾಗಿ (ಜೈತ್ರಯಾತ್ರೆಗೆ)ಹೋಗಿ ಮೇಲೆ ಬಿದ್ದ ಕಾಶಿರಾಜನ ಮಕ್ಕಳಲ್ಲಿ ಕೆಲವರು ನೋಯುವ ಹಾಗೆ ತನ್ನ ಪ್ರಸಿದ್ಧವೂ ಭಯಂಕರವೂ ಆದ ಬಾಣದಿಂದ ಸೇನಾನಾಯಕರನ್ನೆಲ್ಲಾ ಬೀಳುವ ಹಾಗೆ ಮಾಡಿ ಅಂಬೆ ಅಂಬಿಕೆ ಅಂಬಾಲಿಕೆಯರೆಂಬ ಬಾಲಿಕೆಯರನ್ನು ಅಪಹರಿಸಿಕೊಂಡು ಬಂದನು. ಭೀಷ್ಮನು ಎಂತಹ ಕೀರ್ತಿಗೆ ಭಾಗಿಯೋ! ವ| ಹಾಗೆ ತಂದು ಆ ಮೂವರು ಕನೈಯರನ್ನೂ ತನ್ನ ತಮ್ಮನಾದ ವಿಚಿತ್ರವೀರ್ಯನಿಗೆ ಮದುವೆಮಾಡುವಾಗ ಅವರೆಲ್ಲರಲ್ಲಿಯೂ ಹಿರಿಯಳಾದವಳು ನಿನ್ನನ್ನಲ್ಲದೆ ಇತರರನ್ನು ನಾನು ಅಂಗೀಕರಿಸುವುದಿಲ್ಲ ಎಂದಳು. ಉಳಿದಿಬ್ಬರನ್ನೂ ಮದುವೆ ಮಾಡಿ ಭೀಷ್ಮನು ಅಂಬೆಗೆ ಹೀಗೆ ಹೇಳಿದನು-೭೫. ಆ ಕಡೆ ದೇವೇಂದ್ರನು ವಾಸಮಾಡುವ ಸ್ವರ್ಗಲೋಕ; ಈ ಕಡೆ ಭೂಲೋಕ ಮತ್ತೊಂದು ಕಡೆ ಪಾತಾಳಲೋಕವೇ ಮೊದಲಾದುವುಗಳು
Page #96
--------------------------------------------------------------------------
________________
ಪ್ರಥಮಾಶ್ವಾಸಂ | ೯೧ ವ|| ಎಂದು ನುಡಿದ ಗಾಂಗೇಯನ ನುಡಿಯೊಳವಸರಮಂ ಪಸರಮುಂ ಪಡೆಯದೆ ತನಗೆ ಕಿಜಿಯಂದುಂಗುರವಿಟ್ಟ ಸಾಲ್ವಲನೆ೦ಬರ ಸನಿಗೆ ಪೋಗಿ ನೀನೆನ್ನಂ ಕೈಕೊಳವೇಬ್ರುಮೆಂದೊಡಾತನಿಂತೆಂದಂಕಂ || ಬಂಡಣದೊಳೆನ್ನನೋಡಿಸಿ
ಕೊಂಡುಯ್ದಂ ನಿನ್ನನಾ ಸರಿತ್ತುತನಾನುಂ | ಪೆಂಡತಿಯನಾದೆನದಂ ಪೆಂಡಿರ್ ಪೆಂಡಿರೊಳದೆಂತು ಬೆರಸುವರಬಲೇ ||
೭೬ ವ|| ಎಂದು ಸಾಲ್ವಲಂ ತನ್ನ ಪರಿಭವದೊಳಾದ ಸಿಗ್ಗು ಸಾಲ್ವಿನಮುಂಟುಮಾಡಿದೊಡಾತನ ಮನಮನೊಡಂಬಡಿಸಲಾಜಿದೆ ಪರಶುರಾಮನಲ್ಲಿಗೆ ಪೊಗಿ ಭೀಷ್ಮನನ್ನ ಸ್ವಯಂವರದೊಳ್ ನೆರೆದರಸುಮಕ್ಕಳೆಲ್ಲರುಮನೊಡಿಸಿ ಕೊಂಡು ಬಂದೆನ[0] ಮದುವೆಯಂ ನಿಲಿಲ್ಲ [ದ]ಟ್ಟಿ ಕಳೆದೊಡೆನ್ನ ದೆವಸಮುಂ ಜವ್ವನಮುಮಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದಾತನನನ್ನಂ ಪಾಣಿಗ್ರಹಣಂ ಗೆಯ್ದಂತು ಮಾಡು ಮಾಡಲಾಜಿದೊಡೆ ಕಿಚ್ಚಂ ದಯೆಗೆಯ್ದುದೆಂದಂಬೆ ಕಣ್ಣ ನೀರು ತುಂಬೆಮ! ನಯಮಂ ನಂಬುವೊಡೆನ್ನ ಪೇಟ್ಟಿ ಸತಿಯಂ ಕೈಕೊಂಡನಂತಲ್ಲದು
ರ್ಣಯಮಂ ನಚ್ಚುವೊಡೆನ್ನನುಗ್ರ, ರಣದೊಳ್ ಮೇಣ್ ಮಿಟಿ ಮಾರ್ಕೊಂಡನಾ | ರಯೆ ಕಜ್ಜಂ ಪೆಜತಿಲ್ಲ ಶಂತನು ಸುತಂಗೆನ್ನಂ ಕರಂ ನಂಬಿದಂ ಬೆಯೊಳೆನ್ನಂಬವಲಂ ವಿವಾಹವಿಧಿಯಂ ಮಾಂ ಪೆಜರ್ ಮಾರೇ || ೭೭
ತಿಳಿದಿರುವ ಹಾಗೆ ಪ್ರತಿಜ್ಞೆ ಮಾಡಿದ ನನಗೆ ಕಾಮಸುಖಕ್ಕೆ ಸೋಲುವುದಾಗದು. ನನ್ನ ಬ್ರಹ್ಮಚರ್ಯವ್ರತವು ನಾಶವಾಗುತ್ತದೆ. ಎಲೆ ಕಮಲಮುಖಿ ಮೊದಲು ತಾಯಿ ಯೆಂದು ಕರೆದು ಆಮೇಲೆ ಪ್ರೀತಿಪಾತ್ರಳಾದವಳೆಂದು ಹೇಳುವುದು ಸಾಧ್ಯವಾಗು ತದೆಯೇ ? ವll ಎಂದು ಹೇಳಿದ ಭೀಷ್ಮನ ಮಾತಿನಲ್ಲಿ ಅಂಬೆಯು ಯಾವ ಇಷ್ಟಾರ್ಥ ವನ್ನು ಪಡೆಯಲಾರದೆ ತನ್ನ ಬಾಲ್ಯದಲ್ಲಿ ಮದುವೆಯಾಗುತ್ತೇನೆಂದು ಉಂಗುರವನ್ನು ತೊಡಿಸಿದ್ದ ಸಾಲ್ವಲನೆಂಬ ರಾಜನಲ್ಲಿಗೆ ಹೋಗಿ ನೀನು ನನ್ನನ್ನು ಅಂಗೀಕಾರ ಮಾಡಬೇಕು ಎನ್ನಲು ಆತನು ಹೀಗೆಂದು ಹೇಳಿದನು. ೭೬. ಯುದ್ದದಲ್ಲಿ ಆ ಭೀಷ್ಮನು ನನ್ನನ್ನು ಓಡಿಸಿ ನಿನ್ನನ್ನು ಅಪಹರಿಸಿಕೊಂಡು ಹೋದನು. ಅದರಿಂದ ನಾನೂ ಹೆಂಗಸಾಗಿದ್ದೇನೆ. ಎಲೆ ಹೆಣ್ಣೆ ಹೆಂಗಸರು ಹೆಂಗಸರಲ್ಲಿ ಸೇರುವುದು ಹೇಗೆ ಸಾಧ್ಯ? ವ|| ಎಂದು ಸಾಲ್ವಲನು ತನಗೆ ಸೋಲಿನಲ್ಲಿ ಉಂಟಾದ ನಾಚಿಕೆಯನ್ನು ಸಾಕಾಗುವಷ್ಟು ಪ್ರದರ್ಶಿಸಲಾಗಿ ಅವನನ್ನು ಒಪ್ಪಿಸಲಾರದೆ ಪರಶುರಾಮನ ಹತ್ತಿರಕ್ಕೆ ಹೋಗಿ ಭೀಷ್ಮನು ಸ್ವಯಂವರದಲ್ಲಿ ಸೇರಿದ್ದ ರಾಜಕುಮಾರರೆಲ್ಲರನ್ನೂ ಓಡಿಸಿ ಅಪಹರಿಸಿಕೊಂಡು ಬಂದು ನನ್ನನ್ನು ಮದುವೆ ಮಾಡಿಕೊಳ್ಳದೆ ಓಡಿಸಿದನು. ನನ್ನ ಯೌವನವು ಕಾಡಿನಲ್ಲಿ ಬಿಟ್ಟ ಹೂವಿನಂತೆ ವ್ಯರ್ಥವಾಗದ ಹಾಗೆ ಆತನು ನನ್ನ ಕಯ್ಯನ್ನು ಹಿಡಿಯುವ ಹಾಗೆ ಮಾಡು; ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ), ಕಿಚ್ಚನ್ನು ದಯಪಾಲಿಸು ಎಂಬುದಾಗಿ ಅಂಬೆಯು ಕಣ್ಣ ನೀರನ್ನು ತುಂಬಿದಳು. ೭೭. ಅದಕ್ಕೆ ಪರಶುರಾಮನು ಭೀಷ್ಮನು ವಿನಯವನ್ನು ಆಶ್ರಯಿಸುವುದಾದರೆ ನಾನು ಹೇಳಿದ
Page #97
--------------------------------------------------------------------------
________________
*೯೨) ಪಂಪಭಾರತಂ
ವll ಎಂದು ನಾಗಪುರಕ್ಕೆ ವರ್ಷ ಪರಶುರಾಮನ ಬರವಂ ಗಾಂಗೇಯಂ ಕೇಳಿದಿರ್ವಂದು ಕನಕ ರಜತ ಪಾತ್ರಂಗಳೊಳರ್ಥ್ಯಮಂ ಕೊಟ್ಟು ಪೊಡಮಟ್ಟುಮll ಬೆಸನೇನೆಂದೊಡೆ ಪೇಳ್ವೆನೆನ್ನ ಬೆಸನಂ ಕೈಕೊಳ್ಳುದೀ ಕನ್ನೆಯಂ
ಪಸುರ್ವಂದರ್ ಪಸೆಯೆಂಬಿವಂ ಸಮೆದು ನೀಂ ಕೈಕೊಲ್ ಕೊಳಲಾಗದಂ | ಬೆಸಕಂ ಚಿತ್ತದೊಳುಡಿಗಳಿವರೆಮಾಚಾರ್ಯರೆಂದೋವದೇ
ರ್ವೆಸನಂ ಮಾಣದೆ ಕೈದುಗೊಳ್ಳೆರಡಕೊಳ ಮೆಚ್ಚಿತ್ತೆನೇನೆಂದಪಮ್ ||೭೮
ವ|| ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳೆನಗೆ ವೀರಯುಂ ಕೀರ್ತಿಶ್ರೀಯುಮಲ್ಲದುಟಿದ ಪೆಂಡಿರ್ ಮೋಜಣಿಯಲ್ಲ ನೀವಿದನೇಕಾಗ್ರಹಂಗಯ್ಯರೆಂದೊಡೆಂತು ಮೆಟ್ರೊಳ್ ಕಾದಲ್ಲೇಲ್ವುದೆಂದು ಮll ಕೆಳರ್ದಂದು ರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ
ಕಳವೇಟಿರ್ವರುಮ್ಮೆಂದ್ರ ವಾರುಣದ ವಾಯವ್ಯಾದಿ ದಿವ್ಯಾಸ್ತ್ರ ಸಂ | ಕುಳದಿಂದೊರ್ವರನೊರ್ವರೆಚ್ಚು ನಿಜಪೀಠಾಂಭೋಜದಿಂ ಬ್ರಹ್ಮನು
ಚಳಿಪನ್ನಂ ಪಿರಿದೊಂದು ಸಂಕಟಮನೀ ತೈಲೋಕದೊಳ್ ಮಾಡಿದರ್ || ೭೯ ಸ್ತ್ರೀಯನ್ನು ಮದುವೆಯಾಗುತ್ತಾನೆ. ಹಾಗಲ್ಲದೆ ಅವಿನಯವನ್ನೇ (ದುರ್ನಿತಿಯನ್ನೇ ನಂಬುವುದಾದರೆ ನನ್ನನ್ನು ಮೀರಿ ಭಯಂಕರವಾದ ಯುದ್ಧದಲ್ಲಿ ಪ್ರತಿಭಟಿಸುವವನಾಗುತ್ತಾನೆ. ವಿಚಾರಮಾಡುವುದಾದರೆ ಭೀಷ್ಮನಿಗೆ ಬೇರೆ ಕಾರ್ಯವೇ ಇಲ್ಲ, ನನ್ನನ್ನು ವಿಶೇಷವಾಗಿ ನಂಬಿದ ಅಂಬೆಗೆ ನನ್ನ ಬಾಣದಿಂದಲೇ ಮದುವೆ ಮಾಡಿಸುತ್ತೇನೆ. (ಭೀಷ್ಮನಿಗೆ ಅಂಬೆಯನ್ನು ಮದುವೆಯಾಗುವುದು ಇಲ್ಲವೇ ನನ್ನೊಡನೆ ಯುದ್ಧಮಾಡುವುದು - ಇವೆರಡಲ್ಲದೇ ಬೇರೆ ಮಾರ್ಗವೇ ಇಲ್ಲ ಎಂಬುದು ಇದರ ಭಾವ) ವll ಎಂದು ಹಸ್ತಿನಾಪುರಕ್ಕೆ ಬರುತ್ತಿರುವ ಪರಶುರಾಮನ ಆಗಮನವನ್ನು ಭೀಷ್ಮನು ಕೇಳಿ ಎದುರಾಗಿ ಬಂದು ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಅರ್ಭ್ಯವನ್ನು ಕೊಟ್ಟು ನಮಸ್ಕಾರಮಾಡಿ ೭೮. ಅಪ್ಪಣೆಯೇನೆಂದು ಕೇಳಿದನು. ಅದಕ್ಕೆ ಪರಶುರಾಮನು ನನ್ನ ಆಜ್ಞೆಯನ್ನು ನೀನು ಅಂಗೀಕಾರಮಾಡಬೇಕು. ಹಸುರುವಾಣಿ ಚಪ್ಪರ ಮತ್ತು ಹಸೆಮಣೆಗಳನ್ನು ಸಿದ್ಧಪಡಿಸಿ ಈ ಕನ್ನೆಯನ್ನು ಸ್ವೀಕರಿಸು, ಸ್ವೀಕರಿಸಕೂಡದೆಂಬ ಕಾರ್ಯ (ಅಭಿಪ್ರಾಯ) ಮನಸ್ಸಿನಲ್ಲಿರುವುದಾದರೆ ಈಗಲೇ ಇವರು ನಮ್ಮ ಗುರುಗಳು ಎಂಬ ಭಕ್ತಿಪ್ರದರ್ಶನ ಮಾಡದೆ ಯುದ್ಧೋದ್ಯೋಗವನ್ನು ಕೈಕೊಂಡು ಶಸ್ತಧಾರಣೆ ಮಾಡು. ಎರಡರಲ್ಲಿ ನಿನಗಿಷ್ಟವಾದುದನ್ನು ಕೊಟ್ಟಿದ್ದೇನೆ; ಏನು ಹೇಳುತ್ತೀಯೆ? ವ|| ಎಂದು ಹೇಳಿದ ಪರಶುರಾಮನ ಮಾತನ್ನು ಭೀಷ್ಮನು ಕೇಳಿ ನನಗೆ ವೀರಲಕ್ಷ್ಮಿ ಮತ್ತು ಯಶೋಲಕ್ಸಿಯರಲ್ಲದೆ ಉಳಿದ ಹೆಂಗಸರಲ್ಲಿ ಸಂಬಂಧವಿಲ್ಲ. ಏಕೆ ಕೋಪಿಸಿ ಕೊಳ್ಳುತ್ತೀರಿ, ಹೇಗೂ ನಮ್ಮೊಡನೆ ಯುದ್ಧಮಾಡುವುದು ಎಂದನು. ೭೯. ಇಬ್ಬರೂ ರೇಗಿ ಭಯಂಕರವಾದ ಯುದ್ದಮಾಡಬೇಕೆಂಬ ಅಪೇಕ್ಷೆಯಿಂದ ಕುರುಕ್ಷೇತ್ರವನ್ನೇ ಯುದ್ಧಭೂಮಿಯನ್ನಾಗಿ ಮಾಡಿಕೊಂಡು ಐಂದ್ರಾಸ್ತ್ರ ವಾರುಣಾಸ್ತ್ರ ವಾಯವ್ಯಾಸ್ತ್ರಗಳ ಸಮೂಹದಿಂದ ಒಬ್ಬರೊಬ್ಬರೂ ಬ್ರಹ್ಮನು ತನ್ನ ಕಮಲಾಸನದಿಂದ ಮೇಲಕ್ಕೆ
Page #98
--------------------------------------------------------------------------
________________
ಪ್ರಥಮಾಶ್ವಾಸಂ | ೯೩ ಶಿಖರಿಣಿ | ಅತರ್ಕ್ಕಂ ವಿಕ್ರಾಂತಂ ಭುಜಬಲಮಸಾಮಾನ್ಯಮಧಿಕಂ
ಪ್ರತಾಪಂ ಪೋಗೀತಂಗಣೆಯ ದಿವಿಜರ್ ವಾಯುಪಥದೊಳ್|| ಶಿತಾಸಂಗ ಪೊಂಕಂಗಡಿಸಿ ಸುಗಿದಂ ಭಾರ್ಗವನಿದೇಂ ಪ್ರತಿಜ್ಞಾ ಗಾಂಗೇಯಂಗದಿರದಿದಿರಿಲ್ವನ್ನರೊಳರೇ ||
೮೦ ವll ಅಂತು ಗಾಂಗೇಯನೋಳ್ ಪರಶುರಾಮಂ ಕಾದಿ ಬಸವಳಿದುಸಿರಲಪೊಡಮಾಜದ ಮೂರ್ಛವೂಗಿರ್ದನ ಕಂಡಬೆಯಂಬ ದಂಡುರುಂಬೆ ನಿನಗೆ ವಧಾರ್ಥವಾಗಿ ಪುಟ್ಟುವನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಹುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳಿತ್ತ ಭೀಷ್ಕರ ಬೆಂಬಲದೊಳ್ ವಿಚಿತ್ರವೀರ್ಯನು ಮವಾರ್ಯವೀರ್ಯನುಮಾಗಿ ಕೆಲವು ಕಾಲಂ ರಾಜ್ಯಲಕ್ಷಿ ಯಂ ತಾಳಿ ರಾಜಯಕ್ಷ ತಪ್ತಶರೀರನಾತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಶೋಕಾನಲ ದಹನಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯಗಳಂ ಮಾಡಿ ರಾಜ್ಯಂ ನಷ್ಟರಾ(ಜುಮಾದುದರ್ಕೆ ಮಮ್ಮಲಮಜುಗಿ ಯೋಜನಗಂಧಿ ಸಿಂಧುಪುತ್ರನನಿಂತೆಂದಳ
ಮll ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ಣ ನ
ನ್ನಿಗೆ ಬನ್ನಂ ಬರಯದಾರ್ತಸಗಿದೀ ವಿಖ್ಯಾತಿಯುಂ ಕೀರ್ತಿಯುಂ | ಮುಗಿಲು ಮುಟ್ಟಿದುದಕ್ಕೆ ನಮ್ಮ ಕುಲದೊಳ್ ಮಕ್ಕಳ್ಕರ್ ನೀನೇ ಜ ಮೃಗನೈ ಮುನ್ನಿನೊರಂಟುವೇಡ ಮಗನೇ ಕೈಕೊಳ್ ಧರಾಭಾರಮಂ || ೮೧
ಹಾರಿಹೋಗುವಂತೆ ಬಾಣಪ್ರಯೋಗಮಾಡಿ ಮೂರುಲೋಕಗಳಲ್ಲಿಯೂ ಹಿರಿದಾದ ಸಂಕಟವನ್ನುಂಟುಮಾಡಿದರು. ೮೦. ಇವನ ಪರಾಕ್ರಮವು ಚರ್ಚೆಗೆ ಮೀರಿದುದು; ಬಾಹುಬಲವು ಅಸಾಧಾರಣವಾದುದು; ಶೌರ್ಯವು ಅತಿಶಯವಾದುದು; ಹೋಗೋ! ಈತನಿಗೆ ದೇವತೆಗಳು ಸಮಾನವೇ! ಆಕಾಶಮಾರ್ಗದಲ್ಲಿ ಹರಿತವಾದ ಬಾಣಗಳನ್ನು ನಿರ್ವಿಯ್ರಮಾಡಲು ಪರಶುರಾಮನೂ ಹೆದರಿದನು. ಪ್ರತಿಜ್ಞೆಮಾಡಿರುವ ಭೀಷ್ಮನಿಗೆ ಹೆದರದೆ ಎದುರಾಗಿ ನಿಲ್ಲುವವರೂ ಇದ್ದಾರೆಯೇ? ವ! ಹಾಗೆ ಗಾಂಗೇಯನಲ್ಲಿ ಪರಶುರಾಮನು ಕಾದಿ ಶಕ್ತಿಗುಂದಿ ಮಾತನಾಡುವುದಕ್ಕೂ ಆಗದೆ ಮೂರ್ಛಹೋಗಿದ್ದವನನ್ನು ಕಂಡು ಅಂಬೆಯೆಂಬ ಗಯ್ಯಾಳಿ ನಿನ್ನ ಸಾವಿಗೆ ಕಾರಣವಾಗಿ ಹುಟ್ಟುತ್ತೇನೆ, ಆಗಲಿ ಎಂದು ಕೋಪದ ಬೆಂಕಿಯಿಂದ ಅಗ್ನಿಪ್ರವೇಶಮಾಡಿ ದ್ರುಪದನ ಮಹಾರಾಣಿಗೆ ಮಗನಾಗಿ ಹುಟ್ಟಿ ಕಾರಣಾಂತರದಿಂದ ಶಿಖಂಡಿಯಾಗಿದ್ದಳು. ಈ ಕಡೆ ವಿಚಿತ್ರವೀರ್ಯನು ಭೀಷ್ಕರ ಸಹಾಯದಿಂದ ತಡೆಯಿಲ್ಲದ ಪರಾಕ್ರಮವುಳ್ಳವನಾಗಿ ಕೆಲವು ಕಾಲ ರಾಜ್ಯಲಕ್ಷಿಯನ್ನು ಧರಿಸಿ ಕ್ಷಯರೋಗದಿಂದ ಸುಡಲ್ಪಟ್ಟವನು, ಮಕ್ಕಳಿಲ್ಲದೆಯೇ ಸತ್ತನು. ಭೀಷ್ಮನೂ ಸತ್ಯವತಿಯೂ ಅತ್ಯತಿಶಯವಾದ ದುಃಖಾಗ್ನಿಯಿಂದ ಸುಡಲ್ಪಟ್ಟ ಮನಸ್ಸುಳ್ಳವರಾಗಿ ಆತನಿಗೆ ಪರಲೋಕಕ್ರಿಯೆಗಳನ್ನು ಮಾಡಿ ರಾಜ್ಯಕ್ಕೆ ರಾಜನೇ ಇಲ್ಲದಂತಾದುದಕ್ಕೆ ವಿಶೇಷವಾಗಿ ದುಃಖಪಟ್ಟು ಯೋಜನಗಂಧಿಯಾದ ಸತ್ಯವತಿಯು ಭೀಷ್ಮನಿಗೆ ಹೀಗೆಂದಳು : ೮೧. ಮಗನೆಂದರೆ ನೀನೆ ಮಗ ಎಂದು ಲೋಕವೆಲ್ಲ ಶ್ಲಾಘಿಸುವ ಹಾಗೆ ನಿನ್ನ ತಮ್ಮಂದಿರನ್ನು ಸ್ವೀಕರಿಸಿ
Page #99
--------------------------------------------------------------------------
________________
೯೪ / ಪಂಪಭಾರತಂ
ವ|| ಎಂದು ನಿನ್ನನಾನಿನಿತಂ ಕೈಯೊಡ್ಡಿ ಬೇಡಿದನೆಂದ ಸತ್ಯವತಿಗಮರಾ
ಪಗಾನಂದನನಿಂತೆಂದಂ
ಕಂ II ಕಿಡುಗುಮೆ ರಾಜ್ಯಂ ರಾಜ್ಯದ
ತೊಡರ್ಪದೇವಾ ಬಾ ನನ್ನಿಯ ನುಡಿಯಂ | ಕಿಡೆ ನಗು ನಾನುಮರಡ
ನುಡಿದೊಡೆ ಹರಿ ಹರ ಹಿರಣ್ಯಗರ್ಭರ್ ನಗರೇ ||
ಚಂ || ಹಿಮಕರನಾತ್ಮಶೀತರುಚಿಯಂ ದಿನನಾಯಕನುಷ್ಠದೀಧಿತಿ ಕ್ರಮಮನಗಾಧ ವಾರಿಧಿಯೆ ಗುಣನಿಳಾವಧು ತನ್ನ ತಿಣ್ಣನು | ತಮ ಕುಲಶೈಲಮುನ್ನತಿಯನೇಳಿದವಾಗಿ ಬಿಸುಡಂ ಬಿಸು ಅಮ ಬಿಸುಡೆಂ ಮದೀಯ ಪುರುಷವ್ರತವೊಂದುಮನೀಗಳಂಬಕೇ || ೮೩
ವ|| ಎಂದು ತನ್ನ ನುಡಿದ ಪ್ರತಿಜ್ಞೆಯನೇಗೆಯು ತಪ್ಪಿದನಿಲ್ಲ
ಕಂ || ರಂಗತರಂತ ವಾರ್ಧಿ ಚ
೮೨
ಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ | ಗಾಂಗೇಯನುಂ ಪ್ರತಿಜ್ಞಾ ಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ !!
೮೪
ಮೊದಲು ಪ್ರತಿಜ್ಞೆ ಮಾಡಿದ ಸತ್ಯಕ್ಕೆ ಭಂಗಬರದ ಹಾಗೆ ಸಮರ್ಥನಾಗಿ ಮಾಡಿದ ನಿನ್ನ ಖ್ಯಾತಿಯೂ ಯಶನ್ನೂ ಮುಗಿಲನ್ನು ಮುಟ್ಟಿತಲ್ಲವೇ! ನಮ್ಮ ವಂಶಕ್ಕೆ ಬೇರೆ ಮಕ್ಕಳೇತಕ್ಕೆ? ನೀನೇ ಶೂರನಾಗಿದ್ದೀಯೇ. ಹಿಂದಿನ ಒರಟುತನ ಬೇಡ. ಮಗನೇ ನೀನೇ ರಾಜ್ಯಭಾರವನ್ನು ವಹಿಸಿಕೊ, ವ|| ಎಂದು ಕೈಯೊಡ್ಡಿ ಬೇಡಿದ ಸತ್ಯವತಿಗೆ ದೇವಗಂಗಾನದಿಯ ಮಗನಾದ ಭೀಷ್ಮನು ಹೀಗೆಂದನು-೮೨. ರಾಜ್ಯವು ಕೆಡತಕ್ಕುದೇ (ಅಶಾಶ್ವತವಾದುದರಿಂದ) ರಾಜ್ಯದ ತೊಡಕು ನನಗೇಕೆ? ನನ್ನ ಬದುಕು ಸತ್ಯಪ್ರತಿಜ್ಞೆಗೆ ವಿರೋಧವಾಗುವಂತೆ ನಡೆದರೆ (ನಾನೂ ಎರಡು ಮಾತನ್ನಾಡಿದರೆ) ತ್ರಿಮೂರ್ತಿಗಳಾದ ಬ್ರಹ್ಮವಿಷ್ಣುಮಹೇಶ್ವರರು ನಗುವುದಿಲ್ಲವೇ? ೮೩. ಚಂದ್ರನು ತನ್ನ ಶೀತಕಿರಣವನ್ನೂ ಸೂರ್ಯನು ತನ್ನ ಬಿಸುಗದಿರ ತೀವ್ರತೆಯನ್ನೂ ಅತ್ಯಂತ ಆಳವಾದ ಸಮುದ್ರವು ತನ್ನ (ಗಾಂಭೀರ್ಯ) ಆಳವನ್ನೂ ಈ ಭೂದೇವಿಯು ತನ್ನ ಭಾರವನ್ನೂ ಶ್ರೇಷ್ಠವಾದ ಕುಲಪರ್ವತಗಳು ತಮ್ಮ ಔನ್ನತ್ಯವನ್ನೂ ಹಾಸ್ಯಾಸ್ಪದವಾಗುವಂತೆ ಬಿಸುಟರೂ ಬಿಸಾಡಲಿ. ಎಲೆ ತಾಯೇ ನಾನು ನನ್ನ ಪುರುಷ (ಬ್ರಹ್ಮಚರ್ಯ) ವ್ರತವೊಂದನ್ನು ಮಾತ್ರ ಬಿಸುಡುವುದಿಲ್ಲ. ೮೪, ಚಂಚಲವಾಗಿ ಕುಣಿಯುತ್ತಿರುವ ಅಲೆಗಳನ್ನುಳ್ಳ ಸಮುದ್ರದ ಸಮೂಹಗಳು ತಮ್ಮಎಲ್ಲೆಯನ್ನು ದಾಟಿದರೂ ಭೀಷ್ಮನೂ ಪ್ರತಿಜ್ಞಾಗಾಂಗೇಯನೆಂಬ ಬಿರುದುಳ್ಳ ಅರಿಕೇಸರಿಯೂ ತಾವೂ ಒಂದು ಸಲ ಹೇಳಿದುದನ್ನು ತಪ್ಪುತ್ತಾರೆಯೇ?
Page #100
--------------------------------------------------------------------------
________________
ಪ್ರಥಮಾಶ್ವಾಸಂ | ೯೫ ವ|| ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನೇಗೆಯುಮೊಡಂಬಡಿಸಲಾಗಿದೆ ಸತ್ಯವತಿ ತಾನುಮಾತನುಮಾಳೊಚಿಸಿ ನಿಶ್ಚಿತಮಂತರಾಗಿ ಕೃಷ್ಣಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ದುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್ ಹಿರಣ್ಯ ಗರ್ಭ ಬ್ರಹ್ಮರಿಂ ತಗುಳವ್ಯವಚ್ಛಿನ್ನವಾಗಿ ಬಂದ ಸೋಮವಂಶಮಿಗಳಮ್ಮ ಕುಲಸಂತತಿ ಗಮಾರುಮಿಲ್ಲದೆಡೆವಡೆದು ಕಿಡುವಂತಾಗಿರ್ದುದದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ಯುದೆನೆ ಅಂತೆಗೆಯ್ಯನೆಂದು
ಚಂ || ತ್ರಿದಶ ನರಾಸುರೋರಗ ಗಣ ಪ್ರಭು ನಿಶ್ಚಿತ ತತ್ತಯೋಗಿ ಯೋ | ಗದ ಬಲಮು ಪೊಣಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕ | ಓದಿರೋಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯದೃಷ್ಟಿಮಂ
ಇದೊಳೆ ಪೊದಚ್ಚುದಾ ಸತಿಯರಿರ್ವರೊಳಂ ನವಗರ್ಭವಿಭ್ರಮಂ || 599
ವ! ಅಂತು ದಿವ್ಯಸಂಯೋಗದೊಳಿರ್ವರುಂ ಗರ್ಭಮಂ ತಾಳರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂಲಾಯ್ಕೆಯಂ ತನ್ನವೊಲೆ ಕಯ್ಕೆಯು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ
ವ|| ಹಾಗೆ ಸ್ಥಿರಪ್ರತಿಜ್ಞೆಯುಳ್ಳ ಗಾಂಗೇಯನನ್ನು ಏನು ಮಾಡಿದರೂ ಒಪ್ಪಿಸಲಾರದೆ ಸತ್ಯವತಿಯು ತಾನೂ ಆತನೂ ಆಲೋಚಿಸಿ ನಿಷ್ಕೃಷ್ಟವಾದ ಮಂತ್ರಾಲೋಚನೆಮಾಡಿ ಕೃಷ್ಣದೈಪಾಯನ ವ್ಯಾಸರನ್ನು ನೆನೆದು ಬರಿಸಲಾಗಿ ವ್ಯಾಸಮುನೀಂದ್ರನು ಏನು ಮಾಡಬೇಕು ಏನನ್ನು ಈಡೇರಿಸಬೇಕು ಎನ್ನಲು ಸತ್ಯವತಿಯು ಹೀಗೆಂದಳು ಹಿರಣ್ಯಗರ್ಭ ಬ್ರಹ್ಮನಿಂದ ಹಿಡಿದು ಏಕಪ್ರಕಾರವಾಗಿ ನಡೆದುಬಂದ ನಮ್ಮ ಸೋಮವಂಶವು ಈಗ ನಮ್ಮ ಸಂತತಿಗೆ ಯಾರೂ ಇಲ್ಲದೆ ಮಧ್ಯೆ ಹರಿದುಹೋಗಿ ನಾಶವಾಗುವಂತಾಗಿದೆ. ಆದಕಾರಣದಿಂದ ನಿನ್ನ ತಮ್ಮನಾದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಅಂಬಿಕೆಗೂ ಅಂಬಾಲಿಕೆಗೂ ಮಕ್ಕಳಾಗುವ ಹಾಗೆ ವರಪ್ರಸಾದವನ್ನು ಕರುಣಿಸಬೇಕು ಎಂದಳು. ವ್ಯಾಸನು ಹಾಗೆಯೇ ಆಗಲೆಂದು ಒಪ್ಪಿದನು. ೮೫. ದೇವತೆಗಳು ಮನುಷ್ಯರು ರಾಕ್ಷಸರು ಮತ್ತು (ಪಾತಾಳಲೋಕದ) ಸರ್ಪಗಳು ಮೊದಲಾದವರ ಗುಂಪಿಗೆ ಪ್ರಭುವೂ ನಿಷ್ಕೃಷ್ಟವಾದ ತತ್ವಜ್ಞಾನಿಯೂ ಯೋಗಿಯೂ ಆದ ವ್ಯಾಸಮಹರ್ಷಿಯು ತನ್ನ ಯೋಗಶಕ್ತಿಯು ಹುಟ್ಟಿ ಅಭಿವೃದ್ಧಿಯಾಗಿ ಸ್ಥಿರವಾಗಿ ನಿಲ್ಲಲು ಮಕ್ಕಳು ಬೇಕೆಂಬ ವರವನ್ನು ಬೇಡುವವರಾಗಿ ತನ್ನ ಎದುರಿನಲ್ಲೇ ನಿಂತಿರುವವರನ್ನು ನಯದಿಂದ ನೋಡಲಾಗಿ ಆ ಋಷಿಶ್ರೇಷ್ಠನ ದಿವ್ಯದೃಷ್ಟಿಮಂತ್ರ ದಿಂದಲೇ 'ಆ ಇಬ್ಬರು ಸ್ತ್ರೀಯರಲ್ಲಿಯೂ ನವೀನವಾದ ಗರ್ಭಸೌಂದರ್ಯವು ವ್ಯಾಪಿಸಿತು. (ಇಬ್ಬರೂ ಗರ್ಭಧಾರಣೆ ಮಾಡಿದರು) ವ|| ಹಾಗೆ ದಿವ್ಯವಾದ (ಋಷಿ ಶ್ರೇಷ್ಠನ) ಸಂಯೋಗದಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಇನ್ನೊಬ್ಬ ಮಗನ ವರವನ್ನು ಕೇಳು ಎಂದು ಅಂಬಿಕೆಗೆ ಹೇಳಲು ಅವಳು ವ್ಯಾಸಭಟ್ಟಾರಕನ ಹತ್ತಿರ ಹೋಗುವುದಕ್ಕೆ ಆಯಾಸಪಟ್ಟು ತನ್ನ ದಾಸಿಯನ್ನು ತನ್ನ ಹಾಗೆಯೇ ಅಲಂಕರಿಸಿ
Page #101
--------------------------------------------------------------------------
________________
೯೬] ಪಂಪಭಾರತಂ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷಂಗಮಿಂತೆಂದನನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪುದಳೆಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯು ಜಾತ್ಯಂಧನಕ್ಕುಮಂಬಾಲೆ ಮದೂಪಮಂ ಕಂಡು ಮೂಗಮಂ ಪಾಂಡುರಂ ಮಾಡಿ ದಳಪುದಳೆಂದಾಕೆಗೆ ಪಾಂಡುರೋಗಸಂಗತನುಮನೇಕ ಭದ್ರಲಕ್ಷಣಲಕ್ಷಿತನುಮಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕುಮಂಬಿಕೆಯ ಸೂಚಾಯ್ಯಪ್ಪಾಕ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳುದಂದಾಕೆಯ ಮಗಂ ವಿದುರನೆಂಬ ನನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಮೆಂದು ಪಟ್ಟು ಮುನಿಪುಂಗವಂ ಪೋದನಿತ್ತಂಸೃಷ್ಟಿಗೆ ವರಂಬಡೆದ ಸಂತಸಂ ಮನದೊಳಾಗಲೋಂದುತ್ತರೋ
ತರಂ ಬಳೆವ ಮಾಚಿಯಿಂ ಬಳೆವ ಗರ್ಭಮಂ ತಾಳಿಯಾ | ದರಂ ಬೆರಸು ಪೆತ್ತರಂದು ಧೃತರಾಷ್ಟ್ರ ವಿಖ್ಯಾತ ಪಾಂ
ಡುರಾಜ ವಿದುರರ್ಕಳಂ ಕ್ರಮದ ಮೂವರು ಮೂವರಂ || ಕಂ | ಆ ವಿವಿಧ ಲಕ್ಷಣಂಗಳೊ |
ಲಾವರಿಸಿದ ಕುಲದ ಬಲದ ಚಲದಳವಿಗಳೊಳ್ | ಮೂವರುಮನಾದಿ ಪುರುಷರ್ ಮೂವರುಮನಲಲ್ಲದತ್ತ ಮತ್ತೇವೆಂಬರ್ 11
೮೭
ವರವನ್ನು ಪ್ರಾರ್ಥಿಸುವಂತೆ ಹೇಳಿ ಕಳುಹಿಸಲು (ವ್ಯಾಸಮಹರ್ಷಿಯು) ಅವಳಿಗೂ ವರವನ್ನು ಕೊಟ್ಟು ಸತ್ಯವತಿ ಮತ್ತು ಭೀಷ್ಮರನ್ನು ಕುರಿತು ನನ್ನ ವರಪ್ರಸಾದಕಾಲದಲ್ಲಿ ನನ್ನನ್ನು ನೋಡಿ ಅಂಬಿಕೆಯು ಕಣ್ಣನ್ನು ಮುಚ್ಚಿದಳಾದುದರಿಂದ ಆಕೆಗೆ ಧೃತರಾಷ್ಟ್ರನೆಂಬ ಮಗನು ಅತ್ಯಂತ ಸುಂದರನಾಗಿಯೂ ಹುಟ್ಟುಗುರುಡನಾಗಿಯೂ ಹುಟ್ಟುತ್ತಾನೆ. ಅಂಬೆಯು ನನ್ನ ರೂಪವನ್ನು ಕಂಡು ಮುಖವನ್ನು ಬೆಳ್ಳಗೆ ಮಾಡಿಕೊಂಡುದರಿಂದ ಆಕೆಯ ಮಗನು ಪಾಂಡುರೋಗದಿಂದ ಕೂಡಿದವನೂ ಅನೇಕ ಶುಭಲಕ್ಷಣಗಳಿಂದ ಗುರುತುಮಾಡಲ್ಪಟ್ಟವನೂ (ಕೂಡಿದವನೂ) ಅತ್ಯಂತ ಶೌರ್ಯಶಾಲಿಯೂ ಆಗಿ ಪಾಂಡುರಾಜನೆಂಬ ಮಗನಾಗುತ್ತಾನೆ. ಅಂಬಿಕೆಯ ದಾದಿಯಾದವಳು ಹುಸಿನಗೆಯಿಂದ ಕೂಡಿದ ಮುಖಕಮಲವುಳ್ಳವಳಾಗಿ ಬಂದುದರಿಂದ ಆಕೆಯ ಮಗನಾದ ವಿದುರನು ಮನ್ಮಥಾಕಾರವುಳ್ಳವನೂ ಆಚಾರವಂತನೂ ಬುದ್ದಿವಂತನೂ ಆಗುತ್ತಾನೆ ಎಂದು ಹೇಳಿ ಋಷಿಶ್ರೇಷ್ಠನು ಹೊರಟುಹೋದನು. ಈ ಕಡೆ ೮೬, ಆ ಮೂವರು ಸ್ತ್ರೀಯರೂ ವರವನ್ನು ಪಡೆದ ಸಂತೋಷವು ಅಭಿವೃದ್ಧಿಯಾಗಿ ಮೇಲೆ ಮೇಲೆ ಬೆಳೆಯುತ್ತಿರುವ ಹಾಗೆಯೇ ಬೆಳೆಯುತ್ತಿರುವ ಗರ್ಭವನ್ನು ಧರಿಸಿ ಪ್ರೀತಿಯಿಂದ ಕೂಡಿದವರಾಗಿ ಮೂವರೂ ಧೃತರಾಷ್ಟ್ರ, ವಿಖ್ಯಾತನಾದ ಪಾಂಡುರಾಜ, ವಿದುರ ಎಂಬ ಮೂವರನ್ನು ಕ್ರಮವಾಗಿ ಅಂದು ಪಡೆದರು. ೮೭. ಆ ಬಗೆಬಗೆಯ ರಾಜಲಕ್ಷಣಗಳಿಂದ ಕೂಡಿದ ವಂಶದ, ಶೌರ್ಯದ, ಛಲದ ಪ್ರಮಾಣಗಳಲ್ಲಿ ಆ ಮೂವರನ್ನೂ ಆದಿಪುರುಷರೂ ತ್ರಿಮೂರ್ತಿಗಳೂ ಆದ ಬ್ರಹ್ಮವಿಷ್ಣು ಶಿವರೆಂದು ಹೇಳದೆ ಮತ್ತೇನೆಂದು ಹೇಳುವುದು.
Page #102
--------------------------------------------------------------------------
________________
ಪ್ರಥಮಾಶ್ವಾಸಂ | ೯೭ ವ|ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನ ಚಾಲೋಪನಯನಾದಿ ಷೋಡಶಯಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರ ಶಾಸ್ತ್ರಂಗಳೊಳತಿ ಪರಿಣತರಂ ಮಾಡಿ ಮದುವೆಯಂ ಮಾಡಲೆಂದು ಧೃತರಾಷ್ಟಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟುಕಂ || ಮತ್ತಿತ್ತ ನೆಗಟಿಯ ಪುರು
ಷೋತ್ತಮನ ಪಿತಾಮಹಂಗೆ ಶ್ರಂಗೆ ಮಗಳ್ | ಮತ್ತಗಜಗಮನೆ ಯದುವಂ ಶೋತ್ತಮೆಯೆನೆ ಕುಂತಿ ಕುಂತಿಭೋಜನ ಮನೆಯೊಳ್ || ಬಳೆಯುತ್ತಿರ್ಪನ್ನೆಗಮಾ ನಳಿನಾಸ್ಯೆಯ ಗುದೊಂದು ಶುಶೂಷೆ ಮನಂ | ಗೊಳೆ ಕೊಟ್ಟಂ ದುರ್ವಾಸಂ |
ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ ||
ವ|| ಅಂತು ಕೊಟ್ಟು ಮಂತ್ರಾಕ್ಷರಂಗಳನಾಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳು ಪಡವೆಯೆಂದು ಬೆಸಸಿದೊಡೊಂದು ದಿವಸಂ ಕೊಂತಿ
ಕಂ | ಪುಶ್ರವಣಂ ನೋಡುವೆನೆ - ನ್ನಿಚ್ಚೆಯೊಳೀ ಮುನಿಯ ವರದ ಮಹಿಮೆಯನೆನುತಂ ||
ದುಚಸ್ತನಿ ಗಂಗೆಗೆ ಶಫ * ರೋಚಳಿತ ತರತ್ತರಂಗಗೊರ್ವಳೆ ಬಂದಳ್ ||
SE
ಅಂದರೆ ಆ ಮೂವರನ್ನೂ ತ್ರಿಮೂರ್ತಿಗಳೆಂದೇ ಕರೆಯುತ್ತಾರೆ ವ ಹಾಗೆ ಅವರಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನವೇ ಮೊದಲಾದ ಹದಿನಾರು ಕರ್ಮಗಳನ್ನು ಪ್ರಧಾನವಾಗಿ ಭೀಷ್ಮನು ತಾನೇ ಮುಂದೆ ನಿಂತು ಮಾಡಿ ಅವರನ್ನು ಶಸ್ತ್ರವಿದ್ಯೆಯಲ್ಲಿಯೂ ಶಾಸ್ತ್ರವಿದ್ಯೆಯಲ್ಲಿಯೂ ಪಂಡಿತರನ್ನಾಗಿ ಮಾಡಿದನು. ಧೃತರಾಷ್ಟ್ರನಿಗೆ ಗಾಂಧಾರರಾಜನಾದ ಸೌಬಲನ ಮಗಳೂ ಶಕುನಿಯ ಒಡಹುಟ್ಟಿದವಳೂ ಆದ ಗಾಂಧಾರಿಯನ್ನು ಮದುವೆ ಮಾಡಿದನು. ೮೮-೮೯. ಈ ಕಡೆ ಪ್ರಸಿದ್ಧನಾದ ಶ್ರೀಕೃಷ್ಣನ ತಾತನಾದ ಶೂರನೆಂಬ ಯದುವಂಶದ ರಾಜನಿಗೆ ಮದಗಜಗಮನೆಯೂ ಯದುವಂಶಶ್ರೇಷ್ಠಳೂ ಆದ ಕುಂತಿಯೆಂಬ ಮಗಳು ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರಲು ಆ ಕಮಲಮುಖಿಯಾದ ಕುಂತಿಯು ಮಾಡಿದ ಶುಶೂಷೆಯಿಂದ ಮೆಚ್ಚಿದ ದುರ್ವಾಸನೆಂಬ ಋಷಿಯು ಪ್ರಕಾಶಮಾನವಾದ ಅಯ್ದು ಮಂತ್ರಾಕ್ಷರಗಳನ್ನು ದಯಮಾಡಿ ಕೊಟ್ಟನು. ವ|| ಹಾಗೆ ಕೊಟ್ಟು ಈ ಅಯ್ದುಮಂತ್ರಗಳನ್ನು ನೀನು ಉಚ್ಚರಿಸಿ ಕರೆದರೆ ನಿನ್ನ ಮನಸ್ಸಿಗೆ ಬಂದ ಹೋಲಿಕೆಯ ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಮಾಡಿದನು. ಒಂದು ದಿನ ಕುಂತಿಯು ೯೦. ಈ ಋಷಿಯು ಕೊಟ್ಟ ವರದ ಮಹಿಮೆಯನ್ನು ನನಗೆ ಇಷ್ಟ ಬಂದಂತೆ ಪರೀಕ್ಷೆ ಮಾಡಿ ನೋಡುತ್ತೇನೆಂದು ಮೀನುಗಳಿಂದ ಮೇಲಕ್ಕೆ ಹಾರಿಸಲ್ಪಟ್ಟ ಚಂಚಲವಾದ
Page #103
--------------------------------------------------------------------------
________________
೯೮ / ಪಂಪಭಾರತಂ.
ಬಂದು ಸುರನದಿಯ ನೀರೊಳ? ಮಿಂದಿನನಂ ನೋಡಿ ನಿನ್ನ ದೊರೆಯನೆ ಮಗನ | ಕೈಂದಾಹ್ವಾನಂಗೆಯ್ಯಿ
ಡಂ ದಲ್ ಧರೆಗಿಚಿದನಂದು ದಶಶತಕಿರಣಂ || ವ|| ಅಂತು ನಭೋಭಾಗದಿಂ ಭೂಮಿಭಾಗಕ್ಕಿಟೆದು ತನ್ನ ಮುಂದೆ ನಿಂದರವಿಂದ ಬಾಂಧವನ ನೋಡಿ ನೋಡಿಕಂ 11 ಕೊಡಗೂಸುತನದ ಭಯದಿಂ
ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಿ | ಬೀುಡಿಯಲೊಡಗೂಡೆ ಗಂಗೆಯ
ಮಡು ಕರೆಗಣಿದುದು ನಾಣ ಪಂಪೇಂ ಪಿರಿದೊ || ವ!| ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕಮುಮಂ ಕಿಡೆನುಡಿದಿಂತೆಂದಂಕಂ | ಬರಿಸಿದ ಕಾರಣವಾವುದೊ
ತರುಣಿ ಮುನೀಶ್ವರನ ಮಂತ್ರಮೇ ದೊರೆಯೆಂದಾಂ | ಮರುಳಿಯನೆಯದುಮಣಿಯದೆ ಬರಿಸಿದೆನಿನ್ನೇಟಿಮೆಂದೊಡಾಗದು ಪೋಗಲ್ || ಮುಂ ಬೇಡಿದ ವರಮಂ ಕುಡ ದಂಬುಜಮುಖಿ ಪುತ್ರನನ್ನ ದೊರೆಯಂ ನಿನಗ || ಕೆಂಬುದುಮೊದವಿದ ಗರ್ಭದೊ ಳಂಬುಜಮಿತ್ರನನ ಪೋಲ್ವ ಮಗನೊಗೆತಂದಂ ||
ಅಲೆಗಳನ್ನುಳ್ಳ ಗಂಗಾನದಿಗೆ ಉನ್ನತಸ್ತನಿಯಾದ ಅವಳು ಒಬ್ಬಳೇ ಬಂದಳು. ೯೧. ಬಂದು ಗಂಗಾನದಿಯ ನೀರನಲ್ಲಿ ಸ್ನಾನಮಾಡಿ ಸೂರ್ಯನನ್ನು ನೋಡಿ ನಿನಗೆ ಸಮನಾದ ಮಗನಾಗಲಿ ಎಂದು ಕರೆದಾಗಲೇ ಸೂರ್ಯನು ಪ್ರತ್ಯಕ್ಷವಾದನು. ೯೨. ತಾನು ಇನ್ನೂ ಕನೈಯಲ್ಲಾ ಎಂಬ ಭಯದಿಂದ ನಡುಗುವ ಆ ಕನ್ಯಯ ಬೆವರಿನ ನೀರಿನ ಪ್ರವಾಹವು ತುಂಬಿ ಹರಿದು ಒಟ್ಟುಗೂಡಲು ಗಂಗಾನದಿಯ ಮಡುವೂ ದಡವನ್ನು ಮೀರಿ ಹರಿಯಿತು. ಆಕೆಯ ನಾಚಿಕೆಯ ಆಧಿಕ್ಯವು ಎಷ್ಟು ಹಿರಿದೊ! ವ|| ಆಗ ಸೂರ್ಯನು ಅವಳ ಮನಸ್ಸಿನ ಸಂದೇಹವೂ ನಡುಗುತ್ತಿರುವ ಶರೀರದ ನಡುಕವೂ ಹೋಗುವ ಹಾಗೆ (ನಯದಿಂದ) ಮಾತನಾಡಿ ೯೩-೯೪. ಎಲೆ ತರುಣಿ ನನ್ನನ್ನು ಬರಿಸಿದ ಕಾರಣವೇನು (ಎಂದು ಸೂರ್ಯನು ಪ್ರಶ್ನಿಸಲು ಕುಂತಿಯು) ಆ ಋಷಿಶ್ರೇಷ್ಠನು ಕೊಟ್ಟ ಮಂತ್ರವು ಎಂಥಾದ್ದು ಎಂದು ಪರೀಕ್ಷಿಸಲು (ಬರಿಸಿದೆನು) ನಾನು ಅರಿಯದವಳೂ ಭ್ರಮೆಗೊಂಡವಳೂ ಆಗಿದ್ದೇನೆ. ತಿಳಿದೂ ತಿಳಿಯದೆ ಬರಮಾಡಿದೆನು. ಇನ್ನು ಎದ್ದುಹೋಗಿ ಎಂದಳು. (ಸೂರ್ಯನು) ಎಲ್ ಕಮಲಮುಖಿಯೇ ನೀನು ಮೊದಲು ಬೇಡಿದ ವರವನ್ನು ಕೊಡದೆ ನಾನು
Page #104
--------------------------------------------------------------------------
________________
ಪ್ರಥಮಾಶ್ವಾಸಂ | ೯೯ ಒಡವುಟ್ಟಿದ ಮಣಿಕುಂಡಲ ಮೊಡವುಟ್ಟಿದ ಸಹಜಕವಚಮಮರ್ದಿರೆ ತನ್ನೊಳ್ | ತೊಡರ್ದಿರೆಯುಂ ಬಂದಾಕೆಯ ನಡುಕಮನೊಡರಿಸಿದನಾಗಳಾ ಬಾಲಿಕೆಯಾ ||
೯೫
ವಗ ಅಂತು ನಡನಡನಡುಗಿ ಜಲದೇವತೆಗಳಪೊಡಂ ಮನಂಗಾಣರಂದು ನಿಧಾನಮ ನೀಡಾಡುವಂತೆ ಕೂಸಂ ಗಂಗೆಯೊಳೀಡಾಡಿ ಬಂದಳಿತ ಗಂಗಾದೇವಿಯುಮಾ ಕೂಸಂ ಮುಲುಗಲೀಯದೆ ತನ್ನ ತೆರೆಗಳೆಂಬ ನಳಿತೋಳಿನೊಯ್ಯನೊಯ್ಯನೆ ತುಸಿ ತರೆ ಗಂಗಾತೀರ ದೂಳಿರ್ಪ ಸೂತನೆಂಬಂ ಕಂಡು
ಉll ಬಾಳದಿನೇಶಬಿಂಬದ ನೆಟಲ್ ಜಲದೊಳ್ ನೆಲಸಿ ಮಣ್ ಫಣೀಂ
ದ್ರಾಳಯದಿಂದಮುರ್ಚದ ಫಣಾಮಣಿ ಮಂಗಳರಶಿಯೋ ಕರಂ | ಮೇಳಿಸಿದಪ್ಪುದೆನ್ನೆರ್ದಯನಂದು ಬೋದಿಲ್ಲನೆ ಪಾಯ್ತು ನೀರೊಳಾ ಬಾಳನನಾದಮಾದರದ ಕೊಂಡೊಸೆದಂ ನಿಧಿಗಂಡನಂತೆವೋಲ್ | ೯೬
ವ|| ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಗಳ ಸೋಂಕಿಲೊಳ್ ಕೂಸನಿಟ್ಟೋಡಾಕ ರಾಗಿಸಿ ಸುತನ ಸೂತಕಮಂ ಕೊಂಡಾಡ
ಹೋಗಲಾಗುವುದಿಲ್ಲ. ನಿನಗೆ ನನ್ನ ಸಮಾನನಾದ ಮಗನಾಗಲಿ ಎಂದನು. ಆಗ ಉಂಟಾದ ಗರ್ಭದಲ್ಲಿ ಕಮಲಸಖನಾದ ಸೂರ್ಯನನ್ನು ಹೋಲುವ ಮಗನು ಹುಟ್ಟಿದನು. ೯೫. ಜೊತೆಯಲ್ಲಿಯೇ ಹುಟ್ಟಿದ ಮಣಿಕುಂಡಲಗಳೂ (ರತ್ನಖಚಿತವಾದ - ಕಿವಿಯಾಭರಣ) ಜೊತೆಯಲ್ಲಿಯೇ ಹುಟ್ಟಿದ ಕವಚವೂ ತನ್ನಲ್ಲಿ ಸೇರಿ ಅಮರಿಕೊಂಡಿರಲು ಹುಟ್ಟಿದ ಆ ಮಗನು ಆಗ ಆ ಬಾಲಿಕೆಗೆ ನಡುಕವನ್ನುಂಟು ಮಾಡಿದನು. ವ! ಹಾಗೆ ವಿಶೇಷವಾಗಿ ನಡುಗಿ ಜಲದೇವತೆಗಳಾದರೂ ನನ್ನ ಮನಸ್ಸನ್ನು ತಿಳಿದುಕೊಳ್ಳುತ್ತಾರೆ ಎಂದು ತನ್ನ ನಿಧಿಯನ್ನೇ (ಐಶ್ವರ್ಯ) ಬಿಸಾಡುವಂತೆ ಕೂಸನ್ನು ಗಂಗೆಯಲ್ಲಿ ಎಸೆದು ಬಂದಳು. ಈ ಕಡೆ ಗಂಗಾದೇವಿಯು ಆ ಕೂಸನ್ನು ಮುಳುಗುವುದಕ್ಕೆ . . ಅವಕಾಶಕೊಡದೆ ತನ್ನ ಅಲೆಗಳೆಂಬ ಸುಂದರವಾದ ತೋಳುಗಳಿಂದ ನಿಧಾನವಾಗಿ ತಬ್ಬಿಕೊಂಡು ತರಲು ಗಂಗಾತೀರದಲ್ಲಿದ್ದ ಸೂತನೆಂಬುವನು ಕಂಡು ೯೬. ಬಾಲ ಸೂರ್ಯಮಂಡಲದ ನೆರಳು ನೀರಿನಲ್ಲಿ ನೆಲೆಸಿದೆಯೋ ಅಥವಾ ನಾಗಲೋಕ ದಿಂದ ಭೇದಿಸಿಕೊಂಡು ಬಂದ ಹೆಡೆವಣಿಗಳ ಮಂಗಳಕಿರಣಗಳೋ ! ಇದು ನನ್ನ ಹೃದಯವನ್ನು ವಿಶೇಷವಾಗಿ ಆಕರ್ಷಿಸುತ್ತಿದೆ ಎಂದು ಗಂಗೆಯ ನೀರಿನಲ್ಲಿ ದಿಲ್ ಎಂದು ಶಬ್ದವಾಗುವ ಹಾಗೆ ಥಟ್ಟನೆ ಹಾರಿ ಅತ್ಯಂತ ಪ್ರೇಮಾತಿಶಯದಿಂದ ಕಂಡು ನಿಧಿಯನ್ನು ಕಂಡವನಂತೆ ವ ಉತ್ಸಾಹದಿಂದೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ಪ್ರಿಯಳ ಮಡಲಿನಲ್ಲಿ ಕೂಸನ್ನು ಇಡಲಾಗಿ ಆಕೆ ಪ್ರೀತಿಸಿ ಮಗನು ಹುಟ್ಟಿದ
Page #105
--------------------------------------------------------------------------
________________
೧೦೦ | ಪಂಪಭಾರತಂ ಕಂ || ಅಗುತ್ತಿರಲಾ ಕುಟಿಯೊಳ್ ತೊ
ಟ್ರಗ ನಿಧಿಗಂಡಂತ ವಸುಧಗಸದಳವಾಯಾ | ಮಗನಂದಮಂದು ಲೋಗರ್ ಬಗದಿರ ವಸುಷೇಣನೆಂಬ ಹೆಸರಾಯಾರ್ಗ ||
ಅಂತು ವಸುಷೇಣನಾ ಲೋ ಕಾಂತಂಬರಮಳವಿ ಬಳೆಯೆ ಬಳಸಕಮದೋ || ರಂತ ಜನಂಗಳ ಕರ್ಡೂ
ಪಾಂತದೊಳೊಗದಸೆಯ ಕರ್ಣನೆಂಬನುಮಾದಂ || res ವರೆಗೆ ಆಗಿಯಾತಂ ಶಸ್ತಶಾಸ್ತ್ರವಿದ್ಯೆಯೊಳತಿಪರಿಣತನಾಗಿ ನವಯೌವನಾರಂಭದೊಳ್
ಚಂ 10 ಪೊಡೆದುದು ಬಿಲ್ಲ ಜೇವೊಡೆಯ ಮಾಜುವ ವೈರಿ ನರೇಂದ್ರರು ಸಿಡಿ
ಲೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದಡರಂ ನಿರಂತರಂ | ಕಡಿಕಡಿದಿತ್ತ ಪೊನ್ನ ಬುಧ ಮಾಗಧ ವಂದಿಜನಕ್ಕೆ ಕೊಟ್ಟ ಕೋ ಡೆಡರದೆ ಬೇಡಿಮೋಡಿಯಿದು ಚಾಗದ ಬೀರದ ಮಾತು ಕರ್ಣನಾ || ೯೯.
ವ|| ಅಂತು ಭುವನಭವನಕ್ಕೆಲ್ಲಂ ನೆಗಲ್ಲ ಕರ್ಣನ ಪೊಗಂ ನೆಗಳಯುಮುನೀಂದ್ರ ಕೇಳು ಮುಂದೆ ತನ್ನಂಶದೊಳ್ ಪುಟ್ಟುವರ್ಜುನಂಗಮಾತಂಗಂ ದ್ವಂದ್ವಯುದ್ಧಮುಂಟೆಂಬುದಂ ತನ್ನ ದಿವ್ಯಜ್ಞಾನದಿಂದಮದುವಿಂತಲ್ಲದೀತನನಾತಂ ಗೆಲಲ್ ಬಾರದಂದು
ಮೈಲಿಗೆಯನ್ನು ಆಚರಿಸಿದಳು. ೯೭. ತೋಡುತ್ತಿರುವ ಗುಳಿಯಲ್ಲಿ ನಿಧಿ ದೊರೆತಂತಾಯಿತು ಈ ಮಗುವಿನ ಸೌಂದರ್ಯ ಎಂದು ಜನರಾಡಿಕೊಳ್ಳುತ್ತಿರಲು ಆ ಮಗುವಿಗೆ ವಸುಷೇಣನೆಂಬ ಹೆಸರಾಯಿತು-೯೮. ಹಾಗೆಯೇ ವಸುಷೇಣನ ಪರಾಕ್ರಮವು ಲೋಕದ ಎಲ್ಲಿಯವರೆಗೆ ಬೆಳೆಯಲು ಆ ಬೆಳದ ರೀತಿ ಒಂದೇಪ್ರಕಾರವಾಗಿ ಜನಗಳ ಕರ್ಣ(ಕಿವಿ)ಗಳ ಸಮೀಪದಲ್ಲಿ ಹರಡುತ್ತಿರಲು (ಕೂಸು) ಕರ್ಣನೆಂಬ ಹೆಸರುಳ್ಳವನೂ ಆದನು. ವ|| ಶಸ್ತ್ರ ಮತ್ತು ಶಾಸ್ತ್ರವಿದ್ಯೆಗಳಲ್ಲಿ ಪೂರ್ಣ ಪಾಂಡಿತ್ಯವನ್ನು ಪಡೆಯಲು ಅವನಿಗೆ ಯವ್ವನೋದಯವೂ ಆಯಿತು. ೯೯. ಅವನ ಬಿಲ್ಲಿನ ಟಂಕಾರವೇ ಶತ್ರುರಾಜರನ್ನು ಹೋಗಿ ಅಪ್ಪಳಿಸಿತು. ನಿರಂತರವಾಗಿ ದಾನ ಮಾಡಿದ ಅವನ ಚಿನ್ನದ ರಾಶಿಯೇ - ವಿದ್ವಾಂಸರಿಗೂ ವಂದಿಮಾಗಧರಿಗೂ ಕೊಟ್ಟ ದಾನವೆ ಅವರಿಗಿದ್ದ ದಾರಿದ್ರವನ್ನು ಸಿಡಿಲುಹೊಡೆದ ಹಾಗೆ ಅಟ್ಟಿಮೆಟ್ಟಿ ಕತ್ತರಿಸಿಹಾಕಿತು. ಅವನಲ್ಲಿಗೆ ಹೋಗಿ ಎಂಬಂತೆ ಅವನ ತ್ಯಾಗದ ಮತ್ತು ವೀರ್ಯದ ಮೇಲೆ ಲೋಕಪ್ರಸಿದ್ಧವಾಯಿತು. ವ|| ಹೀಗೆ ಲೋಕಪ್ರಸಿದ್ದವಾದ ಕರ್ಣನ ಹೊಗಳಿಕೆಯನ್ನೂ ಪ್ರಸಿದ್ದಿಯನ್ನೂ ಇಂದ್ರನು ಕೇಳಿ ಮುಂದೆ ತನ್ನಂಶದಲ್ಲಿ ಹುಟ್ಟುವ ಅರ್ಜುನನಿಗೂ ಈತನಿಗೂ ದ್ವಂದ್ವಯುದ್ಧವುಂಟಾಗುತ್ತದೆ ಎಂದು ತನ್ನ ದಿವ್ಯಜ್ಞಾನದಿಂದ ತಿಳಿದು
Page #106
--------------------------------------------------------------------------
________________
೧೦೧
ಪ್ರಥಮಾಶ್ವಾಸಂ | ೧೦೧ ಕಂ || ಬೇಡಿದೊಡೆ ಬಲದ ಬರಿಯುವ
ನೀಡಾಡುಗುಮುಗಿದು ಕರ್ಣನೆಂದಾಗಳೆ ಕೈ | ಗೂಡಿದ ವಟುವಾಕೃತಿಯೊಳೆ. ಬೇಡಿದನಾ ಸಹಜಕವಚಮಂ ಕುಂಡಳಮಂ || ಬೇಡಿದುದನರಿದುಕೊಳ್ಳದೆ ಬೇಡಿದುದಂ ಮುಟ್ಟಲಾಗದೆನಗೆನೆ ನೆಗಟ್ಟಿ | ಲ್ಲಾಡದೆ ಕೊಳ್ಳೆಂದರಿದೀ ಡಾಡಿದನಿಂದ್ರಂಗೆ ಕವಚಮಂ ರಾಧೇಯಂ || ಎಂದುಂ ಪೊಗಂದನೆ ಮಾ ನಂದನ ಪಂತೋಂದನೀವೆನೆಂದನೆ ನೋಂದಃ | ಎಂದನೆ ಸೆರಗಿಲ್ಲದೆ ಪಿಡಿ
ಯಂದನಿದೇಂ ಕಲಿಯೊ ಚಾಗಿಯೋ ರವಿತನಯಂ || ೧೦೨ ವಗಿ ಅಂತು ತನ್ನ ಸಹಜಕವಚಮಂ ನೆತ್ತರ್ ಪನ ಮನ ಪವಿಯ ತಿದಿಯುಗಿವಂತುಗಿದು ಕೊಟ್ಟೂಡಿಂದ್ರನಾತನ ಕಲಿತನಕೆ ಮೆಚ್ಚಿ ಕಂ l ಸುರ ದನುಜ ಭುಜಗ ವಿದ್ಯಾ
ಧರ ನರಸಂಕುಲದೊಳಾರನಾದೊಡಮೇನೋ | ಗರ ಮುಟ್ಟೆ ಕೋಲ್ಕುಮಿದು ನಿಜ ವಿರೋಧಿಯಂ ಧುರದೊಳೆಂದು ಶಕ್ತಿಯನಿತ್ತಂ || - ೧೦೩
ಹೀಗಲ್ಲದೆ ಆತನು ಈತನನ್ನು ಗೆಲ್ಲಲಾಗುವುದಿಲ್ಲ ಎಂದು ೧೦೦, ಯಾಚಿಸಿದರೆ ಕರ್ಣನು ಬಲಪಾರ್ಶ್ವದ ಪಕ್ಕೆಯನ್ನು ಕತ್ತರಿಸಿ ದಾನವಾಗಿ ಎಸೆಯುತ್ತಾನೆ ಎಂದು ಭಾವಿಸಿ ಆಗಲೇ ಸಿದ್ದವಾದ ಬ್ರಹ್ಮಚಾರಿಯ ರೂಪದಲ್ಲಿಯೇ ಬಂದು ಇಂದ್ರನು ಕರ್ಣನೊಡನೆ ಹುಟ್ಟಿಬಂದ ಕವಚವನ್ನೂ ಕುಂಡಲವನ್ನೂ ಬೇಡಿದನು. ೧೦೧. ಬೇಡಿದುದನ್ನು ಕತ್ತರಿಸಿಕೊ ಎಂದು ಕರ್ಣನು ಹೇಳಲು ಇಂದ್ರನು ಬೇಡಿದುದನ್ನು ನೀನು ಕೊಡುವುದಕ್ಕೆ ಮೊದಲು ನಾನು ಮುಟ್ಟಲಾಗದು ಎನಲು ಸ್ವಲ್ಪವೂ ಅಲುಗಾಡದೆ ತೆಗೆದುಕೋ ಎಂದು ಹೇಳಿ ಕರ್ಣನು ಕವಚವನ್ನು ಕತ್ತರಿಸಿ ಲಕ್ಷವಿಲ್ಲದೆ ನಿರ್ಯೋಚನೆ ಯಿಂದ ಕೊಟ್ಟನು. ೧೦೨. ಕರ್ಣನು ಬೇಡಿದವರಿಗೆ ಎಂದಾದರೂ ಮುಂದೆ ಹೋಗು ಎಂದು ಹೇಳಿದನೆ? ಸ್ವಲ್ಪ ತಡೆ ಎಂದು ಹೇಳಿದನೆ? (ಕೇಳಿದ ಪದಾರ್ಥವನ್ನಲ್ಲದೆ) ಬೇರೊಂದನ್ನು ಕೊಡುತ್ತೇನೆ ಎಂದನೆ ? (ಕತ್ತರಿಸುವಾಗ) ನೋವಿನಿಂದ ಅಃ ಎಂದನೆ? ಹೆದರಿಕೆಯಿಲ್ಲದೆ ಹಿಡಿ ತೆಗೆದುಕೋ ಎಂದನು. ಕರ್ಣನು ಅದೆಂತಹ ಶೂರನೋ ಹಾಗೆಯೇ ತ್ಯಾಗಿಯೂ ಅಲ್ಲವೇ! ವll ಹಾಗೆ ರಕ್ತವು ಪನ ಮನ ಹರಿಯುತ್ತಿರಲು ತನ್ನ ಸಹಜಕವಚವನ್ನು ಚರ್ಮದ ಚೀಲವನ್ನು ಸೀಳುವಂತೆ ಸೀಳಿ, ಕೊಡಲಾಗಿ ಇಂದ್ರನು ಆತನ ಶೌರ್ಯಕ್ಕೆ ಮೆಚ್ಚಿ ೧೦೩. ನಿನ್ನ ಶತ್ರುಗಳಲ್ಲಿ ದೇವತೆಗಳು, ರಾಕ್ಷಸರು, ನಾಗಗಳು, ವಿದ್ಯಾಧರರು, ಮನುಷ್ಯರು ಇವರಲ್ಲಿ ಯಾರಾದರೂ ಸರಿಯೇ ಈ
Page #107
--------------------------------------------------------------------------
________________
೧೦೨ ಪಂಪಭಾರತಂ
ವl ಅಂತಿಂದ್ರನಿತ್ತ ಶಕ್ತಿಯಂ ಕೈಕೊಂಡು ನಿಜಭುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿಕಂ || ಕೂರಿಸಿ ಗುರು ಶುಷಿ
ಳಾ ರಾಮನನುಗ್ರ ಪರಶು ಪಾಟಿತ ರಿಪು ವಂ | ಶಾರಾಮನನಿಷುವಿದ್ಯಾ ಪಾರಗಳೆನಿಸಿದುದು ಬಿ ವೈಕರ್ತನನಾ |
೧೦೪ ವll ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮದೋಜಿಗಿದಾ ಪ್ರಸ್ತಾವದೂಳಾ ಮುನಿಗೆ ಮುನಿಸಂ ' .. ಮಾಡಲೆಂದಿಂದ್ರನುಪಾಯದೊಳಟ್ಟದ ವಜ್ರಕೀಟಂಗಳ್ ಕರ್ಣನೆರಡುಂ ತೂಡೆಯುವ ನುಳಿಯನೂ ಕೊಡಂತಿಯೊಳ್ ಬೆಟ್ಟದಂತತಮಿತ್ತಮುರ್ತಿ ಪೋಗಯುಮದನನಯದಂತೆ ಗುರುಗೆ ನಿದ್ರಾಭಿಘಾತಮಕ್ಕುಮೆಂದು ತಲೆಯನುಗುರಿಸುತ್ತುಮಿರೆಯಿರಕಂ|| ಅತಿ ವಿಶದ ವಿಶಾಲೋರು.
ಕೃತದಿಂದೊಜದನಿತು ಜಡೆಯುಮಂ ನಾಂದಿ ಮನಃ | ಉತದೊಡನೆಬ್ಬಳಸಿದುದು ತಮಾ ವಂದನ್ನ ಮಿತ್ರ ಗಂಧಂ ಮುನಿಯಂ ||
೧೦೫ ವ|| ಅಂತೆಲ್ಕತ್ತು ನೆತ್ತರ ಪೊನಲೊಳ್ ನಾಂದುನನೆದ ಮಯ್ಯುಮಂ ತೊಯ್ದು ತಳ್ಕೊಯ್ದ ಜಡೆಯುಮಂ ಕಂಡೀ ಧೈರ್ಯಂ ಕೃತಿಯಂಗಲ್ಲದಾಗದು ಪಾರ್ವನೆಂದೆನ್ನೋಲ್
ಶಕ್ಕಾಯುಧವು ಗ್ರಹ ಹಿಡಿದ ಹಾಗೆ ಅವರನ್ನು ಕೊಲ್ಲುತ್ತದೆ ಎಂದು ಅವನಿಗೆ ಶಕ್ಕಾಯುಧವನ್ನು ಕೊಟ್ಟನು. ವ|| ಹಾಗೆ ಇಂದ್ರನು ಕೊಟ್ಟ ಶಕ್ಕಾಯುಧವನ್ನು ಸ್ವೀಕರಿಸಿ ತನ್ನ ಬಾಹುಬಲವನ್ನು ಪ್ರಕಟಮಾಡಬೇಕೆಂದು ಪರಶುರಾಮನ ಹತ್ತಿರಕ್ಕೆ ಹೋದನು. ೧೦೪. ಭಯಂಕರವಾದ ಕೊಡಲಿಯಿಂದ ಸೀಳಲ್ಪಟ್ಟ ವೈರಿಗಳೆಂಬ ತೋಟವನ್ನುಳ್ಳ ಆ ಪರಶುರಾಮನನ್ನು ಕರ್ಣನು ಗುರುಶುಶೂಷೆಯ ಮೂಲಕ ಪ್ರೀತಿಸುವಂತೆ ಮಾಡಲು ಕರ್ಣನ ಬಿಲ್ಬಿಯು ಅವನನ್ನು ಧನುರ್ವಿದ್ಯೆಯಲ್ಲಿ ಪಾರಂಗತನೆನ್ನುವ ಹಾಗೆ ಮಾಡಿತು. ವ|| ಹಾಗೆ ಬಿಲ್ಲು ಹಿಡಿದಿರುವವರಲ್ಲೆಲ್ಲ
ಮೊದಲಿಗನಾಗಿದ್ದು ಒಂದು ದಿನ ಪರಶುರಾಮನು ತನ್ನ ತೊಡೆಯ ಮೇಲೆ ತಲೆಯನ್ನು * ಮಡಗಿ ಎಚ್ಚರತಪ್ಪಿ ಮಲಗಿದ ಸಂದರ್ಭದಲ್ಲಿ ಆ ಋಷಿಗೆ ಕೋಪವನ್ನುಂಟು
ಮಾಡಬೇಕೆಂದು ಇಂದ್ರನು ಉಪಾಯದಿಂದ ಕಳುಹಿಸಿದ ವಜ್ರಕೀಟಗಳೇ ಕರ್ಣನೆರಡು ತೊಡಗಳನ್ನೂ ಉಳಿಯನ್ನು ನಾಟಿ ಕೊಡಲಿಯಿಂದ ಹೊಡೆದ ಹಾಗೆ ಆ ಕಡೆಯಿಂದ
ಈ ಕಡೆಗೆ ಕೊರೆದುಕೊಂಡು ಹೋದರೂ ಕರ್ಣನು ಅದನ್ನು ತಿಳಿಯದವನಂತೆ * ಗುರುವಿಗೆ ನಿದ್ರಾಭಂಗವಾಗುತ್ತದೆಂದು ಗುರುವಿನ ತಲೆಯನ್ನು ತನ್ನ ಉಗುರಿನಿಂದ ಸವರುತ್ತಿದ್ದನು. ೧೦೫. ವಿಶೇಷವೂ ಸ್ಪಷ್ಟವೂ ಅಗಲವೂ ಆದ ತೊಡೆಯ ಗಾಯದಿಂದ ಜಿನುಗಿ ಹೆಚ್ಚುತ್ತಿರುವ ರಕ್ತದಿಂದ ಕೂಡಿದ ದುರ್ಗಂಧವು ಜಡೆಯಷ್ಟನ್ನೂ ಒದ್ದೆಮಾಡಿ ಋಷಿಯನ್ನು ಮನಸ್ಸಿನ ಏರುತ್ತಿರುವ ಕೋಪದೊಡನೆ ಎಚ್ಚರವಾಗುವ ಹಾಗೆ ಮಾಡಿತು.
Page #108
--------------------------------------------------------------------------
________________
ಪ್ರಥಮಾಶ್ವಾಸಂ ೧೦೩ ಪುಸಿದು ಬಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆತಿಲ್ಲ ನಿನಗಾನಿತ್ತ ಬ್ರಹ್ಮಾಸ್ತಮೆಂಬ ದಿವ್ಯಾಸ್ತ್ರ ಮವಸಾನಕಾಲದೊಳ್ ಬೆಸಕೆಯ್ಯದಿರ್ಕೆಂದು ಶಾಪವನಿತ್ತನಂತು ಕರ್ಣನುಂ ಶಾಪಹತನಾಗಿ ಮಗುಟ್ಟು ಬಂದು ಸೂತನ ಮನೆಯೊಳಿರ್ಪನ್ನೆಗಮಿತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡಚಂ | ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚಿ .
ಲ್ಕುಗಳ ವಿಲಾಸದುರ್ಮಗಳೊಳಾವವಗಾಗಿಪವೆಂದು ಬಂದಂ ಚ | ೩ಗರುಮನಾಸಕಾಜರುಮನೊಲ್ಲದೆ ಚೆಲ್ವಿಡಿದಿರ್ದ ರೂಪು – 1
ಗೆವರೆ ಪಾಂಡುರಾಜನನ ಕುಂತಿ ಮನಂಬುಗೆ ಮಾಲೆ ಹೂಡಿದಳ್ || ೧೦೬ 'ವ|| ಅಂತು ಸ್ವಯಂಬರದೊಳ್ ನೆಂದರಸುಮಕ್ಕಳೊಳಪು ಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ ಶಲ್ಯನೊಡವುಟ್ಟಿದ ಮಾದ್ರಿಯುಮನೊಂದ ಪಸೆಯೊಳಿರಿಸಿ ಗಾಂಗೇಯಂ ವಿಧಾತ್ರ ಮುಂಡಾಡುವಂತೆ ತಾಂ ಮದುವೆಯಂ ಮಾಡಿ
ಚಂ || ತಳಿರ್ಗಳಸಂ ಮುಕುಂದರವಮದ ಮುತ್ತಿನ ಮಂಟಪಂ ಮನಂ
ಗೋಳಿಪ ವಿತಾನಪ ಹಸುರ್ವಂದಲೋಳೊಲ್ಲೆಡೆಯಾಡುವಯ್ಯರ್ 1 ಬಳಸಿದ ವೇದಪಾರಗರ ಸಂದಣಿಯೆಂಬಿವಲೆಂ ವಿವಾಹಮಂ , ಗಳಮದು ಕುಂತಿ ಮಾದ್ರಿಗಳೊಳಚ್ಚರಿಯಾದುದು ಪಾಂಡುರಾಜನಾ || ೧೦೭ .
ವlು ಹಾಗೆ ಎಚ್ಚರಗೊಂಡು ರಕ್ತದ ಪ್ರವಾಹದಲ್ಲಿ ಚೆನ್ನಾಗಿ ನೆನೆದು ಒದ್ದೆಯಾದ ಶರೀರವನ್ನೂ ಜಡೆಯನ್ನೂ ನೋಡಿ ಈ ಧೈರ್ಯವು ಕ್ಷತ್ರಿಯನಲ್ಲದವನಿಗಾಗುವುದಿಲ್ಲ. ಬ್ರಾಹ್ಮಣನೆಂದು ನನ್ನಲ್ಲಿ ಸುಳ್ಳು ಹೇಳಿ ವಿದ್ಯೆಯನ್ನು ಸ್ವೀಕಾರಮಾಡಿದುದಕ್ಕೆ ದಂಡ ಬೇರೇನಿಲ್ಲ, ನಿನಗೆ ನಾನು ಕೊಟ್ಟ ಬ್ರಹ್ಮಾಸ್ತ್ರವೆಂಬ ದಿವ್ಯಾಸ್ತ್ರವು ನಿನ್ನ ಕಡೆಯ ಕಾಲದಲ್ಲಿ ನಿನ್ನ ಆಜ್ಞೆಯನ್ನು ಪಾಲಿಸದಿರಲಿ ಎಂದು ಶಾಪ ಕೊಟ್ಟನು. ಹಾಗೆ ಕರ್ಣನು ಶಾಪಹತನಾಗಿ ಪುನಃ ಬಂದು ಸೂತನ ಮನೆಯಲ್ಲಿರಲು ಈಕಡೆ ಕುಂತಿಗೆ ಅವರ ಮಾವನಾದ ಕುಂತೀಭೋಜನು ಸ್ವಯಂವರಕ್ಕೆ ಏರ್ಪಡಿಸಿದನು. ೧೦೬. ಸೊಗಸಾಗಿರುವ ತಮ್ಮಯವ್ವನ, ಐಶ್ವರ್ಯ, ಸೌಂದರ್ಯ ಮತ್ತು ಶೃಂಗಾರಚೇಷ್ಟೆಗಳ ಆಧಿಕ್ಯದಿಂದ ನಾವು ಕುಂತಿಯನ್ನು ನಮ್ಮವಳನ್ನಾಗಿ ಮಾಡಿಕೊಳ್ಳುತ್ತೇವೆ ಎಂಬುದಾಗಿ ಬಂದಿದ್ದ ಸೌಂದರ್ಯಶಾಲಿಗಳನ್ನೂ ಕಾಮುಕರನ್ನೂ ಬಯಸದೆ ಕುಂತಿಯು ಪಾಂಡುವಿನ ಸುಂದರವಾದ ರೂಪವು ತನ್ನ ಕಣ್ಣಿಗೆ ಹಿತವಾಗಿದ್ದು ಮನಸ್ಸನ್ನು ಪ್ರವೇಶಿಸಲು ಪಾಂಡುರಾಜನಿಗೇ ವರಣಮಾಲೆಯನ್ನು ತೊಡಿಸಿದಳು (ಹಾಕಿದಳು). ವ ಹಾಗೆ ಸ್ವಯಂವರದಲ್ಲಿ ತುಂಬಿದ್ದ ರಾಜಕುಮಾರರಲ್ಲಿ ಪಾಂಡುವನ್ನೇ ಆಯ್ದುಕೊಂಡ ಕುಂತಿಯೊಡನೆ ಮದ್ರರಾಜನ ಮಗಳೂ ಶಲ್ಯನೊಡನೆ ಹುಟ್ಟಿದವಳೂ ಆದ ಮಾದ್ರೀದೇವಿಯನ್ನೂ ಒಂದೇ ಹಸೆಮಣೆಯಲ್ಲಿರಿಸಿ ಭೀಷ್ಮನು, ಬ್ರಹ್ಮನೆ ಮೆಚ್ಚಿ ಮುದ್ದಾಡುವಂತೆ ತಾನೇ ಮದುವೆಯನ್ನು ಮಾಡಿದನು. ೧೦೭. ಚಿಗುರಿನಿಂದ ಕೂಡಿದ ಕಳಶ, ತಮಟೆಯ ಧ್ವನಿ (ಮಂಗಳವಾದ್ಯ) ಎತ್ತರವಾಗಿ ಕಟ್ಟಿದ ಮಂಟಪ, ಮನೋಹರ ವಾಗಿರುವ ಮೇಲುಕಟ್ಟಿನ ಸಾಲುಗಳು, ಹಸಿರುವಾಣಿಯ ಚಪ್ಪರ, ಪ್ರೀತಿಯಿಂದ
Page #109
--------------------------------------------------------------------------
________________
೧೦೪ / ಪಂಪಭಾರತಂ
ತುಲುಗೆ
ನೀಳ ಪುರ್ವು ನಿಡುಗಣ್ ಪೊಯಲ್ಲದೆ ಬಟ್ಟಿತಪ್ಪ ಬಾ ಯೇ ತನು ರೇಖೆಗೊಂಡ ಕೊರಲೊಡ್ಡಿದ ಪೆರ್ಮೊಲೆ ತಧ್ವಸಿಮ್ ಕರಂ | ನೆಲದ ನಿತಂಬವಿಂಬುವಡೆದೊಳ್ಕೊಡೆ ನಕ್ಕರವದ್ದಿ ತಾನೆ ಪೋ ಕಿರುದೊಡೆಯೆಂದು ಧಾತ್ರಿ ಪೊಗಟ್ಟುಂ ಪೊಗಟ್ಟನ್ನರ ಕುಂತಿ ಮಾದಿಗಳ
೧೦೮
ವ|| ಅಂತಾಕೆಗಳಿರ್ವರುಮರಡುಂ ಕೆಲದೊಳಿರೆ ಕಲ್ಪಲತೆಗಳೆರಡು ನಡುವಣ ಕಲ್ಪವೃಕ್ಷ ಮಿರ್ಪಂತಿರ್ದ ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸ
ಈ || ಮಾರುವವೆಂಬ ಮಾಂಡಳಿಕರೀಯಧರೆಂಬದಟ ವಯಲ್ಲಿ ಮ
ಯೋಲುವವೆಂಬ ಪೂಣಿಗರಡಂಗಿ ಕುನುಂಗಿ ಸಿಡಿಲು ಜೊಲು ಕಾ | ಕ್ಷಾ ನಭಕ್ಕೆ ಪಾಡೆದುದು ಗಂಡರ ನೆತ್ತಿಯೊಳೊತ್ತಿ ಬಾಳನಿ ನ್ಯೂಲುಗುಮೆಂದೊಡೇಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ || ೧೦೯
ಮಧ್ಯೆ ಮಧ್ಯೆ ಓಡಾಡುವ ಸುಮಂಗಲಿಯರು, ಮತ್ತು ಸುತ್ತುವರಿದಿದ್ದ ವೇದಪಂಡಿತರ ಸಮೂಹ ಇವುಗಳಿಂದ ಪಾಂಡು ಮತ್ತು ಕುಂತಿ ಮಾದ್ರಿಯರಲ್ಲಿ ಆದ ವಿವಾಹ ಮಂಗಳಕಾರ್ಯವು ಆಶ್ಚರ್ಯಕರವಾಯಿತು. ೧೦೮. ಕುಂತಿ ಮಾದ್ರಿಯರ ದಟ್ಟವಾದ ಕೂದಲಿನಿಂದ ಕೂಡಿದ ರೆಪ್ಪೆ, ಉದ್ದವಾಗಿರುವ ಹುಬ್ಬು, ದೀರ್ಘವಾದ ಕಣ್ಣು, ಹಗುರವಾಗಿಯೂ ದುಂಡಾಗಿಯೂ ಇರುವ ತುಟಿ, ಸಣ್ಣ ರೇಖೆಗಳಿಂದ ಕೂಡಿದ ಕೊರಳು, ಮುಂದಕ್ಕೆ ಚಾಚಿಕೊಂಡಿರುವ ದಪ್ಪವಾದ ಮೊಲೆ, ತೆಳುವಾದ ಹೊಟ್ಟೆ, ವಿಶೇಷವಾಗಿ ತುಂಬಿಕೊಂಡಿರುವ ಪೃಷ್ಠಭಾಗ, ಹೊಂದಿಕೊಂಡಿರುವ ಒಳತೊಡೆ, ಚಿಕ್ಕತೊಡೆ (ನೆರ್ಕೊರೆಪಟ್ಟೆ?) ಇವುಗಳು ಸೊಗಸಾಗಿವೆ ಎಂದು ಲೋಕವೆಲ್ಲ (ಅವರನ್ನು) ಹೊಗಳಿದವು. ವಾಸ್ತವವಾಗಿ ಕುಂತಿ ಮಾದ್ರಿಗಳು ಹೊಗಳಿಸಿಕೊಳ್ಳುವಂಥವರೇ ಸರಿ. ವll ಹಾಗೆ ಅವರಿಬ್ಬರೂ ಎರಡು ಪಕ್ಕಗಳಲ್ಲಿರಲು ಎರಡು ಕಲ್ಪಲತೆಗಳ ಮಧ್ಯೆಯಿರುವ ಕಲ್ಪವೃಕ್ಷದಂತಿದ್ದ ಪಾಂಡುರಾಜನಿಗೆ ಧೃತರಾಷ್ಟ್ರನು ಅಂಗಹೀನನೆಂಬ ಕಾರಣದಿಂದ (ಕುರುಡನಾಗಿದ್ದುದರಿಂದ) ವಿವಾಹಮಂಗಳದೊಡನೆ ಪಟ್ಟಾಭಿಷೇಕಮಹೋತ್ಸವವೂ ನಡೆಯಿತು. ೧೦೯. ಪಾಂಡುರಾಜನ ಆಜ್ಞೆಯನ್ನು ಮೀರಿ ನಡೆಯುತ್ತೇವೆ' ಎಂಬ ಸಾಮಂತರಾಜರೂ, ಕಪ್ಪಕಾಣಿಕೆಗಳನ್ನು ಕೊಡುವುದಿಲ್ಲವೆಂದ ಶೂರರೂ, ಕಾಳೆಗದಲ್ಲಿ ಪ್ರತಿಭಟಿಸಿ ಯುದ್ಧಮಾಡುವೆವು ಎಂದು ಪ್ರತಿಜ್ಞೆಮಾಡಿದವರೂ ಕುಗ್ಗಿ ಸಿಡಿದು ಕೆಳಕ್ಕೆ ಬಿದ್ದು ಕೋಪವಿರಹಿತರಾಗಲು ಪಾಂಡುರಾಜನ ತೇಜಸ್ಸೆಂಬ ಜಾಜ್ವಲ್ಯಮಾನವಾದ ಬೆಂಕಿಯು ಆಕಾಶಕ್ಕೆ ಚಿಮ್ಮಿತು. ಪಾಂಡುರಾಜನ ಕತ್ತಿಯು ಇನ್ನೂ ಪರಾಕ್ರಮಿಗಳ ಹಣೆಯಲ್ಲಿ ನಾಟಲ್ಪಡುತ್ತಿವೆ ಎಂದಾಗ ಅವನ ಮಹತ್ವ ಎಷ್ಟು ಹಿರಿದೋ! (ಎಂದರೆ ಅವನ ಪ್ರತಾಪಾಗ್ನಿ ಯಾವ ತಡೆಯೂ ಇಲ್ಲದೆ ಅಭಿವೃದ್ಧಿಯಾಗಿ ಆಕಾಶಕ್ಕೆ ಚಿಮ್ಮುತ್ತಿರುವುದರಿಂದ ಅವನ ಮೇಲೆಯು ಅತ್ಯತಿಶಯವಾದುದು ಎಂದು ಭಾವ).
Page #110
--------------------------------------------------------------------------
________________
ಪ್ರಥಮಾಶ್ವಾಸಂ | ೧೦೫ ಮ | ಬೆಸಕೆಯ್ದತ್ತು ಸಮುದ್ರಮುದ್ರಿತಧರಾಚಕ್ರಂ ಪ್ರತಾಪಕ್ಕಗು
ರ್ವಿಸೆ ಗೋಳುಂಡೆಗೊಳುತ್ತುಮಿರ್ದುದು ದಿಶಾಚಕ್ರಂ ಪೊದಟ್ಟಾಜ್ಞೆಗಂ | ಪಸರ್ಗ೦ ಮುನ್ನಮ ರೂಪುವೋದುದು ವಿಯಚ್ಚಕ್ರಂ ಸಮಂತಂಬಿನಂ ಜಸಮಾ ಪಾಂಡುರಮಾದುದಾ ನೃಪರೊಳಾರಾ ಪಾಂಡುರಾಜಂಬರಂ || ೧೧೦
ವಗ ಅಂತು ಪಾಂಡುರಾಜನಧಿಕತೇಜನುಮವನತವೈರಿಭೂಭತ್ಸಮಾಜನುಮಾಗಿ ನಗುತ್ತಿರ್ದೊಂದು ದಿವಸಂ ತೋಪಿನ ಬೇಂಟೆಯನಾಡಲಚೆಯಿಂ ಪೋಗಿ
ಚಂ | ಇನಿಯಳವತ್ತಿಯಿಂದ ಮೃಗಿ ಮಾಡಿ ಮನೋಜಸುಖಕ್ಕೆ ಸೋಲಲಂ
ಏನೆ ನೆರೆಯ ದಿವ್ಯಮುನಿಯುಂ ಮೃಗವಾಗಿ ಮರಲ್ಲು ಕೂಡ ಮ | ಲನೆ ಮೃಗವೆಂದು ಸಾರ್ದು ನನಂ ನಡೆ ನೋಡಿ ನರೇಂದ್ರನೆಚ್ಚು ಭೋಂ ಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ || ೧೧೧
ವ|| ಆಗಳ್ ಪ್ರಳಯದುಳಮುಳ್ಳುವಂತೆ ತನ್ನೆಚ್ಚಂಬು ಮುನಿಕುಮಾರನ ಕನ್ನೊಳಮೆರ್ದೆಯೊಳಮುಕ್ಕೆ ಪೇಟೆಮೆನ್ನನಾವನೆಚ್ಚನೆಂಬ ಮುನಿಯ ಮುನಿದ ಸರಮಂ ಕೇಳು ಬಿಲ್ಲನಂಬುಮನೀಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ
೧೧೦. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವು ಅವನ ಆಜ್ಞೆಯನ್ನು ಸಂಪೂರ್ಣವಾಗಿ ಪಾಲಿಸಿತು. ಅವನ ಶೌರ್ಯಕ್ಕೆ ಹೆದರಿ ದಿಸ್ಮಂಡಲದಲ್ಲಿದ್ದ ರಾಜರೆಲ್ಲ ಗೋಳುಗುಟ್ಟುತ್ತಿದ್ದರು. ಸಂಪೂರ್ಣವಾಗಿ ಎಲ್ಲ ಕಡೆಗೂ ವ್ಯಾಪಿಸಿದ ಅವನ ಆಜ್ಞೆಗೂ ಯಶಸ್ಸಿಗೂ ಆಕಾಶಮಂಡಲವು ಗೂಡಾಗಿ ಪರಿಣಮಿಸಿತು. (ಆವಾಸಸ್ಥಾನವಾಯಿತು) ಎನ್ನುವಾಗ ಅವನ ಧವಳಕೀರ್ತಿ ಸರ್ವಲೋಕವ್ಯಾಪ್ತಿಯಾಯಿತು. ರಾಜರುಗಳಲ್ಲಿ ಪಾಂಡುರಾಜನಿಗೆ ಸಮನಾಗುವವರಾರಿದ್ದಾರೆ? ವ|| ಹಾಗೆ ಆ ಪಾಂಡುರಾಜನು ಅಧಿಕತೇಜಸ್ಸುಳ್ಳವನೂ ನಮಸ್ಕರಿಸಲ್ಪಟ್ಟ ಶತ್ರುರಾಜಸಮೂಹವನ್ನುಳ್ಳವನೂ ಆಗಿ ರಾಜ್ಯಭಾರಮಾಡುತ್ತಿದ್ದು ಒಂದು ದಿವಸ ತೋಹಿನ ಬೇಂಟೆಯೆಂಬುದನ್ನು ಆಡಲು ಆಸಕ್ತನಾಗಿ ಕಾಡಿಗೆ ಹೋದನು. ೧೧೧. ಅಲ್ಲಿ ಕಿಂದಮನೆಂಬ ಋಷಿಯೊಬ್ಬನು ತನ್ನ ಪ್ರಿಯಳನ್ನು ಹೆಣ್ಣು ಜಿಂಕೆಯನ್ನಾಗಿ ಮಾಡಿ ಕಾಮವಶನಾಗಿ ಸಂತೋಷದಿಂದ ಅವಳೊಡನೆ ಕೂಡಿ ಋಷಿಶ್ರೇಷ್ಠನಾದ ತಾನೂ ಗಂಡುಜಿಂಕೆಯ ಆಕಾರವನ್ನು ತಾಳಿ ಉತ್ಸಾಹದಿಂದ ವಿಹರಿಸುತ್ತಿದ್ದನು. ಪಾಂಡುರಾಜನು ಅದು ಜಿಂಕೆಯೆಂದು ಮೆಲ್ಲಗೆ ಅದರ ಹತ್ತಿರ ಬಂದು ಅದರ ಮರ್ಮಸ್ಥಾನವನ್ನು ನೋಡಿ ಗುರಿಯಿಟ್ಟು ಆ ಮೃಗರೂಪದಲ್ಲಿದ್ದ ಆ ಋಷಿಯನ್ನು ತಟ್ಟನೆ ಬಾಣದಿಂದ ಹೊಡೆದು ತನಗೆ ಒಂದು ಮಾರಿಯನ್ನು ತಂದುಕೊಂಡನು. ವ|| ಆಗ ತಾನು ಹೊಡೆದ ಬಾಣವು ಋಷಿಪುತ್ರನ ಕಣ್ಣಿನಲ್ಲಿಯೂ ಎದೆಯಲ್ಲಿಯೂ ಪ್ರಳಯಕಾಲದ ಉಲ್ಕಾಪಾತದಂತೆ ಹೊಳೆಯುತ್ತಿರಲು “ನನ್ನನ್ನು ಯಾರು ಹೊಡೆದನು ಹೇಳಿ' ಎಂಬ ಋಷಿಯ ಕೋಪಧ್ವನಿಯನ್ನು ಕೇಳಿ ಬಿಲ್ಲು ಬಾಣಗಳನ್ನೆಸೆದು ತನ್ನ ಮುಂದೆ ನಿಂತಿದ್ದ ರಾಜನನ್ನು ಮುನಿ ನೋಡಿ
Page #111
--------------------------------------------------------------------------
________________
೧೦೬ | ಪಂಪಭಾರತ - ಉll ಸನ್ನತದಿಂ ರತಕ್ಕೆಳಸಿ ನಲ್ಲಳೊಳೊತೊಡಗೂಡಿದೆನ್ನನಿಂ ' ತನ್ನಯಮಚ್ಚುದರ್ಕೆ ಪೆಜತಿಲ್ಲದು ದಂಡಮೊಣಲ್ಲು ನಲ್ಗಳೊಳ್ |
ನೀನ್ನಡನೋಡಿಯುಂ ಬಯಸಿ ಕೂಡಿಯುಮಾಗಡೆ ಸಾವೆಯಾಗಿ ಪೋ
ಗಿನ್ನೆನೆ ರದ್ರಶಾಪಪರಿತಾಪವಿಲಾಪದೂಳಾ ಮಹೀಶ್ವರಂ || * ವll ಎನ್ನ ಗೆದ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದು.: ಕಂth ಎತ್ತ ವನಮತ ಮಗಯಾ
ವೃತ್ತಕಮಿಾ ತಪಸಿಯತ್ತ ಮೃಗವೆಂದೆಂತಾ | : ನತ್ರಚನಾತ್ತಕರ್ಮಾ ಯತ್ತಂ ಪೆಜತದಲ್ಲಮಘಟತಘಟಿತಂ |
೧೧೩ ವ|| ಎಂದು ಚಿಂತಿಸುತ್ತುಂ ಪೊಬಕ್ಕೆ ಮಗುಟ್ಟುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಜ್ಞೆ ತದ್ಧತ್ತಾಂತಮೆಲ್ಲಮಂ ಪೇಜ್ಜು ಸಮಸ್ತವಸ್ತುಗಳು ದೀನಾನಾಥಜನಂಗಳೆ ಸೂಜಗೊಟ್ಟು ನಿಜಪರಿವಾರಮಂ ಬರಿಸಿಉ|| ಸಾರಮನಂಗ ಜಂಗಮಲತಾ ಲಲಿತಾಂಗಿಯರಿಂದಮಿ ಸಂ.
ಸಾರಮಿದಂಬುದಿನ್ನೆನಗೆ ತಪ್ಪುದು ತನ್ನುನಿ ಶಾಪದಿಂದಮಿ | ನಾರುಮಿದರ್ಕೆ ವಹಿಸದಿರಿಂ ವನವಾಸದೊಳಿರ್ಪನೆಂದು ದು ರ್ವಾರ ಪರಾಕ್ರಮಂ ತಳರೆ ಬಾರಿಸಿವಾರಿಸಿ ಕುಂತಿ ಮಾದ್ರಿಯರ್ || ೧೧೪
೧೧೨. ಸಂಭೋಗಸುಖಕ್ಕಾಸೆಪಟ್ಟು ಪ್ರಿಯಳಲ್ಲಿ ಪ್ರೇಮದಿಂದ ಸೇರಿಕೊಂಡಿದ್ದ ನನ್ನನ್ನು ಹೀಗೆ ಅನ್ಯಾಯದಿಂದ ಹೊಡೆದುದಕ್ಕೆ ನಿನಗೆ ಬೇರೆ ಶಿಕ್ಷೆಯಿಲ್ಲ, ನೀನು ಇನ್ನು ಮೇಲೆ ನಿನ್ನ ಪ್ರಿಯಳಲ್ಲಿ ಪ್ರೀತಿಸಿ ನೋಡಿದಾಗ ಅಥವಾ ಆಸೆಪಟ್ಟು ಕೂಡಿದಾಗ ಸಾಯುತ್ತೀಯೆ ಹೋಗು ಎಂದು ಶಪಿಸಿದನು. ಆ ಭಯಂಕರವಾದ ಶಾಪದಿಂದುಂಟಾದ ದುಃಖದ ಅಳುವಿನಿಂದ ಆ ಪಾಂಡುರಾಜನು ವn ನಾನು ಮಾಡಿದ ಕಾಮಕ್ರೀಡಾವಿಘ್ನಕ್ಕೆ ತಡೆಯಿಲ್ಲದ ಈ ಶಾಪವು ಹಿರಿದೇನಲ್ಲ - ೧೧೩. ಈ ಕಾಡೆಲ್ಲಿಯದು; ಈ ಬೇಟೆಯ ಕಾರ್ಯವೆಲ್ಲಿಯದು, ಈ ತಪಸ್ವಿಯೆಲ್ಲಿಯವನು, ಮೃಗವೆಂದು ನಾನು ಇದನ್ನು ಹೇಗೆ ಹೊಡೆದೆ, ಅಸಂಬದ್ಧವಾದ ಇದೆಲ್ಲ ನನ್ನ ಪ್ರಾಚೀನ ಕರ್ಮಾಧೀನವಲ್ಲದೆ ಬೇರೆಯಲ್ಲ ವ|| ಎಂದು ಯೋಚಿಸುತ್ತ ಪಟ್ಟಣಕ್ಕೆ ಹಿಂದಿರುಗಿ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಆ ಸಮಾಚಾರವನ್ನೆಲ್ಲ ಹೇಳಿ ಸಮಸ್ತವಸ್ತುಗಳನ್ನೂ ದೀನರೂ ಅನಾಥರೂ ಆದ ಜನಗಳಿಗೆ ಉದಾರವಾಗಿ ದಾನಮಾಡಿ ತನ್ನ ಪರಿವಾರವನ್ನು ಬರಮಾಡಿ - ೧೪೪ಸಂಸಾರವು ಸಾರವತ್ತಾಗಿರುವುದು ಮನ್ಮಥನ ನಡೆದಾಡುವ ಬಳ್ಳಿಗಳಂತಿರುವ ಸುಂದರಾಂಗಿಯರಿಂದಲ್ಲವೇ? ಆ ಋಷಿಶಾಪದಿಂದ ಇನ್ನು ಅದು ನನಗೆ ಇಲ್ಲವಾಯಿತು. ವನವಾಸದಲ್ಲಿರುತ್ತೇನೆ. ಇದಕ್ಕೆ ಮತ್ತಾರೂ ಅಡ್ಡಿಮಾಡಬೇಡಿ ಎಂದು ಅಪ್ರತಿಮ ಪರಾಕ್ರಮಿಯಾದ ಆ ಪಾಂಡುರಾಜನು ಕಾಡಿಗೆ ಹೊರಟನು. ಕುಂತಿ ಮಾದ್ರಿಯರು ಅವನನ್ನು ತಡೆದು ತಡೆದು ವನ ಹಿಂದೆ ಹಿಂದೆಯೇ ಬಂದರು.
Page #112
--------------------------------------------------------------------------
________________
ಪ್ರಥಮಾಶ್ವಾಸಂ | ೧೦೭ ವll ಬೆನ್ನ ಬೆನ್ನನೆ ಬರೆ ಚಿನ್ನ ಬಿನ್ನನೆ ಪೋಗಿಖಚರಪುತ ತ ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ
ಭಂಗಮಂ ಮಣಿಮೌಕ್ತಿಕ ನೀಳ ಸ್ಕೂಳ ಶಿಲಾ ಪವಿಭಾಷಿತೋ | ತುಂಗಮಂ ಮುನಿಮುಖಮುಖಾಂಭೋಜೋದರ ನಿರ್ಗತಮಂತ್ರ ಪೂ
ತಾಂಗಮಂ ನೃಪನೆಯ್ದಿದನುದ್ಯಚ್ಛಂಗಮನಾ ಶತಶೃಂಗಮಂ || ೧೧೫
ವ|| ಆ ಪರ್ವತದ ವಿಪುಳ ವನೋಪಕಂಠಂಗಳೊಳ್ ತಾಪಸಕನೈಯರ್ ನಡಪಿದಳಲತೆಗಳೊಳೆಗಿ ತುಲುಗಿ ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ ಪಳಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ಮುನಿಕುಮಾರರೋದುವ ವೇದವೇದಾಂಗಂಗಳಂ ತಪುವಿಡಿದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ ಸುರಭಿಗಳ ತೊರೆದ ಮೊಲೆಗಳನುಣ್ಣವು ಮಳೆಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಣ ಕಿಶೋರ ಕೇಸರಿಗಳುಮಂ ತಮೊಡನೆ ನಲಿದಾಡುವ ಕಿಶೋರಕೇಸರಿಗಳಂ ಪಿಡಿದು ತೆಗೆವ ಕರಿಕಳಭಂಗಳುಮನಾಗಳ ಪಾಯ್ಕ ಪುಲಿಗಳ ಮಳಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತ ಮುತ್ತ ಕುರುಡತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೋಲಮಡಿಪ ಚಪಳ ಕಪಿಗಳುಮಂ ಹೂಮಾಗ್ನಿಯನೆಅಂಕೆಯ ಗಾಳಿಯಿಂ ನಂದಲೀಯದುರಿವುವ ರಾಜಹಂಸಗಳುಮಂ
ಗೆ
೧೧೫, ಎತ್ತರವಾದ ಕಾಡಾನೆಯ ದಂತದ ಪೆಟ್ಟಿನಿಂದ ಉರುಳಿಸಲ್ಪಟ್ಟು ಮುರಿದ ಬೇಲದ ಮರಗಳನ್ನುಳ್ಳುದೂ ಮುತ್ತು ಮತ್ತು ರತ್ನಗಳನ್ನೊಳಗೊಂಡ ನೀಲವೂ ಸ್ಫೂಲವೂ ಆದ ಕಲ್ಲುಬಂಡೆಗಳಿಂದ ಪ್ರಕಾಶಮಾನವಾದುದೂ ಬಹಳ ಎತ್ತರವಾದುದೂ ಋಷಿಶ್ರೇಷ್ಠರ ಮುಖಕಮಲಗಳಿಂದ ಹೊರಹೊರಟ ಮಂತ್ರಗಳಿಂದ ಪವಿತ್ರವಾದ ಶರೀರವುಳ್ಳದೂ ಎತ್ತರವಾದ ಲೋಡುಗಳಿಂದ ಕೂಡಿದುದೂ ಆದ ಶತಶೃಂಗ ಪರ್ವತವನ್ನು ಪಾಂಡುರಾಜನು ಬಂದು ಸೇರಿದನು. ವ|| ಆ ಪರ್ವತದ ತಪ್ಪಲು ಪ್ರದೇಶದಲ್ಲಿ ತಾಪಸಕನೈಯರು ಸಾಕಿ ಬೆಳೆಸಿದ ಬಳ್ಳಿಗಳನ್ನು ಮುತ್ತಿ ಗುಂಪುಗೂಡೆ ಸಾಮವೇದಧ್ವನಿಯ ಶಬ್ದಮಾಡುತ್ತಿರುವ ದುಂಬಿಗಳನ್ನೂ ಫಲಭಾರದಿಂದ ಬಾಗಿದ ಆ ಆಶ್ರಮದ ಗಿಡಗಳ ಮೇಲಿದ್ದು 'ಪ್ರವೇಶಿಸಿ, ಬನ್ನಿ, ಇಲ್ಲಿ ವಾಸಿಸಿ' ಎನ್ನುತ್ತಿರುವ ಹೊಂಬಣ್ಣದ ಕೋಗಿಲೆಗಳನ್ನೂ ಋಷಿಕುಮಾರರು ಅಧ್ಯಯನ ಮಾಡುತ್ತಿರುವ ವೇದವೇದಾಂಗಗಳಲ್ಲಿ ತಪ್ಪನ್ನು ಕಂಡುಹಿಡಿದು ಆಕ್ಷೇಪಿಸಿ ಸರಿಪಡಿಸುವ ಪದ್ಧರಾಗವೆಂಬ ರತ್ನದ ಬಣ್ಣದಿಂದ ಕೂಡಿದ ಶ್ರೇಷ್ಠವಾದ ಗಿಳಿಗಳನ್ನೂ ಹಸುಗಳ ಹಾಲು ತುಂಬಿದ ಕೆಚ್ಚಲುಗಳನ್ನು ಉಣ್ಣುತ್ತಿರುವ ಅವುಗಳ ಕರುಗಳನ್ನು ಪಕ್ಕಕ್ಕೆ ತಳ್ಳಿ ಓರೆಯಾಗಿ ಹಾಲುಕುಡಿಯುತ್ತಿರುವ ಸಿಂಹದ ಮರಿಗಳನ್ನೂ ತಮ್ಮೊಡನೆ ನಲಿದಾಡುತ್ತಿರುವ ಸಿಂಹದ ಮರಿಗಳನ್ನು ಹಿಡಿದೆಳೆಯುವ ಆನೆಯ ಮರಿಗಳನ್ನೂ ಆಗಾಗ ಅಲ್ಲಿ ಎಡೆಯಾಡುತ್ತಿರುವ ಹುಲಿಯ ಮರಿಗಳ ಜೊತೆಯಲ್ಲಿ ಹರಿದಾಡುತ್ತಿರುವ ಜಿಂಕೆಯ ಮರಿಗಳನ್ನೂ ಮತ್ತು ಕುರುಡರಾದ ಮುದಿತಪಸ್ವಿಗಳ ಕೈ ಹಿಡಿದು ಅವರ ಗುಹೆಗಳನ್ನು ಪ್ರವೇಶಮಾಡಿಸುವ ಹಾಗೆಯೇ ಅಲ್ಲಿಂದ ಹೊರಡಿಸುವ ಚಪಳವಾದ ಕಪಿಗಳನ್ನೂ ಹೋಮಾಗ್ನಿಯು ನಂದಿಹೋಗದಂತೆ ತಮ್ಮ ರಕ್ಕೆಯ ಗಾಳಿಯಿಂದ ಬೀಸಿ ಉರಿಸುತ್ತಿರುವ
Page #113
--------------------------------------------------------------------------
________________
೧೦೮ | ಪಂಪಭಾರತಂ ಮುನಿಗಣೇಶ್ವರರೊಡನೆ ದಾಳಿವೂಗೊಮ್ಮೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರದ ತಪಃಪ್ರಭಾವಕ್ಕೆ ಚೋದ್ಯಂಬಟ್ಟುಚಂ| ವಿನಯದಿನಿ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೆ
ಯ್ಯನೆ ಮಣಿದುಂಬಿಗಳ ಮೊರೆವುವಲ್ಲೇಪಂತ ತಳ ಪೂ | ವಿನ ಪೊಸ ಗೊಂಚಲಿಂ ಮರವಿದೇನೆಸೆದಿರ್ದುವೂ ಕಲುವಾಗದೇ
ವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ || ೧೧೬
ವ|| ಎಂದು ಮೆಚ್ಚುತುಮೆನಗೆ ನೆಲಸಿರಲೀ ತಪೋವನಮ ಪಾವನವೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗೆ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವಮ್ರಳಂ ಪಡೆವಂತು ಪರಾಶರಮುನೀಂದ್ರನೋಳ್ ಬರಂಬಡೆದಳೆಂಬುದಂ ಕುಂತಿ ಕೇಳು ತಾನುಂ ಪುತ್ರಾರ್ಥಿನಿಯಾಗಲ್ ಬಗೆದುಚಂ || ಎಸಸನದೊಳ್ ವಿರೋಧಿನೃಪರಂ ತಳೆದೊಟ್ಟಿಲುಮರ್ಥಿಗರ್ಥಮಂ
ಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೋಳ್ | ಪಸರಿಸಲುಂ ಕರಂ ನೆವ ಮಕ್ಕಳನೀಯದೆ ನೋಡೆ ನಾಡೆ ನೋ ಯಸಿದಪುದಿಕ್ಕುಪುಷ್ಪದವೊಲೆನ್ನಯ ನಿಷ್ಕಲ ಪುಷ್ಪದರ್ಶನಂ || ೧೧೭ *
ರಾಜಹಂಸಗಳನ್ನೂ ಮುನೀಂದ್ರ ಸಮೂಹದೊಡನೆ ದಾಳಿಯ ಹೂವನ್ನು ಕುಯ್ಯುವ ಮತ್ತು ಜೊತೆಯಲ್ಲಿ ಬರುವ ಕಪಿಗಳನ್ನೂ ನೋಡಿ ಆ ತಪೋವನದ ತಪಸ್ಸನ್ನೇ ಧನವನ್ನಾಗಿ ಉಳ್ಳ ಆ ಋಷಿಶ್ರೇಷ್ಠರ ತಪ್ಪಿಸಿನ ಪ್ರಭಾವಕ್ಕೆ ಆಶ್ಚರ್ಯಪಟ್ಟನು. ೧೧೬. ಇದೇನು! ಇಲ್ಲಿಯ ದುಂಬಿಯ ಮರಿಗಳು ವಿನಯದಿಂದ ಈ ಕಡೆ ಬನ್ನಿ, ಇಲ್ಲಿರಿ ಎನ್ನುವ ಹಾಗೆ ಮನೋಹರವಾದ ಧ್ವನಿಯಿಂದ ನಿಧಾನವಾಗಿ ಶಬ್ದಮಾಡುತ್ತಿವೆ. ಮರಗಳೂ ತಾವು ಹೊತ್ತಿರುವ ಹೊಸಹೂವಿನ ಗೊಂಚಲಿನ ಭಾರದಿಂದ ಪ್ರೀತಿಯಿಂದ ಒಲಿದು ಬಾಗಿದಂತೆ ಏನು ಸೊಗಸಾಗಿದೆ! ಈ ಪರ್ವತಶ್ರೇಷ್ಠದ ಮರಗಳೂ ಈ ತಪೋಧನರ ಕೈಯಿಂದಲೇ ನಮ್ರತೆಯನ್ನು ಕಲಿತವಾಗಿರಬೇಕಲ್ಲವೇ? ವlು ಎಂದು ಮೆಚ್ಚುತ್ತ ನಾನು ವಾಸವಾಗಿರಲು ಈ ತಪೋವನವೇ ಪವಿತ್ರವಾದುದು ಎಂದು ಆ ತಪೋವನದ ಮುನಿಜನರ ವಿಶೇಷಪ್ರೀತಿಯನ್ನು ಹೆಚ್ಚಿಸಿ ಕಾಮದಲ್ಲಿ ತನಗಿದ್ದ ಪ್ರೀತಿಯನ್ನು ಹೆದರಿ ಓಡಿಹೋಗುವ ಹಾಗೆ ಮಾಡಿ ಆ ಆಶ್ರಮದಲ್ಲಿ ಪಾಂಡುರಾಜನು ಆಶ್ರಮದ ಗುರುವಾಗಿ ಇದ್ದನು. ಈ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ನೂರುಮಕ್ಕಳನ್ನು ಪಡೆಯುವಂತೆ ವ್ಯಾಸಮಹರ್ಷಿಗಳಿಂದ ವರವನ್ನು ಪಡೆದಳೆಂಬುದನ್ನು ಕುಂತಿ ಕೇಳಿ ತಾನೂ ಮಕ್ಕಳನ್ನು ಬಯಸುವವಳಾದಳು. ೧೧೭, ಯುದ್ದದಲ್ಲಿ ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವ ಸಾಮರ್ಥ್ಯವುಳ್ಳ, ಯಾಚಕರಿಗೆ ದ್ರವ್ಯವನ್ನು ಕಸಕ್ಕೆ ಸಮನಾಗಿ ಎಣಿಸಿ ದಾನಮಾಡುವ ತಮ್ಮ ಪರಾಕ್ರಮವನ್ನು ದಿಕ್ಕುಗಳ ಕೊನೆಯಲ್ಲಿಯೂ ಪ್ರಸಾರ ಮಾಡಲು ಸಮರ್ಥರಾದ ಮಕ್ಕಳುಗಳನ್ನು ಕೊಡದೆ ನೋಡು ನೋಡುತ್ತಿರುವ ಹಾಗೆಯೇ ನನ್ನ (ತಿಂಗಳ ಮುಟ್ಟು) ರಜಸ್ವಲೆತನವು ಕಬ್ಬಿನ
Page #114
--------------------------------------------------------------------------
________________
ಪ್ರಥಮಾಶ್ವಾಸಂ | ೧೦೯ ವ|| ಎಂದು ಚಿಂತಾಕ್ರಾಂತಿಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನೇಕಾಂತ ದೂಳಿಂತೆಂದಂ
ಉ| ಚಿಂತೆಯಿದೇನೊ ಸಂತತಿಗೆ ಮಕ್ಕಳ ನೆಟ್ಟನ ಬಾರ್ತಯಪೊಡಿ
ನಿಂತಿರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾ | ತ್ಯಂತ ಪತಿವ್ರತಾಗುಣದಿನರ್ಚಿಸಿ ಮಚ್ಚಿಸು ನೀಂ ದಿಗಂತ ವಿ ಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀll ೧೧೮
ವಗಿ ಎಂದೊಡೆ ಕೊಂತಿಯಿಂತೆಂದಳೆನ್ನ ಕನ್ನಿಕೆಯಾ ಕಾಲದೊಳ್ ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾಮುನಿಯರಮ್ಮ ಮನೆಗೆ ನಿಚ್ಚಂ ಬರ್ಪರವರೆನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ದುದರ್ಕಂ ಮೆಚ್ಚಿ ಮಂತ್ರಾಕ್ಷರಂಗಳನಝಂ ವರವಿತ್ತರೀಯಮ್ಹು ಮಂತ್ರಕಯ್ಯರ್ಮಕ್ಕಳಂ ನಿನ್ನ ಬಗೆಗೆ ಬಂದವರನಾಹ್ವಾನಂ ಗೆಯ್ಯಲವರ ಪೋಲ್ವೆಯ ಮಕ್ಕಳು ಪಡವೆಯೆಂದು ಬೆಸಸಿದೊಡೀಗಳೆನ್ನ ಪುಣ್ಯದಿಂ ದೊರೆಕೊಂಡು ದೊಳ್ಳಿತ್ತೆಂಬುದಂ ದಿವ್ಯಮುನಿಮಾಕ್ಕಮಮೋಘವಾಕ್ಕಮಕ್ಕುಮದರ್ಕೆನುಂ ಚಿಂತಿಸಲ್ವೇಡೆಂದೂಡಂತ ಗೆನೆಂದು ತೀರ್ಥಜಲಂಗಳಂ ಮಿಂದು ದಳಿಂಬವನುಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳಿರ್ದು
ಹೂವಿನಂತೆ ನಿಷ್ಪಲವಾಯಿತು. ವ|| ಎಂಬ ಚಿಂತೆಯಿಂದ ಕೂಡಿದ್ದ ಕುಂತಿಯನ್ನು ನೋಡಿ ಪಾಂಡುರಾಜನು ರಹಸ್ಯವಾಗಿ ಹೀಗೆಂದು ಹೇಳಿದನು. ೧೧೮. ಕೃಶೋದರಿಯಾದ ಎಲ್ ಕುಂತಿಯೇ ಈ ಚಿಂತೆಯೇಕೆ ನಿನಗೆ? ನಮ್ಮ ವಂಶಕ್ಕೆ ನೇರವಾಗಿ ಪುತ್ರಸಂತಾನದ ಪ್ರಾಪ್ತಿಯಾಗಬೇಕಾದರೆ ಇನ್ನು ಮೇಲೆ ನೀನು ಹೀಗಿರಬೇಡ; ಋಷಿಶ್ರೇಷ್ಠರಿಂದ ನಿನ್ನ ಇಷ್ಟಾರ್ಥಸಿದ್ದಿಯಾಗುವ ಹಾಗೆ ನಿನ್ನ ವಿಶೇಷವಾದ ಪತಿವ್ರತಾಗುಣದಿಂದ ನೀನು ಪೂಜೆಮಾಡಿ ಅವರನ್ನು ಮೆಚ್ಚಿಸು. ದಿಕ್ಕುಗಳ ಕೊನೆಯವರೆಗೆ ವ್ಯಾಪ್ತಿಯಾದ ಯಶಸ್ಸಿನಿಂದ ಕೂಡಿದ ಶ್ರೇಷ್ಠರಾದ ಮಕ್ಕಳನ್ನು ಪಡೆಯುತ್ತೀಯೆ ವರಿ ಎಂದು ಹೇಳಲು ಕುಂತಿಯು ಹೀಗೆಂದಳು - ನಾನು ಕನ್ನಿಕೆಯಾಗಿ ನನ್ನ ಮಾವನಾದ ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರುವಾಗ ದುರ್ವಾಸ ಮಹರ್ಷಿಗಳು ನಮ್ಮ ಮನೆಗೆ ಪ್ರತಿದಿನವೂ ಬರುತ್ತಿದ್ದವರು ನನ್ನ ವಿನಯಕ್ಕೂ ಭಕ್ತಿಗೂ ಸೇವೆ ಮಾಡಿದುದಕ್ಕೂ ಮೆಚ್ಚಿ ಅಯ್ದು ಮಂತ್ರಾಕ್ಷರಗಳನ್ನು ವರವಾಗಿ ಕೊಟ್ಟರು. ಈ ಅಯ್ತು ಮಂತ್ರಕ್ಕೂ ನಿನ್ನ ಮನಸ್ಸಿಗೆ ಬಂದವರನ್ನು ನೆನೆದು ಆಹ್ವಾನ ಮಾಡಲು ಅವರನ್ನು ಹೋಲುವ ಅಯ್ದು ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಕೊಡಿಸಿದರು. ಈಗ ಅದು ನನ್ನ ಪುಣ್ಯದಿಂದ ದೊರೆಕೊಂಡುದು ಒಳ್ಳೆಯದಾಯಿತು ಎಂದು ಹೇಳಿದಳು. ಪಾಂಡುವು 'ದಿವ್ಯಋಷಿಗಳ ಮಾತು ಬಹುಬೆಲೆಯುಳ್ಳದ್ದು; ಅದಕ್ಕೇನೂ ಯೋಚಿಸಬೇಡ, ಹಾಗೆಯೇ ಮಾಡು' ಎಂದನು. ಕುಂತಿಯು ಹಾಗೆಯೇ ಮಾಡುತ್ತೇನೆಂದು ಹೇಳಿ ಪವಿತ್ರತೀರ್ಥಗಳಲ್ಲಿ ಸ್ನಾನಮಾಡಿ ಶುಭ್ರವಸ್ತ್ರವನ್ನು ಧರಿಸಿ ಮುತ್ತಿನ ಆಭರಣವನ್ನು ತೊಟ್ಟು ದರ್ಭೆಯಿಂದ ಮಾಡಿದ ಹಾಸಿಗೆ ಮೇಲಿದ್ದು
Page #115
--------------------------------------------------------------------------
________________
೧೧೦ | ಪಂಪಭಾರತಂ
ಉ
ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂ ತಾನಮನೋದಿಯೋದಿ ಯಮರಾಜನನದ್ಭುತತೇಜನಂ ಸರೋ 1 'ಜಾನನೆ ಜಾನದಿಂ ಬರಿಸಿ ಬಂದು ಯಮಂ ಬೆಸನಾವುದಾವುದಾ ತ್ಯಾನುಗತಾರ್ಥವೆಂದೊಡೆನಗೀವುದು ನಿನ್ನನೆ ಪೋಲ್ವ ಪುತ್ರನಂ || ೧೧೯
ವ|| ಎಂಬುದುಂ ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ
ಚಂ || ಹಿಮ ಧವಳಾತಪತ್ರಮನ ಪೋಲೆ ಮುಖೇಂದುವ ಬೆಳು ಪೂರ್ಣ ಕುಂ ಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪ ಪತಾಕೆಯೊಂದು ವಿ| ಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಗೊಂಡುದವಳೆ ಗರ್ಭ ಚಿ, ಹಮ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ || ೧೨೦
ವ|| ಅಂತು ಕೊಂತಿಯ ಗರ್ಭಭಾರಮುಂ ತಾಪಸಾಶ್ರಮದನುರಾಗಮುಮೊಡನೊಡನೆ ಬಳೆಯ ಬಂಧುಜನದ ಮನೋರಥಂಗಳುಮೊಂಬತ್ತನೆಯ ತಿಂಗಳುಮೊಡನೊಡನೆ ನೆಲೆಯ
ಕಂ
ವನನಿಧಿಯಿಂದ ಚಂದ್ರ
ವಿನತೋದರದಿಂ ಗರುತನುದಯಾಚಳದಿಂ | ದಿನಪನೊಗವಂತ ಪುಟ್ಟದ
ನನಿವಾರ್ಯ ಸುತ್ತೇಜನೆನಿಪನಿನಜನ ತನಯಂ ।।
360
೧೧೯, ಋಷಿಶ್ರೇಷ್ಠನಾದ ದುರ್ವಾಸನು ಕೊಟ್ಟ ಮಂತ್ರಸಮೂಹವನ್ನು ಜ್ಞಾನದಿಂದ ಏಕಾಗ್ರಚಿತ್ತದಿಂದ ಪಠನಮಾಡಿ ಕಮಲಮುಖಿಯಾದ ಆ ಕುಂತಿಯು ಅದ್ಭುತವಾದ ತೇಜಸ್ಸಿನಿಂದ ಕೂಡಿದ ಯಮರಾಜನನ್ನು ಆಹ್ವಾನಿಸಿದಳು. ಯಮನು ಬಂದು 'ಮಾಡಬೇಕಾದ ಕಾರ್ಯವಾವುದು ನಿನ್ನ ಇಷ್ಟಾರ್ಥವೇನು' ಎಂದನು. 'ನಿನ್ನನ್ನು ಹೋಲುವ ಮಗನನ್ನು ನನಗೆ ದಯಪಾಲಿಸಬೇಕು' ಎಂದಳು. ವl ಯಮಭಟ್ಟಾರಕನ 'ತಥಾಸ್ತು' ಎಂದು ತನ್ನಂಶವನ್ನು ಅವಳ ಗರ್ಭದಲ್ಲಿ ಇಳಿಸಿಟ್ಟು ಮರೆಯಾದನು. ಆಗ ೧೨೦. ಅವಳ ಮುಖಕಮಲದ ಬಿಳುಪು ಹಿಮದಂತೆ ಬೆಳ್ಳಗಿರುವ ಶ್ವೇತಚ್ಛತ್ರವನ್ನು ಸೂಚಿಸಿತು. ಕಪ್ಪು ಸ್ತನಗಳು ಪೂರ್ಣಕುಂಭಗಳ ಆಕಾರವನ್ನು ಪಡೆದವು. ಹುಬ್ಬಿನ ವಿಸ್ತಾರವು ಧ್ವಜದ ವಿಸ್ತಾರವನ್ನು ಪ್ರದರ್ಶಿಸಿತು. ಅವಳ ಗರ್ಭದಲ್ಲಿರುವ ಬಾಲಕನ ಮುಂದಣ ರಾಜ್ಯಚಿಹ್ನವನ್ನು ಸೂಚಿಸುವಂತೆ ಅವಳಿಗೆ ಗರ್ಭಚಿಹ್ನೆಗಳುಂಟಾದವು. ವ|| ಹಾಗೆ ಕುಂತಿಯ ಗರ್ಭಭಾಗವೂ ಆ ತಪಸ್ವಿಗಳ ಆಶ್ರಮದ ಪ್ರೀತಿಯೂ ಜೊತೆಜೊತೆಯಲ್ಲಿಯೇ ಅಭಿವೃದ್ಧಿಯಾಗುತ್ತಿರಲು ಅವಳ ಬಂಧುಜನದ ಇಷ್ಟಾರ್ಥವೂ ಒಂಬತ್ತನೆಯ ತಿಂಗಳೂ ಒಟ್ಟಿಗೆ ಪೂರ್ಣವಾದುವು. ೧೨೧. ಸಮುದ್ರದಿಂದ ಚಂದ್ರನೂ ವಿನತಾದೇವಿಯ ಹೊಟ್ಟೆಯಿಂದ ಗರಿಡನ ಉದಯಪರ್ವತದಿಂದ ಸೂರ್ಯನೂ ಹುಟ್ಟುವಂತೆ ತೇಜೋಮೂರ್ತಿಯಾದ ಯಮಪುತ್ರನು ಜನಿಸಿದನು.
Page #116
--------------------------------------------------------------------------
________________
ಪ್ರಥಮಾಶ್ವಾಸಂ / ೧೧೧ ಪುಟ್ಟುವುದುಂ ಧರ್ಮಮುಮೊಡ ವುಟ್ಟಿದುದೀತನೂಳೆ ಧರ್ಮನಂಶದೊಳೀತಂ | ಪುಟ್ಟದನೆಂದಾ ಶಿಶುಗೊಸೆ |
ದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಹೆಸರುಂ | ವ|| ಅಂತು ಪಸರನಿಟ್ಟು, ಪರಕೆಯಂ ಕೊಟ್ಟುಕಂ 1 ಸಂತಸದಿನಿರ್ದು ಮಕ್ಕಳ
ಸಂತತಿಗೀ ದೂರೆಯರಿನ್ನುವಾಗದೊಡೆಂತು | ಸಂತಸಮನಗಿಲ್ಲಂದಾ ಕಾಂತೆ ಸುತಭ್ರಾಂತ ಮುನ್ನಿನಂತೆವೊಲಿರ್ದಳ್ ಮಂತ್ರಾಕ್ಟರ ನಿಯಮದಿನ) ಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂ || ಮಂತ್ರ ಪೇಟನೆ ಕುಡು ರಿಪು
ತಂತಕ್ಷಯಕರನನೆನಗೆ ಹಿತನಂ ಸುತನಂ || ವ|| ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕೊಗದೊಡಾತನಂಶಮಾಕೆಯ ಗರ್ಭ ಸರೋವರದೊಳಗೆ ಚಂದ್ರಬಿಂಬದಂತ ಸೊಗಯಿಸಚoll , ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡವಂದುವಾನನೇಂ
ದುವ ಕಡುವಳು ಕೂಸಿನ ನೆಗಟಿಯ ಬೆಳ್ಳುವೊಲಾಯ್ತು ಮುನ್ನ ಬ | ಳ್ಳುವ ನಡು ತೋರ್ಪ ಮಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪ ಇವಳೆ ಮುಚ್ಚದಂದದೋ ಚೂಚುಕಮಾಂತುದು ಕರ್ಪನಾಕೆಯಾ || ೧೨೫
೧೨೨. ಇವನು ಹುಟ್ಟಲಾಗಿ ಇವನೊಡನೆಯೇ ಧರ್ಮವೂ ಹುಟ್ಟಿತು. ಯಮಧರ್ಮನ', ಅಂಶದಿಂದ ಈತ ಹುಟ್ಟಿದ್ದಾನೆ ಎಂದು ಆ ಋಷಿಸಮೂಹವು ಆ ಮಗುವಿಗೆ ಪ್ರೀತಿಯಿಂದ ಧರ್ಮಸುತನೆಂಬ ಹೆಸರನ್ನಿಟ್ಟಿತು. ವ|| ಹಾಗೆ ಹೆಸರಿಟ್ಟು ಹರಕೆಯನ್ನು ಕೊಟ್ಟರು ೧೨೩. ಸಂತೋಷದಿಂದಿದ್ದು ಮಕ್ಕಳ ಸಂತತಿಗೆ ಇವನಿಗೆ ಸಮಾನರಾದ ಇನ್ನೂ ಇತರರೂ ಆಗದಿದ್ದರೆ ಹೇಗೂ ನನಗೆ ಸಂತೋಷವಿಲ್ಲ ಎಂದು ಮಕ್ಕಳ ' . ಭ್ರಮೆಯಿಂದ ಕೂಡಿದ ಆ ಕುಂತಿಯು ಮೊದಲಿನ ಹಾಗೆಯೇ ಇದ್ದಳು. ೧೨೪.: ಅಲ್ಲದೆ, ಮಂತ್ರಾಕ್ಷರವನ್ನು ಜಪಿಸುವ ವಿಧಿಯಿಂದ ವಾಯುದೇವನನ್ನು ಆಹ್ವಾನಿಸಿ ಬರಿಸಲಾಗಿ ಅವನು 'ಇಷ್ಟಾರ್ಥವೇನು ಹೇಳು' ಎನ್ನಲು 'ವೈರಿಸೈನ್ಯವನ್ನು ನಾಶಪಡಿಸುವವನು ಎನ್ನಿಸಿಕೊಳ್ಳುವ ಹಿತನಾದ ಮಗನನ್ನು ಕೊಡು' ಎಂದಳು., ವ ವಾಯುದೇವನು 'ಇದೇನು ಮಹಾ ದೊಡ್ಡದು. ಕೊಟ್ಟಿದ್ದೇನೆ' ಎಂದು ಹೇಳಿ ಆಕಾಶಪ್ರದೇಶಕ್ಕೆ ನೆಗೆಯಲು, ಆತನಂಶವು ಅವಳ ಗರ್ಭಸರೋವರದಲ್ಲಿ ಚಂದ್ರಬಿಂಬದಂತೆ ಸೊಗಯಿಸಿತು. ೧೨೫. ಅವಳ ಹೊಟ್ಟೆಯ ಮೇಲಿನ ಮೂರು ಮಡಿಪು (ರೇಖೆಗಳೂ ವೈರಿರಾಜರ ಸಂತೋಷವೂ (ಒಟ್ಟಿಗೆ) ನಾಶವಾದುವು. ಅವಳ ಮುಖದಲ್ಲಿರುವ ಹೆಚ್ಚಾದ ಬಿಳುಪುಬಣ್ಣವು ಗರ್ಭದಲ್ಲಿರುವ ಮಗುವಿನ ಯಶಸ್ಸಿನ
Page #117
--------------------------------------------------------------------------
________________
೧೧೨/ ಪಂಪಭಾರತಂ
ಆ ಸುದತಿಯ ಮೃದು ಪದ ವಿ ನಾಸಮುಮಂ ಶೇಷನಾನಲಾರದೆ ಸುಯಂ | ಬೇಸನೆಂದೂಡ ಗರ್ಭದ ಕೂಸಿನ ಬಳೆದಳವಿಯಳವನಳೆವರುಮೂಳರೇ ||
೧೨೬ ವ|| ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳಂತಕಾಲಂ ದೊರೆಕೊಳ್ಳಂತೆ ಪ್ರಸೂತಿ ಕಾಲಂ ದೊರಕೊಳೆಕಂ|| ಶುಭ ತಿಥಿ ಶುಭ ನಕ್ಷತ್ರ
ಶುಭ ವಾರಂ ಶುಭ ಮುಹೂರ್ತಮನ ಗಣಕನಿಳಾ | ಪ್ರಭುವೊಗದನುದಿತ ಕಾಯ. ಪ್ರಭೆಯೊಗೆದಿರೆ ದಳಿತ ಶತ್ರುಗೋತ್ರಂ ಪುತ್ರ | ಭೀಮಂ ಭಯಂಕರಂ ಪಃ ಈ ಮಾತೀ ಕೂಸಿನಂದಮಿಾತನ ಹೆಸರುಂ || ಭೀಮನೆ ಪೋಗನೆ ಮುನಿಜನ ಮಾ ಮಾಯಿನಾಯ್ತು ಶಿಶುಗೆ ಪೆಸರನ್ವರ್ಥಂ ||
೧೨೮ ವ|| ಅಂತು ಭರತಕುಲತಿಲಕರಪ್ಪಿರ್ವಮ್ರಕ್ಕಳಂ ಪೆತ್ತು ಕೊಂತಿ ಸಂತಸದಂತ ಮನೆಯ್ದಿರ್ಪುದುಮತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳು ತನ್ನ ಗರ್ಭ೦ ತಡೆದುದರ್ಕೆ ಕಿಸಿ ಕಿರಿಕಿರಿವೋಗಿ
೧೨೭
೧೨೭
ಬಿಳಿಯ ಬಣ್ಣದಂತಾಯಿತು. ಮೊದಲು ಬಳುಕುತ್ತಿದ್ದ ನಡುವು ದಪ್ಪನಾದ ಆಕಾರವನ್ನು ಪಡೆಯಿತು. ಅವಳ ಮೊಲೆಯ ತೊಟ್ಟು ಚಿನ್ನದ ಕಲಶವನ್ನು ಹೊಂಗೆಯ ಚಿಗುರಿನಿಂದ ಮುಚ್ಚಿದಂತೆ ಕಪ್ಪುಬಣ್ಣವನ್ನು ತಾಳಿತು. ೧೨೬. ಸುಂದರವಾದ ದಂತಪಂಕ್ತಿಯಿಂದ ಕೂಡಿದ ಆ ಕುಂತಿಯು ಮೃದುವಾದ ಹೆಜ್ಜೆಯಿಡುವುದನ್ನು ಆದಿಶೇಷನು ತಾಳಲಾರದೆ ಕಷ್ಟದಿಂದ ನಿಟ್ಟುಸಿರು ಬಿಟ್ಟನು, ಎಂದರೆ ಗರ್ಭದಲ್ಲಿರುವ ಕೂಸು ಬೆಳೆದ ಅಳತೆಯ ಪ್ರಮಾಣವನ್ನು ಅಳೆಯುವವರೂ ಇದ್ದಾರೆಯೇ? (ಇಲ್ಲವೆಂದೇ ಅರ್ಥ) ವ ಹಾಗೆ ಗರ್ಭವು ಬೆಳೆಯುತ್ತಿದ್ದೆಡೆಯಲ್ಲಿ ಶತ್ರುಗಳಿಗೆ ಅವಸಾನಕಾಲವುಂಟಾಗುವ ಹಾಗೆ ಹೆರಿಗೆಯ ಕಾಲವು ಸಮೀಪಿಸಲು -೧೨೭. ಜೋಯಿಸನು ಶುಭತಿಥಿ, ಶುಭನಕ್ಷತ್ರ, ಶುಭಮುಹೂರ್ತ ಎಂದು ಹೇಳುತ್ತಿರಲು ಜೊತೆಯಲ್ಲಿಯೇ ಹುಟ್ಟಿದ ಶರೀರಕಾಂತಿಯು ಹರಡುತ್ತಿರಲು ಲೋಕಕ್ಕೆಲ್ಲ ರಾಜನೂ ಶತ್ರುಸಂಹಾರಕನೂ ಆದ ಮಗನು ಹುಟ್ಟಿದನು. ೧೨೮, ಈ ಮಗುವಿನ ರೀತಿ ಅತಿಭಯಂಕರವಾದುದು. ಬೇರೆಯ ಮಾತೇನು? ಅವನ ಹೆಸರು ಕೂಡ ಭೀಮನೆಂದೇ ಆಗಲಿ ಎಂದು ಋಷಿಗಳು ಎನ್ನಲು ಅದೇ ರೀತಿ ಆ ಶಿಶುವಿಗೆ ಹೆಸರು ಅನ್ವರ್ಥವಾಗಿಯೇ (ಅರ್ಥಕ್ಕೆ ಹೊಂದಿಕೊಳ್ಳುವ ಹಾಗೆ) ಭೀಮನೆಂದಾಯಿತು. ವll ಹಾಗೆ ಭರತಕುಲತಿಲಕರಾದ ಇಬ್ಬರು ಮಕ್ಕಳನ್ನು ಹೆತ್ತು (ಪಡೆದು) ಕುಂತಿಯು ಸಂತೋಷದ ಪರಮಾವಧಿಯನ್ನು ಹೊಂದಿರಲು ಆ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ಕೇಳಿ ತನ್ನ ಗರ್ಭವು ತಡವಾದುದಕ್ಕೆ
Page #118
--------------------------------------------------------------------------
________________
ಕಂ।।
ಪ್ರಥಮಾಶ್ವಾಸಂ | ೧೧೩
ಸಂತತಿಗೆ ಪಿರಿಯ ಮಕ್ಕಳ
ನಾಂ ತಡೆಯದೆ ಪಡವೆನೆಂದೊಡಂ ಮುನ್ನಂ | ಕೊಂತಿಯ ಪಡೆದಳ ಗರ್ಭದ
ಚಿಂತೆಯದಿನ್ನೇವುದೆಂದು ಬಸಿಂ ಪೊಸೆದಳ್ ||
ಪೊಸದೊಡೆ ಪಾಲ್ಗಡಲಂ ಮಗು
ಅಸುರ ಪೊಸೆದಲ್ಲಿ ಕಾಳಕೂಟಾಂಕುರಮಂ || ದಸದಳಮೊಗೆದಂತೊಗೆದುವು
ಬಸಿಂ ನೂಂದು ಪಿಂಡಮರುಣಾಕೀರ್ಣ೦ ||
೧೨೯
ಚಂ | ಒದವುಗೆ ನಿನ್ನ ಸಂತತಿಗೆ ನೂರ್ವರುದರ ಸುತರ್ಕಳೊಂದೆ ಗ
020
ವ|| ಅವಂ ಕಂಡು ಕಿನಿಸಿ ಪರ್ಚೆಟ್ಟಿವೆಲ್ಲವಂ ಪೊಗೆ ಬಿಸುಟು ಬನ್ನಿಮೆಂಬುದುಂ ವ್ಯಾಸಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ
ರ್ಭದೊಳನ ಕೆಮ್ಮನಿಂತು ಪೊಸದಿಕ್ಕಿದೆ ಪೊಲ್ಲದುಗೆಯೆಯೆಂದು ಮಾ ಣದ ಮುನಿ ನೂಲುಪಿಂಡಮುಮನಾಗಳ ತೀವಿದ ಕಮ್ಮನಪ್ಪ ತು ಪದ ಕೊಡದೊಳ್ ಸಮಂತು ಮಡಗಿದ್ದೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ ||
೧೩೧
ವ|| ಅಂತು ನೂರ್ವರೊಳೊರ್ವನಗುರ್ಬು ಪರ್ಬಿ ಪರಕಲಿಸಿ ಸಂಪೂರ್ಣ ವಯಸ್ಕನಾಗಿ ಧೃತಘಟವಿಘಟನುಮಾಗೆ ಪುಟ್ಟುವುದುಂ
ಕೋಪಿಸಿ ಕಿರಿಕಿರಿಯಾಗಿ -೧೨೯. ವಂಶಕ್ಕೆ ಹಿರಿಯರಾದ ಮಕ್ಕಳನ್ನು ನಾನು (ಸಾವಕಾಶವಿಲ್ಲದೆ) ಮೊದಲು ಪಡೆಯುತ್ತೇನೆಂದಿದ್ದರೆ ನನಗಿಂತ ಮುಂಚೆ ಕುಂತಿಯೇ ಪಡೆದಳು. ಇನ್ನು ಮೇಲೆ ಗರ್ಭದ ಚಿಂತೆಯದೇಕೆ ಎಂದು ಹೊಟ್ಟೆಯನ್ನು ಕಿವುಚಿದಳು. ೧೩೦. ಕ್ಷೀರಸಮುದ್ರವನ್ನು ಪುನಃ ರಾಕ್ಷಸರು ಕಡೆಯಲು ಅಂದು ಕಾಳಕೂಟವೆಂಬ ವಿಷದ ಮೊಳಕೆ ಅತಿಶಯವಾಗಿ ಹುಟ್ಟಿದ ಹಾಗೆ ಗಾಂಧಾರಿಯ ಗರ್ಭದಿಂದ ರಕ್ತದಿಂದ ತುಂಬಿದ ನೂರೊಂದು ಭ್ರೂಣಗಳು ಹುಟ್ಟಿದುವು. ವ! ಅವನ್ನು ನೋಡಿ ಕೋಪಿಸಿ ಬೆಂಕಿಬೆಂಕಿಯಾಗಿ ಇವುಗಳೆಲ್ಲವನ್ನೂ ಹೊರಗೆ ಬಿಸಾಡಿಬನ್ನಿ ಎಂದು ಹೇಳಲು ವ್ಯಾಸಮಹರ್ಷಿಯು ಬಂದು ಗಾಂಧಾರಿಯನ್ನು ಗದರಿಸಿ-೧೩೧, 'ನಿನ್ನ ಸಂತತಿಗೆ ಒಂದೇ ಗರ್ಭದಲ್ಲಿ ನೂರುಜನ ಶ್ರೇಷ್ಠರಾದ ಮಕ್ಕಳು ಹುಟ್ಟಲಿ ಎಂದಿರಲು ನಿಷ್ಟ್ರಯೋಜನವಾಗಿ ಹೀಗೆ ಹೊಟ್ಟೆಯನ್ನು ಕಿವುಚಿಬಿಟ್ಟೆ, ಅಯೋಗ್ಯವಾದುದನ್ನು ಮಾಡಿದೆ' ಎಂದು ಬಿಡದೆ ಆ ಋಷಿಯು ಆ ನೂರು ಭ್ರೂಣಗಳನ್ನು ಆಗಲೇ ಗಮಗಮಿಸುವ ತುಪ್ಪದಿಂದ ತುಂಬಿದ ಕೊಡದಲ್ಲಿ ಸುರಕ್ಷಿತವಾಗಿಡಿಸಿದನು. ಸಮಸ್ತಲೋಕಕ್ಕೂ ಆಶ್ಚರ್ಯವುಂಟಾಗುವ ಹಾಗೆ ಅವುಗಳು ಅಲ್ಲಿ ಬೆಳೆದವು. ವ|| ಆ ನೂರುಜನರಲ್ಲಿ ಒಬ್ಬನು ಭಯವು ಹಬ್ಬಿ ಹರಡುವ ಹಾಗೆ ತುಂಬಿದ ಪ್ರಾಯವುಳ್ಳವನಾಗಿ ತುಪ್ಪದ ಕೊಡವನ್ನು (ಮಡಕೆ) ಒಡೆದುಕೊಂಡು ಹುಟ್ಟಿ ಬಂದನು.
Page #119
--------------------------------------------------------------------------
________________
೧೧೪ | ಪಂಪಭಾರತಂ ಕಂ || ಪ್ರತಿಮೆಗಳುವು ಮೊಲಗಿದು
ದತಿ ರಭಸದ ಧಾತ್ರಿ ದೆಸೆಗಳುರಿದುವು ಭೂತ | ಪ್ರತತಿಗಳಾಡಿದುವೊಳದು
ವತಿ ರಮ್ಯಸ್ಥಾನದೊಳ್ ಶಿವಾ ನಿವಹಂಗಳ್ || ವli ಅಂತೊಗೆದನೇಕೋತ್ಸಾತಂಗಳಂ ಕಂಡು ಮುಂದಳೆವ ಚದುರ ವಿದುರನಿಂತೆಂದಂಕಂ!! ಈತನೆ ನಮ್ಮ ಕುಲಕ್ಕಂ
ಕೇತು ದಲಾನಳೆವೆನಲ್ಲದಂಕಿನಿತು ! ತಾತಂ ತೋರ್ಪುವು ಬಿಸುಡುವು ದೀತನ ಪೆಜಿಗುಟಿದ ಸುತರೆ ಸಂತತಿಗಪ್ಪರ್ ||
೧೩೩ ವ|| ಎಂದೆಡ೦ ಪುತ್ರವೆಹ ಕಾರಣವಾಗಿ ಧೃತರಾಷ್ಟ್ರನಂ ಗಾಂಧಾರಿಯುಮೇಗೆಯುಮೊಡಂಬಡದಿರ್ದೊಡುತ್ತಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ ಮಹಾ ಬ್ರಾಹ್ಮಣರಿಂದ ಬಳೆಯಿಸಿ ಬದ್ದವಣಮಂ ಬಾಜಿಸಿ ಮಂಗಳಮಂ ಮಾಡಿಸಿ ಕೂಸಿಂಗೆ ದುರ್ಯೊಧನನೆಂದು ಹೆಸರನಿಟ್ಟು ಮತ್ತಿನ ಕೂಸುಗಳೆಲ್ಲಂ ದುಶ್ಯಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟುಮll ಸುಕಮಿರ್ಪನ್ನೆಗಮಿತ್ತ ಕುಂತಿ ಶತಶೃಂಗಾದೀಂದ್ರದೊಳ್ ದಿವ್ಯ ಬಾ
ಲಕನಿನ್ನೊರ್ವನನುಗ್ರವೈರಿ ಮದವನಾತಂಗ ಕುಂಭಾರ್ದ ಮಾ | ಕಿಕ ಲಗೊಜ್ಜಲ ಬಾಣನಂ ಪ್ರವಿಲಸದ್ಗೀರ್ವಾಣ ದಾತವ್ಯ ಸಾ| ಯಕ ಸಂಪೂರ್ಣ ಕಲಾಪ್ರವೀಣನನಿಳಾಭಾರ ಕ್ಷಮಾಕ್ಕೂಣನಂ ೧೩೪
೧೩೨. ಆಗ (ಅರಮನೆಯಲ್ಲಿದ್ದ ವಿಗ್ರಹಗಳು ರೋದನಮಾಡಿದುವು; ಬಹು ರಭಸದಿಂದ ಭೂಮಿಯು ಗುಡುಗಿತು. ದಿಕ್ಕುಗಳು ಹತ್ತಿ ಉರಿದುವು; ಪಿಶಾಚಿಗಳ ಸಮೂಹವು ಕುಣಿದಾಡಿದುವು, ಅತಿಮನೋಹರವಾದ ಸ್ಥಳಗಳಲ್ಲೆಲ್ಲ ನರಿಯ ಗುಂಪುಗಳು ಕೂಗಿಕೊಂಡವು. ವ|| ಹಾಗೆ ಉಂಟಾದ ಅನೇಕ ಉತ್ಪಾತ (ಅಪಶಕುನ)ಗಳನ್ನು ಕಂಡು ಭವಿಷ್ಯಜ್ಞಾನಿಯೂ ಬುದ್ದಿವಂತನೂ ಆದ ವಿದುರನು ಹೀಗೆಂದನು. ೧೩೩. ಈತನೇ ನಮ್ಮ ವಂಶವನ್ನು ಹಾಳುಮಾಡುವ ಕೇತುಗ್ರಹ; ಹಾಗಿಲ್ಲದಿದ್ದರೆ ಏಕೆ ಇಷ್ಟು ದುರ್ನಿಮಿತ್ತಗಳಾಗುತ್ತಿದ್ದುವು. ಇವನನ್ನು ಹೊರಗೆ ಎಸೆಯುವುದು. ಇವನ ಹಿಂದೆಯ ಉಳಿದವರೇ ವಂಶೋದ್ಧಾರಕರಾಗುತ್ತಾರೆ. ವl ಎಂಬುದಾಗಿ ಹೇಳಿದರೂ ಪುತ್ರಮೋಹ ಕಾರಣದಿಂದ ಧೃತರಾಷ್ಟ್ರನೂ ಗಾಂಧಾರಿಯೂ ಏನು ಮಾಡಿದರೂ (ಎಸೆಯುವುದಕ್ಕೆ ಒಪ್ಪದಿರಲು ಉತ್ಪಾತಶಾಂತಿಗಾಗಿಯೂ ಮಂಗಳವರ್ಧನಕ್ಕಾಗಿಯೂ ಶಾಂತಿಕರ್ಮಗಳನ್ನು ಬ್ರಾಹ್ಮಣರಿಂದ ಮಾಡಿಸಿ ಮಂಗಳ ವಾದ್ಯವನ್ನು ಹಾಡಿಸಿ ಕೂಸಿಗೆ ದುರ್ಯೊಧನನೆಂದು ಹೆಸರಿಟ್ಟು ಉಳಿದ ಮಕ್ಕಳಿಗೆಲ್ಲ ದುಶ್ಯಾಸನನೇ ಮೊದಲಾದ ಹೆಸರುಗಳನ್ನಿಟ್ಟು ಆಶೀರ್ವಾದ ಮಾಡಿದರು. ೧೩೪. ಈ ಕಡೆ ಶ್ರೇಷ್ಠವಾದ ಶತಶೃಂಗಪರ್ವತದಲ್ಲಿ ಕುಂತಿಯು ಭಯಂಕರನಾದ ಶತ್ರುಗಳೆಂಬ ಮದ್ದಾನೆಗಳ ಒದ್ದೆಯಾದ ಮುತ್ತುಗಳು ಅಂಟಿಕೊಂಡಿರುವ ಉಜ್ವಲವಾದ
Page #120
--------------------------------------------------------------------------
________________
ಪ್ರಥಮಾಶ್ವಾಸಂ / ೧೧೫ ವ|| ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನಮೋಘ ಪಡವನೆಂಬುದ್ಯೋಗಮ ನೆತ್ತಿಕೊಂಡು ಪಾಂಡುರಾಜನುಂ ತಾನುಂ
ಚoll ಎಜಗಿಯುತೂರ್ಮ ದಿವ್ಯ ಮುನಿಗಾರ್ತುಪವಾಸಮನಿರ್ದುಮರ್ಮ ಕೂ
ಝಳಕೆಯ ಪೂಗಳಿಂ ಶಿವನನರ್ಚಿಸಿಯುಂ ಬಿಡದೂರ್ಮ ನೋಂತು || ದಳವರ ಪೇಟ್ಟಿ ನೋಂಪಿಗಳನೂರ್ಮ ಪಲರ್ಮಯುಮಿಂತು ತಮ್ಮ ಮ “ವಿನಮಿರ್ವರುಂ ನಮದರೇನವರ್ಗಾದುದೊ ಪುತ್ರದೋಹಳಂ || ೧೩೫
ಅಲಸದೆ ಮಾಡಿ ಬೇಸಜದ ಸಾಲುಮಿದೆನ್ನದೆ ಮಯೋಗಕ್ಕೆ ಪಂ | ಬಲಿಸದೆ ನಿದ್ದೆಗೆಟ್ಟು ನಿಡು ಜಾಗರದೊಳ್ ತೊಡರ್ದಕ ಪಾದದೂಳ್ | ಬಲಿದುಪವಾಸದೊಳ್ ನಮದು ನೋಂಪಿಗಳೂ ನಿಯಮ ಕ್ರಮಂಗಳಂ ಸರಿಸಿದರಂತು ನೋನದ ಗುಣಾರ್ಣವನಂ ಪಡೆಯಲೆ ತೀರ್ಗುಮ್ II೧೩೬
ವ! ಅಂತೂಂದು ವರ್ಷಂಬರಂ ಭರಂಗೆಯು ನೋಂತು ಪೂರ್ವಕ್ರಮದೊಳೊಂದು ದಿವಸಮುಪವಾಸಮನಿರ್ದಗಣ್ಯ ಪುಣ್ಯತೀರ್ಥಜಲಂಗಳಂ ಮಿಂದು ದಳಿಂಬಮನುಟ್ಟು ದರ್ಭಶಯನದೊಳಿರ್ದು
ಬಾಣಗಳನ್ನುಳ್ಳವನೂ ದೇವತೆಗಳಿಂದ ಕೊಡಲ್ಪಟ್ಟ ದಿವ್ಯಾಸ್ತಪ್ರಯೋಗದಲ್ಲಿ ಸಂಪೂರ್ಣ ನಿಪುಣ ನಾಗಿರುವವನೂ ರಾಜ್ಯಭಾರಮಾಡುವ ಶಕ್ತಿಯಲ್ಲಿ ಸ್ವಲ್ಪವೂ ಊನವಿಲ್ಲದವನೂ ವ|| ಹಾಗೆಯೇ ಸರ್ವಲಕ್ಷಣ ಸಂಪೂರ್ಣನೂ ಆದ ಮಗನನ್ನು ಬೆಲೆಯಿಲ್ಲದ ರೀತಿಯಲ್ಲಿ ಪಡೆಯಬೇಕೆಂಬ ಕಾರ್ಯದಲ್ಲಿ ತೊಡಗಿ ಪಾಂಡುರಾಜನೂ ತಾನೂ ೧೩೫: ಒಂದು ಸಲ ದಿವ್ಯಮುನಿಗಳಿಗೆ ನಮಸ್ಕಾರಮಾಡಿಯೂ ಮತ್ತೊಂದು ಸಲ ಉಪವಾಸವಿದ್ದೂ ಬೇರೊಂದು ಸಲ ಪ್ರಸಿದ್ಧವಾದ ಹೂವುಗಳನ್ನು ಕೊಯ್ದು ಶಿವನನ್ನು ಆರಾಧಿಸಿಯೂ ಇನ್ನೊಂದು ಸಲ ಶಾಸ್ತ್ರಜ್ಞರು ಹೇಳಿದ ವ್ರತಗಳನ್ನು ನಿರಂತರ ನಡೆಯಿಸಿಯೂ ಒಂದುಸಲವೂ ಅನೇಕಸಲವೂ ತಮ್ಮಶರೀರವು ಕೃಶವಾಗುವ ಹಾಗೆ: , ಇಬ್ಬರೂ ನಮೆದರು. ಅವರಿಗೆ ಮಕ್ಕಳನ್ನು ಪಡೆಯಬೇಕೆಂಬ ಆಶೆ ಅತ್ಯಧಿಕವಾಯಿತು. ೧೩೬, ಆಲಸ್ಯವಿಲ್ಲದೆ ವ್ರತ ಮಾಡಿ, ಬೇಸರಿಕೆಯಿಂದ ಇದು ಸಾಕು ಎನ್ನದೆ, ಶರೀರಸುಖಕ್ಕೆ ಹಂಬಲಿಸದೆ, ನಿದ್ದೆಗೆಟ್ಟು, ದೀರ್ಘವಾದ ಜಾಗರಣೆಗಳಲ್ಲಿ ಸೇರಿಕೊಂಡು, ಒಂದು ಕಾಲಿನಲ್ಲಿ ನಿಂತುಕೊಂಡು, ಉಪವಾಸದಿಂದ ಕೃಶರಾಗಿ ವ್ರತಗಳಲ್ಲಿ ನಿಯಮವನ್ನು ತಪ್ಪದೆ ಪಾಲಿಸಿದರು. ಹಾಗೆ ವ್ರತಮಾಡದೆ ಗುಣಸಮುದ್ರನಾದ ಅರ್ಜುನನನ್ನು (ಆ ಬಿರುದಿನಿಂದ ಕೂಡಿದ ಅರಿಕೇಸರಿಯನ್ನು) ಪಡೆಯಲು ಸಾಧ್ಯವೇ? ವ!! ಹಾಗೆ ಒಂದು ವರ್ಷದವರೆಗೆ ಶ್ರದ್ದೆಯಿಂದ ವ್ರತಮಾಡಿ ಹಿಂದಿನ ರೀತಿಯಲ್ಲಿಯೇ ಒಂದು ದಿವಸ ಉಪವಾಸವಿದ್ದು ಲೆಕ್ಕವಿಲ್ಲದಷ್ಟು ಪುಣ್ಯತೀರ್ಥಗಳಲ್ಲಿ ಸ್ನಾನಮಾಡಿ ಭೌತವಸ್ತವನ್ನುಟ್ಟು ದರ್ಭದ ಹಾಸಿಗೆಯ ಮೇಲಿದ್ದು
Page #121
--------------------------------------------------------------------------
________________
೧೧೬ / ಪಂಪಭಾರತಂ
ಮ||
ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀ ಫೇನಮು ಜ್ವಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಮಂ | ಗಲತಾ ಲಾಲಿತ ಸಾಂದ್ರ ಚಂದನರಸಂ ಬೆಲ್ಲಿಂಗಳೆಂಬೊಂದು ಪಂ ಬಲ ಬಂಬಲೆಡೆಯಾಗಿ ಬೆಳಸದನಂ ಕಪ್ಪಿತಾ ಕಾಂತೆಯಾ || 022
ವ| ಅಂತು ತನ್ನ ಕೈಕೊಂಡ ಬೆಳಸದನದೊಳ್ ಕೀರ್ತಿಯಂ ವಾಯುಮನನು ಕರಿಸಿ ಮಂತ್ರಾಕ್ಷರ ನಿಯಮದೊಳಿಂದ್ರನಂ ಬರಿಸಿ
ಕಂ | ನೆನದ ಮನಂ ಪಳಗುತಿದ
ತನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದ | ತನ ನೆಯ್ದಿಲೊಳನಲರ್ದ
ತೆನೆ ಕಣ್ಣಳ ಬಳಗಮಾಗಳಿಂದಂ ಬಂದಂ ||
ಬೆಸನೇನೇಗೆಯ್ದುದೊ ನಿನ
ಗೊಸದೇನಂ ಕುಡುವುದೆಂದೊಡೆಂದಳ್ ಮಕ್ಕಳ್ || ಒಸಗೆಯನನಗೀವುದು ನಿ
ನೆಸಕದ ಮಸಕಮನ ಪೋಲ್ಟ ಮಗನಂ ಮಘವಾ ||
020
OLE
ವ|| ಎಂಬುದುಮಾಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಣುಮಂ ಧರಾತಳದ ತಿಣ್ಣುಮನಾದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ
ವ್ರತವನ್ನು ಪಾಲಿಸಿದಳು. ೧೩೭. ಅವಳ ಶುಭ್ರವಾದ ಹಲ್ಲೇ ಮಿಂಚಿನ ಗೊಂಚಲು, ಧರಿಸಿರುವ ರೇಷ್ಮೆಯ ವಸ್ತ್ರವೇ ಗಂಗಾನದಿಯ ಬಿಳಿಯ ನೊರೆ, ಚಂಚಲವಾಗಿ ಅಲುಗಾಡುತ್ತಿರುವ ಮುತ್ತಿನ ಹಾರದ ಕಾಂತಿಪ್ರಸರವೂ ಅಂಗಕ್ಕೆ ಲೇಪಿಸಿಕೊಂಡಿರುವ ಗಟ್ಟಿಯಾದ ಶ್ರೀಗಂಧದ ರಸವೂ ಬೆಳುದಿಂಗಳೆಂಬ ಸಂದೇಹಕ್ಕೆ ಅವಕಾಶವಾಗಿರಲು ಆ ಕುಂತೀದೇವಿಯ ಬಿಳಿಯ ಬಣ್ಣದ ಅಲಂಕಾರವು ಕಣ್ಣಿಗೆ ಮನೋಹರವಾಗಿದ್ದಿತು. ವ|| ಹಾಗೆ ತಾನು ಅಂಗೀಕರಿಸಿದ ಬಿಳಿಯ ಬಣ್ಣದ ಅಲಂಕಾರದಲ್ಲಿ ಯಶೋಲಕ್ಷ್ಮಿಯನ್ನೂ ವಾಕ್ಲಕ್ಷ್ಮಿಯಾದ ಸರಸ್ವತಿಯನ್ನೂ ಅನುಕರಿಸಿ ಮಂತ್ರಾಕ್ಷರಗಳನ್ನು ಸಕ್ರಮವಾಗಿ ಪಠಿಸಿ ಇಂದ್ರನನ್ನು ಬರಮಾಡಿದಳು. ೧೩೮. ಧ್ಯಾನಮಾಡಿದ ಮನಸ್ಸು ಹಿಂದೆ ಉಳಿಯಿತು ಎನ್ನುವ ಹಾಗೆಯೂ ಪ್ರಕಾಶಮಾನವಾದ ರತ್ನಕಾಂತಿಯು ಕಾಮನ ಬಿಲ್ಲಾಗಿ ನೆಗೆದು ತೋರಿತು ಎನ್ನುವ ಹಾಗೆಯೂ ಅವನ ಸಾವಿರ ಕಣ್ಣುಗಳ ಸಮೂಹವು ನೆಯ್ದಿಲೆಯ ಕೊಳವು ಅರಳಿತು ಎನ್ನುವ ಹಾಗೆಯೂ ಇರಲು ಆಗ ಇಂದ್ರನು ಬಂದನು. (ಅಂದರೆ ಇಂದ್ರನು ಕುಂತಿಯ ಮನೋವೇಗವನ್ನೂ ಮೀರಿ ರತ್ನಕಿರೀಟಗಳ ಕಾಂತಿಯಿಂದಲೂ ಅರಳಿಸಿಕೊಂಡಿರುವ ಸಾವಿರ ಕಣ್ಣುಗಳಿಂದಲೂ ಬಂದನೆಂಬುದು ಭಾವ), ೧೩೯. ಅಪ್ಪಣೆಯೇನು? ಏನು ಮಾಡಬೇಕು? ನಿನಗೆ ಪ್ರೀತಿಯಿಂದ ಏನನ್ನು ಕೊಡಲಿ? ಎಂದು ಇಂದ್ರನು ಕೇಳಲು ಕುಂತಿಯು ಹೇಳಿದಳು. ಇಂದ್ರದೇವಾ ಮಕ್ಕಳ ನಲಿವನ್ನೂ ನಿನ್ನ ಪರಾಕ್ರಮಕ್ಕೆ ತಕ್ಕ ಶೌರ್ಯವುಳ್ಳ ಮಗನನ್ನು ಕೊಡಬೇಕು ಎಂದಳು. ವ|| ಅವಳು ಆಶೆಪಟ್ಟಂತೆಯೇ ಒಪ್ಪಿಕೊಂಡು 'ಕುಲಪರ್ವತಗಳ ಭಾರವನ್ನೂ ಭೂಮಿಯ ತೂಕವನ್ನೂ ಸೂರ್ಯನ ತೇಜಸ್ಸಿನ
Page #122
--------------------------------------------------------------------------
________________
ಪ್ರಥಮಾಶ್ವಾಸಂ | ೧೧೭ ಸೌಭಾಗ್ಯಮುಮಂ ಕಲ್ಬತರುವಿನುದಾರಶಕ್ತಿಯುಮನೀಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳನಮುಮಂ ಸಿಂಹದ ಕಲಿತನಮುಮನವರವರ ದೆಸೆಗಳಿಂ ತೆಗೆದೊಂದುಮಾಡಿ ಕೊಂತಿಯ ದಿವ್ಯಗರ್ಭೋದರಮೆಂಬ ಶುಕ್ಕಿಪುಡೋದರದೊಳ್ ತನ್ನ ದಿವ್ಯಾಂಶಮಂಬ ಮುಕ್ತಾಫಲೋದ ಬಿಂದುವನಿಂದ ಸಂಕ್ರಮಿಸಿ ನಿಜನಿವಾಸಕ್ಕೆ ಪೋದನನ್ನೆಗಮಿತ್ತ ಕೊಂತಿಯುಮಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿಚಂ 1 ಕುಡಿವುದನೇಣುಮಂಬುಧಿಯುಮಂ ಕುಲಶೈಲಕುಳಂಗಳಂ ತರು
ಛಡರ್ವುದನೊಂದು ಬಾಳ ರವಿ ತನ್ನಯ ಸೋಗಿಲ ಮಗ ರಾಗದಿಂ | ಪೊಡರ್ವುದನಂತ ದಿಕ್ಕರಿಗಳಂಬುಜಪತ್ರ ಪುಟಾಂಬುವಿಂ ಬೆಡಂ ಗಡಸಿರೆ ಮಜನಂಬುಗಿಪುದಂ ಸತಿ ಕಂಡೊಸೆದ ನಿಶಾಂತದೂಳ್ lo೪೦
ವ|| ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳಮುಪಿದೊಡವರಾ ಕನಸುಗಳೆ ಸಂತೋಷಂಬಟ್ಟುಚoll ಕುಡಿವುದಕೆಂದಮಬ್ದಗಳನಬಿಪರೀತ ಮಹೀಶನಂ ತಗು
ಛಡರ್ವುದಂ ಕುಲಾದ್ರಿ ಪರಿವೇಷ್ಟಿತನಂ ತರುಣಾರ್ಕನಂ | ಪೊಡರ್ವುದಂದಮಂದುಮುದಿತೋದಿತನಂ ದಿಗಿಭಂಗಳೆಂಟು ತೊಡರಿಸಿ ಮಜನಂಬುಗಿಸೆ ಕಂಡುದಂ ಕಮಲಾಭಿರಾಮನ೦ | ೧೪೧
ಆಧಿಕ್ಯವನ್ನೂ ಚಂದ್ರನ ಕಾಂತಿಯನ್ನೂ ಮನ್ಮಥನ ಸೌಭಾಗ್ಯವನ್ನೂ ಕಲ್ಪವೃಕ್ಷದ ಔದಾರ್ಯವನ್ನೂ ಈಶ್ವರನ ಪ್ರಭುಶಕ್ತಿಯನ್ನೂ ಯಮನ ಶೌರ್ಯವನ್ನೂ ಸಿಂಹದ ಪರಾಕ್ರಮವನ್ನೂ ಅವು ಒಂದೊಂದರಿಂದಲೂ ತೆಗೆದು ಒಟ್ಟಿಗೆ ಶೇಖರಿಸಿ ಕುಂತಿಯ ಶ್ರೇಷ್ಠವಾದ ಗರ್ಭವೆಂಬ ಮುತ್ತಿನ ಚಿಪ್ಪಿನ ಒಳಗಡೆ ತನ್ನ ದಿವ್ಯಾಂಶವೆಂಬ ಮುತ್ತಿನ ಹನಿಯನ್ನು ಬೆರಸಿಟ್ಟು ಇಂದ್ರನು ತನ್ನ ವಾಸಸ್ಥಳಕ್ಕೆ ಹೋದನು. ಅಷ್ಟರಲ್ಲಿ ಈ ಕಡೆ ಕುಂತಿಯು ಮುಂದಿನ ಬೆಳಗಿನ ಜಾವದಲ್ಲಿ ಸುಖನಿದ್ರೆಯನ್ನು ಹೊಂದಿ ೧೪೦. ರಾತ್ರಿಯ ಕೊನೆಯ ಭಾಗದಲ್ಲಿ ತಾನು ಸಪ್ತಸಮುದ್ರಗಳನ್ನು ಕುಡಿಯುವುದನ್ನೂ ಸಪಕುಲಪರ್ವತಗಳನ್ನು ಕ್ರಮವಾಗಿ ಹತ್ತುವುದನ್ನೂ ಬಾಲಸೂರ್ಯನು ತನ್ನ ಮಡಲಿನಲ್ಲಿ ಸಂತೋಷವಾಗಿ ಹೊರಳಾಡುವುದನ್ನೂ ಹಾಗೆಯೇ ದಿಗ್ಗಜಗಳನ್ನೂ ಕಮಲಪತ್ರದ ಮೇಲಿರುವ ನೀರಿನಿಂದ ಸುಂದರವಾಗಿ ಕಾಣುತ್ತಿರುವ ಸರೋವರದಲ್ಲಿ ಸ್ನಾನಮಾಡಿಸುತ್ತಿರುವುದನ್ನೂ ಸ್ವಪ್ನದಲ್ಲಿ ಕಂಡು ಸಂತೋಷಪಟ್ಟಳು. ವ ಹಾಗೆ ಕನಸನ್ನು ಕಂಡು ಋಷಿಕುಮಾರರು ಪಠಿಸುವ ವೇದಘೋಷದಿಂದ ಎಚ್ಚೆತ್ತು ಪಾಂಡುರಾಜನಿಗೂ ಅಲ್ಲಿದ್ದ ಋಷಿಸಮೂಹಕ್ಕೂ ಆ ಕನಸಿನ ವಿಷಯವನ್ನು ತಿಳಿಸಲು ಅವರು ಆ ಕನಸುಗಳಿಗೆ ಸಂತೋಷಪಟ್ಟು ಅದರ ಅರ್ಥವನ್ನು (ಸಂಕೇತ) ವಿವರಿಸಿದರು. ೧೪೧. ಸಪ್ತಸಮುದ್ರಗಳನ್ನು ಕುಡಿಯುವುದರಿಂದ ಸಮುದ್ರವು ಬಳಸಿದ ಭೂಮಿಗೆ ಒಡೆಯನನ್ನೂ ಕುಲಪರ್ವತಗಳನ್ನು ಹತ್ತುವುದರಿಂದ ಕುಲಪರ್ವತಗಳಿಂದ ಸುತ್ತುವರಿಯಲ್ಪಟ್ಟ ರಾಜ್ಯವನ್ನುಳ್ಳವನನ್ನೂ ಬಾಲಸೂರ್ಯನು ಮಡಿಲಿನಲ್ಲಿ ಹೊರಳಾಡುವುದರಿಂದ ಏಕಪ್ರಕಾರದ ಅಭಿವೃದ್ಧಿಯನ್ನು ಪಡೆಯುವನನ್ನೂ ಎಂಟು
Page #123
--------------------------------------------------------------------------
________________
೧೧೮ ) ಪಂಪಭಾರತಂ
ವರೆ ಇಂತಪ್ಪ ಮಗನಂ ನೀನಮೋಘಂ ಪಡವೆಯಂದು ಮುನಿಜನಂಗಳ್ ಪೇಟ್ಟ ಶುಭ ಸಪಘಲಂಗಳೊಡನೊಡನೆ ಗರ್ಭಚಿಹಂಗಳುಂ ತೂತಿ ಪಗವರ ಪೆಂಡಿರ ಮೊಗಂಗಳುಮಾಕಯ ಕುಚಚೂಚುಕಂಗಳುಮೊಡನೊಡನೆ ಕಂದಿದುವಾಕೆಯ ವಳಿತ್ರಯಂಗಳುಂ ಪಗೆವರ ಶತ್ರಯಂಗಳುಮೊಡನೊಡನೆ ಕಟ್ಟುವಾಕೆಯ ಬಾಸೆಗಳುಂ ಪಗೆವರ ಬಾಟ್ಟಾಸೆಗಳುಮೊಡನೊಡನಸಿಯವಾದುವಾಕೆಯ ಮಂದಗಮನಮುಂ ಪಗೆವರ ಮನಂಗಳುಮೊಡನೊಡನಲಸಿಕೆಯ ಕೈಕೊಂಡುವಾಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಮೊಡನೊಡನೆ ಕಟ್ಟುವ ಸಮಯದೊಳ್ಉ || ಉಚಿಂದ ಬಾಳೊಳಾತ್ಮ ಮುಖಬಿಂಬಮನತ್ತಿಯ ನೋಡಲುಂ ಮನಂ |
ಪರ್ಚಿ ಧನುರ್ಲತಾ ಗುಣ ನಿನಾದಮನಾಲಿಸಿ ಕೇಳಲು ಮನಂ || ಬೆರ್ಚದ ಸಿಂಹ ಪೋತಕಮನೋವಲುಮಾಕಯ ದೋಹಳಂ ಕರಂ ಪರ್ಚದುದಾ ಗುಣಾರ್ಣವನ ಮುಂದಣ ಬೀರಮನಂದ ತೋರ್ಪಲ||
ವll ಮತ್ತಮೇಲಂ ಸಮುದ್ರಗಳ ನೀರನೊಂದುಮಾಡಿ ಮಾಯಲುಂ ವೇಳಾ ವನ ಲತಾಗೃಹೋದರ ಪುನಸ್ಥಳ ಪರಿಸರಪ್ರದೇಶದೊಳ್ ತೋಚಲಲುಮಟ್ಟಿಯಾಗ
ದಿಗ್ಗಜಗಳನ್ನೂ ಶೋಭಾಯಮಾನವಾಗಿ ಸ್ನಾನ ಮಾಡಿಸುವುದನ್ನು ಕಂಡುದರಿಂದ ಕಮಲದಂತೆ ಆಕರ್ಷಕವಾದ ಸೌಂದರ್ಯವುಳು ಮಗನನ್ನು ವ ನೀನು ಪಡೆಯುತ್ತೀಯೆ ಎಂದು ಮುನಿಜನಗಳು ಹೇಳಿದ ಶುಭಸ್ವಪ್ನಫಲಗಳ ಜೊತೆಯಲ್ಲಿಯೇ ಗರ್ಭಚಿಹ್ನೆಗಳೂ ತೋರಲಾಗಿ ಶತ್ರುರಾಜರಸ್ತ್ರೀಯರ ಮುಖವೂ ಆಕೆಯ ಮೊಲೆಯ ತೊಟ್ಟುಗಳೂ ಒಟ್ಟಿಗೆ ಕಂದಿದುವು (ಕಪ್ಪಾದವು). ಆಕೆಯ ಹೊಟ್ಟೆಯ ಮೂರು ಮಡಿಪುಗಳೂ ಶತ್ರುರಾಜರ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬ ಶಕ್ತಿತ್ರಯಗಳ ಜೊತೆ ಜೊತೆಯಲ್ಲಿಯೇ ನಾಶವಾದುವು. ಆಕೆಯ ಬಾಸೆಗಳೂ (ಹೊಕ್ಕುಳಿನಿಂದ ಎದೆಯವರೆಗಿರುವ ಕೂದಲಿನ ಸಾಲು) ಶತ್ರುಗಳ ಬಾಳುವ ಆನೆಗಳೂ ಜೊತೆಜೊತೆಯಲ್ಲಿಯೇ ಕೃಶವಾದುವು. ಆಕೆಯ ಮಂದಗಮನವೂ ಶತ್ರುಗಳ ಮನಸ್ಪೂ ಜೊತೆ ಜೊತೆಯಲ್ಲಿಯೇ ಆಲಸ್ಯವನ್ನು ಹೊಂದಿದುವು. ಆಕೆಯ ನಡುವಿನ ಬಡತನವೂ (ಸಣ್ಣದಾಗಿರುವಿಕೆ-ಕೃಶತೆ) ಶತ್ರುಗಳ ಐಶ್ವರ್ಯವೂ ಜೊತೆಯಲ್ಲಿಯೇ " ಕೆಟ್ಟವು; ಆ ಸಮಯದಲ್ಲಿ ೧೪೨. ಮುಂದಿನ ಗುಣಾರ್ಣವನ' - (ಅರ್ಜುನನ-ಅರಿಕೇಸರಿಯ) ವೀರ್ಯವನ್ನು ಆ ದಿನವೇ ತೋರ್ಪಡಿಸುವಂತೆ ಕುಂತಿಯ ಬಸಿರ ಬಯಕೆಯು ಒರೆಗಳೆದ ಕತ್ತಿಯಲ್ಲಿ ತನ್ನ ಮುಖಮಂಡಲವನ್ನು ನೋಡಿಕೊಳ್ಳುವುದಕ್ಕೂ ಉತ್ಸಾಹದಿಂದ ಬಿಲ್ಲಿನ ಟಂಕಾರಶಬ್ದವನ್ನು ಮನವಿಟ್ಟು ಕೇಳುವುದಕ್ಕೂ ಸ್ವಲ್ಪವೂ ಹೆದರದೆ ಸಿಂಹದ ಮರಿಯನ್ನು ಸಲಹುವುದಕ್ಕೂ ಆಶೆಪಟ್ಟು ವಿಶೇಷವಾಗಿ ಹೆಚ್ಚಿತು ವll ಮತ್ತು ಸಮುದ್ರಗಳ ನೀರನ್ನು ಒಟ್ಟಿಗೆ ಸೇರಿಸಿ ಸ್ನಾನಮಾಡಲೂ ಸಮುದ್ರದ ಅಂಚಿನಲ್ಲಿರುವ ಕಾಡಿನಲ್ಲಿಯೂ ಬಳ್ಳಿವನೆಗಳ ಒಳಭಾಗದಲ್ಲಿಯೂ ಮರಳುದಿಣ್ಣೆಗಳ ಸುತ್ತಲೂ ಎಡೆಯಾಡಲೂ ಆಶೆಯಾಯಿತು.
Page #124
--------------------------------------------------------------------------
________________
ಕಂ||
ಪ್ರಥಮಾಶ್ವಾಸಂ / ೧೧೯ ಬಳದ ನಿತಂಬದ ಕಾಂಚೀ ಕಳಾಪಮಂ ಕಟ್ಟಲಣಮ ನೆಯದಿದಂದ | ಗಳಿಸಿ ಕುಳಿಕೆಗಳಿನೇಂ ಕ ಜೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭ೦ 11 ೧೪೩
ವlt ಅಂತು ತಕ್ಕನೆ ತೀವಿದ ಮೆಯೊಳಲರ್ದ ಸಂಪಗೆಯರಲಂತ ಬೆಳರ್ತ ಬಣ್ಣ ಗುಣಾರ್ಣವಂಗೆ ಮಾಡಿದ ಬಣದಂತ ಸೊಗಯಿಸಿ ಬೆಳೆದು
ಕಂ|| ತುಡುಗಗಳ ಸರಿಗಯುಮಂ
ಕಡುವಿಣಿತನಿಸಿ ನಡೆದುಮೊರಡಿಯನಣಂ || ನಡೆಯಲುಮಾಜದ ಕೆಮ್ಮನೆ ಬಿಡದಾರಯ್ಯನಿತುಮಾಗೆ ಬಳೆದುದು ಗರ್ಭ೦ ||
ವll ಅಂತಾ ಬಳೆದ ಗರ್ಭದೊಳ್ ಸಂಪೂರ್ಣಪ್ರಸವಸಮಯಂ ದೊರೆಕೊಳೆ ಗ್ರಹಂಗಳಲ್ಲಂ ತಂತಮುಚ್ಚಿ ಸ್ನಾನಂಗಳೊಳಿರ್ದು ಪಡ್ವರ್ಗ ಸಿದ್ಧಿಯನುಂಟುಮಾಡೆ ಶುಭಲಗೋದಯದೊಳ
ಕotರ
ಭರತಕುಲ ಗಗನ ದಿನಕರ ನರಾತಿಕುಳಕಮಳಹಿಮಕರಂ ಶಿಶು ತೇಜೋ | ಎರಚನೆಯುಂ ಕಾಂತಿಯುಮಾ ವರಿಸಿರೆ ಗರ್ಭೋದಯಾದ್ರಿಯಂದುದಯಿಸಿದಂ ||
೧೪೫
೧೪೩. ತುಂಬಿ ಬೆಳೆದ ಪೃಷ್ಟಭಾಗದಿಂದ ನಡುಕಟ್ಟನ್ನು ಕಟ್ಟಲೂ ಸ್ವಲ್ಪವೂ ಸಾಧ್ಯವಿಲ್ಲವೆನ್ನುವ ರೀತಿಯಲ್ಲಿ ಆ ಸೌಭಾಗ್ಯಶಾಲಿನಿಯಾದ ಕುಂತಿಯ ಗರ್ಭವು ಬೆಳೆದು ವಿಶೇಷವಾದ ನೂಲಿನ ಕುಳಿಕೆಗಳಿಂದ ಅತಿ ಮನೋಹರವಾಯಿತು. ವ|| ಹಾಗೆ ಪೂರ್ಣವಾಗಿ ತುಂಬಿಕೊಂಡ ಮೈಯಲ್ಲಿ ಅರಳಿದ ಸಂಪಗೆಯ ಹೂವಿನಂತೆ ಬಿಳುಪಾದ ಬಣ್ಣವು ಗುಣಾರ್ಣವನಿಗೆ ಮಾಡಿದ ಬಣ್ಣದಂತೆಯೇ ಸೊಗಸಾಗಿ ಬಳೆದು ೧೪೪. ಅವಳು ಧರಿಸಿರುವ ಆಭರಣಗಳಲ್ಲಿ ಒಂದು ಸರಿಗೆಯೂ ಬಹುಭಾರವುಳ್ಳದ್ದೆನಿಸಿ ಓಡಾಡಲು ಒಂದು ಹೆಜ್ಜೆಯನ್ನೂ ಇಡಲಾರದೆ ಸುಮ್ಮನೆ ಹಿಂದಿರುಗಿ ನೋಡುವಷ್ಟು ಗರ್ಭವು ಬೆಳೆಯಿತು. ವಹಾಗೆ ಬೆಳೆದ ಗರ್ಭದಲ್ಲಿ ತುಂಬಿದ ಹೆರಿಗೆಯ ಕಾಲವು ಪ್ರಾಪ್ತವಾಗಲು ನವಗ್ರಹಗಳೆಲ್ಲ ತಮ್ಮ ತಮ್ಮ ಉಚ್ಚಸ್ಥಾನಗಳಲ್ಲಿದ್ದು ಲಗ್ನ, ಹೋರಾ, ದ್ರೇಕ್ಕಾಣ, ನವಾಂಶ, ದ್ವಾದಶಾಂಶ ಮತ್ತು ತ್ರಿಂಶಾಂಶಗಳೆಂಬ ಷಡ್ವರ್ಗಗಳ ಸಿದ್ದಿಯನ್ನುಂಟುಮಾಡಿದ ಶುಭಲಗ್ನ ಪ್ರಾಪ್ತವಾದಾಗ ೧೪. ಭರತವಂಶವೆಂಬ ಆಕಾಶಕ್ಕೆ ಸೂರ್ಯನೂ ಶತ್ರುಗಳ ವಂಶವೆಂಬ ತಾವರೆಗೆ ಚಂದ್ರನೂ ಆದ ಶಿಶುವು ತೇಜಸ್ಸಿನ ರಚನೆಯ ಪ್ರಕಾಶವೂ ತುಂಬಿರಲು ಗರ್ಭವೆಂಬ
Page #125
--------------------------------------------------------------------------
________________
೧೨೦) ಪಂಪಭಾರತಂ
ಉದಯಿಸುವುದುಮಮೃತಾಂಶುವಿ 'ನುದಯದೊಳಂಭೋಧಿ ವೇಲೆ ಭೋರ್ಗರೆವವೂಲೋ | ರ್ಮೊದಲೆಸೆದುವು ಘನಪಥದೊಳ್ ದಶಕರಾಹತಿಯಿನೊಡನೆ ಸುರದುಂದುಭಿಗಳ್ ||
೧೪೬ ವ|| ಅಂತು ಮೊಲಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಳಿಕೊಂಡು ಕಂ || ದೇವರ ಪಟಗಳ ರವದೊಳ್
ದೇವರ ಸುರಿವರಲ ಸರಿಯ ಬೆಳ್ಳರಿಯೊಳ್ ತ | ದೇವ ವಿಮಾನಾವಳಿಯೋ
ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ | ೧೪೭ ವ|| ಅಂತು ಹಿರಣ್ಯಗರ್ಭಬ್ರಹ್ಮ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ಯ ಪುಲಸ್ಯ ನಾರದ ಪ್ರಮುಖರಪ್ಪ ದಿವ್ಯ ಮುನಿಪತಿಗಳುಮೇಕಾದಶರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮತ್ವಿನೀ ದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನೋತ್ಸವಮಂ ಮಾಡಿಕಂ || ನೋಡುವನಾ ಬ್ರಹ್ಮ ಮುಂ
ಡಾಡುವನಮರೇಂದ್ರನಿಂದನಚ್ಚರಸೆಯರೆ | ಉಾಡುವರೆಂದೊಡೆ ಪೊಗು ಲೈಡ ಗುಣಾರ್ಣವನ ಜನ್ಮದಿನದ ಬೆಡಂಗಂ ||
೧೪೮
ಉದಯಪರ್ವತದಿಂದ ಉದಯಿಸಿದನು. ೧೪೬. ಹುಟ್ಟಲಾಗಿ ಚಂದ್ರೋದಯ ಸಮಯದಲ್ಲಿ ಸಮುದ್ರದಲೆಗಳು ಆರ್ಭಟಮಾಡುವ ಹಾಗೆ ಆಕಾಶಮಾರ್ಗದಲ್ಲಿ ದೇವತೆಗಳ ಕೈಚಪ್ಪಾಳೆಗಳೊಡನೆ ದೇವದುಂದುಭಿಗಳೂ (ದೇವತೆಗಳ ಮಂಗಳವಾದ್ಯ) ಕೂಡಲೇ ಒಟ್ಟಿಗೆ ಶಬ್ದಮಾಡಿದುವು ವರ ಹಾಗೆ ಭೋರ್ಗರೆಯುತ್ತಿರುವ ದೇವದುಂದುಭಿಗಳೊಡನೆ ಹರಕೆಯ ಜಯಜಯಶಬ್ದಗಳನ್ನೂ ಸೇರಿಸಿಕೊಂಡು ದೇವೇಂದ್ರನು ಬರಲಾಗಿ ಇತರ ದೇವತೆಗಳ ವಿಮಾನಗಳೆಲ್ಲವೂ ಶತಶೃಂಗಪರ್ವತವನ್ನು ಮುತ್ತಿಕೊಂಡು ೧೪೭. ದೇವತೆಗಳ ವಾದ್ಯಧ್ವನಿಯಿಂದಲೂ ದೇವತೆಗಳು ಸುರಿಸುತ್ತಿರುವ ಪುಷ್ಪವೃಷ್ಟಿಪ್ರವಾಹದಿಂದಲೂ ಆ ದೇವತೆಗಳ ವಿಮಾನಪಂಕ್ತಿಗಳಿಂದಲೂ ಭೂಮ್ಯಾಕಾಶಗಳ ಮಧ್ಯಭಾಗವು ತುಂಬಿಹೋಯಿತು. ವ|| ಹೀಗೆ ಹಿರಣ್ಯಗರ್ಭ ಬ್ರಹ್ಮನೇ ಮೊದಲಾಗಿ ವ್ಯಾಸ, ಕಶ್ಯಪ, ವಸಿಷ್ಠ, ವಾಲ್ಮೀಕಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಅಗಸ್ತ್ರ, ಪುಲಸ್ಯ, ನಾರದ ಪ್ರಮುಖರಾದ ದಿವ್ಯಋಷಿಶ್ರೇಷ್ಠರೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಅಷ್ಟವಸುಗಳೂ ಅಶ್ವಿನೀದೇವತೆಗಳೂ ಮೊದಲಾದ ಮೂವತ್ತು ಮೂರು ದೇವರೂ ಇಂದ್ರನೊಡಗೂಡಿ ವೈಮಾನಿಕದೇವತೆ ಗಳೂ ಒಟ್ಟಾಗಿ ಸೇರಿ ಪಾಂಡುರಾಜನನ್ನೂ ಕುಂತಿಯನ್ನೂ ಹರಸಿ ಮಗುವಿಗೆ ಜನೋತ್ಸವವನ್ನು ಮಾಡಿ ೧೪೮, ಆ ಬ್ರಹ್ಮನು (ತೃಪ್ತಿಯಾಗದೆ) ನೋಡುತ್ತಾನೆ;
Page #126
--------------------------------------------------------------------------
________________
ಪ್ರಥಮಾಶ್ವಾಸಂ | ೧೨೧ ವಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳೀತಂ ಸಕಲ ಭುವನ ಸಂಸ್ತೂಯಮಾನಂ ಚಾಳುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡ ಮಾರ್ತಾಂಡನುದಾರಮಹೇಶ್ವರಂ ಕದನತ್ರಿಣೇತ್ರಂ ಮನುಜ ಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶಾಚಾಂಜನೇಯನಕಳಂಕರಾಮಂ ಸಾಹಸಭೀಮಂ ಪ್ರತ್ಯಕಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯ ಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗಕಂಠೀರವಂ ವಿಕ್ರಾಂತತುಂಗಂ ಪರಾಕ್ರಮದವಳಂ ಸಮರೈಕಮೇರು ಶರಣಾಗತ ಜಲನಿಧಿ ವಿನಯವಿಭೂಷಣಂ ಮನುನಿದಾನನನ್ನದಾನಿ ಲೋಕೈಕ ಕಲ್ಪದ್ರುಮಂ
ದೇವೇಂದ್ರನು ಮುದ್ದಾಡುತ್ತಾನೆ, ಅಪ್ಪರಸ್ತ್ರೀಯರು (ಮಗುವನ್ನು ನೋಡಿ ಸಂತೋಷದಿಂದ) ಎದ್ದು ಕುಣಿದಾಡುತ್ತಾರೆ ಎಂದ ಮೇಲೆ ಗುಣಾರ್ಣವನ ಜನೋತ್ಸವದ ಸೊಗಸನ್ನು ಹೊಗಳಬೇಡವೇ? ವ! ಹಾಗೆ ವಿಶೇಷೋತ್ಸವವನ್ನು ನಡೆಸಿ ದೇವಸಭೆಯವರೂ ಬ್ರಹ್ಮಸಭೆಯವರೂ ಒಟ್ಟಿಗಿದ್ದು ಹೆಸರಿಡಲು ಕಾರಣವಾದುವುಗಳಲ್ಲಿ ಈತನು ಸಕಲಲೋಕಗಳಿಂದ ಹೊಗಳಲ್ಪಡುವ ಚಾಳುಕ್ಯವಂಶದಲ್ಲಿ ಹುಟ್ಟಿದ ಶ್ರೀಮದರಿಕೇಸರಿ, ವಿಕ್ರಮಾರ್ಜುನ, ಉದಾತ್ತನಾರಾಯಣ, ಪ್ರಚಂಡಮಾರ್ತಾಂಡ (ವಿಶೇಷತೇಜಸ್ಸನ್ನು ಸೂರ್ಯ) ಉದಾರಮಹೇಶ್ವರ (ಔದಾರ್ಯದಲ್ಲಿ ಶಿವನ ಹಾಗಿರುವವನು), ಕದನತ್ರಿಣೇತ್ರ (ಯುದ್ದದಲ್ಲಿ ಮುಕ್ಕಣ್ಣನಂತಿರುವವನು), ಮನುಜಮಾಂಧಾತ (ಮನುಷ್ಯರಲ್ಲಿ ಮಾಂಧಾತ ಚಕ್ರವರ್ತಿಯಂತಿರುವವನು), ಪ್ರತಿಜ್ಞಾಗಾಂಗೇಯ (ಪ್ರತಿಜ್ಞೆ ಮಾಡುವುದರಲ್ಲಿ ಪಣ ತೊಟ್ಟ ಭೀಷ್ಮನಂತಿರುವವನು), ಶೌಚಾಂಜನೇಯ, (ಶುಚಿತ್ವದಲ್ಲಿ ಹನುಮಂತನಂತಿರುವವನು), ಅಕಳಂಕರಾಮ (ಕಲ್ಮಷ ರಹಿತನಾದ ರಾಮನಂತಿರುವವನು), ಸಾಹಸಭೀಮ (ಭಯಂಕರವಾದ ಸಾಹಸವುಳ್ಳವನು), ಜಗದೇಕಮಲ್ಲ (ಜಗತ್ತಿನಲ್ಲೆಲ್ಲ ಶೂರನಾಗಿರುವವನು), ಪ್ರತ್ಯಕ್ಷಜೀಮೂತವಾಹನ (ಎದುರಿಗೇ ಇರುವ ದಾನಶೀಲನೂ ವಿದ್ಯಾಧರ ಚಕ್ರವರ್ತಿಯೂ ಆದ ಜೀಮೂತವಾಹನ), ವಿದ್ವಿಷ್ಟವಿದ್ರಾವಣ (ಶತ್ರುಗಳನ್ನು ಓಡಿಹೋಗುವಂತೆ ಮಾಡುವವನು), ಮನುನಿದಾನ (ಮನುಚಕ್ರವರ್ತಿಯಂತೆ ಆದಿಪುರುಷನಾದವನು), ಪರಸೈನ್ಯಭೈರವ (ಶತ್ರುಸೈನ್ಯಕ್ಕೆ ಭಯಂಕರನಾಗಿರುವವನು), ಅತಿರಥಮಥನ (ಅತಿರಥರನ್ನು ಕಡೆದುಹಾಕುವವನು), ವೈರಿಗಜಘಟಾವಿಘಟನ (ಶತ್ರುಗಳೆಂಬ ಆನೆಗಳ ಸಮೂಹವನ್ನು ಭೇದಿಸುವವನು), ಅರಾತಿಕಾಲಾನಲ (ಶತ್ರುಗಳಿಗೆ ಕಾಲಾಗ್ನಿಯಂತಿರು ವವನು), ರಿಪುಕುರಂಗಕಂಠೀರವ (ಶತ್ರುಗಳೆಂಬ ಜಿಂಕೆಗೆ ಸಿಂಹದಂತಿರುವವನು), ವಿಕ್ರಾಂತತುಂಗ (ಪರಾಕ್ರಮದ ಔನ್ನತ್ಯವನ್ನುಳ್ಳವನು) ಪರಾಕ್ರಮಧವಳ (ಶೌರ್ಯ ದಿಂದ ಬೆಳ್ಳಗಿರುವ ಯಶಸ್ಸನ್ನುಳ್ಳವನು), ಸಮರೈಕಮೇರು (ಯುದ್ದದಲ್ಲಿ ಒಂದು ಮೇರು ಪರ್ವತದಂತಿರುವವನು), ಶರಣಾಗತ ಜಲನಿಧಿ (ಆಶ್ರಿತರಿಗೆ ಸಮುದ್ರದೋಪಾದಿಯಲ್ಲಿರುವವನು), ವಿನಯವಿಭೂಷಣ (ನಮ್ರತೆಯನ್ನೇ
Page #127
--------------------------------------------------------------------------
________________
೧೨೨/ ಪಂಪಭಾರತಂ ಗಜಾಗಮ ರಾಜಪುತ್ರನಾರೂಢಸರ್ವಜ್ಞಂ ಗಂಧೇಭ ವಿದ್ಯಾಧರಂ ನೃಪ ಪರಮಾತ್ಮಂ ವಿಬುಧ ವನಜವನ ಕಳಹಂಸಂ ಸುರತಮಕರಧ್ವಜಂ ಸಹಜಮನೋಜಂ ಆಂದ್ರೀಕುಚಕಳಶ ಪಲ್ಲವಂ ಕರ್ಣಾಟೀ ಕರ್ಣಪೂರಂ ಲಾಟೀಲಲಾಮಂ ಕೇರಳೀಕೇಳಿಕಂದರ್ಪ ಸಂಸಾರಸಾರೋದಯಂ ಮಜುವಕದಲ್ಲಲಂ ನೋಡುತ್ತೆ ಗೆಲ್ವಂ ಪಾಣ್ಣರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚಿ ಗಂಡು ಪ್ರಯಗಳೂಂ ಗುಣನಿಧಿ ಗುಣಾರ್ಣವಂ ಸಾಮಂತಚೂಡಾಮಣಿಯಂದಿಂತಿವು ಮೊದಲಾಗಿ ಪಲವುಮಷ್ಟೋತ್ತರಶತನಾಮಂಗಳನಿಟ್ಟು ವಿಶೇಷಾಶೀರ್ವಚನಂಗಳಿಂ ಪರಸಿ
ಆಭರಣವನ್ನಾಗಿ ಉಳ್ಳವನು), ಅನೂನದಾನಿ (ಊನವಿಲ್ಲದೆ ದಾನಮಾಡುವವನು), ಲೋಕಕಲ್ಪದ್ರುಮ (ಸಮಸ್ತಲೋಕಕ್ಕೂ ಒಂದೇ ಕಲ್ಪವೃಕ್ಷದಂತಿರುವವನು) ಗಜಾಗಮರಾಜಪುತ್ರ (ಹಸ್ತಿಶಾಸ್ತ್ರದಲ್ಲಿ ರಾಜಪುತ್ರನಂತಿರುವವನು), ಆರೂಢಸರ್ವಜ್ಞ (ಅಶ್ವಾರೋಹಣ ವಿದ್ಯೆಯನ್ನು ಸಂಪೂರ್ಣವಾಗಿ ತಿಳಿದವನು), ಗಂಭವಿದ್ಯಾಧರ (ವಿದ್ಯಾಧರರಲ್ಲಿ ಮದ್ದಾನೆಯಂತಿರುವವನು), ನೃಪಪರಮಾತ್ಮ (ರಾಜರಲ್ಲಿ ಪರಮಾತ್ಮನಂತಿರುವವನು), ಸುರತಮಕರಧ್ವಜ (ಸಂಭೋಗದಲ್ಲಿ ಮನ್ಮಥನಂತಿರುವವನು), ಸಹಜಮನೋಜ (ಸ್ವಭಾವವಾದ ಮನ್ಮಥ), ವಿಬುಧವನಜವನ ಕಳಹಂಸ (ಪಂಡಿತರೆಂಬ ಕಮಲಸರೋವರದ ಕಲಹಂಸದಂತಿರುವವನು), ಆಂದ್ರೀಕುಚಕಳಶ ಪಲ್ಲವ (ಆಂಧ್ಯಸ್ತ್ರೀಯರ ಮೊಲೆಗಳೆಂಬ ಕಳಸಕ್ಕೆ ಚಿಗುರಿನಂತಿರುವವನು), ಕರ್ಣಾಟೀಕರ್ಣಪೂರ (ಕರ್ಣಾಟಸ್ತ್ರೀಯರ ಕಿವಿಯಾಭರಣದಂತಿರುವವನು), ಲಾಟೀಲಲಾಮ (ಲಾಟದೇಶದ ಸ್ತ್ರೀಯರ ಹಣೆಯಾಭರಣ), ಕೇರಳೀಕೇಳಿಕಂದರ್ಪ (ಕೇರಳದೇಶದ ಸ್ತ್ರೀಯರ ಕ್ರೀಡೆಯಲ್ಲಿ ಮನ್ಮಥನ ಹಾಗಿರುವವನು), ಸಂಸಾರಸರೋದಯ (ಸಂಸಾರರಹಸ್ಯವನ್ನು ತಿಳಿದು ಅಭಿವೃದ್ಧಿಯಾಗುತ್ತಿರುವವನು), ಮರುವಕ್ಕದಲ್ಲಳಂ (ಶತ್ರುಸೈನ್ಯವನ್ನು ಭಯಪಡಿಸುವವನು) ನೋಡುತ್ತೆ ಗೆಲ್ವ (ದೃಷ್ಟಿಯಿಂದಲೇ ಗೆಲ್ಲುವವನು), ಪಾರಂಕುಸ (ಜಾರರಿಗೆ ಅಂಕುಶಪ್ರಾಯನಾದವನು), ಅಮ್ಮನ ಗಂಧವಾರಣ (ತಂದೆಯ ಮದ್ದಾನೆ) ಪಡೆಮೆಚ್ಚಿಗಂಡ (ಸೈನ್ಯವು ಮಚ್ಚುವ ಹಾಗಿರುವ ಶೂರ), ಪ್ರಿಯಗಳ (ಪ್ರಿಯಳನ್ನು ಅಪಹರಿಸಿದವನು), ಗುಣನಿಧಿ (ಗುಣಗಳ ಗಣಿ), ಗುಣಾರ್ಣವ (ಗುಣಸಮುದ್ರ) ಸಾಮಂತಚೂಡಾಮಣಿ (ಆಶ್ರಿತರಾಜರಲ್ಲಿ ತಲೆಯಾಭರಣದಂತಿರುವವನು), ಇವೇ
Page #128
--------------------------------------------------------------------------
________________
ಪ್ರಥಮಾಶ್ವಾಸಂ | ೧೨೩ ಉ || ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ದು ಮಾಳದು ...
ದ್ದ ಪ್ತ ವಿರೋಧಿ ಸಾಧನಮನಾಹವದೊಳ್ ತಳೆದೊಟ್ಟು ವಿಶ್ವದಿ | ಗ್ಯಾಹ್ನ ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರ ಸುಖ ವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ ||
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ಪ್ರಥಮಾಶ್ವಾಸಂ
ಮೊದಲಾದ ನೂರೆಂಟು ಹೆಸರುಗಳನ್ನಿಟ್ಟು ವಿಶೇಷಾಶೀರ್ವಾದಗಳಿಂದ ಹರಸಿದರು. ೧೪೯. ಎಲೈ ಅರಿಕೇಸರಿಯೇ ನೀನು ಲೋಕವಿರುವವರೆಗೆ ಏಳು ಸಮುದ್ರಗಳಿಂದ ಮುದ್ರಿಸಲ್ಪಟ್ಟ (ಸುತ್ತುವರಿಯಲ್ಪಟ್ಟ) ಭೂಮಂಡಲವನ್ನೂ ನಿನ್ನ ಆಜ್ಞಾಧೀನವನ್ನಾಗಿ ಮಾಡು. ನಿನ್ನನ್ನು ಮೀರಿ ಗರ್ವಿಷ್ಠರಾದ ಶತ್ರುರಾಜಸೈನ್ಯವನ್ನು ಯುದ್ಧದಲ್ಲಿ ಕತ್ತರಿಸಿ ಹಾಕು. ಸಮಸ್ತದಿಕ್ಕುಗಳಲ್ಲಿಯೂ ವ್ಯಾಪಿಸಿಕೊಂಡಿರುವ ಯಶೋಲಕ್ಷ್ಮಿಗೆ ಪ್ರತಿಯಾಗಿ ನಿರಂತರವಾದ ಸುಖಭೋಗಗಳಿಗೆ ನೀನೆ ಮೊತ್ತಮೊದಲಿಗನಾಗು ಎಂದೂ ಹರಸಿದರು.
Page #129
--------------------------------------------------------------------------
________________
ಕಂll
ದ್ವಿತೀಯಾಶ್ವಾಸಂ
ಶ್ರೀಗಗಲುರಮಂ ಕೀರ್ತಿ
ಶ್ರೀಗೆ ದಿಗಂತಮುಮನಹಿತರಂ ಗೆ ಜಯ | ಶ್ರೀಗೆ ಭುಜಶಿಖರಮಂ ನೆಲೆ
ಯಾಗಿಸಿ ನೀಂ ನೆಲಸು ನೇಸುಳ್ಳಿನಮರಿಗಾ ||
ಎಂಬ ಪರಕೆಗಳ ರವದೊಳ್
ತುಂಬೆ ನಭೋವಿವರಮಮರ ಮುನಿಜನಮಮರೇಂ |
ದ್ರಂ ಬೆರಸು ತಳರ್ದುದಾದುದ
ಳುಂಬಂ ಮನದೊಸಗೆ ಕುಂತಿಗಂ ತತ್ಪತಿಗಂ ||
ವll ಅಂತು ಗುಣಾರ್ಣವನ ಪುಟ್ಟಿದೊಸಗೆಯೊಳೊಸಗೆ ಮರುಳೊಂಡು ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕೆಯಾಗಿ ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡಾಕೆಯ ಬಿನ್ನನಾದ ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ ಮಂತ್ರಾಕ್ಷರಂಗಳನುಪದೇಶಂಗೆಯೊಡಾಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ
ಕಂ
ಆಹ್ವಾನಂಗೆಯ್ದಶ್ವಿನಿ
ದೇವರನವರಿತ್ತ ವರದೊಳವರಂಶಮ್ ಸಂ | ಭಾವಿಸೆ ಗರ್ಭದೊಳಮಳರ
ನಾ ವನಜದಳಾಕ್ಷಿ ಪಡೆದು ಸಂತತಿವೆತ್ತಳ್ ||
೧. ಎಲ್ ಅಂಗನೆ ನೀನು ನಿನ್ನ ಅಗಲವಾದ ಎದೆಯನ್ನು ಲಕ್ಷ್ಮಿಗೂ ದಿಗಂತವನ್ನು ಕೀರ್ತಿಲಕ್ಷ್ಮಿಗೂ ಭುಜಶಿಖರವನ್ನು ಶತ್ರುಗಳನ್ನು ಗೆಲುವ ವಿಜಯಲಕ್ಷ್ಮಿಗೂ ನಿವಾಸಸ್ಥಾನವನ್ನಾಗಿಸಿ ಸೂರ್ಯನಿರುವವರೆಗೂ ಸ್ಥಿರವಾಗಿ ನಿಲ್ಲು, ೨. ಎಂಬ ಹರಕೆಯ ಶಬ್ದವು ಆಕಾಶ ಪ್ರದೇಶವನ್ನೆಲ್ಲ ತುಂಬಲು ದೇವತೆಗಳೂ ಋಷಿಗಳೂ ದೇವೇಂದ್ರನೊಡನೆ ಹೊರಟುಹೋದರು. ಕುಂತಿಗೂ ಅವಳ ಪತಿಯಾದ ಪಾಂಡುರಾಜನಿಗೂ ವಿಶೇಷವಾಗಿ ಮನಸ್ಸಂತೋಷವಾಯಿತು. ವ|| ಹಾಗೆ ಗುಣಾರ್ಣವನ ಜನೋತ್ಸವದ ಸಂತೋಷದ ಸಂಭ್ರಮದಲ್ಲಿ ಸೇರಿಕೊಂಡು ಕುಂತಿಯೂ ಪಾಂಡುರಾಜನೂ ಇರಲಾಗಿ ಮಾದ್ರಿಯು ತನಗೆ ಮಕ್ಕಳಿಲ್ಲದುದಕ್ಕೆ ಉತ್ಸಾಹಶೂನ್ಯಳಾಗಿ ಹೊಸೆದು ಬಿಸಾಡಿದ ಅಶೋಕದ ಚಿಗುರಿನಂತೆ ವಿಶೇಷವಾಗಿ ದುಃಖಪಟ್ಟು ಚಿಂತಿಸುತ್ತಿರಲಾಗಿ ಆಕೆಯ ಬಾಡಿದ ಮುಖದ ರೀತಿಯನ್ನು ಕಂಡು ಕುಂತಿಯು ಕರುಣಿಸಿ ಪುತ್ರೋತ್ಪತ್ತಿ ಕಾರಣಗಳಾದ ಮಂತ್ರಗಳನ್ನು ಉಪದೇಶಮಾಡಲಾಗಿ ಅವಳು ಆ ಮಂತ್ರಕ್ಕೆ ವಿಧಿಸಿದ ರೀತಿಯಲ್ಲಿ ನಿಯಮದಿಂದ ೩. ಅಶ್ವಿನೀದೇವತೆಯರನ್ನು ಆಹ್ವಾನಿಸಿ ಬರಿಸಿ ಅವರು ಕೊಟ್ಟ ವರಗಳಿಂದ ಅವರಂಶವೇ ಗರ್ಭದಲ್ಲುಂಟಾಗಲು
Page #130
--------------------------------------------------------------------------
________________
ದ್ವಿತೀಯಾಶ್ವಾಸಂ | ೧೨೫
ವ|| ಆಗಳಾ ಪಾಂಡುರಾಜನಾ ಕೂಸುಗಳೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದವರ್ಗಮಳ್ವೆಸರನಿಟ್ಟು ಪುತ್ರ ಸಂಪೂರ್ಣ ಮನೋರಥನಾಗಿರ್ಪಿನಮಯ್ಯ ಕೂಸುಗಳುಮೇಲ್ವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಜನಕ್ಕೆ ಕಲ್ಪ ವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತಂಗಳಾದಂತೆ ಸೊಗಯಿಸಿ ಬಳೆಯೆ
ಕಂ || ತೊಡರ್ದಮರ್ದ ಬಾಳವಣ್ಣದ
ತುಡುಗ ಪಳಂಚಲೆವ ಪಂಚ ಜಡೆ ನೊಸಲೊಳೊಡಂ | ಬಡುವರಳೆಲೆಯವಳಂ ಚಿ
ಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ ||
ವ|| ಅಂತಾತಂ ಬಳೆಯವಳೆಯ
ಕಂ || ನಡೆವ ತಳರ್ನಡೆಯೊಳ್ ಪುಡಿ
ವುಡಿಯಾದುವು ಶಿಲೆಗಳೊಡೆದು ಕರಿಗಳ್ ಭೀಮಂ | ಪಿಡಿದಡರ್ದೊಡ ಬಾಯ್ದಿಟ್ಟೆ
ಅಡಗಾದುವು ಮುದ್ಧದಂತು ಸೊಗಯಿಸಬೇಡಾ
99
ಅವಳಿ ಮಕ್ಕಳನ್ನು ಪಡೆದು ಸಂತಾನವನ್ನು ಊರ್ಜಿತಗೊಳಿಸಿದಳು. ವll ಆಗ ಆ ಪಾಂಡುರಾಜನು ಆ ಶಿಶುಗಳಿಗೆ ಋಷಿಗಳಿಂದ ಜಾತಕರ್ಮಗಳನ್ನು ಮಾಡಿಸಿ ನಕುಲಸಹದೇವರೆಂಬ ಜೋಡಿ ಹೆಸರನ್ನಿಟ್ಟು ಮಕ್ಕಳನ್ನು ಪಡೆಯುವ ಸಂಪೂರ್ಣತೃಪ್ತಿ ಹೊಂದಿರಲು ಆ ಅಯ್ದು ಮಕ್ಕಳೂ ಶುಕ್ಲಪಕ್ಷದ ಪ್ರಥಮೆಯ ವೃದ್ಧಿಚಂದ್ರನಂತೆ ಮೇಲೆಮೇಲೆ ಸೊಗಯಿಸಿ ಬಳೆಯುತ್ತಿದ್ದರು; ಅವರು ಭರತವಂಶಕ್ಕೆ ವಿಸ್ತಾರವಾದ ಯಶಸ್ಸಿನಮೊಳಕೆಗಳೂ ಬಂಧುಜನಗಳಿಗೆ ಪುಣ್ಯದ ಮೊಳಕೆಗಳೂ ಶತ್ರುಜನಕ್ಕೆ ಕಾಳಕೂಟವಿಷದ ಮೊಳಕೆಗಳೂ ಆಗಿ ಪಂಚಾಂಗ ಮಂತ್ರಗಳಾದ ಸ್ತುತಿ, ನೈವೇದ್ಯ, ಅಭಿಷೇಕ, ತರ್ಪಣ, ಸಮಾರಾಧನ ಎಂಬ ವೇದಕ್ಕೆ ಸಂಬಂಧಿಸಿದ ಮಂತ್ರಗಳು ತಮ್ಮ ರೂಪದಲ್ಲಿಯೇ ಪ್ರತ್ಯಕ್ಷವಾಗಿ ಮೂರ್ತಿಮತ್ತುಗಳಾದಂತೆ ಸೊಗಯಿಸಿ ತೋರಿದರು. ೪. ಮೈಯನ್ನು ಚೆನ್ನಾಗಿ ಸೇರಿಕೊಂಡ ಕತ್ತಿಯ ಬಣ್ಣದ (ನೀಲಿಬಣ್ಣದ) ಉಡುಪಿನಿಂದಲೂ ಬೆನ್ನಿಗೆ ಅಪ್ಪಳಿಸುತ್ತಿರುವ ಅಯ್ದು ಜಡೆಗಳಿಂದಲೂ ಒಪ್ಪಿ ತೋರುವ ಅರಳೆಲೆಯ ಆಕಾರದ ಪದಕಗಳಿಂದಲೂ ಧರ್ಮರಾಯನ ಬಾಲಕ್ರೀಡೆಯು ಸುಂದರವಾಗಿದ್ದಿತು. ವ|| ಹಾಗೆ ಅವನು ಅಭಿವೃದ್ಧಿಯಾಗುತ್ತಿರಲು ೫. ಭೀಮನ್ನು ನಡೆಯುವ ತಪ್ಪುಹೆಜ್ಜೆಗಳಿಂದಲೇ ಕಲ್ಲುಗಳು ಒಡೆದು ಪುಡಿಯಾದುವು. ಆನೆಗಳನ್ನು ಹಿಡಿದು ಅವನು ಹತ್ತಲು ಅವು ಬಾಯಿಬಿಟ್ಟು (ಕೂಗಿಕೊಂಡು) ಜಜ್ಜಿ ಎಲುಬುಮಾಂಸಗಳಾದುವು. ಮುದ್ದುಮುದ್ದಾಗಿರುವ ಬಾಲ್ಯಸ್ಥಿತಿ ಹೀಗೆ
Page #131
--------------------------------------------------------------------------
________________
೧೨೬ | ಪಂಪಭಾರತಂ
ಮುನಿವನ ಮನ ಬಿಸುಟುವು ಮುಂ ಮುನಿಯ ಸೋಂಕಿಲೊಳೆ ಬಳೆದ ಸಿಂಗಂಗಳ್ ಮು || ದಿನೊಳಡರ್ವ ಪಿಡಿವ ಗುರ್ದುವ
ಮನೆಗೆ ವನಿತರ್ಕಮಲಸಿ ಮರುದಾತ್ತಜನಾ || ವll ಅಂತಾತಂ ಬಳೆಯಕಂ || ಬೇಡದುದಂ ಬೇಡುವ ಪುಡಿ
ಯಾಡುವ ತೊದಳೊದವೆ ನುಡಿವ ನಗಿಸುವ ಬಾಲ | ಕ್ರೀಡೆ ಮುರಾರಿಯ ಬಾಲ ಕ್ರೀಡೆಯನನುಕರಿಪುದಾದುದರಿಕೇಸರಿಯಾ || ಪರೆದಡರ್ಭ ಧೂಳಿ ಕಿರುನಗೆ ವೆರಸಿದ ತೊದಳೊದವೆ ನುಡಿವ ನುಡಿ ನಗೆಮೊಗದೊಳ್ | ಪರಕಲಿಸಿದ ಕಾಡಿಗೆವರ ಸರಿಕೇಸರಿ ತಾಯ ಮನಮುಳಿಗೊಂಡಂ 11 ಒಗೆತರ್ಪ ಪಳ ನಗೆ ಮೊಗದ ಸರಸ್ವತಿಯನಾಗಳರ್ಚಿಸಿದ ಪೊದ ! ಆಗಲದ ಚೆಲ್ವಿನ ಮೊಲೆಯ ಮುಗುಳಳಗಿಳಿಸಿರೆ ಗುಣಾರ್ಣವಂ ಸೊಗಯಿಸಿದಂ | ಕರಿಕಳಭಂಗಳ ಶಿಶು ಕೇ ಸರಿಗಳ ಬಲೆಯಂ ತಗುಳು ಬಡವುಗಳನವಂ || ತಿರಿಪಿ ಪಿಡಿಯುತ್ತುಮರಿಗಂ ಪರಿದಾಡುವ ಸಮವಯಸ್ಕರೋಳ ಸೊಗಯಿಸಿದ |
೧೦ ಸೊಗಯಿಸಬೇಡವೇ ? ೬. ಭೀಮನು ಹುಟ್ಟುವುದಕ್ಕೆ ಮುಂಚೆ ಋಷಿಗಳ ಮಡಲಿನಲ್ಲಿಯೇ ಬಳೆದ ಸಿಂಹಗಳು ಈಗ ಭೀಮನು ಅಟಕ್ಕಾಗಿ ಅವುಗಳನ್ನು ಹತ್ತುವ, ಹಿಡಿಯುವ, ಗುದ್ದುವ, ಮನೆಯೊಳಕ್ಕೆ ಎಳೆದುಕೊಂಡುಹೋಗುವ ಹಿಂಸೆಗಳಷ್ಟಕ್ಕೂ ಆಯಾಸಗೊಂಡು ಆ ಋಷಿಗಳ ವನವನ್ನೇ ತೊರೆದುಹೋದವು. ೭. ಬೇಡದುದನ್ನು ಬೇಡುವ ಧೂಳಾಟವಾಡುವ ಮೊದಲುಮಾತುಗಳನ್ನಾಡುವ ನಗುವನ್ನುಂಟುಮಾಡುವ ಅರಿಕೇಸರಿಯ ಬಾಲಕ್ರೀಡೆಯು ಶ್ರೀಕೃಷ್ಣನ ಬಾಲಕ್ರೀಡೆಗಳನ್ನು ಅನುಕರಿಸುವುದಾಯಿತು. ೮. ಕೆದರಿ ಮೆಯ್ಯಂಟಿಕೊಂಡಿರುವ ಧೂಳು, ಹುಸಿನಗೆಯಿಂದ ಕೂಡಿದ ತೊದಲುಮಾತು, ನಗುಮುಖದಲ್ಲಿ ಹರಡಿದ ಕಾಡಿಗೆಯೊಡನೆ ಅರಿಕೇಸರಿ ತಾಯಿಯಾದ ಕುಂತಿಯ ಮನಸ್ಸನ್ನು ಆಕರ್ಷಿಸಿದನು. ೯. (ಆಗತಾನೆ) ಹುಟ್ಟುತ್ತಿರುವ ಹಲ್ಲುಗಳು ಆ ನಗೆಮೊಗದ ವಾಗ್ಗೇವಿಯನ್ನು ಪೂಜಿಸುವುದಕ್ಕಾಗಿ ಹರಡಿದ ಸುಂದರವಾದ ಮೊಲ್ಲೆಯ ಮೊಗ್ಗಿನ ರಾಶಿಯನ್ನು ತಿರಸ್ಕರಿಸುತ್ತಿರಲು ಗುಣಾರ್ಣವನು ಸೊಗಸಾಗಿ ಕಂಡನು. ೧೦. ಆನೆಯ ಮರಿಗಳನ್ನೂ ಸಿಂಹದ ಮರಿಗಳನ್ನೂ ಬೆನ್ನಟ್ಟಿ ಹೋಗಿ ಆ ಬಡಪ್ರಾಣಿಗಳನ್ನು ಹಿಂತಿರುಗಿಸಿ ಹಿಡಿಯುವ ಅರಿಕೇಸರಿ ಅಲ್ಲಿ ಓಡಾಡುವ
Page #132
--------------------------------------------------------------------------
________________
ದ್ವಿತೀಯಾಶ್ವಾಸಂ / ೧೨೭ ದೆಯ್ಯಬಲಂ ಸೊಗಸಿಕೆ ಮುಂ " ಗೆಯ್ಯ ಬಲಂ ಬಾಳಕಾಲದೊಳ್ ತೊಡರ್ದ ಪೊಡ | ರ್ದಯ್ಯರ ಬಾಲಕ್ರಿಯೆಯುಂ
ಮುಯ್ದಂ ನೋಡಿಸಿತು ತಾಯುಮಂ ತಂದೆಯುಮಂ || ೧೧ ವಗಿರಿ ಅಂತಾ ಕೂಸುಗಲ್ ನಿಜ ಜನನೀಜನಕರ ಮನಮನಿಲ್ಕುಳಿಗೊಳಿಸಿಯುಮರಾತಿ ಜನಂಗಳ ಮನಮನಸುಂಗೊಳಿಸಿಯುಂ ಬಳೆಯ ಬಳೆಯೆಚಂ || ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ
ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ || ಗಿಲೆ ನನೆದೋಟಿ ನುಣೆಸೆವ ಮಾಮರನೊರ್ಮೊದಲಲ್ಲದುಣ್ಣುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೂ ಬಸಂತಮಾಸದೊಳ್ || ೧೨
ವ|| ಆಗಳಾ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ಳಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಾತನ ಬರವಿಂಗೆ ತೋರಣಂಗಟ್ಟಿದಂತೆ ಬಂದ ಮಾಮರಂಗಳನಡರ್ದು ತೊಡರ್ದಳಕೊಂಬುಗಳ್ವಿಡಿದು ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳುಮಾತನ ಬರವಿಂಗೆ ನಟಿಯ ಸೊಗಯಿಸಿ ಕೆಯ್ಯ್ದ ನಲ್ಗಳಂತೆ ನನೆಯ
ಜೊತೆಗಾರರೊಡನೆ ಸೊಗಸಾಗಿ ಕಂಡನು. ೧೧. ದೈವಬಲವೂ ಸೊಗಸಿಕೆಯೂ ಮುಂದಿನ ಕಾಲದಲ್ಲಿ ಅವರಿಗುಂಟಾಗಬಹುದಾದ ಸಾಮರ್ಥ್ಯವೂ ಬಾಲಕಾಲದಲ್ಲಿಯೇ ಸೂಚಿತವಾಗಿ ಪ್ರಕಾಶಿತವಾಗಿರುವ ಬಾಲಕ್ರೀಡೆಯು ತಾಯಿಯನ್ನೂ ತಂದೆಯನ್ನೂ ತಮ್ಮ ಭುಜವನ್ನು ತಾವೇ ನೋಡಿಕೊಳ್ಳುವ ಹಾಗೆ ಮಾಡಿತು (ಅಂದರೆ ತಾವೇ ಅದೃಷ್ಟಶಾಲಿಗಳೆಂದು ತಮ್ಮ ಭುಜವನ್ನು ತಾವೇ ನೋಡಿ ಸಂತೋಷಪಡುವ ಹಾಗೆ ಮಾಡಿತು). ವ|ಹಾಗೆ ಆ ಮಕ್ಕಳು ತಮ್ಮ ತಾಯಿತಂದೆಯರ ಮನಸ್ಸನ್ನು ಸೂರೆಗೊಳ್ಳುವಂತೆಯೂ ಶತ್ರುಜನರ ಮನಸ್ಸನ್ನು (ಪ್ರಾಣಾಪಹರಣ ಮಾಡುವಂತೆ) ಆಕ್ರಮಿಸುತ್ತಿರುವಂತೆಯೂ ಬಳೆದರು. ೧೨. ಅರಳಿದ ಅದಿರ್ಮುತ್ತೆಯ ಹೂವು, ಹೊಸದಾಗಿ ಬಿಟ್ಟಿರುವ ಮಲ್ಲಿಗೆಯ ಹೂವು, ಸುವಾಸನೆಯನ್ನು ಒತ್ತಿ ಹೊರಡಿಸುತ್ತಿರುವ ದಕ್ಷಿಣದ ಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿ, ಕೊರಳ ಶಬ್ದದಿಂದ ಕುಕಿಲ್ ಎಂಬ ಧ್ವನಿಯನ್ನು ಹೊರಡಿಸುತ್ತಿರುವ ಕೋಗಿಲೆ, ಹೂವಿನಿಂದ ಕೂಡಿ ನಯವಾಗಿರುವ ಮಾವಿನ ಮರ, ಒಂದೇ ಸಲವಲ್ಲದೆ ಬಾರಿಬಾರಿಗೂ ಹೆಚ್ಚುತ್ತಿರುವ ಉಯ್ಯಾಲೆಯ ಹೊಸನಾದ ಇವು ವಸಂತಋತುವಿನ ಪ್ರವೇಶದಲ್ಲಿ ಏನು ಸೊಗಸಾಗಿ ಕಂಡವೋ! ವೆ! ಆಗ ಆ ವಸಂತರಾಜನ ಬರವಿಗಾಗಿ ಬಾವುಟಗಳನ್ನು ಕಟ್ಟಿದಂತೆ ಕೋಮಲವಾಗಿ ಬೆಳೆದು ಅಲುಗಾಡುವ ಅಶೋಕವೃಕ್ಷಗಳೂ, ಆತನ ಬರವಿಗಾಗಿ ತೋರಣ ಕಟ್ಟಿದಂತೆ ಹಣ್ಣು ಕಾಯಿಗಳನ್ನು ಬಿಟ್ಟಿರುವ ಮಾವಿನ ಮರಗಳನ್ನು ಏರಿ ಅಡ್ಡಲಾಗಿ ಎಳೆಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ಕುಡಿಯನ್ನು ಚಾಚುವ ಮೊಲ್ಲೆಯ ಬಳ್ಳಿಗಳೂ ಆತನ ಬರುವಿಕೆಗೆ ಸಂಪೂರ್ಣ ಸುಂದರವಾಗಿ ಕಾಣುವುದಕ್ಕಾಗಿ ಅಲಂಕಾರವನ್ನು ಮಾಡಿಕೊಳ್ಳುವ ಪ್ರೇಯಸಿಯಂತೆ ಹೂವಿನ ದಪ್ಪ ಮೊಗ್ಗಿನ
Page #133
--------------------------------------------------------------------------
________________
೧೨೮ / ಪಂಪಭಾರತಂ
ಬಿರಿಮುಗುಳಳ ತುಣುಗಲೊಳೆಗಿ ತುಲುಗಿದ ಕಲ್ಪಲತೆಗಳುಮಾತನ ಬರವಿಂಗೆ ಬದ್ದವಣಂ ಬಾಜಿಪಂತ ಭೋರ್ಗರೆದು ಮೊರವ ತುಂಬಿಗಳುಮಾತನ ಬರವಿಂಗೆ ರಂಗವಲಿಯಿಕ್ಕಿದಂತ ಪುಳಿನಸ್ಥಳಂಗಳೊಳುದಿರ್ದ ಕಟವೂಗಳುಮಾತನ ಬರವಿಂಗೆ ವನವನಿತ ಮೆಚ್ಚಿ ನಡೆಯ ಕೆಯ್ದೆಯಂತ ನಿಳನಿಳಗೊಂಡು ಸೊಗಯಿಸುವ ನಿಗನ ನಿಂದಳಿರ ಗೊಂಚಲ್ಗಳುಮಾತನ ಮೇಲ್ವಾಯೆ ರಾಗಿಸಿ ರೋಮಾಂಕುರಮೊಗೆದಂತೊಗೆದ ಕಳಿಕಾಂಕುರಂಗಳುಮಾತನಂಗಸಂಗದೊಳ್ ಕಾಮರಸಮುಗುವಂತುಗುವ ಸೊನೆಯ ಸೋನೆಗಳುಮನೊಳಕೊಂಡು ತದಾಶ್ರಮದ
ನಂದನವನಂಗಳ ಜನಂಗಳನನಂಗಂಗೆ ತೊತ್ತುವೆಸಂಗೆಯ್ದಿದುವು
ಚಂ || ಬಿರಯಿಯ ಮಿತ್ತುವಂ ಮಿರಿದೊಡಲ್ಲದಣಂ ಮುಳಿಸಾಗಿದೆಂದು ಪ ಲೊರದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ | ಅರನಿರದೂ ಸಾಹಿ ಜಡಿವಂತೆಗುಂ ಸಹಕಾರ ಕೊಮಳಾಂ ಕುರ ಪರಿತುಷ್ಟ ಪಪ್ಪ ಪರಪುಷ್ಪ ಗಳಧ್ವನಿ ನಂದನಂಗಳೊಳ್ ||
ಚಂ || ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ
ವಿಲನುವಾಗಿ ಬಂದ ಮಲಯಾನಿಲನೂದೆ ತೆರಳ್ ಚೂತ ಪ | ಲ್ಲವದ ತೆರಳಿ ತವ್ವನ ವಿಳಾಸಿನಿಯುಟ್ಟ ದುಕೂಲದೊಂದು ಪ ಲ್ಲವದ ತೆರಳೆಯಂತೆಸೆಯ ಕಣ್ಣೆಸೆದಿರ್ದುವು ನಂದನಾಳಿಗಳ್ ||
02
24
ಗುಂಪುಗಳಿಂದ ಕೂಡಿ ದಟ್ಟವಾಗಿರುವ ಕಲ್ಪಲತೆಗಳೂ ಆತನ ಬರವಿಗೆ ಮಂಗಳವಾದ್ಯವನ್ನು ಬಾಜಿಸುವಂತೆ ಭೋರ್ಗರೆದು ಶಬ್ದಮಾಡುವ ದುಂಬಿಗಳೂ ಆತನ ಬರವಿಗೆ ರಂಗೋಲೆಯನ್ನಿಕ್ಕಿದಂತೆ ಮರಳಿನ ಪ್ರದೇಶದಲ್ಲಿ ಉದುರಿದ್ದ ಕಳಿತಹೂವುಗಳೂ ಆತನ ಬರುವಿಕೆಗೆ ವರಲಕ್ಷ್ಮಿಯು ಸಂತೋಷಪಟ್ಟು ಸಂಪೂರ್ಣವಾಗಿ
ಅಲಂಕಾರಮಾಡಿದಂತೆ ನಿರಿಗೆನಿರಿಗೆಯಾಗಿ ಸೊಗಯಿಸುವ ಸಿಹಿಮಾವಿನ
ಸಾಲಾಗಿರುವ ಗೊಂಚಲುಗಳೂ ಆತನ ಮೇಲೆ ಪ್ರೀತಿಸಿ ನುಗ್ಗಲು ರೋಮಾಂಚನ ವಾದಂತೆ ಹುಟ್ಟಿರುರ ಚಿಗುರು ಮತ್ತು ಕಿರುಗೊಂಬೆಗಳ ಮೊಳಕೆಗಳೂ ಆತನ ಶರೀರಸ್ಪರ್ಶದಿಂದ ಕಾಮರಸವು ಜಿನುಗುವಂತೆ ಸ್ರವಿಸುವ ಮರದ ಹಾಲಿನ ಸೋನೆಗಳೂ ಇವುಗಳಿಂದ ಆ ಆಶ್ರಮದ ನಂದನವನಗಳು ಜನಗಳು ಮನ್ಮಥನಿಗೆ ಸೇವೆಗೆಯ್ಯುವ ಹಾಗೆ ಮಾಡಿದುವು. ೧೪. ನಾನು ವಿರಹಿಗಳ ಶತ್ರುವಾಗಿದ್ದೇನೆ. ಅವರನ್ನು ತುಳಿದಲ್ಲದೆ ನನ್ನ ಕೋಪವು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಗಡಿದು ಕೂಗುತ್ತಿದ್ದಾನೆ. ಇಲ್ಲಿಗೆ ವಿರಹಿಗಳು ಪ್ರವೇಶಿಸಲು ಅವಕಾಶಕೊಡಬೇಡಿ ಎಂದು ಒಂದೇ ಸಮನಾಗಿ ಬಲಾತ್ಕಾರದಿಂದ ಕೂಗಿ ಹೇಳಿ ಹೆದರಿಸುವಂತೆ ಮಾವಿನ ಮೃದುವಾದ ಚಿಗುರುಗಳನ್ನು ತೃಪ್ತಿಯಾಗುವಷ್ಟು ತಿಂದು ಕೊಬ್ಬಿ ಬೆಳೆದಿರುವ ಕೋಗಿಲೆಗಳ ಕೊರಳನಾದವು ಆ ತೋಟಗಳಲ್ಲಿ ಪ್ರಕಾಶಿಸುತ್ತದೆ. ೧೪. ಮುತ್ತಿಕೊಳ್ಳುತ್ತಿರುವ ಸೊಕ್ಕಿದ ದುಂಬಿಗಳಿಂದ ಮಾಸಿದವನಾಗಿಯೂ ತಾವರೆಯ ಪರಾಗಗಳಿಂದ ಮಾಸಲುಗೆಂಪುಬಣ್ಣದವನಾಗಿಯೂ ತಲೆದೋರಿದ ಮಲಯಮಾರುತನು ಬೀಸಿದುದರಿಂದ ಅಳ್ಳಾಡುವ ಮಾವಿನಮರದ ಚಿಗುರುಗಳ ಅಲುಗಾಟವು ಆ ವನಲಕ್ಷ್ಮಿಯು ಉಟ್ಟ ರೇಷ್ಮೆಯ ಸೀರೆಯ ಸೆರಗಿನ ಅಲುಗಾಟದಂತ
Page #134
--------------------------------------------------------------------------
________________
ದ್ವಿತೀಯಾಶ್ವಾಸಂ | ೧೨೯ ಉ II ಪೋಗದೆ ಪಾಡುತಿರ್ಪಳಿಯ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯಾಗಿರೆ ಬೀಸುವೊಂದಲಕ್ಕೆ ಬೀಸುವುದಾಗಿರೆ ಕಾಯ್ದಳಿಂದಮಿಂ | ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೊಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ || ೧೫ - ವ|| ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯು ಮಪ್ಪುದಂ ವನಕ್ರೀಡಾನಿಮಿತ್ತದಿಂ ಪೋಗಿಚಂ | ವನಕುಸುಮಂಗಳಂ ಬಗೆಗೆವಂದುವನಟಿಯೊಳಾಯ್ತು ಕೊಯ್ದು ಮ
ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದ ಮ | ತನಿತಳೊಳಂ ಮುಗುಳರಿಗೆ ತೋಳಳೆ ಕಂಕಣವಾರಮೆಂದು ಬೇ
ನಿತನೆ ಮಾಡಿ ತೊಟ್ಟು ಕರನೊಪ್ಪಿದಳಾಕೆ ಬಸಂತ ಕಾಂತೆವೋಲ್ || ೧೬ ವ|| ಅಂತು ತೊಟ್ಟ ಪೊದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆಚಂ | ಮಿಳಿರ್ವ ಕುರುಳಳೊಳ್ ತೊಡರ್ದು ದೇಸಿಯನಾವಗಮಿಾವ ಚೆನ್ನ ಪೂ
ಗಳನವನೊಯ್ಯನೋಸರಿಸುತುಂ ವದನಾಬ್ಬದ ಕಂಪನಾಳ್ಳುಣಲ್ | ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳೊಯ್ಯನೆ ಸೋವುತುಂ ಬೆಡಂ ಗೊಳಕೊಳೆ ಸೊರ್ಕಿದಂಗಜ ಮತಂಗಜದಂತಿರೆ ಬರ್ಪ ಮಾದ್ರಿಯಂ (೧೭
ಪ್ರಕಾಶಿಸಲು ಆ ತೋಟದ ಸಾಲುಗಳು ಕಣ್ಣಿಗೆ ಮನೋಹರವಾಗಿದ್ದುವು. ೧೫. ಆ ವನವನ್ನು ಬಿಟ್ಟು ಹೋಗದೆ ಅಲ್ಲಿಯೇ ಹಾರಾಡುತ್ತಿರುವ ದುಂಬಿಯೇ ಆನೆಯ ಫೀಂಕಾರವಾಗಿರಲು, ಬೆಳದಿಂಗಳೇ ಅದರ ಕೋಪವಾಗಿರಲು, ಬೀಸುವ ಗಾಳಿಯೇ ಬೀಸಣಿಗೆಯಾಗಿರಲು, ಕಾಯಿಗಳಿಂದ ಸೊಗಸಾಗಿ ಸೋರುತ್ತಿರುವ ಸೋನೆಯೇ ಮದೋದಕವಾಗಿರಲು ಮಾವಿನ ಮರದಲ್ಲಿ ಹುಟ್ಟಿಬಂದ ಕೊಂಬೆಗಳೇ ಅದರ ಕೊಂಬಾಗಿರಲು ವಸಂತಕಾಲವೆಂಬ ಆನೆಯು ವಿರಹಿಗಳನ್ನು ತನ್ನ ಕೋಡಿನಿಂದ ತಿವಿದು ಹರಿಯಿತು, ಓಡಿತು. ವರ ಹಾಗೆ ಬಂದ ವಸಂತಋತುವಿನಲ್ಲಿ ಮಾದ್ರಿಯು ತಾನು ಅಹಂಕಾರದಿಂದ ಕೆಟ್ಟವಳೂ ಆಟವಾಡುವುದರಲ್ಲಿ ಆಸಕ್ತಳಾದವಳೂ ಆಗಿದ್ದುದರಿಂದ ಕಾಡಿನಲ್ಲಿ ಆಟವಾಡುವುದಕ್ಕಾಗಿ ಹೋಗಿ ೧೬. ತನ್ನ ಮನಸ್ಸಿಗೆ ಒಪ್ಪುವಂತಹ ಕಾಡಿನ ಹೂವುಗಳನ್ನು ಪ್ರೀತಿಯಿಂದ ಆರಿಸಿ ಕೊಯ್ದು ಮೃದುವಾಗಿ ಬಕುಳವೃಕ್ಷದ ಪಾತಿಯಪ್ರದೇಶದಲ್ಲಿ ಸುರಿದು ತಾವರೆಯ ಸೂತ್ರದಿಂದಲೂ ಮತ್ತಿತರ ಹೂಗಳಿಂದಲೂ ರಚಿಸಿದ ಮೊಗ್ಗಿನ ಸರಿಗೆ, ತೋಳಬಳೆ, ಕೈಬಳೆ, ಹಾರ ಮೊದಲಾದವುಗಳನ್ನು ತೃಪ್ತಿಯಾಗುವಷ್ಟು ಧರಿಸಿ ಅಲಂಕಾರಮಾಡಿಕೊಂಡು ಮಾದ್ರಿಯು ವಸಂತಲಕ್ಷಿಯಂತೆ ವಿಶೇಷವಾಗಿ ಒಪ್ಪಿದಳು. ವ|| ಹಾಗೆ ಧರಿಸಿದ ಪುಷ್ಪಾಭರಣವೇ ಮನ್ಮಥನು ಪ್ರಯೋಗಿಸಿದ ಪುಷ್ಪಬಾಣಕ್ಕೆ ಸಮಾನವಾಗಿರಲು ೧೭. ಅಲುಗಾಡುತ್ತಿರುವ ಮುಂಗುರುಳುಗಳಲ್ಲಿ ಸಿಕ್ಕಿಕೊಂಡು ವಿಶೇಷ ಸೌಂದರ್ಯವನ್ನುಂಟುಮಾಡುತ್ತಿರುವ ಸೊಗಸಾದ ಹೂವುಗಳನ್ನು ನಿಧಾನವಾಗಿ ಒಂದು ಪಕ್ಕಕ್ಕೆ ಓಸರಿಸುತ್ತ ಮುಖಕಮಲದ ಸುಗಂಧವನ್ನು ಪಡೆದು ಆಸ್ವಾದಿಸುವುದಕ್ಕೋಸ್ಕರ
Page #135
--------------------------------------------------------------------------
________________
೧೩೦) ಪಂಪಭಾರತಂ
ವll ತಾಪಸಾಶ್ರಮದಿಂ ಪೊಣಮಟ್ಟಂತೆ ಬನಮಂ ತೋಲ ಪಾಂಡುರಾಜಂ ಕಂಡು
ಚಂ 11 ಸೊಗಯಿಸ ತೊಟ್ಟ ಪೂರುಡುಗೆ ಮಲ್ಲರ್ದೆಯೊಳ್ ತಡಮಾಡ ಗಾಡಿ ದಿ
ಟ್ರಗಳೊಳನಂಗರಾಗರಸಮುಣುವಿನ ನಡ ನೋಡಿ ನೋಡಿ || ಟೈಗೆ ಕೊಳೆ ಮೇಲೆ ಪಾಯ್ಕವಳನಪ್ಪಿದನಾ ವಿಭು ತನ್ನ ಶಾಪಮಂ ಬಗೆಯದೆ ಮಲ್ತುದೇವತೆಯನಡ್ಕಅಳುರ್ಕಯಿನಪ್ಪುವಂತವೋಲ್ 11 ೧೮
ವ!| ಅಂತಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತನ್ನ ನಲ್ಗಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗ
ಚಂ| ಬಿಗಿದಮರ್ದಿದ್ರ ತೋಳ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೂ
ಯ್ಯಗೆ ನಗೆಗಣ್ಣಳಾಲಿ ಮಗುಪ್ತಂತಿರೆ ಮುಚ್ಚಿರೆ ಸುಯ್ಯಡಂಗೆ ಮ | ಲ್ಯಗೆ ಮಜಹೊಂದಿದಂದದೊಳೆ ಜೋಲ್ಲ ನಿಜೇಶನನಾ ಲತಾಂಗಿ ತೂ ಟಗೆ ಕೂಳೆ ನೋಡಿ ಕೆಡೆನಿನಿಯಂ ಮಲಹೋಂದಿದನೋ ಬಬಲನೋ || ೧೯
ವ|| ಎಂದು ಪಳಪಟ್ಟ ಸುಯುಮಂ ಕೋಡುವ ಮಯುಮಂ ಕಂಡು ಪರಲೋಕ ಪ್ರಾಪ್ತನಾದುದನಚಿತು
ಮುತ್ತಿಕೊಳ್ಳುತ್ತಿರುವ ದುಂಬಿಯನ್ನು ಕಯ್ಯಲ್ಲಿ ಹಿಡಿದಿದ್ದ ನೆಯ್ದಿಲಪುಷ್ಪದಿಂದ ಮೆಲ್ಲಗೆ ಓಡಿಸುತ್ತ ಬೆಡಂಗಿನಿಂದ ಕೂಡಿ ಸೊಕ್ಕಿದ ಮನ್ಮಥನ ಮದ್ದಾನೆಯಂತೆ ಬರುತ್ತಿದ್ದ 'ಮಾದ್ರಿಯನ್ನು ವ ತಾಪಸಾಶ್ರಮದಿಂದ ಹೊರಗೆಹೊರಟು ಹಾಗೆಯೇ ಕಾಡಿನಲ್ಲಿ ಅಡ್ಡಾಡುತ್ತಿದ್ದ ಪಾಂಡುರಾಜನು ನೋಡಿ ೧೮, ಅವಳು ಧರಿಸಿದ ಪುಷ್ಪಾಲಂಕಾರವು ತನ್ನ ಮೃದುವಾದ ಹೃದಯದಲ್ಲಿ ಸೊಗಯಿಸಲು ಅವಳ ಸೌಂದರ್ಯವು ಅವನ ದೃಷ್ಟಿಯಲ್ಲಿ ಕಾಮರಸವುಕ್ಕುವಷ್ಟು ನಿಧಾನವಾಗಿ ಆಡುತ್ತಿರಲು ಅವಳನ್ನು ತೃಪ್ತಿಯಾಗುವಷ್ಟು ನೋಡಿ ಥಟಕ್ಕನೆ ಹಿಡಿಯಲು ಮೇಲೆ ನುಗ್ಗಿ ಅವಳನ್ನು ರಾಜನಾದ ಪಾಂಡುವು ತನಗಿದ್ದ, ಶಾಪವನ್ನು ಯೋಚಿಸದೆ ಪ್ರೀತ್ಯಾತಿಶಯದಿಂದ ಮೃತ್ಯುದೇವತೆಯನ್ನಪ್ಪುವಂತೆ ಆಲಿಂಗನ ಮಾಡಿಕೊಂಡನು. ವ!! ಹಾಗೆ ವಿಷದ ಬಳ್ಳಿಯನ್ನು ಆಲಿಂಗನ ಮಾಡುವಂತೆ ಅವಳನ್ನು ಅಪ್ಪಿಕೊಳ್ಳಲು ಆ ಪ್ರಿಯಳು ಆಲಿಂಗಿಸಿದ ತಾವರೆಯದಂಟಿನಂತೆ ಮೃದುವೂ ಕೋಮಳವೂ ಆದ ಅವಳ ಬಾಹುಪಾಶವೇ ಯಮಪಾಶವಾಗಲು-೧೯. ಬಿಗಿಯಾಗಿ ಅಪ್ಪಿಕೊಂಡಿದ್ದ ತೋಳು ಸಡಿಲವಾಗಲು ಮುಖವು ಜೋತುಬೀಳಲು ಮುಖದಲ್ಲಿದ್ದ ನಗೆಗಳ ಪಾಪೆಗಳು ಕಾಂತಿಹೀನವಾಗಿ ಮುಚ್ಚಿರಲು ಉಸಿರಾಟವು ನಿಂತುಹೋಗಲು ನಿಧಾನವಾಗಿ ಪ್ರಜ್ಞೆತಪ್ಪಿದವನಂತೆ ಜೋತು ಬಿದ್ದ ತನ್ನ ಪತಿಯನ್ನು ಆ ಮಾದ್ರಿಯು ದಿಟ್ಟಿಸಿನೋಡಿ, ಕೆಟ್ಟೆನು; ಪತಿಯು ಮೂರ್ಛಹೋದನೋ ಇಲ್ಲವೇ ಬಳಲಿದ್ದಾನೋ ವll ಎಂದು (ಹರಿದುಹೋದ) ನಿಂತುಹೋದ ಉಸಿರನ್ನೂ ತಣ್ಣಗಾದ ಮೆಯ್ಯನ್ನೂ ನೋಡಿ ಪತಿ
Page #136
--------------------------------------------------------------------------
________________
ಕಂ || ತಾಪಸನ ಶಾಪವೆಂಬುದು
ದ್ವಿತೀಯಾಶ್ವಾಸಂ | ೧೩೧
ಪಾಪದ ರೂಪತುಮಳೆಯದಂತೇಕೆ ಮನಂ || ಗಾಪಡೆದು ಬಂದು ಮುಟ್ಟಿದ ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ ।।
ನೀನ್ನಿನ್ನ ಸಾವನದನನ ಸುನ್ನೆನೆಯದ ನೆರವನೆಂಬ ಬಗೆಯೊಳ್ ಬಂದೈ 1 ನಿನ್ನೊಡನೆ ವಂದು ದಿವದೊಳ್
ನಿನ್ನ ಮನೋರಥಮನರಸ ನೆಪದ ಮಾಣೆಂ ||
ಉನ್ನತ ಧವಳಚ್ಛತ್ರ
ಚನ್ನ ವಿಯತ್ತಳನನಿಂದುಕುಳತಿಳಕನನಿಂ | ತನ್ನೆಯದಿಂದೀ ಪಟುವಿನೊ
ಇನ್ನರಸನನಿಂತು ಬಿದಿಯೆ ತಂದಿಕ್ಕುವುದೇ ||
OG
ಆ ದೆಸೆಯೊಳ್ ಭೂಭುಜನೋ
ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ |
ತಾ ದೆಸೆಯೊಳ್ ಭೂಪತಿಗೇ
ನಾದುದೂ ಪೇಟ್* ಬಿದಿಯ ಕಟ್ಟಿನಡೆದನೆನುತ್ತುಂ ||
UG
وو
ವ|| ಎಂದು ವನದೇವತೆಗಳೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳು ಭೋಂಕನೆರ್ದದಯದು
ಕಂ
೨೩
ಸತ್ತನೆಂದು ತಿಳಿದಳು. ೨೦. ಪ್ರಿಯನಾದ ಪಾಂಡುರಾಜನೇ ಋಷಿಯ ಶಾಪವು ಪಾಪದ ರೂಪವನ್ನು ತಾಳಿರುವುದು; ತಿಳಿದೂ ತಿಳಿಯದೆ ನಿನ್ನ ಮನಸ್ಸಿನ ಸಂಯಮವನ್ನು ನಾಶಪಡಿಸಿಕೊಂಡು ಬಂದು ಪಾಪಿಷ್ಠಳಾದ ನನ್ನ ಶರೀರವನ್ನು ಏಕೆ ಮುಟ್ಟಿದೆ? ೨೧. ನೀನು ನಿನ್ನ ಸಾವನ್ನು ಸ್ವಲ್ಪವೂ ಯೋಚಿಸದೆ ನಿನ್ನೊಡನೆ ಕೂಡುತ್ತೇನೆ ಎಂದು ಬಂದಿದ್ದೀಯೇ. (ಹಾಗೆಯೇ) ನಾನೂ ನಿನ್ನೊಡನೆ ಬಂದು ಸ್ವರ್ಗದಲ್ಲಿ ನಿನ್ನಿಷ್ಟಾರ್ಥವನ್ನು ಸಲ್ಲಿಸದೆ ಬಿಡುವುದಿಲ್ಲ ೨೨. ಅಯ್ಯೋ ವಿಧಿಯೇ, ಎತ್ತರವಾದ (ರಾಜಸೂಚಕವಾದ) ತನ್ನ ಶ್ವೇತಚ್ಛತ್ರದಿಂದ ಆಕಾಶಪ್ರದೇಶವನ್ನೆಲ್ಲ ಮುಚ್ಚಿದವನೂ ಚಂದ್ರವಂಶಶ್ರೇಷ್ಠನಾದವನೂ ಆದ ಪತಿಯನ್ನು ಹೀಗೆ ಅನಾಯದಿಂದ ಕಾಡಿನಲ್ಲಿ ತಂದೆಸೆಯುವುದೇ ? ವ|| ಎಂದು ವನದೇವತೆಗಳಿಗೆಲ್ಲ ಮರುಕ ಹುಟ್ಟುವ ಹಾಗೆ ಅಳುತ್ತಿದ್ದ ಮಾದ್ರಿಯ ಆ ಧ್ವನಿಯನ್ನು ಕುಂತಿ ಕೇಳಿ ಥಟ್ಟನೆ ಎದೆಬಿರಿದು ೨೩. ಯಾವ ದಿಕ್ಕಿನಲ್ಲಿ ರಾಜನು ಹೋದನು ಆ ದಿಕ್ಕಿನಿಂದಲೇ ಮಾದ್ರಿಯ ಕರುಣಾಮಯವಾದ ಧ್ವನಿಯೂ (ಕೇಳಿಬರುತ್ತಿದೆ) ಅಯ್ಯೋ ದೈವವೇ ನನ್ನ ರಾಜನಿಗೆ
Page #137
--------------------------------------------------------------------------
________________
೧೩೨/ ಪಂಪಭಾರತಂ
ಬಚಿಯನ ಮಕ್ಕಳ್ ಭೋರ್ಗರೆ ದುತುಂ ಪಂ ಪಂಗನಂತ ಪರಿತರೆ ಮುಡಿ ಬಿ | ಟೈಟಲೆ ನಡುನಡುಗೆ ಕಣ್ಣೀರ್
ಗಟಗಟನೊರ್ಮೋದಲೆ ಸುರಿಯೆ ಪರಿತಂದಾಗಳ್ || ೨೪ ವ|| ಅಂತು ತನ್ನ ನಲ್ಲನ ಕಳೇವರಮಂ ತಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುಲಿಯುತ್ತುಮಿರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮಯ್ಯನೀಡಾಡಿ ನಾಡಾಡಿಯಲ್ಲದ ಪಳಯಿಸಿಕಂ || ಅಡವಿಯೊಳೆನ್ನುಮನೆ
ನಡಪಿದ ಶಿಶುಗಳುಮನಿರಿಸಿ ನೀಂ ಪೇಟದ ಪೋ | ದೊಡಮೇನೂ ನಿನ್ನ ಬಳಿಯನ ನಡೆತರ್ಪ೦ ನಿನ್ನರಸ ಬಿಸುಟೆಂತಿರ್ಪೆಂ ||
೨೫ ವ|| ಎಂದು ನೀನೀ ಕೂಸುಗಳಂ ಕೈಕೊಂಡು ನಡಪು ನಲ್ಕನನೆನಗೊಪ್ಪಿಸಾನಾತ ನಾದುದನಪ್ಪನೆನೆ ಮಾದ್ರಿಯಿಂತಂದಳಕಂ || ಎನಗಿಂದಿನೋಂದು ಸೂಟುಮ
ನಿನಿಯಂ ದಯೆಗೆಯ್ಯನನ್ನ ಸೂಟಂ ನಿನಗಾ | ನೆನಿತಾದೊಡಮಿಾವನೆ ಮ
ತನಯ ಕೆಯ್ಯಡೆ ಪಲುಂಬದಿ ಪಾಪವಂ | ವl ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನಣಂ ಪೊಗಲ್ ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ (? ಕಿರ್ಚಿಂಗ ಕುಲದೊಳಂ
ಏನಾಗಿದೆಯೋ ಹೇಳು ಸತ್ತೆ, ಕೆಟ್ಟೆ, ಎಂದು ಚೀರಿದಳು, ೨೪. ಮಕ್ಕಳು ವಿಶೇಷ ಶಬ್ದಮಾಡಿಕೊಂಡು ಅಳುತ್ತಾ ಬೆನ್ನಹಿಂದೆಯೇ ಬರುತ್ತಿರಲು ತಲೆಯ ತುರುಬು ಬಿಚ್ಚಿ ಕೆಳಗೆ ಜೋಲುತ್ತಿರಲು ಸೊಂಟವು ನಡಗುತ್ತಿರಲು ಕಣ್ಣೀರು ಗಳಗಳನೆ ಧಾರಾಕಾರವಾಗಿ ಹರಿಯುತ್ತಿರಲು ಕುಂತಿಯು ಓಡಿಬಂದಳು. ವ|| ತನ್ನ ಪ್ರಿಯನ ಶರೀರವನ್ನು ತಬ್ಬಿಕೊಂಡು ತನ್ನ ಸಾವನ್ನು ನಿಷ್ಕರ್ಷೆ ಮಾಡಿಕೊಂಡು ಹಲ್ಲನ್ನು ಕಿರಿಯುತ್ತಿದ(?) ಮಾದ್ರಿಯನ್ನು ಕಂಡು ಕುಂತಿಯು ನೆಲದಲ್ಲಿ ಬಿದ್ದು ಹೊರಳಾಡಿ ವಿಶೇಷವಾಗಿ ಅತ್ತಳು. ೨೫, ಈ ಕಾಡಿನಲ್ಲಿ ನನ್ನನ್ನೂ ನಾನು ಸಾಕಿದ ಈ ಮಕ್ಕಳನ್ನೂ ಬಿಟ್ಟು ನೀನು ಹೋದರೆ ತಾನೆ ಏನು? ನಾನು ನಿನ್ನ ಹಿಂದೆಯೇ ಬರುತ್ತೇನೆ. ರಾಜನೇ ನಿನ್ನನ್ನು ಬಿಟ್ಟು ನಾನು ಹೇಗಿರಬಲ್ಲೆ? ಎಂದು ಮಾದ್ರಿಯನ್ನು ಕುರಿತು ನೀನು ಈ ಕೂಸುಗಳನ್ನು ಸ್ವೀಕರಿಸಿ ಸಲಹು; ಪ್ರಿಯನನ್ನು ನನಗೊಪ್ಪಿಸು, ಅವನಾದುದನ್ನು ನಾನು ಆಗುತ್ತೇನೆ ಎನ್ನಲು ಮಾದ್ರಿ ಹೀಗೆಂದಳು-೨೬. ನನ್ನ ಪತಿಯು ಇಂದಿನ ಸರದಿಯನ್ನು ನನಗೆ ದಯಮಾಡಿ ಕೊಟ್ಟಿದ್ದಾನೆ. ನನ್ನ ಈ ಸರದಿಯನ್ನು ನಿನಗೆ ಏನಾದರೂ ಕೊಡುತ್ತೇನೆಯೇ! ನನ್ನ ಮಕ್ಕಳು ನಿನ್ನ ಅಧೀನ; ಇದಕ್ಕೆ ವಿರೋಧವಾಗಿ ಬೇರೆ ಬೇರೆ ರೀತಿಯಲ್ಲಿ ಹಂಬಲಿಸಬೇಡ ವ|| ಎಂದು ತಪೋವನದ ಋಷಿಗಳೂ ವನದೇವತಾಸಮೂಹವೂ ತನ್ನ ಸಾಹಸವನ್ನು ಹೊಗಳುತ್ತಿರಲು ಮಾದ್ರಿಯು
Page #138
--------------------------------------------------------------------------
________________
ದ್ವಿತೀಯಾಶ್ವಾಸಂ | ೧೩೩ ಚಲದೊಳಮಾವ ಕಂದುಂ ಕುಂದುಮಿಲ್ಲದೆ ತನ್ನೂರಗಂ ದೊರೆಗಮಾರುಮಿಲ್ಲೆನಿಸಿದಾಗಳ್ ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯಂತೆಂದು ಸಂತೈಸಿದರ್ಚಂ || ಕಳೆದವರ್ಗಟ್ಟುದಡವರೇಡಮಂತವರಿಂ ಬಟಕ್ಕೆ ತಾ
ಮುಳವೊಡಮೇಟರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ | ಗಟೆಯಿಸಿಕೊಳ್ಳುದೊಂದೆ ಚದುರಿಂತುಲು ಸಂಸ್ಕೃತಿ ಧರ್ಮಮೇಕೆ ಬಾ
ಯಳೆವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ ||೨೭ . ವ|| ಅಂತುಮಲ್ಲದಕಂ || ಬಿಡದಬಲ್ಯ ಬಂಧುಜನದೊ
ಅಡಿಯದ ಕಣ್ಣೀರ ಪೂರಮಾ ಪ್ರೇತಮನೋ | ಗಡಿಸದೆ ಸುಡುವುದು ಗಡಮಿ ನಡುಗುವುದೀ ಶೋಕಮಂ ಸರೋಜದಳಾಕ್ಷೀ ||
೨೮ ವಗ ನೀನಿಂತು ಶೋಕಾಕ್ರಾಂತಯಾಗಿ ಸಂಸಾರಸ್ಥಿತಿಯನರಿಯದಜ್ಞಾನಿಗಳಂತ ವಿಪ್ರಳಾ ಪಂಗಯ್ಯಪೊಡೀ ಕೂಸುಗಳ ಮನಮಿಕ್ಕಿಯುಮರ್ದಯಿಕ್ಕಿಯುಂ ಕಿಡುವರೆಂದನೇಕೊಪ ಶಾಂತವಚನಂಗಳಿಂದಮಾಕೆಯುಬೈಗಮನಾಜಿ ನುಡಿದುಮಲ್ಲಿಯ ಮುನಿಜನಮಲ್ಲಮಾ ಕೂಸುಗಳುಮಂ ಕುಂತಿಯುಮಂ ಮುಂದಿಟೊಡಗೊಂಡು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಮಂಬಾಲೆಗಂ ಪಾಂಡುರಾಜನ ವೃತ್ತಾಂತಮನಪಿದೊಡಾಗಳ್
ದಾಹೋತ್ತರದಂತೆ(?) ತನ್ನನ್ನು ಬೆಂಕಿಗೆ ಅರ್ಪಿಸಿಕೊಂಡು (ಸಹಗಮನ ಮಾಡಿ) ಕುಲದಲ್ಲಿಯೂ ಛಲದಲ್ಲಿಯೂ ಸ್ವಲ್ಪವೂ ದೋಷವೂ ನ್ಯೂನತೆಯೂ ಇಲ್ಲದೆ ತನಗೆ ಸಮಾನರಾದವರಾರೂ ಇಲ್ಲ ಎನ್ನಿಸಿದಳು. ಇತ್ತ ಕುಂತಿಯು ದುಃಖದಿಂದ ಕೂಡಿದವಳಾಗಿರಲು ತಪೋವನದಲ್ಲಿದ್ದ ವೃದ್ಧ ತಾಪಸರು ಅವಳನ್ನು ಹೀಗೆಂದು ಸಮಾಧಾನಮಾಡಿದರು. ೨೭. ಸತ್ತವರು ಏಳುವ ಪಕ್ಷದಲ್ಲಿ ಅವರಿಗಾಗಿ ಅಳಬೇಕು. ಇಲ್ಲ ಅವರಾದ ಮೇಲೆ ಉಳಿದ ನಾವು ಉಳಿಯುವ ಪಕ್ಷದಲ್ಲಿಯೂ (ನಾವು ಅಳಬೇಕು). ಹಾಗೆ ಸತ್ತ ಅವರು ಏಳುವುದಿಲ್ಲ. ನಮಗೂ ಬಾಳುವೆಯಿಲ್ಲ; ಧರ್ಮಸಂಗ್ರಹಮಾಡುವುದೊಂದೇ ಜಾಣತನ. ಇಂತಹುದೇ ಸಂಸಾರಧರ್ಮ. ಹೀಗಿರುವಾಗ ಗೋಳಿಡುವುದೇಕೆ? ಚಿಂತಿಸುವುದೇಕೆ ? ಹಲುಬುವುದೇಕೆ ? ವ್ಯಥೆಪಡುವುದೇಕೆ ? ವll ಹಾಗೂ ಅಲ್ಲದೆ ೨೮, ನಿರಂತರವಾಗಿ ಅಳುವ ಬಂಧುಜನಗಳ ಕಣ್ಣೀರಿನ ಪ್ರವಾಹವು ಆ ಪ್ರೇತವನ್ನು ಅಸಹ್ಯಪಡುವ ರೀತಿಯಲ್ಲಿ ಸುಡುವುದಲ್ಲವೆ? ಕಮಲಪತ್ರದಂತೆ ಕಣ್ಣುಳ್ಳ ಎಲೈ ಕುಂತಿಯೇ ಇನ್ನು ಈ ದುಃಖವನ್ನು ನಿಲ್ಲಿಸತಕ್ಕದ್ದು. ವ! ನೀನು ಸಂಸಾರಸ್ಥಿತಿಯನ್ನು ತಿಳಿಯದಜ್ಞಾನಿಯಂತೆ ದುಃಖಾಕ್ರಾಂತಳಾಗಿ ವಿಶೇಷವಾಗಿ ಹಲುಬಿದರೆ ಮಕ್ಕಳು ಉತ್ಸಾಹಶೂನ್ಯರಾಗಿಯೂ ಅಧೈರ್ಯರಾಗಿಯೂ ಕೆಟ್ಟುಹೋಗುವರು ಎಂದು ಅನೇಕವಿಧವಾದ ಸಮಾಧಾನದ ಮಾತುಗಳಿಂದ ಆಕೆಯ ಉದ್ವೇಗವು ಕಡಮೆಯಾಗುವ ಹಾಗೆ ನುಡಿದುದಲ್ಲದೆ ಅಲ್ಲಿಯ ಋಷಿಸಮೂಹವೆಲ್ಲ ಆ ಮಕ್ಕಳನ್ನೂ ಕುಂತಿಯನ್ನೂ ಮುಂದಿಟ್ಟುಕೊಂಡು ಜೊತೆಯಲ್ಲಿ
Page #139
--------------------------------------------------------------------------
________________
೧೩೪ / ಪಂಪಭಾರತಂ
ಕಂ || ತುಳುಗಿದ ಹಿಮಬಿಂದುಗಳಿಂ
ದೆಳಗಿದ ನವ ವನಜವನದವೋಲ್ ಶೋಕದಿನಂ | ದೂವ ನಯನೋದಬಿಂದುವಿ
ನೆಗಿದುದೊರ್ಮೊದಲೆ ಬಂಧುಮುಖ ವನಜವನಂ ||
೨೯
ವ|| ಆಗಳ್ ಪುತ್ರ ಸ್ನೇಹದಿಂದತಿ ಪ್ರಳಾಪಂಗೆಯ್ಯಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮುಕಣಿಸೆ ಬಾಯಡೆದು ಪಳಯಿಸುವ ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ ಜಳದಾನಾದಿಕ್ರಿಯೆಗಳಂ ನಿರ್ವತಿ್ರಸಿ ತದನಂತರದೊಳದುವೆ ನಿರ್ವಗವಾಗ ವ್ಯಾಸವಚನ ದೊಳ್ ಸತ್ಯವತಿಯುಮಂಬಿಕೆಯುಮಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನಾಶ್ರಯಿಸಿದರಿತ್ತ ಗಾಂಗೇಯನಯ್ಯರ್ ಕೂಸುಗಳುಮಂ ತನ್ನ ತೊಡೆಯ ತೊಟ್ಟಿಲಾಗಿ ನಡಪುತ್ತುಮಿರೆ ದುರ್ಯೋಧನ ಪ್ರಕೃತಿಗಳ ನೂರ್ವರುಂ ಧರ್ಮಪುತ್ರಾದಿಗಳಯ್ಯರುಂ ಸಹಪಾಂಸುಕ್ರೀಡಿತರಾಗಿ
ಕಂ|| ಒಡನಾಡಿಯುಮೊಡನೊದಿಯು
ಮೊಡವಳೆದುಂ ಗುಳ್ಳೆಗೊಟ್ಟ ಬಟ್ಟುಳಿಸೆಂಡು | ಪೊಡೆಸೆಂಡಂಬಿವನಾಡು ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ
20
ಕರೆದುಕೊಂಡು ಹಸ್ತಿನಾಪಟ್ಟಣಕ್ಕೆ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೂ ಅಂಬಾಲೆಗೂ ಪಾಂಡುರಾಜನ ವೃತ್ತಾಂತವನ್ನು ತಿಳಿಸಿದರು. ೨೯. ದಟ್ಟವಾಗಿ ಬೀಳುವ ಮಂಜಿನಹನಿಗಳಿಂದ (ಬಗ್ಗಿರುವ) ಆವರಿಸಲ್ಪಟ್ಟ ಹೊಸತಾವರೆಯ ತೋಟದಂತೆ ಬಂಧುಜನಗಳ ಮುಖವೆಂಬ ಕಮಲದ ವನವು ಅಂದು ದುಃಖದಿಂದ ಸ್ರವಿಸುತ್ತಿರುವ ಕಣ್ಣಿನ ಹನಿಗಳಿಂದ ಒಟ್ಟಿಗೇ ಬಗ್ಗಿದುವು. ವ|| ಆಗ ಮಗನ ಮೇಲಿನ ಪ್ರೀತಿಯಿಂದ ಗೋಳಿಡುತ್ತಿದ್ದ ಅಂಬಾಲೆಯನ್ನೂ ನೆಂಟರನ್ನೂ ನೋಡುವುದರಿಂದ ಪುನಃ ಕಾಣಿಸಿ ಕೊಂಡ ದುಃಖದಿಂದ ಬಾಯಿ ಬಿಟ್ಟು ಅಳುತ್ತಿದ್ದ ಕುಂತಿ, ಭೀಷ್ಮ, ಧೃತರಾಷ್ಟ್ರ, ವಿದುರರುಗಳನ್ನೂ ಸತ್ಯವತೀದೇವಿಯನ್ನೂ ಸಮಾಧಾನಮಾಡಿ ಪಾಂಡುರಾಜನಿಗೆ ತರ್ಪಣಾದಿಕ್ರಿಯೆಗಳನ್ನು ಮಾಡಿ ಮುಗಿಸಿ ಆಮೇಲೆ ಆ ದುಃಖವೇ ವಿರಕ್ತಿಗೆ ಕಾರಣ ವಾಗಲು ವ್ಯಾಸರ ಉಪದೇಶದಂತೆ ಸತ್ಯವತಿಯೂ ಅಂಬೆ ಅಂಬಾಲೆಯರೂ ಸಂಸಾರ ತ್ಯಾಗಮಾಡಿ ತಪೋವನವನ್ನು ಆಶ್ರಯಿಸಿದರು. ಈ ಕಡೆ ಭೀಷ್ಮನು ಅಯ್ದು ಮಕ್ಕಳನ್ನೂ ತನ್ನ ಮಡಿಲೇ ತೊಟ್ಟಿಲಾಗಿರುವಂತೆ ಸಾಕುತ್ತಿರಲು ದುರ್ಯೋಧನನೇ ಮೊದಲಾದ ನೂರು ಮಂದಿಯೂ ಧರ್ಮರಾಜನೇ ಮೊದಲಾದ ಅಯ್ದು ಜನಗಳೂ ಒಟ್ಟಿಗೆ ಧೂಳಾಟವನ್ನಾಡುತ್ತಿರುವವರಾದರು. ೩೦. ಒಡನೆ ಆಡಿಯೂ ಒಡನೆ ಓದಿಯೂ ಜೊತೆಯಲ್ಲಿಯೇ ಬೆಳೆದೂ ಗೊಳ್ಳೆಗೊಟ್ಟಿ, ಬಟ್ಟಿ, ಉಳಿಕೆಂಡು, ಪೊಡೆಸೆಂಡು ಎಂಬ ಈ ಆಟಗಳನ್ನಾಡುತ್ತಲೂ ತಮ್ಮ ತಮ್ಮಲ್ಲಿ ಪ್ರತ್ಯೇಕವಾದ ಸ್ನೇಹವನ್ನು ಬೆಳೆಸುತ್ತ
Page #140
--------------------------------------------------------------------------
________________
ದ್ವಿತೀಯಾಶ್ವಾಸಂ | ೧೩೫ ವll ಅಂತಾ ಕೂಸುಗಳ ಕೂಸಾಟವಾಡುತ್ತಿರ್ದೊಂದು ದಿವಸ ಮರಗೆರಸಿಯಾಡಲೆಂದು ಮುಂದೆ ತಮ್ಮ ಪಗೆ ಪರ್ವುವಂತ ಪರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು ಭೀಮನಂ ಮಜಮಾಡಿ ಕೋಲವೀಡಾಡಿ ಪಲವು ಸೂಮ್ ಕಾಡಿಕಂ || ಪರಿದನಿಬರುಮೊಡನಡರ್ದಿರೆ
ಮರನಂ ಮುಟ್ಟಿ ಪಡೆಯದನಿಬರ್ಗ೦ ಕಿಂ | ಕಿರಿವೋಗಿ ಭೀಮಸೇನಂ
ಮರನಂ ಪಿಡಿದ ಪನ್ಮೂಲನಿಬರುಮುದಿರ್ದರ್ || ೩೧ ವlt ಅಂತು ಬಿಟ್ಟು ಸುಲಿದ ಮೊಳಕಾಲ್ಗಳುಂ ಕಬಲ್ಲ ಪಲ್ಗಳುಮಲ್ವಡಗಾದ ಮೈಯ್ದಳು ಮುಡಿದ ಕೆಳುವಾಗಿ ಬೆರಸುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗ ಕಾರಣಂಬೇಡವರಿಂದಿತ್ತ ಭೀಮನೊಡನಾಡದಿರಿಮೆಂದು ಮುದುಗಲ್ ಬಾರಿಸಿ ತಮ್ಮ ನೊಂದ ಸಿಗ್ಗಿಂಗನಿಬರುಮೊಂದಾಗಿ ಪೋಗಿ ಪೊಜವೊಬಲ ಮರದ ಕೆಳಗೆ ಮಲಹೊಂದಿದ ಭೀಮನನಡಸಿ ಪಿಡಿದು ನೂರ್ವರುಂ ಗಂಟಲಂ ಮೆಟ್ಟಿಕಂ 1 ಪಾವುಗಳಂ ಕೊಳಿಸಿ ಮಹಾ
ಗ್ರಾವಮನುಜದಡಸಿ ಕಟ್ಟಿ ಕೂರಲೋಳ್ ಗಂಗಾ | ದೇವಿಯ ಮಡುವಿನೊಳಟ್ಟಿದ ರಾವರಿಸದೆ ತಮ್ಮ ಕುಲಮನಡಿಗಟ್ಟುವವೋಲ್ ||
ಜೊತೆಯಲ್ಲಿಯೇ ಬೆಳೆದರು. ವ|| ಆ ಮಕ್ಕಳು ಮಕ್ಕಳಾಟವನ್ನಾಡುತ್ತಿದ್ದು ಒಂದು ದಿನ ಮರಗೆರಸಿಯೆಂಬ ಆಟವನ್ನು ಆಡಲೆಂದು (ಬಂದು) ಮುಂದಿನ ತಮ್ಮ ಹಗೆತನ ಹಬ್ಬುವುದನ್ನು (ಇಂದೇ) ಸೂಚಿಸುವಂತೆ ಹನ್ನೆರಡುಮತ್ತರಷ್ಟು ಅಗಲವಾಗಿ ಬೆಳೆದ ಆಲದ ಮರದ (ಕೆಳಭಾಗಕ್ಕೆ) ಬಂದ ಭೀಮನನ್ನು ಕಾಣದ ಹಾಗೆ ಇರಿಸಿ ಕೋಲನ್ನೆಸೆದು ಅನೇಕ ಸಲ ಕಾಡಿದನು. ೩೧. ಓಡಿದ ಅಷ್ಟಮಂದಿಯೂ ಒಟ್ಟಿಗೆ ಮರವನ್ನು ಹತ್ತಿರಲು ಅವರನ್ನು ಮುಟ್ಟುವುದಕ್ಕಾಗದೆ ಅಷ್ಟು ಜನರ ಮೇಲೆಯೂ ರೇಗಿ ಕೋಪಿಸಿಕೊಂಡು ಭೀಮನು ಮರವನ್ನು ಹಿಡಿದು ಅಳ್ಳಾಡಿಸಲು ಹಣ್ಣಿನ ಹಾಗೆ ಅಷ್ಟು ಜನವೂ ಕೆಳಗೆ ಉದುರಿದರು (ಬಿದ್ದರು). ವ|| ಹಾಗೆ ಬಿದ್ದು ತರೆದುಹೋದ ಮೊಣಕಾಲುಗಳಿಂದಲೂ ಕಳೆದುಹೋದ ಹಲ್ಲುಗಳಿಂದಲೂ ಜಜ್ಜಿಹೋದ ಶರೀರದಿಂದಲೂ ಮುರಿದ ಕಮ್ಮಿಂದಲೂ ಕೂಡಿ ಅಳುತ್ತಾ ಬಂದು ಭೀಷ್ಮದೃತರಾಷ್ಟರಿಗೆ ಹಾಗಾಗುವುದಕ್ಕೆ ಕಾರಣ ವನ್ನು ತಿಳಿಸಲು ಅವರು ಅಂದಿನಿಂದ ಮುಂದೆ ಭೀಮನೊಡನಾಡಬೇಡಿ ಎಂದು ವೃದ್ದರು (ಮುದಿಕಣ್ಣುಗಳು) ನಿವಾರಿಸಲು ತಾವು ನೊಂದ ನಾಚಿಕೆಗಾಗಿ ಅಷ್ಟು ಜನವೂ ಒಟ್ಟುಗೂಡಿಹೋಗಿ ಪಟ್ಟಣದ ಹೊರಭಾಗದಲ್ಲಿ ಮರದ ಕೆಳಗೆ ಮೈಮರೆತು ನಿದ್ದೆಮಾಡುತ್ತಿದ್ದ ಭೀಮನ ಮೇಲೆ ಬಿದ್ದು ಹಿಡಿದು ನೂರುಜನರೂ ಅವನ ಕತ್ತನ್ನು ತುಳಿದು ೩೨. ಹಾವುಗಳಿಂದ ಕಚ್ಚಿಸಿ ದೊಡ್ಡಕಲ್ಲನ್ನು ಕುತ್ತಿಗೆಗೆ ಬಿಗಿಯಾಗಿ ಕಟ್ಟಿ ತಮ್ಮ ವಂಶವನ್ನೇ ತಳಕ್ಕೆ ಅದ್ದುವ ಹಾಗೆ ವಿಚಾರಮಾಡದೆ ಗಂಗಾನದಿಯ ಮಡುವಿನಲ್ಲಿ
Page #141
--------------------------------------------------------------------------
________________
೧೩೬ | ಪಂಪಭಾರತಂ
ವ|| ಅಂತುವುದುಂ ಗಂಗಾದೇವಿಯ ವರಪ್ರಸಾದದೂಳ್ ವಿಷಮ ವಿಷಧರಂಗಳ್ ಪರಿಯ ಕೊರಳೊಳ್ ತೊಡರ್ದ ಶಿಲೆಯಂ ಪಟಿದೀಡಾಡಿ ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುಟ್ಟು ಬಂದಂಗೆ ವಿಷದ ಲಡ್ಡುಗೆಯನಿಕ್ಕಿಯುಮನಿತಾನುಮುಪದ್ರವಂಗಳೊಳ ತೊಡರಿಕ್ಕಿಯುಂ ಗೆಲಲಾಟದ ಮನಮಿಕ್ಕಿಯುಮೆರ್ದೆಯಿಕ್ಕಿಯುಮಿರ್ದರಂತಯ್ಯರ್ ಕೂಸುಗಳಂ ಗಾಂಗೇಯಂ ಚಲೋಪನಯನಾದಿ ಕ್ರಿಯೆಗಳು ಮಾಡಿ ಸುಖಮಿರ್ಷನ್ನೆಗಮಿತ್ತ ಗ ಮಾಯಾಪುರವೆಂಬ ಋಷ್ಯಾಶ್ರಮದೊಳ್ ಗೌತಮನೆಂಬಂ ಬ್ರಹ್ಮಋಷಿ ತಪಂ ಗೆಯ್ಯುತಿರ್ಪಿನಮಾ ಋಷಿಗೆ ಬಿಲ್ಲುಮಂಬುಂವೆರಸೊರ್ವ ಮಗಂ ಪುಟ್ಟಿದನಾತಂಗೆ ಶರದ್ವತನೆಂದು ಹೆಸರನಿಟ್ಟು ನಡಪ ಬಳೆದು ತಪಂಗೆಯ್ದಾತನಲ್ಲಿಗೆ ಜಲಕ್ರೀಡಾ ನಿಮಿತ್ತದಿಂದಿಂದ್ರನಚರಸೆ ಜಲಚರೆಯೆಂಬವಳ ಬಂದೂಡಾಕೆಯಂ ಕಂಡು ಕಾಮಾಸಕ್ತಚಿತ್ತನಾಗಿ ಕೂಡಿಕಂ | ಒಗೆದ ಶರಸ್ತಂಬದೊಳಿ
ರ್ಬಗಿಯಾಗಿ ಮನೋಜ ರಾಗರಸಮುರುತರೆ ತೋ | . ಟೈಗೆ ಬಿಸುಟು ಬಿಲ್ಲನಂಬುವ ನಗಲ್ಯನಾಶ್ರಮದಿನುದಿತ ಲಜ್ಞಾವಶದಿಂ 11
ವಅನ್ನೆಗಮಾ ತಪೋವನಕ್ಕೆ ಬೇಂಟೆಯಾಡಲ್ಕಂದ ಶಂತನುವಿನೊಡನೆಯವರಾ ಶರಸ್ತಂಬದೂ ಪರಿಕಲಿಸಿರ್ದ ಮುನೀಂದ್ರನಿಂದ್ರಿಯದೂಳೊಗದ ಪಣಸುಮಂ ಗಂಡುಗೂಸುಮನವಜ ಕೆಲದೊಳಿರ್ದ ದಿವ್ಯ ಶರಾಸನ ಶರಂಗಳುಮಂ ಕಂಡು ಕೊಂಡುವೋಗಿ
ಮುಳುಗಿಸಿದರು. ವ|| ಹಾಗೆ ಮುಳುಗಿಸಿದರೂ ಗಂಗಾದೇವಿಯ ವರಪ್ರಸಾದದಿಂದ ವಿಷಯುಕ್ತವಾದ ಹಾವುಗಳು ಹರಿದುಹೋದವು. ಕೊರಳಿನಲ್ಲಿ ಕಟ್ಟಿದ್ದ ಕಲ್ಲನ್ನು ಕಿತ್ತು ಬಿಸಾಡಿ ಗಂಗೆಯ ನೀರನ್ನು ತೋಳಿನಿಂದ ಕಲಕಿ ತಳ್ಳಿ ಪುನಃ ಹಿಂತಿರುಗಿದವನಿಗೆ ವಿಷದ ಲಾಡುಗಳನ್ನು ತಿನ್ನಿಸಿಯೂ ಇನ್ನೂ ಅನೇಕ ವಿಧವಾದ ಕಷ್ಟಗಳಲ್ಲಿ ಸಿಕ್ಕಿಸಿಯೂ ಗೆಲ್ಲಲಾರದೆ ಉತ್ಸಾಹಶೂನ್ಯರಾಗಿಯೂ ಧೈರ್ಯಕುಗ್ಗಿದವರಾಗಿಯೂ ಇದ್ದರು. (ಈ ಕಡೆ) ಭೀಷ್ಮನು ಅಯ್ದು ಜನ ಮಕ್ಕಳಿಗೂ ಲೋಪನಯನಾದಿ ಕರ್ಮಗಳನ್ನು ಮಾಡಿ ಸುಖವಾಗಿದ್ದನು. (ಈ ಕಡೆ) ಗಂಗಾದ್ವಾರದಲ್ಲಿ ಮಾಯಾಪುರವೆಂಬ ಋಷ್ಯಾಶ್ರಮದಲ್ಲಿ ಗೌತಮನೆಂಬ ಬ್ರಹ್ಮಋಷಿಯು ತಪಸ್ಸು ಮಾಡುತ್ತಿರಲು ಆ ಋಷಿಗೆ ಬಿಲ್ಲುಬಾಣಗಳಿಂದ ಕೂಡಿದ ಒಬ್ಬ ಮಗನು ಹುಟ್ಟಿದನು. ಅವನಿಗೆ ಶರದ್ವತನೆಂದು ಹೆಸರನ್ನಿಟ್ಟು ಸಲಹಿದನು. ಅಭಿವೃದ್ದಿಯಾದ (ಬೆಳೆದ) ಆ ಋಷಿಯ ಬಳಿಗೆ ಜಲಕ್ರೀಡೆಯ ನೆಪದಿಂದ ಇಂದ್ರನ ಅಪ್ಪರಸ್ತೀಯಾದ ಜಲಚರೆಯೆಂಬುವಳು ಬರಲು (ಆ ಋಷಿಯು) ಆಕೆಯನ್ನು ನೋಡಿ ಕಾಮಾಸಕ್ತನಾಗಿ ಅವಳೊಡನೆ ಕೂಡಿ -೩೩. ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ ರೇತಸ್ಸು ಎರಡು ಭಾಗವಾಗಿ ಸುರಿಯಲು ಆ ಶರದ್ವತನು ತನಗೊದಗಿದ ನಾಚಿಕೆಯಿಂದ ಬಿಲ್ಲುಬಾಣಗಳನ್ನು ಕೂಡಲೆ ಬಿಸಾಡಿ ಋಷ್ಯಾಶ್ರಮವನ್ನು ಬಿಟ್ಟು ಹೋದನು. ವ|| ಅಷ್ಟರಲ್ಲಿ ಆ ತಪೋವನಕ್ಕೆ ಬೇಟೆಯಾಡುವುದಕ್ಕಾಗಿ ಬಂದಿದ್ದ. ಶಂತನುವಿನೊಡನಿದ್ದವರು ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ್ದ ಋಷಿಶ್ರೇಷ್ಠನ ವೀರ್ಯದಿಂದ (ರೇತಸ್ಸಿನಿಂದ) ಹುಟ್ಟಿದ ಹೆಣ್ಣು ಕೂಸನ್ನೂ ಗಂಡುಕೂಸನ್ನೂ ಅವುಗಳ ಪಕ್ಕದಲ್ಲಿ ಬಿಲ್ಲುಬಾಣಗಳನ್ನೂ ನೋಡಿ ಅವುಗಳನ್ನು ತೆಗೆದುಕೊಂಡು ಹೋಗಿ
Page #142
--------------------------------------------------------------------------
________________
ದ್ವಿತೀಯಾಶ್ವಾಸಂ | ೧೩೭ ಶಂತನುಗೆ ತೋಚಿದೊಡಾತನುಮಾ ಶಿಶುದ್ವಯಮಂ ನಿಜ ಗಜಪುರಕ್ಕುಯು ಕೃಪೆಯಿಂ ನಡಪಿದನಪ್ಪುದಂ ಕೃಪನುಂ ಕೃಪಯುಮೆಂದು ಹೆಸರನಿಟ್ಟು ನಡಪುತ್ತಿರ್ಪನ್ನೆಗಮವರಯ್ಯಂ ಶರದ್ವತನಲ್ಲಿಗೆ ಬಂದು ಕಿಳಿಯಾತಂಗೆ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಧನುರ್ವಿದ್ಯೋಪದೇಶಂಗೆಯ್ಯ ಸರ್ವವಿದ್ಯಾವಿಶಾರದನಾದನಾ ಕೃಪಾಚಾರ್ಯರ ಪಕ್ಕದೊಳ್ ಕೂಸುಗಳಂ ವಿದ್ಯಾಭ್ಯಾಸಂಗಯ್ಯಚಂ || ಬರೆಯದೆ ಬಂದ ಸುದ್ದಗೆಯ ಸೂತ್ರಮನೊಂದೆ ಮುಹೂರ್ತಮಾತ್ರದಿಂ
ಬರಿಸಿದುದುಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜಾತವೃತ್ತಿವೋಲ್ | ಪರಿಣಮಿಸಿತ್ತು ಮತ್ತುಟಿದ ವಿದ್ಯೆಗಳೊಜರೆ ಚಟ್ಟರೆಂಬಿನಂ
ನೆರೆದುವು ತನ್ನೊಳಾರ್ ಗಳ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್ || ೩೪
ವ|| ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಕ್ರಿತಮಪ್ಪಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಯಪಪ್ರಕೃತಿ ವಿರಚಿತಂಗಳಪ್ಪ ಮಹಾಕಾವಂಗಳೊಳಂ ನಾಂದೀಪರೋಚನಾಪ್ರಸ್ತಾವನೇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಷ್ಟ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೂಳಮಾಳಿಂಗದೊಳಮಯ್ಯು ತಂದ ಮಂತ್ರಂಗಳೊಳಮಾಜುಲ ದರ್ಶನದೂಳಂ ಪ್ರತ್ಯಕ್ಷಾನುಮಾನ ಪ್ರಮಾಣಂಗಳೊಳಂ ಭರತಪ್ರಣೀತ ನೃತ್ಯಶಾಸ್ತದೊಳಂ ನಾರದಾದಿ ಪ್ರಣೀತ
ಶಂತನುವಿಗೆ ತೋರಿಸಿದರು. ಅವನು ಆ ಎರಡು ಮಕ್ಕಳನ್ನೂ ತನ್ನ ಹಸ್ತಿನಾಪುರಕ್ಕೆ (ಕರೆದು ಕೊಂಡುಹೋಗಿ ಕೃಪೆಯಿಂದ ಕೃಪೆ ಮತ್ತು ಕೃಪ ಎಂದು ಹೆಸರಿಟ್ಟು ಸಾಕಿದನು. ಅವರ ತಂದೆಯಾದ ಶರದ್ವತನು ಅಲ್ಲಿಗೆ ಬಂದು ಚಿಕ್ಕವನಿಗೆ ಚೌಳೋಪನಯನವೇ ಮೊದಲಾದ ಕರ್ಮಗಳನ್ನೂ ಮಾಡಿ ಬಿಲ್ಲಿನ ವಿದ್ಯೆಯನ್ನೂ ಹೇಳಿಕೊಡಲು ಅವನು ಸರ್ವವಿದ್ಯಾವಿಶಾರದನಾದನು. ಭೀಷ್ಮನು ಆ ಕೃಪಾಚಾರ್ಯರ ಬಳಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿದನು. ೩೪. ಗುಣಾರ್ಣವನ ಹಾಗೆ (ಅರ್ಜುನ-ಅರಿಕೇಸರಿ) ಕುಶಾಗ್ರಬುದ್ದಿಗಳಾಗಿರುವವರು ಯಾರಿದ್ದಾರೆ? ಏಕೆಂದರೆ 'ಶುದ್ದವರ್ಣಮಾಲೆಯ ಸೂತ್ರವನ್ನೂ ಅಭ್ಯಾಸಮಾಡದೆಯೇ ಕ್ಷಣಮಾತ್ರದಲ್ಲಿ ಅಕ್ಷರಗಳನ್ನೂ ಕಲಿತನು. ಹಾಗೆಯೇ ಸೂತ್ರರೂಪದಲ್ಲಿ ಹೇಳಿದವುಗಳು ಅರ್ಥವಿವರಣೆಯಿಲ್ಲದೆಯೇ ತನ್ನ ಸಹಜ ಸ್ವಭಾವದಿಂದಲೇ ಅವನಿಗೆ ಅಧೀನವಾದುವು. ಉಳಿದ ಅನೇಕ ವಿದ್ಯೆಗಳು ಉಪಾಧ್ಯಾಯರ ಶಿಷ್ಯರಾದಂತೆ ಅವನಲ್ಲಿ ಸೇರಿಕೊಂಡವು. ವll ಹಾಗೆ ಅಯ್ತು ಅಂಗಗಳಿಂದ ಕೂಡಿದ ವ್ಯಾಕರಣಶಾಸ್ತ್ರ ಮತ್ತು ವೃತ್ತಿಭೇದದಿಂದ ಕೂಡಿದ ಛಂದಶ್ಯಾಸ್ತ್ರಗಳಲ್ಲಿಯೂ ಶಬ್ದಾಲಂಕಾರದಿಂದ ಕೂಡಿದ ಅಲಂಕಾರಶಾಸ್ತ್ರದಲ್ಲಿಯೂ ವ್ಯಾಸ ವಾಲ್ಮೀಕಿ ಕಶ್ಯಪ ಮೊದಲಾದವರಿಂದ ರಚಿತವಾದ ಮಹಾಕಾವ್ಯಗಳಲ್ಲಿಯೂ ನಾಂದಿ, ಪ್ರರೋಚನ, ಪ್ರಸ್ಥಾವನ, ಇತಿವೃತ್ತ, ಸಂಧಿಪ್ರವೇಶ, ನಿಷ್ಕಂಭ, ಕಪೋತಿಕಾ, ವ್ಯಾಳಿಕಾ ಮೊದಲಾದ ಲಕ್ಷಣಗಳಿಂದ ಕೂಡಿದ ನಾಟಕಶಾಸ್ತ್ರದಲ್ಲಿಯೂ ಹದಿನೆಂಟು ಧರ್ಮಶಾಸ್ತ್ರಗಳಲ್ಲಿಯೂ ನಾಲ್ಕು ವೇದಗಳಲ್ಲಿಯೂ ಆರು ಅಂಗಗಳಲ್ಲಿಯೂ ಅಯ್ತು ರೀತಿಯ ಮಂತ್ರಗಳಲ್ಲಿಯೂ ಆರು ದರ್ಶನಗಳಲ್ಲಿಯೂ ಭರತಪ್ರಣೀತವಾದ ನಾಟ್ಯ
Page #143
--------------------------------------------------------------------------
________________
೧೩೮ | ಪಂಪಭಾರತಂ ಗಾಂಧರ್ವವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾಪೂರ್ವಯಂತ್ರ ಪ್ರಯೋಗ ವಿಷಾಪಹರಣ ಸರಭೇದ ರತಿತಂದ್ರಜಾಲ ವಿವಿಧ ವಿದ್ಯೆಗಳೊಳಮನೇಕಾಕ್ಷರ ಸ್ವರೂಪಗಳೊಳಂ ಚಾಪ ಚಕ್ರ ಪರಶು ಕೃಷಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಂಡಿವಾಳ ಮುದ್ಧರ ಗದಾದಿ ವಿವಿಧಾಯುಧಂಗಳೊಳಮತಿ ಪ್ರವೀಣನುವಾರೂಢಸರ್ವಜ್ಞ ಮಹೇಂದ್ರ ಜಾಣ(ನುಮಾಗಿಕಂll ಉಳೊದುಗಳೊಳಗನಿತ
ವುಳರ್ಗ೦ ತಿಳಿಸಲರಿಯದೆನಿಪಡೆಗಳುಮಂ || ತೆಳ್ಳಗಿರೆ ತಿಳಿಪುಗುಂ ಬೆಸ
ಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ರಮುಮುಂ || ೩೫ ವಗಿರಿ ಎಂದು ಲೋಕಮೆಲ್ಲಂ ಪೊಗಂ ನೆಗಟ್ಟಿ ಪೊಗಗಂ ನೆಗಗಂ ತಾನೆ ಗುಚಿಯಾಗಿಕಂ | ಮಾನಸದೊಳ್ ಹಂಸೆಯವೂಲ್'
ಮಾನಸ ವಾಗ್ವನಿತ ತನ್ನ ಮಾನಸದೊಳಿವಂ | ಮಾನಸನೆಂದಗಲದೆ ನಿಳೆ ಮಾನಸನಾದಂ ಸರಸ್ವತೀ ಕಳಹಂಸಂ ||
ಶಾಸ್ತ್ರದಲ್ಲಿಯೂ ನಾರದನೇ ಮೊದಲಾದವರಿಂದ ರಚಿತವಾದ ಸಂಗೀತ ವಿದ್ಯಾವಿಶೇಷಗಳಲ್ಲಿಯೂ ಹಸ್ತಿಶಾಸ್ತ್ರಜ್ಞರಾದ ರಾಜಪುತ್ರ ಗೌತಮ, ವಾದ್ವಾಕಿ, ಪಾಳಕಾಪ್ಯ, ಸುಗತಿ, ಶ್ರೀಹರ್ಷನೇ ಮೊದಲಾದ ಪ್ರಾಚೀನರಿಂದ ವಿರಚಿತವಾದ ಹಸ್ತಿಶಾಸ್ತ್ರದಲ್ಲಿಯೂ ಚಿತ್ರಕರ್ಮ, ಪತ್ರಚ್ಛೇದ, ಗ್ರಹಗಣಿತ, ರತ್ನಪರೀಕ್ಷೆಗಳಲ್ಲಿಯೂ ದಾರುಕರ್ಮ, ವಾಸ್ತು - ವಿದ್ಯೆಗಳಿಂದ ಕೂಡಿದ ಯಂತ್ರೋಪಯೋಗದಲ್ಲಿಯೂ ವಿಷಾಪಹರಣ, ಸ್ವರಭೇದ, ರತಿತಂತ್ರ, ಇಂದ್ರಜಾಲ ಮೊದಲಾದ ಬಗೆಬಗೆಯ ವಿದ್ಯೆಗಳಲ್ಲಿಯೂ ಅನೇಕಾಕ್ಷರಸ್ವರೂಪದಲ್ಲಿಯೂ ಚಾಪ, ಚಕ್ರ, ಪರಸು, ಕೃಪಾಣ, ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಧರ, ಗದೆಯೇ ಮೊದಲಾದ ವಿಧವಿಧವಾದ ಆಯುಧಗಳ ಪ್ರಯೋಗದಲ್ಲಿಯೂ ಅತಿಪ್ರವೀಣನೂ ಸರ್ವಜ್ಞತ್ವವುಳ್ಳವನೂ ಇಂದ್ರನಂತೆ ಜಾಣನೂ ಆದನು. ೩೫. ಇರುವ ವಿದ್ಯೆಗಳಲ್ಲೆಲ್ಲ ಪೂರ್ಣಪಾಂಡಿತ್ಯಪಡೆದವರಿಗೂ ತಿಳಿಸುವುದಕ್ಕೆ ಅಸಾಧ್ಯವಾದ ಸ್ಥಳಗಳಲ್ಲಿಯೂ ಅರ್ಜುನನು (ಅರಿಕೇಸರಿಯು) ಸರಳವಾಗಿ ತಿಳಿಸುತ್ತಾನೆ. ಅರ್ಜುನನ ಲೆಕ್ಕಪೊಕ್ಕಗಳನ್ನು ವಿಚಾರಮಾಡಿ ನೋಡಯ್ಯಾ ವl ಎಂದು ಲೋಕದ ಜನರೆಲ್ಲ ಹೊಗಳುವ ಹಾಗೆ ಪ್ರಸಿದ್ಧಿಪಡೆದ ಹೊಗಳಿಕೆಗೂ ಪ್ರಸಿದ್ದಿಗೂ ತಾನೆ ಗುರಿಯಾದನು. ೩೬, ಇವನ ಮನಸ್ಸಿನಲ್ಲಿ ಹುಟ್ಟಿದ ವಾಗ್ಗೇವತೆಯು ಇವನು ಮನುಷ್ಯನೆಂದು ಬಿಟ್ಟು ಹೋಗದೆ ಮಾನಸ ಸರೋವರದಲ್ಲಿರುವ ಹಂಸಪಕ್ಷಿಯ ಹಾಗೆ ಸ್ಥಿರವಾಗಿ ನಿಲ್ಲಲು ಸರಸ್ವತಿಯ ವಾಹನವಾದ ಹಂಸದ ಹಾಗಿರುವ ಅರ್ಜುನನು ಮನುಷ್ಯಮಾತ್ರನಾಗಿದ್ದಾನೆ.
Page #144
--------------------------------------------------------------------------
________________
ದ್ವಿತೀಯಾಶ್ವಾಸಂ | ೧೩೯. ವಗೆ ಅಂತಯ್ಯರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮತಿಗಳೊಳಂ ಪ್ರವೀಣನಾದಂ ಭೀಮಸೇನಂ ವ್ಯಾಕರಣದೊಳಾರಿಂದ ಮಗ್ಗಳಂ ಕುಶಲನಾದ ನಕುಲಂ ಕುಂತಶಸ್ತದೊಳತಿ ಪ್ರವೀಣನುಮಾಗಿ ಅಶ್ವವಿದೈಯೊಳಾರಿಂದಂ ಪಿರಿಯನಾದಂ ಸಹದೇವಂ ಜ್ಯೋತಿರ್ಜ್ಞಾನದೊಳತಿ ಪರಿಣತನಾದರೆ,
ಚಂ || ಬಳೆದುವು ತೋಳಳೆಕೊಯಿನಮಳ್ ಬಳೆವಂತಿರೆ ಮುಯ್ಯುಗಳ್ ಕುಳಾ
ಚಳ ಶಿಖರಂಗಳಂ ಮಸುಳೆವಂದುವು ಪರ್ವಿದ ವಕ್ಷಮಾ ಕ್ಷಮಾ | ತಳ ಕುಳಲಕ್ಷ್ಮೀ ಗಾಯ್ತು ಕುಳಮಂದಿರವೆಂದು ಮಹೀತಳಂ ಮನಂ ಗೂಳೆ ನೆವದತ್ತುದಾತ್ತ ನವಯೌವನಮೊರ್ಮೆಯ ಧರ್ಮಪುತ್ರನಾ || ೩೭
ವ|| ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತಪ್ಪ ತನ್ನ ಮಯ್ಯ ಬಣ್ಣ ಮಳವಲ್ಲದೊಪ್ಪೆ- ..
ಚಂ || ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂ
ತೋಳವೆನಿಪಂತುಟಪ್ಪ ಪೊಸ ಬಣ್ಣದೋಳೋಂದಿದ ಪಾರಿಜಾತಮ || ಗಳಮಸೆದೊಪ್ಪುವಂತೆ ತಳಿರೀಂ ಮುಗುಳಿಂ ನವವನಂ ಮನಂ ಗೊಳೆ ಕರದೊಪ್ಪಿದಂ ದಶ ಸಹಸ್ಯ ಮಜೀಭ ಬಳಂ ವೃಕೋದರಂ || ೩೮
.
ವll ಅಂತೊಪ್ಪುವ ಗಂಡಗಾಡಿಯೊಳಿಂದ್ರನೀಲದಂತಪ್ಪ ಬಣ್ಣು ಕಣ್ಣೆವರೆ-: : ವll ಹಾಗೆ ಅಯ್ತು ಜನರೂ ಸಮಸ್ತಶಸ್ತಶಾಸ್ತಪ್ರಯೋಗಗಳಲ್ಲಿಯೂ ನಿಪುಣರಾದರು. ಧರ್ಮರಾಜನು ಧರ್ಮಶಾಸ್ತ್ರಗಳಲ್ಲಿಯೂ ಶ್ರುತಿಸ್ಕೃತಿಗಳಲ್ಲಿಯೂ ಪ್ರವೀಣನಾದನು. ಭೀಮಸೇನನು ವ್ಯಾಕರಣದಲ್ಲಿ ಎಲ್ಲರಿಗಿಂತಲೂ ಮೇಲಾದ ಬುದ್ಧಿವಂತನಾದನು. ನಕುಲನು ಕುಂತಶ್ಯಾಸ್ತದಲ್ಲಿ ಪ್ರವೀಣನಾಗಿ ಅಶ್ವವಿದ್ಯೆಯಲ್ಲಿ ಎಲ್ಲರಿಗಿಂತಲೂ ಹಿರಿಯನಾದನು. ಸಹದೇವನು ಜ್ಯೋತಿಶ್ಯಸ್ತದಲ್ಲಿ ಪಂಡಿತನಾದನು. ೩೭. ಧರ್ಮ ರಾಜನ ಎರಡು ತೋಳುಗಳೂ ಅವಳಿಗಳೂ ಬೆಳೆದಂತೆ ಜೊತೆಯಲ್ಲಿಯೇ ಬೆಳೆದುವು. ಹೆಗಲುಗಳು ಕುಲಪರ್ವತಗಳ ಶಿಖರಗಳನ್ನು ತಿರಸ್ಕರಿಸಿದುವು (ಕಾಂತಿಹೀನವನ್ನಾಗಿ ಮಾಡಿದುವು). ವಿಸ್ತಾರವಾದ ಅವನ ಎದೆಯು ಅಸಮಾನಳಾದ ಈ ಭೂದೇವಿಗೆ ವಂಶಪಾರಂಪರ್ಯವಾಗಿ ಬಂದ ನಿವಾಸವಾಯಿತು ಎಂದು ಲೋಕದ ಜನ ಸಂತೋಷಿಸುವ ಹಾಗೆ ಧರ್ಮರಾಜನ ಉದಾತ್ತವಾದ ಹೊಸಯೌವನವು ಒಟ್ಟಿಗೆ ತುಂಬಿ ಬಂದಿತು. ವ|| ಹಾಗೆ ಸೊಗಯಿಸುವ ಆಕಾಶದಲ್ಲಿ ಚಿನ್ನದ ಬಣ್ಣದ ಹಾಗಿರುವ ತನ್ನ ಶರೀರದ ಬಣ್ಣವು ಅಳತೆಯಿಲ್ಲದೆ ಪ್ರಕಾಶಿಸಿತು. ೩೮. ಬ್ರಹ್ಮನು ಕುಲಪರ್ವತವನ್ನು ಮನುಷ್ಯನ ರೂಪದಲ್ಲಿ ಮಾಡಿದ್ದಾನೆ ಎನಿಸಿಕೊಂಡು ಭೀಮನು ಅದೇ ಬಣ್ಣದ ಪಾರಿಜಾತವು ಚಿಗುರಿನಿಂದಲೂ ಮೊಗ್ಗುಗಳಿಂದಲೂ ಕೂಡಿ ಪ್ರಕಾಶಮಾನವಾಗಿ ಒಪ್ಪುವಂತೆ ಅವನ ಹೊಸಪ್ರಾಯವು ಆಕರ್ಷಕವಾಗಿರಲು ಹತ್ತುಸಾವಿರ ಮದ್ದಾನೆಗಳ ಬಲವುಳ್ಳವನಾಗಿ ಒಪ್ಪಿ ತೋರಿದನು. ವ|| ಹಾಗೆ ಒಪ್ಪುವ ಸೌಂದರ್ಯದಲ್ಲಿ
10
Page #145
--------------------------------------------------------------------------
________________
೧೪೦ | ಪಂಪಭಾರತಂ ಚಂ || ಶರದದ ಚಂದ್ರನಂ ವಿಮಲ ಚಂದ್ರಿಕೆ ಬಾಳದಿನೇಶನಂ ತಮೋ
ಹರಕಿರಣಂ ಕಿಶೋರ ಹರಿಯಂ ನವಕೇಸರ ರಾಜಿ ಮಿಕ್ಕ ದಿ | ಕರಿಯನನೂನ ದಾನ ಪರಿಶೋಭೆ ಮನಂಗೊಳೆ ಪೊರ್ದುವಂತ ಸುಂ ದರ ನವವನಂ ನೆಯ ಪೊರ್ದೆ ಗುಣಾರ್ಣವನೊಪ್ಪಿ ತೋಳದಂ ೩೯
ವ|| ಅಂತು ನವವನಂ ನೆಯ ನಿನಿಗೊಂಡ ಗುಣಾರ್ಣವನ ತಲೆ ನವಿರ್ಗಳ ಲಾವಣ್ಯರಸಮನಿಡಿದಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವಾದುವು ಮೂಜುಂ ಲೋಕದ ಮೂಜು ಪಟ್ಟಮನಾಳಕ್ಕೆ ತಕ್ಕ ಲಕ್ಷ್ಮಣ ಸಂಪೂರ್ಣಮಪ್ಪ ಸಹಜಮನೋಜನ ಲಲಾಟಂ ಪಟ್ಟಂಗಟ್ಟದ ನೊಸ ಲಕ್ಷಣಮನಸಲ್ಲೇಡೆಂಬಂತಾದುದು ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರೆರ್ದಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ ಕಾಮದೇವನ ವಿಜಯ ವೈಜಯಂತಿಗಳಂತಾದುವು ನೀಳಂ ಬೆಳ್ಳುಮಂ ತಾಳಿ ಪರವನಿತೆಯರ ದೆಸೆಗೆ ಕಿಸುಗಣ್ಣಿದಂತ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಣಳೆಂಬಲರಂಬುಗಳ ಗಣಿಕಾಜನಂಗಳರ್ದಯಂ ನಟ್ಟು ಕೆಂಕಮಾದಂತಾದುವು ರಿಪುಜನದ ಪರ್ಚಿಂಗಂ ಪರಾಂಗನಾಜನದ ಮಚ್ಚಂಗಂ ಮೂಗಿವಂತ ಸೊಗಯಿಸುವ ಗಂಧಭ ವಿದ್ಯಾಧರನ ಮೂಗು ತನ್ನ ಸುಯ್ಯ ಕಂಪನಲ್ಲದ ಪದರ ಕಂಪನಾಸೆವಡದಂತಾದುದು ಪೊಸ ಇಂದ್ರನೀಲಮಣಿಯ ಹಾಗಿರುವ ಬಣ್ಣವು ಮನೋಹರವಾಗಿರಲು ೩೯. ಶರತ್ಕಾಲದ ಚಂದ್ರನನ್ನು ನಿರ್ಮಲವಾದ ಬೆಳದಿಂಗಳ ಬಾಲಸೂರ್ಯನನ್ನು ಕತ್ತಲೆಯನ್ನು ಹೋಗಲಾಡಿಸುವ ಕಿರಣಗಳೂ ಸಿಂಹದಮರಿಯನ್ನು ಹೊಸದಾಗಿ ಹುಟ್ಟಿದ ಅದರ ಕತ್ತಿನ ಕೂದಲರಾಶಿಯೂ ಉಳಿದ ದಿಗ್ಗಜಗಳನ್ನೂ ಸ್ವಲ್ಪವೂ ಕಡಿಮೆಯಿಲ್ಲದ ಮದೋದಕದ ಕಾಂತಿಯೂ ಆಕರ್ಷಿಸುವ ರೀತಿಯಲ್ಲಿ ಸೇರಿಕೊಳ್ಳುವಂತೆ ಸುಂದರವಾದ ಹೊಸಯೌವನವು ಪೂರ್ಣವಾಗಿ ಬಂದು ಕೂಡಲು ಗುಣಾರ್ಣವನು ಒಪ್ಪಿ ತೋರಿದನು. ವl1 ಹಾಗೆ ನವಯೌವನವು ಸಂಪೂರ್ಣವಾಗಲು ಗುಂಗುರುಗುಂಗುರಾದ ಗುಣಾರ್ಣವನ ತಲೆಯ ಕೂದಲು ಸೌಂದರ್ಯರಸವನ್ನು ಮಿದಿದುಮಿದಿದು ತುಂಬಿದ ಬ್ರಹ್ಮನ ಬೆರಳಚ್ಚುಗಳಂತಾದುವು; ಸ್ವರ್ಗ, ಮರ್ತ್ಯ ಪಾತಾಳಗಳೆಂಬ ಮೂರುಲೋಕಗಳ ಮೂರು ರಾಜ್ಯಭಾರವನ್ನು ಮಾಡುವುದಕ್ಕೂ ಯೋಗ್ಯವಾದ ಲಕ್ಷಣಗಳಿಂದ ತುಂಬಿರುವ ಸಹಜಮನೋಜನಾದ ಅರ್ಜುನನ ಹಣೆಯು ಪಟ್ಟಾಭಿಷೇಕಮಾಡಿದ ಹಣೆಗೆ ಯಾವ ಲಕ್ಷಣವಿರಬೇಕೆಂಬುದನ್ನು (ಅನ್ಯಥಾ) ಹುಡುಕಬೇಡ ಎನ್ನುವಂತಾಯಿತು; (ಅಂದರೆ ಆ ಎಲ್ಲ ಲಕ್ಷಣಗಳೂ ಈ ಹಣೆಯಲ್ಲಿಯೇ ಇವೆ ಎಂದರ್ಥ), ಮನ್ಮಥನ ಕಬ್ಬಿನ ಬಿಲ್ಲಿನ ವಕ್ರತೆಯಂತೆ ಬಗ್ಗಿದ್ದರೂ ಅನ್ಯಸ್ತ್ರೀಯರ ಪ್ರೀತಿಗೆ ಬಗ್ಗದೆ ಸೊಗಯಿಸುವ ಸುರತಮಕರಧ್ವಜನ ಹುಬ್ಬುಗಳು ಮನ್ಮಥನ ವಿಜಯದಂತಾದುವು; ದೀರ್ಘತ್ವವನ್ನೂ ಬಿಳಿಯ ಬಣ್ಣವನ್ನೂ ಹೊಂದಿ ಅನ್ಯಸ್ತ್ರೀಯರ ವಿಷಯದಲ್ಲಿ ಕೋಪಿಸಿಕೊಂಡಂತೆ ಕೆಂಪಾದ ರಕ್ತನಾಳಗಳಿಂದ ಕೂಡಿ ಸೊಗಯಿಸುವ ಶೌಚಾಂಜನೇಯನ ಕಣ್ಣುಗಳೆಂಬ ಪುಷ್ಪಬಾಣಗಳು ವೇಶ್ಯಾಸ್ತ್ರೀಯರ ಎದೆಯಲ್ಲಿ ನಾಟಿ ಕೆಂಪಾದಂತಾದುವು; ಶತ್ರುಜನಗಳ ಅಭಿವೃದ್ಧಿಗೂ ಪರಾಂಗನೆಯರ ಮೆಚ್ಚಿಕೆಗೂ ಜುಗುಪ್ಪೆ ಪಡುವ ಹಾಗೆ ಸೊಗಯಿಸುವ ಗಂದೇಭವಿದ್ಯಾಧರನ ಮೂಗು ತನ್ನ ಉಸಿರಿನ
Page #146
--------------------------------------------------------------------------
________________
ದ್ವಿತೀಯಾಶ್ಚಾಸಂ | ೧೪೧ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತ ತುಂಗನ ಮಾಸಗಳಾತನ ತೀವ್ರ ಪ್ರತಾಪಾನಳ ಧೂಮಲೇಖೆಯಂತಾದುವು ಪುಳಿಯೋಳಲೆದ ಪವಳದ ಬಟ್ಟಿನಂತ ಸೊಗಯಿಸುವ ಸಂಸಾರಸಾರೋದಯನ ಬಿಂಬಾಧರಮನಂಗರಾಗರಸದುರುಳಿ ಯಂತಾದುದು ರಸದಾರಿಮದ ಬಿತ್ತುಮಂ ಪೊಸ ಮುತ್ತುಮಂ ಮುಕ್ಕುಳಿಸಿದಂತಪ್ಪ ವಿಬುಧವನಜವನ ಕಳಹಂಸನ ದಂತಪಟ್ಟಿಗಳಮ್ಮತಕಿರಣನ ಕಾಂತಿಗಳನಿಳಿಸುವಂತಾದುವು ಮಡಿದು ತಂದಿಟ್ಟ ಪೊಸನೆಯ್ದಿಲ ಕಾವನಾವಗಂ ಗಲ್ಲ ರತ್ನಕುಂಡಲಂಗಳ ಪೊಳಪನೊಳಕೊಂಡಂತೆ ನಸುನೇ ಕರ್ಣಾಟೀ ಕರ್ಣಪೂರನ ಪಾಲೆಗಳುಂ ಸರಸ್ವತಿಯಾಡುವ ಲೀಲಾಂದೋಳದಂತಾದುವು ಬಳ್ಳೋಳ ಬೆಳೆದಳಗೌಂಗಿನಂತೆ ಲೋಕದ ಚಿಲ್ವಲ್ಲಮನೊಳಕೊಂಡು ರೇಖೆಗೊಂಡ ಲಾಟೀ ಲಲಾಮನ ಪರಿಣದ ಕಂಧರಂ ಯುವರಾಜ ಕಂಠಿಕಾಭರಣಮಂ ಕಟ್ಟುವುದರ್ಕೆ ನೋಂತು ತನ್ನ ಚೆಲ್ಬನಲ್ಲದೆ ಪರ ಚೆಲ್ಬನಾಸ್ವಡದಂತಾದುದು ಕುಲದ ಚಲದ ಮ್ಯಮಯೊಳ್ ತನ್ನನೆ ನೋಡಿದ ಸಂತೋಷದೊಳುತ್ಸಾಹಮಾದಂತ ಸೊಗಯಿಸುವ ಸಮಸ್ಯಕಮರುವಿನ ಭುಜಶಿಖರಂಗಳ್ ಕುಲಶಿಖರಿ ಶಿಖರಂಗಳಂತಾದುವು ವ್ಯಾಳ ಗಜಂಗಳು ಮನಂಕದ ಬರ್ದೆಯರುಮನುಗಿಬಗಿಮಾಡಿದ ಸಂತೋಷದೊಳ್ ಬಳ್ಳಳ ಬಳದ ವಿಕ್ರಾಂತತುಂಗನ ನಿಡುದೋಳ ಗಣಿಕಾಜನಕ್ಕೆ ಕಾಮಪಾಶಂಗಳುಮರಾತಿಜನಕ್ಕೆ ಯಮಪಾಶಂಗಳುಮಾದುವು
ವಾಸನೆಯಲ್ಲದೆ ಇತರರ ವಾಸನೆಗೆ ಆಸೆಪಡದಂತಾಯಿತು! ಹೊಸಪ್ರಾಯದ ಮೊದಲ ಬಣ್ಣದಂತೆ ಕಪ್ಪಾಗಿ ಕಸ್ತೂರಿಯಿಂದ ಬರೆದಂತಿರುವ ವಿಕ್ರಾಂತತುಂಗನ ಮೀಸೆಗಳು ಅವನ ಭಯಂಕರವಾದ ಪ್ರಾತಾಪಗ್ಗಿಯ ಹೊಗೆಯ ರೇಖೆಯಂತಾದುವು; ಹುಳಿಯಿಂದ ತೊಳದ ಹವಳದ ಬಟ್ಟಿನಂತೆ ಸೊಗಯಿಸುವ ಸಂಸಾರಸಾರೋದಯನ ಕೆಂಪಾದ ತುಟಿಯು ಕಾಮರಸದ ಉಂಡೆಯಂತಾಯಿತು; ದಾಳಿಂಬದ ಬೀಜಗಳನ್ನೂ ಹೂಸಮುತ್ತುಗಳನ್ನೂ ಉಗುಳುವಂತಿದ್ದ ವಿಬುಧವನಜವನಕಳಹಂಸನ ಹಲ್ಲಿನ ಸಾಲುಗಳು ಚಂದ್ರನ ಕಾಂತಿಯನ್ನು ತಿರಸ್ಕರಿಸುವಂತಾದುವು; ಮಡಿಸಿ ತಂದಿರಿಸಿದ ಹೊಸನೆಯ್ದಲೆಯ ಕಾವನ್ನು ಯಾವಾಗಲೂ ಗೆದ್ದಿರುವ ರತ್ನದ ಹತ್ತು ಕಡುಕುಗಳ ಹೊಳಪನ್ನೊಳಕೊಂಡು ಹಾಗೆಯೇ ಸ್ವಲ್ಪ ಜೋಲಾಡುತ್ತಿರುವ ಕರ್ಣಾಟೀಕರ್ಣಪೂರನ ಕಿವಿಯ ಹಾಲೆಗಳು ಸರಸ್ವತಿಯು ತೂಗುತ್ತಿರುವ ಆಟದುಯ್ಯಾಲೆಯಂತಾದುವು; ಬಳಬಳನೆ (ಸೊಂಪಾಗಿ) ಬೆಳೆದ ಎಳೆ ಅಡಿಕೆಯಂತೆ ಲೋಕಸೌಂದರ್ಯವನ್ನೆಲ್ಲ ತನ್ನಲ್ಲಿ ಸೇರಿಸಿಕೊಂಡು ಗೆರೆಯನ್ನು ಹೊಂದಿದ ಲಾಟೀಲಲಾಮನ ತುಂಬುಗೊರಳು ಯುವರಾಜಪಟ್ಟಾಭೀಷೇಕಕ್ಕೆ ಯೋಗ್ಯವಾದ ಒಡವೆಯನ್ನು ಧರಿಸುವುದಕ್ಕೆ ವ್ರತಮಾಡಿ ತನ್ನ ಸೌಂದರ್ಯವನ್ನೇ ಅಲ್ಲದೆ ಇತರ ಸೌಂದರ್ಯಕ್ಕೂ ಅಸೆಪಡುವಹಾಗಾಯಿತು. ಕುಲ ಮತ್ತು ಛಲದ ಮಹಿಮೆಯಲ್ಲಿ ತನ್ನನ್ನೇ ನೋಡಿದ ಸಂತೋಷವು ಉತ್ಸಾಹವಾದ ಹಾಗೆ ಸೊಗಯಿಸುವ ಸಮರೈಕಮೇರುವಿನ ಭುಜದ ಮೇಲುಭಾಗಗಳು ಕುಲಪರ್ವತದ ಶಿಖರಗಳ ಹಾಗೆ ಆದುವು; ದುಷ್ಟ ಆನೆಗಳನ್ನೂ ಸುಪ್ರಸಿದ್ದರಾದ ಸುಮಂಗಲಿಯರನ್ನೂ (ಕುಲಸ್ತೀಯರನ್ನೂ) ಹೆದರಿಸಿದ ಸಂತೋಷದಲ್ಲಿ ಸುಪುಷ್ಟವಾಗಿ ಬೆಳೆದ ವಿಕ್ರಾಂತತುಂಗನ ದೀರ್ಘವಾದ ತೋಳುಗಳು ವೇಶ್ಯಾಸ್ತ್ರೀಯರಿಗೆ ಕಾಮಪಾಶವೂ ಶತ್ರುರಾಜರಿಗೆ ಯಮಪಾಶವೂ ಆದುವು; ಕೆಂಪು ಮುಳ್ಳುಮುತ್ತುಗದ ಚಿಗುರಿನ ಹಾಗೆ
Page #147
--------------------------------------------------------------------------
________________
೧೪೨] ಪಂಪಭಾರತಂ ರಕ್ತಾಶೋಕಪುವದಂತೆ ತೊಳತೊಲೆತ್ತುವಾಂಧಿ; ಕುಚಕಲಶ ಪಲ್ಲವನ ಕರತಳಪಲ್ಲವಂಗ ಸಮದ ಗಜಕುಂಭಕಣಾಸ್ಲಾಳನ ಕರ್ಕಶಂಗಳಾದುವು ಪೊಡರ್ವ ಪಗೆವರನುಜದ ಕೊಂಡ ಸಂತೋಷದೊಳ ಪೀಯನೊಳಕೊಂಡ ಸಂತೋಷದೊಳಂ, ತೆಕ್ಕನೆ ತೀವಿದ ಕೇರಳೀ ಕೇಳಿ ಕಂದರ್ಪನಗಲುರ ಲಕ್ಷ್ಮಿಗೆ ಕುಲಭವನಮುಂ ನಿವಾಶಭವನಮುಮಾದುದು ಪೊಡರ್ವ ಮಂಡಳಿಕರ ಮನದಂತೆ ಕರಮ:ದದ ಪರಾಕ್ರಮಧಪತನ ಸುಧ್ಯಪ್ರದೇಶಂ ನಾರಾಯಣಂ ತಾಳಂ ಮಾಡಿ ತಾನಾಳ್ಳಾಡಿಯುಂ ತಾನಳ್ಳಾಡೆಯುಂ ಬರ್ದೆಯರ ಮನವನನ್ನಾಡಿಸುವಂತಾದುದು ಗಂಭೀರಗುಣದೊಳಮಾವರ್ತನ ಸಿದ್ದಿಯೊಳಂಜಳನಿಧಿಯನ ಪೋಲ್ಯ ಶರಣಾಗತ ಜಳನಿಧಿಯ ನಿಮ್ಮನಾಭಿ ಚೆಲ್ವಿಂಗೆ ತಾನೆ ನಾಭಿಂಯಾಡುಗು ಸಿಂಹಕಟಿತಟಮನಿಳಿಸುವ ರಿಪುಕುರಂಗ ಕಂಠೀರವನ ಕಟತಟಮೋಲ್ಲು ನೋಡುವ ಗಾಡಿಕಾರ್ತಿಯ - ಕಣ್ಣ ಕಾಮನಚ್ಚಣಚಂತೆ ದೊಡ್ಡಿತ್ತಾಗಿ ಮಾಡುವುದ್ವತ್ ವ್ಯತ್ಯತೆಯ ನಿಟ್ಟುಕೊಂಡಂತುದ್ವತ್ತಂಗಳಾದುವು ಉದಾತ್ತನಾರಾಯಣನೂರುಯುಗಂಗಳ್ ಮಾನಿನಿಯರ ಮನೋಗಜಂಗಳಂ ಕಾಲಾನ ಸಂಭಂಗಳಾದುವು ಅಂತಪೂರ್ವಂಗಳಾಗಿ ತೋಳಗುವ ಕಿದೊಡೆಗಳುಡುವಡರ್ದನಮಾರೂಢ ಸರ್ವಜ್ಞನ ದೊಡ್ಡ ಮಾರ್ಗಂಗಳೆಳವಾಡಿಕೆಯ ದಿಂಡಿನೊಳ್ ಸಾಣೆಗಟ್ಟಿದಂತಾದುವು
ಪ್ರಕಾಶಮಾನವಾಗಿರುವ ಆಂದ್ರೀಕುಚಕಲಶಪಲ್ಲವನ ಚಿಗುರಿನಂತಿರುವ ಅಂಗೈಗಳು ಮದ್ದಾನೆಗಳ ಕುಂಭಸ್ಥಳವನ್ನು ಅಪ್ಪಳಿಸುವುದರಿಂದ ಒರಟಾದುವು; ಉದ್ಧತರಾದ ಶತ್ರುಗಳನ್ನು ಶೀಘ್ರವಾಗಿ ಸೋಲಿಸಿದ ಸಂತೋಷದಿಂದಲೂ ಐಶ್ವರ್ಯವನ್ನು ಪಡೆದ ಸಂತೋಷದಿಂದಲೂ ಇದ್ದಕ್ಕಿದ್ದ ಹಾಗೆ ತುಂಬಿಕೊಂಡ ಕೇರಳೀಕೇಳೀಕಂದರ್ಪನ ವಿಶಾಲವಾದ ಎದೆಯು ಲಕ್ಷ್ಮೀದೇವಿಗೆ ವಂಶಪಾರಂಪರ್ಯವಾಗಿ ಬಂದ ನೆಲೆಯೂ ನಿತ್ಯವಾಸಸ್ಥಳವೂ ಆಯಿತು; ಉತ್ತರಾದ (ಮೇಲೆ ಬೀಳುವ) ಸಾಮಂತರಾಜರ ಮನಸ್ಸಿನಂತೆ ಬಹಳ ಕೃಶವಾದ ಪರಾಕರ್ಮಧವಳನ ಸೊಂಟವು ಶ್ರೀಮನ್ನಾರಾಯಣನು ತಾನೇ ಯಜಮಾನನಾಗಿಯೂ ತನ್ನನ್ನೇ ಆಳಾಗಿಯೂ ಮಾಡಿಕೊಂಡೂ ತಾನೇ ನರ್ತನಮಾಡಿ ಕುಲಸ್ತೀಯರ ಮನಸ್ಸನ್ನು ವಿಚಲಿತವನ್ನಾಗಿ ಮಾಡುವಂತಾಯಿತು. ಗಂಭೀರಗುಣದಲ್ಲಿಯೂ ಸುಳಿಸುಳಿಯಾಗಿರುವ ಇತರ ಗುಣದಲ್ಲಿಯೂ ಸಮುದ್ರವನ್ನು ಹೋಲುವ ಶರಣಾಗತ ಜಲನಿಧಿಯ ಆಳವಾದ ಹೊಕ್ಕುಳು ಸೌಂದರ್ಯಕ್ಕೆ ತಾನೆ ಕೇಂದ್ರವಾಯಿತು; ಸಿಂಹದ ಸೊಂಟದ ಭಾಗವನ್ನೂ ಹಿಯ್ಯಾಳಿಸುವ ರಿಪುಕುರಂಗಕಂಠೀರವನ ಸೊಂಟದ ಭಾಗವು ಪ್ರೀತಿಯಿಂದ ನೋಡುವ ಸುಂದರಸ್ತ್ರೀಯರ ಕಣ್ಣಿಗೆ ಕಾಮನ ಗುರಾಣಿಯಂತೆ ದೊಡ್ಡದಾಗಿ ಬೆಳೆದು ಅತಿಶಯವಾದ ದಪ್ಪವನ್ನು ತಾಳಿದಂತೆ ವಿಶೇಷ ಗುಂಡಾಗಿ ಬೆಳೆದುವು; ಉದಾತ್ತ ನಾರಾಯಣನ ಎರಡು ತೊಡೆಗಳು ಸ್ತ್ರೀಯರ ಮನಸ್ಸೆಂಬ ಆನೆಗಳನ್ನು ಕಟ್ಟುವ ಕಂಬಗಳಾದುವು, ಹಾಗೆಯೇ ಅಪೂರ್ವವಾಗಿ ಪ್ರಕಾಶಿಸುವ ಕಿರುದೊಡೆಗಳು ಉಡುಹತ್ತಿದಂಥವು - ಆರೂಢಸರ್ವಜ್ಞನ ತೊಡೆಯ ಕಿಣ ಅಥವಾ ಜಡ್ಡುಗಳು (ಕುದುರೆಸವಾರಿಮಾಡುವಾಗ ಒತ್ತಿ ಆದ ಜಡ್ಡು) ಎಳೆಯ ಬಾಳೆಯ ದಿಂಡಿನಲ್ಲಿ ಸಾಣೆಯಕಲ್ಲನ್ನು ಕಟ್ಟಿದ ಹಾಗಾದುವು; ಗೂಢವಾದ ಕಾಲಿನ ಹರಡನ್ನು ಹೊಂದಿರುವ
Page #148
--------------------------------------------------------------------------
________________
ದ್ವಿತೀಯಾಶ್ವಾಸಂ | ೧೪೩ ಗೂಢಗುಲ್ಲವಾರ್ಷಿಗಳನೊಳಗೊಂಡ ಮನುಜಮಾಂಧಾತನ ಪೋಲಿ ಅಡಿಗಳ ವಿರೋಧಿ ಭೂಪಾಳರನಡಿಗೆಳಗಿಸಿದ ಸಂತೋಷದೊಳುನ್ನತಂಗಳಾದಂತೆ ಕೂರ್ಮೋನ್ನತಂಗಳಾದುವು ನೊಸಲಂ ಸುಟ್ಟ ತೋರ್ಪನ್ನವಪ್ಪುಗುಟಂಗಳೊಳ್ ಮಿಂಚಂ ಕೀಲಿಸಿದಂತೆ ತೊಳಗಿ ಪೊಳೆವ ಪ್ರಚಂಡ ಮಾರ್ತಾಂಡನ ಪಾದನಖಂಗಳ ಗಂಡರ ಪೆಂಡಿರಂಜಿದಳಿದ ಮೊಗಮಂ ನೋಡ ಕನ್ನಡಿಗಳನ್ನವಾದುವು ಪೊಸತಲರ್ದ ಕೆಂದಾವರೆಯ ಕೆಂಪುಮಂ ಮೆಲ್ಲುಮನಿಚ್ಚುಳಿಗೊಂಡು ತೊಳಗುವರಿಕೇಸರಿಯ ಪಾದತಳಂಗಳಡಿಗೆಅಗಿದರಿನರಪಾಲರ ಮಕುಟಮಾಣಿಕ್ಯಮರೀಚಿಜಾಲ ಬಾಳಾತಪಂಗಳನಲೆದು ಕೆಂಕಮಾದಂತಾದುವು ಪೊಸವೆಸಗೆಯ ಬಣ್ಣದಂತೆ ಸೊಗಯಿಸುವ ಸಾಮಂತ ಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತನೆಂಬ ಚಿತ್ತಾರಿಯ ವರ್ಣಕ್ರಮಂಗೆಯ ಕದಳೀಗರ್ಭಶ್ಯಾಮಮಂಬ ಬಣ್ಣದಂತಾದುದು
ಚಂ
ಮನದೊಳೊದಲು ಜೋಳಿಸಿ ನೋಡಲೊಡಂ ಸತೆಗೆಯು ಕಣ್ಣುಮಂ ಮನಮುಮನಂಗಜನನರಲಂಬುಗಳಿಂದ ಮರುಳ್ಳಿ ಬಂದ ಮಾ | ವಿನ ಬನದೊಳ್ ತೆರಳ್ಳಿ ಪೊಳೆವಿಂದುಮರೀಚಿಗಳಿಂದುರು ಪೂ ವಿನ ಪಸೆಯೊಳ್ ಪೊರಳಿದನಳುರ್ಕೆಯ ಬರ್ದೆಯರು ಗುಣಾರ್ಣವ ||
೪
ಮನುಜಮಾಂಧಾತನ ಅಡಿಯ ಹೊರಭಾಗಗಳು ಶತ್ರುರಾಜರನ್ನು ಕಾಲಿಗೆ ಬೀಳುವಂತೆ ಮಾಡಿದ ಸಂತೋಷದಲ್ಲಿ ಎತ್ತರವಾದಂತೆ ಹಾಗೆಯೇ ಆಮೆಯ ಚಿಪ್ಪಿನ ಮೇಲುಭಾಗದುತೆ ಉಬ್ಬಿಕೊಂಡವು. ಮುಖವನ್ನು ಸುಟ್ಟಿ ತೋರಿಸುವಂತಿರುವ ಕಾಲಿನ ಬೆರಳುಗಳಲ್ಲಿ ಸ್ವಲ್ಪ ನೆಟ್ಟಿರುವ ಹಾಗೆ ಪ್ರಕಾಶಮಾನವಾಗಿರುವ ಪ್ರಚಂಡಮಾರ್ತಾಂಡನ ಕಾಲಿನ ಉಗುರುಗಳು ವೀರಪತ್ನಿಯರು ಹೆದರಿದ ತಮ್ಮ ಮುಖವನ್ನು ನೋಡುವುದಕ್ಕೆ (ಉಪಯೋಗಿಸುವ) ಕನ್ನಡಿಯಂತಾದುವು. ಹೊಸದಾಗಿ ಅರಳಿರುವ ಕೆಂಪುದಾವರೆಯಂತೆ: ಕೆಂಪುಬಣ್ಣವನ್ನೂ ಬಿಳಿಯಬಣ್ಣವನ್ನೂ ತಿರಸ್ಕರಿಸುವ ಅರಿಕೇಸರಿಯ ಪಾದತಳೆಗಳು ಕಾಲಿಗೆ ಬಿದ್ದ ಶತ್ರುರಾಜರ ಕಿರೀಟದಲ್ಲಿರುವ ಮಾಣಿಕ್ಯ ಸಮೂಹದ ಕೊಂಬಿಸಿಲನ್ನು ಹಿಯ್ಯಾಳಿಸಿ ಕೆಂಪಾದಂತಾದುವು. ಹೆಸರುಕಾಳಿನ ಹೊಸಮೊಳಕೆಯ ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಶರೀರದ ಬಣ್ಣವು ಬ್ರಹ್ಮನೆಂಬ ಬಣ್ಣಗಾರನು ಬಣ್ಣಗಳನ್ನು ಕಲಸಿಮಾಡಿದ ಬಾಳೆಯ ಹೂವಿನ ಮೋತೆಯಂತೆ ಕೆಂಪುಮಿಶ್ರವಾದ ಕಪ್ಪುಬಣ್ಣದಿಂದ ಕೂಡಿತು. ೪೦. ಗುಣಾರ್ಣವನು ದಿಟ್ಟರಾದ ಸ್ತ್ರೀಯರು ತನ್ನನ್ನು ಮನಸ್ಸಿನಲ್ಲಿ ಪ್ರೀತಿಸಿ ತನಗೆ ಅಧೀನವಾಗಿ ಸೋತು ಆಶೆಯಿಂದ ನೋಡಲು ಅವರ ಕಣ್ಣನ್ನೂ ಮನಸ್ಸನ್ನೂ ಮನ್ಮಥನ ಪುಷ್ಪಬಾಣದಿಂದ ಸೆರೆಹಿಡಿದು ಅವರಿಗೆ ಮೋಹವುಂಟಾಗುವ ಹಾಗೆ ಮಾಡಿ ಫಲಭರಿತವಾದ ಮಾವಿನ ತೋಟದಲ್ಲಿ ಸೇರಿಸಿ ಪ್ರಕಾಶಮಾನವಾದ ಬೆಳುದಿಂಗಳಿಂದ ಉರುಳಿಸಿ ಹೂವಿನ ಹಾಸಿಗೆಯಲ್ಲಿ ಹೊರಳುವ ಹಾಗೆ ಮಾಡಿದನು. (ಅವನನ್ನು ನೋಡಿದ ಧೀರಸ್ತ್ರೀಯರೂ ವಿಧವಿಧವಾದ ಕಾಮಬಾಧೆಗೊಳಗಾಗುತ್ತಿದ್ದರು ಎಂದು ಭಾವ).
Page #149
--------------------------------------------------------------------------
________________
೪೧
೧೪೪/ ಪಂಪಭಾರತಂ
ವ|| ಅಂತು ನಕುಲ ಸಹದೇವರ್ ಸಹಿತಮಯ್ಯರುಂ ನವಯೌವನದ ಪರಮ ಸುಖಮನೆಯ್ಲಿ ಸಂತೋಷದಿನಿರ್ದರಿತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿಕಂl ಸ್ನಾನಾರ್ಥವೊಂದು ಕಳಶಮ
ನಾ ನಿಯಮ ನಿಧಾನನಲಲೆ ಹಿಡಿದಮಳಿನ ಗಂ | ಗಾ ನದಿಗೆ ವಂದು ಸುರತ ನಿ
ಧಾನಿಯನಮರೇಂದ್ರ ಗಣಿಕೆಯಂ ಮುನಿ ಕಂಡಂ ||
ವ|| ಅಂತು ಕಾಣ್ಣುದುಮಮ್ಮತಾಭಿಯಂಬಕ್ಕರಸೆಯ ಕನಕ ಕಾಂಚೀಕಲಾಪದೊಳ್ ತೊಡರ್ದ ದೇವಾಂಗ ವಸ್ತದುಳ್ಳುಡಿಯೊಳುವ ಸೂತಕದ ನೂಲ ತೊಂಗಲ್ವರಸೆ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸ . ಕ೦ll, ಆದರ ಸೋಂಕಿನೊಳ ತೆಂ
ಪಾದೊಡೆ ಬೆಳೆಸೆಯ ಮಸೆದ ಮದನನ ಬಾಳಂ | ತಾದುವು ಪೊಳೆವೊಳ್ಕೊಡೆ ತೆಂ
ಪಾದರ್ದಯಂ ನಟ್ಟುವಂದು ತನ್ನುನಿಪತಿಯಾ || ವ|| ಅಂತು ಕಂತುಶರಪರವಶನಾಗಿ ಧ್ವರ್ಯಕ್ಷರಣೆಯುಮಿಂದ್ರಿಯ ಕರಕಯುಮೊಡ " ನೊಡನಾಗ-' ಕಂt ಮಾಣದ ಸೋರ್ವಿಂದ್ರಿಯಮಂ
ದ್ರೋಣದೊಳಾಂತಲ್ಲಿಯೊಗದ ಶಿಶುವಂ ಕಂಡೀ | ದ್ರೋಣದೊಳೆ ಪುಟ್ಟದೀತು ದ್ರೋಣನೆ ಪೋಗೆಂದು ಹೆಸರನಿಟ್ಟಂ ಮುನಿಪಂ ||
ವ|| ಹೀಗೆ ನಕುಲ ಸಹದೇವರೊಡನೆ ಅಯ್ತು ಜನರೂ ಹೊಸಪ್ರಾಯದ ಉತ್ತಮಸುಖವನ್ನು ಹೊಂದಿ ಸಂತೋಷದಿಂದಿದ್ದರು. ಈ ಕಡೆ ಗಂಗಾದ್ವಾರದಲ್ಲಿ ಭರದ್ವಾಜನೆಂಬ ನಿಯಮಿಷ್ಯನಾದ ಋಷಿಯು-೪೧. ಸ್ನಾನಕ್ಕಾಗಿ ಒಂದು ಕೊಡವನ್ನು ಕೆಳಗೆ ಜೋಲುಬೀಳುವ ಹಾಗೆ ಹಿಡಿದು ಪರಿಶುದ್ಧವಾದ ಗಂಗಾನದಿಗೆ ಬಂದು ಸಂಭೋಗಸುಖಕ್ಕೆ ಆವಾಸಸ್ಥಾನಳಾದ ದೇವವೇಶ್ಯಯೊಬ್ಬಳನ್ನು ನೋಡಿದನು. ವಗ ಹಾಗೆ ನೋಡಲಾಗಿ ಅಮೃತಾಭಿಯೆಂಬ ಹೆಸರಿನ ಆ ಅಪ್ಪರಸ್ತ್ರೀಯ ಚಿನ್ನದ ನಡುಪಟ್ಟಿಯಲ್ಲಿ ಸಿಕ್ಕಿಕೊಂಡಿದ್ದ ರೇಷ್ಮೆಯ ವಸ್ತದ ಒಳ ಉಡುಪಿನಲ್ಲಿ ಶಬ್ದಮಾಡುವ ಗೆಜ್ಜೆಯ ಕುಚ್ಚಿನ ನೂಲಗೊಂಚಲ ಸಮೇತವಾಗಿ ಇಳಿಬಿದ್ದಿರುವ ಮುಂಭಾಗದ ಸೆರಗು ಮಳೆಗಾಲದ ನವಿಲಿನಂತೆ ಸೊಗಯಿಸಿತು. ೪೨. ಆಗುಂಟಾದ ಗಾಳಿಯ ಸ್ಪರ್ಶದಿಂದ ವಸ್ತವು ಓಸರಿಸಲು ಅವಳ ಸುಂದರವಾದ ತೊಡೆಯು ಮನ್ಮಥನ ಕತ್ತಿಯ ಹಾಗಾಗಿ ಆ ಋಷಿಯ ತೆರೆದ ಹೃದಯವನ್ನು ನಾಟಿತು. ವರ ಹಾಗೆ ಮನ್ಮಥನ ಬಾಣಗಳಿಗೆ ಅಧೀನನಾಗಿ ಅವನ ಧೈರ್ಯವೂ ರೇತ ಒಟ್ಟಿಗೆ ಸೋರಿಹೋದವು. ೪೩. ನಿಲ್ಲದೆ ಸೋರುವ ಆ ರೇತಸ್ಸನ್ನು (ವೀರ್ಯವನ್ನು) ಆ ಋಷಿಯು ಒಂದು ದೊನ್ನೆಯಲ್ಲಿ ಹಿಡಿದು ಅದರಿಂದ ಹುಟ್ಟಿದ ಶಿಶುವನ್ನು ನೋಡಿ ದೊನ್ನೆಯಲ್ಲಿ ಹುಟ್ಟಿದ ಮಗುವು
Page #150
--------------------------------------------------------------------------
________________
ದ್ವಿತೀಯಾಶ್ವಾಸಂ / ೧೪೫ ವ|| ಅಂತು ಭರದ್ವಾಜನಾತ್ಮತನೂಜಂಗೆ ಪೆಸರನಿಟ್ಟು ತನ್ನ ಕೆಳೆಯಂ ಪಾಂಚಾಳ ದೇಶದರಸಂ ಪೃಷತನೆಂಬನಾತನ ಮಗಂ ದ್ರುಪದನುಮಂ ದ್ರೋಣನುಮನೊಡಗೂಡಿ ಯಜಸೇನನೆಂಬ ಬ್ರಹಋಷಿಯ ಪಕದೊಳ್ ಬಿಲಿಯಂ ಕಲಿತೋಡ ದೋಣನುಂ ದ್ರುಪದನುಂ ಧನುರ್ಧರಾಗ್ರಗಣ್ಯರಾಗೆ ಭರದ್ವಾಜಂ ದ್ರೋಣಂಗೆ ಕೃಪನ ತಂಗೆಯಪ್ಪ ಶಾರದ್ವತೆಯಂ ತಂದು ಮದುವೆಯಂ ಮಾಡಿದೊಡಾತಂಗಮಾಕೆಗಂ ತ್ರಿಣೇತ್ರನಂಶದೊಳೊರ್ವ ಮಗಂ ಪುಟ್ಟಕಂ| ದಿವಿಜಾಶ್ವತ್ತಾಮದೊಳೀ
ಭುವನಂಗಳ ನಡುಗೆ ಶಿಶು ಸರಂಗೆಯೊಡ ನ | ಕೃವಯವದ ಕುಂಭಸಂಭವ | ನಿವನಶ್ವತ್ಥಾಮನೆಂದು ಹೆಸರಿಡೆ ನೆಗಬ್ದಂ ||
- ೪೪ ವll ಅಂತು ನೆಗಟ್ಟು ತಮ್ಮಯ್ಯನ ಕೈಯೊಳ್ ಧನುರ್ವಿದ್ಯೋಪದೇಶದೊಳ್ ಧನುರ್ಧ ರಾಗ್ರಗಣ್ಯನುಮಾಗಿ ಸಂದಂ ದ್ರುಪದನು ತನ್ನ ರಾಜ್ಯದೊಳ್ ನಿಂದಂ ದ್ರೋಣನುಂ ತನಗೆ ಬಡತನಮಡಸೆ ಅಶ್ವತ್ಥಾಮನನೊಡಗೊಂಡು ನಾಡು ನಾಡು ತೋಪು ಪರಶುರಾಮನಲ್ಲಿಗೆ ವಂದಂ- ಚ೦ll ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲಿಗೆ ಮುನ್ನವೇಕವಿಂ
ಶತಿ ಪರಿಸಂಖ್ಯೆಯಿಂ ತವಿಸಿ ಸಧ್ವನಿವೇದಕಮೆಂಬ ಯಜ್ಞದೂಳ್ | ಕ್ಷಿತಿ ಪೊಗಟ್ಟನ್ನಮಿತ್ತು ಗುರುದಕ್ಷಿಣೆಯಾಗಿರೆ ಕಶ್ಯಪ ಪ್ರಜಾ ಪತಿಗೆ ಸಮುದ್ರಮುದ್ರಿತಧರಿತ್ರಿಯನೊಂದಣಿಯೂರನೀವವೂಲ್ || ೪೫
ದ್ರೋಣನೆಂಬ ಹೆಸರಿನವನೇ ಸರಿ, ಹೋಗು ಎಂದು ಆ ಹೆಸರನ್ನೇ ಅವನಿಗೆ ಇಟ್ಟನು. ವl ಭರದ್ವಾಜನು ಹಾಗೆ ತನ್ನ ಮಗನಿಗೆ ಹೆಸರಿಟ್ಟು ತನ್ನ ಸ್ನೇಹಿತನೂ ಪಾಂಚಾಳದೇಶದ ರಾಜನೂ ಪೃಷತನ ಮಗನೂ ಆದ ದ್ರುಪದನನ್ನೂ ದ್ರೋಣನನ್ನೂ ಒಟ್ಟುಗೂಡಿಸಿ ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದಲ್ಲಿ ಬಿಲ್ವಿದ್ಯೆಯನ್ನು ಕಲಿಯಲು ಹೇಳಲಾಗಿ ದ್ರೋಣನೂ ದ್ರುಪದನೂ ಬಿಲ್ದಾರರಲ್ಲಿ ಮೊತ್ತಮೊದಲಿಗರಾದರು. ಹೀಗಾಗಲು ಭಾರದ್ವಾಜನು ದ್ರೋಣನಿಗೆ ಕೃಪನ ತಂಗಿಯಾದ ಶಾರದ್ವತೆಯನ್ನು ತಂದು ಮದುವೆಮಾಡಲಾಗಿ ಆತನಿಗೂ ಆಕೆಗೂ ಮುಕ್ಕಣ್ಣನಾದ ರುದ್ರನ ಅಂಶದಿಂದ ಒಬ್ಬ ಮಗನು ಹುಟ್ಟಿದನು. ೪೪. ಆ ಮಗುವು ಧ್ವನಿಮಾಡಿದ ತಕ್ಷಣವೇ ಕೂಗಿಕೊಂಡ ದೇವಲೋಕದ ಉಚೈಶ್ರವವೆಂಬ ಕುದುರೆಯ ಕೆನೆತದಿಂದ ಲೋಕಗಳೆಲ್ಲ ನಡುಗಲು ಅದನ್ನು ನೋಡಿ ದ್ರೋಣನು ನಕ್ಕು ನಿರಾಯಾಸದಿಂದ ಇವನಿಗೆ ಅಶ್ವತ್ಥಾಮನೆಂದು ಹೆಸರಿಡಲು ಅವನು ಪ್ರಸಿದ್ಧನಾದನು. ವll ಹಾಗೆ ಪ್ರಸಿದ್ಧನಾಗಿ ತಮ್ಮಯ್ಯನ ಕಯ್ಯಲ್ಲಿ ಧನುರ್ವಿದ್ಯೋಪದೇಶವನ್ನು ಪಡೆದು ಬಿಲ್ದಾರರಲ್ಲಿ ಅಗ್ರೇಸರನಾದನು. ದ್ರುಪದನೂ ತನ್ನ ರಾಜ್ಯದಲ್ಲಿ ನಿಂತನು. ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನೂ ಕರೆದುಕೊಂಡು ದೇಶದೇಶಗಳಲ್ಲೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದನು. ೪೫. ಭೂಮಿಯಲ್ಲಿರುವ ಕ್ಷತ್ರಿಯರು ಬೇರುಸಹಿತ ಹಾಳಾಗುವಂತೆ ಮೊದಲು ಇಪ್ಪತ್ತೊಂದು ಸಲ ನಾಶಪಡಿಸಿ ಲೋಕವೇ ಹೊಗಳುವ ಹಾಗೆ ಸರ್ವನಿವೇದಕವೆಂಬ
Page #151
--------------------------------------------------------------------------
________________
೧೪೬ / ಪಂಪಭಾರತಂ
ವ ಅಂತು ವಲ್ಕಲಾವೃತ ಕಟಿತಟನುವಾಗಿರ್ದ ಜಟಾಕಲಾಪನುವಾಗಿ ತಪೋವನಕ್ಕೆ ಪೋಪ ಭಾರ್ಗವಂ `ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನ ಕಂಡು ಕನಕ ಪಾತ್ರಕ್ಕುಪಾಯಮಿಲ್ಲಪುದಂ ಮೃತ್ತಾತ್ರದೊಳರ್ಘಮೆತ್ತಿ ಪೂಜಿಸಿ
ಚಂ!! ಒಡವೆಯನರ್ಥಿಗಿತ್ತನವನೀತಳಮಂ ಗುರುಗಿತ್ತೆಗಳೊಂ ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ ಲೊಡಮೆ ಸಮಂತು ಪೇಟೆವಳಾವುದನೀವುದೂ ಕುಂಭಸಂಭವಾ || ೪೬ ವ|| ಎಂಬುದುಂ ದ್ರೋಣನೆನಗೆ ವಿದ್ಯಾಧನಮೆ ಧನಮಪ್ಪುದಂ ದಿವ್ಯಾಸ್ತ್ರಂಗಳಂ ದಯೆಗೆಯ್ದುದೆನೆ ವಾರಣ ವಾಯವ್ಯಾಗ್ನೆಯ ಪೌರಂದರಾದಿ ಪ್ರಧಾನಾಸಂಗಳು ಕುಡೆ ಕೊಂಡು ಪರಶುರಾಮನಂ ಬೀಳ್ಕೊಂಡು ತನ್ನೊಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳರಸು ಗೆಯ್ದಪನೆಂದು ಕೇಳ್ತಾ ಪೋಲೆವಂದು ದ್ರುಪದನರಮನೆಯ ಬಾಗಿಲೊಳ್ ನಿಂದು ಪಡಿಯನಂ ಕರೆದು ನಿಮ್ಮೊಡನಾಡಿದ ಕೆಳೆಯಂ ದ್ರೋಣನೆಂಬ ಪಾರ್ವಂ ಬಂದನೆಂದು ನಿಮ್ಮರಸಂಗತಿಯ ಪೇಟೆ೦ಬುದುಮಾತನಾ ಮಾಯೊಳ ಬಂದ ಪುವುದುಂ ದ್ರುಪದಂ ರಾಜ್ಯಮದಿರಾ ಮದೋನತನುಂ ಗರ್ವಗ್ರಹ ವ್ಯಗ್ರಚಿತ್ತನುವಾಗಿ ಮೇಗಿಲ್ಲದೆ~
ಯಜ್ಞವನ್ನು ಮಾಡಿ ಕಶ್ಯಪ ಪ್ರಜಾಪತಿಯೆಂಬ ಬ್ರಹ್ಮಋಷಿಗೆ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಅಖಂಡಭೂಮಂಡಲವನ್ನು ಒಂದುಸಾಮಾನ್ಯವಾದ ಗ್ರಾಮವನ್ನು ಕೊಡುವಂತೆ ಗುರುದಕ್ಷಿಣೆಯಾಗಿ ಕೊಟ್ಟನು. ವ| ಈಗ ನಾರುಮಡಿಯಿಂದ ಕೂಡಿದ ನಡುವನ್ನುಳ್ಳವನೂ ಜಟಾಸಮೂಹದಿಂದ ಕೂಡಿದವನೂ ಆದ ಆ ಪರಶುರಾಮನು ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ದ್ರೋಣನನ್ನು ಚಿನ್ನದ ಪಾತ್ರೆಗಳಿಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಥ್ಯವನ್ನು ಕೊಟ್ಟು ಪೂಜಿಸಿದನು. ೪೬. ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು. ಭೂಮಂಡಲವನ್ನು ಗುರುಗಳಿಗೆ ಕೊಟ್ಟೆನು. ಈಗ ನನ್ನಲ್ಲಿ ಒಂದಡಕೆಯೂ ಇಲ್ಲ. ಬೇಡುವವನಾದರೋ ವೇದಪಾರಂಗತ. ಹೇಗೆ ಅವನನ್ನು ಸಂತೋಷಪಡಿಸಲಿ? 'ಎಲೈ ದ್ರೋಣನೆ ಈಗ ಇದೊಂದು ಬಿಲ್ಲೂ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ. ಬೇರೆ ಆಸ್ತಿಯಿಲ್ಲ. ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ? ಚೆನ್ನಾಗಿ ಯೋಚಿಸಿ ಹೇಳು. ವ|| ಎಂಬುದಾಗಿ ಹೇಳಲು ದ್ರೋಣನು ನನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತ್ರಗಳನ್ನು ದಯಪಾಲಿಸಬೇಕು ಎನ್ನಲು ವಾರುಣ, ವಾಯುವ್ಯ, ಆಗ್ನೆಯ, ಐಂದ್ರಾದಿ ಅಸ್ತ್ರಗಳನ್ನು ಕೊಡಲು ಅದನ್ನು ತೆಗೆದುಕೊಂಡು ಪರಶುರಾಮನಿಂದ ಅಪ್ಪಣೆ ಪಡೆದು ತನ್ನ ಒಡನಾಡಿಯೂ ಸ್ನೇಹಿತನೂ ಆದ ದ್ರುಪದನು ಛತ್ರಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆಂದು ಕೇಳಿ ಆ ಪಟ್ಟಣಕ್ಕೆ ಬಂದು ದ್ರುಪದನರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮಜೊತೆಯಲ್ಲಾಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಎಂದನು. ಅವನು ಆ ರೀತಿಯಲ್ಲಿಯೇ ಬಂದು ತಿಳಿಸಲಾಗಿ ದ್ರುಪದನು ರಾಜ್ಯವೆಂಬ
Page #152
--------------------------------------------------------------------------
________________
ಕಂ
ದ್ವಿತೀಯಾಶ್ವಾಸಂ | ೧೪೭
ಅಂತೆಂಬನಾರ್ಗ ಒರಿದುಂ
ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ | ಅಂತನಗೆ ಕಳೆಯನೇ ನೂಂ ಕಂತಪ್ಪನನಡೆಯೆನೆಂದು ಸಭೆಯೊಳ್ ನುಡಿದಂ ||
42
ವ|| ಅಂತು ನುಡಿದುದಂ ಪಡಿಯ೦ ಬಂದಾ ಮಾಯೊಳಪ ದ್ರೋಣನೊತ್ತಂಬದಿಂದೊಳಗಂ ಪೊಕ್ಕು ದ್ರುಪದನು ಕಂಡು
ಚಂ || ಅಜೆಯಿರೆ ನೀಮುಮಾಮುನೊಡನೊದಿದವೆಂಬುದನಣ್ಣ ನಿನ್ನನಾ ನಡೆಯನದಲ್ಲಿ ಕಂಡಯೊ ಮಹೀಪತಿಗಂ ದ್ವಿಜವಂಶಜಂಗಮೇ | ತದ ಕೆಳೆಯಿಂತು ನಾಣಿಲಿಗರಪ್ಪರೆ ಮಾನಸರೆಂಬ ಮಾತುಗಳ ನೆಗೊಳ ಕುಂಭಸಂಭವನನಾ ದ್ರುಪದಂ ಕಡು ಸಿಗ್ಗು ಮಾಡಿದಂ || ೪೮
ವ|| ಅಂತು ಮಾಡಿದುದುಮಲ್ಲದೀ ನಾಣಿಲಿ ಪಾರ್ವನನೆದು ಕಳೆಯಿಮೆಂಬುದುಂ ದ್ರೋಣ ನಿಂತಂದಂ
ಚಂ || ನುಡಿ ತಡವಪ್ಪುದೊಂದು ಮೊಗದೊಳ್ ಮುಲುಕಂ ದೊರೆಕೊಳ್ಳುದೊಂದು ನಾ ಹೈಡೆಗುಡದಿರ್ಪುದೊಂದು ನುಡಿಗಳ ಮೊಯಂ ಮಯಿಪುದೊಂದು ಕ | ಳುಡಿದವರಂದಮಿಂತು ಸಿರಿ ಸಾರ್ತರ ಸಾರ್ವುದದರ್ಕೆ ಸಂದೆಯಂ ಬಡದೆ ಜಲಕ್ಕನೀಗಳದಂ ಸಿರಿ ಕಡವುಟ್ಟಿತೆಂಬುದಂ |
VE
ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತನಾದ ಮನಸ್ಸುಳ್ಳವನೂ ಆಗಿ ಒಳ್ಳೆಯ ನಡತೆಯಿಲ್ಲದೆ ೪೭. 'ಹಾಗೆನ್ನುವವನು ಯಾರ ಸಂಬಂಧಿ? ಇದು ವಿಶೇಷ ಭ್ರಮೆಯಲ್ಲವೆ? ದ್ರೋಣನೆಂಬುವವನು ಬ್ರಾಹ್ಮಣನೇ ಹೇಗೆ ? ನನಗೆ ಸ್ನೇಹಿತನೇ ಹೇಳು? ಅಂತಹವನನ್ನು ನಾನು ತಿಳಿದಿಲ್ಲ; ಅವನನ್ನು ಹೊರಕ್ಕೆ ತಳ್ಳು' ಎಂದು ಸಭಾಮಧ್ಯದಲ್ಲಿ ಕೆಟ್ಟಮಾತನಾಡಿದನು. ವ! ಹೀಗೆ ಹೇಳಿದುದನ್ನು ದ್ವಾರಪಾಲಕನು ಬಂದು ಆ ರೀತಿಯಲ್ಲಿ ತಿಳಿಸಲಾಗಿ ದ್ರೋಣನು ಬಲಾತ್ಕಾರದಿಂದ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ ೪೮. 'ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ' ಎನ್ನಲು ದ್ರುಪದನು ನಿನ್ನನ್ನು ನಾನು ತಿಳಿದಿಲ್ಲ (ನೀನು ನನಗೆ ಅಪರಿಚಿತನು) ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೋ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕವಾಗುವಂತೆ ಹೀಯಾಳಿಸಿದನು. ವ ಹಾಗೆ ಮಾಡಿದುದೂ ಅಲ್ಲದೆ ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ನೂಕು ಎನ್ನಲು ದ್ರೋಣನು ಹೀಗೆಂದನು-೪೯. ಐಶ್ವರ್ಯ ಬರಲು ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು; ಮುಖದಲ್ಲಿ ವಕ್ರಚೇಷ್ಟೆಯುಂಟಾಗುವುದು; ಮಾತುಗಳು ನಾಚಿಕೆಯಿಲ್ಲದಾಗುವುವು; ಸಂಬಂಧವನ್ನು ಮರೆಯುವಂತೆ ಮಾಡುವುದು; ಆದುದರಿಂದ
Page #153
--------------------------------------------------------------------------
________________
೨
೧೪೮ / ಪಂಪಭಾರತಂ
ವ|| ಎಂದು ಸೈರಿಸದೆಚಂ|| ಖಳ ನೊಳವಿಂಗೆ ಕುಪ್ಪೆ ವರಮಂಬವೊಲಾಂಬರವುಂಟೆ ನಿನ್ನದೊಂ
ದಳವೊಡನೋದಿದೂಂದು ಬೆರಗಿಂಗ ಕೋಲಿನಗಾಗದೀ ಸಭಾ | ವಳಯದೊಳನ್ನವೇಚಿಸಿದ ನಿನ್ನನನಾಕುಳಮನ್ನ ಚಟ್ಟರಿಂ ತಳವೆಳಗಾಗೆ ಕಟ್ಟಿಸದೆ ಮಾಕೊಡೆ ಕಮ್ಮನ ಮಾಸವೊತ್ತೆನೇ || ೫೦
ವಗಿ ಎಂದಾರೂಢಪ್ರತಿಜ್ಞನಾಗಿ ನಾಗಪುರಕ್ಕೆ ಎಂದು ತಮ್ಮ ಭಾವ ಕೃಪನ ಮನೆಯೊಳಪ ಗತಪರಿಶ್ರಮನಾಗಿರ್ದೊಂದು ದಿವಸಂ ಪಾಂಡವರು ಕೌರವರುಂ ಪೊವೊಲಿಕ್ಕಂtl. ನರದಿಸುತಿರೆ ತೊಲ್ವುಲೆಯ
ನಿರದದು ಬಿಡ ಪುರಾಣ ಕೂಪದೊಳದನಿ | ಸ್ನರಿದು ತೆಗೆವಂದಮಂದವ ರಿರೆ ಬಳಸಿಯುಮಲ್ಲಿ ಕಂಡು ನಕ್ಕಂ ದ್ರೋಣಂ ||
೫೧ ಭರತಕುಳತಿಳಕರಿರ್ ವರ ಶರಾಸನ ವಗಹಸರಿರ್ ಬಳಯುತರಿರ್ | ನೆರೆದಿನಿಬರುಮಿಾ ಲಕ್ಷ ಮ ನಿರದಕ್ಕಟ ಸರದೆ ತೆಗೆಯಲಾರ್ತಿರುಮಿಲ್ಲಾ ||
ವ|| ಎಂದು ತನ್ನ ಮಗನಪ್ಪಶ್ವತ್ಥಾಮನಂ ಕರೆದೀ ಲಕ್ಷ ಮಂ ತಗೆಯೆಂಬುದುಮಾತ ನಂತೆ ಗಯ್ಯನೆಂದು ನೈಷ್ಠಿಕವೆಂಬ ಮುಷ್ಟಿಯೊಳಂ ಪುಂಖಾನುಪುಂಖವಂಬ ಐಶ್ವರ್ಯವು ಕಳ್ಳಿನೊಡನೆ ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಿದೆನು' ವಎಂದು ಹೇಳಿ ಅಷ್ಟಕ್ಕೇ ಸಹಿಸಲಾರದೆ ೫೦. "ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು' ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ? ವ|ಎಂದು ಪಣತೊಟ್ಟವನಾಗಿ ಹಸ್ತಿನಾಪುರಕ್ಕೆ ಬಂದು ತನ್ನ ಭಾವನಾದ ಕೃಪನ ಮನೆಯಲ್ಲಿ ಶ್ರಮಪರಿಹಾರಮಾಡಿಕೊಂಡನು. ಒಂದು ದಿನ ಪಾಂಡವರೂ ಕೌರವರೂ ಪಟ್ಟಣದ ಹೊರಭಾಗದಲ್ಲಿ ೫೧. ಒಟ್ಟುಗೂಡಿ ಚಕ್ಕಳದ ಜಿಂಕೆಯೊಂದನ್ನು ಬಾಣಗಳಿಂದ ಹೊಡೆಯುತ್ತಿರಲು ಅದು ಹಳೆಯ ಬಾವಿಯಲ್ಲಿ ಬಿದ್ದುಬಿಟ್ಟಿತು. ಅದನ್ನು ತಿಳಿದು ಮೇಲಕ್ಕೆ ತೆಗೆಯುವ ರೀತಿ ಸಾಧ್ಯವಿಲ್ಲವೆಂದವರಿರಲಾಗಿ ಅಲ್ಲಿ ಸುತ್ತಾಡುತ್ತಿದ್ದ ದ್ರೋಣನು ಅದನ್ನು ಕಂಡು ನಕ್ಕನು. ೫೨. 'ಭರತವಂಶತಿಲಕರಾಗಿದ್ದೀರಿ; ಬಿಲ್ವಿದ್ಯೆಯಲ್ಲಿ ಪರಿಣತರಾಗಿದ್ದೀರಿ; ಬಲಿಷ್ಠರಾಗಿದ್ದೀರಿ; ಅಯ್ಯೋ ಒಟ್ಟುಗೂಡಿದ ನೀವಿಷ್ಟು ಜನವೂ ಈ ಗುರಿಯನ್ನು (ಚಕ್ಕಳದ ಜಿಂಕೆಯನ್ನು) ಬಾಣದಿಂದ ಮೇಲಕ್ಕೆ ತೆಗೆಯಲು 'ಸಮರ್ಥರಾಗಲಿಲ್ಲವೆ? ವ|| ಎಂದು ತನ್ನ ಮಗನಾದ ಅಶ್ವತ್ಥಾಮನನ್ನು ಕರೆದು ಈ
Page #154
--------------------------------------------------------------------------
________________
ದ್ವಿತೀಯಾಶ್ವಾಸಂ | ೧೪೯
ಶರಸಂಧಾನದೊಳವಯವದೊಳ ತೆಗೆದೊಡನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗಪಿದೊಡ ನದೀತನೂಜಂ ಭಾರದ್ವಾಜಂಗೆ ಬಲೆಯನಟ್ಟಿ ಬರಿಸಿ ಪೂರ್ವ ಸಂಭಾಷಣಾರ್ಘಮತ್ತಿ ಮಧುಪರ್ಕ ವೇತ್ರಾಸನ ತಾಂಬೂಲದಾನಾದಿಗಳಿಂ ಸಂತಸಂಬಡಿಸಿ ತದೀಯ ಕುಲ ವಿದ್ಯಾವೃತ್ತಿಗಳಂ ಬೆಸಗೊಂಡು
ಮ||
4.
ಮದಮಂ ಮುಕ್ಕುಳಿಸಿರ್ದಿಭಂಗಳನುದಗ್ರಾಶ್ವಂಗಳಂ ತಕ್ಕಿನ ಗದ ಬಾಡಂಗಳನಾಯ್ಡು ಕೊಟ್ಟು ತಣಿದಂ ಪೋ ಸಾಲುಮಂಬನ್ನಮಂ | ದಿದಿರೊಳ್ ನೂಲುವ ಕುಮಾರರುಮನಿಟ್ಟ ಕೂಸುಗಳ ಯೋಗ್ಯರ ಪುದನಿನ್ನೊಳ್ಕೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ || ವ|| ಎಂಬುದುಮಂತೆಗೆಯ್ಯನೆಂದು ಕಲಶಜನನಿಬರ ಮೊಗಮಂ ನೋಡಿ
ಕಂ
ಈ ನೆರದಿನಿಬರುಮಂದುದ
ನೇನೀವಿರ ಪೇಟೆಮಂದೊಡನಿಬರುಮಿರ್ದರ್ |
ಮೌನವ್ರತದ ಗುಣಾರ್ಣವ
ನಾನೀಂ ನಿಮ್ಮ ಬಯಸಿ ಬೇಯ್ದುದನೆಂದಂ ||
9:2
೫೪
ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಟಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆಂದಂ
ಲಕ್ಷ್ಯವನ್ನು ತೆಗೆ ಎಂದನು. ಅವನು 'ಹಾಗೆಯೇ ಮಾಡುತ್ತೇನೆ' ಎಂದು ನೈಷ್ಠಿಕವೆನ್ನುವ ಮುಷ್ಟಿಯಿಂದ ಬಾಣದ ಒಂದು ಗರಿಯನ್ನನುಸರಿಸಿ ಮತ್ತೊಂದು ಬಾಣಬಿಡುವ ಪ್ರಯೋಗದಿಂದ ನಿರಾಯಾಸವಾಗಿ ಮೇಲಕ್ಕೆತ್ತಿದನು. ಅಷ್ಟುಮಂದಿಯೂ ಆಶ್ಚರ್ಯಪಟ್ಟು (ಆ ವಿಷಯವನ್ನು) ಭೀಷ್ಮ ಧೃತರಾಷ್ಟ್ರರಿಗೆ ತಿಳಿಸಿದರು. ಭೀಷ್ಮನು ದ್ರೋಣಾಚಾರ್ಯರಿಗೆ ಹೇಳಿ ಕಳುಹಿಸಿ ಬರಮಾಡಿ ಕುಶಲ ಸಂಭಾಷಣಾಪೂರ್ವಕ ಅರ್ಥ್ಯವನ್ನು ಕೊಟ್ಟು ಮಧುಪರ್ಕ, ವೇತ್ರಾಸನ, ತಾಂಬೂಲದಾನಾದಿಗಳಿಂದ ಸಂತೋಷಪಡಿಸಿ ಆತನ ಕುಲ, ವಿದ್ಯೆ ಮತ್ತು ವೃತ್ತಿಗಳನ್ನು ಪ್ರಶ್ನೆಮಾಡಿ ತಿಳಿದುಕೊಂಡನು. ೫೩. ಮದವನ್ನು ಉಗುಳುತ್ತಿರುವ ಆನೆಗಳನ್ನೂ (ಮದ್ದಾನೆಗಳನ್ನು) ಉತ್ತಮವಾದ ಕುದುರೆಗಳನ್ನೂ ಯೋಗ್ಯವೂ ಶ್ರೇಷ್ಠವೂ ಆದ ಗ್ರಾಮಗಳನ್ನೂ 'ತೃಪ್ತನಾದೆ, ಸಾಕು, ಹೋಗು' ಎನ್ನುವಷ್ಟು ಕೊಟ್ಟು ಅಂದು ಆ ನೂರಾರು ಮಕ್ಕಳನ್ನು ಅವರಿಗೆ ಒಪ್ಪಿಸಿ 'ಈ ಮಕ್ಕಳು ಯೋಗ್ಯರಾಗಬೇಕು ಎಂಬ ಇಷ್ಟ ನಿಮಗಿರುವುದಾದರೆ ಎಲೈ ದ್ರೋಣನೇ ನೀನು ಇವರಿಗೆ ಶಸ್ತ್ರವಿದ್ಯೆಯ ಉಪಾಧ್ಯಾಯನಾಗು' ವ! ಎನ್ನಲು ದ್ರೋಣನು ಹಾಗೆಯೇ ಮಾಡುತ್ತೇನೆಂದು ಕೇಳಿ ಅವರೆಲ್ಲರ ಮುಖವನ್ನು ನೋಡಿ೫೪. 'ಇಲ್ಲಿ ಸೇರಿರುವ ಇಷ್ಟು ಜನರೂ ನಾನು ಕೇಳಿದ್ದನ್ನು ಕೊಡಬಲ್ಲಿರಾ ಹೇಳಿ ಎನ್ನಲು ಎಲ್ಲರೂ ಮೌನವಾಗಿದ್ದರು. ಗುಣಾರ್ಣವನು 'ನೀವು ಆಶೆಪಟ್ಟು ಬೇಡಿದುದನ್ನು ನಾನು ಕೊಡುತ್ತೇನೆ' ಎಂದನು. ವ|| ಹಾಗೆನ್ನಲಾಗಿ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೇರಿಸಿಕೊಂಡು ದ್ರೋಣನು
Page #155
--------------------------------------------------------------------------
________________
[೧೫೦ | ಪಂಪಭಾರತಂ ಕoll ಇನಿಬರೊಳಗೀತನೊರ್ವನೆ
ಧನುರಾಗಮದೆಡೆಗೆ ಕುಶಲನಕ್ಕುಮದರ್ಕೆಂ | ಕಿನಿಸದಿರಿಂ ಮುನ್ನಪಿದೆ - ನೆನೆ ಭೀಷ್ಮನಲಂಪು, ಮಿಗೆ ಮುಗುಳಗೆ ನಕ್ಕಂ ||
೫೫ : ವ|| ಅಂತು ದ್ರೋಣಾಚಾರನಾಚಾರಪದವಿಯಂ ಕೈಕೊಂಡು ಪಾಂಡವ ಕೌರವರ್ಗ ಚತುರಂಗ ಧನುರ್ವದಮುಮಂ ದಿವ್ಯಾಸಂಗಳುಮಂ ಶಕ್ತಿ ತೋಮರ ಮುಸಲ ಮುಸುಂಡಿ ಭಂಡಿವಾಳ ಮುದ್ಧರ ಗದಾದಿ ವಿವಿಧಾಯುಧಂಗಳುಮಂ ಗಜ ರಥ ತುರಗ ಪದಾತಿ ಯುದ್ಧಂಗಳುಮನುಪದೇಶಂಗೆಯುತ್ತುಮಿರೆಯಿರಕoll ಯಾದವ ವಂಶಜರುಂ ನಾ
ನಾ ದೇಶ ನರೇಂದ್ರರುಂ ಘಟೋದವನ ಧನು | ರ್ವದಮನ ಕಲಲ್ ಬಂದಾ ಳಾದರ್ ವಿದ್ಯಾಪ್ರಭಾವಮಾ ದೊರೆತ ವಲಂ || ದ್ರೋಣಂ ಗಡಮಿಸುವಿಗೆ ಜಾಣಂ ಗಡಮೆಂದು ಕೇಳು ಕೌರವರ್ಗಲ್ಲಂ | ಪ್ರಾಣಂ ಬರ್ಪಾಕೃತಿಯೋಳೆ .
ಬಾಣಾಸನ ಬಾಣಪಾಣಿ ಕರ್ಣ೦ ಬಂದಂ || ವ|| ಅಂತು ಬಂದು ವೈರಿಗಜಘಟಾವಿಘಟನನೊಲ್ ವಿಘಟಿಸಿ ಬಿಲ್ಲು
ಭೀಷ್ಮನಿಗೆ ಹೀಗೆ ಹೇಳಿದನು-೫೫, 'ಇಷ್ಟು ಮಕ್ಕಳಲ್ಲಿ ಇವನೊಬ್ಬನೇ ಬಿಲ್ವಿದ್ಯೆಯಲ್ಲಿ ಪಾರಂಗತನಾಗುತ್ತಾನೆ. ಅದಕ್ಕೆ ಕೋಪಿಸಬೇಡಿ; ಮೊದಲೇ ತಿಳಿಸಿದ್ದೇನೆ' ಎನ್ನಲು ಭೀಷ್ಮನು ಸಂತೋಷಾತಿಶಯದಿಂದ ಮುಗುಳ್ಳಗೆ ನಕ್ಕನು. ವ|| ಹಾಗೆ ದ್ರೋಣಾಚಾರ್ಯನು ಆಚಾರ್ಯಪದವಿಯನ್ನು ಅಂಗೀಕಾರ ಮಾಡಿ ಪಾಂಡವ ಕೌರವರುಗಳಿಗೆ ನಾಲ್ಕು ಭಾಗವಾಗಿರುವ ಬಿಲ್ವಿದ್ಯೆಯನ್ನೂ ದಿವ್ಯಾಸ್ತಗಳ ಪ್ರಯೋಗಗಳನ್ನೂ ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಧರ, ಗದೆಯೇ ಮೊದಲಾದ ಬಗೆಬಗೆಯ ಆಯುಧ ಪ್ರಯೋಗಗಳನ್ನೂ ಆನೆ, ತೇರು, ಕುದುರೆ ಮತ್ತು ಕಾಲಾಳುಗಳ ಯುದ್ದದ ರೀತಿಯನ್ನೂ ಹೇಳಿಕೊಟ್ಟನು. ೫೬. ಯಾದವ ವಂಶದವರೂ ನಾನಾ ದೇಶದ ರಾಜರೂ ದ್ರೋಣಾಚಾರ್ಯರ ಧನುರ್ವಿದ್ಯೆಯನ್ನು ಕಲಿಯಲು ಬಂದು ಆತನ ಶಿಷ್ಯರಾದರು. ದ್ರೋಣನ ವಿದ್ಯಾಪ್ರಭಾವವು ಅಂತಹ ಮಹಿಮೆಯುಳ್ಳದ್ದಲ್ಲವೆ? ೫೭. ದ್ರೋಣನಲ್ಲವೆ! ಬಾಣವಿದ್ಯೆಯಲ್ಲಿ ಜಾಣನಲ್ಲವೆ! ಎಂಬ ಪ್ರಶಂಸೆಯನ್ನು ಕೇಳಿ ಕೌರವರಿಗೆಲ್ಲ ಪ್ರಾಣ ಬರುವ ರೀತಿಯಲ್ಲಿ ಬಿಲ್ಲುಬಾಣಗಳನ್ನು ಹಿಡಿದು ಕರ್ಣನೂ ಅಲ್ಲಿಗೆ ಬಂದು ಕೂಡಿದನು. ವll ಹಾಗೆ ಬಂದು ಶತ್ರುರಾಜರ ಆನೆಗಳ ಸಮೂಹವನ್ನು ಭೇದಿಸಲು ಸಮರ್ಥನಾದ ಅರ್ಜುನನಲ್ಲಿ (ಅರಿಕೇಸರಿಯಲ್ಲಿ ಸ್ಪರ್ಧಿಸಿ ಬಿಲ್ವಿದ್ಯೆಯನ್ನು ಕಲಿತನು.
Page #156
--------------------------------------------------------------------------
________________
ದ್ವಿತೀಯಾಶ್ಚಾಸಂ | ೧೫೧ ಕಂಕಳೆಯುಂ ಗುಳಯುಂ ಗೊಟ್ಟಿಯು
ಮಳವಿಗೆ ಏರಿದಾಗ ತನಗೆ ದುರ್ಯೋಧನನೂ | ಮುಳಿಸುಂ ನೋವುಂ ಕಲುಷಮು ಮಳುಂಬಮನೆ ತನಗರಾತಿಕಾಳಾನಳನೊಳ್ ||
೫೮ ವ|| ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನಭ್ಯಾಸಂಗಯ್ಯಂತ ವಿದ್ಯಾಭ್ಯಾಸಂಗೆಯ್ಕೆಕಂ|| ಮನದೊಳೊಗದಸ್ಯಜನ್ಮದ
ಮುನಿಸದು, ಕಣ್ಣಂ ತುಳುಂಕೆ ಸೈರಿಸದವನು | ರ್ವಿನ ಕಲಿತನಕ್ಕೆ ದುರ್ಯೊ ಧನನುಂ ಭೀಮನೊಳೆ ಸೆಣಸಿ ಗದೆಯಂ ಕಲಂ ||
೫೯ ವ|| ಅಂತು ಭಾರದ್ವಾಜನಾಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಂ ಸಮಯಿಸುವ ಸೂತ್ರಧಾರನಂತೆ ಶಸ್ತವಿದ್ಯಾಭ್ಯಾಸಂಗೆಯ್ಯುತ್ತಿರೆ ದೇಶಾಧೀಶ್ವರರಪ್ಪ ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ನಡುವಣ ಸಕಳ ಕಳಾಧರನಂತೆ ಶಸ್ತಕಳಾಧರನಾಗಿ ತನ್ನುಮಂ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನಾರಯಲೆಂದುಕ೦ll ಛಾಯಾಲಕ್ಷ ಮನೊಡ್ಡಿಯು
ಮಾಯದ ನೀರೊಳಗೆ ತನ್ನನಡಸಿದ ನೆಗಲಂ | ಬಾಯಟಿವಿನಮಿಸಿಸಿಯುಮರ ಹೋಯಜ ಬಾಷ್ಟೊಂದು ಹರಿಗನಂ ಗುರು ಪೊಗಂ || ೬೦ |
೫೮. ಕಾಲಕಳೆದಂತೆಲ್ಲ ಕರ್ಣನಿಗೆ ದುರ್ಯೊಧನನಲ್ಲಿ ಸ್ನೇಹವೂ ಗುರಿಯೂ (ಸಹಪಾಠಿತ್ವವೂ) ಅಳತೆಗೆ ಮೀರಿದಂತೆ ಅರಾತಿ ಕಾಲಾನಲನಾದ ಅರ್ಜುನನಲ್ಲಿ ಕೋಪವೂ ವ್ಯಥೆಯೂ ಅಸೂಯೆಯೂ ಅಧಿಕವಾಯಿತು. ವಕರ್ಣನು ಗುಣಾರ್ಣವನಲ್ಲಿ ಸ್ಪರ್ಧಿಸಿ ಹಗೆತನವನ್ನಭ್ಯಾಸಮಾಡುವಂತೆಯೇ ವಿದ್ಯೆಯನ್ನು ಅಭ್ಯಾಸಮಾಡಿದನು. ೫೯. ಮನಸ್ಸಿನಲ್ಲಿ ಹುಟ್ಟಿದ ಪೂರ್ವಜನ್ಮದ ಕೋಪವು ಕಣ್ಣಿನಲ್ಲಿ ತುಳುಕುತ್ತಿರಲು ಅವನ ಅಭಿವೃದ್ಧಿಯಾಗುತ್ತಿರುವ ಶೌರ್ಯಕ್ಕೆ ಸಹನೆಯಿಲ್ಲದೆ ದುರ್ಯೊಧನನೂ ಭೀಮನಲ್ಲಿ ಸ್ಪರ್ಧಿಸಿ ಗದೆಯ ಪ್ರಯೋಗವನ್ನು ಕಲಿತನು. ವ|| ಹಾಗೆ ದ್ರೋಣಾಚಾರ್ಯನು ಮುಂದೆ ಬರುವ ಯುದ್ಧರಂಗಕ್ಕೆ ಪಾತ್ರಗಳನ್ನು ಸಿದ್ಧಪಡಿಸುವ ಸೂತ್ರಧಾರನ ಹಾಗೆ ಶಸ್ತವಿದ್ಯಾಭ್ಯಾಸವನ್ನು ಮಾಡಿಸುತ್ತಿರಲು ಅನೇಕ ದೇಶದ ಒಡೆಯರಾದ ಹಲವು ರಾಜಕುಮಾರರ ಮಧ್ಯದಲ್ಲಿ ನಕ್ಷತ್ರಸಮೂಹದ ಮಧ್ಯದ ಪೂರ್ಣಚಂದ್ರನ ಹಾಗೆ ಶಸ್ತಕಲೆಯನ್ನು ಧರಿಸಿ ತನ್ನನ್ನೂ ಗೆದ್ದಿರುವ ಸಾಮಂತಚೂಡಾಮಣಿಯಾದ ಅರ್ಜುನನ (ಅರಿಕೇಸರಿಯ) ಬಾಣಪ್ರಯೋಗ ಪಾಂಡಿತ್ಯವನ್ನು ಪರೀಕ್ಷಿಸಬೇಕೆಂದು-೬೦. ಪ್ರತಿಬಿಂಬದ ಗುರಿಯನ್ನು ಒಡ್ಡಿಯೂ ಆಳವಾದ ನೀರಿನಲ್ಲಿ ತನ್ನನ್ನು ಹಿಡಿದಿದ್ದ ಮೊಸಳೆಯನ್ನು ಅದು ಅರಚಿಕೊಂಡು
Page #157
--------------------------------------------------------------------------
________________
೧೫೨) ಪಂಪಭಾರತಂ
ವ|| ಅಂತು ಪೊಗಟ್ಟು ತನ್ನ ಪಗೆವನಪ್ಪ ದ್ರುಪದನನೀತನಮೋಘಂ ಗೆಲಲ್ ನೆಗು ಮಂದು ನಿಶ್ಚಿಸಿಚಂ|| ಅಣುಗಿನೊಳನ್ನ ಚಟ್ಟರೊಳಗೀತನೆ ಜೆಟ್ಟಿಗನೆಂದು ವಿದ್ವಯಂ .
ಗುಣಕುಗೊಂಡು ಕೊಟ್ಟೆನಗೆ ಸಂತಸಮಪಿನಮಾವ ನಿನ್ನ ದ | ಕ್ಷಿಣೆಯದು ಬೇಗಮಾ ದ್ರುಪದನಂ ಗಡ ಕೋಡಗಗಟ್ಟುಗಟ್ಟಿ ತಂ
ದಣಿಯರನೊಪ್ಪಿಸಿಂತಿದನೆ ಬೇಡಿದನಾಂ ಪರಸೈನ್ಯಭೈರವಾ || ೬೧ ವ|| ಎಂಬುದುಮಿಾ ಬೆಸನದಾವುದು ಗಹನಮಂದು ಪೂಣ್ಣು ಪೋಗಿಮll ಒಡವಂದಂಕದ ಕೌರವ ದ್ರುಪದನಂಟಿಂಗೆ ಮಯೊಡ್ಡದೊ
ಹೊಡೆದೋಡುತ್ತಿರೆ ಸೂಸೆ ಬೀಟ್ಟಿ ತಲೆಗಳ ಸೂಚ್ಚಿಟ್ಟನಾಗಳ ಜವಂ | ಪಿಡಿದೀಡಾಡುವ ಮಾಚಿಯಂತೆ ಪಲರಂ ಕೊಂದಿಕ್ಕಿ ಮಯುಟಿವ |
ದಡೆಯೊಳ್ ಮಾಣದುರುಳ್ಳಿ ಕಟ್ಟ ರಿಪುವಂ ಮುಂದಿಕ್ಕಿದಂ ದ್ರೋಣನಾ || ೬೨
ವ|| ಆಗಳಾ ಕುಂಭಸಂಭವಂ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ ಕದಂಪಂ ಕರ್ಚಿ ದ್ರುಪದನಂ ತನ್ನ ಮಂಚದ ಕಾಲೊಳ ಕಟ್ಟವೇಟ್ಟು ತಲೆಯ ಮೇಲೆ ಕಾಲನವಷ್ಟಂಭದಿಂ ನೀಡಿ
ಸಾಯುವ ಹಾಗೆ ಬಾಣ ಪ್ರಯೋಗಮಾಡಿಸಿಯೂ ನೋಡಿ 'ಅರೆ, ಹೂ, ಅಜ, ಭಾಪು, ಎಂಬ ಮಚ್ಚಿಕೆಯ ಮಾತುಗಳಿಂದ ಗುರುವು ಅರ್ಜುನನನ್ನು ಶ್ಲಾಘಿಸಿದನು. ವ|| ಹಾಗೆ ಹೊಗಳಿ ತನ್ನ ಶತ್ರುವಾದ ದ್ರುಪದನನ್ನು ಈತನು ಸಂಪೂರ್ಣವಾಗಿ ಗೆಲ್ಲಲು ಸಮರ್ಥನಾಗುತ್ತಾನೆಂದು ನಿಷ್ಕರ್ಷಿಸಿ ಅವನನ್ನು ಕುರಿತು ೬೧. 'ಅರ್ಜುನಾ ಭಕ್ತಿಯುಳ್ಳ ನನ್ನ ಶಿಷ್ಯರಲ್ಲಿ ಇವನೇ ಪರಾಕ್ರಮಶಾಲಿ ಎಂದು ವಿದ್ಯೆಯನ್ನು ಪ್ರೀತಿಯಿಂದ ದಾನಮಾಡಿದ ನನಗೆ ಸಂತೋಷವಾಗುವ ಹಾಗೆ ನೀನು ಕೊಡುವ ಗುರುದಕ್ಷಿಣೆಯಾಗಿ ಜಾಗ್ರತೆಯಾಗಿ ಆ ದ್ರುಪದನನ್ನು ಕೋಡಗಗಟ್ಟು ಕಟ್ಟಿ ತಂದು ಅತಿಶಯವಾದ ರೀತಿಯಲ್ಲಿ ಒಪ್ಪಿಸು. ಎಲೈ ಪರಸೈನ್ಯಭೈರವನೇ ಇದನ್ನೇ ನಾನು ನಿನ್ನಿಂದ ಬೇಡಿದುದು, ವll ಎನ್ನಲು ಈ ಆಜ್ಞಾಕಾರ್ಯ ಏನು ಮಹಾದೊಡ್ಡದು ಎಂದು ಪ್ರತಿಜ್ಞೆಮಾಡಿ ಹೋಗಿ-೬೨. ಒಡನೆ ಬಂದ ಪ್ರಸಿದ್ದರಾದ ಕೌರವರು ದ್ರುಪದನ ಬಾಣದ ಪೆಟ್ಟಿಗೆ ಶರೀರವನ್ನು ಒಡ್ಡಲಾರದೆ ಚದುರಿ ಓಡುತ್ತಿರಲು, ಬೀಳುವ ತಲೆಗಳು ಚದುರಾಡುತ್ತಿರಲು ತನ್ನ ಸರದಿಯನ್ನು ಪಡೆದ ಅರ್ಜುನನು ಹಲಬರನ್ನು ಯಮನು ಹಿಡಿದು ಬಿಸಾಡುವ ರೀತಿಯಲ್ಲಿ ಸಾಯಿಸಿ, ಶರೀರವನ್ನು ಮುಟ್ಟುವಷ್ಟು ಹತ್ತಿರಕ್ಕೆ ಬಂದವರನ್ನೂ ಉರುಳಿಸಿ ಶತ್ರುವನ್ನು ಕಟ್ಟಿತಂದು ದ್ರೋಣನ ಮುಂದೆ ಇಟ್ಟನು. ವ|| ಆಗ ದ್ರೋಣನು ಪರಾಕ್ರಮಧವಳನಾದ ಅರ್ಜುನನ ಶೌರ್ಯಕ್ಕೆ ಸಂತೋಷಪಟ್ಟು ಕೆನ್ನೆಗೆ ಮುತ್ತಿಟ್ಟು ದ್ರುಪದನನ್ನು ತನ್ನ ಮಂಚದ ಕಾಲಿಗೆ ಕಟ್ಟಿ ಹೇಳಿ ಅವನ ತಲೆಯ
Page #158
--------------------------------------------------------------------------
________________
ಕoll
ದ್ವಿತೀಯಾಶ್ವಾಸಂ | ೧೫೩
ಸಿರಿಮೆಯೊಳಗಂದಜೆವಿರ ನೆರವಿಯೊಳಾರವರೋರ್ಮ ಕಂಡರನಟಿಯ ರಿದಮ್ಮಂ ಬಡ ಪಾರ್ವರ
ನರಸರ ನೀಮಾಗಳವಿರಟೆಯಿರೋ ಪೇಟೆಂ ||
ವ|| ಎಂದು ಸಾಯ ಸರಸಂ ನುಡಿದು ಮತ್ತಮಿಂತೆಂದಂ
ಕಂ ।। ಆದಿ ಕ್ಷತ್ರಿಯರೇ ನೀ
ಮಾದಿತ್ಯನನಿಳಿದ ತೇಜರಿರ್ ಪಾಳ್ವನ ಕಾಲ್ | ಮೋದ ನಡುತಲೆಯಲಿರ್ಪುದು
ಮಾದುದು ನಿಮಗೆಂದು ನುಡಿದು ಕಾಯ್ದೆನೊದೆದು ||
と&
とら
ವ| ಒದೆದು ನಿನ್ನನಿನಿತು ಪರಿಭವಂಬಡಿಸಿದುದು ಸಾಲ್ಕು ನಿನ್ನಂ ಕೊಲಲಾಗದು ಕೊಂದೊಡೆ ಮೇಲಪ್ಪ ಪಗೆಗಂಜಿ ಕೊಂದಂತಾಗಿರ್ಕುಮೆಂದು ಕಟ್ಟಿದ ಕಟ್ಟುಗಳೆಲ್ಲಮಂ ತಾನೆ ಬಿಟ್ಟು ಕಳೆದು ಪೋಗೆಂಬುದುಂ ದ್ರುಪದಂ ಪರಿಭವಾನಳನಳವಲ್ಲದಳುರೆ ನಿನ್ನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡದಲ್ಲದಿರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನಿತ್ತ ಭಾರದ್ವಾಜಂ ಪಾಂಡವ ಕೌರವರ್ಕಳ ಮಯೊಳ ವಿದ್ಯೆಯಂ ನೆತೆಯ ಸಂಕ್ರಮಿಸಿದ ತನ್ನ ವಿದ್ಯಾಮಹಿಮೆಯಂ ಮೆಯ ಬಾಹ್ಯಕ ಭೂರಿಶ್ರವಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕನಿಂತೆಂದಂ
ಮೇಲೆ ತನ್ನ ಕಾಲನ್ನು ಗರ್ವದಿಂದ ನೀಡಿ-೬೩. 'ಐಶ್ವರ್ಯ ಸ್ಥಿತಿಯಲ್ಲಿ ಅಂದು ನೀವು ನಮ್ಮನ್ನು ತಿಳಿಯುತ್ತೀರಾ (ಗುರುತಿಸುತ್ತೀರಾ), ಒಂದು ಸಲ ಗುಂಪಿನಲ್ಲಿ ಕಂಡವರನ್ನೂ ಯಾರು ತಾನೆ ಗುರುತಿಸಬಲ್ಲರು. ಬಡಬ್ರಾಹ್ಮಣರಾದ ನಮ್ಮನ್ನೂ ಗುರುತಿಸಲಸಾಧ್ಯ. ರಾಜರೇ ಈಗಲಾದರೂ ಗುರುತಿಸುತ್ತೀರೋ ಇಲ್ಲವೋ ಹೇಳಿ', ವ! ಎಂದು ಪ್ರಾಣಹೋಗುವಷ್ಟು ಪರಿಹಾಸ್ಯ ಮಾಡಿ ಪುನಃ ಹೀಗೆಂದನು-೬೪, 'ನೀವು ಆದಿಕ್ಷತ್ರಿಯರಾಗಿದ್ದೀರಿ; ಸೂರ್ಯನನ್ನೂ ತಿರಸ್ಕರಿಸುವ ತೇಜಸ್ಸುಳ್ಳವರಾಗಿದ್ದೀರಿ. ಹಾರುವನು ಒದ್ದ ಕಾಲು ನಡುನೆತ್ತಿಯಲ್ಲಿರುವದಾಯಿತಲ್ಲಾ' ಎಂದು ಹೇಳಿ ಕೋಪದಿಂದ ಒದೆದನು-ವ ಒದ್ದು 'ನಿನ್ನನ್ನು ಇಷ್ಟು ಅವಮಾನಪಡಿಸಿದುದು ಸಾಕು. ನಿನ್ನನ್ನು ಕೊಲ್ಲಬಾರದು. ಕೊಂದರೆ ಹೆದರಿ ತನಗಿಂತ ಮೇಲಾದ ಶತ್ರುವನ್ನೂ ಕೊಂದಂತಾಗುತ್ತದೆ' ಎಂದು ಕಟ್ಟಿದ ಕಟ್ಟುಗಳೆಲ್ಲವನ್ನೂ ತಾನೇ ಬಿಚ್ಚಿಕಳೆದು ಹೋಗು ಎನ್ನಲು ದ್ರುಪದನು ಅವಮಾನವೆಂಬ ಅಗ್ನಿಯು ವಿಶೇಷವಾಗಿ ಸುಡಲು 'ನಿನ್ನನ್ನೂ ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದಿರುವುದಿಲ್ಲ ಎಂದು ದೊಡ್ಡ ಪ್ರತಿಜ್ಞೆಯನ್ನೂ ಮಾಡಿಹೋದನು. ಈ ಕಡೆ ಭಾರದ್ವಾಜನು ಪಾಂಡವ ಕೌರವರುಗಳ ಶರೀರದಲ್ಲಿ ವಿದ್ಯೆಯನ್ನು ಪೂರ್ಣವಾಗಿ ಅಳವಡಿಸಿದ ತನ್ನ ಮಹಿಮೆಯನ್ನು ಪ್ರಕಾಶಪಡಿಸುವುದಕ್ಕಾಗಿ ಬಾಹೀಕ, ಭೂರಿಶ್ರವ, ಸೋಮದತ್ತ, ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಹೀಗೆಂದು ಹೇಳಿದನು.
"
Page #159
--------------------------------------------------------------------------
________________
೧೫೪) ಪಂಪಭಾರತಂ ಕ೦ll - ನೆಯ ಧನುರ್ವಿದ್ಯೆಯ ಕ
ಸ್ಟೇಜ'ವಿನೆಗಂ ಕಲ್ಕ ನಿಮ್ಮ ಮಕ್ಕಳ ಮೆಯೊಳ್ || ಮಣಿದಪ್ಪೆನೆನ್ನ ಎದೆಯ ನದೊಯ್ಯನೆ ನೆರೆದು ನೋಟ್ಟುದನಿಬರುಮಾರ್ಗ ||
೬೫
ವ|| ಎಂದೂಡಂತೆಗೆಯ್ಮೆಂದನಿಬರುಮೊಡಂಬಟ್ಟು ಪೊವೊಲೊಳುತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನಳೆದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮುಹೂರ್ತದೊಳ್
ಕಂ|| ಗಟ್ಟಿಸಿ ಸಿಂಧುರದೊಳ್ ನೆಲ
ಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್ | .. ಕಟ್ಟಿಸಿ ಪಬಯಿಗೆಗಳನಳು
ವಟ್ಟರೆ ಬಿಯಮಲ್ಲಿ ಮೊಲಗೆ ಪಲವುಂ ಪಳೆಗಳ 1.
.
೬೬
ವll ಅಂತು ಸಮದ ವ್ಯಾಯಾಮ ರಂಗಕ್ಕೆ ಗಾಂಗೇಯ ಧೃತರಾಷ್ಟ್ರ ವಿದುರ ಸೋಮದತ್ತ ಬಾತ್ಮೀಕ ಭೂರಿಶ್ರವಾದಿ ಕುಲವೃದ್ಧರುಂ ಕುಂತಿ ಗಾಂಧಾರಿಗಳುಂ ವೆರಸು ಬಂದು ಕುಳ್ಳಿರೆ
ಕಂt
ಅರಸಿಯರನಣುಗರಂ ಬೇ ಆರುಮಂ ಮೊನೆಗಾರಂ ಗೀತರನಿಂಬಾ ಗಿರೆ ಚಪಳಿಗೆಗಳೊಳ್ ಕು ೯ರಿಸಿದರೊಡನೆಸೆಯೆ ನೆರೆದ ಪುರಜನ ಸಹಿತಂ ||
೬೭
೬೫. 'ಬಿಲ್ವಿದ್ಯೆಯೇ ಆವಿರ್ಭಾವವಾಗುವ ಹಾಗೆ ಸಂಪೂರ್ಣವಾಗಿ ಕಲಿತುಕೊಂಡಿರುವ ನಿಮ್ಮ ಮಕ್ಕಳ ಶರೀರದಲ್ಲಿ ನನ್ನ ವಿದ್ಯೆಯನ್ನು ಪ್ರಕಾಶಪಡಿಸುತ್ತೇನೆ. ಈಗ ಎಲ್ಲರೂ ಒಟ್ಟಾಗಿ ಸೇರಿ ಪ್ರತ್ಯಕ್ಷವಾಗಿ ತಿಳಿದು ನೋಡಬೇಕು'. ವ|| ಎಂದು ಹೇಳಲಾಗಿ ಹಾಗೆಯೇ ಮಾಡೋಣವೆಂದು ಎಲ್ಲರೂ ಒಪ್ಪಿ ಪಟ್ಟಣದ ಹೊರಗಿನ ಉತ್ತರದಿಗ್ಯಾಗದಲ್ಲಿ ಚಚ್ಚಕವಾದ ಭೂಮಿಯನ್ನು ಅಳೆದು ಕಲ್ಲು ಹುಲ್ಲನ್ನು ಶೋಧಿಸಿ ತೆಗೆದು ಶುಭದಿನ ಶುಭಮುಹೂರ್ತದಲ್ಲಿ ೬೬. ನೆಲವನ್ನು ಚಂದ್ರಕಾವಿಯಿಂದ ಧಮ್ಮಸ್ಸುಮಾಡಿ ಅಪರಂಜಿಯಿಂದ ಮಾಡಿದ ಮನೆಗಳ ತೊಟ್ಟಿಗಳಲ್ಲಿ ಬಾವುಟಗಳನ್ನು ಕಟ್ಟಿಸಿ ಸೂಕ್ತ ವೆಚ್ಚದಿಂದ ಹಲವು ವಾದ್ಯಗಳು ಮೊಳಗುತ್ತಿರಲು ವ|| ಹಾಗೆ ನಿರ್ಮಿಸಿದ ವ್ಯಾಯಾಮರಂಗಕ್ಕೆ ಭೀಷ್ಮ ದೃತರಾಷ್ಟ್ರ, ವಿದುರ, ಸೋಮದತ್ತ, ಬಾಹೀಕ, ಭೂರಿಶ್ರವರೇ ಮೊದಲಾದ ಕುಲವೃದ್ಧರು ಕುಂತಿಗಾಂಧಾರಿಯರೊಡನೆ ಬಂದು ಕುಳಿತರು. ೬೭. ರಾಣಿಯರನ್ನೂ ಮಕ್ಕಳನ್ನೂ ಬೇಕಾದವರನ್ನೂ ಯೋಧರನ್ನೂ ಗಣ್ಯರನ್ನೂ ಪಟ್ಟಣಿಗರೊಡನೆ ಶೋಭಿಸುವ ಹಾಗೆ ಒಟ್ಟಿಗೆ ಹಜಾರದ ಮೇಲುಭಾಗದಲ್ಲಿ ಆಕರ್ಷಕವಾಗಿರುವ ರೀತಿಯಲ್ಲಿ ಕುಳ್ಳಿರಿಸಿದರು.
Page #160
--------------------------------------------------------------------------
________________
,
ದ್ವಿತೀಯಾಶ್ವಾಸಂ | ೧೫೫ ವ|| ಆಗಳ್ ಕುಂಭಸಂಭವಂ- : : . ಕoll ಪೊಸ ಮುತ್ತಿನ ತುಡಿಗೆ ಪೊದ
ಆಸೆಯ ದುಕೂಲಾಂಬರಂ ನಿಜಾಂಗದೊಳಂ ಸಂ | ದೆಸೆದಿರೆ ಬೆಳುಗಿಲಿಂದಂ
ಮುಸುಕಿದ ನೀಲಾದ್ರಿ ಬರ್ಪ ತಳದೊಳ್ ಬಂದಂ || ೬೮ ವ|| ಅಂತು ಬಂದು ರಂಗಭೂಮಿಯ ನಡುವೆ ನಿಂದು. ಕಂ11 ನೆಗಟ್ಟಿರೆ ಪುಣ್ಯಾಹ ಸ್ವರ -
ಮೊಗೆದಿರೆ ಪಟು ಪಟಹ ಕಾಹಳಾ ರವವಾಗಳ್ | ಪುಗವೇಲ್ಡಂ ವಿವಿಧಾಸ್ತ್ರ ಪ್ರಗಲ್ಕರಂ ತನ್ನ ಚಟ್ಟರಂ ಕಳಶಭವ ! ಅಂತು ಪುಗಟ್ಟುದುಂ ದಿ ಗಂತಿಗಳುಂ ಕುಲನಗಂಗಳುಂ ಗಡಣಂಗೊ 1 ಡೆಂತು ಕವಿತರ್ಕುಮಂತೆ ನೆ
ಲಂ ತಳರ್ವಿನೆಗಂ ಪ್ರಚಂಡ ಕೋದಂಡಧರರ್ | ವ|| ಅಂತು ಧರ್ಮಪುತ್ರನಂ ಮುಂತಿಟ್ಟು ಭೀಮಾರ್ಜುನ ನಕುಲ ಸಹದೇವರುಂ ದುರ್ಯೊಧನನಂ ಮುಂತಿಟ್ಟು ಯುಯುತ್ಸು ದುಶ್ಯಾಸನ ದುಸ್ಸಹ ದುಸ್ಸಳ ಜರಾಸಂಧ ಸತ್ಯ ಸಂಧ ನಿಸ್ಸಹ ರಾಜಸಂಧ ವಿಂದಅನುವಿಂದ ದುರ್ಮತಿ ಸುಬಾಹು ದುಷ್ಟರ್ಶನ ದುರ್ಮಷ್ರಣ ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಸುನಾಭ ಚಿತ್ರ ಉಪಚಿತ್ರ ನಂದ ಉಪನದ ಸುಚಿತ್ರಾಂಗದ ಚಿತ್ರಕುಂಡು ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹು ಪ್ರತಿಮ ಸುಪ್ರತಿಮ ಸಪ್ತಮಾಧಿ ದುರ್ಧಷ್ರಣ ದುಪ್ಪರಾಜಯ ಮಿತ್ರ ಉಪಮಿತ್ರ ಚಲೋಪ
೬೮. ಆಗ ದ್ರೋಣನು ಹೊಸಮುತ್ತಿನ ಆಭರಣಗಳು ವ್ಯಾಪಿಸಿ ಶೋಭಾಯ ಮಾನವಾಗಿರಲು, ರೇಷ್ಮೆಯ ವಸ್ತವು ತನ್ನ ಶರೀರವನ್ನು ಸೇರಿ ಸುಂದರವಾಗಿರಲು ಬಿಳಿಯ ಮೋಡದಿಂದ ಮುಚ್ಚಿದ ನೀಲಪರ್ವತವು ಬರುವ ಹಾಗೆ ಬಂದನು. ವರ ಬಂದು ರಂಗಸ್ಥಳದ ಮಧ್ಯೆ ನಿಂತುಕೊಂಡು - ೬೯. ಪುಣ್ಯಾಹವಾಚನ ಮಂತ್ರನಾದವೂ ತಮಟೆ ಕೊಂಬು ಮೊದಲಾದ ವಾದ್ಯಧ್ವನಿಗಳೂ ಮೊಳಗುತ್ತಿರಲು ಬಗೆಬಗೆಯಾದ ಶಸ್ತ್ರಾಸ್ತ್ರಗಳಲ್ಲಿ ಪರಿಣತರಾದ ತನ್ನ ಶಿಷ್ಯರನ್ನು ದ್ರೋಣನು ಪ್ರವೇಶಮಾಡಹೇಳಿದನು. ೭೦. ದಿಗ್ಗಜಗಳೂ ಕುಲಪರ್ವತಗಳೂ ಗುಂಪುಗೂಡಿ ಮುತ್ತುವ ಹಾಗೆಯೂ ಭೂಮಿ ನಡುಗುವ ಹಾಗೆಯೂ ಉದ್ದಾಮರಾದ ಬಿಲ್ದಾರರು ವ|| ಧರ್ಮರಾಯನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲಸಹದೇವರೂ ದುರ್ಯೊಧನನನ್ನು ಮುಂದಿಟ್ಟುಕೊಂಡು ಯುಯುತ್ಸು, ದುಶ್ಯಾಸನ, ದುಸ್ಸಳ, ಜರಾಸಂಧ, ಸತ್ಯಸಂಧ, ನಿಸ್ಸಹ, ರಾಜಸಂಧ, ವಿಂದ, ಅನುವಿಂದ, ದುರ್ಮತಿ, ಸುಬಾಹು, ದುಸ್ಪರ್ಶನ, ದುರ್ಮಷ್ರಣ, ದುರ್ಮುಖ, ದುಷ್ಕರ್ಣ, ವಿಕರ್ಣ, ವಿವಿಂಶತಿ, ಸುಲೋಚನ, ಸುನಾಭ,ಚಿತ್ರ, ಉಪಚಿತ್ರ, ನಂದ, ಉಪನಂದ, ಸುಚಿತ್ರಾಂಗದ, ಚಿತ್ರಕುಂಡಲ,
Page #161
--------------------------------------------------------------------------
________________
೧೫೬ | ಪಂಪಭಾರತಂ ದ್ವಂದ್ವಹಸ್ತ ಪ್ರತೀಪ ಸುಪ್ರತೀಪ ಪ್ರಹಸ್ತ ಪ್ರತಾಪ ಪ್ರಮದ ಸದ್ದಾಹುಗಳೇ ಮೊದಲಾಗಿ ನೂರ್ವರುಂ ಬಂದುಕಂ ಗದೆಯೊಳ್ ಬಿಲ್ಲೊ ಗಜದೊಳ್
ಕುದುರೆಯೊಳಂ ರಥದೊಳಸ್ತಕೌಶಲದ ಬೆಡಂ | ಗೊದವಿರೆ ತೋಳದರವರೂ
ರ್ಮೊದ ಜನಂ ಪೊಗಳ ನೆಗಳ ಜಳನಿಧಿ ನಿನದಂ | 20 ವl ಅಂತವರಿಂ ಬಚಿಯಂಕಂ|| ಆದ ಮುಳಿಸಿಂದಮಾಗಳ - ಮೊದುವ ಬಗೆ ಬಳೆಯ ಪಿಡಿದ ಗದೆಗಳಿನಿಳಿಪಂ |
ತಾದುದು ಸುಯೋಧನೊಗ್ರ ವ್ಯ, ಕೋದರರೊರ್ಮೊದಲೆ ಶಿಖರಮುರಡಗಮಂ ||
: ೭೨ ವll ಅಂತಿರ್ವರುಮೊರ್ವರೊರ್ವರೊಳ್ ಸೆಣಸಿ ಬಹಪ್ರಯೋಗ ಗದಾ ಕೌಶಲಮಂ ತೋಜಲೆಂದುಕಂ ಗೆಡವಚರ್ವರ್ ಮನಗೊಂ
ಡೊಡನೊಡನೋರಂತು ತಗುಳು ಝೇಂಕರಿಸಿದೊಡೆ | ಊಡಗಾಗೆ ಮೋದಲೆಂದಿ ರ್ದಡೆಯೊಳ್ ಗುರು ತನ್ನ ಮಗನನೆಡವುಗವೇಲ್ಡಂ || ೭೩
ಸುಹಸ್ತ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹು, ಪ್ರತಿಮ, ಸುಪ್ರತಿಮ, ಸಪ್ರಮಾಥಿ, ದುರ್ಧಷ್ರಣ, ದುಷ್ಪರಾಜಯ, ಮಿತ್ರ, ಉಪಮಿತ್ರ, ಚೌಳೋಪ, ದ್ವಂದ್ವಹಸ್ಯ, ಪ್ರತೀಪ, ಪಹಸ್ತ, ಪ್ರತಾಪ, ಪ್ರಮದ, ಸಾಹುಗಳೇ ಮೊದಲಾದ ನೂರ್ವರೂ ಬಂದು - ೭೧. ಜನರೆಲ್ಲರೂ ಸಮುದ್ರಧನಿಯಂತೆ ಗಟ್ಟಿಯಾಗಿ ಒಟ್ಟಿಗೆ ಹೊಗಳುವ ಹಾಗೆ ಗದೆಯಲ್ಲಿಯೂ ಬಿಲ್ಲಿನಲ್ಲಿಯೂ ಆನೆಯಲ್ಲಿಯೂ ಕುದುರೆಯಲ್ಲಿಯೂ ರಥದಲ್ಲಿಯೂ ಅಸ್ತಕೌಶಲದಲ್ಲಿಯೂ ಬೆಡಗುತೋರುವಂತೆ ಜಾಣೆಯನ್ನು ಪ್ರದರ್ಶಿಸಿದರು. ವl ಅವರಾದ ಮೇಲೆ ೭೨. ಹೆಚ್ಚಿದ ಕೋಪವೂ ಹೊಡೆಯಬೇಕೆಂಬ ಅಭಿಲಾಷೆಯೂ ಬೆಳೆಯಲಾಗಿ ದುರ್ಯೋಧನನೂ ಭೀಮನೂ ಏಕಕಾಲದಲ್ಲಿ ಹಿಡಿದ ಗದೆಗಳು ಶಿಖರದಿಂದ ಕೂಡಿದ ಎರಡು ಬೆಟ್ಟಗಳನ್ನು ಒಟ್ಟಿಗೆ ಇಳಿಸಿದಂತಾದುವು. ವ|| ಅವರಿಬ್ಬರೂ ಪರಸ್ಪರ ಸ್ಪರ್ಧಿಸಿ ಅನೇಕ ಪ್ರಯೋಗಗಳಿಂದ ಕೂಡಿದ ಗದಾಕೌಶಲವನ್ನು ತೋರಿಸಿದರು. ೭೩. ಸಮಾನಬಲರಾದ ಇಬ್ಬರೂ ದೃಢಚಿತ್ತರಾಗಿ ಜೊತೆಜೊತೆಯಲ್ಲಿಯೇ ಬೆನ್ನಟ್ಟಿಕೊಂಡು ಝೇಂಕರಿಸಿ (ಪರಸ್ಪರ ಅವರಿಬ್ಬರ ಶರೀರವು) (ಎಲಬು ಮಾಂಸವಾಗಿ) ಜಜ್ಜಿಹೋಗುವ ಹಾಗೆ ಹೊಡೆಯಬೇಕೆಂದಿದ್ದ ಸಮಯದಲ್ಲಿ ಗುರುವಾದ ದ್ರೋಣನು (ಅವರಿಬ್ಬರನ್ನು ಬೇರ್ಪಡಿಸುವುದಕ್ಕಾಗಿ ತನ್ನ ಮಗನಾದ ಅಶ್ವತ್ಥಾಮನನ್ನು ಮಧ್ಯೆ
Page #162
--------------------------------------------------------------------------
________________
ದ್ವಿತೀಯಾಶ್ಚಾಸಂ | ೧೫೭ ವ|| ಅಂತು ಮೇರೆದಪ್ಪಲ್ ಬಗೆದ ಮಹಾಸಮುದ್ರಂಗಳೆರಡe ನಡುವೆ ಕುಲಗಿರಿಯಿರ್ಪಂತಿರ್ದಶ್ವತ್ಥಾಮನಂ ಕಂಡಿರ್ವರುಮೆರಡುಂ ದೆಸೆಗೆ ತೊಲಗಿ ನಿಂದಾಗಳ್ಕಂ11 ಆ ದೂರ್ವಾಂಕುರ ವರ್ಣದೊ
ಳಾದಮೊಡಂಬಟ್ಟ ಕನಕ ಕವಚಂ ರಾಜ | ತೋದಂಡಮಮರ್ದ ದೊಣ ಕ
ಇಾದಮ ಬರೆ ಬಂದು ಮುಂದೆ ನಿಂದಂ ಹರಿಗಂ || ವಗಿ ಆಗಳ್ ಕುಂಭಸಂಭವನುಲಿವ ಜನದ ಕಳಕಳ ರವಮುಮಂ ಮೋಲಗುವ ಪಣಿಗಳುಮಂ ಬಾರಿಸಿಕಂ - ಈತಂ ಗುಣಾರ್ಣವಂ ವಿ
ಖಾತ ಯಶಂ ವೈರಿಗಜಘಟಾವಿಘಂಟನನಿಂ || ತೀತನ ಸಾಹಸಮುಪಮಾ ತೀತಮಿದಂ ನೋಡಿಯೆಂದು ನೆರವಿಗೆ ನುಡಿದಂ |
೭೪.
ವ|| ಆ ಪ್ರಸ್ತಾವದೋಳ
ಚಂll ಒಡಗುಮಜಾಂಡಮಿನ್ನಿನಿಸು ಜೇವೊಡೆದಾಗಳೆ ಬೊಮ್ಮನುಂ ಮನಂ ,
ಗಿಡುಗುಮದೇವುದಂದು ಮಿಡಿದೊಯ್ಯನೆ ಜೇವೊಡೆದಾಗಳಂಬನಂ || ಬೊಡನೊಡನೀಂಬುವೆಂಬನಿತು ಸಂದಯಮಪ್ಪಿನಮಸ್ತ ಜಾಲದಿಂ ತಡೆಯದೆ ಪಂಜರಂಬಡದನಂದು ವಿಯತ್ತಳದೊಳ್ ಗುಣಾರ್ಣವಂ || ೭೬
ಪ್ರವೇಶಮಾಡಹೇಳಿದನು. ವ|| ಹಾಗೆ ಎಲ್ಲೆಯನ್ನು ಮೀರಲು ಯೋಚಿಸಿದ ಎರಡು ಮಹಾಸಮುದ್ರಗಳ ಮಧ್ಯೆ ಕುಲಪರ್ವತದಂತಿದ್ದ ಅಶ್ವತ್ಥಾಮನನ್ನು ನೋಡಿ ಇಬ್ಬರೂ ಎರಡು ಪಕ್ಕಕ್ಕೆ ಸರಿದು ನಿಂತರು. ೭೪. ಎಳೆಯ ಗರಿಕೆಯ ಬಣ್ಣದಿಂದ ವಿಶೇಷವಾಗಿ ಒಪ್ಪಿ ತೋರುವ ಚಿನ್ನದ ಕವಚ ಪ್ರಕಾಶಮಾನವಾದ ಬಿಲ್ಲು ಮೈಗೆ ಸೇರಿಕೊಂಡಿದ್ದ ಬತ್ತಳಿಕೆ ಇವು ಕಣ್ಣುಗಳಿಗೆ ಮನೋಹರವಾಗಿರಲು ಹರಿಗನು ಮುಂದುಗಡೆ ಬಂದು ನಿಂತನು. ವ|| ಆಗ ದ್ರೋಣನು ಶಬ್ದಮಾಡುತ್ತಿದ್ದ ಜನಗಳ ಕಳಕಳದ್ವನಿಯನ್ನೂ ಮೊಳಗುತ್ತಿದ್ದ ವಾದ್ಯಗಳನ್ನೂ ನಿಲ್ಲಿಸಿ ೭೫, ವಿಖ್ಯಾತಯಶಸ್ಸುಳ್ಳವನೂ ವೈರಿಗಜ ಘಟಾವಿಘಟನೂ (ಶತ್ರುಗಳೆಂಬ ಆನೆಗಳನ್ನು ಸೀಳುವ ಪರಾಕ್ರಮಿಯಾದ) ಆದ ಗುಣಾರ್ಣವನು ಇವನು. ಈತನ ಸಾಹಸ ಹೊಲಿಕೆಗೆ ಮೀರಿದುದು ಇದನ್ನು ನೋಡಿ ಎಂದು ಆ ಗುಂಪಿಗೆ ತಿಳಿಸಿದನು. ವll ಆ ಸಂದರ್ಭದಲ್ಲಿ-೭೬. ಅರ್ಜುನನು ಸ್ವಲ್ಪ ಮಟ್ಟಿಗೆ ಬಿಲ್ಲನ್ನು ಶಬ್ದಮಾಡಿಸಿದರೂ ಬ್ರಹ್ಮಾಂಡವು ಒಡೆದುಹೋಗುತ್ತದೆ; ಬ್ರಹ್ಮನು ಉತ್ಸಾಹಶೂನ್ಯನಾಗುತ್ತಾನೆ. ಅಷ್ಟನ್ನೇಕೆ ಮಾಡುವುದು ಎಂದು ಅವನು ಬಹುನಿಧಾನ ಟಂಕಾರಮಾಡಿದಾಗ ಒಂದು ಬಾಣವು ಮತ್ತೊಂದು ಬಾಣವನ್ನೂ ಹೆರುತ್ತಿದೆಯೋ ಎಂಬ ಸಂದೇಹವನ್ನುಂಟುಮಾಡುತ್ತ ಗುಣಾರ್ಣವನು ಆಕಾಶಪ್ರದೇಶದಲ್ಲಿ ಆ ದಿನ ಅಸ್ತಗಳ ಸಮೂಹದಿಂದ ಸ್ವಲ್ಪವೂ ಸಾವಕಾಶ ಮಾಡದೆ ಒಂದು (ಬಾಣದ)
Page #163
--------------------------------------------------------------------------
________________
೧೫೮ / ಪಂಪಭಾರತಂ
ವll ಮತ್ತಮ್ಮೆಂದ್ರ ವಾರುಣ ವಾಯವ್ಯಾಗ್ನೆಯ ಪಾರ್ವತಾದಿ ಬಾಣಂಗಳಂ ತುಡ
ಚಂ|| ಕವಿದುವು ಕಾಳ ನೀಳ ಜಳದಾವಳಿ ವಾರಿಧಿಗಳ ಧರಿತ್ರಿಯಂ
ಕವಿದುವು ಗಾಳಿಗಳ ಪ್ರಳಯಕಾಲಮನಾಗಿಸಲೆಂದೆ ಲೋಕಮಂ | ಕವಿದುವು ಮೊಕ್ಕಳಂ ಕವಿದುವುಗ, ಲಯಾಗ್ನಿಗಳಂತೆ ಬೆಟ್ಟುಗಳ ಕವಿದುವಿವೆಂಬನಿತ್ತು ಭಗಮಾಯು ಗುಣಾರ್ಣವನಸ್ತಕೌಶಲಂ || ೭೭
ವ|| ಆಗಳಾ ಪರಾಕ್ರಮಧವಳನ ಶರಪರಿಣತಿಯಂ ಕಂಡು ದುರ್ಯೋಧನನ ಮಗು ತಲೆನವಿರ ಗಂಟಂ ಕಿದಾಗೆ ದೊಣ ಭಪ್ಪ ಕೃಪ ವಿದುರ ಪ್ರಕೃತಿಗಳ ಮೊಗಮರಲ್ಲ ತಜು: ಪಿರಿದಾಗ
ತೋಳಗುವ ತೇಜ ಓಹಿಳೆ ತೊಳಗುವ ದಿವ್ಯಾಸ್ತಮಮರ್ದ ಕೋದಂಡಮಸುಂ | ಗೊಳಿಸಿ ಮನಂಗೊಳಿಸ Jಯಂ ಗೋಳಿಸೆ ಸಭಾಸದರನುಜದ ಕರ್ಣ೦ ಬಂದ |
ವ|| ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಧಿಯಿಂ ದಿವ್ಯಾಸ್ತಂಗಳನುರ್ಚಿ ಕೊಂಡು
ಪಂಜರವನ್ನು ಕಟ್ಟಿದನು. ವರ ಮತ್ತು ಐಂದ್ರ, ವಾರುಣ, ವಾಯವ್ಯ, ಆಗ್ನೆಯ, ಪಾರ್ವತವೇ ಮೊದಲಾದ ಆಸ್ತಗಳನ್ನು ಪ್ರಯೋಗಿಸಲು-೭೭. ಪ್ರಳಯಕಾಲದ ಕಪ್ಪುಮೋಡಗಳು ಮುಚ್ಚಿಕೊಂಡವು. ಸಮುದ್ರಗಳು ಭೂಮಿಯನ್ನು ಮುಚ್ಚಿದುವು. ಪ್ರಳಯಕಾಲವನ್ನುಂಟುಮಾಡಬೇಕೆಂದೇ ಬಿರುಗಾಳಿಗಳು ಭೂಮಿಯನ್ನಾವರಿಸಿ ಕೊಂಡವು. ಪ್ರಳಯಕಾಲದ ಬೆಂಕಿಗಳು ವಿಶೇಷವಾಗಿ ಮುಚ್ಚಿಕೊಂಡವು. ಹಾಗೆಯೇ ಬೆಟ್ಟಗಳು ಕವಿದುಕೊಂಡವು ಎನ್ನುವಷ್ಟು ಮಟ್ಟಿಗೆ ಅರ್ಜುನನ ಅಸ್ತವಿದ್ಯಾ ಕೌಶಲವು ಭಯಂಕರವಾಯಿತು. ವ|| ಆಗ ಆ ಸಾಕ್ರಮಧವಳನಾದ ಅರ್ಜುನನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನೋಡಿ ದುರ್ಯೋಧನನ ಮುಖವು ತಲೆಯಕೂದಲಿನ ಗಂಟಿಗಿಂತ ಚಿಕ್ಕದಾಗಲು, ದೊಣ, ಭೀಷ್ಮ, ಕೃಪ, ಎದುರರೇ ಮೊದಲಾದವರ ಮುಖಗಳು ಅರಳಿದ ತಾವರೆಗಿಂತ ಹಿರಿದಾದುವು. ೭೮. ಈ ಮಧ್ಯೆ ಪ್ರಕಾಶಮಾನವಾದ ತೇಜಸ್ಪೂ ಅತ್ಯಂತ ಜಾಜ್ವಲ್ಯಮಾನವಾದ ದಿವ್ಯಾಸ್ತದಿಂದ ಕೂಡಿಕೊಂಡಿರುವ ಬಿಲ್ಲೂ ಸಭೆಯ ಜನರನ್ನು ಉತ್ಸಾಹಗೊಳಿಸಿ ಆಕರ್ಷಿಸಿ ಭಯವನ್ನುಂಟುಮಾಡುತ್ತಿರಲು ಕರ್ಣನು ವೇಗವಾಗಿ ಬಂದನು. ವ! ದ್ರೋಣಾ ಚಾರ್ಯರಿಗೆ ನಮಸ್ಕಾರಮಾಡಿ ಬತ್ತಳಿಕೆಯಿಂದ ದಿವ್ಯಾಸ್ತಗಳನ್ನು ಸೆಳೆದುಕೊಂಡು
Page #164
--------------------------------------------------------------------------
________________
ದ್ವಿತೀಯಾಶ್ವಾಸಂ | ೧೫೯ ಕಂII ಅರಿಗನ ಬಿಲ್ಕಲೆಯೊಳಂ
ದೆರಡಿಲ್ಲದೆ ಬಗೆದ ಮುಳಿಸುಮೇವಮುಮೆರ್ದೆಯೊಳ್ || ಬರದಿರೆ ತೋಳದನಾಯತ
ಕರ ಪರಿಘಂ ಕರ್ಣನಾತ್ಮ ಶರಪರಿಣತಿಯಂ || ವ|| ಅಂತು ತೋಟಿಯುಮರ್ದೆಯ ಮುಳಿಸು ನಾಲಗೆಗೆ ವರೆ ಸೈರಿಸಲಾದೆ ವಿದ್ವಿಷ್ಯ ವಿದ್ರಾವಣನನಿಂತೆಂದಂಕ೦ll ಸಂಗತದಿನೀಗಳಿಂತೀ
ರಂಗಮೆ ರಣರಂಗಮಾಗೆ ಕಾದುವಮಳವಂ | ಪೊಂಗದಿರಿದಿರ್ಚಂ ಗಳ
ರಂಗಂಬೊಕ್ಕಾಡುವಂತೆ ಪೆಂಡಿರೆ ಗಂಡರ್ || ವ|| ಎಂಬುದುಮತಿರಥಮಥನನಿಂತೆಂದಂಕಂ11 ಈ ನೆರೆದ ಗುರುಜನಂಗಳ
ಮಾನಿನಿಯರ ಮುಂದೆ ಕರ್ಣ ಪೊಲ್ಲದು ನುಡಿದ | ನೀನೆ ನಿಡುದೋಳಳ ತೀನಂ ಮಟ್ಟಿಸುವೆಯಪ್ರೊಡಾನೊಂದನೇ ||
- ೮೧ ವ|| ಎಂಬುದುಂ ದ್ರೋಣನುಂ ಕೃಪನುಮಡೆಗೆ ವಂದು ಕರ್ಣನನಿಂತೆಂದರ್ಕಂ|| ವಿವದ ಮುಳಿಸಿನ ಕಾರಣ
ಮಾವುದೋ ನೀಂ ನಿನ್ನ ತಾಯ ತಂದೆಯ ದೆಸೆಯಂ | ಭಾವಿಸದ ಕರ್ಣ ನುಡಿವಂ ತಾವುದು ಸಮಕಟ್ಟು ನಿನಗಮರೀಕೇಸರಿಗಂ ||
* ೮೨
೭೯, ಅರ್ಜುನನ ಬಿಲ್ಲಿಗಿಂತ ತನ್ನ ಬಿಲ್ಲಿನ ಪಾಂಡಿತ್ಯವು ಸ್ವಲ್ಪವೂ ಬೇರೆಯಿಲ್ಲವೆಂದು ಭಾವಿಸಿದ ಕೋಪವೂ ಅಸಮಾಧಾನವೂ ಎದೆಯಲ್ಲಿ ಬರೆದಿರಲು ಪರಿಘಾಯುಧದಂತೆ ದೀರ್ಘವಾದ ಬಾಹುಗಳನ್ನುಳ್ಳ ಕರ್ಣನು ತನ್ನ ಅಸ್ತ್ರವಿದ್ಯಾಪ್ರೌಢಿಮೆಯನ್ನು ಪ್ರದರ್ಶಿಸಿದನು. ವ|| ಹಾಗೆ ತೋರಿಸಿಯೂ ಹೃದಯದ ಕೋಪವು ನಾಲಗೆಗೆ ಬರಲು ಸಹಿಸಲಾರದೆ ವಿದ್ವಿಷ್ಠವಿದ್ರಾವಣನಾದ ಅರ್ಜುನನನ್ನು ಕುರಿತು ಹೀಗೆಂದನು-೮೦ ಎಲ್ಲರೂ ಇಲ್ಲಿ ಸೇರಿರುವುದರಿಂದ ಈ ವ್ಯಾಯಾಮರಂಗವೇ ರಣರಂಗವಾಗಿರಲು ಯುದ್ದಮಾಡೋಣ, ಪರಾಕ್ರಮದಿಂದ ಉಬ್ಬದೇ (ಅಹಂಕಾರಪಡದೇ) ಇದಿರಿಸು. ಇದೇನಯ್ಯ ನಾಟ್ಯರಂಗವನ್ನು ಪ್ರವೇಶಿಸಿ ನರ್ತನಮಾಡುವುದಕ್ಕೆ ಶೂರರು ಹೆಂಗಸರೇನು? ವlt ಎನ್ನಲು ಅದಕ್ಕೆ ಅತಿರಥಮಥನನಾದ ಅರ್ಜುನನು ಹೀಗೆಂದನು. ೮೧. ಕರ್ಣ ನೀನು ಇಲ್ಲಿ ಸೇರಿರುವ ಹಿರಿಯರ ಮತ್ತು ರಾಣಿವಾಸದ ಮುಂದೆ ಕೆಟ್ಟ ಮಾತನ್ನಾಡಿದ್ದೀಯೆ. ನೀನು ನನ್ನ ದೀರ್ಘವಾದ ತೋಳುಗಳ ತೀಟೆಯನ್ನು ಹೋಗಲಾಡಿಸುವುದಾದರೆ ನಾನು ಬೇಡವೆನ್ನುತ್ತೇನೆಯೇ? ವ ಎನ್ನಲು ದ್ರೋಣನು ಕರ್ಣನ ಮಧ್ಯೆ ಪ್ರವೇಶಿಸಿ ಕರ್ಣನಿಗೆ ಹೀಗೆ ಹೇಳಿದರು. ೮೨. ಅಸಮಾಧಾನಕ್ಕೂ ಕೋಪಕ್ಕೂ ಕಾರಣವೇನು? ನಿನ್ನ ತಾಯಿ ತಂದೆಯ ವಿಷಯವನ್ನು ವಿಚಾರಿಸಿ
Page #165
--------------------------------------------------------------------------
________________
೧೬೦) ಪಂಪಭಾರತಂ
ವ|| ಎಂಬುದುಮಾ ಮಾತಿಂಗೆ ಮಜುವಾತುಗುಡಲಯದ ಪಂದಯಂ ಪಾವಡರ್ದಂತು ಮನೆ ಬೆಮರುತ್ತುಮಿರ್ದ ಕರ್ಣನಂ ದುರ್ಯೊಧನಂ ಕಂಡು ದ್ರೋಣನುಮಂ ಕೃಪನುಮನಿಂತೆಂದಂಕಂ ಕುಲಮೆಂಬುದುಂಟೆ ಬೀರಮ
ಕುಲಮಲ್ಲದೆ ಕುಲಮನಿಂತು ಏಕದಿರಿಂ ನೀ | ಮೊಲಿದಲ್ಲಿ ಪುಟ್ಟ ಬಳೆದಿರೊ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ || ೮೩
ವll ಎಂದು ನುಡಿದು ಕರ್ಣನನೀಗಳ ಕುಲಜನಂ ಮಾಡಿ ತೋರ್ಪೆನೆಂದು ಕಯ್ಯಂ ಪಿಡಿದೊಡಗೊಂಡು ಪೋಗಿ ಕನಕಪೀಠದ ಮೇಲೆ ಕುಳ್ಳಿರಿಸಿ ಕನಕಕಳಶದ ತೀವಿದಗಣ್ಣಪುಣ್ಯ ತೀರ್ಥೋದಕಂಗಳಂ ಚತುರ್ವೇದಪಾರಗರಿಂದಭಿಷೇಕಂಗೆಯ್ಲಿ
ಕಂ|| ಮಂಗಳವಳಿಗಳ ಶುಭ ವಚ
ನಂಗಳ ಚಮರೀರುಹಂಗಳಾ, ತಂಗಳಮರ್ದಸಯೆ ಕರ್ಣಂ | ಗಂಗಮಹೀತಳ ವಿಭೂತಿಯಂ ನೆನೆಯಿತ್ತಂ ||
೮೪ ವ|| ಅಂತಿತ್ತು ನಿದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನಿತ್ತು ನೀನೆನಗೊಂದನೀಯಲ್ಲೀಟ್ಟುದೆಂದು
ಮಾತನಾಡುವುದಾದರೆ ನಿನಗೂ ಅರಿಕೇಸರಿಗೂ ಯಾವ ಸಮಾನತೆಯಿದೆ? ವ|| ಎನ್ನಲು ಆ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಮರ್ಥನಾಗದೆ ಹೇಡಿಯ ಮುಂದೆ ಹಾವು ಅಡ್ಡಬಂದ ಹಾಗೆ ಸುಮ್ಮನೆ ಬೆವರಿ ನಿಂತಿದ್ದ ಕರ್ಣನನ್ನು ದುರ್ಯೋಧನನು ನೋಡಿ ದ್ರೋಣನನ್ನೂ ಕೃಪನನ್ನೂ ಕುರಿತು ಹೀಗೆಂದನು-೮೩. ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ? ಕರ್ಣನ ಕುಲವನ್ನೂ ಬಿಡಿಸಿ (ವಿಚಾರಮಾಡಿ) ನೋಡಬೇಡಿ; ನೀವು ಪ್ರೀತಿಸಿ ಎಲ್ಲಿ ಹುಟ್ಟಿ ಬೆಳೆದಿರಿ? ಕೊಡದಲ್ಲಿಯೂ ಜೊಂಡಿನ ರಾಶಿಯಲ್ಲಿಯೂ ಕುಲವಿದ್ದಿತೆ? ವರ ಎಂಬುದಾಗಿ ಹೇಳಿ ಕರ್ಣನನ್ನೂ ಈಗಲೇ ಕುಲಜನನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಕರ್ಣನ ಕಯ್ಯನ್ನು ಹಿಡಿದುಕೊಂಡು ಹೋಗಿ ಚಿನ್ನದ ಪೀಠದ ಮೇಲೆ ಕುಳ್ಳಿರಿಸಿ ಚಿನ್ನದ ಕಳಶದಲ್ಲಿ ತುಂಬಿದ್ದ ಅಸಂಖ್ಯಾತವಾದ ಪುಣ್ಯತೀರ್ಥೋದಕಗಳಿಂದ ನಾಲ್ಕು ವೇದಗಳಲ್ಲಿ ಪ್ರವೀಣರಾದ ಪಂಡಿತರಿಂದ ಅಭಿಷೇಕಮಾಡಿಸಿದನು. ೮೪. ಮಂಗಳವಾದ್ಯಗಳೂ ಒಳ್ಳೆಯ ಸ್ವಸ್ತಿವಾಚನಗಳೂ ಚಾಮರಗಳೂ ಬಿಳಿಯ ಕೊಡೆಗಳೂ ಒಟ್ಟಿಗೆ ಸೇರಿ ಪ್ರಕಾಶಿಸುತ್ತಿರಲು ಕರ್ಣನಿಗೆ ಅಂಗರಾಜ್ಯದ ವೈಭವವನ್ನು ಸಂಪೂರ್ಣವಾಗಿ ಕೊಟ್ಟನು. ವರ ಹಾಗೆ ಕೊಟ್ಟು ಪ್ರತಿನಿತ್ಯದ ದಾನಕ್ಕಾಗಿ ದೇವತೆಗಳ ಅಳತೆಯಲ್ಲಿ ಹದಿನೆಂಟುಕೋಟಿ ಸುವರ್ಣನಾಣ್ಯಗಳನ್ನೂ ಕೊಟ್ಟು ನೀನು ನನಗೊಂದನ್ನು
Page #166
--------------------------------------------------------------------------
________________
ಕಂ।।
ದ್ವಿತೀಯಾಶ್ವಾಸಂ | ೧೬೧
ಪೊಡಮಡುವರ್ ಜೀಯೆಂಬ
ಕುಡು ದಯೆಗೆಯ್ಯಂ ಪ್ರಸಾದವೆಂಬವು ಪರೊಳ್ | ನಡೆಗೆಮ್ಮ ನಿನ್ನಯೆಡೆಯೊಳ್ ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ ||
೮೫
ವ|| ಎಂದು ಬೇಡಿಕೊಂಡು ಕರ್ಣನಂ ಮುಂದಿಟ್ರೊಡಗೊಂಡು ಪೋಗಿ ಧೃತರಾಷ್ಟ್ರಂಗಂ ಗಾಂಧಾರಿಗಂ ಪೊಡಮಡಿಸಿದಾಗಳ್
611 ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮು ಯಾಂತಿರದಿರ್ ಗುಣಾರ್ಣವನಿನಸಮಯಕ್ಕಿದು ಸಾಲುಮಾಗಳೆಂ | ಬಂತವೊಲಂದು ಮುಂದಲೆದು ತನ್ನ ಮಗಂಗೆ ಸಮಂತು ಬುದ್ಧಿವೇ ಅಂತವೊಲತ್ತಲಸಗಿರಿಯಂ ಮಜಗೊಂಡುದು ಸೂರ್ಯಮಂಡಲಂ || ೮೬
ವ|| ಆಗಳ್ ದುರ್ಯೋಧನನಂ ಮುಂದಿಟ್ಯೂಡಗೊಂಡು ಧೃತರಾಷ್ಟ್ರ ಕರ್ಣ ಶಲ್ಕ ಶಕುನಿ ಸೈಂಧವ ಪ್ರಕೃತಿಗಳ ನೆಲಂ ಮೂರವಿಟ್ಟಂತೆ ಸಭಾಕ್ಷೇಭಮಾಗೆ ತಳರ್ದು ನಾನಾ ವಿಧ ವಾಹನಂಗಳನೇಟೆ ನಿಜನಿವಾಸಗಳೆ ಪೋದರಿತ್ತ ಧರ್ಮಪುತ್ರನ ಮುಂದಿಟ್ಟು ಭೀಮಾರ್ಜುನ ನಕುಲ ಸಹದೇವರುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಕೃತಿಗಳ ನಾನಾವಿಧ ವಾಹನಗಳ ನೇಹಿ ಬರೆ ಪುರಜನಂಗಳೆಲ್ಲಮೋರೋರ್ವರನೆ ಪಿಡಿಯಚ್ಚುವಿಡಿದು ನುಡಿಯ ಕೆಲರನಾಗತಮನವ ಬುದ್ಧಿಯೊಡೆಯರಿಂತ೦ಬರ್
ಅನುಗ್ರಹಿಸಬೇಕು ಎಂದನು. ೮೫. ಎಲೈ ರಾಧೇಯನೇ ಇತರರು ನನಗೆ ನಮಸ್ಕಾರ ಮಾಡುತ್ತಾರೆ; ಸ್ವಾಮಿ ಎನ್ನುತ್ತಾರೆ; ಕೊಡಿ, ದಯಪಾಲಿಸಿ, ಏನು ಪ್ರಸಾದ ಎನ್ನುತ್ತಾರೆ. ಇವೆಲ್ಲ ಇತರರಲ್ಲಿ ನಡೆಯಲಿ; ನನ್ನ ನಿನ್ನ ವ್ಯವಹಾರದಲ್ಲಿ ಬೇಡ, ನೀನು ನನಗೆ ಸ್ನೇಹಿತನು ಮಾತ್ರನಾಗಿರುತ್ತೀಯೆ. ವ|| ಎಂದು ಬೇಡಿಕೊಂಡು ಕರ್ಣನನ್ನು ಮುಂದುಮಾಡಿಕೊಂಡು ಹೋಗಿ ಧೃತರಾಷ್ಟ್ರನಿಗೂ ಗಾಂಧಾರಿಗೂ ನಮಸ್ಕಾರ ಮಾಡಿಸಿದನು. ೮೬. 'ಹೀಗೆ ದುರ್ಯೋಧನನು ಮಾಡಿದ ರಾಜ್ಯವೈಭವಕ್ಕೆ ಸುಮ್ಮನೆ ಉಬ್ಬಿಹೋಗಬೇಡ. ಗುಣಾರ್ಣವನಿಂದ ನೀನು ಸಾಯುವುದಕ್ಕೆ ಈಗ ಇಷ್ಟೇ ಸಾಕು' ಎಂದು ಸೂರ್ಯನು ಮುಂದೆ ತನಗಾಗುವುದನ್ನು ಇಂದೇ ಪೂರ್ಣವಾಗಿ ಬುದ್ದಿ ಹೇಳುವ ಹಾಗೆ ಅಸ್ತಮಯನಾದನು (ಸೂರ್ಯಮಂಡಲವು ಅಸ್ತಪರ್ವತದ ಹಿಂದೆ ಮರೆಗೊಂಡಿತು). ವll ಆಗ ದುರ್ಯೋಧನನನ್ನು ಮುಂದಿಟ್ಟುಕೊಂಡು ಧೃತರಾಷ್ಟ್ರ, ಕರ್ಣ, ಶಲ್ಯ, ಶಕುನಿ, ಸೈಂಧವ, ಮೊದಲಾದವರು ನೆಲ ಬಿರಿದುಹೋದ ಹಾಗೆ ಸಭಾಮಂಟಪವು ಕಲಕಿಹೋಗುವ ಹಾಗೆ ಹೊರಹೊರಟು ನಾನಾವಿಧವಾದ ವಾಹನಗಳನ್ನು ಹತ್ತಿಕೊಂಡು ತಮ್ಮ ವಾಸಸ್ಥಳಕ್ಕೆ ಹೋದರು. ಈ ಕಡೆ ಧರ್ಮರಾಜನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲ ಸಹದೇವರೂ ಭೀಷ್ಮ ದ್ರೋಣ, ಕೃಪ, ವಿದುರರೇ ಮೊದಲಾದವರೂ ಬಗೆಬಗೆಯ ವಾಹನಗಳನ್ನು ಹತ್ತಿ ಬರುತ್ತಿರಲು ಪಟ್ಟಣದವರೆಲ್ಲ ಒಬ್ಬೊಬ್ಬರನ್ನೂ ಅವರ ಪ್ರತ್ಯೇಕವಾದ ಸಂಕೇತಗಳಿಂದ ಗುರುತಿಸಿ
Page #167
--------------------------------------------------------------------------
________________
೧೬೨ ಪಂಪಭಾರತಂ - ಚಂil ಅವರಿವರನ್ನರಿನ್ನರನವೇಡರಿಕೇಸರಿಗಾಂಪನಿಲ್ಲ ಮಾ :
.. ಅವ ತಲೆದೋರ್ವ ಗಂಡರಣಮಿಲ್ಲೆಡೆಯೊಳ್ ಗೆಡವಚ್ಚುಗೊಂಡು ಪಾಂ | , ಡವರನಕಾರಣಂ ಕೆಣಕಿದೀ ಪೊಸ ಪೊಳಾದ ಕಿರ್ಚು ಕೌ
"ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ || ೮೭
ವ ಎಂದೂರ್ವರೊರ್ವರೋಂದೋಂದನ ನುಡಿಯತ್ತು ಪೂಗ ಬೆಳಗುವ ದೀವಿಗೆಗಳ ಕಬಲೆಯಂ ತಲೆದೊಅಲೀಯದ ಪ್ರಚಂಡ ಮಾರ್ತಾಂಡನ ತೇಜೊಂಕುರಂಗಳ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರಾಗಲ್ಕಂ11 ಎಸೆವ ನಿಜವಂಶಮಂ ಪೆ
ರ್ಚಿಸುವ ಗುಣಾರ್ಣವನೊಳುಂತ ಸೆಣಸಲೆಂದಿ ! .. : ರ್ಪ ಸುಯೋಧನಂಗೆ ಮುಳಿಸಿಂ
ಕಿರುಗಣಿದ ತಆದಿನಮತಕರನುದಯಿಸಿದಂ || * ವll ಆಗ ದುರ್ಯೋಧನಂ ಭೀಮಸೇನನ ಬಲ್ಲಾಳನದಳವುಮಂ ವಿಕ್ರಮಾರ್ಜುನನ ದಿವ್ಯಾಸ್ತ ಕೌಶಳಮುಮಂ ಕಂಡು ತನ್ನೆರ್ದಯುಂ ಪೊಳ್ಳುಮರನಂ ಕಿರ್ಚಳುರ್ವಂತೂಳಗೊಳಗಳುರೆ ಸೈರಿಸಲಾಗಿದೆ ಕರ್ಣನಂ ಕರೆದಾಚಿಸಿ ತಮ್ಮಯ್ಯನಲ್ಲಿಗೆ ಹೋಗಿ ಪೊಡಮಟ್ಟು ಕಟೇಕಾಂತದೊಳಿಂತೆಂದಂ
೮೮
ಮಾತನಾಡುತ್ತಿರಲು ಅವರಲ್ಲಿ ಭವಿಷ್ಯಜ್ಞಾನವುಳ್ಳ ಕೆಲವರು ಹೀಗೆಂದರು-೮೭. ಅವರು ಇವರು ಅಂತಹವರು ಇಂತಹವರು ಎನ್ನಬೇಡ. ಅರಿಕೇಸರಿಯನ್ನೆದುರಿಸುವವರಾರೂ ಇಲ್ಲ. ಅರ್ಜುನನ ಆಜ್ಞೆಯನ್ನು ಮೀರಿ ಅವನನ್ನು ಪ್ರತಿಭಟಿಸುವ ವೀರರು ಯಾರೂ ಇಲ್ಲ. ಇಬ್ಬರಿಗೂ ಸಮಾನವಾಗಿದ್ದ ಸ್ನೇಹಭಂಗವಾಗಿ ಪಾಂಡವರನ್ನು ಕಾರಣವಿಲ್ಲದೆ ಕೆಣಕಿದ ಈ ಹೊತ್ತಿನಲ್ಲಿ ಉಂಟಾದ ಬೆಂಕಿಯು (ಮನಸ್ತಾಪವು) ಕೌರವರಿಗೆ * ವಿಶೇಷವಾದ ಹಿಂಸೆಯನ್ನುಂಟುಮಾಡದೇ ಸಾಮಾನ್ಯವಾಗಿ ಹೋಗುತ್ತದೆಯೇ? ವll ಎಂದು ಒಬ್ಬೊಬ್ಬರು ಒಂದೊಂದನ್ನು ಆಡುತ್ತ ಹೋಗುತ್ತಿರಲಾಗಿ ಪ್ರಕಾಶಮಾನವಾಗಿದ್ದ ಕೈದೀವಿಗೆಗಳು ಕತ್ತಲೆಯು ಹರಡುವುದಕ್ಕೆ ಅವಕಾಶ ಕೊಡದೆ ಪ್ರಕಾಶಮಾನವಾದ ಸೂರ್ಯಕಿರಣಗಳ ಮೊಳಕೆಯಂತೆ ಬೆಳಗುತ್ತಿರಲು ಪಾಂಡವರು ತಮ್ಮ ನಿವಾಸಕ್ಕೆ ಹೋದರು. ಆಗ-೮೮, ಪ್ರಕಾಶಮಾನವಾದ ತನ್ನ ವಂಶವನ್ನೂ ಅಭಿವೃದ್ಧಿಗೊಳಿಸುವ ಗುಣಾರ್ಣವನಾದ ಅರ್ಜುನನಲ್ಲಿ ನಿಷ್ಕಾರಣವಾಗಿ ಜಗಳವಾಡಬೇಕೆಂದಿರುವ ದುರ್ಯೋಧನನಿಗೆ ಕೋಪದಿಂದ ತನ್ನ ಕಣ್ಣನ್ನು ಕೆರಳಿಸಿದ ರೀತಿಯಲ್ಲಿ ಚಂದ್ರನು ಕೆಂಪಗೆ ಉದಯಿಸಿದನು. ವ|| ಆಗ ದುರ್ಯೊಧನನು ಭೀಮಸೇನನ ಪರಾಕ್ರಮದ ಪ್ರಮಾಣವನ್ನೂ ಅರ್ಜುನನ ದಿವ್ಯಾಸ್ತಕೌಶಲವನ್ನೂ ನೋಡಿ ಅವನ ಹೃದಯವು ಪೊಳ್ಳುಮರವನ್ನು ಬೆಂಕಿಯು ಸುಡುವಂತೆ ಒಳಗೊಳಗೆ ಸುಡುತ್ತಿರಲು ಸಹಿಸಲಾರದೆ ಕರ್ಣನನ್ನು ಕರೆದು (ಅವನೊಡನೆ) ಯೋಚನೆಮಾಡಿ ತನ್ನ ತಂದೆಯಾದ ದೃತರಾಷ್ಟ್ರನ ಸಮೀಪಕ್ಕೆ ಹೋಗಿ ನಮಸ್ಕಾರಮಾಡಿ ಬಹು ರಹಸ್ಯವಾಗಿ ಹೀಗೆ ಹೇಳಿದನು
Page #168
--------------------------------------------------------------------------
________________
ದ್ವಿತೀಯಾಶ್ವಾಸಂ | ೧೬೩ ಏರಿಯರ್ ನೀಮಿರೆ ಪಾಂಡುರಾಜನ ವಲಂ ಮುಂ ಪಟ್ಟಮಂ ಕಟ್ಟೆ ಭೂ 'ಭರಮಂ ತಾಳಿದನೀಗಳಾತನ ಸುತರ್ ತಾಮಾಗಳೇ ಯೋಗ್ಯರಾ | ಗರೆ ಪಟ್ಟಕ್ಕೆ ತಗುಳು ಪಾಲನೆ ವಿರ್ ಪಾವಿಂಗೆ ದಾಯಾದ್ಯರು ಪಿರಿಯರ್ಮಾಡಿದಿರಮ್ಮ ಸಾವುಮುಟಿವುಂ ದೈವೇಚ್ಛೆಯಾಯಾಗದೇ | ೮೯ ವ|| ಅದಲ್ಲದೆಯುರಿಚoll ಮಲೆ ತಲೆದೋಜದಂದುದನೆ ಕೊಟ್ಟುದಡಂಗಮಡಂಗಿ ಬಂದೊಡೂ
ಕಲಿಗವೆಸರ್ಗೆ ಪೂಣ್ಣುದು ಕುಜುಂಬು ತಜುಂಬದ ಮಿಕ್ಕ ಶತ್ರು ಮಂ | ಡಳಿಕರೆ ಮಿತ್ರ ಮಂಡಳಿಕರಾದರನಾಕುಳಮಿಂದು ನಾಳೆ ಮಾ
ರ್ಮಲೆದರನಿಕ್ಕಿ ನಮ್ಮನೆದಿಕ್ಕುಗುಮಾ ನೆಲೆಯಿಂ ಗುಣಾರ್ಣವಂ || ೯೦
ವ|| ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ ಭೀಮಸೇನಂ ಗದೆಗೊಳಲುವಾಂ ಪುದರಿದು ಪಾಂಶುವಧದ ಕೆಯ್ದ ಮಾಡುವುದುತ್ತಮಪಕ್ಷಮಂತುಮಲ್ಲದೆಯುರಿಶೌ || ಸ್ವಾಮ್ಯಾರ್ಥಂ ಸ್ವಾಮ್ಯ ವಿಕ್ರಾಂತಂ ಮರ್ಮಜ್ಞ, ವ್ಯವಸಾಯಿನಂ
ಅರ್ಧರಾಜ್ಯಹರಂ ನೃತ್ಯಂ ಯೋನ ಹನ್ಯಾತ್ಮ ಹನ್ಯತೇ ಎಂಬುದರ್ಥಶಾಸ್ತ್ರ ಸದ್ಯಾವಂ
೮೯. 'ಹೀಗೆ ಹಿರಿಯರಾದ ನೀವಿದ್ದರೂ ಪಾಂಡುರಾಜನಿಗೆ ಪಟ್ಟವನ್ನು ಕಟ್ಟಲು ಆತನು ರಾಜ್ಯಭಾರವನ್ನು ವಹಿಸಿದನು. ಈಗಲೂ ಅವರ ಮಕ್ಕಳು ತಾವಾಗಲೇ ಪಟ್ಟಕ್ಕೆ ಯೋಗ್ಯರಾಗುತ್ತಿಲ್ಲವೆ? (ನೀವು) ಬೆನ್ನಟ್ಟಿಕೊಂಡು ಹೋಗಿ ಹಾವಿಗೆ ಹಾಲನ್ನೆರೆಯುತ್ತಿದ್ದೀರಿ. ದಾಯಾದಿಗಳನ್ನು ದೊಡ್ಡವರನ್ನಾಗಿ ಮಾಡಿದಿರಿ. ನಮ್ಮ ಸಾವು ಬದುಕುಗಳು ಈಗ ಅದೃಷ್ಟಾಧೀನವಾಗದೇ ಇರುತ್ತದೆಯೇ' (ಅಂದರೆ ರಾಜ್ಯವು ನಮಗೆ ಬಂದೇಬರುತ್ತದೆಯೆಂಬ ನಿಷ್ಕರ್ಷೆಯಿಲ್ಲ. ಅದೃಷ್ಟವಿದ್ದರೆ ಬರಬಹುದು ಎಂಬಂತೆ ಸಂಶಯಾತ್ಮಕವಾಯಿತು ಎಂದರ್ಥ). ವರೆಗೆ ಹಾಗೂ ಅಲ್ಲದೆ-೯೦. '(ಶತ್ರುರಾಜರೆಲ್ಲ) ಪ್ರತಿಭಟನೆಯೇ ಇಲ್ಲದೆ ಮನಸ್ಸಿನಲ್ಲಿ ಶತ್ರುತ್ವವನ್ನೂ ಅಡಗಿಸಿಕೊಂಡು ಅವರು ಕೇಳಿದ್ದನ್ನು ಕೊಟ್ಟು ಅವರಿಗೆ ಅಡಿಯಾಳಾಗುವಂತೆ ಪ್ರತಿಜ್ಞೆಮಾಡಿತು. ಸಣ್ಣ ಪಾಳೆಯಗಳೆಲ್ಲ ಅವರ ಆಜ್ಞಾನುವರ್ತಿಯಾಗಿರಲು ನಿಷ್ಕರ್ಷೆಮಾಡಿಕೊಂಡುವು. ಪ್ರತಿಭಟಿಸದೆ ಶತ್ರುಮಂಡಲವೆಲ್ಲ ಮಿತ್ರಮಂಡಳಿಕರಾದರು. ಇಂದೋ ನಾಳೆಯೋ ಗುಣಾರ್ಣವನು ಪ್ರತಿಭಟಿಸಿದವರನ್ನೆಲ್ಲ ಧ್ವಂಸಮಾಡಿ ನಮ್ಮನ್ನೂ ಈ ನೆಲೆಯಿಂದ ಎಳೆದು ಬಿಸಾಡುತ್ತಾನೆ'. ವ!! ಹಾಗೆ ವಿಕ್ರಮಾರ್ಜುನನು ಬಿಲ್ಲನ್ನು ಹಿಡಿದರೂ ಭೀಮಸೇನನು ಗದೆಯನ್ನು ಧರಿಸಿದರೂ ಪ್ರತಿಭಟಿಸುವುದಸಾಧ್ಯ. ರಹಸ್ಯವಾಗಿ ಮೋಸದ ಕೊಲೆಯಿಂದ ಅಧೀನಪಡಿಸಿಕೊಳ್ಳುವುದು ಉತ್ತಮವಾದ ಮಾರ್ಗ ಹಾಗೂ ಅಲ್ಲದೆ - ವ! “ಭಾಗಕ್ಕೆ ಆಶೆಪಡುತ್ತಿರುವವನೂ ಸ್ವಾಮ್ಯವನ್ನು ಪಡೆಯಲು ಶಕ್ತಿಯುಳ್ಳವನೂ ರಹಸ್ಯವನ್ನು ತಿಳಿದವನೂ `ಕಾರ್ಯಶೀಲನಾದವನೂ ಅರ್ಧರಾಜ್ಯವನ್ನು ಅಪಹರಿಸುವವನೂ ಆದ ಆಳನ್ನು ಯಾವನು ಕೊಲ್ಲುವುದಿಲ್ಲವೋ ಅವನು ತಾನೇ ಹತನಾಗುತ್ತಾನೆ. ವ| ಎನ್ನುವುದು ಅರ್ಥಶಾಸ್ತ್ರದ ಸಾರವತ್ತಾದ ಭಾಗ,
Page #169
--------------------------------------------------------------------------
________________
೧೬೪ / ಪಂಪಭಾರತಂ
ಈ || ಮೇಲ್ಕುಲಮಿಲ್ಲೆಯೋ ನಮಗೆ ದಾಯಿಗರಲ್ಲರೂ ಶಸ್ತ್ರವಿದ್ಯೆಯೊಳ್ ಪೂಣೆಗಳಿಲ್ಲೆಯೋ ಧರೆಗೆ ಮುನ್ನವರಯ್ಯನೆ ಮುಖ್ಯನಲ್ಲನೋ | ಜಾಣ್ಯಟದಾಗವೇಡ ಮನದಲ್ ನಿಮಗಯ್ಯ ವಿಧಾತೃಯೋಗದಿಂ ಕಣ್ಣುರುಡಾದೊಡೇನೊ ಕುರುಡಾಗಲೆವೇಟ್ಟುದೆ ನಿಮ್ಮ ಬುದ್ದಿಯುಂ || ೯೧ ವ|| ಎಂದು ತನ್ನ ಮನದೊಳೊಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರ ಮನದಗೊಂಡು
ಈ !! ಏನೆರ್ದೆಗೊಂಡ ಕಜ್ಜಮನ ಪೇಟೆಯೊ ಚಿಂತಿಸುತಿರ್ಪೆನಾನುಮೇ
ನಾನುಮುಪಾಯಮಂ ಬಗವರಂತವರ್ಗ ನಿನಗಂದ ಕಂದ ಪೇಮ್ 1
ನೀನಿರೆ ಪಟ್ಟಮುಂ ನೆಲನುಮಪ್ಪುದನೊಲ್ವನೆ ವೈರಿಗಳ ನೀ ನೇನುಮದರ್ಕೆ ಚಿಂತಿಸದಿರಿಲ್ಲಿರಲೀವನೆ ಪಾಂಡುಪುತ್ರರಂ||
೯೨
ವ|| ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇಟ್ಟು ಪಾಂಡವರಯ್ಯರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನೇಟಿಸಿಕೊಂಡು ದುರ್ಯೋಧನನಪೊಡೆ ಪೊಲ್ಲ ಮಾನಸನಾತನುಂ ನೀಮುನೊಂದೆಡೆಯೊಳಿರ ಕಿಸುಲುಂ ಕಲಹಮುಮಂದುಂ ಕುಂದದದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತವೆಂಬುದು ಪೋಲ್ ಕುರುಜಾಂಗಣ ವಿಷಯಕ್ಕೆ ತಿಳಕಮಪ್ಪಂತಿರ್ದುದಲ್ಲಿಗೆ ಪೋಗಿ ಸುಖಮಿರಿಮೆಂದೊಡಂತೆಗೆಯೊಮೆಂದು ಬೀಳ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ಎದುರರ್ಕಳಂ ಕುಂತಿಗಂ ತದ್ವ ತಾಂತಮನ
೯೧. ಅಲ್ಲದೆ ನಮಗೆ ಅವರಿಗೆ ಸಮಾನವಾದ ಕುಲವಿಲ್ಲವೇ? ರಾಜ್ಯಕ್ಕೆ ನಾವು ಭಾಗಿಗಳಲ್ಲವೆ? ನಾವು ಅವರಷ್ಟೇ ಶಸ್ತ್ರವಿದ್ಯೆಯಲ್ಲಿ ಪ್ರಸಿದ್ಧರಲ್ಲವೆ; ಈಗಾಗಲೇ ಅವರಯ್ಯ ರಾಜ್ಯಭಾರಮಾಡಿಯಾಗಲಿಲ್ಲವೆ ? ನಿಮ್ಮ ಮನಸ್ಸಿನಲ್ಲಿ ಜಾಣ್ಮ ಕಿರಿದಾಗಬೇಕಾಗಿಲ್ಲ. ದುರದೃಷ್ಟವಶದಿಂದ ಕಣ್ಣು ಕುರುಡಾದರೆ ನಿಮ್ಮ ಬುದ್ಧಿಯೂ ಕುರುಡಾಗಬೇಕೆ?' ವll ಎಂದು ತನ್ನ ಮನಸ್ಸಿಗೊಪ್ಪಿದ ಮಾತನ್ನಾಡಿದ ಮಗನ ಮಾತನ್ನು ಧೃತರಾಷ್ಟ್ರನು ಅಂಗೀಕರಿಸಿದನು. ೯೨. ನನ್ನ ಹೃದಯದಲ್ಲಿದ್ದ ಕಾರ್ಯವನ್ನೇ ನೀನು ಹೇಳಿದ್ದೀಯೆ; ಅವರು ನಿನಗೇನಾದರೂ ಕೇಡನ್ನು ಯೋಚಿಸುತ್ತಿದ್ದಾರೆಯೆ ಎಂಬುದಾಗಿಯೇ ನಾನೂ ಚಿಂತಿಸುತ್ತಿದ್ದೇನೆ. ಮಗು, ನೀನಿರುವಾಗ ಪಟ್ಟವೂ ರಾಜ್ಯವೂ ಶತ್ರುಗಳಿಗೆ ಆಗುವುದನ್ನು ನಾನು ಒಪ್ಪುತ್ತೇನೆಯೇ ? ಅದಕ್ಕೆ ನೀನು ಚಿಂತಿಸಬೇಡ; ಪಾಂಡುಪುತ್ರರು ಇಲ್ಲಿರಲು ನಾನು ಅವಕಾಶಕೊಡುತ್ತೇನೆಯೇ ? ವ|| ಎಂದು ದುರ್ಯೋಧನನನ್ನು ಬೀಡಿಗೆ ಹೋಗಹೇಳಿ ಧೃತರಾಷ್ಟ್ರನು ಅಯ್ದು ಮಂದಿ ಪಾಂಡವರನ್ನೂ ಬರಮಾಡಿ ತೊಡೆಯಮೇಲೆ ಕುಳ್ಳಿರಿಸಿಕೊಂಡು 'ದುರ್ಯೋಧನನಾದರೆ ಕೆಟ್ಟ ಮನಸ್ಸುಳ್ಳವನು. ಅವನೂ ನೀವೂ ಒಂದೇ ಸ್ಥಳದಲ್ಲಿದ್ದರೆ ಕೋಪವೂ ಜಗಳವೂ ಎಂದೂ ತಪ್ಪುವುದಿಲ್ಲ; ಆದ ಕಾರಣ ಗಂಗಾನದಿಯ ದಕ್ಷಿಣದಲ್ಲಿ ಕುರುಜಾಂಗಣದೇಶಕ್ಕೆ ತಿಲಕದಂತಿರುವ ವಾರಣಾವತವೆಂಬ ಪಟ್ಟಣವಿದೆ; ಅಲ್ಲಿಗೆ ಹೋಗಿ ಸುಖವಾಗಿರಿ ಎನ್ನಲು (ಪಾಂಡವರು) ಹಾಗೆಯೇ ಮಾಡುವೆವು ಎಂದು ಅವರ ಅಪ್ಪಣೆಯನ್ನು ಪಡೆದು ಮನೆಗೆ ಬಂದು ಭೀಷ್ಮದ್ರೋಣ ಕೃಪ ವಿದುರರುಗಳಿಗೂ
Page #170
--------------------------------------------------------------------------
________________
ದ್ವಿತೀಯಾಶ್ವಾಸಂ | ೧೬೫ ಪಿದರನ್ನೆಗಮಿತ್ತ ದುರ್ಯೋಧನನವರ ಪೋರನಳದು ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೋಳ್ ಲಾಕ್ಷಾಗೃಹೂಪಾಯಮುಂ ಚರ್ಚಿಸಿವಾರಣಾವತಮನೊಂದೇ ದಿವಸದೊಳೆಯು ವಂತಾಗೆ ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ ನೆರಂಬೆಟ್ಟು ಕಳಿಸಿದನಾಗಳ್ಕಂll ಉದಿತೋದಿತ ನೀಂ ನಿನ
ಗುದಯದ ಮೇಲುದಯಮಂದು ನೆಗಟ್ಟರಿಗಂಗ | ಭ್ಯುದಯಮನಪುವ ತಳದಿಂ
ದುದಯಾಚಳಚುಂಬಿಬಿಂಬವಿನನುದಯಿಸಿದಂ || ವ|| ಆ ಪ್ರಾವದೊಳ್ - ಮಂಗಳಪಾಠಕರ ಮಂಗಳವೃತೋಚ್ಚಾರಣೆಗಳಿಂದಂ ಪಾಂಡವರಯ್ಯರುಮುಲಿತನಯನರಾಗಿ ನಿತ್ಯನಿಯಮಂಗಳಂ ನಿರ್ವತಿ್ರಸಿ ಮಂಗಳವಸದನಂ ಗೊಂಡು ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನಿಕ್ಕುವ ಸೇಸೆಗಳುಮನಾಂತುಕೊಳುತ್ತುಂ ಪಲವುಂ ತಂದ ಪ್ರಯಾಣ ಪಟಹಂಗಳೆಸೆಯ ಶುಭ ಲಕ್ಷಣ ಲಕ್ಷಿತಂಗಳಪ್ಪಾಜಾನೇಯ ಕಾಂಭೋಜ ವಾಜಿರಾಜಿಗಳೊಳ್ ಪೂಡಿದ ದಿವ್ಯರಥಂಗಳನೇ ದಿವಬಾಣಾಸನ ಬಾಣಪಾಣಿಗಳಾಗಿ ನಿಜಪರಿಜನಂ ಬೆರಸು ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗಲ್ಲು ಸೈರಿಸಲಾಟದ
ಕುಂತಿಗೂ ಆ ವಿಷಯವನ್ನು ತಿಳಿಸಿದರು. ಅಷ್ಟರಲ್ಲಿ ಇತ್ತಕಡೆ ದುರ್ಯೊಧನನು ಅವರು ಹೋಗುವುದನ್ನು ತಿಳಿದು ಪುರೋಚನನೆಂಬ ತನ್ನ ಆಪ್ತನಾದ ಹೆಗ್ಗಡೆಯಲ್ಲಿ ಅರಗಿನ ಮನೆಯ ಉಪಾಯವನ್ನು ವಿಚಾರ ಚರ್ಚೆಮಾಡಿ ವಾರಣಾವತವನ್ನು ಒಂದೇ ದಿವಸದಲ್ಲಿ ಹೋಗಿ ಸೇರುವ ಹಾಗೆ ರಥವನ್ನು ಸಿದ್ದಪಡಿಸಿ ನಾಲ್ಕು ಲಕ್ಷ ಸೈನ್ಯವನ್ನೂ ಅವನ ಸಹಾಯಕ್ಕಾಗಿ ಕಳುಹಿಸಿದನು; ಆಗ-೯೩. 'ನೀನು ಅಭಿವೃದ್ದಿಯಾಗುವವನು, ನಿನಗೆ ವೃದ್ದಿಯ ಮೇಲೆ ವೃದ್ಧಿಯಾಗುತ್ತದೆ' ಎಂದು ಪ್ರಸಿದ್ಧನಾದ ಅರಿಕೇಸರಿಗೆ ಅವನ ಅಭಿವೃದ್ಧಿಯನ್ನು ಸೂಚಿಸುವ ರೀತಿಯಿಂದ ಉದಯಪರ್ವತಸ್ಪರ್ಶಿಯಾದ ಸೂರ್ಯನು ಉದಯಿಸಿದನು. ವ|| ಆ ಸಂದರ್ಭದಲ್ಲಿ ಹೊಗಳುಭಟರ ಮಂಗಳಪದ್ಯಪಠನಗಳಿಂದ ಪಾಂಡವರೆದು ಜನರೂ ಅರಳಿದ ಕಣ್ಣುಗಳನ್ನುಳ್ಳವರಾಗಿ ಪ್ರತಿದಿನವೂ ಮಾಡಬೇಕಾದ ನಿತ್ಯಕರ್ಮಗಳನ್ನು ಮುಗಿಸಿ ಮಂಗಳಕರವಾದ ಅಲಂಕಾರವನ್ನು ಮಾಡಿಕೊಂಡು ವೃದ್ದ ಬ್ರಾಹ್ಮಣರುಗಳು ಆಶೀರ್ವದಿಸುವ ಹರಕೆಗಳನ್ನೂ ಚೆಲ್ಲುತ್ತಿರುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಧರಿಸಿಕೊಳ್ಳುತ್ತ ನಾನಾರೀತಿಯ ಪ್ರಯಾಣಭೇರಿಗಳು ಪ್ರಕಾಶಿಸುತ್ತಿರಲು ಶುಭಲಕ್ಷಣಗಳಿಂದ ಗುರುತಿಸಲ್ಪಟ್ಟ ಒಳ್ಳೆಯ ತಳಿಯಿಂದ ಕೂಡಿದ ಕಾಂಭೋಜದೇಶದ ಉತ್ತಮ ಕುದುರೆಗಳ ಸಮೂಹದಿಂದ ಸಿದ್ಧಪಡಿಸಿದ ದಿವ್ಯರಥಗಳನ್ನು ಹತ್ತಿ ದೇವದತ್ತವಾದ ಬಿಲ್ಲುಬಾಣಗಳನ್ನು ಕಯ್ಯಲ್ಲಿ ಹಿಡಿದವರಾಗಿ ತಮ್ಮ ಪರಿವಾರದೊಂದಿಗೆ ಸೇರಿಕೊಂಡು ಹಸ್ತಿನಾಪುರದಿಂದ ಹೊರಟರು. ಭೀಷ್ಮ ದ್ರೋಣ ಕೃಪ ವಿದುರರು ದಾರಿ ಕಳುಹಿಸಲು ಬಂದರು. ಪಟ್ಟಣಿಗರೆಲ್ಲರೂ ಸೇರಿ ಅವರು ಹೊರಟುಹೋಗುವಿಕೆಗಾಗಿ ದುಃಖಪಟ್ಟು ಸಹಿಸಲಾರದೆ ಶೋಕಿಸಿದರು.
Page #171
--------------------------------------------------------------------------
________________
೧೬೬ | ಪಂಪಭಾರತಂ ಚಂ|| ಮನದೊಳಲಂಪು ಪೂ ನುಡಿದುಂ ನಡೆ ನೋಡಿಯುಮಾಟಪಾಟಮಂ
ಬನದಮುಮಾರುಮಂ ಮಯಿಸುತ್ತಿರೆ ಬೀದಿಗಳೊಳ್ ವಿಳಾಸದೊ | ಡೆನಿಸಿ ತೋಬಲ್ಯ ಪಾಂಡವರ ಪೋಗಿನೊಳುಂತೆ ಬೆಡಂಗುಗೆಟ್ಟು ಹ ಸಿನಪುರಮಿಂದು ರಕ್ಕಸನ ತಿಂದ ಪೋಬಲೈಸೆಯಾಗದಿರ್ಕುಮೇ | ೯೪
ವ|| ಎಂದು ಕಣ್ಣನೀರಂ ನೆಗಪ
ಚಂ|| ಪರಸುವ ಪೌರವೃದ್ಧರ ಕುಲಾಂಗನೆಯರ್ಕಳ ಸಾಧು ವಾದದೊಳ್
ಬೆರಸಿ ಸಮಂತು ಸೂಸುವ ಜಲಾದ್ರ್ರಲಸದವಳಾಕ್ಷತಂಗಳೊಳ್ | ಬೆರಸಿದ ತಣ್ಣನೆ ಕವಿದತ್ತಿದ ಬಾಸಿಗರೊಂದು ಕಂಪಿನೊಳ್, ಪೊರೆದು ಮದಾಳಿಗಳೊರಸು ಬಂದುದದೊಂದನುಕೂಲ ಮಾರುತಂ || ೯೫
ವ|| ಅಂತು ಪೊಬಲಂ ಪೊಜಮದ ಬಳೆಯನೆ ತಗುಳು ಬರ್ಪ ತಮ್ಮೊಡನಾಡಿಗಳಪ್ಪ ಮೇಳದ ಸಬ್ಬವದ ನಗೆಯ ತಗಟಿನವರನಮ್ಮ ಬಳಿಯಟ್ಟಿದಂದು ಬನ್ನಿಮಂದು ಪ್ರಿಯಂ ನುಡಿದಿರಿಸಿ ಕಿದಂತರಂ ಬಂದೊಂದು ತಾವರೆಗಳಿಯ ಮೊದಲೊಳ್ ನಿಂದು ಭೀಷ್ಮ ದ್ರೋಣ ಕೃಪ ವಿದುರರ್ಕಳನಮಗೆ ತಕ್ಕ ಬುದ್ದಿಯಂ ಪೇಯ್ದು ಮಗುಮನೆ- .
೯೪. ಮನಸ್ಸಿನಲ್ಲಿ ಸಂತೋಷವುಕ್ಕುವಂತೆ ಮಾತನಾಡಿಯೂ ದೀರ್ಘದೃಷ್ಟಿಯಿಂದ ನೋಡಿಯೂ ತಮ್ಮ ಆಟಪಾಟವಿನೋದಗಳಿಂದ ಯಾರನ್ನಾದರೂ ಮೈಮರೆಯುವಂತೆ ಮಾಡಿಯೂ ಬೀದಿಗಳಲ್ಲಿ ಸೌಂದರ್ಯದ ಪುಂಜವೆಂದೆನಿಸಿಕೊಂಡು ತಿರುಗಾಡುತ್ತಿದ್ದ ಪಾಂಡವರು ಊರನ್ನು ಬಿಟ್ಟು ಹೋಗುವುದರಿಂದ ಹಸ್ತಿನಾಪಟ್ಟಣವು ವೈಭವಶೂನ್ಯವಾಗಿ ರಾಕ್ಷಸನು ತಿಂದುಳಿದ ಪಟ್ಟಣಕ್ಕೆ ಸಮಾನವಾಗುವುದಿಲ್ಲವೇ ವ! ಎಂದು ಕಣ್ಣೀರನ್ನು ಸುರಿಸಿದರು. ೯೫, ಆಶೀರ್ವಾದವನ್ನು ಮಾಡುತ್ತಿರುವ ಊರಹಿರಿಯರ ಮತ್ತು ಕುಲಸ್ತೀಯರ ಸ್ವಸ್ತಿವಾಚನಗಳಿಂದಲೂ ವಿಶೇಷವಾಗಿ ಚೆಲ್ಲುತ್ತಿರುವ ಮನೋಹರವೂ ಧವಳವರ್ಣಯುಕ್ತವೂ ಆದ ಆದ್ರ್ರಾಕ್ಷತೆಗಳಿಂದಲೂ ತಂಪಿನಿಂದಲೂ ಕಂಪಿನಿಂದಲೂ ಎತ್ತಿ ಕಟ್ಟಿದ ಬಾಸಿಂಗದ ಸುಗಂಧದಿಂದಲೂ ಮದಿಸಿದ ದುಂಬಿಗಳಿಂದಲೂ ಕೂಡಿದ ಹಿತವಾದ ಗಾಳಿಯೊಂದು (ಪಾಂಡವರಿಗೆ ಶುಭಸೂಚಕವಾಗಿ) ಬೀಸಿತು. ವ|| ಹಾಗೆ ಪಟ್ಟಣವನ್ನು ಬಿಟ್ಟು ಹೊರ ಹೊರಡಲು ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಸಹಪಾಠಿಗಳನ್ನೂ ನಕಲಿಯವರನ್ನೂ ಹಾಸ್ಯಗಾರರನ್ನೂ ದೂಷಣೆಮಾಡುತ್ತಿದ್ದವರನ್ನೂ ಪಾಂಡವರು 'ನಾವು ಹೇಳಿಕಳುಹಿಸಿದಾಗ ಬನ್ನಿ' ಎಂದು ಒಳ್ಳೆಯ ಮಾತನ್ನಾಡಿ ನಿಲ್ಲಿಸಿ ಕೊಂಚ ದೂರ ಬಂದು ಒಂದು ತಾವರೆಯ ಕೆರೆಯ ಅಂಚಿನಲ್ಲಿ ನಿಂತು ಭೀಷ್ಮ, ದ್ರೋಣ ಕೃಪ ವಿದುರರುಗಳನ್ನು ನಮಗೆ ಬುದ್ದಿವಾದಗಳನ್ನು ತಿಳಿಸಿ ದಯಮಾಡಿ' ಎಂದರು.
Page #172
--------------------------------------------------------------------------
________________
ಕಂ !! ನಡಪಿಯುಮೋದಿಸಿಯುಂ ಬಿ
ದ್ವಿತೀಯಾಶ್ವಾಸಂ |೧೬೭
ಊಡಿಯಿಸಿಯುಂ ಕೆಚ್ಚುವಿರ್ದ ಕೂರ್ಮಗಳೆರ್ದೆಯಂ | ನಡೆ ಪಾಂಡುಸುತರಗಲೆಗೆ
ನಿಡುಸುಯ್ದ ದ್ರೋಣ ಭೀಷ್ಮ ಕೃಪ ವಿದುರರ್ಕಳ್ ||
೯೬
ವ|| ಆಗಳ್ ಎದುರಂ ಕೆಲನಟಿಯದಂತುಮವರವಂತುಂ ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ ನಂಜಿನ ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಮೆಂದೊಡಂತೆ ಗೆಲ್ವಮೆಂದವರನಿರಲ್ವೇಯ್ದು ಪಯಣ೦ಬೋಗಿ
ಕಂ ಪೊಳಪಿನ ಕಿರಣದ ಗಾಳಿಯ
ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್ |
ತಳರ್ದು ನೆಲೆಯಿಂದಮಾಗಳ
ಕೊಳದಿಂ ಪೊಜಮಟ್ಟ ಹಂಸೆಗಳೆಣೆಯಾದರ್
62
ವll ಆಗಿ ತಾವಾದಿಗರ್ಭೇಶ್ವರರಪುದಂ ತಳರ್ದೆಡೆಯೆಡೆಯ ಮರಂಗಳ ತೊಗಳ ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನ ಜನ್ನವಿರಂಗಳುಮನವರ ಪರಕೆಯುಮಂ ಕೆಯೊಳುತ್ತುಮವರ್ಗ ಬಾಧೆಯಾಗದಂತು ಕಾಪಂ ನಿಯಮಿಸುತ್ತುಂ ಕಾಲೂರ್ಗಳ ಗಂಡರ ಹೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗ ಮುಗುಳಗೆ ನಗುತ್ತು ಮಲ್ಲಿಗಲ್ಲಿಗೊಡದ ಕೆಲಗಮಲೆದಾಯತನಕ್ಕಂ ಧನಮನಿತ್ತು
೯೬. ಬಾಲ್ಯದಿಂದ ಸಲಹಿಯೂ ವಿದ್ಯಾಭ್ಯಾಸ ಮಾಡಿಸಿಯೂ ಬಿಲ್ವಿದ್ಯೆಯನ್ನು ಕಲಿಸಿಯೂ ನಿಕಟವಾಗಿ ಅಂಟಿಕೊಂಡು ಗಾಢವಾಗಿದ್ದ ಪ್ರೇಮವು ಮನಸ್ಸನ್ನು ನಾಟಿರಲು ಭೀಷ್ಮದ್ರೋಣಕೃಪ ವಿದುರರು ಅವರ ಅಗಲಿಕೆಗಾಗಿ ನಿಟ್ಟುಸಿರನ್ನು ಸೆಳೆದರು. ವ ಆಗ ವಿದುರನು ಪಕ್ಕದವರಿಗೆ ತಿಳಿಯದಂತೆಯೂ ಅವರಿಗರ್ಥವಾಗುವಂತೆಯೂ ಸರಳವಾದ ರೀತಿಯಲ್ಲಿಯೇ 'ದಾರಿಯಲ್ಲಿ ಪ್ರಾಪ್ತವಾಗಬಹುದಾದ ವಿಷ, ಅಗ್ನಿ ಮೊದಲಾದುವುಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ' ಎಂದು ಹೇಳಲು ಅವರು ಹಾಗೆಯೇ ಮಾಡುತ್ತೇವೆಂದು ಹೇಳಿ ಅವರನ್ನು ಅಲ್ಲಿಯೇ ನಿಲ್ಲಿಸಿ ಮುಂದೆ ಪ್ರಯಾಣಮಾಡಿದರು. ೯೭. ಕಿರಣದ ಹೊಳಪನ್ನೂ ಗಾಳಿಯ ಸುಳಿವನ್ನೂ ಸೈರಿಸದೆ, ಹೂವಿನೆಸಳಿನಂತೆ ಕೋಮಲವಾಗಿದ್ದ ಆ ಸುಕುಮಾರರು ತಮ್ಮ ವಾಸಸ್ಥಳದಿಂದ ಹೊರಟು ಸರೋವರವನ್ನು ಬಿಟ್ಟು ಹೊರಟ ಹಂಸಗಳಿಗೆ ಸಮಾನರಾದರು. ವ|| ತಾವು ಆಗರ್ಭ ಶ್ರೀಮಂತರಾದುದರಿಂದ ಅಲ್ಲಿಂದ ಹೊರಟು ಪಕ್ಕಪಕ್ಕದಲ್ಲಿಯೇ ಸಿಕ್ಕಿದ ಮರಗಳ ನದಿಗಳ ಹಳ್ಳಿಗಳ ಹೆಸರುಗಳನ್ನು ವಿಚಾರಮಾಡುತ್ತಲೂ ಶ್ರೇಷ್ಠವಾದ ಅಗ್ರಹಾರದ ಮಹಾಜನಗಳು ಕೊಟ್ಟಂತಹ ಚಿನ್ನದ ಯಜ್ಯೋಪವೀತಗಳನ್ನೂ ಆಶೀರ್ವಾದಗಳನ್ನೂ ಸ್ವೀಕರಿಸುತ್ತಲೂ ಅವರಿಗೆ ಯಾವ ತೊಂದರೆಯೂ ಆಗದಂತೆ ರಕ್ಷಣೆಯನ್ನು ಏರ್ಪಡಿಸುತ್ತಲೂ ಸಣ್ಣ ಹಳ್ಳಿಗಳ ಗಂಡಸರ ಹೆಂಗಸರ ಆಚಾರ, ಉಡುಪು ಮಾತು ಮತ್ತು ತುರುಬುಗಳ ದಡ್ಡತನಕ್ಕೆ ಹುಸಿನಗುತ್ತಲೂ ಅಲ್ಲಲ್ಲಿ ಒಡೆದುಹೋಗಿದ್ದ ಕೆರೆಗೂ ಪಾಳಾಗಿದ್ದ ದೇವಾಲಯಗಳಿಗೂ ಹಣವನ್ನೂ ಕೊಟ್ಟು ಮೊದಲಿದ್ದ ಸ್ಥಿತಿಗೆ
Page #173
--------------------------------------------------------------------------
________________
೧೬೮ / ಪಂಪಭಾರತಂ ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ ಬೀಡುದಾಣಂಗಳೊಳಿಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು
ಚಂ|| ಎಡಹಳದೀವ ಕಲ್ಪತರುವೆಂದು ವನೀಪಕಟ ಸಂತಸಂ
ಬಡ ಪೊಡವೊಂದಕಾಳವಿಳಯಾಶನಿಯೆಂದು ವಿರೋಧಿಗಳ ಮನಂ | ಗಿಡ ಬಿಯಮುಂ ಪರಾಕ್ರಮಮುಮೋರೆ ತನ್ನೊಡವುಟ್ಟಿದರ್ ಸಮಂ ತೊಡವರೆ ವಾರಣಾವತಮನೆಯ್ದಿದನಮ್ಮನ ಗಂಧವಾರಣಂ | ೯೮
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ದ್ವಿತೀಯಾಶ್ವಾಸಂ
ತರುತ್ತಲೂ ತಾನು ಇಳಿದುಕೊಳ್ಳುವುದಕ್ಕೆ ಹಾಕಿದ್ದ ಬಳ್ಳಿಯ ಚಪ್ಪರಗಳಲ್ಲಿಯೂ ಹೂವಿನ ಗೊಂಚಲುಗಳಲ್ಲಿಯೂ ವಿಶ್ರಮಿಸಿಕೊಳ್ಳುತ್ತಲೂ ಬಂದು ೯೮. ಬಡತನದ ಸ್ವರೂಪವನ್ನು ತಿಳಿದು ದಾನಮಾಡುವ ಕಲ್ಪವೃಕ್ಷವಿದೆಂದು ಯಾಚಕಸಮೂಹವು ಸಂತೋಷಪಡುವಂತಿರುವ ದಾನಗುಣವೂ ಇದೊಂದು ಅಕಾಲದಲ್ಲಿ ಪ್ರಾಪ್ತವಾಗುವ ಪ್ರಳಯಕಾಲದ ಸಿಡಿಲೆಂದು ಶತ್ರುಗಳ ಮನಸ್ಸನ್ನು ಕೆಡಿಸುವ ಪರಾಕ್ರಮವೂ ತನ್ನಲ್ಲಿ ಪ್ರಕಾಶಿಸುತ್ತಿರಲು ತನ್ನ ಸಹೋದರರು ಜೊತೆಯಲ್ಲಿಯೇ ಕೂಡಿ ಬರುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು (ಅರಿಕೇಸರಿಯು) ವಾರಣಾವತವನ್ನು ಬಂದು ಸೇರಿದನು.
Page #174
--------------------------------------------------------------------------
________________
* ತೃತೀಯಾಶ್ವಾಸಂ ಕಂ|| ಶ್ರೀಯವರಾತಿಬಳಾಸ್ತ್ರ
ಕೋಯಧಿಯೊಳ್ ಪಡೆದ ವೀರನು೦ದರಿಗಳನಾ | ತ್ಮೀಯಪದಸ್ಸುರಿತ ನಖ
ಚೈಾಯಗಳೊಳ್ ನಟಿಸಿ ನಿಂದ ಗಂಡಂ ಹರಿಗಂ | ವ|| ಆ ಪೋಬಲ ಪೊಜವೊಅಲನೆಯ ವರ್ಪಾಗಳ್ಕಂ || ಕತ್ತುರಿಯ ಸಗಣ ನೀರ್ ಬಿಡು
ಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂ | ಪತ್ತಿನ ಬಿತ್ತರದೆತ್ತಿದ
ಮುತ್ತಿನ ಮಂಡನಿಗೆ ಪೊಬಲ ಮನೆಗಳೆಲ್ಲಂ || ವl ಅಂತಾಗಳೊಂದುತ್ತರಂ ಬಳೆಯ ಸೊಗಯಿಸುವ ಪೋಬಲೋಳಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೋಳ್ ಮುನಮ ಸಮೆದಿರ್ದ ಪುರೋಚನಂ ಗೋರೋಚನಾ ಸಿದ್ದಾರ್ಥ ದೂರ್ವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣ ಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂದ್ರಿಯರುಂ ಬದ್ದವಣದ ಪಣಿಗಳುಂಬೆರಸಿದಿರ್ವಂದು ಮಮ್ಮಿಕ್ಕಿ ಪೊಡಮಟ್ಟು ಪಾಂಡವರುಮಂ ಮುಂದಿಟ್ಟೋಡಗೊಂಡು ಬಂದು ಪೊಲಲಂ ಪುಗಿಸೆ ಪೊಕ್ಕು ಬೀಡನಲ್ಲಿ ಬಿಡುವಮನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮದಿಟ್ಟೆನಲ್ಲಿಗೆ ಬಿಜಯಂಗೆಯ್ಕೆಮನೆ
೧. ಶತ್ರುಸೈನ್ಯದ ರಕ್ತಸಮುದ್ರದಲ್ಲಿ ಜಯಲಕ್ಷ್ಮಿಯನ್ನು ಪಡೆದ ವೀರನೂ ತನಗೆ ಅಧೀನರಾಗದ ಶತ್ರುಗಳನ್ನು ತನ್ನ ಕಾಲಿನಲ್ಲಿ ಹೊಳೆಯುತ್ತಿರುವ ಉಗುರಿನ ಕಾಂತಿಯ ನೆರಳಿನಲ್ಲಿ ನಿಲ್ಲಿಸಿದ ಪರಾಕ್ರಮಶಾಲಿಯೂ ಆದ ಅರ್ಜುನನು ಆ ಪಟ್ಟಣದ ವll ಹೊರಭಾಗವನ್ನು ಬಂದು ಸೇರಿದನು. ೨. ಪಟ್ಟಣದ ಮನೆಗಳೆಲ್ಲ ಕಸ್ತೂರಿಯಿಂದ ಕೂಡಿದ ಸಗಣಿನೀರು, ಬಿಡಿಬಿಡಿಯಾದ ಮುತ್ತಿನ ರಂಗೋಲೆ, ಚಲಿಸುತ್ತಿರುವ ರೇಷ್ಮೆಯ ಬಟ್ಟೆಯ ಬಾವುಟಗಳು, ಅತುಲೈಶ್ವರ್ಯದಿಂದ ಕೂಡಿದ ಮುತ್ತಿನ ಮಂಟಪ ಇವುಗಳಿಂದ ಅಲಂಕೃತವಾಗಿದ್ದುವು. ವ! ಹಾಗೆ ವೈಭವದಿಂದ ಕೂಡಿ ಸೊಗಯಿಸುತ್ತಿರಲು ಪಟ್ಟಣದಲ್ಲಿ ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆಯೆಂಬ ಎಂಟು ವಿಧ ಅಲಂಕಾರಗಳಿಂದ ಕೂಡಿ ದುರ್ಯೊಧನನ ಸೂಚನೆಯ ಪ್ರಕಾರ ಮೊದಲೇ ಸಿದ್ಧವಾಗಿದ್ದ ಪುರೋಚನನು ಗೋರಚನ (ಹಸುವಿನ ಎದೆಯಲ್ಲಿರುವ ಒಂದು ಜಾತಿಯ ಕೊಬ್ಬು) ಅಕ್ಷತೆ, ಗರಿಕೆಯ "ಚಿಗುರು, ಮಾದಲಹಣ್ಣು, ಕನ್ನಡಿ, ಕಳಮಾಕ್ಷತೆ ಮೊದಲಾದವುಗಳನ್ನು ಕಯ್ಯಲ್ಲಿ ಧರಿಸಿದ್ದ ಸ್ತ್ರೀಯರು ಮಂಗಳವಾದ್ಯಗಳು ಮೊದಲಾದವುಗಳಿಂದ ಕೂಡಿ ಎದುರಿಗೆ ಬಂದು ದೀರ್ಘದಂಡನಮಸ್ಕಾರಮಾಡಿ ಪಾಂಡವರನ್ನು ಮುಂದಿಟ್ಟುಕೊಂಡು ಬಂದು ಪಟ್ಟಣವನ್ನು ಪ್ರವೇಶಮಾಡಿಸಿ “ಎಲ್ಲಿ ಬೀಡುಬಿಡೋಣ' (ಇಳಿದುಕೊಳ್ಳೋಣ) ಎಂದು ಪಾಂಡವರು ಪ್ರಶ್ನೆಮಾಡಲು ಅವನು ನಿಮ್ಮಯ್ಯನಾದ ಧೃತರಾಷ್ಟ್ರನ ಆಜ್ಞೆಯ ಪ್ರಕಾರ
Page #175
--------------------------------------------------------------------------
________________
೧೭೦ / ಪಂಪಭಾರತಂ ಕಂ || ಅರಗು ಮೊದಲಾಗೆ ಶೃತ ಸ
ಜ್ವರಸಂ ಬೆಲ್ಲಂ ಸಣಂಬಿವೆಂಬಿವಲಿಂ ವಿ | ಸರಿಸಿ ಸಮದಿಂದ್ರಭವನಮ್
ಧರೆಗವತರಿಸಿರ್ದುದನಿಸುವರಗಿನ ಮನೆಯಂ | ವll ತಾನೆ ಮುಂದಿಟ್ಯೂಡಂಗೊಂಡು ಬಂದು ಪುಗಿಸಿ ಪಾಂಡವರಯ್ಯರುಂ ಕೊಂತಿವೆರಸು ಕಿಚಿದಾನುಂ ಬೇಗಮಿರ್ದು ದಾನ ಸನಾನಾದಿಗಳಿಂ ಸಂತಸಂಬಡಿಸಿ ಪುರೋಚನನಂ ಬೀಡಿಂಗ ಪೋಗಲ್ವಟ್ಟು ಧರ್ಮಪುತ್ರನಾ ಮನೆಯಂ ಪರೀಕ್ಷಿಸಿ ನೋಡಲೊಡಮಣಿದು ನಿಜಾನುಜ ಸಹಿತಂ ಕೊಂತಿವರಸೇಕಾಂತದೊಳಿಂತಂದಂಚಂ|| ಇದು ಮನೆಯಂದವನ್ನುರಿವ ದಳ್ಳುರಿಯುಗೈಡದಂದಮಾಗಿ ತೋ
ಆದಪುದು ಕಣ್ಣೆ ಸರಸದೆಣ್ಣೆಯ ತುಪ್ಪದ ಕಂಪಿದೆಲ್ಲಮಂ || ಬುದ ಬಗದಲ್ಲಿ ನೋಡುವೊಡಮಿಟ್ಟಗೆ ಕಲರನೆಂಬುದಿಲ್ಲ ಕೂ - ರದನಿದನೊಡ್ಡಿದಂ ಪಗೆಗೆ ಸಂತಸವಾಗಿರೆ ಮಾರಿ ಸುಝುಮೇ || ೪
ವl! ಅದಲ್ಲದಯುಮತ್ಕಾದರಸ್ಸಂಭ್ರಮಮುತ್ತಾದಯತಿಯೆಂಬುದೀ ಪುರೋಚನನೆಂಬ `ಬೂತು ಸುಯೋಧನನ ಬೆಸದಿಂ ನಮಗಿನಿತಾದರಂ ಗೆಯ್ಯುದಲ್ಲಂ ನಮ್ಮಂ ಮಳಡಿಸಲೆಂದೆ ಮಾಡಿದಂ ನಾಮಿದನಳಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮಂದು
ಮೊದಲೇ ಮನೆಯನ್ನು ಸಿದ್ಧಪಡಿಸಿದ್ದೇನೆ; ಅಲ್ಲಿಗೆ ದಯಮಾಡಿ ಎಂದನು. ೩. ಅರಗು ಮೊದಲಾದ ತುಪ್ಪ, ಸಜ್ಜರಸ, ಬೆಲ್ಲ, ಸೆಣಬು ಇವುಗಳಿಂದ ವಿಸ್ತಾರವಾಗಿ ನಿರ್ಮಿಸಿದ ದೇವೇಂದ್ರನರಮನೆಯೇ ಭೂಮಿಗಿಳಿದು ಬಂದಿದೆಯೋ ಎನಿಸಿದ್ದ ಅರಗಿನ ಮನೆಯನ್ನು ವl ತಾನೆ ಮುಂದಾಗಿ ಒಡಗೊಂಡು ಬಂದು ಪ್ರವೇಶಮಾಡಿಸಲು ಅಯ್ದುಜನ ಪಾಂಡವರೂ ಕುಂತಿಯೊಡಗೂಡಿ ಕೆಲವು ಕಾಲವಿದ್ದು ದಾನಸನ್ಮಾನಾದಿಗಳಿಂದ ಸಂತೋಷಪಡಿಸಿ ಪುರೋಚನನನ್ನು ಅವನ ಮನೆಗೆ ಹೋಗುವ ಹಾಗೆ ಹೇಳಿ ಧರ್ಮರಾಜನು ಆ ಮನೆಯನ್ನು ಪರೀಕ್ಷಿಸಿ ನೋಡಿ ಅದರ ರಹಸ್ಯವನ್ನು ತಿಳಿದು ತಮ್ಮಂದಿರೊಡಗೂಡಿದ ಕುಂತಿಗೆ ರಹಸ್ಯವಾಗಿ ಹೀಗೆ ಹೇಳಿದನು - ೪, ಇದು ಮನೆಯ ಹಾಗೆ ಕಾಣುವುದಿಲ್ಲ. ಉರಿಯುವ ದಾವಾಜ್ವಾಲೆಯ ರಾಶಿಯಂತೆ ಕಣ್ಣಿಗೆ ಕಾಣುತ್ತಿದೆ. ಎಲ್ಲಿ ಪರೀಕ್ಷಿಸಿ ನೋಡಿದರೂ ಸರಸದ ಎಣ್ಣೆಯ ತುಪ್ಪದ ವಾಸನೆಯೇ ಇದೆ. ಇಟ್ಟಿಗೆ, ಕಲ್ಲು, ಮರ ಎಂಬುವುದಿಲ್ಲ. ಶತ್ರುವಿಗೆ ಸಂತೋಷವಾಗುವುದಕ್ಕೋಸ್ಕರ ಅಹಿತನಾದ ವಿರೋಚನನು ಈ ಉಪಾಯವನ್ನು ಒಡ್ಡಿದ್ದಾನೆ. ಇದಕ್ಕೆ ಮಾರಿದೇವತೆಯು ನಿಟ್ಟುಸಿರು ಬಿಡುತ್ತಾಳೆಯೇ (ಅಂದರೆ ಇಲ್ಲ, ಅದು ಅವಳಿಗೆ ತೃಪ್ತಿಕರವಾಗಿಯೇ ಇರುತ್ತದೆ) ವll ಅಷ್ಟೇ ಅಲ್ಲದೆ ವಿಶೇಷವಾದ ಆದರವು ಸಂದೇಹವನ್ನುಂಟುಮಾಡುತ್ತದೆ' ಎಂಬುದುಂಟು. ಈ ಪುರೋಚನನೆಂಬ ಭೂತವು ದುರ್ಯೊಧನನ ಆಜ್ಞೆಯ ಪ್ರಕಾರ ನಮಗಿಷ್ಟು ಆದರವನ್ನು ತೋರಿಸುವುದೆಲ್ಲ ನಮ್ಮನ್ನು ಮೋಸಮಾಡುವುದಕ್ಕಾಗಿಯೇ ಮಾಡಿದ್ದಾನೆ. ನಾವು ಇದನ್ನು ತಿಳಿಯದ ಹಾಗೆ ಬೇಟೆಗೆ ಹೋಗುವ ನೆಪದಲ್ಲಿ ದಾರಿಯನ್ನು ಹುಡುಕೋಣ' ಎಂದು ನಿತ್ಯವೂ
Page #176
--------------------------------------------------------------------------
________________
ತೃತೀಯಾಶ್ವಾಸಂ | ೧೭೧ ನಿಚ್ಚಂ ಬೇಂಟೆವೋಗೆ ಪುರೋಚನನುಂ ಪಂಗಣ ಕಾಪಂ ಕಷ್ಟಾಪಿನಲೆ ಕಾದಿರ್ಪನ್ನೆಗಂ ವಿದುರನ - ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡೇಕಾಂತದೊಳ್ ವಿದುರನಟ್ಟಿದ 'ವಿನ್ನಾಣಂಗಳಂ ಪೇಟ್ಟು ನಂಬಿಸಿ ನೀಮೆಂತುಂ ಬರಂತೆ ಪೋಣಮಟ್ಟು ಪೋಗಿಯೆಂದು ಜತುಗ್ರಹ ಕವಾಟ ಪುಟ ಸಂಧಿಗಳೊಳ್ ಸುರಂಗಮಂ ಗಂಗಯೊಳ್ ಮೂಡುವಂತಾಗ ಸಮದು ಪೇಟ್ಟು ಪೋಪುದುಂ ಪಾಂಡವರುಂ ಪುರೋಚನಂ ತಮ್ಮ ಮುದಿವಸಂ ಛಿದ್ರಿಸುವನೆನಲುಂ ಮುನ್ನಿನ ದಿವಸದೊಳಗಣ ಪರಿಜನಮಲ್ಲಮಂ ಪಾರ್ವರನೂಡುವ ನೆವದೂಳೆ ಪೂಜಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನೂಡಿ ನಿಷಾದಿತಿಯೆಂಬ ಬೇಡಿತಿಗಮಯ್ಯರ್ ಮಗಂದಿರ್ಗಮುಣಲಿಕ್ಕಿದೋಡ ತಣಿಯುಂಡು ಬೆಂಡುಮಲ್ಲು ಮಸುಂದಿದರ್ ಪುರೋಚನನುಮಾ ಮನೆಯೊಳೊಂದೂವರಿಯೊಳ್ ಮಜಕೆಂದಿದನಾ ಪ್ರಸ್ತಾವದೂಳರ್ಧ ರಾತ್ರಿಯಾದಾಗಳ್ ಕೊಂತಿವರಸಯ್ಯರುಮಂ ಮುನ್ನಮಯ್ಯನೊಯ್ಯನೆ ಸುರಂಗದಿ ಪೂಜೆಮಡಿಸಿ ಭೀಮಸೇನಂ ಪುರೋಚನಂ ಮಜಕೆಂದಿರ್ದೊವರಿಯೊಳ್ ಕಿಚ್ಚಂ ಕೊಳಿಸಲೊಡಂ
ಕಂ || ಅಡವೊತ್ತದ ಕಿಣಿಕಿದನೆ
ಸುಡದಿನಿಸರೆಪೊರಕನಾಗದೆಯ ಸಸಿದಂದೋಂ | ದೆಡೆಯೊಳಗೊಟ್ಟಿರ್ದರಳೆಯ ನೋಡನಳುರ್ವಂತುಳುರ್ದನನಲನರಗಿನ ಮನೆಯಂ |
ಬೇಟೆಗೆ ಹೋಗುತ್ತಿರಲು ಪುರೋಚನನೂ ಇವರ ಹೊರಗಿನ ರಕ್ಷಣೆಯನ್ನು ತನ್ನ ಕಣ್ಣಿನ ಮೇಲುನೋಟದಿಂದಲೇ ನೋಡುತ್ತಿರುವಷ್ಟರಲ್ಲಿ ವಿದುರನ ನಂಬಿಕೆಗೆ ಪಾತ್ರನಾದ ಕನಕನೆಂಬ ಸೇವಕನು ಬಂದು ಪಾಂಡವರನ್ನು ಕಂಡು ರಹಸ್ಯವಾಗಿ ಅವರಿಗೆ ವಿದುರನು ಕಳುಹಿಸಿದ ಸಂಜ್ಞೆಗಳನ್ನು ಹೇಳಿ ನಂಬುವ ಹಾಗೆ ಮಾಡಿ 'ನೀವು ಹೇಗೂ ತಿಳಿದವರಾಗಿದ್ದೀರಿ; ಹಾಗೆಯೇ ಹೊರಟು ಹೋಗಿ ಎಂದು ಅರಗಿನ ಮನೆಯ ಬಾಗಿಲಿನ ಸಂದಿಯಲ್ಲಿ ನೆಲದೊಳಗಿನ ರಂಧ್ರವನ್ನು ಗಂಗೆಯ ಆಚೆಯ ದಡದಲ್ಲಿ ಹೊರಗೆ ಬರುವಂತೆ ಸಿದ್ದಪಡಿಸಿ ಆ ವಿಷಯವನ್ನು ಅವರಿಗೆ ಹೇಳಿಹೋದನು. ಪಾಂಡವರೂ ಕೂಡ ಪುರೋಚನನು ತಮ್ಮನ್ನು ಮುಂದಿನ ದಿವಸ ಛೇದಿಸುತ್ತಾನೆಂದು ತಿಳಿದು ಮೊದಲ ದಿನವೇ ಬ್ರಾಹ್ಮಣರಿಗೆ ಭೋಜನಮಾಡಿಸುವ ನೆಪದಲ್ಲಿ ತಮ್ಮ ಪರಿವಾರವನ್ನೆಲ್ಲ ಹೊರಗೆ ಹೋಗುವ ಹಾಗೆ ಮಾಡಿದರು. ಸೂರ್ಯನು ಮುಳುಗುವ ಹೊತ್ತಿನಲ್ಲಿ ಬ್ರಾಹ್ಮಣರಿಗೆಲ್ಲ ಊಟ ಮಾಡಿಸಿ ನಿಷಾದಿತಿಯೆಂಬ ಬೇಡರವಳಿಗೂ ಅವಳ ಅಯ್ದು ಜನ ಮಕ್ಕಳಿಗೂ ಊಟ ಮಾಡಿಸಿದರು. ಅವರು ತೃಪ್ತಿಯಾಗಿ ತಿಂದು ಬಳಲಿದಂತವರಾಗಿ ಮೈಮರೆತು ನಿದ್ರಿಸಿದರು. ಪುರೋಚನನೂ ಆ ಮನೆಯ ಒಂದು ಕೋಣೆಯಲ್ಲಿ ಎಚ್ಚರತಪ್ಪಿ ಮಲಗಿದನು. ಆ ಸಂದರ್ಭದಲ್ಲಿ ಅರ್ಧರಾತ್ರಿಯಾದಾಗ ಭೀಮಸೇನನು ಕುಂತಿಯೊಡನೆ ಅಯ್ದುಜನಗಳನ್ನು ಮೊದಲೇ ನಿಧಾನವಾಗಿ ಸುರಂಗದಿಂದ ಹೊರಡಿಸಿ ಪುರೋಚನನು ಮೈಮರೆತು ಮಲಗಿದ್ದ ಕೊಟಡಿಗೆ ಬೆಂಕಿಯನ್ನು ಹಚ್ಚಿದನು. ೫. ಅಡಿಯ ಭಾಗ ಹತ್ತಿಕೊಳ್ಳದೆ ಸ್ವಲ್ಪ ಸ್ವಲ್ಪವಾಗಿ ಸುಡದೆ ಸ್ವಲ್ಪವೂ ಅರೆಕರಿಕಾಗದೆ ಬಿಡಿಸಿಟ್ಟಿದ್ದ ಹತ್ತಿಯ ರಾಶಿಯನ್ನು ಒಟ್ಟಿಗೇ ವ್ಯಾಪಿಸುವಂತೆ
Page #177
--------------------------------------------------------------------------
________________
೧೭೨) ಪಂಪಭಾರತಂ ಕಂII, ಮೇಲಾದ ಪಾಂಡುಸುತರನು
ಪಾಲಂಭಂಗೆಯ್ಯುತಿರ್ಪ ದುರ್ಯೊಧನನಂ | ಲೀಲೆಯ ನುಂಗುವ ಮೃತ್ಯುವ
ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ || ವ|| ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೋಳಂ ಕರಗಿ ಸುರಿವರಗಿನುರಿಯ ಬಂಬಲ್ಗಳಂ ಪೊಸೆದು ಬಿದಿರ್ದು ಕಳೆದು ಸುರಂಗದೊಳಗಣಿಂದಮ ತನ್ನೊಡವುಟ್ಟಿದರ್ ಕೂಡ ವಂದನನ್ನೆಗಮಿತ್ರಂಕಂ|| ಅರಗಿನ ಮನೆಯೊಳ್ ಪಾಂಡವ
ರುರಿದದರಕ್ಕಟಯ್ಯೋ ದುರ್ಯೋಧನನಂ | ಬೆರಲೆಯಿನೆಂದುತುಂ ತ
ತುರಜನಮಣಿದವೆ ಪರಿದು ನೋಡಿತ್ತಾಗಳ್ | ವನೋಡಿ ರೂಪಳೆಯಲಾಗದಂತು ಕರಿಮುರಿಕನಾಗಿರ್ದ ಬೇಡಿತಿಯು ಮನವಯ್ಯರ್ ಮಕ್ಕಳುಮಂ ಕೊಂತಿಯುಂ ಪಾಂಡವರುಮಪ್ಪರೇನುಂ ತಪ್ಪಲ್ಲೊಂದು ಪುರಪ್ರಧಾನರ್ಕಲ್ ತದ್ಧತ್ತಾಂತಮಲ್ಲಮಂ ಪೇಟ್ಟು ಧೃತರಾಷ್ಟ್ರಗಂ ಪೇವಿಲಟ್ಟದೊಡೆ
ಮನದೊಳ್ ವೈಭುವನಮನಾ ಇನಿತುವರಂ ತನಗೆ ಸಂತಸಂ ಪರ್ಚಿಯುಮಂ | ದಿನಿಸಂಧನೃಪಂ ತನ್ನಯ ಜನದೊಳ್ ಕೆಲನಟಿಯೆ ಕೃತಕ ಶೋಕಂಗೆಯ್ದಂ |
೮
ಅರಗಿನ ಮನೆಯನ್ನು ಅಗ್ನಿಯು ತಕ್ಷಣ ವ್ಯಾಪಿಸಿದನು. ೬. ಉತ್ತಮರಾದ ಪಾಂಡವರನ್ನು ಮೋಸಮಾಡುತ್ತಿರುವ ದುರ್ಯೋಧನನನ್ನು ಆಟದಿಂದಲೇ ನುಂಗುವ ಮೃತ್ಯುದೇವತೆಯ ನಾಲಗೆಯೆನ್ನುವ ಹಾಗೆ ಹಲವು ಅಗ್ನಿಜ್ವಾಲೆಗಳು ಹೊರಟವು. ವll ಆಗ ಭೀಮಸೇನನು ತನ್ನ ತಲೆಯ ಮೇಲೆಯೂ ಶರೀರದ ಮೇಲೆಯೂ ಕರಗಿ ಸುರಿಯುತ್ತಿದ್ದ ಅರಗಿನ ಜ್ವಾಲೆಯ ಸಮೂಹಗಳನ್ನು ಹೊಸದು ಒದರಿ ಕಳೆದು ಸುರಂಗದೊಳಗಿನಿಂದಲೇ ತನ್ನ ಸಹೋದರರ ಜೊತೆಯಲ್ಲಿ ಬಂದನು. ಅಷ್ಟರಲ್ಲಿ ಈ ಕಡೆ- ೭. ದುರ್ಯೊಧನನೆಂಬ ವಿಷದ ಹುಳುವಿನಿಂದ ಪಾಂಡವರು ಅರಗಿನ ಮನೆಯಲ್ಲಿ ಬೆಂದು ನಾಶವಾದರು; ಅಯ್ಯೋ ಅಬ್ಬ ಎಂದು ಅಳುತ್ತ ಆ ಪಟ್ಟಣಿಗರೆಲ್ಲ ಹೆಚ್ಚುತ್ತಿರುವ ದುಃಖದಿಂದ ಬಂದು ನೋಡಿದರು. ವು ನೋಡಿ ಗುರುತಿಸಲಾಗದಷ್ಟು ಕರಿಕುಮುರುಕಾಗಿದ್ದ ಬೇಡಿತಿಯನ್ನೂ ಅವಳ ಅಯ್ದು ಜನ ಮಕ್ಕಳನ್ನೂ ಕುಂತಿ ಹಾಗೂ ಪಾಂಡವರೇ ಆಗಿದ್ದಾರೆ ವ್ಯತ್ಯಾಸವಿಲ್ಲ ಎಂದು ನಿಷ್ಕರ್ಷಿಸಿ ಊರ ಮುಖ್ಯಸ್ಥರು ಆ ವಿಚಾರವನ್ನೆಲ್ಲ ಧೃತರಾಷ್ಟ್ರನಲ್ಲಿಗೂ ಹೇಳಿ ಕಳುಹಿಸಿದರು. ೮. ಅದನ್ನು ಕೇಳಿ ತನಗೆ ಆ ದಿನ ಮೂರುಲೋಕವನ್ನು ಆಳುವಷ್ಟು ಸಂತೋಷ ಹೆಚ್ಚಿದರೂ ಅಕ್ಕಪಕ್ಕದವರು ತಿಳಿಯುವ ಹಾಗೆ ಧೃತರಾಷ್ಟ್ರನು ತನ್ನ ಜನದ ಮಧ್ಯದಲ್ಲಿ ಕಪಟದುಃಖವನ್ನು
Page #178
--------------------------------------------------------------------------
________________
ತೃತೀಯಾಶ್ವಾಸಂ | ೧೭೩ ವ|| ಆಗಳ್ ನದೀತನೂಜ ಭಾರದ್ವಾಜ ಕೃಪರವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ ವಿದುರಂ ತಾನಳದುಮಳಿಯದಂತ ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೂಗಿ ತದರ್ಧ ದಗ್ಗ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿಕ್ರಿಯಗಳಂ ಮಾಡಿ ಮಗುಚಿ ವಂದನನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೂಣಮಟ್ಟು ತಾರಾಗಣಂಗಳ ನಿಂದ ನೆಲೆಯಿಂ ದೆಸೆಯಂ ಪೊಟುಮನಳಿದು ತಂಕಮೊಗದ ಪಯಣಂಬೋಗಿ
ಮI ತಡಕುಂ ಪಿಟ್ಟೆಯುಮೊತ್ತ ಮಲ್ಲಡಿಗಳಂ ಬಳ್ಳುತ್ತುಮಳ್ಳುತ್ತುಮೋ
ರಡಿಗೊರ್ಮೊಮ್ರ ಕುಳುತ್ತುಮೇಲುತಿರೆ ಕಂಡಿಂತಾಗದಿನ್ನೇಟಿಮಂ | ದೂಡನಂದಯ್ಯರುಮಂ ನಿಜಾಂಸಯುಗದೊಳ್ ಪೂತ್ತ ತಳ್ಳೂಳ್ಳ ಸೀ
ಮಡುವಿಂದದ್ಭುತದಾ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ || ೯ ಚಂ|| ಆದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ
ಸದಮದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕ | ಪ್ರದಮದು ನಿರ್ಝರೋಚಳಿತ ಶೀಕರ ಶೀತಳ ವಾತ ನರ್ತಿತೋ
ನದ ಶಬರೀ ಜನಾಳಕಮದಾಯತ ವೇತಲತಾವಿತಾನಂ ||
ವ|| ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನೆಯಂದದಲ ಕೆಲಗಳ್ಳರುಮ ನಿಚಿಪಿದೊಡಧ್ವಾನ ಪದ ಪರಿಶ್ರಮ ಶಾಂತರ್ ನಿದ್ರಾಭರಪರವಶರಾಗಿರೆ ಭೀಮಂ ಜಾವಮಿರ್ದು
ಪ್ರದರ್ಶಿಸಿದನು. ವ|| ಆಗ ಭೀಷ್ಮದ್ರೋಣ ಕೃಪರು ಏಕಪ್ರಕಾರವಾಗಿ ಸುರಿಯುವ ಕಣ್ಣೀರೆಂಬ ಮಳೆಗಾಲದಿಂದ ಬಾಡಿದ ಮುಖವುಳ್ಳವರಾಗಿರಲು ವಿದುರನು ತಾನು ತಿಳಿದಿದ್ದರೂ ತಿಳಿಯದವನಂತೆ ದುಃಖದಿಂದ ಕೂಡಿದವನಾಗಿ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ವಾರಣಾವತಕ್ಕೆ ಹೋಗಿ ಅಲ್ಲಿ ಅರ್ಧಸುಟ್ಟಿದ್ದ ದೇಹಗಳಿಗೆ ಸಂಸ್ಕಾರಮಾಡಿ ತರ್ಪಣಾದಿಗಳನ್ನು ಕೊಟ್ಟು ಹಿಂತಿರುಗಿದನು. ಅಷ್ಟರಲ್ಲಿ ಈ ಕಡೆ ಪಾಂಡವರು ಸುರಂಗ ಮಾರ್ಗದಿಂದ ಹೊರಟು ನಕ್ಷತ್ರಸಮೂಹಗಳಿದ್ದ ಸ್ಥಾನಗಳಿಂದ ದಿಕ್ಕನ್ನೂ ಹೊತ್ತನ್ನೂ ತಿಳಿದು ಪ್ರಯಾಣ ಮಾಡಿದರು. ೯. ಮೃದುವಾದ ತಮ್ಮ ಕಾಲುಗಳನ್ನು ಕಲ್ಲುಗಳೂ ಹೆಂಟೆಯೂ ಒತ್ತುತ್ತಿರಲು ಬಳುಕುತ್ತಲೂ ಹೆದರುತ್ತಲೂ ಒಂದೊಂದು ಹೆಜ್ಜೆಗೂ ಕೂರುತ್ತಲೂ ಏಳುತ್ತಲೂ ಇರುವುದನ್ನು (ಭೀಮಸೇನನು) ನೋಡಿ ಇನ್ನು ಮುಂದೆ ಹೀಗಾಗುವುದಿಲ್ಲ ಏಳಿ ಎಂದು' ಒಟ್ಟಿಗೆ ಆ ಅಯ್ದು ಜನವನ್ನು ತನ್ನ ಎರಡು ಭುಜದ ಮೇಲೆ ಹೊತ್ತು ವ್ಯಾಪಿಸಿ ಶಬ್ದಮಾಡುತ್ತಿರುವ ಜೀರುಂಡೆಯಿಂದ ಅದ್ಭುತವಾಗಿದ್ದ ಹಿಡಿಂಬವನವೆಂಬ ಕಾಡನ್ನು ವಾಯುಪುತ್ರನಾದ ಭೀಮಸೇನನು ಪ್ರವೇಶಿಸಿದನು. ೧೦. ಆ ಹಿಡಿಂಬವನವು ಮದ್ದಾನೆಗಳ ಕೊಂಬೆಂಬ ಒನಕೆಯಿಂದ ಮುರಿಯಲ್ಪಟ್ಟ ದೊಡ್ಡಮರಗಳಿಗೆ ಆಶ್ರಯವಾಗಿದ್ದಿತು. ಸಿಂಹಗರ್ಜನೆಯಿಂದ ಉಂಟಾದ ಪ್ರತಿಧ್ವನಿಯಿಂದ ಭಯಂಕರವಾಗಿ ಕಂಡಿತು. ಬೆಟ್ಟ ಝರಿಗಳಲ್ಲಿ ಮೇಲಕ್ಕೆದ್ದ ತುಂತುರುಗಳಿಂದ ಒದ್ದೆಯಾದ ಗಾಳಿಯಿಂದ ಕುಣಿಸಲ್ಪಟ್ಟ ಮದಿಸಿರುವ ಬೇಡಿತಿಯರ ಮುಂಗುರುಳುಗಳಿಂದ ಮನೋಹರವಾಗಿತ್ತು. ವಿಸ್ತಾರವಾದ `ಬೆತ್ತದ ಬಳ್ಳಿಗಳ - ಮೇಲ್ಕಟ್ಟುಗಳಿಂದ ತುಂಬಿದ್ದಿತು. ವ|| ಆ ಕಾಡಿನ ಒಳಭಾಗದ ಮಧ್ಯದಲ್ಲಿ ವಿಸ್ತಾರವಾದ ,
Page #179
--------------------------------------------------------------------------
________________
೧೭೪ / ಪಂಪಭಾರತಂ
ತನ್ನೊಡವುಟ್ಟದರ್ಗಾದ ಪ್ರವಾಸಾಯಾಸಂಗಳಂ ದೆಸೆಗಂ ಮನ್ಯುಮಿಕ್ಕು ಬರೆ ಕಣ್ಣ ನೀರು ತುಂಬಿ
ಚಂ || ಭರತನ ವಂಶದೊಳ್ ನೆಗಟ್ಟಿ ಪಾಂಡುಗೆವುಟ್ಟಿಯುಮಿ ಸಮಸ್ತ ಸಾ ಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುಮಿ ಮಹೋಗ್ರ ಕೇ | ಸರಿ ಕರಿ ಕಂಠ ಗರ್ಜಿತ ಮಹಾಟವಿಯೊಳ್ ಮಕೆಂದಿ ನೀಮುಖಾ
ಮರದಡಿಯೊಳ್ ಶಿವಾಶಿವ ರವಂಗಳಿನೆರುವಂತುಟಾದುದೇ ||
ವ|| ಎಂದು ನುಡಿಯುತ್ತಿರ್ಪನ್ನೆಗಂ ಕೋಕನದಬಾಂಧವನು ದಯಾಚಳಶಿಖರ ಶೇಖರನಾದ ನಾಗಳಾ ಬನಮನಾಳ್ವ ಹಿಡಿಂಬನೆಂಬನವರ ಬರವನಂದು ತನ್ನ ತಂಗೆ ಹಿಡಿಂಬೆಯೆಂಬಳಂ ಕರೆದು
ಕಂ ನಿಡಿಯರ್ ಬಲ್ಲಾಯದ ಬ
ಲ್ದಡಿಗರ್ ವಂದಿರ್ದರಯ್ಯರಾಲದ ಕೆಳಗಿಂ | ತೊಡರ್ದರ್ ನಮ್ಮಯ ಭಕ್ಷದೊ
ಇಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ ||
3
ವ|| ಎಂಬುದುಮಂತೆಗೆಯೆನೆಂದು
ܦܘ
ಆಲದ ಮರದ ಸಮೀಪಕ್ಕೆ ಬಂದು ಅದರ ಕೆಳಗಡೆ ಆ ಅಯ್ದು ಜನರನ್ನು ಇಳಿಸಿದನು. ಅವರು ದಾರಿ ನಡೆದ ಬಳಲಿಕೆಯಿಂದ ನಿದ್ರಾಭಾರಕ್ಕೆ ಅಧೀನರಾದರು. ಭೀಮನು ಅವರಿಗೆ ಕಾವಲಾಗಿದ್ದು ತನ್ನ ಒಡಹುಟ್ಟಿದವರಿಗುಂಟಾದ ಪ್ರಯಾಣದಾಯಾಸಕ್ಕೂ ದುರ್ದೆಶೆಗೂ ದುಃಖವು ಉಲ್ಬಣಿಸಿ ಬರಲು ಕಣ್ಣ ನೀರನ್ನು ತುಂಬಿಕೊಂಡನು. ೧೧. ಭರತವಂಶದಲ್ಲಿ ಪ್ರಸಿದ್ಧನಾದ ಪಾಂಡುರಾಜನಿಗೆ ಮಕ್ಕಳಾಗಿ ಹುಟ್ಟಿಯೂ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಸಮಸ್ತ ಭೂಮಂಡಲಕ್ಕೆ ಒಡೆಯರಾಗಿಯೂ ಈ ಭಯಂಕರವಾದ ಸಿಂಹ ಮತ್ತು ಆನೆಗಳ ಕೊರಳಿನಿಂದ ಹೊರಟ ಗರ್ಜನೆಗಳಿಂದ ಕೂಡಿದ ಈ ಘೋರಾರಣ್ಯದಲ್ಲಿ ಮೈಮರೆತು ಮಲಗಿ ನೀವೂ ಈ ಮರದಡಿಯಲ್ಲಿ ನರಿಗಳ ಅಮಂಗಳಕರವಾದ ಧ್ವನಿಯಿಂದ ಎಚ್ಚರಗೊಳ್ಳುವ ಹಾಗೆ ಆಯಿತೇ ? ವ|| ಎಂದು ಹೇಳುತ್ತಿರುವಷ್ಟರಲ್ಲಿಯೇ ಕಮಲಸಖನಾದ ಸೂರ್ಯನು ಉದಯಪರ್ವತದ ಕೋಡಿಗೆ ಬಂದು ಸೇರಿದನು (ಸೂರ್ಯನು ಉದಯಿಸಿದನು), ಆಗ ಆ ಅರಣ್ಯಪ್ರದೇಶವನ್ನು ಆಳುವ ಹಿಡಿಂಬನೆಂಬುವನು ಅವರ ಬರವನ್ನು ತಿಳಿದು ತನ್ನ ತಂಗಿಯಾದ ಹಿಡಿಂಬೆಯೆಂಬವಳನ್ನು ಕರೆದು ೧೨. ನೀಳವಾಗಿಯೂ ಬಲುದಪ್ಪನಾಗಿಯೂ ದಾಂಡಿಗರಾಗಿಯೂ ಇರುವ ಅಯ್ದು ಜನ ಆಲದ ಮರದ ಕೆಳಗೆ ಇದ್ದಾರೆ. ಇನ್ನು ನಮ್ಮ ಆಹಾರಕ್ಕಾಗಿ ಸಿಕ್ಕಿಬಿದ್ದಿದ್ದಾರೆ. ಹೋಗಿ ಬೇಯಿಸಿ ಅಡುಗೆ ಮಾಡಿ ಸಿದ್ಧಪಡಿಸು; ನೀನೂ ನಾನೂ ತಿನ್ನೋಣ. ವ|| ಎನ್ನಲು ಹಾಗೆಯೇ ಮಾಡುತ್ತೇನೆ
Page #180
--------------------------------------------------------------------------
________________
ತೃತೀಯಾಶ್ವಾಸಂ | ೧೭೫ ಕಂtು ಆಗಸದೊಳಗೊಂದು ಮಹೀ
ಭಾಗದೋಳಿನ್ನೊಂದು ದಾಡೆಯಾಗಿರೆ ಮನದಿಂ | ಬೇಗಂ ಬರ್ಪಳ ದಿಟ್ಟಿಗ ಭಾಗಳೆ ಪದುವು ಗೆಂಟಲ್ ಮಾರುತಿಯಂ ||
ವ|| ಅಂತೊಂದ೦ಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪಯಪ್ಪುದಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಯೋಂಡು ತನ್ನತ್ತ ಮೊಗದೆ ಬರ್ಪಳಂ ಕಂಡು:: ಕಂ ಖೇಚರಿಯೋ ಭೂಚರಿಯೊ ನಿ
ಶಾಚರಿಯೋ ರೂಪು ಬಣ್ಣಿಸಲ್ಮಾರ್ಗಮವಾ | ಗೋಚರಮಿಾ ಕಾನನಮುಮ ಗೋಚರಮಿವಳಿಲ್ಲಿಗೇಕೆ ಬಂದಳೂ ಪೇಟಿಂ ||
ವll ಎಂಬನ್ನೆಗಮಾಕೆ ಮದನನ ಕೆಯ್ಯಂ ಬರ್ದುಂಕಿದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗನೆಂಬೆಯೇಕೆ ಬಂದೆಯೆಂದೊಡಾಕೆಯಂದಳೆರಡನೆಯ ದೊಲ್ಲು ನಿನ್ನೊಳೆರಡು ನುಡಿಯಲಾಗದೆನಗೆ ಯಾ ಬನಂ ಹಿಡಿಂಬವನೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯನೆಂಬನಾತನ ಬೆಸದಿಂ ನಿಮ್ಮಿನಿಬರುಮಂ
ಎಂದು ೧೩. ಆಕಾಶದಲ್ಲಿ ಒಂದು ಭೂಮಿಯಲ್ಲಿ ಒಂದು ದವಡೆಯಾಗಿರಲು (ಅಂದರೆ ದೊಡ್ಡದಾಗಿ ಬಾಯಿ ತೆರೆದುಕೊಂಡು) ಮನೋವೇಗವನ್ನು ಮೀರಿ ಬರುತ್ತಿದ್ದ ಅವಳ ದೃಷ್ಟಿಗಳು ದೂರದಿಂದಲೇ ಭೀಮನನ್ನು ಸೇರಿಕೊಂಡವು. ವll ಹಾಗೆ ಒಂದು ಬಾಣ ಹೋಗುವಷ್ಟು ದೂರದಲ್ಲಿಯೇ ಕಾಮಬಾಣಕ್ಕೆ ಅಧೀನಳಾಗಿ ತಾನು ಇಷ್ಟ ಬಂದ ರೂಪವನ್ನು ಧರಿಸುವ ಸಾಮರ್ಥ್ಯವುಳ್ಳವಳಾದುದರಿಂದ ಸುಂದರಳಾದ ಕನ್ನಿಕೆಯ ಆಕಾರವನ್ನು ತಾಳಿ ಭೀಮನು ಕಡೆಗೇ ಬಂದಳು. ತನ್ನ ಕಡೆಗೆ ಬರುತ್ತಿದ್ದ ಅವಳನ್ನು ನೋಡಿದನು. ೧೪. ಭೀಮನು ಇವಳು ಅಂತರಿಕ್ಷದಲ್ಲಿ ಸಂಚರಿಸುವ ವಿದ್ಯಾಧರಿಯೋ ಭೂಮಿಯಲ್ಲಿ ಸಂಚಾರಮಾಡುವ ಮನುಷ್ಯಸ್ತೀಯೋ, ಇಲ್ಲ ರಾತ್ರಿಯಲ್ಲಿ ಸಂಚಾರಮಾಡುವ ರಾಕ್ಷಸಿಯೋ! ಇವಳ ರೂಪವನ್ನು ವರ್ಣಿಸುವುದಕ್ಕೆ ಯಾರಿಗೂ ಮಾತಿನಿಂದ ಸಾಧ್ಯವಿಲ್ಲ. ಈ ಕಾಡೂ ಕೂಡ ಯಾರಿಗೂ ಪರಿಚಿತವಿಲ್ಲದುದು. ಇವಳಿಲ್ಲಿಗೇಕೆ ಬಂದಳು ಎಂದು ಯೋಚಿಸಿದನು. ವ|| ಅಷ್ಟರಲ್ಲಿ ಅವಳು ಮನ್ಮಥನ ಕಮ್ಮಿಂದ ಬದುಕಿ ಪುಷ್ಪಬಾಣದ ಹಾಗೆ ಭೀಮಸೇನನ ಪಕ್ಕದಲ್ಲಿ ಬಂದು ಕುಳಿತುಕೊಂಡಿರಲು ಭೀಮಸೇನನು ಅವಳನ್ನು ಕುರಿತು ನೀನು ಯಾರ ಮಗಳು ? ನಿನ್ನ ಹೆಸರೇನು? ಯಾತಕ್ಕೆ ಬಂದಿದ್ದೀಯೆ ಎನ್ನಲು (ಆಕೆ ಅವನನ್ನು ಕುರಿತು) ಸಂದೇಹವಿಲ್ಲದೆ ದೃಢವಾಗಿ ಪ್ರೀತಿಸಿ ಬಂದ ನಿನ್ನಲ್ಲಿ ಸುಳ್ಳನ್ನು ಹೇಳಬಾರದು. ಈ ಕಾಡು ಹಿಡಿಂಬವನವೆಂಬುದು. ಇದನ್ನು ಆಳುವ ಹಿಡಿಂಬನೆಂಬ ರಾಕ್ಷಸನು ನಮ್ಮಣ್ಣ: ನನ್ನ ಹೆಸರೂ 'ಹಿಡಿಂಬೆಯೆಂದು; ಅವನ ಆಜ್ಞೆಯ ಪ್ರಕಾರ ನಿಮ್ಮಿಷ್ಟು ಜನವನ್ನು
Page #181
--------------------------------------------------------------------------
________________
- ೧೫
೧೭೬ | ಪಂಪಭಾರತಂ ಕಂ| ಪಿಡಿದಡಸಿ ತಿನಲ್ ಬಂದಿ
ರ್ದಡೆಯೊಳ್ ನಿನಗಾಗಿ ಮದನನೆನ್ನನೆ ತಿನ ಕೇಳ್ 1. ಪಡೆನೋಡಲ್ ಬಂದವರಂ
ಗುಡಿವೊಳಿಸಿದರೆಂಬುದಾಯ್ತು ನಿನ್ನನ್ನೆಡೆಯೊಳ್ || ವ|| ಎಂದೀ ಮಜಲುಂದಿದರಾರ್ಗೆಂದೂಡನ್ನ ತಾಯ್ಕೆರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ನೆ ನೀನೆನ್ನ ಹೆಗಲನೇಣು ಗಗನತಳಕುಯ್ಯನೆನೆ ಭೀಮಸೇನನಾ ಮಾತಿಂಗೆ ಮುಗುಳಗೆ ನಕ್ಕುಚಂtು ಅಚಿಪಿದೆಯಂತುಮಲ್ಲದ ನಿಶಾಚರಿಯ್ಯ ನಿನಗಪ್ಪುದಪ್ಪುದೀ
ಯಡೆನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋQಮಾತನೊ | * ಡಟಿಯದ ಗಂಡವಾತನೆನುತಂತಿರೆ ತಂಗೆಯ ಮಾಣ್ಣುದರ್ಕವು
ಮೊಲಗಿ ಸಿಡಿದೊಂದು ಸಿಡಿಲೇಜ್ಯಿನೆಯ್ದರೆ ಎಂದು ಭೀಮನಂ ||೧೬
ವಗ ಕಂಡು ಕಣ್ಣಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸಿ ನೀನೊರ್ವಯನ್ನೊಳಗೇಂ ಕಾದುವ ಈ ಮಜಲುಂದಿದರನನಿಬರುಮನೊರ್ಮಯ ಪೊಸೆದು ಮುಕ್ಕುವನನೆ ಸಾಹಸಭೀಮಂ ಮಲ್ಲಂತಿಗೆಯನಷ್ಟೊಡಂ ಸಡಲಿಸದವನನವಯವದೊಳಿಂತೆಂದಂ
೧೫. ಹಿಡಿದು ಬಾಯಿಗೆ ತುರಿಕಿಕೊಂಡು ತಿನ್ನಲು ಬಂದ ಸಮಯದಲ್ಲಿ ಮನ್ಮಥನು ನನ್ನನ್ನೇ ತಿಂದುಬಿಟ್ಟಿದ್ದಾನೆ. “ಸೈನ್ಯವನ್ನು ನೋಡಲು ಬಂದವರ ಕೈಯಲ್ಲಿ ಬಾವುಟವನ್ನು ಹೊರಿಸಿದರು” ಎಂಬ ಗಾದೆಗೆ ಅನುಗುಣವಾಯಿತು ನಿನ್ನ ನನ್ನ ಸಂಬಂಧವು ವll ಎಂದು 'ಈ ಮೈಮರೆತು ಮಲಗಿರುವವರಾರು' ಎಂದು ಕೇಳಿದಳು. ಅವರು ನನ್ನ ತಾಯಿ ಮತ್ತು ಸಹೋದರರು ಎಂದು ಉತ್ತರಕೊಡಲು ಹಿಡಿಂಬನು ಬಂದು ಅವರನ್ನು ತಿನ್ನುವುದಾದರೆ ತಿನ್ನಲಿ; ನೀನು ನನ್ನ ಹೆಗಲನ್ನು ಏರಿಕೋ, ಆಕಾಶಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಳು. ಅದಕ್ಕೆ ಭೀಮಸೇನನು ಹುಸಿನಗೆ ನಕ್ಕು ೧೬. ನೀನು ನನ್ನಲ್ಲಿ ಮೋಹಗೊಂಡಿದ್ದೀಯೆ; ಅಲ್ಲದೆ ನೀನು ರಾಕ್ಷಸಿಯಾಗಿದ್ದೀಯ; ಈ ಅಯೋಗ್ಯವಾದ ಮಾತು ನಿನಗೆ ತಕ್ಕುದಾಗಿದೆ. ನಿನ್ನ ಹಿರಿಯಣ್ಣನೇ ಬರಲಿ, ಅವನ ಊನವಾಗದ ವೀರ್ಯಾಲಾಪಗಳನ್ನು ಪರೀಕ್ಷಿಸಿ ನೋಡೋಣ ಎನ್ನುತ ಹಾಗೆಯೇ ಇರಲು ತಂಗಿಯು ಸಾವಕಾಶಮಾಡಿದುದಕ್ಕಾಗಿ ಹಿಡಿಂಬನು ಗರ್ಜನೆ ಮಾಡ್ಲಿ ಸಿಡಿಲವೇಗದಿಂದ ಹತ್ತಿರಕ್ಕೆ ಬಂದು ಭೀಮನನ್ನು-ವಗ ನೋಡಿ ಕಣ್ಣುಗಳಿಂದ ಕೆಂಡದ ಸಮೂಹವೂ ಉರಿಯು ಮೊತ್ತವೂ ಚೆಲ್ಲುತ್ತಿರಲು ನೀನೊಬ್ಬನೇ ನನ್ನಲ್ಲಿ ಹೇಗೆ ಕಾದುತ್ತೀಯೆ; ಈ ಮೈಮರೆತು ಮಲಗಿದವರನ್ನೆಲ್ಲ ಎಚ್ಚರಗೊಳಿಸು, ಇವರಿಷ್ಟು ಜನವನ್ನು ಒಂದೇ ಸಲ ಹೊಸೆದು ಮುಕ್ಕುತ್ತೇನೆ ಎಂದನು. ಸಾಹಸಭೀಮನು ತನ್ನ ಚಡ್ಡಿಯನ್ನು (ನಡುಕಟ್ಟು?) ಬಿಚ್ಚದೆ (ಸಡಲಿಸದೆ) ಉದಾಸೀನನಾಗಿಯೇ ಅವನನ್ನು
Page #182
--------------------------------------------------------------------------
________________
ಸಿಡಿಲು
ಚಂ
ತೃತೀಯಾಶ್ವಾಸಂ | ೧೭೭
ಕಂ11
ಏಂ ಗಾವಿಲನಯೊ ನಿನ್ನಂ ನಂಗುವುದರ್ಕಿವರನೆತ್ತಲುಮ ನರಮಂ | ಸಂಗಳಿಸಲ್ವೇಟ್ಟು ಮಾ
ತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್ ||
ವ|| ಎಂಬುದುಂ ಹಿಡಿಂಬನಾಡಂಬರಂಗೆಯು ತುಂಬುರುಕೊಳ್ಳಿಯತಂಬರಂಬರಂ
ܧ
ಕಡುಪಿನೆ ಪೊತ್ತು ಪಾಸಯನೆಯರೆ ಭೀಮನುಮೊತ್ತಿ ಕಿಟ್ಟು ಬೇ ರೊಡನೆ ಮಹೀಜವೊಂದನಿಡೆಯುಂ ಬಿಡೆ ಪೊಯ್ಕೆಯುಮಾ ಬನಂ ಪಡ। ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನ ಜೊಲ್ಲು ದೈತ್ಯನಂ ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮಯ ಸೀಳು ಬೀಸಿದಂ ||೧೮
ವ|| ಆಗಳಾ ಕಳಕಳಕ್ಕೆ ಮುಲುಂದಿದಯ್ಯರುಮೆತ್ತಿದೇನೆಂದು ಬೆಸಗೊಳೆ ತದ್ವತ್ತಾಂತ ಮಲ್ಲಮನಜೆಪಿ ಹಿಡಿಂಬೆ ಡಂಬವಿಲ್ಲದೆ ಭೀಮಸೇನನೊಳಡಂಬಡಂ ನುಡಿಯೆ ಕೊಂತಿಯುಂ ಧರ್ಮಪುತ್ರನುಮಾಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲೇಡೀಕೆಯಂ ಕೆಯೊಳ್ಳುದ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಲಂಗಿ ಕಲಿಸಿದ ಮರುದುಲುಗಲ ನಡುವೆ ಸುಧಾ
ಕುರಿತು ಹೀಗೆಂದನು. ೧೭. ಎಂತಹ ದಡ್ಡನೊ ನೀನು ? ನಿನ್ನನ್ನು ನುಂಗುವುದಕ್ಕೆ ಇಷ್ಟು ಜನವನ್ನೂ ಎಬ್ಬಿಸಬೇಕೆ? ಜಿಂಕೆಯೊಡನೆ ಯುದ್ಧಮಾಡುವ ರಣರಂಗದಲ್ಲಿ ಗಜವಿರೋಧಿಯಾದ ಸಿಂಹಕ್ಕೆ ಸಹಾಯವನ್ನೂ ಕೊಡಿಸಬೇಕೆ? ಎಂದನು. ವ ಹಿಡಿಂಬನು ಆರ್ಭಟಿಸಿ ತೂಬರಮರದ ಸೌದೆಯ ಕೊಳ್ಳಿಯ ಹಾಗೆ ಆಕಾಶದವರೆಗೆ ನೆಗೆದು-೧೮, ಒಂದು ಹಾಸುಬಂಡೆಯನ್ನು ವೇಗದಿಂದ ಕಿತ್ತು ಹೊತ್ತು ಬರಲು ಭೀಮನೂ ಬಲಾತ್ಕಾರದಿಂದ ಒಂದು ಮರವನ್ನು ಬೇರೊಡನೆಯೇ ಕಿತ್ತು ಅವನ ಮೇಲೆ ಬೀಸುವುದರಿಂದಲೂ ಒಂದೇ ಸಮನಾಗಿ ಹೊಡೆಯುವುದರಿಂದಲೂ ಆ ಕಾಡೆಲ್ಲ ಚೆಲ್ಲಾಪಿಲ್ಲಿಯಾಗುವ ಹಾಗೆ ಕಲ್ಲಿನಿಂದಲೂ ಮರದಿಂದಲೂ ಬಡಿದು ನಿಧಾನವಾಗಿ ಜೋತುಬಿದ್ದ ಆ ರಾಕ್ಷಸನನ್ನು ಹಿಡಿದುಕೊಂಡು ತಾವರೆಯ ದಂಟನ್ನು ಸೀಳುವ ಹಾಗೆ ಒಂದೇ ಸಲ ಸೀಳಿ ಎಸೆದನು. ವ| ಆಗ ಆ ಕಲಕಲಶಬ್ದದಿಂದ ಮೈಮರೆತು ನಿದ್ದೆ ಮಾಡುತ್ತಿದ್ದ ಅಯ್ದು ಜನವೂ ಎಚ್ಚೆತ್ತು ಇದೇನೆಂದು ಪ್ರಶ್ನೆಮಾಡಲು ಆ ವಿಷಯವನ್ನೆಲ್ಲ ತಿಳಿಸಿ ಹಿಡಿಂಬೆಯು ಆಡಂಬರವಿಲ್ಲದೆ ಸರಳವಾಗಿ ಭೀಮನ ವಿಷಯದಲ್ಲಿ ತನ್ನ ಒಪ್ಪಿಗೆಯನ್ನು ತಿಳಿಸಲು ಕುಂತಿಯೂ ಧರ್ಮರಾಜನೂ ಇವಳು ಸಾಮಾನ್ಯಳಾದ ಹೆಂಗಸಲ್ಲ: ರಾಕ್ಷಸಸ್ತೀಯೆಂದು ಭಾವಿಸಬೇಡ, ಅವಳನ್ನು ಸ್ವೀಕರಿಸುವುದೇ (ನಿನಗೆ ಯೋಗ್ಯವಾದ) ಕಾರ್ಯ ಎಂದು ಅವಳಿಗೂ ಭೀಮಸೇನನಿಗೂ ಗಾಂಧರ್ವವಿವಾಹವನ್ನು ಮಾಡಿದರು. ಹಿಡಿಂಬೆಯು ನೀವು ಇಲ್ಲಿರುವುದು ಬೇಡ; ಬೆಟ್ಟದ ಮೇಲೆ ಕರಗೆ ಕಪ್ಪಾಗಿ ಕಾಣುವ ಮರಗಳ ತೋಪಿನ ಮಧ್ಯೆ ಸುಣ್ಣದಿಂದ ಬಿಳುಪಾಗಿ ಮಾಡಲ್ಪಟ್ಟು ಎತ್ತರವೂ ಮನೋಹರವೂ ಆಗಿ ನಿಮ್ಮ ಕಣ್ಣಿಗೆ ಕಾಣುತ್ತಿರುವ
Page #183
--------------------------------------------------------------------------
________________
೧೭೮ / ಪಂಪಭಾರತಂ
ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಣಿರನ್ನೊಡದು ಹಿಡಿಂಬಪುರಮೆಂಬುದಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿನ್ನೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊಲಂ ಪುಗಿಸಿ ತನ್ನಸಂಪತ್ತುಮಂ ಶ್ರೀಯುಮಂ ಮದು ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಮಲ್ಲಮಂ ಕಳೆದು ಭೀಮಸೇನನುಂ ತಾನುಂ
ಕಂ ಎಲ್ಲಿ ಕೊಳನಲ್ಲಿ ತಣ್ಣು!
ಲೆಲ್ಲಿ ಲತಾಭವನಮಲ್ಲಿ ಧಾರಾಗೃಹಮಂ | ತಲ್ಲಿಯೆ ತೊಡರ್ದಲ್ಲಿಯೆ ನಿಂ
ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್ ||
ವ|| ಅಂತು ರಮಿಯಿಸಿ ಪೊಲ್ಲೆ ಮಗುಟ್ಟು ಬಂದೊಡಾಕೆಗಂ ಭೀಮಂಗಂ
ಕಂ।।
ಕಾರಿರುಳ ತಿರುಳ ಬಣ್ಣ
ಕೂರಿದುವನೆ ತೂಳಪ ದಾಡೆ ಮಿಳಿರ್ವುರಿಗೇಸಂ |
೧೯
ಪೇರೊಡಲೆಸೆದಿರೆ ಪುಟ್ಟದ
ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ ||
೨೦
ವ|| ಅಂತು ಪುಟ್ಟುವುದುಮಿಶ್ವರಕಲ್ಪಿತದಿಂ ರಾಕ್ಷಸರ್ಗ ಸದ್ಯೋಗರ್ಭಾಮುಂ ಸದ್ಯಃ ಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರ ಪಾಂಡವರುಮಲ್ಲಿ ಮೂರು ವರುಷವಿರ್ದು ಕೃಷ್ಣಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ
ಆ ಉಪ್ಪರಿಗೆ ಮನೆಗಳು ನಮ್ಮ ಪಟ್ಟಣ (ರಾಜಧಾನಿ), ಅಲ್ಲಿಗೆ ಹೋಗೋಣ ಬನ್ನಿ ಎಂದು ಅವರನ್ನು ಮುಂದುಮಾಡಿಕೊಂಡು ಹೋಗಿ ಮಹಾವೈಭವದಿಂದ ಪುರಪ್ರವೇಶಮಾಡಿದಳು. ತನ್ನ ಐಶ್ವರ್ಯವನ್ನೂ ವೈಭವವನ್ನೂ ಅವರಿಗೆ ಪ್ರಕಾಶಪಡಿಸಿ ಸ್ನಾನ, ಭೋಜನ, ತಾಂಬೂಲ ಗಂಧಾದಿಗಳಿಂದ ದಾರಿನಡೆದ ಬಳಲಿಕೆಗಳನ್ನೆಲ್ಲ ಕಳೆದು ಸತ್ಕರಿಸಿದಳು. ಭೀಮಸೇನನೂ ತಾನು ೧೯. ಎಲ್ಲಿ ಸರೋವರಗಳುಂಟೋ ಎಲ್ಲಿ ತಂಪಾದ ತೋಪುಗಳುಂಟೋ ಎಲ್ಲಿ ಬಳ್ಳಿವಾಡಗಳುಂಟೋ ಎಲ್ಲಿ ಏಕಪ್ರಕಾರವಾಗಿ ನೀರು ಹರಿಯುವ ಮನೆಗಳುಂಟೋ ಅಲ್ಲಲ್ಲಿಯೇ ಸೇರಿಕೊಂಡು ಅಲ್ಲಲ್ಲಿಯೇ ನಿಂತು ಹಿಡಿಂಬೆಯು ವಾಯುಪುತ್ರನಲ್ಲಿರಮಿಸಿದಳು. ೨೦.ಕಗ್ಗತ್ತಲೆಯಿಂದ ಕೂಡಿದ ರಾತ್ರಿಯ ಬಣ್ಣವು ಇಲ್ಲಿ ಮೊನಚಾಯಿತು (ಬಟ್ಟಿಯಿಳಿಸಿದೆ) ಎನ್ನುವ ಹಾಗೆ ತೊಳಗುತ್ತಿರುವ ಕೋರೆಹಲ್ಲೂ ಅಲುಗಾಡುತ್ತಿರುವ ಕೆಂಗೂದಲೂ ದೊಡ್ಡ ದೇಹವೂ ಪ್ರಕಾಶಮಾನವಾಗಿರಲು ಯಾರಿಗಾದರೂ ಭಯವನ್ನುಂಟುಮಾಡು ವಂತಿರುವ ಘಟೋತ್ಕಚನೆಂಬ ಮಗನು ಹುಟ್ಟಿದನು. ವ|| ದೈವಸಂಕಲ್ಪದಿಂದ ರಾಕ್ಷಸರಿಗೆ ಕೂಡಲೇ ಗರ್ಭವನ್ನು ಧರಿಸುವುದೂ ಕೂಡಲೇ ಹತ್ತು ಕೂಡಲೇ ಯೌವನಪ್ರಾಪ್ತಿಯೂ ಉಂಟಾಗುವುದರಿಂದ ಆಗಲೇ ಹದಿನಾರುವರ್ಷದ ಬಾಲಕನಾಗಿರಲು ಪಾಂಡವರು ಅಲ್ಲಿ ಮೂರುವರ್ಷಕಾಲವಿದ್ದು ವೇದವ್ಯಾಸರ ಉಪದೇಶಪ್ರಕಾರ ಏಕಚಕ್ರಪುರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿದರು.
Page #184
--------------------------------------------------------------------------
________________
ತೃತೀಯಾಶ್ವಾಸಂ | ೧೭೯ ಚಂ | ಬರಿಸಿ ಹಿಡಿಂಬೆಯಂ ಕರೆದು ಸಾರ ಘಟೋತ್ಕಚನಂ ಮನೋಮುದಂ
ಬೆರಸೊಸೆದಿರ್ದೆವಿನ್ನವರಮಿನ್ನಿರಲಾಗದು ಪೋಷವೆಂದೊಡಾ | ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ ಆರಿಸಿ ಸುಖಪ್ರಯಾಣದೊಳೆ ಪಾಂಡವರೆಲ್ಟಿದರೇಕಚಕ್ರಮಂ || ೨೧
ರಗಳೆ ಅಲ್ಲಿ ಸೊಗಯಿಸುವ ಕೃತಕಗಿರಿಗಳಿಂ
ಕಲ್ಪತರುಗಳನೆ ಪೋಲ್ವ ಮರಗಳಿಂ ನಂದನಂಗಳೊಳ್ ಸುಚಿವ ಬರಯಿಯಿಂ ಕಂಪು ಕಣಲೆಯ ಪೂತ ಸುರಯಿಯಿಂ ಸುತ್ತಲುಂ ಪರಿವ ಜರಿವೊನಲ್ಗಳಿಂ ದತ್ತಲುಂ ನಲಿವ ಪೊಸ ನವಿಲ್ಗಳಿಂ | ಬೆಳೆದು ಮಗಮಗಿಪ ಗಂಧಶಾಳಿಯಿಂ ದಲ್ಲಿ ಸಚಿವ ಗಿಳಿವಿಂಡಿನೋಳಿಯಿಂ | ಈಂಟುಜಳಧಿಯೆನಿಸಗ ನೀಳ್ಳಿನಿಂ
೨೧. ಹಿಡಿಂಬೆಯನ್ನು ಬರಮಾಡಿಕೊಂಡು ಘಟೋತ್ಕಚನನ್ನೂ ಹತ್ತಿರಕ್ಕೆ ಕರೆದು ಇಲ್ಲಿಯವರೆಗೆ ಸುಖವಾಗಿ ಸಂತೋಷವಾಗಿ ಇಲ್ಲಿ ಇದ್ದೆವು. ಇನ್ನು ಇರಬಾರದು ಹೋಗುತ್ತೇನೆ ಎಂದು ಹೇಳಿ ಅವರು ಆದರದಿಂದ ಕೊಟ್ಟ ಯಾವ ಪದಾರ್ಥವನ್ನೂ ಸ್ವೀಕರಿಸದೆ ಅಲ್ಲಿಯೇ ಬಿಟ್ಟು ಪ್ರೀತಿಯಿಂದ ಬುದ್ಧಿಹೇಳಿ ಸುಖಪ್ರಯಾಣದಿಂದ ಪಾಂಡವರು ಏಕಚಕ್ರಪುರವನ್ನು ಸೇರಿದರು. ೨೨. ಅಲ್ಲಿ ಸುಂದರವಾಗಿ ಕಾಣುವ ಕೃತಕಪರ್ವತಗಳಿಂದಲೂ ಕಲ್ಪವೃಕ್ಷವನ್ನೇ ಹೋಲುವ ಮರಗಳಿಂದಲೂ ನಂದನವನಗಳಲ್ಲಿ ಸುಳಿದಾಡುತ್ತಿರುವ ವಿರಹಿಗಳಿಂದಲೂ ಸುಗಂಧ ಬೀರುತ್ತಿರುವ ಹೂವುಗಳನ್ನು ಬಿಟ್ಟಿರುವ ಸುರಗಿಯ ಮರಗಳಿಂದಲೂ, ಸುತ್ತಲೂ ಹರಿಯುತ್ತಿರುವ ಸುಂದರವಾದ ಕೃತಕಪರ್ವತಗಳು, ಕಲ್ಪವೃಕ್ಷದಂತಿರುವ ಮರಗಳು, ನಂದನವನಗಳಲ್ಲಿ ವಿರಹಿಸುವ ವಿರಹಿಗಳು ಮನೋಹರವಾದ ವಾಸನೆಯಿಂದ ಕೂಡಿದ ಸುರಗಿಯ ಹೂವುಗಳು, ಅಲ್ಲಲ್ಲಿ ಹರಿಯುವ ನದಿಗಳು, ಎಲ್ಲೆಡೆಯಲ್ಲಿಯೂ ಕುಣಿಯುತ್ತಿರುವ ನವಿಲುಗಳು, ಕೊಬ್ಬಿ ಬೆಳೆದಿರುವ ಸುಗಂಧಯುಕ್ತವಾದ ಬತ್ತದ ಗದ್ದೆಗಳು, ಅದಕ್ಕೆ ಸುಳಿಯುತ್ತಿರುವ ಗಿಳಿಗಳ ಹಿಂಡು, ಸಮುದ್ರವನ್ನೂ ಹೀಯಾಳಿಸುವಷ್ಟು ಆಳವಾದ ಕಂದಕ, ಮೇಲೆದ್ದು ಸೊಗಸುವ ಕೋಟೆ, ವಿವಿಧರೀತಿಯ ದೇವಾಲಯಗಳು, ಬಹಳ ಆಸಕ್ತಿಯಿಂದ ನೋಡುತ್ತಿರುವ ದಾರಿಹೋಕರ ನೋಟಗಳು, ಪಂಚರತ್ನಗಳಿಂದ ತುಂಬಿದ ಅಂಗಡಿಗಳು ಕುಬೇರರನ್ನೂ ಮೀರಿಸುವ ವಣಿಕರು- ಇವುಗಳಿಂದ ಶೋಭಾಯಮಾನವಾದ ಏಕಚಕ್ರಪುರವನ್ನು ಅತ್ಯಂತ ಪರಾಕ್ರಮಿಯಾದ ಅರ್ಜುನನು
Page #185
--------------------------------------------------------------------------
________________
೧೮೦ | ಪಂಪಭಾರತ
ನೆಗೆದು ಸೊಗಯಿಸುವ ಕೋಂಟೆಯೊಳಿನಿಂ | ವಿವಿಧ ದೇವ ಗೃಹದಾಟಪಾಟದಿಂ ಮಲಗಿ ಬಟ್ಟೆಯರ ನೋಟ್ಟಿ ನೋಟದಿಂ || ಪಂಚರತುನದೋಳೆ ನಳದ ಪಸರದಿಂ ತೋರಣಂಗಳೊಳೆ ತೊಡರ್ದ ತಿಸರದಿಂ | ಧನದರನ್ನರಿವರೆನಿಪ ಪರದರಿಂ ದೇವರನ್ನರಿವರೆನಿಪ ಬಿರುದರಿ೦ || ನೆಯ ಹೊಗಯಿಷಾ ಯೇಕಚಕ್ರಮಂ ಮೆಚ್ಚಿದಂ ಹರಿಗನಮಿತ ವಿಕ್ರಮಂ | -
೨೨
ವಗ ಅಂತು ಮಚ್ಚಿ ತಮುತಯ್ಯರುಮಿನ್ನವು ಪೊಳಿಲ್ಲಿ ಪೊಲಕ್ಕೆ ನಾಲ್ಕು ಯುಗದೊಳಂ ವಸುಮತಿ ಪದ್ಮನಗರಮೇಕಚಕ್ರಂ ಬಹುಧಾನ್ಯವೆಂಬ ನಾಲ್ಕು ಹೆಸರಾದುದೆಂದು ಮನಂಗೊಂಡು ನೋಡುತ್ತುಂ ಬಂದು ಚತುರ್ವೆದಪಾರಗರ ಮನೆಯ ಮುಂದಣ ಚತುಶ್ಯಾಲೆಯೊಳ್ ಬೀಡು ಬಿಟ್ಟು ಧರಾಮರ ವೇಷದೊಳೊಂದು ವರುಷಮಿರ್ಪನ್ನೆಗಮೊಂದುದಿವಸಂ
ನೋಡಿ ಸಂತೋಷಪಟ್ಟನು. ಝರಿಯ ಪ್ರವಾಹಗಳಿಂದಲೂ ಎಲ್ಲ ಕಡೆಯಲ್ಲಿಯೂ ನಲಿದಾಡುತ್ತಿರುವ ಹೊಸನವಿಲುಗಳಿಂದಲೂ ಕೊಬ್ಬಿ ಬೆಳೆದು ವಾಸನೆಯನ್ನು ಬೀರುತ್ತಿರುವ ಕಂಪು ಬತ್ತದಿಂದಲೂ ಅಲ್ಲಿ ಸಂಚರಿಸುತ್ತಿರುವ ಗಿಳಿಯ ಹಿಂಡುಗಳ ಸಮೂಹದಿಂದಲೂ ಕುಡಿಯುವುದಕ್ಕೆ ಯೋಗ್ಯವಾದ ಸಮುದ್ರವೆನಿಸಿಕೊಂಡಿರುವ ಕಂದಕಗಳ ದೀರ್ಘತೆಯಿಂದಲೂ ಮೇಲಕ್ಕೆ ಹಾರಿ ಕೋಟೆಯ ಸೊಗಸಾಗಿ ಕಾಣುವ ಶ್ರೇಷ್ಠತೆಯಿಂದಲೂ ಬಗೆ ಬಗೆಯ ದೇವಾಲಯ ಕ್ರೀಡಾವಿನೋದಗಳಿಂದಲೂ ದಾರಿಹೋಕರನ್ನು ಕರುಣೆಯಿಂದ ನೋಡುವ ನೋಟದಿಂದಲೂ ಅಯ್ಡು ರೀತಿಯ ರತ್ನಗಳಿಂದ ತುಂಬಿದ ಅಂಗಡಿಗಳಿಂದಲೂ ತೋರಣಗಳಲ್ಲಿ ಸೇರಿಕೊಂಡಿರುವ ಮೂರೆಳೆಯಹಾರಗಳಿಂದಲೂ ಕುಬೇರನಂತಹವರಿವರು ಎನ್ನಿಸಿಕೊಂಡ ವ್ಯಾಪಾರಿ ಗಳಿಂದಲೂ ದೇವರಂತಹರಿವರು ಎನ್ನಿಸಿಕೊಂಡಿರುವ ಬಿರುದಾಂಕಿತರಿಂದಲೂ ಪೂರ್ಣವಾಗಿ ಸೊಗಯಿಸುವ ಏಕಚಕ್ರಪುರವನ್ನು ಎಲ್ಲೆಯಿಲ್ಲದ ಪರಾಕ್ರಮವುಳ್ಳ ಹರಿಗನು (ಅರ್ಜುನ-ಅರಿಕೇಸರಿಯು) ಮೆಚ್ಚಿದನು. ವರ ಹೀಗೆ ಮೆಚ್ಚಿ ತಾವೈದು ಜನಗಳೂ ಇಂತಹ ಪಟ್ಟಣಗಳೇ ಇಲ್ಲ; ಈ ಪಟ್ಟಣಕ್ಕೆ ನಾಲ್ಕು ಯುಗದಲ್ಲಿಯೂ ಕ್ರಮವಾಗಿ ವಸುಮತಿ, ಪದ್ಮನಗರ, ಏಕಚಕ್ರ, ಬಹುಧಾನ್ಯ ಎಂಬ ಹೆಸರುಗಳಾದುವು. ಎಂದು ಸಂತೋಷಪಟ್ಟು ನೋಡುತ್ತ ಬಂದು ನಾಲ್ಕು ವೇದಗಳಲ್ಲಿಯೂ ಪಂಡಿತರಾದವರೊಬ್ಬರ ಮನೆಯ ಮುಂಭಾಗದ ತೊಟ್ಟಿಯಲ್ಲಿ ಬೀಡುಬಿಟ್ಟು ಬ್ರಾಹ್ಮಣವೇಷದಿಂದ ಒಂದು ವರ್ಷ ಕಾಲವಿದ್ದರು. ಆ ಕಾಲದಲ್ಲಿ ಒಂದು ದಿನ
Page #186
--------------------------------------------------------------------------
________________
೨೩
ತೃತೀಯಾಶ್ವಾಸಂ | ೧೮೧ ಕಂtt ತುಂಬಿದ ರಕ್ತತಯಿಂ ನಿಜ
ಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಯ | ಬೃಂಟೋಲ್ ತೇಜಂ ಮಸುಳ್ಳಿನ
ಮಂಬರಮಂ ಬಿಸುಟನಾಗಳಂಬುಜಮಿತ್ರಂ |
ವ|| ಆಗಳ್ - ಸಂಧ್ಯಾವಂದನೆಗೆ ಧರ್ಮಪುತ್ರಾರ್ಜುನ ನಕುಲ ಸಹದೇವರ್ ಪೋದರನ್ನೆಗಮಿತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಷಾಂತದೊಳ್
ಕಂ! ಸಾರೆಯೊಳ ಮಹಾ ದ್ವಿಜ - ನಾರಿಯ ಮಮತಾವಿಪೂರಿತೋರ್ಜಿತ ರವದಿಂ | ಕಾರುಣ್ಯಾಕ್ರಂದನಮನಿ ವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್ ||
: ೨೪ ವ|| ಆದಂ ಕೇಳೇನಾನುಮೊಂದು ಕಾರಣವಾಗಲೆಲ್ಯುಮಿಾ ಪುಯ್ಯಲನಾರಯ್ತು ಬರ್ಪೆನೆಂದು ಭೀಮನನಿರಿಸಿ ಕೊಂತಿ ತಾನೆ ಪೋಗಿಚಂ || ಅಚಿ ಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾ
ಯದು ಕೊರಲ್ ಪಾಯ್ತು ಪರಿದಾಡುವ ಬಾಲಕನಾದ ಶೋಕದಿಂ | ಗಲಗಲ ಕಣ್ಣನೀರ್ ಸುರಿಯ ಚಿಂತಿಪ ಪಾರ್ವನ ಶೋಕದೊಂದು ಪೊಂ ಪುಟಿಯನೆ ನೋಡಿ ನಾಡೆ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಲll ೨೫
೨೩. ತುಂಬಿಕೊಂಡಿರುವ ಕೆಂಪು ಬಣ್ಣದಿಂದ (ಅನುರಕ್ತತೆಯಿಂದ) ತನ್ನ ಬಿಂಬವು ಪಶ್ಚಿಮದಿಕ್ಕನ್ನು ಪ್ರೀತಿಸಿ ಸೇವೆಮಾಡಲು (ಪ್ರೀತಿಸಿ ಮದ್ಯಪಾನವನ್ನು ಮಾಡಲು) ನಾಚಿಕೆಗೆಟ್ಟವನಂತೆ ಕಾಂತಿ ಮಂಕಾಗುತ್ತಿರಲು ಕಮಲಮಿತ್ರನಾದ ಸೂರ್ಯನು ಅಂಬರವನ್ನು (ಆಕಾಶವನ್ನೂ - ಬಟ್ಟೆಯನ್ನೂ) ಬಿಸಾಡಿದನು. (ಸೂರ್ಯನು ಅಸ್ತಮಿಸಿದನು ಎಂಬುದು ಭಾವ). ವ|| ಆಗ ಸಂಧ್ಯಾವಂದನೆಗಾಗಿ ಧರ್ಮರಾಜ ಅರ್ಜುನ ನಕುಲ ಸಹದೇವರು ಹೋದರು. ಅಷ್ಟರಲ್ಲಿ ಈ ಕಡೆ ಬೀಡಿನಲ್ಲಿದ್ದ ಕುಂತಿ ಮತ್ತು ಭೀಮನ ಕಿವಿಗೆ ೨೪, ಸಮೀಪದಲ್ಲಿದ್ದ ಮಹಾಬ್ರಾಹ್ಮಣತಿಯ ಮಮತೆಯಿಂದಲೂ ಕರುಣೆಯಿಂದಲೂ ಕೂಡಿದ ಅಳುವ ಶಬ್ದವು ತಡೆಯಿಲ್ಲದೆ ಇದ್ದಕ್ಕಿದ್ದ ಹಾಗೆ ಬಂದು ಸೋಂಕಿತು. ವ|| ಅದನ್ನೂ ಕೇಳಿ ಇದಕ್ಕೆ ಏನಾದರೂ ಕಾರಣವಿದ್ದೇ ಇರಬೇಕು. ಈ ಪ್ರಲಾಪವನ್ನು ವಿಚಾರಮಾಡಿ ಬರುತ್ತೇನೆ ಎಂದು ಭೀಮನನ್ನು ಅಲ್ಲಿ ಬಿಟ್ಟು ಕುಂತಿಯು ಹೋಗಿ ನೋಡಿದಳು. ೨೫, ಮದುವೆ ಯಿಲ್ಲದ ಅವನ ಮಗಳು ಅಳುತ್ತಿದ್ದಳು, ಅವನ ಹೆಂಡತಿಯು ನೆಲದ ಮೇಲೆ ಹೊರಳಾಡುತ್ತಿದ್ದಳು. ಕೊರಳನ್ನು ತಬ್ಬಿಕೊಂಡು ಅತ್ತು ಓಡಾಡುವ ಬಾಲಕನು ತನಗುಂಟಾದ ದುಃಖದಿಂದ ಗಳಗಳನೆ ಕಣ್ಣೀರನ್ನು ಸುರಿಸುತ್ತಿದ್ದನು. ಚಿಂತಿಸುತ್ತಿದ್ದ ಬ್ರಾಹ್ಮಣನ ದುಃಖಾತಿಶಯವನ್ನು ನೋಡಿ ತನಗೆ ವಿಶೇಷ ಕರುಣೆಯುಂಟಾಗಿರಲು
Page #187
--------------------------------------------------------------------------
________________
೧೮೨ | ಪಂಪಭಾರತಂ
. ವlು ನಿನಗಿಂತೀ ಒರಿದು ಶೋಕಮೆಂತಾದುದೆಂಬುದುಮಾ ಪಾರ್ವಂ ಕೊಂತಿಗಿಂತಂದಂ ಬಕನೆಂಬನೊರ್ವಸುರನೀ ಪೊಬಲ ತೆಂಕಣ ಬೆಟ್ಟದೊಳಿರ್ಪನಾತಂಗೆ ನಿಚ್ಚವೊಂದು ಮನೆಯೋಳೆರಡಮ್ಮವೋಟಿಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂಟುಮನದರ್ಕ ತಕ್ಕ ಪರಿಕರಮುಮನೊರ್ವ ಮಾನಸಂ ಕೊಂಡು ಪೋಪನಂತಾತಂಬೆರಸದಲ್ಲಮಂ ತಿಂದು ತಣಿಯದ ಪಲ್ಲಂ ತಿಂಬನದೊಂದು ದಿವಸ ತಪ್ಪಿದೋಡೀ ಪೂಲನಿತುಮಂ ತಿಂಬಂ ನಾಳಿನ ಬಾರಿಯಮ್ಮ ಮೇಲೆ ಬಂದುದಮ್ಮ ಮನೆಯೊಳಾನುಮಮ್ಮ ಧರ್ಮಪತ್ನಿಯುಂ ಮಗನುಂ ಮಗಳುಮಿಂತೀ ನಾಲ್ವರೆ ಮಾನಸರೆಮ್ಮ ಪಂಡಿತಿಯನೀವೆನೆವೊಡಾಕೆಯಿಂ ಬಳೆಯಮಿಾ ಕೂಸುಗಳಂ ನಡಪುವರಿ ಮಗಳನೀವೆನವೊಡೆ ಕೊಡಗೂಸೆಂಬುದು ಪೆಜರೊಡವೆ ಮಗನನೀನೆನಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಮಕ್ಕುಮದವೆಂದೆನ್ನನೆ ಕುಡಲ್ವುಮಂಬುದುಂ ಕೊಂತಿಯಿಂತಂದಳಕಂ| ನಿಮಿಾ ನಾಲ್ವರೊಳೊರ್ವರು
ಮಿಮಿಡುಕಲೈಡ ಮಕ್ಕಳೊಳರೆನಗಯ್ಯರ್ | ತಮ್ಮೊಳಗೆಸೆವಯ್ಯರೊಳಂ |
ನಾಮಾಣದ ಬಕನ ಬಾರಿಗೊರ್ವನನೀವೆಂ 1 ವ|| ಎಂಬುದುಂ ಪಾರ್ವನಿಂತೆನಲ್ವೇಡ ಮಕ್ಕಳೊಳಾದ ಮೋಹವೆಲ್ಲಾ ಜೀವಕ್ಕಂ ಸಮಾನಮಂಬುದುಂ ನೀಮತಿಯಿರುಸಿರದಿರಿಮದರ್ಕೆ ತಕ್ಕ ಸವಕಟ್ಟಂ ಮಾಡಿಮಂದು ಬಂದು
ಕುಂತಿಯು ದುಃಖದಿಂದ ಬ್ರಾಹ್ಮಣನನ್ನು ಕುರಿತು ಪ್ರಶ್ನಿಸಿದಳು. ವlು ನಿನಗೆ ಇಷ್ಟು ದೊಡ್ಡ ದುಃಖ ಹೇಗಾಯಿತು ಎನ್ನಲು ಬ್ರಾಹ್ಮಣನು ಕುಂತಿಗೆ ಹೀಗೆ ಹೇಳಿದನು - ಬಕನೆಂಬ ರಾಕ್ಷಸನೊಬ್ಬನು ಈ ಪಟ್ಟಣಕ್ಕೆ ದಕ್ಷಿಣದಲ್ಲಿರುವ ಬೆಟ್ಟದಲ್ಲಿದ್ದಾನೆ. ಅವನಿಗೆ ನಿತ್ಯವೂ ಒಂದೊಂದು ಮನೆಯಿಂದ ಎರಡು ಕೋಣಗಳನ್ನು ಹೂಡಿರುವ ಗಾಡಿಯಲ್ಲಿ ತುಂಬಿದ ಹನ್ನೆರಡು ಖಂಡಗದಕ್ಕಿಯನ್ನೂ ಅದಕ್ಕೆ ಬೇಕಾಗುವಷ್ಟು ವ್ಯಂಜನಪದಾರ್ಥಗಳನ್ನೂ ಒಬ್ಬ ಮನುಷ್ಯನು ಕೊಂಡುಹೋಗುತ್ತಾನೆ. (ಬಕನು) ಅವನ ಸಮೇತ ಆ ಪದಾರ್ಥವೆಲ್ಲವನ್ನೂ ತಿಂದರೂ ತೃಪ್ತನಾಗದೆ ಕೋಪದಿಂದ ಹಲ್ಲನ್ನು ಕಡಿಯುತ್ತಾನೆ. ಒಂದು ದಿವಸ ತಪ್ಪಿದರೂ ಈ ಪಟ್ಟಣವೆಲ್ಲವನ್ನೂ ತಿಂದುಹಾಕುತ್ತಾನೆ. ನಾಳೆಯ ಸರದಿ ನನ್ನ ಮೇಲೆ ಬಂದಿದೆ. ನಮ್ಮ ಮನೆಯಲ್ಲಿ ನಾನೂ ನನ್ನ ಹೆಂಡತಿಯೂ ಮಗನೂ ಮಗಳೂ ಈ ನಾಲ್ವೇ ಜನ (ಇರುವವರು). ಹೆಂಡತಿಯನ್ನು ಕೊಡೋಣವೆಂದರೆ ಅವಳು ಹೋದಬಳಿಕ ಈ ಮಕ್ಕಳನ್ನು ಸಾಕುವವರಿಲ್ಲ; ಮಗಳನ್ನು ಕೊಡೋಣವೆಂದರೆ ಕನ್ಯ ಪರರ ವಸ್ತು; ಮಗನನ್ನು ಕೊಡೋಣವೆಂದರೆ ಸಂತತಿಯು ಹರಿದು ಹೋಗುತ್ತದೆ ಮತ್ತು ಪಿಂಡದಾನ ಮಾಡುವವರಿಲ್ಲದಾಗುತ್ತಾರೆ. ಆದುದರಿಂದ ನನ್ನನ್ನೇ ಕೊಡಬೇಕಾಗಿದೆ ಎಂದನು. ಅದಕ್ಕೆ ಕುಂತಿಯು ಹೀಗೆಂದಳು-೨೬. ನಿಮ್ಮ ಈ ನಾಲ್ಕು ಜನಗಳಲ್ಲಿ ಯಾರೂ ಇನ್ನು ಮೇಲೆ ಭಯಪಡಬೇಡಿ. ನನಗೆ ಅಯ್ತು ಜನ ಮಕ್ಕಳಿದ್ದಾರೆ. ಪ್ರಸಿದ್ದರಾದ ಆ ಅಯ್ಯರಲ್ಲಿ ಒಬ್ಬನನ್ನು ನಾನು ಬಕನ ಸರದಿಗೆ ತಪ್ಪದೆ ಕೊಡುತ್ತೇನೆ. ವ| ಅದನ್ನು ಕೇಳಿ ಬ್ರಾಹ್ಮಣನು 'ಹೀಗೆ ಹೇಳಬೇಡ. ಮಕ್ಕಳ ಮೇಲಿನ ಮೋಹವು ಎಲ್ಲ ಜೀವಕ್ಕೂ ಸಮಾನ ಎಂದನು. ಕುಂತಿಯು ನಿಮಗೆ ತಿಳಿಯದು; ಮಾತನಾಡಬೇಡಿ ಅದಕ್ಕೆ
Page #188
--------------------------------------------------------------------------
________________
ತೃತೀಯಾಶ್ಚಾಸಂ | ೧೮೩ * ತದ್ಧ ತಾಂತಮಲ್ಲಮಂ ಭೀಮಸೇನಂಗಳಪಿದೊಡೆ ನಾಳಿನುಣಿಸನನಗೆ ದೊರಕೊಳಿಸಿ ಬಂದುದು ಕರವೆಳ್ಳಿತಾಯ್ತಂದು ನಗುತಿರ್ಪನ್ನೆಗಂ ಮತ್ತಿನ ನಾಲ್ವರುಂ ಬಂದು ತದ್ವತ್ತಾಂತಮಲ್ಲಮಂ ಕೇಳು ನಮಗೀ ಪೋಲಲೊಳೊಂದು ಪರೋಪಕಾರಾರ್ಥಂ ಸಯ್ತಿನಿಂ ದೊರೆಕೊಂಡುದೆಂದಿರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂಕಂll ಓಡೆ ತಮೋಬಳಮಗಿದ
ಇಾಡ ನಿಶಾಚರಬಲಂ ರಥಾಂಗಯುಗಂಗಳ್ || ಕೂಡ ಬಗೆ ಕೂಡೆ ನೇಸಮ್
ಮೂಡಿದುದು ಬಕಂಗೆ ಮಿಲ್ಕು ಮೂಡುವ ತೆಜದಿಂ , .. '೨೮ ವ|| ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೋಯಲೆಂದು ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂಲಂ ಕೆಯ್ಯೋಂಡು ನಿಲ್ಲುದುಂ ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ ಪೋಟಲಿಂ ಬಂಡಿಯನಟ್ಟಿಕೊಂಡು ರಕ್ಕಸನಿರ್ದಡೆಗೆಝಂದುಕಂt ದಾಡೆಗಳನತೆಯೊಳಿಂಬಿಂ
ತೀಡುತ್ತುಂ ತೀವಮಾಗೆ ಬಂಡಿಯ ಬರವಂ | ನೋಡುತ್ತಿರ್ದಾ ಬಕನಂ ನಾಡೆಯ ಅಂತರದ ಕಂಡು ಮುಳಿದಂ ಭೀಮಃ || ೨೮ ಕಡೆಗಣೇಳೆ ರಕ್ಕಸನಂ ನಡೆ ನೋಡಿ ಕೊಲಿ ಸತ್ತಮಪ್ಟಂತಿರೆ ಮುಂ | ಪೊಡವಂ ಕೂಲಿಂ ಬಚಿಯಂ ಪೊಡವೆಂ ರಕ್ಕಸನನೆಂದು ಸಾಹಸಭೀಮಂ . , ೨೯
ಬೇಕಾದ ಸಿದ್ಧತೆಯನ್ನು ಮಾಡಿ ಎಂದು ಹೇಳಿ ಆ ವಿಷಯವೆಲ್ಲವನ್ನೂ ಭೀಮಸೇನನಿಗೆ ತಿಳಿಸಲು ನಾಳೆಯ ಊಟವನ್ನು ನನಗೆ ಸಿದ್ಧಪಡಿಸಿ ಬಂದುದು ಬಹಳ ಒಳ್ಳೆಯ ದಾಯಿತು ಎಂದು ಸಂತೋಷಿಸಿದರು. ಉಳಿದ ನಾಲ್ಕು ಜನರೂ ಬಂದು ಆ ವಿಷಯವೆಲ್ಲವನ್ನೂ ಕೇಳಿ ಈ ಪಟ್ಟಣದಲ್ಲಿ ಇತರರಿಗೆ ಉಪಕಾರಮಾಡುವ ಸಂದರ್ಭವು ಅದೃಷ್ಟದಿಂದ ಪ್ರಾಪ್ತವಾಯಿತು ಎಂದು ರಾತ್ರಿಯೆಲ್ಲ ಬಕನ ವಿಷಯವಾದ ಮಾತನ್ನೇ ಆಡುತ್ತಿದ್ದರು. ಅಷ್ಟರಲ್ಲಿ ೨೭. ಕತ್ತಲೆಯ ರಾಶಿಯು ಓಡಿತು ರಾಕ್ಷಸಸಮೂಹವು ಹೆದರಿ ನಡುಗಿತು. ಚಕ್ರವಾಕಮಿಥುನವು ಕೂಡಿಕೊಳ್ಳಲು ಮನಸ್ಸುಮಾಡಿತು. ಬಕನಿಗೆ ಸಾವು ಹುಟ್ಟುವ ರೀತಿಯಲ್ಲಿ ಸೂರ್ಯ ಹುಟ್ಟಿದನು. ವ|| ಆಗ ಸಾಹಸಭೀಮನು ಪರಾಕ್ರಮವನ್ನು ತೋರಬೇಕೆಂದು ಬಂದು ಬ್ರಾಹ್ಮಣನ ಮನೆಯ ಮುಂಭಾಗದಲ್ಲಿದ್ದ ಗಾಡಿಯ ಅನ್ನವನ್ನು ತೆಗೆದುಕೊಂಡು ನಿಂತನು. ಬ್ರಾಹ್ಮಣಿತಿಯೂ ಬ್ರಾಹ್ಮಣನೂ ಆಶೀರ್ವಾದಮಾಡಿ ತಲೆಯ ಮೇಲೆ ಅಕ್ಷತೆಯನ್ನು ಚೆಲ್ಲಿ ಕಳುಹಿಸಿದರು. ಪಟ್ಟಣದಿಂದ ಬಂಡಿಯನ್ನು ಹೊಡೆದುಕೊಂಡು ರಾಕ್ಷಸನಿದ್ದ ಸ್ಥಳಕ್ಕೆ ಭೀಮನು ಬಂದನು. ೨೮. ತನ್ನ ಕೋರೆಹಲ್ಲುಗಳನ್ನು ಕಲ್ಲಿನ ಮೇಲೆ ಹರಿತವಾಗುವ ಹಾಗೆ ನಿಧಾನವಾಗಿ ಮಸೆಯುತ್ತ ಬಂಡಿಯಬರವನ್ನೇ ಎದಿರುನೋಡುತ್ತಿದ್ದ ಬಕನು ಬಹಳ ದೂರದಿಂದಲೇ ಕಂಡು ರೇಗಿದನು. ೨೯. ಕಡೆಗಣ್ಣಿನಿಂದಲೇ ರಾಕ್ಷಸನನ್ನು ದೃಷ್ಟಿಸಿ ನೋಡಿ ಕೊಲ್ಲುವುದಕ್ಕೆ
Page #189
--------------------------------------------------------------------------
________________
೧೮೪ | ಪಂಪಭಾರತಂ
ವ|| ಅಂತು ತನ್ನ ತಂದ ಬಂಡಿಯ ಕೂಲ್ಲಮಂ ಪತ್ತೆಂಟು ತುತ್ತಿನೊಳೆ ಸಮಯ ತುತ್ತುವುದು ಕಂಡು ರಕ್ಕಸನಿವನ ಪಾಂಗಂ ಮೆಚ್ಚಲಾಯನೆನ್ನುಮಿಂತು ಸಮೆಯ ತುತ್ತುಗುಮೆಂದು ಬಕಂ ಬಕವೇಷದಿಂ ಪಂಗಣ ದಸೆಗೆ ಮೆಲ್ಲನೋಸರಿಸಿ ಬಂದುಕಂti ಎರಡುಂ ಕೆಲನುಮನೆರಡು
ಕರ ಪರಿಘದಿನಡಸಿ ಗುರ್ದಿ ಪಂಪಿಂಗುವನಂ | ಮುರಿದಡಸಿ ಪಿಡಿದು ಘಟ್ಟಿಸಿ
ಪಿರಿಯಣಿಯೊಳ್ ಪೊಯ್ಸನಸಗವೊಯ್ದಂ ಭೀಮಂ | ವ|| ಅಂತು ಪೊಯೊಡೆ ಪೊಡೆಸಂಡಂ ಪೊಯ್ದಂತೆ ಮೇಗೊಗೆದು ಸೆಣಸೆ
ಬಾರಿಯನಿಟ್ಟು ಕೂಡ ಪೋಲಿಲಂ ತವೆ ತಿಂದನನಾರ್ತರಿಲ್ಲಣಂ ಬಾರಿಸಲಾರುಮಿನ್ ಜವನ ಬಾರಿಯೋಳಿಕ್ಕುವನೆಂದು ಪರ್ವ ಭೋ || ರ್ಭೋರನೆ ಬೀಸೆ ತದದನ ಗಹರದಿಂ ಬಿಸುನತರು ಭೂ
ರ್ಭೂರೆನೆ ಕೊಂದನಂಕದ ಬಳಾಧಿಕನಂ ಬಕನಂ ವೃಕೋದರಂII ೩೧ ವ|| ಅಂತು ಕೊಂದು ನೀಲಗಿರಿಯನೆ ಪಿಡಿದೆವಂತೆ ರಕ್ಕಸನ ಕರಿಯ ಪಿರಿಯೊಡಲ ನೆದು ತಂದು ಪೊಲೀಲ ನಡುವಿಕ್ಕಿದಾಗಳ್ ಪೊಬಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಶಕ್ತಿ ಬರುವಂತೆ ಮೊದಲು ಅನ್ನವನ್ನು ಹೊಡೆಯುತ್ತೇನೆ (ತೃಪ್ತಿಯಾಗಿ ತಿನ್ನುತ್ತೇನೆ); ಆಮೇಲೆ ಆ ರಾಕ್ಷಸನನ್ನು ಹೊಡೆಯುತ್ತೇನೆ (ಧ್ವಂಸಮಾಡುತ್ತೇನೆ) ಎಂದು ಸಾಹಸ ಭೀಮನು ವ 11 ತಾನು ತಂದ ಬಂಡಿಯ ಅನ್ನವೆಲ್ಲವನ್ನೂ ಹತ್ತೆಂಟುತುತ್ತುಗಳಲ್ಲಿಯೇ ಮುಗಿಸುವ ಹಾಗೆ ಬಾಯಿಗೆ ತುಂಬಿಕೊಳ್ಳುವುದನ್ನು ರಾಕ್ಷಸನು ನೋಡಿ ಇವನ ರೀತಿಯನ್ನು ನಾನು ಮೆಚ್ಚಲಾರೆ. ನನ್ನನ್ನು ಇವನು ಪೂರ್ಣವಾಗಿ ನುಂಗಿ ಬಿಡುವಂತಿದೆ ಎಂದು ಬಕಪಕ್ಷಿಯ ರೂಪದಿಂದ ಹಿಂದುಗಡೆಗೆ ಸರಿದು ಬಂದು ೩೦. ಅವನ ಎರಡು ಪಕ್ಕಗಳನ್ನೂ ತನ್ನ ಗದೆಯಿಂತಿದ್ದ ಎರಡು ಕೈಗಳಿಂದ ಹಿಡಿದು ಗುದ್ದಿ ಹಿಂತಿರುಗಿದನು. ಹಾಗೆ ಹೋಗುತ್ತಿದ್ದವನನ್ನು ಭೀಮನು ಹಿಂತಿರುಗಿ ಘಟ್ಟಿಯಾಗಿ ಹಿಡಿದುಕೊಂಡು ದೊಡ್ಡ ಬಂಡೆಯ ಮೇಲೆ ಬಡಿದು ಅಗಸನ ಬಡಿತದಂತೆ ಬಡಿದನು. ವ|| ಹಾಗೆ ಹೊಡೆಯಲು, ಬಕನು ಪುಟಚೆಂಡನ್ನು ಹೊಡೆದಂತೆ ಮೇಲಕ್ಕೆ ಹಾರಿದನು. ೩೧. ಭೀಮನು ಸ್ವಲ್ಪ ಅವಕಾಶ ಮಾಡಿಕೊಂಡು ಅಲ್ಪಕಾಲದಲ್ಲಿ ಪಟ್ಟಣವನ್ನೇ ನಾಶಮಾಡಿದ ಇವನನ್ನು ಸ್ವಲ್ಪ ಮಾತ್ರವೂ ತಡೆಯಲು ಶಕ್ತರಾದವರು ಯಾರೂ ಇಲ್ಲ. ಇನ್ನು ಮೇಲೆ ಇವನನ್ನು ನಾನು ಯಮನ ಸರದಿಗೆ ಕಳುಹಿಸುತ್ತೇನೆ ಎಂದು ದೀರ್ಘವಾಗಿ ಭೋರ್ ಎಂದು ಶಬ್ದಮಾಡುತ್ತ ಅವನನ್ನು ಬೀಸಲು ಅವನ ಮುಖವೆಂಬ ಗುಹೆಯಿಂದ ಬಿಸಿರಕ್ತವು ಹರಿಯಿತು. ಪರಾಕ್ರಮಿಯಾದ ಆ ಬಕಾಸುರನನ್ನು ಅತಿಶಯವಾದ ಶಕ್ತಿಯುಳ್ಳ ಭೀಮನು ಕ್ಷಣಮಾತ್ರದಲ್ಲಿ ಕೊಂದುಹಾಕಿದನು. ವ|| ಹಾಗೆ ಕೊಂದು ನೀಲಪರ್ವತವನ್ನೇ ಹಿಡಿದೆಳೆಯುವಂತೆ ರಾಕ್ಷಸನ ಕರಿಯ ಹಿರಿಯ ಶರೀರವನ್ನು ಭೀಮನು ಎಳೆದುತಂದು ಪಟ್ಟಣದ ಮಧ್ಯಭಾಗದಲ್ಲಿ ಇಟ್ಟನು. ಪಟ್ಟಣವೆಲ್ಲ ಆಶ್ಚರ್ಯಪಟ್ಟು ಮಂಗಳವಾದ್ಯಗಳನ್ನು ಬಾಜನ
Page #190
--------------------------------------------------------------------------
________________
ತೃತೀಯಾಶ್ವಾಸಂ | ೧೮೫ ಪಗಳಂ ಪೊಯ್ಲಿ ಸಾಹಸಭೀಮನ ಸಾಹಸಮನಳವಲ್ಲದೆ ಪೊಗಟ್ಟು ತಮಾಳನುಮನಿಷ್ಟ ದೈವಮುಮಂ ಕೊಂಡಾಡುವಂತಯ್ಯರುಮಂ ಕೊಂಡಾಡ ಕೆಲವು ದಿವಸಮಿರ್ಪನ್ನೆಗಮೊಂದು ದಿವಸಮಶಿಶಿರಕಿರಣನಪರಜಲನಿಧಿತಟನಿಕಟವರ್ತಿಯಾದನಾಗಳೊರ್ವ ಪಾರ್ವ೦ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣುಚಲೆಡವೇಡೆ ತನಗವರ್ ಪಾಸಲೊಟ್ಟ ಕೃಷ್ಣಾಜಿನನಮಂ ಪಾಸಿ ಪಟ್ಟಿರ್ದನಂ ಧರ್ಮಪುತ್ರನಾವ ನಾಡಿಂ ಬಂದಿರೆಲ್ಲಿಗೆ ಪೊದಪಿರೆಂದೂಡುತ್ತರಾಪಥದೆ ಹಸ್ತಿನಪುರದಿಂ ಬಂದವೆಂದೂಡಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನ ರಿರ್ಪಂದವಾವುದೆಂದು- ಬೆಸಗೊಳೆಮ ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹೋಗ್ರಾಗ್ನಿಯಾ
ನನದೊಳ್ ಮತ್ತಿದರೆನ್ನ ಪುಣ್ಯಮಟೆಯರ್ ವೇಮಾಜ(ಗಿರಿನ್ನಾರೂ ಬೇ | ರನೆ ಕಿತ್ತಿಕ್ಕಿದನೀಗಳಾಯ್ತು ಧರೆ ನಿರ್ದಾಯಾದಮಂದಾ ಸುಯೋ
ಧನನಾಳುತ್ತಿರೆ ಸಂದ ಹಸಿನಪುರಂ ಸಂತಂ ಬಸಂತಂ ಕರಂ || ೩೨
ವlು ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪಸರ ಪಾಂಚಾಳದೇಶದರಸಂ ದ್ರುಪದನೆಂಬಂ ದ್ರೋಣನೂಳಾದ ಪರಿಭವಮಂ ನನದಾತನಂ ಕೊಲ್ವಗ್ರನೊರ್ವ ಮಗನುಮಂ * ವಿಕ್ರಮಾರ್ಜನಂಗೆ ಪೆಂಡಿತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರನೆಂದು ಪೂಣ್ಣು ಪೋಗಿ
ಮಾಡಿಸಿ ಸಾಹಸಭೀಮನ ಪರಾಕ್ರಮವನ್ನು ಅಳತೆಯಿಲ್ಲದಷ್ಟು ಹೊಗಳಿ ತಮ್ಮ ಸ್ವಾಮಿಯನ್ನು ಇಷ್ಟದೈವವನ್ನು ಕೊಂಡಾಡುವಂತೆ ಅಯ್ದು ಜನರನ್ನೂ ಕೊಂಡಾಡಿದರು. ಅಲ್ಲಿ ಪಾಂಡವರು ಕೆಲವು ದಿನವಿರುವಷ್ಟರಲ್ಲಿ ಒಂದು ದಿನ ಸೂರ್ಯಾಸ್ತಸಮಯದಲ್ಲಿ ಒಬ್ಬ ಬ್ರಾಹ್ಮಣನು ವಿಶೇಷವಾಗಿ ಹರಿದು ಹೋದ ಬಟ್ಟೆಯಿಂದ ಮುಚ್ಚಿದ ಸೊಂಟ ಪ್ರದೇಶವನ್ನುಳ್ಳವನಾಗಿ ಬಂದು ಮಲಗಲು ಸ್ಥಳವನ್ನು ಕೇಳಿದನು. ಅವರು ಕೊಟ್ಟ ಜಿಂಕೆಯ ಚರ್ಮವನ್ನೇ ಹಾಸಿಕೊಂಡು ಮಲಗಿದ್ದ ಅವನನ್ನು ಧರ್ಮರಾಜನು ಯಾವ ನಾಡಿನಿಂದ ಬಂದಿರಿ, ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದನು. ಅವನು ಉತ್ತರಾಪಥದ ಹಸ್ತಿನಾಪಟ್ಟಣದಿಂದ ಬಂದೆವು ಎಂದನು. ಧರ್ಮರಾಜನು ಅಲ್ಲಿ ಪಾಂಡವರ ಸುದ್ದಿಯೇನು? ಧೃತರಾಷ್ಟ್ರ ದುರ್ಯೊಧನರಿರುವ ರೀತಿ ಯಾವುದು ಎಂದು ಕೇಳಿದನು. ೩೨. ಅದಕ್ಕೆ ಅವನು ನನ್ನ ಶತ್ರುಗಳಾದ ಪಾಂಡುಸುತರು ಅರಗಿನ ಮನೆಯ ಭಯಂಕರವಾದ ಬೆಂಕಿಯ ಮುಖದಲ್ಲಿ ನಾಶವಾದರು. ಇದು ನನ್ನ ಅದೃಷ್ಟ, ಅಸಾಧ್ಯರಾದವರೂ ಮೋಸಹೋಗದಿರುವವರು ಯಾರಿದ್ದಾರೆ ಎನ್ನುವ ಹಾಗೆ ಈ ವೈರಿಗಳನ್ನು ಬೇರುಸಹಿತ ಕಿತ್ತುಹಾಕಿದ್ದೇನೆ, ಈಗ ಈ ರಾಜ್ಯವು ದಾಯಾದಿಗಳಿಲ್ಲದ ಹಾಗಾಯಿತು- ಎಂದು ದುರ್ಯೊಧನನು ರಾಜ್ಯಭಾರಮಾಡುತ್ತಿದ್ದಾನೆ, ಪ್ರಸಿದ್ಧವಾದ ಹಸ್ತಿನಪುರವು ಯಾವಾಗಲೂ ಪೂರ್ಣವಾಗಿ ಸಂತೋಷಭರಿತವಾಗಿದೆ ಎಂದನು. ವ|| ಅಷ್ಟೇ ಅಲ್ಲದೆ ಯಜ್ಞಸೇನನೆಂಬ ಮೊದಲಿನ ಹೆಸರಿನಿಂದ ಕೂಡಿದ ಪಾಂಚಾಲದೇಶದ ರಾಜನಾದ ದ್ರುಪದನೆಂಬುವನು ದ್ರೋಣನಿಂದಾದ ಸೋಲನ್ನು ನೆನೆಸಿಕೊಂಡು ಅವನನ್ನು ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದೇ ಇರುವುದಿಲ್ಲ ಎಂದು ಪ್ರತಿಜ್ಞೆ
Page #191
--------------------------------------------------------------------------
________________
೧೮೬ / ಪಂಪಭಾರತಂ
ಪಯೋವ್ರತನೆಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಠಿಗೆಯೇ ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ ಕಿಬಾಳುಮತ್ತಪರಮುಮಭೇದ ಕವಚಮುಂಬೆರಸೊಗೆದ ಧೃಷ್ಟದ್ಯುಮ್ನನೆಂಬ ಮಗನುಮಂ ಜ್ವಾಳಾಮಾಳಿನಿಯೊಗೆವಂತೊಗೆದ ಕೃಷ್ಣಯೆಂಬ ಮಗಳುಮಂ ಪಡೆದನಾ ಹೋಮಾಗ್ನಿಯೊಳ್ ಪುಟ್ಟದೊಂದು ದಿವ್ಯ ಚಾಪಮುಮಣ್ಣು ದಿವ್ಯ ಶರಮೊಳವಾ ಬಿಲ್ಲನೇಶಿಸಿ ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತದ ಮಾನನೆಚ್ಚನು ಮಾಕೆಗೆ ಗಂಡನಕ್ಕುಮಂದಾದೇಶಮಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದ ಪೆರಿಲ್ಲೆಂಬರದಹಿಂದಿನ್ನುಂ ಪಾಂಡವರೊಳರೆಂಬ ಮಾತುಗಳು ಬುದ್ಧಿಯೊಡೆಯರಾರಾನುಂ ನುಡಿವ ದ್ರುಪದನುಮಾಗಳಾ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳುಳ್ಳರಸು ಮಕ್ಕಳೆಲ್ಲರ್ಗಂ ಬಟೆಯನಟ್ಟಿದೊಡೆ ದುರ್ಯೋಧನಾದಿಗಳ ಮೊದಲಾದನೇಕ ದೇಶಾಧೀಶ್ವರರೆಲ್ಲಂ ಛತ್ರವತಿಯೆಂಬುದು ದ್ರುಪದನ ಪೋಲಾ ಪೊಲೈ ವಂದಿರ್ದರಾನಲ್ಲಿಂದಂ ಬಂದನೆಂದು ಪೇಟೆ ತನ್ನ ತಾಂತಮೆಲ್ಲಮಂ ಕೇಳು ತಮ್ಮೊಳಾಳೋಚಿಸಿ
ಮ||
ತಲೆಯೊಳ್ ಸೀರೆಯನಿಕ್ಕಿ ಕಮ್ಮನೆನಿತಂ ಪೂಣ್ರ್ಪಮುಗ್ರಾರಿ ವಂ ಶ ಲತಾವಲ್ಲರಿಗಳ ದಾವಶಿಖವೊಲ್ ಮೆಯೋತಿ ತದೌಪದೀ | ಲಲನಾವ್ಯಾಜದಿನೀಗಳೊಂದೆ ಪೊಲೊಳ್ ಸಂದಿರ್ದ ಭಾಸ್ವತ್ತುಹ ದಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗ ಮಂ ತೋರುವಂ ||೩೩ ಮಾಡಿದನು. ಪಯೋವ್ರತನೆಂಬ ದೇವಋಷಿಯಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದನು. ಹೋಮಕುಂಡದಲ್ಲಿ ಧಗಧಗಿಸಿ ಉರಿಯುವ ಜ್ವಾಲೆಗಳ ಸಮೂಹದಲ್ಲಿ ಒರೆಯಿಂದ ಹೊರಸೆಳೆದ ಕತ್ತಿಯನ್ನೂ ಗುರಾಣಿಯನ್ನೂ (ಭೇದಿಸಲಾಗದ) ಒಡೆಯಲಾಗದ ಕವಚವನ್ನೂ ಕೂಡಿಕೊಂಡು ಧೃಷ್ಟದ್ಯುಮ್ನನೆಂಬ ಮಗನೂ ಜ್ವಾಲಾಮಾಲಿನೀದೇವಿಯಂತಿರುವ ಕೃಷ್ಣಯೆಂಬ ಮಗಳೂ ಹುಟ್ಟಿದರು. ಆ ಹೋಮಾಗ್ನಿಯಲ್ಲಿಯೇ ಒಂದು ಶ್ರೇಷ್ಠವಾದ ಬಿಲ್ಲೂ ಅಯ್ದು ಶ್ರೇಷ್ಠವಾದ ಬಾಣಗಳೂ ಉದ್ಭವಿಸಿದವು. ಆ ಬಿಲ್ಲನ್ನು ಹೆದೆಯೇರಿಸಿ ಆ ಬಾಣಗಳಿಂದ ಆತನ ಮನೆಯ ಮುಂದೆ ಆಕಾಶದಲ್ಲಿ ನಲಿನಲಿದು ಆಡುವ ಯಂತ್ರದ ಮೀನನ್ನು ಹೊಡೆಯುವವನು ಆಕೆಗೆ ಗಂಡನಾಗುತ್ತಾನೆ ಎಂಬುದು (ಆದೇಶ) ನಿಯಮ. ಅಂತಹ ಸಾಹಸ ಪುರುಷನು ವಿಕ್ರಮಾರ್ಜನನಲ್ಲದೆ ಬೇರೆಯವರಿಲ್ಲ ಎನ್ನುವುದರಿಂದ ಪಾಂಡವರು ಇನ್ನೂ ಇದ್ದಾರೆ ಎಂಬ ಮಾತುಗಳನ್ನು ಬುದ್ಧಿವಂತರೆಲ್ಲರೂ ಹೇಳುತ್ತಿದ್ದಾರೆ. ಈಗ ದ್ರುಪದನು ಆ ಕನ್ಯಗೆ ಸ್ವಯಂವರವನ್ನು ಮಾಡಬೇಕೆಂದು ಭೂಮಿಯಲ್ಲಿರುವ ಎಲ್ಲ ರಾಜಕುಮಾರರಿಗೂ ದೂತರ ಮೂಲಕ ಸಮಾಚಾರವನ್ನು ಕಳುಹಿಸಿದ್ದಾನೆ. ದುರ್ಯೋಧನನೇ ಮೊದಲಾದ ಅನೇಕ ರಾಜರುಗಳೆಲ್ಲ ದ್ರುಪದನ ಆ ಛತ್ರವತಿ ಎಂಬ ಪಟ್ಟಣಕ್ಕೆ ಬಂದಿದ್ದಾರೆ. ನಾನು ಅಲ್ಲಿಂದಲೇ ಬಂದೆ ಎಂದನು. ಆ ವೃತ್ತಾಂತವನ್ನೆಲ್ಲ ಕೇಳಿ ಪಾಂಡವರು ತಮ್ಮಲ್ಲಿ ಆಲೋಚಿಸಿದರು ೩೩. ಅರ್ಜುನ, ನಾವು ತಲೆಯ ಮೇಲೆ ಬಟ್ಟೆಯನ್ನೂ ಹಾಕಿಕೊಂಡು ಎಷ್ಟು ಕಾಲ ಸುಮ್ಮನೆ ಪ್ರತಿಜ್ಞೆ ಮಾಡಿಕೊಂಡಿರುವುದು? ಭಯಂಕರವಾದ ಶತ್ರುಗಳೆಂಬ ಬಳ್ಳಿಯ ಕುಡಿಗಳಿಗೆ ಕಾಡುಗಿಚ್ಚಿನಂತೆ ನಮ್ಮನ್ನು ಪ್ರಕಟಿಸಿಕೊಂಡು ಆ ದೌಪದೀಕನೆಯ ನೆಪದಿಂದ ಈಗ
Page #192
--------------------------------------------------------------------------
________________
- ತೃತೀಯಾಶ್ಚಾಸಂ | ೧೮೭ ವ|| ಎಂದು ನಿಶ್ಚಯಿಸಿ ತಮ್ಮ ಬಗೆದ ಬಗೆಯೊಳ್ ಪರಾಶರಮುನೀಂದ್ರೋಪದೇಶ ಮೊಡಂಬಡೆ ಪಾಂಡವರೇಕಚಕ್ರದಿಂ ಪೊಯಮಟ್ಟು ಶಕುನಗಳೆಲ್ಲಮುತ್ತರೋತ್ತರಂ ತಿರ್ದುವಿನ ಮುತ್ತರಾಭಿಮುಖರಾಗಿ ಪಯಣಂಬೋಗಿ ಕೆಲವಾನುಂ ದಿವಸಕ್ಕೆ ಯಮುನಾನದೀತಟನಿಕಟವರ್ತಿ ಯಪ್ಪಂಗದಪರ್ಣವೆಂಬಡವಿಯೊಳಗನೆ ಬರೆವರೆ ದಿನಕರಬಂಬಾಂಬುಜಮಂಬರಸರೋವರದಿಂ ಪತ್ತುವಿಡುವುದುಂ ಕವಿದ ಕತ್ತಲೆಯಗುರ್ವಾಗೆ ತಮೋಪಶಮನನಿಮಿತ್ತಮುರಿವ ಕೊಳ್ಳಿಯಂ ಪಿಡಿದು ಜಗುನೆಯಂ ಪಾಯ್ದಾಗಳಾ ಬನಮನಾಳ್ವ ಕುಬೇರನಾಯಕನಂಗದಪರ್ಣನೆಂಬ ಗಂಧರ್ವಂ ಜಲಕ್ರೀಡೆಯಾಡುತಿರ್ದನಿಬರಿಂ ಮುಂದೆ ಬರ್ಪ ವಿಕ್ರಮಾರ್ಜುನನ ಪಾದಾಭಿಘಾತದೊಳುಚ್ಚಳಿಸುವ ನೀರ ಸಪ್ಪುಳುಮಂ ಕೇಳು ಪಿಡಿದ ಕೊಳ್ಳಿಯ ಬೆಳಗುಮಂ ಕಂಡು ಬೆಳಗಂ ಕಂಡ ಪತಂಗದಂತೆ ಮಾಣದೆಯಂದುಮll ಬನಮನಾಳ ಬನಂ ನಿಶಾಬಲಮಿದಿಂತಸದಲಂ ಧೂರ್ತನಯ್
ನಿನಗೀ ಪೊಬ್ರಳಿತ್ತ ಬರ್ಪದಟನಿಂತಾರಿತ್ತರೆಂದಾಂತೊಡಾ | ತನನಾ ಕೊಳ್ಳಿಯೊಳಿಟೊಡಂತದು ಲಯಾಂತೋಗ್ರಾಗ್ನಿಯಂತು ದನಸುಂ ಮಾಣದೆ ಬಾಗಿದಂ ಪದಯುಗಕ್ಕಾರೂಢಸರ್ವಜ್ಞನಾ || ೩೪
ವ|| ಅಂತು ತಾಗಿ ಬಾಗಿದಂತಾಗಿ ಗಂಧರ್ವಂ ಕೊಂತಿವೆರಸಲುವರುಮಂ ತನ್ನ ಬೀಡಿಂಗೊಡಗೊಂಡೊಯ್ದತಿ ಪ್ರೀತಿಯಿಂ ಬಿರ್ದನಿಕ್ಕಿಒಂದೇ ಪಟ್ಟಣದಲ್ಲಿ ಸೇರಿರುವ ಪ್ರತಾಪಶಾಲಿಗಳಾದ ಮಿತ್ರವರ್ಗಕ್ಕೂ ಶತ್ರುವರ್ಗಕ್ಕೂ - ನಮ್ಮ ಬಾಣಕೌಶಲವನ್ನು ತೋರಿಸೋಣ ವು ಎಂದು ನಿಶ್ಚಯಿಸಿಕೊಂಡು ತಾವು ಯೋಚಿಸಿದ ರೀತಿಯಲ್ಲಿಯೇ ವ್ಯಾಸಮಹರ್ಷಿಗಳ ಉಪದೇಶವೂ ಹೊಂದಿಕೊಳ್ಳಲು ಪಾಂಡವರು ಏಕಚಕ್ರಪುರದಿಂದ ಹೊರಟರು. ಶಕುನಗಳೆಲ್ಲ ತಮ್ಮ ಅಭಿವೃದ್ಧಿಯನ್ನೇ ಸೂಚಿಸಿದುವು. ಉತ್ತರದಿಕ್ಕಿಗೆ ಅಭಿಮುಖವಾಗಿ ಪ್ರಯಾಣಮಾಡಿ ಕೆಲವು ದಿವಸವಾದ ಮೇಲೆ ಯಮುನಾನದಿಯ ದಡಕ್ಕೆ ಹತ್ತಿರವಿರುವ ಅಂಗದಪರ್ಣವೆಂಬ ಕಾಡನ್ನು ಪ್ರವೇಶಿಸಿದರು. ಸೂರ್ಯಾಸ್ತವಾಯಿತು. ಕವಿದ ಕತ್ತಲೆಯು ಅತಿಶಯವಾಗಲು ಕತ್ತಲೆಯನ್ನು ಹೋಗಲಾಡಿಸುವುದಕ್ಕಾಗಿ ಉರಿಯುವ ಕೊಳ್ಳಿಯನ್ನು ಹಿಡಿದು ಯಮುನಾನದಿಯನ್ನು ಹಾಯ್ದು ಹೋದರು. ಆ ಕಾಡನ್ನು ಆಳುತ್ತಿದ್ದ ಕುಬೇರನಾಯಕ ನಾಗಿದ್ದ ಅಂಗದಪರ್ಣನೆಂಬ ಹೆಸರಿನ ಗಂಧರ್ವನು ನೀರಾಟವಾಡುತ್ತಿದ್ದನು. ಎಲ್ಲರಿಗಿಂತ ಮುಂದೆ ಬರುತ್ತಿದ್ದ ವಿಕ್ರಮಾರ್ಜುನನ ಕಾಲಿನ ತುಳಿತದಿಂದ ಮೇಲಕ್ಕೆ ಹಾರುವ ನೀರಿನ ಶಬ್ದವನ್ನು ಕೇಳಿ ಅವರು ಹಿಡಿದಿದ್ದ ಕೊಳ್ಳಿಯ ಬೆಳಗನ್ನು ನೋಡಿ ಬೆಳಕನ್ನು ಕಂಡ ಪತಂಗದ ಹುಳುವಿನಂತೆ ತಡೆಯದೆ ಅವರ ಮೇಲೆ ಬಿದ್ದನು. ೩೪. ಈ ಕಾಡು ನಾನು ಆಳುವ ಕಾಡು. ಈ ರಾಕ್ಷಸ ಬಲವಿದು ನನ್ನ ಸೈನ್ಯ, ನೀನು ದುಷ್ಟನಾಗಿದ್ದೀಯೆ; ಈ ಹೊತ್ತಿನಲ್ಲಿ ಹೀಗೆ ಬರುವಷ್ಟು ಪರಾಕ್ರಮವನ್ನು ನಿನಗೆ ಕೊಟ್ಟವರಾರು ಎಂದು ಪ್ರತಿಭಟಿಸಿದನು. ಅರ್ಜುನನು ಅವನನ್ನು ಆ ಕೊಳ್ಳಿಯಿಂದಲೇ ಹೊಡೆದನು. ಅದು ಪ್ರಳಯಕಾಲದ ಘೋರವಾದ ಬೆಂಕಿಯಂತೆ ಸುಟ್ಟಿತು. ಅವನು ಸ್ವಲ್ಪವೂ ಸಾವಕಾಶ ಮಾಡದೆ ಬಂದು ಆರೂಢಸರ್ವಜ್ಞನಾದ ಅರ್ಜುನನ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು. ವ ಹಾಗೆ ಪ್ರತಿಭಟಿಸಿ ಅಧೀನನಾಗಿ ಗಂಧರ್ವನು ಕುಂತಿಯಿಂದ ಕೂಡಿದ ಆರು ಜನವನ್ನೂ ತನ್ನ ಬಿಡಿಗೆ ಜೊತೆಯಲ್ಲಿ
Page #193
--------------------------------------------------------------------------
________________
೧೮೮ / ಪಂಪಭಾರತಂ ಕಂ|| ಇದು ನಿನ್ನ ಕೊಟ್ಟ ತಲೆ ನಿನ
ಗಿದನಿತ್ತಪನೆಂದು ನುಡಿಯಲಾಗದು ಮಾರ್ಕೊ | ಇದಿರೆಂದು ಗಿಳಿಯ ಬಣ್ಣದ ಕುದುರೆಯನಯೂರನಿತ್ತನಂಗದಪರ್ಣ೦ ||
ವll ಇತೊಡಿವನ್ನೆಗಮೆಮಗಾಗಿರ್ಕೆಂದು ಪ್ರಿಯಂ ನುಡಿದಂಗದಪರ್ಣನನಿರಟ್ಟು ಮಾರ್ತಾಂಡೋದಯಮ ನಿಜೋದಯಮಾಗೆ ಪಯಣಂಬೋಗಿಕಂll ಪುಣ್ಯನದೀನದ ನಗ [ಲಾ]
ವಣ್ಯ ವಿಭೂಷಣೆಯನೊಲ್ಲು ನೋಡುತ್ತುಮಿಳಾ | ಪುಣ್ಯ ಸ್ತ್ರೀಯಂ ಸಂಚಿತ ಪುಣ್ಯರ್ ಪಾಂಚಾಲದೇಶಮಂ ಪುಗುಂದರ್ ||
೩೬ ವ|| ಅಂತು ತದ್ವಿಷಯವಿಳಾಸಿನಿಗೆ ಹಿಡಿದ ಕನಕಚ್ಚತ್ರದಂತ ಸೊಗಯಿಸುವ ಛತ್ರವತೀಪುರದ ಪೊಜವೊಲಲನೆಯ್ತರ್ಪಾಗಳ
ಉ 1 ಪಾಡುವ ತುಂಬಿ ಕೊಡುವ ಪುಟೆಲ್ ನಡಪಾಡುವ ರಾಜಹಂಸ ಬಂ
ದಾಡುವ ತೊಂಡುವುರುಳಿ ತೀಡುವ ತಂಬೆರಲೊಲ್ಲು ನಲ್ಲರೊಳ್ | ಕೂಡುವ ನಲ್ಲರಾರೆರ್ದಗಮಾರ ಮನಕ್ತಮನಂಗರಾಗಮಂ ಮಾಡೆ ಮನಕ್ಕೆ ಬಂದುವರಿಕೇಸರಿಗಲ್ಲಿಯ ನಂದನಾಳಿಗಳ್ | ೩೭
ಕರೆದುಕೊಂಡು ಹೋಗಿ ಪ್ರೀತಿಯಿಂದ ಆತಿಥ್ಯವನ್ನು ಮಾಡಿದನು. ಅಲ್ಲದೆ ೩೫. ಇದು ನೀನು ಕೊಟ್ಟ (ಬದುಕಿಸಿದ-ಉಳಿಸಿದ) ತಲೆ ಇದನ್ನು ನಿನಗೆ ಪ್ರತಿಯಾಗಿ ಕೊಡುತ್ತಿದ್ದೇನೆಂದು ಹೇಳಕೂಡದು. ಪ್ರತಿಮಾತಾಡಬೇಡ ಎಂದು ಅಂಗದಪರ್ಣನು ಗಿಳಿಯ ಬಣ್ಣದ ಅಯೂರು ಕುದುರೆಗಳನ್ನು ಅರ್ಜುನನಿಗೆ ಕೊಟ್ಟನು. ವll ನಾವು ಅಪೇಕ್ಷಿಸುವವರೆಗೆ ಇವು ನಮ್ಮದಾಗಿ ನಿಮ್ಮಲ್ಲಿರಲಿ ಎಂದು ಪ್ರಿಯವಾದ ಮಾತನಾಡಿ ಅಂಗದಪರ್ಣನನ್ನು ಅಲ್ಲಿರಲು ಹೇಳಿ ಸೂರ್ಯೊದಯವೇ ತಮ್ಮ ಅಭಿವೃದ್ಧಿ ಸೂಚಕವಾಗಿರಲು ಪಾಂಡವರು ಮುಂದೆ ಪ್ರಯಾಣ ಮಾಡಿದರು. ೩೬. ಪವಿತ್ರವಾದ ನದಿ, ನದ, ನಗರ, ಅರಣ್ಯಗಳಿಂದ ಅಲಂಕೃತವೂ ಪುಣ್ಯಭೂಮಿಯೂ ಆದ ಆ ಪ್ರದೇಶಗಳನ್ನು ಪ್ರೀತಿಯಿಂದ ನೋಡುತ್ತ ಪುಣ್ಯಶಾಲಿಗಳಾದ ಪಾಂಡವರು ಪಾಂಚಾಲ ದೇಶವನ್ನು ಪ್ರವೇಶಮಾಡಿದರು. ವ|| ಆ ದೇಶವೆಂಬ ಸ್ತ್ರೀಗೆ ಹಿಡಿದ ಚಿನ್ನದ ಕೊಡೆಯಂತೆ ಸೌಂದರ್ಯದಿಂದ ಕೂಡಿದ ಛತ್ರವತಿಪುರದ ಹೊರಪಟ್ಟಣ (ಪ್ರದೇಶವನ್ನು ಬಂದು ಸೇರಿದರು. ೩೭. ಅಲ್ಲಿ ಹಾಡುತ್ತಿರುವ ದುಂಬಿ, ತಂಪಾಗಿರುವ ತೋಪು, ನಡೆದಾಡುತ್ತಿರುವ ರಾಜಸಿಂಹ, ಬಂದು ಮಾತನಾಡುವ ತುಂಟಹೆಣ್ಣು ಗಿಳಿ, ಬೀಸುವ ತೆಂಕಣಗಾಳಿ, ಪ್ರೇಯಸಿಯರಲ್ಲಿ ಕೂಡುವ ಪ್ರಿಯರು - ಇವು ಯಾರ ಹೃದಯಕ್ಕೂ ಯಾರ ಮನಸ್ಸಿಗೂ ಕಾಮೋದ್ರೇಕವನ್ನುಂಟುಮಾಡುತ್ತಿರಲು ಅಲ್ಲಿಯ
Page #194
--------------------------------------------------------------------------
________________
ತೃತೀಯಾಶ್ವಾಸಂ | ೧೮೯ ವ|| ಅಂತು ನೋಡುತ್ತುಂ ಬರೆವರೆಚಂ|| ಮದಗಜಬೃಂಹಿತಧ್ವನಿ ತುರಂಗಮಹಷಿತಭೂಷಮಾದಮೊ
ರ್ಮೊದಲೆ ಪಯೋಧಿಮಂಥನಮಹಾರವಮಂ ಗೆಲೆ ತಳ ಬಣ್ಣವ | ಇದ ಗುಡಿ ತೂಂಬೆಗೊಂಚಲೆಲೆಯಿಕ್ಕಿದ ಕಾವಣಮಲ್ಲಿಯುಂ ಪೊದ
ದಎರ ಕಣ್ಣ ಕಂಡುವಖಿಳಾವನಿಪಾಳರ ಬಿಟ್ಟ ಬೀಡುಗಳ್ || ೩೮ ವ|| ಅಂತು ನೋಡುತ್ತುಂ ಮೆಚ್ಚುತ್ತುಂ ಬರೆವರೆಉ || ಈ ತ್ರಿಜಗಂಗಳೊಳ್ ನೆಗಟ್ಟ ಪೆಂಡಿರುಮಂ ಗೆಲೆವಂದ ಪದಿನೀ
ಪತ್ರವಿಚಿತ್ರನೇತ್ರಗೆ ಸಯಂಬರದೊಳ್ ವರನಷ್ಟವಾದೊಡೀ | ಧಾತ್ರಿಯನಾಮಾಮ ವಲಮೆಂದು ತೆರಳ ಸಮಸ್ತ ರಾಜಕ
ಚ್ಛತ್ರದಿನಂದು ಛತ್ರವತಿಯೆಂಬಭಿಧಾನಮನಾಳುದಾ ಪೋಲಿ || ೩೯
ವ!! ಅಂತು ಸೊಗಯಿಸುವ ಪೋಬಲಂ ಪೊಕ್ಕೆಲ್ಲಿಯುಂ ಬೀಡು ಬಿಡಲೆಡೆವಡೆಯ ದೊಂದು ಭಾರ್ಗವಪರ್ಣಶಾಲೆಯೊಳಡಮಾಡಿಕೊಂಡು ಬ್ರಹ್ಮಲೋಕಮಿರ್ಪಂತಿರ್ದ ಬ್ರಹ್ಮಸಭೆಯೊಳಗೆ ದೇವ ಬ್ರಾಹ್ಮಣರಾಗಿರ್ದರನ್ನೆಗಂ ದ್ರುಪದನಿತ್ತಲ್ಚಂ|| ನರದ ಸಮಸ ರಾಜಕಮನಾದರದಿಂದಿದಿರ್ಗೊ೦ಡನೇಕ ರ
ತ್ವ ರಚಿತಮಾಗೆ ಮಾಡಿಸಿ ಸಯಂಬರಸಾಲೆಯನೋಳಿಯಿಂ ನರೇ | ಶರರ್ಗಿರಲೆಂದು ಚಾಪಳಿಗೆಗಳ್ ಪಲವಂ ಸಮದಲ್ಲಿ ರತ್ನದಿಂ ಬೆರಸಿದ ಬಣ್ಣದೊಳ್ ಮೆಳಯ ಕಟ್ಟಿಸಿ ಪುಟ್ಟಿಸಿ ರಂಗಭೂಮಿಯಂ II೪೦
ತೋಟದ ಸಾಲುಗಳು ಅರಿಕೇಸರಿಯ ಮನಸ್ಸನ್ನಾಕರ್ಷಿಸಿದುವು. ೩೮. ಮದ್ದಾನೆಗಳ ಘೀಳಿಡುವ ಶಬ್ದ, ಕುದುರೆಗಳ ಕೆನೆತದ ಶಬ್ದ ಅವು ಒಟ್ಟುಗೂಡಿ ಸಮುದ್ರಮಥನದ ದೊಡ್ಡ ಶಬ್ದವನ್ನು ಮೀರಿದ್ದಿತು. ಒತ್ತಾಗಿ ಸೇರಿಕೊಂಡಿರುವ ಬಣ್ಣಬಣ್ಣದ ಬಾವುಟಗಳ ಕುಚ್ಚು, ಹೂಗೊಂಚಲು ಚಿಗುರುಗಳಿಂದ ಕೂಡಿದ ಚಪ್ಪರಗಳು ಎಲ್ಲೆಲ್ಲಿಯೂ ವ್ಯಾಪಿಸಿ ಒಪ್ಪಿದ್ದವು. ಸಮಸ್ತ ರಾಜರು ಇಳಿದುಕೊಂಡಿದ್ದ ಬೀಡುಗಳು ಕಣ್ಣಿಗೆ ಕಂಡವು. ವ|| ಹಾಗೆ ನೋಡುತ್ತಿರಲು ಮೆಚ್ಚುತ್ತಲೂ ಬರುತ್ತಿರಲು-೩೯. ಈ ಮೂರು ಲೋಕದ ಸುಪ್ರಸಿದ್ದ ಹೆಂಗಸರನ್ನು ಮೀರಿಸಿರುವ ಕಮಲಪತ್ರದಂತೆ ವಿಚಿತ್ರವಾದ ಕಣ್ಣುಳ್ಳ ಬ್ರೌಪದಿಗೆ ಸ್ವಯಂವರದಲ್ಲಿ ಪತಿಯಾಗುವುದಾದರೆ ನಾವು ನಿಶ್ಚಯವಾಗಿಯೂ ಈ ಭೂಮಿಯನ್ನು ಆಳುವವರೇ ಸರಿ ಎಂದು ಒಟ್ಟಾಗಿ ಸೇರಿದ ಸಮಸ್ತ ರಾಜರ ಬೆಳ್ಕೊಡೆಗಳಿಂದ ಆ ದಿನ ಆ ಪಟ್ಟಣವನ್ನು ಪ್ರವೇಶಿಸಿ ಎಲ್ಲಿಯೂ ಬೀಡುಬಿಡಲು ಸ್ಥಳ ಸಿಕ್ಕದೆ ಒಂದು ಕುಂಬಾರನ ಗುಡಿಸಲಿನಲ್ಲಿ ಅವಕಾಶವನ್ನು ಮಾಡಿಕೊಂಡು ಬ್ರಹ್ಮಲೋಕದ ಹಾಗಿದ್ದ ಬ್ರಾಹ್ಮಣರ ಸಭೆಯಲ್ಲಿ ದೇವಬ್ರಾಹ್ಮಣರಂತಿರುತ್ತಿದ್ದರು. ೪೦. ಅಲ್ಲಿ ಸೇರಿದ ಎಲ್ಲ ಕ್ಷತ್ರಿಯವರ್ಗವನ್ನು ಆದರದಿಂದ ಇದಿರುಗೊಂಡು ಸ್ವಯಂವರಶಾಲೆಯನ್ನು ಅನೇಕ ರತ್ನಗಳಿಂದ ರಚಿತವಾಗಿರುವ ಹಾಗೆ ಮಾಡಿಸಿ ರಾಜರುಗಳಿರುವುದಕ್ಕಾಗಿ ಸಾಲಾಗಿ ಅನೇಕ ತೊಟ್ಟಿಯ ಮನೆಗಳನ್ನು ನಿರ್ಮಿಸಿ
Page #195
--------------------------------------------------------------------------
________________
೧೯೦ | ಪಂಪಭಾರತಂ
ವ|| ಆ ನೆಲೆಯ ಚೌಪಳಿಗೆಗಳೊಳನೇಕ ಪ್ರಾಸಾದದ ಮೇಲೆ ಚಿತ್ರದ ಪದವಿಗೆಗಳಂ ತುರುಗಲುಂ ಬಂಬಲ್ಗಳುಮಾಗೆ ಕಟ್ಟಿಸಿ ಪಚ್ಚೆಯ ಹಾರದ ತೋರಣಂಗಳಂ ದುಗುಲದ ಗುಡಿಗಳಂ ಕಟ್ಟಿಸಿ ಕಂಭಂಗಳೊಳೆಲ್ಲಂ ಸುಯ್ಯಾಣದ ಚಿನ್ನದ ಪಡೆಯ ಸಕಳವಟ್ಟೆಗಳಂ ಸುತ್ತಿಸಿ ಮುತ್ತಿನ ಮಂಡವಿಗೆಗಳನೆಡೆಯದೆತ್ತಿಸಿ ಪೊನ್ನ ಮಾಂಗಾಯ ಗೊಂಚಲ್ಗಳುಮಂ ಮುತ್ತಿನ ಬುಂಭುಕಂಗಳುಮನೆಲೆ ಕಟ್ಟಿಸಿ ಮತ್ತಮಾ ಪ್ರಾಸಾದಂಗಳ ಚೌಪಳಿಗಳ ಪೊನ್ನ ಪೊಂಗಳಿಗೆ ನೀಳು ಬೆಳ್ಳುಮಂ ತಾಳಿ ಕರ್ಪಿನೊಳುಪಾಶ್ರಯಂಬಡೆದು
ಕಂ!
ತುಲುಗಿದ ಪೂಗೊಂಚಲ ಕಾ
ದ್ರೋಣಗಿದ ಮಾವುಗಳ ಬೆಳೆದ ಕೌಂಗಿನ ಗೊನೆ ತ | ಬೆಳಗಿರೆ ಮಾಡದೊಳಲ್ಲಿಯೇ ತಿಳದುಕೊಳಲಿಂಬಿನೆಸಕಮೆಸೆದುದುಪವನಂ ||
ನಾಳೆ ಸಯಂಬರಮನ ಪಾಂ ಚಾಳಮಹೀಪಾಳನಖಿಳ ಭೂಭನ್ನಿಕರ | ಕೋಳಿಯೆ ಸಾಳೆದೊಡವನೀ
ಪಾಲರ್ ಕೆಮ್ಮೆಯ್ಯಲೆಂದು ಪವತಿಯಾದ
ವ|| ಆಗಿ ಮದಿವಸಂ ನೇಸ ಮೂಡ
C
౪౦
وب
ಕೆಂಪುಬಣ್ಣದಿಂದ ಪ್ರಕಾಶಿಸುವ ಹಾಗೆ ರಂಗಸ್ಥಳವನ್ನು ಸಿದ್ಧಪಡಿಸಿದನು. ವ|| ಆ ಸ್ಥಿರವಾದ ತೊಟ್ಟಿಯ ಮನೆಗಳ ಉಪ್ಪರಿಗೆಗಳ ಮೇಲೆ ಅನೇಕ ಚತ್ರಿತವಾದ ಬಾವುಟಗಳೂ ಗುಂಪುಗುಂಪಾಗಿ ಕಟ್ಟಿಸಿದ ಹಸಿರುಹಾರದಿಂದ ಕೂಡಿದ ತೋರಣಗಳೂ ರೇಷ್ಮೆಯ ಧ್ವಜಗಳೂ ಕಂಬಕ್ಕೆ ಸುತ್ತಿದ್ದ ಕಸೂತಿಯ ಚಿತ್ರಕಾರ್ಯ ಮಾಡಿರುವ ಜರತಾರಿವಸ್ತ್ರಗಳೂ ಚಿತ್ರದಿಂದ ಕೂಡಿದ ಬಟ್ಟೆಗಳೂ ಸೂಕ್ತಸ್ಥಾನಗಳಲ್ಲಿ ನಿರ್ಮಿಸಿದ ಮಂಟಪಗಳಲ್ಲಿ ಜೋಲಾಡುವಂತೆ ಕಟ್ಟಿಸಿದ್ದ ಚಿನ್ನದ ಮಾವಿನ ಕಾಯಿನ ಗೊಂಚಲೂ ಮುತ್ತಿನ ಕುಚ್ಚುಗಳೂ ವಿವಿಧ ಬಣ್ಣಗಳನ್ನುಂಟುಮಾಡಿ ಸುವರ್ಣಚ್ಛಾಯೆಯನ್ನು ಅಳವಡಿಸಿದುವು. ೪೧. ಒತ್ತಾಗಿ ಸೇರಿರುವ ಹೂಗೊಂಚಲೂ ಕಾಯಿಗಳ ಭಾರದಿಂದ ಬಗ್ಗಿರುವ ಮಾವುಗಳೂ ಪುಷ್ಟವಾಗಿ ಬೆಳೆದ ಅಡಿಕೆಯ ಗೊನೆಗಳೂ ಗುಂಪಾಗಿ ಕೂಡಿ ಆ ಉಪ್ಪರಿಗೆಯಲ್ಲಿಯೇ ಸೇರಿ ಬಾಗಿರಲು ಅಲ್ಲಿಯೇ ಅವುಗಳನ್ನು ಕೊಯ್ದುಕೊಳ್ಳಲು ಅನುಕೂಲವಾಗಿರುವ ರೀತಿಯಲ್ಲಿ ಆ ಉಪವನವು ಪ್ರಕಾಶಮಾನವಾಗಿದ್ದಿತು. ೪೨. ಆಗ ಪಾಂಚಾಳನಾದ ದ್ರುಪದನು ಸಮಸ್ತ ರಾಜಮಂಡಳಿಗೆ ಕ್ರಮವಾಗಿ ನಾಳೆಯ ದಿನ ಸ್ವಯಂವರವೆಂದು ಡಂಗುರ ಹೊಡೆಯಿಸಿದನು. ರಾಜರು ತಮ್ಮ ತಮ್ಮ ಶಕ್ತಿಪ್ರದರ್ಶನಮಾಡಲು ವಿಶೇಷ. ಉತ್ಸಾಹಗೊಂಡರು. ವ|| ಮಾರನೆಯ ದಿನ ಸೂರ್ಯೋದಯವಾಯಿತು.
Page #196
--------------------------------------------------------------------------
________________
ತೃತೀಯಾಶ್ವಾಸಂ / ೧೯೧ ಕಂ| ತಂತಮ್ಮ ರಾಜ್ಯ ಚಿಹ್ನಂ
ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ | ತಂತಮ್ಮೆಸೆವ ವಿಳಾಸಂ , ತಂತಮಿರ್ಪಡೆಯೊಳೋಳಿಯಿಂ ಕುಳ್ಳಿರ್ದರ್ ||
೪೩ ವ|| ಆಗ ದ್ರುಪದಂ ತನ್ನ ಪುರಕ್ಕಮಂತಃಪುರಕ್ಕಂ ಪರಿವಾರಕ್ಕಂಕಂl ಸಾಸಿರ ಪೊಂಗೆಯುಂ ಚಿಃ
ಕಾಸಟಮಂದೊಂದು ಲಕ್ಕಗೆಯ್ಯುದಿದರ್ಕಂ | ಮಾಸರಮುಡಲೆಂದಧಿಕ ವಿ
ಳಾಸದಿನುಡಲಿಕ್ಕಿ ನೆಳೆಯ ಬಿಯಮಂ ಮೇದಂ || ೪೪ ವ|| ಅಂತು ಮೆದು ಕೂಸ ನೆಯ ಕೆಯ್ದಯ್ಕೆಮೆಂದು ಮುನ್ನಂ ಕೆಯ್ದಯ್ಯುತಿರ್ದ ತಂದ ಗುಜುಗೆಯರಪ್ಪಂತಃಪುರ ಪುರಂದ್ರಿಯರಂ ಕರೆದು ಪೇಟ್ಟುದುಮಂತಗೆಯ್ಮಂದುಕ೦ll ಈ ಪೊತ್ತಿಂಗೀ ರುತುವಿಂ
ಗೀ ಪಸದನಮಿಂತುಟಪ್ಪ ಮಯ್ಯಣ್ಣಕ್ಕಿಂ | ತೀ ಹೂವಿನೂಳೇ ತುಡುಗಿಯೊ
ಈ ಪುಟ್ಟಿಗೆಯೊಳ್ ಬೆಡಂಗುವಡೆದೆಸೆದಿರ್ಕುಂ || ವ|| ಎಂದು ನೆಹಿತಿಯ ಪಸದನಂಗೊಳಿಸಿಚಂ|| ತುಡಿಸದೆ ಹಾರಮಂ ಮೊಲೆಯ ಬಣ್ಣಿನೊಳಂ ನಡು ಬಳಿದಪ್ಪುದೀ
ನಡುಗುವುಲ್ಲವೇ ತೊಡೆ ನಿತಂಬದ ಬಣ್ಣಿನೊಳೇವುದಕ್ಕೆ ಪೋ | ಬಿಡು ಕಟಸೂತಮಂ ತೊಡೆಯ ಬಿಣು ಪದಾಂಬುರುಹಕ್ಕೆ ತಿಣಮಂ ತುಡಿಸುವುದಕ್ಕೆ ನೂಪುರಮನೀ ತೊಡದೇವುದೂ ರೂಪ ಸಾಲದ || ೪೬
೪೩. ರಾಜರು ತಮ್ಮ ತಮ್ಮ ರಾಜ್ಯಚಿಹ್ನೆ ವೈಭವ ಸೈನ್ಯ ವಿಳಾಸಗಳಿಂದ ಕೂಡಿ ತಾವಿದ್ದ ಸ್ಥಳಗಳಲ್ಲಿ ಸಾಲಾಗಿ ಕುಳಿತರು. ವ|| ಆಗ ದ್ರುಪದನು ತನ್ನ ಪಟ್ಟಣಕ್ಕೂ ರಾಣಿವಾಸಕ್ಕೂ ಪರಿವಾರಕ್ಕೂ ೪೪, ಸಹಸ್ರಹೊನ್ನನ್ನು ಕೊಟ್ಟರೂ ಇದು ಲಭ್ಯವಾಗುವುದಿಲ್ಲ. ಹತ್ತಿಯ ಬಟ್ಟೆಯಾದರೂ ಇದು ಲಕ್ಷಬೆಲೆಯುಳ್ಳದ್ದು ಎಂಬ ವಸ್ತಗಳನ್ನು ಮಧುರವಾಗಿ ಧರಿಸಲೂ ಸಂತೋಷದಿಂದ ಉಡಲೂ ಕೊಟ್ಟು ವಿಶೇಷವಾಗಿ ತನ್ನ ಔದಾರ್ಯವನ್ನು ಪ್ರಕಾಶಿಸಿದನು. ವರ ಹಾಗೆಯೇ ಕನೈಯನ್ನು ಪೂರ್ಣವಾಗಿ ಅಲಂಕರಿಸಿ ಎಂದು ಹೇಳಿದನು. ಹಾಗೆ ಹೇಳುವುದಕ್ಕೆ ಮುಂಚೆಯೇ (ತಾವಾಗಿಯೇ) ಅಲಂಕರಿಸುತ್ತಿದ್ದ ಶಕ್ತರೂ ಅನುಭವಶಾಲಿಗಳೂ ಆದ ರಾಣಿ ವಾಸದ ಸ್ತ್ರೀಯರು ಹಾಗೆಯೇ ಮಾಡುತ್ತೇವೆಂದರು. ೪೫. ಈ ಹೊತ್ತಿಗೆ ಈ ಋತುವಿಗೆ ಇಂತಹ ಅಲಂಕಾರ; ಇಂತಹ ಮೈಬಣ್ಣಕ್ಕೆ ಇಂತಹ ಹೂವು ಈ ಆಭರಣ ಈ ಸೀರೆ ಉಚಿತವಾದುದು ವ|| ಎಂದು ನಿಷ್ಕರ್ಷಿಸಿ ಪೂರ್ಣವಾಗಿ ಅಲಂಕಾರಮಾಡಿದರು. ೪೬. ಹಾರವನ್ನು ತೊಡಿಸದಿದ್ದರೂ ಮೊಲೆಯ ಭಾರದಿಂದಲೇ ಸೊಂಟವು ಬಳುಕುತ್ತದೆ. ಪಿತ್ರೆ (ಪೃಷ್ಠಭಾಗ)ಯ ಭಾರದಿಂದಲೇ ತೊಡೆ ನಡುಗುವುದಲ್ಲವೇ ?
Page #197
--------------------------------------------------------------------------
________________
೧೯೨) ಪಂಪಭಾರತಂ
ವ|| ಎಂದೆಂದೋರೊರ್ವರಾಕೆಯ ರೂಪಂ ವಕ್ರೋಕ್ತಿಯೊಳೆ ಪೊಗಟ್ಟು ಮಂಗಳಮಸದನ ಮಿಕ್ಕಿಯುಂ ಪೊಸ ಮದವಳಿಗೆಯಪ್ಪುದಳಂ ತುಡಿಸಲುಮೆಂದು ನಳಿಯ ಪಸದಸಂಗೊಳಿಸಿ ಕ೦ll ಮಸೆದುದು ಮದನನ ಬಾಳ್ ಕೂ
ರ್ಮಸೆಯಿಟ್ಟುದು ಕಾಮನಂಬು ಬಾಯೂಡಿದುದಾ | ಕುಸುಮಾಸ್ತನ ಚಕ್ರಮಿದಂ
ಬೆಸಕಮನಾಳತ್ತು ಪಸದನಂ ದೌಪದಿಯಾ 1 . ೪೭ ವ|| ಅಂತು ನೆಆಯ ಪಸದನಂಗೊಳಿಸಿ ಬಿಡುಮುತ್ತಿನ ಸೀಸೆಯನಿಕ್ಕಿ ತಾಯಂ ತಂದೆಗಂ ಪೊಡಮಡಿಸಿಕಂii ನಿಟ್ಟಸ ಹೋಮಾನಲನೂಲ್
ಪುಟ್ಟಿದ ನಿನಗಕ್ಕೆ ಪರಕೆ ಯಾವುದೊ ನಿನ್ನಂ 1 ಪುಟ್ಟಿಸಿದ ಬಿದಿ ನೆಗಟಿಯ ಜೆಟ್ಟಗನೊಳ್ ನೆರಪುಗೀಗಳರಿಕೇಸರಿಯೊಳ್ |
೪೮ ವ|| ಎಂದು ಪರಸಿ ಕನಕನಕಖಚಿತವುಂ ಮೌಕ್ತಿಕ ಸ್ತಂಭಮುಮಪ್ಪ ಸರ್ವತೋಭದ್ರಮಂಬ ಸಿವಿಗಯನೇಳಿಸಿ ಚಾಮರದ ಕುಂಚದಡಪದ ಡವಕೆಯ ವಾರ ವಿಳಾಸಿನಿಯರೆಡುಂ ಕೆಲದೊಳ್ ಸುತ್ತಿಳದು ಬಳಸಿ ಬರೆ ತಲೆವರಿಜೆಯ ಪಿಡಿಯನೇಟಿ
(ಆದುದರಿಂದ) ಒಡ್ಯಾಣದ ಭಾರ ಬೇರೆಯೇತಕ್ಕೆ? ಅದನ್ನು ತೊಡದೆ ಬಿಡು, ತೊಡೆಯ ಭಾರವೇ ಪಾದಕಮಲಗಳಿಗೆ ಭಾರವಾಗಿದೆ (ಹೀಗಿರುವಾಗ) ಕಾಲಂದಿಗೆಯನ್ನೇಕೆ ತೊಡಿಸುವುದು. ಈಕೆಗೆ ಆಭರಣಗಳೇತಕ್ಕೆ ರೂಪೇ ಸಾಲದೆ? ವlು ಎಂದು ಒಬ್ಬೊಬ್ಬರೂ ಆಕೆಯ ಸೌಂದರ್ಯವನ್ನು ಹೊಗಳಿ ಮಂಗಳಾಲಂಕಾರಮಾಡಿದರು. ಹೊಸ ಮದುವಣಗಿತ್ತಿಯಾದುದರಿಂದ ಆಭರಣವನ್ನೂ ತೊಡಿಸಲೇಬೇಕೆಂದು ಪೂರ್ಣವಾಗಿ ಅಲಂಕಾರಮಾಡಿದರು. ೪೭. ಆ ಬ್ರೌಪದಿಯ ಅಲಂಕಾರವು ಮನ್ಮಥನ ಕತ್ತಿಯು ಮಸೆಯಲ್ಪಟ್ಟಿತು, ಕಾಮನ ಬಾಣವು ಹರಿತವಾಗಿ ಮಾಡಲ್ಪಟ್ಟಿತು, ಪುಷ್ಪಬಾಣನಾದ ಅನಂಗನ ಚಕ್ರಾಯುಧವು ಹರಿತವಾದ ಬಾಯಿಂದ ಕೂಡಿದುದಾಯಿತು ಎನ್ನುವಷ್ಟು ಸೌಂದರ್ಯವನ್ನು ಪಡೆಯಿತು. ವರ ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿ ಬಿಡಿಮುತ್ತಿನ ಅಕ್ಷತೆಯನ್ನು ಅವಳ ತಲೆಯ ಮೇಲೆ ಚೆಲ್ಲಿ ತಾಯಿಗೂ ತಂದೆಗೂ ನಮಸ್ಕಾರ ಮಾಡಿಸಿದರು. ೪೮. ವಿಚಾರಮಾಡುವುದಾದರೆ ಹೋಮಾಗ್ನಿಯಲ್ಲಿ (ಯಜ್ಞ ಕುಂಡದಲ್ಲಿ ಹುಟ್ಟಿದ ನಿನಗೆ ಪ್ರತ್ಯೇಕವಾದ ಹರಕೆ ಯಾಕಮ್ಮ ನಿನ್ನನ್ನು ಹುಟ್ಟಿಸಿದ ಆ ವಿಧಿಯು ಸುಪ್ರಸಿದ್ದ ಪರಾಕ್ರಮಿಯಾದ ಆ ಅರಿಕೇಸರಿಯಲ್ಲಿ ನಿನ್ನನ್ನು ಸೇರಿಸಲಿ ವ| ಎಂದು ಹರಸಿ ಹೊಳೆಯುವ ಚಿನ್ನದಿಂದ ಕೆತ್ತಲ್ಪಟ್ಟುದೂ ಮುತ್ತಿನ ಕುಂಭಗಳನ್ನುಳ್ಳದೂ ಸರ್ವತೋಭದ್ರವೆಂಬ ಹೆಸರುಳ್ಳುದೂ (ನಾಲ್ಕು ಕಡೆಯೂ ಬಾಗಿಲುಳ್ಳದು) ಆದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಚಾಮರ, ಕುಂಚ, ಎಲೆ ಅಡಿಕೆಯ ಚೀಲ ಮತ್ತು ಪೀಕದಾನಿಗಳನ್ನು ಹಿಡಿದಿದ್ದ ಪರಿವಾರದ ಹೆಂಗಸರು ಎರಡುಪಕ್ಕದಲ್ಲಿಯೂ ಸುತ್ತ
Page #198
--------------------------------------------------------------------------
________________
೫೦
ತೃತೀಯಾಶ್ವಾಸಂ | ೧೯೩ ಪೆಂಡವಾಸದೊಳೊಂಡಿರ್ ಬಳಸಿ ಬರೆ ತಳ್ಳು ಪಿಡಿದ ಕನಕ ಪದದ ಸೀಗುರಿಗಳ ನೆಲೆಡೆವಳಿಯದೆ ಬರೆ ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ ನೆಲೆಯ ಪಣ್ಣಿದ ಮದಾಂಧ ಗಂಧಸಿಂಧುರಂಗಳನೇಕೆ ಬರೆ ಮುಂದೆ ಪರಿವ ಧವಳಚ್ಚತ್ರ ಚಂದ್ರಾದಿತ್ಯ ಪಾಳಿಕೇತನಾದಿ ರಾಜ್ಯ ಚಿಹ್ನಂಗಳುಂ ಮೋಲಗುವ ಮಂಗಳರ್ಯಂಗಳೆಸೆಯ ಪಂಪನಿಗೆ ದೌಪದಿ ಶೃಂಗಾರಸಾಗರಮ ಮೆರೆದಪ್ಪಿ ಬರ್ಪಂತೆ ಬರೆಕ೦ll ಪರೆದುಗುವ ಪಂಚ ರತ್ನದ
ಪರಳುದಿರ್ದೆಸೆಯ ಸೌಧದೋಳೆ ಕೆದಟದ ಕ | ಪುರವಳ್ಳುಗಳೆಸೆಯ ಸಯಂ
ಬರ ಸಾಲೆಯನೆಸೆವ ಲೀಲೆಯಿಂ ಪುಗುತಂದ | ವl ಆಗಲ್ಕ೦ll ನುಡಿವುದನೆ ಮಣಿದು ಪೆಜತಂ
ನುಡಿಯ ಕೆಲರ್ ನೋಡದಂತೆ ನೋಡೆ ಕೆಲರ್ ಪಾ | ವಡರ್ದವೂಲಿ ಕೆಲರೊಯ್ಯನೆ ತುಡುಗೆಯನೂಸರಿಸೆ ಕೆಲರುದಾವನಿಪರ್ || ಒಡನೆ ನೆರದರಸುಮಕ್ಕಳ ನಿಡುಗಲ್ಗಳ ಬಳಗಮನಿಗೆ ತನ್ನಯ ಮಯ್ಯೋಳ್ | ನಡೆ ಬಳಸಿ ಪಲರುಮಂಬಂ
ತುಡ ನಡುವಿರ್ದೊಂದು ಪುಲ್ಲಯಿರ್ಪಂತಿರ್ದಳ್ || ೫೧ . ಗುಂಪುಗೂಡಿ ಬಳಸಿ ಬರುತ್ತಿರಲು ಮುಂದೆ ಹೋಗುತ್ತಿರುವ ಕ್ರಮಬದ್ದವಾದ ಹೆಣ್ಣಾನೆಯನ್ನು ಹತ್ತಿಕೊಂಡು ರಾಣಿವಾಸದ ಸಭ್ಯಸ್ತ್ರೀಯರು ಸುತ್ತ ಬರುತ್ತಿರಲು ಎತ್ತಿ ಹಿಡಿದ ಸೀಗುರಿಗಳು ನೆರಳು ವಿಚ್ಛತ್ತಿಯಿಲ್ಲದೆ ಜೊತೆಯಲ್ಲಿಯೇ ಬರುತ್ತಿರಲು ದ್ರುಪದನೂ ಧೃಷ್ಟದ್ಯುಮ್ಮನೂ ಮುತ್ತು ಮಾಣಿಕ್ಯಾಭರಣಗಳಿಂದ ಪೂರ್ಣವಾಗಿ ಅಲಂಕಾರಮಾಡಿದ ಮದ್ದಾನೆಗಳನ್ನೇರಿ ಬರುತ್ತಿರಲು ಮುಂಭಾಗದಲ್ಲಿ ಹರಿದುಹೋಗುತ್ತಿದ್ದ ಬಿಳಿಯ ಕೊಡೆ, ಚಂದ್ರ, ಸೂರ್ಯ, ಧ್ವಜಸಮೂಹವೇ ಮೊದಲಾದ ರಾಜ್ಯಚಿಹ್ನಗಳೂ ಶಬ್ದಮಾಡುತ್ತಿದ್ದ ಮಂಗಳವಾದ್ಯಗಳೂ ಪ್ರಕಾಶಿಸುತ್ತಿರಲು ಹಿಂಭಾಗದಲ್ಲಿ ಬ್ರೌಪದಿಯು ಶೃಂಗಾರಸಾಗರವೇ ಎಲ್ಲೇ ಮೀರಿ ಬರುವಂತೆ ಬಂದಳು. ೪೯. ಎಲ್ಲೆಲ್ಲಿಯೂ ಹರಡಿದ್ದ ಪಂಚರತ್ನದ ಹರಳುಗಳೂ ಪಚ್ಚಕರ್ಪೂರದ ಹಳುಕುಗಳೂ ಪ್ರಕಾಶಿಸುತ್ತಿರಲು ಸ್ವಯಂವರಶಾಲೆಯನ್ನು ಸರಳವಿಲಾಸದಿಂದ ಪ್ರವೇಶಿಸಿದಳು. ವ|| ಆಗ ೫೦. (ಅವಳನ್ನು ನೋಡಿ ದಿಗ್ಗಾಂತರಾಗಿ) ಕೆಲವರು ಹೇಳಬೇಕಾದುದನ್ನು ಮರೆತು ಬೇರೆಯದನ್ನು ನುಡಿದರು, ಕೆಲವರು ನೋಡದಂತೆ ಬ್ರೌಪದಿಯನ್ನು ನೋಡುತ್ತಿದ್ದರು, ಮತ್ತೆ ಕೆಲವರು ಹಾವನ್ನು ಎದುರಿಸಿದವರಂತಿದ್ದರು ಮತ್ತೆ ಕೆಲವು ರಾಜಶ್ರೇಷ್ಠರು ಆಭರಣಗಳನ್ನು ಓರೆಮಾಡುತ್ತಿದ್ದರು. ೫೧, ಒಟ್ಟಿಗೆ ಅಲ್ಲಿ ನೆರೆದಿದ್ದ ರಾಜಕುಮಾರರ ನೀಳವಾದ ಕಣ್ಣುಗಳ ಸಮೂಹವು ತನ್ನ ಶರೀರದ ಮೇಲೆ ಎರಗಿ ನಾಟಿಕೊಳ್ಳಲು ಸುತ್ತಲೂ
Page #199
--------------------------------------------------------------------------
________________
೧೯೪) ಪಂಪಭಾರತಂ
ಮೊನೆಯಂಬುಗಳೊಳೆ ಪೂಣ್ಣಪ ನನಿಬರುಮಂ ಕಿಂದು ಬೇಗದಿಂ ಹರಿಗನದ | ರ್ಕೆನಗೆಡವೇಬ್ರುಮ ಎಂಬವೊ
ಲನಿಬರುಮಂ ಪೂಣ್ಣನತನು ನನೆಯಂಬುಗಳಿ೦ || ವ|| ಆಗಳ್ ಪಾಂಡವರ್ ತಮ್ಮಂ ಪೆರಳಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆಚಂ|| ಇಳೆಯೊಳುದಗ, ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚಾ
ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ | ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ “ಎಳಿಸಿರೆ ಮೂಜು ಲೋಕಮನ ಪೋಲ್ತುದು ಮೂಲೆಯಿಂ ಸ್ವಯಂಬರಂ ||
ವ|| ಆಗಳ್ ವಿದಿತವೃತ್ತಾಂತೆಯಾಗಿ ದೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ
ಚೀಟಿ
ಮ|| ಕನಕೋಚ್ಛಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ
ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡಂ ಮನಂಗೊಂಡು ನಿ | ನನ ಕಿಟ್ಟಗೂಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪಕ್ಷಣೇ || ೫೪
ಅನೇಕರು ಪ್ರಯೋಗಮಾಡಿದ ಬಾಣಗಳ ಮಧ್ಯೆ ಸಿಕ್ಕಿದ ಹುಲ್ಲೆಯಂತೆ ಬ್ರೌಪದಿ ತೋರಿದಳು. ೫೨. ಅರಿಗನು ಅಲ್ಪಕಾಲದಲ್ಲಿಯೇ ಅಷ್ಟುಜನವನ್ನೂ ಮೊನಚಾದ ಬಾಣಗಳಿಂದ ಹೂಳಿಬಿಡುತ್ತಾನೆ. ಅದಕ್ಕಾಗಿ ನಾನು ಬಾಣಬಿಡುವುದಕ್ಕೆ ಸ್ಥಳಬೇಕಲ್ಲವೇ? ಎನ್ನುವ ಹಾಗೆ ಮನ್ಮಥನು ಅಷ್ಟು ಜನರನ್ನೂ ಪುಷ್ಪಬಾಣಗಳಿಂದ ಹೂಳಿದನು. ವ|| ಆಗ ಪಾಂಡವರು ತಮ್ಮನ್ನು ಇತರರು ತಿಳಿಯದಂತೆ (ಗುರುತಿಸದಂತೆ) ಬ್ರಾಹ್ಮಣವೇಷದಿಂದಲೇ ಬ್ರಹ್ಮಸಭೆಯಲ್ಲಿ ಬಂದು ಕುಳಿತಿದ್ದರು. ೫೩. ಭೂಮಿಯಲ್ಲಿ (ನೆಲದ ಮೇಲೆ) ಶ್ರೇಷ್ಠರಾದ ಭಟರೂ ಎತ್ತರವಾದ ಮದ್ದಾನೆ ಮತ್ತು ಕುದುರೆಯ ಸಮೂಹಗಳೂ ಚಚ್ಚಕವಾದ ಮಂಟಪಗಳಲ್ಲಿ ರಾಜಶ್ರೇಷ್ಠರ ಮನೋಹರವಾದ ಸಮೂಹವೂ ಅಂತರಿಕ್ಷ ಪ್ರದೇಶದಲ್ಲಿ ಕಿಂಪುರುಷ, ಕಿನ್ನರ, ಖೇಚರ, ಸಿದ್ಧಪುರುಷರ ಸಮೂಹವೂ ತುಂಬಿರಲು ಈ ಮೂರುನೆಲೆಗಳಿಂದ ಸ್ವಯಂವರಮಂಟಪವು ಮೂರುಲೋಕವನ್ನೂ ಹೋಲುತ್ತಿತ್ತು. ವ|| ಆಗ ಅಲ್ಲಿರುವವರ ವಿಷಯವನ್ನು ತಿಳಿದುಕೊಂಡು ಪಕ್ಕದಲ್ಲಿದ್ದ ಸುಂದರಮಾಲೆಯೆಂಬ ಚೇಟಿಯು ಬ್ರೌಪದಿಗೆ ಅವರ ಪರಿಚಯ ಮಾಡಿಸಿದಳು. ೫೪, ಎಲ್ ಕಮಲದಳಾಕ್ಷಿಯಾದ ಬ್ರೌಪದಿಯೇ ಆ ಎತ್ತರವಾದ ಚಿನ್ನದ ಪೀಠದಲ್ಲಿ ಕುಳಿತಿರುವವನು ವಂಗದೇಶದ ದೊರೆ, ಎತ್ತರವೂ ದಪ್ಪವೂ ಆದ ಭುಜದಲ್ಲಿ ಉದ್ದವಾದ ಹಾರವುಳ್ಳವನು ಪಾಂಡ್ಯ, ವಿಶೇಷ ಆಕರ್ಷಿತನಾಗಿ ಕೆಳಗಣ್ಣಿನಲ್ಲಿ ನಿನ್ನನ್ನೇ ನೋಡುತ್ತಿರುವವನು ಚೇರಮ,
Page #200
--------------------------------------------------------------------------
________________
"
ತೃತೀಯಾಶ್ವಾಸಂ | ೧೯೫
ವll ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳೊಡೆಗಳ ಬೆಳ್ಳಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗಿ ಪೊಗಳುತ ವರ್ಷವರ ಸರಂಗಳೊಳಂ ಪಾಡುವ ಪಾಠಕಾರಿಂ ಚರಂಗಳೊಳೆಲ್ಲಂ ದಿಗ್ಧತಿಗಳ ತೆಕ್ಕನೆ ತೀವ್ರ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ
ಮ||
ಅಲರಂಬಿಂದುದನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತ ನ ಯಲ ಕಾವಂ ತಿರುವುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ | ಅಲದೊಳ್ ಬಂದಿರ ನೋಡಿ ಸೋಲು ನಿನಗಾ ಗೇಯಕ್ಕೆ ಸೋಲಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂ ನೀನಾತನ ನೋಡುಗೇ ||
ವl ಮತ್ತಿತ್ತ ಮಿಂಚಂ ತಟ್ಟಿ ಮಡದಂತೆ ಸುತ್ತಿದ ಕಾಲ್ತಾಪಿನ ಕಡಿತಲೆಯ ಬಳ ಸಿದಗಣ್ಯ ಪಣ್ಯಾಂಗನಾಜನದ ನಡುವೆ ಮಣಿಮಯಪೀಠಂಗಳನೇ
ಕಂ11 ಆಯತ ಯದುವಂಶ ಕುಲ
ಶ್ರೀಯಂ ತಬ್ಬಿಸಿದದಟರತಿರಥರವರ | ತ್ಯಾಯತಭುಜಪರಿಘರ್ ನಾ
ರಾಯಣ ಬಲದೇವರೆಂಬರಂಬುಜವದನೇ ||
9999
ವ|| ಎಂದು ಕಿಳದಂತರಂ ಪೋಗಿ
ಉ।।
೫೬
ಇಂತಿವರಿನ್ನರೀ ದೊರೆಯರೆಂದವಂತಿರ ಪೇಯ್ದು ಟ್ಟು ರಾ ಜಾಂತರದಿಂದ ರಾಜಸುತೆಯಂ ನಯದಿಂದವಳುಯ್ದಳಂತು ಸ | ದ್ಧಾಂತ ಸಮಾರಗೋಷ್ಠಿತ ವಿಶಾಳ ವಿಳೋಳ ತರಂಗ ರೇಖೆ ಪ ದಾಂತರದಿಂದಮಿಂಬಲೆದು ಮಾನಸಹಂಸಿಯನುಯ್ಯಮಾರ್ಗದಿಂ || ಸೂರ್ಯತೇಜಸ್ಸುಳ್ಳ ಆತ ಕಳಿಂಗದೇಶದರಸನು ನೋಡು. ವll ಈ ಕಡೆ ಬೀಸುವ ಚಾಮರಗಳ ಹೊಳಪಿನಿಂದಲೂ ಎತ್ತಿದ ಬೆಳುಗೊಡೆಗಳ ಬೆಳುಪಿನಿಂದಲೂ ದಿಕ್ಕುಗಳಲ್ಲಿ ಬಿಳಿಯಬಣ್ಣದಿಂದ ಕೂಡಿದುದಾಗಿರಲು ಹೊಗಳುತ್ತಲಿರುವವರ ಸ್ವರಗಳಿಂದಲೂ ಹಾಡುತ್ತಿರುವವರ ಹೊಗಳುಭಟ್ಟರ ಮಧುರವಾದ ಧ್ವನಿಗಳಿಂದಲೂ ದಿಗಂತಗಳೆಲ್ಲವೂ ಇದ್ದಕ್ಕಿದ್ದ ಹಾಗೆ ತುಂಬಿರಲು ರತ್ನಖಚಿತವಾದ ಆಸನದ ಮೇಲೆ ತನ್ನ ಕಾಲನ್ನು ಠೀವಿಯಿಂದ ನೀಡಿ ೫೫. ನನ್ನ ಮೃದುವಾದ ಹೃದಯವನ್ನು ಪುಷ್ಪಬಾಣವು ಈ ದಿನ ಹೀಗೆ ಚುಚ್ಚುತ್ತಿದೆ ಎನ್ನುವ ಹಾಗೆ ನೆಯ್ದಿಲ ಹೂವಿನ ಕಾವನ್ನು ಒಂದು ಕೈಯಲ್ಲಿ ತಿರುಗಿಸುತ್ತಲೂ ಅಷ್ಟು ಜನ ತಮ್ಮಂದಿರೂ ತನ್ನ ಎರಡು ಪಕ್ಕದಲ್ಲಿಯೂ ಬಂದಿರಲು ನಿನ್ನ ಸೌಂದರ್ಯಕ್ಕೆ ಸೋತಿದ್ದರೂ ಆ ಸಂಗೀತಕ್ಕೆ ಸೋತವನಂತೆ ತಲೆಯನ್ನು ತೂಗುವ ಅವನು ದುರ್ಯೋಧನ ಭೂಪತಿ; ಆತನನ್ನು ನೀನು ನೋಡು. ವ|| ಈ ಕಡೆ ಮಿಂಚನ್ನೇ ಮುಸುಕಿದ್ದಾರೆಯೋ ಎನ್ನುವಂತಿರುವ ಅಸಂಖ್ಯಾತರಾದ ವೇಶ್ಯಾಸ್ತ್ರೀಯರ ಮಧ್ಯೆ ರತ್ನಖಚಿತವಾದ ಪೀಠದ ಮೇಲೆ ೫೬. ಕುಳಿತಿರುವವರು ವಿಸ್ತಾರವಾದ ಯದುಲಕ್ಷ್ಮಿಯನ್ನು ಆಲಿಂಗನಮಾಡಿಕೊಂಡಿರುವ ಶೂರರೂ ಪರಾಕ್ರಮಿಗಳೂ ದೀರ್ಘ ವಾದ ಪರಿಘಾಯುಧದಂತಿರುವ ತೋಳುಗಳನ್ನುಳ್ಳವರೂ ಆದವರು ಕೃಷ್ಣಬಲರಾಮ ರೆಂಬುವರು. ವ|| ಎಂದು ಸ್ವಲ್ಪದೂರ ಹೋಗಿ ೫೭. ಇವರು ಇಂತಹವರು, ಈ
9:2
Page #201
--------------------------------------------------------------------------
________________
- ೧೯೬ | ಪಂಪಭಾರತಂ
ಈ ವ|| ಅಂತು ನೆರೆದರಸುಮಕ್ಕಳಾರುಮಂ ಮೆಚ್ಚದೆ ಮಗುವವರೆ ದ್ರುಪದನಿದಳೆಲ್ಲ ಮೇನಿಂ ಹೋಮಾಗ್ನಿಸಂಭವಮಪ್ಪ ದಿವಚಾಪಮನೇಸಿಯುಮಾಯಯು ಶರದೊಳಾಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ಮಾನನಿಸಲಾರ್ಪೊಡೆ ಬಂದೇತಿಸಿಯುಮೆಚ್ಚು ಗೆಲ್ಲಂಗೊಂಡನ್ನ ಮಗಳ ಮದುವೆಯಪ್ಪುದೆಂಬುದುಮಾಮಾಮೆ ಬಿಲ್ಲನೇಟಿಸಿದಪವೆಂದನಿಬರನುಮರಸುಮಕ್ಕಳ ಬಂದು* ಉlು ಏಪವಂದರ್ ನೆಲದಿನೆತ್ತಲುಮಾಯಿದೆ ಬಿಟ್ಟು ನೆತ್ತರಂ
ಕಾಯುಮತಿ ಕಮ್ಯುಡಿದುಮಾಗಳೆ ಕಾಲುಡಿದುಂ ಬುಲ್ಲು ಪ ಬ್ಲಾಳ ಪೊಡರ್ಪುಗಟ್ಟುಸಿರಲಪ್ರೊಡಮಾಜದ ಪೋಡಾಗಳಾ
ನೇಟಿಪನೆಂದು ಪೊಚ್ಚಲಿಸಿ ಬಂದು ಸುಯೋಧನನುಗ್ರಚಾಪಮಂ || - ೫೮ ವ|| ಮೂಜು ಸೂಮ್ ಬಲವಂದು ಪೊಡಮಟ್ಟುಕ೦ll ಪಿಡಿದಾರ್ಪ ಭರದಿನ :
ಲೊಡರಿಸಿದೊಡೆ ನೆಲದಿನಣಮೆ ತಳರದ ಬಿಲ್ ನಿ || ಲೊಡ ಗುಡು ಗುಡು ಗುಡು ಗೊಳ್ಳೆಂ ಡೊಡನಾರೆ ಸುಯೋಧನಂ ಕರಂ ಸಿಗ್ತಾದಂ ||
- ೫೯
ಯೋಗ್ಯತೆಯುಳ್ಳವರು ಎಂದು ಚೆನ್ನಾಗಿ ತಿಳಿಯುವ ಹಾಗೆ ಹೇಳಿ ಹೇಳಿ ರಾಜರೊಬ್ಬರಿಂದ ಮುಂದಕ್ಕೆ ಆ ಬ್ರೌಪದಿಯನ್ನು ಬಿರುಸಾಗಿ ಬೀಸಿದ ಗಾಳಿಯಿಂದ ಮೇಲಕ್ಕೆದ್ದ ವಿಶಾಲವೂ ಚಂಚಲವೂ ಆದ ಅಲೆಗಳ ಸಾಲು ಹದವರಿತು ಕಮಲದಿಂದ ಮೇಲಕ್ಕೆ ರಾಜಹಂಸವನ್ನು ಸೆಳೆದೊಯ್ಯುವ ರೀತಿಯಲ್ಲಿ ಈ ಚೇಟಿಯು ಕರೆದುಕೊಂಡು ಹೋದಳು. ವ|| ಹಾಗೆ ಅಲ್ಲಿ ಸೇರಿದ್ದ ರಾಜಕುಮಾರರಲ್ಲಿ ಯಾರನ್ನೂ ಮೆಚ್ಚದೆ ಬ್ರೌಪದಿಯು ಹಿಂದಿರುಗಿ ಬರಲು ದ್ರುಪದನು ಇದರಲ್ಲೇನಿದೆ, ಅಗ್ನಿಕುಂಡದಲ್ಲಿ ಹುಟ್ಟಿದ ದಿವ್ಯಧನುವನ್ನು ಹೆದೆಯೇರಿಸಿ ಈ ಅಯ್ತು ಬಾಣಗಳಿಂದ ಆಕಾಶದಲ್ಲಿ ನಲಿದು ಹೊಳೆಯುತ್ತಿರುವ ಯಂತ್ರದ ಮೀನನ್ನು ಹೊಡೆಯಲು ಸಮರ್ಥನಾದರೆ ಬಂದುಬಿಲ್ಲನ್ನು ಹೂಡಿ ಜಯವನ್ನು ಪಡೆದು ನನ್ನ ಮಗಳನ್ನು ಮದುವೆಯಾಗಬಹುದು ಎಂಬುದಾಗಿ ಸಾರಿದನು. ನಾವು ತಾವು ಬಿಲ್ಲನ್ನು ಏರಿಸುತ್ತೇವೆಂದು ಎಷ್ಟೋ ಜನ ರಾಜಕುಮಾರರು ಬಂದರು. ೫೮. ಏರಿಸುತ್ತೇನೆ ಎಂದವರು ಅದನ್ನು ನೆಲದಿಂದೆತ್ತಲೂ ಸಮರ್ಥರಾಗದೆ ಬಿದ್ದು ರಕ್ತವನ್ನು ಕಾರಿ, ಕೈಮುರಿದು ಕಾಲುಮುರಿದು ಬಳಲಿ ಬಾಯೊಣಗಿ ಶಕ್ತಿಗುಂದಿ ಉಸಿರಿಸುವುದಕ್ಕೂ ಆಗದೆ ಹೋಗಲು ದುರ್ಯೋಧನನು ನಾನು ಏರಿಸುತ್ತೇನೆಂದು ಜಂಭದಿಂದ ಬಂದನು, ಆ ಭಯಂಕರವಾದ ಬಿಲ್ಲನ್ನು ವl ಮೂರುಸಲ ಪ್ರದಕ್ಷಿಣೆಮಾಡಿ ನಮಸ್ಕರಿಸಿದನು. ೫೯. ಹಿಡಿದುಕೊಂಡು ತನ್ನ ಶಕ್ತಿಯಿದ್ದಷ್ಟನ್ನೂ ಉಪಯೋಗಿಸಿ ವೇಗದಿಂದ ಎತ್ತಲು ಪ್ರಯತ್ನಪಟ್ಟನು, ಅದು ನೆಲದಿಂದ ಸ್ವಲ್ಪವೂ ಅಲುಗದೆ ನಿಂತುಬಿಟ್ಟಿತು. ಗುಡುಗುಡುಗುಡುಗೊಳ್ಳೆಂದು ನೋಡುತ್ತಿದ್ದವರು ಕೂಗಿಕೊಂಡರು, ದುರ್ಯೋಧನನು ವಿಶೇಷವಾಗಿ ಲಜ್ಜಿತನಾದನು.
Page #202
--------------------------------------------------------------------------
________________
ತೃತೀಯಾಶ್ಚಾಸಂ | ೧೯೭ ವ|| ಆಗಿ ಪೋಗಿ ಕರ್ಣನ ಮೊಗಮಂ ನೋಡಿದೊಡೆ ಕರ್ಣನಾಳನ ಸಿಗ್ಲಾದ ಮೊಗಮಂ ಕಂಡುಕಂ|| ಆನೇಟಿಪನೆಂದಾ ಕಾ
ನೀನಂ ಬಂದೆ ಬಿಲ್ಲನೇತಿಸಿ ತೆಗೆಯತ್ || ತಾನಾರ್ತನಿಲ್ಲ ತಗೆವಂ
ತಾ ನೃಪತಿಗಳರಿಗನಿದಿರೊಳೇಂ ಪುಟ್ಟಿದರೇ | ವ1 ಅಂತಾ ಬಿಲ್ಲಂ ಪಿಡಿದವರೆಲ್ಲಂ ಬಿಲ್ಕುಂಬಿಗುಮಾಗಿ ಸಿಗ್ಗಾಗಿ ಪೋಗಿ ತಂತಮ್ಮಿರ್ಪಡೆಯೊಳಿರೆ ಪಾಂಚಾಳರಾಜನೀ ನೆರೆದರಸುಮಕ್ಕಳೊಳಾರುಮಾ ಬಿಲ್ಲನೇಷಿಸಲಾರ್ತ ರಿಲ್ಲಮಾ ಜನವಡೆಯೊಳಾರಾನುಮಿಾ ಬಿಲ್ಲನೇಷಿಸಲಾರ್ಫೋಡ ಬನ್ನಿಮೆಂದು ಸಾಲುವುದುಂ
9.
ಚoll ಮುಸುಕಿದ ನೀರದಾವಳಿಗಳಂ ಕಿರಣಂಗಳೊಳೊತ್ತಿ ತೇಜಮ
ರ್ವಿಸುವಿನಮಾರ್ಗ ದಲೆ ಮೂಡುವ ಬಾಳ ದಿನೇಶಬಿಂಬದೊಂ | ದಸಕದಿನಾ ದಿ.ಜನಸಭಯಂ ಪೊಅಮಟೂಡೆ ಮಾಸಿದಂದಮುಂ
ಪಸದನದಂತ ಕಕ್ಕಸದು ತೋಚಿದುದಾ ಕದನತ್ರಿಣೇತ್ರನಾ 1 . ೬೧
ವ|| ಅಂತು ಪೊಲಮಡುವರಾತಿಕಾಲಾನಲನಂ ಕಂಡು ಕಟ್ಟುವಂದ ದೊಡ್ಡರೆಲ್ಲಂ * ಮುಸುಕಂl ಸಂಗತಸತ್ವರ್ ಕುರು ರಾ
ಜಂಗ ಕರ್ಣಂಗಮೇಳೆಸರಿದನಿದಂ | ತಾಂ ಗಡಮೇಟಿಪನೀ 'ಪಾ ರ್ವಂಗಕ್ಕಟ ಮಯೊಳೊಂದು ಮರುಳುಂಟಕ್ಕುಂ |
ವ|| ದುರ್ಯೊಧನನು ಕರ್ಣನ ಮುಖವನ್ನು ನೋಡಿದನು. ಕರ್ಣನು ಸ್ವಾಮಿಯ ನಾಚಿದ ಮೊಗವನ್ನು ನೋಡಿ ೬೦. ನಾನು ಏರಿಸುತ್ತೇನೆಂದು ಬಂದು ಎತ್ತಿ ಏರಿಸಲು ಶಕ್ತನಾಗಲಿಲ್ಲ. ಹಾಗೆ ಮಾಡುವುದಕ್ಕೆ ಆ ರಾಜರುಗಳು ಅರ್ಜುನನಿಗಿಂತ ಸಮರ್ಥರಾಗಿ ಹುಟ್ಟಿದ್ದಾರೆಯೇನು? ವll ಹಾಗೆ ಆ ಬಿಲ್ಲನ್ನು ಹಿಡಿದವರೆಲ್ಲರೂ ಅಸ್ತವ್ಯಸ್ತವಾಗಿ ಲಜ್ಜಿತರಾಗಿ ಹೋಗಿ ತಾವು ತಾವು ಇದ್ದ ಸ್ಥಳಗಳಲ್ಲಿದ್ದರು. ಆಗ ದ್ರುಪದನು ಇಲ್ಲಿರುವ ರಾಜಕುಮಾರರಲ್ಲಿ ಈ ಬಿಲ್ಲನ್ನೇರಿಸಲು ಯಾರೂ ಶಕ್ತರಾಗಲಿಲ್ಲ. ಈ ಜನದ ಗುಂಪಿನಲ್ಲಿ ಯಾರಾದರೂ ಈ ಬಿಲ್ಲನ್ನೇರಿಸುವ ಶಕ್ತಿಯಿದ್ದರೆ ಬನ್ನಿ ಎಂದು ಸಾರಿದನು. ೯೧. ಮುಚ್ಚಿಕೊಂಡಿರುವ ಮೋಡಗಳ ಸಮೂಹವನ್ನು ಕಿರಣಗಳಿಂದ ಒತ್ತಿ ತೇಜಸ್ಸು ಪ್ರಕಾಶಮಾನವಾಗುತ್ತಿರಲು ಇದ್ದಕ್ಕಿದ್ದ ಹಾಗೆ ಉದಯವಾಗುವ ಬಾಲಸೂರ್ಯ ಬಿಂಬದೊಂದು ರೀತಿಯಲ್ಲಿ ಬ್ರಾಹ್ಮಣಸಭೆಯಿಂದ ಅರ್ಜುನನು ಹೊರಟು ಬಂದನು. ಆ ಕದನತ್ರಿಣೇತ್ರನ ಮಲಿನವಾಗಿದ್ದ ರೀತಿಯೂ ಅಲಂಕಾರಮಾಡಿರು ವಂತೆಯೇ ಕಣ್ಣಿಗೆ ರಮಣೀಯವಾಗಿ ತೋರಿತು. ವ|| ಹಾಗೆ ಹೊರಟು ಬರುವ ಅರಾತಿಕಾಲಾನಲನನ್ನು ಕಂಡು ಗಡ್ಡಬಂದ ವೃದ್ದರೆಲ್ಲ ಮುತ್ತಿಕೊಂಡು ೬೨. ಸತ್ವಶಾಲಿಗಳಾದ ದುರ್ಯೊಧನಕರ್ಣರಿಗೂ ಏರಿಸುವುದಕ್ಕೆ ಅಸಾಧ್ಯವಾದ
Page #203
--------------------------------------------------------------------------
________________
೧೯೮ / ಪಂಪಭಾರತಂ
ವ|| ಎಂದು ಬಾಯ್ಕೆ ವಂದುದನೆ ನುಡಿಯ ರಂಗಭೂಮಿಯ ನಡುವೆ ನಿಂದು ದಿವ್ಯಚಾಪಕ್ಕೆ ಪೊಡವಟ್ಟವಯವದಿನೆಡಗೆಳೆತ್ತಿಕೊಂಡು ತನ್ನ ಬಗೆದ ಕಜ್ಜಮಂ ಗೊಲೆಗೊಳಿಸುವಂತಾ ಬಿಲ್ಲ ಗೊಲೆಯನೇಹಿತಿ ನೂಂಕಿಮll ದೆಸೆ ಕಂಪಂಗೊಳೆ ಕೊಂಡು ದಿವ್ಯಶರಮಂ ಕರ್ಣಾದಿಗಳ್ ಕಂಡು
ಕೃಷಮಾಗಿರ್ಪಿನಮೊಂದೆ ಸೂತಿ ತೆಗೆದಾಕರ್ಣಾಂತಮಂ ತಾಗ ನಿ. ಟ್ರಸಲಾರ್ಗಾರ್ಗಿಸಲಕ್ಕುಮಂಬೆಸಕದಾ ಮಾನಂ ಸಮಂತು ಮ.
ಚಿಸಿದಂ ದೇವರುಮಂ ಧನುರ್ಧರರುಮಂ ವಿದ್ವಿಷವಿದ್ರಾವಣಂ || ೬೩
ವ|| ಆಗಳಾ ಪಿಡಿದ ಬಿಲ್ಲೆ ಕರ್ಬಿನ ಬಿಲ್ಲಾಗೆಯುಮಂಬುಗಳೆ ಪೂವಿನಂಬುಗಳಾಗೆಯು ಮಚ್ಚ ಮಾನೆ ಮಾನಕೇತನಮಾಗೆಯುಂ ಸಹಜಮನೋಜನಂ ಮನೋಜನೆಂದ ಬಗೆದುಚಂ|| ನಡ ಕಡೆಗಣ್ ಮನಂ ಬಯಸೆ ತಳಮರ್ದಪ್ಪಲೆ ತೋಳಳಾಸೆಯೊಳ್
ತೊಡರ್ದಿರೆ ಪೂಣ್ ಘರ್ಮಜಲಮು ಭಯಂ ಕಿಡೆ ನಾಣ್ ವಿಕಾರದೊಳ್ | ತೊಡರ್ದಿರೆ ಕೆಯ್ವುಮ್ಮಳಿಪ ಕನ್ನೆಗೆ ಸುಂದರಮಾಲೆ ಮಾಲೆಯಂ ತಡೆಯದೆ ನೀಡಿ ಮಾಣದೆ ಗುಣಾರ್ಣವನಂ ಸತಿ ಮಾಲೆ ಹೂಡಿದಳ್ || ೬೪
ಇದನ್ನು ಇವನು ಈ ಹಾರುವನು ಏರಿಸುತ್ತಾನಲ್ಲವೇ? ಈ ಬ್ರಾಹ್ಮಣನಿಗೆ, ಅಯ್ಯೋ, ಶರೀರದಲ್ಲಿ ಪಿಶಾಚಿ ಸೇರಿಕೊಂಡಿರಬೇಕು ವl ಎಂದು ಬಾಯಿಗೆ ಬಂದುದನ್ನು ಆಡಿದರು. ಅರ್ಜುನನು ರಂಗಸ್ಥಳದ ಮಧ್ಯಭಾಗದಲ್ಲಿ ನಿಂತುಕೊಂಡು ದಿವ್ಯಮನಸ್ಸಿಗೆ ನಮಸ್ಕಾರಮಾಡಿ ಶ್ರಮವಿಲ್ಲದೆ ಎಡಗೈಯಿಂದಲೇ ಎತ್ತಿಕೊಂಡು ತಾನು ಕೈಹಾಕಿದ ಕಾರ್ಯವನ್ನು ಸುಗಮವಾಗಿ ಮುಗಿಸುವಂತೆ ಆ ಬಿಲ್ಲಿನ ತುದಿಯನ್ನು ಎಳೆದು ಕಟ್ಟಿ೬೩. ದಿಕ್ಕುಗಳೆಲ್ಲ ನಡುಗುವ ಹಾಗೆ ದಿವ್ಯ ಬಾಣವನ್ನು ತೆಗೆದುಕೊಂಡು ಕರ್ಣನೇ ಮೊದಲಾದವರು ನೋಡಿ ಆಶ್ಚರ್ಯಪಡುತ್ತಿರಲು ಒಂದೇ ಸಲಕ್ಕೆ ಕಿವಿಮುಟ್ಟುವವರೆಗೆ ಸೆಳೆದು ಇದನ್ನು ಯಾರಿಗೆ ನೋಡುವುದಕ್ಕೂ ಹೊಡೆಯುವುದಕ್ಕೂ ಸಾಧ್ಯ ಎಂಬಂತಿದ್ದ ಮೀನನ್ನು ಛೇದಿಸಿ ದೇವತೆಗಳನ್ನೂ ಕುಶಲರಾದ ಬಿಲ್ಗಾರರನ್ನೂ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಸಂತೋಷಪಡಿಸಿದನು. ವ|| ಆಗ ಅವನು ಹಿಡಿದ ಬಿಲ್ಲನ್ನೇ ಕಬ್ಬಿನ ಬಿಲ್ಲನ್ನಾಗಿಯೂ ಬಾಣಗಳನ್ನೇ ಪುಷ್ಪಬಾಣಗಳನ್ನಾಗಿಯೂ ಹೊಡೆದ ಮೀನನ್ನೇ ಮೀನಿನ ಬಾವುಟವನ್ನಾಗಿಯೂ ಸಹಜಮನೋಜನಾದ ಅರ್ಜುನನನ್ನೇ ಮನ್ಮಥನನ್ನಾಗಿಯೂ ಭಾವಿಸಿದಳು. ೬೪. ಅವಳ ಕಡೆಗಣ್ಣು ಅವನಲ್ಲಿ ನಾಟಿತು. ಮನಸ್ಸು ಅವನನ್ನು ಬಯಸಿತು, ತೋಳುಗಳು ಅವನ ಗಾಢಾಲಿಂಗನಕ್ಕೆ ಆಶಿಸಿತು. ಬೆವರು ಹೆಚ್ಚುತ್ತಿದ್ದಿತು ಭಯವು ಉಂಟಾಯಿತು ನಾಚಿಕೆ ಮಾಯವಾಯಿತು, ಅಂಗವಿಕಾರಗಳು ಶರೀರದಲ್ಲಿ ತಲೆದೋರಿದುವು. ಸುಂದರಮಾಲೆಯೆಂಬ ಚೇಟಿ ಸ್ವಯಂವರಮಾಲೆಯನ್ನು ಸಾವಕಾಶಮಾಡದೆ ಅವಳ ಕೈಲಿತ್ತಳು. ಸತಿಯಾದ
Page #204
--------------------------------------------------------------------------
________________
ತೃತೀಯಾಶ್ವಾಸಂ | ೧೯೯ ವು ಆಗ ದ್ರುಪದಂ ಬದ್ದವಣದ ಪಳೆಗಳಂ ಬಾಜಿಸಲ್ಬಟ್ಟು ಸುರತ ಮಕರ ಧ್ವಜನಂ ಬ್ರೌಪದಿಯೊಡನೆ ಸಿವಿಗೆಯನೇಟಿಸಿ ಧೃಷ್ಟದ್ಯುಮ್ಮ ಯುಧಾಮನ್ನೂತ್ತಮೌಜಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನಲಂ ಮೂರಿವಿಟ್ಟಂತೆ ಬರೆ ಮುಂದಿಟ್ಟು ಪೊಳಲೊಡಗೊಂಡುವರ್ಫುದುಮಿ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಯಾಸನಾದಿಗಳೊಳಾಲೋಚಿಸಿ ಪೇಟೆಮೇಗಯ್ಯಮೆನೆ ಕರ್ಣನಿಂತೆಂದಂ
ಮಗ ಜನಮೆಲ್ಲಂ ನೆರೆದಕ್ಕಟಣ್ಣರಿವರಿಂದೇವಂದರೇಮೋದರೆಂ
ಬಿನಮೇಂ ಪೋಪಮೆ ನಾಡ ಕೂಟಕುಳಿಗಳೇದೋಸಮೇಂ ಬನ್ನಮೊಂ | ದನೆ ಕೇಳಾಂತರನಿಕ್ಕಿ ಮಿಕ್ಕ ವಿಜಯಶ್ರೀಕಾಂತೆಗಂ ಕಾಂತೆಗಂ” ನಿನಗಂ ದೋರ್ವಲದಿಂದಮೊಂದ ಪಸೆಯೊಳ್ ಪಾಣಿಗ್ರಹಂಗಯ್ಯನೇ ||೬೫
ವ|| ಎನೆ ಶಲ್ಯನಿಂತೆಂದಂ
ಚಂ|| ಕುಡುವೊಡೆ ನಿಸ್ತಪಂ ಕುಡುವುದೇಚಿಸಿದಂ ಬೆಸೆಕೋಲನೆಂದು ಪೇಯ್
ಕುಡುವುದೆ ಕನ್ನೆಯಂ ದ್ವಿಜಕುಲಂಗಿದು ವಿಶ್ವನರೇಂದ್ರ ವೃಂದದೊಳ್ | ತೊಡರ್ದ ಪರಾಭವಂ ದ್ರುಪದನಂ ತಳೆದೊಟ್ಟದೆ ಕೆಮ್ಮಗಾನಿದಂ | ಕಡೆಗಣಿಸಿರ್ದೊಡೆನ್ನ ಕಡುಗೊರ್ವಿದ ತೋಳಳ ಕೊರ್ವದೇವುದೋ || ೬೬
ಬ್ರೌಪದಿಯು ಗುಣಾರ್ಣವನಿಗೆ ಮಾಲೆಯನ್ನು ಹಾಕಿದಳು. ವ|| ಆಗ ದ್ರುಪದನು ಮಂಗಳವಾದ್ಯಗಳನ್ನು ವಾದನಮಾಡಿಸಿ ಸುರತಮಕರಧ್ವಜನಾದ ಅರ್ಜುನನನ್ನು ಬ್ರೌಪದಿಯೊಡನೆ ಪಲ್ಲಕ್ಕಿಯನ್ನೇರಿಸಿ ಧೃಷ್ಟದ್ಯುಮ್ಮ, ಯುಧಾಮನ್ಯು, ಉತ್ತಮೌಜ, ಶಿಖಂಡಿ ಮತ್ತು ಚೇಕಿತಾನರೆಂಬ ತನ್ನ ಮಕ್ಕಳೂ ಮತ್ತು ತಮ್ಮಂದಿರೊಡಗೂಡಿ ನೆಲವು ಬಾಯಿಬಿಟ್ಟ ಹಾಗೆ ಅರ್ಜುನನನ್ನು ಮುಂದಿಟ್ಟುಕೊಂಡು ಪಟ್ಟಣಕ್ಕೆ ಬಂದನು. ದುರ್ಯೊಧನನು ಕರ್ಣ,ಶಲ್ಯ, ಶಕುನಿ ದುಶ್ಯಾಸನನೇ ಮೊದಲಾದವರಲ್ಲಿ ಆಲೋಚಿಸಿ ಈಗ ಏನು ಮಾಡೋಣ ಹೇಳಿ ಎನ್ನಲು ಕರ್ಣನು ಹೀಗೆ ಹೇಳಿದನು. ೬೫. ಜನವೆಲ್ಲ ಒಟ್ಟುಗೂಡಿ ಅಯ್ಯೋ ಅಣ್ಣಂದಿರು ಈ ದಿನ ಏಕೆ ಬಂದರು ಏಕೆ ಹೋಗುತ್ತಾರೆ ಎನ್ನುವ ಹಾಗೆ ನಾವು ಹೋಗುವುದೇ? ಪರಾಕ್ರಮಿಗಳಾದ ನಮಗೆ ಈ ತೆರನಾದ ಸೋಲು ಅವಮಾನಕರ, ನನ್ನ ಅಭಿಪ್ರಾಯವಿದು : ಎದುರಿಸಿದವರನ್ನು ಸೋಲಿಸಿ ಈಗ ಕೈಮೀರಿರುವ ವಿಜಯಲಕ್ಷಿಗೂ ಈ ದೌಪದಿಗೂ ನಿನಗೂ ನನ್ನ ಬಾಹುಬಲದಿಂದ ಒಂದೇ ಹಸೆಮಣೆಯಲ್ಲಿ ಪಾಣಿಗ್ರಹಣ (ವಿವಾಹ)ವನ್ನು ಮಾಡಲಾರೆನೇ ? ಎಂದನು. ೬೬. ಕನ್ಯಾದಾನಮಾಡಬೇಕಾದರೆ ಲಜ್ಜೆಯಾಗದ ರೀತಿಯಲ್ಲಿ ದಾನಮಾಡಬೇಕು. ಹತ್ತಿಯನ್ನು ಎಕ್ಕುವ ಬಿಲ್ಲಿನಂತಿರುವ ಈ ಬಿಲ್ಲನ್ನು ಏರಿಸಿದನೆಂಬ ಕಾರಣದಿಂದ ಬ್ರಾಹ್ಮಣವಂಶದವನಿಗೆ ಕನೈಯನ್ನು ಕೊಡುವುದೇ? ಈ ಪರಾಭವವು ಸಮಸ್ತರಾಜವೃಂದಕ್ಕೂ ಸಂಬಂಧಪಟ್ಟುದು, ಆದುದರಿಂದ ಈಗ ನಾನು ಈ ದ್ರುಪದನನ್ನು ತರಿದು ಹಾಕದೆ ಸುಮ್ಮನಿದ್ದರೆ ಕೊಬ್ಬಿ ಬೆಳೆದಿರುವ ನನ್ನ ತೋಳುಗಳಿಗೆ
Page #205
--------------------------------------------------------------------------
________________
೨೦೦ | ಪಂಪಭಾರತಂ
ವ|| ಎಂದು ಕೆಳರ್ದು ನುಡಿದು ಸಯಂಬರಕೆ ನೆರದರಸುಮಕ್ಕಳೆಲ್ಲರನುತ್ಸಾಹಿಸಿ ನೋಡ ನೋಡಿಈ ಪಕ್ಕರೆಯಿಕ್ಕಿ ಬಂದುವು ಹಯಂ ಘಟಿ ಪಣಿದುವಾಯುಧಂಗಳಿಂ
. ತೆಕ್ಕನೆ ತೀವಿ ಬಂದುವು ರಥಂ ಪುಲಿವಿಂಡುವೊಲಾದಳುರ್ಕ ಕೈ | - ಮಿಕ್ಕಿರೆ ಬಂದುದೋಂದಣಿ ರಣಾನಕ ರಾವಮಳುಂಬಮಾದುದಾರ್
ಮಿಕ್ಕು ಬರ್ದುಂಕುವನ್ನರಿವರ್ಗಂಬಿನೆಗಂ ಮಸಗಿತು ರಾಜಕಂ || ೬೭ ವ|| ಅಂತು ನಲಂ ಮೂರಿವಿಟ್ಟಂತೆ ತಳರ್ದುಚಂ|| ತರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳಿವಟ್ಟ ಬೆ
ಭೈರೆಗಳ ಪಿಂಡನೆತ್ತಿಸಿದ ಬೆಳೊಡೆಗಳ ಮಕರಂಗಳ ಭಯಂ | ಕರ ಕರಿಗಳ ತಂಬೂಳೆವ ಮಿಾಂಗಳನುಳ್ಳುವ ಕೈದುಗಳ ನಿರಾ ಕರಿಸಿರೆ ಮೆರೆದಪ್ಪಿ ಕವಿದತ್ತು ನರಾಧಿಪಸೈನ್ಯಸಾಗರಂ ||
೬೮ ವ|| ಅಂತು ಕವಿದ ರಿಪುಬಳಜಳನಿಧಿಯ ಕಳಕಳರವಮಂ ಕೇಳು ಪೋಲಲಂ ಪುಗಲೊಲ್ಲದೆ ನಿಂದ ಮನುಜಮಾಂಧಾತನಂ ಪಾಂಚಾಳರಾಜನಿಂತೆಂದಂಮ|| ಧನುವಂ ನೀಂ ತೆಗೆದಚ್ಚು ಮಾನನಳವಂ ಕೆಯ್ಯೋಂಡುದರ್ಕಂ ಕರಂ
ನಿನಗೀ ಕನ್ನಿಕೆ ಸೋಲುದರ್ಕಮರ್ದಯೊಳ್ ಕೋಪಾಗ್ನಿ ಕೈಗನ್ಮ ಬಂ | ದಿನಿತುಂ ರಾಜಕುಲಂ ಸಮಸ್ತಭರದಿಂ ಮೇಲೆತ್ತುದಿನ್ ಕಾವನಾ
ವನೊ ನೀನಲ್ಲದೆ ಕಾವುದನ್ನ ತಲೆಯಂ ವಿದ್ವಿಷ್ಟವಿದ್ರಾವಣಾ | ಸಾರ್ಥಕತೆಯೇನು? ವ|| ಎಂದು ಕೋಪಿಸಿ ನುಡಿದು ಸ್ವಯಂವರಕ್ಕೆ ಸೇರಿದ್ದ ಎಲ್ಲ ರಾಜಕುಮಾರರನ್ನೂ ಪ್ರೋತ್ಸಾಹಿಸಿ ನೋಡುತ್ತಿದ್ದಂತೆಯೇ ೬೭. ಜೀನುಗಳನ್ನು ಧರಿಸಿದ ಕುದುರೆಗಳು ಬಂದುವು. ಆನೆಗಳ ಸಮೂಹವು ಯುದ್ಧಸನ್ನದ್ದವಾದವು. ಆಯುಧಗಳಿಂದ ತುಂಬಿದ ರಥಗಳು ಬಂದವು. ಕಾಲಾಳುಸೈನ್ಯದ ಪಂಕ್ತಿಯೊಂದು ಹುಲಿಯ ಹಿಂಡಿನ ಹಾಗೆ ಕೈಮೀರಿ ಮುಂದೆ ಬಂದಿತು. ಯುದ್ಧವಾದ್ಯವೂ ವಿಜೃಂಭಿಸಿತು. ಇದನ್ನು ಮೀರಿ ಯಾರು ಬದುಕುತ್ತಾರೆ ಎನ್ನುವ ಹಾಗೆ ರಾಜಸಮೂಹವು ರೇಗಿ ಬಂದಿತು. ವಗಿ ಹಾಗೆ ನೆಲವು ಪ್ರಸರಿಸಿದ ಹಾಗೆ ನಡೆದು ೬೮. ಚಲಿಸುತ್ತಿರುವ ಧ್ವಜಗಳ ಸಮೂಹವು ತೆರೆಗಳ ರಾಶಿಗಳನ್ನೂ ಎತ್ತಿ ಹಿಡಿದ ಬಿಳಿಯ ಕೊಡೆಗಳು ಸಾಲಾಗಿರುವ ಬಿಳಿಯ ನೊರೆಗಳ ಸಮೂಹವನ್ನೂ ಭಯಂಕರವಾದ ಆನೆಗಳು ಮೊಸಳೆಗಳನ್ನೂ ಪ್ರಕಾಶಿಸುತ್ತಿರುವ ಆಯುಧಗಳು ಹೊಳೆಯುತ್ತಿರುವ ಮೀನುಗಳನ್ನೂ ತಿರಸ್ಕರಿಸುತ್ತಿರಲು ರಾಜರ ಸೇನಾಸಮುದ್ರವು ಮೇರೆಯನ್ನು ಮೀರಿ ಕವಿಯಿತು. ವ|| ಹಾಗೆ ಮುತ್ತಿದ ಶತ್ರುಸೇನಾಸಮುದ್ರದ ಕಳಕಳಶಬ್ದವನ್ನು ಕೇಳಿ ಪುರಪ್ರವೇಶಮಾಡದೇ ನಿಂದ ಮನುಜಮಾಂಧಾತನಾದ ಅರ್ಜುನನನ್ನು ಕುರಿತು ಪಾಂಚಾಳರಾಜನಾದ ದ್ರುಪದನು ಹೀಗೆಂದನು-೬೯. ನೀನು ಬಿಲ್ಲನ್ನು ಏರಿಸಿ ಮೀನನ್ನು ಹೊಡೆದು ಪರಾಕ್ರಮವನ್ನು ಪ್ರದರ್ಶಿಸಿದುದಕ್ಕೂ ಈ ಕನ್ಯ ನಿನಗೆ ವಿಶೇಷವಾಗಿ ಸೋತು ಅಧೀನಳಾದುದಕ್ಕೂ ಎದೆಯಲ್ಲಿ ಕೋಪಾಗ್ನಿ ಹೆಚ್ಚಿ ಈ ರಾಜಸಮೂಹವು ವಿಶೇಷ ವೇಗದಿಂದ ನಮ್ಮ
Page #206
--------------------------------------------------------------------------
________________
ತೃತೀಯಾಶ್ವಾಸಂ | ೨೦೧ ವ|| ಎಂಬುದುಮರಾತಿಕಾಳಾನಳನಿದರ್ಕೆನುಂ ಚಿಂತಿಸಿದ ನೀಮನ್ನ ಕಾಳಗಮಂ ಪೆಜಿಗಿರ್ದು ನೋಡಿಯೆಂದು ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಕ ಪುಗುವರಾತಿಬಲಮಂ ಮಾರ್ಕೊಂಡು ತೆಗೆನೆದಿಸೆಚಂl ಸರಳ ಪೊದಲ್ಲ ಬರಿಯ ಕೋರಲಾಗಿದೆ ಬಿಲ್ ತರಳು ದು
ರ್ಧರ ಹಯಮಕ್ಕೆ ಸಂದಣಿಸಿ ಸಂದಣಿ ಕೊಟ್ಟುದಿಗೊಂಡುದಗ್ರ ಭೀ | ಕರ ರಥಮಣ್ಣಿ ದಂತಿಘಟೆಗಳ್ ಪಳಗಿಟ್ಟೋಡೆ ಕಟ್ಟೆಗಟ್ಟದಂ
ತಿರೆ ತಳರ್ದತರಾತಿಬಲಮಾಂಸವರಾರ್ ಕದನತ್ರಿಣೇತ್ರನಂ ||
ವ|| ಆಗಳ್ ಕರ್ಣನರ್ಣವನಿನಾದದಿಂದಾರ್ದು ಗುಣಾರ್ಣವನೊಳ್ ಬಂದು ತಾಗಿ ಶಲ್ಯಂ ಭೀಮಸೇನನೊಳ್ ತಾಗಿ ಕಿಳದುಂ ಪೊಟ್ಟು ಕಾದೆಚಂ|| ಅರಿದು ಗೆಲಿ ಪಾರ್ವನ ಶರಾಸನವಿದೈಯನೆಂದು ನೊಂದು ನಿ
ತರಿಸದೆ ಪಾರ್ವನೊಳ್ ಕಲಹಮಾಗದು ಚಿಃ ದೊರೆಯಲಿದೆಂದು ಭಾ | . ಸರಸುತನೊಯ್ಯನೋಸರಿಗೆ ಮದ್ರಮಹೀಶನುಮಂ ಮರುತ್ತುತಂ
ವಿರಥನೆ ಮಾಡಿ ತಳ್ಳು ನೆಲಕಿಕ್ಕಿದನೊರ್ಮೆಯೆ ಮಲ್ಲಯದ್ಧದೊಳ್ || ೭೧
ವಗೆ 'ಆಗಳಾ ಬಲದ ನಡುವಿರ್ದ ನಾರಾಯಣಂ ಬಲದೇವಂಗ ಸುಟ್ಟಿತೋಟಿ ಭೀಮಾರ್ಜುನರ್ಕಳಿವರಮೋಘಮಪ್ಪರೆಂದವರ ಸಾಹಸಕ್ಕೆ ಮೆಚ್ಚಿ ಸಂತಸಂಬಟ್ಟಿರ್ದಾಗಳುಆದರಸು ಮಕ್ಕಳೆಲ್ಲಂ ಕರ್ಣ ಶಲ್ಯರ್ ಮೊಗಂದಿರಿದುದು ಕಂಡು ಮನಂಗೆಟ್ಟು
ಮೇಲೆದ್ದಿದೆ. ಇನ್ನು ಮೇಲೆ ನಮ್ಮನ್ನು ರಕ್ಷಣೆ ಮಾಡುವವರು ನೀನಲ್ಲದೆ ಮತ್ತಾರು? ಎಲೈ ವಿದ್ವಿಷ್ಟವಿದ್ರಾವಣನೇ ನನ್ನ ತಲೆಯನ್ನು ಕಾಯಬೇಕು ಎಂದನು. ವn ಅರಾತಿಕಾಲಾನಳನು (ಅರ್ಜುನನು) ಇದಕ್ಕೆ ನೀವು ಏನೂ ಚಿಂತಿಸಬೇಕಾಗಿಲ್ಲ: ನೀವು ನನ್ನ ಕಾಳೆಗವನ್ನು ಹೊರಗಿದ್ದು ನೋಡಿ ಎಂದು ಹೇಳಿ ತಾನೂ ಭೀಮಸೇನನೂ ಉತ್ತಮವಾದ ಬಿಲ್ಲುಗಳನ್ನು ತೆಗೆದುಕೊಂಡು ಪ್ರತಿಜ್ಞೆಮಾಡಿ ಪ್ರವೇಶಮಾಡಿದ ಶತ್ರುಸೈನ್ಯವನ್ನು ಪ್ರತಿಭಟಿಸಿ ದೀರ್ಘವಾಗಿ ಎಳೆದು ಪ್ರಯೋಗಮಾಡಿದರು. ೭೦. ಒಟ್ಟಿಗೆ ಸೇರಿದ ಬಿಲ್ಲಿನ ಮಳೆಯ ಸುರಿತವನ್ನು ತಡೆಯಲಾರದೆ ಬಿಲ್ಲಾಳುಗಳು ಹಿಮ್ಮೆಟ್ಟಿದರು, ಪ್ರತಿಭಟಿಸಲಾಗದೆ ಕುದುರೆಗಳು ನಾಶವಾದವು. ಗುಂಪುಕೂಡಿದ ಬಿಲ್ಲಾಳಿನ ಸಾಲುಗಳು ಬಿಲ್ಲಿನ ಪೆಟ್ಟಿನಿಂದ ಕುದಿದುಹೋಯಿತು. ಎತ್ತರವೂ ಭಯಂಕರವೂ ಆದ ರಥವು ಅಳಿದುಹೋಯಿತು. ಆನೆಯ ಸಮೂಹವು ಹಿಮ್ಮೆಟ್ಟಿ ಓಡಿತು. ಹಿಂದೆ ಇದ್ದ ಆನೆಯ ಗುಂಪುಗಳು ಕಟ್ಟೆಯನ್ನು ಕಟ್ಟಿದ ಹಾಗಿರಲು ಶತ್ರುಸೈನ್ಯವು ಸರಿದೋಡಿತು. ಕದನತ್ರಿಣೇತ್ರನಾದ ಅರ್ಜುನನನ್ನು ಪ್ರತಿಭಟಿಸುವವರಾರಿದ್ದಾರೆ? ವlು ಆಗ ಕರ್ಣನು ಸಮುದ್ರಘೋಷದಿಂದ ಆರ್ಭಟಮಾಡಿ ಗುಣಾರ್ಣವನಲ್ಲಿಯೂ ಶಲ್ಯನು ಭೀಮಸೇನನಲ್ಲಿಯೂ ತಾಗಿದರು. ೭೧. ಕರ್ಣನು ಹಾರುವನ ಬಿಲ್ವಿದ್ಯೆಯನ್ನು ಗೆಲುವುದಸಾಧ್ಯ ಎಂದು ದುಃಖಿಸಿ ಚಿಃ ಬ್ರಾಹ್ಮಣರಲ್ಲಿ ಜಗಳವಾಡುವುದು ಯೋಗ್ಯವಲ್ಲ ಎಂದು ನಿಧಾನವಾಗಿ ಹಿಮ್ಮೆಟ್ಟಿದನು, ಭೀಮನೂ ಮದ್ರರಾಜನಾದ ಶಲ್ಯನನ್ನು ರಥದಿಂದ ಕೆಳಕ್ಕಿಳಿಸಿ ಮಲ್ಲಯುದ್ದದಲ್ಲಿ ಒಂದೇ ಸಲಕ್ಕೆ ನೆಲಕ್ಕುರುಳಿಸಿದನು. ವt ಆಗ ಆ ಸೈನ್ಯದ ಮಧ್ಯೆ ಇದ್ದ ಶ್ರೀಕೃಷ್ಣನು ಬಲರಾಮನಿಗೆ ಇವರು ಭೀಮಾರ್ಜುನರು
Page #207
--------------------------------------------------------------------------
________________
೨೦೨/ ಪಂಪಭಾರತಂ ಕoll ಕರಮೊಸೆದಾ ದ್ರುಪದಜೆಯೊಳ್
ನೆರೆದೊಸಗೆಗೆ ತಮ್ಮ ಬೀರಮಂ ಬಿಂಕಮುಮಂ | ತೆವುಂ ತೆಲ್ಲಂಟಿಯುಮೆಂ
ದರಿಕೇಸರಿಗಾಗಳೀವವೋಲ್ ಬೆನ್ನಿತ್ತರ್ || ವ|| ಆಗಳ್ ವಿಕ್ರಾಂತತುಂಗಂ ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಟಿ ಮುಗುಳ್ಳಗೆ ನಗುತ್ತುಂ ಪಾಂಚಾಳರಾಜತನೂಜೆಗಿಂತೆಂದಂಕಂಗೆ ನಿನ್ನನುಟುಗಿಸಲುಮಾಜಿಯೊ
ಆನಂ ಚೆಂಕೊಂಡು ಕಾದಲುಂ ಬಂದೀಗಲ್ | ಬಿನ್ನನೆ ಮೊಗದಿಂ ಬೀರರ್
ಚೆನ್ನಿತ್ತುದನಿನಿಸು ನೋಡ ಸರಸಿರುಹಮುಖಿ || ವ|| ಎಂಬನ್ನೆಗಂ ದ್ರುಪದಂ ಬಂದವರ್ ಪಾಂಡವರಪುದುಮಂ ತನ್ನಳಿಯಂ : ವಿಕ್ರಮಾರ್ಜುನನಪುದುಮಂ ತಪ್ಪಿಲ್ಲದಣಿದು ಮಹಾವಿಭೂತಿಯಿಂ ಪೋಲಲಂ ಪುಗಿಸಿಚಂII ಪೊಲೊಳಗೊಪ್ಪೆ ಕನ್ನಡಿಯ ಕಂಚಿನ ತೋರಣದೋಳಿಗಳ ತಳ
ತಳಿಗೆ ವಿಚಿತ್ರಕೇತುತತಿಗಳ ಮಿಳಿರ್ದಾಡ ಪುರಾಂಗನಾಜನಂ | ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಂ
ಬಳೆಯಿಸೆ ಪೊಕ್ಕನಾ ದ್ರುಪದಮಂದಿರಮಂ ಪರಸೈನ್ಯಭೈರವಂ || ೭೪ ಎಂದು ಬೆರಳಿನಿಂದ ಸುಟ್ಟಿ ತೋರಿಸಿ ಇವರು ಅತಿಸಾಹಸಿಗಳಾಗುತ್ತಾರೆ ಎಂದು ಅವರ ಪರಾಕ್ರಮಕ್ಕೆ ಸಂತೋಷಪಟ್ಟನು. ಉಳಿದ ರಾಜಕುಮಾರರೆಲ್ಲ ಕರ್ಣಶಲ್ಯರು ಮುಖತಿರುಗಿಸಿ ಹಿಮ್ಮೆಟ್ಟಿದುದನ್ನು ನೋಡಿ ಉತ್ಸಾಹಶೂನ್ಯರಾಗಿ ೭೨. ಬ್ರೌಪದಿಯನ್ನು ಪಡೆಯಲು ಬಂದು ಸೇರಿದ ಸಂತೋಷಕ್ಕಾಗಿ ತಮ್ಮ ಪರಾಕ್ರಮವನ್ನೂ ಅಹಂಕಾರವನ್ನೂ ತಪ್ಪುಕಾಣಿಕೆಯನ್ನಾಗಿಯೂ ಬಳುವಳಿಯನ್ನಾಗಿಯೂ ಅರಿಕೇಸರಿಗೆ ಕೊಡುವ ಹಾಗೆ ಬೆನ್ನು ತಿರುಗಿಸಿ ಪಲಾಯನಮಾಡಿದರು. ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಬಿಲ್ಲಿನ ತುದಿಯ ಮೇಲೆ ಕಯ್ಯನ್ನೂರಿಕೊಂಡು ಹುಸಿನಗೆ ನಗುತ್ತ ದೌಪದಿಗೆ ಹೀಗೆ ಹೇಳಿದನು -೭೩. ಎಲ್ ಕಮಲಮುಖಿಯಾದ ಬ್ರೌಪದಿಯೇ ಈ ವೀರರು ನಿನ್ನನ್ನು ಒಲಿಸುವುದಕ್ಕೂ ನನ್ನೊಡನೆ ಜಗಳವಾಡುವುದಕ್ಕೂ ಬಂದು ಈಗ ಪೆಚ್ಚುಮುಖದಿಂದ ಬೆನ್ನು ತಿರುಗಿಸಿ ಹೋಗುತ್ತಿರುವುದನ್ನು ಸ್ವಲ್ಪನೋಡು ಎಂದು ತೋರಿಸಿದನು. ವl ಅಷ್ಟರಲ್ಲಿ ದ್ರುಪದನು ಅಲ್ಲಿಗೆ ಬಂದಿರುವವರು ಪಾಂಡವರಾಗಿರುವುದನ್ನೂ ತನ್ನ ಅಳಿಯನು ವಿಕ್ರಮಾರ್ಜುನನಾಗಿರುವುದನ್ನೂ ನಿಶ್ಚಯವಾಗಿ ತಿಳಿದು ಮಹಾವೈಭವದಿಂದ ಪುರಪ್ರವೇಶಮಾಡಿಸಿದನು. ೭೪. ಪಟ್ಟಣದಲ್ಲಿ ಕನ್ನಡಿ ಮತ್ತು ಕಂಚಿನ ತೋರಣದ ಸಮೂಹಗಳು ಥಳಿಥಳಿಸಿ ಒಪ್ಪಿದವು. ವಿಧವಿಧವಾದ ಬಾವುಟಗಳ ಸಮೂಹಗಳು ಅಲುಗಾಡಿದುವು. ಪುರದ ಸೀಜನರು ಜಯಜಯವೆಂದು ಘೋಷಿಸುವ ಶಬ್ದವೂ ಚೆಲ್ಲುವ ಮಂತ್ರಾಕ್ಷತೆಯೂ ಮನಸ್ಸಿಗೆ ಸಂತೋಷವನ್ನು ಹೆಚ್ಚಿಸಿದುವು. ಪರಸೈನ್ಯಭೈರವನಾದ ಅರ್ಜುನನು ದ್ರುಪದನ ಅರಮನೆಯನ್ನು ಪ್ರವೇಶಿಸಿದನು.
Page #208
--------------------------------------------------------------------------
________________
14
ತೃತೀಯಾಶ್ವಾಸಂ | ೨೦೩
ವ|| ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭದ್ರದೊಳಂ ಕರ್ಕೆತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಮೊಪ್ಪುವ ವಿವಾಹಗೇಹಮಂ ಸಮೆಯಿಸಿಯದು ನಡುವಣಾದ್ರ್ರಮೃತ್ತಿಕಾವಿರಚಿತಮಪ್ಪ ಚತುರಾಂತರದೊಳ್ ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪೆಸೆಯೊಳ್ ಗುಣಾರ್ಣವನನಾ ದ್ರುಪದಜೆಯನೊಡನೆ ಕುಳ್ಳಿರಿಸಿ ಹಿತ ಪುರೋಹಿತ ಪ್ರಾಜ್ಯಾಜ್ಯಾಹುತಿ ಹುತ ಹುತವಹಸಮಕ್ಷದೊಳ್ ಕೆಝಾರೆಂದು ಪಾಣಿಗ್ರಹಂಗೆ
ಚoli ಇಡಿದಿರೆ ಮಂಜಿನೊಳ್ ತುಲುಗಿ ತೆಂಕಣಗಾಳಿಯೊಳಾದ ಸೋಂಕಿನೊಳ್ ನಡುಗುವಶೋಕವಲ್ಲರಿಯ ಪಲ್ಲವದೊಳ್ ನವಭೂತಪಲ್ಲವಂ | ತೊಡರ್ದವೊಲಾಗೆ ಘರ್ಮಜಲದಿಂ ನಡುವಾಕೆಯ ಪಾಣಿಪಲ್ಲವಂ ಬಿಡಿದು ಬೆಡಂಗನಾಳುದು ಗುಣಾರ್ಣವನೊಪ್ಪುವ ಪಾಣಿಪಲ್ಲವಂ || 2.9%
ವ|| ಅಂತೋರ್ವರೋರ್ವರ ಕಿರುಕುಣಿಕೆಗಳಂ ಪಿಡಿದು ರತಿಯುಂ ಕಾಮದೇವನುಂ ಬರ್ಪಂತೆ ಬೇಳೆಯ ಕೊಂಡದ ಮೊದಲೆ ವಂದು ಕನಕಗಿರಿಯ ಬಲಗೊಳ್ ಪತಂಗ ದಂಪತಿಯಂತಾ ದಂಪತಿಗಳ್ ಸಪ್ತಾರ್ಚಿಯಂ ಮೂಲ ಸೂಯ್ ಬಲವಂದು ನಿಂದಿಂ ಬಟೆಯನಾಕೆ ಪುರೋಹಿತನ ಪೇಜ್ಜೆಯೊಳ್ ಲಾಜೆಯನಗ್ನಿಕುಂಡದೊಳ್ ಸುರಿದು
ವ|| ಆಗ ದ್ರುಪದನು ಪಚ್ಚೆಯೆಂಬ ರತ್ನದಿಂದ ಮಾಡಿದ ನೆಲಗಟ್ಟಿನಿಂದಲೂ ಎಳೆಯ ಇಂದ್ರನೀಲಮಣಿಯಿಂದ ಮಾಡಿದ ಕಂಭಗಳಿಂದಲೂ ಹವಳದ ಜಂತಿಗಳಿಂದಲೂ - ಪದ್ಮರಾಗದ ಬೋದಿಗೆಗಳಿಂದಲೂ ಇಂದ್ರನೀಲದ ಉಪ್ಪರಿಗೆಗಳಿಂದಲೂ ಚಿನ್ನದ ಜಾಲರಿಗಳಿಂದಲೂ ಸ್ಪಟಿಕದ ಚಿತ್ರಿತವಾದ ಗೋಡೆಗಳಿಂದಲೂ ಚಂದ್ರಕಾಂತ ಶಿಲೆಯಿಂದ ನಿರ್ಮಿಸಿದ ಮೇಲ್ಮಹಡಿಯಿಂದಲೂ ವಿವಾಹಗೃಹವನ್ನು ಸಿದ್ಧಗೊಳಿಸಿದನು. ಅದರ ಮಧ್ಯೆ ಹಸಿಯ ಮಣ್ಣಿನಿಂದ ಮಾಡಿದ ಚಚೌಕದ ಹಸೆಯಜಗಲಿಯಲ್ಲಿ ಚಚೌಕವಾದ ಮುತ್ತಿನ ಹೊಂಬಣ್ಣದ ಹಸೆಯ ಮಣೆಯ ಮೇಲೆ ರೇಷ್ಮೆಯ ಹಸೆಯಲ್ಲಿ ಗುಣಾರ್ಣವನನ್ನೂ ದೌಪದಿಯನ್ನೂ ಕುಳ್ಳಿರಿಸಿದನು. ಬಂಧುಗಳು, ಪುರೋಹಿತರು, ಶುದ್ಧವಾದ ತುಪ್ಪದ ಹವಿಸ್ಸನ್ನು ಹೋಮಮಾಡಿಸಿದರು. ದ್ರುಪದನು ಅಗ್ನಿಸಮ ಕ್ಷಮದಲ್ಲಿ ಧಾರೆಯೆರೆದು ಪಾಣಿಗ್ರಹಣವನ್ನು ಮಾಡಿಸಿದನು. ೭೫, ಒತ್ತಾಗಿ ಕೂಡಿಕೊಂಡಿರುವ ಮಂಜಿನಿಂದ ವ್ಯಾಪ್ತವಾದ ದಕ್ಷಿಣಮಾರುತಸ್ಪರ್ಶದಿಂದ ಅಲುಗಾಡುತ್ತಿರುವ ಅಶೋಕಲತೆಯ ಚಿಗುರಿನಲ್ಲಿ ಹೊಸದಾದ ಮಾವಿನ ಚಿಗುರು ಸೇರಿಕೊಂಡ ಹಾಗೆ ಬೆವರಿನಿಂದ ನಡುಗುತ್ತಿರುವ ಆಕೆಯ ಚಿಗುರಿನಂತಿರುವ ಕಯ್ಯನ್ನು ಹಿಡಿದು ಗುಣಾರ್ಣವನ ಸುಂದರವಾದ ಪಾಣಿಪಲ್ಲವವು ಸೌಂದರ್ಯವನ್ನು ಹೊಂದಿತು. ವ|| ಹಾಗೆ ಒಬ್ಬರು ಇನ್ನೊಬ್ಬರ ಕಿರುಬೆರಳನ್ನು ಹಿಡಿದು ರತಿಯೂ ಕಾಮದೇವನೂ ಬರುವ ಹಾಗೆ ಹೋಮಕುಂಡದ ಅಗ್ರಭಾಗಕ್ಕೆ ಬಂದು ಮೇರುಪರ್ವತವನ್ನು ಪ್ರದಕ್ಷಿಣೆ ಮಾಡುವ ಸೂರ್ಯದಂಪತಿಗಳ ಹಾಗೆ ಅಗ್ನಿಯನ್ನು ಮೂರು ಸಲ ಪ್ರದಕ್ಷಿಣೆಮಾಡಿ ನಿಂತ ಬಳಿಕ ದೌಪದಿಯು ಆ ಪುರೋಹಿತನು ಹೇಳಿದ ಕ್ರಮದಲ್ಲಿ ಲಾಜಹೋಮವನ್ನು ಮಾಡಿದಳು.
Page #209
--------------------------------------------------------------------------
________________
೨೦೪ | ಪಂಪಭಾರತಂ ಚoll ಅದಜಿ ಪೊದಳು ನೀಳ ಪೊಗೆಯಂ ಲುಳಿತಾಳಕೆ ತನ್ನ ವಕ್ತ ಪ
ದಿನೊಸದಾಂತೂಡಾಕಯ ಕಪೋಲದೊಳಾ ನವ ಧೂಮಲೇಖ ಚ | ಆದಿರ್ಗೋಳಿ ಗಾಡಿವೆತ್ತಡರ್ದು ಕತ್ತುರಿಯೊಳ್ ಮದವಟ್ಟೆಯಂ ವಿಳಾ
ಸದ ತೆಗೆದಂತೆ ಕಣ್ಣೆಗೆದು ತೊಳೆದುದಾ ಕದನತ್ರಿಣೇತ್ರನಾ || ೭೬
ವ|| ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಮೋದುವ ಋಚಗಳುಂ ಪರಸುವ ಪರಕೆಗಳುಮಸೆಯ ಪಸೆಯೊಳಿರ್ದುಚಂil ಪರಿಜೆಯನಂಟು ) ಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೋ
ಸರಿಸುವ ಹಾರಮಂ ಪಿಡಿದು ನೋಡುವ ಕಟ್ಟಿದ ನೂಲ ತೊಂಗಲಂ | ತಿರಿಪುವ ಕೆಮ್ಮದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭಯಂ
ಬೆರಸಿದ ನಾಣುಮಂ ಕ್ರಮದ ಪಿಂಗಿಸು ಬೇಸಅದಿರ್ ಗುಣಾರ್ಣವಾ IIt ೭೭ ವ|| ಎಂದು ಕೆಲದೊಳಿರ್ದ ದಂಡುರುಂಬೆಗಳ ಬುದ್ಧಿವೇಟಿಉll 'ಕಾಂತ ಪೊದಳ ನಾಣ ಭರದಿಂದಧರೀಕೃತ ಚಂದ್ರಬಿಂಬ ಸ.
ತ್ಯಾಂತಿಯನಾನನಾಂಬುಜಮನೊಯ್ಯನೆ ಬಾಗಿರೆ ಕಾದಲಂಗ ಸ | ಯಂತಿರು ನಾಣ್ಯದಂದಣುಗೆಯರ್ ಪಿಡಿದುಳೆತ್ತಿ ಬುದ್ಧಿ ವೇ
ಆಂತ ಕದ೦ಪಿನೊಳ್ ಪೊಳೆದುವಾಕೆಯ ಹಾರ ಮರೀಚಿ ಮಾಲೆಗಳ್ || ೭೮ ೭೬. ಕೊಂಕುಗೂದಲಿನ ಆ ಬ್ರೌಪದಿಯು ದಟ್ಟವೂ ದೀರ್ಘವೂ ಆದ ಅರಳಿನ ಹೊಗೆಯನ್ನು ತನ್ನ ಮುಖಕಮಲದಲ್ಲಿ ಪ್ರೀತಿಯಿಂದ ಧರಿಸಿರುವ ಅವಳ ಕೆನ್ನೆಯಲ್ಲಿ ಆ ಹೊಸಹೊಗೆಯ ರೇಖೆಯು ಸೌಂದರ್ಯದಿಂದ ಕೂಡಿ ಊರ್ಧ್ವಮುಖವಾಗಿ, ಕಸ್ತೂರಿಯಿಂದ ರಚಿಸಿದ ಪತ್ರಲೇಖೆ (ಕಪೋಲಪತ್ರ - ಅಲಂಕಾರಕ್ಕಾಗಿ ಕೆನ್ನೆಯ ಮೇಲೆ ಬರೆದುಕೊಳ್ಳುವ ಚಿತ್ರ)ಯಂತೆ ಆ ಕದನತ್ರಿಣೇತ್ರನ ಕಣ್ಣಿಗೆ ಸೊಗಸಾಗಿ ಕಂಡಿತು. ವl ಸೊಗಸಾಗಿರುವ ಹಾಗೆ ಹಾಡುತ್ತಿರುವ ಮಂಗಳಧ್ವನಿಗಳೂ ಪಠಿಸುತ್ತಿರುವ ವೇದಮಂತ್ರಗಳೂ ಹರಸುವ ಹರಕೆಗಳೂ ಪ್ರಕಾಶಿಸುತ್ತಿರಲು ಹಸೆಯಲ್ಲಿದ್ದ ತುಂಟಸಖಿಯರು ಗುಣಾರ್ಣವನಿಗೆ ಹೀಗೆಂದು ಸೂಚಿಸಿದರು. ೭೭. ಕೆನ್ನೆಯನ್ನು ಸವರು, ಚಿನ್ನದ ಹೂವನ್ನು ಓರೆಮಾಡು, ಹಾರವನ್ನು ಹಿಡಿದು ಪರೀಕ್ಷೆಮಾಡು, ಅಲಂಕಾರಕ್ಕಾಗಿರುವ ನೂಲಿನ ಕುಚ್ಚನ್ನು ತಿರುಗಿಸು, ಕಾರ್ಯಗಳ (ಚೇಷ್ಟೆಯನೆಪದಿಂದ ಕೋಮಲಶರೀರೆಯಾದ ಆ ಬ್ರೌಪದಿಯ ಸಂಶಯವನ್ನೂ ಭಯದಿಂದ ಕೂಡಿದ ನಾಚಿಕೆಯನ್ನೂ ಗುಣಾರ್ಣವನೇ ನೀನು ಕ್ರಮಕ್ರಮವಾಗಿ ಹೋಗಲಾಡಿಸು. ಈ ಕಾರ್ಯದಲ್ಲಿ ನೀನು ಬೇಸರಪಡಬೇಡ, ವll ಎಂದು ಪಕ್ಕದಲ್ಲಿದ್ದ ತುಂಟದಾಸಿಯರು ಬುದ್ದಿಹೇಳಲು - ೭೮. ಬ್ರೌಪದಿಯು ಲಜ್ಜಾಭಾರದಿಂದ ಚಂದ್ರಬಿಂಬದ ಕಾಂತಿಯನ್ನೂ ಕೀಳುಮಾಡಿದ್ದ ತನ್ನ ಮುಖಕಮಲವನ್ನು ನಿಧಾನವಾಗಿ ಬಗ್ಗಿಸಿರಲು ಅವಳ ಸಖಿಯರು ಪ್ರೀತಿಯಿಂದ ಅವಳ ಮುಖವನ್ನೆತ್ತಿ 'ನಿನ್ನ ಪ್ರಿಯನಿಗೆ ಸರಿಯಾಗಿರು' ಎಂದು ಬುದ್ದಿಹೇಳುತ್ತಿದ್ದಾರೆಯೋ ಎನ್ನುವ ರೀತಿಯಲ್ಲಿ ಅವಳ ಕೆನ್ನೆಯಲ್ಲಿ ಅವಳ ಹಾರದ
* ಇಲ್ಲಿ ಪರಿಜೆಯಂಬ ಶಬ್ದಕ್ಕೆ ಅರ್ಥ ದುರವಗಾಹ
Page #210
--------------------------------------------------------------------------
________________
ತೃತೀಯಾಶ್ವಾಸಂ | ೨೦೫ ವ|| ಅಂತೋಪುವ ವಿವಾಹಮಂಗಳದೊಸಗೆಯೊಳ್ ಮಂಗಳ ಪಾಠಕರೆಟ್ಟು ನಿಂದಿರ್ದು
ಶಾ
ಇಂದ್ರಾನೋಕಹಮೊಪ್ಪುವಿಂದತುರಂಗಂ ಸಂದಿಂದ್ರಗಹಂ ಪೊದ ಇಂದ್ರಾನೇಕಪಮೊಪ್ಪುವಿಂದನಳೇಂದ್ರಶ್ಚರ್ಯಮೀಂದ್ರಾಣಿ ಸಂ 1 ದಿಂದ್ರಾನರ್ಘವಿಭೂಷಣಂಗಳರಿಭೂಪಾಳಾವಳೀದುಸ್ತಮ
ಶ್ಚಂದ್ರಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ || 26 ವ|| ಎಂದು ಮಂಗಳವೃತ್ತಂಗಳನೋದೆ ಕಿಡಿದುಂ ಬೇಗಮಿರ್ದದ ಬೋನದೊಳ್ ಕಲ್ಯಾಣಾಮೃತಾಹಾರಮನಾರೋಗಿಸಿ ಬಟ್ಟೆಯಂ ಯಕ್ಷಕರ್ದಮದ ಕೆಯ್ದಟ್ಟಿಯೊಳ್ ಕೆಯ್ಯಂ ತಿಮಿರ್ದು ತಂಬುಲಮಂ ಕೊಂಡು
ಕಂ!! ಕವಿ ಗಮಕಿ ವಾದಿ ವಾಗಿ
Coll
ಪ್ರವರರ ಪಂಡಿತರ ನೆಗಟ್ಟಿ ಮಾತದವರ ಸ | ಬವದವರೊಡನಂತೊಸೆದ ನವಾಸದೋಲಗದೊಳಿರ್ದನಾಗಳ್ ಹರಿಗಂ
ವ|| ಆ ಪ್ರಸ್ತಾವದೊಳ್
89
ಬೇಸ ಲೋಕಮಂ ತಗುಳು ಸುಟ್ಟಲಿಂದ ಖರಾಂಶು ನಾರಕಾ ವಾಸದೊಳಾಲ್ವವೋಲಪರವಾರ್ಧಿಯೊಳಾಯ್ದುದುಮಿತ್ತ ವಂದ ಸಂ | ಧ್ಯಾಸಮಯಾತ್ತರಕ್ತರುಚಿ ಪಿಂಗೆ ಬಟಿಕ್ಕುದಯಾದ್ರಿಯೊಳ್ ಪದಂ
ಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಣ ಹಿಮಾಂಶುಮಂಡಲಂ || ೮೧ ಕಾಂತಿಸಮೂಹವು ಹೊಳೆಯಿತು. ವ|| ಹಾಗೆ ಪ್ರಕಾಶಮಾನವಾಗಿದ್ದ ಮದುವೆಯ ಶುಭೋತ್ಸವದಲ್ಲಿ ಹೊಗಳುಭಟರು ಎದ್ದು ನಿಂತು-೭೯, ಇಂದ್ರನ ಮರವಾದ ಕಲ್ಪವೃಕ್ಷವೂ ಪ್ರಕಾಶಮಾನವಾದ ಇಂದ್ರನ ಕುದುರೆಯಾದ ಉಚೈಶ್ರವೂ ಸುಪ್ರಸಿದ್ಧವಾದ ಇಂದ್ರನ ಅರಮನೆಯಾದ ಸುಧರ್ಮವೆಂಬ ಸಭಾಮಂಟಪವೂ ಬಲಿಷ್ಠವಾದ ಇಂದ್ರನ ಆನೆಯಾದ ಐರಾವತವೂ ಇಂದ್ರನ ಸಕಲೈಶ್ವರ್ಯಗಳೂ ಇಂದ್ರನ ರಾಣಿಯಾದ ಶಚೀದೇವಿಯೂ ಇಂದ್ರನ ಬೆಲೆಯಿಲ್ಲದ ಆಭರಣಗಳೂ ಶತ್ರುರಾಜರೆಂಬ ಕೆಟ್ಟ ಕತ್ತಲೆಗೆ ಚಂದ್ರನಾಗಿರುವ ಅವನಿಗೆ ಹಿರಿದಾದ ಸುಖಸಂಪತ್ತನ್ನೂ ಅತುಲೈಶ್ವರ್ಯವನ್ನೂ ಕೊಡಲಿ ವ|| ಎಂದು ಮಂಗಳಗೀತೆಗಳನ್ನು ಓದಲು ಸ್ವಲ್ಪಕಾಲವಾದ ಮೇಲೆ ಬಡಿಸಿದ ಶುಭಕರವಾದ ಅಮೃತಕ್ಕೆ ಸಮಾನವಾದ ಆಹಾರವನ್ನು ಊಟಮಾಡಿ ಪಚ್ಚಕರ್ಪೂರ ಅಗರು ಕಸ್ತೂರಿ ಶ್ರೀಗಂಧ ಕೇಸರಿ ಮೊದಲಾದ ಸುಗಂಧದ್ರವ್ಯಗಳನ್ನು ಮಿಶ್ರ ಮಾಡಿದ ಲೇಪನದ ಕದಡಿನಿಂದ ಕಯ್ಯನ್ನು ಲೇಪಿಸಿಕೊಂಡು ತಾಂಬೂಲವನ್ನು ಸ್ವೀಕರಿಸಿ-೮೦. ಅರ್ಜುನನು ಕವಿಗಳು, ಗಮಕಿಗಳು, ವಾದಿಗಳು, ವಾಗ್ರಿಗಳು, ಶ್ರೇಷ್ಠರಾದ ಪಂಡಿತರು ಪ್ರಸಿದ್ಧರಾದ ಸಂಭಾಷಣಕಾರರು, ಹಾಸ್ಯಗಾರರು ಇವರೊಡನೆ ಸಂತೋಷದಿಂದ ಭೋಜನಶಾಲೆಯಲ್ಲಿದ್ದನು. ವ|| ಆ ಸಂದರ್ಭದಲ್ಲಿ೮೧. ಲೋಕವನ್ನು ಬೆನ್ನಟ್ಟಿ ಅದು ದುಃಖಪಡುವಂತೆ ಸುಟ್ಟ ದುಃಖದಿಂದ ಸೂರ್ಯನು ನರಕವಾಸದಲ್ಲಿ ಮುಳುಗುವ ಹಾಗೆ ಪಶ್ಚಿಮಸಮುದ್ರದಲ್ಲಿ ಮುಳುಗಿದನು.
Page #211
--------------------------------------------------------------------------
________________
೨೦೬ / ಪಂಪಭಾರತಂ
ವ|| ಆಗಳ್ ದ್ರುಪದಂ ನಿಜಾಂತಃಪುರಪರಿವಾರಂಬೆರಸುದಾರಮಹೇಶ್ವರನಲ್ಲಿಗೋಲಗಕ್ಕೆ ವಂದು ನೃತ್ಯ ವಾದ್ಯ ಗೀತಾತೋದ್ಯಂಗಳೊಳ್ ಕಿದುಂ ಬೇಗಮಿರ್ದೊಲಗಮುಮಂ ಪರೆಯಲ್ಲೇಟ್ಟು ಮತ್ತಿನ ನಾಲ್ವರ್ಗಂ ಕೊಂತಿಗಂ ಬೇವೇ ಮಾಡಂಗಳಂ ಬೀಡುವನ್ನು ಗುಣಾರ್ಣವನ ಹೆಜ್ಜೆಗೆ ಬಿಜಯಂಗೆಯ್ಯಮನ ಕಾಮಂ ಕಳನೇರುವಂತೆ ಸೆಜ್ಜೆಯನೇಟೆ ಸೆಡೆದಿರ್ದ ನಲ್ಲಳಂ ನೋಡಿ
ಉll
ನೋಟದೊಳಜಂಬಡೆದು ಮೆಲ್ಲುಡಿಯೊಳ್ ಬಗೆವೊಕ್ಕು ಜಾನೊಳ ಛಾಟಮನೆಲ್ಲಮಂ ಕಿಡಿಸಿ ಸೋಂಕಿನೊಳೊಯ್ಯನೆ ಮೆಯ್ಯೋಣರ್ಚಿ ಬಾ | ಯೂಟದೊಳಂ ಪಡೆದು ಕೂಟದೊಳುಣಿದ ಬೆಚ್ಚ ತಯೊಳ್ ಕೂಟ ಸುಖಂಗಳಂ ಪಡೆದನೇಂ ಚದುರಂ ಗಳ ಬದೈದಲ್ಲಂ ||
೮೨
ಬೇಡಿಸುವಪ್ಪುಗಳೊರೆವ ಲಲ್ಲೆಯ ಮೆಲ್ಲುಡಿಗಳ ಕೂಡ ನಾ ಗೂಡಿದ ಕೆಂದುಗಳೆ ಬಗೆಗೊಂಡಿನಿಸಂ ತಲೆದೂಗುವಂತೆವೋಲ್ | ನಾಡೆ ಪೊದಳು ನೀಳವರ ಸುಯ್ಸಳ ಗಾಳಿಯೊಳೊಯ್ಯನೊಯ್ಯನ ಳ್ಳಾಡುವುದಾಯ್ತು ತತ್ಸುರತಮಂದಿರದುಳದೀಪಿಕಾಂಕುರಂ || ೮೩
ಸಂಧ್ಯಾಕಾಲದಲ್ಲುಂಟಾದ ಕೆಂಪುಕಾಂತಿಯು ಹಿಂಜರಿಯಿತು. ಅನಂತರ ಚಂದ್ರಮಂಡಲವು ಹದವಾಗಿ ಕಾಸಿದ (ಶುಭ್ರಮಾಡಿದ) ಶುದ್ಧಚಿನ್ನದಿಂದ ಮಾಡಿದ ಗಂಟೆಯ ಹಾಗೆ ಕಣ್ಣಿಗೆ ಕಾಣಿಸಿತು. ವ|| ಆಗ ದ್ರುಪದನು ತನ್ನ ಅಂತಃಪುರದ ಪರಿವಾರದವರೊಡನೆ ಉದಾರಮಹೇಶ್ವರನಾದ ಅರ್ಜುನನ ಸಭಾಗೃಹಕ್ಕೆ ಬಂದು ನೃತ್ಯ, ವಾದ್ಯ, ಗೀತ, ಮಂಗಳವಾದ್ಯಗಳಲ್ಲಿ ಭಾಗಿಯಾಗಿ ಸಭೆಯನ್ನು ವಿಸರ್ಜಿಸುವಂತೆ ಹೇಳಿ ಧರ್ಮರಾಜನೇ ಮೊದಲಾದ ಉಳಿದ ನಾಲ್ಕು ಜನಗಳಿಗೂ ಕುಂತೀದೇವಿಗೂ ಬೇರೆಬೇರೆ ಮನೆಗಳನ್ನು ಬಿಡಾರವನ್ನಾಗಿ ಮಾಡಿಸಿ ಗುಣಾರ್ಣವನನ್ನು ಶಯ್ಯಾಸ್ಥಳಕ್ಕೆ ದಯಮಾಡಿಸಿ ಎಂದನು. ಅರ್ಜುನನು ಮನ್ಮಥನು ಯುದ್ಧರಂಗವನ್ನು ಪ್ರವೇಶಮಾಡುವ ಹಾಗೆ ಹಾಸಿಗೆಯ ಮೇಲೆ ಕುಳಿತು ಲಜ್ಜೆಯಿಂದ ಕೂಡಿದ್ದ ತನ್ನ ಪ್ರಿಯಳನ್ನು ನೋಡಿ ೮೨. ನೋಟದಿಂದ ಪ್ರೀತಿಯನ್ನುಂಟುಮಾಡಿ ಮೃದುವಾದ ಮಾತಿನಿಂದ ಅವಳ ಮನಸ್ಸನ್ನು ಗೆದ್ದು ಜಾಣೆಯಿಂದ ಅವಳ ನಡುಗುವಿಕೆ (ಕಂಪನ)ಯನ್ನು ಹೋಗ ಲಾಡಿಸಿ ಮೆಲ್ಲನೆ ಸೋಂಕುವುದರಿಂದ ಅವಳ ಮೈಯಲ್ಲಿ ತನ್ನ ಮೈಯ್ಯನ್ನು ಸೇರಿಸಿ ತುಟಿಗಳೆರಡನ್ನೂ ಸೇರಿಸಿ ಮುತ್ತಿಟ್ಟು ಬಿಗಿಯಾಗಿ ಆಲಿಂಗನಮಾಡಿಕೊಂಡು ರತಿಸುಖವನ್ನೂ ಪಡೆದನು. ಅರ್ಜುನನು ಏನು ಚದುರನೋ ? ೮೩. ಆಶೆಪಡುತ್ತಿರುವ ಆಲಿಂಗನಗಳಿಗೂ ಆಡುತ್ತಿರುವ ಪ್ರೀತಿಯ ಮೃದುನುಡಿಗೂ ವಿಶೇಷವಾಗಿ ಲಜ್ಜೆಯಿಂದ ಕೂಡಿದ ಸುರತ ಕ್ರೀಡೆಗೂ ಮೆಚ್ಚಿ ದೀಪಗಳು ಒಂದಿಷ್ಟು ತಲೆದೂಗುವ ಹಾಗೆ ವಿಶೇಷವಾಗಿ ವ್ಯಾಪಿಸಿ ನೀಳವಾಗಿ ಬೆಳೆದ ಆ ರತಿಕ್ರೀಡಾಮಂದಿರದ ಪ್ರಕಾಶಮಾನವಾದ ದೀಪದ ಕುಡಿಯು ಅವರ ಉಸಿರಿನ ಗಾಳಿಯಿಂದ ನಿಧಾನವಾಗಿ ಅಳ್ಳಾಡುತ್ತಿದ್ದವು. ವ|| ಆ ರಾತ್ರಿಯ ನಾಲ್ಕು ಜಾವಗಳೂ ಕಾಮನ ಜಾಗರಣೆಯಂತೆ
Page #212
--------------------------------------------------------------------------
________________
ತೃತೀಯಾಶ್ವಾಸಂ | ೨೦೭ ವll ಅಂತಾ ಯಿರುಳ ನಾಲ್ಕು ಜಾವಮುಂ ಕಾಮನ ಜಾಗರದಂತವರ್ಗೆ ಕೆಂದಿನೊಳೆ ಬೆಳಗಾಗೆ
ಚಂ|| ನಿನಗಿನಿಸಪ್ರೊಡಂ ಮನದೊಳೋವದ ಕಲೆಯೆಂಬ ಪಾಪ ಕ
ರ್ಮನ ಮಗಳ್ ಕರಂ ಪಲವುಮಂ ಸಜಿಗೆಯವಿವೆಂದು ತಮ್ಮ ನ | ಜೈನೊಳವನೊಪ್ಪಿಪಂತೆ ಮುಗುಳೊಳ್ ಮಸುಂದಿದ ತುಂಬಿ ಪಾಜಿ ಕೋ ಕನದ ಕುಲಂಗಳುಳ್ಳಲರ್ದುವೆಂಬಿನಮಂದೊಗದಂ ದಿವಾಕರಂ ||
೮೪ ವ|| ಅಂತು ಮಾರ್ತಾಂಡನುಂ ಪ್ರಚಂಡ ಮಾರ್ತಾಂಡನುಮುದಿತೋದಿತರಾಗಮ
ಕಚಭಾರಾಳಸಗಾಮಿನೀಪರಿವೃತಂ ಗಂಗಾತರಂಗೋಪಮಾ ನ ಚಳಚ್ಚಾಮರ ವಾತ ಪೀತ ನಿಜ ಘರ್ಮಾಂಭಃಕಣಂ ಬ್ರೌಪದೀ || ಕುಚಕುಂಭಾರ್ಪಿತ ಕುಂಕುಮದ್ರವ ವಿಲಿರಕ್ತಳಂ ದಾಂಟೆ ಕೀ ರ್ತಿ ಚತುರ್ವಾರ್ಧಿಯನಿರ್ದನಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ || ೮೫ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದೌಪದೀಕಲ್ಯಾಣವರ್ಣನಂ : ತೃತೀಯಾಶ್ವಾಸಂ
ಸುರತಕ್ರೀಡೆಯಲ್ಲಿಯೇ ಕಳೆದವು. ಬೆಳಗಾಯಿತು. ೮೪. ಸ್ವಲ್ಪವಾದರೂ ನಿನಗೆ ಪ್ರಿಯವಲ್ಲದ ಕಳಲೆಯೆಂಬ ಪಾಪಿಷ್ಠನ ಮರಿಗಳನೇಕವನ್ನು ಇಗೋ ಸೆರೆಹಿಡಿದಿದ್ದೇನೆ. ಇದೋ ಇಲ್ಲಿ ಇದೆ, ಒಪ್ಪಿಸಿಕೋ ಎಂದು ತಮ್ಮ ಸ್ನೇಹದಿಂದ ಒಪ್ಪಿಸುವ ಹಾಗೆ ಮೊಗ್ಗುಗಳಲ್ಲಿ ಮಲಗಿದ್ದ ತುಂಬಿಗಳು ಹಾರಿಹೋಗಲು ಕಮಲಸಮೂಹಗಳು ಚೆನ್ನಾಗಿ ಅರಳಿದುವು, ಸೂರ್ಯೋದಯವಾಯಿತು. ವ|| ಹಾಗೆ ಸೂರ್ಯನೂ ಪ್ರಚಂಡಮಾರ್ತಾಂಡನಾದ ಅರ್ಜುನನೂ ಅಭಿವದ್ದಿಯಾಗುತ್ತಿರಲು-೮೫. ಕೇಶಪಾಶದ ಭಾರದಿಂದ ಬಳಲಿ ನಿಧಾನವಾಗಿ ನಡೆಯುವ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟವನೂ ಗಂಗೆಯ ಅಲೆಗಳ ಹಾಗೆ ಅಲುಗಾಡುತ್ತಿರುವ ಚಾಮರದ ಗಾಳಿಯಿಂದ ಕುಡಿಯಲ್ಪಟ್ಟ ತನ್ನ ಬೆವರಿನ ಹನಿಯನ್ನುಳ್ಳವನೂ ಬ್ರೌಪದಿಯ ಕುಚಕುಂಭಗಳಿಗೆ ಲೇಪನ ಮಾಡಿದ್ದ ಕುಂಕುಮಕೇಸರಿಯ ದ್ರವದಿಂದ ಕೂಡಿಕೊಂಡಿರುವ ಎದೆಯುಳ್ಳವನೂ ಆದ ಅರ್ಜುನನು ತನ್ನ ಕೀರ್ತಿಯು ನಾಲ್ಕು ಸಮುದ್ರಗಳನ್ನೂ ದಾಟಿರಲು ಆ ದಿನ ಅಲ್ಲಿ ಸುಖವಾಗಿದ್ದನು. ವ|| ಇದು ವಿವಿಧ ವಿದ್ವಾಂಸರಿಂದ ಸ್ತುತಿಸಲ್ಪಟ್ಟ ಜಿನನ ಪಾದಕಮಲದ ವರಪ್ರಸಾದದಿಂದ ಹುಟ್ಟಿದುದೂ ಪ್ರಸನ್ನವೂ ಗಂಭೀರವೂ ಆದ ಮಾತುಗಳನ್ನು ರಚಿಸುವುದರಲ್ಲಿ ಜಾಣನಾದ ಕವಿತಾಗುಣಾರ್ಣವನಿಂದ ವಿರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಬ್ರೌಪದೀಕಲ್ಯಾಣ ವರ್ಣನಾತ್ಮಕವಾದ ಮೂರನೆಯ ಆಶ್ವಾಸ.
Page #213
--------------------------------------------------------------------------
________________
ಕಂ
ಚತುರ್ಥಾಶ್ವಾಸಂ
ಶ್ರೀರಮಣಿಯಂ ದ್ವಿಷದ್ದಳ
ಪಾರಾವಾರದೊಳುದಗ್ರ ಭುಜ ವಿಜಯ ಮಹಾ |
ಮರುವಿನ ಕಡೆದು ಪಡೆದಳ
ವಾರುಮನಿಸಿದುದುದಾತ್ತನಾರಾಯಣನಾ
C
ವ|| ಅಂತು ದ್ರುಪದನ ಪೊಲೊಳ್ ಪಾಂಡವರ್ ಜಾಗಕ್ಕೆ ಬೂತುಂ ಭೋಗಕ ಪೊಲ್ಕುಂ ನೆಯದನಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಿರ್ಪನ್ನೆಗಮಿತ್ತಲ್
ಮ||
ಚರರಾಗೆಯ್ದಿದರೆಯ ಹಸ್ತಿನಪುರಾ ಪಾಂಡವರ್ ತಮ್ಮುತ
ಧ್ವರುಮಿರ್ದರ್ ದ್ರುಪದಾಧಿರಾಜ ಪುರದೊಳ್ ಕೆಯೊಂಡು ಪಾಂಚಾಳಿಯಂ | ಧುರದೊಳ್ ಕರ್ಣನನಾಂತು ಗೆಲ್ಲವನವಂ ಸಂದರ್ಜುನಂ ತಳ್ಳು ಸಂ ಗರದೊಳ್ ಶಲ್ಯನನಿಕ್ಕಿ ಗೆಲ್ಲದಟನಾ ಭೀಮಂ ಗಡಂ ಕಾಣಿರೇ ||
ವ|| ಎಂಬ ಮಾತಂ ಧೃತರಾಷ್ಟ್ರ ದುರ್ಯೋಧನಾದಿಗಳ ಕೇಳು ಬಿಲ್ಲುಂಬೆಗುಮಾಗಿ
ಕoll
ಕಾಯ್ದಲು ಜತುಗೃಹದೊಳ
ಗಯ್ಯರುಮಂ ಮಂತ್ರಬಲದೆ ಸುಟ್ರೊಡಮವರಂ | ದೆವ್ವಬಲವೊಂದ ಕಾದುದು
ದಯಮನಾರಯ್ಯ ಮಾಜಿ ಬಾಟಲ್ ನೆವರ್ |
و
&
ವ|| ಎಂಬುದುಂ ಭೀಷ್ಮ ದ್ರೋಣಾದಿಗಳ ನಿಶ್ಚಿತಮಂತರಾಗಿ ವಿದುರನಂ ಕರೆದಾಳೋಚಿಸಿ ಪೃಥಾತನೂಜರಂ ನಿನ್ನ ಬಲ್ಲ ಮಾಯಿಂ ನುಡಿದೊಡಂಗೊಂಡು ಬರ್ಪುದೆಂದು
೧. ಲಕ್ಷ್ಮಿದೇವಿಯನ್ನು ಶತ್ರುಸೈನ್ಯವೆಂಬ ಸಮುದ್ರದಲ್ಲಿ ತನ್ನ ಬಲಿಷ್ಠವೂ ವಿಜಯಪ್ರದವೂ ಆದ ತೋಳೆಂಬ ಮಹಾಮೇರುಪರ್ವತದಿಂದ ಕಡೆದು ಪಡೆದ ಅರ್ಜುನನ ಪರಾಕ್ರಮವು ಯಾರನ್ನೂ ತಿರಸ್ಕರಿಸಿತು, ಹಾಗೆ ದ್ರುಪದನ ಪಟ್ಟಣದಲ್ಲಿ ಪಾಂಡವರು (ತಾವು ಮಾಡುವ) ದಾನಕ್ಕೆ ಪಾತ್ರರಾದವರು ಒಬ್ಬರೂ ಉಳಿಯ ಲಿಲ್ಲವೆಂಬಂತೆಯೂ ಸೌಖ್ಯಪಡುವುದಕ್ಕೆ ಕಾಲಾವಕಾಶವು ಸಾಲದೆಂಬಂತೆಯೂ ಸೌಖ್ಯದಿಂದ ರಾಜ್ಯವಾಳುತ್ತಿದ್ದರು. ೨. ಗೂಢಚಾರರು ಹಸ್ತಿನಾಪಟ್ಟಣಕ್ಕೆ ಬಂದು ಆ ಪಾಂಡವರೆದುಮಂದಿಯೂ ದ್ರುಪದರಾಜನ ಪಟ್ಟಣದಲ್ಲಿ ಇದ್ದಾರೆ. ದೌಪದಿಯನ್ನು ಪಡೆದು ಯುದ್ಧದಲ್ಲಿ ಕರ್ಣನನ್ನು ಗೆದ್ದವನು ಪ್ರಸಿದ್ಧನಾದ ಅರ್ಜುನ, ಸಂಧಿಸಿ ಯುದ್ಧದಲ್ಲಿ ಶಲ್ಯನನ್ನೂ ಹೊಡೆದು ಸೋಲಿಸಿದ ಪರಾಕ್ರಮಿಯೇ ಭೀಮ ವll ಎಂಬ ಮಾತನ್ನು ಧೃತರಾಷ್ಟ್ರ ದುರ್ಯೋಧನನೇ ಮೊದಲಾದವರು ಕೇಳಿ ಆಶ್ಚರ್ಯಭರಿತರಾದರು. ೩. ತಮ್ಮ ಮನಸ್ಸನ್ನು ಸುಡುವ ದುಃಖವು ಹೆಚ್ಚಾಗುತ್ತಿರಲು ಅರಗಿನಮನೆಯಲ್ಲಿ ಅಯ್ದುಜನರನ್ನೂ ತಮ್ಮ ಮಂತ್ರಶಕ್ತಿಯಿಂದ ಸುಟ್ಟರೂ ಅವರನ್ನು ದೈವಬಲವೊಂದೇ ರಕ್ಷಿಸಿತು. ದೈವಬಲವನ್ನು ಮೀರಿ ಯಾರು ತಾನೆ ಬದುಕಲು ಸಮರ್ಥರಾಗುತ್ತಾರೆ? ಎಂದು ವ್ಯಥೆಪಟ್ಟರು. ವ|| ಭೀಷ್ಮ ದ್ರೋಣ ಮೊದಲಾದವರು ನಿಷ್ಕೃಷ್ಟವಾದ ಮಂತ್ರಾಲೋಚನೆಯುಳ್ಳವರಾಗಿ ವಿದುರನನ್ನು ಕರೆದು ಅವನೊಡನೆ ವಿಚಾರಮಾಡಿ
Page #214
--------------------------------------------------------------------------
________________
ಚತುರ್ಥಾಶ್ವಾಸಂ | ೨೦೯ ಪೇಲ್ಗಟ್ಟುವುದುಮಾತನಂತೆ ಗೆಯ್ದನೆಂದು ರಥಾರೂಢನಾಗಿ ಪಾಂಚಾಳರಾಜಪುರಕ್ಕೆ ಎಂದು ಪಾಂಡುಪುತ್ರರು ಕಂಡುಚಂi ಅದು ಪಿರಿದುಂ ಪ್ರಮಾದಮದುವುಂ ಕುರುರಾಜನಿನಾಯ್ತು ಪೋಯ್ತು ಸಂ
ದುದು ಮಜಟೆಯ ವೇಟ್ಟುದದನಾಳ್ವುದು ತಪ್ಪದೆ ಪಾಂಡುರಾಜನಾ ಲೌುದನೆಳೆಯಂ ಮನಂ ಬಸದೆ ಬರ್ಪುದು ಮನೆ ಪೋಪ ಕಜ್ಜಮಂ .
ವಿದುರನೊಳಯ್ಯರುಂ ಸಮೆದು ಪೇಚ್ಚುದುಮಾ ದ್ರುಪದಂಗೆ ರಾಜದಿಂ ||೪
ವ|| ಆತನ ಬಟವಟಿಗೊಟ್ಟ ಮದಕರಿ ಕರೇಣು ಜಾತ್ಯತ್ವ ಶಶಿತಾರ ಹಾರ ವಸ್ತುಗಳು ಕೆಯ್ಯೋಂಡು ದ್ರುಪದಜೆಯನೊಡಗೊಂಡು ದ್ರುಪದನನಿರಟ್ಟು ಕತಿಪಯ ಪ್ರಯಾಣಂಗಳಿಂ ಮದಗಜಪುರಮನೆಯ ವಂದಾಗಳ್ಚಂll ಘನಪಥಮಂ ಪಳಂಚಲೆವ ಸೌಧಚಯಂಗಳಿನಾಡುತಿರ್ಪ ಕೇ
ತನತತಿಯಿಂ ಕರೀಂದ್ರ ಗಳಗರ್ಜನೆಯಿಂ ಪಟಹಪ್ರಣಾದಮಂ | ಘನರವಮಂದೆ ನರ್ತಿಸುವ ಕೇಕಿಗಳಿಂ ಕಡುರಯ್ಯಮಪ್ಪ ಹ | ಸಿನಪುರಮಂ ಜಿತೇಂದ್ರಪುರಮಂ ಪರಮೇಶ್ವರರಾಗಳೆದರ್ || ೫
ವ|| ಆಗಳಾ ಪೊಲಲ ಬೀದಿಗಳೆಲ್ಲಂ ಗಂಧೋದಕ ಪಂಚಗವ್ಯಂಗಳಂ ತಳಿಯಿಸಿ ಗುಡಿಯಂ ತೋರಣಂಗಳುಮಂ ತುಲುಗಲುಂ ಬಂಬಲುಮಾಗೆ ಕಟ್ಟಿಸಿ ಧೃತರಾಷ್ಟ್ರ ದುರ್ಯೋಧನ ಪಾಂಡವರನ್ನು ನಿನಗೆ ತಿಳಿದ ರೀತಿಯಲ್ಲಿ ಬುದ್ದಿ ಹೇಳಿ ಒಪ್ಪಿಸಿ ಕರೆದುಕೊಂಡು ಬರುವುದು ಎಂದು ಹೇಳಿ ಕಳುಹಿಸಿದರು. ಅವನು ಹಾಗೆಯೇ ಮಾಡುತ್ತೇನೆಂದು ತೇರನ್ನು ಹತ್ತಿ ದ್ರುಪದನ ಪಟ್ಟಣಕ್ಕೆ ಬಂದು ಪಾಂಡುಪುತ್ರರನ್ನು ನೋಡಿ ೪. ಕುರುರಾಜನಿಂದ ದೊಡ್ಡ ತಪ್ಪಾಗಿಹೋಯಿತು. ಆದದ್ದಾಗಿ ಹೋಯಿತು, ಕಳೆದುಹೋದುದನ್ನು ಮರೆತು ಬಿಡಬೇಕು. ಪಾಂಡುರಾಜನು ಆಳಿದ ಭೂಮಿಯನ್ನು ಬಿಡದೆ ನೀವು ಆಳಬೇಕು. ನೀವು ದೃಢಚಿತ್ತದಿಂದ ಬರಬೇಕು ಎಂದು ಹೇಳಲು ಪ್ರಯಾಣಮಾಡುವ ಕಾರ್ಯವನ್ನು ವಿದುರನೊಡನೆಯೇ ಅಯ್ಯರೂ ಕೂಡಿ ಆಲೋಚಿಸಿ ಹೊರಡುವ ವಿಷಯವನ್ನು ದ್ರುಪದನಿಗೆ ಸಂತೋಷದಿಂದ ತಿಳಿಸಿದರು. ವಅವನು ಬಳುವಳಿಯಾಗಿ ಕೊಟ್ಟ ಮದ್ದಾನೆ, ಹೆಣ್ಣಾನೆ, ಜಾತಿಯ ಕುದುರೆಗಳು ಚಂದ್ರನಂತೆ ಹೊಳೆಯುತ್ತಿರುವ ಮುತ್ತಿನ ಹಾರ ಮೊದಲಾದ ಪದಾರ್ಥಗಳನ್ನು ಸ್ವೀಕರಿಸಿ ಬ್ರೌಪದಿಯೊಡಗೂಡಿ ದ್ರುಪದನನ್ನು ಅಲ್ಲಿಯೇ ಇರಹೇಳಿ ಕೆಲವು ದಿನದ ಪ್ರಯಾಣಗಳಿಂದ ಹಸ್ತಿನಾಪುರದ ಸಮೀಪಕ್ಕೆ ಬಂದರು. ೫. ಆಕಾಶವನ್ನೇ ಅಪ್ಪಳಿಸುವ ಉಪ್ಪರಿಗೆಮನೆಗಳ ಸಮೂಹದಿಂದಲೂ ಚಲಿಸುತ್ತಿರುವ ಧ್ವಜಗಳಿಂದಲೂ ಶ್ರೇಷ್ಠವಾದ ಆನೆಯ ಕೊರಳಿನ ಗರ್ಜನೆಯಿಂದಲೂ ತಮಟೆಯ (ವಾದ್ಯದ) ದೊಡ್ಡ ಶಬ್ದವನ್ನು ಗುಡುಗೆಂದೇ ತಿಳಿದು ಕುಣಿದಾಡುತ್ತಿರುವ ನವಿಲುಗಳಿಂದಲೂ ಬಹು ರಮ್ಯವಾದ ಅಮರಾವತಿಯನ್ನು ಗೆದ್ದಿರುವ ಹಸ್ತಿನಾಪುರವನ್ನು ರಾಜಶ್ರೇಷ್ಠರಾದ ಪಾಂಡವರು ಆಗ ಸೇರಿದರು. ವ|| ಆಗ ಪಟ್ಟಣದ ಬೀದಿಗಳಲ್ಲೆಲ್ಲ ಶ್ರೀಗಂಧದ ನೀರನ್ನೂ ಪಂಚಗವ್ಯವನ್ನೂ (ಹಸುವಿಗೆ ಸಂಬಂಧಪಟ್ಟ ಹಾಲು ಮೊಸರು, ತುಪ್ಪ, ಗಂಜಲ,
Page #215
--------------------------------------------------------------------------
________________
೨೧೦ | ಪಂಪಭಾರತಂ ಕರ್ಣ ಶಲ್ಯ ಶಕುನಿ ನದೀತನೂಜ ಭಾರದ್ವಾಜ ಕೃಪಾದಿಗಳೊರಸಿದಿರ್ವಂದು ಯಥೋಚಿತ ಪ್ರತಿಪತ್ತಿಗಳಿಂದಯ್ಯರುಮಂ ನಿಬಿಡಾಲಿಂಗನಂಗೆಯ್ದು ಮುಂದಿಟ್ಟೋಡಗೊಂಡು ವಂದು ಫೋಬಿಲಂ ಪಗಿಸಿ ಮುನಮ ಸಮದ ಬೀಡುಗಳೊಳ್ ಬೀಡಂ ಬಿಡಿಸಿ ಸೂಚೋಳೆ ಬಿರ್ದನಿಕ್ಕಿ ವಿವಿಧ ವಿನೋದಂಗಳಂ ತೋಳೆ ಕೆಲವು ದಿವಸಮಿರ್ದು ದೊಣ ಭೀಷ್ಮ ಕೃಪ ವಿದುರರ್ಕಲ್ ತಮೋಳಾಲೋಚಿಸಿಯೆ ನಡಪಿದುದರ್ಕಂ ಕೂರ್ತುದರ್ಕಂ ಪಾಂಡುಪುತರ್ಗ ನೆಲನ ಪಚ್ಚುಕೂಟ್ಟು ಪಟ್ಟಮಂ ಕಟ್ಟುವೆನೆನೆ ದುರ್ಯೋಧನನೇಗೆಯುಮೊಡಂಬಡದಿರೆ ಭೀಷ್ಕರ್ ಮುನಿದುಚಂ11 ಒಡೆಯರದೇವರೆಂದು ನಿನಗಿತ್ತೊಡೆ ಪಟ್ಟಮನುರ್ಕಿದಷ್ಟ ಪೇಯ್
ಪೊಡವಿಗಧೀಶರಂತವರ್ಗಳಯ್ಯರುಮಂ ಕ್ರಮದಿಂದ ಪಟ್ಟಮಂ | ತಡೆಯದೆ ಕಟಿ, ಭೂತಳಮನಾಳಿಸದಿರ್ದೊಡದರ್ಕ ಸೊರ್ಕಿ ನೀಂ ನುಡಿಯದಿರಣ್ಣ ನಿನ್ನ ನುಡಿಗಾಂ ತಡೆದಿರ್ಪನೆ ಪೇಯ್ ಸುಯೋಧನಾ || ೬ ಕಮಮದನ ಕೊಟುದನೆ ಕೋಂಡು ಮನೋಮುದದಿಂದ ಬಾಬುದಂ ತವರಿವರೆಲ್ಲರುಂ ಸಮನದಲ್ಲದೆ ಮಾರ್ಮಲೆದುರ್ಕಿ ಭೀಮನೊಳ್ | ಸಮರದೆ ಗರ್ವದಿಂ ಪೊಣರಲಾರ್ಪಿರೆ ಗಾವಿಲರಿನ್ನುಮಲ್ಲರಂ ಯಮಸುತನುಂ ಸುರೇಂದ್ರಸುತನುಂ ಪೊಸದೀಗ ಮುಕ್ಕಿ ತೋಜರೇ ೭
ಸಗಣಿ ಇವುಗಳನ್ನು ಮಿಶ್ರಮಾಡಿ ಶುದ್ದಿಗಾಗಿ ಉಪಯೋಗಿಸುವ ಪದಾರ್ಥ) ಚಿಮುಕಿಸಿ ಧ್ವಜಗಳನ್ನೂ ತೋರಣಗಳನ್ನೂ ಗುಂಪುಗುಂಪಾಗಿ ಕಟ್ಟಿಸಿ ಧೃತರಾಷ್ಟ್ರನು ದುರ್ಯೊಧನ, ಕರ್ಣ, ಶಲ್ಯ, ಶಕುನಿ, ಭೀಷ್ಮ, ದ್ರೋಣ, ಕೃಪ ಮೊದಲಾದವರನ್ನೊಳಗೊಂಡು ಎದುರಾಗಿ ಬಂದು ಯಥೋಚಿತವಾದ ಮರ್ಯಾದೆ - ಸತ್ಕಾರಗಳಿಂದ ಅಯ್ದುಜನರನ್ನೂ ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು ಮುಂದಿಟ್ಟುಕೊಂಡು ಕರೆದುತಂದು ಪಟ್ಟಣವನ್ನು ಪ್ರವೇಶಮಾಡಿದನು. ಮೊದಲೇ ಸಿದ್ಧಮಾಡಿದ್ದ ಮನೆಗಳಲ್ಲಿ ತಂಗುವ ಹಾಗೆ ಮಾಡಿ ಸಲಸಲಕ್ಕೂ ಆತಿಥ್ಯವನ್ನು ಮಾಡಿ ನಾನಾರೀತಿಯ ವಿನೋದಗಳನ್ನು ತೋರಿಸಿ ಸಂತೋಷಪಡಿಸಿದನು. ಕೆಲವು ದಿವಸಗಳಾದ ಮೇಲೆ ದ್ರೋಣ ಭೀಷ್ಮ ಕೃಪರುಗಳು ತಮ್ಮಲ್ಲಿ ಆಲೋಚನೆ ಮಾಡಿ ನಾವು ಸಾಕಿದುದಕ್ಕೂ ಪ್ರೀತಿಸಿದುದಕ್ಕೂ (ಅನುಗುಣವಾಗಿ) ಪಾಂಡವರಿಗೆ ರಾಜ್ಯವನ್ನು ಭಾಗಮಾಡಿಕೊಟ್ಟು ಪಟ್ಟವನ್ನು ಕಟ್ಟೋಣವೆಂದು ಹೇಳಲು ದುರ್ಯೋಧನನು ಏನು ಮಾಡಿದರೂ ಒಪ್ಪಲಿಲ್ಲ. ಭೀಷ್ಮರು ಕೋಪಿಸಿಕೊಂಡು-೬. 'ಓಡೆಯರಾದ ಪಾಂಡವರು ಏನು ಮಾಡಬಲ್ಲರು ಎಂದು ನಿನಗೆ ಪಟ್ಟವನ್ನು ಕೊಟ್ಟರೆ ಕೊಬ್ಬಿಹೋಗಿದ್ದೀಯೆ. ಹೇಳು ಭೂಮಿಗೆ ಒಡೆಯರಾದ ಆ ಆಯ್ದುಜನರಿಗೂ ಸಾವಕಾಶಮಾಡದೆ ಕ್ರಮವಾಗಿ ಪಟ್ಟವನ್ನು ಕಟ್ಟದೆ ರಾಜ್ಯವನ್ನೂ ಆಳಿಸದಿದ್ದುದಕ್ಕಾಗಿ ಸೊಕ್ಕಿ ನೀನು ಮಾತನಾಡಬೇಡವಯ್ಯಾ, ನಿನ್ನ ಮಾತಿಗೆ (ಅಪ್ಪಣೆಗೆ) ನಾನು ಕಾದಿರುತ್ತೇನೆಯೇ ಹೇಳು ಸುಯೋಧನ. ೭. 'ಕ್ರಮವಾದುದು ಯಾವುದು ಎಂಬುದುನ್ನು ತಿಳಿದುಕೊಂಡು ನಾನು ಕೊಟ್ಟುದುದನ್ನು ಮನಸ್ಸಂತೋಷದಿಂದ (ತೃಪ್ತಿಯಾಗಿ) ಬಾಳುವುದು; ಹಾಗೆ ಅವರು ಇವರು (ಪಾಂಡವರು ಕೌರವರು) ಸಮ ಎಂಬುದನ್ನು ತಿಳಿಯದೆ ಪ್ರತಿಭಟಿಸಿ
Page #216
--------------------------------------------------------------------------
________________
ಚತುರ್ಥಾಶ್ವಾಸಂ | ೨೧೧ ವ|| ಅದಲ್ಲದೆಯುಂ ಪಾಂಡುಪುತ್ರರಪೊಡೆ ಪಾಂಡುರಾಜಂಗೆ ಬೆಸಕೆಯ್ಯದುದನೆನಗೆ ಬೆಸಕೆಯ್ಯರನ್ನೆಂದುದಂ ಮಾಜುವರಲ್ಲದಾನವರ್ಗೆ ಪಟ್ಟಮಂ ಕಟ್ಟಿ ನೆಲನಂ ಪಚ್ಚುಕೊಡುವಾಗಳಡ್ಡಂ ಬರ್ಪ ಗಂಡರ ನೋಟಿನೆಂದು ಭೀಷ್ಕರ್ ಬಗ್ಗಿಸಿದೊಡೆ ದುರ್ಯೋಧನನ ಸಂಭ್ರಮಾಕುಳಿತನಾಗಿ ನೀವಂದುದನೆಂದು ಬಾಳ್ವೆನೆಂದೊಡಪ್ಪುದೆಂದುಮli - ಧರಣೀನಾರಿಗೆ ಪಾಂಡುವಿಂ ಬಲಿಯಮಿಲ್ಲಾರುಂ ಪೆಜರ್ ಗಂಡರಂ
ತಿರಲೇವಂ ಬಡೆದಿರ್ದೊಡಟ್ಟು ಕಿಡುಗುಂ ಸಪ್ತಾಂಗಮಾ ರಾಜಕ | ಕರಸಂ ಧರ್ಮಜನಕ್ಕುಮೆಂದು ನಯದಿಂ ನಿಶ್ಚಿಸಿ ಕಲ್ಯಾಣ ಕಾ
ರ್ಯರತರ್ ಕಟ್ಟಿದರಾ ಯುಧಿಷ್ಠಿರನೃಪಂಗುತ್ಸಾಹದಿಂ ಪಟ್ಟಮಂ || ೮
ವಗ ಕಟ್ಟಿ ಸೇತುಬಂಧಮಂ ತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಮಾಳ್ವುದು ಮೂಡಣ ಬಡಗಣ ನೆಲನಂ ದುರ್ಯೋಧನನಾಳ್ಳುದೆಂದು ಧೃತರಾಷ್ಟಂ ಪೂರ್ವ ಸ್ಥಿತಿಯೊಳ್ ಪಯ್ದುಕೊಟ್ಟು ದುರ್ಯೋಧನನಷ್ಟೊಡೆ ಪೊಲ್ಲಮಾನಸಂ ನೀಮುಂ ತಾಮುಮೊಂದೆಡೆಯೊಳಿರೆ ಕಿಸುರುಂ ಕಲಹಮುಮೆಂದುಂ ಕುಂದದದು ಕಾರಣದಿಂದಿಲ್ಲಿಗಜುವತ್ತು ಯೋಜನದೊಳಿಂದ್ರಪ್ರಸ್ಥಮೆಂಬುದು ಪೊಬಿಲಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿ ಮೆಂಬುದುಮಂತೆಗೆಯ್ಮೆಂದು ಸಮಸ್ತ ಪರಿವಾರ ಪರಿವೃತರಾಗಿ
ಭೀಮನನ್ನು ಯುದ್ಧದಲ್ಲಿ ಅಹಂಕಾರದಿಂದ ದಡ್ಡರಾದ ನೀವೆಲ್ಲ ಕಾದಬಲ್ಲಿರಾ. ಧರ್ಮರಾಜನೂ ಅರ್ಜುನನೂ ಈಗಲೇ ನಿಮ್ಮನ್ನು ಹೊಸೆದು ತಿಂದು ತೋರಿಸಲಾರರೇ ?' ವಅಷ್ಟೇ ಅಲ್ಲದೆ ಪಾಂಡವರು (ತಮ್ಮ ತಂದೆಯಾದ) ಪಾಂಡುರಾಜನಿಗೆ ಮಾಡದಿದ್ದುದನ್ನು ನನಗೆ ಮಾಡುತ್ತಾರೆ. ನಾನು ಹೇಳಿದುದನ್ನು ಮೀರುವವರಲ್ಲ. ನಾನು ಅವರಿಗೆ ಪಟ್ಟವನ್ನೂ ಕಟ್ಟಿ ರಾಜ್ಯವನ್ನು ಭಾಗಮಾಡಿಕೊಡುವಾಗ ಅಡ್ಡವಾಗಿ ಬರುವ ಶೂರರನ್ನು ನೋಡಿಯೇ ಬಿಡುತ್ತೇನೆ ಎಂದು ಗದರಿಸಲು ದುರ್ಯೊಧನನು ವಿಶೇಷ ಗಾಬರಿಗೊಂಡು ನೀವು ಹೇಳಿದುದನ್ನೇ ಒಪ್ಪಿ ಬಾಳುತ್ತೇನೆ ಎಂದು ಒಪ್ಪಿಕೊಂಡನು. ೮. ಈ ಭೂದೇವಿಗೆ ಪಾಂಡುರಾಜನಾದ ಮೇಲೆ ಬೇರೆ ಒಡೆಯರಾದವರಾರೂ ಇಲ್ಲ. ಹಾಗಿರುವಾಗ ನಿಮ್ಮ ಮಾತ್ಸರ್ಯಕ್ಕೊಳಗಾದರೆ ರಾಜ್ಯದ ಸಪ್ತಾಂಗಗಳೂ ನಾಶವಾಗುತ್ತವೆ. ಈ ರಾಜ್ಯಕ್ಕೆ ಧರ್ಮರಾಯನು ರಾಜನಾಗಲಿ ಎಂದು ರಾಜನೀತಿಗನುಗುಣವಾಗಿ (ಭೀಷ್ಮಾದಿಗಳು) ಆ ಧರ್ಮರಾಜನಿಗೆ ಉತ್ಸಾಹದಿಂದ ಪಟ್ಟವನ್ನು ಕಟ್ಟಿದರು. ವಂ ರಾಮಸೇತುವಿನಿಂದ ಹಿಡಿದು ಗಂಗಾನದಿಯ ದಕ್ಷಿಣಪಶ್ಚಿಮಭಾಗದ ಭೂಮಿಯನ್ನು ನೀವು ಆಳುವುದು. ಪೂರ್ವೋತ್ತರಭಾಗದ ನೆಲವನ್ನು ದುರ್ಯೊಧನನಾಳತಕ್ಕದ್ದು ಎಂದು ಧೃತರಾಷ್ಟ್ರನು ಮೊದಲಿನ ರೀತಿಯಲ್ಲಿಯೇ ಭಾಗಮಾಡಿಕೊಟ್ಟು; ದುರ್ಯೋಧನನಾದರೆ ದುರ್ಬುದ್ದಿಯವನು. ನೀವೂ ಅವರೂ ಒಂದೇ ಕಡೆ ಇದ್ದರೆ ಅಸೂಯೆಯೂ ಕಲಹವೂ ಎಂದೂ ತಪ್ಪುವುದಿಲ್ಲ. ಆದ ಕಾರಣದಿಂದ ಇಲ್ಲಿಗೆ ಅರವತ್ತುಯೋಜನ ದೂರದಲ್ಲಿ ಇಂದ್ರಪ್ರಸ್ಥವೆಂಬ ಪಟ್ಟಣವಿದೆ. ಅಲ್ಲಿಗೆ ಹೋಗಿ ಸುಖವಾಗಿ ರಾಜ್ಯವಾಳುತ್ತಿರಿ ಎಂದನು. ಹಾಗೆಯೇ ಮಾಡುತ್ತೇವೆ ಎಂದು ಪಾಂಡವರು ಸಮಸ್ತ ಪರಿವಾರ ಸಹಿತರಾಗಿ
Page #217
--------------------------------------------------------------------------
________________
೨೧೨) ಪಂಪಭಾರತಂ ಮಗ ಒಡವರ್ಪುಗ್ರ ಮದೇಭ ವಾಜಿ ಗಣಿಕಾನರ್ಫ್ಯಾದಿ ರತ್ನಂಗಳೊಳ್
ತೊಡರ್ದೊಪುತ್ತಿರೆ ಲಕ್ಷ್ಮಿ ದಂತಿ ತುರಗಂ ಶ್ರೀ ದಿವ್ಯಕಾಂತಾಜನಂ | ತೊಡೆವೆಂಬೊಂದುಮನಾ ಸುರಾಸುರರಿನಾ ಗೋವಿಂದನಿಂ ಮುನ್ನ ಕೋ
ಛಡೆದಂಭೋನಿಧಿಯಂತೆ ಬಂದು ನೆಗಣ್ಣಿಂದ್ರಪ್ರಸ್ಥಮಂ ಧರ್ಮಜಂ || ೯ ಮಟ್ಟಿರಗಳೆ ಎನ್ನುವುದುಂ ತತ್ತುರದುವವನಂಗಳವಿರಳ ಮಳಯಾವಿಳಕಂಪಿತಂಗ | ಳವಿರಳ ಕುಸುಮಾವಳಿ ಕಂಪುವೇಜ ಸೊಗಯಿಪ ಕಿಜು ಮಿಡಿಗಳೊಳೊಪ್ಪಿ ತೋಜ | ಲವಣಾಬಿಯ ಬಳಸಿದುದೆನಿಸುವಗಲ ಬಳಸದಿರೆ ಕೊಂಟೆಯ ಚಲು ಪೊಗಟ | ಲರಿಡೆನಿಸಿರೆ ನೆಗೆದುದು ನಭಮನೆಯ ಮಿಳಿರ್ವ ಪತಾಕಾವಳಿ ದಿವಮನೆಯ ಬಳಸಿದ ಕೆಂಬೊನ್ನ ಮದಿಲ್ಲಳೊಳಗೆ ಮಣಿಮಯ ಭವನಾವಳಿ ತೊಳಗಿ ಬೆಳಗೆ ರಸ ರಸದ ಬಾವಿ ಮನೆ ಮನೆಗೆ ಬೇಜ ಕಿಸುಗಳ ರಜದ ಕಣಿವೆರಸು ತೋಜಿತ ಸುರಕುಜದ ನೆಲೋಳಂಗಣದೊಳೇನುಮಲಪಿಲ್ಲದ ಕಟ್ಟರೆ ಕಾಮಧೇನು ಪರದರ ಪಾರ್ವರ ಸೂಳೆಯರ ಮನೆಗಳವು ಧನದನ ಮನೆಯುಮನೇಟಪ ಮನೆಗಳವು ಪೂಬಲ ಬೆಡಂಗಂ ಮೆಚ್ಚಿ ಮೆಚ್ಚಿ ನೋಡಿ ದಿವಿಜೇಂದ್ರ ವಿಳಾಸದೊಳಿಂತು ಕೂಡಿ ಪರಿತಂದಾಗಳ್ ಪಿರಿದೊಸಗೆವೆರಸಿ ಪುರಕಾಂತಯರಾದರದಿಂದ ಪರಸಿ
೯. ಜೊತೆಯಲ್ಲಿ ಬರುತ್ತಿದ್ದ ಭಯಂಕರವಾದ ಆನೆ, ಕುದುರೆ, ವೇಶೈಯರು, ವಿಶೇಷ ಬೆಲೆಯುಳ್ಳ ರತ್ನ ಇವೆಲ್ಲವೂ ಜೊತೆಯಲ್ಲಿ ಪ್ರಕಾಶಿಸುತ್ತಿರಲು ಆ ಪಾಂಡವರು ದೇವದಾನವರಿಂದಲೂ ಶ್ರೀಕೃಷ್ಣನಿಂದಲೂ ಲಕ್ಷ್ಮಿ ಐರಾವತ, ಉಚ್ಚೆ ಶ್ರವಸ್ಸು, ಅಪ್ಪರಸ್ತ್ರೀಯರು, ಚಿಂತಾಮಣಿ ಮೊದಲಾದವುಗಳು ಸೂರೆಯಾಗುವುದಕ್ಕೆ ಮೊದಲಿದ್ದ ಸಮುದ್ರದ ಹಾಗೆ ಸಂಪೂರ್ಣವಾದ ಐಶ್ವರ್ಯದಿಂದ ಬಂದು ಧರ್ಮರಾಯನು ಇಂದ್ರಪ್ರಸ್ಥಪುರವನ್ನು ಸೇರಿದನು. ೧೦. ಆ ಪಟ್ಟಣದ ತೋಟಗಳು ದಟ್ಟವಾದ ಮಲಯಮಾರುತದಿಂದ ಅಲುಗಾಡಿಸಲ್ಪಟ್ಟು ಸಾಂದ್ರವಾದ ಪುಷ್ಪರಾಶಿಯು ಸುಗಂಧವನ್ನು ಬೀರುತ್ತಿತ್ತು. ಸೊಗಸಾಗಿ ಕಾಣುವ ಸಣ್ಣ ಹೀಚುಗಳು ಒಪ್ಪಿ ತೋರುತ್ತಿದ್ದುವು, ಉಪ್ಪಿನ ಸಮುದ್ರವೇ ಸುತ್ತುವರಿದಿದೆಯೋ ಎಂಬಂತಿದ್ದ ಕಂದಕಗಳು ಸುತ್ತಿ ಪ್ರಕಾಶಿಸುತ್ತಿರಲು ಕೋಟೆಯ ಸೌಂದರ್ಯವು ಹೊಗಳುವುದಕ್ಕೆ ಅಸಾಧ್ಯವೆನಿಸಿತ್ತು, ಆಕಾಶದವರೆಗೆ ಮೇಲಕ್ಕೆದ್ದು ಅಲುಗಾಡುತ್ತಿರುವ ಬಾವುಟಗಳ ಸಾಲು ಸ್ವರ್ಗದವರೆಗೂ ಹೋಗಿದ್ದುವು. ಸುತ್ತುವರಿದಿರುವ ಕೋಟೆಯ ಗೋಡೆಗಳೊಳಗೆ ರತ್ನಖಚಿತವಾದ ಅರಮನೆಗಳ ಸಮೂಹಗಳು ತೊಳಗಿ ಬೆಳಗುತ್ತಿದ್ದುವು, ರಸಯುಕ್ತ ಬಾವಿಗಳು ಪ್ರತಿಮನೆಯಿಂದಲೂ ಬೇರೆ ಬೇರೆ ಕೆಂಪುರತ್ನಗಳ ಧೂಳಿನ ಗಣಿಯಿಂದ ಕೂಡಿ ತೋರುತ್ತಿದ್ದುವು. ಕಲ್ಪವೃಕ್ಷದ ನೆರಳಿನಲ್ಲಿ ಕಾಮಧೇನುವು ಯಾವ ಅಲೆತವೂ ಇಲ್ಲದೆ ಸುಖವಾಗಿದ್ದಿತು. ವ್ಯಾಪಾರಿಗಳ, ಬ್ರಾಹ್ಮಣರ, ವೇಶ್ಯಾಜನರ ಮನೆಗಳು ಕುಬೇರನ ಮನೆಯನ್ನು ತಿರಸ್ಕರಿಸುತ್ತಿದ್ದುವು. ಆ ಪಟ್ಟಣದ ಬೆಡಗನ್ನು ವಿಶೇಷವಾಗಿ ಮೆಚ್ಚಿ ದೇವೇಂದ್ರನ ವೈಭವದಿಂದ ಕೂಡಿ ಪಾಂಡವರು ನಡೆದುಬಂದಾಗ ಪಟ್ಟಣದ ಸೀಜನರು ವಿಶೇಷಸಂತೋಷದಿಂದ ಕೂಡಿ ಆದರದಿಂದ ಹರಸಿದರು. ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ಸಂಪೂರ್ಣವಾಗಿ ಮನಸ್ಸಂತೋಷದಿಂದ ಸ್ವೀಕರಿಸಿ
Page #218
--------------------------------------------------------------------------
________________
ಚತುರ್ಥಾಶ್ವಾಸಂ | ೨೧೩
ಸೂಸುವ ಶೇಷಾಕೃತಮಂ ಸಮಂತು ಪಿರಿದುಂ ಮನ ಸಂತಸದಿಂದಮಾಂತು ಕರುಮಾಡಮನಾದರದಿಂದಮೇಲೆ ಕೆಲದೊಳಾಡಂಗಳನದು ತೋಟ ಮಣಿ ಕನಕ ರಜತ ವಸ್ತುಗಳನಿತ್ತು ಬೇಡಿದ ನಾಡುಗಳನವಯವದಿಂದಮಿತ್ತು ಕರಿ ತುರಗ ಬಲಂಗ ಪರ್ಚುವಂತು ಮಲೆಯುಂ ಮಂಡಲಮುಂ ಬೆರ್ಚುವಂತು ಕೊಂಡಾಡುವ ನಾಲ್ವರುಮನುಜರೊಳಗೆ ನೆಗರಿಗನ ತೇಜಮೆ ತೊಳಗಿ ಬೆಳಗೆ ನೆಲನಂ ಪ್ರತಿಪಾಲಿಸಿ ಧರ್ಮಸೂನು ಸೂಖಮಿರ್ದಂ ರಿಪುಬಳ ತಿಮಿರಭಾನು || ೧೦
ವ|| ಅಂತಜಾತಶತ್ರು ಶತ್ರುಪಕ್ಷ ಕ್ಷಯಕರ ಕರವಾಳ ದುಷ್ಟಾಭೀಳ ಭುಜಂಗಮೂರ್ತಿ ವಿಶ್ವ ವಿಶ್ವಂಭರಾಧಾರಮಪ್ಪರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪನ್ನೆಗಂ ವಿಕ್ರಾಂತತುಂಗ ನೊಂದೆಡೆಯೊಳಿರ್ಪಿರವಿಂಗುಮ್ಮಳಿಸಿ ದಿಗಂಗನಾ ಮುಖಾವಲೋಕನಂಗೆಯ್ಯಲ್ ಬಗೆದು
ಮ|| || ಸೆಣಸುಳ್ಳುದ ತರಂ ತಳಿಯದ ಚತುರಂಭೋಧಿ ಪರ್ಯಂತಮಂ ಧಾ ರಿಣಿಯಂ ತಾಂ ಪೋಗಿ ಬಾಯ್ಕಳಿಸದೆ ಮುನಿಜನಕ್ಕಿಷ್ಟಿ ವಿಘ್ನಂಗಳಂ ದಾ | ರುಣ ದೈತ್ಯ ಮಾಡಿ ನೀಡಿಲ್ಲದೆ ಸಲೆ ಚಲದಾಟಂದು ಕೊಂದಿಕ್ಕದೊರ್ವಂ ಗುಣಮುಂಟೆಂದುಂಡು ಪಟ್ಟರ್ಪನನಣಮೆ ನಿರುದ್ಯೋಗಿಯಂ ಭೂಪನೆಂಬರ್ II ೧೧
ವ' ಎಂದು ವಿಜಿಗೀಷುವತ್ರೋದ್ಯುಕ್ತನಾಗಲ್ ಬಗೆದು
ಉಪ್ಪರಿಗೆಯನ್ನು ಆದರದಿಂದ ಹತ್ತಿ ಸುಖವಾಗಿ ನೆಲಸಿದರು. ಪಕ್ಕದಲ್ಲಿದ್ದ ಮಾಡಗಳನ್ನು ಪರಿಚಯಮಾಡಿಕೊಂಡರು. ಅರ್ಥಿಗಳು ಬೇಡಿದ ಚಿನ್ನ, ಬೆಳ್ಳಿ, ರತ್ನಖಚಿತವಾದ ವಸ್ತುಗಳನ್ನೂ ರಾಜ್ಯಗಳನ್ನೂ ಶ್ರಮವಿಲ್ಲದೆ ದಾನಮಾಡಿದರು. ಆನೆ, ಕುದುರೆ, ಕಾಲಾಳಿನ ಬಲಗಳನ್ನೂ ಹೆಚ್ಚಿಸಿಕೊಂಡರು. ಬೆಟ್ಟಗುಡ್ಡಗಳೂ ಸಾಮಂತಮಂಡಲವೂ ಹೆದರುವಂತೆ ಸ್ತೋತ್ರಮಾಡಲ್ಪಟ್ಟರು. ನಾಲ್ಕು ಜನರಲ್ಲಿ ಅರ್ಜನನ ತೇಜಸ್ಸೇ ತೊಳಗಿ ಬೆಳಗುತ್ತಿರಲು ಶತ್ರುಸೈನ್ಯವೆಂಬ ಕತ್ತಲಿಗೆ ಸೂರ್ಯನೋಪಾದಿಯಲ್ಲಿದ್ದ ಧರ್ಮರಾಯನು ರಾಜ್ಯವನ್ನು ಸುಖವಾಗಿ ಪರಿಪಾಲಿಸುತ್ತಿದ್ದನು. ವ! ಶತ್ರುಗಳೇ ಹುಟ್ಟಿರದ ಧರ್ಮರಾಯನು ಶತ್ರುಸೈನ್ಯವನ್ನು ನಾಶಪಡಿಸುವ ಕತ್ತಿಯೆಂಬ ಹಲ್ಲಿನಿಂದ ಭಯಂಕರವಾದ ಸರ್ಪದಂತಿರುವ, ಸಮಸ್ತಭೂಮಿಗೂ ಆಶ್ರಯವಾಗಿರುವ ಅರಿಕೇಸರಿಯ ಬಾಹುಬಲದ ಆಶ್ರಯದಿಂದ ರಾಜ್ಯಭಾರ ಮಾಡುತ್ತಿರಲು ವಿಕ್ರಾಂತತುಂಗನಾದ ಅರ್ಜುನನು ಒಂದೇ ಸ್ಥಳದಲ್ಲಿರುವ ಸ್ಥಿತಿಗೆ ಜುಗುಪ್ಪೆಪಟ್ಟು ಜೈತ್ರಯಾತ್ರೆಯನ್ನು ಮಾಡಲು ಯೋಚಿಸಿದನು. ೧೧. ಅಸೂಯೆಯಿಂದ ಕೂಡಿ ದಾರಿತಪ್ಪಿ ನಡೆಯುವವರನ್ನು ಸಂಧಿಸಿ ಕತ್ತರಿಸದೆ ನಾಲ್ಕು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ತನ್ನ ಆಜ್ಞಾಧೀನವನ್ನಾಗಿ ಮಾಡಿಕೊಳ್ಳದೆ ಋಷಿಗಳ ಯಜ್ಞಕ್ಕೆ ವಿಘ್ನಮಾಡುತ್ತಿರುವ ದುಷ್ಟ ರಾಕ್ಷಸರನ್ನು ಸ್ವಲ್ಪವೂ ಸಾವಕಾಶವಿಲ್ಲದೆ ಪ್ರತಿಭಟಿಸಿ ಕೊಂದಿಕ್ಕದೆ ತನ್ನಲ್ಲಿ ಗುಣವುಂಟೆಂದು ಹೇಳುತ್ತ ಊಟಮಾಡಿ ಮಲಗಿರುವ ಒಬ್ಬ ನಿರುದ್ಯೋಗಿಯನ್ನು ರಾಜನೆನ್ನುತ್ತಾರೆಯೇ? ವ|| ಎಂದು ಯೋಚಿಸಿ ಜೈತ್ರಯಾತ್ರೆಗೆ ಹೊರಡಬೇಕೆಂದು
Page #219
--------------------------------------------------------------------------
________________
೨೧೪ | ಪಂಪಭಾರತಂ ಚಂ|| ಅಜಪಿದೊಡನ್ನ ಪೋಗನಿನಿಯಳೆ ಮನಂ ಮಟಕಕ್ಕೆ ನೀಳ ಕ
ಕ್ಲೋಜಿದುಗುವಸ್ತುವಾರಿಗೆ ತೂದಳ್ಳುಡಿ ಲಲ್ಲೆಗೆ ಪಕ್ಕುಗೊಟ್ಟು ಕಾ | ಲೈಂಗಿರೆ ಪೋಗು ಕೆಟ್ಟಪುದು ಮೋಹಮಯಂ ನಿಗಳಂ ಕಳತ್ರಮಂ ದಳಪದೆ ನಟ್ಟಿರುಳ ಮಣಿದು ಸಾರ್ಚಿದ ನಲ್ಗಳ ತಳ ತೋಳಳಂ || ೧೨
ವ|| ಮಲ್ಲಮೆಲ್ಲನೆ ಪತ್ತುವಿಡಿಸಿ ತನ್ನ ತೊಟ್ಟ ದಿವ್ಯಾಭರಣಂಗಳೆಲ್ಲಮಂ ಕಳೆದು ದಿವಶರದಿಗಳು ಬಿಗಿದುಕೊಂಡು ದಿವಚಾಪಮಂ ಪಿಡಿದು ಪ್ರಥಮ ಚಳಿತ ದಕ್ಷಿಣ ನಿಜ ನಿವಾಸದಿಂ ಪೂಣಮಟ್ಟು ಖಾಂಡವಪ್ರಸ್ಥದಿಂದುತ್ತರಾಭಿಮುಖನಾಗಿ ಕಾಮ್ಯಕವನದೊಳಗಡೆ ನೀಲಪರ್ವತದ ಮೇಗನೆ ಪೋಗಿಚಂಗ ಸಗರರ ಮೇಲೆ ಗಂಗೆಯನನಾಕುಲದಿಂ ತರಲಾ ಭಗೀರಥಂ
ನೆಗಳ ತಪೋನಿಯೋಗದೊಳವಂಗಮರಾಪಗೆ ಮೆಚ್ಚಿ ಪಾಯ್ಯುದುಂ | ಗಗನದಿನಂಧಕ ದ್ವಿಷ ಜಟಾಟವಿಯೊಳ್ ಬಟಿಕಾದ ಶೈಲದೊಳ್
ಸೊಗಯಿಸೆ ಪಾಯುದಿಂತಿದುವೆ ಬಂಧುರ ಕೂಟ ಕುಳಂ ಹಿಮಾಚಳಂ || ೧೩ ಮ|| ಸ ವಿಲಸತ್ಕಲ್ಲೋಲ ನಾದಂ ನೆಗಟ್ಟಿರ ನಿಜ ಕೂಟಾಗ್ರದೊಳ್ ಪಾಯ್ದ ಗಂಗಾ
ಜಲದಿಂ ಮೂರ್ಧಾಭಿಷೇಕೋನ್ನತಿ ನಿಲ ಚಮರೀ ಲೋಲ ಲಾಂಗೂಲಮಾಲಾ | ವಲಿ ವಿಕ್ಷೇಪಂಗಳಿಂ ತಚ್ಚಮರರುಹ ಮಹಾಶೋಭೆ ಕೈಗನ್ಮ ವಿಶ್ವಾ ಚಲ ಚಕ್ರೇಶತ್ವಮಂ ತಾಳಿದುದಖಿಳ ಧರಾರಮ್ಯಹೈಮಾಚಳೇ ದ್ರಂ ||
ಈ ದ್ರಂ ॥ ೧೪
ನಿಶ್ಚಯಿಸಿದನು. ೧೨. ತನ್ನ ಜೈತ್ರಯಾತ್ರಾಪ್ರಯಾಣ ವಿಷಯವನ್ನು ಪ್ರಿಯಳಾದ ಬ್ರೌಪದಿಗೆ ತಿಳಿಸಿದರೆ ಆ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಅವಳ ಮನಸ್ಸಿನ ದುಃಖದಿಂದ ಕೂಡಿದ ಕಣ್ಣೀರಿಗೂ ತೊದಳುಡಿಯ ಪ್ರಿಯವಾರ್ತೆಗೂ ಮನಸೋತು, ಅವಳು ನನ್ನ ಕಾಲಿಗೆರಗಿದರೆ ನನ್ನ ಪ್ರಯಾಣಕ್ಕೆ ವಿಘ್ನವುಂಟಾಗುತ್ತದೆ. ಹೆಂಡತಿಯು ಮೋಹಮಯವಾದ ಸರಪಣಿಯೇ ಸರಿ ಎಂದು ಅವಳಿಗೆ ತಿಳಿಸದೆಯೇ ನಡುರಾತ್ರಿಯಲ್ಲಿ ಮೈಮರೆತು ಮಲಗಿ ತನ್ನ ಸಮೀಪಕ್ಕೆ ನೀಡಿದ್ದ ಅವಳ ತೋಳುಗಳನ್ನು ವು ನಿಧಾನವಾಗಿ ಬಿಡಿಸಿಕೊಂಡು ತಾನು ಧರಿಸಿದ್ದ ಉತ್ತಮ ಒಡವೆಗಳನ್ನೆಲ್ಲ ಕಳೆದಿಟ್ಟು ಶ್ರೇಷ್ಠವಾದ ಬತ್ತಳಿಕೆಯನ್ನು ಬಿಗಿದುಕೊಂಡು ಉತ್ತಮವಾದ ಬಿಲ್ಲನ್ನು ಹಿಡಿದು ಬಲಗಾಲನ್ನು ಮುಂದಿಟ್ಟು ತನ್ನ ಮನೆಯಿಂದ ಹೊರಟು ಖಾಂಡವಪ್ರಸ್ಥದಿಂದ ಉತ್ತರದ ಕಡೆಗೆ ಹೊರಟು ಕಾಮ್ಯಕವನದೊಳಗಿನಿಂದಲೇ ನೀಲಪರ್ವತದ ಮೇಲಕ್ಕೆ ಬಂದನು. ೧೩. ತನ್ನ ಪಿತೃಗಳಾದ ಸಗರರ (ಭಸ್ಯರಾಶಿಯ) ಮೇಲೆ ಗಂಗೆಯನ್ನು ತರಲು ಆ ಭಗೀರಥನು ತಪಸ್ಸಿನಲ್ಲಿ ನಿರತನಾಗಲು ಅವನ ತಪಸ್ಸಿಗೆ ಮೆಚ್ಚಿ ದೇವನದಿಯಾದ ಗಂಗೆಯು ಮೊದಲು ಅಂಧಕಾಸುರನ ಶತ್ರುವಾದ ಶಿವನ ಜಟೆಯೆಂಬ ಕಾಡಿನಲ್ಲಿಯೂ ಬಳಿಕ ಅಡ್ಡವಾದ ಪರ್ವತದಲ್ಲಿಯೂ ಸೊಗಸಿನಿಂದ ಹರಿದಳು. ಅನೇಕ ಶಿಖರಗಳ ಸಮೂಹದಿಂದ ಮನೋಹರವಾಗಿರುವ ಆ ಹಿಮಾಚಲ ಪರ್ವತವೇ ಇದು. ೧೪, ಪ್ರಕಾಶಮಾನವಾದ ಅಲೆಗಳ ಧ್ವನಿಯು ಉಂಟಾಗುತ್ತಿರಲು ತನ್ನ ಶಿಖರಗಳ ತುದಿಯಲ್ಲಿ ಹರಿಯುವ ಗಂಗೋದಕದಿಂದ ಪಟ್ಟಾಭಿಷೇಕದ
Page #220
--------------------------------------------------------------------------
________________
೧೫
ಚತುರ್ಥಾಶ್ವಾಸಂ | ೨೧೫ ವ|| ಎಂದು ಮೆಚ್ಚಿ . ಕಂ ಚಾರು ವಿವಿಧಾಗ್ನಿಕಾರ್ಯ
ಪ್ರಾರಂಭ ಮಹಾದ್ವಿಜನ್ಯ ಘೋಷದಿನಂಹೂ | ದೂರಮುಮವನಿತಳಾಳಂ
ಕಾರಂ ಸಂಸಾರ ಸಾರ ಗಂಗಾದ್ವಾರಂ || ವ ಎನೆ ಸೊಗಯಿಸುವ ಗಂಗಾದ್ವಾರದೊಳ್ ಮುನಿಜನಂಗಳ ಬೇಳ್ವೆಗಳುಪದ್ರವಂಗೆಯ ನಿಶಾಟಕೋಟಿಯಂ ನಿಶಿತ ಶರಕೋಟಿಯಿಂದಮುಚ್ಚಾಟಿಸಿ ಕೆಲವು ದಿವಸಮಿರ್ದಲ್ಲಿ ಪಡೆಮೆಚ್ಚಿ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಮದನಲತಯೆಂಬ ನಾಗಕನ್ನೆ ಕಸ್ಟೇಟಂಗೊಂಡು ತನ್ನ ಲೋಕಕೊಡಗೊಂಡು ಪೋಗಲ್ಉl ಆಗಳುಮಿಂದು ಸೂರ್ಯರಣವಿಲ್ಲದೆ ಕತ್ತಲೆಯಂಬುದಿಲ್ಲ ತ
ದ್ಯೋಗಿ ಫಣಾಮಣಿ ದ್ಯುತಿಯೆ ಕತ್ತಲೆಯಂ ತಲೆದೋಜಲೀಯದಾ | ನಾಗರ ನಾಗಕನ್ನೆಯರ ರೂಪುಗಳಿಟ್ಟಳಮಾಗೆ ಭೋಗಿಗಳ ಭೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯು ಭೋಗನಾಯಕಮ್ || ೧೬
ವಗಿರಿ ಎಂದು ನಾಗಕನ್ನೆ ನಾಗಲೋಕದ ವಿಳಾಸಂಗಳಂ ತೋಜುತ್ತುಂ ತನ್ನ ಕೆಂಗಣ ನಾಗವಿಮಾನಕ್ಕೆ ಎಂದು ನಾಗಕನ್ನೆಯರುಂ ತಾನುಂ ಮನಂಬುಗಿಸುವಂತೆ ಮಜ್ಜನಂಬುಗಿಸಿ ರಸರಸಾಯನಂಗಳನೂಡುವಂತೆ ದಿವ್ಯಾಹಾರಂಗಳನೂಡಿಮಾನ್ಯತೆಯುಂಟಾಗಲು ಚಮರೀಮೃಗಗಳ ಮನೋಹರವಾದ ಬಾಲದ ತುದಿಯ ಕೂದಲುಗಳ ಸಮೂಹದ ಬೀಸುವಿಕೆಯಿಂದ ಚಾಮರಗಳನ್ನು ಬೀಸುವ ವೈಭವವು ಅಧಿಕವಾಗುತ್ತಿರಲು ಅಖಂಡ ಪ್ರಪಂಚದಲ್ಲಿರುವ ಎಲ್ಲ ಬೆಟ್ಟಗಳ ಚಕ್ರವರ್ತಿ ಪದವಿಯನ್ನು ಶ್ರೇಷ್ಠವಾದ ಈ ಹಿಮಾಚಲ ಪರ್ವತವು ತಾಳಿತು. ೧೫. ಗಂಗಾದ್ವಾರವೆಂಬ ಪುಣ್ಯಕ್ಷೇತ್ರವು ಮನೋಹರವೂ ನಾನಾ ವಿಧವೂ ಆದ ಮಹಾಬ್ರಾಹ್ಮಣರ ವೇದಘೋಷದಿಂದ ಪಾಪದೂರವೂ ಭೂಮಂಡಲಕ್ಕೆ ಅಲಂಕಾರ ಪ್ರಾಯವೂ ಸಂಸಾರಸಾರವೂ ಆಯಿತು. ವ ಇಂತಹ ಸೊಗಸಾಗಿರುವ ಗಂಗಾದ್ವಾರದಲ್ಲಿ ತಪಸ್ವಿಗಳ ಯಜ್ಞಕಾರ್ಯಕ್ಕೆ ಹಿಂಸೆಯನ್ನು ಮಾಡುವ ರಾಕ್ಷಸ ಸಮೂಹವನ್ನು ಹರಿತವಾದ ಬಾಣಗಳ ರಾಶಿಯಿಂದ ಹೊಡೆದೋಡಿಸುತ್ತ ಅಲ್ಲಿ ಕೆಲವು ದಿವಸವಿದ್ದನು. ಅಲ್ಲಿಯೇ ಪಡೆಮೆಚ್ಚೆಗಂಡನಾದ ಅರ್ಜುನನ ಸೌಂದರ್ಯವನ್ನು ನಾಗಕನ್ಯಯಾದ ಮದನಲತೆಯೆಂಬುವಳು ನೋಡಿ ಮೋಹಗೊಂಡು ಅವನನ್ನು ತನ್ನ ನಾಗಲೋಕಕ್ಕೆ ಕೊಂಡುಹೋದಳು. ೧೬. ಚಂದ್ರಸೂರ್ಯರು ಇಲ್ಲದಿದ್ದರೂ - ಅಲ್ಲಿ ಕತ್ತಲೆಯೆಂಬುದೇ ಇಲ್ಲ. ಆ ಹಾವುಗಳ ಹೆಡೆಗಳಲ್ಲಿರುವ ರತ್ನಕಾಂತಿಯೇ ಕತ್ತಲೆಯು ತಲೆಹಾಕುವುದಕ್ಕೆ ಅವಕಾಶಕೊಡುವುದಿಲ್ಲ. ಆ ನಾಗರ ಮತ್ತು ನಾಗಕನ್ನಿಕೆ ಯರ ರೂಪಗಳು ಮನೋಹರವಾಗಿವೆ. ಆದುದರಿಂದಲೇ ಸರ್ಪಗಳು ಭೋಗಿಗಳು ಎನ್ನಿಸಿಕೊಂಡಿವೆ. ಭೋಗಿಗಳೆಂದರೆ ಭೋಗಪಾಲಕರೇ ವ ಎಂದು ಆ ನಾಗಕನ್ನಿಕೆ ಆ ನಾಗಲೋಕದ ವೈಭವಗಳನ್ನು ತೋರಿಸುತ್ತ ಕೆಳಭಾಗದಲ್ಲಿದ್ದ ತನ್ನ ಅಂತಃಪುರಕ್ಕೆ
Page #221
--------------------------------------------------------------------------
________________
೨೧೬) ಪಂಪಭಾರತಂ ಉ11 ನಾಗವಿಭೂಷಣಪ್ರತತಿ ನಾಗರಖಂಡವಪೂರ್ವಮಪ್ಪ ಪು
ನಾಗದ ಬಾಸಿಗಂ ಬಗೆದ ಬಣ್ಣದ ಪುಟ್ಟಿಗೆ ನಾಗಜಾಲಮಂ | ದಾಗಡೆ ನಾಗಲೋಕ ವಿಭವಂಗಳೊಳಾಚಿಸಿ ನಾಗಶಯ್ಯೊಳ್ ನಾಗಿಣಿ ನಾಗಬಂಧದೊಳ್ ತಳು ಗುಣಾರ್ಣವನಂ ಮರುಳ್ಳಿದಳ್ || ೧೭
ವ) ಅಂತಾಕೆಯ ಮುದ್ದುವೆರಸಿದ ತೂದಳ್ಳುಡಿಗಂ ಪೂಮಾಲೆವರಸಿದ ಬಬಲುಡಿಗಮಲಂಪುವೆರಸಿದ ನೋಟಕ್ಕಮಿಂಬುವರಸಿದ ಕೂಟಕ್ಕಂ ಪುರುಡುವೆರಸಿದ ಕೊಂಕಿಂಗಂ ಕದ್ದವಣಿ(?)ವೆರಸಿದ ಸೋಂಕಿಂಗಂ ಗಾಡಿವೆರಸಿದ ಹಾವಕ್ಕಂ ನಾರಸಿದ ಭಾವಕ್ಕಮೊಲ್ಲು ಮೊಬಿಲ್ಲುಮಿರೆಯಿರೆ ದೇವೇಂದ್ರಂಗಮಿಂದ್ರಾಣಿಗಂ ಜಯಂತನೆಂತಂತೆ: ಕಂ ಅಂತಾ ಫಣಿಕಾಂತೆಗಮರಿ
ಕಾಂತಾಳಿಕ ಫಳಕ ತಿಳಕ ಹರನೆನಿಪರಿಗಂ || ಗಂ ತನಯನಧಿಕ ತೇಜೋ
ವಂತನಿಳಾವಂತನಿಂದುಮಂಡಳಕಾಂತಂ |
ವll ಅಂತು ಹುಟ್ಟುವುದುಮಾತನ ಬಾಲಕ್ರೀಡೆಯುಮಾಕಯ ಸುರತಡೆಯುಂ ತನ್ನ ನೋಟಕ್ಕಂ ಕೂಟಕ್ಕಂ ಸೊಗಯಿಸೆ ಕೆಲವು ದಿವಸಮಿರ್ದಲ್ಲಿಂ ಪೂಣಮಟ್ಟು ಬಂದು ಹಿಮವದ್ದಿರೀಂದ್ರ ತಟ ನಿಕಟವರ್ತಿಗಳಷ್ಟಗಷ್ಟವಟಮುಂ ವಸಿಷ್ಠಪರ್ವತಂಗಳೆಂಬ
ಬಂದು ತಾನೂ ಆ ನಾಗಕನ್ನಿಕೆಯರೂ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಅವನಿಗೆ ಸ್ನಾನಮಾಡಿಸಿ ರಸಯುಕ್ತವಾದ ರಸಾಯನಗಳನ್ನು ತಿನ್ನಿಸುವಂತೆ ದಿವ್ಯಾಹಾರಗಳನ್ನು ಊಡಿಸಿದರು. ೧೭. ಆ ನಾಗಕನ್ನಿಕೆಯು ಅರ್ಜುನನನ್ನು ನಾಗರ ಒಡವೆಗಳ ಸಮೂಹ; ನಾಗರ ಖಂಡವೆಂಬ ಪ್ರದೇಶ, ಅಪೂರ್ವವಾದ ಪುನ್ನಾಗ ಪುಷ್ಟಗಳ ಹಾರ, ಬಗೆಬಗೆಯ ವಸ್ತಗಳು, ನಾಗದವಲ್ಲಿ (ತಾಂಬೂಲ) ಮೊದಲಾದ ನಾಗಲೋಕದ ವೈಭವಗಳಲ್ಲಿ ಮುಳುಗಿಸಿ ನಾಗಶಯ್ಕೆಯಲ್ಲಿ ನಾಗಬಂಧವೆಂಬ ರತಿಬಂಧದಲ್ಲಿ ಸೇರಿಕೊಂಡು ಮರುಳು ಮಾಡದಳು. ವ|| ಆಕೆಯ ಮುದ್ದಿನಿಂದ ಕೂಡಿದ ಲಲ್ಲೆಮಾತಿಗೂ (ತೊದನ್ನುಡಿ) ಹೂಮಾಲೆಯಿಂದ ಕೂಡಿ ಜೋಲಾಡುತ್ತಿರುವ ತುರುಬಿಗೂ ಪ್ರೀತಿಯಿಂದ ಕೂಡಿದ ನೋಟಕ್ಕೂ ಸುಖಮಯವಾದ ಕೂಡುವಿಕೆಗೂ ಸ್ಪರ್ಧೆಯಿಂದ ಕೂಡಿದ ವಕ್ರತೆಗೂ ಬಿಗಿದಪ್ಪಿದ ಆಲಿಂಗನಕ್ಕೂ ಸೌಂದರ್ಯದಿಂದ ಕೂಡಿದ ಶೃಂಗಾರ ಚೇಷ್ಟೆಗೂ ನಾಚಿಕೆಯಿಂದ ಕೂಡಿದ ಭಾವಗಳಿಗೂ ಒಲಿದು ಪ್ರೀತಿಸಿರಲು ದೇವೇಂದ್ರನಿಗೂ ಶಚೀದೇವಿಗೂ ಜಯಂತನು ಹುಟ್ಟುವ ಹಾಗೆ ೧೮. ಆ ಕನ್ನಿಕೆಗೂ ಶತ್ರುಸ್ತೀಯರ ಮುಖವೆಂಬ ಹಲಗೆಯಲ್ಲಿರುವ ತಿಲಕವನ್ನು ನಾಶಪಡಿಸುವವನೆಂಬ (ಕೀರ್ತಿಯನ್ನುಳ್ಳ) ಅರಿಕೇಸರಿಗೂ ಅಧಿಕ ತೇಜಸ್ಸಿನಿಂದ ಕೂಡಿದವನೂ ಚಂದ್ರಮಂಡಳದ ಕಾಂತಿಯುಳ್ಳವನೂ ಆದ ಇಳಾವಂತನೆಂಬ ಮಗನು ಹುಟ್ಟಿದನು. ವ|| ಆತನ ಬಾಲಕ್ರೀಡೆಯು ತನ್ನ ನೋಟಕ್ಕೂ ಅವಳ ಸುರತಕ್ರೀಡೆಯು ತನ್ನ ಕೂಟಕ್ಕೂ ಸೊಗಯಿಸುತ್ತಿರಲು ಕೆಲವು ದಿವಸವಿದ್ದು ಅಲ್ಲಿಂದ ಹೊರಟುಬಂದು ಶ್ರೇಷ್ಠವಾದ ಹಿಮಾಲಯ ಪರ್ವತದ ತಪ್ಪಲಿನ ಸಮೀಪದಲ್ಲಿರುವ ಅಗಸ್ಯನಟ ಮತ್ತು
Page #222
--------------------------------------------------------------------------
________________
ಚತುರ್ಥಾಶ್ವಾಸಂ | ೨೧೭
ತೀರ್ಥಂಗಳೊಳಲಾಡುತ್ತುಮಾ ದಿಶಾಭಾಗಮನಾತೀಯ ಶಾಸನಾಯತ್ತು ಮಾಡುತ್ತುಂ ಬಂದಿಂದುಬಿಂಬವಿಗಳದಮೃತಬಿಂದು ದುರ್ದಿನಾರ್ದ ಚಂದನಾನ್ವಿತಮುಮಶಿಶಿರ ಕರ ರಥ ತುರಗ ಖುರ ಶಿಖರ ನಿಖಂಡಿತ ಲವಂಗ ಪಲ್ಲವಮುಮೈರಾವತ ಕರಲೂನ ಸಲ್ಲಕೀ ಶಬಳಮುಮಪ್ಪುದಯಗಿರಿಯಿಂ ಸೊಗಯಿಸುವ ಮೂಡಣ ದೆಸೆಗೆ ಎಂದು ನಂದೆಯ ಪರನಂದಯನಿ ಮಹಾನಂದೆಯೆಂಬ ತೀರ್ಥಜಲಂಗಳೊಳೊಲಾಡುತ್ತುಮುತ್ತ ರಿಪುನೃಪತಿಗಳನೇಸಾಡುತ್ತುಮಲ್ಲಿಂ ತಳರ್ದು ಚವಳ ಕಪಿಬಳ ವಿರುವ ವಿಗಳಿತ ಲತಾಭವನ ಮುಮಧಿಕ ಬಳ ನಳ ಕರತಳಗಳಿತ ಕುಳಶೈಳ ಸಹಸ್ರ ಸಂತಾನ ಕಳಿತ ಸೇತುಬಂಧುರಮುಮಪ್ಪ ದಕ್ಷಿಣ ಸಮುದ್ರದ ತಡಿವಿಡಿದು ಬಂದು ರಾಮಚಂದ್ರಂ ವಿಹರಿಸಿದೆಡೆಗಳಂ ನೋಡಿ
6011 ಅಂದಿದು ಸೀತೆಯೊಳ್ ನೆರೆದು ನಿಂದಡೆ ತತ್ಪರದೂಷಣರ್ಕಳಂ ಕೊಂದೆಡೆ ಪೋಗಿ ಪೊಮ್ಮರೆಯನೆಡೆ ತಪ್ಪದಿದಪ್ಪುದೆಂದು ಕಾ | ಹೈಂ ದಶಕಂಠನಂ ತ್ರಿದಶ ಕಂಟಕನಂ ಕೊಲಲೆಂದು ರಾಮನಾ ದಂದಿನ ಸಾಹಸಂ ಮನದೊಳಾವರಿಸಿತಕಳಂಕರಾಮನಾ ||
೧೯
ವ|| ಅಂತು ರಾಮ ಜನೋತ್ಪತ್ತಿಯೊಳಾದ ತನ್ನಯ ಮುನ್ನಿನ ಸಾಹಸಂಗಳಂ ನೆನೆಯುತ್ತುಂ ಬಂದಗಸ್ವತೀರ್ಥಮಂ ಕಂಡು
ವಸಿಷ್ಠಪರ್ವತವೆಂಬ ಪವಿತ್ರಕ್ಷೇತ್ರಗಳಲ್ಲಿ ವಿಹರಿಸಿ ಆ ದಿಗ್ಗಾಗ ಪ್ರದೇಶಗಳನ್ನೆಲ್ಲ ತನ್ನ ಆಜ್ಞಾನುವರ್ತಿಗಳನ್ನಾಗಿ ಮಾಡಿಕೊಂಡನು. ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತದ ಹನಿಗಳೆಂಬ ದುರ್ದಿನದಿಂದ ಒದ್ದೆಯಾದ ಶ್ರೀಗಂಧದಿಂದ ಕೂಡಿದುದೂ ಸೂರ್ಯನ ಕುದುರೆಯ ಗೊರಸಿನ ತುದಿಯಿಂದ ಕತ್ತರಿಸಲ್ಪಟ್ಟ ಲವಂಗದ ಬಳ್ಳಿಯ ಚಿಗುರನ್ನುಳ್ಳದ್ದೂ ಐರಾವತವೆಂಬ ಇಂದ್ರನ ಆನೆಯ ಸೊಂಡಲಿನಿಂದ ಮುರಿಯಲ್ಪಟ್ಟ ಆನೆಬೇಲದ ಮರದ ವಿವಿಧ ಬಣ್ಣಗಳಿಂದ ಕೂಡಿದ ಪೂರ್ವದಿಕ್ಕಿಗೆ ಬಂದನು. ನಂದೆ, ಅಪರನಂದೆ, ಅಶ್ವಿನಿ, ಮಹಾನಂದೆಯೆಂಬ ತೀರ್ಥೋದಕಗಳಲ್ಲಿ ವಿಹರಿಸಿ ಪ್ರತಿಭಟಿಸಿದ ರಾಜರುಗಳನ್ನು ಸೋಲಿಸುತ್ತ ಅಲ್ಲಿಂದ ಹೊರಟು ಚಪಳವಾದ ಕಪಿಗಳ ಸಮೂಹದಿಂದ ನಾಶಮಾಡಲ್ಪಟ್ಟ ಬಳ್ಳಿವನೆಗಳಿಂದಲೂ ಅಧಿಕ ಬಳವಂತನಾದ ನಳನು ಸಾವಿರಾರು ಕುಲಪರ್ವತಗಳನ್ನು ಸೇರಿಸಿ ನಿರ್ಮಿಸಿದ ಸೇತುವೆಯಿಂದಲೂ ಅತಿ ರಮಣೀಯವಾದ ದಕ್ಷಿಣಸಮುದ್ರದ ತೀರಪ್ರದೇಶವನ್ನು ಅನುಸರಿಸಿ ಬಂದು (ಹಿಂದೆ) ರಾಮಚಂದ್ರನು ವಿಹರಿಸಿದ ಸ್ಥಳಗಳನ್ನು ನೋಡಿ-೧೯. ಹಿಂದೆ ತ್ರೇತಾಯುಗದಲ್ಲಿ ಸೀತೆಯೊಡನೆ ಸೇರಿ ನಿಂತ ಸ್ಥಳವಿದು, ಆ ಖರದೂಷಣರನ್ನು ಕೊಂದ ಸ್ಥಳವಿದು, ಹೋಗಿ ಚಿನ್ನದ ಜಿಂಕೆಯನ್ನು ಹೊಡೆದ ಸ್ಥಳವಿದು, ಆಗಿರಬೇಕು ಎಂದು ವಿಶೇಷಕೋಪದಿಂದ ದೇವತೆಗಳಿಗೆ ಕಂಟಕನಾಗಿದ್ದ ಆ ಹತ್ತುತಲೆಯ ರಾವಣನನ್ನು ಕೊಲ್ಲಲು ಅವತರಿಸಿದ ರಾಮನ ಅಂದಿನ ಸಾಹಸವು ಅಕಳಂಕರಾಮನಾದ ಅರ್ಜುನನ ಮನಸ್ಸಿನಲ್ಲಿ ಪುನಃ ಅಂಕುರಿಸಿತು ವ|| ರಾಮಾವತಾರದಲ್ಲಾದ ಅಂದಿನ (ತನ್ನ ಹಿಂದಿನ) ಸಾಹಸಗಳನ್ನು ನೆನೆಯುತ್ತ ಬಂದು ಅಗತೀರ್ಥವನ್ನು ಕಂಡನು.
Page #223
--------------------------------------------------------------------------
________________
೨೧೮ / ಪಂಪಭಾರತಂ ಮll ಬಳೆಯಲಣಿದುದಿಲ್ಲ ವಿಂಧ್ಯಗಿರಿಯುಂ ತನ್ನಾಜ್ಞೆಯಿಂದೊರ್ಮೆ ಮು
ಕುಳಿಸಲ್ಕಂಬುಧಿ ಸಾಲ್ಕುದಿಲ್ಲ ಜಗಮಂ ತಿಂದಿರ್ದ ವಾತಾಪಿ ಪೊ | ಕಳುರ್ವಾತೋದರ ವಹಿಯಿಂ ಪೊಅಮಡಲ್ ತಾನಾರ್ತನಿಲ್ಲಟ್ಟುದಿ
ಲೈಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪಂಪಾರ್ಗಗಂಬರಂ || ೨೦
ವ|| ಎಂದಗಸ್ವತೀರ್ಥ ಸೌಭದ್ರ ಪೌಲೋಮ ಕಾಂಭೋಜ ಭಾರದ್ವಾಜಮೆಂಬಯ್ದು ತೀಥರ್ಂಗಳೊಳ್ ವರ್ಧಮಾನನೆಂಬ ಋಷಿಯ ಶಾಪದೊಳುಗ್ರಗ್ರಾಹ ಸ್ವರೂಪದೂಳಿರ್ದಚರಣೆ ಯರುಮಂ ವಿಶಾಪೆಯರ್ ಮಾಡಿ ಮಳಯಪರ್ವತಮನೆಯ್ದವಂದುಚಂil ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪಂಪುವ
ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟ ಪೋ | ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ
ಯದು ಕುಸುಮಾಸ್ತನಾಜ್ಞೆ ತವದಲ್ಲಿಯುಮಿಲ್ಲಿಯ ನಂದನಂಗಳೊಳ್ || ೨೧ ಮ! ಇದುಭ್ರಂಕಷ ಕೂಟ ಕೋಟಗಳೊಳಿರ್ದಂಭೋಜ ಷಂಡಂಗಳಂ
ಪುದಿದುಷ್ಠಾಂಶುವಿನೂರ್ಧ್ವಗಾಂಶುನಿವಹಂ ಮೆಯ್ಕಟ್ಟಲರ್ಚುತ್ತುಮಿ | ರ್ಪುದು ಮಾದ್ಯದ್ಭಜ ಗಂಡ ಭಿತ್ತಿ ಕಷಣಪ್ರೋದ್ದೇದದಿಂ ಸಾರ್ದು ಬಂ ದಿದಿರೊಳ್ ಕೂಡುವುದಿಲ್ಲಿ ಚಂದನ ರಸಂ ಕೆಂಬೊನ್ನ ಟಂಕಂಗಳೊಳ್ | ೨೨
೨೦. ವಿಂಧ್ಯಪರ್ವತವು ತನ್ನಾಜ್ಞೆಯನ್ನು ಮೀರಿ ಬೆಳೆಯಲಾಗಲಿಲ್ಲ, ಸಮುದ್ರವು ತನಗೆ ಬಾಯುಕ್ಕಳಿಸಲೂ ಸಾಕಾಗಲಿಲ್ಲ. ಜಗತ್ತನ್ನೇ ನುಂಗಿದ ವಾತಾಪಿಯೆಂಬ ರಾಕ್ಷಸನು ಪ್ರವೇಶಮಾಡಿ ಉರಿಯುತ್ತಿದ್ದ ತನ್ನ ಜಠರಾಗ್ನಿಯಿಂದ ಹೊರಟುಬರಲು ಸಮರ್ಥನಾಗಲಿಲ್ಲ. ಭೂಮಿಯು ತನ್ನ ಭಾರಕ್ಕೆ ಮುಳುಗದೆ ಉತ್ತರಕ್ಕೆ ಸರಿಯಿತು ಎಂಬ (ಮಹಿಮೆ) ವೈಭಪವು ಅಗಸ್ಯಋಷಿಗಳಿಗಲ್ಲದೆ ಮತ್ತಾರಿಗುಂಟು ವll ಎಂದು ಆಲೋಚಿಸುತ್ತ ಅಗಸ್ಯತೀರ್ಥ, ಸೌಭದ್ರ, ಪೌಳೋಮ, ಕಾಂಭೋಜ, ಭಾರದ್ವಾಜವೆಂಬ ಅಯ್ದು ತೀರ್ಥಗಳಲ್ಲಿ ಸಂಚರಿಸಿ ವರ್ಧಮಾನನೆಂಬ ಋಷಿಯ ಶಾಪದಿಂದ ಭಯಂಕರವಾದ ಮೊಸಳೆಯ ಆಕಾರದಲ್ಲಿದ್ದ ಅಪ್ಪರಸ್ತ್ರೀಯರನ್ನು ಶಾಪ ವಿಮೋಚಿತರನ್ನಾಗಿ ಮಾಡಿ ಮಳಯಪರ್ವತಕ್ಕೆ ಬಂದು ಸೇರಿದನು. ೨೧. ಇದು ಮಲಯಪರ್ವತ, ಶ್ರೀಗಂಧಕ್ಕೆ ಮಲಯಜನೆಂದು ತಂಪಾದ ಗಾಳಿಗೆ ಮಲಯಾನಿಲ ಎಂದೂ ಹೆಸರು ಬಂದುದು ಇಲ್ಲಿ ಹುಟ್ಟಿದುದರಿಂದಲೇ, ವಸಂತಋತುವೂ ಇಲ್ಲಿ ಹುಟ್ಟಿ ಮತ್ತೆಲ್ಲಿಗೂ ಹೋಗುವುದಿಲ್ಲ. ಇಲ್ಲಿಯ ಕೋಗಿಲೆಯು ಮೂಕತೆಯನ್ನು ಪಡೆಯುವುದಿಲ್ಲ, ಫಲ ಬಿಟ್ಟ ಮಾವು ಎಂದೂ ಮುನಿದುಹೋಗುವುದಿಲ್ಲ. ಇಲ್ಲಿಯ ನಂದನವನಗಳಲ್ಲಿ ಮನ್ಮಥನ ಆಜ್ಞೆ ಎಂದೂ ತಪ್ಪುವುದಿಲ್ಲ. ೨೨. ಇದರ ಅನೇಕ ಆಕಾಶಗಾಮಿಯಾದ ಶಿಖರಗಳ ಮೇಲಿರುವ ತಾವರೆಗಳ ಸಮೂಹವನ್ನು ಸೂರ್ಯನ ಊರ್ಧ್ವಗಾಮಿಯಾದ ಉಷ್ಣ ಕಿರಣಗಳು ಪ್ರವೇಶಿಸಿ ಅರಳಿಸುತ್ತವೆ. ಮದ್ದಾನೆಗಳ ಗಂಡಸ್ಥಳವೆಂಬ ಗೋಡೆಗಳ ಉಜ್ಜುವಿಕೆಯಿಂದ ಮುರಿದು (ಸ್ರವಿಸುತ್ತಿರುವ) ಶ್ರೀಗಂಧದ ರಸವು ಹರಿದುಬಂದು ಇಲ್ಲಿಯ ಅಪರಂಜಿಯ ಬಣ್ಣದ ಪರ್ವತದ ತಪ್ಪಲುಗಳನ್ನು
Page #224
--------------------------------------------------------------------------
________________
ಚತುರ್ಥಾಶ್ವಾಸಂ | ೨೧೯ ಮll .ಸ ನೆಗಟೀ ಕರ್ಪೂರ ಕಾಳಾಗರು ಮಳಯ ಮಹೀಜಂಗಳೇಳಾ ಲತಾಳೀ |
ಸ್ಥಗಿತಂಗಳ್ ಕಣ್ಣೆವಂದಿರ್ದುವನಿವನೆ ವಲಂ ಕೊಂಬುಗೊಂಡಂಗಜಂ ಮೇ | ಲ್ಯಗೆ ಪಾರ್ದಾರ್ದಾಗಳುಂ ಕಿನ್ನರ ಯುವತಿ ಮೃಗೀವಾತಮಂ ತನ್ನ ನಲ್ಲಂ ಬುಗಳಿಂದೆಚ್ಚೆಚ್ಚು ಮೆಚ್ಚಂ ಸಲಿಸುವನದಟಿಂ ರಮ್ಯಮಂತೀ ನರೇಂದ್ರ 11೨೩
ಮll: ಇದಿರೊಳ್ ನಿಂದೊಡೆ ವಜಿ ಸೈರಿಸನಿರಲ್ವೇಡೆಮ್ಮೆಳೊಳ್ಳೋಕು ನಿ
ಲುದು ನೀನೆಂದು ಕಡಂಗಿ ಕಾಲಿಡಿವವೊಲ್ ತನೂ.ರ್ಮಿಗಳ ಬಂಧುವಂ | ದಿದಂ ಪೋದ ತಪೋಪಳಂ (?) ಗಗನಮಂ ಮಾರ್ಪೊಯ್ಕೆ ಕಸ್ತೂಪ್ಪಿ ತೋ ರ್ಪುದಿದುತ್ತೇಂಖದಸಂಖ್ಯ ಶಂಖ ಧವಳಂ ಗಂಭೀರ ನೀರಾಕರಂ || ೨೪
ಚಂtl.
ಚಳದನಿಳಾಹತ ಕ್ಷುಭಿತ ಭಂಗುರ ತುಂಗ ತರಂಗ ಮಾಳಿಕಾ ವಳನ ಸಮುಚ್ಚಳವಣಿಗಣಾತ್ತ ಮರೀಚಿ ಲತಾ ಪ್ರತಾನ ಸಂ | ವಳಯಿತ ವಿದ್ರುಮ ದ್ರುಮ ವಿಳಾಸ ವಿಶೇಷಿತ ಬಾಡವಾನಳಾ ವಿಳ ಜಳಮಂ ಮನಂ ಬಯಸಿ ನೋಡಿದನರ್ಣವಮಂ ಗುಣಾರ್ಣವಂ 11' ೨೫
ವ|| ಅಂತು ನೋಡುತ್ತುಂ ಬಂದು ಮುಂದೊಂದೆಡೆಯೊಳದಭ್ರಾಭ್ರವಿಭ್ರಮ ಭ್ರಾಜಿತೋತ್ತುಂಗಶೈಲಮಂ ಕಂಡು
ನಂದಿಸುತ್ತದೆ. ೨೩. ಏಲಕ್ಕಿ ಬಳ್ಳಿಗಳಿಂದ ವ್ಯಾಪ್ತವಾಗಿ ಪ್ರಸಿದ್ಧವಾಗಿರುವ ಇಲ್ಲಿಯ ಕರ್ಪೂರ, ಕರಿ ಅಗಿಲು, ಗಂಧದ ಮರಗಳು ಬಹು ರಮಣೀಯವಾಗಿವೆ. ಇದನ್ನೇ ಅಲ್ಲವೇ ಮನ್ಮಥನು ತನ್ನ ಸಂಕೇತಸ್ಥಳವನ್ನಾಗಿ ಮಾಡಿಕೊಂಡು ಮೃದುವಾಗಿ ನೋಡಿ ಆರ್ಭಟಿಸಿ ಕಿನ್ನರಯುವತಿಯೆಂಬ ಜಿಂಕೆಯ ಸಮೂಹವನ್ನು ಯಾವಾಗಲೂ ತನ್ನ ಉತ್ತಮ ಬಾಣಗಳಿಂದ ಹೊಡೆದು ಅವರ ಇಷ್ಟಾರ್ಥವನ್ನು ಸಲ್ಲಿಸುತ್ತಾನೆ. ಆದುದರಿಂದ ಈ ಪರ್ವತಶ್ರೇಷ್ಠವು ರಮಣೀಯವಾಗಿದೆ. ೨೪. ನೀನು ಎದುರುಗಡೆ ನಿಂತರೆ ಇಂದ್ರನು ಸೈರಿಸುವುದಿಲ್ಲ. ಇಲ್ಲಿರಬೇಡ; ನಮ್ಮೊಳಗೆ ಪ್ರವೇಶ ಮಾಡಿ ನಿಲ್ಲತಕ್ಕದ್ದು ಎಂದು ಉತ್ಸಾಹದಿಂದ ಕಾಲನ್ನು ಹಿಡಿಯುವ ಹಾಗೆ ಸಮುದ್ರದ ಅಲೆಗಳು ಪಕ್ಕದಲ್ಲಿರುವ ಪರ್ವತಗಳ ಬುಡವನ್ನು ಆಶ್ರಯಿಸಿವೆ. ಇಲ್ಲಿಂದ ಹೋದ ತಪೋಪಳವು (?) ಗಮನವನ್ನು ಪ್ರತಿಭಟಿಸಲು ಮೇಲೆ ತೇಲುತ್ತಿರುವ ಅಸಂಖ್ಯಾತವಾದ ಶಂಖಗಳಿಂದ ಬೆಳ್ಳಗಿರುವ ಗಂಭೀರವಾದ ಸಮುದ್ರವು ಕಣ್ಣಿಗೆ ಒಪ್ಪಿ ತೋರಿತು. ೨೫. ಚಲಿಸುತ್ತಿರುವ ಗಾಳಿಯ ಹೊಡೆತದಿಂದ ಕದಡಿದುದೂ ಅಸ್ಥಿರವೂ ಎತ್ತರವೂ ಆದ ಅಲೆಗಳ ಹೊರಳಿಕೆಯಿಂದ ಚಂಚಲವಾದುದು. ಮೇಲಕ್ಕೆ ಚಿಮ್ಮಿದ ರತ್ನಕಾಂತಿ ಗಳಿಂದ ಕೂಡಿದುದೂ ಹವಳದ ಬಳ್ಳಿಗಳ ಸೊಗಸಿನಿಂದ ವಿಶಿಷ್ಟವಾಗಿ ಮಾಡಲ್ಪಟ್ಟುದೂ ಬಡಬಾಗ್ನಿಯ ಬೆಂಕಿಯಿಂದ ಕದಡಲ್ಪಟ್ಟ ನೀರುಳ್ಳದೂ ಆದ ಸಮುದ್ರವನ್ನು ಗುಣಾರ್ಣವನಾದ ಅರ್ಜುನನು ತೃಪ್ತಿಯಿಂದ ನೋಡಿದನು. ವll ಹಾಗೆ ನೋಡುತ್ತ ಬಂದು ಮುಂಭಾಗದಲ್ಲಿ ಅತಿಶಯವಾದ ಮೋಡಗಳ ವಿಲಾಸದಿಂದ ಪ್ರಕಾಶಿತವಾದ
Page #225
--------------------------------------------------------------------------
________________
೨೨೦) ಪಂಪಭಾರತಂ ಮlು ವಿನತಾಪುತ್ರನ ವಜ್ರತುಂಡಹತಿಗಂ ಮಯಾಂತು ಕಂಡಂಗಳು
ನಮಂಗಂಗಳನೊಡ್ಡಿಯೊಡ್ಡಿ ತನುವಂ ಕೋಟ್ಟಂತು ಜೀಮೂತವಾ | ಹನನೆಂಬಂಕದ ಚಾಗಿ ನಿಚ್ಚಟಕೆಯಿಂದೀ ಶೈಳದೊಳ್ ಶಂಖಚೂ ಡನನಾದಂದದೆ ಕಾದ ಪಂಪಸೆಯ ನಾಗಾನಂದಮಂ ಮಾಡಿದಂ || ೨೬
ವ| ಎಂದಭಿನವ ಜೀಮೂತವಾಹನಂ ಜೀಮೂತವಾಹನನ ಪರೋಪಕಾರದ ಬೀರದ ಪಂಪಂ ಮೆಚ್ಚುತ್ತುಂ ಬಂದು ಗೋಕರ್ಣನಾಥನಂ ಗೌರೀನಾಥನನವನಿ ಪವನ ಗಗನ ದಹನ: ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರಿಲೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ದಳಂ ಮುಗಿದುಹೃದ್ಧಿಗೆ ಪ್ರಚಂಡ ಲಯ ತಾಂಡವ ಕ್ಷುಭಿತಯಾಶು ಯಸ್ಯಾನಯಾ
ಸದಿಗ್ಗಳಯಯಾ ಭುವಾ ಸ ಗಿರಿ ಸಾಗರ ದ್ವಿಪಯಾ | ಕುಲಾಲ ಕರ ನಿರ್ಭರ ಭ್ರಮಿತ ಚಕ್ರಲೀಲಾಯಿತಂ
ಸ ಸರ್ವ ಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ | * . ೨೭ ವ|| ಎಂದು ಬಾಳೇಂದುಮಾಳಿಯಂ ಸ್ತುತಿಸಿಚಂl ಸೊಗಯಿಸಿ ಬಂದ ಮಾಮರನೆ ತನ್ನೆಲೆವಳ್ಳಿಯ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳೊಗಂ | ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಡಾವ ಬೆ ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್ || ೨೮
ಎತ್ತರವಾದ ಪರ್ವತವನ್ನು ನೋಡಿದನು: ೨೬. ವಿನತೆಯ ಮಗನಾದ ಗರುಡನ ವಜ್ರದಷ್ಟು ಕಠಿಣವಾದ ಪೆಟ್ಟಿಗೂ ಶರೀರವನ್ನೊಡ್ಡಿ ಮಾಂಸಖಂಡಗಳಿರುವವರೆಗೂ ಅವಯವಗಳನ್ನು ಚಾಚಿ ಶರೀರ ದಾನಮಾಡಿ ಪ್ರಸಿದ್ಧನಾದ ಜೀಮೂತವಾಹನನೆಂಬ ಪ್ರಖ್ಯಾತನಾದ ತ್ಯಾಗಿಯು ಮನಸ್ಸಿನ ನಿಶ್ಚಲತ್ವದಿಂದ ಶಂಖಚೂಡನೆಂಬುವವನನ್ನು ರಕ್ಷಿಸಿದ ಹಿರಿಮೆಯನ್ನು ಪ್ರಕಾಶಿಸಿ ನಾಗರಿಗೆ ಆನಂದವನ್ನುಂಟುಮಾಡಿದುದು ಈ ಬೆಟ್ಟದಲ್ಲಿಯೇ ವರ ಎಂದು ಅಭಿನವ ಜೀಮೂತವಾಹನನಾದ (ಅರ್ಜುನನು) ಅರಿಕೇಸರಿಯು ಜೀಮೂತವಾಹನನ ಪರೋಪಕಾರದ, ವೀರ್ಯದ ಆಧಿಕ್ಯವನ್ನು ಮೆಚುತ ಬಂದು ಗೌರೀನಾಥನೂ ಭೂಮಿ, ವಾಯು, ಆಕಾಶ, ಅಗ್ನಿ, ಸೂರ್ಯ, ಅಪ್, ಚಂದ್ರ, ಯಜಮಾನ ಎಂಬು ಅಷ್ಟಮೂರ್ತಿಯುತವೂ ಮೂರು ಲೋಕ ಗಳಿಂದ ಸ್ತೋತ್ರಮಾಡಲ್ಪಡುವ ಕೀರ್ತಿಯುಳ್ಳವನೂ ಆದ ಗೋಕರ್ಣನಾಥನನ್ನು ಕಂಡು ಕೈ ಮುಗಿದನು. ೨೭. ಯಾರ ಅತಿವೇಗವಾದ ತಾಳಗತಿಯನ್ನುಳ್ಳ ತಾಂಡವ ನೃತ್ಯದಿಂದ ದಿಂಡಲಗಳಿಂದಲೂ ಪರ್ವತಗಳಿಂದಲೂ ಸಮುದ್ರಗಳಿಂದಲೂ ದ್ವೀಪಗಳಿಂದಲೂ ಕೂಡಿದ ಭೂಮಿಯು ತಿರುಗಿಸಲ್ಪಟ್ಟು ಕುಂಬಾರನ ಕೈ ಚಕ್ರದಂತೆ ವೇಗವಾಗಿ ಸುತ್ತುವ ಲೀಲೆಗೆ ಒಳಗಾಯಿತೋ ಆ ಸರ್ವಜಗತ್ಪತಿಯೂ ಪಾರ್ವತಿ ರಮಣನೂ ಆದ ಶಿವನು ನಮ್ಮನ್ನು ಕಾಪಾಡಲಿ ಎಂದು ವll (ಬಾಲಚಂದ್ರನನ್ನು ತಲೆಯಲ್ಲಿ ಉಳು ಈಶ್ವರನನ್ನು ಪ್ರಾರ್ಥಿಸಿ ಮುಂದೆ ಬನವಾಸಿಯ ಸೊಬಗನ್ನು ಸವಿಯಲಾರಂಭಿಸಿ ದನು. ೨೮. ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ
Page #226
--------------------------------------------------------------------------
________________
ಚತುರ್ಥಾಶ್ವಾಸಂ | ೨೨೧ ಉll ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಇಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ || ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಣಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ || ೨೯
ತೆಂಕಣ ಗಾಳಿ ಸೋಂಕಿದೊಡಮೊಳ್ಳುಡಿಗೇಳ್ಕೊಡಮಿಂಪನಾಳ ಗೇ ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ | ಪಂಗಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ || ೩೦ ಮll ಅಮರ್ದಂ ಮುಕ್ಕುಳಿಪಂತುಟಪ್ಪ 'ಸುಸಿಲೊಂದಿಪುಂ ತಗುಳೊಂದು ಗೇ
ಯಮುವಾದಕ್ಕರಗೊಟ್ಟಿಯುಂ ಚದುರರೊಳ್ತಾತುಂ ಕುಳಿರ್ ಕೋಟ್ಟಿ ಜೋಂ | ಪಮುಮೇವೇಟ್ಟುದನುಳ್ಳ ಮಯ್ದುಕಮುಮಿಂತನ್ನಂ ಕರಂ ನೋಡಿ ನಾ ಡ ಮನಂಗೊಂಡಿರೆ ತೆಂಕನಾಡ ಮಳಯಲಿನ್ನೇಂ ಮನಂ ಬರ್ಕುಮೇ || ೩೧
ವ|| ಎಂದರಿಕೇಸರಿ ತೆಂಕನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಮಾ ನಾಡನೊಂದೆ ಬಿಲ್ಗೊಳುಂಡಿಗೆ ಸಾಧ್ಯಂ ಮಾಡಿ ಪಶ್ಚಿಮ ದಿಗ್ವಿಭಾಗಾಭಿಮುಖನಾಗಿ ಬಂದು
ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ೨೯. ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅಧೀನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ . ತಾನೇ ಸಾಧ್ಯವೆ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ , ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ೩೦. (ಅತಿ ಸುಖಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ. ೩೧. ಅಮೃತವನ್ನೂ ಮೀರಿಸುವಷ್ಟು ಹಿತಕರವಾದ ರತಿಕ್ರೀಡೆಯ ಮಾಧುರ್ಯವೂ ಬೆನ್ನಹಿಂದೆಯೇ ಅಟ್ಟಿ ಬರುತ್ತಿರುವ ಸಂಗೀತವೂ ನೆರೆದಿರುವ ವಿದ್ವಾಂಸರ ಗೋಷ್ಠಿಯೂ ಜಾಣರ ಒಳ್ಳೆಯ ಮಾತುಗಳೂ ತಂಪನ್ನುಂಟುಮಾಡುವ ಹೂಗೊಂಚಲುಗಳೂ ಯಾವ ಸುಖವನ್ನುಂಟುಮಾಡುವುವೋ ಆ ಸುಖಗಳು ನನ್ನ ಮನಸ್ಸನ್ನಾಕ್ರಮಿಸಿದ್ದರೂ ದಕ್ಷಿಣ ದೇಶವನ್ನು ಮರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ. ವ|| ಎಂದು ಅರಿಕೇಸರಿಯು ದಕ್ಷಿಣ ದೇಶವನ್ನು ವಿಶೇಷವಾಗಿ ಮೆಚ್ಚುತ್ತ ಆ ನಾಡನ್ನು ಶ್ರಮ
Page #227
--------------------------------------------------------------------------
________________
೨೨೨/ ಪಂಪಭಾರತಂ ಖಚರಸ್ತುತ || ಸಾರ ವಸ್ತುಗಳಿಂ ನೆಳೆದಂಭೋರಾಶಿಯ ಕಾದಿಗೆ ಕಾವನುಂ
ಸೀರವಾಣಿ ವಿಳಾಸದಿನಾಳಂ ಚಕ್ರಧರಂ ಬಗೆವಂಗ ಸಂ | ಸಾರಸಾರಮಿದೆಂಬುದನೆಂದೆಯಂದನಸಂಚಳ ಕಾಂಚನ
ದ್ವಾರ ಬಂಧುರ ಬಂಧ ಗೃಹೋದ್ಯದ್ವಾರವತೀಪುರಮಂ ನರಂ || ೩೨
ವll ಅನ್ನೆಗಂ ತನ್ನ ಮಯ್ತುನನಪ್ಪಮೋಘಾಸ್ತ್ರ ಧನಂಜಯನ ಬರವಿನ ಸಂತಸದೊಸಗೆ ಪಡೆಮಾತು ಮುಂದುವರಿದಳಪುವಂತಮll ಪಲವುಂ ಜನ್ಮದೊಳಾದ ನಿನ್ನ ಕೆಳೆಯಂ ಬಂದಪ್ಪನಾತಂಗೆ ಬೆಂ
ಬಲಮಿನ್ನೀಂ ನಿನಗಾತನಾತನನಿಳಾವಿಖ್ಯಾತನಂ ಕೂರ್ತು ನೋ | ಡಲುಮಂರ್ತಮರ್ದಪ್ತಲುಂ ಪಡವೆಯಿಂದೆಂಬಂತೆ ಕೆತ್ತಿತ್ತು ದಲ್
ಬಲಗಣ್ಣುಂ ಬಲದೋಳುಮಾ ಬಲಿ ಬಲಪ್ರಧ್ವಂಸಿಗಂದಿಟ್ಟಳಂ || ೩೩
ವ|| ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನುದಾತ್ತನಾರಾಯಣನ ಬರವನಳಿದು ಬಲದೇವ ಸಾತ್ಯಕಿ ಕೃತವರ್ಮಾದಿಗಳಪ್ಪ ತನ್ನೊಡವುಟ್ಟಿದರುಂ ವೃಷ್ಠಿಕಾಂಭೋಜಕುಳತಿಳಕರಪ್ಪ ಯಾದವರುಂಬೆರಸು ಮದಕರಿ ಕರೇಣು ತುರಗಾದಿ ನಾನಾವಿಧವಾಹನಂಗಳನೇಟೆ ಮಯ್ತುನಂಗಿದಿರ್ವಂದು ತಮ್ಮಲಂಪಿನಲ್ಕಟಿನ ರೂಪನೆ
ವಿಲ್ಲದೆಯೇ ಜಯಿಸಿ ವಶಪಡಿಸಿಕೊಂಡು ಪಶ್ಚಿಮ ದಿಕ್ಕಿಗೆ ಎದುರಾಗಿ ಬಂದನು. ೩೨. ಸಾರವತ್ತಾದ ಪದಾರ್ಥಗಳಿಂದ ತುಂಬಿದ ಸಮುದ್ರವೇ ಅಗುಳು (ಕಂದಕ) ಅದರ ರಕ್ಷಕ ಬಲರಾಮ, ವೈಭವದಿಂದ ಅದನ್ನು ಆಳುವವನು ಶ್ರೀಕೃಷ್ಣ, ವಿಚಾರ ಮಾಡುವವನಿಗೆ ಇದೇ ಸಂಸಾರಸಾರ ಎಂದೆನಿಸಿಕೊಳ್ಳುವ ಸ್ಥಿರವೂ ಚಿನ್ನದ ಬಾಗಿಲುಗಳಿಂದ ಕೂಡಿದ ಎತ್ತರವಾದ ಉಪ್ಪರಿಗೆಗಳನ್ನುಳ್ಳದೂ ಆದ ದ್ವಾರಾವತೀ ಪಟ್ಟಣವನ್ನು ಅರ್ಜುನನು ಬಂದು ಸೇರಿದನು. ವ|| ಅಷ್ಟರಲ್ಲಿ ತನ್ನ ಮಯ್ತುನನಾದ ಅಮೋಘಾಸ್ತಧನಂಜಯನ ಬರುವಿಕೆಯ ಸಂತೋಷ ಸಮಾಚಾರವನ್ನು ತನಗೆ ಮೊದಲೇ ತಿಳಿಸುವಂತೆ ೩೩. ನಿನ್ನ ಹಿಂದಿನ ಅನೇಕ ಜನ್ಮಗಳ ಸ್ನೇಹಿತನು ಬರುತ್ತಾನೆ. ಆತನಿಗೆ ನೀನು ಬಲ, (ಸಹಾಯಕ) ನಿನಗೆ ಆತನು ಸಹಾಯಕ; ಲೋಕಪ್ರಸಿದ್ಧನಾದ ಆತನನ್ನೂ ಕಣ್ಣುಂಬ ನೋಡಿ ಪ್ರೀತಿಯಿಂದ ಗಾಢಾಲಿಂಗನ ಮಾಡುವ ಸುಯೋಗವನ್ನು ಪಡೆಯುವೆ (ಎಂಬುದನ್ನು ಸೂಚಿಸುವ) ಎನ್ನುವ ಹಾಗೆ (ಬಲಿ ಚಕ್ರವರ್ತಿಯ ಬಲವನ್ನು ನಾಶಪಡಿಸಿದ) ಕೃಷ್ಣನಿಗೆ ಬಲಗಣ್ಣ ಬಲದೋಳೂ ಏಕಪ್ರಕಾರವಾಗಿ ಅದುರಿದುವು. ವll ಹಾಗೆ ಬಲಗಣ್ಣಿನ ಅದುರುವಿಕೆ (ಕುಣಿತ, ಸ್ಪಂದನ) ಯಿಂದಲೂ ಸೂಚಿತವಾದ ಶುಭಶಕುನಗಳಿಂದಲೂ ನಾರಾಯಣನಾದ ಕೃಷ್ಣನು ಉದಾತ್ತ ನಾರಾಯಣನಾದ ಅರ್ಜುನನ ಬರುವಿಕೆಯನ್ನು ತಿಳಿದು ಬಲರಾಮ, ಸಾತ್ಯಕಿ, ಕೃತವರ್ಮ ಮೊದಲಾದ ಒಡಹುಟ್ಟಿದವರನ್ನು ದೃಷ್ಟಿ ಮತ್ತು ಕಾಂಭೋಜಕುಲಶ್ರೇಷ್ಠರಾದ ಯಾದವರನ್ನೂ ಕೂಡಿಕೊಂಡು ಮದ್ದಾನೆ, ಹೆಣ್ಣಾನೆ, ಕುದುರೆ ಮೊದಲಾದ ಅನೇಕ ವಾಹನಗಳನ್ನು ಹತ್ತಿ ಮಯ್ತುನನಿಗೆ ಇದಿರಾಗಿ ಬಂದು ತಮ್ಮ ಸಂತೋಷಕ್ಕೂ ಪ್ರೀತಿಗೂ ಕಾರಣವಾದ
Page #228
--------------------------------------------------------------------------
________________
.
ಚತುರ್ಥಾಶ್ವಾಸಂ | ೨೨೩ ಕಾಂತ ಕಂಡು ದಿಕ್ಕರಿಕರಾನುಕಾರಿಗಳಪ್ಪ ಬಾಹುಗಳಿಂದಮೋರೊರ್ವರಂ ತಗೆದಪ್ಪಿ ನಿಬಿಡಾಲಿಂಗ ನಂಗಯಾನಂದಜಳಪರಿಪೂರ್ಣವಿಸ್ತೀರ್ಣವಿಲೋಚನಂಗಳಿಂದಂ ಮುಹುರ್ಮುಹು ರಾಲೋಕನಂ ಗೆಯುತ್ತುಮುತ್ತುಂಗ ಮತ್ತವಾರಣಂಗಳನೇಟೆ ಪೊಲೀಲಂ ಪುಗೆಚಂl ಸುರ ನರ ಕಿನ್ನರೋರಗ ನಭಶ್ವರ ಕಾಂತೆಯರೇವರೆಂದು ಮಾಂ
ಕರಿಸುವ ಕೆಯ್ಯದಂದದ ಮುರಾರಿಯ ತಂಗೆಯನಪುಕೆಯು ಚ | ಚರಮೋಳಪೊಯ್ತು ನೀಂ ನಿನಗೆ ಮಾಡುವುದೆಂದಮರೇಂದ್ರಪುತ್ರನಂ ಕರೆವವೊಲಾದುವಾ ಪುರದ ವಾತ ವಿಧೂತವಿನೂತ ಕೇತುಗಳ್ || ೩೪
ವ|| ಆಗಳ್ ಮೊಲಗುವ ಬದ್ದವಣದ ಪಣಿಗಳುಂ ಪಿಡಿದ ಕೆಂಬೊನ್ನ ತಳಿಗೆಯೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸುಚoll ಒದವಿದ ನೂಲ ತೊಂಗಲುಲಿ ದೇಸಿಯನಾಂತು ವಿಳಾಸದಿಂದಿಜುಂ
ಕಿದ ನಿಳಿ ಗಂಡರಿರ್ದಗಳಂ ತುಟಿವೊಜೆಯನುಂಟುಮಾಡುವಂ | ದದ ನಿಡುಗಣ್ಣಳೊಳಡ ಮನೋಭವನೊಡ್ಡಣದಂತೆ ತಂಡ ತಂ ಡದೆ ಪರಿತಂದು ಸೂಸಿದುದು ಸೇಸೆಯನಂದು ಪುರಾಂಗನಾಜನಂ || ೩೫ ಮಿಳಿರ್ವ ಕುರುಳಳೊಳ್ ಪೊಳೆವ ಕಣ್ಣಳ ಬೆಳ್ಳು ಪಳಂಚಿ ಚಿನ್ನ ಪೂ ಗಣೆಗೆಣೆಯಾಗೆ ಪುರ್ವುಮೆಮೆಗಳ ಬಿಡದಿಳಿದಿಕುಚಾಪದೊಳ್ | ಖಳ ಕುಸುಮಾಸ್ತನಿಟ್ಟ ಗೊಣೆಯಕ್ಕೆಣೆಯಾಗಿರೆ ನಿಳ್ಳಿ ನಿಳ್ಳಿ ಕೋ ಮಳೆ ನಡೆ ನೋಡಿದಳ್ ಕರಿಯನೇಳಿದನಂ ಪಡಮಚ್ಚಗಂಡನಂ || ೩೬
ಆಕಾರವನ್ನೇ ಕಾಣುವ ಹಾಗೆ ಕಂಡು ದಿಗ್ಗಜಗಳ ಸೊಂಡಲಿನಂತಿದ್ದ ತೋಳುಗಳಿಂದ ಒಬ್ಬೊಬ್ಬರನ್ನೂ ಬಿಗಿದು ಆಲಿಂಗನ ಮಾಡಿಕೊಂಡರು. ಆನಂದ ಜಲ (ಸಂತೋಷದ ಕಣ್ಣೀರು) ದಿಂದ ತುಂಬಿದ ವಿಸ್ತಾರವಾದ ಕಣ್ಣುಗಳಿಂದ ಪುನಃ ಪುನಃ ನೋಡುತ್ತ ಎತ್ತರವಾದ ಮದ್ದಾನೆಯನ್ನು ಹತ್ತಿ ಪುರಪ್ರವೇಶ ಮಾಡಿದರು. ೩೪. ದೇವ, ಮಾನವ, ಕಿನ್ನರ, ಉರಗ, ಖೇಚರ ಸ್ತ್ರೀಯರು (ಇವಳ ಮುಂದೆ) ಅವರು ಯಾರು ಎಂತಹವರು - ಎಂದು ತಿರಸ್ಕರಿಸುವ ರೂಪವುಳ್ಳ ಸೌಂದರ್ಯವತಿಯೂ ಆದ ಶ್ರೀಕೃಷ್ಣನ ತಂಗಿಯಾದ ಆ ಸುಭದ್ರೆಯನ್ನು ಅಂಗೀಕಾರಮಾಡಿ ಜಾಗ್ರತೆಯಾಗಿ ಒಲಿಸಿಕೊಂಡು ನಿನ್ನವಳನ್ನಾಗಿ ಮಾಡಿಕೊ ಎಂದು ಇಂದ್ರಪುತ್ರನಾದ ಅರ್ಜುನನನ್ನು ಕರೆಯುವ ಹಾಗೆ ಆ ನಗರದ ಗಾಳಿಯಿಂದ ಅಲುಗಾಡುತ್ತಿರುವ ಪ್ರಸಿದ್ದವಾದ ಧ್ವಜಗಳು ತೋರಿದುವು. ವ|| ಆಗ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು ಅಪರಂಜಿಯ ಆ ನಗರದ ಸ್ತ್ರೀಯರು ಚಿನ್ನದ ತಟ್ಟೆಯಲ್ಲಿ ಬಿಡಿಮುತ್ತಿನ ಅಕ್ಷತೆಯನ್ನು ತುಂಬಿಕೊಂಡು ೩೫, ಧರಿಸಿದ ನಡುಪಟ್ಟಿಯ ಕುಚ್ಚಿನ ಶಬ್ದಗಳೂ ಸೌಂದರ್ಯದಿಂದ ಕೂಡಿ ವೈಭವದಿಂದ ತೊಡೆಗಳ ಮಧ್ಯೆ ಸೇರಿಸಿಕೊಂಡಿರುವ ಸೀರೆಗಳ ನೆರಿಗೆಗಳೂ ಶೂರರಾದ ಪುರುಷರ ಹೃದಯವನ್ನು ತುಳಿದು ಯಮನಂತಿರಲು ಆಕರ್ಷಕವಾಗಿರುವ ದೀರ್ಘದೃಷ್ಟಿಯಿಂದ ಕೂಡಿ ಮನ್ಮಥನ ಸೈನ್ಯದ ಹಾಗೆ ಗುಂಪುಗುಂಪಾಗಿ ಓಡಿ ಬಂದು ಅರ್ಜುನನಿಗೆ ಅಕ್ಷತೆಯನ್ನು ಚೆಲ್ಲಿದರು (ಆಶೀರ್ವದಿಸಿದರು). ೩೬. ಚಲಿಸುತ್ತಿರುವ ಮುಂಗುರುಳುಗಳಲ್ಲಿ ಹೊಳೆಯುವ
Page #229
--------------------------------------------------------------------------
________________
೨೨೪ | ಪಂಪಭಾರತಂ
ವll ಮತ್ತೊರ್ವಳತಿ ಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರ ಲುಳಿತಾಧರ ಪಲ್ಲವೆ ನೋಟ್ಟಿ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದುಉll ಕಾಯದೆ ಕಾಮನಾರ್ದಿಸ ತೂವಲಿಡಿವಂತಡಗಯೊಳೊಪ ತೋ
ರ್ಪಾಯಲೆ ನೋಟ ಬೇಟದ ಕೋನರ್ ತಲೆದೂರ್ಪವೊಲಾಗಿ ಬಾಯೊಳಿ ', ರ್ದಾಯಲೆ ಕಣ್ಣೆವಂದೆಸೆಯ ಕಯ್ಯಲೆ ಕಲ್ಗೊಳ ಬಾಯ ತಂಬುಲಂ
ಬಾಯೊಳೆ ತೋಟಿ ಮೆಮ್ಮದು ನೋಡಿದಳ್ ಸಮರೈಕಮೇರುವಂ || ೩೭
ವll ಮತ್ತೊರ್ವಳ್ ಕರ್ವಿನ ಬಿಲ್ಲ ತಿರುವಿಂ ಬರ್ದು೦ಕಿ ಬರ್ಪಲರಂಬು ಬರ್ಪಂತ ಬಂದು - ಮಗ ಸರನಂ ರೂಪಿನೊಳಿಂದ್ರನಂ ವಿಭವದೊಳ್ ಪೋ ಮಚೆನಾನಾವ ಗಂ
ಡರುಮಂ ಕಚ್ಚೆಯೊಳಿಟ್ಟು ಕಟ್ಟುವೆನೆನುತ್ತಿರ್ಪಾಕ ಗಂಧೇಭ ಕಂ | ಧರ ಬಂಧ ಪವಿಭಾಸಿಯಪ್ಪರಿಗನಂ ಕಾಣುತ್ತ ಕಸ್ತೂಲ್ಕು ಕಾ
ಮರಸಂ ಭೋಂಕನೆ ಸೂಸೆ ತಾಳಲರಿದಂದಿರ್ಕಚೆಯಂ ಕಟ್ಟದಳ ೩೮
ವಗ ಅಂತು ನೋಡಿದ ಪಂಡರೆಲ್ಲಂ ಕಾಮದೇವನೆಂಬ ಬೇಂಟೆಕಾಯಂಗೊಡ್ಡಿದ ಪುಳ್ಳೆಗಳಂತರಲಂಬಿನ ಮನೆಗೆ ಪೂಡ ಪೊಕ್ಕು ಪಕ್ಕಾಗಿರೆ ಪೊಲೊಳಗಣಂ ಬಂದು ದಿವಿಜೇಂದ್ರ ವಿಳಾಸೋಪಹಾಸಿತಮಪ್ಪ ನಿಜಮಂದಿರಮಂ ಪುಗ
ಕಣ್ಣುಗಳ ಬಿಳಿಯ ಬಣ್ಣವು ಸೇರಿಕೊಂಡು ಚಿನ್ನದ ಪುಷ್ಪಬಾಣಕ್ಕೆ ಸಮಾನವಾಗಿರಲು ಹುಬ್ಬುಗಳೂ ಕಣ್ಣಿನ ರೆಪ್ಪೆಗಳೂ ಒಂದೇ ಸಮನಾಗಿ ಕುಣಿಯುತ್ತ ದುಷ್ಟನಾದ ಮನ್ಮಥನು ಕಬ್ಬಿನ ಬಿಲ್ಲಿನಲ್ಲಿ ಹೂಡಿದ ಬಿಲ್ಲಿನ ಹೆದೆಗೆ ಸಮಾನವಾಗಿರಲು ನೀಡಿನೀಡಿ ನಿಂತು ಆನೆಯ ಮೇಲಿದ್ದ ಅರ್ಜುನನನ್ನು ಸುಂದರಿಯೊಬ್ಬಳು ದೀರ್ಘವಾಗಿ ನೋಡಿದಳು. ವll ನಡುಪಟ್ಟಿಯಿಂದ ಕೂಡಿದ ಮನೋಹರವಾಗಿ ಬಾಗಿರುವ ಚಿಗುರಿನಂತಿರುವ ತುಟಿಯುಳ್ಳ ಮತ್ತೊಬ್ಬಳು ಓಡಿಬಂದು ನೋಡಬೇಕೆಂಬ ಸಂಭ್ರಮದಿಂದ ಆನೆಯು ಬರುವ ಹಾಗೆ ಬರುತ್ತಿದ್ದ ಅರ್ಜುನನ ಹತ್ತಿರಕ್ಕೆ ಬಂದು ೩೭. ಕಾಮನು ಕರುಣೆಯಿಲ್ಲದೆ ಬಾಣಪ್ರಯೋಗ ಮಾಡಲು ಹೆದರಿ ಚಿಗುರನ್ನು ಹಿಡಿಯುವ ಹಾಗೆ ಎಡಗಯ್ಯಲ್ಲಿ ವೀಳೆಯದೆಲೆಯು ಒಪ್ಪಿರಲು ಪ್ರೇಮದ ಚಿಗುರು ಕಾಣಿಸಿಕೊಂಡ ಹಾಗೆ ಬಾಯಲ್ಲಿದ್ದ ತಾಂಬೂಲವು ಮನೋಹರವಾಗಿರಲು, ಕಮ್ಮಿನೆಲೆಯು ಕಯ್ಯಲ್ಲಿಯೂ ಬಾಯಿದಂಬುಲವು ಬಾಯಲ್ಲಿಯೂ ಇರುವ ಹಾಗೆಯೇ ತನ್ನನ್ನು ತಾನು ಮರೆತುಕೊಂಡು 'ಸಮರೈಕಮೇರುವಾದ ಅರ್ಜುನನನ್ನು ನೋಡಿದಳು. ವ| ಮತ್ತೊಬ್ಬಳು ಕಬ್ಬಿನ ಬಿಲ್ಲಿನ ಹೆದೆಯಿಂದ ಬದುಕಿ ಬರುವ ಹೂಬಾಣವು ಬರುವ ಹಾಗೆ ಬಂದು ೩೮, ರೂಪದಲ್ಲಿ ಮನ್ಮಥನನ್ನೂ ವೈಭವದಲ್ಲಿ ಇಂದ್ರನನ್ನೂ ನಾನು ಮೆಚ್ಚುವುದಿಲ್ಲ, ಬಿಡು ಎಂತಹ ಶೂರನನ್ನಾದರೂ ನನ್ನ ಕಚ್ಚೆಯಲ್ಲಿಟ್ಟು ಕಟ್ಟಿಬಿಡುತ್ತೇನೆ ಎನ್ನುತ್ತಿದ್ದವಳೂ ಮದ್ದಾನೆಯ ಕುಂಭಸ್ಥಳದಲ್ಲಿ ಪ್ರಕಾಶಮಾನವಾಗಿದ್ದ ಅರಿಗನನ್ನು ನೋಡಿದ ತಕ್ಷಣವೆ ಅವನಿಗೆ ಅಧೀನಳಾಗಿ ಕಾಮರಸವು ಇದ್ದಕ್ಕಿದ್ದ ಹಾಗೆ ಸೂಸುತ್ತಿರಲು ಸಹಿಸುವುದಕ್ಕಸಾಧ್ಯವೆಂದು ಎರಡು ಕಚ್ಚೆಯನ್ನು ಬಿಗಿಯಾಗಿ ಕಟ್ಟಿದಳು. ವll ಹಾಗೆ ನೋಡಿದ ಹೆಂಗಸರೆಲ್ಲರೂ ಕಾಮದೇವನೆಂಬ ಬೇಟೆಗಾರನಿಗೆ ಒಡ್ಡಿದ ಹುಲ್ಲೆಗಳ
Page #230
--------------------------------------------------------------------------
________________
ಚತುರ್ಥಾಶ್ವಾಸಂ | ೨೨೫ ಮll ಲತಗಳ ಜಂಗಮರೂಪದಿಂ ನೆರೆದುವೋ ದಿವ್ಯಾಸ್ಪರೋವೃಂದಮಾ
ಕ್ಷಿತಿಗನಿಂದ್ರನ ಶಾಪದಿಂದಿಚಿದುವೊ ಪೇಟೆಂಬ ಶಂಕಾಂತರಂ | ಮತಿಗಂ ಪುಟ್ಟುವಿನಂ ಕರಂ ಪರಕೆಗಳ ತಳ್ಕೊಮ್ಮೆ ಸೇಸಿಕ್ಕಿತಿಂ ದ್ರತನೂಜಂಗಿದಿರ್ವಂದು ಷೋಡಶ ಸಹಸ್ರಾಂತಃಪುರಂ ಕೃಷ್ಣನಾ . ೩೯
ವli ಆಗಳ್ ನಾರಾಯಣನ ತಂಗೆ ಸುಭದ್ರೆಯೆಂಬ ಕನ್ನೆ ಕಮುಗಿಲ ತೆರೆಯ ಪೊರೆಯೊಳ್ ನೆಗೆದು ಪೂಜೆಮಡುವ ವಿದ್ಯಾಧರಿಯಂತೆ ತನ್ನ ಚೆಂಬೊನ್ನ ಕನ್ನೆಮಾಡದ ಮೇಗಣ ನೆಲೆಯ ಚಪಳಿಗೆಯ ಬಾಗಿಲೊಳ್ ನಿಂದು
ಬಳಸಿದ ಗುಜ್ಜುಗಳ ನೆರೆದ ಮೇಳದ ಕನ್ನೆಯರೆತ್ತಮಿಕೆ ಸಂ '' ಚಳಿಸುವ ಚಾಮರಂ ಕನಕ ಪದ್ಯದ ಸೀಗುರಿ ತೊಟ್ಟ ಮಾಣಿಕಂ | ಗಳ ಬೆಳಗಿಟ್ಟಳಂ ತನಗೂಡಂಬಡ ದೇಸಿ ವಿಳಾಸಮಂ ಪುದುಂ ಗೊಳಿಸಿ ಮರು ಕನ್ನೆ ನಡೆ ನೋಡಿ ಗುಣಾರ್ಣವನೆಂಬನೀತನೇ || ೪೦
ವ|| ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡಾಕೆಗಳಾಕೆಯ ಹತ್ತಿದ ಕಣ್ಣುಮನತ್ತಿದ ಮನಮುಮಂ ಜೋಲ್ಕ ನಾಣಮಂ ನೇಲ್ಲ ಸರಮುಮನಳದು ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದಗುಂತಿಗಳನಂತುಮಳವಲ್ಲದೆ ಪೊಗಳಹಾಗೆ ಪುಷ್ಪಬಾಣದ ತುದಿಗೆ ಪ್ರತಿಜ್ಞೆ ಮಾಡಿ ಪ್ರವೇಶಿಸಿ ಅದಕ್ಕಧೀನವಾಗಿರಲು ಅರ್ಜುನನು ನಗರದ ಒಳಭಾಗದಿಂದ ಬಂದು ದೇವೇಂದ್ರನ ವೈಭವವನ್ನೂ ತಿರಸ್ಕರಿಸುವಂತಿದ್ದ ತನಗಾಗಿ ಏರ್ಪಡಿಸಿದ್ದ ಅರಮನೆಯನ್ನು ಪ್ರವೇಶಿಸಿದನು. ೩೯. ಲತೆಗಳೇ ಜಂಗಮರೂಪದಿಂದ ಸೇರಿಕೊಂಡಿವೆಯೋ ಸ್ವರ್ಗದ ಅಪ್ಪರಸ್ತ್ರೀಯರು ಇಂದ್ರನ ಶಾಪದಿಂದ ಭೂಮಿಗೆ ಇಳಿದಿದ್ದಾರೆಯೋ ಎಂಬ ಸಂದೇಹವನ್ನುಂಟು ಮಾಡುತ್ತಿದ್ದ ಕೃಷ್ಣನ ಅಂತಃಪುರದ ಹದಿನಾರು ಸಾವಿರ ಸ್ತ್ರೀಯರು ಎದುರಾಗಿ ಬಂದು ಅರ್ಜುನನಿಗೆ ವಿಶೇಷವಾದ ಆಶೀರ್ವಾದಪೂರ್ವಕವಾಗಿ ಅಕ್ಷತಾರೋಪಣೆ ಮಾಡಿದರು. ವ|| ಆಗ ನಾರಾಯಣನ ತಂಗಿಯಾದ ಸುಭದ್ರೆಯೆಂಬ ಕನ್ಯಯು ಕೆಂಪಾದ ಮೋಡವೆಂಬ ತೆರೆಯ ಮಧ್ಯಭಾಗದಿಂದ ಹೊರಟು ಬರುವ ವಿದ್ಯಾಧರ ಸ್ತ್ರೀಯ ಹಾಗೆ ತನ್ನ ಸುವರ್ಣಖಚಿತವಾದ ಕನ್ಯಾಮಾಡದ ಮೇಲಂತಸ್ತಿನ ತೊಟ್ಟಿಯ ಬಾಗಿಲಲ್ಲಿ ನಿಂತುಕೊಂಡು- ೪೦. ತನ್ನ ಸುತ್ತಲೂ ಬಳಸಿಕೊಂಡಿರುವ ಕನ್ಯಾಂತಃಪುರದ ಸೇವಕರಾದ ಕುಳ್ಳರೂ ಅಲ್ಲಿ ಸೇರಿಕೊಂಡಿದ್ದ ಜನರೂ ಎಲ್ಲ ಕಡೆಯಿಂದಲೂ ಬೀಸಲು ಚಲಿಸುತ್ತಿರುವ ಚಾಮರವೂ ಚಿನ್ನದ ತಾವರೆಯ ಕೊಡೆಯೂ ಧರಿಸಿದ್ದ ಮಾಣಿಕ್ಯ ರತ್ನದ ಕಾಂತಿಯೂ ಚೆಲುವಾಗಿ ತನಗೆ ಒಪ್ಪಿರಲು ಸೌಂದರ್ಯ ಸೌಭಾಗ್ಯಗಳೂ ಹೊಂದಿಕೊಂಡಿರಲು ಕನ್ಯಯಾದ ಸುಭದ್ರೆಯು ದೀರ್ಘದೃಷ್ಟಿಯಿಂದ ನೋಡಿ ಗುಣಾರ್ಣವನೆಂಬುವನೀತನೇ ಎಂದು ತನ್ನ ಸಖಿಯರನ್ನು ಕೇಳಿದಳು. ವಗಿ ಅವರು ಅವಳ ನಟ್ಟದೃಷ್ಟಿಯನ್ನೂ ಪ್ರೀತಿಯಿಂದ ಕೂಡಿದ ಮನಸ್ಸನ್ನೂ ಸಡಿಲವಾದ ಲಜ್ಜೆಯನ್ನೂ ಮೆಲ್ಲಗಾದ ಧ್ವನಿಯನ್ನೂ ತಿಳಿದು ಸಹಜಮನ್ಮಥನಾದ ಅರ್ಜುನನ ಕುಲದ, ಛಲದ, ತ್ಯಾಗದ, ವೀರದ, ಭಾಗ್ಯದ, ಸೌಭಾಗ್ಯದ ಅತಿಶಯಗಳನ್ನು ಅಳತೆಯಿಲ್ಲದೆ
Page #231
--------------------------------------------------------------------------
________________
೨೨೬ | ಪಂಪಭಾರತಂ - ಚಂ! ಒದವಿದ ತನ್ನ ಜವ್ವನದ ರೂಪಿನ ಮಯ್ಯೋಳ, ತಪ್ಪುದನ್ನು ನೋ
ಟದೊಳೆ ಪೊಡರ್ಪು ತಪ್ಪು ಬಗೆ ತಪ್ಪು ಮನೋಜನ ಪೂವಿನಂಬು ತೀ | ವಿದ ದೂರ ತೀವಿ ತನ್ನನಿಗೆ ಜಾಣನೆ ತಪದ ತಪುದಪ್ಪ ನೋ ಡಿದುದದಳೆಂ ಗುಣಾರ್ಣವನನಾ ಸತಿ ತಪ್ಪದೆ ತಪ್ಪು ನೋಟದೊಳ್ || ೪೧
ವll ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ ನಿಮಿರ್ಚಿದಂತಾನು ಮರಲ್ಲ ತಾವರೆಯಸುಳೊಳ್ ಪುದಿದು ಪುಡುಂಗೊಳಿಸಿದಂತಾನುಮನಂಗಾಮೃತವರ್ಷಮದ ವಿಸಿದಂತಾನುಮರ್ದಯೊಳೆಡೆವಳೆಯದ ಪೊಳಪಿನೊಳ್ ತಳ್ಕೊಯ್ದು ಕಡೆಗಣ್ಣ ಬೆಳ್ಳುಗಳ ಸೊಗಯಿಸುವ ಕುವಳಯದಳನಮನೆಯ ನೋಟಂ ತನ್ನ ಮನದೊಳಳ್ಳಾಟಮಂ ಪಡೆಯ
- ಮll ನನೆಯಂಬಂಬನೆ ಕರ್ಚಿ ಪಾದಪುದೋ ಶೃಂಗಾರ ವಾರಾಶಿ ಭೋಂ
ಕನೆ ಬೆಳ್ತಂಗಡದತ್ತೂ ಕಾಮಂ ನೆಳ ಮೆಯ್ಕೆರ್ಚಿತ್ತೊ ಪೇಟೀಕೆಗೆಂ | ಬಿನೆಗಂ ಸೋಲಮನುಂಟುಮಾಡ ಹರಿಗಂ ಕರ್ಣಾಂತ ವಿಶ್ರಾಂತ ಲೋ ಚನನಾಲೋಚನಗೋಚರಂಬರಗಿಲ್ಲಾ ಕನ್ನೆಯಂ ನೋಡಿದಂ || ೪೨
ವ|| ಅಂತು ಸುರತಮಕರಧ್ವಜನ ಕಡೆಗಣ್ಣ ನೋಟಂ ಕಾಮನ ಕಿಸುಗಿದ ನೋಟದಂತೂ ರ್ಮೊದಲೆ ತನ್ನ ಮನದೊಳಳ್ಳಾಟಮಂ ಪಡೆಯ
ಹೊಗಳಿದರು. ೪೧, ಆಗ ಅವಳಿಗೆ ಯವ್ವನಪ್ರಾಪ್ತವಾದ ಶರೀರದ ಸೌಂದರ್ಯವು ಅಸ್ತವ್ಯಸ್ತವಾಯಿತು. ನೋಟದಲ್ಲಿನ ಉತ್ಸಾಹವೂ ಅಸ್ತವ್ಯಸ್ತವಾಯಿತು. ಮನಕ್ಕೂ ಅಸ್ತವ್ಯಸ್ತವಾಯಿತು. ಮನ್ಮಥನು ಪುಷ್ಪಬಾಣದಿಂದ ತುಂಬಿದ ಬತ್ತಳಿಕೆಯಿಂದ ತನ್ನನ್ನು ಹೊಡೆಯುತ್ತಿರಲು ತನ್ನ ಜಾಣ್ಮಯೇ ವ್ಯತ್ಯಸ್ತವಾಗಿ ಆ ಸತಿಯು ಗುಣಾರ್ಣವನನ್ನು ತಪ್ಪು ನೋಟಗಳಿಂದ ನೋಡಿದಳು (?) ವl ಹಾಗೆ ತಳತಳನೆ ಪ್ರಕಾಶಿಸುವ ರೇಷ್ಮೆಯ ವಿವಿಧ ಬಣ್ಣಗಳ ಬಟ್ಟೆಯನ್ನು ಹರಡಿದಂತೆಯೂ ಅರಳಿದ ತಾವರೆಯ ದಳದಲ್ಲಿ ಸೇರಿಕೊಂಡು ಹದಗೊಳಿಸಿದಂತೆಯೂ ಕಾಣುವ ಮಳೆಯನ್ನು ಉಂಟುಮಾಡಿ ದಂತೆಯೂ ಹೃದಯದ ಅವಿಚ್ಛಿನ್ನವಾದ ಕಾಂತಿಯಲ್ಲಿ ಪ್ರತಿಭಟಿಸಿ ಕಡೆಗಣ್ಣಿನ ಬಿಳಿಯ ಬಣ್ಣಗಳು ಸೊಗಯಿಸುತ್ತಿರುವ ಕನ್ನೈದಿಲೆಯ ಎಸಳಿನಂತೆ ಕಣ್ಣುಳ್ಳ ಆ ಸುಭದ್ರೆಯ ನೋಟವು ಅರ್ಜುನನ ಮನಸ್ಸಿನಲ್ಲಿ ತಳಮಳವನ್ನುಂಟುಮಾಡಿತು. ೪೨. ಈ ಸುಭದ್ರೆ ಗಾಗಿ ಪುಷ್ಪಬಾಣವೇ ಪುಷ್ಪಬಾಣ ಕಚ್ಚಿಕೊಂಡು ಹಾರಿಬರುತ್ತಿದೆಯೋ ಶೃಂಗಾರ ಸಮುದ್ರವು ಇದ್ದಕ್ಕಿದ್ದ ಹಾಗೆ ತಟ್ಟನೆ ಅಧಿಕ ಪ್ರವಾಹದಿಂದ ಹರಿದಿದೆಯೋ ಕಾಮನ ರಸಪ್ರವಾಹವು ಅಧಿಕವಾಯಿತೊ ಹೇಳು ಎನ್ನುವ ಹಾಗೆ ತನಗೆ ಸೋಲನ್ನುಂಟು ಮಾಡಲು ಕರ್ಣಾಂತವಿಶ್ರಾಂತನಾದ ಅರ್ಜುನನು ಕಣ್ಣಿಗೆ ನಿಲುಕಿಸುವವರೆಗೂ ಆ ಕನೈಯನ್ನು ಪ್ರೀತಿಯಿಂದ ನೋಡಿದನು. ವ| ಸುರತಮಕರಧ್ವಜನಾದ ಅರ್ಜುನನ ಕಡೆಗಣ್ಣಿನ ನೋಟವು ಕಾಮನ ಕೆಂಪೇರಿದ ನೋಟದಂತೆ ತಕ್ಷಣವೇ ತನ್ನ ಮನಸ್ಸಿನಲ್ಲಿ
Page #232
--------------------------------------------------------------------------
________________
eroll
ಚತುರ್ಥಾಶ್ವಾಸಂ | ೨೨೭ ಸೋಲದೊಳೆಯೇ ಪೀರ್ದ ತಟದಿಂದಮಯಿಕ್ಕದೆ ನೋಲ್ಪ ಕಣ್ಣೆ ಕಣ್ ಪೀಲಿವೊಲಾಗೆ ಬಂದು ಪೆತೊಂದು ಮನಂಬುಗೆ ಪತ್ನಿ ಚಿತ್ತದೊಳ್ | ಕೀಲಿಸೆ ಕಾವನಂಬವು ಬಿಣ್ಣಿನೊಳೊಯ್ಯನೆ ಜೋಲ್ಲವೋಲೆ ತಾಂ ಬೂಲಕರಂಕವಾಹಿನಿಯ ಮೇಲೆ ನೆಲ್ಲಿಗೆ ಬಾಲೆ ಲೀಲೆಯಿಂ || ೪೩
ವ|| ಆಗಳಾ ನಾರಾಯಣನುಮುದಾತ್ತನಾರಾಯಣನುಮಾನೆಯಿಂದಮಿದು ನವ ಕಿಸಲಯ ವಂದನಮಾಳಾಳಂಕೃತಮಪ್ಪ ಸಪ್ತ ತಾಳೋತ್ತುಂಗ ರಮ್ಮ ಹರ್ಮದೆರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪಡೆಯ ಸುಖಾಸನಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಮಸೆದಿರ್ದ ಮಣಿಮಯಪೀಠದೊಳೊಡನೇಟೆ ಕಿಳದು ಪೊಲ ಕುಳ್ಳಿರ್ದ ಮಜ್ಜನ ಭೋಜನ ತಾಂಬೂಲಾನುಲೇಪನ ವಿಭೂಷಣ ಸುರಭಿ ಕುಸುಮ ದಾಮಾದಿಗಳಿಂ ಸಂತಸಂಬಡಿಸಿ ದಾಮೋದರನುದರದೊಳಿಟ್ಟುಕೊಳ್ಳ ತಳಪಗತ ಪಥ ಪರಿಶಮನಂ ಮಾಡಿ
ಕಂ
ಈತನ ಬರ್ದಿನನೀತಂ
ಭೂತಳಪತಿಯೆನಿಸಿದರಿಗಳೊಡೆಯಂ ಹರಿ ತಾ |
ನೀತನ ಬರ್ದಿನನನ ವಿ
ಖ್ಯಾತಂಗೆ ನರಂಗೆ ಸೆಂಪುಗೆಯ್ದನನಂತಂ ||
೪೪
ವ|| ಅಂತನಿತಾನುಮಂದದೊಳ್ ಸೆಂಪುಗೆಯು ವಿವಿಧ ವಿನೋದಂಗಳು ತೋಟ ಮುನ್ನ ಬದರಿಕಾಶ್ರಮದೊಳ್ನಡುಕವನ್ನುಂಟುಮಾಡಲು ೪೩. ಪ್ರೇಮದಿಂದ ಚೆನ್ನಾಗಿ ಹೀರುವ ರೀತಿಯಲ್ಲಿ ರೆಪ್ಪೆ ಹೊಡೆಯದೇ ನೋಡುವ ಕಣ್ಣಿಗೆ ಬೇರೊಂದು ಕಣ್ಣು (ಅಂದರೆ ಅರ್ಜುನನ ಕಣ್ಣು ನವಿಲುಗರಿಯ ಕಣ್ಣಿನ ಹಾಗಾಗಿ ಮನಸ್ಸನ್ನು ಪ್ರವೇಶಿಸಲು ಕಾಮಬಾಣವು ಮನಸ್ಸಿನಲ್ಲಿ ನಾಟಿರಲು ಆ ಬಾಣಗಳ ಭಾರದಿಂದ ಮೆಲ್ಲಗೆ ಜೋತುಬಿದ್ದ ಹಾಗೆ ಸುಭದ್ರೆಯು ವಿಲಾಸದಿಂದ ತನ್ನ ತಾಂಬೂಲಕರಂಕವಾಹಿನಿಯು ಮೇಲೆ ಒರಗಿಕೊಂಡು ನಿಂತಳು. ವ! ಆಗ ಕೃಷ್ಣನೂ ಅರ್ಜುನನೂ ಆನೆಯಿಂದ ಇಳಿದು ಹೊಸದಾದ ಚಿಗುರುಗಳ ತೋರಣಮಾಲೆಯಿಂದ ಅಲಂಕೃತವಾದ ಎತ್ತರವಾದ ಏಳುತಾಳೆಯ ಮರಗಳಷ್ಟು ಎತ್ತರವೂ ರಮಣೀಯವೂ ಆದ ಉಪ್ಪರಿಗೆಯ ಮುಖಮಂಟಪವನ್ನೇರಿ ಅಲ್ಲಿ ಇಟ್ಟಿದ್ದ ಚಿನ್ನದ ಪೀಕದಾನಿಗಳಲ್ಲಿಯೂ ಬಟ್ಟೆಗಳಿಂದ ಮುಚ್ಚಿದ್ದ ಸುಖಾಸನಗಳಲ್ಲಿಯೂ ಸಿದ್ಧಪಡಿಸಿದ್ದ ಚಿನ್ನದ ದಿಂಬುಗಳಲ್ಲಿಯೂ ಚೆಲುವಾಗಿದ್ದ ರತ್ನಮಯಪೀಠಗಳಲ್ಲಿಯೂ ವಿಶ್ರಮಿಸಿ ಕೆಲವುಕಾಲ ಕುಳಿತಿದ್ದು ಸ್ನಾನ, ಭೋಜನ-ತಾಂಬೂಲ, ಗಂಧಾನುಲೇಪನ, ಆಭರಣ, ಸುಗಂಧಪುಷ್ಪಮಾಲೆಯೇ ಮೊದಲಾದವುಗಳಿಂದ ಸಂತೋಷಪಟ್ಟು ಕೃಷ್ಣನು ತನ್ನ ಹೊಟ್ಟೆಯಲ್ಲಿಯೇ ಅರ್ಜುನನನ್ನು ಮಡಗಿಕೊಳ್ಳುವಷ್ಟು ಪ್ರೀತಿಯಿಂದ ಆಯಾಸಪರಿಹಾರವನ್ನು ಮಾಡಿದನು. ೪೪. ಇವನು ಅತಿಥಿ; ಇವನೇ ಭೂಪತಿಯಾದ ಅರಿಕೇಸರಿ; ಒಡೆಯನಾದ ಕೃಷ್ಣಪರಮಾತ್ಮನೂ (ತಾನೂ) ಈತನೇ. ಇವನೇ ವಾಸ್ತವನಾದ ನೆಂಟ, ಎನ್ನುವ ಹಾಗೆ ಸುಪ್ರಸಿದ್ದನಾದ ಅರ್ಜುನನಿಗೆ ಕೃಷ್ಣನು ಆತಿಥ್ಯವನ್ನು ಮಾಡಿದನು. ವ|| ಹಾಗೆ ಅನೇಕರೀತಿಯಲ್ಲಿ ಸತ್ಕಾರಮಾಡಿ ನಾನಾರೀತಿಯ
Page #233
--------------------------------------------------------------------------
________________
೨೨೮ / ಪಂಪಭಾರತ ಕಂ|| ಆಯತಿಯಿಂದಂ ನರ ನಾ
ರಾಯಣರನೆ ನಗದವರಿಗ ನಾವಿರ್ವರುಮಿಂ | ತೀ ಯುಗದೊಳೀಗಳಾಂ ನಾ ರಾಯಣನಂ ನೀನುದಾತ್ತನಾರಾಯಣನೆ ||
೪೫ ವ|| ಅದಜೆಂ ನಿನಗಮೆನಗಮೇತಳಂ ವಿಕಲಮುಂ ವಿಚ್ಚಿನ್ನಮುಮಿಲ್ಲೆಂದು ನುಡಿಯುತಿರ್ಪನ್ನೆಗಮಿತ್ತಲ್ಚಂ| ನವ ನಳಿನೀ ವನಂಗಳ ಪರಾಗರಜಂಗಳನುಂಡು ಮುನ್ನಮಂ
ತವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬಲ್ಕು ಕಾಣುವಂ | ತೆವೊಲಿರೆ ಕೆಂಪು ತತ್ಕಮಲ ಕಾನನ ಕಂಟಕ ಲಗ್ನಪಾದನಾ
ದವೊಲುಡುಗುತ್ತುಮಾತ್ಮ ಕರಮಂ ರವಿ ಪೊರ್ದಿದನಸ್ತಶೈಲಮಂ || ೪೬ ವ|| ಆ ಪ್ರಸ್ತಾವದೊಳ್ಉll ಆ ಸರಸೀಜ ಬಾಂಧವನ ಪಿಂಬದಿನೊಳ್ ಕಡುವಿನ್ನನಾದುವಿರಿ
ತೀ ಸರಸೀರುಹಂಗಳವನೀ ಪದದೊಳ್ ಬಿಸುಟೆಂತು ಪೊಪವಂ | ಬೀ ಸಮಕಟ್ಟಿನೊಳ್ ನೆಲಸಿದಂತಜಗಿರ್ದುವು ಪಟ್ಟದಂಗಳು ತೇಸರ ಕೋಟಿ ಸಂಕಟ ಕುಶೇಶಯಕೋಶ ಕುಟೀರಕಂಗಳೊಳ್ | ೪೭ ಚಂಡಮರೀಚಿಗಸ್ತಮಯವಿಲ್ಲದುದೂಂದೆಡೆ ನಿಮ್ಮ ಕೇಳುದುಂ ಕಂಡುದುಮುಳ್ಕೊಡಿನ್ ಬೆಸಸಿಮಾಮಿರದಲ್ಲಿಗೆ ಪೋಪವೆಂದು ಮ | ಯೌಂಡೋಲವಿಂದಗಿಗಣಮಾಜದ ಪಕ್ಕಿಗಳೆಲ್ಲಮಂ ಮರು ಆ್ಯಂಡಿಲೂಳು ಕೂಡ ಬೆಸಗೊಂಡು ಬಲುವು ಜಕ್ಕವಕ್ಕಿಗಳ ೪೮
.
ಆಟಪಾಟಗಳನ್ನು ತೋರಿ ಕೃಷ್ಣನು ಅರ್ಜುನನಿಗೆ ಹೀಗೆಂದನು - ಅರ್ಜುನ! ಹಿಂದೆ ಬದರಿಕಾಶ್ರಮದಲ್ಲಿ-೪೫ ಹಿಂದೆ ನಾವು ಪರಸ್ಪರಾವಲಂಬನದಿಂದ ಸುಪ್ರಸಿದ್ದರಾದ ನರನಾರಾಯಣರಾಗಿದ್ದೆವು. ಈಗ ನಾವಿಬ್ಬರೂ ಈ ಯುಗದಲ್ಲಿಯೂ ಹಾಗೆಯೇ; ನಾನು ನಾರಾಯಣ (ಶ್ರೀಕೃಷ್ಣ, ನೀನು ಉದಾತ್ತನಾರಾಯಣನಾದ ಅರಿಕೇಸರಿ ವಗ ಆದುದರಿಂದ ನಿನಗೂ ನನಗೂ ಯಾವ ವಿಧದಲ್ಲಿಯೂ ವ್ಯತ್ಯಾಸವೂ ವಿಚ್ಚಿ (ವಿಚ್ಛಿನ್ನಯೂ ಇಲ್ಲವೆಂದು ಹೇಳುತ್ತಿರುವಲ್ಲಿ ಸಾಯಂಕಾಲವಾಯಿತು. ೪೬. ಸೂರ್ಯನು ಮೊದಲು ಹೊಸದಾಗಿ ಅರಳಿದ ತಾವರೆಯ ತೋಟದ ಧೂಳನ್ನು (ಪರಾಗವನ್ನು ತಿಂದು, ಆಕಾಶದಲ್ಲಿ ಸುತ್ತಿದ ಶ್ರಮದಿಂದ ಬಳಲಿ ಆ ತಿಂದ ಧೂಳನ್ನೇ ವಾಂತಿ ಮಾಡುತ್ತಿರುವ ಹಾಗೆ ಸಂಜೆಗೆಂಪು ತೋರುತ್ತಿರಲು ಆ ತಾವರೆಯ ಕಾಡಿನ ಮುಳ್ಳುಗಳಲ್ಲಿ ಕಾಲು ಸಿಕ್ಕಿಕೊಂಡ ಕಿರಣವುಳ್ಳವನಾಗಿ ತನ್ನ ಕಿರಣಗಳನ್ನು ಉಡುಗಿಸಿಕೊಂಡು ಅಸ್ತಾಚಲವನ್ನು ಸೇರಿದನು (ಮುಳುಗಿದನು). ವ|| ಆ ಸಮಯದಲ್ಲಿ ೪೭. ಕಮಲಬಂಧುವಾದ ಸೂರ್ಯನ ಹಿಂದೆಯೇ ಈ ತಾವರೆಗಳೂ ಬಹಳ ಖಿನ್ನವಾಗಿವೆ (ಬಾಡಿವೆ). ಈ ಸಮಯದಲ್ಲಿ ಇವುಗಳನ್ನು ಬಿಸುಟು ನಾವು ಹೇಗೆ ಹೋಗುವೆವು ಎಂದು ದುರವಸ್ಥೆಯಲ್ಲಿ ನಿಂತಂತೆ ದುಂಬಿಗಳು ಅನೇಕ ಕೇಸರಗಳ ಇಕ್ಕಟ್ಟಿನ ಸಂಕಟಕ್ಕೊಳಗಾಗಿ ತಾವರೆಯ ಮೊಗ್ಲೆಂಬ ಗುಡಿಸಲಿನ ಒಳಗೆ ಸಿಕ್ಕಿಬಿದ್ದುವು. ೪೮. ಸೂರ್ಯನಿಗೆ ಅಸ್ತಮಯವೇ ಇಲ್ಲದ ಸ್ಥಳವೊಂದನ್ನು ನೀವು ಕೇಳಿದ್ದರೆ ಅಥವಾ.
Page #234
--------------------------------------------------------------------------
________________
ಚತುರ್ಥಾಶ್ವಾಸಂ | ೨೨೯
ವ|| ಅಂತು ಕಮಳವನಂಗಳಾದಿತ್ಯಂಗೆ ಕೆಯ್ಯಂ ಮುಗಿವಂತೆ ಮುಗಿಯೆ ಜಕ್ಕವಕ್ಕಿಗಳ ಸುರತಮಕರಧ್ವಜನ ಸುಭದ್ರೆಯ ವಿರಹಪರಿತಾಪಮಂ ಪಚ್ಚುಕೊಂಡಸುಂಗೊಂಡಗಳ ಸಂಧ್ಯಾ ರಾಗಮವರ ಮನದನುರಾಗಮನನುಕರಿಸುವಂತುಟಾಗೆ ಬಟ್ಟೆಯಂ ಕ್ರಮಕ್ರಮದೊಳ್
ಮ|| ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂನೋ ಕಾಲಮೇ
ಘಸಮೂಹಂ ದೆಸೆಯೆಲ್ಲಮಂ ಕವಿದುದೋ ಗಂಧೇಭ ಚರ್ಮಂಗಳಂ | ಪಸರಂಗೆಯ್ದನೊ ಶಂಭುವೆಂಬ ಬಗೆಯಿಂ ತಯ್ದು ಕತಿ ಸೂ ಚಿಸಲಾರ್ಗ೦ ವಶವಾಗದಂತು ಕವಿದತ್ತುದ್ದಾಮ ಭೀಮಂ ತಮಂ || ೪೯
ವ|| ಆಗಳಾ ತಾರಾಗಣಂಗಳ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕಲೆಯನಲೆಯಲಾಯವಾದುವು ಕನಕ ಪ್ರಾಸಾದ ಪಂಜೆ ಗಳ್ ಪಟಪಟನೆ ಬೆಳಗುವ ಸೊಡರ್ಗಳನಾದಿತ್ಯನ ನಂಟರೆಂದು ತಮೋರಾಜಕಂ ಮುಳಿದು ಸೆಗೆಯ್ದ ಬೆಳಗಿನ ಸಯ ಮನೆಗಳನ್ನವಾದುವು ಮದಗಜ ಗಂಡಸ್ಥಳಂಗಳೊಳಾಗಿ ಮೊರೆವ ತುಂಬಿಯ ಬಂಬಲ್ಗಳೆ ವಿಮುಖೀಭೂತಂಗಳಾದುವು ತಂಡತಂಡದೋಲಗಕ್ಕೆ ಪುಗುವ ಪೊಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಕಾಹಂಸಕುಳಂಗಳ ತಳವೆಳಗಾದುವು
ಕಂಡಿದ್ದರೆ ಹೇಳಿ; ನಾವು ಸಾವಕಾಶಮಾಡದೆ ಅಲ್ಲಿಗೆ ಹೊರಟುಹೋಗುತ್ತೇವೆ ಎಂದು ಹುಚ್ಚರಂತೆ ಎಲ್ಲ ಪಕ್ಷಿಗಳಿಗೂ ಕೂಗಿ ಹೇಳಿ ತನ್ನಲ್ಲಿ ವ್ಯಾಪ್ತವಾಗಿದ್ದ ಪ್ರೀತಿಯಿಂದ ತಾವು ಬೆರೆಯಲಾರದೆ ಚಕ್ರವಾಕಪಕ್ಷಿಗಳು ವಿಶೇಷವಾಗಿ ಬಳಲಿದುವು. ವ|| ಹಾಗೆ ತಾವರೆಯ ತೋಟಗಳು ಸೂರ್ಯನಿಗೆ ಕೈಮುಗಿಯುವಂತೆ ಮೊಗ್ಗಾಗಲು (ಮುಚ್ಚಿಕೊಳ್ಳಲು), ಚಕ್ರವಾಕಪಕ್ಷಿಗಳು ಅರ್ಜುನ ಸುಭದ್ರೆಯರ ವಿರಹತಾಪದಲ್ಲಿ ತಾವೂ ಭಾಗಿಗಳಾಗಿ (ದುಃಖಪಟ್ಟು?) ತಕ್ಷಣ ಅಗಲಲು ಸಾಯಂಕಾಲದ ಕೆಂಪುಬಣ್ಣವು ಅವರ ಮನಸ್ಸಿನ ಅನುರಾಗವನ್ನು ಅನುಕರಿಸುವಂತೆ ಸಂಧ್ಯಾರಾಗವು ಕಾಣಿಸಿತು. ೪೯. ಸ್ವಲ್ಪಕಾಲದಲ್ಲಿಯೇ ರಾಕ್ಷಸನು ಸಮಸ್ತ ಜಗತ್ತನ್ನು ಕಾಡಿಗೆಯಿಂದ ಹೂಳಿಬಿಟ್ಟಿದ್ದಾನೆಯೋ ಪ್ರಳಯಕಾಲದ ಮೋಡದ ಸಮೂಹಗಳು ದಿಕ್ಕುಗಳನ್ನೆಲ್ಲ ಕವಿದುಕೊಂಡಿದೆಯೋ ಈಶ್ವರನು ಮದ್ದಾನೆಯ ಚರ್ಮವನ್ನು ಹರಡಿದ್ದಾನೆಯೋ ಎಂಬ ಚಿಂತೆಯನ್ನುಂಟುಮಾಡಿ ಕಪ್ಪುಬಣ್ಣವು ವೃದ್ಧಿಯಾಗಿ (ಇದು ಹೀಗೆ ಎಂದು ಸೂಚಿಸುವುದಕ್ಕೆ) ಯಾರಿಗೂ ಶಕ್ಯವಿಲ್ಲದ ರೀತಿಯಲ್ಲಿ ಬಹಳ ಭಯಂಕರವಾದ ಕತ್ತಲೆಯು ಕವಿದುಕೊಂಡಿತು. ವ|| ಆಗ ನಕ್ಷತ್ರಮಂಡಲವು ದಿಗ್ವಿನಿತೆಯರ ಕಿರೀಟಮಾಣಿಕ್ಯದಷ್ಟು ಪ್ರಕಾಶಮಾನವಾಗಿದ್ದರೂ ಕತ್ತೆಲೆಯನ್ನು ಹೋಗಲಾಡಿಸಲು ಶಕ್ತವಾಗಲಿಲ್ಲ. ಸುವರ್ಣ ನಿರ್ಮಿತವಾದ ಉಪ್ಪರಿಗೆಯ ಸಾಲುಗಳು ಪಳಪಳನೆ ಬೆಳಗುತ್ತಿದ್ದ ದೀಪಗಳು ಸೂರ್ಯನ ನಂಟರೆಂದು ಕತ್ತಲೆಯೆಂಬ ರಾಜನು ಕೋಪಗೊಂಡು (ಆ ದೀಪಗಳನ್ನು) ಬಂಧಿಸಿದ ಪ್ರಾತಃಕಾಲದ ಸೆರೆಮನೆಗಳಂತೆ ಆದವು. ಮದ್ದಾನೆಗಳ ಕಪೋಲ ಪ್ರದೇಶಗಳಲ್ಲಿ ಎರಗಿ ಝೇಂಕರಿಸುವ ದುಂಬಿಯ ಸಮೂಹಗಳು ಮುಖತಿರುಗಿಸಿದವು. ಗುಂಪುಗುಂಪಾಗಿ ಅರಮನೆಗೆ ಬಂದು ಹೋಗುವ ವೇಶೈಯರ ಕಾಲಂದಿಗೆಯ ಶಬ್ದವನ್ನು ಕೇಳಿ ಅರಮನೆಯ ಕೈದೋಟಸರೋವರದಲ್ಲಿದ್ದ
Page #235
--------------------------------------------------------------------------
________________
೨೩೦ | ಪಂಪಭಾರತಂ ರಾಜಹಂಸಪಾರಾವತಮಿಥುನಂಗಳುತ್ತುಂಗಪ್ರಾಸಾದಶಿಖರ ಮಣಿಗವಾಕ್ಕಾಂತರಾಳ, ವಿವಿಧ ಗ್ರಹಾಂತರಗತಂಗಳಾದುವು ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತವಾದಂತ ಲೋಹಿತಾಂಗನಾಗಮll ನೆರೆ ಸಂಜೆಯೊಳೆಂದು ಕಾಯೊಡೆದೊಡೇನಾತ್ಕಾಂಗದ ರೋಹಿಣಿ
ಚರಣಾಲಕ್ತಕ ರಾಗಮಚ್ಚಳಿದುದೋ ಮೇಣ್ ಕಾಮಿಗಳೀವ ರಾ | ಗರಸಂ ಪೋಣಿದುದೂ ತಮೋಗಜದ ಕೊಡೇಕಿಂದಮಂ ನೋಂದುದೂ
ಹರಿಣಂ ತಾನೆನಿಸಿತ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ || ೫೦ ವ|| ಆಗಳ್ ತನ್ನ ರಾಗಮಂ ರಾಗಿಗಳೆಲ್ಲಂ ಪಚ್ಚುಕೊಟ್ಟಂತೆ ಕೆಂಪು ಪತ್ತುವಿಟ್ಟಾಗಳ
ಮುನಿದೀಶಂ ತವ ಸುಟ್ಟು ಮುಂ ಕರುಣದಿಂದಿತ್ತಂ ಪುನರ್ಜನ್ಯಮಂ ನಿನಗೆಂದಾ ರತಿ ಪಾಪಮುಂ ಪಡಣಮುಂ ಪೋಪಂತ ಕಾಮಂಗೆ ಮಂ | ಜನಕೆಂದದ ಚಂದ್ರಕಾಂತ ಘಟದೂಳ್ ತಂದುಯಿಂ ಪುಷ್ಟ ವಾ ಸನೆಗೆಂದಿಕ್ಕಿದ ನೀಳ ನೀರರುಕಮಂ ಪೋಲ್ಕತ್ತು ಕಟ್ಟಿಂದುವಾ || ೫೧ ,
ಮt
ಹಂಸಸಮೂಹಗಳು ಅಸ್ತವ್ಯಸ್ತವಾದುವು. ರಾಜಹಂಸ ಮತ್ತು ಪಾರಿವಾಳದ ಜೋಡಿಗಳು ಉಪ್ಪರಿಗೆಯ ತುದಿಯಲ್ಲಿರುವ ರತ್ನಖಚಿತವಾದ ಕಿಟಕಿಗಳ ಮಧ್ಯಭಾಗದ ಮನೆಗಳನ್ನು (ಗೂಡುಗಳನ್ನು) ಹೋಗಿ ಸೇರಿದುವು. ಉದಯ ಪರ್ವತದ ತಪ್ಪಲಿನ ಗುಹೆಗಳ ಸಹಾಯವನ್ನುಳ್ಳ (ಅಂದರೆ ಮೂಡದಿಕ್ಕಿನಲ್ಲಿ ಉದಯಿಸುತ್ತಿದ್ದ ಚಂದ್ರನು ಸಿಂಹದಿಂದ ಸೀಳಲ್ಪಟ್ಟ ತನ್ನ ಜಿಂಕೆಯ ರಕ್ತರಾಶಿಯಿಂದ ತುಂಬಿದವನಂತೆ ಕೆಂಪು ವರ್ಣದವನಾದನು. ೫೦. ಸಂಜೆಯೆಂಬ (ಅನ್ಯ) ಸ್ತ್ರೀಯಲ್ಲಿ ಕೂಡಿದೆಯಾ ಎಂದು (ಹೆಂಡತಿಯಾದ ರೋಹಿಣಿ ದೇವಿಯು) ಕೋಪದಿಂದ ಒದೆಯಲು ಅವಳ ಕಾಲಿನ ಅರಗಿನ ಬಣ್ಣವು ಚಂದ್ರನ ಶರೀರದಲ್ಲಿ ಎರಕ ಹೊಯ್ದಿದೆಯೋ ಅಥವಾ ಕಾಮಿಗಳಿಗೆ (ಸಹಜವಾಗಿಯೇ) ಕೊಡುವ (ಹೆಚ್ಚುವ) ಕಾಮರಸವು ಅಭಿವೃದ್ದಿಯಾಯಿತೋ ಅಥವಾ (ಚಂದ್ರನ) ಜಿಂಕೆಯು ಕತ್ತಲೆಯಂಬ ಆನೆಯ ಕೊಂಬಿನ ಗಾಯದಿಂದ ಗಾಯಗೊಂಡಿದೆಯೋ ಎನ್ನುವ ಹಾಗೆ ಚಂದ್ರಬಿಂಬದ ಕೆಂಪು ಕಾಂತಿಯು ಎನ್ನಿಸಿತು. ವ| ಸ್ವಲ್ಪಕಾಲದ ಮೇಲೆ ತನ್ನ ರಾಗ (ಕೆಂಪುಬಣ್ಣವನ್ನು ರಾಗಿಗಳಿಗೆಲ್ಲ (ಪ್ರೀತಿಪಾತ್ರರಾದವರು -ಪ್ರಿಯ ಪ್ರೇಯಸಿಯರು - ವಿರಹಿಗಳು) ಭಾಗಮಾಡಿಕೊಟ್ಟ ಹಾಗೆ ಕೆಂಪುಬಣ್ಣವು ಕಳೆದುಹೋಗಲಾಗಿ ಚಂದ್ರಬಿಂಬವು ಬೆಳ್ಳಗಾಯಿತು. ೫೧. ಈಶ್ವರನೂ ಮನ್ಮಥನ ಮೇಲೆ ಮೊದಲು ಕೋಪಿಸಿಕೊಂಡು (ನೇತ್ರಾಗ್ನಿಯಿಂದ) ಸುಟ್ಟು ಭಸ್ಮಮಾಡಿ ಪುನಃ ಕರುಣೆಯಿಂದ ನಿನಗೆ ಜನ್ಮವಿತ್ತಿದ್ದಾನೆ ಎಂದು ರತಿದೇವಿಯು ಅವನ ಪಾಪವನ್ನು ಪತನವನ್ನು ಹೋಗಲಾಡಿಸುವುದಕ್ಕಾಗಿ ಕಾಮನ ಮಜ್ಜನಕ್ಕೆ ಎತ್ತಿದ ಚಂದ್ರಕಾಂತ ಶಿಲೆಯ ಕಲಶದಲ್ಲಿ ಅದನ್ನು ವಾಸನಾಯುಕ್ತವನ್ನಾಗಿ ಮಾಡುವುದಕ್ಕಾಗಿ ಪ್ರೀತಿಯಿಂದ ತಂದಿಟ್ಟ ಕನ್ನೈದಿಲೆಯ ಪುಷ್ಪವನ್ನು ಚಂದ್ರನ ಕಪ್ಪು (ಕಲೆ-ಕರೆ)
Page #236
--------------------------------------------------------------------------
________________
ಕಂll
ವ|| ಆಗಳ್
ಕಂ
ಚತುರ್ಥಾಶ್ವಾಸಂ | ೨೩೧
ಆವರಿಸಿತ್ತೋ ನಭೋಂತ ರ್ಭೂವಿವರಮನಮರ್ದಿನೆಸಕಮನ ವಿರಹಿಗಳೂ 1 ವೋವಿದು ಮದನನ ಸೋದನ
ದೀವಿಗೆಯನ ತೊಳಗಿ ಬೆಳಗಿದಂ ತುಹಿನಕರಂ ||
ವ|| ಅಂತು ಸೊಗಯಿಸುವಚಬೆಟ್ಟಿಂಗಳೊಳ್ ಸುಧಾಧವಳಿತೋತ್ತುಂಗ ರಮ್ಯಹರ್ಮ್ಯ ದೆರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಮ ಹರ್ಮಾಗ್ರದೊಳೆ ಸಿರಿಯೋಲಗಂಗೊಟ್ಟು ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು
ಕಂ
ಆಗಳನಂತನನಂತಫ
ಣಾಗಣಮಣಿಕಿರಣಮಸೆಯೆ ದುಗ್ಗಾರ್ಣವದೊಳ್ | ರಾಗದಿನಿರ್ಪಂತಿರ್ದ
ಭೋಗಿ ತಲತ್ತದೆಸಿ ಬೆಳಗೆ ಕೆಯ್ಯಾವಿಗೆಗಳ
"
೫೨
ಅತ್ತ ಸುಭದ್ರೆಯುಮೊಡಲುರಿ
ಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋ |
ಡುತ್ತಿರ ಸುಸಾಳಭಂಜಿಕೆ
ಗೆತ್ತುದು ಕೆಳದಿಯರ ತಂಡಮಾಕೆಯ ರೂಪಂ ||
982
೫೪
ಹೋಲುತ್ತಿತ್ತು. ೫೨. (ಬೆಳದಿಂಗಳು) ಭೂಮ್ಯಂತರಿಕ್ಷಗಳ ಮಧ್ಯಭಾಗವನ್ನು ಅಮೃತದ ಕಾಂತಿ ಆವರಿಸಿತೊ ಎನ್ನುವ ಹಾಗಿರಲು ವಿರಹಿಗಳು (ಪ್ರೇಮಿಗಳನ್ನು ಅಗಲಿರುವವರು) ಇದು ಮನ್ಮಥನು ನಮ್ಮನ್ನು ಹುಡುಕಲು ತಂದಿರುವ ಹುಡುಕುದೀಪ; ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ಳುವಂತೆ ಚಂದ್ರನು ತೊಳಗಿ ಪ್ರಕಾಶಿಸಿದನು. ೫೩, ಹಾಗೆ ಸೊಗಯಿಸುವ ಸ್ವಚ್ಛವಾದ ಬೆಳದಿಂಗಳಿನಲ್ಲಿ ಸುಣ್ಣದಿಂದ ಬಿಳುಪುಮಾಡಲ್ಪಟ್ಟ ಎತ್ತರವೂ ಮನೋಹರವೂ ಆದ ಉಪ್ಪರಿಗೆಯ ಎರಡನೆಯ ಅಂತಸ್ತಿನ ಆಕರ್ಷಕವಾದ ಚಚೌಕದ ಮುಂದಿನ ಮಹಡಿಯ ಮುಂಭಾಗದಲ್ಲಿ ವಿಜೃಂಭಣೆಯಿಂದ ಕೃಷ್ಣನು ಓಲಗದಿಂದಿದ್ದು
ಅರ್ಜುನನೊಡನೆ ಅನೇಕ ವಿನೋದಗಳಿಂದ ಕೂಡಿದನು. ಆದಿಶೇಷನ ಅನಂತವಾದ
ಹೆಡೆಯ ರತ್ನಗಳ ಸಮೂಹವು ಪ್ರಕಾಶಿಸುತ್ತಿರಲು ನಾರಾಯಣನು ಕ್ಷೀರಸಮುದ್ರದಲ್ಲಿ ಸಂತೋಷದಿಂದಿರುವ ಹಾಗೆ (ಇಲ್ಲಿ ಕೈದೀವಿಗೆಗಳ ಸಮೂಹವು ಪ್ರಕಾಶಿಸಿ ಬೆಳಗುತ್ತಿರಲು ಅರ್ಜುನನು ಸುಖದಿಂದ ಇದ್ದನು. ೫೪. ಆ ಕಡೆ ಸುಭದ್ರೆಯು ಕೂಡ ವಿರಹತಾಪದಿಂದ ಮೈಸುಡುತ್ತಿರಲು ನಿಶ್ಚಷ್ಟಳಾಗಿ ಅರ್ಜುನನು ಇದ್ದ ಕಡೆಯೇ ನೋಡುತ್ತಿರಲು ಅವಳ ಸಖಿಯರ ಸಮೂಹವು ಅವಳ ರೂಪವನ್ನು ಸುಂದರವಾದ ಸಾಲುಬೊಂಬೆಯೆಂದು ಭ್ರಮಿಸಿತು. ೫೫. ನಾಚಿಕೆಯು ಕನ್ಯಾಭಾವವನ್ನು ಪ್ರದರ್ಶಿಸಲು ಇಚ್ಛಿಸುತ್ತದೆ. ಮನಸ್ಸಾದರೋ ವಿಶೇಷವಾಗಿ(ಅರ್ಜುನನ ಕಡೆ) ಸೆಳೆದುಕೊಂಡು ಹೋಗಲು ಆಶಿಸುತ್ತದೆ. ತನ್ನ ಪ್ರೇಮವನ್ನು ವಿಶದಪಡಿಸುತ್ತದೆ ಎಂದು ಕನೈಯಾದ
Page #237
--------------------------------------------------------------------------
________________
೨೩೨) ಪಂಪಭಾರತಂ
ಕನ್ನೆತನಂಗೆಯ್ಕಲ್ ಬಗೆ ಗುನ್ನಾಣ್ ಮಿಗೆ ಮನಮುಮಿಟ್ಟುವರಿಯಲ್ ಬಗೆಗುಂ | ಕನ್ನಡಿಕುಂ ತನ್ನಳಿಪಂ ತನ್ನಲೆ ತಾನಿಂತು ಕನ್ನೆ ತಳವೆಳಗಾದಳ | ನುಡಿಯಿಸಿ ಕೇಳುಂ ಹರಿಗನ ಪಡೆಮಾತನೆ ಮಾತು ತಪೊಡಂ ಮತ್ತಮದಂ || ನುಡಿಯಿಸುಗುಂ ಮೊದಲಿಂದಾ ನುಡಿ ರ್ಪಪಡೆ ಮುಳಿದು ನೋಡುಗುಂ ಕಳದಿಯರಂ ||
ಉ)
ಅತಿ ಮರುಳಂತುಟಿ ಸೊರ್ಕಿನ ತೆಜದಂತುಟಿ ಮನಮೊಲ್ಕುದೆರ್ದೆಯುರಿವುದು ಮ | . ಹೈಆಗುವುದು ಪದವುದಾನಿದ ನಯನಿದೇಕೆಂದು ಕನ್ನೆ ತಳವೆಳಗಾದಳ್ | - ೫೭ ಆನೆಯನೇಜಿ ಸೌಷ್ಟವದ ಬರ್ಪರಿಕೇಸರಿಯೊಂದು ಗಾಡಿಯು ದ್ವಾನಿ ತಗುಳು ಕಣ್ಣೂಳೆ ತೋಲಲ್ಲೆರ್ದೆಯೊಳ್ ತಡಮಾಡ ಬೇಟದು || ದ್ವಾನಿಯನಾನೆ ಮನ್ಮಥ ಮಹೀಭುಜನೋವದೆ ತೋಡಿಕೊಟ್ಟುದೂಂ
ದಾನೆಯೆ ತನ್ನನಾನಗೊಲೆಗೊಂದಪುದೆಂದು ಲತಾಂಗಿ ಚರ್ಚಿದಳ್ || ೫೮ ಮll ಮನಮಾರಾಧಿತಹೋಮಭೂಮಿ ಪಶುಗಳ ಕಾಮಾತುರರ್ ಬಂದ ಮಾ
ವನಿತುಂ ಸ್ಥಾಪಿತ ಯೂಪಕೋಟಿ ಬಳವತ್ಕಾಮಾಗ್ನಿ ಹೋಮಾಗ್ನಿ ಚಂ | ದನ ಕರ್ಪೂರ ಮೃಣಾಳನಾಳಮೆ ಪೊದಲ್ಲಿದ್ದಂಗಳಿಂತಾಗ ತಾ
ನಿನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಟ್ಟಿಂಗಳೊಳ್ || ೫೯ ಸುಭದ್ರೆಯು ತನ್ನಲ್ಲಿಯೇ ತಬ್ಬಿಬ್ಬಾದಳು. ೫೬. ಅರ್ಜುನನ ವಿಷಯಕವಾದ ಮಾತನ್ನೇ (ಕೆಳದಿಯರಿಂದ) ಹೇಳಿಸಿ ಕೇಳುತ್ತಾಳೆ. ಆ ಮಾತು ನಿಂತುಹೋದರೆ ಪುನಃ ಆ ಮಾತನ್ನೇ ಮೊದಲಿನಿಂದಲೂ ನುಡಿಯಿಸುತ್ತಾಳೆ. ಅದೂ ನಿಂತುಹೋದರೆ ಸಖಿಯರನ್ನೂ ಕೋಪದಿಂದ ನೋಡುತ್ತಾಳೆ. ೫೭. ಬುದ್ಧಿಭ್ರಮಣೆಯಾಗುತ್ತದೆ. ಸೊಕ್ಕಿನಿಂದ ಮಯ್ ಮರೆದಂತಾಗುತ್ತದೆ. ಮನಸ್ಸು ಪ್ರೀತಿಸುತ್ತದೆ. ಎದೆಯುರಿಯುತ್ತದೆ. ಶರೀರವು (ಅವನ ಕಡೆಯೇ) ಬಾಗುತ್ತದೆ. (ಅವನನ್ನೇ) ಅಪೇಕ್ಷಿಸುತ್ತದೆ. ಇದೇಕೆಂದು ತಿಳಿಯಲಾರದೆ ಕನೈಯಾದ ಸುಭದ್ರೆಯು ತಳವೆಳಗಾದಳು. ೫೮. ಆನೆಯನ್ನು ಹತ್ತಿ ಸೊಗಸಾಗಿ ಬರುತ್ತಿರುವ ಅರ್ಜುನನ ಒಂದು ಸೌಂದರ್ಯಾತಿಶಯವು ತನ್ನನ್ನು (ಸುಭದ್ರೆಯನ್ನು ಹಿಂಬಾಲಿಸಿ ಕಣ್ಣಿನಲ್ಲಿ ಸುತ್ತಾಡಿ ಎದೆಯಲ್ಲಿ ಸ್ಥಿರವಾಗಿ ಪ್ರೇಮಾತಿಶಯವನ್ನುಂಟುಮಾಡಲು ಮನ್ಮಥನೆಂಬ ರಾಜನೇ ತನ್ನಲ್ಲಿ ಸ್ವಲ್ಪವೂ ದಾಕ್ಷಿಣ್ಯವಿಲ್ಲದೆ ತನ್ನ ಆನೆಯನ್ನು ಭೂಬಿಟ್ಟು ಅದರಿಂದ ತನ್ನನ್ನು ಕೊಲ್ಲಿಸುವಂತೆ ಕೊಲ್ಲಿಸುತ್ತಿದ್ದಾನೆ ಎಂದು ಲತಾಂಗಿಯಾದ ಸುಭದ್ರೆಯು ಹೆದರಿದಳು. ೫೯. ಮನಸ್ಸೇ ಪೂಜಿಸಲ್ಪಟ್ಟ ಯಜ್ಞಭೂಮಿ, ಕಾಮಪೀಡಿತರಾದವರೇ ಬಲಿಗಾಗಿರುವ ಪಶುಗಳು, ಫಲಿಸಿ ಬಂದಿರುವ ಮಾವಿನಮರಗಳೇ ನೆಟ್ಟಿರುವ ಬಲಿಗಂಬಗಳು, ಅತಿಶಯವಾದ
Page #238
--------------------------------------------------------------------------
________________
ಚತುರ್ಥಾಶ್ವಾಸಂ | ೨೩೩ ವ|| ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಭಂಗೊಂಡ ದಿವ್ಯ ಗ್ರಹದಂತೆ ಕಾಮಗ್ರಹ ಗೃಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸಂಭಕ ಕಂಪ ಸ್ಟೇದ ವೈವರ್ಣ್ಯ ಸಂತಾಪನಾಹಾರ ವ್ಯಾಮೋಹ ಗದ್ದದಾಶ್ರುಮೋಕ್ಷ ಮೂರ್ಛಾದಿ ನಾನಾ ವಿಕಾರಂಗಳನೊಡನೊಡನೆ ತೋಜುವುದುಮಾಕೆಯ ದಾದಿಯ ಮಗಳ್ ಚೂತಲತಿಕೆಯೆಂಬಲ್ ಕಂಡುಚoll ಪದವೆರ್ದ ಬತ್ತೆ ಕೆತ್ತುವಧರಂ ದೆಸೆಗೆಟ್ಟಲರ್ಗಣ್ಣ ನೋಟಮು
ಣಿದ ಬೆಮರೋಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂ || - - ದಿದ ಲತಿಕಾಂಗಮೋಂದಿದ ವಿಕಾರಮದೀಕೆಯೊಳೀಗಳಾದುದಿಂ ತಿದು ಕುಸುಮಾಸ್ತನೆಂಬದಟನಿಕ್ಕಿದ ಸೊರ್ಕಿನ ಗೊಡ್ಡಮಾಗದೇ ll ..೬೦ .... ವ|| ಎಂದು ತನ್ನೊಳೆ ಬಗೆದು ಮತ್ತಮಿಂತೆಂದಳಕಳೆಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್ ಗಟೆಯಿಸೆ ಕೆಂಪು ಕಣ್ಣಳ ಮೊದಲ್ಗಳೊಳೊಯ್ಯನೆ ತೋಜಿತ ಬಾಡಿ ಪಾ | ಡಟಿದು ಬಬಿಲ್ಲು ಜೋಲ್ಲಿರವು ಮೆಯ್ಯೋಳೆ ಮೆಯ್ದಿಡಿದೆನ್ನ ಕಣ್ಣಳೊಳ್ ಸುಟಿದುವು ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ || ೬೧
ಕಾಮಾಗ್ನಿಯೇ ಹೋಮಾಗ್ನಿ, ಶ್ರೀಗಂಧ, ಕರ್ಪೂರ, ತಾವರೆಯ ದಂಟುಗಳೇ ಅಲ್ಲಿ
ಹರಡಿರುವ ಸಮಿತ್ತುಗಳ ಕಟ್ಟುಗಳು, ಹೀಗಾಗಲು ಇವಿಷ್ಟೂ ಕಾಮನ ಯಜ್ಞವೆಂದು , ಸುಭದ್ರೆಯು ಬೆಳದಿಂಗಳಿನಲ್ಲಿ ಭಯಗೊಂಡಳು. ವ! ಹಾಗೆ ಕಾಮದೇವನೆಂಬ
ಮಂತ್ರವಾದಿಯ ದಿವ್ಯಮಂತ್ರದಿಂದ ಸ್ತಂಭಿತಳಾದ (ತಡೆಯಲ್ಪಟ್ಟ) ದಿವ್ಯಗ್ರಹದ ಹಾಗೆ ಕಾಮಗ್ರಹದಿಂದ ಹಿಡಿಯಲ್ಪಟ್ಟು ಬುದ್ಧಿಭ್ರಮಣೆ, ರೋಮಾಂಚ, ಸ್ತಂಭನ, ನಡುಕ, ಬೆವರುವುದು, ವರ್ಣವ್ಯತ್ಯಾಸ, ಚಿಂತೆ, ಆಹಾರವಿಲ್ಲದಿರುವಿಕೆ, ಪ್ರೇಮಾತಿಶಯ, ಗಂಟತಗಿದ ಮಾತು, ಕಣ್ಣೀರುಸುರಿಯುವಿಕೆ, ಮೂರ್ಛಹೋಗುವುದು ಮೊದಲಾದ ನಾನಾ ವಿಕಾರಗಳನ್ನು (ಸುಭದ್ರೆಯು) ಮೇಲೆ ಮೇಲೆ ತೋರುತ್ತಿರಲು ಆಕೆಯ ದಾದಿಯ ಮಗಳಾದ ಚೂತಲತಿಕೆಯೆಂಬವಳು ಇದನ್ನು ಕಂಡಳು, ೬೦. ಈಕೆಯ ಬತ್ತಿದ ಎದೆ, ನಡುಗುವ ತುಟಿ, ಹೂವಿನಂತಿರುವ ಕಣ್ಣಿನ ದೆಸೆಗೆಟ್ಟ ದೃಷ್ಟಿ, ಹೆಚ್ಚಾದ ಬೆವರಿನ ಸಾಲಿಂದ ಕೂಡಿದ ದೀರ್ಘಶ್ವಾಸ, (ನಿಟ್ಟುಸಿರು), ತೊದಳಿನಿಂದ ಕೂಡಿದ ಮಾತು, ಕೃಶವಾದ ಲತೆಯಂತಿರುವ ಶರೀರ, ತೋರಿಬರುತ್ತಿರುವ ವಿಕಾರಗಳು ಇವೆಲ್ಲ ಈಗ ಇವಳಲ್ಲಿ ಉಂಟಾಗುತ್ತಿವೆ, ಇವು ಪುಷ್ಪಬಾಣನಾದ ಮನ್ಮಥನೆಂಬ ದುಷ್ಟನು ಉಂಟುಮಾಡಿರುವ ಸೊಕ್ಕಿನ ಚೇಷ್ಟೆಯೇ ಸರಿ ವli ಎಂದು ತನ್ನಲ್ಲಿಯೇ ಯೋಚಿಸಿ ಪುನಃ ಹೀಗೆಂದಳು-೬೧. ಕಳಿತುಹೋಗಿರುವ (ಅಜ್ಜಿಯಾದ) ಸಂಪಗೆಯ ಬಣ್ಣದ ಹಾಗೆ ಬೆಳ್ಳಗಿರುವ ಕಣ್ಣಿನ ಮೊದಲಿನಲ್ಲಿ ಕೆಂಪುಬಣ್ಣವು ನಿಧಾನವಾಗಿ ವ್ಯಾಪಿಸಿ ತೋರುತ್ತಿರಲು ಬಾಡಿ ಹಿಂದಿನ ಸ್ಥಿತಿಯನ್ನು ಕಳೆದುಕೊಂಡು ಜೋತುಹೋಗಿರುವ ಈಕೆಯ ಶರೀರಸ್ಥಿತಿಯೇ ನನ್ನ ಕಣ್ಣಿನಲ್ಲಿ ಈ ಕಸ್ಯೆಯ ಪ್ರೇಮಾತಿಶಯವನ್ನು
Page #239
--------------------------------------------------------------------------
________________
೨೩೪ / ಪಂಪಭಾರತಂ
ವ|| ಅದಟಿಕೆಯ ಬಗೆಯನಯಲ್ವೇ ಮೆಂದು ಮೆಲ್ಲಮೆಲ್ಲನೆ ಕೆಲಕ್ಕೆಂದು ಕುಂಚದಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಣೆತ್ತಿ ಕಳೆದೇಕಾಂತದೊಳ್ ಕನ್ನೆಯನಿಂತೆಂದಳ್
ಚoll ಮೃಗಮದ ಪತ್ರರೇಖೆಗಳನೇಕೆಗೆ ತಾಳಿರದಾದುವೀ ಕದಂ ಪುಗಳುರಮೇಕೆ ಹಾರ ಮಣಿಮಂಜರಿಯಿಲ್ಲದೆ ಬಿನ್ನಗಿರ್ದುದೀ | ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದೀ ಬಗೆಯೊಳಲಕಕ ದ್ರವದೊಳೊಂದದೆ ನಿಂದುವು ಪಾದಪಂಕಜಂ|| ನಗೆಗಣ್ ಸೋರ್ವ ಕದುಷ್ಠ ವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂ ಕೆಗಳಿಂ ನಾಡೆ ಬೆಡಂಗುಗೆಟ್ಟರವಿದಿಂತಕಾರಣಂ ಮಜ್ಜನಂ | ಬುಗದಾರೋಗಿಸಲೊಲ್ಲದಿರ್ಪಿರವಿದೇಂ ನಾಣಳಿದೇಂ ಕಾಮನಂ ಬುಗಳತ್ತಿತ್ತೆಡೆಯಾಡಿ ಸೋಂಕವೆ ವಲಂ ನಿನ್ನಂ ಸರೋಜಾನನೇ || ೬೩ ವ|| ಎಂದು ಮುನ್ನಮೆ ಮುಟ್ಟಿ ನುಡಿಯದ ಪೋಪೋಗನೆ ಬಳಸಿ ಕನ್ನೆಯ ಶಂಕೆಯಂ ಕಿಡಿಸಿ ಮತ್ತಮಿಂತೆಂದಳ್
ಮ||
ಮ||
ವನಮೃತ್ಯುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನ ತನಕಾಂಭೋಜನಿಭಾನನಕ್ಕೆ ಪಿರಿದುಂ ದೀನತ್ವಮಂ ನೀಳ ಮಾ | ವಿನ ಪೋಂದದ ಕಣ್ಣೆ ಬಾಷ್ಪಜಲಮಂ ಚಿತ್ತಕ್ಕೆ ಸಂತಾಪಮಂ ನಿನಗಂ ಮಾಡಿದನಾವನಾತನೆ ವಲಂ ಗಂಧೇಭ ವಿದ್ಯಾಧರಂ ||
وع
೬೪
ಪ್ರಕಟಪಡಿಸುತ್ತದೆ. ವ|| ಆದುದರಿಂದ ಈಕೆಯ ಮನಸ್ಸನ್ನು ತಿಳಿಯಬೇಕು ಎಂದು ನಿಧಾನವಾಗಿ ಪಕ್ಕಕ್ಕೆ ಬಂದು ಕುಂಚದ ಅಡಪದ ಡವಕೆಯ ಸೇವಕಿಯರನ್ನೆಲ್ಲ ಕಣ್ಣನ್ನೆಯಿಂದಲೇ ಕಳುಹಿಸಿ ರಹಸ್ಯವಾಗಿ ಕನೈಯನ್ನು ಕುರಿತು ಕೇಳಿದಳು-೬೨. ಈ ನಿನ್ನ ಕೆನ್ನೆಗಳು ಕಸ್ತೂರಿಯಿಂದ ಬರೆದ ಪತ್ರರೇಖೆಗಳನ್ನು ಏಕಮ್ಮಧರಿಸಿಲ್ಲವಾಗಿವೆ. ನಿನ್ನ ಎದೆಯೇಕೆ ರತ್ನಹಾರದ ಗೊಂಚಲುಗಳಿಲ್ಲದೆ ಶೂನ್ಯವಾಗಿದೆ? ಈ ನಿನ್ನ ' ಸೊಂಟವೇಕೆ ಚಿನ್ನದ ಡಾಬಿನ ಗೆಜ್ಜೆಗಳ ಶಬ್ದವಿಲ್ಲದೆ ಮೂಕವಾಗಿದೆ. ನಿನ್ನ ಪಾದಕಮಲಗಳೇಕೆ ಈ ರೀತಿಯಲ್ಲಿ ಅರಗಿನ ರಸದ ಲೇಪನವಾಗದೆ ನಿಂತಿವೆ? ೬೩. ನಿನ್ನ ಕಣ್ಣು ನಸುಬಿಸಿಯಾದ ಕಣ್ಣೀರಿನ ಪ್ರವಾಹವನ್ನು ಸುರಿಸುತ್ತಿರುವುದೂ ತೊಂಡೆಹಣ್ಣಿನಂತಿರುವ ತುಟಿಯು ನಿಟ್ಟುಸಿರಿನ ಬೆಂಕಿಯಿಂದ ತನ್ನ ಬೆಡಗನ್ನು ಹೋಗಲಾಡಿಸಿಕೊಂಡಿರುವ ಈ ಸ್ಥಿತಿಯೂ ಇದೇಕೆ? ಸ್ನಾನ ಮಾಡದೆ ಊಟಮಾಡದೆ ಇರುವುದಕ್ಕೆ ಕಾರಣವೇನು ? ಲಜ್ಜೆಯೂ ಭಯವೂ ಇದೇಕೆ ? ಕಾಮಬಾಣಗಳು ನಿನ್ನನ್ನು ವ್ಯಾಪಿಸಿ ನಿಜವಾಗಿಯೂ ಮುಟ್ಟುತ್ತಿಲ್ಲವೇ ? ವ|| ಎಂದು ಮೊದಲೇ ಒಳಹೊಕ್ಕು (ಅವಳ ಇಂಗಿತವನ್ನೂ ತಿಳಿದು) ಮಾತನಾಡದೆ ಮೇಲೆ ಮೇಲೆ ಬಳಸುಮಾತುಗಳನ್ನಾಡಿ ಅವಳ ಸಂದೇಹವನ್ನು ಹೋಗಲಾಡಿಸಿ ಪುನಃ ಹೀಗೆಂದಳು-೬೪. ಮೋಡದಂತೆ ಕಪ್ಪಾದ ಮುಂಗುರುಳುಳ್ಳ ಬಾಗೆಹೂವಿನ ಬಣ್ಣವುಳ್ಳ ನಿನ್ನ ಶರೀರಕ್ಕೆ ಮಾಸುವಿಕೆಯನ್ನೂ ಕಾಂತಿಯುಕ್ತವಾದ ಹೊಂದಾವರೆಗೆ ಸಮಾನವಾದ
Page #240
--------------------------------------------------------------------------
________________
ಚತುರ್ಥಾಶ್ವಾಸಂ | ೨೩೫ ವll ಎಂದು ತನ್ನ ಮನಮನದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಜತೇನುಮನನಲಯದ ನಾಣ್ಯ ತಲೆಯ ಬಾಗಿ ನೆಲನಂ ಬರೆಯುತ್ತುಂ ನೀರೊಲ್ ಮುಲುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ಎಂದು ಬೆಚ್ಚನೆ ಸುಯೊಡೆ
ಕoll ಉಸಿರದಿರೆ ಮನದೊಳೆರ್ದಯಂ
ಪಸರಿಸುಗುಂ ಮಜುಕಮದನನಗಿಂತುಟಿ ಎಂ | ದುಸಿರುಸಿರ್ದೊಡೆ ಬಗೆ ಹೀರ್ಗುಂ ಬಿಸಿದುಂ ಬೆಟ್ಟತ್ತುಮುಸಿರದೇ ತೀರ್ದಪುದೇ ||
೬೫
ಪೇಂಬುದುಮಾಂ ನಿನಗೆಡೆ ವೇದದ ಪೇಜಾರ್ಗ ಪೇಟಿನಿಂದಿನ ಬಂದಾ | ಕಾಬಾದ ವಾಟ್ಗೋಂಡೂಡ ಪಾಬಾದುದು ಮನಮುಮರ್ದಯುಮೇನಂ ಪೇಯಂ ||
ಭೋಂಕನೆ ಮನಮಂ ಕದಡಿ ಕ ಲಂಕಿದಪುದು ಬಿಡದೆ ಮನಮನೊನಲಿಸಿದಪುದಾ || ದಂ ಕೆಳದಿ ಪಾಣರಂಕುಸ ನಂಕುಸದಾ ಪೊಳಪುಮವನ ಕಣ್ಣಳ ಬೆಳ್ಳುಂ ||
ಮುಖಕ್ಕೆ ವಿಶೇಷವಾದ ಬಾಡುವಿಕೆಯನ್ನೂ ನೀಳವಾದ ಮಾವಿನ ಹೋಳಿನಂತಿರುವ ಕಣ್ಣಿಗೆ ಕಣ್ಣೀರನ್ನೂ ಮನಸ್ಸಿಗೆ ದುಃಖವನ್ನೂ ಯಾವನು ನಿನಗುಂಟುಮಾಡಿದನೋ ಅವನೇ ನಿಜವಾಗಿಯೂ ಗಂಭವಿದ್ಯಾಧರನಾದ ಅರ್ಜುನನಲ್ಲವೇ? ವರ ಎಂದು ತನ್ನ ಮನಸ್ಸನ್ನು ತಿಳಿದು ಹೃದಯಸ್ಪರ್ಶಿಯಾಗಿ ಮಾತನಾಡಿದ ಸಖಿಯ ಮಾತಿಗೆ ಬೇರೆಯೇನನ್ನೂ ಹೇಳಲಾರದೆ ನಾಚಿಕೆಗೊಂಡು ತಲೆಯನ್ನು ಬಗ್ಗಿಸಿ ನೆಲವನ್ನು ಕಾಲಿನಿಂದ ಬರೆಯುತ್ತ ನೀರಿನಲ್ಲಿ ಮುಳುಗಿದವರ ಹಾಗೆ ಸುಮ್ಮನೆ ಬೆವರುತ್ತ ದುಃಖದಿಂದ ನಿಟ್ಟುಸಿರನ್ನು ಬಿಟ್ಟಳು. ೬೫. ಆಗ ಚೂತಲತಿಕೆಯು ಸುಭದ್ರೆಯನ್ನು ಕುರಿತು, ಅಮ್ಮಾಸುಭದ್ರೆ ಮನಸ್ಸಿನಲ್ಲಿರುವುದನ್ನು ಬಾಯಿಬಿಟ್ಟು ಹೇಳದಿದ್ದರೆ ದುಃಖವು ಹೃದಯವನ್ನು ಆವರಿಸುತ್ತದೆ. ಆದುದರಿಂದ ನನಗೆ ಹೀಗೆ ಎಂದು ಹೇಳು; ಹೇಳಿದರೆ ಇಷ್ಟಾರ್ಥವು ಕೈಗೂಡುತ್ತದೆ. ಬಿಸಿಯಾಗಿಯೂ ಬಿರುಸಾಗಿಯೂ ಉಸಿರಾಡುವುದರಿಂದ ತೀರುತ್ತದೆಯೇ? (ನಿಟ್ಟುಸಿರಿನಿಂದ ಇಷ್ಟಾರ್ಥವಾಗುತ್ತದೆಯೇ ?) ೬೬. ಹೇಳು ಎನಲು ನಾನು ನಿನಗೆ ವಿಷಯವನ್ನು ತಿಳಿಸದೆ ಬೇರೆ ಯಾರಿಗೆ ಹೇಳಲಿ, ಈ ದಿನ ಆ ಕೆಟ್ಟ ಸುದ್ದಿಯನ್ನು ಕೇಳಿದೊಡನೆಯೇ ಮನಸ್ಪೂ ಎದೆಯೂ ಹಾಳಾಯಿತು, ಏನು ಹೇಳಲಿ ೬೭. ಎಲೆ ಸಖಿಯೇ ಪಾಣ್ಮರಂಕುಶನೆಂಬ ಬಿರುದುಳ್ಳ ಅರ್ಜುನನ (ಅರಿಕೇಸರಿಯ) ಅಂಕುಶವೆಂಬ ಹೊಳಪೂ ಅವನ ಕಣ್ಣುಗಳ ಬಿಳುಪೂ ಇದ್ದಕ್ಕಿದ್ದ ಹಾಗೆ ಮನಸ್ಸನ್ನು ಕದಡಿ ಕಲಕಿಸುತ್ತವೆ. ಅಷ್ಟಕ್ಕೆ ಬಿಡದೆ ಮನಸ್ಸನ್ನು ವಿಶೇಷವಾಗಿ ಕೆರಳಿಸುತ್ತವೆ.
Page #241
--------------------------------------------------------------------------
________________
೨೩೬ / ಪಂಪಭಾರತಂ
ಚoll
ಮನಸಿಜನಂಬರಲ್ಲ ಪೊಸ ಮಲ್ಲಿಗೆ ತೆಂಕಣ ಗಾಳಿಯೆಂಬಿವಿಂ ತನುಬಲದಿಂದವೆನ್ನನಲೆದಪ್ಪುವವೆನ್ನನೆ ಪೆಟ್ಟುವರ್ಚಿ ಚಂ | ದನ ಬಲದಿಂದಮನ್ನ ನಲೆದಪುವದರ್ಕೆನಗೀಗಳೊಂದಿ ಚಂ ದನ ಬಲಮೊಳ್ಳಿತಾಗಿ ಸಲೆಯಿಲ್ಲದೊಡಾವುದುಮೊಳ್ಳಿಕೆಯ್ದುಮೇ || ೬೮
ವ|| ಎಂದು ಮನದ ಮಲಕಮುಮನೆರ್ದೆಯ ಕುದಿಪಮುಮಂ ಬಗೆಯ ಕುಜೆಪಮುಮಂ ಮೆಯ್ಯ ಬಡತನಮುಮನಯ ತೋಟಿ ನುಡಿದೊಡೆ ರಾಜಹಂಸಿ ಮಾನಸ ಸರೋವರಮನಲ್ಲದೆ ಪಂತನೇಕೆ ಬಯಸುಗುಂ ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಂತನೇಕೆ ಬಯಸುಗುಮೆಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಂಬಟ್ಟಂತೆಂದಳ್
ಮ||
ನನೆಯಂಬಂ ತೆಗೆದೆಚ್ಚನಂಗಜನ ತಪ್ಪೇನಾನುಮಂ ತೋ ಕಾ ನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ ಬೇಡಮ ಬಿನದಂ ತಪ್ಪಲೆ ಕಲ್ಪಿತಂ ಪರಿಯದಾತಂಗೆಂದು ನಿನ್ನೀ ಮನಂ ನಿನಗಾತಂ ದೊರೆ ನೆಟ್ಟನಾದಿ ಪುರುಷಂಗೇಕಕ್ಕೆ ನೀನ್ನಾಣ್ಣು *
ವ
ನೀನಿರ್ದನುಂ ಬಗೆಯಲ್ವೇಡ ನಿನ್ನ ಬಗೆಯಂ ಬಗೆದಂತೆ ತೀರ್ಚುವನೆಂದನೇಕ ಪ್ರಕಾರ ವಚನ ರಚನೆಗಳಿಂದಾಕೆಯ ಮನಮನಾ ನುಡಿಯುತ್ತಿರ್ಪಿನಮಿತ್ತ
೬೮. ಮನ್ಮಥನ ಬಾಣ ಹೊಸಮಲ್ಲಿಗೆ ದಕ್ಷಿಣಗಾಳಿ ಇವು ಪರಸ್ಪರ ಒಟ್ಟುಗೂಡಿ ನನ್ನನ್ನು ಹಿಂಸಿಸುತ್ತವೆ. ಇವು ಚಂದ್ರಬಲದಿಂದ (ಬೆಳದಿಂಗಳಿನಿಂದ) ಮತ್ತಷ್ಟು ಕೊಬ್ಬಿ ನನ್ನನ್ನು ಮತ್ತೂ ಹಿಂಸಿಸುತ್ತವೆ. ಈಗ ನನಗೆ ಚಂದ್ರಬಲವು (ಅದೃಷ್ಟ-ಗ್ರಹಬಲ) ಸರಿಯಾಗಿಲ್ಲದಿದ್ದರೆ ಮತ್ತಾವುದು ತಾನೆ ಒಳ್ಳೆಯದನ್ನು ಮಾಡಬಲ್ಲುದು? ವ!! ಎಂದು ಮನಸ್ಸಿನ ದುಃಖವನ್ನೂ ಹೃದಯದ ಬೇಗೆಯನ್ನೂ ಮನಸ್ಸಿನ ಗುರಿಯನ್ನೂ ಶರೀರದ ಬಡತನವನ್ನೂ ಸ್ಪಷ್ಟವಾಗಿ ತಿಳಿಯುವ ಹಾಗೆ ನಿರ್ದೆಶನ ಮಾಡಿ ನುಡಿಯಲಾಗಿ ಆ ಸಖಿಯು ತನ್ನ ಮನಸ್ಸಿನಲ್ಲಿಯೇ ರಾಜಹಂಸಪಕ್ಷಿಯು ಮಾನಸಸರೋವರವನ್ನಲ್ಲದೆ ಬೇರೆಯದನ್ನೇಕೆ ಅಪೇಕ್ಷಿಸುತ್ತದೆ. ಕಳಹಂಸಗಮನೆಯಾದ ಸುಭದ್ರೆಯು ಸುರತಮಕರಧ್ವಜನಾದ ಅರ್ಜುನನನ್ನಲ್ಲದೆ ಇತರರನ್ನೇಕೆ ಆಶಿಸುತ್ತಾಳೆ? ಎಂದು ಯೋಚಿಸುತ್ತಿದ್ದು ಮನಸ್ಸಿನಲ್ಲಿ ಉತ್ಸಾಹಗೊಂಡು ಸಂತೋಷಪಟ್ಟು ಹೀಗೆಂದಳು೬೯. ಪುಷ್ಪಬಾಣವನ್ನು ಪ್ರಯೋಗಿಸಿದ ತಪ್ಪೇನನ್ನೂ ಪ್ರಕಟವಾಗಿ ತೋರುವಂತೆ ಮಾಡದುದರಿಂದ ಬ್ರಹ್ಮನು ಮನ್ಮಥನನ್ನು ತಪ್ಪಿತಸ್ಥನನ್ನಾಗಿಯೇ ಮಾಡಿದಂತಾಗಿದೆ. ಈ ಆರೋಪಿತವಾದ ವಿನೋದವೂ ತಪ್ಪಾಗುವುದಿಲ್ಲವೇ ? ನಿನ್ನ ಮನಸ್ಸು ಆತನನ್ನು ಬಿಟ್ಟು ಹರಿಯದು. ನಿನಗೆ ಅವನೇ ಸರಿಸಮಾನನಾಗಿರುವವನು. ಆದಿಪುರುಷನಾದ ಅರಿಕೇಸರಿಯ ವಿಷಯದಲ್ಲಿ ಏತಕಕ್ಕ ಲಜ್ಜೆಪಡುತ್ತೀಯೇ? ವ|| ನೀನು ಇದಕ್ಕೆ
* (ಈ ಪದ್ಯದ ಅರ್ಥ ಸ್ಪಷ್ಟವಿಲ್ಲ. ಇದರರ್ಥ ಹೀಗಿದ್ದರೂ ಇರಬಹುದು - ಬ್ರಹ್ಮನು ಸುಭದ್ರೆಗೆ ಅರ್ಜುನನ ವಿಷಯದಲ್ಲಾದ ಮನ್ಮಥಚೇಷ್ಟೆಯನ್ನು ಸ್ವಭಾವಸಹಜವನ್ನಾಗಿ ಮಾಡಿ ಕಲ್ಪಿತವೆನ್ನುವ ಹಾಗೆ ಮಾಡಬಾರದಾಗಿತ್ತು. ಹೇಗಾದರೂ ನಿನಗೆ ಅವನೂ ಅವನಿಗೆ ನೀನೂ ಸಮಾನರಾಗಿರುವವರು.)
Page #242
--------------------------------------------------------------------------
________________
ಚತುರ್ಥಾಶ್ವಾಸಂ | ೨೩೭ ವಿಕ್ರಮಾರ್ಜುನನುಮೋಲಗಂ ಪರೆದಿಂಬಟೆಯಂ ತನ್ನ ಪವಡಿಸುವ ಮಾಡಕೊಡನೊಡ ನೋಲಗಿಸುತ್ತುಂ ಬಂದ ಪಂಡಿತರ್ಕಳುಮನುಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣೋಳೆ ತೊಲೆ ಕಣ್ಮುಚ್ಚದ ತನ್ನ ಜಸದಂತೆ ಪಸರಿಸಿದಚ್ಚವಳಿಂಗಳನಾಕೆಯ ಕಣ್ಣಳ ಬೆಳ್ಳಿನ ತಳರ್ಪೆನುತ್ತುಂ ಪಳ್ಳಿಸಿ ಚಂದ್ರನಂ ನೋಡಿಚಂ।। ಪ್ರಿಯ ಸತಿಯಾನನೇಂದುವೊಳಮಿಂದುವೊಳಂ ಬಿದಿ ಮುನ್ನಮಾವುದಂ ನಯದೊಳೆ ನೋಡಿ ಮಾಡಿದನದಾವುದನೆಂದಡೆಯ ನಾಡೆ ಸಂ | ದಯಮದು ನೀಳ ನೀರಜ ವನಂಗಳ ಚೆಲ್ಲುಗಳೆಂಬುವಾ ಲತಾಂ ಗಿಯ ಕಡೆಗಣ್ಣ ಬೆಳ್ಳುಗಳ ಸಿಲ್ಕಿದ ಸಿಲ್ಕಿನ ಸಿಲ್ಕಿವಲ್ಲವೇ ||
ವ|| ಅದಲ್ಲದೆಯುಂ
evoll ಆ ನವ ಮಾಳಿಕಾ ಕುಸುಮ ಕೋಮಳೆ ರಾಗ ರಸ ಪ್ರಪೂರ್ಣಂ ಚಂ
ದ್ರಾನನ ಲಕ್ಷ್ಮಿ ಯಿಂ ನಭದೊಳಿರ್ದಮೃತಾಂಶುವಿನುದ್ಧಕಾಂತಿ ಸಂ | ತಾನಮನಾವಗಂ ತನಗೆ ಮಾಡಿದಳೆಂದೊಡೆ ತಹಾಂತರೋ ದ್ಯಾನಸರಸ್ಸರೋಜರುಚಿಯೆಂಬುದಿದಾಕೆಯ ಕೆಯ್ಯದನ್ನಿರೇ।
20
20
ಏನೂ ಚಿಂತಿಸಬೇಡ. ನಿನ್ನ ಇಷ್ಟಾರ್ಥವನ್ನು ಇಷ್ಟಾರ್ಥದಂತೆಯೇ ತೀರಿಸುತ್ತೇನೆ ಎಂದು ಅನೇಕ ರೀತಿಯ ಮಾತಿನ ಚಮತ್ಕಾರಗಳಿಂದ ಅವಳ ಮನಸ್ಸು ತೃಪ್ತಿಪಡುವಂತೆ ನುಡಿಯುತ್ತಿರಲು ಈ ಕಡೆ ವಿಕ್ರಮಾರ್ಜುನನಾದ ಅರಿಕೇಸರಿಯು ಸಭೆಯು ವಿಸರ್ಜನೆಯಾದ ಬಳಿಕ ಮಲಗುವ ಮನೆಗೆ ಬಂದನು. ತನ್ನ ಜೊತೆಯಲ್ಲಿಯೇ ಅನುಸರಿಸಿ ಬರುತ್ತಿದ್ದ ಪಂಡಿತರುಗಳನ್ನು ಉಚಿತವಾದ ಸತ್ಕಾರಗಳಿಂದ ವಿಸರ್ಜನೆ ಮಾಡಿದನು. ಸುಭದ್ರೆಯ ಸೌಂದರ್ಯವು ತನ್ನ ಕಣ್ಣಿನಲ್ಲಿ ತನ್ನ ಕಣ್ಣಿನ ಗುಡ್ಡೆಯಂತೆಯೇ ಸುತ್ತಾಡುತ್ತಿರಲು ಕಣ್ಣನ್ನು ಮುಚ್ಚದೆ ತನ್ನ ಯಶಸ್ಸಿನಂತೆ ಪ್ರಸರಿಸಿದ್ದ ಸ್ವಚ್ಛವಾದ ಬೆಳುದಿಂಗಳನ್ನು ಆಕೆಯ ಕಣ್ಣುಗಳ ಬಿಳಿಯ ಬಣ್ಣದ ಚಲನೆಯೆಂದೇ ಭಾವಿಸಿ ಹೆದರಿದನು. ಚಂದ್ರನನ್ನು ನೋಡಿ ೭೦. ಚಂದ್ರನೂ ಪ್ರಿಯಸತಿಯಾದ ಸುಭದ್ರೆಯ ಮುಖಚಂದ್ರನೂ ಒಂದೇ ರೀತಿಯಲ್ಲಿವೆ. ಬ್ರಹ್ಮನು ಇವುಗಳಲ್ಲಿ ಯಾವುದನ್ನು ಮಾದರಿಯಾಗಿ ಮೊದಲು ಮಾಡಿದನು.? ತಿಳಿಯುವುದಕ್ಕೆ ಸಂದೇಹವಾಗಿದೆ. ಕನ್ನೈದಿಲೆಯ ತೋಟದ ಸೌಂದರ್ಯವೆಂಬುದು ಲತಾಂಗಿಯಾದ ಆ ಸುಭದ್ರೆಯ ಕಡೆಗಣ್ಣುಗಳ ಬಿಳಿಯ ಕಾಂತಿಯಲ್ಲಿ ಸಿಕ್ಕಿ ಹೆಣೆದುಕೊಂಡಿರುವ ಬಿಡಿಸಲಾಗದ ಸಿಕ್ಕಲ್ಲವೇ? ವ! ಅದೂ ಅಲ್ಲದೆ-೭೧. ಆ ಹೊಸದಾದ ಪುಷ್ಪಮಾಲಿಕೆಯ ಹೂವಿನಂತೆ ಕೋಮಲವಾಗಿರುವ ಆ ಸುಭದ್ರೆಯು ತನ್ನ ಪ್ರೀತಿರಸದಿಂದ (ಕೆಂಪು ಬಣ್ಣದಿಂದ) ತುಂಬಿದ ಮುಖಚಂದ್ರನ ಕಾಂತಿಯಿಂದ ಆಕಾಶದಲ್ಲಿರುವ ಚಂದ್ರನ ಉತ್ತಮವಾದ ಕಾಂತಿಯ ಸಮೂಹವನ್ನು ತನ್ನದ್ದನ್ನಾಗಿ ಮಾಡಿಕೊಂಡಿದ್ದಾಳೆ ಎನ್ನುವಾಗ ಅವಳಿರುವ ಮನೆಯ ಉದ್ಯಾನದಲ್ಲಿರುವ ಕೊಳಗಳ ತಾವರೆಯ ಕಾಂತಿಯು ಆಕೆಯ
Page #243
--------------------------------------------------------------------------
________________
೨೩೮ / ಪಂಪಭಾರತಂ
ವ|| ಎಂದು ತನ್ನ ಮನಮುಮನರ್ದಯುಮನುಜ ಸೆಳೆವಿಡಿದಿರ್ದಪೂರ್ವ ರೂಪಯ ರೂಪುಮಂ ಮನದೊಳೆ, ಬಗೆದು ಭಾವಿಸಿ ಮತ್ತಮಿಂತೆಂದಂಚಂ|| ಕುಸುರಿಯ ರೂಪನೆಯ ಪೊಗಬಲ್ಕಚಿಯಂ ನಡು ಪುರ್ವು ಬಾಸೆ ಕ
ಸಗೆಯನುಂಟುಮಾ ಜಘನಂ ಬೆಳರ್ವಾಯ್ ಮೋಲೆಗಳ ಕದ೦ಪುಗು | ರ್ವಸಿಆನೆ ನೋಡ ಮೊಕ್ಕಳಮದಾರ್ ನಡೆ ನೋಡಮಂತುಮಿಂತುಂ ಮೂ ಅಸಿಯವು ಮೂಟು ದೊಡ್ಡಿದುವು ಮೂಡ ತಳ್ಳಿದುವೆಂಬುಜಾಕ್ಷಿಯಾ ||೭೨ ಕಂ| ಮೃಗಶಿಶುನೇತ್ರಯ ನಡುವೆರ್ದ
ಯುಗುರ್ಗಳ್ ಕರಮಸಿದು ಕನಕ ಕಾಂಚೀ ನಿನದ | ಪ್ರಗಣಿತಮಗಲ್ಲ ನಲ್ಗಳ
ಜಗನಮಿದನ್ನೆರ್ದೆಯನೆಂತು ಪೊಕ್ಕಳಿಪುವುದೋ || ವಗ ಎಂದು ಸೈರಿಸದೆಮನ ಮೊಲೆಗಳ್ ಬಟ್ಟಿದುವಾಗಿ ಕರ್ಗಿದ ಕುರುಳ್ ಕೊಂಕಾಗಿ ಕಣೆ ನೀ
ಛಲರ್ಗಳ್ ಚಪಳಂಗಳಾಗಿ ಜಘನಂ ಕಾಂಚೀ ಕಳಾಪ ಪ್ರಭೋ | ಜೈಲಮುಡ್ಡ ಪ್ರಮುಮಾಗಿ ತಾಮಲೆಗೆ ಮಧ್ಯಸ್ಟಂಗಳಾಗಿರ್ದುವ
ಕಲೆಯ ತಕ್ಕುದೆ ಕೆನ್ನಮಾ ತ್ರಿವಳಿಗಳೆನ್ನಂ ಸರೋಜಾಕ್ಷಿಯಾ || ೭೪ ಅಧೀನದಲ್ಲಿರುವ ವಸ್ತು ಎಂದು ಹೇಳಲಾಗುವುದಿಲ್ಲವೇ? ವ| ಎಂದು ತನ್ನ ಮನಸ್ಸನ್ನೂ ಹೃದಯವನ್ನೂ ಪೂರ್ಣವಾಗಿ ಸೆರೆಹಿಡಿದಿದ್ದ ಅಪೂರ್ವ ಸೌಂದರ್ಯದಿಂದ ಕೂಡಿದ ಆಕೆಯ ರೂಪವನ್ನು ತನ್ನ ಮನಸ್ಸಿನಲ್ಲಿ ಯೋಚಿಸಿಕೊಂಡು ಪುನಃ ಭಾವಿಸಿ ಹೀಗೆಂದನು-೭೨. ಹೂವಿನ ಸೂಕ್ಷ್ಮ ಕೇಸರಗಳಂತಿರುವ ಅವಳ ಸೌಂದರ್ಯವನ್ನು ಹೊಗಳಲು ನನಗೆ ಶಕ್ಯವಿಲ್ಲ. ಇಷ್ಟುಮಾತ್ರ ಹೇಳಬಲ್ಲೆ : ಅವಳ ಸೊಂಟ, ಹುಬ್ಬು, ಹೊಟ್ಟೆಯ ಮೇಲಿನ ಕೂದಲಿನ ಸಾಲು, ಕಣ್ಣು, ಹಬ್ಬವನ್ನುಂಟುಮಾಡುವ ಪಿತ್ರೆಗಳು, ಬೆಳ್ಳಗಿರುವ ಬಾಯಿ, ಮೊಲೆಗಳು, ಕೆನ್ನೆ, ಉಗುರು, ಹೊಟ್ಟೆ ಇವುಗಳನ್ನು ಯಾರಾದರೂ ದೃಷ್ಟಿಸಿ ನೋಡಿದರೂ ಕಮಲಾಕ್ಷಿಯಾದ ಆ ಸುಭದ್ರೆಯ (ಮೇಲೆ ನಿರೂಪಿಸಿರುವ) ಅಂಗಗಳಲ್ಲಿ ಮೂರು ಕೃಶವಾದುವು, ಮೂರು ದಪ್ಪವಾದುವು, ಮೂರು ತೆಳುವಾದುವು. ೭೩. ಹುಲ್ಲೆಯ ಮರಿಯ ಕಣ್ಣುಗಳಂತೆ ಕಣ್ಣುಳ್ಳ ಸುಭದ್ರೆಯ ಸೊಂಟ, ಎದೆ, ಉಗುರುಗಳು ವಿಶೇಷ ತೆಳುವಾಗಿರುವುವು. ಚಿನ್ನದ ಡಾಬಿನ ಸದ್ದಿನ ಸಮೂಹವಿಲ್ಲದ ಪ್ರಿಯೆಯ ಜಘನಗಳು ನನ್ನ ಹೃದಯವನ್ನು ಪ್ರವೇಶಿಸಿ ಪ್ರೀತಿಯನ್ನುಂಟುಮಾಡುತ್ತಿವೆಯೋ? ವll ಎಂಬುದಾಗಿ ಸೈರಿಸಲಾರದೆ-೭೪. ಅವಳ ದುಂಡುಮೊಲೆಗಳು ಕಪ್ಪಾದ ಕುರುಳುಗಳು ಕಣ್ಣಿನವರೆಗೆ ಕೊಂಕಾಗಿಯೂ ಉದ್ದವಾಗಿಯೂ ಬೆಳೆದು ಹೂವಿನಂತಿರುವ ಚಂಚಲವಾದ ಕಣ್ಣುಗಳು ಡಾಬಿನ ಕಾಂತಿಯ ಸಮೂಹದಿಂದ ಕೊಬ್ಬಿ ಬೆಳೆದ ಜಘನಗಳು ನನ್ನನ್ನು ಪೀಡಿಸುವುದಂತಿರಲಿ; ಕಮಲದಂತಿರುವ ಆ ಸುಭದ್ರೆಯ ಮಧ್ಯಪ್ರದೇಶದ ತ್ರಿವಳಿಗಳು ನನ್ನ ಮನಸ್ಸನ್ನು ವಿಶೇಷವಾಗಿ ಕಲಕಲು ಯೋಗ್ಯವಾಗಿವೆ. ಎಂಬುದಾಗಿ ಸ್ವಲ್ಪ ಹೊತ್ತು
Page #244
--------------------------------------------------------------------------
________________
ಚತುರ್ಥಾಶ್ವಾಸಂ | ೨೩೯ ವll ಎಂದು ಕಿವಿದುಂ ಬೇಗಮಳೆಮರುಳಂತು ಪಲುಂಬಿ ಪಂಬಲಿಸಿ ಮತ್ತಮಾಕೆಯ ಹಾವ ಭಾವ ವಿಳಾಸ ವಿಭ್ರಮ ಕಟಾಕ್ಷೇಕ್ಷಂಗಳ ಮನಮನೊನಲಿಸೆಯುಮರ್ದಯಂ ಕನಲಿಸೆಯು ಮನಂಗ ಮತಂಗಜ ಕೋಳಾಹಳಾಕುಳೀಕೃತಾಂತರಂಗನಾಗಿಮ! ಜಗಮಂ ಮಾಡಿದ ಪದ್ಮಜಂ ಪಡೆದನಿ ಕನ್ನೆಯಂ ಮಾಡುವ
ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಮಿಮ್ಮಾವು ಮ | ಲಿಗೆಯಂದಿಂತಿವನಂದಮರ್ದಿನೊಳ್ ತಾನಚಿಯಿಂ ತೋಯ್ದು ಮ ಲ್ಯಗೆ ಸಂದಂಗಜನೆಂಬಜಂ ಪಡೆದನಂತಾ ಕಾಂತಿಯಿಂ ಕಾಂತೆಯಂ || ೭೫
ವ|| ಅಂತಲಸ್ಪಂದಾ ಕಾಂತಯಂ ವಿಧಾತ್ರಂ ಮಾಡುವಂದು ಕೊಡಗಿನ ಕೇಸರಂಗಳನತರಸದೊಳಂ ಶೃಂಗಾರರಸದೊಳಂ ಭಾವಿಸಿ ರಸಸಿದ್ದಮಪ್ಪ ಪೊನ್ನ ಲತೆಯ ಮಯುಮಂ ನೀಲದ ತಲೆನವಿರುಮಂ ಪವಳದ ಬಾಯ್ದೆಯುಮಂ ಮುತ್ತಿನ ಪಲ್ಲುಮಂ ರಾಜಾವರ್ತದ ಸೆಳುಗುರುಮಂ ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ ಸೀತೆಯ ಸೈರಣೆಯುಮನದ್ರಿಜಾತೆಯ ಶೃಂಗಾರಮುಮಂ ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವನಯ್ಯಲರಂಬಿನ ಶಕ್ತಿಗಳುಮನೋಂದುಮಾಡಿ ಲೋಕಮಲ್ಲಂ ಮರುಳಾಡಲೆಂದು ಪಣಾಡಿದನಕ್ಕುಮೆಂದು ಮತ್ತಮಾಕೆಯ ನೋಡಿದ ನೋಟಮಂ ಭಾವಿಸಿ
ಜ್ಞಾನಶೂನ್ಯನಾದಂತೆ ಹಲುಬಿ ಹಂಬಲಿಸಿ ಪುನಃ ಹಾವ, ಭಾವ, ವಿಳಾಸ, ವಿಭ್ರಮ, ಕಟಾಕ್ಷ ದೃಷ್ಟಿಗಳು ಮನಸ್ಸನ್ನು ಒಲಿಸಿಯೂ ಎದೆಯನ್ನು ಕಲಕಿಯೂ ಮನ್ಮಥನೆಂಬ ಆನೆಯಿಂದ ಕೋಳಾಹಳ ಮಾಡಲ್ಪಟ್ಟ ಮನಸ್ಸುಳ್ಳವನಾಗಿ ೭೫. ಲೋಕವನ್ನೇ ಸೃಷ್ಟಿಸಿದ ಬ್ರಹ್ಮನು ಈ ಕನೈಯನ್ನು ಸೃಷ್ಟಿಸಿರಲಾರ; ಇಷ್ಟು ಕಾಂತಿಯುಕ್ತಳಾದ ಈ ಕನ್ನೆಯನ್ನು ಮನ್ಮಥನೆಂಬ ಬ್ರಹ್ಮನು ಸೃಷ್ಟಿಸುವಾಗ ಚಂದ್ರ, ಮಲಯಮಾರುತ, ಶ್ರೀಗಂಧ, ತಾವರೆ, ಸಿಹಿಮಾವು, ಮಲ್ಲಿಗೆ ಇವುಗಳನ್ನು ತನಗೆ ತೃಪ್ತಿಯಾಗುವವರೆಗೆ ಒಟ್ಟುಗೂಡಿಸಿ, ಪ್ರೀತಿಯಿಂದ ಅಮೃತದಲ್ಲಿ ನೆನೆಯಿಸಿ ಅವಳನ್ನು ಸೃಷ್ಟಿಸಿರಬೇಕು. ವ ಹಾಗಿಲ್ಲದ ಪಕ್ಷದಲ್ಲಿ ಈ ಕಾಂತೆಯನ್ನು ಬ್ರಹ್ಮನು ಮಾಡುವರೆ ಬೆಟ್ಟದಾವರೆಯ ಎಸಳುಗಳನ್ನು ಅಮೃತರಸದಲ್ಲಿಯೂ ಶೃಂಗಾರರಸದಲ್ಲಿಯೂ ನೆನೆಯಿಸಿ ರಸವಿದ್ಯೆಯಿಂದ ಸಿದ್ಧವಾಗಿರುವ ಚಿನ್ನದ ಬಳ್ಳಿಯಂತಿರುವ ಮೈಯನ್ನೂ ಕಪ್ಪಗಿರುವ ತಲೆಗೂದಲನ್ನೂ ಹವಳದಂತಿರುವ ತುಟಿಯನ್ನು ಮುತ್ತಿನಂತಿರುವ ಹಲ್ಲನ್ನೂ ಎಳೆನೀಲದಂತಿರುವ ತೆಳುವಾದ ಉಗುರುಗಳನ್ನೂ ಧೂಪದ ವಾಸನೆಯಿಂದ ಕೂಡಿದ ಉಸಿರನ್ನೂ ಸೀತಾದೇವಿಯ ಸಹನ ಸ್ವಭಾವವನ್ನೂ ಗೌರೀದೇವಿಯ ಶೃಂಗಾರವನ್ನೂ ಮನ್ಮಥನ ಮನೋಮಥನ (ಮನಸ್ಸನ್ನು ಕಲಕುವಿಕೆ) ಮದನ (ಕಾಮೋದ್ರೇಕವನ್ನುಂಟುಮಾಡುವಿಕೆ) ಮೋಹನ (ಪರವಶವನ್ನಾಗಿಸುವಿಕೆ) ಸಂತಾಪನ (ದುಃಖವನ್ನುಂಟುಮಾಡುವಿಕೆ) ವಶೀಕರಣ (ತನ್ನದನ್ನಾಗಿ ಮಾಡಿಕೊಳ್ಳುವಿಕೆ) ಎಂಬ ಅಯ್ತು ಪುಷ್ಪಬಾಣಗಳ ಶಕ್ತಿಗಳನ್ನು ಒಂದುಗೂಡಿಸಿ ಲೋಕವನ್ನೆಲ್ಲ ಹುಚ್ಚು ಮಾಡುವುದಕ್ಕೋಸ್ಕರ ಮೂರ್ತಿಯನ್ನಾಗಿ ಮಾಡಿರಬೇಕು ಎಂದು ಭಾವಿಸಿ ಪುನಃ ಆಕೆಯ ನೋಟದ ನೋಟವನ್ನು ಮನಸ್ಸಿನಲ್ಲಿ
Page #245
--------------------------------------------------------------------------
________________
೨೪೦ / ಪಂಪಭಾರತಂ ಚಂll ನೆಗೊಳೆ ಗಾಡಿ ನೋಬ್ಬ ಬಗೆ ಬರ್ಪುದುಮಾನ ದಲಂದು ದಂತಿಯಂ
ನಿಟಿಸಿ ಮರಲ್ಲು ನೋಡುವುದುಮೆನ್ನುಮನಾ ಸತಿ ಸೋಲದತ್ತ ಮ | ತೆಅಗಿ ಬಬಿಲ್ಲು ಜೋಲ್ವಳಿಪಿ ನೋಡಿದಳಂತೆಲೆ ಸತ್ತ ಪೊತ್ತ ಕ
ಇಳೆಯದ ಬೆಳ್ಳನಿನದೆಂ ಧವಳಾಕ್ಷಿಯ ನೋಟದಂದಮಂ ೭೬ ಹರಿಣೀಪುತ || ದಳಿತ ಕಮಲಚ್ಚಾಯಾಟೋಪಂ ಮನೋಜ ರಸ ಪ್ರಭಾ
ವಳಯ ನಿಳಯಂ, ಪೋದದ್ದೂ ವಿಭ್ರಮಂ ಮುಕುಳೀಕೃತಂ || ಲಳಿತ ಮಧುರಂ ಲಜ್ಞಾಳಂ ಸರಾಕುಳಿತಂ ಮನಂ
ದಳಿತಮಪಸನ್ನುಗ್ಗಂ ಸಿಗ್ನಂ ವಿಲೋಕನಮೋಪಳಾ | ಚಂt ಉಡಮೊಗಮೆಂಬ ತಾವರೆಯ ನೀಳ್ಗಳೊಳ್ ಮಣಿದುಂಬಿ ಪಾಲ್ಗೊಡಂ
ಬಡನೊಳಕೊಂಡು ಕಣಲರ ಬೆಳುಗಳಾಲಿಯ ಕಟ್ಟಿನೊಳ್ ಪೊದ | ಳೊಡನೊಡನೋಡುವಟ್ಟೆನಗೆ ಸಂತಸಮಂ ಮಜುಕಕ್ಕೆ ಮಾಗ್ರೂಡೀ
ನಡೆಗಿಡ ಸತ್ವಮಂ ತಮಮುಮಂ ಕಡೆಗಣೋಳೆ ಕಂಡೆನೋಪಳಾll ೭೮ ಚಂll ಒದವಿದ ಬೇಟವನ್ನೊಡೆನಗಳಗಂ ಬಗೆವೇಡನ್ನ ಮೇ
ಳದ ಕೆಳೆಯರ್ಕಳಿಲ್ಲವಳುಮಪ್ರೊಡ ಜನಮತ್ತೆ ನಾಣ ಕಾ | ಪದು ಪಿರಿದೋತು ಮಾತಡಕಲೊಂದಿದ ದೂದವರಿಲ್ಲ ನೆಟ್ಟನ ಪುದಳನದಿಂತರರುದಿತಂ ವಲವನ್ನೊಲವಿಂದುವಯಾ || ೭೯
- ೭೭
ಭಾವಿಸಿಕೊಂಡು ೭೬. ಅವಳ ಸೌಂದರ್ಯವು ನನ್ನನ್ನು ಪೂರ್ಣವಾಗಿ ಆಕರ್ಷಿಸಿತು. ನಾನೇ ಆ ಆನೆಯನ್ನು ನಿಲ್ಲಿಸಿ (?) ಪುನಃ ಅವಳನ್ನು ನೋಡಿದೆನು. ಆ ಸ್ತ್ರೀಯು ನನ್ನನ್ನೂ ಪ್ರೇಮದ ಕಡೆಗೆ ಬಾಗಿಸಿ ತಾನೂ ನನಗೆ ಸೋತು ಪ್ರೀತಿಯಿಂದ ನೋಡಿದಳು. ಬೆಳ್ಳಗಿರುವ ಕಣ್ಣುಳ್ಳ ಆ ಸುಭದ್ರೆಯ ದೃಷ್ಟಿಯ ಮರ್ಮವನ್ನು ತಿಳಿಯದ ಜ್ಞಾನ ಶೂನ್ಯನಾದ ಬೆಪ್ಪನು ನಾನಲ್ಲ, ೭೭. ಪ್ರಿಯಳಾದ ಸುಭದ್ರೆಯ ನೋಟವು ಅರಳಿದ ಕಮಲದ ಬಣ್ಣವುಳ್ಳದ್ದು; ಪ್ರೇಮರಸದ ಕಾಂತಿಸಮೂಹಕ್ಕೆ ಆವಾಸಸ್ಥಾನವಾದುದು. ಎತ್ತಿದ ಹುಬ್ಬಿನ ವೈಭವವುಳ್ಳದ್ದು; ಮೊಗ್ಗಾಗಿ ಮಾಡಲ್ಪಟ್ಟುದು; ಸುಂದರವೂ ಮಧುರವೂ ಆದುದು; ಲಜ್ಜೆಯಲ್ಲಿ ಆಸಕ್ತವಾದುದು; ಮನ್ಮಥನಿಂದ ಬಾಧಿಸಲ್ಪಟ್ಟುದು; ಮನಸ್ಸನ್ನು ಸೀಳಿರುವುದು; ಮುಗ್ಧತೆಯಿಲ್ಲದುದು (ಸರಳವಾದುದು) ನಯವಾದುದು. ೭೮. ಬಾಗೆಯ ನಕ್ಷತ್ರದ ಮುಖ ಎಂಬಂತಿರುವ ಅವಳ ಮುಖವೆಂಬ ತಾವರೆಯ ದೀರ್ಘವಾದ ಎಸಳುಗಳಲ್ಲಿ ಮರಿದುಂಬಿಯು ಹೋಗಿ ಸೇರಿ ಸಮನ್ವಯ ಗೊಂಡಿರುವಂತೆ ಹೂವಿನಂತಿರುವ ಅವಳ ಕಣ್ಣಿನ ಬಿಳಿಯ ಬಣ್ಣವು ಗುಡ್ಡೆಯ ಕಪ್ಪು ಬಣ್ಣದಲ್ಲಿ ಹೊಂದಿಕೊಂಡು ಅವಳನ್ನೇ ನೋಡುತ್ತಿರುವ ನನಗೆ ಸಂತೋಷವನ್ನೂ ದುಃಖವನ್ನೂ ಸ್ಥಿರೀಕರಿಸಿರುವುದರಿಂದ ನಾನು ಅವಳ ಕಡೆಗಣ್ಣಿನಲ್ಲಿ ಸತ್ವತಮೋಗುಣ ಗಳನ್ನು ಏಕತ್ರ ನೋಡುತ್ತಿದ್ದೇನೆ.* ೭೯. ನನಗೆ ಈಗ ಉಂಟಾಗಿರುವ
* (ಈ ಪದ್ಯದ ಅನ್ವಯವೂ ಅರ್ಥವೂ ಕ್ಲಿಷ್ಟವಾಗಿದೆ)
Page #246
--------------------------------------------------------------------------
________________
ಚತುರ್ಥಾಶ್ವಾಸಂ | ೨೪೧ ವಗೆ ಎಂದಿಂತು ನಲ್ಗಳಂ ನೆನೆದು ಕಣ್ಣಾಪನೆ ಕಾದು ಚಿಂತಾಸಮುದ್ರಾಂತರ ಪರಿವೃತನಾಗಿ ಸೈರಿಸಲಾಗಿದೆ ಪೋಬಲಂ ತೋಲಲ್ಲು ನೋಟ್ಟಿ ಬಗೆದಂದು ರಾಜಮಂದಿರದಿಂ ಪೋಲಮಟ್ಟು ಬರೆ ತನ್ನಂ ಕಾಣಲೊಡಮಣಿದು ನುಡಿಯಿಸಿ ಮೆಚ್ಚಿ ಮೇಳದ ನಾಗರಿಕ ವಿಟ ವಿದೂಷಕ ಪೀಠಮರ್ದಕರ್ಕಳ್ವರಸು ಕಾಮದೇವನೋಲಗಕ್ಕೆ ಬರ್ಪಂತೆ ಸೂಳೆಗೇರಿಯೊಳಗನೆ ಬರ್ಪುದುಮಲ್ಲಿ
ಮರ ಮೃಗಭೂಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊತ್ತು ಮ *
ಜ್ಜಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸೈದ ಬಿಂ | ದುಗಳೊಳ್ ನಾಂದು ಕುರುಳಳೊಳ್ ಸುಟಿದು ಮುಂದೊಂದಿರ್ದ ಸೌಭಾಗ್ಯ ಘಂ ಟೆಗಳೊಂದಿಂಚರದೊಳ್ ಪಳಂಚಿ ಸುದತ್ತಂದೊಂದು ಮಂದಾನಿಳಂ || ೮೦
ವ|| ಆಗಳಾಜುಂ ಋತುಗಳ ಪೂಗಳನೊಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವ ಮಾಡಿದೋಜನ ಸಾಲೆಯರ್ಹಂತಿರ್ದ ಪೂವಿನ ಸಂತೆಯೊಳ್ ವಸಂತಕಾಂತೆಯರಂತೆ
ವll ಎತ್ತಿದ ತೋಳ ಮೊತ್ತಮೊದಲಂಗಜ ಲಂಪಟ ನಿದ್ದೆಗೆತ್ತಿದಂ
ತತ್ತಮಪೂರ್ವಮಾಗೆ ಪೊಸವಾಸಿಗಮಂಗಜ ಚಕ್ರವರ್ತಿಗಂ | ದೆತ್ತಿದ ಮಿಾನಕೇತನಮನೊತ್ತರಿಸುತ್ತಿರೆ ಚಲ್ಲವಾಡಿ ಪೂ ವೆತ್ತುವ ಮಾಲೆಗಾರ್ತಿಯರನೆಂದರಿಕೇಸರಿ ನಿಂದು ನೋಡಿದಂ ||
೮೧
ಪ್ರೇಮವಾದರೋ ಸಹಿಸಲಶಕ್ಯವಾದುದು. ಮನಸ್ಸನ್ನವಳಿಗೆ ತಿಳಿಸೋಣವೆಂದರೆ ಆಪ್ತ ಸ್ನೇಹಿತರಿಲ್ಲ: ಸುಭದ್ರೆಯಾದರೋ ಯವ್ವನದಿಂದ ಮದಿಸಿರುವವಳು; ಅವಳಿಗೆ ಲಜ್ಜೆಯ ತಡೆ ವಿಶೇಷವಾಗಿದೆ. ಪ್ರೀತಿಸಿ ಸಂವಾದಸರಣಿಯನ್ನುಂಟು ಮಾಡೋಣವೆಂದರೆ ಮಧ್ಯವರ್ತಿಗಳಾದ ಸಖಿಯರಿಲ್ಲ. ಆದುದರಿಂದ ಸುಭದ್ರೆಗೆ ಸಂಬಂಧಿಸಿದ ನನ್ನ ಪ್ರೇಮವು ನಿಜವಾಗಿಯೂ ಕಾಡಿನಲ್ಲಿ ಅತ್ತಂತೆಯೇ ಆಗಿದೆ. ವ| ಹೀಗೆ ಅರ್ಜುನನು ಪ್ರಿಯಳನ್ನು ಜ್ಞಾಪಿಸಿಕೊಂಡು ಅವಳು ತನ್ನನ್ನು ನೋಡುವುದನ್ನು ನಿರೀಕ್ಷಿಸುತ್ತಾ ಚಿಂತಾಸಮುದ್ರದ ಮಧ್ಯದಿಂದ ಸುತ್ತುವರಿಯಲ್ಪಟ್ಟವನಾಗಿ ಸಹಿಸಲಾರದೆ (ಮನಃಶಾಂತಿಗಾಗಿ) ನಗರವನ್ನಾದರೂ ಸುತ್ತ ನೋಡಿ ಬರೋಣವೆಂದು ಮನಸ್ಸು ಮಾಡಿದನು. ಅರಮನೆಯಿಂದ ಹೊರಟು ಬರುತ್ತಿದ್ದಂತೆಯೇ ತನ್ನನ್ನು ಕಂಡು ತಕ್ಷಣವೇ ಗುರುತಿಸಿ ಮಾತನಾಡಿ ಮೆಚ್ಚಿದ ಜೊತೆಗಾರರಾದ ನಾಗರಿಕ (ಜಾಣನಾದ ಪಟ್ಟಣದವನು) ವಿಟ (ಸ್ತ್ರೀಲೋಲರಾದ ರಾಜಕುಮಾರರ ಸ್ನೇಹಿತ) ವಿದೂಷಕ (ಹಾಸ್ಯಗಾರ) ಪೀಠಮರ್ದಕ (ಸ್ತ್ರೀ ಸಂಪಾದನೆಯಲ್ಲಿ ರಾಜಕುಮಾರರಿಗೆ ಸಹಾಯ ಮಾಡುವವನು) ರೊಡಗೂಡಿ ಮನ್ಮಥನ ಸಭಾಸ್ಥಾನಕ್ಕೆ ಬರುವಂತೆ ಸೂಳೆಗೇರಿ ಯೊಳಭಾಗದಲ್ಲಿ ಬಂದನು. ೮೦. ಅಲ್ಲಿಯ ಸುಂದರ ಸ್ತ್ರೀಯರ ತುರುಬಿನಲ್ಲಿ ವಿಶೇಷ ವಾಗಿ ಲೇಪಿಸಿಕೊಂಡಿದ್ದ ಕಸ್ತೂರಿಯ ಕಂಪನ್ನು ಧರಿಸಿ ಮಲ್ಲಿಗೆಯ ಹೂವಿನ ಸುಗಂಧ ದಲ್ಲಿ ಸೇರಿಕೊಂಡು ಧೂಪಗಂಧದಲ್ಲಿ ವ್ಯಾಪಿಸಿ ಆ ಸ್ತ್ರೀಯರ ರತಿಕ್ರೀಡೆಯಿಂದಾದ ಬೆವರ ಹನಿಯಲ್ಲಿ ತೊಯ್ದು ಮುಂಗುರುಳುಗಳಲ್ಲಿ ಸುತ್ತಾಡಿ ವೇಶ್ಯಾಗೃಹದ ಮುಂದೆ ಕಟ್ಟಿದ ಇಂಪಾದ ಘಂಟಾನಾದವನ್ನು ತಗುಲಿ ಒಂದು ಮಂದಮಾರುತವು
Page #247
--------------------------------------------------------------------------
________________
೨೪೨ / ಪಂಪಭಾರತಂ
ವ|| ನೋಡಿ ನಾಡಾಡಿಯಲ್ಲದಾಕೆಗಳ ಜೋಡೆಗೆಝಂಗಳಂ ಕಂಡಿದು ಮನೆಯಾಣನಂ ಮಾರುವದಮಲ್ಲದೆ ಪೂ ಮಾರುವದಮಲ್ಲೊಂದು ಮುಗುಳಗೆ ನಗುತುಂ ಬರ್ಪನೊಂದೆಡೆಯೊಳ್ ಮನೆಯಾನ ಕಣ್ಣೆಮೆಯ ಕಾಂಡಪಟಮಾಗೆಯುಂ ಬಗೆಯಾಣನ ಕಣ್ಣಿಮೆಯ ದೂದವಿಯಾಗಿಯುಂ ಬಗೆದೆಡೆಯನಲ್ಲೂ ಬಗೆದ ಬಗೆಯಂ ಬಗೆದಂತ ತೀರ್ಚಿ ಪೋಪ ಜೋಡೆಯರಂ ಕಂಡು ವಿಕ್ರಮಾರ್ಜುನನಿಂತೆಂದಂ
ಮ||
611
ಕುಜಪಂ ಪುರ್ವಿನ ಜರ್ವ ತೋ ಬಗೆಯಂ ಕಣ್ಣನ್ನೆಗಳ ಪೇಟೆ ತ ನೈಕಂ ತನ್ನ ಮನಕ್ಕೆ ಕೂಡ ಕೆಲಕಂ ಗಂಡಂಗಮೊಳಂ ಕರಂ | ಮೆವಾ ಪ್ರೌಢಯ ಜೋಡೆಯಕ್ಕು ಮಡೆಯೊಳ್ ದೂಂಟಿಂದ ದೂಂಟಿಂಗೆ ಪ ರ್ವಂ ಪೊಯ್ಲಿ ಕೆಲಕ್ಕೆ ನಾಣ್ನೆ ತಲೆಗುತ್ತಿರ್ಪಾಕೆಯೇಂ ಜೋಡೆಯೇ ||೮೨
ಕೂರಿದುವಪ್ಪ ಕಣಲರ್ಗಳಳ್ಳೆರ್ದೆಯೊಳ್ ತಡಮಾಡೆ ತಾಮ ಕಣ್ ಪೇರಿಸೆ ಪುರ್ವು ನಾಲಗೆವೊಲಾಗ ಮನಂಬುಗಿಸ ಬಲ್ಲೊಡಾ | ಜಾರೆಯ ಜಾರ ಪಾನೆ ಕರಂ ಪಿರಿದುಂ ಗಱಪುತ್ತುಮಿರ್ಪಳಂ ಸಾರಿಕೆಯೆಂಬರಲ್ಲದಭಿಸಾರಿಕೆಯೆಂಬರೆ ಬುದ್ಧಿಯುಳ್ಳವರ್ 11
೮೩
ಸುಳಿದಾಡಿತು. ವ|| ಆಗ ಆರು ಋತುಗಳ ಹೂವುಗಳನ್ನೂ ಒಟ್ಟುಗೂಡಿಸಿ ತನ್ನ ಪುಷ್ಪಬಾಣಗಳನ್ನು ಸಿದ್ಧಪಡಿಸಬೇಕೆಂದು ಕಾಮದೇವನು ಮಾಡಿದ ಅಕ್ಕಸಾಲೆಯ ಮನೆಯ ಹಾಗಿದ್ದ ಹೂವಿನ ಸಂತೆಯು ಕಂಡಿತು. ಹೂವಿನ ಸಮೂಹದ ಮಧ್ಯೆ ಇರುವ ವಸಂತ ಋತುವಿನ ಅಧಿದೇವತೆಯಂತೆ ಮಾಲೆಗಾತಿಯರು ೮೧. ಎತ್ತಿದ ಬಾಹುಮೂಲವು ಮನ್ಮಥನು ಗಾಳಿಪಟವಾಡಿಸುವಂತೆ ಆಡಿಸಲು ಎತ್ತಿದ ಅಪೂರ್ವ ಸೌಂದರ್ಯದಿಂದ ಕೂಡಿರಲು ಹೊಸದಾಗಿ ಕಟ್ಟಿದ ಹಾರವು ಮನ್ಮಥ ಚಕ್ರವರ್ತಿ ಗೆಂದೆತ್ತಿದ ಮೀನಧ್ವಜವನ್ನು ತಿರಸ್ಕರಿಸುತ್ತಿರಲು ಸರಸಸಲ್ಲಾಪಗಳಿಂದ ಹೂವನ್ನು ಎತ್ತಿ ತೋರಿಸುತ್ತಿರುವ ಅವರನ್ನು ಅರಿಕೇಸರಿಯು ನಿಂತು ನೋಡಿದನು. ವ|| ಸಾಮಾನ್ಯ ರಲ್ಲದ ಅವರ ಜಾರಕೃತ್ಯವನ್ನು ಕಂಡು ಇದು ಮನೆಯ ಗಂಡನನ್ನು ಮಾರುವ ರೀತಿಯಲ್ಲದೆ ಹೂವನ್ನು ಮಾರುವ ರೀತಿಯಲ್ಲವೆಂದು ಹುಸಿನಗೆಯನ್ನು ನಗುತ್ತ ಮುಂದೆ ನಡೆದನು. ಒಂದು ಕಡೆಯಲ್ಲಿ ಮನೆಯೊಡೆಯನ ಕಣ್ಣರೆಪ್ಪೆಯನ್ನು ತೆರೆಯನ್ನಾಗಿಯೂ ಮನದೊಲವಿನ ಮಿಂಡನ ಕಣ್ಣ ದೃಷ್ಟಿಯನ್ನೇ ಸಖಿಯನ್ನಾಗಿಯೂ ಭಾವಿಸಿಕೊಂಡು ಸಂಕೇತಸ್ಥಳವನ್ನು ಸೇರಿ ಇಷ್ಟಾರ್ಥವನ್ನು ಯೋಚಿಸಿದಂತೆಯೇ ತೀರಿಸಿಕೊಂಡು ಹೋಗುವ ಜಾರೆಯರನ್ನು ಕಂಡು ವಿಕ್ರಮಾರ್ಜುನನು ಹೀಗೆಂದನು೮೨. ತಮ್ಮ ಸಂಕೇತಸ್ಥಳವನ್ನು ಹುಬ್ಬುಹಾರಿಸು ವುದರಿಂದಲೂ ತಮ್ಮ ಮನಸ್ಸಿನ ಬಗೆಯನ್ನು (ಇಷ್ಟಾರ್ಥವನ್ನು ಕಣ್ಣಿನ ಸನ್ನೆಗಳಿಂದಲೂ ಪ್ರಕಾಶಪಡಿಸುತ್ತ ತನ್ನ ಪ್ರೀತಿಯು ತನ್ನ ಮನಸ್ಸಿಗೆ ತೃಪ್ತಿಯಾಗಿರಲು ತನ್ನ ಪಕ್ಕದವರಲ್ಲಿಯೂ ತನ್ನ ಗಂಡನಲ್ಲಿಯೂ ಸದ್ಭಾವವನ್ನೂ ಪ್ರಕಾಶಪಡಿಸುತ್ತಿರುವ ಆ ಚತುರಳೇ ನಿಜವಾದ ಜಾರೆಯಾಗುವವಳು. ಪಕ್ಕಪಕ್ಕಗಳಲ್ಲಿ ಹೆಜ್ಜೆ ಹೆಜ್ಜೆಗೂ ಡಂಗುರ ಬಡಿಯಿಸಿಕೊಂಡು ಅಕ್ಕಪಕ್ಕದವರಿಗೆ ನಾಚಿಕೊಂಡು ತಲೆತಗ್ಗಿಸುವಾಕೆ ಜಾರೆಯಾಗಬಲ್ಲಳೇ? ೮೩. ತನ್ನ ತೀಕ್ಷ್ಮವಾದ ಕಣ್ಣೆಂಬ ಹೂವುಗಳು ವಿಟನ ದುರ್ಬಲ ವಾದ ಎದೆಯನ್ನು ನಿಧಾನವಾಗಿ ತನ್ನಷ್ಟಕ್ಕೆ ತಾನೆ
Page #248
--------------------------------------------------------------------------
________________
ಚತುರ್ಥಾಶ್ವಾಸಂ | ೨೪೩ ವ|| ಎಂದು ಪಾರಂಕುಸನಾ ಪಾಣ್ಣೆಯರ ಗೆದ್ದು ಗೆಝಂಗಳುಮಂ ತೋರ್ಪ ಸನ್ನೆಗಳುಮಂ ಆಡುವ ಮಿಟ್ಟುಗೊಡಂಗಳುಮಂ ಕಂಡು ಚೋದ್ಯಂಬಟ್ಟು
ಮ||
ಅಲರ್ಗಕ್ಯೂಳ್ ಸ್ಮರನಿರ್ದನಕ್ಕು ಮಡವೋಪಾ ಜೋಡ ಕಾಮಂಗ ಕಾ ದಲೆಯಕ್ಕುಂ ಪೆಂತೇನೂ ಪಾರದರದೊಳ್ ಸಂಸಾರ ಸರ್ವಸ್ವಮಂ | ಗೆಲೆವಂದಿಂಪಿನಲಂಪನಾಳ ಸವಿಯುಂಟಕ್ಕುಂ ಸಮಂತಾವಗಂ ತಲೆಯಂ ಮೂಗುಮನೊತ್ತೆಯಿಟ್ಟು ನೆರೆವಂತುಂತೇನವರ್ ಗಾಂಪರೇ ||೮೪
ವ|| ಎನುತ್ತುಂ ಬರ್ಪನೊಂದೆಡೆಯೊಳ್ ಮನಸಿಜನ ನಡಪಿದ ಜಂಗಮಲತೆಗಳಂತೆ ಮನೋಜನ ಕಾಪಿನ ಕಲ್ಪಲತೆಗಳಂತೆ ಮನೋಜನೆಂಬ ದೀವಗಾಜಿನ ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಟ್ಟಿಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಮಳವಿಗಳದ ವಿಳಾಸಂಗಳೊಳಂ ತಂಡತಂಡದ ನೆರೆದಿರ್ದ ಪಂಡವಾಸದೊಳೆಂಡಿರು ಕಂಡು
ಚಂ
ಮನಸಿಜನೀಕಗಂಡು ರತಿಯಂ ಬಿಸುಟಂ ಹರನೀಕಗಂಡು ನೂ ತನ ಗಿರಿಜಾತೆಯಂ ತೋದನಾ ನರಕಾಂತಕನೀಕೆಗಂಡು ತೊ | ಟೂನ ನಿಜಲಕ್ಷ್ಮಿ ಯಂ ಮದನೆಂಬ ನೆಗಯನಪುಕೆಯು ಜ ವ್ವನದ ವಿಳಾಸದಂದದ ಬೆಡಂಗಿನ ಪೆಂಡಿರ ಪೆಂಡಿರಲ್ಲಿಯಾ |
೮೫
ಚಲಿಸುವಂತೆ ಮಾಡಿ ಹುಬ್ಬುಗಳು ನಾಲಗೆಯಂತೆ ಮಾತನಾಡಿಸಿ ಅವನ ಮನಸ್ಸನ್ನು ಪ್ರವೇಶಿಸುವಂತೆ ಮಾಡಲು ಬಲ್ಲವಳು ನಿಜವಾದ ವೇಶ್ಯ, ಜಾರತ್ವವನ್ನು ಕುರಿತು ವಿಶೇಷವಾಗಿ ಹರಟುತ್ತಿರುವಳನ್ನು ಗಿಣಿಯೆನ್ನುವರಲ್ಲದೆ ಅಭಿಸಾರಿಕೆ (ಪ್ರಿಯವನ್ನು ರಹಸ್ಯವಾಗಿ ಹುಡುಕಿಕೊಂಡು ಹೋಗುವ ಜಾತಿ)ಯೆಂದು ಬುದ್ಧಿಯುಳ್ಳವರು ಅನ್ನುತ್ತಾರೆಯೆ? ವ|| ಎಂದು ಜಾರೆಯರಿಗೆ ಅಂಕುಶಪ್ರಾಯನಾದ ಅರಿಕೇಸರಿಯ ಆ ಜಾರೆಯರು ಮಾಡುವ ಕಾರ್ಯವನ್ನೂ ತೋರುವ ಸನ್ನೆಗಳನ್ನೂ ಆಡುವ ಮೃತ್ಯುವಿನಂತಹ ಚೇಷ್ಟೆಯ ಮಾತುಗಳನ್ನೂ ಕಂಡು ಆಶ್ಚರ್ಯಪಟ್ಟು ೮೪. (ಜಾರಸ್ತ್ರೀಯರ) ಹೂವಿನಂತಿರುವ ಕಣ್ಣಿನಲ್ಲಿ ಮನ್ಮಥನಿದ್ದಿರಬೇಕು. ಸಂಕೇತಸ್ಥಾನ ವನ್ನು ಹುಡುಕಿಕೊಂಡು ಹೋಗುವ ಆ ಜಾರೆಯರು ಮನ್ಮಥನ ಪ್ರೀತಿಗೆ ಪಾತ್ರರಾಗಿದ್ದಿರ ಬೇಕು. ಹಾದರದಲ್ಲಿ ಸಂಸಾರಸಾರಸರ್ವಸ್ವವನ್ನೂ ಮೀರಿರುವ ಸುಖದ ಸೊಂಪನ್ನು ಹೊಂದಿರುವ ರುಚಿಯಿದ್ದಿರಬೇಕು. ಹಾಗಿಲ್ಲದ ಪಕ್ಷದಲ್ಲಿ ಯಾವಾಗಲೂ ಅವರು ತಲೆಯನ್ನೂ ಮೂಗನ್ನೂ ಒತ್ತೆಯಿಟ್ಟು ಸುಮ್ಮನೆ ವಿಟರಲ್ಲಿ ಕೂಡುವಷ್ಟು ದಡ್ಡರೆ ? ವ|| ಎಂದುಕೊಂಡು ಬರುತ್ತಿದ್ದವನು ಒಂದು ಸ್ಥಳದಲ್ಲಿ ಮನ್ಮಥನು ಸಾಕಿದ ಜಂಗಮಲತೆಗಳಂತೆಯೂ ಕಾಮನ ರಕ್ಷಣೆಯಲ್ಲಿರುವ ಕಲ್ಪಲತೆಗಳಂತೆಯೂ ಮನೋಜನೆಂಬ ಬೇಟೆಗಾರನ ದೀಹದ (ಒಂದು ಮೃಗವನ್ನು ಹಿಡಿಯುವುದಕ್ಕಾಗಿ ಉಪಯೋಗಿಸುವ ಮತ್ತೊಂದು ಮೃಗ) ಹುಲ್ಲೆಯಂತೆಯೂ ತಮ್ಮ ತಮ್ಮ ಮನೆಯ ಮುಂದಿನ ಪಚ್ಚೆಯ ರತ್ನದಿಂದ ನಿರ್ಮಿತವಾದ ಜಗಲಿಗಳಲ್ಲಿಯೂ ರತ್ನಖಚಿತವಾದ ಮನೆಯ ಮುಂದಿನ ಕೈಸಾಲೆಗಳಲ್ಲಿಯೂ ಅಳತೆಮೀರಿದ (ಅತ್ಯಧಿಕವಾದ) ವೈಭವಗಳಿಂದ ಕೂಡಿ ಗುಂಪು ಗುಂಪಾಗಿ ಕೂಡಿದ್ದ ವೇಶ್ಯಾವಾಟಿಯ (ಸೂಳೆಗೇರಿಯ) ಉತ್ತಮ ಸ್ತ್ರೀಯರನ್ನು ನೋಡಿದನು. ೮೫. ಇವಳ ಸೌಂದರ್ಯವನ್ನು ನೋಡಿ.
Page #249
--------------------------------------------------------------------------
________________
೨೪೪) ಪಂಪಭಾರತಂ
ತಿರಮಿದಾವುದಕ್ಕೆ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕ ಸೈಸೆವುದಿದಾವುದೊಲದುಟಿದಟ್ಟಿದೊಡಂದು ಕುಬೇರನಿತ್ತುದೆ | ಕೃಸರಮಿದಾವುದಾಂ ಮುಳಿಯ ಕಾಲ್ವಿಡಿದಿಂದ್ರನ ಕೊಟ್ಟುದ ಪೋ
ಪುಸಿಯದಿರೆಂಬ ಸೂಳೆಯರೆ ಸೂಳೆಯರಲ್ಲಿಯ ಪಂಡವಾಸದಾ || ೮೬
ವ|| ಎಂಬುದಂ ಕೇಳುತುಂ ಬರೆವರೆ ಮತ್ತಮಾ ಪಂಡವಾಸಗೇರಿಯೊಳಗೆ ಸೌಭಾಗದ ಭೋಗದ ಚಾಗದ ರೂಪುಗಳ ಮಾನಸರೂಪಾದಂತೆಉ11 ಸೀಗುರಿ ಚಾಪಿ ನಾಣುಣಿದು ಮೆಟ್ಟುವ ಗುಜರಿಗ ಬೀರಮಂ
ಚಾಗದ ಪೆಂಪುಮಂ ಪೊಗಟ್ಟ ಸಂಗಡವರ್ಪವರೋಳಿನಿಂದ ಮ | ಯೋಗಮಳುಂಬಮಪ್ಪ ಬಿಯಮಾರ್ಗಗಂ ಬರೆ ಬರ್ಪ ಪಾಂಗಗು
ರ್ವಾಗಿರೆ ಚೆಲ್ವನಾಯ್ತುರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ || ೮೭
ವll ಮತ್ತಮಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿರುಕುಳ ಬೊಜಂಗರುಮಂ ಸುಣ್ಣದೆಲೆಯನೊತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನೊತ್ತವಿಡಿಸಲಟ್ಟುವ ಚಿಕ್ಕ
ಮನ್ಮಥನು (ತನ್ನ ಪ್ರಿಯಪತ್ನಿಯಾದ) ರತಿಯನ್ನೂ ಬಿಸುಟಿದ್ದಾನೆ. ಈಶ್ವರನ್ನು ಇವಳನ್ನು ನೋಡಿ ನೂತನವಧುವಾದ ಪಾರ್ವತಿಯನ್ನು ತೊರೆದಿದ್ದಾನೆ. ಆ ನರಕಾಸುರನಿಗೆ ಮೃತ್ಯುವಾದ ವಿಷ್ಣುವು ಇದ್ದಕ್ಕಿದ್ದ ಹಾಗೆ ತನ್ನ ಲಕ್ಷ್ಮಿಯನ್ನೂ ಮರೆತಿದ್ದಾನೆ ಎಂಬ ಪ್ರಸಿದ್ದಿಯನ್ನು ಪಡೆದು ಯವ್ವನದ ವಿಳಾಸದ ಬೆಡಗಿನಿಂದ ಕೂಡಿದ ಸ್ತ್ರೀಯರೇ ಅಲ್ಲಿರುವ ಸ್ತ್ರೀಯರೆಲ್ಲ. ಮುಂದಿನ ಅವರ ಸಂಭಾಷಣೆಯು ಈ ರೀತಿಯಲ್ಲಿದ್ದಿತು. ೮೬. ಈ ಮೂರೆಳೆಯ ಹಾರವಾವುದಕ್ಕ? ಧರಣೀಂದ್ರನೆಂಬ ಸರ್ಪರಾಜನು ಕೊಟ್ಟುದು; ಕಣ್ಣಿಗೆ ಪ್ರಕಾಶಮಾನವಾಗಿರುವ ಈ ವಜ್ರದ ತಾಲಿ ಯಾವುದು ? ನೀನು ಒಪ್ಪದೆ ತಿರಸ್ಕರಿಸಿ ಕಳುಹಿಸಲು ಆ ದಿನ ಕುಬೇರನು ಕೊಟ್ಟುದು. ಈ ಒಂದೆಳೆಯ ಸರ ಯಾವುದು? ನಾನು ಕೋಪಿಸಿಕೊಳ್ಳಲು ನನ್ನ ಕಾಲನ್ನು ಕಟ್ಟಿಕೊಂಡು ಇಂದ್ರನು ಕೊಟ್ಟುದಲ್ಲವೇ? ಹೋಗು ಸುಳ್ಳು ಹೇಳಬೇಡ ಎಂಬ ಪ್ರಸಿದ್ದಿಯನ್ನು ಪಡೆದಿರುವ ಸೂಳೆಯರೇ ಆ ಸೂಳೆಗೇರಿಯ ಎಲ್ಲ ಕಡೆಯೂ. ವ|| ಎನ್ನುವುದನ್ನು ಕೇಳುತ್ತ ಬರುತ್ತಿರಲು ಪುನಃ ಆ ಸೂಳೆಗೇರಿಯೊಳಗೆ ಸೌಭಾಗ್ಯದ, ಭೋಗದ, ತ್ಯಾಗದ ರೂಪಗಳು ಮನುಷ್ಯಾಕಾರವನ್ನು ತಾಳಿದಂತೆ - ೮೭. ಸೀಗುರಿಯೆಂಬ ಛತ್ರಿ, ಅಂಗರಕ್ಷಕರು, ನೆಗೆದು ಹಾರುತ್ತ ಬರುತ್ತಿರುವ ಗುರ್ಜರದೇಶದ ಕತ್ತೆ, ತಮ್ಮವೀರದ ಮತ್ತು ತ್ಯಾಗದ ವೈಭವವನ್ನು ಹೊಗಳುತ್ತ ಬರುತ್ತಿರುವ ಸಂಗಡಿಗರು, ಸರಿಯಾದ ರೀತಿಯಲ್ಲಿ ಮಾಡಿಕೊಂಡಿರುವ ದೇಹಾಲಂಕಾರ ಅತ್ಯತಿಶಯವಾದ ದ್ರವ್ಯವ್ಯಯಇವು ಹೃದಯಸ್ಪರ್ಶಿಯಾಗಿರಲು ಆಶ್ಚರ್ಯಕರವಾದ ರೀತಿಯ ಠೀವಿಯಿಂದ ಬರುತ್ತಿರುವ ರಾಜವಿಟರ ಲೀಲೆಯು ದೇವೇಂದ್ರನ ಲೀಲೆಗಿಂತ ಸುಂದರವಾಗಿದ್ದಿತು. ವಗೆ ಪುನಃ ಅಲ್ಲಿ ಕೋಟಿಹೊನ್ನುಗಳನ್ನು ಕೊಡುತ್ತೇವೆ ಎಂದು ಸೂಳೆಯರ ಮನೆಯ ಮುಂದಿನ ಗಂಟೆಯನ್ನು ಬಾರಿಸುವ ಸಾಮಾನ್ಯವಿಟರನ್ನೂ ಸುಣ್ಣದೆಲೆಯನ್ನು ಒತ್ತೆಯಿಟ್ಟು ಮದ್ದಾನೆಯನ್ನೂ ಮಾಣಿಕ್ಯವನ್ನೂ ಒತ್ತೆಯಾಗಿಡಲು ಹೇಳಿಕಳುಹಿಸುವ
Page #250
--------------------------------------------------------------------------
________________
ಚತುರ್ಥಾಶ್ವಾಸಂ | ೨೪೫ ಪೋರ್ಕುಳಿ ಬೊಜಂಗರುಮಂ ಕತ್ತುರಿ ಬಿಯಮಂ ಮೆದು ಕತ್ತುರಿಯೊಳ್ ಪೂಟ್ಟು ಕತ್ತುರಿಮಿಗದಂತಿರ್ಪ ಕತ್ತುರಿ ಬೊಜಂಗರುಮಂ ನೋಡಿ ಪೋಲ ಬೊಜಂಗರ ಬಿಯದಳವಿಗೆ ಮನದೊಳ್ ಮಚ್ಚುತ್ತುಂ ಬರ್ಪನೊಂದೆಡೆಯೊಳ್ ಕಳೊಳಮಮರ್ದಿನೊಳಂ ಪುಟ್ಟದ ಪೆಂಡಿರಂತ ಸೊಗಯಿಸುವ ಪಲರುಮೊಳ್ಕೊಂಡಿರೊಂದೆಡೆಯೊಳಿರ್ದು ಕಾಮದೇವನೆಂಬ ಬಳಮರ್ದುಕಾಶನ ಮಾಡಿದ ಮರ್ದಿನಂತೆ ಬಳೆದು ದಳಂಬಡೆದು ಮೂನೂರುವತ್ತು ಜಾತಿಯ ಕಳಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಕೆಯ ಮಾಲೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳಅದು ತಲೆಯೊಳ್ ತಳಿದು ಕಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆಲ್ಲಂ ಬೊಟ್ಟಿಟ್ಟು ಕಿಲೆಯ ಪಿರಿಯರಂದು ಪೊಡವಟ್ಟು ಧರ್ಮಗಳುಡಿವರ್ಗೆಲ್ಲಂ ಮೀಸಲ್ಗಳ್ಳನೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಟಕಿದನೆಂದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮಣಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು
ಚಿಕ್ಕ ಜಗಳಗಂಟ ವಿಟರನ್ನೂ ತಾವು ವಿಶೇಷವಾಗಿ ಕಸ್ತೂರಿಯನ್ನು ಲೇಪನ ಮಾಡಿಕೊಂಡು ಅದರಲ್ಲಿಯೇ ಅದ್ದಿ ಮುಳುಗಿ ಆ ಕಸ್ತೂರಿಯ ವ್ಯಯವನ್ನೇ ಒತ್ತೆಯನ್ನಾಗಿ ತೋರಿಸುತ್ತ ಕಸ್ತೂರಿಯ ಮೃಗದಂತೆ ಕರಗಿರುವ ಕಸ್ತೂರಿ ವಿಟರನ್ನೂ ನೋಡಿ ಆ ಪಟ್ಟಣದ ವಿಟರ ವ್ಯಯದ (ಖರ್ಚುಮಾಡುವ ದ್ರವ್ಯದ) ಪ್ರಮಾಣಕ್ಕೆ ಮನಸ್ಸಿನಲ್ಲಿ ಮೆಚ್ಚುತ್ತ ಮುಂದೆ ಬರಲು ಪಾನಶಾಲೆಯು ಕಣ್ಣಿಗೆ ಬಿದ್ದಿತು. ಒಂದೆಡೆಯಲ್ಲಿ ಕಳ್ಳಿನಲ್ಲಿಯೂ ಅಮೃತದಲ್ಲಿಯೂ ಹುಟ್ಟಿದ ಸ್ತ್ರೀಯರಂತೆ - ಸುರಾದೇವಿ ಮತ್ತು ಲಕ್ಷ್ಮೀದೇವಿಯರಂತೆ ಸೊಗಯಿಸುವ ಅನೇಕ ಸುಂದರಿಯರು ಒಂದು ಕಡೆ ಸೇರಿ ಕಾಮದೇವನೆಂಬ ಮದ್ದುಗಾರನು (ತುಬಾಕಿಯ ಮದ್ದನ್ನು ಮಾಡುವವನು) ಮಾಡಿದ ಮದ್ದಿನಂತೆ ಅಭಿವೃದ್ಧಿಯಾಗಿ ಪುಷ್ಟಿಗೊಂಡಿರುವ ಮುನ್ನೂರರುವತ್ತು ಜಾತಿಯ ಕಳ್ಳುಗಳನ್ನು (ಹೆಂಡಗಳನ್ನು) ತಮ್ಮ ಮುಂದೆ ಇಟ್ಟುಕೊಂಡು ಮಧುಮಂತ್ರದಿಂದಲೇ ಮಧುದೇವತೆಗಳನ್ನು ಪೂಜಿಸಿದರು. ಚಿನ್ನ ಬೆಳ್ಳಿ ಮತ್ತು ಪದ್ಮರಾಗಗಳಿಂದ ಗಿಳಿ, ಕೋಗಿಲೆ, ಕ್ರೌಂಚ, ಹಂಸ ಮತ್ತು ಕುಂತಳಿಕೆಯೆಂಬ ಹಕ್ಕಿಗಳ ಮಾದರಿಗಳಲ್ಲಿ ಮಾಡಿರುವ ಚಿಪ್ಪುಗಳಲ್ಲಿ ತುಂಬಿ (ಮಧುಮಂತ್ರಗಳಿಂದಲೇ ಮಂತ್ರಿಸಿ ನೆಲದಲ್ಲಿ ಸ್ವಲ್ಪ ಸ್ವಲ್ಪ ಚೆಲ್ಲಿ ತಲೆಯಲ್ಲಿ ಪ್ರೋಕ್ಷಿಸಿಕೊಂಡು,) ಕಳ್ಳಿನಿಂದ ಮುಖಕ್ಕೆ ಬೊಟ್ಟನ್ನಿಟ್ಟು ಕಿರಿಯರಾದವರು ಹಿರಿಯರಾದವರನ್ನು ಗುರುತಿಸಿ ಅವರಿಗೆ ನಮಸ್ಕಾರಮಾಡಿ ಉಚಿತವಾಗಿ ದಾನಮಾಡಬೇಕಾದವರಿಗಾಗಿ ಮೀಸಲಾದುದನ್ನು ಅವರಿಗೆ ದಾನಮಾಡಿದರು. ಚಿನ್ನದ ಮತ್ತು ಬೆಳ್ಳಿಯ ಚಿಪ್ಪುಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ತುಂಬಿಕೊಂಡು ಎಳೆಯ ಬಿದಿರಿನ ಕಳಕೆ, ಮಾವಿನ ಮಿಡಿ, ಬಿಲ್ಪತ್ರೆಯ ಕಾಯಿನ ತಿರುಳು, ಕಾರದ ಕಡಲೆಯ ಪುಡಿಯಿಂದ ಕೂಡಿದ ಹಸಿಯ ಶುಂಠಿಯ ಮಿಶ್ರಣವನ್ನುಳ್ಳ ಚಕ್ಕಣ ಗಳೆಂಬ ನಂಜಿಕೊಳ್ಳುವ ಪದಾರ್ಥಗಳನ್ನು ಸವಿಸವಿದು ಕಳ್ಳು ಕುಡಿದರು.
Page #251
--------------------------------------------------------------------------
________________
೨೪೬ / ಪಂಪಭಾರತಂ
ಮ||
ಮಧು ಸೀತುಂ ಕಟು ಸೀದು ಪೋ ಪುಳಿತ ಕಳ್ಳುಂ ಕರಂ ಕಯ್ತು ಬ ರ್ಪುದು ಮಾರೀಚಿ ತೊಡರ್ಪುಳಿಂದ ಸರದಿಂ ಕಂಪಿಲ್ಲ ಸೊರ್ಕಿಪ್ಪಾ | ಅದು ಚಿಂತಾಮಣಿಗೇವುದಕ್ಕೆ ದಳವಿಲ್ಲಿ ಕಕ್ಕರಕ್ಕಿಂತುಟ
ಪುದು ಕಳ್ಳವುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್ || ೮೮
ವ|| ಅಂತು ಕುಡಿಯ ಕಕ್ಕರಗೆಯದಿಂ ತುದಿನಾಲಗೆಯೊಳ್ ತೊದರಸು ನುಡಿವ ನುಡಿಗಳುಂ ಪೊಡವ ನಿಡಿಯ ಪುರ್ವುಗಳುಂ ನಿಡಿಯಲರ್ಗಣ್ಣಳೊಳ್ ವಿಕಾರಂ ಬೆರಸು ನೆಗಭಿನಯಂಗಳುಂ ಮಳಮಳಿಪ ರೂಪು ಕಣ್ಣಳೊಳ್ ಬೆಳ್ಳನಟೆಯ ಸೋಂಕುವ ಕೆಂಪುಗಳುಂ ತಮ್ಮ ಕೆಂಪಂ ಕಣ್ಣ ಕೊಟ್ಟು ಕಣ್ಣಳ ಬೆಳ್ಳಂ ತಮಗೆ ಮಾಲುಗೊಂಡಂತೆ ತನಿಗೆತ್ತುವೆರಸು ಬತ್ತಿ ಸೊಗಯಿಸುವ ಬೆಳರ್ವಾಲ್ಗಳೊಳಿಂಪಂ ತಾಳಿ ಪೊಜಮಡುವ ತಣ್ಣಂಪುಗಳುಮಮೃತಬಿಂದು ಗಳಂತೆ ನೆಗಟ್ಟ ಬೆಮರ ಬಿಂದುಗಳುಮಳವಲ್ಲದೊಪ್ಪೆ ಪಲರುಮೊಳ್ಕೊಂಡಿರೊಂದೆಡೆಯೊಳಿರ್ದಲ್ಲಿ ಯೋರ್ವಳ್
ಪೃಥ್ವಿ || ಬೆಳರ್ತ ಬೆಳರ್ವಾಯ್ ಕರಂ ಪೊಳೆವ ಹಾಂಗೆ ಕಣ್ಣಿಂದಳು
ರ್ತುಳುಂಕೆ ನಿಡುವುರ್ವುಗಳ ಪೊಡರೆ ಬಾಯ ಕಂಪಿಂಗ ಸಾ | ರ್ವಳಿಪ್ರಕರಮಂದು ಸೀಗುಡಿವೊಲಾಗೆ ನಾನ್ಗಟ್ಟು ಮೊ
ಕಳಂ ಜತಿಗೆ ಮೆಟ್ಟುವಳ್ ಪಿಡಿದು ಮೆಟ್ಟುವಳ್ ನೋಬ್ಬರಂ || ೮೯
೮೮. ಮಧುವೆಂಬ ಮದ್ಯವು ಸಿಹಿಯಾಗಿದ್ದರೂ ಕಟುವಾದುದು; ಸೀದುವೆಂಬುದು ಹುಳಿಯ ಹೆಂಡವಲ್ಲ; ವಿಶೇಷವಾಗಿ ಸಿಹಿಯಾಗಿರುತ್ತದೆ. ಮಾರೀಚಿ ತೊಡರ್ಪುಳ್ ಎಂಬ ಮದ್ಯಗಳಿಗಿಂತ ಶರದೆಯೆಂಬುದು ಹೆಚ್ಚು ವಾಸನೆಯಿಲ್ಲ; ಅಷ್ಟು ಸೊಕ್ಕಿಸಲಾರದು; ಚಿಂತಾಮಣಿಯೆಂಬ ಮದ್ಯದ ಸೇವನೆಗೆ ಅಡಿಕೆಯೇಕಕ್ಕ, ಕಕ್ಕರವೆಂಬ ಮದ್ಯಕ್ಕೂ ಹಾಗೆಯೇ (ಬೇಕಿಲ್ಲ) ಇಂತಹವೇ ಸರಿಯಾದ ಹೆಂಡವೆಂಬುದು ಎಂದು ಆ ಸ್ತ್ರೀಯರು ಕಾಮೋದ್ರೇಕವಾದ ಮದ್ಯವನ್ನು ಪಾನಮಾಡಿದರು. ವ|| ಹಾಗೆ ಕುಡಿಯಲು ಕಕ್ಕರವೆಂಬ ಮದ್ಯಪಾನದ ಸೊಕ್ಕಿನಿಂದ ತುದಿನಾಲಗೆಯಲ್ಲಿ ತೊದಳುಗಳಿಂದ ಕೂಡಿದ ಮಾತುಗಳುಂಟಾದುವು. ದೀರ್ಘವಾದ ಹುಬ್ಬುಗಳು ಅಲುಗಾಡುತ್ತಿದ್ದವು. ಉದ್ದವಾದ ಹೂವಿನಂತಿರುವ ಕಣ್ಣುಗಳಲ್ಲಿ ವಿಕಾರದಿಂದ ಕೂಡಿದ ಚೇಷ್ಟೆಗಳು ಮೂಡಿದವು. ಕೆರಳಿ ಕೆಂಪಾದ ರೂಪವು ಕಣ್ಣುಗಳ ಬಿಳುಪನ್ನು ಸಂಪೂರ್ಣವಾಗಿ ಹೋಗಲಾಡಿಸಿತು. ಆವರಿಸುತ್ತಿರುವ ಕೆಂಪುಬಣ್ಣದ ತುಟಿಗಳು ತಮ್ಮಕೆಂಪನ್ನು ಕಣ್ಣುಗಳಿಗೆ ಕೊಟ್ಟು ಅದರ ಬಿಳುಪನ್ನು ತಾವು ಪ್ರತಿಯಾಗಿ ಕೊಂಡಂತೆ ತೋರಿದವು. ವಿಶೇಷವಾಗಿ ಅಲುಗಾಡುತ್ತ ಬತ್ತಿದ ಬಿಳುಪಾದ ಬಾಯಿಗಳಲ್ಲಿ ಇಂಪಿನಿಂದ ತಂಪಾದ ವಾಸನೆಗಳು ಸೂಸಿದವು. ಅಮೃತಬಿಂದುಗಳಂತೆ ಬೆವರ ಹನಿಗಳು ಪ್ರಕಾಶಿಸಿದುವು. ಅಳತೆಯಿಲ್ಲದ ಸೌಂದರ್ಯದಿಂದ ಕೂಡಿದ ಅನೇಕ ಉತ್ತಮ ಸ್ತ್ರೀಯರು ಒಂದೆಡೆ ಸೇರಿದರು. ಆ ಸ್ಥಳದಲ್ಲಿ ಒಬ್ಬಳು ೮೯, ಬಿಳಿಚಿಕೊಂಡ ತುಟಿಯನ್ನೂ ವಿಶೇಷವಾಗಿ ಹೊಳೆವ ಕಡೆಗಣ್ಣಿನ ನೋಟವನ್ನೂ ಉಳ್ಳ ಒಬ್ಬಳು ತನ್ನ ಕಣ್ಣಿನ ದೃಷ್ಟಿಯು ಎಲ್ಲ ಕಡೆಗೂ ವ್ಯಾಪಿಸುತ್ತಿರಲು ನೀಳವಾದ ಹುಬ್ಬುಗಳು ಕುಣಿಯುತ್ತಿರಲು ಬಾಯ ವಾಸನೆಗೆ ಮುತ್ತುತ್ತಿರುವ ದುಂಬಿಯ ಸಮೂಹವು
Page #252
--------------------------------------------------------------------------
________________
ಚತುರ್ಥಾಶ್ಚಾಸಂ | ೨೪೭ ವl ಮತ್ತಮೊರ್ವಳೂರ್ವಶಿಯನ್ ಪೋಲ್ಯಾಕೆ ತನ್ನ ಗಂಭೀರನವಾವನ ಮದದೊಳಂ ಮದಿರಾಮದದೊಳಮಳವಿಗತಿಯ ಸೊರ್ಕಿಚಂ ಮುಡಿ ಮಕರಧ್ವಜಂಬೊಲ್ಲಲುತ್ತಿರೆ ಬೆಂಬಿಡದೊಯ್ಯನೊಯ್ಯನು
ಟ್ರುಡೆ ಕಟಸೂತ್ರದೊತ್ತಿನೊಳೆ ಜೋರೆ ನಾಣ್ ತಲೆದೋಕ್ತಿ ಕೂಡ ಕೂ | , ಕಿಡುವ ಕುಕಿಲ್ಬ ಬಿಕ್ಕುಳಿಪ ತೇಗುವ ತನ್ನ ತೊಡಂಕದೆಯೇ ನೂ
ರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳಜವಾಗೆಯಾಡಿದಳ್ ೯೦
ವ!ಅಂತಾಕೆಗಳ್ ತೂಗಿ ತೊನೆವ ತೊನೆಪಂಗಳುಮಂ ಮರಸರಿಗೆವಿಡಿದು ಬಡಿದಾಡುವ ಬೂತಾಟಂಗಳುಮಂ ನೋಡಿ ಗಂಧೇಭವಿದ್ಯಾಧರನಿಂತೆಂದಂಚಂit ನುಡಿವರೆ ನೋಡ ಕುಡಿವರೆಂಬುದಿದಾಗದ ಸೂರುವಂತದ
ಕುಡಿವನುಮಂತೆ ಕುಡಿವರೆಂದೊಡೆ ನಾಣುವರಂತುಟಪುದಂ | ಕುಡಿದುಮಿವಂದಿರಾರೆರ್ದಯುಮಂ ಸಗೆಯ್ಯಪರೆಯ ದೋಷದೊಳ್ ತೊಡರ್ವುದುಮೊಂದುಪಾಶ್ರಯವಿಶೇಷದೊಳೊಳನೆ ತಳ್ಳುದಾಗದೇ || ೯೧
ವ|| ಎನುತುಂ ಬರ್ಪನೊಂದೆಡೆಯೊಳೊರ್ವಂ ಪತಿಕೆಯ ನಲ್ಗಳನುಡಿಯಲಾಟದ ಸುಟಿಯ ಮುಳಿದಾತನ ಕಳೆಯನಿಂತೆಂದಂ
ಸೂರ್ಯಪಾನೆ (ಬಿಸಿಲನ್ನು ಮರೆಮಾಡಲು ಉಪಯೋಗಿಸುವ ಒಂದು ಸಾಧನ) ಯಂತಾಗಲು ಲಜ್ಜೆಯಿಲ್ಲದೆ ನೋಡುವವರನ್ನು ಮೆಟ್ಟಿ ತಾಳಕ್ಕೆ ಸರಿಯಾಗಿ ಕುಣಿದಳು. ವ|| ಊರ್ವಶಿಯನ್ನೇ ಹೋಲುವ ಮತ್ತೊಬ್ಬಳು ಗಂಭೀರವಾದ ತನ್ನ ಹೊಸಯವ್ವನದ ಮದದಿಂದಲೂ ಮದ್ಯಪಾನ ಮದದಿಂದಲೂ ಅಳತೆ ಮೀರಿ ಸೊಕ್ಕಿ- ೯೦. ತನ್ನ ತುರುಬು ಮನ್ಮಥನ ಮೀನಿನ ಬಾವುಟದಂತೆ ಮೆಲ್ಲಮೆಲ್ಲಗೆ ಜೋಲಾಡುತ್ತಿರಲು ಒಳಉಡುಪು ಉಡಿದಾರದ ಹತ್ತಿರವೇ ಸಡಿಲವಾಗಿ ಜೋತುಬಿದ್ದಿರಲು ಮರ್ಮಸ್ಥಳವು ಹೊರಗೆ ಕಾಣಿಸುತ್ತಿರಲು ಒಡನೆಯೇ ಮೇಲಕ್ಕೆ ನೆಗೆದು ಹಕ್ಕಿಯಂತೆ ಶಬ್ದಮಾಡಿ ಬಿಕ್ಕಳಿಸುವ ತೇಗುವ ತನ್ನ ತೊಡಕುಗಳೇ ಮನಸ್ಸನ್ನು ನೂರು ಬಾರಿ ತಗುಲಿ ಹಿಂಸಿಸುತ್ತಿರಲು ಢಕ್ಕಾವಾದ್ಯಕ್ಕನುಗುಣವಾಗಿ ಆಶ್ಚರ್ಯವಾಗುವ ಹಾಗೆ ಕುಣಿದಳು. ವll ಹಾಗೆ ಅವರು ಆ ಕಡೆಗೂ ಈ ಕಡೆಗೂ ಅಳ್ಳಾಡುವ ತೂಗಾಟಗಳನ್ನೂ ಮರಸರಿಗೆ(?)ಯನ್ನೂ ಬಿಲ್ಲನ್ನೂ ಹಿಡಿದು ಭೂತಗಳ ಆಟವನ್ನು (ಬೂತಾಟಂ ?) ಆಡುವುದನ್ನೂ ಗಂಭವಿದ್ಯಾಧರನಾದ ಅರ್ಜುನನು ನೋಡಿ ಹೀಗೆಂದನು - ೯೧. ಕುಡಿಯುವವರನ್ನು ಕಳ್ ಕುಡಿಯುವವರು ಎಂದು ಹೇಳಬಹುದೇ? ಆಗದು. ಕುಡಿಯುವವರನ್ನು ಹಾಗೆ ಕುಡುಕರೆಂದರೆ ಅವರು ಲಜ್ಜಿತರಾಗುತ್ತಾರೆ. ಹಾಗೆ ಕುಡಿದರೂ ಅವರು ಎಲ್ಲರ ಹೃದಯವನ್ನೂ ಸೆರೆಹಿಡಿಯುತ್ತಾರಲ್ಲವೇ. ದೋಷವಾದುದೂ ಅವಲಂಬನದಿಂದ ಒಳ್ಳೆಯದೇ ಆಗುವುದಿಲ್ಲವೇ ? ವ|| ಎನ್ನುತ್ತ ಬರುತ್ತಿದ್ದವನು ಒಂದೆಡೆಯಲ್ಲಿ ತನ್ನನ್ನು ಬಯ್ಯುತ್ತಿದ್ದ ಪ್ರಿಯಳನ್ನು ಬಿಡಲಾರದೆ ಅವಳ ಮನೆಯ ಮುಂದೆಯೇ ಸುಳಿದಾಡುತ್ತಿರಲು ಕೋಪಿಸಿಕೊಂಡ ಅವನ ಸ್ನೇಹಿತನು ಹೀಗೆಂದು
Page #253
--------------------------------------------------------------------------
________________
೨೪೮ / ಪಂಪಭಾರತಂ ಚಂi ಬಸನದೊಡಂಬಡಿಂಗಲಸಿ ಮಾಡೂಡಮಿಂತಿದನೀವೆನೆಂದನಂ.
ಪಸಿದೊಡಮಾಡದೋತಿ ಬಗೆದೂಅದೊಡಂ ನೆರದಿರ್ದೊಡು ಸಗಾ | ಟಿಸದೂಡಮಾಯಮುಂ ಚಲಮುಮುಳ್ಕೊಡೆ ಪೇಸದವಳೆ ಮತ್ತಮಾ ಟಿಸುವುದೆ ಮತ್ತಮಂಜುವುದೆ ಮತ್ತಮಬಲ್ಲುದೆ ಮತ್ತಮಾವುದೇ || ೯೨
ವರ ಎಂದು ನುಡಿದು ಬಿಸುಡಿಸಿದಂ ಮತ್ತೊರ್ವಂ ತನಗೆರಡನೆಯದೆಲ್ಲ ನಲ್ಗಳನೇತಜಿಕೊಳಪೊಡಮೇವಮಂ ಮಾಡದೆ ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು ಮುಂತಕ್ಕೆ ಕಾಪವಿಟ್ಟಂತೆಂದಂ
ವll ಇನಿಯಂ ನೊಯ್ತುಮೊಡಂಬಡಂ ನುಡಿದೊಡೆಂದೆಂದಡಂ ನಿನ್ನೊಳೆ
ಇನಿತುಂ ದೋಷಮನುಂಟುಮಾಡದಿರೆಯುಂ ಕಣ್ಣಿಂತೆ ಸಂದಪುದೊಂ | ದನೆ ಕೇಳೋಪಲೆ ಕೂರ್ಮೆಗೆಟ್ಟೆನಗೆ ನೀನೇನಾನುಮೊಂದೇವಮಂ ಮನದೊಳ್ ಮಾಡಿದೊಡಂದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ ||೯೩ .
.
ವll ಎಂದು ನುಡಿದಂ ಮತವೊಂದಡೆಯೊಳೊರ್ವನೋರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳಗೆ ನಕ್ಕು ತನ್ನ ಕೆಳೆಯಂಗೆ ತೋಟಿ
ಅವನಿಗೆ ಬುದ್ದಿ ಹೇಳಿದನು. ೯೨. ರತಿಕ್ರೀಡೆಗೆ ಒಪ್ಪದೆ ಜುಗುಪ್ಪೆಯಿಂದ ನಿನ್ನನ್ನು ಅವಳು ತ್ಯಜಿಸಿದರೂ (ನಿನಗೆ ಬೇಕಾದ) ಇಂತಿಂಥಾದ್ದನ್ನೆಲ್ಲ ಕೊಡುವೆನೆಂದ ನಿನಗೆ ಸುಳ್ಳು ಹೇಳಿದರೂ ನೀನು ಆಸೆ ತೋರಿಸಿ ನಿನ್ನ ಮನಸ್ಸನ್ನು ಪ್ರಕಟಿಸಿದರೂ ಅವಳು ತನ್ನ ಮನಸ್ಸನ್ನು (ಪ್ರೇಮವನ್ನೂ ಪ್ರಕಟಿಸದಿದ್ದರೂ ನೀನು ಅವಳನ್ನು ಕೂಡಿ ಕೊಂಡಿದ್ದರೂ ಅವಳು ತನ್ನ ಪ್ರತಿಪ್ರೇಮವನ್ನು ಪ್ರಕಟಿಸದಿದ್ದರೂ ನಿನಗೆ ಬಲವೂ ಛಲವೂ ಇದ್ದ ಪಕ್ಷದಲ್ಲಿ ಅವಳಿಗೆ ಅಸಹ್ಯಪಡದೆ ಪುನಃ ಅವಳಿಗಾಗಿ ಆಸೆ ಪಡುವುದೇ, “ಅಂಜುವುದೇ, ಪುನಃ ವ್ಯಸನ ಪಡುವುದೇ, ಪುನಃ ಅವಳಿಗೆ (ಧನಕನಕಾದಿಗಳನ್ನು ಕೊಡುವುದೇ? ವll ಎಂಬುದಾಗಿ ಹೇಳಿ (ಅವಳನ್ನು) ಬಿಸಾಡಿದನು. ಮತ್ತೊಬ್ಬನು ತನಗೆ ಕಪಟವಿಲ್ಲದೆ ಪ್ರೀತಿಸುತ್ತಿದ್ದ ಪ್ರಿಯಳನ್ನು ಯಾವುದರಲ್ಲಿಯೂ ಅಸಮಾಧಾನ ವನ್ನುಂಟುಮಾಡದೆ ಪ್ರೀತಿಯನ್ನು ನಿಲ್ಲಿಸಿದುದಕ್ಕೆ ಸಂತೋಷಪಟ್ಟು ಮುಂದಕ್ಕೆ ಕಾವಲಿಟ್ಟು ಹೀಗೆ ಹೇಳಿದನು. ೯೩.: ಅಡ್ಡಮಾತನ್ನಾಡಿದರೆ ಪ್ರಿಯನು ನೊಂದುಕೊಳ್ಳುತ್ತಾನೆ ಎಂದು ನನ್ನಲ್ಲಿ ನಾನು ಎಳ್ಳಷ್ಟು ದೋಷವನ್ನುಂಟುಮಾಡಿ ಕೊಳ್ಳದಿದ್ದರೂ ನೀನು ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆಯೇ ಇದೆ. ಎಲೈ ಪ್ರಿಯಳೇ ಕೇಳು. ಹೀಗೆ ನಿನ್ನ ಪ್ರೀತಿಯನ್ನು ಕಳೆದುಕೊಂಡಿರುವ ನನಗೆ ನೀನೇನಾದರೂ ಬಂದು ಆತನನ್ನು ಮನಸ್ಸಿನಲ್ಲಿ ಮಾಡಿದರೂ ಅಂದೇ ನಾನು ದೀವಳಿಗೆಯನ್ನೂ ಮಹಾನವಮಿಯನ್ನೂ ಮಾಡದಿರುತ್ತೇನೆಯೇ? ವ|| ಎಂಬುದಾಗಿ ನುಡಿದನು. ಬೇರೊಂದೆಡೆಯಲ್ಲಿ ಒಬ್ಬನು ಒಬ್ಬಳ ನಡತೆಯ ಮಾತಿನ ತುರುಬಿನ ದಡ್ಡತನಕ್ಕೆ ಮುಗುಳಗೆ ನಕ್ಕು ತನ್ನ ಸ್ನೇಹಿತನಿಗೆ ತೋರಿಸಿ ಹೇಳಿದನು.
Page #254
--------------------------------------------------------------------------
________________
ಚತುರ್ಥಾಶ್ವಾಸಂ | ೨೪೯ ಚoll ನಯದೊಳೆ ನೋಡಿ ನೋಟದೋಳೆ ಮೇಳಿಸಿ ಮೇಳದೊಳಪು ಕೆಯ್ತು ಗೊ
ಟ್ಟಿಯೊಳೊಳಪೊಯ್ದು ಪತ್ತಿಸುವ ಸೂಳೆಯರಂದಮನೆಯ್ದೆ ಪೋಲ್ವ ಸೂ | ಳೆಯರ ತುಜುಂಬು ಸೂಳೆಯರ ಮುಡಿ ಸೂಳೆಯರಿರ್ಪ ಪಾಂಗು ಸೂ ಳೆಯರ ನೆಗಲ್ ನಾಡೆ ತನಗ ದಲಕ್ಕನೆ ಸೂಳೆಯಾಗಳೇ | ೯೪
ವll ಎನೆ ಕೇಳು ಮುಗುಳಗೆ ನಗುತ್ತುಂ ಬರ್ಪನೊಂದೆಡೆಯೊಳೊಂದು ಕಂದದ ಮೊದಲುಮಂ ವೃತ್ತದ ತುದಿಯುಮನೊಂದುಮಾಡಿ ಪದಮಿಕ್ಕಿಯೋದಿ ಪಂಡಿತಿಕ್ಕಿಗೆ ಮುಯ್ಯಾಂತು ಮಾವ ಕಾಳಗದೊಳಂ ತಾನೆ ಓಡಿಯಾರೋಡಿದರೆಂಬಂತೆ ಬೀರಕ್ಕೆ ಮುಯ್ಯಾಂತುವೊಂದು ವೀಸನಪೊಡಮಾರ್ಗಮಿತ್ತಳೆಯದೆ ಚಾಗಕ್ಕೆ ಮುಯ್ಯಾಂತುಂ ತಮ್ಮ ನಗುವರನಳೆಯದಣ್ಣರೇಣಿದ ಕಚಿಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ ಕಂಡು
ಚಂ|
ಇಳೆಯದ ಬೀರಮಿಲ್ಲದ ಕುಲಂ ತಮಗಲ್ಲದ ಚಾಗಮೋದದೋ ದಯದ ಎದ್ದ ಸಲ್ಲದ ಚದುರ್ ನೆಜತೆ ಕಲ್ಲದ ಕಲ್ಪಿ ಕೇಳ ಮಾ || ತಣಿಯದ ಮಾತು ತಮ್ಮ ಬಜುವಾತುಗಳೊಳ್ ಪುದಿದೆಗರೆಯ ಕ ಸ್ಥಳಿವಿನಮಾರ್ ಪಟಿಯದೇನೆಳೆಯಂ ಕಿಡಿಸಿ ಬಲ್ಲರೊ ||
೯೫
೯೪. ನಯವಾಗಿ ನೋಡಿ, ನೋಡುವುದರಿಂದಲೇ ಪ್ರೀತಿಯುಂಟಾಗುವಂತೆ ಮಾಡಿ ಪ್ರೀತಿಯಿಂದಲೇ ಆಲಂಗಿಸಿ, ಆಲಿಂಗನದಿಂದಲೇ ಕೂಡಿಕೊಂಡು ಕೂಡುವುದರಿಂದಲೇ ವಶಪಡಿಸಿಕೊಂಡು ತಮ್ಮ ಮನಸ್ಸನ್ನು ಬೆಸೆಯುವ ಸೂಳೆಯರ ರೀತಿಯನ್ನು ಚೆನ್ನಾಗಿ ಹೋಲುವ ಸೂಳೆಯರ ತುರುಬು, ಸೂಳೆಯರ ಮೃದುವಾದ ಮಾತು, ಸೂಳೆಯರು ಇರುವ ಸ್ಥಿತಿ, ಸೂಳೆಯರ ನಡವಳಿಕೆ ಇವು ನನಗೆ ವಿಶೇಷವಾಗಿ ಪ್ರೀತಿಕರ ವಾದುವಲ್ಲವೇ ? ಈ ಅಕ್ಕನ ಆಟ, ನೋಟ, ತುರುಬು, ರೀತಿ, ಚೇಷ್ಟೆಗಳನ್ನು ನೋಡಿದರೆ ಇವಳೂ ಸೂಳೆಯಾಗಿಯೇ ಇರಬೇಕಲ್ಲವೆ? ವ|| ಎಂಬುದನ್ನು ಕೇಳಿ ಮುಗುಳ್ಳಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ಒಂದು ಕಂದಪದ್ಯದ ಆದಿಯನ್ನೂ ಮತ್ತೊಂದು ವೃತ್ತದ ಅಂತ್ಯವನ್ನೂ ಒಂದುಗೂಡಿಸಿ ಓದಿ ತನ್ನ ಪಾಂಡಿತ್ಯಕ್ಕೆ ಮೆಚ್ಚಿಕೊಳ್ಳುತ್ತಲೂ ಯಾವ ಕಾಳಗದಲ್ಲಿಯೂ ತಾನು ನಿಲ್ಲದೆ ಓಡಿಹೋಗಿ ಹೋರಾಡಿದನು ಎಂಬಂತೆ ತನ್ನ ಪರಾಕ್ರಮವನ್ನು ಹೊಗಳಿಕೊಳ್ಳುತ್ತಲೂ ಒಂದು ವೀಸವನ್ನಾದರೂ ಯಾರಿಗೂ ದಾನಮಾಡದೆ ತಾನು ತ್ಯಾಗಿಯೆಂದು ಜಂಭ ಕೊಚ್ಚಿಕೊಳ್ಳುತ್ತಲೂ ತಮ್ಮನ್ನು ನೋಡಿ ನಗುವವರನ್ನು ತಿಳಿಯದೆ ಎಂಟುಜನ ಹತ್ತಿಕೊಂಡಿರುವ ಕತ್ತೆಯಂತೆ ದಿಕ್ಕುದಿಕ್ಕಿನಲ್ಲಿಯೂ ಗರ್ವವನ್ನು ಪ್ರದರ್ಶಿಸುತ್ತಲೂ ಇರುವ ಶುದ್ದ ಹಸಿಯ ದಡ್ಡರನ್ನು ನೋಡಿ ೯೫. ಕಾದದ ಶೌರ್ಯ, ಇಲ್ಲದ ಕುಲ, ತಮ್ಮಲ್ಲಿಲ್ಲದ ತ್ಯಾಗ, ತಾವು ಓದದ ಓದು, ತಿಳಿಯದ ವಿದ್ಯೆ, ಸಲ್ಲದ ಜಾಣೆ ವಿಶೇಷವಾಗಿ ಕಲಿಯದ ಕಲಿಕೆ, ಆಡಲು ತಿಳಿಯದ ಮಾತು, ಇವು ತಮ್ಮ ವ್ಯರ್ಥಾಲಾಪಗಳಲ್ಲಿ ಸೇರಿರುವ ದಡ್ಡರು ಹೆಚ್ಚುತ್ತಿರಲು - ಗುಂಪಾಗಿರಲು- ಯಾರು ತಾನೆ ಅವರನ್ನು ಹಳಿಯುವುದಿಲ್ಲ? ಅವರು ಲೋಕವನ್ನು ಕೆಡಿಸಲು ಬಲ್ಲರೇನು?
Page #255
--------------------------------------------------------------------------
________________
೨೫೦ / ಪಂಪಭಾರತಂ
ವ|| ಎನೆ ನಗುತ್ತುಂ ಬರೆಯೊಂದೆಡೆಯೊಳ್ ನಾಲ್ವರಯ್ಯರ್ ಗಾಟರಿರ್ದಗೊರ್ವ ನೆಗ್ಗಂ ಗೊಟ್ಟಿಗೆ ಎಂದು ಕಣ್ಣಳಿಯದೆ ಸೋಂಕೆಯುಂ ಮನಮಣಿಯದ ನುಡಿಯಯುಮಾತನ ನಾಕೆಗಳ ಬಾಸೆಯೊಳಿಂತೆಂದರ್
ಉll ಭಾವಕನೆಂದೊಡಂ ಚದುರನೆಂದೊಡಮಾರ್ ಪೆರಾರೊ ನೀನೆ ನಿ
ನ್ಯಾವ ಗುಣಂಗಳಂ ಪೊಗಚಿಡಲ್ಲವಂ ನೆಜದಮೊಳಿಂತು ಸ | * ದ್ಯಾವದೆ ಗೊಟ್ಟಿರಲ್ ಬಯಸಿ ಬಂದೆಯದೀಗಳಿದೊಳ್ಳಿತಾಯ್ತು ಮಾ
ದೇವರ ಮುಂದಣಾತನನಲಲ್ಲದ ಪೇಸ್ ಪೆಜತೇನನೆಂಬುದೋ | ೯೬
ವ|| ಎಂದಾತನನಾಕೆಗಳ ಕಾಡಿ ಕೊಂಚಾಡಿ ಕಳೆದರ್ ಮತ್ತಮೊಂದೆಡೆಯೊಳೊರ್ವಳ ತನ್ನನುಟಿದ ಪೊಸ ಬೇಟದಾಣ್ಣನನೇಗೆಯುಂ ಪೋಗಲೀಯದೆ ತನ್ನಳಿಪನೆ ತೋಟಿ
ಚಂ|| ಮನೆಯನಿವಂ ಮನೋಭವನಿವಂ ಪೊಸ ಸುಗ್ಗಿಯೊಳಾದದೊಂದು ಕಿ.
ತನಿವನಿದನ್ನನೇನುತಿಯಲೀಗುಮ ನೀನುಟಿದಾಗಳೆಂದು ಪೋ | ಪನನಿರದೋಪನಂ ಮಿಡುಕಲೀಯದ ಕಾಲ್ಕಿಡಿದು ತೋರ ಕ ಇನಿಗಳನಿಕ್ಕಿದ ತರಳಲೋಚನ ಸಂಕಲೆಯಿಕ್ಕಿದಂತವೋಲ್ |
ವlು ಮತ್ತೊರ್ವಂ ತನ್ನ ಸೂಳೆಯೊಳಾದ ಬೇಸeಂ ತನ್ನ ಕೆಳೆಯಂಗಿಂತೆಂದಂ
ವ|| ಎನ್ನಲು ಅದನ್ನು ಕೇಳಿ ನಗುತ್ತ ಬರುತ್ತಿರಲು ಒಂದು ಕಡೆಯಲ್ಲಿ ನಾಲ್ಕದು ಜನ ತಂಟಲುದಾಸಿಯರಿದ್ದ ಕಡೆಗೆ ಒಬ್ಬ ದಡ್ಡನು ಬಂದು ಕೂಡಲು ಅವರ ಅಭಿಪ್ರಾಯವನ್ನು ತಿಳಿಯದೆ ಮುಟ್ಟಿ ಇಷ್ಟವನ್ನು ತಿಳಿಯದೆ ನುಡಿಯಲು ಆ ದಾಸಿಯರು ಅವನನ್ನು ಕುರಿತು ತಮ್ಮ ರಹಸ್ಯಭಾಷೆಯಲ್ಲಿ ಹೀಗೆಂದರು - ೯೬, ನಿನಗಿಂತ ರಸಿಕರೂ ಚತುರರೂ ಯಾರಿದ್ದಾರೆ. ನಿನ್ನ ಎಲ್ಲ ಗುಣಗಳನ್ನೂ ಹೊಗಳಲು ಹೊರಟರೆ ನೀನು ಸರ್ವಗುಣಸಂಪನ್ನನೆನ್ನಲೇಬೇಕು. ನೀನು ಸದ್ಭಾವದಿಂದ ನಮ್ಮಲ್ಲಿ ಕೂಡಲು ಬಯಸಿ ಬಂದಿದ್ದೀಯೆ; ಅದೀಗ ಒಳ್ಳೆಯದಾಯಿತು. ನೀನು ಮಹಾದೇವನಾದ ಶಿವನ ಮುಂದಿರುವ ಬಸವನಲ್ಲದೆ ಮತ್ತೇನೆಂದು ಹೇಳೋಣ-ವ|| ಎಂದು ಅವರು ಆತನನ್ನು ಕಾಡಿ ಕಡೆಗಣಿಸಿ ಮಾತನಾಡಿ ಕಳುಹಿಸಲು ಬೇರೊಂದೆಡೆಯಲ್ಲಿ ಒಬ್ಬಳು ತನ್ನನ್ನು ಬಿಟ್ಟುಹೋಗುತ್ತಿದ್ದ ಹೊಸ ಪ್ರೇಮದ ಒಡೆಯನನ್ನು ಏನು ಮಾಡಿದರೂ ಹೋಗುವುದಕ್ಕೆ ಬಿಡದೆ ತನ್ನ ಪ್ರೀತಿಯನ್ನು ತೋರಿಸಿ ೯೭. ಇವನು ಮನೆಯ ಯಜಮಾನ, ಇವನು ಮನ್ಮಥ, ಪ್ರಥಮ ಪ್ರೇಮಕಾಲದ ಚಿಕ್ಕ ಹರೆಯದವ; ಇವ ನನ್ನನ್ನು ಬಿಟ್ಟಾಗ ನಾನು ಉಳಿಯುವುದು ಸಾಧ್ಯವೇ? ಎಂದು ಹೋಗುತ್ತಿರುವ ಪ್ರಿಯನನ್ನು ಸುಮ್ಮನೆ ಚಲಿಸುವುದಕ್ಕೂ ಬಿಡದೆ ಕಾಲುಗಳನ್ನು ಕಟ್ಟಿಕೊಂಡು ಅತ್ತು ಸಂಕೋಲೆ ಹಾಕಿದಂತೆ ಚಂಚಲನೇತ್ರೆಯಾದ ಅವಳು ವಿಶೇಷವಾಗಿ ಕಣ್ಣೀರನ್ನು ಸುರಿಸಿದಳು. ವ|| ಮತ್ತೊಬ್ಬನು ತನ್ನ ಸೂಳೆಯಲ್ಲಾದ ಬೇಸರವನ್ನು ತನ್ನ ಸ್ನೇಹಿತನಿಗೆ ಹೀಗೆ ಹೇಳಿದನು.
Page #256
--------------------------------------------------------------------------
________________
ಚತುರ್ಥಾಶ್ವಾಸಂ | ೨೫೧ ಚಂ ಮುಳಿಸದಂಜಿ ಬಾಯಳೆದಿತ್ತು ಮನಂಗೊಳೆಯುಂ ಕನತ್ಕುದ
ರ್ಕಳವಿಯುಮಂತುಮಿಲ್ಲ ಸನಿಯನ್ನಳೆ ಕುಂಟಣಿ ಪೋದ ಮಾರಿಯ || ಇಳೆ ಮನೆದೋಯ್ತು ಸೀರ್ಕರಡಿಯನ್ನಳೆ ನಾದುನಿಯೊಲ್ಕುಮೊಲ್ಲದ ಇಳೆ ಗಡ ಸೂಳೆಯೆಂದೊಡಿನಿತಂ ತಲೆವೇಸಜನೆಂತು ನೀಗುವೆಂ || ೯೮
ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣನಂ ಪಿಡಿದುಉll ತಪ್ಪುದು ಮಾತು ದೂದವರ ಕೆಯ್ಯೋಳೆ ಕಾಡಿದಟ್ಟ ಕಣ್ಣ ನೀರ್
ತಪ್ಪುವು ನಿಚ್ಚಮಚಿಗಡೊಳಲ್ಕು ಕರಂ ಬಿಸುಸುಯ್ ಸುಯ್ ಸುಯ್ | ತಪುದು ತಪದನ ತನು ಬೇಟದ ಕಾಟದೊಳಿಂತು ಕಂಡುಮಿ
(ಪೊಡಮಾಸೆವಾತನೆನಗೋಪನೆ ನೀಂ ದಯೆಗೆಯ್ಯಲಾಗದೇ | ೯೯
ವ|| ಎಂದು ಕರುಣಂಬಡೆ ನುಡಿದೊಡಗೊಂಡು ಪೋದಳ್ ಮತ್ತಮೊಂದೆಡೆ ಯೊಳೊರ್ವಳ ಕುಂಟಣಿಯುವರೋಧಕ್ಕೆ ಪಿರಿದೀವ ಮುದುಪನನುಟಿಯಲಂಜಿ ತನ್ನ ಬೇಸರ ತನ್ನ ಸಬ್ಬವದಾಕೆಗಿಂತೆಂದಳಚಂ ಕೊರಿಡೆ ಬೆಟ್ಟುಗಳ್ ಬಿರಿವುವುಣುವ ಲಾಳೆಯ ಲೋಳೆಗಳ ಪೊನ
ಊರಿವುವು ಕೆಮ್ಮಿ ಕುಮಿದೊಡೆ ತೋಳೊಳೆ ಜೀವ ವಿಯೋಗಮಪ್ಪುದಂ | ದಿರದೆರ್ದೆಗಪುದತ್ತಳಗಮಾ ನೆರಪಂ ನೆರೆವಂದು ಪೊಂಗಳಂ |
ಸುರಿವೊಡಮಾರೋ ಸೈರಿಸುವರಾತನ ಪಲಿವಾಯ ನಾತಮಂ | ೧೦೦ ೯೮. (ಅವಳ) ಕೋಪಕ್ಕೆ ಹೆದರಿ (ಅವಳ) ಅಭಿಪ್ರಾಯವನ್ನು ತಿಳಿದು ಕೊಟ್ಟು ಅವಳ ಮನಸ್ಸನ್ನು ವಶಪಡಿಸಿಕೊಂಡಿದ್ದರೂ ಅವಳು ರೇಗುವುದಕ್ಕೆ ಅಳತೆಯೂ ಅಂತ್ಯವೂ ಅಲ್ಲ. ತಲೆಹಿಡಿಕಿಯೂ ಶನಿಯಂತಹವಳೇ. ಮನೆಕೆಲಸ ಮಾಡುವ ದಾಸಿಯೂ ಮಾರಿಯಂತಹವಳೇ, ನಾದಿನಿಯು ಸೀರ್ಕರಡಿಯಂತಹವಳೇ. ಎಷ್ಟಾದರೂ ಸೂಳೆಯು ಒಲಿದೂ ಒಲ್ಲದಂತಿರುವವಳೆ ತಾನೆ! ಈ ತಲೆಬೇನೆಯನ್ನು ಹೇಗೆ ನೀಗಲಿ. ವ|| ಎಂದು ಹೇಳಿ ಮುಂದೆ ಹೋದನು. ಬೇರೊಬ್ಬ ಪ್ರಿಯಳು ತನ್ನ ತಾಯಿಯ ಕಣ್ಣನ್ನು ವಂಚಿಸಿ ತನ್ನ ಪ್ರಿಯಳ ಮನೆಗೆ ಹೋಗುತ್ತಿರುವ ತನ್ನ ಪ್ರೇಮದೊಡೆಯನನ್ನು ಹಿಡಿದುಕೊಂಡು ೯೯. ದೂದವಿಯರ ಕಯ್ಯಲ್ಲಿ ನಿನ್ನ ಕಾಲುಹಿಡಿದು ಕಳುಹಿಸಿದ ಮಾತುಗಳು ನಾಶವಾಗುತ್ತಿವೆ. (ನಿಷ್ಟಯೋಜಕವಾಗುತ್ತಿವೆ) ನಿತ್ಯವೂ ದುಃಖಪಟ್ಟು ಅಳುವುದರಿಂದ ಕಣ್ಣೀರು ವ್ಯರ್ಥವಾಗುತ್ತಿದೆ. ನಿಟ್ಟುಸಿರಿನ ಬಿಸಿಯುಸಿರು ಹಾಳಾಗುತ್ತಿದೆ. ನನ್ನ ಶರೀರವು ಬೇಟದ ಕಾಟದಿಂದ ಕ್ಷೀಣಿಸುತ್ತಿದೆ. ಇದನ್ನು ನೋಡಿಯೂ ಇನ್ನು ಮೇಲಾದರೂ ಆಶೆಯ ಮಾತನ್ನು ದಯೆಗೆಯ್ಯಬಾರದೇ ? ವ|| ಎಂದು ಕರುಣೆಯು ಬರುವ ಹಾಗೆ ಮಾತನಾಡಿ ಜೊತೆಯಲ್ಲಿ ಕರೆದುಕೊಂಡು ಹೋದಳು. ಬೇರೊಂದು ಕಡೆಯಲ್ಲಿ ಕುಂಟಣಿಯ ಬಲಾತ್ಕಾರಕ್ಕೆ ವಿಶೇಷ ಧನವನ್ನು ಕೊಡುವ ಮುದುಕನನ್ನು ಬಿಡಲು ಅಂಜಿ ತನ್ನ ಬೇಸರವನ್ನು ತನ್ನ ಪ್ರಿಯಸಖಿಗೆ ಹೀಗೆಂದಳು ೧೦೦. (ಆ ಮುದುಕನು) ಗೊರಕೆಹೊಡೆದರೆ ಬೆಟ್ಟಗಳೇ ಬಿರಿದು ಹೋಗುತ್ತವೆ. ಸುರಿಯುವ ಜೊಲ್ಲಿನ ಲೋಳೆಗಳು ಪ್ರವಾಹವಾಗಿ ಹರಿಯುತ್ತವೆ.
Page #257
--------------------------------------------------------------------------
________________
೨೫೨) ಪಂಪಭಾರತಂ |
ವll ಎಂದು ನಗಿಸುತ್ತಿರ್ದಳ್ ಮತ್ತಮೊಂದೆಡೆಯೊಳೊರ್ವಳ್ ತನ್ನ ನಲ್ಮನಲ್ಲಿಗೆ ದೂದುವೋಗಿ ಬಂದ ದೂದವಿಗೇಗೆಯ್ಯ ತನುಮನಳೆಯದೆ ಪದೆದು ಪಡೆಮಾತು ಬೆಸಗೊಳ್ವಳು ಕಂಡುಚಂ|| ಬಿರಯಿಸಿ ಬೇಟದೊಳ್ ಬಿರಿವ ನರಗಲ್ಲು ಕನಲ್ಲೊನಲ್ಲು ನ
ಲ್ಲರ ದೆಸೆಯಿಂದಮವರೆ ಕೋಗಿಲೆಯಾಲರಕ್ಕೆ ತುಂಬಿಯ | ಕರಗಿಳಿಯಕ್ಕೆ ಬಂದೊಡಮೊಲ್ಲೆರ್ದೆಯಾಳುವರೆಂದೊಡೇತ ದೂ
ತರೆ ತರ ಬಂದ ಸಬ್ಬವದ ಮಾತುಗಳು ಗುಡಿಗಟ್ಟಿ ಕೇಳರೇ ೧೦೧ `ವರ ಅಂತುಮಲ್ಲದೆಯುರಿಚoll.
ಮನದೊಳಲಂಪನಾಳ್ಳಿನಿಯನಟ್ಟಿದ ದೂದರ ಸೀಯನಪ್ಪ ಮಾ ತಿನ ರಸದೊಳ್ ಕೋನರ್ವುದು ತಳಿರ್ವುದು ಪೂವುದು ಕಾಯುದಂತು ಕಾ ಹೈನಿತಾಳಂತು ಎಂದು ಮನದೊಳ್ ತೊದಳಿಲ್ಲದ ನಲೆಯೆಂಬ ನಂ ದನವನಮೋಪದೊಳ್ ನೆರೆದೊಡಂತು ರಸಂ ಬಿಡ ಪಣುದಾಗದೇ || ೧೦೨ ವ|| ಅಂತುಮಲ್ಲದೆಯುರಿಚಂ|| ಅನುವಿಗೆ ಬೇಟಕಾಳಿನೊಲವಿರ್ಮಡಿಯಪ್ಪುದು ಬಯ್ಕೆ ಬೇಟಕಾ
ಅನ ಬಗೆ ನಿಲ್ಲದಿಕ್ಕೆಗೊಳಗಪ್ಪುದು ನಿಟ್ಟಸ ಬೇಟ ಚೇಟಕಾ | ಜನ ರುಚಿ ಬಂಬಲುಂ ತುಜುಗಲುಂ ಕೊಳುತಿರ್ಪುದು ನೂಂಕೆ ಬೇಟಕಾ
ಜನ ಮನವಟ್ಟಿ ಪತ್ತುವುದು ಬೇಟವಿದೇಂ ವಿಪರೀತವೃತ್ತಿಯೋ || ೧೦೩ ಕೆಮ್ಮಿ ಎದುಗುಟ್ಟಿದರೆ ತೋಳಿನಲ್ಲಿಯೇ ಜೀವ ಹೋಗುತ್ತದೆಯೆಂಬ ಭಯ ವುಂಟಾಗುತ್ತದೆ. (ಇಂತಹ) ಆ ಮುದುಕನು (ನನ್ನಲ್ಲಿ) ಕೂಡುವುದಕ್ಕೆ ಬಂದು (ಎಷ್ಟೇ) ಹೊನ್ನುಗಳನ್ನು ಸುರಿದರೂ ಅವನ ಹಲ್ಲಿಲ್ಲದ ಬಾಯಿನ ದುರ್ಗಂಧವನ್ನು ಯಾರು ತಾನೆ ಸಹಿಸುತ್ತಾರೆ. ವ|| ಎಂದು ನಗಿಸುತ್ತಿದ್ದಳು, ಇನ್ನೊಂದೆಡೆಯಲ್ಲಿ ಒಬ್ಬಳು ತನ್ನ ಪ್ರಿಯನ ಕಡೆಗೆ ಪ್ರೇಮಸಂದೇಶವನ್ನು ಕೊಂಡುಹೋಗಿ ಬಂದ ದೂತಿಗೆ ಏನು ಮಾಡಬೇಕೆಂಬುದನ್ನು ತಿಳಿಯದೆ ಆಶೆಪಟ್ಟು (ಅವನು ಕಳುಹಿಸಿದ) ಪ್ರತ್ಯುತ್ತರವನ್ನು ಕೇಳುವವಳನ್ನು ನೋಡಿ ೧೦೧. ವಿರಹವೇದನೆಯಿಂದ ನರಳುತ್ತಿರುವ ಪ್ರೇಮಿಗಳ ಕೋಪದಿಂದ ಅಗಲಿಹೋದ ತಮ್ಮನಲ್ಲರ ಕಡೆಯಿಂದ ಪ್ರೇಮಸಮಾಚಾರವು ಬರಲು ಕೋಗಿಲೆಯಾಗಲಿ, ಗಾಳಿಯಾಗಲಿ, ತುಂಬಿಯಾಗಲಿ, ಗಿಳಿಯಾಗಲಿ, ಬಂದರೂ ನಲಿದು ಮನಸ್ಸಮಾಧಾನವನ್ನು ಪಡೆಯುತ್ತಾರೆ ಎಂದಾಗ ತಮ್ಮ ಪ್ರೀತಿಪಾತ್ರರಾದ ದೂತರೇ ತಂದಿರುವ ಪ್ರಿಯವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ ? ವl ಹಾಗಲ್ಲದೆಯೂ ೧೦೨. ಪ್ರಿಯನು ಮನಸ್ಸಿನಲ್ಲಿ ಸಂತೋಷಗೊಂಡು ಕಳುಹಿಸಿದ ದೂತರ ಸಿಹಿಯಾದ ಮಾತಿನ ರಸದಲ್ಲಿ ಶುದ್ಧಪ್ರೇಮವೆಂಬ ನಂದನವನವು ಕವಲೊಡೆಯುವುದು, ಚಿಗುರುವುದು, ಹೂ ಬಿಡುವುದು. ಹಾಗೆಯೇ ಕಾಯಾಗುವುದು - ಮನಸ್ಸಿನಲ್ಲಿ ನಿಂತು ನಲ್ಲನಲ್ಲರ ಸಮಾಗಮದಲ್ಲಿ ಹಣ್ಣಾಗುವುದಿಲ್ಲವೇ? ವಗ ಹಾಗಲ್ಲದೆಯೂ ೧೦೩. ಬಲಾತ್ಕಾರ ಮಾಡಿದರೆ ಪ್ರೇಮಿಯ ಪ್ರೀತಿ
Page #258
--------------------------------------------------------------------------
________________
ಚತುರ್ಥಾಶ್ವಾಸಂ | ೨೫೩ ವll ಇಂದುಮಿಾ ದೂದವರೆಂಬರ್ ಬೇಟಕಾಜಿರ ಬೇಟಮೆಂಬ ಲತೆಗಳಡರ್ಪಿಪ್ರಂತಿರ್ದ ರೆಂತಪ್ಪ ಬೇಟಂಗಳುಮವರ್ ಪೊಸಯಿಸೆ ಪೊಸತಪ್ಪುದು ಕಿಡಿಕೆ ಕಿಡುವುದಂತುಮಲ್ಲದೆಯುಂಚoll ನುಡಿಗಳೊಳಾಸೆಯುಂಟೆನಲೊಡಂ ತಳೆದಂತಿರೆ ನಿಲ್ಲುದೆಂತುಮಾ |
ವಡೆಯೋಳಮಾಸೆಗಾರನೆನೆ ತೊಟ್ಟನ ಪೊಪುವು ನಲ್ಲರಿರ್ವರೀ | ರೊಡಲೊಳಗಿರ್ಪ ಜೀವಮದುಕಾರಣದಿಂದಮೆ ಪೋಪ ಬರ್ಪೊಡಂ : ಬಡನೊಳಕೊಂಡ ದೂದವರ ಕೆಯ್ಯೋಳೆ ಕೆಯ್ಯಡೆಯಿರ್ಪುದಾಗದೇ || ೧೦೪.
ವ|| ಎಂದು ನುಡಿಯುತ್ತುಂ ಬರೆವರೆ ಮತ್ತೊಂದೆಡೆಯೊಳೊರ್ವಂ ಗರ್ಭಶ್ವರಂ ತನ್ನ ಹೃದಯೇಶ್ವರಿಯನಗಟ್ಟು ಬಂದು ಪೆರಾರುಮಂ ಮೆಚ್ಚದಾಕೆಯಂ ನೆನೆದುಚಂil ಮಿಟುಗುವ ತೋರಹಾರಮುಮನಸ್ಸಿನ ಕಾಳಸಗಡ್ಡಮೆಂಬ ಬೇ
ಸಟಿನೊಳೆ ಕಟ್ಟಲೊಲ್ಲದನಿತುಅನಿಲ್ಕುಳಿಗೊಂಡಲಂಪಿನ | ತೆಂಗಿದ ನಲ್ಗಳಿರ್ದಯೊಳಕ್ಕಟ ಬೆಟ್ಟುಗಳುಂ ಬನಂಗಳುಂ ತೋಜನೆಗಳುಮಾಗಳೊಡ್ಡಟೆಯದೊಡ್ಡಿಗೆ ಸೈರಿಸುವಂತುಟಾದುದೇ || ೧೦೫
ಎರಡರಷ್ಟಾಗುತ್ತದೆ. ಬಯ್ದರೆ ಪ್ರಿಯನ ಮನಸ್ಸು ಅಸ್ಥಿರವಾಗುತ್ತದೆ. ದೃಷ್ಟಿಸಿ ನೋಡಿದರೆ ಪ್ರೇಮವೂ ಬೇಟೆಕಾರನ ಸವಿಯೂ ರಾಶಿರಾಶಿಯಾಗುತ್ತದೆ. ನೂಂಕಿದರೆ ಬೇಟೆಕಾರನ ಮನಸ್ಸು ಬೆನ್ನಟ್ಟಿ ಬರುತ್ತದೆ. ಆದುದರಿಂದ ಈ ಬೇಟವೆಂಬುದು ಎಂಥ ಪರಸ್ಪರ ವಿರೋಧ ಸ್ವಭಾವವುಳ್ಳುದೋ ? ವು ಹೀಗೆ ದೂದವಿಯರೆಂಬುವರು ಬೇಟೆಕಾರರ ಬೇಟವೆಂಬ ಲತೆಗೆ ಆಶ್ರಯದಂತಿದ್ದಾರೆ. ಎಂತಹ ಪ್ರೇಮವೂ ಅವರು ಹೊಸದು ಮಾಡಿದರೆ ಹೊಸದಾಗುತ್ತದೆ. ಕೆಡಿಸಿದರೆ ಕೆಟ್ಟುಹೋಗುತ್ತದೆ. ಅಲ್ಲದೆಯೂ ೧೦೪. ಪ್ರೇಮಿಗಳಿಬ್ಬರ ಶರೀರದಲ್ಲಿರುವ ಪ್ರಾಣವು ದೂತರು ತರುವ ಮಾತುಗಳಲ್ಲಿ ಆಸೆಯಿದೆಯೆಂದೊಡನೆ ಜೀವಧಾರಣೆ ಮಾಡಿದ ಹಾಗೆ ಎದ್ದು ನಿಲ್ಲುತ್ತದೆ. ಯಾರ ಕಡೆಯಲ್ಲಿಯೂ ಆಸೆಯಿಲ್ಲವೆಂದೊಡನೆ ತಟಕ್ಕನೆ ಹೊರಟು ಹೋಗುತ್ತದೆ. ಆದುದರಿಂದ ಪ್ರಿಯರಲ್ಲಿಗೆ ಹೋಗಿ ಬಂದು ಅವರ ಒಪ್ಪಿಗೆಯನ್ನು ಪಡೆದಿರುವ ದೂತಿಯರ ಕಯ್ಯಲ್ಲಿಯೇ ಪ್ರಣಯಿಗಳ ಪ್ರಾಣವು ಮೀಸಲಾಗಿರುವುದು ವ|| ಎಂದು ಮಾತನಾಡುತ್ತ ಬರುತ್ತಿರಲು ಮತ್ತೊಂದು ಕಡೆಯಲ್ಲಿ ಒಬ್ಬ ಆಗರ್ಭ ಶ್ರೀಮಂತನು ತನ್ನ ಪ್ರಾಣಪ್ರಿಯೆಯನ್ನು ಅಗಲಿ ಬಂದು ಬೇರೆ ಯಾರನ್ನೂ ಮೆಚ್ಚದೆ ಆಕೆಯನ್ನು ಜ್ಞಾಪಿಸಿಕೊಂಡು ೧೦೫, ಪ್ರಿಯಳು ಮುತ್ತಿನ ಹಾರವನ್ನು ಧರಿಸಿದರೆ ನಮ್ಮಆಲಿಂಗನದ ಬೆಸುಗೆಗೆ ಅಡ್ಡಿಯಾಗುತ್ತದೆಂದು ಅವಳ ಕತ್ತಿನಲ್ಲಿ ಅದನ್ನು ತೊಡಿಸದೇ ಅಷ್ಟು ಪ್ರೇಮವನ್ನು ಸೆಳೆದುಕೊಂಡ ನಾನು ಈಗ ಸುಖದ ಕಡೆಗೇ ಬಾಗಿದ ನಲ್ಗಳ ನಡುಗುವ ಎದೆಗೂ ನನಗೂ ಮಧ್ಯೆ ಅಯ್ಯೋ ಬೆಟ್ಟಗಳೂ ತೊರೆಗಳೂ ಕಾಡುಗಳೂ ರಾಶಿ ರಾಶಿಯಾಗಿ ಅಡ್ಡವಾಗಿರುವಂತೆ ಚಾಚಿಕೊಂಡಿರಲು ಸಹಿಸುವ ಹಾಗಾಯಿತೆ?
t (ಅಷ್ಟು ಗಾಢವಾದ ಪ್ರೇಮವನ್ನು ಅಗಲಿ ನಾನು ದೂರವಿರುವುದನ್ನು ಹೇಗೆ ಸಹಿಸಲಿ ಎಂದು ಭಾವ) .
Page #259
--------------------------------------------------------------------------
________________
೨೫೪ / ಪಂಪಭಾರತಂ
ನೆನೆದು
ಚಂ
ಮುನಿಸಿನೊಳಾದಮೇವಯಿಸಿ ಸೈರಿಸದಾದಲೊಳ್ ಕನಲ್ಕು ಕಂ ಗನೆ ಕನಲುತ್ತುಮುಮ್ಮಳಿಸಿ ಸೈರಿಸಲಾಗಿದೆ ಮೇಲೆವಾಯ್ತು ಬ ಯ್ದನುವಿಸಿ ಕಾಡಿ ನೋಡಿ ತಿಳಿದ ನಿನ್ನುಳಿಗೊಂಡಲಂಪುಗಳ ಕನಸಿನೊಳಂ ಪಳಂಚಲೆವುದೆನ್ನೆರ್ದೆಯೊಳ್ ತರಳಾಯತೇಕ್ಷಣೇ ||
ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನಿರ್ದ೦ದಿನ ಮುಳಿಸೊಸಗೆಗಳಂ
೧೦೬
ಬಗೆ ಗೆಲಲೆಂದು ಕಾಡಿ ಪುಸಿನಿದ್ದೆಯೊಳಾನಿಗೆ ಲಲ್ಲೆಗೆಯ್ದು ಲ
ಲೆಗೆ ಮದಿರ್ದೊಡವನೊಳೊಂದಿ ಮೊಗಂ ಮೊಗದತ್ತ ಸಾರ್ಚಿ ಬೆ | ಚಗೆ ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳದೇಂ ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ || ೧೦೭ ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳಗೆ ನಗುತ್ತು ಬರ್ಪನೊಂದೆಡೆಯೊಳ್ -
ಚಂ।। ಒಲವಿನೊಳಾದ ಕಾಯ್ದು ಮಿಗೆ ಕಾದಲನಂ ಬಿಸುಟಂತೆ ಪೋಪ ಕಾ
ದಲಳಲತುಂ ತೆ೦ದಿರಿದು ನೋಡಿದ ನೋಟದೊಳೆಯೇ ತಳ್ಳ ಪ | ರ್ಮೊಲೆ ಪೊಮುಯ್ದು ಬೆನ್ನಿನಿತುಮೊರ್ಮೆಯೆ ನಾಂಬಿನಮು ಪೊಕ ಲರ್ಗಳಿನಷ್ಟು ಪಾಯ್ದುವರಲಂಬುಗಳಂತೆ ವಿಲೋಚನಾಂಬುಗಳ್ ||೧೦೮
೧೦೬. ಎಲ್ ಚಂಚಲಾಕ್ಷಿಯೇ ಕೋಪದಲ್ಲಿ ವಿಶೇಷವಾಗಿ ಅಸಮಾಧಾನಗೊಂಡು ಸಹಿಸಲಾರದೆ ವಿಶೇಷ ಕೋಪಿಸುತ್ತ ದುಃಖಿಸಿ ಹೇಗೂ ತಾಳಲಾರದೆ ಮೇಲೆ ಬಿದ್ದು ಬಯ್ತು ಬಲಾತ್ಕರಿಸಿ ಕಾಡಿ ನೋಡಿ ಸಮಾಧಾನವನ್ನು ಹೊಂದಿ ಮುತ್ತನ್ನು ಸೆಳೆದುಕೊಂಡ ಸುಖದ ನೆನಪುಗಳು ಕನಸ್ಸಿನಲ್ಲಿಯೂ ನನ್ನೆದೆಯನ್ನು ತಗುಲಿ ಪೀಡಿಸುತ್ತಿರುವುವು ವ। ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯ ಜೊತೆಯಲ್ಲಿದ್ದ ಆ ದಿನದ ಕೋಪ ಪ್ರಸಾದಗಳನ್ನು ನೆನೆಸಿಕೊಂಡು ೧೦೭. (ಪ್ರಿಯೆಯೊಡನೆ) ಜಗಳವಾಡಿ ಅವಳ ಮನಸ್ಸನ್ನು ಗೆಲ್ಲಬೇಕೆಂದು ನಾನು ಹುಸಿನಿದ್ದೆಯಲ್ಲಿರಲು ತಾನು ಮುದ್ದುಮಾತುಗಳನ್ನಾಡಿ ಆ ಮುದ್ದುಮಾತಿಗೂ ನಾನು ಮೈಮರೆತವನಂತಿರಲು ಪ್ರೇಮದಿಂದ ಕೂಡಿ ನನ್ನ ಮುಖದೊಡನೆ ತನ್ನ ಮುಖವನ್ನು ಸೇರಿಸಿ ಬಿಸಿಯಾಗಿ ನಿಟ್ಟುಸಿರು ಬಿಟ್ಟ ಪ್ರಿಯಳ ಮುಖಕಮಲದ ಸುಗಂಧದಲ್ಲಿ ಸೇರಿಕೊಂಡ ಪಚ್ಚಕರ್ಪೂರ ಮಿಶ್ರಿತವಾದ ತಾಂಬೂಲದ ಉಂಡೆಯೂ ಎಷ್ಟು ಗಮಗಮಿಸಿತ್ತೋ? ವ|| ಎಂದು ತನ್ನಲ್ಲಿಯೇ ಹಲುಬುತ್ತಿದ್ದವನನ್ನು ಅರ್ಜುನನು ಕಂಡು ಇವನೂ ನಮ್ಮಂತಹವನೂ ನಮ್ಮ ನಂಟನೂ ಆಗಿದ್ದಾನೆ ಎಂದು ಮುಗುಳ್ಳಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ೧೦೮. ಪ್ರಣಯಕಲಹದಲ್ಲಿ ಉಂಟಾದ ಕೋಪವು ಹೆಚ್ಚಾಗಲು ಪ್ರಿಯನನ್ನು ತೊರೆದು ಹೋಗುತ್ತಿರುವ ಪ್ರಿಯಳು ಬಗೆಬಗೆಯಾಗಿ ಅಳುತ್ತಾ ಹಿಂತಿರುಗಿ ನೋಡಿದ ನೋಟದಲ್ಲಿ ಅವಳ ಗಾಢವಾದ ಪೆರ್ಮೊಲೆಗಳೂ ಹೆಗಲ ಹಿಂಭಾಗವೂ ಬೆನ್ನೂ ಏಕಕಾಲದಲ್ಲಿ ತೊಯ್ದುಹೋಗುವ ಹಾಗೆ ಅವಳ ಹೂವಿನಂತಿರುವ ಕಣ್ಣುಗಳಿಂದ
!
Page #260
--------------------------------------------------------------------------
________________
ಚತುರ್ಥಾಶ್ವಾಸಂ | ೨೫೫ ವಗಿರಿ ಮತ್ತಮೊಂದೆಡೆಯೊಳೊಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲಾಲಂ ಕೃತವಿಚಿತ್ರಭಿತ್ತಿವಿರಾಜಿತರಮ್ಯಹರ್ಮ್ಮತಳದೊಳ್ ಪಲಕಾಲಮಗಲ್ಲ ನಲ್ಲರಿರ್ವರುಮೊಂದೆಡೆ ಯೊಳ್ ಕೂಡಿಮ ಸಮಸಂದಅಲಂಪನೀಯ ಶಯನಂ ಘರ್ಮಾಂಬುವಿಂ ನಾನೆ ಮು
ನ್ಯಮ ನಾಡೂಲ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ ವಿ | ಭ್ರಮಮಂ ಕಂಠರವಕ್ಕೆ ತಾಡನ ರವರ ತಂದೀಯೆ ತಚ್ಚಯ್ಯೊಳ್ ಸಮಹಸ್ತಂಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ || ೧೦೯ ವll ಅಂತನೇಕ ಪ್ರಕಾರ ಪುರ ಜನಜನಿತ ವಿಕಾರಂಗಳಂ ತೊಲಲ್ಲು ನೋಂನ್ನೆಗಂಚಂ ಸೊಡರ್ಗುಡಿಯೊಯ್ಯನಾಗೆ ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾಟಿ ತ
ಡಿದಲರೂದೆ ಗಾವರದ ಮೆಲ್ಕುಲಿ ತುಂಬಿಯ ಗಾವರಂಗಳಂ | ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲಿಡೆ ನಾಡ ಏತರ್ಕದಿಂ ಬೆರ ಲಿಡಿದು ಗುಣಾರ್ಣವಂ ನೆಬಿಯ ನಿಟ್ಟಿಸಿದಂ ಬೆಳಗಪ್ಪ ಜಾವಮಂ |೧೧೦
ವ|| ಆಗಳ್ ತನ್ನೊಡನೆ ತೇಲಲ್ಕ ನಾಗರಕ ವಿಟ ವಿದೂಷಕ ಪೀಠ ಮರ್ದಕರ್ಕಳನಿರಲ್ವೆಟ್ಟು ರಾಜಮಂದಿರಮಂ ಪೊಕ್ಕು ತನ್ನ ಪವಡಿಸುವ ಮಾಡಕ್ಕೆಂದು
ಕಣ್ಣೀರು ಪುಷ್ಪಬಾಣಗಳಂತೆ ಹೆಚ್ಚಿ ಚಿಮ್ಮಿ ಸೂಸಿ ಹರಿದುವು. ವ|| ಮತ್ತೊಂದು ಕಡೆಯಲ್ಲಿ ಕಪ್ಪಾದ ಅಗುರು ಧೂಪದ ಹೊಗೆಯಿಂದ ಮಾಸಿದ ಶ್ಯಾಮಲ ವರ್ಣದಿಂದ ಅಲಂಕರಿಸಲ್ಪಟ್ಟು ಚಿತ್ರಮಯವಾದ ಗೋಡೆಗಳಿಂದ ವಿರಾಜಮಾನವಾಗಿರುವ ರಮಣೀಯವಾದ ಉಪ್ಪರಿಗೆಯ ಪ್ರದೇಶದಲ್ಲಿ ಹಲವು ಕಾಲ ಅಗಲಿದ್ದ ಇಬ್ಬರು ಪ್ರೇಮಿಗಳು ಒಂದು ಕಡೆ ಕೂಡಿದ್ದರು. ೧೦೯. ಆ ಪ್ರಿಯ ಪ್ರೇಯಸಿಯರಲ್ಲಿ ಸಮಾನವಾಗಿ ಉಂಟಾದ ಪ್ರೀತಿಯು ಸೌಖ್ಯವನ್ನುಂಟುಮಾಡಲು ಬೆವರಿನಿಂದ ಹಾಸಿಗೆಯು ತೊಯ್ದು ಹೋಯಿತು. ಮೊದಲೇ ಲಜ್ಜೆಯಿಂದ ಪ್ರಸರಿಸಿ ಹರಿಯುವ ಸುರತದ್ರವವು ಗಂಗಾಜಲವನ್ನು ಹೋಲುತ್ತಿತ್ತು. ಕತ್ತಿನ ಗರಗರಿಕೆಯ ಶಬ್ದಕ್ಕೆ ಸುರತಧ್ವನಿ ಸೊಗಸನ್ನುಂಟುಮಾಡುತ್ತಿತ್ತು. ಆ ಹಾಸಿಗೆಯಲ್ಲಿ ರತಿಕ್ರೀಡೆಯ ಪ್ರಾರಂಭದ ಆರ್ಭಟವು ಸಮಾನ ಹಸ್ತವನ್ನು ಹಿಡಿಯುವ ಹಾಗಾಯಿತು. ಪ್ರಿಯ ಪ್ರೇಯಸಿಯರ ಸುರತಕ್ರೀಡೆಯು ಸಮಾನ ಪ್ರಮಾಣವುಳ್ಳದ್ದಾಯಿತು. ವ| ಹೀಗೆ ಪುರಜನರ ಅನೇಕ ಪ್ರಕಾರವಾದ ವಿಕಾರಗಳನ್ನು ಅರ್ಜುನನು ನೋಡುತ್ತ ಬರುತ್ತಿರಲು ೧೧೦. ದೀಪದ ಕುಡಿಯು ಮಲಿನವಾಯಿತು, ಮಲ್ಲಿಗೆಯು ಮೃದುವಾಗಿ ವಾಸನೆಯನ್ನು ಬೀರಿತು, - ತಂಪಾದ ಗಾಳಿ ಬೀಸಿತು. ಪ್ರಾತಃಕಾಲದ ಮೃದುವಾದ ಧ್ವನಿಯು ದುಂಬಿಯ * ಧ್ವನಿಯೊಡನೆ ಕೂಡಿಕೊಂಡಿತು. ಬೆಳುದಿಂಗಳಿನ ಕಾಂತಿ ಕಡಮೆಯಾಯಿತು. ವಿಶೇಷವಾದ ತರ್ಕದಿಂದ ಅರ್ಜುನನು ಬೆಳಗಾಗುವ ಹೊತ್ತನ್ನು ಪೂರ್ಣವಾಗಿ ತಿಳಿದನು. ವ|| ಆತ ತನ್ನೊಡನೆ ತೊಳಲುತ್ತಿದ್ದ ನಾಗರಿಕ, ವಿಟ, ವಿದೂಷಕ, ಪೀಠಮರ್ದಕರನ್ನು ಇರಹೇಳಿ ಅರಮನೆಯನ್ನು ಪ್ರವೇಶಿಸಿ ತಾನು ಮಲಗುವ
Page #261
--------------------------------------------------------------------------
________________
೨೫೬ | ಪಂಪಭಾರತಂ ಹಂಸ ಧವಳ ಶಯಾತಳದೊಳ್ ಗಂಗಾನದೀ ಪುಳಿನ ಪರಿಸರ ಪ್ರದೇಶದೊಳ್ ಮದೊಆಗುವೈರಾವತದಂತೆ ಪವಡಿಸಿ ಕಿಟೆದಾನುಂ ಬೇಗದೊಳ್ ಸುಭದ್ರೆಯಂ ಕನಸಿನೊಳ ಕಂಡು ನನಸೆಂದು ಬಗೆದು ಮಂಗಳಪಾಠಕರವಂಗಳೊಳ್ ಭೋಂಕನೆಕ್ಕತ್ರನನ್ನೆಗಂ
ಪುದಿದ ತಮಂ ಮದೀಯ ಕಿರಣಾಳಿಯನಾನದವೋಲೆ ನಿನ್ನ ನಾ - ವದಟರುಮಾನರೆನ್ನುದಯಮಭ್ಯುದಯಂ ನಿನಗೆಂದು ಕನ್ನೆಯಂ | ಪದದೊಡಗೊಂಡು ಪೋಗಿರದಿರೆಂದು ಗುಣಾರ್ಣವ ಭೂಭುಜಂಗ ಕ. “ದಿರೊಳೆ ಬಟ್ಟೆದೋಜುವವೊಲಂದೊಗೆದಂ ಕಮಲೈಕಬಾಂಧವಂ 11೧೧೧
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ - ವಿಕ್ರಮಾರ್ಜುನ ವಿಜಯದೊಳ್
.ಚತುರ್ಥಾಶ್ವಾಸಂ
ಉಪ್ಪರಿಗೆಯ ಮನೆಗೆ ಬಂದು ಹಂಸದಷ್ಟು ಬೆಳ್ಳಗಿರುವ ಹಾಸಿಗೆಯಲ್ಲಿ ಗಂಗಾನದಿಯ ಮರಳು ದಿಣ್ಣೆಯ ಪ್ರದೇಶದಲ್ಲಿ ಮರೆತು ಮಲಗಿರುವ ಐರಾವತದ ಹಾಗೆ ಮಲಗಿದ್ದು ಕೆಲವು ಕಾಲದ ಮೇಲೆ ಸುಭದ್ರೆಯನ್ನು ಕನಸಿನಲ್ಲಿ ಕಂಡು ಅದು ಪ್ರತ್ಯಕ್ಷವೇ ಎಂದು ಭಾವಿಸುವಷ್ಟರಲ್ಲಿ ಮಂಗಳವನ್ನು ಹಾಡುವ ಹೊಗಳುಭಟರ ಶಬ್ದಗಳಿಂದ ಇದ್ದಕ್ಕಿದ್ದ ಹಾಗೆ ಎದ್ದನು. ಅಷ್ಟರಲ್ಲಿ ೧೧೧. ವ್ಯಾಪ್ತವಾದ ಕತ್ತಲೆಯು ನನ್ನ ಕಿರಣಸಮೂಹಗಳನ್ನು ಎದುರಿಸಲಾರದು. ಹಾಗೆಯೇ ನಿನ್ನನ್ನು ಯಾವ ಶೂರರೂ ಎದುರಿಸರು. ನನ್ನ ಉದಯವು ನಿನಗೆ ಶ್ರೇಯಸ್ಕರವಾದುದು, ಕನೈಯಾದ ಸುಭದ್ರೆಯನ್ನು ಬಯಸಿ ಜೊತೆಯಲ್ಲಿ ಕರೆದುಕೊಂಡು ಹೋಗು (ಹೋಗದೇ ಇರಬೇಡ) ಇಲ್ಲಿರಬೇಡ ಎಂದು ಅರ್ಜುನ ಮಹಾರಾಜನಿಗೆ ಮುಂದಿನ ದಾರಿ ತೋರಿಸುವ ಹಾಗೆ ಸೂರ್ಯನು ಆ ದಿನ ಉದಯವಾದನು. ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದ ಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾ ಗುಣಾರ್ಣವನಿಂದ ರಚಿತವಾದ ವಿಕ್ರಮಾರ್ಜುನ ವಿಜಯದಲ್ಲಿ ನಾಲ್ಕನೆಯ ಆಶ್ವಾಸವು.
Page #262
--------------------------------------------------------------------------
________________
ಪಂಚಮಾಶ್ವಾಸಂ ಕಂ|| ಶ್ರೀ ವೀರ ಕೀರ್ತಿ
ಶ್ರೀ ವಾಕ್ಶ್ರೀಯಂಬ ಪಂಡಿರಗಲದೆ ತನ್ನೋ ಭಾವಿಸಿದ ಪೆಂಡಿರೆನಿಸಿದ ಸೌವಾಗ್ಯದ ಹರಿಗನಮನೇನೊಲ್ಲಪನೋ | ಎಂಬ ಬಗೆಯೊಳ್ ಸುಭದ್ರೆ ಪ ಲುಂಬಿ ಮನಂಬಸದೆ ತನುವನಾಳೆಸಲಲರಿಂ | ತುಂಬಿಗಳಿಂ ತಣ್ಣಲರಿಂ ತುಂಬಿದ ತಿಳಿಗೊಳದಿನೆಸೆವ ಬನಮಂ ಪೊಕ್ಕಳ್ || ತಳತಳಿಸಿ ಪೊಳೆವ ಮಾವಿನ ತಳಿರ್ಗಳಶೋಕೆಗಳ ಮಿಸುಪ ಲತೆಗಳ ನೆಲೆ ಬ | qಳ ಬಳೆದ ಬೇಟದುರುಳಿಯ ಬಳಗವಿದೆಂದೆಳೆಯಳೆಳಸಿ ತಳವೆಳಗಾದಳ್ || , ಕೊಳದ ತಡಿವಿಡಿದು ಬೆಳೆದೆಳ ದಳಿರ್ಗಳಶೋಕೆಗಳ ಲತೆಯು ಮನೆಗಳೊಳೆ ತೆಣಂ | ಬೋಳವಲರ ಬಸದೆ ಸುಳಿವಳಿ, ಗಳ ಬಳಗದ ದನಿಗೆ ಕಿನಿಸಿ ಕಿಂಕಿಣಿವೋದ || ಸುರಯಿಯ ಬಿರಿಮುಗುಳಳ ಪೊರೆ ಪೊರೆಯೊಳ್ ಪೊವೊರಕನಲ್ಲದಲ್ಲುಗುವ ರಜಂ | ಬೊರೆದು ಪರಕಲಿಸಿದಳಿಕುಳ
ಪರಿಕರಮುಮನತನುಶಿಖಿಯ ಕಿಡಿಗಳೆ ಗೆತ್ತಳ್ || ೧. ಲಕ್ಷ್ಮಿ, ಜಯಲಕ್ಷ್ಮಿ ಕೀರ್ತಿಲಕ್ಷ್ಮಿ ವಾಕ್ಲಕ್ಷ್ಮಿ ಎಂಬ ಸ್ತ್ರೀಯರು ತನ್ನನ್ನು ಯಾವಾಗಲೂ ಧ್ಯಾನಿಸುತ್ತಿರುವ ಸ್ತ್ರೀಯರು ಎಂಬ ಸೌಭಾಗ್ಯವನ್ನುಳ್ಳ ಅರ್ಜುನನು ನನ್ನನ್ನು ಪ್ರೀತಿಸುತ್ತಾನೆಯೋ ಇಲ್ಲವೋ? ೨. ಎಂಬ ಮನಸ್ಸಿನಿಂದ ಕೂಡಿದ ಸುಭದ್ರೆಯು ಹಲುಬಿ ಮನಸ್ಸನ್ನು ಎರಡು ಭಾಗ ಮಾಡದೆ (ಏಕಮನಸ್ಕಳಾಗಿ) ಶರೀರದ (ವಿರಹದ) ಸಂತಾಪವನ್ನು ಆರಿಸಿಕೊಳ್ಳಲು ಹೂವಿನಿಂದಲೂ ದುಂಬಿಗಳಿಂದಲೂ ತಂಗಾಳಿಯಿಂದಲೂ ತುಂಬಿದ ತಿಳಿನೀರಿನ ಕೊಳಗಳಿಂದಲೂ ಸೊಗಯಿಸುವ ವನವನ್ನು ಪ್ರವೇಶಿಸದಳು. ೩. ತಳತಳ ಎಂದು ಹೊಳೆಯುವ ಮಾವಿನ ಚಿಗುರುಗಳ, ಅಶೋಕ ವೃಕ್ಷಗಳ, ಹೊಳೆಯುವ ಬೆಳ್ಳಿ ಮೋಡಗಳ ಈ ಪ್ರದೇಶವು ಅತ್ಯತಿಶಯವಾಗಿ ಬೆಳೆಯುವ ಪ್ರೇಮದುಂಡೆಗಳ ಸಮೂಹವೆಂದು ಬಾಲೆಯಾದ ಸುಭದ್ರೆಯು ತಳವೆಳಗಾದಳು. ೪. ಸರೋವರದ ದಡವನ್ನೇ ಅನುಸರಿಸಿ ಬೆಳೆದ ಎಳೆಯ ಚಿಗುರನ್ನುಳ್ಳ ಅಶೋಕ ಮರಗಳ ಲತಾಗೃಹಗಳಲ್ಲಿಯೇ ವಿಧವಿಧವಾಗಿ ಹೊಳೆಯುವ ಹೂವುಗಳಿಗೆ ಮುತ್ತಿ ಸುತ್ತಾಡುವ ದುಂಬಿಗಳ ಧ್ವನಿಗೆ ಕೋಪಿಸಿ ಕಿರಿಕಿರಿಯಾದಳು. ೫. ಸುರಗಿಯ ಹೂವಿನ ಅರಳಿದ ಮೊಗ್ಗುಗಳ ಒತ್ತಾದ ಪದರಗಳಲ್ಲಿ ಲಘುವಾಗಿ
Page #263
--------------------------------------------------------------------------
________________
೨೫೮/ ಪಂಪಭಾರತಂ
ವ|| ಅಂತು ನನೆಯ ಕೊನೆಯ ತಳಿರ ನಿಡೆದಳಿರ ಮುಗುಳ ಬಿರಿಮುಗುಳ ಮಿಡಿಯ ಕಿರುಮಿಡಿಯ ಬಲಿಡಿಗಳೊಳಗಿ ತುಲುಗಿದ ಬನಮಂ ಪೊಕ್ಕಲ್ಲಿಯುಂ ಮಯ್ಯನಾಟಿಸಲಾಗಿದೆ ಪೂತ ಭೂತಲತೆಗಳೊಳ್ ತಳೊಯ್ದ ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿ ಮುಗುಳಳೊಳ್ ತುಲುಗಿದದಿರ್ಮುತ್ತೆಯ ಸುತ್ತಿನೊಳೆಸೆದುಪಾಶ್ರಯಂಬಡೆದ ಸಾಂದ್ರ ಚಂದ್ರಕಾಂತದ ಶಿಲೆಯನೊಳಗುಮಾಡಿ
ಮ||
ಇದಿರೊಳ್ ಕಟ್ಟಿದ ತೋರಣಂ ನಿಂದಳಿರ್ ಪೂಗೊಂಚಲಂದೆತ್ತಮ ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ರನವೂ | ನದ ಭಂಗಧ್ವನಿ ಮಂಗಳಧ್ವನಿಯೆನಲ್ ಸಾಲ್ವನ್ನೆಗಂ ತಾನೆ ತ ಕುದು ಕಾಮಂಗೆ ವಿವಾಹಮಂಟಪಮೆನಲ್ಕಾ ಮಾಧವೀಮಂಟಪಂ ||
と
ವ|| ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕಳ್ಳಿ ವನದುರ್ಗಂಬುಗುವಂತ ಪೊಕ್ಕದಳಗೆ ಕಪ್ಪುರವಳುಕಿನ ಜಗಲಿಯನಗಲಿತಾಗಿ ಸಮದು ಚಂದನದಳದಳಿರ್ಗಳಂ `ಪಾಸಿ ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮದ ಸರಿಗೆಗಂಕಣಂಗಳುಮಂ ಯವ ಕಳಿಕೆಗಳೊಳ್ ಸಮದ ಕಟಿಸೂತ್ರಮುಮಂ ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ
ಹೊರಳಾಡಿ ಅಲ್ಲಿ ಸುರಿಯುವ ಪರಾಗದಿಂದ ಲೇಪಿಸಲ್ಪಟ್ಟು ಹಾರಾಡುತ್ತಿರುವ ದುಂಬಿಯ ಸಮೂಹದ ಪರಿವಾರವನ್ನು ಕೂಡ ಮದನಾಗ್ನಿಯ ಕಿಡಿಗಳೆಂದೇ (ಸುಭದ್ರೆಯು) ಭಾವಿಸಿದಳು. ವ|| ಹಾಗೆ ಹೂವಿನ, ರೆಂಬೆಗಳ, ಚಿಗುರಿನ, ನಿರಿಯಾಗಿರುವ ಚಿಗುರುಗಳ, ಭಾರದಿಂದ ಬಗ್ಗಿ ಕಿಕ್ಕಿರಿದ ವನವನ್ನು ಪ್ರವೇಶಿಸಿ ಅಲ್ಲಿಯೂ ಶರೀರತಾಪವನ್ನು ಆರಿಸಲಾರದೆ ಹೂವನ್ನು ಬಿಟ್ಟಿರುವ ಮಾವಿನ ಬಳ್ಳಿಗಳಿಗೆ ತಗುಲಿಸಿದ ಹೊಸ ಮುತ್ತಿನ ಹೊದಿಕೆಯಲ್ಲಿ ಬಿರಿದ ಮೊಗ್ಗುಗಳಲ್ಲಿ ಸೇರಿಕೊಂಡಿರುವ ಅದಿರ್ಮುತ್ತೆಯ ಹೂವಿನ ಬಳಸಿನಲ್ಲಿ ಪೂರ್ಣವಾದ ಆಶ್ರಯವನ್ನು ಪಡೆದ ಒತ್ತಾಗಿರುವ ಚಂದ್ರಕಾಂತ ಶಿಲೆಯಿಂದ ಕೂಡಿದ ಒಂದು ಮಾಧವೀ ಮಂಟಪವನ್ನು ಕಂಡಳು ೬, ಇದಿರಿನಲ್ಲಿ ಕಟ್ಟಿದ ತೋರಣದಂತೆ ಚಿಗುರು ಕಾಣುತ್ತಿರಲು ಹೂಗೊಂಚಲು, ಎಲ್ಲೆಲ್ಲಿಯೂ ಎತ್ತಿ ಕಟ್ಟಿದ ಹೂವಿನ ಮಾಲೆಯಂತಿರಲು ಹೂವಿನ ಪರಾಗದ ಕೆಂಪು ರಮ್ಯವಾಗಿರುವ ದಿಕ್ಕಿನ ಕಾಂತಿ, ಹಾಗಿರಲು ಮಧುಮತ್ತವಾದ ದುಂಬಿಗಳ ಧ್ವನಿಯೇ ಮಂಗಳವಾದ್ಯ ಎನ್ನುವಂತೆ ಆ ಮಾಧವೀ ಮಂಟಪವು ಇದೇ ಮದನನ ವಿವಾಹ ಮಂಟಪವಾಗುವುದಕ್ಕೆ ಯೋಗ್ಯವಾದುದು ಎನ್ನುವಂತೆ ಪ್ರಕಾಶಮಾನವಾಗಿದ್ದಿತು. ವ|| ಕಾಮನ ಕೋಟಲೆಗೆ ಹೆದರಿ ಕಾಡಿನ ಕೋಟೆಯನ್ನು ಪ್ರವೇಶಿಸುವ ಹಾಗೆ ಆ ಮಾಧವೀ ಲತಾ ಮಂಟಪವನ್ನು ಪ್ರವೇಶಿಸಿ ಅದರಲ್ಲಿ ಕರ್ಪೂರದ ಹಳುಕಿನ ಜಗುಲಿಯನ್ನು ವಿಸ್ತಾರವಾಗಿ ನಿರ್ಮಿಸಿದಳು. ಶ್ರೀಗಂಧದ ಎಳೆಯ ಚಿಗುರುಗಳನ್ನು ಹಾಸಿದಳು. ಮಲ್ಲಿಗೆಯ ಹೂವುಗಳನ್ನು ಹರಡಿದಳು. ತಾವರೆಯ ದಂಟಿನಿಂದ ಮಾಡಿದ ತಂತಿಬಳೆಗಳನ್ನೂ ಗೋದುವೆಯ ಮೊಳಕೆಗಳಿಂದ ಮಾಡಿದ ಉಡಿದಾರವನ್ನೂ ಕರ್ಪೂರದ ತಿರುಳಿನಿಂದ ರಚಿಸಿದ ಹಾರವನ್ನೂ ಕನ್ನೈದಿಲೆಯ
Page #264
--------------------------------------------------------------------------
________________
ಪಂಚಮಾಶ್ವಾಸಂ | ೨೫೯ ಕರಿಯ ನೆಯ್ದಿಲ ಕಾವಿನೊಳ್ ಭಾವಿಸಿದ ನೂಪುರಮುಮನದು ಬಿರಿಮುಗುಳಳೊಳ್ ಚಿತ್ರಿಸಿದ ಕರ್ಣಪೂರಮುಮಂ ಬಿಳಿಯ ತಾವರೆಯೆಳಗಾವಿನಸಿಯ ನೂಲೊಳ್ ಕೋದ ತೋರ ಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ ಕಪ್ಪುರವಳುಕಿನ ಲಂಬಣಮುಮಂ ತೊಟ್ಟು ಕುಳಿರ್ಕೊ ಚಂದನರಸಮನರ್ದಯೊಳಂ ಮೆಯೊಳಂ ತಳ್ಳಿದು ಕರಿಯ ಕರ್ಬಿನ ಕಾವಿನಳ ಮೈಂದವಾಣಿಯೆಲೆಯ ಬಿಜ್ಜಣಿಗೆಗಳಿಂ ಬೀಸಲ್ವೇಟ್ಟು ತಣ್ಣುಗೆಯೆ ಮನದ ಮೆಯ್ಯ ಸಂತಾಪದೊಳ್ ಬಿಸುಸುಯ್ದು ಬಿಸುಪಿನೊಳನಿತುಮಂ ಗೆಲ್ಲು
ಉ ಕೆಂದಳಿರ್ವಾಸು ಸೇಕದ ತೊವಲ್ಗಣೆಯಾಯ್ತು ಮೃಣಾಳ ನಾಳವೊಂ ದೊಂದಡೆವೊತ್ತಿ ಪತ್ತಿದುವು ಸೂಸುವ ಶೀತಳವಾರಿ ಮೈಯ್ಯನ | ಯಂದಿರದತ್ತ ಬತ್ತಿದುವು ತಚ್ಛಶಿಕಾಂತಶಿಳಾತಳಂ ಸಿಡಿ ಲಂದೊಡೆದದೇಂ ಬಿಸಿ. ಬೇಟದ ಬೆಂಕೆ ಮೃಗಾಂಕವಕ್ಕೆಯಾ ||
ಚott
2
ಅರಿಗನ ಬೇಟದೊಂದೆ ಪೊಸಬೇಟದ ಕೇಸುರಿಯಿಂದಮಯೇ ದ ಳ್ಳುರಿ ನೆಗೆದಂದು ಕೆಂದಳಿರ ಪಾಸುಗಳಿಂ ಕುಳಿರ್ವಾಲಿನೀರ್ಗಳಿಂ | ತುರಿಪದ ಸೂಸುತುಂ ಕೆಳದಿಯರ್ ನದಿಪುತ್ತಿರ ನೋಡ ದಾಹಮೊ ತರಿಸಿದುದೊಂದು ಪೊನ್ನ ಸಲಗಿರ್ಪವೊಲಿರ್ದುದು ಮೆಯ್ ಸುಭದ್ರೆಯಾ ೮
ಕಾವಿನಲ್ಲಿ ಮೇಳಿಸಿದ ಕಾಲಂದಿಗೆಯನ್ನೂ ಧರಿಸಿದಳು. ಅದರ ಬಿರಿದ (ಅರಳಿದ) ಮೊಗ್ಗುಗಳಲ್ಲಿ ಚಿತ್ರಿಸಿದ ಕಿವಿಯ ಅಲಂಕಾರವನ್ನು ಬಿಳಿಯ ತಾವರೆಯ ಎಳೆಯ ದಂಟಿನ ನೂಲಿನಲ್ಲಿ ಪೋಣಿಸಿದ ದಪ್ಪ ಮಲ್ಲಿಗೆಯ ಬಿರಿ ಮುಗುಳಿನ ಅಡಿಕೆಯನ್ನೂ ಕರ್ಪೂರದ ಹಳುಕಿನ ಹಾರವನ್ನೂ ತೊಟ್ಟಳು. ವಿಶೇಷ ತಂಪಾಗಿರುವ ಶ್ರೀಗಂಧದ ರಸವನ್ನು ಶರೀರದಲ್ಲೆಲ್ಲ ಲೇಪಿಸಿಕೊಂಡಳು. ಕರಿಯ ಕಬ್ಬಿನ ಕಾವಿನ ಎಳೆಯದಾದ ಮಹೇಂದ್ರ ಬಾಳೆಯ ಎಲೆಯ ಬೀಸಣಿಗೆಗಳಿಂದ ಬೀಸಹೇಳಿ ತಂಪನ್ನುಂಟುಮಾಡಲು ಮನಸ್ಸಿನ ಮತ್ತು ಶರೀರದ ಸಂತಾಪದಿಂದ ನಿಟ್ಟುಸಿರನ್ನು ಬಿಟ್ಟಳು. ಆ ಶಾಖದಲ್ಲಿ ಅಷ್ಟು ಶೈತ್ಯೋಪಕರಣಗಳನ್ನು ಮೀರಿಸಿ ೭. ಆ ಕೆಂಪು ಚಿಗುರಿನಿಂದ ಮಾಡಿದ ಹಾಸಿಗೆಯು ಬಿಸಿ ನೀರು ಚಿಮುಕಿಸಿದ ಚಿಗುರಿಗೆ ಸಮಾನವಾಯಿತು. ತಾವರೆಯ
ದಂಟೊಂದೊಂದು ತಳಹತ್ತಿಕೊಂಡು ಮೈಗೆ ಅಂಟಿಕೊಂಡವು. ಮೇಲೆ ಚೆಲ್ಲಿದ ತಣ್ಣಗಿರುವ ನೀರು ನಿಧಾನವಾಗಿ ಹರಿದು ಎಲ್ಲಿಯೋ ಬತ್ತಿಹೋಯಿತು. ಆ ಚಂದ್ರಕಾಂತ ಶಿಲಾತಳವು ಸಿಡಿದು ಒಡೆದುಹೋಯಿತು. ಆ ಚಂದ್ರವದನೆಯಾದ ಸುಭದ್ರೆಯ ವಿರಹಾಗ್ನಿಯಿದು ಎಷ್ಟು ಬಿಸಿಯಾದುದೋ? ೮. ಅರ್ಜುನನ ಮೇಲಿನ ಪ್ರೇಮದ ಒಂದು ಹೊಸ ಅನುಭವದ ಒಂದು ಕೆಂಪುಜ್ವಾಲೆಯು ಚಿಮ್ಮಿದಾಗ ಅವಳ ಸಖಿಯರು ಕೆಂಪು ಚಿಗುರಿನ ಹಾಸಿಗೆಯಿಂದಲೂ ತಂಪಾಗಿರುವ ಮಂಜಿನ ನೀರಿನಿಂದಲೂ ಆರಿಸಲು ಪ್ರಯತ್ನಿಸಿದರೂ ಎಲ್ಲರೂ ನೋಡುತ್ತಿರುವ ಹಾಗೆಯೇ ಆ ಉರಿಯು ಮತ್ತೂ ಅಭಿವೃದ್ಧಿಯಾಯಿತು. ಸುಭದ್ರೆಯ ಶರೀರವು ಕಾಸಿದ ಚಿನ್ನದ
Page #265
--------------------------------------------------------------------------
________________
೨೬೦) ಪಂಪಭಾರತಂ
ಮದನ ದವಾನಲಾರ್ಚಿ ತನುವಂ ಸುಡ ತಳಮೆಯೋಳ್ ಪಳಂಚಿ ಬೀ ಗಿದ ಬೆಳರ್ವಾಯೊಳುಚ್ಚಳಿಸಿ ತುಂಗ ಕುಚಂಗಳ ಪೊಯೊಳೆತ್ತಲುಂ | ಕದಳಿ ವಳಿತ್ರಯಂಗಳ ತೊಡರ್ಪುಗಳೊಳ್ ತೊಡರ್ದೋಯ್ಯನೊಯ್ಯನೆ ಹೈದುವು ವಿಲೋಲನೇತ್ರ ಜಲಬಿಂದುಗಳಾಕೆಯ ನಿಮ್ಮನಾಭಿಯಂ | ೯ ನಗೆಮೊಗಮಂ ಪೊದಳಲರ್ದ ತಾವರೆಯಂಬ ವಿಮೋಹದಿಂ ಮೊಗಂ ಬುಗಳೊಡಮಾ ತಳೋದರಿಯ ಸುಗ್ಗಳ ಬೆಂಕೆಯೊಳಿಚ್ಚಿಗೆಟ್ಟು ತೊ ! : ಟ್ಟಗೆ ಕೊಳೆ ಮುಂದೆ ಬಿಟ್ಟು ಮಗುಚ್ಚಾ ಸತಿಯಿಕ್ಕಿದ ಕಣ್ಣ ನೀರ ಧಾ ರೆಗಳೊಳೆ ನಾಂದಲರ್ಚಿ ಪೊದಲ್ಗೊರ್ಮೆಯ ಪಾದುವುದಾಳಿಗಳ್ lino
ವ|| ಅಂತಾಬಾಲೆ ಕಾಯ ಪುಡಿಯೊಳಗೆ ಬಿಸುಟ್ಟೆಳವಾಳಿಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಜುಗುರ್ತಿದ್ರಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಣದುಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ ವಿಜೃಂಭಮಾಣ ನವ ನಳಿನ ಪರಿಕಾರ ಕೃಷ್ಟ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ ವಿರಹಿ ಜನನಿಚಯ ನಿಚಿತ ಮಾನಸೋನ್ನತ ಕಾಮಿನೀ ಗಂಡೂಪ ಸಿಂಧು ಸೇಕ ಪುಳಕಿತ ವಕುಳ ಮುಕುಳ ವಿದಳಿತ ಮನೋಹರಾಶೋಕಲತಾ ರಮಣೀ ರಮಣೀಯ ನೂಪುರರವ ರಮ್ಯಮನವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನುಷ್ಟುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲೋಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನೆಯ್ದವಂದು
(ಅಪರಂಜಿಯ) ಸಲಾಕೆಯ ಹಾಗಿದ್ದಿತು. ೯. ಕಾಮವೆಂಬ ಕಾಡುಗಿಚ್ಚಿನ ಜ್ವಾಲೆಯು ಶರೀರವನ್ನು ವ್ಯಾಪಿಸಲು ಸುಭದ್ರೆಯ ಚಂಚಲವಾದ ಕಣ್ಣೀರಿನ ಹನಿಗಳು ಮುಚ್ಚಿರುವ ರೆಪ್ಪೆಯನ್ನು ತಗುಲಿ ಬಿಳಿಚಿಕೊಂಡಿರುವ ತುಟಿಯಲ್ಲಿ ಚಿಮ್ಮಿ ನೆಗೆದು ಎತ್ತರವಾದ ಸ್ತನಗಳ ಬಡಿತದಿಂದ ಎಲ್ಲಕಡೆಯೂ ಚೆದುರಿ ತ್ರಿವಳಿಗಳ ತೊಡಕುಗಳಲ್ಲಿ ಸೇರಿಕೊಂಡು ನಿಧಾನವಾಗಿ ಆಕೆಯ ಆಳವಾದ ಹೊಕ್ಕುಳನ್ನು ಸೇರಿದುವು. ೧೦. ಸೊಕ್ಕಿದ ದುಂಬಿಗಳು ಸುಭದ್ರೆಯ ಮುಖವನ್ನು ಚೆನ್ನಾಗಿ ಅರಳಿದ ತಾವರೆಯೆಂಬ ಭ್ರಾಂತಿಯಿಂದ ಪ್ರವೇಶಿಸಲು ಆ ತಳೋದರಿಯಾದ ಸುಭದ್ರೆಯ ಉಸಿರಿನ ಬೆಂಕಿಯಲ್ಲಿ ಆಶಾಭಂಗವಾಗಿ ಕಾವು ಹತ್ತಲು ಮುಂದೆ ಬಿದ್ದು ಪುನಃ ಆ ಸತಿಯು ಸುರಿದ ಕಣ್ಣೀರಿನ ಧಾರೆಗಳಲ್ಲಿ ನೆನೆದು ಚೇತರಿಸಿಕೊಂಡು ಇದ್ದಕ್ಕಿದ್ದ ಹಾಗೆಯೇ ಹಾರಿದುವು. ವ| ಹಾಗೆ ಬಾಲೆಯು ಕಾದ ಧೂಳಿನಲ್ಲಿ ಬಿಸುಟ ಎಳೆಯ ಬಾಳೆಯ ಹಾಗೆ ಸುರತಮಕರ ಧ್ವಜನಾದ ಅರ್ಜುನನಲ್ಲಿ ಉಂಟಾದ ವಿರಹದಿಂದ ಮಮ್ಮಲಮರುಗುತ್ತಿದ್ದಳು. ಆ ಕಡೆ ಮನುಜ ಮನೋಜನಾದ ಅರ್ಜುನನೂ ಕೂಡ ಮದನತಾಪವನ್ನು ಸಹಿಸಲಾರದೆ ದುಃಖಿಸಿ ಕೃಷ್ಣನ ಕಣ್ಣನ್ನು ತಪ್ಪಿಸಿಕೊಂಡು ವಿಜೃಂಭಿಸುತ್ತಿರುವ ಹೊಸತಾವರೆಯ ಸಮೂಹದಿಂದ ಆಕರ್ಷಿಸಲ್ಪಟ್ಟ ದುಂಬಿಗಳಿಂದ ರಮ್ಯವಾದುದೂ ಮರಳಿನ ಸಮೀಪಸ್ಥಳದಲ್ಲಿ ಇಡಲ್ಪಟ್ಟು ವಿರಹಿಜನಗಳ ಸಮೂಹದಲ್ಲಿ ಸೇರಿಕೊಂಡಿರುವ ಮನಸ್ಸುಳ್ಳ ಸ್ತ್ರೀಯರು ಮುಕ್ಕುಳಿಸಿದ ಮದ್ಯದಿಂದ ರೋಮಾಂಚಗೊಂಡ ಬಕುಳದ ಮೊಗ್ಗನ್ನುಳ್ಳುದೂ ಅರಳಿದ ಹೂವುಗಳಿಂದ ಕೂಡಿದ ಅಶೋಕವೃಕ್ಷಗಳನ್ನುಳ್ಳುದೂ ರಮಣಿಯರ ರಮಣೀಯವಾದ ಕಾಲಂದಿಗೆಯ
Page #266
--------------------------------------------------------------------------
________________
ಪಂಚಮಾಶ್ವಾಸಂ | ೨೬೧ ಚಂ11 ಬಿರಿದಲರೂ ತಅಂಬೊಳೆವ ತುಂಬಿ ತಳಿರ್ತಳಮಾವು ಮಾವಿನಂ
ಕುರಮನೆ ಕರ್ಚಿ ಬಿಚ್ಚಟಪ ಕೋಗಿಲೆ ಕಂಪನವುಂಕಿ ಹೊತ್ತು ನಿ | ತರಿಪೇರಲೆಂಬಿವೇವುವೂ ಮದೀಯ ಮನೋಗತ ಕಾಮ ರಾಗ ಸಾ
ಗರದೊದವಿಂಗೆ ನyಳ ವಿಲೋಕನಚಂದ್ರಿಕೆಯೊಂದೆ ಸಾಲದೇ || ೧೧
ವಗ ಎನುತ್ತುಂ ಬಂದು ಬಿರಿದ ಬಿರಿಮುಗುಳಳೊಳೆಗಿ ತುಲುಗಿದಶೋಕ ಲತಯನರ್ತು ನೋಡಿಚಂil ಅಲರಲರ್ಗಣ್ ಮುಗುಳ್ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ
ಗೊಲೆ ಮೇಲೆ ಕೆಂಪು ಕೆಂಪು ಕೋನ ಸೆಳುಗುರ್ಗ ಕುಡಿ ತೋಳ ನಯಂ ನಯಂ| ನಲೆ ನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪಂತಲ್ಲಿದೆಂತೂ ಕೂ ಮಲಲತೆ ಪೇಟಿಮೆನ್ನಿನಿಯಳಂ ಮಣಿಗೊಂಡು ಸೂಜಿಗೊಂಡುದೋ || ೧೨
ವ|| ಎಂದು ಕಿಟೆದಾನುಂ ಬೇಗಮಳೆ ಮರುಳಾದಂತಾ ಲತೆಯೊಳ್ ಪಳೆಗಾಳಗಂಗಾದಿ ಬರೆವರೆ ಕಾಮದೇವನಿಮಾವಿನ ನನೆಯನಂಬುಗಳುಮನವಣಿ ಬಿಡಿಯನೆ ಮಿಟ್ಟೆಯುಮಂ ಮಾಡಿ ತನ್ನನೇಸಾಡಿ ಕಾಡ
ಶಬ್ದದಿಂದ ರಮ್ಯವೂ ದಟ್ಟವೂ ಹೂವಿನ ಪರಾಗಗಳಿಂದ ಮಾಸಲಾದ ಮರಳಿನಿಂದ ಬಿಳುಪಾಗಿ ಮಾಡಲ್ಪಟ್ಟ ಭೂಭಾಗವನ್ನುಳ್ಳುದೂ ಅರಳಿರುವ ಚಿಗುರುಗಳ ಲೀಲೆಗೊಳಗಾದ ಮದಿಸಿರುವ ಕೋಗಿಲೆಗಳಿಗೆ ಉಲ್ಲಾಸವನ್ನುಂಟುಮಾಡುವುದೂ ತುಂತುರುಮಳೆಯಿಂದ ದೀರ್ಘವಾದ ಮೋಡ ಕವಿದ ದಿನದಂತಿರುವುದೂ ಆದ ವನವನ್ನು ಅರ್ಜುನನು ಸಮೀಪಿಸಿದನು. ೧೧. ಅರಳಿದ ಪುಷ್ಟದಲ್ಲಿ ವಿಧವಿಧವಾಗಿ ಹೊಳೆಯುವ ದುಂಬಿಯೂ ಚಿಗುರಿದ ಎಳೆಮಾವೂ ಮಾವಿನ ಮೊಳಕೆಯನ್ನೇ ಕಚ್ಚಿ ಉತ್ಸಾಹಗೊಳ್ಳುವ ಕೋಗಿಲೆಯೂ ವಾಸನೆಯನ್ನು ತನ್ನಲ್ಲಿ ಅಡಕಿಕೊಂಡು ಹೊತ್ತು ದಾಟಿ ಬರುವ ಗಾಳಿಯೂ (ವಿರಹ ಪರಿಹಾರಕ್ಕೆ) ಏನುಮಾಡಬಲ್ಲವು. ನನ್ನ ಮನಸ್ಸಿನಲ್ಲಿ ಸೇರಿರುವ ಮನ್ಮಥಪ್ರೇಮಸಾಗರದ ಅಭಿವೃದ್ಧಿಗೆ ಸುಭದ್ರೆಯ ನೋಟವೆಂಬ ಬೆಳದಿಂಗಳಿನ ಸಹಾಯವೊಂದೆ ಸಾಲದೆ ? ವ|| ಎನ್ನುತ್ತ ಬಂದು ಅರಳಿದ ಬಿರಿಮುಗುಳಿನಿಂದ ಬಾಗಿ ಕಿಕ್ಕಿರಿದಿದ್ದ ಅಶೋಕದ ಬಳ್ಳಿಯನ್ನು ಪ್ರೀತಿಸಿ ನೋಡಿ ೧೨. ಈ ಬಳ್ಳಿಯ ಹೂವು ಅವಳ ಹೂವಿನಂತಿರುವ ಕಣ್ಣು, ಇದರ ಮೊಗ್ಗು ಅವಳ ನಗೆ, ಇದರ ಬಳ್ಳಿ ಅವಳ ತೊಡೆಗಳು, ಇಲ್ಲಿಯ ದುಂಬಿ ಅವಳ ಮುಂಗುರುಳುಗಳು, ಇಲ್ಲಿಯ ಚಿಗುರು ಅವಳ ಅಂಗೈ, ಗೊಂಚಲು ಸ್ತನಗಳು, ಈ ಬಳ್ಳಿಯ ಕೆಂಪು ಬಣ್ಣ ಅವಳ ಕೆಂಪು ಬಣ್ಣ, ಅವಳ ತೆಳುವಾದ ಉಗುರುಗಳು ಇದರ ಎಳೆಯದಾದ ಕೊನೆಗಳು, ಕುಡಿಗಳು ಅವಳ ತೋಳುಗಳು; ಬಳ್ಳಿಯ ನಯ ಸುಭದ್ರೆಯ ನಯ, ಇದರ ರೀತಿ, ಅವಳ ರೀತಿ, ಇಲ್ಲಿಯ ಹದವಾದ ಹಣ್ಣುಗಳು ಹೊಳೆಯುವ ತುಟಿಗಳು ಬೇರೆಯಿಲ್ಲ, ಈ ಬಳ್ಳಿಯು ನನ್ನ ಪ್ರಿಯೆಯನ್ನು ಮರೆಯಾಗಿಟ್ಟುಕೊಂಡಿದೆಯೋ ಇಲ್ಲವೇ ಅವಳ ಸರ್ವಸ್ವವನ್ನೂ ಸೂರೆಗೊಂಡಿದೆಯೋ? (ಬಳ್ಳಿಗೆ ಸ್ವತಃ ಇಷ್ಟೆಲ್ಲ ಸೌಂದರ್ಯವೆಲ್ಲಿ ಬರಬೇಕು ?) ವll ಎಂದು ಸ್ವಲ್ಪಕಾಲ ಜ್ಞಾನಶೂನ್ಯನಾದ ಹುಚ್ಚನಂತೆ
Page #267
--------------------------------------------------------------------------
________________
೨೬೨ / ಪಂಪಭಾರತಂ
ಚಂ।।
ಅಸಿಯಳನೊಲ್ಲು ಮೊಲ್ಲನಣಮನ್ನದ ರೂಪ ನೋಡಿ ಕೂಡಲಾ ಟಿಸಿ ಪರಿದೆಯೇ ಪತ್ತಿದಲರ್ಗಳನೇನುಮನನ್ನದಂತುವೇ | ಕ್ಷಿಸಿ ಮನಮೆಲ್ಲಮಂ ಕವರ್ದವಂ ತನುವಂ ಬಡಮಾಡಿ ಕಾಡಿ ದಂ ಡಿಸಿದಪನಂಗಜನನ ಕವರ್ತೆಯ ದಂಡದ ಪಾಂಗಿದೆಂತು
||
ಚಂ||
೧೩
ವll ಎಂದು ನಂದನವನೋಪಕಂಠಂಗಳೊಳನಂಗಶರವಶನಾಗಿ ತೊಟ್ಟು ನೋಡುತ್ತುಂ ತನ್ನ ಮನದೊಳಿಂತೆಂದು ಬಗೆಗುಂ
ಉರಿವರ್ದಯಾನ್ ಚಿಂತಿಪ ಮನಂ ಗುಡಿಗಟ್ಟೆ ಮರಲ್ಲು ನೋಡುವ ಚರಿಯೊಳೆ ಬೆಚ್ಚ ಕಣಲರ್ಗೆ ಸಂತಸದಾಗರಮಾಗೆ ಬೇಟದೊಳ್ | ಬಿರಿವೊಡಲೊಯ್ಯನಂಕುರಿಸೆ ಸೈಪಿನೊಳಿಂತನಗೀಗಳೀ ವನಾಂ ತರದೊಳ ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ || ೧೪
ವ|| ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಮೊಗಸಿ ಪಲರ ಪಲವುಂ ತಂದ ಬೇಟದ ಪಡೆಮಾತುಗಳು ಕೇಳಲ್ಲಿಯಾರಾನುಮಮ್ಮಂದಿಗರಿರ್ದರಕ್ಕುಮೆನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರ ಭೋಂಕನೆ ಕಂಡು
ಆ ಬಳ್ಳಿಯೊಡನೆ ಹುಚ್ಚು ಮಾತನಾಡಿ ಬರುತ್ತಿರಲು ಕಾಮದೇವನು ಸಿಹಿಮಾವಿನ ಹೂವುಗಳನ್ನು ಬಾಣಗಳನ್ನಾಗಿಯೂ ಅದರ ಬಲಿತ ಹೀಚುಗಳನ್ನು ಮಣ್ಣಿನುಂಡೆಯ ನ್ನಾಗಿಯೂ ಮಾಡಿ ಅವನನ್ನು ಹೊಡೆದು ಕಾಡಿದನು. ೧೩. ಕೃಶಾಂಗಿಯಾದ ಸುಭದ್ರೆಯನ್ನು ಇವನು ಪ್ರೀತಿಸುತ್ತಾನೆಯೇ ಇಲ್ಲವೇ ಎಂಬುದೇನನ್ನೂ ಸ್ವಲ್ಪವೂ ಯೋಚಿಸದೇ ರೂಪವನ್ನೇ ನೋಡಿ ಸೇರಿಸಲು ಆಶೆಪಟ್ಟು ಓಡಿಬಂದು ಅಂಟಿಕೊಂಡಿ ರುವ ಕಣ್ಣುಗಳನ್ನೂ ಏನೂ ಹೇಳದೆ ಉಪೇಕ್ಷಿಸಿ ಮನ್ಮಥನು ಮನಸ್ಸೆಲ್ಲವನ್ನೂ ಸೂರೆಮಾಡುತ್ತಾನೆ. ಶರೀರವನ್ನು ಕೃಶವನ್ನಾಗಿ ಮಾಡಿ ಕಾಡಿ ಶಿಕ್ಷಿಸುತ್ತಾನೆ. ಮನ್ಮಥನ ಈ ಸೂರೆಯ ಈ ಶಿಕ್ಷೆಯ ರೀತಿ ಅದೆಂತಹುದೊ! ವ|| ಎಂದು ನಂದನವನದ ಸಮೀಪ ಪ್ರದೇಶಗಳಲ್ಲಿ ಮನ್ಮಥನಿಗೆ ಅಧೀನನಾಗಿ ಸುತ್ತಿ ತೋಳಲಿ ನೋಡುತ್ತ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿದನು ೧೪, ಉರಿಯುತ್ತಿರುವ ನನ್ನ ಎದೆಯು ಸಮಾಧಾನಗೊಳ್ಳುವ ಹಾಗೆ, ಚಿಂತಿಸುತ್ತಿರುವ ನನ್ನ ಮನಸ್ಸು ಉತ್ಸಾಹಗೊಳ್ಳುವ ಹಾಗೆ, ಪುನಃ ನೋಡಬೇಕೆಂಬ ಆಶ್ಚರ್ಯದಿಂದಲೇ ಮುಚ್ಚಿಕೊಂಡಿರುವ ನನ್ನ ಕಣ್ಣಿಗೆ ಸಂತೋಷಸ್ಥಾನವಾಗುವ ಹಾಗೆ ವಿರಹದಿಂದ ಬಿರಿಯುತ್ತಿರುವ ಶರೀರವು ಇದ್ದಕ್ಕಿದ್ದ ಹಾಗೆ, ರೋಮಾಂಚಗೊಳ್ಳುವ ಹಾಗೆ ನನ್ನ ಅದೃಷ್ಟದಿಂದ ಹೀಗೆ ಇಲ್ಲಿಯೇ ನನ್ನ ಮನೋರಥಕ್ಕೆ ಜನ್ಮಭೂಮಿಯಾದ ಸುಭದ್ರೆಯನ್ನು ಕಾಣಲು ಸಾಧ್ಯವಾಗುತ್ತದೆಯೇ ? ವll ಎಂಬುದಾಗಿ ಯೋಚಿಸುತ್ತ ಆಕೆ ಇದ್ದ ಮಾಧವೀಮಂಟಪದ ಹತ್ತಿರಕ್ಕೆ ಬಂದು ಅಲ್ಲಿ ಅದೇತೆರನಾದ ವಿರಹವಾರ್ತೆಯನ್ನು ಕೇಳಿ ನಮ್ಮಂತಹವರೂ ಇಲ್ಲಿ ಯಾರಾದರೂ ಇದ್ದಿರಬಹುದು ಎನ್ನುತ್ತ ಬರುತ್ತಿರುವ ಅರ್ಜುನನನ್ನು ಸುಭದ್ರೆಯು ಇದ್ದಕ್ಕಿದ್ದ ಹಾಗೆ
Page #268
--------------------------------------------------------------------------
________________
ಪಂಚಮಾಶ್ವಾಸಂ | ೨೬೩ ಚoll ಪಡಿದೆವಂದದಿಂದಮರ್ದಯುಂ ತತೆದತ್ತು ಪೊದಳ ಸಂಕೆಯಿಂ
ನಡುಕಮುಮಾಗಳುಬದಿಗಮಾದುದು ಸಾಧ್ವಸದಿಂ ಬೆಮರ್ ಬೆಮ | ರ್ವೆಡೆಗಳಿನು ಪೂಣಿದುದು ಕಣ್ ನಡ ನೋಡದೆ ತಪ್ಪು ನೋಡಿ ನಾ ಹೆಡೆಯೊಳಮಾದುದಾ ಸತಿಗೆ ನೋಡಲೊಡಂ ಪಡೆಮೆಚ್ಚಗಂಡನಂ || ೧೫
ವ|| ಆಗಳ್ ಸುರತಮಕರಧ್ವಜನುಮನಂಗಾಮೃತ ಪಯೋಧಿಯೊಳ್ ಮೂಡಿ ಮುಲುಗಾಡಿದರಂತೆ ಕಿಟೆದು ಚೇಗಮನಿರ್ತು ತನಿಂ ತಾನೆ ಚೇತರಿಸಿ ಸುಭದ್ರಯ ರೂಪನಾಪಾದಮಸ್ತಕಂಬರಮೆಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟುಮೇವಾಡಿವದ ಸಸಿಯಂತ ಸೊಗಯಿಸುವಸಿಯಳಂ ಕಂಡು- ಚಂl ಸರಸ ಮೃಣಾಳನಾಳವಳಯಂಗಳೊಳುಚ್ಚಳ ವೃತ್ತ ಮೌಕ್ತಿಕಾ
ಭರಣ ಗಣಂಗಳೊಳ್ ಶಶಿಕರಂಗಳೊಳಾದ ಬೇಟದೊಳ್ ಕನ || qುರಿವರ್ದ ನೋಡ ನೋಡಲೊಡನಾಳದುದೇನಮರ್ದಿಂದ ತೊಯ್ದು ಕ
ಪುರವಳುಕಿಂದಜಂ ಕಡೆದು ಕಂಡರಿಷಂ ವಲಮೆನ್ನ ನಳಂ || ೧೬ ಉll ವೃತ್ತಕುಚಂಗಳಿಂದುದಿರ್ದ ಚಂದನದೊಳ್ ತಳಿರ್ವಾಸು ಬೆಳ್ಳನಾ
ಇತ್ತು ದುಕೂಲದೊಂದು ಮಡಿವಾಸಿದ ಮಾಜವೊಲಾಯ್ತು ಮೆಯ್ಯನಿ 1 ಕುತ್ತಿಗೆ ಪತ್ನಿ ಕೆಂದಳಿರ್ಗಳಚ್ಚುಗಳಚ್ಚಿದಂತೆ ಕಾಮನ ಚೊತ್ತಿದ ಬೇಟದಚ್ಚುಗಳ ಮಾಯೊಳಿರ್ದುದು ಮಯ್ ಸುಭದ್ರಯಾ || ೧೭
ನೋಡಿದಳು. ೧೫. ಪಡೆಮೆಚ್ಚೆಗಂಡನಾದ ಅರ್ಜುನನನ್ನು ನೋಡಿದ ತಕ್ಷಣವೇ ಆ ಸತಿಗೆ ಬಾಗಿಲು ತೆರೆಯುವಂತೆ ಎದೆಯು ತೆರೆಯಿತು, ಉಂಟಾದ ಸಂದೇಹದಿಂದ ನಡುಕವೂ ವಿಶೇಷವಾಗಿ ತಲೆದೋರಿತು; ಸಡಗರದಿಂದ ಬೆವರು, ಬೆವರುವ ಕಡೆಗಳಿಂದ ಹೆಚ್ಚಿ ಹೊರಸೂಸಿತು; ಕಣ್ಣುಗಳ ಲಜ್ಜೆಯಿಂದ ನೇರವಾಗಿ ನೋಡದೆ ತಪ್ಪು (ಓರೆ) ದೃಷ್ಟಿಯಿಂದ ನೋಡಿದುವು. ವ|| ಆಗ ಸುರತಮಕರಧ್ವಜನಾದ ಅರ್ಜುನನೂ ಕೂಡ ಮನ್ಮಥನ ಅಮೃತಸಮುದ್ರದಲ್ಲಿ ಮೂಡಿ ಮುಳುಗಿದವರ ಹಾಗೆ ಕೆಲವು ಕಾಲವಿದ್ದು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೆ ನೋಡಿ ತನ್ನಲ್ಲುಂಟಾದ ವಿರಹದಿಂದ ಕೃಶನಾಗಿ ಶುಕ್ಲಪಕ್ಷದ - ಪಾಡ್ಯದ ಚಂದ್ರನ ಹಾಗೆ ಸೊಗಯಿಸುವ ಕೃಶಾಂಗಿಯನ್ನು ಕಂಡು-೧೬. ಚಂದ್ರ ಕಿರಣಗಳಿಂದ ಕಡಮೆಯಾಗದೆ ವಿರಹದಿಂದ ಕೆರಳಿ ಉರಿಯುತ್ತಿದ್ದ ನನ್ನ ಎದೆಯು ರಸಯುಕ್ತವಾದ ತಾವರೆಯ ದಂಟಿನ ಕಂಕಣಗಳಿಂದಲೂ ಹೊಳೆಯುವ ದುಂಡು ಮುತ್ತಿನ ಒಡವೆ ಗಳಿಂದಲೂ ಕೂಡಿದ ಸುಭದ್ರೆಯನ್ನು ನೋಡಿದೊಡನೆಯೇ ಆರಿ ಹೋಯಿತು; ನಿಜವಾಗಿಯೂ ಬ್ರಹ್ಮನು ಈ ನನ್ನ ಪ್ರಿಯಳನ್ನು ಅಮೃತದಲ್ಲಿ ನೆನೆಸಿ ಕರ್ಪೂರದ ಹಳುಕಿನಿಂದ ಕಡೆದು ಕೊರೆದಿದ್ದಿರಬೇಕು. ೧೭. ದುಂಡಾದ ಮೊಲೆಗಳಿಂದ * ಉದುರಿದ ಶ್ರೀಗಂಧದಿಂದ ಚಿಗುರಿನ ಹಾಸಿಗೆಯು ಬಿಳಿಯ ಬಣ್ಣವನ್ನು ತಾಳಿದೆ. ರೇಷ್ಮೆಯ ಮಡಿವಸ್ತ್ರವು ಮಾಸಿದ ವಸ್ತದಂತಾಗಿದೆ. (ಹಾಸಿಗೆಯ ಮೇಲ) ಮೈಯನ್ನಿಟ್ಟಿರಲಾಗಿ ಆ ಸುಭದ್ರೆಯ ಮೈಯಿ ಕೆಂಪು ಚಿಗುರುಗಳು ಮುದ್ರೆಗಳಿಂದ
Page #269
--------------------------------------------------------------------------
________________
೨೬೪ | ಪಂಪಭಾರತಂ
ವ|| ಅದನೀಕೆಯುಮೆನಗೆರಡಳಿಯದ ನಲ್ಲ ಮನಂದೋಚುವುದು ಸಲ್ಲೆದೋಚುವುದು ಮಾವುದು ದೋಸವೆಂದಾಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ ನಾಣ್ಯ ಪೋಗಲೆಂದು ಕನ್ನೆಯಂ ಚೂತಲತಿಕೆಯೆಂಬ ಕೆಳದಿ ಜಡಿದು ಕುಳ್ಳಿರಿಸಿ ಗಂಧೇಭ ವಿದ್ಯಾಧರನನಿಂತಂದಳಚಂ|| ಮದನನ ಕಾಯ್ದು ಮಾಕ್ಕೆ ಸರಸೀರುಹಜನನ ಮತ್ತು ತೀರ್ಗೆ ಕೂ
qುದಿ ಮನದಿಂದಮಿಂದು ಪೊಲಿಮಾಜುಗೆ ಚಂದ್ರಕರಂಗಳಿಂದು ತ | ಇದುವೆರ್ದಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂ ಟದೊಳಿಸಿದಕ್ಕೆ ಮತ್ಸಗೆ ಬೇಜ್ ಪಳಾಳದೊಳೇಂ ಗುಣಾರ್ಣವಾ ೧೮ ಬೆಳಗುವ ಸಾಂದ್ರಚಂದ್ರಕಿರಣಾಳಿಗಳ್ಳಿ ಗಳಿಂದಮೆತ್ತಮು ಜಳಿಸುವಿರುಳಳಂ ಕಳೆದುಮೆಯ ತಳಿರ್ತಳಮಾವುಮಂ ಮನಂ | ಗೋಳ ನಡ ನೋಡಿಯುಂ ಕಿವಿಯನಿಂದೋಳದಿಂಚರಕಾಂತುಮಿಂತು ಕೊ ಮಳೆಯಸು ಮತ್ತಮಾಯೊಡಲೊಳಿರ್ದುದಿದಮ್ಮಯ ಸೈಫು ಭೂಪತೀ || ೧೯
ವ! ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳು ಸಂತಸಂಬಟ್ಟು ಚಕ್ತಿ ಚಕ್ರಕಾವರ್ತಿಯಪುದಳೆಂದಾ ವನಾಂತರಾಳಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು
ಅಚ್ಚೆತ್ತಿದ ಹಾಗೆ ಅಂಟಿಕೊಂಡು ಮನ್ಮಥನು ಮುದ್ರಿಸಿದ ಪ್ರೇಮಮುದ್ರೆಗಳಂತಿವೆ. ವ|| ಆದುದರಿಂದ ಈಕೆಯು ನನಗೆ ನೈಜವಾದ ಮನಸ್ಸನ್ನು ತೋರಿಸುವುದರಲ್ಲಿಯೂ ಸಲಿಗೆಯನ್ನು ತೋರಿಸುವುದರಲ್ಲಿಯೂ ದೋಷವೇನಿದೆ? ಎಂದು ಆಕೆ ಕುಳಿತಿದ್ದ ಚಿಗುರುಹಾಸಿಗೆಯಲ್ಲಿಯೇ ಕುಳಿತನು. ಲಜ್ಜೆಪಟ್ಟು ಹೋಗಲೆಂದು ಎದ್ದ ಕನೈಯನ್ನು ಚೂತಲತಿಕೆಯೆಂಬ ಸಖಿಯು ಗದರಿಸಿ ಕುಳ್ಳಿರಿಸಿ ಗಂಧೇಭವಿದ್ಯಾಧರನಾದ ಅರ್ಜುನನನ್ನು ಕುರಿತು ಹೀಗೆಂದಳು - ೧೮. ಮನ್ಮಥನ ಕೋಪ ನಿಲ್ಲಲಿ; ಬ್ರಹ್ಮನ ಆಶೆ ತೀರಲಿ, ಹೃದಯದ ವಿರಹತಾಪ ಮನಸ್ಸಿನಿಂದ ಹೊರಹೋಗಲಿ, ಚಂದ್ರಕಿರಣ ಗಳು ಇಂದು ಹೃದಯಕ್ಕೆ ತಂಪನ್ನುಂಟುಮಾಡುವುದಾಗಲಿ, ಕೆಂದಳಿರ ಹಾಸಿಗೆಯ ತಾಪವು ಹೋಗಲಿ. ನಿನ್ನನ್ನು ಸೇರುವುದರಿಂದ ನನ್ನ ಸಖಿಗೆ ಸವಿಯುಂಟಾಗಲಿ, ಗುಣಾರ್ಣವನೇ ಇತರ ವ್ಯರ್ಥಾಲಾಪದಿಂದ ಏನು ಪ್ರಯೋಜನ? ೧೯. ಅರ್ಜುನ! ಪ್ರಕಾಶಮಾನವೂ ದಟ್ಟವೂ ಆದ ಚಂದ್ರಕಿರಣಗಳ ಸಮೂಹದಿಂದ ಎಲ್ಲೆಡೆಯೂ ವಿಜೃಂಭಿಸುವ ರಾತ್ರಿಗಳನ್ನು ಕಳೆದು ಸಂಪೂರ್ಣವಾಗಿ ಚಿಗುರಿದ ಎಳೆಯ ಮಾವಿನ ಮರಗಳನ್ನು ತೃಪ್ತಿಯಾಗುವ ಹಾಗೆ ದೀರ್ಘವಾಗಿ ನೋಡಿಯೂ ಹಿಂದೋಳರಾಗದ ಇಂಪಾದ ಧ್ವನಿಗೆ ಕಿವಿಗೊಟ್ಟೂ ಈ ಕೋಮಳೆಯಾದ ಸುಭದ್ರೆಯ ಪ್ರಾಣವು ಈ ಶರೀರದಲ್ಲಿಯೇ ಇದ್ದುದು ನಮ್ಮ ಅದೃಷ್ಟವೆಂದೇ ಹೇಳಬೇಕು. ವ|| ಎನ್ನುವಷ್ಟರಲ್ಲಿ ಅರ್ಜುನ ಸುಭದ್ರೆಯರ ವಿರಹತಾಪಕ್ಕೆ ಸಂಬಂಧಪಟ್ಟ ಮಾತುಗಳನ್ನು ಕಿವಿಯಿಂದ ಕಿವಿಗೆ ಕೇಳಿ ಸಂತೋಷಪಟ್ಟು ಶ್ರೀಕೃಷ್ಣನು ಕಪಟೋಪಾಯವುಳ್ಳವನಾದುದರಿಂದ ಆ ವನದ ಮಧ್ಯಭಾಗಕ್ಕೆ ಒಬ್ಬನೇ ಬಂದು ಮಾಧವೀಮಂಟಪವನ್ನು ಪ್ರವೇಶಿಸಿ ಅವರಿಬ್ಬರ
Page #270
--------------------------------------------------------------------------
________________
ಪಂಚಮಾಶ್ವಾಸಂ | ೨೬೫ ಮll ಕುಡಲಿರ್ದಂ ಬಲದೇವನೆನ್ನನುಜೆಯಂ ದುರ್ಯೋಧನಂಗಾನೊಡಂ
ಬಡೆನೀವಕ್ತಿಯದಾಗಳುಂ ನಿನಗೆ ದಲ್ ಪದ್ಮಾಸನಂ ತಾನೆ ನೇ | ರ್ಪಡಿಸಲ್ ಕೂಡಿದನಿರ್ಪುದಲ್ಕು ನಯಮಿ ಪೊಚ್ ಪೊಟ್ಟಾಗೆ ನೀ ನೊಡಗೊಂಡುಯ್ಯುದು ಕನ್ನೆಯಂ ತಡೆಯದಿರ್ ವಿದ್ವಿಷವಿದ್ರಾವಣಾ || ೨೦
ವ|| ಅಂತು ಪೋಗವೋಗೆ ಬಲದೇವನನುಮತದೊಳ್ ಪೆಂಗಂ ತಗುಳ್ಳ ಯಾದವ ಬಲಮುಂಟಿಡದನಂಬುಗಾಣಿಸಲ್ ನೀನೆ ಸಾಲ್ವೆಯುಟಿದುದಂ ಮಾಣಿಸಲಾರೆ ಸಾನಿದುವೆ ಮುಹೂರ್ತಮಾಗೆ ನಡೆವುದೆಂದು ಶೈಬ್ಯ ಬಳಾಹಕ ಮೇಘವರ್ಣ ಸುಗ್ರೀವಂಗಳೆಂಬ ನಾಲ್ಕು ಕುದುರೆಗಳೊಳ್ ಪೂಡಿದ ದಿವ್ಯರಥಮನೆಸಗಲ್ ದಾರುಕನೆಂಬ ಸಾರಥಿಯನೀವುದುಮಾ ರಥಮಂ ಮನೋರಥಂ ಬೆರಸೇಳೆ ಚೂತಲತಿಕೆವೆರಸು ಸುಭದ್ರೆಯನೇಲಲ್ವೇಚ್ಚುದಾತ್ತನಾರಾಯಣಂ ನಾರಾಯಣನ ಪರಸಿದ ಪರಕೆಗಳುಮಂ ಕೆಯ್ಯೋಂಡು ಬೀಟೆಂಡಿಂದ್ರಪ್ರಸ್ಥದ ಬಟ್ಟೆಯೊಳ್ ಸುಖಪ್ರಯಾಣಂಗೆಯನನ್ನೆಗಮಿತ್ತ ಬಲದೇವಂ ಸುಭದ್ರೆಯಂ ಸಾಮಂತಚೂಡಾಮಣಿಯುಯ್ದ ನೆಂಬುದಂ ಕೇಳುಮ ಉಂದೆನ್ನಂ ಕುಡಲಿರ್ದ ಕೂಸನೊಡಗೊಂಡುಯ್ತಾತನಂ ತಾಗಿ ತ
ಇಳೆಯಲ್ ಕೋಡಗಗಟ್ಟುಗಟ್ಟಿ ತರಲಿನ್ನಾರಾರ್ಪರಂತಪ್ಪ ಪೊ | ಚಜಸಾಮಂತರೆ ಪೋಗಿಯೆಂದು ಪಲರ ಪೇಯ್ದಾಗಳೆಯಂದರಂ ತೋಚಿಕೊಳ್ವಂತಿರೆ ಕೊಂಡುವಂದರಿಗನೆಚ್ಚುಗೋಡು ಧಾರಾಜಳಂ || ೨೧
ಲಜ್ಜೆಯನ್ನೂ ನಡುಕವನ್ನೂ ಹೋಗಲಾಡಿಸಿ ಹೇಳಿದನು. ೨೦. ಬಲರಾಮನು ನನ್ನ ತಂಗಿಯನ್ನು ದುರ್ಯೋಧನನಿಗೆ ದಾನಮಾಡಲಿದ್ದಾನೆ. ನಾನು ಅದಕ್ಕೆ ಒಪ್ಪುವುದಿಲ್ಲ. ನಿನಗೇ ದಾನಮಾಡಬೇಕೆಂಬುದು ನನ್ನ ನಿಶ್ಚಯ. ಇದನ್ನು ಸರಿಪಡಿಸಿ ಕೊಳ್ಳುವುದಕ್ಕಾಗಿಯೇ ಬ್ರಹ್ಮನು ನಿಮ್ಮಿಬ್ಬರನ್ನೂ ಒಟ್ಟಿಗೆ ಸೇರಿಸಿದ್ದಾನೆ. ಇನ್ನು ಮೇಲೆ ಇಲ್ಲಿರುವುದು ನೀತಿಯಲ್ಲ, ಈ ಹೊತ್ತೆ ಹೊತ್ತಾಗಿ ಅಂದರೆ ಈಗಲೇ ಕನೈಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಟುಹೋಗು, ವಿದ್ವಿಷ್ಟವಿದ್ರಾವಣನಾದ ಅರ್ಜುನನೇ ತಡಮಾಡಬೇಡ. ವಹಾಗೆ ಹೋಗುವಾಗಲೂ ಬಲರಾಮನ ಅಭಿಪ್ರಾಯದಂತೆ ಬೆನ್ನಟ್ಟಿಬರುವ ಯಾದವ ಬಲವುಂಟಾದರೂ ಅದಕ್ಕೆ ಬಾಣಪ್ರಯೋಗಮಾಡಲು ನೀನು ಶಕ್ತನಾಗಿದ್ದೀಯೆ. ಉಳಿದುದನ್ನು ತಪ್ಪಿಸಲು ನಾನು ಬಲ್ಲೆ, ಇದನ್ನೇ ಸುಮುಹೂರ್ತವನ್ನಾಗಿ ಎಣಿಸಿ ಹೊರಡು ಎಂದು ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವಗಳೆಂಬ ನಾಲ್ಕು ಕುದುರೆಗಳನ್ನು ಹೂಡಿದ್ದ ದಿವ್ಯರಥವನ್ನೂ ಅದನ್ನು ನಡೆಯಲು ದಾರುಕನೆಂಬ ಸಾರಥಿಯನ್ನೂ ಕೊಟ್ಟನು. ಆ ರಥವನ್ನು ಅರ್ಜುನನು ಸಂತೋಷದಿಂದ ಚೂತಲತಿಕೆಯೊಡಗೂಡಿ ಸುಭದ್ರೆಯನ್ನು ಹತ್ತಲು ಹೇಳಿ ನಾರಾಯಣನು ಹರಸಿದ ಹರಕೆಗಳನ್ನು ಅಂಗೀಕರಿಸಿ ಅವನಿಂದ ಅಪ್ಪಣೆಪಡೆದು ಇಂದ್ರಪ್ರಸ್ಥದ ದಾರಿಯಲ್ಲಿ ಸುಖಪ್ರಯಾಣಮಾಡಿದನು. ಅಷ್ಟರಲ್ಲಿ ಈ ಕಡೆ ಬಲರಾಮನು ಸುಭದ್ರೆಯನ್ನು ಸಾಮಂತಚೂಡಾಮಣಿಯಾದ ಅರ್ಜುನನು ಕರೆದುಕೊಂಡು ಹೋದನೆಂಬುದನ್ನು ಕೇಳಿ-೨೧. “ನನ್ನನ್ನು ಲಕ್ಷ್ಯಮಾಡದೆ ದಾನಮಾಡಲಿದ್ದ ಹೆಣ್ಣನ್ನು ಜೊತೆಯಲ್ಲಿ ಕೊಂಡು ಹೋದವನನ್ನು ಎದುರಿಸಿ ಹೋರಾಡಲೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿ ತರಲೂ
Page #271
--------------------------------------------------------------------------
________________
ಮ
೨೬೬ | ಪಂಪಭಾರತ
ವಗ ಆಗಲ್ ತನ್ನ ಪೇಟ್ಟಿ ನಾಯಕರ ಸಾವಂ ಕೇಳು ಯಾದವಬಲ ಜಳನಿಧಿವೆರಸು ವಿಳಯಕಾಲ ಜಳನಿಧಿಯಂತೆ ತೆರಳಲ್ ಬಗದ ಬಲದೇವನಂ ವಾಸುದೇವನಿಂತೆಂದಂ
ಕುಲಮಂ ಪೇಳ್ಕೊಡ ಸೋಮವಂಶತಿಲಕಂ ಬಿಲ್ಲಾಳನಂಬೇಡು ಜ್ವಲ ತೀವ್ರಾಸ್ತನಿಘಾತಪಾತಿತ ರಿಪುವೋಹಂ ಬಲಂಬೇಡ್ ದೋ | ರ್ವಲದೊಳ್ ಕೇಳ್ ನಿನಗ ಬಲಸ್ಯನೊಡೆಯಂ ಕೂಸಿಂಗೆ ಕೊಂಡುಯ್ಯುದೇ ಚಲಮ ದೋಷಮದರ್ಕೆ ನೀನ್ ಮುಳಿವುದೇ ನೀನ್
ಪೇಳ್ಕೊಡಾನ್ ಸಾಲೆನೇ || ೨೨ ವ|| ಎಂದು ಬಲದೇವನ ಮನದೊಳಾದ ಮುಳಿಸೆಂಬ ಕಿಚ್ಚಂ ತನ್ನ ಮೃದು ಮಧುರ ವಚನರಚನಾಜಲಂಗಳಂ ತಳಿದು ನದಿಪಿದನಿತ್ತ ರಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದನೇಕ ಸಹಕಾರಾಶೋಕಾನೋಕಹನಂದನವನಪ್ರಸ್ತಮನಿಂದ್ರ ಪ್ರಸ್ವಮನೆಯ್ದವಂದು ಮುನಮ ತನ್ನ ಬರವನಳಿದು ಫೋಲಲೋಳಷಶೋಭೆಯಂ ಮಾಡಿ ತನಗಿದಿರ್ವಂದ ಕೊಂತಿಯ ಧರ್ಮಪುತ್ರ ಭೀಮಸೇನಾದಿಗಳ ಪಾದ ಪದ್ಯಂಗಳಂ ತನ್ನ ಕರಕಮಲಂಗಳಿಂದರ್ಚಿಸಿ ತದೀಯಾಶೀರ್ವಚನಂಗಳನಾಂತು ತನಗೆ ಪೊಡಮಟ್ಟ ನಕುಲ ಸಹದೇವರಂ ಪರಸಿ
ಯಾರು ಸಮರ್ಥರಾಗಿರುತ್ತಾರೆ, ಅಂತಹ ಪರಾಕ್ರಮವುಳ್ಳ ಶೂರಸಾಮಂತರೇ ಹೋಗಿ” ಎಂದು ಹಲವರನ್ನು ನೇಮಿಸಲು (ಹಾಗೆ ಬಂದು ಎದುರಿಸಿದವರನ್ನು ಅರ್ಜುನನು ಪ್ರಯೋಗಿಸಿದ ಭಯಂಕರವಾದ ಬಾಣಗಳ ಧಾರಾಪ್ರವಾಹವು ನದಿಯು ನುಗ್ಗುವ ಹಾಗೆ ಆಕ್ರಮಿಸಿ ಕೊಂದಿತು. ವ|| ಆಗ ತಾನು ನಿಯಮಿಸಿದ ನಾಯಕರ ಸಾವನ್ನು ಕೇಳಿ ಯಾದವ ಬಲಸಮುದ್ರದೊಡಗೂಡಿ ಪ್ರಳಯಕಾಲದ ಸಮುದ್ರದಂತೆ ಹೊರಡಲು ಯೋಚಿಸಿದ ಬಲರಾಮನನ್ನು ವಾಸುದೇವನು ಹೀಗೆಂದನು-೨೨. ಕುಲವನ್ನು ಹೇಳುವುದಾದರೆ ಚಂದ್ರವಂಶದಲ್ಲಿ ಶ್ರೇಷ್ಠನಾದವನಾಗಿದ್ದಾನೆ. ಪರಾಕ್ರಮವನ್ನು ಹೇಳುವುದಾದರೆ ತನ್ನ ತೀಕ್ಷಬಾಣಗಳ ಹೊಡೆತದಿಂದ ಶತ್ರುವ್ಯೂಹವನ್ನು ಕೆಡವಿದ ಸಾಮರ್ಥ್ಯವುಳ್ಳವನಾಗಿದ್ದಾನೆ. ಬಲವನ್ನು ಹೇಳುವುದಾದರೆ ಬಾಹುಬಲದಲ್ಲಿ ನಿನಗಿಂತಲೂ ಬಲಿಷ್ಠನಾದವನು; ನಮ್ಮ ಕೂಸಿಗೆ ಒಡೆಯನಾಗಿ ಕೊಂಡುಹೋಗಲಿ, ಹಟವೇತಕ್ಕೆ? ದೋಷವೇನು? ಅದಕ್ಕೆ ನೀನು ಕೋಪಿಸುವುದೇ ? ನೀನು ಹೋರಾಡು ಎಂದು ಆಜ್ಞೆ ಮಾಡುವುದಾದರೆ ಅವನೊಡನೆ ಯುದ್ಧಮಾಡಲು ನಾನೇ ಸಮರ್ಥನಲ್ಲವೇ? ವು ಎಂದು ಬಲರಾಮನ ಮನಸ್ಸಿನಲ್ಲುಂಟಾದ ಕೋಪವೆಂಬ ಬೆಂಕಿಯನ್ನು ತನ್ನ ಮೃದುಮಧುರವಚನರಚನಾಜಲಗಳನ್ನು ಸಿಂಪಿಸಿ ನಂದಿಸಿದನು. ಈ ಕಡೆ ವಿಕ್ರಮಾರ್ಜುನನು ಕೆಲವು ದಿವಸಗಳಲ್ಲಿ ಅನೇಕ ಮಾವಿನ ಮತ್ತು ಅಶೋಕಮರಗಳುಳ್ಳ ವನಗಳಿಂದ ಕೂಡಿದ ಇಂದ್ರಪ್ರಸ್ಥಪುರವನ್ನು ಸೇರಿದನು. ಮೊದಲೇ ತಾನು ಬರುವುದನ್ನು ತಿಳಿದು ಪಟ್ಟಣವನ್ನು ಎಂಟು ವಿಧವಾದ ಅಲಂಕಾರಗಳಿಂದ ಅಲಂಕರಿಸಿತ್ತು. ತನಗಿದಿರಾಗಿ ಬಂದ ಕುಂತೀದೇವಿ, ಧರ್ಮರಾಜ, ಭೀಮಸೇನನೇ ಮೊದಲಾದವರ ಪಾದಕಮಲಗಳನ್ನು ತನ್ನ ಕಮಲಹಸ್ತಗಳಿಂದ ಪೂಜೆಮಾಡಿ ಅವರ ಆಶೀರ್ವಾದಗಳನ್ನು ಪಡೆದನು. ತನಗೆ ನಮಸ್ಕಾರ ಮಾಡಿದ ನಕುಲ ಸಹದೇವರನ್ನು
Page #272
--------------------------------------------------------------------------
________________
ಪಂಚಮಾಶ್ವಾಸಂ | ೨೬೭ ಪುನಃಪುನರಾಲಿಂಗನಂಗೆಯ್ದು ಮುಹುರ್ಮುಹುರಾಲೋಕನಂಗೆಯ್ಯುತ್ತುಂ ಬಂದು ದಿವಿಜೇಂದ್ರ ವಿಳಾಸದಿಂ ಪೊಬಲಂ ಪುಗಕಂ ಪರಸುವ ಪುರಜನದ್ದ ವಿದ
ಪರಕೆಗಳಂಬುಧಿನಿನಾದಮಂ ಮಿಗೆ ತಮ್ಮ | ಝರುಮೊಡನೆ ಮಣಿದು ಪರಮಾ
ನುರಾಗದಿಂ ಬಂದು ಪೊಕ್ಕರಂದರಮನೆಯಂ | ವll ಅಂತು ರಾಜಮಂದಿರಮಂ ಪೊಕ್ಕು ಧರ್ಮಪುತ್ರನನಗಲ್ಲ ಹನ್ನೆರಡು ಮಾಸದೊಳಾದ ದಿಗ್ವಿಜಯ ಪ್ರಪಂಚಮುಮಂ ಸುಭದ್ರಾಹರಣಮುಮಂ ಪುರುಷೋತ್ತಮನ ಪರಮ ಮಿತ್ರತ್ವಮು ಮನಳಿದು ಸಂತಸಂಬಟ್ಟು ತಮ್ಮನಿಬರುಮೇಕಸ್ಥರಾಗಿ
ಎರೆದಿಂತಟ್ಟಲವೇ ಕನ್ನ ಬಟಿಯಂ ಬಂದಳ್ ಮರುಳಂಬುಜೋ ದರನಿಂತಟ್ಟಿದನಿಂತು ನೋಂತರೊಳರೇ ಸೈಪಿಂಗೆ ನಾಮಿನ್ನಿಳಾ | ಧರನುಂ ಯಾದವ ವಂಶಜರ್ವೆರಸು ಬರ್ಪಂತಟ್ಟಿ ಮಾಂ ಮನೋ
ಹರಮಪ್ಪಂತು ವಿವಾಹಮಂಗಳಮನೆಂದಂದಟ್ಟಿದರ್ ದೂತರಂ || ೨೪
ವ|| ಅಟ್ಟದೂಡವರ್ ಪೋಗಿ ಬಲದೇವನುಮಂ ವಾಸುದೇವನುಮಂ ಕಂಡು ತಮ್ಮ ಬಂದ ಕಜಮನೊಡಂಬಡಿಸಿ ಯಾದವರ್ವರಸು ಮುಂದಿಟ್ಟೋಡಗೊಂಡು ಬರೆ ಬರವನಳಿದು ಪಾಂಡವರಯ್ಯರುಮಿದಿರ್ವೊಗಿ ಯಥೋಚಿತ ಪ್ರತಿಪತ್ತಿಗಳಿಂ ಕಂಡು ಪೊಲೊಡಗೊಂಡು ಬಂದು ಶುಭದಿನ ನಕ್ಷತ್ರ ಯೋಗಕರಣಂಗಳಂ ನಿಟ್ಟಿಸಿ
ಮli
ಹರಸಿ ಪುನಃ ಪುನಃ ಆಲಿಂಗನಮಾಡಿಕೊಂಡು ಪುನಃಪುನಃ ನೋಡುತ್ತ ದೇವೇಂದ್ರ ವೈಭವದಿಂದ ಪಟ್ಟಣವನ್ನು ಪ್ರವೇಶಿಸಿದನು-೨೩. ಆಗ ಪಟ್ಟಣಿಗರು ಹರಸಿದ ಹರಕೆಗಳು ಸಮುದ್ರಘೋಷವನ್ನು ಮೀರಿರಲು ತಾವಯುಜನರೂ ಅತ್ಯಂತ ಸಂತೋಷದಿಂದ ಅರಮನೆಯನ್ನು ಪ್ರವೇಶಿಸಿದರು. ವlು ಹಾಗೆ ಅರಮನೆಯನ್ನು ಪ್ರವೇಶಿಸಿ ಧರ್ಮರಾಜನನ್ನು ಅಗಲಿಹೋದ ಹನ್ನೆರಡುತಿಂಗಳುಗಳಲ್ಲಿ ನಡೆದ ದಿಗ್ವಿಜಯದ ವಿಷಯವನ್ನೂ ಸುಭದ್ರಾಪಹರಣವನ್ನೂ ಎಲ್ಲರೂ ಕೇಳಿದರು. ಪುರುಷೋತ್ತಮನಾದ ಶ್ರೀಕೃಷ್ಣನ ಉತ್ತಮ ಸ್ನೇಹಸ್ವಭಾವವನ್ನು ತಿಳಿದು ಸಂತೋಷಪಟ್ಟರು. ತಾವೈದು ಜನವೂ ಒಮನಸ್ಸಿನಿಂದ. ೨೪. ನಮಗೆ ದಾನವಾಗಿ ಕೊಡಿ ಎಂದು ದೂತರ ಮೂಲಕ ಪ್ರಾರ್ಥಿಸಿ ಪಡೆಯಬೇಕಾದ ಕನೈಯು ತಾನಾಗಿಯೇ ಜೊತೆಯಲ್ಲಿಯೇ ಬಂದಿದ್ದಾಳೆ. ಕೃಷ್ಣನೇ ಹೀಗೆ ಕಳುಹಿಸಿಕೊಟ್ಟಿದ್ದಾನೆ. ಇಂತಹ ಅದೃಷ್ಟಶಾಲಿಗಳಾದವರು (ವ್ರತ ಮಾಡಿರುವವರು) ಬೇರೆ ಯಾರಿದ್ದಾರೆ. ನಾವು ಇನ್ನು ಯಾದವರೊಡಗೂಡಿ ಕೃಷ್ಣನು ಬರುವ ಹಾಗೆ ದೂತರನ್ನು ಕಳುಹಿಸಿ ಮನೋಹರವಾಗಿರುವ ರೀತಿಯಲ್ಲಿ ಮದುವೆಯ ಮಂಗಳವನ್ನು ಮಾಡೋಣ ಎಂದು ದೂತರನ್ನು ಅಟ್ಟಿದರು. ವ|| ಅವರು ಹೋಗಿ ಬಲರಾಮನನ್ನೂ ವಾಸುದೇವನನ್ನೂ ಕಂಡು ತಾವು ಬಂದ ಕಾರ್ಯಕ್ಕೆ ಅವರು ಒಪ್ಪುವ ಹಾಗೆ ಮಾಡಿ ಯಾದವರೊಡಗೂಡಿ ಅವರನ್ನೇ ಮುಂದುಮಾಡಿಕೊಂಡು ಬಂದರು. ಅವರು ಬರುವುದನ್ನು ತಿಳಿದು ಪಾಂಡವರೈದು ಮಂದಿಯೂ ಅವರಿಗಿದಿರಾಗಿ ಹೋಗಿ ಸೂಕ್ತವಾದ ಸತ್ಕಾರಗಳಿಂದ
Page #273
--------------------------------------------------------------------------
________________
೨೬೮ | ಪಂಪಭಾರತಂ ಮll ಪಸುರ್ವಂದರ್ ಪರ ವೇದಪಾರಗರವಂ ಕಣೋಟದುದ್ಧಾನಿಯಂ
ಪಸರಂ ಗಯ್ಯವೊಲಪ್ಪ ಪೊಚ್ಚ ಮಹಾ ಸಾಮಂತ ಸೀಮಂತಿನೀ | ಪ್ರಸರಂ ಮಂಗಳ ತೂರ್ಯನಾದಮೆಸೆಯುತ್ತಿರ್ಪನ್ನೆಗಂ ಚಕ್ರಿ ರಾ
ಗಿಸಿ ಕೆಯ್ದಿರೆಯದಂ ಗುಣಾರ್ಣವ ಮಹೀಪಾಲಂಗಮಾ ಕನ್ವಯಂ | ೨೫
ವಅಂತವರಿರ್ವರ ಬೇಟಮಂಬ ಲತೆಯ ಬೆಳಸಿಂಗ ಪೊಯ್ಯಾರಲ್ವಂತೆ ಕೆಯ್ದೆರೆದು ಬಿಯಮಂ ಮದು~ ಪಿರಿಯಕ್ಕರಂ || ತೊಟ್ಟ ತುಡುಗೆಗಳ ಕೌಸ್ತುಭರತ್ನಮನೋರೊಂದ ಮಸುಳಿಸಿ
ಪಾಲ್ಗಡಲೊಳ್ ಪುಟ್ಟದಾನೆಯನಾನೆಗಳ ಗಲಿವರೆ ಕುದುರೆಗಳ ಕುದುರೆಯಂ ಕೀಣಾಡ | ತೊಟ್ಟ ಮದನನ ಪೂರಕಗಣಯಾಗ ಗಣಿಕೆಯರ್ ಗಣಿದಮಂ ಬಗಯದಿಂತು ಕೊಟ್ಟಂ ತಂಗೆಗೆ ಬಟವಟಿಯಂದಿಂತು ಸರ್ವಸ್ವವೆಲ್ಲಮಂ ಪುರುಷೋತ್ತಮಂ || ೨೬
ವ|| ಅಂತು ಬಟವಟಿಗೊಟ್ಟಿಂಬಲಿಯಂ ಧರ್ಮಪುತ್ರ ಬಲದೇವನನೆನಿತಾನುಮುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ದ್ವಾರಾವತಿಗೆ ಕಟಿಪಿದನಾ ವಿವಾಹೋತ್ಸವಾನಂತರದೊಳ್ಚಂ|| ತಳಿರ್ಗಳ ಪಾಸಿನೊಳ್ ಪೊರಳುತಿರ್ದಬಲಂ ಕಿಡೆ ಸೋಂಕೆ ಸೋಂಕುಗಳ
ಕಳೆದುವು ಮಯ್ಯ ಸುಯ್ಯ ಪದವೆಂಕಗಳಂ ಬಿಗಿಯಷ್ಟಿದವುಗಳ್ | ಕಳೆದುವು ನಾಣುಮಂ ಕಿಳಿದು ಜಾಣುಮನಳಿನೀವ ಚುಂಬನಂ ಕಳೆದುವು ಗರ್ವಮಂ ಕಳದುವಂತವರಿರ್ವರ ಮನ್ಮಥದ್ರವಂ || ೨೭
ಕಂಡು ಪಟ್ಟಣಕ್ಕೆ ಜೊತೆಯಲ್ಲಿ ಕರೆದುಕೊಂಡು ಬಂದರು. ಶುಭಕರವಾದ ದಿನ, ನಕ್ಷತ್ರಯೋಗ ಕರಣಗಳನ್ನು ನೋಡಿ-೨೫. ಹಸಿರುವಾಣಿಯ ಚಪ್ಪರ, ಹಸೆಯಮಣೆ, ಪಂಡಿತರ ವೇದಘೋಷ ಇವು ಕಣ್ಣಿಗೆ ತೃಪ್ತಿಯನ್ನುಂಟುಮಾಡುತ್ತಿರಲು ಅಂಗಡಿಯ ಸಾಲಿನ ಹಾಗೆ ಶೂರರ, ಮಹಾ ಸಾಮಂತರ, ಸುಮಂಗಲೀಯರ ಸಮೂಹವು ಓಳಿಗೊಂಡಿರಲು ಮಂಗಳವಾದ್ಯ ಧ್ವನಿ ಘೋಷಿಸುತ್ತಿರಲು ಶ್ರೀಕೃಷ್ಣನು ಪ್ರೀತಿಯಿಂದ ಗುಣಾರ್ಣವ ಮಹಾರಾಜನಿಗೆ (ಅರ್ಜುನನಿಗೆ) ಕನೈಯಾದ ಸುಭದ್ರೆಯನ್ನು ಧಾರಾಪೂರ್ವಕ ದಾನಮಾಡಿಕೊಟ್ಟನು. ವll ಹಾಗೆ ಅವರಿಬ್ಬರ ಪ್ರೇಮವೆಂಬ ಬಳ್ಳಿಗೆ ಹೊಯ್ ನೀರೆರೆಯುವಂತೆ ಧಾರಾಜಲವನ್ನು ಕೊಟ್ಟು ಯಥೇಚ್ಛವಾಗಿ ದ್ರವ್ಯವನ್ನು ದಾನಮಾಡಿದನು. ೨೬. ವಿಷ್ಣುವಿನ ಹೃದಯದಲ್ಲಿರುವ ಕೌಸ್ತುಭರತ್ನವನ್ನೂ ಕಾಂತಿಹೀನವನ್ನಾಗಿ ಮಾಡುವ ಅನೇಕ ಅಭರಣಗಳನ್ನೂ ಐರಾವತವನ್ನೂ ಕೀಳಾಡುವ ಆನೆಗಳನ್ನೂ ಉಚ್ಚೆ ಶ್ರವಸ್ಸನ್ನು ತಿರಸ್ಕರಿಸುವ ಕುದುರೆಗಳನ್ನೂ ಮನ್ಮಥನ ಪುಷ್ಪಬಾಣಗಳಂತಿರುವ ವೇಶ್ಯಾಸ್ತ್ರೀಯರನ್ನೂ ಅಸಂಖ್ಯಾತವಾಗಿ ಕೃಷ್ಣನು ತಂಗಿಗೆ ಬಳುವಳಿಯಾಗಿ ಕೊಟ್ಟನು. ವ|| ಹಾಗೆ ಬಳುವಳಿ ಕೊಟ್ಟ ಬಳಿಕ ಧರ್ಮರಾಜನು ಬಲರಾಮನನ್ನು ಅನೇಕ ಉಚಿತ ಸತ್ಕಾರಗಳಿಂದ ಸಂತೋಷಪಡಿಸಿ ದ್ವಾರಕಾಪಟ್ಟಣಕ್ಕೆ ಕಳುಹಿಸಿಕೊಟ್ಟನು. ಆ ಮದುವೆಯ ಮಹೋತ್ಸವವಾದ ಮೇಲೆ ೨೭. ಅರ್ಜುನ ಸುಭದ್ರೆಯರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಚಿಗುರಿನ ಹಾಸಿಗೆಯಲ್ಲಿ
Page #274
--------------------------------------------------------------------------
________________
ಮಾಲಿನಿ || ಅಭಿನವ ಮದಲೇಖಾ ಲಾಲಿತಂ ವಿಭ್ರಮ ಭೂ ರಭಸ ಗತಿವಿಳಾಸಂ ದೀಪ್ತ ಕಂದರ್ಪ ದರ್ಪ ಕ್ಷುಭಿತ ಗಳನಿನಾದಂ ಪ್ರಸ್ತುರದ್ಧರ್ಮವಾಗಿ ಪ್ರಭವಮಸೆದುದಂತಾ ಕಾಂತೆಗಾ ಕಾಂತಸಂಗಂ ||
ಕoll ಒಟ್ಟಜೆಯಿಂ ಭಾರತದೊಳ್
ಪಂಚಮಾಶ್ವಾಸಂ | ೨೬೯
ವ|| ಅಂತು ಕಾಮದೇವನುಂ ರತಿಯುಂ ವಸಿಷ್ಠನುಮರುಂಧತಿಯುಮೀಶ್ವರನುಂ ಪಾರ್ವತಿಯುಮನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನುರಾಗಮಂ ಪಡೆಯ ಸುಖಮಿರ್ಪನ್ನೆಗಂ ಸುಭದ್ರೆಗೆ ಗರ್ಭಚಿಹ್ನಂಗಳ ತೋ
ಕಟ್ಟಾಳಳನಿಂದು ತವಿಸಲಾ ಜೆಟ್ಟಿಗರಂ |
೨೮
ಪುಟ್ಟದನೆಂಬವೊಲದಟಂ
ಪುಟ್ಟದನಭಿಮನ್ನು ಕಲಿತನಂ ಪುಟ್ಟುವವೋಲ್ 1
ವ|| ಅಂತಾತಂ ಪುಟ್ಟುವುದುಂ ತಮಗೆ ಸಂತಸ ಪುಟ್ಟ ಸುಖಮಿರ್ಷನ್ನೆಗಂಚoll ಅಗರುವ ಮಚ್ಚುವಚ್ಚ ಸಿರಿಕಂಡದೊಳಗ್ಗಲಿಸಿತ್ತು ಗೂಡು ಶ
೨೯
ಯ್ಕೆಗಳ ಬಿಯಕ್ಕೆ ಜೊಂಪದಲರ್ವಾಸುಗಳೊಳ್ ನೆಲಸಿತ್ತು ಪೂತ ಗೊ | ಜಗೆಗಳ ಸಿಂದುರಂಗಳೊಳಗೋಗರಗಂಪನೆ ಬೀರುತಿರ್ಪ ಮ ಲ್ಲಿಗೆಯೊಳರಲ್ಲ ಸಂಪಗೆಯೊಳಗಲಿಸಿತ್ತು ಬಸಂತಮಾಸದೊಳ್ || 20
ಹೊರಳುತ್ತಿದ್ದ ದುಃಖವನ್ನು ಅವರ ಪರಸ್ಪರ ಸ್ಪರ್ಶಗಳು ಕಳೆದುವು; ಶರೀರದ ಉಸುರಿನ ಬೆಂಕಿಯನ್ನು ಅವರ ಬಿಗಿಯಾಗಿ ಅಪ್ಪಿದ ಆಲಿಂಗನಗಳು ಕಳೆದುವು. ಲಜ್ಜೆಯನ್ನೂ ಜಾಣೆಯನ್ನೂ ಅವರ ಪರಸ್ಪರ ಪ್ರೀತಿಯಿಂದ ಕೊಡುತ್ತಿರುವ ಮುತ್ತುಗಳು ಹೋಗಲಾಡಿಸಿದುವು. ಅವರಿಬ್ಬರ ಮದನೋದಕವು ಅವರ ಹೆಮ್ಮೆಯನ್ನು ಕಳೆದವು. ೨೮. ಹೊಸದಾದ ಮದಲೇಖೆಯಿಂದ ಲಾಲಿಸಲ್ಪಟ್ಟ, ಸುಂದರವಾದ ಹುಬ್ಬಿನ ವೇಗವಾದ ವಿಲಾಸವನ್ನುಳ್ಳ ಹೆಚ್ಚಾದ ಕಾಮಗರ್ವದಿಂದ ಕೆರಳಿದ ಕೊರಳಿನ ಶಬ್ದವನ್ನುಳ್ಳ ಪ್ರಕಾಶಮಾನವಾದ ಬೆವರುಗಳನ್ನು ಹುಟ್ಟಿಸುವ ಆ ಪ್ರಿಯನ ಸಮಾಗಮವು ಆ ಸುಭದ್ರೆಗೆ ಸಂತೋಷವನ್ನುಂಟುಮಾಡಿತು. ವ|| ಮನ್ಮಥನೂ ರತಿಯೂ, ವಸಿಷ್ಠನೂ ಅರುಂಧತಿಯೂ ಈಶ್ವರನೂ ಪಾರ್ವತಿಯೂ ಎನ್ನಿಸಿ ಸಮಾನವಾದ ರೂಪ, ಸಮಾನವಾದ ಶಕ್ತಿ, ಸಮಾನವಾದ ಸುರತ ಕ್ರೀಡೆಗಳಲ್ಲಿ ಸಮಾನವಾದ ಪ್ರೀತಿಯನ್ನು ಪಡೆಯುತ್ತಾ ಸುಖವಾಗಿರಲು ಸುಭದ್ರೆಗೆ ಗರ್ಭ ಚಿಹ್ನೆಗಳು ತೋರಿದುವು. ೨೯. ಪರಾಕ್ರಮದಿಂದ ಭಾರತ ಯುದ್ಧದಲ್ಲಿ ಅತ್ಯಂತ ಶೂರರಾದ ವೀರರನ್ನು ಕತ್ತರಿಸಿ ನಾಶಪಡಿಸುವುದಕ್ಕೇ ಹುಟ್ಟಿದನೆಂಬ ಹಾಗೆ ಪರಾಕ್ರಮಶಾಲಿಯಾದ ಅಭಿಮನ್ಯುವು ಪರಾಕ್ರಮವೇ ಮೂರ್ತಿವತ್ತಾಗಿ ಹುಟ್ಟುವ ಹಾಗೆ ಹುಟ್ಟಿದನು. ವ|| ಆತನು ಹುಟ್ಟಲಾಗಿ ತಮಗೆ ಸಂತೋಷವೂ ಹುಟ್ಟಿ ಸುಖವಾಗಿರುವಷ್ಟರಲ್ಲಿ ೩೦. ವಸಂತಋತು ಪ್ರಾಪ್ತವಾಯಿತು. ಚಳಿಗಾಲದಲ್ಲಿ ಶಾಖಕ್ಕಾಗಿ ಉಪಯೋಗಿಸುತ್ತಿದ್ದ ಅಗರುವಿನಲ್ಲಿದ್ದ ತೃಪ್ತಿಯು ಸ್ವಚ್ಛವಾದ ಶ್ರೀಗಂಧದ ಲೇಪನದಲ್ಲಿ ಅತಿಶಯವಾಯಿತು. ಬೆಚ್ಚನೆಯ
Page #275
--------------------------------------------------------------------------
________________
೨೭೦ | ಪಂಪಭಾರತಂ
ಉ
ಚoll
ಚoll
ಮುಂ ಮಹಿಯೆಲ್ಲಮಂ ಶಿಶಿರರಾಜನೆ ಬಿಚ್ಚತಮಾಳಗಳಾ ತಂ ಮಿಡುಕ ಸಲ್ಲಿರದೆ ಪೋಪುದದಕನ ಕಾಮದೇವನಿ | ತಂ ಮಧು ಪೆತ್ತನೀ ನೆಲನನಿಂತಿದು ಪತ್ತಳೆಯೆಂದು ಸಾಲುವಂ ದಂ ಮಿಗೆ ಕರ್ಚಿ ಪಾದುವು ಕೆಂದಳಿರು ಗಿಳಿವಿಂಡಿನೋಳಿಗಳ್ || 20
ಕೆಂಗಣ ಕೆಂದಳಿರ್ ಪುದಿದ ಮೇಗಣ ಪಂದಳಿರೊಂದಿದೊಂದು ಕೆ ಯಟದ ಪಸುರ್ಪುಮಂ ಪೊಳೆವ ಕೆಂಪುಮನಾಳಿಗೆ ಬೇಟದೊಳ್ ಕನ | ಲ್ದುದ ವಿಯೋಗಿಯಾರ್ದೆಯನಾಯ್ಡದನಾಟಿಸಲೆಂದ ಮನ್ಮಥಂ ಘಟಿಯಿಸಿ ಕೆಂಪುವಾಸಿದವೊಲಿರ್ದುವು ಮಾಮರಗಳ್ ಬಸಂತದೊಳ್ || ೩೨
ಪರೆಯೆ ವಸುರ್ಪು ಬೆಳ್ಳಡರೆ ಬಲುಗುಳೊಳ್ ಪೊರೆದೋ
ತಂಬೆರಲ್ ಪೊರೆವೊರೆಯಂ ಸಡಿಲೈ ನಡು ಪೊಂಗಿರೆ ಮಲ್ಲಿಗೆಗಳ್ ಬಸಂತದೊಳ್ | ಬಿರಿದೊಡೆ ನಲ್ಲರಂ ನೆನೆದ ನಲ್ಲರ ಮೆಲ್ಲೆರ್ದೆಗಳ್ ಬಸಂತದೊಳ್ ಬಿರಿದುವದಂತೂ ಮಲ್ಲಿಗೆಗೆ ನಲ್ಲರ ಮೆಲ್ಲೆರ್ದೆ ವೇಳೆಗೊಂಡುದೋ || ೩೩
ನನೆಯೆಳಗಂಪನೆತ್ತಿಯುಮಣಂ ನನೆ ನಾಅದರಲ್ಲನೇಕ ಕೋ
ಕನದ ವನಂಗಳೊಳ್ ಸುಟಿದು ತಣ್ಣಸಮಾಗದ ಕೂಡೆ ಬಂದ ಮಾ | ವಿನ ಪೊಸ ಪೂವಿನೊಳ್ ಪೊರೆದು ಪೊಣಿದ ಕಂಪು ಮೊಗಂಗಳಂ ಚಳಿ ಆನೆ ಕೊಳೆ ಪೊಯ್ಯ ತೀಡಿದುದು ತೆಂಕಣ ಗಾಳಿ ವಸಂತಮಾಸದೊಳ್ || ೩೪
ಹಾಸಿಗೆಯಲ್ಲಿದ್ದ ಬಯಕೆಯು ಗೊಂಚಲಾಗಿರುವ ಹೂವಿನ ಹಾಸಿಗೆಯಲ್ಲಿ ನೆಲೆಸಿತು. ಹೂಬಿಟ್ಟಿದ್ದ ಸೇವಂತಿಗೆ ಮತ್ತು ಸಿಂಧುವಾರ ಹೂವುಗಳಲ್ಲಿದ್ದ ಆಸಕ್ತಿ ಮಿಶ್ರಗಂಧವನ್ನು ಬೀರುತ್ತಿರುವ ಮಲ್ಲಿಗೆಯಲ್ಲಿಯೂ ಅರಳಿದ ಸಂಪಗೆಯಲ್ಲಿಯೂ ಅತಿಶಯವಾಯಿತು. ೩೧. ಮೊದಲು ಭೂಮಿಯನ್ನೆಲ್ಲ ಮಾಗಿಯ ಕಾಲವೆಂಬ ರಾಜನು ತಾನೇ ತಾನಾಗಿ ಆಳಿದನು. ಈಗ ಆತನು ಚಲಿಸಲು ಸಾಧ್ಯವಿಲ್ಲ ಇರದೆಹೋಗಬೇಕು. ಅದೇಕೆಂದರೆ ಈ ಭೂಮಿಯನ್ನು ಮನ್ಮಥನು ಕೊಟ್ಟನು, ವಸಂತರಾಜನು ಪಡೆದನು. ಇದು ಹೀಗೆ ರಾಜಶಾಸನ (ಓಲೆಯಪತ್ರ) ಎಂದು ಡಂಗುರ ಹೊಡೆಯುವ ರೀತಿಯಲ್ಲಿ ಗಿಳಿಯ ಹಿಂಡಿನ ಸಾಲುಗಳು ಕೆಂಪಾದ ಚಿಗುರುಗಳನ್ನು ಕಚ್ಚಿಕೊಂಡು ಹಾರಿದುವು. ೩೨. ಕೆಳಭಾಗದ ಕೆಂಪು ಚಿಗುರಿನಿಂದ ಕೂಡಿದ ಮೇಲುಭಾಗದ ಹಸರು ಚಿಗುರು ಒಂದಕ್ಕೊಂದು ಕೂಡಿಸಿಕೊಂಡು ಅತಿಶಯವಾದ ಹಸಿರು ಬಣ್ಣವನ್ನೂ ಹೊಳೆಯುವ ಕೆಂಪು ಬಣ್ಣವನ್ನೂ ಹೊಂದಿರಲು ವಿರಹದಿಂದ ಕೆರಳಿ ಉಳಿದುಕೊಂಡ ವಿರಹಿಯ ನಡುಗುವ ಎದೆಯನ್ನು ಆಯ್ದುಕೊಂಡು ಅದನ್ನು ಬಯಸಲಿ ಎಂದೇ ಮನ್ಮಥನು ಅದನ್ನು ಸೇರಿಸಿ ಕೆಂಪು ಬಣ್ಣವನ್ನು ಹಾಸಿದ ಹಾಗೆ ಮಾವಿನ ಮರಗಳು ವಸಂತ ಕಾಲದಲ್ಲಿ ರಮ್ಯವಾಗಿದ್ದುವು. ೩೩. ವಸಂತಕಾಲದಲ್ಲಿ ಮಲ್ಲಿಗೆಯ ಹಸಿರು ಬಣ್ಣ ಹೋಗಿ ಬಲಿತ ಮೊಗ್ಗುಗಳಲ್ಲಿ ಬಿಳಿಯ ಬಣ್ಣವು ಕೂಡಿದವು. ದಳದ ಪದರಗಳು ತೋರುತ್ತಿರಲು ತಂಗಾಳಿಯು ಆ ದಳದ ಪದರಗಳನ್ನು ಸಡಲಿಸಿದವು. ಮೊಗ್ಗಿನ ಮಧ್ಯಭಾಗವು ಉಬ್ಬಿ ಮಲ್ಲಿಗೆಯು ಅರಳಿರಲು ಪ್ರಿಯರನ್ನು ನೆನಸಿಕೊಂಡ ವಿರಹಿಗಳ ಹೃದಯಗಳು ಒಡೆದುವು. ಮಲ್ಲಿಗೆಯ ಅರಳುವಿಕೆಗೆ ಪ್ರಿಯರ ಮೃದುಹೃದಯವೂ ಸಮಯಪಾಲನೆ ಮಾಡಿವೆ! ೩೪. ಹೂವಿನ ಎಳೆಯ ವಾಸನೆಯನ್ನು ಧರಿಸಿಯೂ
Page #276
--------------------------------------------------------------------------
________________
ಪಂಚಮಾಶ್ವಾಸಂ | ೨೭೧ ಮುಗುಳ್ಯದನಾದ ಸಂಪಗೆ ಮಡದಿರ್ಮುತ್ತ ಮರಲ್ಲರಲ್ಲ ಮ ಲಿಗೆ ನನೆಗರ್ಚಿ ಕಾಕಳಿಯೋಳಾಣತಿಗೆಯ ಮದಾಳಿ ಪೋ ಪುಗಲ್ | ಪುಗಲನುತಿರ್ಪ ಪಕ್ಕಿ ಮನಮಂ ಕವರುತ್ತಿರೆ ಯೋಗಿಗಂ ವಿಯೋ
ಗಿಗಮರಿದಾಯ್ತು ಪೊಕ್ಕ ಪುಗಿಲಿಂತು ವಸಂತಕ ಚಕ್ರವರ್ತಿಯಾ || ೩೫
ವ|| ಅಂತು ಭುವನಕೆಲ್ಲಮೊಸಗೆವರ್ಪಂತೆ ಬಂದ ವಸಂತದೊಳೊಂದು ದಿವಸಮನ್ನವಾಸದೋಲಗದೊಳುದಾತ್ತನಾರಾಯಣನುಂ ನಾರಾಯಣನುಮಿರ್ದಗೊರ್ವಂಕಂ| ತೂಟೆಕವಡಂ ಮರವಿಲ್
ಕಟ್ಟಿದ ಪಡಕಟ್ಟು ಬೇಂಟೆವತಿ ದೊರೆಯೊಳೊಡಂ || ಬಟ್ಟಸಿಯ ಸುರಗಿ ದಳಿವದ ತೊಟ್ಟಂಗಿಗೆ ತನ್ನೊಳಮರೆ ಬೇಂಟೆಯನೊರ್ವಂ || ಬಂದು ಪೊಡವಟ್ಟು ಕಂಡಿಂ ತಂದಂ ಪೊಲನುಡುಗಿ ಬಂದುದುಡಿದುದು ಪುಲ್ ಕಾ | ಡುಂ ದಲೆಲೆಯಿಕ್ಕಿ ಘಳಿಲಿನ ನಿಂದುವು ತಣಿದುವು ಮೃಗಂಗಳೆತ್ತಲುಮೀಗಳ | ಸುಳೆಯದು ಗಾಳಿ ಮೃಗಂ ಕೆ ಹೈಟೆಗಳ ಮೇತದೊಳೆ ತಣಿದಪುವು ಪಂದಿಗಳು | ಪಟ ನವಿರಿಕ್ಕಿದುವಾಳಂ ಪಲು ಪರಿದಾಡಲ್ ಕರಂ ಬೆಡಂಗವನಿಪತೀ |-
೩೮
೩೭
ಹೂವಿನ ವಾಸನೆಯಿಂದ ಗಂಧಯುಕ್ತವಾಗದೆ ಅರಳಿದ ತಾವರೆಯ ವನಗಳಲ್ಲಿ ಸುತ್ತಾಡಿಯೂ ತಂಪಾಗಿ ಆಗದೆ ಕೂಡಲೆ ಬಂದ ಹಣ್ಣಾದ ಮಾವಿನ ಮರದ ಹೊಸ ಹೂಗಳಲ್ಲಿ ಸೇರಿಕೊಂಡು ಅದರಿಂದ ಹೊರಹೊಮ್ಮಿದ ಸುವಾಸನೆಯು ಮುಖಗಳನ್ನು ಚಳಿಲ್ಲನೆ ಆಕ್ರಮಿಸಿ ಅಪ್ಪಳಿಸುವಂತೆ ವಸಂತಮಾಸದಲ್ಲಿ ತೆಂಕಣಗಾಳಿ ಬೀಸಿತು. ೩೫. ಮೊಗ್ಗಿನ ಹದಕ್ಕೆ ಬಂದ ಸಂಪಗೆಯೂ ಹಬ್ಬಿದ ಅದಿರ್ಮುತ್ತೆಯೂ ಚೆನ್ನಾಗಿ ಅರಳಿದ ಮಲ್ಲಿಗೆಯೂ ಹೂವನ್ನು ಕಚ್ಚಿಕೊಂಡು ಇಂಪಾದ ಧ್ವನಿಯಲ್ಲಿ ಆಲಾಪನೆ ಮಾಡುತ್ತಿರುವ ಸೊಕ್ಕಿದ ದುಂಬಿಯೂ, ಹೋಗಿ ಪ್ರವೇಶಿಸಿರಿ, ಪ್ರವೇಶಿಸಿರಿ ಎನ್ನುತ್ತಿರುವ ಕೋಗಿಲೆಪಕ್ಷಿಯೂ ಮನಸ್ಸನ್ನು ಸೂರೆಗೊಳ್ಳುತ್ತಿರಲು ಯೋಗಿಗೂ ವಿಯೋಗಿಗೂ ವಸಂತ ಚಕ್ರವರ್ತಿಯ ಪ್ರವೇಶವು ಸಹಿಸಲಸಾಧ್ಯವಾಯಿತು. ವl ಹಾಗೆ ಲೋಕಕ್ಕೆಲ್ಲ ಹಬ್ಬ ಬರುವ ಹಾಗೆ ಬಂದ ವಸಂತ ಕಾಲದಲ್ಲಿ ಒಂದು ದಿವಸ ಭೋಜನಶಾಲೆಯ ಸಭೆಯಲ್ಲಿ ಅರ್ಜುನನೂ ಕೃಷ್ಣನೂ ಇದ್ದ ಸ್ಥಳಕ್ಕೆ ೩೬. ತೊಟ್ಟ ಎಕ್ಕಡ, ಕಟ್ಟಿದ ಮರದ ಬಿಲ್ಲು, ಕಟ್ಟಿದ ಹಣೆಯ ಕಟ್ಟು, ಬೇಟೆಯ ಪರೆ (ತಮಟೆ) ಸರಿಯಾಗಿ ಹೊಂದಿಕೊಂಡಿರುವ ಸಣ್ಣ ಕತ್ತಿ, ಉತ್ತರೀಯದಿಂದ ಕೂಡಿದ ಅಂಗಿ ಇವುಗಳಿಂದ ಕೂಡಿದ ಬೇಟೆಗಾರನೊಬ್ಬನು ೩೭. ಬಂದು ನಮಸ್ಕಾರ ಮಾಡಿ ಹೀಗೆಂದನು : ಹೊಲಗಳಲ್ಲಿ ಕಾಳು ಕಡ್ಡಿಗಳನ್ನು ಬಿಡಿಸಿಯಾಯಿತು.ಹುಲ್ಲೊಕ್ಕಣೆಯೂ ಆಯಿತು. ಕಾಡು ನಿಜವಾಗಿಯೂ ಎಲೆ ಬಿಟ್ಟು ಚಿಗುರಿ ನಿಂತಿವೆ. ಎಲ್ಲ ಕಡೆಯಲ್ಲಿಯೂ ಈಗ ಮೃಗಗಳು ತೃಪ್ತಿಪಟ್ಟಿವೆ. ೩೮. ರಾಜನೇ ಈಗ ಗಾಳಿ ಬೀಸುವುದಿಲ್ಲ, ಮೃಗಗಳು
Page #277
--------------------------------------------------------------------------
________________
೨೭೨) ಪಂಪಭಾರತಂ
ಬರವಂ ಕಾಡಂ ಬೇಗೆಗೆ ಕರಮಳದೆರಡುಂ ಮೃಗಂಗಳುಂ ತಣ್ಮುಟಿಲೊಳ್ | ನೆರೆದೊಡವಂದುವು ತಪ್ಪದಿ ದರಿಕೇಸರಿ ಕಂಡು ಮೆಚ್ಚುವೆ ಕೋಳ್ತಾಂಗಂ ||* ಕಾಡೂಡಮ ವೇಳೆ ಸಲೆ ಕೆ ಯೂಡಿದುದನೆ ನೆಲದೊಳಿರ್ದ ನೆಲ್ಲಿಯ ಕಾಯುಂ | ನೋಡ ನೆಲಮುಟ್ಟಲಿಯೊ
ಕಾಡುವೊಡೀ ದವಸಮ ಬೇಂಟೆಯ ದವಸಂ lit ವ|ಮತ್ತಂ ಬೇಂಟೆ ಜಾಲಿಲ್ಲದ ಬೇಂಟೆಯ ಮಾತಂ ಬಿನ್ನಪಂಗೆಯ್ಯಂಪಿರಿಯಕ್ಕರ | ಆಡಲಾಡಿಸಲ್ ಪಾಟಿಯಂ ನಿಸಲುಂ ಪರಿಗೊಳಲ್ ತೊವಲಿಕ್ಕ
ಲೋಳಗಂಬರಲ್ ಕಾಡ ಬೇಲಿಯಂ ಮಾರ್ಕಾಡನಳೆಯಲುಂ ಮೂಡಿಗೆ ಕಕ್ಕುಂಬಂ ಸುಟಿಸಿ ಜೊಂಪಂ | ಬೀಡು ಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮಂದೆಡೆಯದುಂ ಮಾಡಲ್ ಮಾಡಿಸಲ್ ಪಡೆ ಮೆಚ್ಚಿ ನೀಂ ಬಲ್ಲೆ ನೀಂ ಮಚ್ಚೆ ಹರಿಗ ಕೇಳಾನೆ
* ಬಲ್ಲll ೪೧ ಹೊಲದ ದಾರಿಯಲ್ಲಿರುವ ಮೇವುಗಳಿಂದಲೇ ತೃಪ್ತಿಪಡುತ್ತಿವೆ. ಹಂದಿಗಳೂ ತಮ್ಮ ಹಳೆಯ ಕೂದಲುಗಳನ್ನು ವಿಶೇಷವಾಗಿ ಬೀಳಿಸಿಕೊಂಡಿವೆ. ಕಾಡು ಈಗ ಓಡಾಡಲು ಅತ್ಯಂತ ಸೊಗಸಾಗಿದೆ. ೩೯. ಮೃಗಗಳ ಬರುವಿಕೆಯನ್ನೂ ಕಾಡಿನ ಸ್ವರೂಪವನ್ನೂ ಚೆನ್ನಾಗಿ ತಿಳಿದು ಎರಡು ಜಿಂಕೆಗಳೂ ತಂಪಾದ ಮರಗಳ ತೋಪಿನಲ್ಲಿ ಸೇರಿ ಜೊತೆಗೂಡಿ ಬಂದಿವೆ. ಇದು ಸುಳ್ಳಲ್ಲ ಅರ್ಜುನನೇ ಮೃಗವು ಸಿಕ್ಕಿಬೀಳುವ ರೀತಿಯನ್ನು ನೀನು ಮೆಚ್ಚುತ್ತೀಯೆ.* ೪೦. ಕಾಡಿನಲ್ಲಿ ಸಂಗ್ರಹಿಸಬೇಕಾದ ವಸ್ತು, ಅದನ್ನು ಸಂಗ್ರಹಿಸಬೇಕಾದ ಕಾಲ ಇವೆರಡೂ ಕೈಗೂಡಿದೆಯೆನ್ನಲು ನೆಲದಲ್ಲಿ ಬಿದ್ದಿರುವ ನೆಲ್ಲಿಯ ಕಾಯೇ ಸಾಕ್ಷಿ, ನೆಲವನ್ನು ಮುಟ್ಟಿ ಆಟ ಆಡುವ ಪಕ್ಷದಲ್ಲಿ ಬೇಟೆಗೆ ಈ ದಿನವೇ ಯೋಗ್ಯವಾದ ದಿನವಲ್ಲವೇ? ವll ಬೇಟೆಯ ವಿಷಯವಾದ ಸುಳ್ಳು ಸಂದೇಶಗಳಿಲ್ಲದ ಬೇಟೆಯ ಫಲಾಫಲಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ೪೧. ಬೇಟೆಯಾಡುವುದಕ್ಕೂ ಆಡಿಸುವುದಕ್ಕೂ ಕ್ರಮವನ್ನು ಸ್ಥಾಪಿಸುವುದಕ್ಕೂ ಓಡುವುದಕ್ಕೂ ಚಿಗುರನ್ನು ಹಾಕುವುದಕ್ಕೂ ಒಳಗೆ ಪ್ರವೇಶಿಸುವುದಕ್ಕೂ ಕಾಡಿನ ಎಲ್ಲೆಯನ್ನೂ ಎದುರು ಕಾಡನ್ನೂ ತಿಳಿಯುವುದಕ್ಕೂ ಬತ್ತಳಿಕೆ ಕಕ್ಕುಂಬ(?) ಗಳನ್ನು ಸುಳಿಸಿ. ಇದು ಜೊಂಪ (?) ಇದು ಬೀಡುಬಿಡಲು ಯೋಗ್ಯವಾದ ಸ್ಥಳ, ಇದು ಬಾಳೆ, ತೆಂಗು ಇರುವ ಸ್ಥಳ ಇದು, ಮೃಗಗಳು ನೀರು ಕುಡಿಯಲು ಬರುವ ಸ್ಥಳ ಎಂದು ಜಾಣೆಯಿಂದರಿದು ಸೈನ್ಯವೆಲ್ಲ ಮೆಚ್ಚುವ ಹಾಗೆ ಮಾಡುವುದಕ್ಕೂ ಕೂಡಿಸುವುದಕ್ಕೂ ಸಮರ್ಥನಾಗಿದ್ದೀಯ. ಎಲೈ
* ಈ ಪದ್ಯದ ಅರ್ಥ ಮತ್ತು ಅನ್ವಯ ಸ್ಪಷ್ಟವಾಗಿಲ್ಲ. ಏನೋ ಪಾಠದೋಷವಿರಬೇಕು. * ಈ ಪದ್ಯವೂ ಸರಿಯಾಗಿ ಅರ್ಥವಾಗುತ್ತಿಲ್ಲ.
Page #278
--------------------------------------------------------------------------
________________
ಪಂಚಮಾಶ್ವಾಸಂ | ೨೭೩ ಕಂ|| ಮೃಗದೋಲವರಮುಮನರಸನ
ಬಗೆಯುಮನಳೆದಲಸದೆಳಸಲೊಲಗಿಸಲ್ ನೆ | ಟೈಗೆ ಬಲ್ಕನುಳ್ಕೊಡವನ
ಲೈ ಗುಣಾರ್ಣವ ಬೇಂಟೆಕಾಲಿನೋಲಗಕಾಜಂ || ಪಿರಿಯಕ್ಕರ | ಮೃಗಮಂ ಗಾಳಿಯನಿರ್ಕಯಂ ಪಕ್ಕೆಯಂ ಗಣಿದಮಂ ಕಂಡಿಯಂ
ಮಾರ್ಕಂಡಿಯಂ ಪುಗಿಲಂ ಪೋಗಂ ಬಾರಿಯಂ ಸನ್ನೆಯಂ ನೂಲುವಮರ್ಚುವ ನಿಲ್ವೆಡೆಯಂ | ಬಗೆಯಂ ತಗೆಯನಲ್ಲಾಟಮಂ ಕಾಟಮಂ ನೋವುದಂ ಸಾವುದನೆಲ್ಲಂದದಿಂ 'ಬಗೆದಾಗಳರಸರೊಳಲ್ಲ ಕೇಳ್ ನೀಂ ಬಲ್ಲೆ ಬೇಂಟೆಕಾಯಿರೊಳೆಲ್ಲವನೆ ಬಲ್ಲಂ || ೪೩.
ವರೆಗೆ ಮತ್ತು ನೆಲನುಂ ಗಾಳಿಯುಂ ಕೆಯುಂ ಮೃಗಮುಮನಳೆದು ಕಾಲಾಳೊಳಂ ಕುದುರೆಯೊಳಮಳಗಂ ಬರಲಾನ ಬಲ್ಲೆನಿದು ಪರ್ವಂಟೆಯಂದಂ ದೀವದ ಬೇಂಟೆಯಂ ಬಿನ್ನಪಂಗಯೊಡೆ ಗಾಳಿಯುಂ ಕಚಿವುಮುಟಿವುಂ ಕಾಪುಂ ಮೇಪುಂ ತೋಡುಂ ಬೀಡು ದೆಸೆಯುಂ ಮಚ್ಚು ಚಚುಂ ಪೋಗುಂ ಮೇಗುಂ ಚೆದಳುಂ ಕೆದಕುಂ ಪರ್ಚು೦ ಕುಂದುಮನದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಮಡಂಗಲುಮಡಂಗಿಸಲುಮೊಡ್ಡಲು ಮೊಡ್ಡಿಸಲುಂ ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ
ಅರಿಗನೇ ನೀನು ಮೆಚ್ಚುವ ಹಾಗೆ ಮಾಡಲು ನಾನು ಬಲ್ಲೆ, ೪೨. ಪ್ರಾಣಿಗಳ ಮನಸ್ಸಿನ ಪಕ್ಷಪಾತವನ್ನೂ ಅರಸನ ಅಭಿಪ್ರಾಯವನ್ನೂ ತಿಳಿದು ಉದಾಸೀನ ಮಾಡದೆ ನೇರವಾಗಿ ಸೇವೆಮಾಡುವುದನ್ನು ತಿಳಿದಿರುವವನಲ್ಲವೇ ನಿಜವಾದ ಬೇಟೆಗಾರನೂ ಸೇವಾಳುವೂ ಆಗಿರುವವನು! ೪೩. ಪ್ರಾಣಿಗಳ ಸ್ವಭಾವವನ್ನೂ ಗಾಳಿ ಬೀಸುವ ದಿಕ್ಕನ್ನೂ ಪ್ರಾಣಿಗಳಿರುವ ಸ್ಥಳವನ್ನೂ ಅವು ಮಲಗುವ ಎಡೆಯನ್ನೂ ಅವುಗಳ ಸಂಖ್ಯೆಯನ್ನೂ ಅವು ನುಸುಳುವ ಕುಂಡಿ ಪ್ರತಿಕಂಡಿಗಳನ್ನೂ ಅವುಗಳ ಪ್ರವೇಶ ಮತ್ತು ನಿರ್ಗಮನಗಳನ್ನೂ ಅವುಗಳಿಗೆ ಉಪಯೋಗಿಸಬೇಕಾದ ಸಂಜ್ಞೆಗಳನ್ನೂ ಅವುಗಳು ಸೇರುವ ನಿಲ್ಲುವ ಸ್ಥಳವನ್ನೂ ಅವುಗಳ ಆಸಕ್ತಿ ವಿರಕ್ತಿಗಳನ್ನೂ ಅವುಗಳ, ಚಲನೆ, ಹಿಂಸೆ, ಯಾತನೆ ಸಾವುಗಳನ್ನೂ ಎಲ್ಲ ರೀತಿಯಿಂದಲೂ ಯೋಚಿಸಿದಾಗ ರಾಜರುಗಳಲ್ಲೆಲ್ಲ ನೀನೂ ಬೇಟೆಗಾರರಲ್ಲೆಲ್ಲ ನಾನೂ ಸಮರ್ಥರಾದವರೆಂಬುದನ್ನು ನೀನೆ ತಿಳಿದಿದ್ದೀಯೆ. ವli ಅಲ್ಲದೆ ನೆಲದ ಏರು ತಗ್ಗುಗಳನ್ನೂ ಗಾಳಿಯು ಬರುವ ದಿಕ್ಕನ್ನೂ ಹೆಜ್ಜೆಯ ಗುರುತುಗಳನ್ನೂ ಮೃಗಗಳನ್ನೂ ತಿಳಿದು ಪದಾತಿಸೈನ್ಯ ಮತ್ತು ಕುದುರೆಯ ಸೈನ್ಯಗಳ ಮಧ್ಯೆ ನಾನು ಬರಲು ಸಮರ್ಥ, ಇದು ಹೆಬ್ಬೇಟೆಯ ರೀತಿ; ಮೃಗಗಳನ್ನು ಒಡ್ಡಿ ಆಕರ್ಷಿಸುವ ದೀವಕ ಬೇಟೆಯನ್ನು ವಿಜ್ಞಾಪಿಸಿಗೊಳ್ಳುವುದಾದರೆ ಗಾಳಿಯ ದಿಕ್ಕನ್ನೂ ಪ್ರಾಣಿಗಳ ಹೋಗುವಿಕೆ ಮತ್ತು ಉಳಿಯುವಿಕೆಗಳನ್ನೂ ರಕ್ಷಣೆ ಮತ್ತು ಮೇವುಗಳನ್ನೂ ತೊಡುವುದನ್ನೂ ಬಿಡುವುದನ್ನೂ ದಿಕ್ಕುಗಳನ್ನೂ ಸಂಕೇತಸ್ಥಳಗಳನ್ನೂ ಆಸಕ್ತಿ ಭಯಗಳನ್ನೂ ಪೋಗುಮೇಗುಗಳನ್ನೂ (?) ಹೆದರಿಕೆ ಬೆದರಿಕೆಗಳನ್ನೂ ಹೆಚ್ಚು ಕುಂದುಗಳನ್ನೂ ತಿಳಿದು ಅವುಗಳನ್ನು ಕಾಣಲು ಕಾಣಿಸಲು ಅವುಗಳ ಮೇಲೆ ರೇಗಲೂ
Page #279
--------------------------------------------------------------------------
________________
೨೭೪) ಪಂಪಭಾರತ ಮಾಣಿಸಲುವ ದುದನೇ ಸಲುಂ ಜಾಣನಾಗಿ ಮಜು ಕೊಂಬುವನಾಜು ನಾಣ್ಯಗುಮನರ೦ಜೆಯುಮಂ ಮೂಜು `ಪೋಲ್ತುಮಂ ಮೃಗದ ಮೂಳರವುಮ ನಾಜಾರಯ್ಯಯುಮಂ ಗಾಳಿಯುಮನೆಯಿಂಕಯುಮಂ ಬಲ್ಬನಾಗಿ ನಂಬಿದ ಬರವುಮಂ ನಂಬದ ಬರವುಮನಳೆದು ಮಲೆಯದುದರಿ ಮಳೆಯಿಸಲುಂ ಮಲದುದಂ ತೊಲಗಿಸಲುಂ ನಂಬದುರಂ ನಂಬಿಸಲುಂ ನಂಬಿದುದಂ ಬಿಡಿಸಲುಮೊಳಪುಗುವುದರ್ಕಡೆ ಮಾಡಲುಮಡೆಯಾಗದ ಮಗಮನವುಂಕಿಸಲುಮೇಲುಮೂಲದ ನಲರಂತ ಮಿಡುಕಿಸಲು ಪಣಮುಡಿದರಂತಡಂ ಮಾಡಲುಮಸೆದ ದೆಸೆಗಳೇಡಿಸಲುಂ ಕುಮಾರಸ್ವಾಮಿಯ ನಿಮ್ಮಡಿಯ ಕೆಲದೊಳಾನೆ ಬಲ್ಲಂಕoll ಬರದಂತ ಬೆನ್ನ ಕರ್ಪೆಸೆ
ದಿರೆ ಸೂಚಮನುರ್ಚಿ ಪುಲೈಗಾಟಿಸಿ ಮಲೆತ | ರ್ಪರಲೆಯ ಸೋಲಮನಚಿಯೊ ಛರಿಕೇಸರಿ ನಿಂದು ನೋಟ್ಟುದೊಂದರಸ | ಪದಮುಮನಿಂಬುಮನಣಮ ಯದದೇವುದು ಬದ್ದ ಬೆಳ್ಳಿಗಂ ಪಜ್ಜೆದಲೆಂ | ಬುದನರಡುಮನಮಾತನ ಚದುರಂ ಚದುರಂಗೆ ಬದ್ಧ ವಜ್ಜೆಗಳೊಳವೇ | , , ೪೫
ಅವುಗಳನ್ನು ರೇಗಿಸಲೂ ಅವಿತುಕೊಳ್ಳಲೂ ಅವಿತುಕೊಳ್ಳಿಸಲೂ ಒಡ್ಡಲೂ ಒಡ್ಡಿಸಲೂ ಪ್ರವೇಶಮಾಡಿಸಲೂ ಬೇರೆಡೆಯಲ್ಲಿ ಉಳಿಯುವ ಹಾಗೆ ಮಾಡಲೂ ಕಾಣದಿರುವು ದನ್ನು ಕಾಣಿಸಲೂ ತಡೆಯುವುದಕ್ಕಾಗದುದನ್ನು ತಡೆಯಲೂ ಹತ್ತದೆ ಇರುವುದನ್ನು ಹತ್ತಿಸಲೂ ಚಾತುರ್ಯದಿಂದ ಅವುಗಳ ಮೂರು ಸಂಕೇತಸ್ಥಳಗಳನ್ನೂ ಆರು ಬಗೆಯ ರತಿಕ್ರೀಡೆಯನ್ನೂ ಎರಡು ಹೆಜ್ಜೆಯನ್ನೂ ಮೂರು ಹೊತ್ತನ್ನೂ ಮೃಗದ ಮೂರು ಸ್ಥಿತಿಗಳನ್ನೂ ಆರು ಪೋಷಣಾಕ್ರಮವನ್ನೂ ಗಾಳಿಯನ್ನೂ ರಕೆಯನ್ನೂ ತಿಳಿದವನಾದ ಕಾರಣ ಅಪಾಯವಿಲ್ಲವೆಂದು ನಂಬಿ ಬರುವ ಪ್ರಾಣಿಯನ್ನೂ ಸಂದೇಹದಿಂದ ಬರುವ ಪ್ರಾಣಿಯನ್ನೂ ತಿಳಿದು ಕೆರಳದೇ ಇರುವುದನ್ನು ಕೆರಳಿಸಲೂ ಕೆರಳಿರುವುದನ್ನು ತೊಲಗಿಸಲೂ ನಂಬದೇ ಇರುವುದನ್ನು ನಂಬಿಸಲೂ ನಂಬಿದುದನ್ನು ಬಿಡಿಸಲೂ ಒಳಗೆ ಪ್ರವೇಶಮಾಡುವುದಕ್ಕೆ ಅವಕಾಶಮಾಡಲೂ ಅಧೀನವಾಗದ ಮೃಗವನ್ನು ಅಧೀನ ಮಾಡಿಕೊಳ್ಳಲೂ ಪ್ರೀತಿಸಿಯೂ ಪ್ರೀತಿಸದ ಪ್ರೇಮಿಗಳ ಹಾಗೆ ವ್ಯಥೆಪಡಿಸಲೂ ಜೂಜಿನಲ್ಲಿ ಒತ್ತೆಯನ್ನು ಸೋತವರಂತೆ ಅಡ್ಡಗಟ್ಟಲೂ ಎಸೆದ ದಿಕ್ಕಿಗೆ ಓಡಿಸಲೂ ಕುಮಾರಸ್ವಾಮಿಯ (ಷಣ್ಮುಖನ) ಮತ್ತು ನಿಮ್ಮ ಸಾಕ್ಷಿಯಾಗಿ ನಾನೇ ಸಮರ್ಥನಾಗಿದ್ದೇನೆ. ೪೪. ಅರ್ಜುನನೇ ಚಿತ್ರಿಸಿದ ಹಾಗೆ ಬೆನ್ನಿನ ಮಚ್ಚೆಯು ಪ್ರಕಾಶಿಸುತ್ತಿರಲು ಹುಲ್ಲಿನ ಊಬುಗಳನ್ನು ಮುರಿದು ಹೆಣ್ಣಿನ ಜಿಂಕೆಗಾಗಿ ಬಯಸಿ ಔದ್ಧತ್ಯದಿಂದ ಬರುತ್ತಿರುವ ಗಂಡುಜಿಂಕೆಯ ಮೋಹವನ್ನು ಪ್ರೀತಿಯಿಂದ ನೋಡುವುದು ರಾಜರಿಗೆ ಯೋಗ್ಯವಾದ ವಿನೋದವಲ್ಲವೇ? ೪೫. ಪಾದವನ್ನೂ ಅದರ ವಿಸ್ತಾರವನ್ನೂ ಸ್ವಲ್ಪವೂ ತಿಳಿಯದ ಆ ಪ್ರೌಢಿಮೆಯಂತಹುದು? ಅಂಜುವ ಮೃಗ ಅದರ ನಿಜವಾದ
Page #280
--------------------------------------------------------------------------
________________
ಪಂಚಮಾಶ್ವಾಸಂ | ೨೭೫ ವರೆಗೆ ಮತ್ತು ಪಂದಿವೇಂಟೆಯ ಮಾತಂ ಬಿನ್ನಪಂಗೆಯ್ಯಂಪಿರಿಯಕರ | ನೆಲನಂ ನಿಜುಗೆಯಂ ನಡವೊಂದು ಪದಮುಮಂ ಸೋವಳಿ ಮೇವಳಿ
ಬಿಸುವಳಿಯಂ ಬಲಮಂ ಶಕುನಮನೊಟ್ಟಿತ್ತುಪಾಯಮಂ ಪಿಡಿವಂದೀತನೆ ವಂದಿ ಕುರುಡು ಕುಂಟೆಂ | ದಲಸದಳದಿಂತು ಬಲೆಗೆ ಬೆರಲೆ ಪಜ್ಜೆಯಂ ನೆಲೆಗಳಂ ಕಿಡಲೀಯದ ಒಲೆಯ ಮೇಲಾದೊಡಂ ಶಕುನಮಂ ನಿಪಂತ ನಿಳಿಸುವೆಂ ಸಂದಿಯಂ ನೀಂ
ಮೆಚ್ಚಲುಂ || ೪೬ ವlು ಮತ್ತು ಸಂದಿವೇಂಟೆಯ ನಾಯಂತಪುವೆಂದೂಡಸಿಯ ನಡುವುಮಗಲುರಮುಂ ತನ್ನು ಕಟ್ಟಿದ ಕಿವಿಯುಂ ಪುರ್ವಂ ತೋರವಾಗಿ ನಿರ್ಮಾಂಸಮಪ್ಪ ಕಾಲ್ಗಳುಂ ನೆಲನಂ ಮುಟ್ಟದುಗುರ್ಗಳುಮನುಳ್ಳುದಾಗಿ ಜಾತ್ಯತ್ವದಂತೆ ಬೇಗಮಾಗಿ ಕೋಳಿ ಕಾಳಿಕಾಳಿನಂತ ಬಳಿಯುವಿಡಿದು ತುಂಬನ ನೀರನುರ್ಚಿದಾಗಳಡ ಪರಿದು ಮನ್ನೆಯರಂತ ಕಾದಿಯಲಸದ ಸೂಳೆಯಂತ ಕೋಳಂ ಪಟ್ಟಟ್ಟಸದ ತಕ್ಕನಂತ ನಂಬಿಸಿಯು ಮೊತ್ತರದಂತೂತ್ತಿಯು ಮುರಿಯಳುರ್ವಂತಳುರ್ದುಕೂಳ್ಳುದಿದು ಪಂದಿವೇಂಟೆಯ ನಾಮ್ ಮತ್ತು ಕಿಜುವೇಂಟೆಯ ನಾಯಂ ಕೊಂಡುಂ ಜಾಳಿಯುಂ ನೆಲನುಂ ಪೋಲ್ತುಂ ಪೊಲನುಮನಳಿದು ಬಚಿಯೊಳ್
ಹೆಜ್ಜೆ ಎರಡನ್ನೂ ತಿಳಿದವನೇ ಚತುರ. ಜಾಣನಿಗೂ ತಿಳಿಯದ ಪ್ರೌಢವಾದ ಹೆಜ್ಜೆಯ ಗುರುತುಗಳುಂಟೆ ? ವಇನ್ನು ಹಂದಿಯ ಬೇಟೆಯ ಮಾತನ್ನು ವಿಜ್ಞಾಪಿಸಿ ಕೊಳ್ಳುತ್ತೇನೆ - ೪೬. ಹಂದಿಯನ್ನು ಹಿಡಿಯುವಾಗ ನೆಲವನ್ನೂ ನಿಂತ ಸ್ಥಳವನ್ನೂ ನಡೆಯುವ ರೀತಿಯನ್ನೂ ಹಿಡಿಯುವ ಕ್ರಮವನ್ನೂ ಮೇಯುವಿಕೆಯನ್ನೂ ಒಟ್ಟುಗೂಡಿಸುವಿಕೆಯನ್ನೂ ಶಕ್ತಿಯನ್ನೂ ಶಕುನಸಂಕೇತಗಳನ್ನೂ ಒಳ್ಳೆಯ ಉಪಾಯಗಳನ್ನೂ (ಉಳ್ಳವನು) ಇವನೇ (ಎಂಬ ಪ್ರೌಢಿಮೆಯನ್ನು ಪಡೆದಿದ್ದೇನೆ). ಹಂದಿಯು ಕುರುಡು ಅಥವಾ ಕುಂಟು ಎಂದು ಉದಾಸೀನಮಾಡದೆ ನನ್ನ ಶಕ್ತಿಯನ್ನು ಪ್ರದರ್ಶಿಸಿ ಹೆಜ್ಜೆಯ ಗುರುತುಗಳನ್ನು ಅವುಗಳ ವಸತಿಗಳನ್ನು ಕೆಡಿಸದೆ ಕಲ್ಲಿನ ಮೇಲಾದರೂ ಸಂಕೇತವನ್ನು ಸ್ಥಾಪಿಸುವ ಹಾಗೆ ನೀನು ಮೆಚ್ಚುವಂತೆ ಹಂದಿಯನ್ನು ನಿಲ್ಲಿಸುತ್ತೇನೆ. ವll ಮತ್ತು ಹಂದಿಯ ಬೇಟೆಯ ನಾಯಿಯು ಎಂತಹುದು ಎಂದರೆ ತೆಳುವಾದ ಸೊಂಟ, ಅಗಲವಾದ ಎದೆ, ನೆಟ್ಟಗೆ ನಿಂತಿರುವ ಕಿವಿಗಳು ಬಾಗಿದ ಹುಬ್ಬು, ದಪ್ಪವಾಗಿ ಮಾಂಸವಿಲ್ಲದ ಕಾಲುಗಳು, ನೆಲವನ್ನು ಮುಟ್ಟದ ಉಗುರು ಇವುಗಳಿಂದ ಕೂಡಿ ಜಾತಿಯ ಕುದುರೆಯಂತೆ ವೇಗವಾಗಿ ನಡೆದು ಶಾಸ್ತ್ರೀಯಮತದ ವಂಚಕನಂತೆ ತನ್ನ ಮಾರ್ಗವನ್ನು ಹಿಡಿದು, ತೂಬಿನ ನೀರಿನ ಹಾಗೆ ಸಡಿಲ ಮಾಡಿದ ತಕ್ಷಣವೇ ಅಡ್ಡವಾಗಿ ಹರಿದು, ಮಾನ್ಯರ ಸೇವಕನಂತೆ ಕಾದಲು ಆಲಸ್ಯ ಪಡದೆ ಸೂಳೆಯಂತೆ ಸುಲಿಗೆಗೊಂಡು ಓಡಿಸದೆ, ಯೋಗ್ಯನಂತೆ ನಂಬಿಸಿ ಒತ್ತರದಂತೆ (?) ಒತ್ತಿ ಉರಿಯು ಹರಡುವಂತೆ ಹರಡಿಕೊಳ್ಳುವುದು. ಇದು ಹಂದಿಬೇಟೆಯಲ್ಲಿ ಉಪಯೋಗಿಸುವ ನಾಯಿಯ ಲಕ್ಷಣ. ಇನ್ನು ಕಿರುಬೇಟೆಯ ನಾಯನ್ನು ತೆಗೆದುಕೊಂಡು ಸಡಿಲ ಮಾಡಿದ ನೆಲದ ಸ್ವರೂಪವನ್ನು ಹೊತ್ತನ್ನೂ ಹೊಲವನ್ನೂ ತಿಳಿದು
Page #281
--------------------------------------------------------------------------
________________
೨೭೬ | ಪಂಪಭಾರತಂ ಪೊಸತುಂ ಪದುಮನದು ಪರಿಯಿಸಲ್ ನೀನೆ ಬಲ್ಲೆಯದನಾನೆ ಬಲ್ಲೆನೆಂದು , ಬಿನ್ನಪಂಗಯ್ಯನಂತುವಲ್ಲದ ಬಿಗಂ ಬಸನಕ್ಕಂ ಸವಿಯಪ್ಪ ಕಿಜುವೇಂಟೆಯುಂ ಪರ್ವೇಂಟೆಯುಮಲ್ಲದುಟಿದ ಬೇಂಟೆಯಂ ಬೇಂಟೆಯನ್ನೆಂಪಿರಿಯಕ್ಕರ | ಪಸಿವು ದೊರೆಕೊಳ್ಳುಮುಣಿಸುಗಳಿನಿಕೆಯುಮಾವಂದದೂಳ್ ಕನಲ್ದಾದ
ಮಯ್ಯ ನಸಿಯನಾಗಿಪುದುಳಿದುವಪ್ಪುವು ಬಗೆಗೊಳಲಪುದು ಮೃಗದ ಮಯ್ಯೋಳ್ | ನಿಸದಮೆಸೆವುದಂ ಬಲ್ಲಾಳ ಬಿಲ್ಲಿ ತನ್ನೊಳಮಿಸುತ ಲೇಸಪುದು ಬಸನಮಂದಣಿಯದೇಳಿಸುವರ್ ಚೇಂಟೆಯಂ ಬೇಂಟೆಯ ಬಿನದಂಗಳರಸll ೪೭
ವ|| ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗ ಮೃಗ ವ್ಯಾಯಾಮ ಕಾರ್ತಿಕೇಯಂ ಮಚ್ಚಿ ಮೆಚ್ಚುಗೊಟ್ಟು ತೊವಲನಕ್ಕೆಂದು ಮುಂದೆ ಪೇಟ್ಟಿಟ್ಟ ನಾರಾಯಣನುಂ ತಾನುಮಂತಃ ಪುರ ಪರಿವಾರಂಬೆರಸು ಬೇಂಟೆಗೆ ಪೊಆಮಟ್ಟು ಪರಿಯ ತಾಣಕ್ಕೆ ವಂದು ಬೇಲಿಯ ಕೆಲದೋಳಲ್ಲದ ಪಂಗಣುಲಿಪಿಂಗಮುಳೊಳಕ್ಕಂ ಗಂಟಾಗಿ ಬೀಡಂ ಬಿಡಿಸಿ ಬೇಂಟೆಕಾಳಿನ ಸಮದ ಮಕರತೋರಣಮುಮಂ ಗುಣಕಯ ಬಾಣಸಿನ ಮಜ್ಜನದ ರಾಣಿವಾಸದ ಮನೆಗಳುಮಂ ನನೆಯ ಪಂದರುಮಂ ತಳಿರ ಕಾವಣಂಗಳುಮಂ ಮಾಡದ ನೆಲೆಯ ಚೌಪಳಿಗೆಗಳುಮನವು ಮೇಲಿರ್ದಿಯಡಕೆಯುಮಂ ತಂಗಿನೆಳನೀರುಮಂ ಕೊಳಲಿಂಬಪ್ರಂತಿರ ಮಾಡಿ ನಮ್ಮ ಕಂಗಿನ
ದಾರಿಯಲ್ಲಿಯೇ ಹೊಸದು ಹಳೆಯದೆಂಬುದನ್ನು ತಿಳಿದು ಹರಿಯಿಸಲು ನೀನೇ ಶಕ್ತನೆಂಬುದನ್ನು ನಾನು ಬಲ್ಲೆ. ಅಲ್ಲದೆ ಶಕ್ತಿಪ್ರದರ್ಶನಕ್ಕೂ ಸವಿಯಾಗಿರುವ ಕಿರುಬೇಟೆಯನ್ನೂ ಹೆಬ್ಬೇಟೆಯನ್ನೂ ಬಿಟ್ಟು ಉಳಿದ ಬೇಟೆಯನ್ನು ಬೇಟೆಯೆಂದೇ ನಾನು ಕರೆಯುವುದಿಲ್ಲ. ೪೭. ಬೇಟೆಯಿಂದ ಹಸಿವುಂಟಾಗುತ್ತದೆ. ಆಹಾರ ರುಚಿಯಾಗುತ್ತದೆ. ಯಾವ ರೀತಿಯಲ್ಲಾದರೂ ಕೆರಳಿ ಕೊಬ್ಬಿದ ಬೊಜ್ಜು ಕರಗುತ್ತದೆ. ಉಳಿದುವೂ ಆಗುತ್ತದೆ. ಮೃಗಗಳ ಶರೀರ ಮತ್ತು ಮನಸ್ಸಿನ ಅರಿವುಂಟಾಗುತ್ತದೆ. ಪರಾಕ್ರಮಶಾಲಿಯ ಬಿಲ್ಲಿನ ಪ್ರೌಢಿಮ ನಿಶ್ಚಯವಾಗಿಯೂ ಪ್ರಕಾಶಿಸುತ್ತದೆ. ಬಾಣಪ್ರಯೋಗ ಮಾಡುವುದರಿಂದ ತನಗೂ ಒಳ್ಳೆಯದಾಗುತ್ತದೆ. ತಿಳಿಯದವರು ಬೇಟೆಯನ್ನು ವ್ಯಸನವೆಂದು ಕರೆಯುತ್ತಾರೆ. ಬೇಟೆಯು ವಿನೋದಗಳ ರಾಜನಲ್ಲವೆ? ವ|| ಎಂದು ವಿಜ್ಞಾಪನಮಾಡಿದ ಬೇಟೆಯವನಿಗೆ ಮೃಗಗಳಿಗೆ ವ್ಯಾಯಾಮ ಮಾಡಿಸುವುದರಲ್ಲಿ ಷಣ್ಮುಖನಂತಿರುವ ಅರ್ಜುನನು (ಅರಿಕೇಸರಿಯು) ಬಹುಮಾನವನ್ನಿತ್ತು ಚಿಗುರನ್ನು ಹಾಕು ಎಂದು ಮೊದಲು ಹೇಳಿಕಳುಹಿಸಿದನು. ಕೃಷ್ಣನೂ ತಾನೂ ರಾಣಿವಾಸದ ಪರಿವಾರದೊಡನೆ ಹೊರಟು ಬೇಟೆಯ ಪ್ರವೇಶಸ್ಥಳಕ್ಕೆ ಬಂದರು. ಬೇಲಿಯ ಪಕ್ಕದಲ್ಲಿಯೇ ಅಲ್ಲದೆ ಹಿಂದುಗಡೆಯ ಸದ್ದಿಗೂ ಗಲಭೆಗೂ ದೂರವಾಗಿ ಪಾಳೆಯವನ್ನು ಬಿಡಿಸಿದರು. ಬೇಟೆಗಾರನು ಸಿದ್ಧ ಮಾಡಿದ್ದ ಮಕರತೋರಣ, ನೃತ್ಯಶಾಲೆ, ಪಾಕಶಾಲೆ, ಸ್ನಾನಗೃಹ, ಅಂತಃಪುರ, ಹೂವಿನ ಚಪ್ಪರ, ಚಿಗುರಿನ ಹಂದರ, ಉಪ್ಪರಿಗೆಯ ಮನೆಯ ತೊಟ್ಟಿಗಳು, ಅವುಗಳ ಮೇಲಿದ್ದ, ಎಲೆಯಡಿಕೆ, ತೆಂಗಿನ ಎಳನೀರುಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಹಾಗೆ
Page #282
--------------------------------------------------------------------------
________________
ಪಂಚಮಾಶ್ವಾಸಂ | ೨೭೭ ತೆಂಗಿನ ಮರಂಗಳುಮಂ ಪಸ್ವರಸು ನಟ್ಟ ಮೈಂದವಾಮಿಗಳುಮಂ ತೊವಲ್ವೆರಸು ನಟ್ಬಾಲಂಗಳುಮನಮರ ಮಾಡಿದ ಬಟ್ಟುಳಿಯ ಕಕ್ಕುಂಬ ತೊಡಂಬೆಯ ಮೂಡಿಗೆಯ ಕದಳಿಕೆಯ ಕಂಡಪಟಂಗಳುಮಂ ಪಲವುಂ ತೆಜದ ಪಲವುಂ ಪೋಣಿಯಾಗಿ ಕಟ್ಟಿದ ಬಲೆಗಳುಮಂ ಪಡಿಗಳನಮರ್ಚಿ ಬಿಲ್ಲುಂ ಕುದುರೆಯುಂ ಕಾಲಾಳುಂ ನಾಯ್ಕಳುಮಂ ತಿಣಮಿರಿಸಿ ಕೆಯ್ಯಂ ನೇಣುಮನಳವಿಯೊಳ್ ಕೂಡಿ ನಡೆಯಲ್ಲೀಟ್ಟು ಬೇಂಟೆವಸದನಂಗೊಂಡು ಕಂಡಿಯ ಬಾಗಿಲೊಳುದಾತ್ತನಾರಾಯಣನುಂ ನಾರಾಯಣನುಮಿರ್ದು ಪುಗಿಲ ಪುಲ್ಲೆಯ ಮೊದಲುರಮುಮಂ ಪಂಗಣ ಪುಲ್ಲೆಯ ನಡುವುಮನಹಳ್ ಮೂಜುಮಂ ಮೂಳೆರಡು ಮನೆರಡeಳೊಂದುಮನೆಚ್ಚು ಬಿಲ್ಲ ಬಲೆಯಂ ಮಣಿದುಕoll ಮುಂದಣ ಮಿಗಮಂ ಕಟಿಪದೆ
ಸಂದಿಸಿ ಬಟಿಗೊಳ್ತ ಮಿಗಮುಮಂ ಕಟಿಪದೆ ತಾ | ನೋಂದಳವಿದಪ್ಪದಚ್ಚು ಬ ಲಿಂದಮನಿಂ ಬಿಲ್ಲ ಬಲೆಯಂ ಪೊಗಳಿಸಿದಂ ||
೪೮ ವll ಮತ್ತು ಬೆರ್ಚಿ ಪೊಳದು ಪರಿವ ಪೊಳವುಗಳುಮಂ ತಲೆಯಂ ಕುತ್ತಿ ವಿಶಾಲಂಬರಿವ ಕರಡಿಗಳುಮನಡಂಗಿ ಪರಿವ ಪುಲಿಗಳುಮಂ ಸೋಂಕಿ ಪರಿವೆಯ ತುಮಂ ತಡಂವಟಿ ಪರಿವ ಕಡವಿನ ಕಾಡಮಯ ಮರಯು ಪಿಂಡುಗಳು
ಮಾಡಿ ನೆಟ್ಟಿರುವ, ಅಡಕೆ ಮತ್ತು ತೆಂಗಿನ ಮರಗಳು ಹಣ್ಣಿನಿಂದ ಕೂಡಿ ನೆಟ್ಟಿರುವ ಮಹೇಂದ್ರ ಬಾಳೆ, ಚಿಗುರಿನಿಂದ ಕೂಡಿ ನೆಟ್ಟಿರುವ ಆಲದ ಮರ, ಗಾಢವಾಗಿ ಸೇರಿಕೊಂಡಿರುವ ಬಟ್ಟುಳಿಯ (?) ಕಕ್ಕುಂಬದ (?) ಗೊಂಚಲುಗಳಿಂದ ಮಾಡಿದ ಬತ್ತಳಿಕೆ ಬಾವುಟ ತೆರೆಗಳು ಹಲವು ರೀತಿಯ ಹಲವು ಹೊರೆಗಳಾಗಿ ಕಟ್ಟಿದ ಬಲೆಗಳು ಬಾಗಿಲುಗಳನ್ನು (ಭದ್ರಪಡಿಸಿ) ಸೇರಿಸಿ,ಬಿಲ್ಲ, ಕುದುರೆ ಕಾಲಾಳು ನಾಯಿ ಹೆಚ್ಚುಸಂಖ್ಯೆಯ ಕೋಲು ಹಗ್ಗ ಮೊದಲಾದುವನ್ನೆಲ್ಲ ಸರಿಯಾದ ಪ್ರಮಾಣದಲ್ಲಿ ಸೇರಿಸಿ ನಡೆಯಹೇಳಿ ಬೇಟೆಯ ಉಡುಪನ್ನು (ಅಲಂಕಾರವನ್ನು ತೊಟ್ಟು ಮೃಗವು ಹೊರಗೆ ಬರುವ ಸ್ಥಳದಲ್ಲಿ ಬಾಗಿಲಲ್ಲಿ ಅರ್ಜುನ ಕೃಷ್ಣರು ನಿಂತು ಬೇಟೆಗೆ ಪ್ರಾರಂಭಮಾಡಿದರು. ಪ್ರವೇಶಮಾಡುವ ಜಿಂಕೆಯ ಎದೆಯ ಮೊದಲ ಭಾಗವನ್ನು ಹೊರಗಣ ಹುಲ್ಲೆ ಮಧ್ಯಭಾಗವನ್ನೂ ಅಯ್ದರಲ್ಲಿ ಮೂರನ್ನೂ ಮೂರಲ್ಲಿ ಎರಡನ್ನೂ ಎರಡಲ್ಲಿ ಒಂದನ್ನೂ ಹೊಡೆದು ತಮ್ಮ ಬಿಲ್ವಿದ್ಯೆಯ ಪ್ರೌಢಿಮೆಯನ್ನು ಪ್ರಕಾಶಪಡಿಸಿದರು. ೪೮. ಮುಂದೆ ಬಂದ ಮೃಗವನ್ನೂ ಸಾಯಿಸದೆ ಅದನ್ನು ಅನುಸರಿಸಿ ಹಿಂದೆಬಂದ ಮೃಗವನ್ನೂ ಕೊಲ್ಲದೆ ತಾನು ಒಂದು ಅಳತೆಯನ್ನೂ ತಪ್ಪದೆ ಅರ್ಜುನನು ಬಾಣಪ್ರಯೋಗಮಾಡಿ ಕೃಷ್ಣನು ತನ್ನ ಬಿಲ್ವಿದ್ಯೆಯನ್ನು ಹೊಗಳುವ ಹಾಗೆ ಮಾಡಿದನು. ವು ಪುನಃ ಹದರಿ ಹೊಳೆದು ಹರಿಯುವ ಜಿಂಕೆಗಳನ್ನೂ ತಲೆತಗ್ಗಿಸಿಕೊಂಡು ದೂರವಾಗಿ ಹರಿಯುವ ಕರಡಿಗಳನ್ನೂ ಅಡಗಿಸಿ ಹರಿಯುವ ಹುಲಿಗಳನ್ನೂ ಮೆಟ್ಟಿ ಓಡಿಹೋಗುವ ಮುಳ್ಳು ಹಂದಿಗಳನ್ನೂ ಅಡ್ಡಗಟ್ಟಿ ಉದ್ದವಾಗಿ ಕಾಲಿಟ್ಟು ಹರಿಯುವ ಕಡವೆ ಮತ್ತು ಕಾಡೆಮ್ಮೆಯ ಮರಿಗಳ ಹಿಂಡುಗಳನ್ನೂ ಅಳತೆದಪ್ಪದೆ ಒಂದೊಂದನ್ನೂ
Page #283
--------------------------------------------------------------------------
________________
೨೭೮) ಪಂಪಭಾರತಂ ಮನಳವಿದಪ್ಪದೊಂದೊಂದನಿಸುವಂತೆ ಪಲವನಚ್ಚು ನಲಂ ಬಿರಿಯೆ ಗಜ ಗರ್ಜಿಸಿ ಪಾಯ್ಕ ಸಿಂಗಂಗಳುಮಂ ಕಂಡುಕಂ| ಆಸುಕರಂ ಗಡ ತಮಗತಿ
ಭಾಸುರ ಮೃಗರಾಜ ನಾಮಮುಂ ಗಡಮಂದಾ | ದೋಸಕ್ಕೆ ಮುಳಿದು ನೆಗದ್ದಿರಿ ಕೇಸರಿ ಕೇಸರಿಗಳನಿತುಮಂ ತಿಂದಂ || ಇಳೆದವು ನೆತ್ತರೊಳ್ ತ ಇದಂ ತನುರಮನುರು ಗಜಂಗಳನಾಟಂ | ದಲಿಸಿ ಕೋಲುತಿರ್ಪವೆಂಬೀ ಕುಪಿನೊಳರಿಗಂಬರಂ ಗಜಪ್ರಿಯರೊಳರೇ ||
ವ|| ಅಂತು ನರ ನಾರಾಯಣರಿರ್ವರುಮನವರತ ಶರಾಸಾರ ಶೂನೀಕೃತ ಕಾನನಮಾಗಚ್ಚು ಮೃಗವ್ಯ ವ್ಯಾಪಾರದಿಂ ಬುಲ್ಲು ಮನದಂತ ಪರಿವ ಜಾತ್ಯಶ್ವಂಗಳನೇ ಬರೆವರೆಚoll ಜವಮುಟದೊಂದು ಸೋಗನವಿಲೊಯ್ಯನೆ ಕರ್ಕಡಗಾಸಿಯಾಗಿ ಪಾ.
ಜುವುದುಮಿದನ್ನ ನಲ್ಲಳ ರತಿಶ್ರಮವಿಶ್ವಥ ಕೇಶಪಾಶದೊಳ್ | ಸವಸವನಾಗಿ ತೋಟದಪುದೆಂಬುದ ಕಾರಣದಿಂದದಂ ಗುಣಾ ರ್ಣವನಿಡಲೊಲ್ಲನಿಲ್ಲ ಹಯವಲನಸಂಚಳ ರತ್ನಕುಂಡಳಂ || - ೫೧
ಹೊಡೆಯುವ ಹಾಗೆ ಹಲವನ್ನು ಹೊಡೆದು ಕೆಡವಿದನು. ಭೂಮಿಯು ಬಿರಿದುಹೋಗುವ ಹಾಗೆ ಆರ್ಭಟದಿಂದ ಘರ್ಜನೆಮಾಡಿಕೊಂಡು ಮುನ್ನುಗ್ಗುತ್ತಿರುವ ಸಿಂಹಗಳನ್ನು ಕಂಡು-೪೯, ಇವು ಅತಿಕ್ರೂರವಾದುವು ಆದರೂ ಬಹು ಪ್ರಸಿದ್ದವಾದ ಮೃಗರಾಜನೆಂಬ ಹೆಸರು ಇವಕ್ಕೆ ಇದೆಯಲ್ಲವೆ? ಎಂದು ಆ ದೋಷಗಳಿಗಾಗಿ ಕೋಪಿಸಿಕೊಂಡು ಪ್ರಸಿದ್ಧನಾದ ಅರಿಕೇಸರಿಯು ಕೇಸರಿ (ಸಿಂಹ)ಗಳಷ್ಟನ್ನೂ ಎದುರಿಸಿ ಕೊಂದನು (ಕತ್ತರಿಸಿದನು), ೫೦, ಅವುಗಳ ರಕ್ತದಿಂದ ತನ್ನ ಎದೆಯನ್ನು ಲೇಪನ ಮಾಡಿಕೊಂಡನು. ಈ ಸಿಂಹಗಳು ಶ್ರೇಷ್ಠವಾದ ಆನೆಗಳನ್ನೂ ಮೇಲೆಬಿದ್ದು ಹಿಂಸಿಸಿ ಕೊಲ್ಲುತ್ತಿವೆ ಎಂಬ ಈ ಕೋಪದಲ್ಲಿ ಅರಿಕೇಸರಿಯ ಮಟ್ಟಕ್ಕೆ ಬರುವ ಗಜಪ್ರಿಯರು (ಆನೆಯನ್ನು ಪ್ರೀತಿಸುವವರು) ಇದ್ದಾರೆಯೇ? ವll ಹಾಗೆ ನರನಾರಾಯಣರಿಬ್ಬರೂ ಎಡಬಿಡದ ಬಾಣಗಳ ಮಳೆಯಿಂದ ಕಾಡುಗಳನ್ನೆಲ್ಲ ಬರಿದು ಮಾಡಿ ಹೊಡೆದು ಬೇಟೆಯ ಕಾರ್ಯದಿಂದ ಬಳಲಿ ತಮ್ಮ ಮನಸ್ಸಿನಷ್ಟೇ ವೇಗದಿಂದ ಹರಿಯುವ ಜಾತಿಕುದುರೆಗಳನ್ನು ಹತ್ತಿಬಂದರು. ೫೧. ಅಲ್ಲಿ ಕಕ್ಕಡೆ (ಮುಳ್ಳುಗೋಲು)ಯೆಂಬ ಆಯುಧದಿಂದ ಪೆಟ್ಟುತಿಂದು ಶಕ್ತಿಗುಂದಿ ಒಂದು ಗಂಡುನವಿಲು ನಿಧಾನವಾಗಿ ಹಾರುತ್ತಿತ್ತು. ಅದನ್ನು ನೋಡಿ ಅರ್ಜುನನು ಇದು ನನ್ನ ಪ್ರಿಯಳಾದ ಪ್ರಿಯಳಾದ ಸುಭದ್ರೆಯ ರತಿಕ್ರೀಡೆಯ ಕಾಲದಲ್ಲಿ ಬಿಚ್ಚಿಹೋದ ತುರುಬಿನ ಗಂಟಿಗೆ ಸಮಾವಾಗಿ ತೋರುತ್ತಿದೆ ಎಂಬ ಕಾರಣದಿಂದ ಕುದುರೆಯ ಅಲುಗಾಟದಿಂದ ಅಲುಗಾಡುವ ರತ್ನದ ಕುಂಡಲವನ್ನುಳ್ಳ ಅರ್ಜುನನು ಅದನ್ನು ಹೊಡೆಯಲು ಒಪ್ಪಲಿಲ್ಲ ವll ಹಾಗೆ
Page #284
--------------------------------------------------------------------------
________________
ಪಂಚಮಾಶ್ವಾಸಂ | ೨೭೯ ವ|| ಅಂತು ಬೇಂಟೆಯನಾಡಿ ಬುಲ್ಲು ಬೇಸಗೆಯ ನಡುವಗಲೊಳ್ ವನಕ್ರೀಡೆಗಂ ಜಲಕ್ರೀಡೆಗಮಾಸಕ್ತರಾಗಿ ಯಮುನಾನದೀತಟ ನಿಕಟವರ್ತಿಗಳಾದರಲ್ಲಿ ಚಂll ಸರಳ ತಮಾಳ ತಾಳ ಹರಿಚಂದನ ನಂದನ ಭೋಜರಾಜಿಯಿಂ
ಸುರಿವಲರೋಳಿ ತನಲತಾಂಗಿಯ ಸೂಸುವ ಸೀಸೆಯಾಯ್ತು ಭ್ರಂ | ಗರವಮದೊಂದು ಮಂಗಳರವಣೆಯಾಯ್ತು ಮನೋನುರಾಗದಿಂ* ಕರೆವವೊಲಾಯ್ತು ಮತ್ತ ಕಳಹಂಸರವಂ ಪಡೆಮಚ್ಚೆಗಂಡನಂ || ೨ ಕಂ 11 ಯಮುನಾನದೀ ತರಂಗಮ
ನಮುಂಕಿ ವನಲತೆಯ ಮನೆಗಳಂ ಸೋಂಕಿ ವನ | ಭ್ರಮಣ ಪರಿಶ್ರಮಮಂ ಮು
(ಮೆ ಕಳೆದುದು ಬಂದದೊಂದು ಮಂದಶ್ವಸನಂ || ೫೩ ವ|| ಅಂತು ಕಾಳಿಂದೀಜಲ ಶಿಶಿರಶೀಕರವಾಗಿ ಚಾರಿಯುಂ ಮೃಗಯಾ ಪರಿಭ್ರಮ ಶ್ರಮೋಷ್ಠಿತ ಸ್ವದಜಲ ಲವಹಾರಿಯುಮಾಗಿ ಬಂದ ಮಂದಾನಿಲಕ್ಕೆ ಮಯ್ಯನಾಳಸುತ್ತುಮಾ ಪುಣ್ಯನದಿಯನೆಯ್ದವಂದು ತನ್ನ ಬಾಳ ನೀರಂತೆ ಕಜಂಗಿ ಕರ್ಗಿದ ನೀರು ನೋಡಿ ವಿಕ್ರಮಾರ್ಜುನಂ ಕಾಳಾಹಿಮಥನನ ಮೊಗಮಂ ನೋಡಿ
ತನ್ನೊಳಗಣ ಪನ್ನಗನಂ ಮುದ್ದೀನ್ ಪಿಡಿದೊಗೆಯೆ ಕಾಯಲಾಗಿದೆ ಪಿರಿದುಂ | ಬನ್ನದ ಕರ್ಪೆಸೆದುದು ತೋಳ ಗಿನ್ನುಂ ಹರಗಳ ತಮಾಳ ನೀಳಚ್ಚವಿಯಿಂ |
*
ಕಂii
ಬೇಟೆಯಾಡಿ ಬಳಲಿ ಆ ಬೇಸಗೆಯ ನಡುಹಗಲಿನಲ್ಲಿ ವನಕ್ರೀಡೆಗೂ ಜಲಕ್ರೀಡೆಗೂ ಆಸೆಪಟ್ಟವರಾಗಿ ಯಮುನಾನದೀದಡಕ್ಕೆ ಬಂದರು. ಅಲ್ಲಿ ೫೨. ತೇಗು, ಹೊಂಗೆ, ತಾಳೆ, ಶ್ರೀಗಂಧ ಮತ್ತು ನಂದನವೃಕ್ಷಗಳ ಸಮೂಹಗಳಿಂದ ಸುರಿಯುತ್ತಿರುವ ಪುಷ್ಪರಾಶಿಯು ಆ ವನಲಕ್ಷಿಯು ಚೆಲ್ಲುತ್ತಿರುವ ಅಕ್ಷತೆಯಾಯಿತು. ದುಂಬಿಗಳ ಧ್ವನಿಯು ಮಂಗಳವಾದ್ಯಕ್ಕೆ ಸಮಾನವಾಯಿತು. ಮದಿಸಿದ ಕಳಹಂಸಧ್ವನಿಯು ಪಡೆಮೆಚ್ಚಿ ಗಂಡನಾದ ಅರ್ಜುನನನ್ನು ಪ್ರೀತಿಯಿಂದ ಕರೆಯುವ ಹಾಗಾಯಿತು. ೫೩. ಯಮುನಾ ನದಿಯ ಅಲೆಗಳನ್ನು ಅದುಮಿ ಕಾಡಿನ ಬಳ್ಳಿ ಮನೆಗಳನ್ನು ಮುಟ್ಟಿ ಬಂದ ಒಂದು ಮಂದಮಾರುತವು (ಅವರು) ಕಾಡಿನಲ್ಲಿ ಅಲೆದ ಆಯಾಸವನ್ನು ಮೊದಲೇ ಪರಿಹರಿಸಿತು. ವ|| ಯಮುನಾನದಿಯ ನೀರಿನ ತಂಪಾದ ತುಂತುರುಗಳ ಮೇಲೆ ಸಂಚಾರಮಾಡಿದುದೂ ಬೇಟೆಯ ಅಲೆದಾಟದ ಆಯಾಸದಿಂದುಂಟಾದ ಬೆವರಿನ ಕಣಗಳನ್ನು ಹೋಗಲಾಡಿಸಿದುದೂ ಆಗಿ ಬಂದ ಮಂದಮಾರುತಕ್ಕೆ ಶರೀರವನ್ನು ಒಡ್ಡುತ್ತಾ ಆ ಪುಣ್ಯನದಿಯ ಸಮೀಪಕ್ಕೆ ಬಂದು ತನ್ನ ಕತ್ತಿಯ ಕಾಂತಿಯಂತೆ ಕಪ್ಪಾಗಿ ಕರಗಿದ್ದ ನೀರನ್ನು ನೋಡಿ ವಿಕ್ರಮಾರ್ಜುನನು ಕಾಳಿಂಗಮರ್ದನನಾದ ಕೃಷ್ಣನನ್ನು ಕುರಿತು-೫೪. ತನ್ನಲ್ಲಿದ್ದ ಕಾಳಿಂಗಸರ್ಪವನ್ನು ಮೊದಲು ನೀನು ಹಿಡಿದೆತ್ತಿ ಎಸೆಯಲು ಅದನ್ನು ರಕ್ಷಿಸಲಾರದೆ ಆ ನದಿಗೆ ವಿಶೇಷವಾಗಿ ಅಂದುಂಟಾದ ಸೋಲಿನ ಕರಿಯಬಣ್ಣವು ಇಂದೂ ಇನ್ನೂ ಶಿವನ ಕಂಠದಂತೆಯೂ ಹೊಂಗೆಯ ಮರದಂತೆಯೂ ಈ ನದಿಯಲ್ಲಿ
Page #285
--------------------------------------------------------------------------
________________
೨೮o | ಪಂಪಭಾರತಂ
ತಡಿವಿಡಿದು ಪೂತ ಲತೆಗಳ ನೊಡನೊಡನೆಲರಲೆಯ ಬಿಡದೆ ಸುರಿವಲರ್ಗಳನಂ || ದಡೆಗುಡದ ನೂಂಕಿ ಮೆಲ್ಲನೆ ತಡಿಯಂ ಸಾರ್ಚಿದಪುದಿದು ಬಂಬಲ್ಲೆರೆಗಳ | ವಿದಳಿತ ನುತ ಶತಪತ್ರದ ಪುದುವಿನೊಳಿರದಗಲೆವೋದ ಹಂಸನನಾಸಲ್ | ಪದೆದೆಳಸುವ ಪಣ್ಣಂಚೆಯ
ಪದ ಕೊರಲಿಂಚರದ ಸರಮೆ ಸವಿ ಕಿವಿಗಿದುಳೊಳ್ || ಕಂ| ನೆಯಲರ್ದಂಭೋರುಹದಲ
ರ್ದುಜುಗಲನೆಲೆದೊಗೆದುವಸೆಯ ಜಲದೇವತೆಗಳ 11. ನಿತಿವಿಡಿದುಡಲ್ ನಿಮಿರ್ಚಿದ
ಕುಜುವಡಿಯ ತರಂಗದಂತೆ ಬಂಬಲ್ಲೆರೆಗಳ | ಚಂ| ತುರಗಚಯಂಗಳಂತಿರೆ ತರಂಗಚಯಂ ಚಮರೀರುಹಂಗಳಂ - ತಿರೆ ಕಳಹಂಸೆ ಬೆಳ್ಕೊಡೆಗಳಂತಿರೆ ಬೆಳ್ಳೂರ ಗೊಟ್ಟ ಗಾಣರಂ | ತಿರೆ ಮದುಂಬಿ ಮೇಳದವರಂತಿರೆ ಸಾರಿಕೆ ರಾಜನೇಹದಂ
ತಿರೆ ಕೊಳನಲ್ಲಿ ತಾಮರಸರಂತಿರೆ ತಾಮರಸಂಗಳೊಪ್ಪುಗುಂ 1 . ೫೮
ವಗ್ರ ಎಂದು ಭಾಸ್ಕರತನೂಜೆಯನುಭಯತಟ ನಿಕಟ ಕುಸುಮನಿವಹ ತತ್ವರಾಗ ಪಟಳ ಪಿಶಂಗ ತರತ್ತರಂಗ ಸರೋಜೆಯಂ ಮೆಚ್ಚಿ ಪೊಗಟ್ಟು ಜಲಕ್ರೀಡೆಯಾಡಲ್ ಬಗೆದು ತಾನುಮನಂತನುಮಂತಃಪುರಪರಿವಾರಂ ಬೆರಸು
ಕಪ್ಪಕಾಂತಿಯಿಂದ ಪ್ರಕಾಶಿಸುತ್ತಿದೆ. ೫೫. ದಡವನ್ನನುಸರಿಸಿ ಹೂಬಿಟ್ಟಿರುವ ಲತೆಗಳನ್ನು ಆಗಾಗ ಗಾಳಿಯು ಅಲುಗಿಸಲು ಅದರಿಂದ ಸುರಿಯುವ ಹೂವುಗಳನ್ನು ಒಂದೇ ಸಮನಾಗಿ ಇದರ ಸಾಲಾದ ಅಲೆಗಳು ಮೃದುವಾಗಿ ದಡವನ್ನು ಸೇರಿಸುತ್ತವೆ. ೫೬. ಅರಳಿದ ಪ್ರಸಿದ್ದವಾದ ತಾವರೆಯ ಹುದುವಿನ ಆಶ್ರಯದಲ್ಲಿರದೆ ಅಗಲಿಹೋದ ಗಂಡು ಹಂಸಪಕ್ಷಿಯನ್ನು ಹುಡುಕಲು ಆಶೆಪಟ್ಟು ಕೂಗುವ ಹೆಣ್ಣುಹಂಸದ ಹದವಾದ ಕೊರಲಿನ ಇಂಪಾದಧ್ವನಿಯೇ ಇಲ್ಲಿ ಕಿವಿಗಿಂಪಾದ ಸ್ವರವಾಗಿದೆ. ೫೭. ಜಲದೇವತೆಗಳು ಉಡಲು ಎತ್ತಿದ ಸೀರೆಯ ನಿರಿಗೆಗಳು ಚಿಮ್ಮುವಂತೆ ಅಲೆಗಳ ಸಮೂಹವು ತಾವರೆಗಳ ಮೇಲಿಂದ ಹಾರಿದುವು. ೫೮. ಅಲೆಗಳ ಸಮೂಹವು ಕುದುರೆಗಳ ಸಮೂಹದಂತಿರಲು ಕಳಹಂಸವು ಚಾಮರಗಳಂತಿರಲು ಬಿಳಿಯ ನೊರೆ ಶ್ವೇತಚ್ಛತ್ರಿಯಂತಿರಲು ದುಂಬಿಯ ಮರಿಗಳು ಗಾಯಕಗೊಷ್ಠಿಯಂತಿರಲು ಹೆಣ್ಣುಗಳಿಯು ಸಖಿಯಂತಿರಲು ಅಲ್ಲಿಯ ಕೊಳವು ಅರಮನೆಯಂತಿರಲು ತಾವರೆಗಳು ತಾವೇ ಅರಸರಾಗಿರುವ ಹಾಗೆ ಪ್ರಕಾಶಿಸುತ್ತಿವೆ. ವ!! ಎಂದು ಎರಡು ಸಮೀಪದ ಮರಗಳಿಂದ ಉದುರಿದ ಹೂವಿನ ಪರಾಗರಾಶಿಯಿಂದ ಪಿಶಂಗ (ಕಪ್ಪುಮಿಶ್ರವಾದ ಕೆಂಪುಬಣ್ಣವಾಗಿ ಮಾಡಲ್ಪಟ್ಟ ಚಂಚಲವಾದ ಅಲೆಗಳಿಂದ ಕೂಡಿದ ಕಮಲವನ್ನು ಸೂರ್ಯಪುತ್ರಿಯಾದ
Page #286
--------------------------------------------------------------------------
________________
ಪಂಚಮಾಶ್ವಾಸಂ | ೨೮೧ ಕಂಒತ್ತಿದ ತಳ್ಳಿತ್ತಿದ ತಟ್ಟಿ
ಮುತ್ತಿನ ಪೊಸದುಡಿಗೆ ತಳಿರ ಸೋರ್ಮುಡಿ ಮನಮಃ | ಪತ್ತಿಸಿ ಜೊಸ ಮದನೋ ನಲ್ಲೆಯರವಯವದೆ ಬಂದರರಸಿಯರರೆಬರ್ || ಇದು ಮೃದು ಕಳಹಂಸದ ರವ ಮಿದು ನೂಪುರ ನಿನದಮಿದು ರಥಾಂಗಯುಗಂ ಮ || ಅದು ಕುಚಯುಗವಿದು ಸರಸಿಜ
ಮಿದು ಮೊಗಮನಿಸಿದುದು ನೆರೆದ ಪೆಂಡಿರ ತಂಡಂ || ೬೦ ವ|| ಅಂತು ಮದನನ ಮನೋರಾಜ್ಯಮ ಬರ್ಪಂತೆ ಬಂದು ತಂಡತಂಡದ ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಂ ಕದಳಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ, ಕಂ || ನೀಲದ ಬೆಳ್ಳಿಯ ಗಾಡಿಯು
ಮೀ ಲಲಿತಾಂಗಿಯರ ಕಣ್ಣ ಪೋಲುಂ ನಾಂ ಕ || ಹೇಳಿದಮಾಗಿರವಂದಳ
ವಾಳಗಳೊಡಿದುವು ಬಾಲೆಯರ್ ಪುಗುವಾಗಳ್ || ೬೧ ವ|| ಅಂತು ಪೊಕ್ಕಾಗಲ್
ಯಮುನಾನದಿಯನ್ನು ಮೆಚ್ಚಿ ಹೊಗಳಿ ತಾನೂ ಕೃಷ್ಣನೂ ಅಂತಃಪುರಪರಿವಾರದೊಡನೆ ಕೂಡಿ ನೀರಾಟವಾಡಲು ಬಯಸಿದರು. ೫೯. ಲೇಪನಮಾಡಿಕೊಂಡಿರುವ ಶ್ರೀಗಂಧಾದಿಲೇಪನವೂ ಎತ್ತಿ ಹಿಡಿದಿರುವ ಛತ್ರಿಗಳೂ ಮುತ್ತಿನ ಹೊಸಒಡವೆಗಳೂ ಚಿಗುರಿನಿಂದ ಅಲಂಕರಿಸಿದ ಜಾರುಗಂಟೂ ಮನಸ್ಸನ್ನು ಪ್ರವೇಶಿಸಿ ಆಕರ್ಷಿಸುತ್ತಿರಲು ಕಾಮದಿಂದ ಹುಚ್ಚೆದ್ದ ಕೆಲವರು ರಾಣಿಯರು ಲೀಲೆಯಿಂದ ಅಲ್ಲಿಗೆ ಬಂದರು. ೬೦. ಅಲ್ಲಿ ನೆರೆದ ಹೆಂಗಸರ ಸಮೂಹವು ಇದು ಮೃದುವಾದ ಕಳಹಂಸಧ್ವನಿ; ಇದು ಕಾಲ್ಕಡಗದ ಶಬ್ದ; ಇದು ಚಕ್ರವಾಕಪಕ್ಷಿಗಳ ಜೋಡಿ, ಇದು ಮೊಲೆಗಳ ಜೋಡಿ, ಇದು ಕಮಲ, ಇದು ಮುಖ ಎನ್ನಿಸಿತು. ವll ಹಾಗೆ ಮನ್ಮಥನ ಮನೋರಾಜ್ಯವೇ ಬರುವಂತೆ ಬಂದು ಗುಂಪು ಗುಂಪಾದ ರಮಣೀಯರಾದ ಆ ಸೀಜನರೊಡನೆ ಕೂಡಿ ನೀರಿಗೆ ಪಂತರತ್ನಗಳನ್ನು ಹರಡಿಸಿ ಶ್ರೀಗಂಧದ ವಾಸನೆಯನ್ನು ಕುಂಕುಮಕೇಸರಿ ಮತ್ತು ಕಸ್ತೂರಿಯ ಬಗ್ಗಡಗಳನ್ನು ಕದಡಿ ನದಿಯನ್ನು ಪ್ರವೇಶಿಸಿದರು. ೬೧. ನೀಲರತ್ನದ, ಬೆಳ್ಳಿಯ, ಸೌಂದರ್ಯವನ್ನು ಹೋಲುವ ಕಣ್ಣುಗಳನ್ನುಳ್ಳ ಈ ಕೋಮಲೆಯರ ಮುಂದೆ ನಾವು ಹೀನವಾಗಿ ಕಾಣಿಸಿಕೊಳ್ಳಲಾರೆವು ಎಂದು ಅಲ್ಲಿದ್ದ ಎಳೆಯ ಮೀನುಗಳು ಆ ಬಾಲೆಯರು ಕೊಳವನ್ನು ಪ್ರವೇಶಿಸಿದಾಗ ಓಡಿಹೋದುವು.
Page #287
--------------------------------------------------------------------------
________________
೨೮೨) ಪಂಪಭಾರತಂ . .. ಕಂ| ಆದಲೆ ನೀರ್ ಗುಂಡಿತ್ತಂ
ದೀದಿಯೊಳೆ ನಿಂದು ಸತಿಗೆ ಹರಿಗಂ ತೋಜು | ತ್ಯಾದರದೆ ಜಾನುದzಮು
ರೋದಷ್ಟಂ ಕಂಠದಪ್ಪಮೆಂಬಳವಿಗಳಂ | ವ|| ಅಂತು ಜಗುನೆಯ ಮಡುವಂ ತಮರಸಿಯರ ವಿಕಟ ನಿತಂಬಬಿಂಬಂಗಳ ಘಟ್ಟಣೆಯೊಳಮರ, ಬಗಿದೊಗದ ಮೊಲೆಗಳನ್ನೇಳನೆಳಳ್ಳಾಡಿ ತಳ್ಳಂಕಗುಟ್ಟ ನೀರಾಟಮಾಡುವಾಗಳ್ಚಂ|| ಪೊಸತಲರ್ದೊಂದು ತಾವರೆಯಗತ್ತು ಮುಖಾಮನೊಂದು ತುಂಬಿ ಚುಂ
ಬಿಸಿ ಸತಿ ಬೆರ್ಚಿ ಬೆಳಳಿಸಿ ನೋಂದುಮಾಕೆಯ ಕಣ್ಣ ಬೆಳ್ಳುಗಳ | ಪಸರಿಸೆ ತುಂಬಿಗಳ ಕುವಲಯಂಗಳರಳುವ ಗತ್ತು ಮತ್ತೆಯುಂ ಮುಸುಳುವುದುಂ ಗುಣಾರ್ಣವನನಾಗಳವಳ್ ಭಯದಿಂದಮಪ್ರಿದಳ 11೬೩
ಅಸಿಯಳವುಂಕಿ ಕೆಂದಳದೊಳೊತ್ತುವ ನೀರ್ ಮೊಗಮಂ ಪಳಂಚಿ ಬಂ ಚಿಸಲಿನಿಸಾನುಮಂ ಮುಲುಗಿದಾಗಡ ಭೋಂಕನೆ ಬಂದು ಬಾಳೆಮಿಾನ್ | ಮುಸು ನಿರಂತರಂ ಕರ್ದುಕೆ ಸತ್ಕವಿಯೋಲ್ ಸಮನಾಗಿ ಮಾರ್ಗಮಂ ಪೊಸಯಿಸಿ ದೇಸಿಯಂ ಪೊಸತುಮಾಡಿದಳೊರ್ವಳಪೂರ್ವರೂಪದಿಂ* 11 ೬೪
ವ ಹಾಗೆ ಪ್ರವೇಶಿಸಿದಾಗ -೬೨. ಆ ಕಡೆಯಲ್ಲಿ ನೀರು ಆಳವಾಗಿದೆ ಎಂದು ಅರ್ಜುನನು ಈ ಕಡೆಯಲ್ಲಿಯೇ ನಿಂತು ಸುಭದ್ರೆಗೆ ಮೊಳಕಾಲವರೆಗೆ ಮುಳುಗುವ ಎದೆಯವರೆಗೆ ಮುಳುಗುವ ಕತ್ತಿನವರೆಗೆ ಮುಳುಗುವ ಪ್ರಮಾಣಗಳನ್ನು ಆದರದಿಂದ ತೋರಿಸಿದನು. ವll ಯಮುನಾನದಿಯ ಮಡುವನ್ನು ಆ ರಾಣಿಯರು ತಮ್ಮದಪ್ಪವಾದ ಪಿಗ್ರೆಗಳ ತಾಗುವಿಕೆಯಿಂದ ಭಾಗಮಾಡಿ ಮೊಲೆಗಳ ಘಟ್ಟಣೆಯಿಂದ ತುಳುಕಾಡಿ ಜಲಕ್ರೀಡೆಯಾಡಿದರು. ೬೩. ಮುಖಕಮಲವನ್ನು ಒಂದು ದುಂಬಿಯು ಒಂದು ಹೊಸದಾಗಿ ಅರಳಿದ ಕಮಲವೆಂದೇ ಭ್ರಮಿಸಿ ಮುತ್ತಿಡಲು ಆ ಸತಿಯು ಹೆದರಿ ಭಯದಿಂದ ನೋಡುತ್ತಿರಲು ಅವಳ ಕಣ್ಣಿನ ಬಿಳಿಯ ಬಣ್ಣವು ಪ್ರಸರಿಸಲು ಅದನ್ನು ದುಂಬಿಗಳ ಅರಳಿದ ಕನೈದಿಲೆಗಳೆಂದೇ ಭ್ರಾಂತಿಗೊಂಡು ಪುನಃ ಮುತ್ತಲು ಅವಳು ಭಯದಿಂದ ಗುಣಾರ್ಣವನನ್ನು ಆಲಿಂಗನಮಾಡಿಕೊಂಡಳು. ೬೪. ಕೃಶಾಂಗಿಯಾದ ಒಬ್ಬಳು ಕೆಂಪಾದ ತನ್ನ ಅಂಗೈಯಿಂದ ಅಮುಕಿ ಚೆಲ್ಲಿದ ನೀರು ತನ್ನ ಮುಖವನ್ನು ತಗುಲಲು ಮತ್ತೊಬ್ಬಳು ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಒಂದಿಷ್ಟು ಮುಳುಗಿದಾಗಲೆ ಒಂದು ಬಾಳೆಯ ಮೀನು ಇದ್ದಕ್ಕಿದ್ದ ಹಾಗೆ ಬಂದು ಮುತ್ತಿಕೊಂಡು ಒಂದೇ ಸಮನಾಗಿ ಕಚ್ಚಲು ಅವಳು ಸತ್ಯವಿಗೆ ಸಮನಾಗಿ ಮಾರ್ಗೀಶೈಲಿಯನ್ನು ಹೊಸದಾಗಿಸಿ ದೇಸೀಶೈಲಿಯ ಸೌಂದರ್ಯವನ್ನು ಅಪೂರ್ವರೀತಿಯಿಂದ ಹೊಸತುಮಾಡಿದಳು.*
* ಈ ಪದ್ಯದ ಅರ್ಥವು ಸ್ಪಷ್ಟವಾಗಿಲ್ಲ.
Page #288
--------------------------------------------------------------------------
________________
19
ಕಂ
ಪಂಚಮಾಶ್ವಾಸಂ | ೨೮೩
ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿನ ರಜದಿಂ 1 ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುಟ್ಟುವು ಮಾಂಗಳ್ ||
ಮುಡಿ ಬಿಡೆ ಪರೆದೆಸಳ ಪೊಸ
ದುಡುಗೆಯ ಮುತ್ತುಗಳ ಕುಚದ ಸಿರಿಕಂಡದ ಬೆ | ಳೊಡನೊಡನೆಸೆದಿರೆ ಜಗುನೆಯ
ಮಡು ಗಂಗೆಯ ಮಡುವನಿನಿಸನನುಕರಿಸಿರ್ಕುಂ ||
೬೫.
とと
ವ|| ಅಂತು ನಾಡೆಯುಂ ಪೊತ್ತು ಜಲಕೇಳೀ ಲೀಲೆಯೊಳ್ ಮೆದು ನಿಮಿರ್ದ ಕುರುಳಳುಂ ಕೆಂಪೇಟೆದ ಕಣ್ಣಳು ಬೆಳದ ಬಾಯ್ಲೆಗಳುಂ ಪಳಂಚಿದ ಬಣ್ಣಂಗಳುಮಸೆಯೆ ಸೊಗಯಿಸುವ ನಿಜ ವಧೂಜನಂ ಬೆರಸು ಪೊಮಟ್ಟಾಗಳ್
ಕoll
ತಲಪುವಡೆದಂಗಜಂ ಕೆ
ಹೈಗೊಳ ನೋಟಕರ ಮನಮನಾಗಳ ಕೊಳದಿಂ | ಪೊಱಮಡೆ ಜಿಗಿತ್ತು ಪತಿದ
ಕುಜುವಡಿಗಳೆ ಮದುವವರ ನಾಣ್ಣಳ ತೆಜಪಂ |
೬೭
ವ|| ಆಗಳ್ ಮಡಿಯ ಭಂಡಾರದ ಮಾಣಿಕ್ಯ ಭಂಡಾರದ ನಿಯೋಗಿಗಳ ತಂದು ಮುಂದಿಟ್ಟ ಪೊನ್ನ ಪಡಲಿಗೆಗಳೊಳೊಟ್ಟದ ದೇವಾಂಗವಸ್ತ್ರಂಗಳುಮನನೇಕವಿಧದ ತುಡುಗೆಗಳು
೬೫. ಆ ಸಮಸ್ತಸಮೂಹವು ಲೇಪನ ಮಾಡಿಕೊಂಡಿದ್ದ ಕಸ್ತೂರಿಯಿಂದಲೂ ತುರುಬಿನ ಹೂಗಳ ಪರಾಗಗಳಿಂದಲೂ ವಾಸನೆ ಮಾಡಲ್ಪಟ್ಟ ನೀರಿನ ಕದಡವೆಂಬ ಮದ್ಯಸೇವನೆಯಿಂದ ಮೀನುಗಳು ಸೊಕ್ಕಿ ಬೆಂಡಿನಂತೆ ಅಸ್ತವ್ಯಸ್ತವಾದುವು. ೬೬. ಆ ಸ್ತ್ರೀಯರ ಬಿಚ್ಚಿ ಹೋದ ತುರುಬಿನಿಂದ ಚೆದುರಿದ ಹೂವಿನ ದಳಗಳಿಂದಲೂ, ಹೊಸಒಡವೆಗಳ ಮುತ್ತುಗಳಿಂದಲೂ ಮೊಲೆಗೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧದಿಂದಲೂ ಬಿಳಿಯ ಬಣ್ಣವನ್ನು ಹೊಂದಿ ಯಮುನೆಯ ಮಡು (ಬಿಳುಪಾಗಿರುವ) ಗಂಗೆಯ ಮಡುವನ್ನು ಸ್ವಲ್ಪ ಹೋಲುತ್ತಿತ್ತು. ವ|| ಹಾಗೆ ಬಹಳಹೊತ್ತು ಜಲಕ್ರೀಡೆಯ ಆಟದಲ್ಲಿ ಮೆರೆದು ನೇರವಾಗಿ ನಿಂತ ಕೂದಲುಗಳೂ ಕೆಂಪು ಹತ್ತಿದ ಕಣ್ಣುಗಳೂ ಬಿಳಿಚಿಕೊಂಡಿರುವ ತುಟಿಗಳೂ ತಗಲಿ ಅಂಟಿಕೊಂಡಿರುವ ಬಣ್ಣದ ಸೀರೆಗಳೂ ರಮಣೀಯವಾಗಿರಲು ಸೊಗಸಾಗಿ ಕಾಣುತ್ತಿರುವ ತಮ್ಮ ಸ್ತ್ರೀಜನಗಳೊಡನೆ ಕೃಷ್ಣಾರ್ಜುನರು (ನೀರಿನಿಂದ) ಹೊರಟುಬಂದರು. ೬೭. ಮನ್ಮಥನು ಅವಕಾಶವನ್ನು ಪಡೆದು ನೋಟಕರ ಮನಸ್ಸನ್ನು ಸೆರೆಹಿಡಿಯುತ್ತಿರಲು ಕೊಳದಿಂದ ಸ್ತ್ರೀಯರು ಹೊರಗೆ ಬಂದರು. ಅವವ ಶರೀರಕ್ಕೆ ಅಂಟಿಕೊಂಡಿದ್ದ ಚಿಕ್ಕಸ್ನಾನಶಾಟಿಗಳೇ ಅವರ ರಹಸ್ಯಸ್ಥಾನಗಳ ವಿಸ್ತಾರವನ್ನು ಪ್ರಕಟಿಸಿದುವು. ವ|| ಆಗ ವಸ್ತ್ರಭಂಡಾರ ಮಾಣಿಕ್ಯ ಭಂಡಾರಗಳ ಅಧಿಕಾರಿಗಳು ತಂದು ಮುಂದೆ ಚಿನ್ನದ ತಟ್ಟೆಗಳಲ್ಲಿ ರಾಶಿ ಹಾಕಿದ ರೇಷ್ಮೆ ವಸ್ತುಗಳನ್ನೂ ಅನೇಕ ವಿಧವಾದ ಆಭರಣಗಳನ್ನೂ ಎಷ್ಟೋ ರೀತಿಯ
Page #289
--------------------------------------------------------------------------
________________
೨೮೪ / ಪಂಪಭಾರತಂ
ಮನೆನಿತಾನುಂ ತಂದ ಸುಗಂಧದ್ರವ್ಯಂಗಳುಮನರಸಿಯರ್ಗಮರಸುಮಕ್ಕಳುಮಿತ್ತು ತಾಮಿರ್ವರುಂ ಉಟ್ಟು ತೊಟ್ಟು ಪೂಸಿಯುಂ ನೆಲೆಯ ಕೆಯ್ದೆಯು ದಿವ್ಯಾಹಾರಂಗಳನಾರೋಗಿಸಿ ಕೆಯ್ದಟ್ಟಿ ಕೊಂಡು ತಂಬುಲಂಗೊಂಡಿಂ ಬಟೆಯಮಚ್ಯುತಂ ವಿಕ್ರಮಾರ್ಜುನನ ಕೆಯ್ಯಂ ಪಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಂಗಳಂ ತೋಲೆಂದು
eroll
ಕೊಂದೆನವುಂಕಿ ಸಂದ ಖರಧೇನುಕರಂ ಮುಳಿಸಿಂದಮಿಲ್ಲಿ ಕಾ ಳಿಂದಿಯ ಪಾವನಪ್ಪಳಿಸಿದೆಂ ಪಿಡಿದೀ ಸಿಲೆಯಲ್ಲಿ ಮತ್ತಮಾ | ಟಂದರನುಗ್ರದೈತರನಳುರ್ಕೆಯಿನಿಕ್ಕಿದೆನಿಲ್ಲಿ ಮುನ್ನಮೆಂ ದಂದು ಗುಣಾರ್ಣವಂಗ ಮಧು ಕೈಟಭಹಾರಿ ತೊಲ್ಲು ತೋಟದಂ ||೬೮
ವ! ಅಂತಾ ವನಾಂತರಾಳಮಂ ತೋಡಲು ತೋರುತ್ತಿರ್ಪಗಮನೂನದಾನಿಯ ದಾನದುದ್ದಾನಿಯ ದಾನಮನಾನಲಾನಲ್ಲದೆ ಪೇರ್ ನೆಲೆಯರೆಂಬಂತ ತೊಟ್ಟನೆ ಕಟ್ಟಿದಿರೊಳ್
ಕಂ।।
ಉರಿವುರಿಯನೆ ತಲೆನವಿರನು
ಕರಿಸಿರೆ ಸಂತಪ್ತ ಕನಕವರ್ಣಮುಮುರಿಯೊಂ | ದುರುಳಿವೊಲಿರೆ ಜಠರಾಗಳ ನುರಿವಿನಮಂತೊರ್ವನುರಿಯ ಬಣ್ಣದ ಪಾರ್ವಂ |
೬೯
ವ|| ಅಂತು ವರ್ಷನಂ ಕಂಡು ಸಾಮಂತಚೂಡಾಮಣಿ ತನ್ನೊಳಿಂತೆಂದು ಬಗೆದಂಸುಗಂಧದ್ರವ್ಯಗಳನ್ನೂ ರಾಣಿಯರಿಗೂ ರಾಜಕುಮಾರರಿಗೂ ಕೊಟ್ಟು ತಾವಿಬ್ಬರೂ ವಸ್ತ್ರಗಳನ್ನು ತೊಟ್ಟು ವಾಸನಾದ್ರವ್ಯವನ್ನು ಲೇಪಿಸಿಕೊಂಡು ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡರು. ಆಹಾರಗಳನ್ನು ಭುಂಜಿಸಿ ಕೈಗಂಧವನ್ನೂ ಲೇಪಿಸಿ ತಾಂಬೂಲ ಸ್ವೀಕರಿಸಿದ ಮೇಲೆ ಕೃಷ್ಣನು ಅರ್ಜುನನ ಕಯ್ಯನ್ನು ಹಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಗಳನ್ನು ತೋರಲೆಂದು ಹೊರಟನು. ೬೮. ಪ್ರಸಿದ್ಧರಾದ ಖರಧೇನು ಕುಂಭರೆಂಬ ರಾಕ್ಷಸರನ್ನು ಇಲ್ಲಿ ಒತ್ತಿ ಕೋಪದಿಂದ ಕೊಂದೆನು. ಯಮುನಾನದಿಯಲ್ಲಿದ್ದ ಕಾಳಿಂಗನೆಂಬ ಹಾವನ್ನು ಹಿಡಿದು ಈ ಕಲ್ಲಿನ ಮೇಲೆ ಅಪ್ಪಳಿಸಿದೆನು. ಮತ್ತು ಹಿಂದಿನ ಕಾಲದಲ್ಲಿ ಮೇಲೆಬಿದ್ದ ಭಯಂಕರರಾದ ರಾಕ್ಷಸರನ್ನು ಪರಾಕ್ರಮದಿಂದ ಇಲ್ಲಿ ಇಕ್ಕಿದೆನು ಎಂದು ಆ ದಿನ ಗುಣಾರ್ಣವನಾದ ಅರ್ಜುನನಿಗೆ, ಮಧುಕೈಟಭರಿಗೆ ಶತ್ರುವಾದ ಕೃಷ್ಣನು ಸುತ್ತಾಡಿ ತೋರಿಸಿದನು. ವ|| ಹಾಗೆ ವನದ ಒಳಭಾಗವನ್ನು ತೊಳಲಿ ತೋರುತ್ತಿರುವಷ್ಟರಲ್ಲಿ ಕುಂದಿಲ್ಲದೆ ದಾನಮಾಡುವವನ ದಾನವನ್ನು ಸ್ವೀಕರಿಸಿದುದಕ್ಕೆ ನಾನಲ್ಲದೆ ಬೇರೆಯವರು ಸಮರ್ಥರಾಗಲಾರರು ಎನ್ನುವ ಹಾಗೆ ಕಟ್ಟಿದಿರಿನಲ್ಲಿ - ೬೯. ಉರಿಯುತ್ತಿರುವ ಜ್ವಾಲೆಯನ್ನೇ ತಲೆಯ ಕೂದಲು ಅನುಕರಿಸುತ್ತಿರಲು ಅವನ ಪುಟವಿಟ್ಟ ಚಿನ್ನದ ಹೊಂಬಣ್ಣವು ಬೆಂಕಿಯ ಒಂದು ಉಂಡೆಯಂತಿರಲು ಜಠರಾಗ್ನಿಯ ಉರಿಯಿಂದ ಕೂಡಿ (ಹಸಿವಿನಿಂದ ಕೂಡಿದ) ಬೆಂಕಿಯ ಬಣ್ಣದ ಬ್ರಾಹ್ಮಣನೊಬ್ಬನು ವು ಬರುತ್ತಿರುವುದನ್ನು ಕಂಡು ಸಾಮಂತಚೂಡಾಮಣಿ ತನ್ನಲ್ಲಿ ಹೀಗೆಂದು
Page #290
--------------------------------------------------------------------------
________________
ಪಂಚಮಾಶ್ವಾಸಂ | ೨೮೫ ಕಂ ತಪ ನಿಯಮ ನಿಯತನೀ ಬ
ರ್ಪ ಪಾರ್ವನೇನಟ್ಟಿ ತನಗದು ಬೇಡಿದೊಡಿ | ನೃಪಗತದುರಿತರ್ ಸಂಪೂ ರ್ಣಪುಣ್ಯರಾನಲ್ಲದಿಲ್ಲ ಹೇಯ್ ಪುರೊಳರೇ ||
೭೦ ವಗ ಎಂಬನೆಗಂ ಸಾಮಂತ ಚೂಡಾಮಣಿಯನೆಯ್ದವಂದು ನಾಲ್ಕು ವೇದಂಗಳೊಳ್ ನಾಲ್ಕುಂ ಋಚೆಂಗಳಂ ಪೇಟ್ಟು ಸಿತ ದೂರ್ವಾಂಕುರ ವಿಮಿಶ್ರಂಗಳಪ್ಪ ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ ನಿಮಗೆ ಬಾಲಿಯಪ್ಪುದಂ ಬೇಡಿಕೊಳ್ಳಿಮನೆಚಂ|| ಮಣಿ ಕನಕಾದಿ ವಸ್ತುಗಳನೊಂದುಮನೊಲ್ಲೆನವ್ವುವಾದವಿ
ನುಣಿಸೆನಗ ಮೆಯ್ ಪಸಿದು ಜೊಮ್ಮನೆ ಪೋದಪುದೆನ್ನ ವೇಟ್ಟುದಂ | ತಣಿಯುಣಲೀವೊಡೀವುದೆನೆ ಪಾರ್ಥನದೇವಿರಿದಿತ್ತೆನಾವುದು
ಣ್ಮುಣಿಸೆನೆ ಪೇಳ್ವೆನೆಂಬ ಪದದೊಳ್ ನರಕಾಂತಕನನ್ನಿದೇವನಂ || ೭೧
ವ|| ಕಾಣಲೊಡಮಣಿದು ಶರಣಾಗತಜಳನಿಧಿಯನೆಮ್ಮೆ ವಂದನೀ ಬಕವೇಷಿ ನಿನ್ನನೇನಂ ಬೇಡಿದಂ ನೀನೀತಂಗೇನನಿತ್ತೆಯನಚಂ ಪಸಿದುಣವೇಡಿದಂ ಬಡವನಾನುಣಲಿತ್ತೆನದಲ್ಲದಿಲ್ಲಿ ದಲ್
ಕುಸುರಿಯ ಮಾತುಗಾಸನೆನೆ ಕೇಳು ಮುರಾಂತಕನೇಂ ತಗುಳೆ ಯಿ | ನುಸಿರದಿರೀವ ಮಾತನಿವನುಣ್ಣುದು ಖಾಂಡವಮಿಾತನ ಮುಂ ಪುಸಿದಿವಂತ ಪಾಯಿಸಿದನಿಂದ್ರನೊಳಾದಿ ನರೇಂದ್ರರೆಲ್ಲರಂ ||
ಯೋಚಿಸಿದನು. ೭೦. ತಪಸ್ಸಿನ ನಿಯಮದಲ್ಲಿ ಆಸಕ್ತನಾದ, ಎದುರಿಗೆ ಬರುತ್ತಿರುವ ಈ ಬ್ರಾಹ್ಮಣನು ತನ್ನ ಇಷ್ಟಾರ್ಥವೇನೆಂಬುದನ್ನು ನನ್ನಲ್ಲಿ ತಿಳಿಸುವುದಾದರೆ ನನಗಿಂತ ಪುಣ್ಯಶಾಲಿಗಳು ಮತ್ತಾರೂ ಇಲ್ಲ. ವ|| ಎನ್ನುವಷ್ಟರಲ್ಲಿ ಅವನು ಸಾಮಂತ ಚೂಡಾಮಣಿಯಾದ ಅರ್ಜುನನ ಸಮೀಪಕ್ಕೆ ಬಂದು ನಾಲ್ಕು ವೇದಗಳಿಂದಲೂ ನಾಲ್ಕು ಋಕ್ಕುಗಳನ್ನು ಹೇಳಿ ಬಿಳಿಯ ಗರಿಕೆಯ ಮೊಳಕೆಯಿಂದ ಕೂಡಿದ ಆಶೀರ್ವಾದರೂಪವಾದ ಶೇಷಾಕ್ಷತೆಯನ್ನು ಕೊಟ್ಟು ಮುಂದೆ ನಿಂತನು. ಅರ್ಜುನನು ನಿಮ್ಮಿಷ್ಟಾರ್ಥವೇನು ಕೇಳಿಕೊಳ್ಳಿ ಎಂದನು. ೭೧. ಮಣಿಕನಕಾದಿ ವಸ್ತುಗಳಾವುದನ್ನೂ ಅಪೇಕ್ಷಿಸುವುದಿಲ್ಲ; ಅವು ಏನು ಮಹಾದೊಡ್ಡವು; ಸಂಪೂರ್ಣವಾದ ರುಚಿಕರವಾದ “ಊಟ ನನಗೆ ಈಗ ಬೇಕು, ಶರೀರವು ಹಸಿವಿನಿಂದ ಜೋಮುಹಿಡಿದು ಹೋಗಿದೆ; ನನಗೆ ಬೇಕಾದ ತೃಪ್ತಿಕರವಾದ ಊಟವನ್ನು ಕೊಡುವುದಾದರೆ ಕೊಡಿ ಎನ್ನಲು ಪಾರ್ಥನು ಇದೇನು ದೊಡ್ಡದು, ಕೊಟ್ಟಿದ್ದೇನೆ. ಯಾವುದು ನೀವು ಊಟಮಾಡುವ ಆಹಾರ ಎಂದು ಕೇಳಿದನು. 'ಹೇಳುತ್ತೇನೆ' ಎನ್ನುವಷ್ಟರಲ್ಲಿ ನರಕಾಂತಕನಾದ ಶ್ರೀಕೃಷ್ಣನು ಅಗ್ನಿದೇವನನ್ನು ವ|ಕಂಡು, ತಕ್ಷಣವೇ ಗುರುತಿಸಿ ಶರಣಾಗತ ಸಮುದ್ರನಾದ ಅರ್ಜುನನ ಸಮೀಪಕ್ಕೆ ಬಂದು 'ಈ ಬಕವೇಷಿಯು ನಿನ್ನನ್ನು ಏನು ಬೇಡಿದನು, ನೀನು ಇವನಿಗೆ ಏನನ್ನು ಕೊಡುತ್ತೇನೆಂದೆ' ಎಂದು ಕೇಳಿದನು. ೭೨. 'ಬಡವನು ಹಸಿದು ಊಟವನ್ನು ಬೇಡಿದನು; ನಾನು ಕೊಡುತ್ತೇನೆಂದೆ, ಅದಲ್ಲದೆ ಇನ್ನು ಮತ್ತಾವ
Page #291
--------------------------------------------------------------------------
________________
೨೮೬ | ಪಂಪಭಾರತ
ವl ಈತನಜಮುಖವ್ಯಾಘ್ರಂ ಶ್ವೇತ ಕೃಷ್ಣಕಾರಕನೀತನ ಮಾತು ಮಾತಲ್ಲವೆಂದೊಡಾ ಮಾತು ತನ್ನಂ ಮೂದಲಿಸಿದಂತಾಗೆ ವಿದ್ವಿಷವಿದ್ರಾವಣನಿಂತೆಂದಂಚಂಎರೆದನ ಪೆಂಪುವೇಡನಲಂ ಪೊಣರ್ವಾತನ ಪೆಂಪುವೇಡಾ
ಸುರಪತಿ ಕೊಟ್ಟ ತಾಣದಡವೇಚಿಕ್ಕೋಡಮಾ ಯಮುನಾನದೀ ತಟಾಂ | ತರಮೊಸೆದಿತ್ಯನಾನೆರೆಯ ಕೇಳಳಾಧರನೀನದರ್ಕೆ ಮಾ
ತೆರಡಣಮಾಡಲಾಗದಿರು ಸೈಪಿನೊಳಲ್ಲದೆ ಕೂಡಿ ಬರ್ಕುಮೇ || ೭೩ ಮl ದನುಜಾರೀ ದಿವಿಜೇಂದ್ರ ಶಾಶ್ವತಗುಣಾ ನಿನ್ನಳ್ಳದೇಂ ಬೇಡಿದಾ
ನನಲಂ ತೀರ್ಥ ಸಮಿಾಪಮಂಬುನಿವಹ ವ್ಯಾಳ ಕಾಳಿಂದಿಯಾ | ವನಮುಂ ಕೇಳುವು ಭೂತಮಯ್ಯುಮಣಿಗುಂ ಕೊಟ್ಟಿರ್ದುದಾದಂತಂ
ದಿನಗಿಂ ಮಾಣ್ಣುದು ಸೂಟಿ ಖಾಂಡವಮನಾಂ ತಳ್ಳಿಲ್ಲದಿ೦ದೂಡುವಂ ||೭೪ evoll ಒತ್ತಿ ತುಂಬಿ ನಿಂದ ರಿಪು ಭೂಜ ಸಮಾಜದ ಬೇರ್ಗಳಂ ನಭ
ಕೆತ್ತದೆ ಬಂದು ತನ್ನ ಮಜ್ವೊಕ್ಕೊಡೆ ಕಾಯದೆ ಚಾಗದೂಳಿನ | ಚಿತ್ರದ ಮಾಣು ಬಾ ಪುಲುಮಾನಸನೆಂಬನಜಾಂಡಮಂಬುದೂಂ ದತ್ತಿಯ ಪಡ್ಕೊಳಿರ್ಪ ಪುಲುವಲ್ಲದೆ ಮಾನಸನೇ ಮುರಾಂತಕಾ | ೭೫
ಚಮತ್ಕಾರದ ಮಾತನ್ನೂ ಕಾಣೆ ಎಂದನು. ಕೃಷ್ಣನು “ನೀನು ಏನುಮಾಡಿದೆ? ಇನ್ನು ಮೇಲೆ ಕೊಡುವ ಮಾತನ್ನೇ ಆಡಬೇಡ. ಇವನು ಊಟಮಾಡುವುದು ಖಾಂಡವವನವನ್ನು, ಈತನು ಅಗ್ನಿದೇವ; ಹಿಂದೆ ಇವನು ಹೀಗೆಯೇ ಸುಳ್ಳು ಹೇಳಿ ಆದಿಕಾಲದ ರಾಜರನ್ನೆಲ್ಲ ದೇವೇಂದ್ರನಲ್ಲಿ ಹೋರಾಡುವಂತೆ ಮಾಡಿದನು. ವ|| ಈತನು ಹೋತನ ಮುಖದ ಹುಲಿ (ಕಪಟಿ), ಬಿಳಿಯದನ್ನು ಕರಿಯದನ್ನಾಗಿ ಮಾಡುವವನು (ಮೋಸಗಾರ) ಈತನ ಮಾತು ಮಾತಲ್ಲ” ಎಂದನು. ಆ ಮಾತು ತನ್ನನ್ನು ಮೂದಲಿಸಿದ ಹಾಗಾಗಲು ವಿದ್ವಿಷ್ಟವಿದ್ರಾವಣನಾದ ಅರ್ಜುನನು ಹೀಗೆಂದನು. ೭೩. ಬೇಡಿದವನ ಹಿರಿಮೆಯನ್ನು ಹೇಳುವುದಾದರೆ ಅಗ್ನಿದೇವ, ಯುದ್ದಮಾಡುವವನ ಹಿರಿಮೆಯನ್ನು ಹೇಳುವುದಾದರೆ ಸಾಕ್ಷಾತ್ ದೇವೇಂದ್ರ, ಕೊಟ್ಟ ಸ್ಥಳವನ್ನು ಹೇಳುವುದಾದರೆ ಪವಿತ್ರವಾದ ಯಮುನಾನದೀದಡಪ್ರದೇಶ; ಪ್ರೀತಿಯಿಂದ ಕೊಟ್ಟವನು ನಾನು; ಪ್ರಾರ್ಥನೆಯನ್ನು ಕೇಳುವಾಗ ಸಾಕ್ಷಿಯಾಗಿದ್ದವನು ಭೂಧರನಾದ ನೀನು; ಅದಕ್ಕೆ ಸ್ವಲ್ಪವೂ ಎರಡುಮಾತನಾಡಕೂಡದು; ಇಂತಹ ಸಂದರ್ಭವು ಅದೃಷ್ಟದಿಂದಲ್ಲದೆ ಕೂಡಿಬರುತ್ತದೆಯೇ? ೭೪, ರಾಕ್ಷಸರಿಯಾದ ಶ್ರೀಕೃಷ್ಣನೇ, ದೇವೇಂದ್ರನಂತೆ ಶಾಶ್ವತವಾದ ಗುಣಗಳುಳ್ಳವನೇ, ನಿನ್ನ ಹೆದರಿಕೆಯೇನು? ಬೇಡಿದವನು ಅಗ್ನಿ, ಪುಣ್ಯತೀರ್ಥಕ್ಕೆ ಸಮೀಪದಲ್ಲಿ ಜಲರಾಶಿಯಿಂದ ಸಂಚರಿಸುತ್ತಿರುವ ಯಮುನಾನದಿಯ ಸಮೀಪವಿರುವ ಈ ಕಾಡುಗಳೂ ನಾನಾಡಿದ ಮಾತುಗಳನ್ನು ಕೇಳಿವೆ. ನಾನು ಮಾತುಕೊಟ್ಟಿರುವುದನ್ನು ಪಂಚಭೂತಗಳೂ ತಿಳಿದಿವೆ. ಆದುದರಿಂದ ಅದನ್ನು ತಪ್ಪುವುದು ನನಗೆ ಕ್ರಮವೇ ? ಖಾಂಡವವನವನ್ನು ನಾನು ತಡೆಯಿಲ್ಲದೆ ಉಣಿಸುತ್ತೇನೆ. ೭೫. ಮೇಲೆ ಬಿದ್ದು ಅಡ್ಡಗಟ್ಟಿ ನಿಂತ ಶತ್ರುಗಳೆಂಬ ಮರಗಳ ಸಮೂಹದ
Page #292
--------------------------------------------------------------------------
________________
ಪಂಚಮಾಶ್ವಾಸಂ | ೨೮೭ ವ|| ಎಂದು ಮರುಮಾತಿಂಗೆಡೆಯಿಲ್ಲದಂತಿರೆ ನುಡಿದ ಪಡೆಮಚ್ಚೆ ಗಂಡನ ಗಂಡವಾತುಮಂ ನನ್ನಿವಾತುಮಂ ಮುರಾಂತಕಂ ಮೆಚ್ಚಿ ಮ|| ಸಮಕಟ್ಟಂಗೊರೆಗಾರುಮಿಲ್ಲರಿಗ ಕೇಳೋ ನಿನ್ನೊಳ್ ಸಮಂ ಧಾತ್ರಿಯೊಳ್
ಹಿಮಕೃದ್ದೂಧರದಂತೆ ನಿನ್ನ ಗುಣಸಂದೋಹಂಗಳಂ ಕಾಣಲ | ಕುಮೆ ಮತ್ತೊರ್ವನೊಳಾಗದಂತೆನೆ ಸಮಸ್ತೋರ್ವಿಧರಾಶೇಷ ಶೇ
ಪ ಮಹಾ ನಾಗ ಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಣರೇ ||೭೬ ಚಂ|| ಮುನಿಯಿಸಿದಂ ಕರಂ ರಿಡಿಯನಪ್ಪುದು ಬೇಂನ ಬೇಟ್ಟ ವಸ್ತು ಕಾಂ
ಚನಗಿರಿಯಿಂದಮಗ್ಗಳಮನಿಪುದದಾದೊಡಮೇನೊ ಜೀವಮು | ಜೈನಮಿಟದರ್ಥಮುಳ್ಳಿನೆಗಮಿತ್ತು ನೆಗಯನಾಂಪುದೆಂಬ ಪೆಂ
ಪಿನ ಸಮಕಟ್ಟು ಕಥೆ ದೊರೆಯಾರರಿಕೇಸರಿ ನಿನ್ನವೋಲ್ ಪೇಜಂ || ೭೭
ವ|| ಎಂದು ತನಗೆ ಕೊಟ್ಟ ಕೋಡಿಂಗೊಡಂಬಟ್ಟಿ ದಿತಿಜಕುಲದಾವಾನಲನುಮನರಾತಿ ಕಾಲಾನಲನುಮನನಲನಿಷ್ಟಾರ್ಥಸಿದ್ದಿಯಕ್ಕುಮೆಂದು ಪರಸಿ ಮನಃಪವನವೇಗದಿಂ ಪಾಲ್ಗಡಲ ನೆಯ್ಲಿ ತನ್ನ ಬಯ್ದಿಟ್ಟ ದಿವ್ಯ ಸಂಭವಂಗಳಪ್ಪ ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯ ರಥಮುಮಂ ದಧೀಚಿ ಗಂಡಸ್ಟಮಪ್ಪ ಗಾಂಡೀವವೆಂಬ ಬಿಲ್ಲುಮಂ ದಿವ್ಯಶರಂಗಳೊಳ್ ತೆಕ್ಕನೆ ತೀವಿದ
ಬೇರುಗಳನ್ನು ಮೂಲೋತ್ಪಾಟನೆ ಮಾಡದೆ, ಬಂದು ತನಗೆ ಶರಣಾಗತರಾದವರನ್ನು ರಕ್ಷಿಸದೆ, ತ್ಯಾಗದ ಒಳ್ಳೆಯ ಗುಣವನ್ನು ಮುದ್ರಿಸದೆ ತಪ್ಪಿ ಬಾಳುವ ಹುಳುವಿಗೆ ಸಮಾನವಾದ ಮನುಷ್ಯನು ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿರುವ ಹುಳುವಲ್ಲದೇ ಮನುಷ್ಯನೇ ಮುರಾಂತಕಾ? ವll ಎಂದು ಪ್ರತ್ಯುತ್ತರ ಕೊಡುವುದಕ್ಕೆ ಅವಕಾಶವಿಲ್ಲದಂತೆ ಮಾತನಾಡಿದ ಪಡೆಮೆಚ್ಚೆಗಂಡನಾದ ಅರ್ಜುನನ ಪರಾಕ್ರಮದ ಮಾತನ್ನೂ ಸತ್ಯವಾಕ್ಕನ್ನೂ ಮುರಾಂತಕನು ಮೆಚ್ಚಿದನು. ವರ ಎಲೈ ಅರಿಗನೇ ಕೇಳು, ಈ ಭೂಮಿಯಲ್ಲಿ ನಿನ್ನ ಹೋಲಿಕೆಗೂ ಸಮಾನತೆಗೂ ಬರುವವರು ಯಾರೂ ಇಲ್ಲ: ಹಿಮವತ್ಪರ್ವತದಂತಿರುವ ನಿನ್ನ ಗುಣರಾಶಿಯನ್ನು ಮತ್ತೊಬ್ಬನಲ್ಲಿ ಕಾಣಲಾಗುವುದಿಲ್ಲ ಸಮಸ್ತ ಭೂಮಂಡಲವನ್ನು ಧರಿಸಿರುವ ಆದಿಶೇಷನೆಂಬ ಮಹಾಸರ್ಪದ ಹೆಡೆಯಲ್ಲಿರುವ ರತ್ನಕಾಂತಿಯನ್ನು ಮಿಂಚುಹುಳುವಿನಲ್ಲಿ ಕಾಣಬಹುದೇ? ೭೭. ನಿನ್ನನ್ನು ರೇಗಿಸಿದವನು ವಿಶೇಷ ದೊಡ್ಡವನಹುದು. ಬೇಡುವವನು ಬೇಡಿದ ವಸ್ತು ಮೇರುಪರ್ವತಕ್ಕಿಂತಲೂ ಅತಿಶಯವಾದುದು. ಆದರೇನು ? ಪ್ರಾಣವಿರುವವರೆಗೂ ಶೌರ್ಯ ಪ್ರದರ್ಶನಮಾಡಿ ಧನವಿರುವವರೆಗೂ ದಾನಮಾಡಿ ಪ್ರಸಿದ್ದಿಯನ್ನು ಪಡೆಯಬೇಕೆಂಬ ಹಿರಿಯ ಗುರಿ ನಿನ್ನ ದೃಷ್ಟಿಗಿದೆ. ನಿನಗೆ ಸಮಾನರಾದವರು ಯಾರಿದ್ದಾರೆ? ವll ಎಂದು ತನಗೆ ಕೊಟ್ಟ ದಾನಕ್ಕೆ ಒಡಂಬಟ್ಟು ರಾಕ್ಷಸರ ಕುಲಕ್ಕೆ ಕಾಡುಗಿಚ್ಚಿನಂತಿರುವ ಕೃಷ್ಣನನ್ನೂ ಶತ್ರುಗಳಿಗೆ ಪ್ರಳಯಾಗ್ನಿಯಂತಿರುವ ಅರ್ಜುನನನ್ನೂ ಅಗ್ನಿಯು 'ನಿಮ್ಮ ಇಷ್ಟಾರ್ಥಸಿದ್ದಿಯಾಗಲಿ' ಎಂದು ಹರಸಿ ಮನೋವಾಯುವೇಗದಿಂದ ಕ್ಷೀರಸಮುದ್ರವನ್ನು ಸೇರಿ ಅಲ್ಲಿ ತಾನು ಬಚ್ಚಿಟ್ಟಿದ್ದ ದೈವಾಂಶಸಂಭೂತಗಳಾದ ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥವನ್ನೂ ದಧೀಚಿಯ ಕಪೋಲಪ್ರದೇಶದಿಂದ
Page #293
--------------------------------------------------------------------------
________________
೨೮೮ ) ಪಂಪಭಾರತಂ ತವದೊಣೆಗಳುಮಂ ತಂದನ್ನ ಪ್ರತಿಜ್ಞೆಯಂ ತೀರ್ಚುವೊಡಮಿಂದ್ರನಂ ಗೆಲ್ಗೊಡಮಿವನಮೋಘಂ ಕೆಯೊಳಲ್ವೇಚ್ಚುಮೆಂದೊಡತಿರಥಮಥನನಗ್ನಿದೇವಂಗೆ ಪೊಡವಟ್ಟು ಕೆಯೊಂಡು ಬೃಹಂದಳನೆಂಬ ಸಾರಥಿವರಸು ರಥವನೇಜಲೊಡಂಉll ಪಾವಕನಟ್ಟಿ ಖಾಂಡವವನುಂಡವನರ್ಜುನನೂಡಿದಪ್ಪನೆ
ರಾವತವಾಹನಂ ನೆದು ಸಾಧನ ಸಂಯುತನಾಂಪನಲ್ಲಿ ನಾ | ನಾ ವಿಧ ಯುದ್ಧಮುಂಟೆನುತ ಶೈಬ್ಯ ಬಳಾಹಕ ಮೇಘವರ್ಣ ಸು. ಗ್ರೀವ ಹಯಂಗಳಿಂದೆಸೆವುದ ರಥಮಂ ಹರಿ ತಾನುಮೇದಂ || ೭೮ ವ|| ಅಂತು ದಾರುಕಂ ರಥಮಂ ಚೋದಿಸಲೊಡಂಕಂ|| ಚೋದಿಸುವುದುಮಿರ್ವರ ರಥ
ಚೋದಕರವರೆರಡು ರಥದ ಗಾಲಿಯ ಕೋಳಿ೦ 1 ದಾದ ರಜಃಪಟಲಂ ಕವಿ
ದಾದಮೆ ತೀವಿದುದು ದಿವಿಜವಧುವಿರ ಕಸ್ತೂಲ್ - ೭೯ ವ! ಅಂತೆಯ್ಲಿ ಯಮುನಾನದಿಯ ತೆಂಕಣ ದೆಸೆಯೊಳ್ ನೂಳು ಯೋಜನದಗಲದೊಳ ಮನಿತ ನೀಳದೊಳಂ ನೆಯದುಮll ಕಕುಭಾಶೋಕ ಕದಂಬ ಲುಂಗ ಲವಲೀ ಭೂಜಾರ್ಜುನಾನೋಕಹ
ಪ್ರಕರಂ ಪುಷ್ಟಿತ ಹೇಮಪಂಕಜ ರಜಸ್ಸಂಸಕ್ತ ಶೃಂಗಾಂಗನಾ | ನಿಕರಂ ಸಾರಸ ಹಂಸ ಕೋಕಿಳ ಕುಳಧಾನೋತ್ಪರಂ ಚಲ್ಪನಾ ಯು ಕರಂ ಸಕ್ತನಿಳಿಂಪ ದಂಪತಿಗಳಿಂದಾ ನಂದನಂ ನಂದನಂ 1 ೮೦
ರಚಿತವಾದ ಗಾಂಡೀವವೆಂಬ ಬಿಲ್ಲನ್ನೂ ದಿವ್ಯವಾದ ಬಾಣಗಳಿಂದ ಪೂರ್ಣವಾಗಿ ತುಂಬಿದ ಅಕ್ಷಯತೂಣೀರಗಳನ್ನೂ (ಬತ್ತಳಿಕೆಗಳನ್ನೂ ತಂದು ತನ್ನ ಪ್ರತಿಜ್ಞೆಯನ್ನು ತೀರಿಸುವುದಕ್ಕೂ ಇಂದ್ರನನ್ನು ಗೆಲ್ಲುವುದಕ್ಕೂ ಅಮೋಘವಾದ ಇವುಗಳನ್ನು ಸ್ವೀಕರಿಸಬೇಕು ಎಂದು ಹೇಳಲು ಅತಿರಥಮಥನನಾದ ಅರ್ಜುನನು ಅಗ್ನಿದೇವನಿಗೆ ನಮಸ್ಕಾರಮಾಡಿ ಅವನ್ನು ಸ್ವೀಕರಿಸಿ ಬೃಹಂದಳನೆಂಬ ಸಾರಥಿಯೊಡನೆ ರಥವನ್ನು ಹತ್ತಿದನು. ೭೮. ಅಗ್ನಿಯು ಖಾಂಡವವನ್ನು ಸುಟ್ಟು ಉಣ್ಣುತ್ತಾನೆ, ಅರ್ಜುನನು ಉಣಿಸುತ್ತಾನೆ. ಐರಾವತವಾಹನನಾದ ಇಂದ್ರನು ಸೈನ್ಯಸಮೇತನಾಗಿ ಪ್ರತಿಭಟಿಸುತ್ತಾನೆ. ಇಲ್ಲಿ ನಾನಾವಿಧವಾದ ಯುದ್ಧವುಂಟು ಎನ್ನುತ್ತ ಶೈ, ಬಳಾಹಕ, ಮೇಘವರ್ಣ, ಸುಗ್ರೀವವೆಂಬ ಕುದುರೆಗಳಿಂದ ಪ್ರಕಾಶಮಾನವಾದ ರಥವನ್ನು ಕೃಷ್ಣನು ತಾನೂ ಹತ್ತಿದನು. ವ ದಾರುಕನು ರಥವನ್ನು ನಡೆಸಿದನು. ೭೯.ಸಾರಥಿಗಳು ಚೋದಿಸಲು ಎರಡು ರಥದ ಗಾಲಿಗಳ ಆಕ್ರಮಣದಿಂದಾದ ಧೂಳಿನ ಸಮೂಹವು ಮುತ್ತಿ ಮುಸುಕಿ ದೇವಸ್ತೀಯರ ಕಣ್ಣಲ್ಲಿ ವಿಶೇಷವಾಗಿ ತುಂಬಿತು. ವll ಯಮನಾನದಿಯ ದಕ್ಷಿಣದಿಕ್ಕಿನಲ್ಲಿ ನೂರು ಯೋಜನದಗಲವೂ ಅಷ್ಟೆ ಉದ್ದವೂ ಆಗಿತ್ತು ಆ ಖಾಂಡವವನ. ೮೦. ಕೆಂಪುಮ, ಅಶೋಕ, ಕದಂಬ, ಮಾತುಲುಂಗ, ಅರನೆಲ್ಲಿ, ಬಿಳಿಯಅತ್ತಿ ಮೊದಲಾದ ಮರಗಳ ಸಮೂಹಗಳಿಂದಲೂ ಪುಷ್ಪಭರಿತವಾದ ಹೊಂದಾವರೆಯ
Page #294
--------------------------------------------------------------------------
________________
ಪಂಚಮಾಶ್ವಾಸಂ | ೨೮೯ ವ|| ಎನೆ ಸೊಗಯಿಸುವ ಖಾಂಡವವನಮಂ ವನರುಹನಾಭಂ ವಿಕ್ರಮಾರ್ಜುನಂಗೆ ತೋಬಲ್ಕು ತೋಡಿ -
ಮಗ ಅಲರಂ ನೋಯಿಸದೊಯ್ಯನೊಯ್ಯನಳಿಗಳ್ ಬಂಡುಣ್ಣುವಾಟಂದು ಬಂ
ದಲೆಯಣದು ಗಾಳಿ ಸೂರ್ಯಕಿರಣಾನೀಕಕ್ಕಮಂದಪೊಡಂ | ಸಲವಿಲ್ಲುತ ಸಿದ್ಧ ಖೇಚರರೆ ತಾಮಾಕ್ಟೇರಿಯಾಗಿ೦ತು ನಿ ಚಲುನೋರಂತಿರೆ ಕಾವರೀ ದೊರತು ಕಾಪೀ ನಂದನಕ್ಕಿಂದ್ರನಾ || ೮೧
ಉll
ಒಮ್ಮೆ ತೊಟ್ಟು ನೋಡಿ ಬನಮಂ ಮಘವಂ ಶಚಿ ಪೂತ ಚೂತಮಂ ನರ್ಮದಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ | ಸೋರ್ಮುಡಿಯೊಳ್ ತಗುಳಿದೂಡ ಸೂಚನೆ ಬಾರಿಸಿದಂ ದಲೆಂದೂಡಿಂ ಕೂರ್ಮೆಯ ಮಾತು ಮೆಚ್ಚುವನಿತರ್ಕ ಬಳಾರಿ ಮುರಾಸುರಾರಿಯೇಂ | ೮೨
ಕಂ|| ಇಂತಪ್ಪ ಬನಮನಿದನಿ
ಎಂತನಲನನೂಡಲೆಂದು ಪೂಣ್ಣಯ್ ಮುಂ ಪೂ | ಇಂತೂಡು ಪೂಡು ಶಿತಶರ ಸಂತತಿಯಂ ಬಿಲ್ಗೊಳೇಕೆ ನೀಂ ತಡೆದಿರ್ಪಮ್ ||
೮೩
ಧೂಳಿನಲ್ಲಿ ಹೊರಳಾಡಿರುವ ಹೆಣ್ಣುದುಂಬಿಗಳ ಗುಂಪುಗಳಿಂದಲೂ ಬಕ, ಹಂಸ, ಕೋಗಿಲೆ ಮೊದಲಾದ ಪಕ್ಷಿಸಮೂಹದ ಶಬ್ದರಾಶಿಯಿಂದಲೂ ಆನಂದ ವನ್ನುಂಟುಮಾಡುವ ಆ ಖಾಂಡವವನವು ಪರಸ್ಪರ ಆಸಕ್ತರಾದ ದೇವದಂಪತಿ ಗಳಿಂದಲೂ ಸುಂದರವಾಗಿ ಕಂಡಿತು. ವ|| ಖಾಂಡವವನವನ್ನು ಶ್ರೀಕೃಷ್ಣನು ವಿಕ್ರಮಾರ್ಜುನನಿಗೆ ಸುತ್ತಾಡಿ ತೋರಿಸಿದನು. ೮೧. ಇಲ್ಲಿ ದುಂಬಿಗಳು ಹೂವನ್ನು ನೋಯಿಸದೆ ಮಕರಂದಪಾನಮಾಡುತ್ತವೆ. ಗಾಳಿಯು ನುಗ್ಗಿ ವೇಗವಾಗಿ ಬೀಸುವುದಿಲ್ಲ, ಸೂರ್ಯನ ಕಿರಣಸಮೂಹಗಳೂ ಎಂದೂ ಇಲ್ಲಿಗೆ ಪ್ರವೇಶಿಸುವುದಿಲ್ಲ, ಗರ್ವಿಷ್ಠರಾದ ಸಿದ್ದಖೇಚರರೇ ರಕ್ಷಕರಾಗಿ ಇದನ್ನು ನಿತ್ಯವೂ ಒಂದೇ ಕ್ರಮದಿಂದ ಕಾಯುತ್ತಿದ್ದಾರೆ. ಇಂದ್ರನ ಖಾಂಡವವನಕ್ಕೆ ರಕ್ಷಣೆ ಈ ರೀತಿಯಾಗಿ ಬಲಿಷ್ಠವಾಗಿದೆ. ೮೨. ಒಂದು ಸಲ ಇಂದ್ರನು ಶಚೀದೇವಿಯೊಡಗೂಡಿ ವನವನ್ನು ಸುತ್ತಾಡಿ ಬರುತ್ತಿದ್ದಾಗ ಹೂವಿನಿಂದ ಕೂಡಿದ ಮಾವಿನ ಮರವನ್ನು ಆಶ್ರಯಿಸಿದ್ದ ಅಶೋಕ ಬಳ್ಳಿಯನ್ನು ನೋಡಿ ಅದರ ಚಿಗುರನ್ನು ಶಚಿಯು ಕೊಯ್ದು ಪ್ರೀತಿಯಿಂದ ತನ್ನ ದೀರ್ಘವಾದ ತುರುಬಿನಲ್ಲಿ ಮುಡಿದುಕೊಳ್ಳಲು ಇಂದ್ರನು ಸೂಳ್ ಎಂದು ಶಬ್ದಮಾಡಿ ತಡೆದನು ಎಂಬುದು ನಿಜ ಎಂದು ಹೇಳುವಾಗ ಆ ವನದ ವಿಷಯದಲ್ಲಿ ಅವನ ಅಭಿಮಾನ ಎಷ್ಟಿರಬೇಕು ? ಪ್ರೀತಿಯ ಮಾತನ್ನು ಕೇಳಿ ಮೆಚ್ಚುವುದಕ್ಕೆ ಇಂದ್ರನು ಕೃಷ್ಣನೆಂದು ತಿಳಿದೆಯಾ? '೮೩. ಹೀಗಿರುವ ಈ ವನವನ್ನು ಅಗ್ನಿ ಉಣಲೆಂದು ಹೇಗೆ ಪ್ರತಿಜ್ಞೆಮಾಡಿದೆ? ಮೊದಲು ಪ್ರತಿಜ್ಞೆಮಾಡಿದ ಹಾಗೆ ಉಣಿಸು, ಏಕೆ ತಡಮಾಡುತ್ತೀಯೆ? ಬಿಲ್ಲಿನಲ್ಲಿ ಹರಿತವಾದ
Page #295
--------------------------------------------------------------------------
________________
೨೯೦) ಪಂಪಭಾರತಂ
ಪರಮಾಣುವನಿತು ಬನದೊಳ್ ಚರಾಚರಂ ಪೋಗೆ ತಣಿಯನನಲನದರ್ಕಾ೦ | ನೆರಮವೆನುಗ್ರ ಕಿನ್ನರ ಸುರ ದನುಜೋರಗರ ಕದನಮೇಂ ನಿನಗರಿದೇ ||
೮೪ ವ| ಎಂಬುದುಮಂತ ಗಯ್ಯನನ್ನ ಸಾಹಸಮಂ ನೋಡಿಯೆಂದು ವಿಕ್ರಾಂತ ತುಂಗನುತ್ತುಂಗ ಭುಜಪರಿಘದೆರಡು ದೆಸೆಯೊಳಂ ತವದೊಣಗಳಂ ಬಿಗಿದು ಗಾಂಡೀವಮನೇಲಿಸಿ ನೀವಿ ಜೇವೊಡೆದು ದಿವ್ಯಾಸ್ತಂಗಳಂ ಪಿಡಿದು ಕೆಯ್ತಿವಿಕೊಂಡಗ್ನಿದೇವನಂ ನೋಡಿ
ಓಡುಗೆ ನಿಮ್ಮ ಮೆಯ್ಯ ಪಸಿವಾಂತ ವಿರೋಧಿಗಳನ್ನ ಕೆಯ್ಯೋಳ ಬಾಡುಗೆ ಕೊಳ್ಳಿಮುಣ್ಣಿಮೆನೆ ಕೇಳನಲಂ ಪರಸುತ್ತಮಾ ಲಯ | ಕ್ರೀಡೆಯೊಳೀ ಚರಾಚರಮುಮಂ ಸುಡುವಂದಿನ ಮಯಮಗಳಂ
ಮಾಡಿ ತಗುಳು ನೀಳು ಬಳೆದರ್ವಿಸೆ ಪರ್ವಿದನಾ ವನಾಂತಮಂ || ೮೫ ಮll ಫಳ ಕರ್ಪೂರ ಲವಂಗ ಲುಂಗ ಲವಳೀ ಹಿಂತಾಳ ತಾಳೀ ತಮಾ
ಛ ಛತಾ ಸುಂದರ ನಂದನಕ್ಕಳುರೆ ಮುಂ ತನ್ನರ್ಚಿಗಳ್ ಬಂದು ಮೊ | ಕಳಮೆತ್ತಂ ಸುರಿಯುತ್ತುಮಿರ್ಪ ರಸಮಂ ಮುಂ ಪೀರ್ದುಕೊಂಡಂ ಮನಂ ಗೊಳಿ ಸಪ್ತಾರ್ಚಿ ಪೊದಳು ನೀಳೊಸಗೆಯಿಂದಾಪೋಶನಂಗೊಲ್ವವೋಲ್ || ೮೬
ಬಾಣಸಮೂಹವನ್ನು ಸಂಧಾನಮಾಡು, ೮೪, ಈ ವನದಲ್ಲಿ ಪರಮಾಣುವಷ್ಟು ಚರಾಚರ ಪ್ರಾಣಿಗಳು ಹೊರಗೆ ಹೋದರೂ ಅಗ್ನಿಯು ತೃಪ್ತಿಪಡಲಾರ. ಅದಕ್ಕೆ ನಾನು ಸಹಾಯಕನಾಗಿದ್ದೇನೆ. ಭಯಂಕರರಾದ ಕಿನ್ನರರು, ದೇವತಗಳು, ರಾಕ್ಷಸರು, ನಾಗರು ಇವರೊಡನೆ ಯುದ್ಧಮಾಡುವುದು ನಿನಗೆ ಅಸಾಧ್ಯವೇ? ವlು ಅರ್ಜುನನು ಹಾಗೆಯೇ ಮಾಡುತ್ತೇನೆಂದನು. ನನ್ನ ಪರಾಕ್ರಮವನ್ನು ನೋಡಿ ಎಂದು ಉತ್ತಮಪರಾಕ್ರಮಿಯಾದ ಅರ್ಜುನನು ತನ್ನ ಎತ್ತರವಾದ ಗದೆಯಂತಿರುವ ಎರಡು ಭುಜಗಳಲ್ಲಿಯೂ ಅಕ್ಷಯತೂಣೀರಗಳನ್ನು ಬಿಗಿದುಕೊಂಡು ಗಾಂಡೀವವೆಂಬ ಬಿಲ್ಲಿಗೆ ಹೆದೆಯೇರಿಸಿ ನೀವಿ ಜಡಿದು ಶಬ್ದಮಾಡಿನೋಡಿ ದಿವ್ಯಾಸ್ತಗಳನ್ನು ಕಯ್ಯಲ್ಲಿ ಹಿಡಿದು ಅಗ್ನಿದೇವನನ್ನು ನೋಡಿ -೮೫. ನಿಮ್ಮ ಶರೀರದ ಹಸಿವು ಓಡಲಿ; ಪ್ರತಿಭಟಿಸಿದ ನಿಮ್ಮ ಶತ್ರುಗಳು ನಮ್ಮ ಕಯ್ಯಲ್ಲಿ ನಾಶವಾಗಲಿ; ತೆಗೆದುಕೊಳ್ಳಿ, ಉಣ್ಣಿ ಎನ್ನಲು ಅವರನ್ನು ಹರಸುತ್ತ ಪ್ರಳಯಕಾಲದಲ್ಲಿ ಈ ಚರಾಚರವನ್ನೆಲ್ಲ ಸುಡುವ ಅಂದಿನ ಶರೀರವನ್ನೂ ಮೀರಿದ ಆಕಾರವನ್ನು ಧರಿಸಿ ನೀಳವಾಗಿ ಬೆಳೆದು ಸುಡುವುದಕ್ಕಾಗಿ ಆ ವನದ ಒಳಭಾಗವನ್ನೆಲ್ಲ ಆಕ್ರಮಿಸಿದನು. ೮೬. ಫಲಿಸಿರುವ ಕರ್ಪೂರ, ಲವಂಗ, ಮಾದಲ, ಅರನೆಲ್ಲಿ, ಹಿಂತಾಳ, ತಾಳೆ, ಹೊಂಗೆಯಬಳ್ಳಿ ಇವುಗಳಿಂದ ಸುಂದರವಾಗಿದ್ದ ವನವನ್ನು ಮೊದಲೇ ತನ್ನ ಉರಿಯ ಜ್ವಾಲೆಗಳು ಹರಡಿರಲು ಮುಂದುವರಿದು ದೀರ್ಘವಾಗಿ ಬೆಳೆದು ಸಂತೋಷದಿಂದ ಆಪೋಶನವನ್ನು ತೆಗೆದುಕೊಳ್ಳುವ ಹಾಗೆ ವಿಶೇಷವಾಗಿ ಸುರಿಯುತ್ತಿರುವ ಮರದ ರಸವನ್ನು ಅಗ್ನಿಯು ತೃಪ್ತಿಯಾಗುವಷ್ಟು
Page #296
--------------------------------------------------------------------------
________________
- ೮೭
ಪಂಚಮಾಶ್ವಾಸಂ | ೨೯೧ ಕoll ನನೆಕೊನೆಯ ತಳಿರ ಪೂವಿನ
ಬನಮನಿತುಂ ಶಿಖೆಗಳಳುರೆ ಬೆಂಕೆಯ ಪೊಯ್ದು | ರ್ವಿನೋಳೆ ಕೊರಗಿರ್ದ ಲತೆಗಳ ಕೊನೆಗೊನೆಯನೆ ದಹನನಳುರ್ದು ಕೊನೆಗೊನೆಗೊಂಡಂ ||
ವ|| ಆಗಳಾ ಬನಮನಿಂದ್ರನ ಬೆಸದೊಳ್ ಕಾವ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಬಲಮನಿತುಮೊಂದಾಗಿ ವಿಕ್ರಮಾರ್ಜುನನೊಳ್ ತಾಗಕoll ಕೊಂಡಪುದುರಿ ಬನಮನದಂ
ಕಂಡಂತಿರಲಕ್ಕುಮೆಂದು ತಾಗಿದ ನೆಗ | ಇಂಡರ ಗಂಡುವಿನಂ ಕೊಂಡುವು ಗಾಂಡೀವಮುಕ್ತ ಬಾಣಗಣಂಗಳ್ ||
೮೮ | ವll ಅಂತು ಕಾದ ವಿದ್ವಿಷ್ಟವಿದ್ರಾವಣನ ಮೊನೆಯಂಬಿನಂಪೇಟಿಂಗಳ್ಳಿ ಹತವಿಹತ ಕೋಳಾಹಳರಾಗಿ ಒದರಸಿದರಾಗೆಯುಂ ಕಿನ್ನರರಿನಾರ ಮಣಿಯಂ ಪುಗುವಮನೆಯುಂ ಕಿ ಪುರುಷರ್ ಕಾಪುರುಷರಂತ ಬಾಯಂ ಬಡೆಯುಂ ಗಂಧರ್ವರ್ ಗರ್ವಮನುಳೆದೊಂದೂರ್ವರಂ ಮಿಗೆಯೊಡೆಯುಂ ವಿದ್ಯಾಧರರಧರರಾಗೆಯುಂ ಪನ್ನಗರ್ ಪನ್ನತಿಕೆಯಿಂ ಬಂದಾಂತೊಡಕoll ನಾಗರ ಖಂಡಂಗಳನಾ
ನಾಗರ ಖಂಡದೊಳೆ ತೊಡರೆ ನರನಿಸುವುದುಮಾ | ನಾಗರ ಖಂಡಂಗಳುಮಂ ನಾಗರ ಖಂಡಮುಮನಳುರ್ದು ಕೊಂಡಂ ದಹನಂ ||
ಹೀರಿದನು. ೮೭. ಮೊಗ್ಗಿನ, ಟಿಸಿಲಿನ, ಚಿಗುರಿನ, ಹೂವಿನ ಆ ವನವನ್ನೆಲ್ಲ ಬೆಂಕಿಯ ಜ್ವಾಲೆಗಲು ವ್ಯಾಪಿಸಲು ಬೆಂಕಿಯು ಹೊಡೆದ ರಭಸದಲ್ಲಿಯೇ ಬಾಡಿದ ಬಳ್ಳಿಗಳ ಕವಲು ಕವಲುಗಳನ್ನೇ ಅಗ್ನಿಯು ಸುಟ್ಟು ತುತ್ತತುದಿಯನ್ನೂ ಆಕ್ರಮಿಸಿದನು. ವ|| ಆಗ ಅವನನ್ನು ಇಂದ್ರನ ಆಜ್ಞೆಯಂತೆ ರಕ್ಷಿಸುತ್ತಿದ್ದ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ದ ವಿದ್ಯಾಧರ ಸೈನ್ಯವನ್ನೂ ಒಂದಾಗಿ ವಿಕ್ರಮಾರ್ಜುನನನ್ನು ಬಂದು ತಾಗಿದುವು. ೮೮. ಬೆಂಕಿಯು ವನವನ್ನು ಸುಡುತ್ತಿದೆ. ಅದನ್ನು ನೋಡಿಯೂ ಹೇಗೆ ಸುಮ್ಮನಿರುವುದು ಎಂದು ಪ್ರತಿಭಟಿಸಿದ ಪ್ರಸಿದ್ದವಾದ ಶೂರರ ಪೌರುಷವು ಪಲಾಯನಮಾಡುವ ಹಾಗೆ ಗಾಂಡೀವದಿಂದ ಬಿಡಲ್ಪಟ್ಟ ಬಾಣಸಮೂಹಗಳು ಅವರನ್ನು ಆಹುತಿಗೊಂಡವು. ವll ಹಾಗೆ ಕಾದಲು ವಿದ್ರಾವಣನ ಮೊನಚಾದ ಬಾಣದ ಬಿಲ್ಲಿನ ಯುದ್ದದ ನಾನಾ ವಿಧವಾದ ಹೊಡೆತ ಮರುಹೊಡೆತಗಳ ಕೋಲಾಹಲದಲ್ಲಿ ಸಿದ್ದರು ಸಿದ್ಧತೆಯಿಲ್ಲದವರಾದರು, ಕಿನ್ನರರು ಇನ್ನು ಯಾರ ಮರೆಯನ್ನು ಹೋಗೋಣವೆಂದು ಯೋಚಿಸಿದರು, ಕಿಂಪುರುಷರು ಅಲ್ಲಮನುಷ್ಯರಂತೆ ಹಾಹಾಕಾರಪಟ್ಟರು. ಗಂಧರ್ವರು ತಮ್ಮ ಆತ್ಮಗರ್ವವನ್ನು ಬಿಟ್ಟು ಒಬ್ಬೊಬ್ಬರನ್ನೂ ಮೀರಿಸಿ ಓಡಿದರು. ವಿದ್ಯಾಧರರು ತಿರಸ್ಕೃತರಾದರು. ಪನ್ನಗರು ಪರಾಕ್ರಮದಿಂದ ಬಂದು ಎದುರಿಸಿದರು. ೮೯. ಅಲ್ಲಿ ಬೆಳೆದ ಹಸಿಯ ಶುಂಠಿಯ ಚೂರುಗಳೂ ಆ ಸರ್ಪಗಳ ಚೂರುಗಳಲ್ಲಿಯೇ
Page #297
--------------------------------------------------------------------------
________________
೨೯೨ / ಪಂಪಭಾರತಂ
ವಿರಹಿಗಳ ಸುಯ್ಯ ಬೆಂಕೆಯೊ ಳಿರದೊಣಗಿದುವಕ್ಕುಮಾಗಳೆನಲುರಿವುರಿಯಿಂ ।
ಕರಿಮುರಿಕನಾದುವುನದ ಪರಭೂತ ಷಟ್ಟರಣ ರಾಜಕೀರಕುಲಂಗಳ |
ಉರಿ ಕೊಳೆ ದಸಗಾಣದ ದಸ
ವರಿವರಿದು ಕುಜಂಗಳಂ ಪಡಲ್ವಡಿಸಿ ಭಯಂ | ಬೆರಗೊಳ! ನೆಗೆದುದಾ ವನ
ಕರಿ ಶರಭ ಕಿಶೋರ ಕಂಠಗರ್ಜನ ಬನದೊಳ್ ||
ಸಂಗತ ಧೂಮಾವಳಿಯನಿ
ಭಂಗಳ ಗತ್ತೊಳಟಿ ಪಾಯ್ತು ಪೊಗೆ ಪುಗೆ ಕಣ್ಣಂ |
ಸಿಂಗಂಗಳಳುರ ಗರ್ಜಿಸಿ
ಲಂಗಿಸಿ ಪುಡಪುಡನೆ ಪುಟ್ಟಿ ಸತ್ತುವು ಪಲವುಂ ||
ವ|| ಮತ್ತಮಲ್ಲಿ ಕೆಲವು ಲತಾಗೃಹಂಗಳೊಳಂ ಧಾರಾಗೃಹಂಗಳೊಳಂ
ಕಂ
ಒಡನಳುರ ಕಿರ್ಚು ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ |
ದೂಡಗಳೆದರೋಪರೂಪರೂ
೯೦
೯೧
وع
ಳೊಡಸಾಯಲ್ ಪಡೆದರಿನ್ನವುಂ ಸಯೊಳವೇ ||
ವ|| ಅಂತು ಖಾಂಡವವನಮಲ್ಲಮನನಲಂ ಪ್ರಳಯಕಾಳಾನಳನಂತಳುರ್ದು ಕೊಳೆ ಬಳಸಿ ಬಂದು ಕಾವ ನಾರಾಯಣನ ಸುದರ್ಶನಮಂಬ ಚಕ್ರದ ಕೋಳುಮಂ ವಿಕ್ರಮಾರ್ಜುನನ
E&
ಸಿಕ್ಕಿಕೊಳ್ಳುವಂತೆ ಅರ್ಜುನನು ಬಾಣಪ್ರಯೋಗಮಾಡಲು ಆ ಹಸಿಯ ಶುಂಠಿಯ ಚೂರುಗಳನ್ನೂ ಸರ್ಪಗಳ ಚೂರುಗಳನ್ನೂ ಅಗ್ನಿಯು ವ್ಯಾಪಿಸಿ ಸುಟ್ಟನು. ೯೦. ಮದಿಸಿದ ಕೋಗಿಲೆ ದುಂಬಿ ಮತ್ತು ಅರಗಿಳಿಗಳ ಸಮೂಹಗಳು ತಮ್ಮನ್ನು ಅಗಲಿದ ಪ್ರೇಮಿಗಳ ಬಿಸಿಯುಸಿರಿನ ಬೆಂಕಿಯಲ್ಲಿ ಒಣಗಿದುವೋ ಎನ್ನುವ ಹಾಗೆ ಉರಿಯುವ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಿಮುರುಕಾದುವು. ೯೧. ಬೆಂಕಿಯು ಆಕ್ರಮಿಸಲು ಏನುಮಾಡಬೇಕೆಂದು ತೋಚದೆ ದಿಕ್ಕುದಿಕ್ಕಿಗೆ ಓಡಿ ಮರಗಳನ್ನು ಕೆಳಗುರುಳಿಸಿ ಭಯದಿಂದ ಕೂಗಿಕೊಳ್ಳಲು ಕಾಡಾನೆಯ ಶರಭಗಳ ಮರಿಗಳ ಕೊರಳ ಗರ್ಜನೆ ಆ ಕಾಡಿನಲ್ಲಿ ಚಿಮ್ಮಿ ಹಾರಿದುವು. ೯೨. ಒಟ್ಟಾದ ಹೊಗೆಯ ಸಮೂಹವನ್ನು ಆನೆಯೆಂದು ಭ್ರಾಂತಿಸಿ ಸಿಂಹಗಳು ಕೂಗಿಕೊಂಡವು. ಮೇಲೆಹಾಯ್ದು ಹೊಗೆಯು ಕಣ್ಣನ್ನು ವ್ಯಾಪಿಸಲು ಗರ್ಜನೆಮಾಡಿ ನೆಗೆದು ಪುಡಪುಡನೆ ಸುಟ್ಟು ಸತ್ತುಹೋದವು. ವll ಅಲ್ಲಿಯ ಕೆಲವು ಬಳ್ಳಿ ಮನೆಯಲ್ಲಿಯೂ ಧಾರಾಗೃಹಗಳಲ್ಲಿಯೂ ೯೩. ಉರಿಯು ತಮ್ಮನ್ನು ಒಟ್ಟಿಗೆ ಸುಡಲು ತಮ್ಮ ತೋಳುಗಳನ್ನು ಸಡಿಲಿಸದೆ ಆ ಪ್ರಿಯಪ್ರೇಯಸಿಯರು ಜೊತೆಯಲ್ಲಿಯೇ ಪ್ರಾಣವನ್ನು ಕಳೆದರು. ಪ್ರಿಯರು ಪ್ರಿಯರೊಡನೆ ಸಾಯುವ ಅದೃಷ್ಟವನ್ನು ಪಡೆದರು. ಇದಕ್ಕಿಂತ ಬೇರೆ ಅದೃಷ್ಟವೂ ಉಂಟೇ? ವ|| ಹಾಗೆ ಖಾಂಡವವನವೆಲ್ಲವನ್ನೂ ಅಗ್ನಿಯು ಪ್ರಳಯಕಾಲದ ಬೆಂಕಿಯಂತೆ ಸುಟ್ಟು ತಾನು ಭುಂಜಿಸುತ್ತಿರಲು ಸುತ್ತಲೂ
Page #298
--------------------------------------------------------------------------
________________
ಪಂಚಮಾಶ್ವಾಸಂ | ೨೯೩ ದಿವ್ಯಾಸ್ತಂಗಳ ಕೊಳುಮನಗ್ನಿದೇವನ ಶಿಖಾಕಳಾಪದ ಕೋಳುಮನೆಂತಾನುಂ ಬಂಚಿಸಿ ಬಲೆ ಪಡೆದ ಕೋಕನಂತೂರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡುಮಲ್ಲಿಕಾಮಾಲೆ || ದೇವ ಬಿನ್ನಪಮಿಂದು ಖಾಂಡವಮಂ ಕೃಶಾನು ತಗುಳು ನಾ
ನಾ ವಿಧಂ ಸುಡೆ ನೋಡಲಾರದೆ ತಳ್ಳ ದೇವರ ಕಾಪಿನಾಳ್ | ದೇವ ಕಿನ್ನರ ಪನ್ನಗಾವಳಿ ಮೊಟ್ಟನಪ್ಪಿನಮೆಚ್ಚು ಕೊಂ ದೇವರೆಂದದಿರ್ದನೊರ್ವನಗುರ್ವು ಪರ್ವಿರೆ ದೇವರಂ ||
&
,
,
,
ಕಂ|
ಎರಡು ರಥಮೋಳವು ನೋಟ ಹೆರಡತೊಳವನೊಂದು ರಥಮ ತೋಟಗೆ ಪಲವಾ | ಗಿರೆ ಪರಿದು ಕಣ್ಣೂಳಿನ್ನುಂ ತಿರಿದಪುದುರಿದಪುದು ನಮ್ಮ ಬನಮೆನಿತನಿತುಂ ||
೯೫ ವ|| ಎಂಬುದುಂ ಪೌಲೋಮಾ ಪತಿ ತನ್ನ ದಿವ್ಯಜ್ಞಾನದೊಳ್ ನೋಡಿ ಚಕಿಯುಂ ವಿಕ್ರಮಾರ್ಜುನನುಮಪುದನಳಿದು ಗಜ ಗರ್ಜಿಸಿ ವಿಳಯ ಕಾಳಾಂಬುದದಂತೆ ಮೊಳಗುಮಂ ಸಿಡಿಲ ಬಳಗಮನೊಳಕೊಂಡ ದ್ರೋಣ ಮಹಾದ್ರೋಣ ಪುಷ್ಕಳಾವರ್ತ ಸುವರ್ತಕಂಗಳೆಂಬ ಮುಗಿಲ್ಗಳಂ ಬೆಸಸಿದಾಗಳವು ವಿಂಧ್ಯಾಚಳಕೂಟ ಕೋಟಿಗಳ ಕಿಟ್ಟುಬರ್ಪಂತ ಬಂದು ದೆಸೆಗಳೆಲ್ಲಮಂ ಮುಸುರಿ ಕಲ್ಕಲಿಸಿ ಕವಿದು
ಬಳಸಿ ಬಂದು ರಕ್ಷಣೆಮಾಡುತ್ತಿರುವ ಕೃಷ್ಣನ ಸುದರ್ಶನವೆಂಬ ಚಕ್ರದ ಆಕ್ರಮಣವನ್ನೂ ವಿಕ್ರಮಾರ್ಜುನನ ದಿವ್ಯಾಸ್ತಗಳ ಆಕ್ರಮಣವನ್ನೂ ಅಗ್ನಿದೇವನ ಜ್ವಾಲೆಗಳ ಸಮೂಹದ ಆಕ್ರಮಣವನ್ನೂ ಹೇಗೋ ವಂಚಿಸಿ ಬಲೆಯಿಂದ ತಪ್ಪಿಸಿಕೊಂಡ ಕೋಕಪಕ್ಷಿಯಂತೆ ಆ ತೋಟದ ಕಾವಲುಗಾರನೊಬ್ಬನು ಹೋಗಿ ದೇವೇಂದ್ರನನ್ನು ಕಂಡು - ೯೪. ಸ್ವಾಮಿ ವಿಜ್ಞಾಪನೆ, ಈ ದಿನ ಖಾಂಡವವನವನ್ನು ಅಗ್ನಿಯು ವ್ಯಾಪಿಸಿ ನಾನಾ ರೀತಿಯಾಗಿ ಸುಡಲು ನೋಡಲಾರದೆ ಎದುರಿಸಿದ ಸ್ವಾಮಿಯ ಕಾವಲುಗಾರರಾದ ದೇವ ಕಿನ್ನರ ಪನ್ನಗಾವಳಿಯನ್ನು ನಾಶವಾಗುವ ಹಾಗೆ ಹೊಡೆದು ಕೊಂದು ಪ್ರಭುವಾದ ನಿಮ್ಮನ್ನು ಏನು ಮಾಡಬಲ್ಲರವರು' ಎಂದು ಅಹಂಕಾರಮಗ್ನನಾಗಿ ನಿಂತಿದ್ದಾನೆ. ೯೫. ನೋಟಕ್ಕೆ ಎರಡು ರಥಗಳಿವೆ. ಅದರಲ್ಲಿ ಒಂದು ರಥವೇ ಯುದ್ದದಲ್ಲಿ ಅನೇಕರಥವಾಗಿರುವಂತೆ ಹರಿದು ಇನ್ನೂ ಕಣ್ಣಿನಲ್ಲಿ ತಿರುಗುತ್ತದೆ. ನಮ್ಮ ತೋಟವೆಷ್ಟಿತ್ತೋ ಅಷ್ಟೂ ಉರಿಯುತ್ತಿದೆ. ವಗ್ರ ಎಂದು ಹೇಳಲು ಶಚೀಪತಿಯಾದ ಇಂದ್ರನು ತನ್ನ ದಿವ್ಯಜ್ಞಾನದಿಂದ ನೋಡಿ ಅವರಿಬ್ಬರೂ ಶ್ರೀಕೃಷ್ಣಾರ್ಜುನರಾಗಿದ್ದುದನ್ನು ತಿಳಿದು ರೇಗಿ ಗರ್ಜಿಸಿ ಪ್ರಳಯಕಾಲದ ಮೋಡದಂತೆ ಗುಡುಗು ಸಿಡಿಲುಗಳ ಸಮೂಹ ವನ್ನೊಳಗೊಂಡ ದ್ರೋಣ, ಮಹಾದ್ರೋಣ, ಪುಷ್ಕಳಾವರ್ತ, ಸಂವರ್ತಕಗಳೆಂಬ ಮೋಡಗಳಿಗೆ ಅಗ್ನಿಯನ್ನು ನಾಶಪಡಿಸಲು ಆಜ್ಞೆಮಾಡಿದನು. ಅವು ವಿಂಧ್ಯಪರ್ವತದ ಕೋಟ್ಯಂತರ ಶಿಖರಗಳೇ ಕಿತ್ತೆದ್ದು ಬರುವ ಹಾಗೆ ಬಂದು ದಿಕ್ಕುಗಳೆಲ್ಲವನ್ನೂ ಮುಸುಕಿ
Page #299
--------------------------------------------------------------------------
________________
೨೯೪ / ಪಂಪಭಾರತಂ
ಚಂ
ಕವಿದುವು ಸಪ್ತಸಾಗರ ಜಲಂಗಳ ಲೋಕಮನೀಗಳೆಂಬಿನಂ ಕವಿದು ಮುಗಿಲ್ಗಳಲ್ಲಿ ಕರೆಯುತ್ತಿರ ಪಾವಕನುರ್ಕುಗೆಟ್ಟಿದಂ | ತುವೊ ತೊದಳಾಯ್ತು ದಾನಮನೆ ಮಾರುತಬಾಣದ ಮೇಘಮಾಲಿಕಾ ನಿವಹಮನೆಚ್ಚು ಕೂಡ ಶರಪಂಜರಮಂ ಪಡೆದಂ ಗುಣಾರ್ಣವಂ || ೯೬
ವ|| ಅಂತು ಪುಂಖಾನುಪುಂಖವಾಗಿ ಪಾಯ್ಕ ಶರಸಂಧಾನದೊಳೆಡೆವಳೆಯದಂತೆರಡುಂ ಕೆಯೊಳ್ ತೋಡುಂ ಬೀಡುಂ ಕಾಣಲಾಗದಂತಿಸೆ ತುಲುಗಿ ಕವಿವಂಬಿನ ಮಯ ಮಯಂ ಮಾಣಿಸೆ ದಿವ್ಯಾಸ್ತ್ರಂಗಳಿಂ ನೂಜು ಯೋಜನದಳವಿಯ ಖಾಂಡವವನಮೆಲ್ಲಮಂ ತಟ್ಟಿ ಮಡತಿ ಮಶಕ ಮಾತ್ರಮಪ್ಲೊಡಂ ಮಿಸುಕಲ್ ಛಿದ್ರಮಿಲ್ಲದಂತಾಗ ಶರಪಂಜರದೊಳ್ ಮುಚ್ಚಿ ಮುಸುಕಿ ದಾಗಳಭಿನವ ಜೀಮೂತವಾಹನನ ದಿವ್ಯಾಸ್ತ್ರದ ಕೋಳಿರಲಾಗಿದೆ ಜೀಮೂತಂಗಳೆಲ್ಲಂ ತೆರಳೋಡಿ ದೊಡಗ್ನಿದೇವನಾವಗೆಯ ಕಿರ್ಚಿನಂತೊಳಗೊಳಗಳುರ್ದು
ಕಂ।। ವನ ಖಗ ವನ ಮೃಗ ವನ ತರು
ವನಚರ ವನ ವನಜ ನಿವಹಮುಳ್ಳನಿತುಂ ಸೀ | ರನಿತುಮಣಮುಟ್ಟಿದುದಿಲ್ಲೆಂ
ಬಿನಮುಂಡಂ ದಹನನಳುರ್ದು ಖಾಂಡವವನಮಂ ||
ವ|| ಅಂತಾ ವನಗಹನಮೆಲ್ಲಂ ದಹನಮಯವಾದ ಪ್ರಸ್ತಾವದೊಳ್ ವಿಸ್ಮಯವಾಗ ಮಯನೆಂಬ ದಾನವವಿಶ್ವಕರ್ಮಂ ನೆಗೆದುರಿವುರಿಮಾಲೆಗಳು ಗದೆಯೊಳ್ ಬೀಸುತ್ತುಂ ಪೊಮಡ ಪೊಱಮಡಲೀಯದೆ
62
ಕತ್ತಲಿಸಿ ಕವಿದು-೯೬. ಲೋಕವನ್ನೆಲ್ಲ ಏಳುಸಾಗರಗಳ ನೀರುಗಳೇ ಮುಚ್ಚಿಕೊಂಡವೊ ಎನ್ನುವ ಹಾಗೆ ಮೋಡಗಳು ಮಳೆಯನ್ನು ಸುರಿಸಿದುವು. ಅಗ್ನಿಯು ಶಕ್ತಿಗುಂದಿ ಹೇಗೋ ದಾನವು ಸುಳ್ಳಾಯಿತು ಎನ್ನಲು ಅರ್ಜುನನು ವಾಯವ್ಯಾಸ್ತ್ರದಿಂದ ಮೇಘಮಾಲೆಗಳ ಸಮೂಹವನ್ನು ಹೊಡೆದೋಡಿಸಿ ತಕ್ಷಣವೇ ಒಂದು ಬಾಣದ ಪಂಜರವನ್ನು ನಿರ್ಮಿಸಿದನು. ವ|| ಪುಂಖಾನುಪುಂಖವಾಗಿ ತೋಡುಬೀಡುಗಳು ಕಾಣದಷ್ಟು ವೇಗದಿಂದ ಎರಡುಕೈಗಳಿಂದಲೂ ಏಕಪ್ರಕಾರವಾಗಿ ಪ್ರಯೋಗಮಾಡಿದ ಬಾಣಗಳಿಂದ ಮಳೆಯನ್ನು ಅರ್ಜುನನ್ನು ನಿಲ್ಲಿಸಿದನು. ದಿವ್ಯಾಸ್ತ್ರದಿಂದ ನೂರುಯೋಜನವಿಸ್ತಾರವುಳ್ಳ ಖಾಂಡವವನವೆಲ್ಲವನ್ನೂ ತಟ್ಟಿಯ ಹಾಗೆ ಹೆಣೆದು ಸೊಳ್ಳೆಯಂತಹ ಪ್ರಾಣಿಯೂ ಚಲಿಸಲು ರಂಧ್ರವಿಲ್ಲದ ಹಾಗೆ . ಪಂಜರದಲ್ಲಿ ಮುಚ್ಚಿ ಮುಸುಕಿದನು. ಅಭಿನವ ಜೀಮೂತವಾಹನನಾದ ಆಜು' : ದಿವ್ಯಾಸ್ತ್ರದ ಆಕ್ರಮಣವನ್ನು ಸಹಿಸಲಾರದೆ ಮೋಡಗಳೆಲ್ಲವೂ ಚಲಿಸಿ ಹೋದವು. ಅಗ್ನಿದೇವನು ಕುಂಬಾರರ ಆವಿಗೆಯ ಬೆಂಕಿ ಯಂತೆ ಒಳಗೊಳಗೇ ವ್ಯಾಪಿಸಿ ಸುಟ್ಟನು-೯೭. ಕಾಡಿನಪಕ್ಷಿ, ಮೃಗ, ಮರ, ಪ್ರಾಣಿ, ತಾವರೆಗಳ ಸಮೂಹದಲ್ಲಿ ಒಂದು ಸಣ್ಣ ಸೀರಿನಷ್ಟೂ ಉಳಿಯಲಿಲ್ಲವೆನ್ನುವ ಹಾಗೆ ಅಗ್ನಿಯು ವ್ಯಾಪಿಸಿ ಖಾಂಡವನವನ್ನೆಲ್ಲ ತಿಂದು ಬಿಟ್ಟನು. ವll ಹಾಗೆ ಆ ವನಪ್ರದೇಶವೆಲ್ಲ ಉರಿಗೆ ಅಧೀನವಾದ ಸಂದರ್ಭದಲ್ಲಿ ಆಶ್ಚರ್ಯವಾಗುವ ಹಾಗೆ ಮಯನೆಂಬ ರಾಕ್ಷಸ ಶಿಲ್ಪಿಯು ಮೇಲೆದ್ದು ಹಾರಿ ಚಿಮ್ಮುತ್ತಿದ್ದ ಜ್ವಾಲೆಗಳ ಸಮೂಹಗಳನ್ನು ತನ್ನ ಗದೆಯಿಂದ
Page #300
--------------------------------------------------------------------------
________________
|
೯೮
ಪಂಚಮಾಶ್ವಾಸಂ | ೨೯೫ ಕಂ| ಒಂದು ದೆಸೆಯೊಳ್ ತಗುಳ್ಳ ಮು
ಕುಂದನ ಕರಚಕ್ರಮೊಂದು ದಸೆಯೊಳ್ ನರನೆ | ಚೊಂದು ಶರವೊಂದು ದೆಸೆಯೊಳ್ ಕುಂದದೆ ದಹನಾರ್ಚಿ ಸುತ್ತಿ ಮುತ್ತುವ ಪದದೊಳ್ || ಶರಣನಗರಿಕೇಸರಿ ಯೆರಡು ಪದಾಂಬುಜಮುಮಾಗಳೆಂಬುದ ಹರಿ ಚಕ್ರ ಕೊಳ್ಳದೆ ನರ ಶರಮುರ್ಚದ ದಹನಶಿಖೆಗಳಳುರದ ಅವನಂ 1 -
* ೯೯ ವ|| ಆಗಳ್ ಮಯಂ ವಿಸ್ಮಯಂಬಟ್ಟು ಪೊಡವಟ್ಟು ಪೋದನಾಗಳಾ ವನಾಂತರಾಳದೊಳಿರ್ಪ ತಕ್ಷಕನ ಮಗನಪ್ಪಶ್ವಸೇನನೆಂಬ ಪನ್ನಗಂ ತನ್ನ ತಾಯಂ ತನ್ನ ಬಾಲಮಂ ಕರ್ಚಲ್ಕು ದಹನಾರ್ಚಿಗಳಿಂ ಬರ್ದುಂಕಿ ನೆಗೆದು ಪಾಳುವಾಗಳದನರಂಡಮಪ್ಪಿನಮಾಖಂಡಳ ತನಯನಿಸುವುದುಂ ತನ್ನ ಬಾಲಂಬೆರಸುರಿಯೊಳ್ ಬಿಟ್ಟು ಮಿಡುಮಿಡುಮಿಡುಕುತಿರ್ದ ಜನನಿಯಂ ಕಂಡು ಪಾವುಗಳುಳ್ಳ ಪಗೆಯಂ ಮಳಯವೆಂಬುದು ನನ್ನಿಮಾಡಿಕಂ ಪಗೆ ಸಾಯುವುದುಂ ಕೊಲ್ಲೆಂ
ಪಗೆ ಸಾಟಿದ ನಿನ್ನನಾರ ಮಣಿಯಂ ಪೊಕ್ಕಂ | ಪಗೆಯಂ ನೆಂಪನೆ ನೆಪುವ ಬಗೆಯೋಳೆ ಪೊಕ್ಕಂ ಕಡಂಗಿ ಕರ್ಣನ ದೊಣೆಯಂ 11.
೧೦೦
ಬೀಸುತ್ತ ಹೊರಗೆ ಬಂದನು. ಅದಕ್ಕೆ ಅವಕಾಶಕೊಡದೆ-೯೮. ಒಂದು ಕಡೆ ಅಟ್ಟಿಬರುವ ಕೃಷ್ಣನ ಕಯ್ಯ ಸುದರ್ಶನಚಕ್ರವೂ ಮತ್ತೊಂದು ಕಡೆ ಅರ್ಜುನನು ಹೂಡಿದ ಬಾಣವೂ ಬೇರೊಂದೆಡೆಯಲ್ಲಿ ಸ್ವಲ್ಪವೂ ಕಡಿಮೆಯಾಗದ ಉರಿಯ ಜ್ವಾಲೆಯೂ ಸುತ್ತಿ ಮುತ್ತಿದುವು. ೯೯. ತಕ್ಷಣವೇ ಮಯನು 'ಅರಿಕೇಸರಿಯ ಎರಡು ಪಾದಕಮಲಗಳ ನನಗೆ ಶರಣು ಎಂದನು. ಒಡನೆಯೇ ಕೃಷ್ಣನ ಸುದರ್ಶನವು ಪ್ರಯೋಗವಾಗದೆ ನಿಂತಿತು. ಅರ್ಜುನನ ಬಾಣಗಳು ಭೇದಿಸಲಿಲ್ಲ. ಅಗ್ನಿಜ್ವಾಲೆಗಳು ಸುಡಲಿಲ್ಲ. ವ|| ಮಯನು ಆಶ್ಚರ್ಯಪಟ್ಟು ನಮಸ್ಕಾರ ಮಾಡಿ ಹೊರಟು ಹೋದನು. ಆಗ ಆ ಕಾಡಿನ ಮಧ್ಯದಲ್ಲಿದ್ದ ತಕ್ಷಕನ ಮಗನಾದ ಅಶ್ವಸೇನನೆಂಬ ಹಾವು ತನ್ನ ತಾಯಿಯನ್ನು ತನ್ನ ಬಾಲವನ್ನು ಕಚ್ಚಿಕೊಳ್ಳುವಂತೆ ಹೇಳಿ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ನೆಗೆದು ಹಾರುವಾಗ ಅದನ್ನು ಇಂದ್ರನಂದನನಾದ ಅರ್ಜುನನು ಎರಡುತುಂಡಾಗುವ ಹಾಗೆ ಹೊಡೆದನು. ಬಾಲದೊಡನೆ ಬೆಂಕಿಯಲ್ಲಿ ಬಿದ್ದು ಮಿಡುಮಿಡುಕುತ್ತಿದ್ದ ತನ್ನ ತಾಯಿಯನ್ನು ಕಂಡು ಕೆರಳಿತು. ಹಾವುಗಳು ತಮ್ಮಲ್ಲಿರುವ ದ್ವೇಷವನ್ನು ಮರೆಯುವುದಿಲ್ಲ ಎಂಬುದನ್ನು ಸತ್ಯವನ್ನಾಗಿ ಮಾಡುವಂತೆ ೧೦೦. ತನ್ನ ಶತ್ರುತ್ವವನ್ನು ಸಾರಿ ಹೇಳಲು ಅರ್ಜುನನು ಅದನ್ನು ಕುರಿತು 'ದ್ವೇಷವನ್ನು ಸಾರಿದ ನಿನ್ನನ್ನು ಕೊಲ್ಲುವುದಿಲ್ಲ. ಯಾರ ಆಶ್ರಯವನ್ನಾದರೂ ಪಡೆದು ದ್ವೇಷವನ್ನು ತೀರಿಸು' ಎಂದನು. ಅದನ್ನು ಪೂರೈಸುವ
Page #301
--------------------------------------------------------------------------
________________
೨೯೬ / ಪಂಪಭಾರತಂ
ವ|| ಅಂತಶ್ವಸೇನನರ್ಧಾವಲಿಕಮೆಂಬಮೋಘಾಸ್ತ್ರವಾಗಿ ಕರ್ಣನ ದೊಣೆಯೊಳಿರ್ದನಿತ್ತ ಖಾಂಡವವನದೊಳಗೆ ಮಂದಪಾಲನೆಂಬ ಮುನಿಗನೊಂದು ಲಾವಗೆಗಂ ಪುಟ್ಟದ ನಾಲ್ಕುಂ ಲಾವಗೆಗಳಗ್ನಿಸೂಕ್ತಂಗಳನೋದುತ್ತುಮದಿರದಿದಿರಂ ಬರೆ ಮೆಚ್ಚಿ ಬರವನಗ್ನಿದೇವಂ ಬೇಡಿಕೊಳ್ಳಿ ಮಂದೊಡಮನ್ವಯಕ್ಕೆ ನೀನ್ ತಣ್ಣಿದೆಯಾಗೆಂದು ಬೇಡುವುದುಂ ತದಸ್ತುವೆಂದನಿತ್ತಲಿಂದಂ ತನ್ನ ಬಲಮೆಲ್ಲಮಳ್ಳಿ ಮಳ್ಳಿದಂತಾದುದೆಂಬುದಂ ಕೇಳು
ಮಗನನಗೆಂದು ಪೇ ಪಿಡಿದು ಕಟ್ಟದ ಮಾನೆ ಪಾರ್ಥನಂ ಧರಿ ತಿಗೆ ಗುರುವೆಂದು ವಜ್ರದೊಳುರುಳದೆ ಮಾನ ಚಕ್ರಿಯಂ ಕರಂ 1 ಬಗೆಯದೆ ಗೊಡ್ಡಮಾಡಿದರ್ಗ ತಕ್ಕುದನೀಗಳ ಮಾನೆಂದು ತೊ ಟ್ಟಿಗೆ ಪೋಮಟ್ಟನೇತಿ ನಿಜವಾಹನಮಂ ದಿವದಿಂ ಸುರಾಧಿಪಂ || ೧೦೧ ವ|| ಅಂತು ದೇವನಿಕಾಯಂ ಬೆರಸು ಯುದ್ಧಸನ್ನದ್ಧನಾಗಿ ಪರಸೈನ್ಯ ಭೈರವನೊಳಿತಿವೆ ನೆಂಬ ಪಟುವಗೆಯೊಳ್ ಭೈರವಂಬಾಯ್ಕಂತೆ ಬಂದು ನಿಂದ ಪುರಂದರನಲ್ಲಿಗೆ ಸರಸಿಜಸಂಭವಂ ಬಂದು ಮಾರ್ಕೊಂಡು
ಚoll
ಚoll ಬನಮನೆ ಕಾಯಲೆಂದಿರವೆಯತ್ತೊಡೆ ಮುನ್ನಮೆ ಪೋದುದಂದು ಪಾ ರ್ಥನೊಳೆನಗೇವನೆಂಬ ಬಗೆಯುಡೆ ನಿನ್ನಯ ಪುತ್ರನಚ್ಯುತಂ | ಗಿನಿಸರ್ದೆ ನೋವೆಯನ್ನೊಡದು ಕೂಡದು ಮೂವರೊಳೊರ್ವನಮ್ಮ ಮಾ ತಿನಿತೆ ಗುಣಾರ್ಣವಂಗೆ ಕುಡು ಗೆಲ್ಲಮನಿಂತಿದೆ ಕಜ್ಜದುಜ್ಜುಗಂ ||
೧೦೨
ಮನಸ್ಸಿನಿಂದ ಕೋಪಿಸಿಕೊಂಡು ಕರ್ಣನ ಬತ್ತಳಿಕೆಯನ್ನು ಪ್ರವೇಶಿಸಿದನು. ವ|| ಹಾಗೆ ಅಶ್ವಸೇನನು ಅರ್ಧಾವಲೀಕವೆಂಬ ಅಮೋಘವಾದ ಬಾಣವಾಗಿ ಕರ್ಣನ ಬತ್ತಳಿಕೆಯಲ್ಲಿದ್ದನು. ಈ ಕಡೆ ಖಾಂಡವವನದಲ್ಲಿ ಮದನಪಾಲನೆಂಬ ಋಷಿಗೂ ಒಂದು ಲಾವುಕಪಕ್ಷಿಗೂ ಹುಟ್ಟಿದ ನಾಲ್ಕು ಲಾವುಕಹಕ್ಕಿಗಳು ಅಗ್ನಿಸೂತ್ರಮಂತ್ರಗಳನ್ನು ಜಪಿಸುತ್ತ ಬೆಂಕಿಗೆ ಹೆದರದೆ ಎದುರಾಗಿ ಬರಲು ಅವುಗಳ ಬರುವಿಕೆಗೆ ಸಂತೋಷಪಟ್ಟು ಅಗ್ನಿದೇವನು (ನಿಮಗೆ ಬೇಕಾದ) ವರವನ್ನು ಕೇಳಿಕೊಳ್ಳಿ ಎನ್ನಲು 'ನಮ್ಮ ವಂಶಕ್ಕೆ ನೀನು ಹಿತವಂತನಾಗು' ಎಂದು ಬೇಡಿಕೊಂಡವು. ಅಗ್ನಿಯು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟನು. ಈಕಡೆ ಇಂದ್ರನು ತನ್ನ ಬಲವೆಲ್ಲ ನಾಶವಾಗಿ ಸಾರಿಸಿದಂತಾಯಿತೆಂಬುದನ್ನು ಕೇಳಿದನು. ೧೦೧. 'ನನ್ನ ಮಗನೆಂದು ಅರ್ಜುನನನ್ನು ಹಿಡಿದು ಕಟ್ಟದೆ ಬಿಡುತ್ತೇನೆಯೇ? ಲೋಕಗುರುವೆಂದು ಕೃಷ್ಣನನ್ನು ವಜ್ರಾಯುಧದಿಂದ ಉರುಳಿಸದೆ ಬಿಡುತ್ತೇನೆಯೇ? ನನ್ನನ್ನು ಸ್ವಲ್ಪವೂ ಲಕ್ಷಿಸದೆ ಚೇಷ್ಟೆ ಮಾಡಿದವರಿಗೆ ಯೋಗ್ಯವಾದುದನ್ನು ಈಗಲೇ ಮಾಡುತ್ತೇನೆ' ಎಂದು ಇದ್ದಕ್ಕಿದ್ದ ಹಾಗೆ ದೇವೇಂದ್ರನು ತನ್ನ ವಾಹನವಾದ ಐರಾವತವನ್ನು ಹತ್ತಿ ಸ್ವರ್ಗದಿಂದ ಹೊರಟನು. ವ| ದೇವತೆಗಳ ಸಮೂಹವನ್ನು ಕೂಡಿಕೊಂಡು ಯುದ್ಧಕ್ಕೆ ಸಿದ್ಧನಾಗಿ ಪರಸೈನ್ಯಭೈರವನಾದ ಅರ್ಜುನನೊಡನೆ ಯುದ್ಧ ಮಾಡುತ್ತೇನೆಂಬ ಕೆಟ್ಟಮನಸ್ಸಿನಿಂದ ಭೈರವನು ಹಾಯ್ದುನುಗ್ಗುವ ಹಾಗೆ ಬಂದು ನಿಂತ ಇಂದ್ರನ ಹತ್ತಿರಕ್ಕೆ ಬ್ರಹ್ಮನು ಬಂದು ಅವನನ್ನು ತಡೆದು ೧೦೨. “ನೀನು ವನವನ್ನು ರಕ್ಷಿಸುವುದಕ್ಕಾಗಿ ಯುದ್ಧಮಾಡುವುದಾದರೆ ಅದು ಮೊದಲೇ ನಾಶವಾಗಿದೆ. ಪಾರ್ಥನಲ್ಲಿ ನಿನಗೆ ದ್ವೇಷವಿದೆಯೆನ್ನುವುದಾದರೆ
Page #302
--------------------------------------------------------------------------
________________
ಪಂಚಮಾಶ್ವಾಸಂ | ೨೯೭ ವlt ಎಂದು ಕಮಲಾಸನನಾಸೆದೋಲೆ ನುಡಿದುಳುದನೆ ನುಡಿದೊಡಂತೆಗೆಯ್ದನೆಂದುಚಂ|| ಸುರಿವರಲೊಂದು ಬೆಳ್ಳರಿಯದಾತನೂಭವನುತ್ತಮಾಂಗದೊಳ್
ದೊರೆಕೊಳೆ ನಿಲ್ಲದಲ್ಲಿ ಕುಸುಮಂ ಕೆಲವಲ್ಲುಗೆ ತನ್ನ ರತ್ನವಿ || ಸುರಿತ ಕಿರೀಟಮಂ ಕವಿದು ತಾನೆ ನರಂಗೆ ಕಿರೀಟ ನಾಮಮಂ
ಸರಸದಿನಾಗಳುಚ್ಚರಿಸಿ ಸಾಹಸಮಂ ಪೊಗಲ್ಲಿಂ ಸುರಾಧಿಪಂ || ೧೦೩
ವ|| ಅಂತು ಪೊಗಟ್ಟು ಖಾಂಡವವನದಹನದೊಳಾದ ಪೊಗೆಯೊಳಮಲ್ಲಿಯ ಮಹಾನಾಗಂಗಳ ವಿಷಂಬೆರಸು ಸುಯ್ ಸುಯ್ಯ ಪೊಗೆಯೊಳಂ ಕಜಂಗಿ ಕಟ್ಟಿದ ಮೆಯ್ಯುಮಂ ಪ್ರಚಂಡ ಗಾಂಡೀವ ವ್ಯಾಘಾತದೊಳಿಂದ್ರನೀಲಂಗಳನಡಸಿದಂತಪ್ಪ ಮುಂಗೆಯುಮಂ ಕಂಡು ಕೃಷ್ಣನೆಂಬ ಹೆಸರನಿಟ್ಟನಾಗ ಬ್ರಹ್ಮಂ ಬ್ರಹ್ಮಾಯುವಕೊಂದು ಪರಸಿದನೀಶ್ವರಂ ನೀನುದಾರಮಹೇಶ್ವರ ನಪ್ಪುದಂ ನಿನಗಮೆನಗಮೇತಳಂ ವಿಕಲ್ಲಮುಂ ವಿಚ್ಚಿನ್ನಮುಮಿಲ್ಲೆಂದನಂತು ಮೂದೇವರುಂ ಪರಸಿ ನಿಜನಿವಾಸಂಗಕ್ಕೆ ಪೊದರಾಗಳ್ಚಂ11 ಅನಿತಿನಿತೆನ್ನದಾಂತ ಸುರ ಪನ್ನಗ ಕಿನ್ನರ ಸೈನ್ಯಮಲ್ಲಮಂ
ಬಿನ ಮೊನೆಯೊಳ್ ಪಡಲ್ವಡೆ ಲತಾಭವನಂ ಕೃತಕಾಚಳಂಗಳಂ | ಬಿನಿತುಮವಟ್ಟಿ ತಬ್ ನುಡಿಯಂ ನುಡಿದಂತೆ ನೆಗಟ್ಟಲಗ್ನಿದೇ ವನನಮರೇಂದ್ರನಂದನಮನೂಡಿದನಂದಮರೇಂದ್ರನಂದನಂ || ೧೦೪
ಅವನು ನಿನ್ನ ಮಗ; ಕೃಷ್ಣನ ವಿಷಯದಲ್ಲಿ ಹೃದಯವೇದನೆ (
ಕೋಪ) ಯಿರುವುದಾದರೆ ಅದು ಕೂಡದು. ಅವನು ತ್ರಿಮೂರ್ತಿಗಳಲ್ಲೊಬ್ಬ, ನಮ್ಮಮಾತಿಷ್ಟೆ : ಗುಣಾರ್ಣವನಾದ ಅರ್ಜುನನಿಗೆ ಜಯವನ್ನು ಕೊಡು. ಈಗ ಮಾಡಬೇಕಾದ ಕಾರ್ಯವಿಷ್ಟೆ.” ೧೦೩. ಎಂದು ಬ್ರಹ್ಮನು ಇಂದ್ರನಿಗೆ ಆಶೆದೋರಿಸಿ ಮಾತನಾಡಿ ವಾಸ್ತವಾಂಶವನ್ನು ತಿಳಿಸಲು (ಇಂದ್ರನು) ಹಾಗೆಯೇ ಮಾಡುತ್ತೇನೆಂದು ತನ್ನ ಮಗನಾದ ಅರ್ಜುನನ ತಲೆಯ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಹೂಗಳು ಆ ಸ್ಥಳದಲ್ಲಿಯೇ ನಿಲ್ಲದೆ ಪಕ್ಕದಲ್ಲಿ ಬೀಳುತ್ತಿರಲು ಇಂದ್ರನು ತಾನೇ ರತ್ನಕಾಂತಿಯಿಂದ ಕೂಡಿದ ತನ್ನ ಕಿರೀಟವನ್ನು ಅರ್ಜುನನ ತಲೆಯ ಮೇಲಿಟ್ಟು ಅರ್ಜುನನಿಗೆ ಕಿರೀಟಿ' ಎಂಬ ಹೆಸರನ್ನು ಸರಸವಾಗಿ ಇಟ್ಟು ಅವನ ಸಾಹಸವನ್ನು ಹೊಗಳಿದನು. ವ|| ಖಾಂಡವವನದಹನದಿಂದುಂಟಾದ ಹೊಗೆಯಿಂದಲೂ ಅಲ್ಲಿಯ ಮಹಾಸರ್ಪಗಳ ವಿಷಮಿಶ್ರವಾಗಿ ಉಸಿರಾಡುವ ಗಾಳಿಯಿಂದಲೂ ಕಪ್ಪುಕಪ್ಪಾದ ಶರೀರವನ್ನೂ ಮಹಾಶಕ್ತಿಯುಕ್ತವಾದ ಗಾಂಡೀವದ ಪೆಟ್ಟಿನಿಂದ ಇಂದ್ರನೀಲರತ್ನಗಳು ಸೇರಿಕೊಂಡ ಹಾಗಿರುವ ಮುಂಗಯ್ಯನ್ನೂ ಕಂಡು ಇಂದ್ರನು ಅರ್ಜುನನಿಗೆ ಕೃಷ್ಣನೆಂಬ ಹೆಸರಿಟ್ಟನು. ಬ್ರಹ್ಮನು ನಿನಗೆ ದೀರ್ಘಾಯುವಾಗಲಿ ಎಂದು ಹರಸಿದನು. ಈಶ್ವರನು ನೀನು ಉದಾರಮಹೇಶ್ವರನಾಗಿರುವುದರಿಂದ ನಿನಗೂ ನನಗೂ ಯಾವುದರಲ್ಲಿಯೂ ವ್ಯತ್ಯಾಸವೂ ಭೇದವೂ ಇಲ್ಲ ಎಂದನು. ಹಾಗೆ ತ್ರಿಮೂರ್ತಿಗಳೂ ಅರ್ಜುನನನ್ನು ಹರಸಿ ತಮ್ಮ ವಾಸಸ್ಥಳಗಳಿಗೆ ಹೋದರು. ೧೦೪. ಅಷ್ಟಿಷ್ಟೆನ್ನದೆ ಪ್ರತಿಭಟಿಸಿದ ದೇವತೆಗಳ ನಾಗರರ ಕಿನ್ನರರ ಸೈನ್ಯವೆಲ್ಲವೂ ತನ್ನ ಬಾಣದ ಹೊಡೆತಕ್ಕೆ ಸಿಕ್ಕಿ ಚೆಲ್ಲಾಪಿಲ್ಲಿಯಾಗಿ ಕೆಳಗುರುಳಲು ಬಳ್ಳಿವನೆ ಕೃತಕಪರ್ವತ ಎಂಬಿವೆಲ್ಲ
Page #303
--------------------------------------------------------------------------
________________
೨೯೮ / ಪಂಪಭಾರತ
* ವ|| ಆಗಳ್ ಸ್ವಾಹಾಂಗನಾನಾಥಂ ಸಂಪೂರ್ಣ ಮನೋರಥನಾಗಿ ಖಟ್ವಾಂಗನೆಂಬರಸನ ಯಜ್ಞದೊಳಾತನ ತಂದ ನೃತಸಮುದ್ರಮಂ ಕುಡಿದೊಡಾದ ರೋಗಮಿಂದು ಪೋದುದೆಂದು ನೀರೋಗನಾಗಿ ಮಹಾನುರಾಗಂಬೆರಸು ಪರಸಿ ಪೋದನಾಗಳಿರ್ವರುಮಿಂದ್ರಪ್ರಸ್ಥಕ್ಕೆಯ್ದವಂದು
ಚಂll
ಇದಿರ್ವರ ಧರ್ಮಜಂ ಬೆರಸು ತನ್ನೊಡವುಟ್ಟಿದರೆಯ್ದೆ ತಳು ಕ ಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ ಸೂಸೆ ಸೇಸೆಯಂ | ಸುದತಿಯರಿಕ್ಕೆ ಚಾಮರಮನಂಗನೆಯರ್ ನಿಜಕೀರ್ತಿ ಲೋಕಮಂ ಪುದಿದಿರೆ ಪೊಕ್ಕನಂದು ನಿಜಮಂದಿರಮಂ ಪರಸೈನ್ಯಬೈರವಂ |
೧೦೫
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ಪಂಚಮಾಶ್ವಾಸಂ
ನಾಶವಾಗಿ ತಗ್ಗಿದರೂ ತಾನಾಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅಗ್ನಿದೇವನಿಗೆ ಇಂದ್ರನ ಉದ್ಯಾನವಾದ ಖಾಂಡವವನವನ್ನು ಅರ್ಜುನನು ಉಣಿಸಿದನು. ವ|| ಆಗ ಸ್ವಾಹಾದೇವಿಯ ಪತಿಯಾದ ಅಗ್ನಿಯು ಇಷ್ಟಾರ್ಥವನ್ನು ಪೂರ್ಣವಾಗಿ ಪಡೆದವನಾಗಿ ಖಟ್ವಾಂಗನೆಂಬ ರಾಜನ ಯಜ್ಞದಲ್ಲಿ ಅವನು ತಂದಿದ್ದ ತುಪ್ಪದ ಸಮುದ್ರವನ್ನು ಕುಡಿದುದರಿಂದ ಉಂಟಾದ ರೋಗವು ಇಂದು ಪರಿಹಾರವಾಯಿತು ಎಂದು ರೋಗರಹಿತನಾಗಿ ವಿಶೇಷ ಸಂತೋಷದಿಂದ ಕೂಡಿ ಆಶೀರ್ವದಿಸಿ ಹೋದನು. ಆಗ ಕೃಷ್ಣಾರ್ಜುನರಿಬ್ಬರೂ ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಸೇರಿದರು. ೧೦೫. ಆಗ ತನ್ನ ಒಡಹುಟ್ಟಿದವರು ಧರ್ಮರಾಯನೊಡಗೂಡಿ ಇದಿರಾಗಿ ಬರಲು ಕಟ್ಟಿದ ತೋರಣವೂ ಇಟ್ಟ ರಂಗವಲ್ಲಿಯೂ ತನ್ನ ಕೀರ್ತಿಯ ದಾಂಗುಡಿಗಳಂತಿರಲು ಸ್ತ್ರೀಯರು ಅಕ್ಷತೆಗಳನ್ನು ಚೆಲ್ಲುತ್ತಿರಲು ಅಂಗನೆಯರು ಚಾಮರವನ್ನು ಬೀಸುತ್ತಿರಲು ತನ್ನ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸುತ್ತಿರಲು ಅಂದು ಪರಸೈನ್ಯಭೈರವನಾದ ಅರ್ಜುನನು ತನ್ನ ಅರಮನೆಯನ್ನು ಪ್ರವೇಶಿಸಿದನು.
ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದ ದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ
ಅಯ್ದನೆಯ ಆಶ್ವಾಸ,
Page #304
--------------------------------------------------------------------------
________________
ಷಷ್ಠಾಶ್ವಾಸಂ , ಕಂ ಶ್ರೀಗೆ ಫಳಂ ಚಾಗಂ ವಾಕ್
ಶ್ರೀಗೆ ಫಳಂ ಸರ್ವಶಾಸ್ತ್ರ ಪರಿಣತಿ ವೀರ | ಶ್ರೀಗೆ ಫಳಮಾಯವೆಂದಿಂ
ತಾಗಳುಮಟೆದೆಸಗಿದಂ ಪರಾಕ್ರಮದವಳಂ | ವ|| ಅಂತು ಖಾಂಡವವನದಹನಪ್ರಪಂಚದಿಂ ಬಲೆಯಮರಾತಿವನದಹನ ತೀವ್ರ ಪ್ರತಾಪ ಗಹನಕ್ಕೆ ಮುನ್ನವಳ್ಳಿ ಪರಮಂಡಳಿಕರಿತ್ತು ತೆತ್ತುಂ ಬೆಸಕೆಯ್ಕೆ ಕೆಲವು ದಿವಸಮಿರ್ದು ನಾರಾಯಣನಂ ದ್ವಾರಾವತಿಗೆ ಕಳಿಪಿಉll ತುಂಗ ತರಂಗ ಭಂಗುರ ಪಯೋಧಿಪರೀತಮಹಾಮಹೀತಳಾ
ಲಿಂಗಿತ ಕೀರ್ತಿ ಕೇಳು ಬಡ ಪಾರ್ವನ ಪುಯಲನೊರ್ಮ ಕೇಳನಾ | ವಂಗಮಗುರ್ವು ಪರ್ವ ಜವನೋಳ್ ಸೆರಗಿಲದ ಪೋಗಿ ತಾಗಿ ತಂ
ದಂ ಗಡ ವಿಕ್ರಮಾರ್ಜುನನೆ ಪಾರ್ವರ ಒಳ್ಳೆಯ ಪೋದ ಜೀವಮಂ || ೨
ವ|| ಎಂದು ಲೋಕಮೆಲ್ಲಂ ಪೊಗಳ ವಿದ್ವಿಷ್ಟವಿದ್ರಾವಣನುಂ ಭೀಮ ಯುಧಿಷ್ಠಿರ ನಕುಲ ಸಹದೇವರುಮಯ್ಯರುಂಬೆರಸೊಂದು ದಿವಸಮೋಲಗಂಗೊಟ್ಟರೆ ಧರ್ಮಪುತ್ರನಲ್ಲಿಗೆ ಮಯಂ ಪಂಚರತ್ನ ಹಿರಣ್ಮಯಂ ಚತುರಶ್ರಂ ಮಜುಂ ಯೋಜನದಳವಿಯ
- ೧, ಐಶ್ವರ್ಯಕ್ಕೆ ಪ್ರಯೋಜನತ್ಯಾಗ (ದಾನ), ವಾಕ್ಚಾತುರ್ಯಕ್ಕೆ ಫಲ ಸಕಲಶಾಸ್ತ್ರಗಳಲ್ಲಿ ಪಾಂಡಿತ್ಯ, ಪೌರುಷಕ್ಕೆ ಪ್ರಯೋಜನ ಔಚಿತ್ಯ ಎಂಬಿವನ್ನು ಯಾವಾಗಲೂ ತಿಳಿದುಕೊಂಡು ಪರಾಕ್ರಮಧವಳನಾದ ಅರ್ಜುನನು (ನಡೆದು ಕೊಂಡನು). ವ|| ಖಾಂಡವವನವನ್ನು ಸುಟ್ಟನಂತರ ಶತ್ರುಗಳೆಂಬ ಭಯಂಕರವಾದ ಕಾಡನ್ನು ಸುಡುವ ಪೌರುಷಪ್ರದರ್ಶನಕ್ಕೆ ಮೊದಲೇ ಶತ್ರುಗಳಾದ ಮಂಡಲಾಧಿಪರು ಧನಕನಕಗಳನ್ನು ಕೊಟ್ಟು ಕಪ್ಪಕಾಣಿಕೆಗಳನ್ನು ತೆತ್ತು ಆಜ್ಞಾಧಾರಕವಾಗಿರಲು ಕೆಲವು ದಿವಸಗಳ ಮೇಲೆ ನಾರಾಯಣನನ್ನು ದ್ವಾರಕಾಪಟ್ಟಣಕ್ಕೆ ಕಳುಹಿಸಿಕೊಟ್ಟರು. ೨. ಎತ್ತರವಾದ ಅಲೆಗಳನ್ನುಳ್ಳ ಚಂಚಲವಾದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಅಖಂಡಭೂಮಂಡಲವನ್ನು ಆಕ್ರಮಿಸಿರುವ ಕೀರ್ತಿಯನ್ನು ಅರ್ಜುನನು ಭಯವುಂಟಾಗುವ ಹಾಗೆ ಆಕ್ರಂದನಮಾಡುತ್ತಿದ್ದ ಬಡಬ್ರಾಹ್ಮಣನಗೋಳನ್ನು ಹಠಾತ್ತಾಗಿ ಕೇಳಿ ಸಹಾಯವಿಲ್ಲದೆಯೇ ಹೋಗಿ ಯಮನನ್ನು ಪ್ರತಿಭಟಿಸಿ ಬ್ರಾಹ್ಮಣ ಬಾಲಕನ ಹೋದ ಜೀವವನ್ನು ಪುನಃ ತಂದನು. ವ|| ಅರ್ಜುನನ ಪರಾಕ್ರಮವನ್ನು ಲೋಕವೆಲ್ಲವೂ ಹೊಗಳಿತು. ವಿದ್ವಿಷ್ಟವಿದ್ರಾವಣನಾದ ಅರ್ಜುನನು ಭೀಮ ಯುಧಿಷ್ಠಿರ ನಕುಲ ಸಹದೇವರೊಡಗೂಡಿ ಅಯ್ದು ಜನವೂ ಸಭೆಯನ್ನು ನಡೆಸುತ್ತಿರಲು ಒಂದು ದಿವಸ ಧರ್ಮರಾಜನಲ್ಲಿಗೆ ಮಯನು (ದೇವಶಿಲ್ಪಿ) ಪಂಚರತ್ನಗಳಿಂದಲೂ ಚಿನ್ನದಿಂದಲೂ ರಚಿಸಿದ ಮರುಯೋಜನದಳತೆಯ ಚಚೌಕವಾದ
Page #305
--------------------------------------------------------------------------
________________
೩೦೦) ಪಂಪಭಾರತಂ ಸಭಾಮಂಟಪಮನೊಂದುಲಕ್ಕ ರಕ್ಕಸವಡೆಯಿಂ ಪೊತ್ತು ತರಿಸಿ ತನ್ನ ನಿಯಂ ಬಲೆಯಂ ಮಳೆಯಲೆಂದು ದೇವಲೋಕದಿಂ ತಂದು ಮುಂದಿಟ್ಟುಮl. ಇದeಂದಂ ಬಿಸವಂದನೊಂದು ತೆಂನಿಂತೆಂದೊಡಾರಮ್ಮೊಡಿಂ
ತಿದಳೊಳ್ ದಿವ್ಯ ಸರೋವರಂಗಳಿದಕ್ಲ್ ಕಲ್ಲಾವನೀಜಂಗಳಂ | ತಿದeಳೊಳ್ ನಾಟಕಶಾಲೆ ರಯ್ಯಮಿದುಳೊಳ್ ದೇವಾಪ್ಟರೋನೃತ್ಯವಿಂ ತಿದಂತಾಗಿದೆ ನೋಡಾರುಮಳೆಯ ಮಾಡಲ್ ಸಭಾಗೃಹಮಂ || ೩
ವ|| ಎಂದ ಪ್ರಾಣಮಂಬುದು ವಿಕ್ರಮಾರ್ಜುನನ ದಯೆಗೆಯ್ದು ಪ್ರಾಣವನ್ನ ಕೊಟ್ಟುದರ್ಕೆ ಮಾರ್ಕೊಳ್ಳದೆ ಕೊಳ್ಳಿಮೆಂದೊಡಂತೆಗೆಯೌಮೆಂದು ನಿಶ್ಚಯಿಸೆ ಧರ್ಮಪುತ್ರಂಗೋಲ ಗಂಗುಡಲಕ್ಕುದೆಂದದಂ ಧರ್ಮಪುತ್ರಂಗೆ ಕೊಟ್ಟು ಪರಾಕ್ರಮದವಳಂಗೆ ಶಶಾಂಕವಿಶದಯಶಮ ತೆರಳುರುಳಿಗೊಂಡಂತಿರ್ದ ಶಂಖಮಂ ಬಾಸಣಿಗೆಗಳೆದುಕಂ! ಇದನಿಂದ್ರನಟ್ಟಿದಂ ನಿನ
ಗಿದ ಪೆಸರ್ ದೇವದತ್ತಮೆಂಬುದು ನಿನಗ | ಭ್ಯುದಯಕರಂ ಶಂಖಂ ರಿಪು
ಹೃದಯಕವಾಟಪುಟವಿಘಟನಂ ನೋಡರಿಗಾ || ವ|| ಎಂದದಂ ವಿಕ್ರಮಾರ್ಜುನಂಗೆ ಕೊಟ್ಟು ಮುನ್ನಂ ಷೋಡಶರಾಜರೊಳಗೆ ಮಾಂಧಾತನೆಂಬಂ ವಿದ್ಯಾಧರನಾತನ ಗದೆಯಿದು ಬಚಿಯಮಾತನಂ ಲವಣನೆಂಬಸುರಂ ಕಾದಿ
ಸಭಾಮಂಟಪವನ್ನು ಲಕ್ಷರಾಕ್ಷಸಪಡೆಯಿಂದ ಹೊರಿಸಿಕೊಂಡು ಬಂದು ತನ್ನ ಸದ್ಗುಣವನ್ನೂ ಪರಾಕ್ರಮವನ್ನೂ ಪ್ರದರ್ಶಿಸುವುದಕ್ಕಾಗಿ ದೇವಲೋಕದಿಂದ ತಂದು ಅವರ ಮುಂದಿಟ್ಟನು. ೩. ಇದರ ಸೌಂದರ್ಯವು ಆಶ್ಚರ್ಯಕರವಾದುದು. ಒಂದು ರೀತಿಯದಲ್ಲ: ಇದರಲ್ಲಿ ದಿವ್ಯಸರೋವರಗಳಿವೆ, ಕಲ್ಪವೃಕ್ಷಗಳಿವೆ, ರಮ್ಯವಾದ ನಾಟಕಶಾಲೆಯಿದೆ, ದೇವಾಪ್ಸರೆಯರ ನೃತ್ಯವಿದೆ. ವಿಚಾರಮಾಡಿ ನೋಡುವುದಾದರೆ ಇದರಂತಹ ಸಭಾಮಂಟಪವನ್ನು ರಚಿಸಲು ಯಾರೂ ಸಮರ್ಥರಲ್ಲ. ವನನ್ನ ಪ್ರಾಣವೆಂಬುದು ವಿಕ್ರಮಾರ್ಜುನನು ದಯಮಾಡಿ ಕೊಟ್ಟ ಪ್ರಾಣ, ನಾನು ಕೊಟ್ಟಿದುದಕ್ಕೆ ಪ್ರತಿಯಾಡದೆ ಅಂಗೀಕಾರಮಾಡಬೇಕು ಎಂದನು. ಆಗಲೆಂದು ಅವರು ಒಪ್ಪಿದರು. ಇದು ಧರ್ಮರಾಜನು ಓಲಗಮಾಡಲು ಯೋಗ್ಯವಾದುದೆಂದು ಅದನ್ನು ಧರ್ಮರಾಜನಿಗೆ ಕೊಟ್ಟನು. ಪರಾಕ್ರಮಧವಳನಾದ ಅರ್ಜುನನಿಗೆ ಚಂದ್ರನಷ್ಟು ವಿಸ್ತಾರವಾದ ಯಶಸ್ಸಿನ ಉಂಡೆಯ ಹಾಗೆಯೂ ಇದ್ದ ಶಂಖವನ್ನು ಮುಸುಕು ತೆಗೆದು ೪. ಅರಿಗನೇ ನೋಡಿ, ಇದನ್ನು ನಿನಗೆ ಇಂದ್ರನು ಕಳುಸಹಿಸಿದನು. ಇದರ ಹೆಸರು ದೇವದತ್ತವೆಂದು, ಶತ್ರು ಹೃದಯಕವಾಟವನ್ನು ಭೇದಿಸುವ ಶಕ್ತಿಯುಳ್ಳದು, ಈ ಶಂಖವು ನಿನಗೆ ಶ್ರೇಯಸ್ಕರವಾದುದು ಇದನ್ನು ಸ್ವೀಕರಿಸು. ವ|| ಎಂದು ಅದನ್ನು ವಿಕ್ರಮಾರ್ಜುನನಿಗೆ ಕೊಟ್ಟು ಹಿಂದೆ ಷೋಡಶರಾಜರುಗಳಲ್ಲಿ ಮಾಂಧಾತನೆಂಬ ವಿದ್ಯಾಧರನಿದ್ದನು, ಅವನ ಗದೆಯಿದು; ಅವನನ್ನು ಲವಣನೆಂಬ ರಾಕ್ಷಸನು ಕಾದಿಕೊಂದು ಅದನ್ನು ತೆಗೆದುಕೊಂಡನು. ಅವನನ್ನು ರಾಮಚಂದ್ರನ ತಮ್ಮನಾದ
Page #306
--------------------------------------------------------------------------
________________
ಪಷ್ಠಾಶ್ವಾಸಂ / ೩೦೧ ಕೊಂದು ಕೊಂಡೊಡಾತನಂ ರಾಮಚಂದ್ರನ ತಮ್ಮ ಶತ್ರುಘ್ನಂ ಗಲ್ಲು ತನಗೆ ಕೊಂಡು ಸಮುದ್ರದ ನಡುವಣ ಮೈನಾಕಪರ್ವತದೊಳ್ ಮಡಗಿದೊಡೆನಗಿದು ವರುಣದೇವನಿತ್ತಂತಪ್ಪುದುಕಂll ಅಧಿಕರಿಪುನೃಪತಿಬಳನವ
ರುಧಿರಜಳನ್ನುರಿತರೌದ್ರಮಾ ಗದೆ ಪಸರಿಂ | ರುಧಿರಮುಖಿಯೆಂಬುದೆಂದದ
ನಧಿಕಬಳಸ್ಥಂಗೆ ಭೀಮಸೇನಂಗಿತ್ತಂ || ವಅಂತಿತ್ತು ಬಟಯಮವರ ದಾನಸನ್ಮಾನಾದಿಗಳಿಂ ಮಯಂ ರಾಗರಸಮಯನಾಗಿ ಸಂತಸಂಬಟ್ಟು ಪೋದನಿತ್ತ ಮತ್ತೊಂದು ದಿವಸಮಾ ಸಭಾಮಂಟಪದೊಳ್ ಧರ್ಮರಾಜಂ ತನ್ನ ನಾಲ್ವರ್ ತಮ್ಮಂದಿರೊಡನೆ ದೇವೇಂದ್ರಲೀಲೆಯಿಂದೋಲಗಂಗೊಟ್ಟರೆಯಿರಚಂ|| ಬೆಳಗುಗಳೆಲ್ಲವೊಂದುರುಳಿಯಾಗಿ ನಭಸ್ಥಳದಿಂದಮಾ ಮಹೀ
ತಳಕಿಟತರ್ಪುದೆಂದು ಮನುಜಾಕೃತಿಯಂದು ಮುನೀಂದ್ರನೆಂದು ಕ | ಗೂಳಿಸಿ ಮುನೀಂದ್ರರೊಳ್ ಕಮಳಸಂಭವನಂದನನೆಂದು ನೋಟಕರ್
ತಳವೆಳಗಾಗೆ ಸಾರೆವರೆ ನೀರದಮಾರ್ಗದಿನಂದು ನಾರದಂ | ತರಳ 11 ಬಳಸಿ ತನ್ನೊಡನೊಯ್ಯನೊಯ್ಯನೆ ಬರ್ಪ ದೇವರದೊಂದು ಗಾ
ವುಳಿಯನಿನ್ನಿರಿಮೆಂದು ತನ್ನನೆ ನಿಳ್ಳಿ ನೋಬ್ಬರ ಕಣ್ಣೆ ಕ || ಸ್ಕೊಳಪು ತನ್ನಯ ಮೆಯ್ಯ ಬೆಟ್ಟಿನೊಳಟ್ಟು ನಿಂದೊಡೆ ವಾಳೆಮಾನ್ ಪೊಳೆಯ ಧಾತ್ರಿಗೆ ವರ್ಷ ಗಂಗವೊಲೊಪ್ಪಿದಂ ಮುನಿಪುಂಗವಃ || ೭
ಶತ್ರುಘ್ನನು ಗೆದ್ದು ಸಮುದ್ರದ ಮಧ್ಯದಲ್ಲಿರುವ ಮೈನಾಕಪರ್ವತದಲ್ಲಿ ಮಡಗಿದನು. ಇದನ್ನು ವರುಣದೇವನು ನನಗೆ ಕೊಟ್ಟನು. ೫. ಇದು ಅನೇಕ ಶತ್ರುರಾಜರ ಸೈನ್ಯದ ಹೊಸರಕ್ತದಿಂದ ಕೂಡಿ ಭಯಂಕರ ಪ್ರಕಾಶಮಾನವಾಗಿದೆ. ರುಧಿರಮುಖಿಯೆಂಬುದು ಇದರ ಹೆಸರು ಎಂದು ಅದನ್ನು ಅಧಿಕಬಲನಾದ ಭೀಮಸೇನನಿಗೆ ಕೊಟ್ಟನು. ವ|| ಬಳಿಕ ಮಯನು ಪಾಂಡವರ ದಾನಸನ್ಮಾನಗಳಿಂದ ಸಂತುಷ್ಟನಾಗಿ ಹೋದನು. ಈ ಕಡೆ ಮತ್ತೊಂದು ದಿವಸ ಧರ್ಮರಾಜನು ತನ್ನ ನಾಲ್ವರು ತಮ್ಮಂದಿರೊಡನೆ ದೇವೇಂದ್ರನ ವೈಭವದಿಂದ ಸಭೆಯನ್ನು ನಡೆಸುತ್ತಿರಲು ೬. ಮೊದಲು ಕಾಂತಿಸಮೂಹವೆಲ್ಲ ಒಂದು ಉಂಡೆಯಾಗಿ ಆಕಾಶದಿಂದ ಈ ಭೂಮಂಡಲಕ್ಕೆ ಇಳಿಯುತ್ತಿರುವಂತೆಯೂ ಅನಂತರ ಅದು ಮನುಷ್ಯಾಕೃತಿಯಂತೆಯೂ ಇನ್ನೂ ಹತ್ತಿರ ಬರಲು ಮುನಿಶ್ರೇಷ್ಠನಂತೆಯೂ ಕಣ್ಣಿಗೆ ಕಾಣಿಸಿಕೊಂಡು (ಇನ್ನೂ ಹತ್ತಿರ ಬರಲು) ಬ್ರಹ್ಮನಂದನನಾದ ನಾರದನೆ ಬರುತ್ತಿದ್ದಾನೆ' ಎಂದು ನೋಡುತ್ತಿದ್ದವರು ಆಶ್ಚರ್ಯಪಡುವ ಹಾಗೆ ಆಕಾಶಮಾರ್ಗದಿಂದ ನಾರದನು ಸಮೀಪಕ್ಕೆ ಬಂದನು. ೭. ತನ್ನನ್ನು ಸುತ್ತಿಕೊಂಡು ತನ್ನೊಡನೆ ಸಾವಧಾನವಾಗಿ ಬರುತ್ತಿದ್ದ ದೇವತೆಗಳ ಸಮೂಹವನ್ನು ಇನ್ನು ನೀವು ನಿಲ್ಲಿರಿ' ಎಂದು ಹೇಳಿ ತನ್ನನ್ನೇ ಕುರಿತು ದಿಟ್ಟಿಸಿ ನೋಡುತ್ತಿದ್ದವರ ಕಣ್ಣಿಳುಪು ತನ್ನ ಶರೀರದ ಬಿಳುಪಿನಲ್ಲಿ ಸೇರಿ ಕೊಂಡಿರಲು ಹೊಳೆಯುವ ಬಾಳೆಮೀನಿನಿಂದ ಕೂಡಿದ ಗಂಗೆಯು ಭೂಮಿಗೆ ಇಳಿದು
Page #307
--------------------------------------------------------------------------
________________
೩೦೨ | ಪಂಪಭಾರತಂ
ವ|| ಅಂತು ಬರ್ಪಾಗಳ
ತರಳ|| ಸರಿಗೆಯೊಳ್ ಸಮದಕ್ಷಮಾಲಿಕೆ ಪೊನ್ನ ಮುಂಜಿ ತೊಳಪ್ಪ ಕ ಪುರದ ಭಸ್ಮರಜಪುಂಡಕಮೊಪ್ಪೆ ಪಿಂಗ ಜಟಾಳಿ ತಾ | ವರೆಯ ಸೂತ್ರದೊಳಾದ ಜನ್ನವಿರಂ ದುಕೂಲದ ಕೋವಣಂ ಕರಮೊಡಂಬಡೆ ನೋಟಕರ್ಕಳನಾ ತಪಸ್ವಿ ಮರುಳ್ಳಿದಂ ||
ಕಂ ಬಟ್ಟಗೊಡೆ ಚಂದ್ರಕಾಂತಿಯ
ನಟ್ಟುಂಬರಿಗಳ ಪೊದಳ ಕೃಷ್ಣಾಜಿನಮೊಂ ದಿಟ್ಟಳಮಸಯ ಬೆಡಂಗಂ
ಪುಟ್ಟಸ ಗಾಡಿಗಳೊಳೆಸೆವ ವೀಣಾಕ್ವಣಿತಂ ||
ಬೆರಲೊಳ್ ಬೀಣೆಯ ತಂತಿಗ
ಊರಸಿದ ಕೆಂಗಲೆಗಳಕ್ಷಮಾಲೆಯೊಳೆಸೆದಂ | ತಿರ ಪೊಸೆಯ ಮುತ್ತು ಪವಳಂ
ಬೆರಸಿದವೋಲಾಯ್ತು ಚೆನ್ನ ತಪಸಿಯ ಕೆಯೊಳ್ ||
ವ|| ಅಂತು ಸಾಕ್ಷಾತ್ ಬ್ರಹ್ಮಂ ಬರ್ಪಂತ ಬಂದು
ಕಂ।।
ಅಡಿಯಿಟ್ಟನೆಳೆಯೊಳಿವನಂ
ಬೆಡೆಯೊಳ್ ಪರಿಜನಸಮೇತಮಿದಿರೆಲ್ಲರಸಂ | ಪೊಡವಡ ತಪಸ್ವಿ ಕೆಯ್ಯಂ
ಪಿಡಿದ ಪಲರ್ಮ ಪರಸಿದಂ ಪರಕೆಗಳಂ ||
Co
33
ಬರುತ್ತಿದ್ದ ಹಾಗೆ ಋಷಿಶ್ರೇಷ್ಠನಾದ ನಾರದನು ಪ್ರಕಾಶಿಸಿದನು. ೮. (ಚಿನ್ನದ) ಸರಿಗೆಯಲ್ಲಿ ಮಾಡಿದ ಜಪಸರ, ಹೊನ್ನಿನ ಉಡಿದಾರ, ಹೊಳೆಯುವ ಕರ್ಪೂರದ ಧೂಳಿನಿಂದ ಮಾಡಿದ ವಿಭೂತಿಯ ಮೂರು ಗೆರೆಗಳು, ಪಿಂಗಳಬಣ್ಣದ ಜಟೆಯ ಸಮೂಹ, ತಾವರೆಯ ನೂಲಿನಿಂದ ಮಾಡಿದ ಯಜ್ಯೋಪವೀತ, ರೇಷ್ಮೆಯ ಕೌಪೀನ, ಇವು ವಿಶೇಷವಾಗಿ ಒಪ್ಪುತ್ತಿರಲು ಆ ಋಷಿಯು ನೋಡುವವರನ್ನು ವಿಶೇಷವಾಗಿ ಆಕರ್ಷಿಸಿದನು. ೯. ಗುಂಡಾಗಿರುವ ಕೊಡೆಯು ಚಂದ್ರನ ಕಾಂತಿಯನ್ನು ಅಟ್ಟಿ ಓಡಿಸುವಂತಿತ್ತು. ಶರೀರದಲ್ಲಿ ಹರಡಿದ್ದ ಜಿಂಕೆಯ ಚರ್ಮವು ಮನೋಹರವಾಗಿತ್ತು. ಸೊಗಸಾಗಿ ಧ್ವನಿಮಾಡುವ ವೀಣೆಯ ನಾದವು ಬೆಡಗನ್ನು ಹುಟ್ಟಿಸಿತು. ೧೦. ಬೆರಳುಗಳಲ್ಲಿ ವೀಣೆಯ ತಂತಿಗಳನ್ನು ಉಜ್ಜಿದ ಕೆಂಗಲೆಗಳು ಜಪಮಾಲೆಗಳಲ್ಲಿ ಸೇರಿ ಹೆಣೆದುಕೊಂಡಿರಲು ಆ ಚೆಲುವಾದ ತಪಸ್ವಿಯ ಕಯ್ಯಲ್ಲಿ ಮುತ್ತೂ ಹವಳಗಳೂ ಬೆರಸಿದ ಹಾಗಾಯಿತು. ವ|| ಹಾಗೆ ಸಾಕ್ಷಾತ್ ಬ್ರಹ್ಮನೇ ಬರುವ ಹಾಗೆ ಬಂದು ೧೧. ಭೂಮಿಯಲ್ಲಿ ಇವನು ಕಾಲಿಟ್ಟನೆಂಬ ಸಮಯದಲ್ಲಿಯೇ ಧರ್ಮರಾಜನು ಪರಿವಾರಸಮೇತವಾಗಿ ಇದಿರಾಗಿ ಎದ್ದುಹೋಗಿ ನಮಸ್ಕರಿಸಲು ತಪಸ್ವಿಯಾದ
Page #308
--------------------------------------------------------------------------
________________
ಷಷ್ಠಾಶ್ವಾಸಂ | ೩೦೩
ವ|| ಅಂತು ಧರ್ಮಪುತ್ರನಜಪುತ್ರನಂ ಮುಂದಿನ್ನೊಡಗೊಂಡು ಬಂದು ಮಣಿ ಕನಕರಚನವಿಚಿತ್ರವೇತ್ರಾಸನದೊಳಿರಿಸಿ ಮಹಾರ್ಥ್ಯಗುಣಮಣಿವಿಭೂಷಣಂಗ ಕನಕ ಪಾತ್ರದೊಳರ್ಥ್ಯಮೆತ್ತಿ ಕನಕ ಕಳಶ ಸಂಸ್ಕೃಶ ಶುಚಿಜಲಂಗಳಿಂದಮಾ ಮುನೀಶ್ವರನ ಪಾದಪದ್ಮಮಂ ಕರ್ಚಿ ತತ್ಪಾದಪವಿತ್ರೋದಕಂಗಳಿಂ ಮಹಾಋಷಿಯ ತಳಿದ ಕನಕಕಮಂಡಲುವಿನ ತೀರ್ಥೋದಕಂಗಳಿಂದಯ್ಯರುಂ ಪವಿತ್ರೀಕೃತಮಸ್ತಕರಾಗಿರ್ದು ಯುಧಿಷ್ಠಿರು ನಾರದಮಹಾಮುನಿಯ ಮೊಗಮಂ ನೋಡಿ
ಕಂ।। ಪಡೆದಂ ಬ್ರಹ್ಮ ಜಗಮಂ
ಪಡೆಯಲ್ ತಾನಾರ್ತನಿಲ್ಲ ಪಂಪಂ ನಿಮ್ಮಂ 1 ಪಡೆದ ಪಡೆದನೆನಿಸಿದ
ಕಡು ಪೆಂಪಿನ ಪೊಗೆ ನೀವು ಮೊದಲಿಗರಾದಿರ್
ಬಾದೇನಾ ಮದೀಯ ಕರ್ಮ ಫ
ಊದಿತ ಸಂತಾಪರೂಪ ಪಾಪಕಳಾಪ |
ಚ್ಛೇದನಕರಮಾಯ್ತು ಭವ
ತಾದ ಪ್ರಕ್ಷಾಳನೋದಕಂ ಮುನಿನಾಥಾ ||
ಬೆಸನನಗಾವುದೋ ಬೆಸಸಿಂ
ಬೆಸನಂ ಪಿರಿದಕ್ಕೆ ಗಯ್ಯ ಸಾರ್ದಿದ್ರನದಂ | ಬೆಸಸಿಂ ನಿಮ್ಮಯ ಬರವಂ
ಪೊಸತಾಗಿರೆ ಬಂದಿರಿಗಳಲ್ಲಿಂ ಬಂದಿರ್ ||
ܟܘ
೧೩
೧೪
ನಾರದನು ಅವನ ಕಯ್ಯನ್ನು ಹಿಡಿದೆತ್ತಿ ಅನೇಕಸಲ ಹರಕೆಗಳಿಂದ ಆಶೀರ್ವದಿಸಿದನು. ವ|| ಹಾಗೆ ಧರ್ಮಪುತ್ರನು ಬ್ರಹ್ಮಪುತ್ರನಾದ ನಾರದನನ್ನು ಮುಂದು ಮಾಡಿಕೊಂಡು ಜೊತೆಯಲ್ಲಿ ಬಂದು ರತ್ನಚಿನ್ನ ಮೊದಲಾದವುಗಳ ರಚನೆಗಳಿಂದ ವಿಚಿತ್ರವಾದ ಬೆತ್ತದ ಪೀಠದಲ್ಲಿ ಕುಳ್ಳಿರಿಸಿ ಬಹು ಅನರ್ಥ್ಯಗುಣಗಳಿಂದ ಅಲಂಕೃತನಾದ ಅವನಿಗೆ ಚಿನ್ನದ ಪಾತ್ರೆಯಲ್ಲಿ ಅರ್ಥ್ಯವನ್ನೆತ್ತಿ ಚಿನ್ನದ ಕಲಶಗಳಲ್ಲಿ ತುಂಬಿದ ನಿರ್ಮಲವಾದ ನೀರಿನಿಂದ ಆ ಋಷಿಶ್ರೇಷ್ಠನ ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕದಿಂದಲೂ ಆ ಋಷಿವರ್ಯನು ಪ್ರೋಕ್ಷಿಸಿದ ಚಿನ್ನದ ಕಮಂಡಲದ ಪವಿತ್ರವಾದ ನೀರಿನಿಂದಲೂ ಅಯ್ಯರೂ ಶುಚಿರ್ಭೂತವಾದ ಶರೀರವುಳ್ಳವರಾಗಿದ್ದು ಧರ್ಮರಾಯನು ನಾರದಋಷಿಯ ಮುಖವನ್ನು ನೋಡಿ - ೧೨. ಬ್ರಹ್ಮನು ಜಗತ್ತನ್ನು ಸೃಷ್ಟಿಸಿದರೂ ಹಿರಿಮೆಯನ್ನು ಮಾತ್ರ ಪಡೆಯಲು ಶಕ್ತನಾಗಲಿಲ್ಲ. ನಿಮ್ಮನ್ನು ಪಡೆದ ಮೇಲಲ್ಲವೇ ಈ ಹಿರಿಮೆಯನ್ನು ಅವನು ಪಡೆದುದು ಎಂಬ ಹಿರಿಮೆಯ ಗೌರವಕ್ಕೆ ನೀವೇ ಮೊದಲಿಗರಾದಿರಲ್ಲವೇ ? ೧೩, ಹೆಚ್ಚು ಮಾತನಾಡಿ ಫಲವೇನು? ಋಷಿವರ್ಯರೇ ನಿಮ್ಮ ಪಾದೋದಕವು ನನ್ನ ಕರ್ಮದ ಫಲವಾಗಿ ಬಂದ ದುಃಖರೂಪವಾದ ಪಾಪಸಮೂಹವನ್ನು ಪರಿಹಾರ ಮಾಡಿತು. ೧೪. ಈಗ ನಾನು ಮಾಡಬೇಕಾದ ಕಾರ್ಯವೇನು ಆಜ್ಞಾಪಿಸಿ; ಅದು ಎಷ್ಟೇ ಹಿರಿದಾಗಿದ್ದರೂ ಮಾಡಲು ಸಿದ್ಧನಾಗಿದ್ದೇನೆ. ಅದನ್ನು ಅಪ್ಪಣೆಕೊಡಿ, ನೀವು ಬಂದ ಕಾರಣವನ್ನು ತಿಳಿಸಿ,
Page #309
--------------------------------------------------------------------------
________________
೩೦೪) ಪಂಪಭಾರತಂ * ವll ಎಂಬುದುಮಾ ಮುನೀಂದ್ರನಿಂದ್ರಲೋಕದಿಂ ಬಂದವೆಂದೊಡಲ್ಲಿಯ ಪಡೆಮಾತಾವುದುಮll ದಿವಿಜೇಂದ್ರಂ ಸುಖಮಿರ್ದನೇ ದಿತಿಸುತಾಬಾಧಗಳ ದೇವರ್ಗಿ
ಲವಲಾ ಷೋಡಶರಾಜರಿರ್ಪ ತಜನೇನಮ್ಮನ್ನಯಕ್ಕಾಪರಾ || ವ ವಿಳಾಸಂಗಳೊಳಿರ್ಪರೇ ದೂರೆತು ತಾನಮ್ಮಯ್ಯನಶ್ವರ್ಯಮಿಂ ತಿವನೆಲ್ಲಂ ತಿಳಿವಂತುವಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ || ೧೫
ವ|| ಎಂಬುದುಮಾ ಮುನೀಶ್ವರನಿಳಾಧರೇಶ್ವರಂ ಬೆಸಗೊಂಡಂದದೊಳೆ ದೇವಲೋಕದ ಪಡೆಮಾತೆಲ್ಲಮಂ ಪೇಟ್ಟು ಪಾಂಡುರಾಜನ ಮಾತನಿಂತೆಂದಂಉlು ನೀಡಿರದಿಂದ್ರನೂಲಗಳ ಪೋಪುದುಮಾಗಳುಮಂತ ಪೋಗಿಯುಂ
ಷೋಡಶ ರಾಜರಿಂ ಕಡಯೋಳಿರ್ಪುದು ಜೀಯ ಪಸಾದಮಂಬುದುಂ | ನೋಡಿದ ದೃಷ್ಟಿಗಳಿ ಸುಗಿದಿರ್ಪುದುಮಾದಮ ಮಾನಭಂಗಮಂ
ಮಾಡೆ ಮನಃಕ್ಷತಕ್ಕಳವಿಗಾಣವು ನೋಡಿರೆ ಬಾಂಡುರಾಜನಾ ೧೬ ಮ || ಪರ ಚಕ್ರಂಗಳನೊತ್ತಿಕೊಂಡದಟರಂ ಕೊಂದಿಕ್ಕಿ ದಾಯಾದರೆ
ಇರುಮಳ್ಳುತ್ತಿರೆ ಸಂದ ಸಾಹಸದ ನಿಮಿಾಯಯ್ಯರುಂ ಮಕ್ಕಳಾ | ಗಿರೆಯುಂ ನಿಚ್ಚಲುಮಿಂದ್ರನೋಲಗದೊಳಂತಾ ಪಾಂಡುರಾಜಂಗ ನಿ ರ್ನರಮವೊಂದಪಮಾನದಿಂದಮಿನಿಂದೂನತಮಪಂತುಟೇll
ಅಪೂರ್ವವಾಗಿ ಬಂದಿದ್ದೀರಿ; ಈಗ ಎಲ್ಲಿಂದ ಬಂದಿರಿ? ಎಂದು ಕೇಳಿದನು. ವll ಅದಕ್ಕೆ ಆ ಮುನೀಂದ್ರನು 'ನಾವು ಇಂದ್ರಲೋಕದಿಂದ ಬಂದೆವು' ಎನ್ನಲು ಅಲ್ಲಿಯ ಸಮಾಚಾರವೇನು, ೧೫. ದೇವೇಂದ್ರನು ಸುಖವಾಗಿದ್ದಾನೆಯೇ ? ದೇವತೆಗಳಿಗೆ ರಾಕ್ಷಸರ ಬಾಧೆಯಿಲ್ಲ ತಾನೇ? ಷೋಡಶರಾಜರಿರುವ ರೀತಿ ಯಾವುದು? ನಮ್ಮ ವಂಶದ ದೊರೆಗಳು ಯಾವ ವೈಭವದಿಂದಿದ್ದಾರೆ? ನಮ್ಮ ತಂದೆಯ ಸಂಪತ್ತು ಎಂತಹುದು? ಇವನ್ನು ತಿಳಿಯುವ ಹಾಗೆ ಬ್ರಹ್ಮಪುತ್ರರಾದ ನಾರದರೇ ಹೇಳಿರಿ. ವ|| ಎನ್ನಲು ಆ ಮುನೀಶ್ವರನು ಚಕ್ರವರ್ತಿಯಾದ ಧರ್ಮರಾಜನು ಪ್ರಶ್ನೆಮಾಡಿದ ರೀತಿಯಲ್ಲಿಯೇ ದೇವಲೋಕದ ಸಮಾಚಾರವನ್ನೆಲ್ಲ ಹೇಳಿ ಪಾಂಡುರಾಜನ ವಿಷಯಕವಾದ ಮಾತನ್ನು ಹೀಗೆಂದನು-೧೬. ಪಾಂಡುವು ಎಲ್ಲರಿಗಿಂತ ಮುಂಚೆ ಇಂದ್ರನ ಸಭೆಗೆ ಹೋಗಿದ್ದರೂ ಅಲ್ಲಿಯೂ ಅವರ ಹಾಗೆಯೇ ಹೋಗಿದ್ದರೂ ಆ ಷೋಡಶರಾಜರಿಗಿಂತ ಕೊನೆಯಲ್ಲಿರುವುದೂ ಸ್ವಾಮಿ ಪ್ರಸಾದ ಎನ್ನುವುದೂ ಅವರು ದೃಷ್ಟಿಸಿ ನೋಡಿದ ನೋಟಕ್ಕೆ ಹೆದರಿ ಮುದುರಿಕೊಂಡಿರುವುದೂ ಅವನಿಗೆ ವಿಶೇಷವಾದ ಅವಮಾನವನ್ನುಂಟುಮಾಡಲು ೧೭. ಶತ್ರುಮಂಡಲಗಳನ್ನೆಲ್ಲ ಆಕ್ರಮಿಸಿ ಶೂರರಾದವರನ್ನೆಲ್ಲ ಸಂಹಾರಮಾಡಿ ದಾಯಾದಿಗಳೆಲ್ಲರೂ ಹೆದರುವಂತಹ ಪ್ರಸಿದ್ದ ಪರಾಕ್ರಮವನ್ನುಳ್ಳ ನೀವೈದುಮಂದಿಯೂ ಮಕ್ಕಳಾಗಿದ್ದರೂ ಪ್ರತಿನಿತ್ಯವೂ ಇಂದ್ರನ ಸಭೆಯಲ್ಲಿ ಆ ಪಾಂಡುರಾಜನಿಗೆ ನಿಷ್ಕಾರಣವಾದ ಒಂದು ಅಪಮಾನದಿಂದ ಇಷ್ಟು
Page #310
--------------------------------------------------------------------------
________________
ಷಷ್ಠಾಶ್ವಾಸಂ | ೩೦೫
ವ|| ಆಮುಮದಂ ನೋಡಲಾದೆಯುಂ ಪಾಂಡುರಾಜನೆನ್ನಿರ್ದಿರವನೆನ್ನ ಮಕ್ಕಳಜೆಪಿ ರಾಜಸೂಯಮೆಂಬ ಯಾಗಮಂ ಬೇಳ್ವಂತೆ ಮಾಡಿ ಬನ್ನಿಮೆನೆಯುಮದನಪಲೆಂದ ಬಂದಮಾ ಮಖದ ಮಾಹಾತ್ಮ ಮಂ ಪೇಡೆ ಮುನ್ನಂ ಕೃತಯುಗದೊಳ್ ಹರಿಶ್ಚಂದ್ರನೆಂಬ ಚಕ್ರವರ್ತಿ ಶತಕ್ರತುವಂ ನಿರ್ವತಿ್ರಸಿ ಚತುರರ್ಣವಪರೀತಮಹೀತಳಮೆಲ್ಲಮಂ ಧರಾಮರರ್ಕ ದಕ್ಷಿಣೆಗೊಟ್ಟನಪ್ಪುದಂದಮದು ಫಲದೊಳೀಗಳಾತನಲ್ಲಿಗಿಂದಂ ನಿಚ್ಚವೊಂದು ಪೊತ್ತು ಪೋಗಿ ಪೂಜಿಸಿ ಬರ್ವ೦ ನಿಮ್ಮಯ್ಯಂಗೆ ನೀಮುಮನಿತು ಮಹಿಮೆಯಂ ಮಾರವೊಡೆ
ಚoll
ಬಿರುದರನೊತ್ತಿ ಬೀರರನಡಂಗಿಸಿ ಕೊಂಕಿಗರಂ ಕಯಲ್ಲಿ ಚಿ ನರನಡಿಗೊತ್ತಿ ಮಂಡಳಿಕರಂ ಬೆಸಕೆಯಿ ಕಟುಂಬರಂ ನಿರಾ | ಕರಿಸಿ ಸಮಸ್ತವಾರಿಧಿಪರೀತಮಹೀತಳದರ್ಥಮೆಲ್ಲಮಂ
ತರಿಸಿ ನೆಗಡಿಯಂ ನಿಡೆಸಲಾರ್ಪೊಡೆ ಮಾಡಿರೆ ರಾಜಸೂಯಮಂ | ೧೮
ವ|| ಎಂದು ರಾಜಸೂಯಾಂತಂ ಕಳಹಮೆಂಬುದಂ ಬಗೆದು ತಾನುಂ ಕಲಹ
ಪ್ರಿಯನಪ್ಪುದಂದಮನಿತನೆ ನುಡಿದು ಮಾಣ್ಣ ಮುನೀಂದ್ರನಂ ನರೇಂದ್ರನಿಂತೆಂದಂಚoll ಬೆಳಗುವುದಿಂದ್ರಲೋಕದೊಳಗಯ್ಯನ ಮಾತನಮ್ಮ ಸಾಹಸಂ ಬೆಳಗುವುದೀ ಧರಾವಳಯದೊಳ್ ತಣಿವರ್ ದ್ವಿಜಮುಖರಪ್ಪುದ | ಗ್ಗಳಿಕೆ ಪೊದಳು ಪರ್ವುವುದು ಕೀರ್ತಿ ಪುರಾಕೃತಪುಣ್ಯದಿಂದ ಸಂ ಗಳಿಸುವುದೆಂದೊಡೀ ಮಖದೊಳೇನ್ ತೊದಳುಂಟೆ ಮುನೀಂದ್ರನಾಯಕಾ || ೧೯
ಕೊರತೆಯುಂಟಾಗಬಹುದೇ ? ವll ನಾವು ಅದನ್ನು ನೋಡಲಾರದಿದ್ದುದರಿಂದಲೂ ಪಾಂಡುರಾಜನೂ 'ನಾನಿರುವ ಸ್ಥಿತಿಯನ್ನು ತನ್ನ ಮಕ್ಕಳಿಗೆ ತಿಳಿಸಿ ರಾಜಸೂಯವೆಂಬ ಯಜ್ಞವನ್ನು ಮಾಡುವಂತೆ ಮಾಡಿ ಬನ್ನಿ' ಎಂದು ಹೇಳಿದುದರಿಂದಲೂ ಇದನ್ನು ತಿಳಿಸಬೇಕೆಂದೇ ಬಂದೆವು. ಆ ಯಾಗದ ಮಾಹಾತ್ಮವನ್ನು ಏನೆಂದು ಹೇಳಲಿ. ಮೊದಲು ಕೃತಯುಗದಲ್ಲಿ ಹರಿಶ್ಚಂದ್ರನೆಂಬ ಚಕ್ರವರ್ತಿ ನೂರು ಯಜ್ಞವನ್ನು ಮಾಡಿ ನಾಲ್ಕು ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ ಭೂಭಾಗವನ್ನೆಲ್ಲ ಬ್ರಾಹ್ಮಣರಿಗೆ ದಕ್ಷಿಣೆಯಾಗಿ ಕೊಟ್ಟನು. ಅದರ ಫಲವಾಗಿ ಈಗ ಆತನಲ್ಲಿಗೆ ದೇವೇಂದ್ರನು ಪ್ರತಿನಿತ್ಯವೂ ಒಂದು ಹೊತ್ತು ಹೋಗಿ ಪೂಜಿಸಿ ಬರುತ್ತಿದ್ದಾನೆ. ನಿಮ್ಮ ತಂದೆಗೆ ನೀವೂ ಅಷ್ಟು ವೈಭವವನ್ನು ಮಾಡಲಾರಿರಾ'-೧೮. ಬಿರುದುಳ್ಳ ರಾಜರನ್ನೆಲ್ಲ ಆಕ್ರಮಿಸಿ ವೀರರನ್ನೆಲ್ಲ ಅಡಗಿಸಿ ವಕ್ರವಾಗಿರುವವರನ್ನೆಲ್ಲ ಸಡಿಲಿಸಿ ಪರಾಕ್ರಮಿಗಳನ್ನು ಕಾಲಿನ ಕೆಳಕ್ಕೆ ಅದುಮಿ ಸಾಮಂತರನ್ನು ಆಜ್ಞಾಧೀನರನ್ನಾಗಿ ಮಾಡಿ ಅಸೂಯೆಗಾರರನ್ನು ಉಪೇಕ್ಷಿಸಿ ಸಮಸ್ತ ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ ಭೂಮಂಡಲದ ದ್ರವ್ಯವನ್ನು ಬರಮಾಡಿಕೊಂಡು ನಿಮ್ಮ ಪ್ರಸಿದ್ಧಿಯನ್ನು ಸ್ಥಾಪಿಸಲು ಸಮರ್ಥರಾಗಿದ್ದರೆ ರಾಜಸೂಯಯಾಗವನ್ನು ಮಾಡಿರಿ. ವll ಎಂದು 'ರಾಜಸೂಯದ ಕಡೆಯಲ್ಲಿ ಜಗಳ ಎಂಬುದನ್ನು ಮನಗಂಡು ತಾನು ಕಲಹಪ್ರಿಯನಾದುದರಿಂದ ಅಷ್ಟನ್ನು ಮಾತ್ರ ಹೇಳಿ ನಿಲ್ಲಿಸಿದ ಮುನೀಂದ್ರನನ್ನು ನರೇಂದ್ರನಾದ ಧರ್ಮರಾಜನು ನಾರದನಿಗೆ ಹೀಗೆ ಹೇಳಿದನು-೧೯. ಇಂದ್ರಲೋಕದಲ್ಲಿ ನಮ್ಮ ತಂದೆಯ ಮಾತು ಬೆಳಗುವ ಹಾಗೆಯೇ ಈ ಭೂಮಂಡಲದಲ್ಲಿ ನಮ್ಮ ಶೌರ್ಯವೂ ಬೆಳಗುತ್ತದೆ. ಬ್ರಾಹ್ಮಣಶ್ರೇಷ್ಠರೂ
Page #311
--------------------------------------------------------------------------
________________
೩೦೬ | ಪಂಪಭಾರತಂ
ವ|| ಎಂಬುದುಮಾ ಮಾತಂ ನಿಲೆ ನುಡಿದುದರ್ಕೆ ಮೆಚ್ಚಿ ನಿನಗದೇವಿರಿದುಕಂ|| ಪರಪಿನ ನೀಳದ ಕಡೆಯಂ
ಮರುಳಂ ತವ ನೋಡಲಾಗಿದಂಬರತಳಮಂ | ಕರಿದೆಂಬಂತಿರೆ ನಿನ್ನಂ ನರನೆಂಬುದೆ ನಿನ್ನ ಸಾಹಸಕ್ಕದು ಒರಿದೇ ||
• ೨೦ ವll ಎಂದು ನುಡಿದು ನಾಡೆಯುಂ ಪೊತ್ತಿರ್ದುಮಿನ್ ಪೋಪಮಂದ ಮುನಿನಾಥನು ನರನಾಥಂ ಬಿಜಯಂಗೆಯ್ಕೆಮನೆ ನಾರದನಿರದೆ ಗಗನತಳಕೊಗೆದು ಮುಗಿಲ ಪೊರೆ ಯೋಳಡಂಗಿದನಿತ್ತ ಧರ್ಮರಾಜಂ ನಿಜಾನುಜರೊಡನೆ ರಾಜಸೂಯಪ್ರಪಂಚಮನಾಳೋಚಿಸಿ ಪುರುಷೋತ್ತಮನನೀ ಪದದೊಳ್ ಬರಿಸುವುದು ನಮಗುತ್ತಮಪಕ್ಷವೆಂದು, ಉll ದ್ವಾರವತೀಪುರಕ್ಕೆ ಚರರಂ ತಡವಿಲ್ಲದೆ ಬೇಗಮಟ್ಟಿ ಪಂ
ಕೇರುಹನಾಭನಂ ಬರಿಸಿ ಮಜ್ಜನ ಭೋಜನ ಭೂಷಣಾದಿ ಸ | ತಾರದೊಳಂ ನೆಯ ಮಾಡಿ ಮುರಾಂತಕ ಪಾಂಡು ಭೂಭುಜಂ ಕಾರಣಮಾಗೆ ನಾರದನ ಪೇಟ್ಟ ನೆಗಟ್ಯ ರಾಜಸೂಯಮಂ | ೨೧ ಕಂ| ಬೇಳಳ ಬಗವೊಡ ಹರಿಯೊಡ
ನಾಚಿಪಮೆಂದು ಬಲೆಯನಟ್ಟಿದನೆನ್ನಂ | ಪಾಳಿಸುವೆ ನೀನ್ ನಿಮ್ಮೊಡ ನಾಲೋಚಿಸದಮಗ ನಗಬಲೇಂ ನೆರವುಂಟೇ |
೨೨
ತೃಪ್ತಿಪಡುತ್ತಾರೆ. ಗೌರವವುಂಟಾಗುತ್ತದೆ. ಕೀರ್ತಿ ಹರಡಿ ಹಬ್ಬುತ್ತದೆ. ಹಿಂದೆ ಮಾಡಿದ ಪುಣ್ಯದಿಂದ ಮಾತ್ರ ಪ್ರಾಪ್ತವಾಗುತ್ತದೆ ಎಂದಾಗ ಈ ಯಜ್ಞವನ್ನು ನಡೆಸುವುದೇ ನಿಶ್ಚಯ ಎಂದನು. ವ|| ಆತನ ನಿಷ್ಕರ್ಷೆಯನ್ನು ಕೇಳಿ ನಾರದನು ನಿನಗೆ ಇದೇನು ದೊಡ್ಡದು-೨೦. ಹುಚ್ಚನು ವಿಸ್ತಾರವಾಗಿ ಹರಡಿರುವ ನೀಲಿಯ ಬಣ್ಣದ ಕೊನೆಯನ್ನು ನೋಡಲಾರದೆ ಆಕಾಶಪ್ರದೇಶವನ್ನು ಕಪ್ಪು ಎನ್ನುವ ಹಾಗೆ ನಿನ್ನನ್ನು ಮನುಷ್ಯ ಸಾಮಾನ್ಯನೆನ್ನಬಹುದೇ? ನಿನ್ನ ಪರಾಕ್ರಮಕ್ಕೆ ಅದು ದೊಡ್ಡದೇ? ವ|| ಎಂದು ಹೇಳಿ ಕೆಲಕಾಲವಿದ್ದು ಇನ್ನು ಹೋಗುತ್ತೇವೆ, ಎಂದ ನಾರದನನ್ನು ಧರ್ಮರಾಜನು “ದಯಮಾಡಿಸಿ' ಎನ್ನಲು ನಾರದನು ಸಾವಕಾಶಮಾಡದೆ ಆಕಾಶಪ್ರದೇಶಕ್ಕೆ ಹಾರಿ ಮೋಡದ ಪದರದಲ್ಲಿ ಅಡಗಿದನು. ಈ ಕಡೆ ಧರ್ಮರಾಜನು ತನ್ನ ತಮ್ಮಂದಿರೊಡನೆ ರಾಜಸೂಯವಿಷಯವನ್ನು ಆಲೋಚಿಸಿದನು. ಈ ಸಮಯದಲ್ಲಿ ಕೃಷ್ಣನನ್ನು ಬರಿಸುವುದು ನಮಗೆ ಉತ್ತಮಪಕ್ಷವೆಂದು ನಿಶ್ಚಯಿಸಿದರು. ೨೧. ದ್ವಾರಾವತೀಪಟ್ಟಣಕ್ಕೆ ಚಾರರನ್ನು ಸಾವಕಾಶಮಾಡದೆ ಬೇಗ ಕಳುಹಿಸಿ ಕೃಷ್ಣನನ್ನು ಬರಮಾಡಿದರು. ಸ್ನಾನ ಭೋಜನ ಅಲಂಕಾರಾದಿಸತ್ಕಾರಗಳಿಂದ ವಿಶೇಷ ಪ್ರೀತಿಯನ್ನು ಪ್ರದರ್ಶಿಸಿ 'ಕೃಷ್ಣಾ ಪಾಂಡುಮಹಾರಾಜನ ಕಾರಣವಾಗಿ ನಾರದನು ಹೇಳಿದ ಪ್ರಸಿದ್ದ ವಾದ ರಾಜಸೂಯಯಾಗವನ್ನು -೨೨. ಮಾಡಲು ಯೋಚಿಸುವುದಾದರೆ ನಿನ್ನೊಡನಾಲೋಚಿಸೋಣ ಎಂದು ದೂತರನ್ನಟ್ಟಿದೆನು. (ನೀನು ನಮ್ಮರಕ್ಷಕ, ನಮ್ಮನ್ನು
Page #312
--------------------------------------------------------------------------
________________
--------
ಷಷ್ಠಾಶ್ವಾಸಂ | ೩೦೭ * ವು ಎಂಬುದುಮದೆಲ್ಲಮಂ ನೆಜತೆಯೆ ಕೇಳು ಮುಂದಣ ಕಜ್ಜದ ಬಣ್ಣುಮನಳೆದಂ ಭೋರುಹನಾಭಂ ಶುಂಭದಂಭೋಧರಧ್ವನಿಯಿನಿಂತೆಂದಂಉll ಎಂತು ಬಿಗುರ್ತು ಧೀರರನ ಕೊಂದರಂತು ಸಮಸ್ತ ವಾರ್ಧಿ ಪ
ರ್ಯಂತ ಧರಿತ್ರಿಯಂ ವಶಕೆ ತಂದಪಿರೆಂತು ಧನಂಗಳಂ ಪ್ರಯೋ | ಗಾಂತರದಿಂ ತೆರಳಿದಪಿರಾಗದಿದಾದೊಡಮೆಂತು ರಾಜಸೂ
ಯಾಂತವಿದೆಂತು ಬೇಳಪಿರಪಾಯಶತಂ ಬರೆ ರಾಜಸೂಯಮಂ || ೨೩ ಕಂ.
ಗಾಳು ಗೊರವಂ ತಗುಳ್ಳಿ ಪ ತಾಳಮನೇನೋಂದನಪೊಡಂ ಗಣಪಿದೊಡಾ | ಚೇಳುನುಡಿಗೇಳು ಕಮನೆ ಬೇಲ್ ನಿಮಗಂತು ರಾಜಸೂಯಂ ಮೊಗೇ ||
ವll ಮುನ್ನ ಕೃತಯುಗದೊಳ್ ಸೋಮನ ವರುಣನ ರಾಜಸೂಯದ ಕಡೆಯೊಳ್ ದೇವಾಸುರಯುದ್ದ ನೆಗಟಿತ ಹಿರಣ್ಯ ಕಾಳನೇಮಿಗಳೇ ಮೊದಲಾಗಿ ನಗುತ್ತಿಯ ದೈತ್ಯರೆಲ್ಲಮನ್ನ ಚಕ್ರಘಾತದೊಳಟ್ಟಿ ಮಚ್ಚದಂತಾದರದೊಂದು ಧರಾವನಿತೆಯ ಭಾರಾವತಾರದೊಳನಿತಾನುಂ ಘಸಣಿ ಪೋದುದದು ಕಾರಣದಿಂ ರಾಜಸೂಯದ ಮಾತು ಕೇಳಲ್ಲಿಯೆ ಮಜವುದು ನುಡಿಯಲ್ವೇಡನೆ ಮಜುಮಾತುಗುಡಲಣಿಯದ ಧರ್ಮಪುತ್ರಂ ಮೌನಂಗೊಂಡುಸಿರದಿರೆ ಪರಾಕ್ರಮಧವಳನಿಂತೆಂದಂ
೨೪
ಪಾಲಿಸುವವನು ನೀನು; ನಿನ್ನೊಡನೆ ಆಲೋಚಿಸದೆ ಮಾಡಲು ನಮಗೆ ಸಾಧ್ಯವೇ?' ವ|| ಎಂಬುದಾಗಿ ಹೇಳಲು ಅದೆಲ್ಲವನ್ನೂ ಸಂಪೂರ್ಣವಾಗಿ ಕೇಳಿ ಮುಂದಿನ ಕಾರ್ಯದ ಭಾರವನ್ನು ತಿಳಿದು ಕೃಷ್ಣನು ಪ್ರಕಾಶಮಾನವಾದ ಗುಡುಗಿನ ಧ್ವನಿಯಿಂದ ಹೀಗೆ ಹೇಳಿದನು-೨೩.. ಭಯಪಡಿಸಿ ವೀರರನ್ನು ಹೇಗೆ ಕೊಲ್ಲುವಿರಿ? ಸಮಸ್ತಸಮುದ್ರದವರೆಗಿರುವ ಭೂಮಿಯನ್ನು ಹೇಗೆ ವಶಕ್ಕೆ ತಂದುಕೊಳ್ಳುವಿರಿ? ಬೇರೆ ಬೇರೆ ಉಪಾಯಗಳಿಂದ ಹೇಗೆ ಧನವನ್ನು ಶೇಖರಿಸುವಿರಿ? ಇದು ಸಾಧ್ಯವಿಲ್ಲ, ಇಷ್ಟಾದರೂ ರಾಜಸೂಯದ ಕೊನೆಮುಟ್ಟುವುದು ಹೇಗೆ? ನೂರಾರು ಅಪಾಯಗಳು ಬರುವ ಈ ರಾಜಸೂಯಯಾಗವನ್ನು ಹೇಗೆ ಮಾಡುವಿರಿ? ೨೪, ಆ ಕಪಟಸನ್ಯಾಸಿಯು ರೇಗಿಸಿ ಯಾವುದೋ ಕಾಡುಹರಟೆಯನ್ನು ಹರಟಿದರೆ ಆ ಪೊಳ್ಳು ಮಾತನ್ನು ಕೇಳಿ ಸುಮ್ಮನೆ ಹಾಗೆ ಯಜ್ಞವನ್ನು ಮಾಡಲು ರಾಜಸೂಯವು ನಿಮಗೆ ಸಾಧ್ಯವೇ? ವ! 'ಮೊದಲು ಕೃತಯುಗದಲ್ಲಿ ಸೋಮ ಮತ್ತು ವರುಣ ರಾಜಸೂಯದ ಕಡೆಯಲ್ಲಿ ದೇವಾಸುರಯುದ್ಧವು ಪ್ರಾಪ್ತವಾಯಿತು. ಹಿರಣ್ಯ ಕಾಲನೇಮಿಗಳೇ ಮೊದಲಾಗಿ ಪ್ರಸಿದ್ದರಾದ ರಾಕ್ಷಸರೆಲ್ಲ ನನ್ನ ಸುದರ್ಶನಚಕ್ರದ ಹೊಡೆತದಿಂದ ನಾಶವಾಗಿ ಮಟ್ಟದಂತಾದರು. ಭೂದೇವಿಯ ಆ ಒಂದು ಭಾರವನ್ನು ಇಳಿಸುವುದರಲ್ಲಿ ಎಷ್ಟೋ ಆಯಾಸವಾಯಿತು. ಆ ಕಾರಣದಿಂದ ರಾಜಸೂಯದ ಮಾತನ್ನು ಕೇಳಿದಲ್ಲಿಯೇ ಮರೆಯುವುದು ಲೇಸು ಮಾತನಾಡಬೇಡ' ಎಂದನು. ಪ್ರತ್ಯುತ್ತರವನ್ನು ಕೊಡಲು ಶಕ್ತಿಯಿಲ್ಲದೆ ಧರ್ಮರಾಜನು ಮೌನವನ್ನು ತಾಳಿರಲು ಪರಾಕ್ರಮಧವಳನಾದ
Page #313
--------------------------------------------------------------------------
________________
೩೦೮ | ಪಂಪಭಾರತಂ ಕಂ|| , ಎನಿತು ಗಡಂ ಪಯೋನಿಧಿಪರೀತಮಹೀತಳಮಂಬುದಾಂಪ ಬೀ
ರನ ಹೆಸರಾವುದೀ ನುಡಿಯನೀ ಪದದೊಳ್ ಪಳಗಿಕ್ಕೆ ನಾರದಂ | ಮನದೋಳೆ ಪೇಸುಗುಂ ಸುರಪನುಂ ನಗುಗುಂ ಕಡುವಿನಕುಮ ಯ್ಯನ ಮುಖಮಂತುಪೇಕ್ಷಿಸುವುದೀ ಮಖಮಂ ಸರಸೀರುಹೋದರಾ II೨೫
೨೬
ವ|| ಎಂದೂಡೆ ಭೀಮಸೇನನಿಂತೆಂದಂಕಂ || ಪನ್ನತರ ನಡುವನುಡಿಯ
ಲೈನ್ನ ಭುಜಾರ್ಗಳಯ ಸಾಲುಮೊಸ ಮೇಣ್ ಮುನಿ ಮೇ | ನನ್ನ ನುಡಿ ಚಾಠಡಾಢಣ
ಮನ್ನಂ ಬೆಸಸುವುದು ರಾಜಸೂಯಂ ಬೇಳಲ್ || ವ|| ಎಂದು ಗಜ ಗರ್ಜಿಸುವುದುಮಮಳರುಮಾ ಬೇಳ್ಳೆಯ ಮಾತಂ ತಮಳೆ ನುಡಿದೂಡಮ ಗಂಡವಾರುಮಳುಬಂ ಭೂತಮಕುಮಂದು ಮಮ್ಮೆಯ ಬೆಸಸೆಂಬುದುಂ ರಾಜಸೂಯಮಂ ಬೇಳದಿರಿರಪೊಡ ಗಂಗಾನದಿಯ ಬಡಗಣ ತಡಿಯ ಮಘಮಘಿಸುವ ವಾರಣಾಸಿ, ಪುರಮನಾಳ್ವ ಬೃಹದ್ಬಳಂ ಪುಷೋತ್ಪತ್ತಿನಿಮಿತ್ತಮತ್ತೊಂದು ದಿವ್ಯಪಿಂಡಮಂ ತನ್ನಿರ್ವರರಸಿಯರ್ಗೆ ಪಚ್ಚು ಕೊಟ್ಟೋಡ ಪುಟ್ಟದೆರಡು ಪೋಚುಮನಿವೇವುವೆಂದು ಬಿಸುಡೆ
ಅರ್ಜುನನು ಹೀಗೆಂದನು. ೨೫. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಭೂಭಾಗವೆಂಬುದು ಎಷ್ಟು ದೊಡ್ಡದು ? ಪ್ರತಿಭಟಿಸುವ ವೀರನ ಹೆಸರಾವುದು? ಈ ಯಜ್ಞಮಾಡುವ ವಿಚಾರವನ್ನು ಈ ಸಮಯದಲ್ಲಿ ಉಪೇಕ್ಷಿಸಿದಲ್ಲಿ ನಾರದನು ಮನಸ್ಸಿನಲ್ಲಿಯೇ ಜುಗುಪ್ಪೆಪಟ್ಟುಕೊಳ್ಳುವನು; ದೇವೇಂದ್ರನು ನಗುವನು; ಅಯ್ಯನಾದ ಪಾಂಡುವಿನ ಮುಖವೂ ಖಿನ್ನವಾಗುವುದು. ಕೃಷ್ಣನೇ ಈ ಯಜ್ಞವನ್ನು ಉದಾಸೀನಮಾಡುವುದಾದರೂ ಹೇಗೆ? ವll ಭೀಮಸೇನನು ಹೀಗೆಂದನು-೨೬. ವೀರರ ಸೊಂಟವನ್ನು ಮುರಿಯುವುದಕ್ಕೆ ನನ್ನ ಬಲಿಷ್ಟವಾದ ತೋಳುಗಳೇ ಸಾಕು ಒಪ್ಪು ಅಥವಾ ಒಪ್ಪದಿರು ನನ್ನ ಮಾತು ಟವರ್ಗಾಕ್ಷರಗಳಂತೆ ಶಾಶ್ವತವಾದುದು ನಾನು ರಾಜಸೂಯಯಾಗವನ್ನು ಮಾಡುವುದಕ್ಕೆ ಅಪ್ಪಣೆ ಕೊಡು (ಆಜ್ಞೆ ಮಾಡು) ವ|| ಎಂದು ರೇಗಿ ಗರ್ಜನೆಮಾಡಿದನು. ಅವಳಿಗಳಾದ ನಕುಲಸಹದೇವರೂ ಈ ಯಜ್ಞದ ಮಾತನ್ನು ಜಾರಿಹೋಗುವಂತೆ ಉದಾಸೀನವಾಗಿಯೇ ಮಾತನಾಡಿ ನಮ್ಮ ಪರಾಕ್ರಮದ ಮಾತೂ ವಿಶೇಷವಾಗಿ ಹೀನವಾಗುತ್ತದೆ, ನಮ್ಮೊಬ್ಬೊಬ್ಬರಿಗೂ (ರಾಜಸೂಯಯಾಗ ಮಾಡುವಂತೆ) ಆಜ್ಞೆಮಾಡು ಎಂದರು. 'ಕೃಷ್ಣನು' ನೀವು ರಾಜಸೂಯಯಾಗವನ್ನು ಮಾಡದೇ ಬಿಡುವುದಿಲ್ಲವಾದರೆ ಹೀಗೆ ಮಾಡಿ. ಗಂಗಾನದಿಯ ಉತ್ತರತೀರದಲ್ಲಿ ಬಹುವಾಸನಾಯುಕ್ತವಾಗಿರುವ ವಾರಣಾಸಿ ಪಟ್ಟಣವನ್ನು ಬೃಹದ್ಬಲನೆಂಬ ರಾಜನು ಆಳುತ್ತಿದ್ದನು. ಅವನು ಮಕ್ಕಳಾಗಬೇಕೆಂಬ ಒಂದು ಕಾರಣದಿಂದ ಒಂದು ದಿವ್ಯವಾದ ಪಿಂಡ(ಉಂಡೆ)ವನ್ನು ತನ್ನ ಇಬ್ಬರು ರಾಣಿಯರಿಗೆ ಭಾಗಮಾಡಿಕೊಟ್ಟನು. ಅವರಿಬ್ಬರಿಗೂ ಪ್ರತ್ಯೇಕವಾಗಿ ಹುಟ್ಟಿದ ಎರಡು ಹೋಳುಗಳನ್ನು ಇವುಗಳಿಂದೇನು ಪ್ರಯೋಜನವೆಂದು ಬಿಸಾಡಲು ಜರೆಯೆಂಬ
Page #314
--------------------------------------------------------------------------
________________
ಷಷ್ಠಾಶ್ವಾಸಂ | ೩೦೯ ಜರೆಂಬ ರಕ್ಕಸಿ ಕಂಡು ತಿನಲೆಂದೆರಡು ಪೊಲುಮನೊ೦ದು ಕೆಳ ಪಿಡಿದೊಡೂಂದೊಂದು ಸಂದಿಸಿ ಮಾನಸರೂಪುಗೊಂಡೊಡೆ ಚೋದ್ಯಂಬಟ್ಟು ಜರಾಸಂಧನೆಂದು ಹೆಸರನಿಟ್ಟು ಬೃಹದ್ಬಳಂಗೆ ಕೊಟ್ರೊಡೆ ಜರಾಸಂಧನುಂ ಸಾಲ್ವಲನುಮೆಂಬ ದೈತ್ಯನುಮೊಂದಾಗಿ ಮೂವತ್ತೆರಡಕ್ಕೋಹಿಣಿಬಲಂಬೆರಸು ಮಧುರಾಪುರಕ್ಕೆ ವಂದನ್ನು ಮುತ್ತಿ ಕೊಂಡೊಡುಪಾಯ ಬಲದೊಳೆ ಸಾಲ್ವಲನಂ ಕೊಂದು ಜರಾಸಂಧಂಗಳ್ಳಿ ಮಧುರಾಪುರಮಂ ಬಿಸುಟ್ಟು ಪೋಗಿ ದ್ವಾರಾವತಿಯಂ ಸಮುದ್ರಮ ನಿರ್ಗಾದಿಗೆಯಾಗಿ ಮಾಡಿದೆನೆನ್ನುಂ ಯಾದವರ ಸಜಗಳೆಲ್ಲಾತನಲ್ಲಿರ್ದರಾತನುಂ ಭೀಮನ ಕೆಯೊಳಲ್ಲದೆ ಸಾಯನೆಂಬುದಾದೇಶಮದಲೆನೆಮಿಚ್ಛೆಯುಂ ಸಮಸ ಬಲಂಬೆರಸು ಭೀಮಾರ್ಜುನರಂ ಪೇಜುದೆಂದು ಧರ್ಮಪುತನನೊಡಂಬಡಿಸಿ ನುಡಿದು ಮಧುರಾಪುರಮನೆಯ್ದ ಬೃಹದ್ದಳತನೂಜನಲ್ಲಿಗೆ ಧರ್ಮಯುದ್ಧಮಂ ಬೇಡಿಯಟ್ಟಿದೊಡಮ! ಕಲಿ ಮಾರ್ಕೊಳ್ಳದೆ ಕೊಟ್ಟು ಮೆಯ್ಯೋಳೆ ಸಿಡಿಲ್ ತಾಪಂತೆವೋಲ್ ತಾಗೆ ಮ
↑ಲಿ ಭೀಮಂ ಪಂಪಿಂಗದಾಂತು ಪಲವುಂ ಬಂಧಂಗಳಿಂ ತು ತ | - ತುಲಶೈಲಂ ಕುಲಶೈಲದೊಳ್ ಕಲುಷದಿಂ ಪೋರ್ವಂತೆವೋಲ್ ಪೋರ್ದು ನ ↑ಲ ಕಾವಂ ತುದಿಗೆಯ ಸೀಳೊ ತೆಜದಿಂ ಸೀಳಂ ಜರಾಸಂಧನಂ || ೨೭
ವಗ ಅಂತು ದೃಢ ಕಠಿನ ಹೃದಯ ಬಂಧನಂ ಜರಾಸಂಧನಂ ಕೊಂದುಮಾತನ ಮಗಂ ಕ್ಷೇಮಧೂರ್ತಿಯಂ ರಾಜ್ಯದೊಳ್ ನಿಟಿಸಿ ಜರಾಸಂಧನೇಳುವ ರಥಮಂ ತರಿಸಿ ರಾಕ್ಷಸಿಯು ಅವನ್ನು ತಿನ್ನಲೆಂದು ಎತ್ತಿಕೊಂಡು ಎರಡು ಹೋಳುಗಳನ್ನು ಒಂದೇ ಕಯ್ಯಲ್ಲಿ ಹಿಡಿಯಲಾಗಿ ಒಂದು ಮತ್ತೊಂದರಲ್ಲಿ ಸೇರಿಕೊಂಡು ಮನುಷ್ಯರೂಪವನ್ನು ತಾಳಲು ಆಶ್ಚರ್ಯಪಟ್ಟು ಜರಾಸಂಧನೆಂದು ನಾಮಕರಣಮಾಡಿ ಬೃಹದ್ಬಳನಿಗೆ ಕೊಟ್ಟಳು. ಜರಾಸಂಧನೂ ಸಾಲ್ವಲನೆಂಬ ರಾಕ್ಷಸನೂ ಒಂದಾಗಿ ಮೂವತ್ತೆರಡ ಕ್ಷೌಹಿಣೀ ಸೈನ್ಯದಿಂದ ಕೂಡಿ ಮಧುರಾಪಟ್ಟಣಕ್ಕೆ ಬಂದು ನನ್ನನ್ನು ಮುತ್ತಿಕೊಂಡರು. ಉಪಾಯಬಲದಿಂದ ಸಾಲ್ವಲನನ್ನು ಕೊಂದು ಜರಾಸಂಧನಿಗೆ ಹೆದರಿ ಮಧುರಾಪಟ್ಟಣವನ್ನು ಬಿಟ್ಟು ದ್ವಾರಾವತಿಗೆ ಹೋಗಿ ಸಮುದ್ರವನ್ನೇ ನೀರಿನ ಕಂದಕವನ್ನಾಗಿ ಮಾಡಿಕೊಂಡು ಅಲ್ಲಿಯೇ ನೆಲೆಸಿದೆ. ಇನ್ನೂ ಸೆರೆಯಾಗಿರುವ ಬಂಧಿತರಾದ ಯಾದವರು ಆತನಲ್ಲಿದ್ದಾರೆ. ಅವನು ಭೀಮನ ಕಯ್ಯಲ್ಲಲ್ಲದೆ ಸಾಯುವುದಿಲ್ಲವೆಂಬುದು ಭವಿಷ್ಯವಾಣಿಯ ಆದೇಶ. ನಮ್ಮ ಇಷ್ಟಾರ್ಥವೂ ಅದೇ. ಸಮಸ್ತಸೈನ್ಯದಿಂದ ಕೂಡಿ ನಡೆಯಬೇಕೆಂದು ಭೀಮಾರ್ಜುನರಿಗೆ ತಿಳಿಸು' ಎಂದು ಧರ್ಮರಾಜನನ್ನೊಪ್ಪಿಸಿ ನುಡಿದು ಮಧುರಾಪಟ್ಟಣವನ್ನು ಸೇರಿ ಬೃಹದ್ಬಳ ಪುತ್ರನಾದ ಜರಾಸಂಧನಲ್ಲಿಗೆ ಧರ್ಮಯುದ್ಧವನ್ನಪೇಕ್ಷಿಸಿ ಹೇಳಿ ಕಳುಹಿಸಿದನು. ೨೭. ಶೂರನಾದ ಆ ಜರಾಸಂಧನು ಪ್ರತಿಮಾತಾಡದೆ ಧರ್ಮಯುದ್ದಕ್ಕೆ ಒಪ್ಪಿ ಶರೀರದ ಮೇಲೆ ಸಿಡಿಲು ಬೀಳುವ ಹಾಗೆ ಬಿದ್ದನು. ಶೂರನಾದ ಭೀಮನು ಹಿಂದಕ್ಕೆ ಸರಿಯದೆ ಎದುರಿಸಿ ಹಲವು ಪಟ್ಟಗಳಿಂದ ಕೂಡಿ ಕುಲಪರ್ವತವು ಕುಲಪರ್ವತದೊಡನೆ ಕೋಪದಿಂದ ಯುದ್ದಮಾಡುವ ಹಾಗೆ ಕಾದಿ ಕನ್ನೈದಿಲೆಯ ದಂಟನ್ನು ತುದಿಯವರೆಗೆ ಸೀಳುವ ಹಾಗೆ ಜರಾಸಂಧನನ್ನು ಸೀಳಿದನು. ವ|| ಹಾಗೆ ಬಲಿಷ್ಠವೂ ಒರಟೂ ಆದ ಹೃದಯಬಂಧವನ್ನುಳ್ಳ ಜರಾಸಂಧನನ್ನು ಕೊಂದು ಆತನ ಮಗ ಕ್ಷೇಮಧೂರ್ತಿಯನ್ನು
Page #315
--------------------------------------------------------------------------
________________
೩೧೦ | ಪಂಪಭಾರತಂ ಸಮಸ್ತ ವಸ್ತುಗಳಂ ಕೊಂಡು ಗರುತನಂ ನೆನೆದು ಬರಿಸಿ ರಥಮಂ ಚೋದಿಸಲ್ಬಟ್ಟು ಯಾದವರ ಸೆಗಳುಮಂ ಮುಂದಿಟ್ಟು ನಾರಾಯಣಂ ಭೀಮಾರ್ಜುನರ್ವೆರಸು ಸುಖಪ್ರಯಾಣಂಗಳಿಂದಿಂದ ಪ್ರಸ್ಥಕ್ಕೆ ಎಂದು ಧರ್ಮಪುತ್ರನಂ ಕಂಡುಶಿಖರಿಣಿ|| ಜರಾಸಂಧಂ ಮುನ್ನಂ ಮಡಿದೂಡಿಳೆ ನಿಷ್ಕಂಟಕಮದ
ರ್ಕಿರಲ್ವಡಿನ್ ನಾಲ್ಕು ದೆಸೆಗೆ ಬೆಸಸಿಂ ನಿಮ್ಮನುಜರಂ | ಭರಂಗೆಯ್ದಾಗಳ್ ನೀಂ ಪಸರ್ವಸರೊಳಾ ನಾಲ್ವರುಮನಾ
ದರಂಗೊಂಡಾ ನಾಲ್ಕು ದೆಸೆಗೆ ಬೆಸಸಿಂ ಬೆಳ್ಳುಳುವಿನಂ ||
ವ|| ಅಂತು ಭೀಮಸೇನನನಿಂದ್ರನ ಮೇಲೆ ವೇಲ್ದಂತೆ ಪೂರ್ವ ದಿಗ್ಗಾಗಕ್ಕೆ ವೇಟ್ಟು ನಕುಳನಂ ಯಮನನದಿರ್ಷಲ್ವಂತೆ ದಕ್ಷಿಣದಿಶಾಭಾಗಕ್ಕೆ ಬೆಸಸಿ ಸಹದೇವನು ವರುಣನನದಿರ್ಪಲ್ ನಿಯಮಿಸುವಂತೆ ಪಶ್ಚಿಮ ದಿಣ್ಣಾಗಕ್ಕೆ ವೇಟ್ಟು ವಿಕ್ರಮಾರ್ಜುನನಂ ಕುಬೇರನಿಂ ಕಪ್ಪಂಗೊಳಲ್ ಸಮರ್ಪಿಸುವಂತೆ ಉತ್ತರೋತ್ತರಮಾಗಲುತ್ತರದಿಶಾಭಾಗಕ್ಕೆ ವೇಚ್ಚಾಗಳ್ಚಂ|| ಅರಿ ನರಪಾಲ ಮೌಲಿಮಣಿಯೊಳ್ ನೆಲೆಗೊಂಡುದು ಶಂಖ ಚಕ್ರ ಚಾ
ಮರ ಹಳಚಿಕ್ಕ ಚಿಕ್ಕಿತ ಪದಾಕೃತಿ ಬೀಸುವ ಚಾಮರಾಳಿ ಸುಂ | ದರಿಯರ ಕೆಳಿಂ ಬರ್ದುಕಿ ಬಿಚ್ಚುವು ಬೆಳ್ಕೊಡೆ ನೋಡೆ ನೋಡೆ ನಿಂ ದುರಿದುವು ಸಾಲಭಂಜಿಕೆಗಳುವು ವೈರಿನರೇಂದ್ರಗೇಹದೊಳ್ 11 - ೨೯
ರಾಜ್ಯದಲ್ಲಿ ನಿಲ್ಲಿಸಿ ಜರಾಸಂಧನ ರಥವನ್ನು ಬರಮಾಡಿ ಸಮಸ್ತವಸ್ತುಗಳನ್ನೂ ತೆಗೆದುಕೊಂಡು ಗರುಡನನ್ನು ಧ್ಯಾನಮಾಡಿ ಬರಿಸಿ ರಥವನ್ನು ನಡೆಸುವಂತೆ ಹೇಳಿ ಬಂಧಿತರಾಗಿದ್ದ ಯಾದವರನ್ನು ಮುಂದುಮಾಡಿಕೊಂಡು ನಾರಾಯಣನಾದ ಕೃಷ್ಣನು ಭೀಮಾರ್ಜುನರೊಡಗೂಡಿ ಸುಖಪ್ರಯಾಣಗಳಿಂದ ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಧರ್ಮರಾಯನನ್ನು ನೋಡಿ ಹೇಳಿದನು. ೨೮. ಜರಾಸಂಧನು ಸತ್ತುದರಿಂದ ಭೂಮಿಯು ಇನ್ನು ಮೇಲೆ ಕಂಟಕರಹಿತವಾಯಿತು. ಆದುದರಿಂದ ಇನ್ನು ತಡಮಾಡಬೇಡ (ಜೈತ್ರಯಾತ್ರೆಗಾಗಿ) ನಾಲ್ಕು ದಿಕ್ಕುಗಳಿಗೂ ನಿನ್ನ ತಮ್ಮಂದಿರನ್ನು ನೇಮಿಸು. ಕಾರ್ಯಭಾರಮಾಡುವಾಗ ಒಬ್ಬೊಬ್ಬರನ್ನು ಹೆಸರು ಹಿಡಿದು ನಾಲ್ಕು ದಿಕ್ಕುಗಳಿಗೂ ಭಯವುಂಟಾಗುವ ಹಾಗೆ ಆಜ್ಞೆಮಾಡಿ ಕಳುಹಿಸು ಎಂದನು. ವ|| ಭೀಮಸೇನನು ಇಂದ್ರನ ಮೇಲೆ ದಂಡೆತ್ತಿ ಹೋಗುವ ಹಾಗೆ ಪೂರ್ವದಿಗ್ಯಾಗಕ್ಕೂ ನಕುಲನನ್ನು ಯಮನನ್ನು ನಡುಗಿಸ ಹೇಳಿ ದಕ್ಷಿಣದಿಕ್ಕಿಗೂ ಸಹದೇವನನ್ನು ವರುಣನನ್ನು ಗೆಲ್ಲಲು ಪಶ್ಚಿಮದಿಗ್ಯಾಗಕ್ಕೂ ಗೊತ್ತುಮಾಡಿ ವಿಕ್ರಮಾರ್ಜುನನನ್ನು ಕುಬೇರನಿಂದ ಕಪ್ಪಕಾಣಿಕೆಯನ್ನು ಪಡೆಯಲು ಅಭಿವೃದ್ಧಿಯಾಗುವ ಹಾಗೆ ಉತ್ತರದಿಗ್ಯಾಗಕ್ಕೂ ನಿಯಮಿಸಿದನು. ೨೯. ಶತ್ರುರಾಜರ ರತ್ನಕಿರೀಟಗಳಲ್ಲಿ ಶಂಖ, ಚಕ್ರ, ಚಾಮರ, ಮತ್ತು ನೇಗಿಲುಗಳಿಂದ (ರೇಖೆ) ಕೂಡಿದ ಪಾದಗಳ ಆಕಾರವು ಚಕ್ರವರ್ತಿ ಚಿಹ್ನೆಗಳು ಸ್ಥಿರವಾಗಿ ನಿಂತವು. (ಅಂದರೆ) ಅವರು ಚಕ್ರವರ್ತಿಯಾದ ಧರ್ಮರಾಜನ ಪಾದಗಳನ್ನು ತಮ್ಮ ತಲೆಯಲ್ಲಿ ಧರಿಸಿಕೊಂಡು ಅವನ ಆಜ್ಞಾಧಾರಕರಾದರು. ಅವರಿಗೆ ಬೀಸುತ್ತಿದ್ದ ಚಾಮರಗಳ ಸಮೂಹಗಳು ಸುಂದರಸ್ತ್ರೀಯರ ಕಂದ ಜಾರಿಬಿದ್ದುವು. ಶ್ವೇತಚ್ಛತ್ರಿಗಳು
Page #316
--------------------------------------------------------------------------
________________
ಷಷ್ಠಾಶ್ವಾಸಂ | ೩೧೧ ವll ಅಂತು ವಿಜಯಂ ತನ್ನ ದಿಗ್ವಿಜಯದೊಳಾದ ವಿಜಯಚಿಹ್ನಂಗಳ್ ಮುನ್ನವೆ ನಗಳ ವಿಜಯದ ಗುಡಿವಿಡಿಸಿ ಅರಿ ನೃಪರಂ ಛೇದಿಸಿ ಪಾಂಚಾಳರಂ ಚಾಳಿಸಿ ಗಾಂಧರ್ವರಂ ಎರಥರ್ಮಾಡಿ ಕೌಳಾಧೀಶರು ಸಾಧಿಸಿ ಕಿಂಪುರುಷರಂ ಕಾಪುರುಷರ್ಮಾಡಿ ಬಾಕರನನನೀಕರೆನಿಸಿ ಮಾಳವಿಗರಂ ಕೆಳಗಿವಿಗೆಯ್ಯಲೀಯದಾಟಂದು ನಿಜ ನಾಮಾಂಕಿತ ಸಾಯಕಂಗಳಿಂದಚ್ಚು ನಚ್ಚರಿ ಕಿಡಿಸಿಮll ಉಳಿದಿರ್ಪಂತಮಗಾವ ಗರ್ವಮಿಯಲ್ವೇಡೆಮ್ಮನೆಮುಳ್ಳುದಂ
ನೆಕೊಂಡೆಮ್ಮಯ ಬಾಚ್ಚಿಯೊಳ್ ನಿಜಸುವಂ ನೀನೆಂದು ತಂದಿತ್ತು ಕೆ || ಹೈಜತೆಯಂ ಕೊಟ್ಟಳವಟ್ಟ ಸಾರ ಧನಮಂ ಮೂವಿಟ್ಟಿಗಂ ಪೂಣ್ಣು ಕಾ
ಲೈಂಗಿತ್ತಂತರಿಗಂಗೆ ಬೆರ್ಚಿ ಭಯದಿಂ ಗ್ರಾಮಂ ಕುಳಂ ರಾಜಕಂ || - ೩೦
ವ|| ಮತ್ತದಲ್ಲಿ ಕೆಲರಂ ಮೈತ್ರಾಸನ ವೃತ್ತಿಯೊಳ್ ನಿಟಿಸಿ ಕೆಲರನುದ್ಯತಾ ಪ್ರತಿಮಹಿತರ್ಮಾಡಿ ಕೆಲರನುಚ್ಚಾಟಿಸಿ ಸರ್ವಹರಣಂಗೆಯ್ದು ಕಸವರಮೆಲ್ಲಮನಿಂದ್ರಪ್ರಸ್ಥಕ್ಕೆ ಕಟಿಪಿ
ನೋಡುತ್ತಿರುವ ಹಾಗೆಯೇ ನಿಂತು ಉರಿದುವು. ಶತ್ರುರಾಜರ ಅರಮನೆಗಳಲ್ಲಿದ್ದ ಸಾಲುಬೊಂಬೆಗಳು ಅತ್ತವು. ವll ಹಾಗೆ ಅರ್ಜುನನು ತನ್ನ ದಿಗ್ವಿಜಯದಲ್ಲುಂಟಾದ ವಿಜಯಚಿಹ್ನೆಗಳನ್ನು ಮೊದಲೇ ಪ್ರದರ್ಶಿಸಿದನು. ಜಯಧ್ವಜವನ್ನೇರಿಸಿ ಶತ್ರುರಾಜರನ್ನು ಕತ್ತರಿಸಿ ಪಾಂಚಾಲರಾಜರನ್ನು ಚಲಿಸುವಂತೆ ಮಾಡಿ ಗಂಧರ್ವರಾಜರನ್ನು ರಥವಿಲ್ಲದವರನ್ನಾಗಿ ಮಾಡಿ ಕಾಳಾಧೀಶ್ವರನನ್ನು ಗೆದ್ದು ಕಿಂಪುರುಷರನ್ನು ಅಲ್ಪರನ್ನಾಗಿಸಿ ಬಾತ್ತೀಕರನ್ನು ಸೈನ್ಯವಿಲ್ಲದವರನ್ನಾಗಿ ಮಾಡಿ ಮಾಳವಿಕರನ್ನು ಉದಾಸೀನರಾಗಿರಲು ಬಿಡದೆ ಮೇಲೆಬಿದ್ದು ತನ್ನ ಹೆಸರಿನ ಗುರುತುಗಳಿಂದ ಕೂಡಿದ ಬಾಣಗಳಿಂದ ಹೊಡೆದು ಅವರ ನಂಬಿಕೆಯನ್ನು ಕೆಡಿಸಿದನು. ೩೦. ಗ್ರಾಮದವರೂ ಕುಲದವರೂ ರಾಜರೂ ಹೆದರಿ ನಾವು ನಿನ್ನ ವಿಷಯದಲ್ಲಿ ಅಲಕ್ಷ್ಯದಿಂದಿರುವಂತೆ ನಮಗೇನಹಂಕಾರವಿದೆ. ನಮ್ಮೊಡನೆ ಯುದ್ಧಮಾಡಬೇಡ; ನಮ್ಮಲ್ಲಿರುವದನ್ನು ಪೂರ್ಣವಾಗಿ ತೆಗೆದುಕೊಂಡು ನಮ್ಮನಮ್ಮ ಬದುಕುಗಳಲ್ಲಿ ಸಿಧಿಪಡಿಸು (ನಿಯಮಿಸು) ನೀನು, ಎಂದು ನಿಷ್ಕೃಷ್ಟವೂ ಸಾರಭೂತವೂ ಆದ ಧನವನ್ನು ತಮ್ಮ ಬೊಗಸೆಯಲ್ಲಿ ಕೊಟ್ಟು ಕೈಸೆರೆಯಲ್ಲಿದ್ದವರೆನ್ನೆಲ್ಲಾ ಬಿಟ್ಟು ಕೊಟ್ಟು ಮೂರು ವಿಧವಾದ ಬಿಟ್ಟಿಯ ಕೆಲಸವನ್ನೂ ಮಾಡುತ್ತೇವೆ ಎಂದು ಒಪ್ಪಿ ಪ್ರತಿಜ್ಞೆಮಾಡಿ ಅರ್ಜುನನ ಕಾಲಿಗೆ ನಮಸ್ಕರಿಸಿದರು. ವl ಅಲ್ಲದೆ ಅಲ್ಲಿ ಕೆಲವರನ್ನು ಸ್ನೇಹಿತರನ್ನಾಗಿ ಭಾವಿಸಿದನು, ಉದಾಸೀನರಾಗಿರುವ ಹಾಗೆ ಇದ್ದು ಮಲೆತಿದ್ದ ಮತ್ತೆ ಕೆಲವರನ್ನು ಬೇರೆ ರಾಜ್ಯಕ್ಕೆ ಓಡಿಸಿದನು. ಕೆಲವರನ್ನು ಎಬ್ಬಿಸಿ ಓಡಿಸಿ ಎಲ್ಲವನ್ನೂ ಕಸಿದುಕೊಂಡು, ಚಿನ್ನವನ್ನೆಲ್ಲ (ದ್ರವ್ಯವನ್ನೆಲ್ಲ ಇಂದ್ರಪ್ರಸ್ಥಕ್ಕೆ
- * ವ್ಯಕ್ತ ವಿಶೇಷ -ಸೋತ ರಾಜನು ಗೆದ್ದವನಿಗೆ ಮಾಡಬೇಕಾದ ಮೂರು ಬಗೆಯ ವಿಷ್ಟಿಕರ್ಮಗಳು - ಶೋಧನಕರ್ಮ, ವಹನಕರ್ಮ ಮತ್ತು ಅಪನಯನಕರ್ಮ. ಅಂದರೆ ಶಿಬಿರ, ಮಾರ್ಗ, ಸೇತು, ಬಾವಿ ಮೊದಲಾದವುಗಳನ್ನು ಶೋಧನಮಾಡಿ ಸರಿಯಾಗಿಡುವುದು ಶೋಧನಕರ್ಮ; ಯಂತ್ರ, ಆಯುಧ, ಆವರಣ, ಉಪಕರಣಗಳನ್ನು ಸಾಗಿಸಿಕೊಡುವುದು ವಹನ ಕರ್ಮ; ಯುದ್ದದಲ್ಲಿ ಗಾಯಗೊಂಡವರನ್ನೂ ಸತ್ತವರನ್ನೂ ಅವರ ಆಯುಧಕವಚಸಮೇತ ತಂದೊಪ್ಪಿಸುವುದು ಅಪನಯನಕರ್ಮ. (ಅರ್ಥಶಾಸ್ತ್ರ ೧೦-೪)
Page #317
--------------------------------------------------------------------------
________________
೩೧೨) ಪಂಪಭಾರತಂ | ಕಾಶ್ಮೀರ ಹಿಮವಂತ ಹೇಮಕೂಟ ಕೈಲಾಸ ಪಾರಿಯಾತ್ರಶ್ವೇತಶೃಂಗ ಗಂಧಮಾದನಗಿರಿ ನಿಕಟವರ್ತಿಗಳಪ್ಪ ಪರ್ವತರಾಜರನಪಗತತೇಜರ್ಮಾಡಿ ಕಸವರಮಂ ಕೆಯ್ಕೆಮಾಡಿ ಮೇರುಪರ್ವತದ ತೆಂಕಣ ತಟ್ಟಲೊಳ್ ದ್ವಾದಶಯೋಜನ ಪ್ರಮಾಣಮಪ್ಪ ಜಂಬೂವೃಕ್ಷದ ಕೆಲದೊಳಡಸಿ ರಸದ ತೋಜಿತ ಪರಿವಂತೆ ಕನಕಗಿರಿಯನಲೆದು ಪರಿವ ಜಂಬೂನದಮಂಬ ತೋಜನೆಯೊಳ್ ಪುಟ್ಟಿದ ಜಾಂಬೂನದವೆಂಬ ಪೊನ್ನ ಪಾಸತಿಗಳಂ ಕಂಡುಕ೦ll ಗಾಂಡೀವದ ಕೊಪುಗಳೊಳ್
ಖಂಡಿಸಿ ತಟದ ಕನಕ ರೇಣುವನವನಾ | ಖಂಡಲ ತನಯನಸುಂಗೊಳೆ
ಖಂಡಿಸಿದಂ ನಿಶಿತ ಪರಶು ಶರಸಮಿತಿಗಳಿ೦ 10. ವ|| ಅಂತು ಕನಕರೇಣುಗಳ ಪುಟ್ಟದ ಪಾಸಣೆಗಳುಮಂ ಕನಕದ ಪಿರಿಯ ಸೆಲೆಗಳುಮ ನೊಟ್ಟಿ ಬೆಟ್ಟಾಗಿ ಪುಂಜಿಸಿಚಂ|| ಬರಿಸಿ ಘಟೋತ್ಕಚಂಬೆರಸು ದಾನವಸೇನೆಯನೀಗಳೀ ಬಲಂ
ಬೆರಸಿವನಿಂತು ಪೊತ್ತು ನಡೆ ನಮ್ಮ ಪುರಕ್ಕೆನೆ ತದ್ದಿರೀಂದ್ರ ಕಂ | ದರ ಕನಕಾಚಳಂಗಳೆನತುಂಟನಿತಂ ತವ ಹೇಮ ರೇಣುಗ. ಟ್ವೆರಸು ಕಡಂಗಿ ಪೊತ್ತು ನಡೆದತ್ತು ಘಟೋತ್ಕಚರೌದ್ರಸಾಧನಂ || ೩೨
ವ|| ಆಗಳ್ ಪರಾಕ್ರಮಧವಳಂ ತನ್ನ ಪರಾಕ್ರಮಮಂ ಮಜಯಲೆಂದು ಕಳಾಸದ ಮೇಗಕ್ಕೆ ಎಂದು ಕುಬೇರನಿಂ ಕಪ್ಪಂಗೊಂಡು ಪೊನ್ನಂ ಜಕ್ಕರೆಯಿಂ ಪೊತ್ತು ಬರೆ ತಡೆಯದಿಂದ ಪ್ರಸ್ಥಕ್ಕೆ ಬಂದನಿತ್ತ ಭೀಮನುಂ ಮೂಡಣ ದಿಶಾಭಾಗಮಂ ಬಾಯ್ಕಳಿಸಿ ದೇವೇಂದ್ರನ
ಕಳುಹಿಸಿದನು. ಕಾಶ್ಮೀರ, ಹಿಮವಂತ, ಹೇಮಕೂಟ ಕೈಲಾಸ ಪಾರಿಯಾತ್ರ ಶ್ವೇತಶೃಂಗ ಗಂಧಮಾದನವೇ ಮೊದಲಾದ ಪರ್ವತಗಳ ತಪ್ಪಲಿನಲ್ಲಿದ್ದ ಪರ್ವತರಾಜರುಗಳನ್ನು ತೇಜೋಹೀನರನ್ನಾಗಿ ಮಾಡಿ ಅವರ ಐಶ್ವರ್ಯವನ್ನು ಸ್ವಾಧೀನಪಡಿಸಿಕೊಂಡನು. ಮೇರುಪರ್ವತದ ದಕ್ಷಿಣ ತಪ್ಪಲಿನಲ್ಲಿ ಹನ್ನೆರಡು ಯೋಜನದ ಅಳತೆಯನ್ನುಳ್ಳ ನೇರಳೆಯ ಮರದ ಕೆಳಗೆ ಅಗೆದು ಕೊರೆದು ಪಾದರಸದ ನದಿಯು ಹರಿಯುವಂತೆ ಮೇರುಪರ್ವತವನ್ನು ತೋಡಿ ಹರಿಯುವ ಜಂಬೂನದವೆಂಬ ನದಿಯಲ್ಲಿ ಹುಟ್ಟಿದ ಜಾಂಬೂನದವೆಂಬ ಚಿನ್ನದ ಹಾಸುಬಂಡೆಯನ್ನು ನೋಡಿದನು. ೩೧. ಗಾಂಡೀವದ ತುದಿಯ ಭಾಗದಿಂದ ಕತ್ತರಿಸಿ ಆ ಜಂಬೂನದಿಯ ತೀರದ ಚಿನ್ನದ ಬಂಡೆಗಳನ್ನು ಪ್ರಾಣಸಹಿತ (ಸಚೇತನವಾಗಿ) ಹರಿತವಾದ ಕೊಡಲಿ ಮತ್ತು ಬಾಣಸಮೂಹದಿಂದ ಕತ್ತರಿಸಿದನು. ವ|| ಚಿನ್ನದ ರೇಣುಗಳಿಂದ ಕೂಡಿದ ಹಾಸುಬಂಡೆಗಳನ್ನೂ ದೊಡ್ಡಶಿಲೆ ಗಳನ್ನೂ ರಾಶಿಯನ್ನಾಗಿ ಮಾಡಿದನು. ೩೨. ಘಟೋತ್ಕಚನನ್ನು ರಾಕ್ಷಸಸೇನೆಯೊಡನೆ ಬರಮಾಡಿ ಈಗಲೇ ಈ ಸೈನ್ಯದೊಡನೆ ಇವುಗಳನ್ನು ಹೀಗೆಯೇ ಹೊತ್ತುಕೊಂಡು ನಮ್ಮಪಟ್ಟಣಕ್ಕೆ ನಡೆ ಎನ್ನಲು ಆ ಬೆಟ್ಟಗಳ ಕಣಿವೆಗಳಲ್ಲಿರುವ ಚಿನ್ನದ ಬೆಟ್ಟಗಳೆಷ್ಟಿತ್ತೋ ಅಷ್ಟನ್ನೂ ಪೂರ್ಣವಾದ ಚಿನ್ನದ ರೇಣುಗಳೊಡನೆ ಉತ್ಸಾಹದಿಂದ ಹೊತ್ತು ಘಟೋತ್ಕಚನ ಆ ಭಯಂಕರವಾದ ಸೈನ್ಯವು ಇಂದ್ರಪ್ರಸ್ಥಕ್ಕೆ ನಡೆಯಿತು. ವ|| ಆಗ ಅರ್ಜುನನು ತನ್ನ ಪೌರುಷವನ್ನು ಪ್ರದರ್ಶನಮಾಡಬೇಕೆಂದು ಕೈಲಾಸಪರ್ವತದ
Page #318
--------------------------------------------------------------------------
________________
ಷಷ್ಠಾಶ್ವಾಸಂ | ೩೧೩
ವಜ್ರಮುಮಿಂದ್ರಾಣಿಯ ಕೈಗನ್ನಡಿಯುಮುಲೆಯ ಸಮಸ್ತ ವಸ್ತುಗಳಂ ತಂದಂ ಸಹದೇವನುಂ
ಪಡುವಣ ದೆಸೆಯ ಮಂಡಳಿಕರನದಿರ್ಪಿಯುಮುದಿರ್ಪಿಯುಂ ಕೊಂಡು ವರುಣನ ಮಕರಮುಂ ವರುಣಾನಿಯ ಕೊರಲೊಳಯೆ ಮಿನುಗುಮುಟೆಯೆಯುಟದ ವಸ್ತುಗಳೆಲ್ಲಮಂ ತಂದು ಮುಂದಿಟ್ಟಂ ನಕುಳನುಂ ತಂಕಣ ದೆಸೆಯ ಮಲೆಪರಂ ಮಂಡಳಿಕರುಮನಸಿಯರಾಗ ಕವರ್ದುಕೊಂಡು ಲಂಕೆಯ ಮೇಗೆ ನಡೆದು ವಿಭೀಷಣಂ ತನಗೆ ಬಾಯ್ಕಳದಿರ್ದೊಡೆ ವಿಕ್ರಮಾರ್ಜುನಂಗೆ ಪೇಳಿಟ್ಟಿದೊಡೆ
eroll
ತೊಂಡಿನೊಳುರ್ಕಿ ಕೆಟ್ಟ ದಶಕಂಠನನಕ್ಕಟ ಕೊಂಡ ಪರ್ಮರುಳ್ ಕೊಂಡುದೆ ತನ್ನುಮಂ ಬಿಸುಡು ನೀಂ ಬಲಗರ್ವಮನಾ ಸಮುದ್ರ ಮೇ | ಬಂಡಮ್ ಪಾಯೊಡೆಂದು ನಿಜ ಸಾಯಕದೊಳ್ ಬರೆದೆಚ್ಚು ಕಪ್ಪಮಂ ಕೊಂಡನವುಂಕಿ ಲಂಕೆಯ ವಿಭೀಷಣನಂ ಪರಸೈನ್ಯಭೈರವಂ ||
22
ವ|| ಅಂತು ನಾಲ್ಕುಂ ಸಮುದ್ರಂಗಳ ನೀರುಡೆಯ ರತುನಂಗಳುಮಂ ದಿಶಾಗಜಂಗಳುಟೆಯ ಗಜಂಗಳುಮಂ ಆದಿತ್ಯನ ಕುದುರೆಗಳುಟೆಯೆ ಕುದುರೆಗಳುಮಂ ದೇವೇಂದ್ರನ ಸುರಭಿಯುಮಶ್ವರನ ನಂದಿಯುಮುಟೆಯ ಗೋವಜಂಗಳುಮನಿಂದ್ರಪ್ರಸ್ಥಕ್ಕೆ ತೆರಳಿ ಬಟೆಯಂ
ಮೇಲಕ್ಕೆ ಬಂದು ಕುಬೇರನಿಂದ ಕಪ್ಪವನ್ನು ಸ್ವೀಕರಿಸಿ ಯಕ್ಷರು ಚಿನ್ನವನ್ನು ಗುಂಪಾಗಿ ಹೊತ್ತು ಬರಲು ಸಾವಕಾಶಮಾಡದೆ ಇಂದ್ರಪ್ರಸ್ಥಕ್ಕೆ ಬಂದನು. ಈ ಕಡೆ ಭೀಮನೂ ಪೂರ್ವದಿಕ್ಕಿನ ಭಾಗವನ್ನು ಆಜ್ಞಾಧೀನರನ್ನಾಗಿ ಮಾಡಿ ದೇವೇಂದ್ರನ ವಜ್ರಾಯುಧವನ್ನೂ ಶಚೀದೇವಿಯ ಕೈಗನ್ನಡಿಯನ್ನೂ ಬಿಟ್ಟು ಮಿಕ್ಕ ಸಮಸ್ತವಸ್ತುಗಳನ್ನೂ ತಂದನು. ಸಹದೇವನೂ ಪಶ್ಚಿಮದಿಕ್ಕಿನ ಸಾಮಂತರನ್ನು ನಡುಗಿಸಿಯೂ ನಾಶಮಾಡಿಯೂ ಅವರ ಐಶ್ವರ್ಯವನ್ನೂ ತೆಗೆದುಕೊಂಡು ವರುಣನ ವಾಹನವಾದ ಮಕರವನ್ನೂ ಅವನ ಹೆಂಡತಿಯ ಮಾಂಗಲ್ಯವನ್ನೂ ಉಳಿದು ಮಿಕ್ಕೆಲ್ಲ ವಸ್ತುಗಳನ್ನೂ ತಂದು ಮುಂದಿಟ್ಟನು. ನಕುಳನು ದಕ್ಷಿಣ ದಿಕ್ಕಿಗೆ ಗರ್ವಿಷ್ಟರನ್ನೂ ಸಾಮಂತರನ್ನೂ ಕೃಶವಾಗುವ ಹಾಗೆ ದೋಚಿಕೊಂಡು ವಿಭೀಷಣನು ತನಗೆ ಅಧೀನವಾಗದಿರಲು ಅರ್ಜುನನಿಗೆ ಹೇಳಿ ಕಳುಹಿಸಿದನು. ೩೩. ಪರಸೈನ್ಯಭೈರವನಾದ ಅರ್ಜುನನು ಅಯ್ಯೋ ದೌಷ್ಟದಿಂದ ಉಬ್ಬಿ ಕೆಟ್ಟ ಆ ರಾವಣನನ್ನು ಹಿಡಿದಿದ್ದ ಪೆಡಂಭೂತವೇ ನಿನ್ನನ್ನೂ ಹಿಡಿದಿದೆಯೆ? ನಿನ್ನ ಬಲಗರ್ವವನ್ನು ಬಿಸಾಡು; ನಾನು ನಿನ್ನ ಮೇಲೆ ಹಾಯ್ದು ಬಂದರೆ ನಿನ್ನ ಆ ಸಮುದ್ರವು ಯಾವ ಪ್ರಯೋಜನಕ್ಕೆ ಬರುತ್ತದೆ ಎಂದು ತನ್ನ ಬಾಣದಲ್ಲಿ ಬರೆದು ಪ್ರಯೋಗಿಸಿ ಆ ಲಂಕೆಯ ವಿಭೀಷಣನನ್ನು ಅಡಗಿಸಿ ಕಪ್ಪವನ್ನು ಕೊಂಡನು.
ವ ಹಾಗೆ ನಾಲ್ಕು ಸಮುದ್ರಗಳ ನೀರನ್ನುಳಿದು ಮಿಕ್ಕೆಲ್ಲ ರತ್ನಗಳನ್ನೂ ದಿಗ್ಗಜಗಳನ್ನೂ ಬಿಟ್ಟು ಮಿಕ್ಕೆಲ್ಲ ಆನೆಗಳನ್ನೂ ಸೂರ್ಯನ ಕುದುರೆಗಳನ್ನುಳಿದು ಮಿಕ್ಕೆಲ್ಲ ಕುದುರೆಗಳನ್ನೂ ದೇವೇಂದ್ರನ ಕಾಮಧೇನುವನ್ನೂ ಈಶ್ವರನ ನಂದಿಯನ್ನೂ ಬಿಟ್ಟು ಮಿಕ್ಕೆಲ್ಲ ಗೋಸಮೂಹಗಳನ್ನೂ ಇಂದ್ರಪ್ರಸ್ಥದಲ್ಲಿ ಕೂಡಿಸಿದರು. ಬಳಿಕ ಕೃಷ್ಣನ ಅಭಿಪ್ರಾಯದ
Page #319
--------------------------------------------------------------------------
________________
೬೧೪ | ಪಂಪಭಾರತಂ ನಾರಾಯಣನ ಮತದೊಳ್ ಹಸ್ತಿನಾಪುರದೊಳಿರ್ದ ದೃತರಾಷ್ಟ್ರ ವಿದುರ ಗಾಂಗೇಯ ದ್ರೋಣಾಶ್ವತ್ಥಾಮ ಕೃಪಬಾಘೀಕ ಸೋಮದತ್ತ ಭಗದತ್ತ ಭೂರಿಶ್ರವಃ ಕರ್ಣ ಶಲ್ಯ ಶಕುನಿ ಸೈಂಧವ ದುರ್ಯೋಧನ ದುಶ್ಯಾಸನಾದಿಗಳೆಲ್ಲಂ ಬಲಿಯನಟ್ಟಿ ಬರಿಸಿ ಶಿಶುಪಾಲಾದಿ ಗಳಪ್ಪನೇಕಾಧೀಶ್ವರರೆಲ್ಲರುಮಂ ಬರಿಸಿ ವ್ಯಾಸರ್ ಮೊದಲಾಗೆ ಬ್ರಹ್ಮಋಷಿಯರೆಲ್ಲರುಮಂ ಬರಿಸಿ ತುಟಿಲ ಪರಕೆಯ ಸಮಾನ ಪ್ರತಿಪತ್ತಿಯಿಂ ಕಿವಿರಿಯರಳೆದು ಪೊಡೆವಟ್ಟು ಪರಸಿಯಪ್ಪಿಕೊಂಡು ನುಡಿದು ನೋಡಿಯುಂ ನಕ್ಕುಂ ಕೆಯ್ಯಂ ಪಿಡಿದುಂ ಬಲ್ಲಿದಿರೆ ಎಂದು ಪ್ರಿಯದೊಳಂ ಬಿರ್ದಿನೊಳಂ ಸಂತಸಂಬಡಿಸಿ ಶುಭ ದಿನ ವಾರ ನಕ್ಷತ್ರ ಯೋಗ ಕರಣ ಮುಹೂರ್ತದೊಳಿಂದ ಪ್ರಸ್ತಕ್ಕೆ ಉತ್ತರ ದಿಣ್ಣಾಗದೊಳ್ ಸಹಸ್ರ ಯೋಜನ ಪ್ರಮಾಣದೊಳ್ ಯಾಗಮಂಟಪಮಂ ಸಮೆದು ಮಯನ ಕೊಟ್ಟ ಸಭಾಮಂಟಪದೊಳ್ ಬ್ರಹ್ಮಋಷಿಯರುಮನರಸುಮಕ್ಕಳು ಮನೆಡೆಯದಿರಿಸಿ ಯಜ್ಞದ್ರವ್ಯಂಗಳೆಲ್ಲಮಂ ನೆರಪಿ ಮಹಾವಿಭವದೊಳ್ ಶಮಾ ಪಾರ್ಶ್ವತಳ ದಕ್ಷಿಣಾಶಾಲೆಯೊಳ್ ಹಿರಣ್ಯದಾನವಂ ಮಾಡಿ ವೇದಿನಿಹಿತಂಗಳಷ್ಟಾಹವನೀಯ ದಕ್ಷಿಣ ಗಾರ್ಹಪತ್ಯಂಗಳೆಂಬ ಮೂಜುಂ ಕೊಂಡಂಗಳೊಳುತ್ತರವೇದಿಯೊಳಗ್ನಿಸಂಧಾನಂಗೆಯ್ದು ವ್ಯಾಸ ಕಶ್ಯಪ ವಿಶ್ವಾಮಿತ್ರ ಭಾರದ್ವಾಜ ಬ್ರಹ್ಮಾಧ್ವರ್ಯಾಕ್ಷೀಧ ಮೈತ್ರಾವರುಣಾಗ್ನಿ ಪರಿಚಾರಕೋದ್ಧಾತ್ಮ ನೇತೃ ಹೋತೃ ಜಮದಗ್ನಾದಿಗಳಪ್ಪ ಷೋಡರ್ಶಜರ್ಕಳಿಂ ಬೇಳಟ್ಟು ಧರ್ಮಪುತ್ರಂ ಸಪತ್ನಿ ಯಜಮಾನನಾಗಿರ್ದಾಗಳ
ಪ್ರಕಾರ ಹಸ್ತಿನಾಪುರದಲ್ಲಿದ್ದ ಧೃತರಾಷ್ಟ್ರ ವಿದುರ ಭೀಷ್ಮ ದ್ರೋಣಾಶ್ವತ್ಥಾಮ ಕೃಪ ಬಾಘೀಕ ಸೋಮದತ್ತ ಭಗದತ್ತ ಭೂರಿಶ್ರವ ಕರ್ಣ ಶಲ್ಯ ಶಕುನಿ ಸೈಂಧವ ದುರ್ಯೋಧನ ದುಶ್ಯಾಸನನೇ ಮೊದಲಾದವರನ್ನೆಲ್ಲ ದೂತರನ್ನು ಕಳುಹಿಸಿ ಬರಮಾಡಿಕೊಂಡರು. ಶಿಶುಪಾಲನೇ ಮೊದಲಾದ ಅನೇಕ ಚಕ್ರವರ್ತಿಗಳನ್ನು ಬರಿಸಿದರು. ವ್ಯಾಸರೇ ಮೊದಲಾದ ಬ್ರಹ್ಮಋಷಿಗಳನ್ನು ನಮಸ್ಕಾರ ಆಶೀರ್ವಾದ ಸಮಾನಸತ್ಕಾರಗಳಿಂದ ಕಿರಿಯರು ಹಿರಿಯರು ಎಂಬುದನ್ನು ತಿಳಿದು ನಮಸ್ಕರಿಸಿ ಆಶೀರ್ವದಿಸಿ ಆಲಿಂಗಿಸಿದರು. ಮಾತನಾಡಿದರು, ನೋಡಿದರು, ನಕ್ಕರು, ಹಸ್ತಲಾಘವವನ್ನಿತ್ತು ಕ್ಷೇಮವಾಗಿದ್ದೀರಾ ಎಂದು ಪ್ರಶ್ನೆಮಾಡಿದರು. ಪ್ರೀತಿಯಿಂದಲೂ ಆತಿಥ್ಯದಿಂದಲೂ ಸಂತೋಷಪಡಿಸಿದರು, ಶುಭದಿನ ವಾರ ನಕ್ಷತ್ರ ಯೋಗ ಕರಣ ಮುಹೂರ್ತದಲ್ಲಿ ಇಂದ್ರಪ್ರಸ್ಥಕ್ಕೆ ಉತ್ತರದಿಗ್ಯಾಗದಲ್ಲಿ ಸಹಸ್ರ ಯೋಜನದಳತೆಯಲ್ಲಿ ಯಾಗಮಂಟಪವನ್ನು ನಿರ್ಮಿಸಿದರು. ಮಯನು ಕೊಟ್ಟ ಸಭಾಮಂಟಪದಲ್ಲಿ ಬ್ರಹ್ಮಋಷಿಯರನ್ನೂ ರಾಜಕುಮಾರರನ್ನೂ ಉಚಿತ ಸ್ಥಳಗಳಲ್ಲಿ ಕುಳ್ಳಿರಿಸಿದರು. ಯಜ್ಞದ್ರವ್ಯಗಳನ್ನೆಲ್ಲ ಒಟ್ಟುಗೂಡಿಸಿದರು. ಮಹಾವೈಭವದಿಂದ ಬನ್ನಿಮರದ ಪಕ್ಕದಲ್ಲಿದ್ದ ದಕ್ಷಿಣಶಾಲೆಯಲ್ಲಿ ಹಿರಣ್ಯದಾನವನ್ನು ಮಾಡಿ ಜಗಲಿಗಳ ಮೇಲೆ ಇಡಲ್ಪಟ್ಟ ಆಹವನೀಯ ದಕ್ಷಿಣ ಗಾರ್ಹಪತ್ಯಗಳೆಂಬ ಮೂರು ಕುಂಡಗಳಲ್ಲಿ ಉತ್ತರದ ಜಗಲಿಯಲ್ಲಿ ಅಗ್ನಿಸಂಧಾನಮಾಡಿಕೊಂಡರು. ವ್ಯಾಸ, ಕಶ್ಯಪ, ವಿಶ್ವಾಮಿತ್ರ, ಭಾರದ್ವಾಜ, ಬ್ರಹ್ಮ, ಅಧ್ವರ್ಯ, ಆಗ್ನಿದ್ರ, ಮೈತ್ರಾವರುಣ, ಅಗ್ನಿಪರಿಚಾರಕ,
Page #320
--------------------------------------------------------------------------
________________
ಷಷ್ಠಾಶ್ಚಾಸಂ / ೩೧೫ ಕಂll ಚಾರುತರ ಯಜ್ಞವಿದ್ಯಾ
ಪಾರಗರ ರವಂಗಳಿಂ ಸಧಾಕಾರ ವಷ | ಟ್ಯಾರ ಸ್ವಾಹಾಕಾರೋಂ | ಕಾರ ಧ್ವನಿ ನೆಗಟಿ ನೆಗಟ್ಟುದಾಹುತಿಧೂಮಂ ಬಳಸೆ ಮುಗಿಲಲ್ ಕನಕಾ ಚಳಮಂ ಬಳಸುವವೊಲಿಕ್ಕಿದಾಹುತಿಗಳ ಗೊಂ | ದಳದಿನೊಡನೂಗೆಹ ಪೊರೆಗಳ
ಬಳಸಿದುವೆಡೆವಿಡದ ಕನಕಯೂಪಮನಾಗಳ್ || ಚಂil ಒಡನೆ ದಿಗಂತ ದಂತಿಗಳ ಕೊಡ ಮೊದಲ್ಗಳೊಳೆಯ ಪೊಕ್ಕು ಸಿ
ಪಡಸಿದ ಮಾಣಿಯಾದುವು ಕರಂಗಳಡಂಗಿ ಕಿಲುಬುಗೊಂಡ ಕ | ನಡಿಗಣೆಯಾಯ್ತು ಭಾನುವಳಯಂ ದಿವಿಜಾಪಗೆ ನೋಡೆ ಕೂಡ ಕ ರ್ಪಡರ್ದಣೆಯಾದುದಾ ಯಮುನೆಗಗ್ಗದ ಯಾಗದ ಧೂಮದೇಣಿಯೊಳ್ ll೩೬ ಕ೦ll ಗಣನಾತೀತಾಜಾಹುತಿ
ಗಣದಿಂದ ತಣಿಯ ಜಾತವೇದನುಮಾ ಬ್ರಾ: | ಹಣಸಮಿತಿ ಬೇಳೆ ದೇವರ್ ತಣಿಯುಂಡರ್ ನೆರೆದು ದಿವ್ಯಹವ್ಯಾಮೃತಮಂ |
೩೭ ಮll ತ್ರಿದಶೇಂದ್ರಂಗೆ ಯುಧಿಷ್ಠಿರಾಧ್ವರದ ಮಾಸಾಮರ್ಥ್ಯಮಂ ಸೂಟು ಸೂ
ಬದ ಪೇಪಲ್ ಪರಿವಂತೆ ಪೊ ಪಲವುಂ ಧೂಮಂಗಳಾ ಹೋಮ ಧೂ || ಮದ ಗಂಧಂ ನಸು ಮುಟ್ಟಿ ದಿವ್ಯಮಖಮಂ ಕಳ್ಕೊಂಡು ಸಗ್ಯಕ್ಕೆ ಪಾ ಆದುವಾ ಪಾರಿವ ಜಕ್ಕವಕ್ಕಿಗಳದೇಂ ಪಂಪೋ ಮಹಾಯಜ್ಞದಾ || ೩೮
ಉದ್ದಾತೃ, ನೇತ್ರ, ಹೋತೃ, ಜಮದಗ್ನಿಗಳೇ ಮೊದಲಾದ ೧೬. ಋತ್ವಿಜರುಗಳಿಂದ ಯಜ್ಞ ಮಾಡಹೇಳಿ ಧರ್ಮರಾಜನು ಪತ್ನಿಯಿಂದ ಕೂಡಿ ಯಜಮಾನನಾದನು. ೩೪. ಯಜ್ಞವಿದ್ಯೆಯಲ್ಲಿ ಪೂರ್ಣಪಂಡಿತರಾದವರ ಅತ್ಯಂತ ಮನೋಹರವಾದ ಧ್ವನಿಗಳಿಂದ ಸ್ವಾಹಾಕಾರ, ಸ್ವಧಾಕಾರ, ವಷಟ್ಕಾರ, ಓಂಕಾರಧ್ವನಿಗಳುಂಟಾದುವು, ಹವಿಸ್ಸಿನ ಹೊಗೆಯು ಮೇಲಕ್ಕೆದ್ದಿತು. ೩೫. ಮೋಡಗಳು ಮೇರುಪರ್ವತವನ್ನು ಬಳಸುವ ಹಾಗೆ ಹೋಮಮಾಡಿದ ಆಹುತಿಗಳ ಸಮೂಹದಿಂದ ಹುಟ್ಟಿದ ಹೊಗೆಗಳು ಅವಿಚ್ಛಿನ್ನವಾಗಿ ಚಿನ್ನದ ಯೂಪಸ್ತಂಭವನ್ನು ಬಳಸಿದುವು. ೩೬. ಅತಿಶಯವಾದ * ಯಾಗದ ಹೆಚ್ಚಿದ ಹೊಗೆಯು ದಿಕ್ಕುಗಳ ಕೊನೆಯಲ್ಲಿರುವ ಆನೆಗಳ ಕೊಂಬುಗಳ ಮೂಲವನ್ನು ವಿಶೇಷವಾಗಿ ಪ್ರವೇಶಿಸಿ ಚಿಪ್ಪನ್ನು ತೊಡಿಸಿದಂತಾಯಿತು. ಸೂರ್ಯ ಬಿಂಬವು ಕಿಡಿಗಳು ಹೊಗೆಯಿಂದ ಮರೆಯಾಗಿ ಕಿಲುಬುಗೊಂಡ ಕನ್ನಡಿಗೆ ಸಮಾನ ವಾಯಿತು. ದೇವಗಂಗಾನದಿಯು ಕರಗಾಗಿ ಯಮುನಾದಿಗೆ ಸಮಾನವಾಯಿತು. ೩೭. ಅಸಂಖ್ಯಾತವಾದ ಆಜ್ಞಾಹುತಿಗಳ ಸಮೂಹದಿಂದ ಅಗ್ನಿಯು ತೃಪ್ತಿಪಡುವಂತೆ ಆ ಬ್ರಾಹ್ಮಣಸಮೂಹವು ಹೋಮಮಾಡಲು ದೇವತೆಗಳೆಲ್ಲ ಒಟ್ಟುಗೂಡಿ ಶ್ರೇಷ್ಠವಾದ ಹವಿಸ್ಸುಗಳೆಂಬ ಅಮೃತವನ್ನು ತೃಪ್ತಿಯಾಗಿ ಊಟಮಾಡಿದರು. ೩೮. ಧರ್ಮರಾಜನ ಯಜ್ಞದ ಮಹಾಮಹಿಮೆಯನ್ನು ದೇವೇಂದ್ರನಿಗೆ ಕ್ರಮಕ್ರಮವಾಗಿ
Page #321
--------------------------------------------------------------------------
________________
೩೧೬ | ಪಂಪಭಾರತಂ
ವ|| ಅಂತು ಪುರೋಡಾಶ ಪವಿತ್ರೋದರನುಂ ಸೋಮಪಾನ ಕಷಾಯಿತೋದರನುಮಾಗಿ ಮೂವತ್ತೆರಡು ದಿವಸದೊಳ್ ಕಡುವಂ ನಿರ್ವತಿ್ರಸಿ ಮಹಾದಾನಂಗೆಯ್ದು ದಕ್ಷಿಣಾಕಾಲದೊಳ್ ಉll ಒಟ್ಟದ ಪೊನ್ನ ಬೆಟ್ಟುಗಳನೀವಡಗೇವುದೂ ತೂಕಮನ್ನ ಕೆ
“ಟ್ಟಳೆ ಕೊಳ್ಳಿಮಂದು ಕುಡ ಷೋಡಶ ಋತ್ವಿಜರ್ರಿತ್ತುದರ್ಕೆ ಬಾ | ↑ಟ್ಟರೆ ವಿಪ್ರಕೋಟಿ ಮಡಗಡೆಯಿಲ್ಲದೆ ಪೊನ್ನ ರಾಶಿಯಂ
ಬಟ್ಟನೆ ಬಂದು ಕಾಯೆ ಯಮನಂದನನೇನ್ ತೊದಳಿಲ್ಲದಿತ್ತನೆ || ೩೯ ಸ | ದಾನಾಂಭಃ ಪೀನ ಗಂಡಸ್ಥಳ ಕರಿನಿಕರಂ ಬಾಯೋ ಮಚ್ಚುವೇಲಾ
ಜಾನೇಯಾಶ್ಚರಂ ಬಾಯೊ ಮಣಿನಿಚಯಂ ಬಾಚಿಯೋ ಪೇಟಿಮೆಂದಾ | ದೀನಾನಾಥರ್ಗೆ ವೃದ್ಧ ದ್ವಿಜ ಮುನಿನಿಕರಕ್ಕಂದೆಡರ್ ಪೋಪಿನಂ ಕಃ ಕೇನಾರ್ಥಿ ಕೋ ದರಿದ್ರ ಎನುತುಮನಿತುಮಂ ಧರ್ಮಜಂ ಸೂಚಿಗೊಟ್ಟಂ ||೪೦
ವ|| ಅಂತು ನಿಜ ಧವಳಚ್ಚತ್ರ ಚಾಮರ ಸಿಂಹಾಸನಾದಿ ರಾಜಚಿಹ್ನಂಗಳುಟಿಯ ಸರ್ವಸ್ವಮಲ್ಲಮಂ ದಕ್ಷಿಣೆಗೊಟ್ಟು ವ್ಯಾಸ ಗಾಂಗೇಯ ವಿದುರ ಬಾತ್ಮೀಕ ಸೋಮದತ್ತ ಭಗದತ್ತ
ತಿಳಿಸಲು ಹರಿಯುವಂತೆ ಹಲವು ಹೊಗೆಗಳೂ ಆಕಾಶವನ್ನು ಮುಟ್ಟಿದುವು. ಆ ಹೋಮದ ಹೊಗೆಯ ವಾಸನೆಯು ತಮ್ಮನ್ನು ಸ್ಪರ್ಶಿಸಲು ಆ ಶ್ರೇಷ್ಟವಾದ ಯಜ್ಞವನ್ನು ಸ್ವೀಕರಿಸಿ ಪಾರಿವಾಳ ಮತ್ತು ಚಕ್ರವಾಕಪಕ್ಷಿಗಳು ಸ್ವರ್ಗಕ್ಕೆ ಹಾರಿದುವು. ಆ ಮಹಾಯಜ್ಞದ ಹಿರಿಮೆಯನ್ನು ಏನೆಂದು ವರ್ಣಿಸುವುದು. ವ|| ಹಾಗೆ ಧರ್ಮರಾಜನು ಪುರೋಡಾಶದಿಂದ ಪವಿತ್ರೀಕೃತವಾದ ಹೊಟ್ಟೆಯುಳ್ಳವನೂ ಸೋಮರಸಪಾನದಿಂದ ಕದಡಿದ ಉದರವುಳ್ಳವನೂ ಆಗಿ ಆ ಮುವ್ವತ್ತೆರಡುದಿವಸಗಳಲ್ಲಿ ಯಜ್ಞವನ್ನು ಮುಗಿಸಿ ಮಹಾದಾನವನ್ನು ಮಾಡಿ ದಕ್ಷಿಣೆಯನ್ನು ಕೊಡುವ ಕಾಲದಲ್ಲಿ ೩೯. ರಾಶಿಮಾಡಿದ ಚಿನ್ನದ ಬೆಟ್ಟಗಳನ್ನು ದಾನಮಾಡುವಾಗ ತೂಕಮಾಡುವುದೇತಕ್ಕೆ? ನನ್ನ ಕೈಕಟ್ಟಳೆಯ ತೂಕದಿಂದಲೇ ಕೊಳ್ಳಿ ಎಂದು ಹದಿನಾರು ಋತ್ವಿಕ್ಕುಗಳಿಗೆ ದಾನಮಾಡಿದುದನ್ನು ನೋಡಿ ಬ್ರಾಹ್ಮಣರ ಸಮೂಹವು ಆಶ್ಚರ್ಯದಿಂದ ಬಾಯ್ದಿಟ್ಟಿತು. ದಾನಮಾಡಿದ ಹೊನ್ನರಾಶಿಯನ್ನು ಮಡಗುವುದಕ್ಕೆ ಸ್ಥಳವಿಲ್ಲದಷ್ಟು ದ್ರವ್ಯವನ್ನು ರಕ್ಷಿಸುತ್ತಿರಲು ಧರ್ಮರಾಯನು ವಂಚನೆಯಿಲ್ಲದೆ ದಾನಮಾಡಿದನು. ೪೦. ಮದೋದಕದಿಂದ ಕೂಡಿದ ದಪ್ಪವಾದ ಗಂಡಸ್ಥಳಗಳನ್ನುಳ್ಳ ಆನೆಯು ನಿಮಗೆ ಬೇಕೆ? ನಿಮ್ಮ ಇಷ್ಟವಾದು. ದನ್ನು ಹೇಳಿ; ಉತ್ತಮವಾದ ಕುದುರೆಗಳ ಸಮೂಹವು ನಿಮಗೆ ಪ್ರಯೋಜನವಾದೀತೇ. ರತ್ನಸಮೂಹವು ಬೇಕೆ ಹೇಳಿ ಎಂದು ದೀನರಿಗೂ ಅನಾಥರಿಗೂ ಮುದುಕರಿಗೂ ಬ್ರಾಹ್ಮಣರಿಗೂ ಋಷಿಸಮೂಹಕ್ಕೂ ಬಡತನವು ಹೋಗವಷ್ಟು, ಯಾರಿಗೆ ಏನುಬೇಕು, ದರಿದ್ರರಾರು, ಎನ್ನುತ್ತ ಅಷ್ಟನ್ನೂ ಧರ್ಮರಾಜನು ಸೂರೆಯಾಗಿ ಕೊಟ್ಟನು. ವ ಹಾಗೆ ತನ್ನ ಶ್ವೇತಚ್ಛತ್ರಿ ಚಾಮರ ಸಿಂಹಾಸನವೇ ಮೊದಲಾದ ರಾಜಚಿಹ್ನೆಗಳನ್ನು ಬಿಟ್ಟು ಉಳಿದ ಸರ್ವಸ್ವವನ್ನೂ ದಕ್ಷಿಣೆಯಾಗಿ ಕೊಟ್ಟು ವ್ಯಾಸ ಗಾಂಗೇಯ ವಿದುರ ಬಾಘೀಕ ಸೋಮದತ್ತ ಭಗದತ್ತ ಧೃತರಾಷ್ಟ್ರ ದ್ರೋಣಾಶ್ವತ್ಥಾಮ ಕೃಪ ಮೊದಲಾದ
Page #322
--------------------------------------------------------------------------
________________
.
ಷಷ್ಠಾಶ್ವಾಸಂ / ೩೧೭ ಧೃತರಾಷ್ಟ್ರ ದ್ರೋಣಾಶ್ವತ್ಥಾಮ ಕೃಪ ಕುಲವೃದ್ಧರುಮಂ ದುರ್ಯೋಧನ ದುಶ್ಯಾಸನ ಕರ್ಣ ಶಲ್ಯ ಶಕುನಿಗಳುಮನವರವರ ದಾನ ಸನ್ಮಾನಾದಿಗಳೊಳಂ ಸಂತಸಂಬಡಿಸಿ ಧರ್ಮಪುತ್ರಂ ಪೇಟಿಮಾ ಸಭೆಯೊಳಗ್ರಪೂಜೆಗಾರ್ ತಕ್ಕರೆನೆ ಗಾಂಗೇಯನಿಂತೆಂದಂಮll ಬಲಿಯಂ ಕಟ್ಟಿದನಾವನೀ ಧರಣಿಯಂ ವಿಕ್ರಾಂತದಿಂದಂ ರಸಾ
ತಲದಿಂದೆತ್ತಿದನಾವನಂದು ನರಸಿಂಹಾಕಾರದಿಂ ದೈತ್ಯನಂ | ಚಲದಿಂ ಸೀಳವನಾವನಭೀಮಥನಪ್ರಾರಂಭದೊಳ್ ಮಂದರಾ
ಚಲಮಂ ತಂದವನಾವನಾತನೆ ವಲಂ ತಕ್ಕಂ ಪೆಜರ್ ತಕ್ಕರೇ || ೪೧
ವಗಿ ಎಂದು ತನ್ನ ಮನದೊಳಚೊತ್ತಿದಂತ ನುಡಿದ ಗಾಂಗೇಯನ ಮಾತಂ ಮನದ ಗೊಂಡು ಯಮನಂದನನಾನಂದಂಬೆರಸಂತೆಗೆಯೋನೆಂದು ಪುರುಷೋತ್ತಮಂಗರ್ಥಮದಾಗಳ್ಕಂ11 ಮುಳಿದು ಶಿಶುಪಾಲನಾ ಸಭೆ
ಯೋಳಗೆ ಮಹಾಪ್ರಳಯ ಜಳಧಿನಾದದಿನಿರದು ! ಚಳಿಸಿ ನುಡಿದಂ ತ ಕಳೆ ಕಳೆ ಹರಿಗದನರ್ಘದರ್ಘಮಂ ಧರ್ಮಸತಾ || ,
- ೪೨ ತೀವಿದ ನರೆಯುಂ ಡೊಳ್ಳುಂ ದೇವವ್ರತನೆನಿಸಿ ನಗಲ್ಲ ಯಶಮುಂ ಬೆರಸಿ | Qವುದು ಹರಿಗರ್ಥ್ಯಮನಂ ದಾವನುಮಿ ಭೀಷ್ಮರಂತು ನುಡಿದರುಮೊಳರೇ || ೪೩
ಕುಲವೃದ್ದರನ್ನೂ ದುರ್ಯೊಧನ ದುಶ್ಯಾಸನ ಕರ್ಣ ಶಲ್ಯ ಶಕುನಿಗಳನ್ನೂ ಅವರವರಿಗೆ ಉಚಿತವಾದ ದಾನಸನ್ಮಾನಗಳಿಂದ ಸಂತೋಷಪಡಿಸಿ ಧರ್ಮರಾಜನು ಈ ಸಭೆಯಲ್ಲಿ ಅಗ್ರಪೂಜೆಗೆ ಯಾರು ಅರ್ಹರು ಎನ್ನಲು ಭೀಷ್ಮನು ಹೀಗೆಂದನು-೪೧. ಬಲಿಯನ್ನು ಕಟ್ಟಿದವನೂ ಪೌರುಷದಿಂದ ಈ ಭೂಮಿಯನ್ನು ಪಾತಾಳದಿಂದ ಎತ್ತಿದವನೂ ಹಿಂದೆ ನರಸಿಂಹಾವತಾರದಲ್ಲಿ ರಾಕ್ಷಸನಾದ ಹಿರಣ್ಯಕಶಿಪುವನ್ನು ಹಟದಿಂದ ಸೀಳಿದವನೂ ಕ್ಷೀರಸಮುದ್ರವನ್ನು ಕಡೆಯುವ ಕಾಲದಲ್ಲಿ ಮಂದರಪರ್ವತವನ್ನು ತಂದವನೂ ಆದ ಕೃಷ್ಣನೇ ನಿಜವಾಗಿಯೂ ಅಗ್ರಪೂಜೆಗೆ ಅರ್ಹನಾದವನು, ಇತರರು ಅರ್ಹರಾದಾರೇ? ವlು ಎಂದು ತನ್ನ ಮನಸ್ಸಿನಲ್ಲಿ ಮುದ್ರೆಯೊತ್ತಿದ ಹಾಗೆ ಹೇಳಿದ ಭೀಷ್ಮನ ಮಾತನ್ನು ಅಂಗೀಕಾರಮಾಡಿ ಧರ್ಮರಾಯನು ಸಂತೋಷದಿಂದ ಕೂಡಿ ಹಾಗೆಯೇ ಮಾಡುತ್ತೇನೆಂದು ಪುರುಷೋತ್ತಮನಾದ ಶ್ರೀಕೃಷ್ಣನಿಗೆ ಅರ್ಥ್ಯವೆತ್ತಿದಾಗ-೪೨. ಆ ಸಭೆಯಲ್ಲಿ ಶಿಶುಪಾಲನು ಸುಮ್ಮನಿರದೆ ಕೋಪಿಸಿಕೊಂಡು ಮೇಲಕ್ಕೆ ಎದ್ದು ಪ್ರಳಯಕಾಲದ ಸಮುದ್ರಘೋಷದಿಂದ ಕೂಡಿ ಧರ್ಮರಾಜನೇ, ಛೀ ಕೃಷ್ಣನಿಗೆತ್ತಿದ ಅಮೌಲ್ಯವಾದ ಅನ್ನೋದಕವನ್ನು ತೆಗೆತೆಗೆ ಎಂದು ಒರಟಾಗಿ ನುಡಿದನು-೪೩. ತುಂಬಿದ ನರೆಯನ್ನೂ ಬೊಜ್ಜಿನ ಹೊಟ್ಟೆಯನ್ನೂ ದೇವವ್ರತನೆನಿಸಿಕೊಂಡು ಪ್ರಸಿದ್ದಿ ಪಡೆದ ಯಶಸ್ಸನ್ನೂ ತನ್ನಲ್ಲಿ ಕೂಡಿಕೊಂಡು ಇನ್ನೂ ಕೃಷ್ಣನಿಗೆ ಅರ್ಥ್ಯವನ್ನು ಕೊಡುವುದು ಎಂಬುದಾಗಿ ಈ ಭೀಷ್ಮನಂತೆ ಸಲಹೆಮಾಡುವವರು ಮತ್ತಾವನಾದರೂ ಇದ್ದಾನೆಯೇ ?
Page #323
--------------------------------------------------------------------------
________________
. . ೩೧೮ / ಪಂಪಭಾರತ
ಕುರುವೃದ್ಧಃ ಕುಲವೃದ್ದ ಸರಿತ್ತುತಂ ತಕನೆಂದು ನಂಬಿದ ಸಭೆಯೊಳ್ | ದೊರಗಿಡಿಸಿ ನುಡಿದೊಡೇನೂಲ ವರಮೆನ್ನದೆ ನೀನುಮದನ ಕೊಂಡೆಸಗುವುದೇ || ಮನದೋಲವರಮುಳ್ಳೂಡ ಕುಡು ಮನೆಯೊಳ್ ಹರಿಗಗ್ರಪೂಜೆಯಂ ಯಜ್ಞದೊಳೀ | ಮನುಜಾಧೀಶ್ವರಸಭೆಯೋಳ್ ನೆನೆಯಲುಮಾಗದು ದುರಾತ್ಮನಂ ಬೆಸಗೊಳ್ತಾ || ಅಳವಡೆಯದೆದ್ದು ಬಳವಳ ಬಳೆವಿನೆಗಂ ಪಚ್ಚ ಪಸಿಯ ತುಲುಕಾಳಿಂಗ ಗಳಿಕೆಯನೆ ಮಾಡಿ ನೀನುಂ ಪಳಿಯಂ ಕಟ್ಟದೆಯೊ ಭೂಪರಿನಿಬರ ಕೊರಳೊಳ್ || ೪೬ ದೇವರನಡಿಗಜಗಿಸಿ ಸಕ ಭಾವನಿತಳದದಟರಂ ಪಡಲ್ವಡಿಸಿದ ಶಾ | ರ್ಯಾವಷ್ಟಂಭದೊಳಾನಿರೆ ಗೋವಳಿಗಂಗಗ್ರಪೂಜೆಯಂ ನೀನ್ ಕುಡುವಾ || ಸಮಕಟ್ಟಳೆಯದ ಹರಿಗ ರ್ಫಮ ನಿಂದಿರ್ದ ಯಜ್ಞಮದು ಮೊದಲೊಳ್ ತಾ | ನಮರ್ದುಮಮರ್ದಿರದೆ ತಣಿಯುಂ |
ಡಮರ್ದ೦ ಗೋಮೂತ್ರದಿಂದ ಬಾಯೂಸಿದವೋಲ್ || ೪೮ ೪೪. ಭೀಷ್ಮನು ಕುರುವಂಶದಲ್ಲಿ ಹಿರಿಯ, ಕುಲದಲ್ಲಿ ಹಿರಿಯವ ಯೋಗ್ಯ ಎಂದು ನಂಬಿದ ಈ ಸಭೆಯಲ್ಲಿ ತನ್ನ ಯೋಗ್ಯತೆಯನ್ನು ಕೆಡಿಸಿಕೊಂಡು ಇನ್ನೂ ಕೃಷ್ಣನಿಗೆ ಅರ್ಥ್ಯವನ್ನು ಕೊಡು ಎಂದು ಹೇಳಿದರೆ ಅದನ್ನು ಪಕ್ಷಪಾತವೆಂದು ತಿಳಿದುಕೊಳ್ಳದೆ ನೀನೂ ಆ ಭೀಷ್ಮನು ಹೇಳಿದುದನ್ನೇ ಅಂಗೀಕರಿಸಿ ಹಾಗೆ ಮಾಡುವುದೇ? ೪೫. ಮನಸ್ಸಿನಲ್ಲಿ ಪಕ್ಷಪಾತವಿದ್ದರೆ ಕೃಷ್ಣನಿಗೆ ನಿಮ್ಮ ಮನೆಯಲ್ಲಿ ಅರ್ಥ್ಯವನ್ನು ಕೊಡು. ಯಜ್ಞದಲ್ಲಿ ಈ ಚಕ್ರವರ್ತಿಗಳ ಸಭೆಯಲ್ಲಿ ಆ ದುರಾತ್ಮನನ್ನು ನೆನೆಸಿಕೊಳ್ಳಲೂ ಆಗದು. ಆ ದುರಾತ್ಮನನ್ನು ಪ್ರಶ್ನೆಮಾಡುವುದೇಕೆ ? ೯೬. ಅಳತೆಯಿಲ್ಲದ ದಡ್ಡತನವು ಅತಿಶಯವಾಗಿ ಬೆಳೆಯುತ್ತಿರಲು ಆ ಹಚ್ಚಹಸಿಯ ದನಕಾಯುವವನಿಗೆ ಗೌರವವನ್ನು ಮಾಡಿ ನೀನೂ ಕೂಡ ಇಷ್ಟು ಜನ ರಾಜರ ಕೊರಳಿನಲ್ಲಿ ಅಪಯಶಸ್ಸನ್ನು ಕಟ್ಟಿದೆಯಲ್ಲ! ೪೭. ದೇವತೆಗಳನ್ನೆಲ್ಲ ಕಾಲಿಗೆ ಬೀಳುವ ಹಾಗೆ ಮಾಡಿ ಸಮಸ್ತಭೂಮಂಡಲದ ರಾಜರುಗಳನ್ನೂ ಕೆಳಗುರುಳುವ ಹಾಗೆ ಮಾಡಿದ ಪರಾಕ್ರಮದ ಗರ್ವದಿಂದ ಕೂಡಿದ ನಾನಿರುವಾಗ ಸಾಮಾನ್ಯನಾದ ದನಕಾಯುವವನಿಗೆ ನೀನು ಅಗ್ರಪೂಜೆಯನ್ನು ಕೊಡುತ್ತೀಯಾ, ೪೮, ಔಚಿತ್ಯ ಅನೌಚಿತ್ಯಗಳನ್ನು ಅರಿಯದೆ ಹರಿಗೆ (ಕೃಷ್ಣನಿಗೆ) ಎತ್ತಿದ ಅರ್ಭ್ಯವನ್ನುಳ್ಳ ಈ ಯಜ್ಞವು ಮೊದಲು ಸರಿಯಾಗಿದ್ದರೂ ಕೊನೆಯಲ್ಲಿ
Page #324
--------------------------------------------------------------------------
________________
ಷಷ್ಠಾಶ್ವಾಸಂ | ೩೧೯
ಕುಡವೇನ ಕುಡುವನ ಕುಡ
ಪಡೆವನ ಪಂಪೇಂ ನೆಗಡೆಗುಮೊ ಪೇಳ್ವಂ | ಕುಡವೇಮ ಕುಡುವಣ್ಣಂ
ಕುಡುಗಮ ಕುಡೆ ಕೊಳ್ಳ ಕಲಿಯನಾಯಲಕ್ಕುಂ |
ವ|| ಎಂದನಿತಳ್ ಮಾಣದೆ ಗೀರ್ವಾಣಾರಿಯಸುರಾರಿಯನಿಂತೆಂದಂ
ಕಂ
ದೊರೆಯಕ್ಕುಮೆ ನಿನಗೆ ಯುಧಿ
ಷ್ಠಿರನರ್ಘಮನ ಶಂಖದೊಳ್ ಪಾಲೆದಂ | ತಿರೆ ಮಲಿನಮಿಲ್ಲದೊಳುಲ
ದರಸುಗಳಿಗೆ ನೀನುಮಗ್ರಪೂಜೆಯನಾಂತಾ ||
ಮನದೊಲವರದಿಂದೀ ಯಮ
ತನಯನ ಕುಡುವಗ್ರಪೂಜೆ ಮತ್ಸನ್ನಿಧಿಯೊಳ್ | ನಿನಗಸನಿಯ ಮಿನ್ನುವ ನಂ
ಜನ ದೊರೆಯೆಂದೂಣರ ನಂದಗೋಪಾಲಸುತಾ ||
ಮನ ನಿನಗೆ ನಂದಗೋಪಾ
ಲನ ಮನ ತುಟುಗಾರ್ತಿ ನಿನಗೆ ಮನವಂಡತಿ ಪ |
ಚನೆ ಪಸಿಯ ಗೋವನ್ಯ ಕರ ಮನಯದ ನಿನ್ನಳವಿಗಳವನಯದ ನಗ 11
೪೯
980
೫೧
೫೨
ತೃಪ್ತಿಯಾಗಿ ಅಮೃತಪಾನಮಾಡಿ ಗಂಜಳದಿಂದ ಬಾಯಿಮುಕ್ಕಳಿಸಿ ಹಾಗೆ ಹೊಂದಿಕೆಯಿಲ್ಲದೇ ಇದೆಯಲ್ಲ! ೪೯. ಕೊಡು ಎಂದು ಹೇಳುವವನೂ ಕೊಡುವವನೂ ಕೊಟ್ಟರೆ ತೆಗೆದುಕೊಳ್ಳುವವನೂ ಒಬ್ಬೊಬ್ಬರ ಹಿರಿಮೆಯೂ ಎಷ್ಟು ಘನವಾದುದೊ! ನೋಡೋಣ. ಹೇಳುವವನು ಕೊಡು ಎಂದು ಹೇಳಲಿ; ಕೊಡುವಣ್ಣನು ಕೊಡಲಿ; ಕೊಟ್ಟರೆ ತೆಗೆದುಕೊಳ್ಳುವ ಶೂರರನ್ನು ನೋಡಿಯೇ ಬಿಡುತ್ತೇನೆ. ವ! ಎನ್ನು ವಷ್ಟರಲ್ಲಿಯೇ ತಡೆಯದೆ ದೇವತೆಗಳಿಗೆ ಶತ್ರುವಾದ ಶಿಶುಪಾಲನು ಅಸುರಾರಿಯಾದ ಕೃಷ್ಣನನ್ನು ಹೀಗೆಂದು ಮೂದಲಿಸಿದನು. ೫೦. 'ಯುಧಿಷ್ಠಿರನು ನಿನಗೆ ಅರ್ಥ್ಯವನ್ನೆತ್ತಿದರೆ ಅದು ನಿನಗೆ ಯೋಗ್ಯವಾದುದಾಗುತ್ತದೆಯೇ ? ಶಂಖದಲ್ಲಿ ಹಾಲೆರೆದಂತೆ ನಿಷ್ಕಲ್ಮಷವಾದ ಸತ್ಕುಲದರಸುಗಳು ನಾವಿರುವಾಗ ನೀನು ಅಗ್ರಪೂಜೆಯನ್ನು ಸ್ವೀಕರಿಸುತ್ತೀಯಾ? ೫೧. ಎಲೈ ನಂದಗೋಪಾಲನ ಮಗನೇ, ನಿನ್ನ ಮನಸ್ಸಿನ ಪಕ್ಷಪಾತ(ಪ್ರೀತಿ)ದಿಂದ ಈ ಧರ್ಮರಾಯನು ಕೊಡುವ ಈ ಅಗ್ರಪೂಜೆಯು ನನ್ನೆದುರಿಗೆ ನಿನಗೆ ಸಿಡಿಲಿನ, ಮೃತ್ಯುವಿನ ವಿಷದ ಸಮಾನವೆಂದು ಭಾವಿಸೋ. ೫೨. ಮನೆ ನಿನಗೆ ನಂದಗೋಪಾಲನ ಮನೆ, ದನಕಾಯುವವಳು ನಿನ್ನ ಮನೆಯ ಹೆಂಡತಿ, ನೀನು ಹಚ್ಚ ಹಸಿಯ ದನಕಾಯುವವನು. ಹೆಚ್ಚಿನ ಅವಿವೇಕದಿಂದ ನಿನ್ನ
Page #325
--------------------------------------------------------------------------
________________
೩೨೦ ) ಪಂಪಭಾರತಂ
ಮುರನಡಸಿ ಪಿಡಿದು ಕಟ್ಟಿದ ಪರಿಭವಮಂ ಮಣಿದ ನಿನ್ನ ಪಡಗೆಯ್ದಟ್ಟಂ | ಶರದಿಂ ಬಿಡಿಸಿದನಲ್ಲನೆ | ಸರಿತ್ತುತಂ ಬನ್ನವಿನ್ನವೆಂಬುವುಮೊಳವೇ || ದನುಜಾಂತಕನೆಂಬೀ ನಿ - ನ್ನ ನಚ್ಚುಪೋದಂಕಮಲವೊ ಮುನ್ನೆನ್ನನ್ನಂ | ದನುಜಂ ಪುಟ್ಟದ ಸಂದುದು ನಿನಗೀ ಪೆಸರನ್ನ ಮುಂದೆಯುಂ ಸಂದಪುದೇ || ಆನಿರ್ದ ಸಭೆಯೊಳರ್ಘಮ ನಾನಲ್ಯಾಟಿಸಿದ ನಿನ್ನ ಬಿಸುನೆತ್ತರಂ || ತೀ ನೆರವಿ ನೋಡ ಕುಡಿಯದೂ ಡೇನೋ ಶಿಶುಪಾಲನೆಂಬ ಪಸರಸದಪುದೇ ||
ಮwದ ಮುಚುಕುಂದನೆಂಬನ ಮಿ ಕ್ಕುದನಂದು ನೀನ್ ಜರಾಸಂಧಂಗಂ | ಬಿಜುಡಿಮದಂ ಭೂತಳ ಮಳಿಯದ ನೆನೆಯಲಿ ಗೋವುಗಾದುದು ಪುಸಿಯೇ | , ೫೬ ಮಾನಾವ ಪಂದಿಯಂದೆನಿ ತಾನುಂ ತಾನಾಗಿ ಡೊಂಬವಿದ್ದಯನಾಡಲ್ | ನೀನಳಿವೆಯುದಿದಿರ್ಚಿದೊ ಡಾನಳಿವೆ ನಿನ್ನಲ್ಲಿ ದೆಸೆವಲಿಗೆಯ್ಯ |
ಯೋಗ್ಯತೆಯ ಪ್ರಮಾಣವನ್ನೇ ತಿಳಿಯದೆ ನಡೆದುಕೊಂಡಿದ್ದೀಯೆ. ೫೩. ಮುರಾಸುರನು ಮೇಲೆಬಿದ್ದು ನಿನ್ನನ್ನು ಕಟ್ಟಿಹಾಕಿದ್ದ ಸೋಲನ್ನು ಮರೆತೆಯಾ? ನಿನ್ನ ಹಿಂಗೈಗಟ್ಟನ್ನು ಭೀಷ್ಮನು ಬಿಡಿಸಿದನಲ್ಲವೇ? ನಿನ್ನ ಸೋಲೆಂಬುದು ಇಂಥದೆಂಬುದುಂಟೇ? ೫೪. ಎಲವೋ, ದನುಜಾಂತಕ (ರಾಕ್ಷಸರಿಗೆ ಯಮಸ್ವರೂಪ) ಎಂಬ ನಿನ್ನ ಅಹಂಕಾರಕ್ಕೆ ಪಾತ್ರವಾದ ಹೆಸರು ಮೊದಲು ನನ್ನಂತಹ ದನುಜ(ರಾಕ್ಷಸನುನು ಹುಟ್ಟದೆ ಇದ್ದುದರಿಂದ ಪ್ರಾಪ್ತವಾಯಿತು. ನಿನಗೆ ಈ ಹೆಸರು ನನ್ನ ಮುಂದೆಯೂ ಸಲ್ಲುತ್ತದೆಯೇ? ೫೫. ನಾನಿರುವ ಸಭೆಯಲ್ಲಿ ಅರ್ಭ್ಯವನ್ನು ಪಡೆಯುವುದಕ್ಕೆ ಬಯಸಿದ ನಿನ್ನ ಬಿಸಿರಕ್ತವನ್ನು ಈ ಸಭೆಯು ನೋಡುತ್ತಿರುವ ಹಾಗೆಯೇ ಕುಡಿಯದಿದ್ದರೆ ಶಿಶುಪಾಲನೆಂಬ (ನನ್ನ ಹೆಸರು ಪ್ರಕಾಶಿಸುತ್ತದೆಯೇನೋ ? ೫೬. ಅಂದು ಮುಚುಕುಂದನೆಂಬುವನನ್ನು ಮೊರೆಹೊಕ್ಕದ್ದನ್ನೂ ಮರೆತೆಯಾ ? ಅಂದು ನೀನು ಜರಾಸಂಧನಿಗೂ ಹೆದರಿ ಓಡಿದುದನ್ನೂ ಪ್ರಪಂಚವೇ ಅರಿಯದೇ? ಜ್ಞಾಪಿಸಿಕೊಳ್ಳೋಳ, ನೀನು ದನಕಾಯುವುದು ಸುಳ್ಳೇನೊ ? ೫೭. ಮೀನು, ಆಮೆ, ಹಂದಿ ಎಂದು ಎಷ್ಟೋ ರೀತಿಯಲ್ಲಿ ಡೊಂಬರವಿದ್ಯೆಯನ್ನಾಡಲು ನೀನು ಬಲ್ಲೆ? ವೇಗವಾಗಿ ಎದುರಿಸಿದರೆ ನಿನ್ನನ್ನು ಇಲ್ಲಿ
Page #326
--------------------------------------------------------------------------
________________
sres
ಷಷ್ಠಾಶ್ಚಾಸಂ / ೩೨೧ ಅಳಿಯದಿದಂ ಮಾಡಿದನೆ ನೈಟಿಯಮಿಕೆಗೆ ಸೈರಿಸೆಂದು ನೀನ್ ಸಭೆಯೋಳ್ ಕಾ | ಲೈಂಗಗು ಕೊಲ್ಲೆನೆಂದೆರ್ದ
ತೆವಿನೆಗಂ ಹರಿಯ ನೆಲನನಸುರಂ ನುಡಿದಂ || ವ|| ಅಂತು ನುಡಿದು ಕಾಯ್ಲಿನೊಳ್ ಪಿಡುಗಿ ನಡನಡ ನಡುಗಿಕoll ಪೊಳೆದುಳುವ ಕುಡು ದಾಡೆಯ
ಪೊಳಪು ನೊಸಲ್ಲಡರ್ದು ಪೊಡರ್ವ ಪುರ್ವೆಸೆವಿನಮ್ | ಎಳಿಸುವ ಮುಳಿಸಿನ ದಳ್ಳುರಿ
ಗಳನುಗುವೊಲುಗುಟ್ಟಿನಸುರನುರಿವ ಪಳೆಗಳಂ || ೫೯ - ವ| ಆಗಳ್ ಸಭಾಸದರೆಲ್ಲಮೆವಮಿಡುಕದೆ ಪಂದೆಯಂ ಪಾವಡರ್ದವೊಲುಸಿರದಿರೆ ನಾರಾಯಣಂ ಶಿಶುಪಾಲನನಿಂತೆಂದಂಕಂ|| ನಿನ್ನಯ ತಾಯ್ ಸಾತ್ವತಿಯುಂ
ನಿನ್ನಂ ತಂದನ್ನ ತೊಡೆಯಮೇಲಿಟಿಪುವುದುಂ | ನಿನ್ನ ಲಲಾಟದ ಕಣ್ಣದು
ಮುನ್ನಮೆ ಕಿಡೆ ನಿನ್ನ ಮೃತ್ಯುವನ್ನಯ ಕೆಯೊಳ್ || ಕoll. ನೆದುದನಳದೀ ಕಿಣಿಯವ
ನಟಿಯದ ಕಡೆ ನುಡಿದನಷ್ಟೊಡಂ ನೂಲುವರಂ | ನೆ ಸಲ್ಲಿಸುವುದೆಂದುದನಾಂ ಮಆವನೆ ಬಯ್ ಬಯ್ಕೆ ಸಲಿಸುವೆಂ ನೂಲುವರಂ || ೬೧
೬೦
ದಿಗ್ನಲಿಕೊಡಲು ನಾನು ಬಲ್ಲೆ. ೫೮. 'ತಿಳಿಯದೆ ಇದನ್ನು ಮಾಡಿದೆ, ನನ್ನ ಅಜ್ಞಾನಕ್ಕೆ ಕ್ಷಮಿಸು' ಎಂದು ಈ ಸಭೆಯಲ್ಲಿ ನನ್ನ ಕಾಲಿಗೆ ಬೀಳು, ಬೀಳು, ಕೊಲ್ಲುವುದಿಲ್ಲ ಎಂದು ಹೃದಯಭೇದನವಾಗುವ ಹಾಗೆ ಕೃಷ್ಣನ ಮರ್ಮ (ರಹಸ್ಯಗಳನ್ನು ರಾಕ್ಷಸನಾದ ಶಿಶುಪಾಲನು ಎತ್ತಿ ಆಡಿದನು. ವ ಹಾಗೆ ಮಾತನಾಡಿ ಕೋಪದಿಂದ ಸಿಡಿದು ವಿಶೇಷವಾಗಿ ನಡುಗಿ ೫೯. ಹೊಳೆದು ಪ್ರಕಾಶಿಸುವ ಕೊಂಕಿದ ಕೋರೆಹಲ್ಲಿನ ಹೊಳಪು ಮುಖವನ್ನು ಹತ್ತಿ ನಡುಗುವ ಹುಚ್ಚು ಪ್ರಕಾಶಿಸುತ್ತಿರಲು ಹೆಚ್ಚುತ್ತಿರುವ ಕೋಪದ ಜ್ವಾಲೆಗಳನ್ನು ಉಗುಳುವ ಹಾಗೆ, ರಾಕ್ಷಸನು ಉರಿಯುತ್ತಿರುವ ನಿಂದೆಗಳನ್ನು ಉಗುಳಿದನು. ವ|| ಆ ಸಭೆಯಲ್ಲಿರುವವರೆಲ್ಲರೂ ರೆಪ್ಪೆ ಬಡಿಯದೆ ಹೇಡಿಯನ್ನು ಹಾವು ಅಡ್ಡಗಟ್ಟಿದ ಹಾಗೆ ಮಾತನಾಡದಿರಲು ನಾರಾಯಣನು ಶಿಶುಪಾಲನಿಗೆ ಹೀಗೆಂದನು. ೬೦. ನಿನ್ನ ತಾಯಿಯಾದ ಸಾತ್ವತಿಯು ನಿನ್ನನ್ನು ತಂದು ನನ್ನ ತೊಡೆಯ ಮೇಲೆ ಇಳಿಸಿದಾಗ ನಿನ್ನ ಆ ಹಣೆಗಣ್ಣು ಮೊದಲೇ ನಾಶವಾಯಿತು. ಅದರಿಂದ ನಿನ್ನ ಮೃತ್ಯು ನನ್ನ ಕಯ್ಯಲ್ಲಿ ೬೧. ಸೇರಿರುವುದನ್ನು ತಿಳಿದು ಅವಳು ನನ್ನನ್ನು ಕುರಿತು ಕೃಷ್ಣಾ ಕಿರಿಯವನಾದ ಇವನು ತಿಳಿಯದೆ ಕೆಟ್ಟ ಮಾತನ್ನಾಡಿದರೂ ನೂರರವರೆಗೆ ಪೂರ್ಣವಾಗಿ ಅವಕಾಶಕೊಡು (ಸಹಿಸಿಕೊ) ಎಂದುದನ್ನು ನಾನು
Page #327
--------------------------------------------------------------------------
________________
೩೨೨) ಪಂಪಭಾರತಂ
ಮನಿಯಲೆನಗಾಗ ಗಾಂಗೇ ಯನಿರ್ದನಿರ್ದ೦ ಘಟೋದ್ಭವಂ ನೆಗಟ್ಟಿ ಹೃಥಾ | ತನಯರುಮಿರ್ದರ್ ದುರ್ಯೋ ಧನನಿರ್ದಂ ಕೇಳೆ ಪೇಳ್ವರಾ ಬಲ್ಲವರುಂ || ಎನೆಯನೆ ಬಾಯ್ದಂ ಬಂದನಿ ತನಿತುಮನಮರಾರಿ ಬಯ್ಕೆ ಸೈರಿಸಿ ನೂಜಿತಂ | ಬನಿತುವರಂ ಮನ್ನಿಸಿ ನಸು ಕಿನಿಸದ ಮಿಗೆ ಕಿನಿಸಿ ದಿತಿಜಕುಳದವದಹನಂ || ಮುಳಿದು ತನಗರ್ಥಮದ ತಳಿಗೆಯೊಳಿ ತಿಳಿದ ತಂದೆ ತಲೆ ಪದಾಗಳ್ || ಕಳಕಳಿಸಿ ನಗುತುಮಿರ್ದುದು |
ತಳಿಗೆಯ ಮೇಲಸುರನದಟದೇನಚರಿಯೋ || ವll ಅಂತು ಜವನರ್ಘಮದಂತಿರ್ದ ಶಿಶುಪಾಲನ ಶಿರೋಂಬುಜಮಂ ಕಡಬಲ್ಲಾತನ ನಂಟರಪ್ಪಶ್ಯಗ್ರೀವ ವಿದ್ಯುನ್ಮಾಲಿ ನೀಲಾದಿಗಳಪ್ಪ ಪ್ರಭುಗಳೆನಿಬರಾನುಂ ಮುರಾಂತಕನಂ ಬಂದು ತಾಗಿದೊಡಕಂ| ತಿರಿಪಿ ಕರಚಕ್ರಮಂ ದನು
ಜರ ತಲೆಗಳನಸುರವೈರಿ ಮುಳಿದಿಡ ಪದಂ | ಬರತಳಮನೆ ಮೇಘದ ಪೊರಪೊರೆಯೊಳ್ ತೊಡರ್ದು ನೆಲಕೆ ಬೀಬಿ ತಲೆಗಳ್ | ೬೫ -
ಮರೆಯುತ್ತೇನೆಯೇ, ಬಯ್ಕೆ -ನೂರರವರೆಗೆ ಬಯ್ಯಲು ಅವಕಾಶ ಕೊಡುತ್ತೇನೆ. ೬೨. ನನ್ನ ಮೇಲೆ ಕೋಪಿಸಬೇಡ; ಆಗ ಭೀಷ್ಮನಿದ್ದನು - ದ್ರೋಣನೂ ಇದ್ದನು. ಪ್ರಸಿದ್ಧರಾದ ಪಾಂಡವರೂ ಇದ್ದರು, ದುರ್ಯೊಧನನೂ ಇದ್ದನು. ಕೇಳಿದರೆ ಆ ಬಲ್ಲವರೆಲ್ಲ ಹೇಳುತ್ತಾರೆ. ೬೩. ಎಂದು ಹೇಳುತ್ತಿರಲು ರಾಕ್ಷಸನು ಬಾಯಿಗೆ ಬಂದಷ್ಟನ್ನು ಬಯ್ಯಲು ಸಹಿಸಿಕೊಂಡು ರಾಕ್ಷಸಕುಲಕ್ಕೆ ಕಾಡುಗಿಚ್ಚಿನ ಹಾಗಿರುವ ಕೃಷ್ಣನು ನೂರಾಗುವವರೆಗೂ ಸ್ವಲ್ಪವೂ ಕೋಪಿಸಿಕೊಳ್ಳದೆ ಕ್ಷಮಿಸಿ ಅದೂ ಮೀರಲು ೬೪. ಕೋಪಿಸಿಕೊಂಡು ತನಗೆ ಅರ್ಥ್ಯವೆತ್ತಿದ ತಟ್ಟೆಯಿಂದಲೇ ಹೊಡೆಯಲು ಗರಗರನೆ ಕತ್ತರಿಸಿದ ಹಾಗೆ ಆ ತಲೆಯು ತುಂಡರಿಸಿ ತಟ್ಟೆಯ ಮೇಲೆ ಕಳಕಳಿಸಿ ನಗುತ್ತಿತ್ತು. ರಾಕ್ಷಸನ ಪರಾಕ್ರಮವು ಎಷ್ಟು ಆಶ್ಚರ್ಯಕರವಾದುದು ? ವ|ಹಾಗೆ ಯಮನಿಗೆ ಅರ್ಫ್ಘದಂತೆ ತಟ್ಟೆಯಲ್ಲಿದ್ದ ರಾಕ್ಷಸನ ಕಮಲದಂತಿರುವ ತಲೆಯನ್ನು ಆತನ ನಂಟರಾದ ಅಶ್ವಗ್ರೀವ ವಿದ್ಯುನ್ಮಾಲಿಗಳನೇಕರು ನೋಡಿ ದುಃಖಿಸಿ ಒಟ್ಟಾಗಿ ಸೇರಿ ಬಂದು ಕೃಷ್ಣನನ್ನು ತಾಗಿದರು. ೬೫. ಅಸುರವೈರಿಯಾದ ಕೃಷ್ಣನು ಕಯ್ಯಲ್ಲಿದ್ದ ಚಕ್ರವನ್ನು ತಿರುಗಿಸಿ ರಾಕ್ಷಸರ ತಲೆಗೆ ಕೋಪದಿಂದ ಹೊಡೆಯಲು ಆ ತಲೆಗಳು ಹರಿದುಹೋಗಿ ಆಕಾಶಪ್ರದೇಶದಲ್ಲಿ ಮೋಡದ ಪದರದ ಸಮೂಹದಲ್ಲಿ ಸೇರಿಕೊಂಡು ನೆಲಕ್ಕೆ ಬೀಳದಿದ್ದವು.
Page #328
--------------------------------------------------------------------------
________________
ಷಷ್ಠಾಶ್ವಾಸಂ | ೩೨೩
ವ|| ಅನಿತೊಂದು ಮಹಾ ಪ್ರಘಟ್ಟದೊಳಗ್ರಪೂಜೆಯಂ ನಾರಾಯಣಂಗೆ ಕೊಟ್ಟವಭ್ಯಥ ಸ್ನಾನದೊಳ್ ಪಿರಿದುಮೊಸಗೆಯಂ ಮಾಡಿ ಯಾಗವಿಧಿಯಂ ನಿರ್ವತಿ್ರಸಿ ನೆರೆದ ರಾಜಕುಲಮೆಲ್ಲ ಮಂ ಪೂಜಿಸಿ ವಿಸರ್ಜಿಸಿದಾಗಳ್ ಮುರಾಂತಕನಂತಕನಂದನನನಿಂತೆಂದಂ
ಮ||
ಹಿಮ ಸೇತು ಪ್ರತಿಬದ್ಧ ಭೂವಳಯಮಂ ನಿಷ್ಕಂಟಕಂ ಮಾಡಿ ವಿ ಕ್ರಮಮಂ ತೋಟ ನಿಜಾನುಜರ ನೆರಸಿದೊಂದೈಶ್ವರ್ಯದಿಂ ರಾಜ ಸೂ || ಯಮನಿಂದಗ್ಗಳದಗ್ಗಳಿಕೆಯ ಮಖಂ ತಾನೆಂಬಿನಂ ನಿನ್ನ ಕೀ ರ್ತಿ ಮುಖಂ ಕೀರ್ತಿ ಮುಖಂಚೊಲೇನಸೆದುದೋ ದಿಗ್ಧಂತಿ
ದಂತಂಗಳೊಳ್ ||
ವ|| ಎಂದು ನುಡಿದ ಮಂದರಧರನಂ ನಿನ್ನನುಗ್ರಹದೊಳದೇವಿರಿದೆಂದು ವಸ್ತು ವಾಹನಂಗಳನಿತ್ತು ದ್ವಾರಾವತಿಗೆ ಕಳಿಸಿ ಸುಖಸಂಕಥಾವಿನೋದಂಗಳೊಳ್ ರಾಜ್ಯಲಕ್ಷ್ಮಿ ಯನನು ಭವಿಸುತ್ತಿರ್ಪನ್ನೆಗಮಂ
ಕಂll ಮೇಗಿಲ್ಲದ ಬಲ್ಲಾಳನ
とと
ದಾಗರಮನೆ ನೆಗಟ್ಟಿ ತತ್ತ್ವಥಾನಂದನರು |
ದ್ಯೋಗದ ಚಾಗದ ಯಾಗದ
ಭೋಗದ ಮೈಮೆಗೆ ಸುಯೋಧನಂ ಬೆಳಗಾದಂ ||
2
ವ|| ಆಗಿ ದುಶ್ಯಾಸನ ಕರ್ಣ ಶಕುನಿ ಸೈಂಧವರೆಂಬ ದುಷ್ಟಚತುಷ್ಟಯದೊಳ್ ಮಂತಣಮಿರ್ದು ದಾಯಿಗರಪೊಡೆ ಕರಂ ಪೆರ್ಚಿದರವರ ಪೆರ್ಚಿಂಗೇಗೆಂ ಬಸನಂಗಳಂ
ವll ಅಷ್ಟೊಂದು ದೊಡ್ಡ ಸಂಭ್ರಮದಲ್ಲಿ ನಾರಾಯಣನಿಗೆ ಅಗ್ರಪೂಜೆಯನ್ನು ಕೊಟ್ಟು ಧರ್ಮರಾಜನು ಯಾಗದ ಕೊನೆಯಲ್ಲಿ ಮಾಡಬೇಕಾದ ಮಂಗಳಸ್ನಾನವನ್ನು ಮುಗಿಸಿದನು. ವಿಶೇಷ ಸಂತೋಷದಿಂದ ಯಾಗದ ನಿಯಮಗಳನ್ನೆಲ್ಲ ಮುಗಿಸಿ ಸೇರಿದ್ದ ರಾಜಸಮೂಹವೆಲ್ಲವನ್ನು ಸತ್ಕರಿಸಿ ಕಳುಹಿಸಿದನು. ಆಗ ಶ್ರೀಕೃಷ್ಣನು ಧರ್ಮರಾಜನನ್ನು ಕುರಿತು ಹೀಗೆಂದನು-೬೬. ಹಿಮವತ್ಪರ್ವತ ಮತ್ತು ರಾಮಸೇತುಗಳ ಮೇರೆಯನ್ನುಳ್ಳ ಭೂಮಂಡಲವನ್ನು ಬಾಧಾರಹಿತವನ್ನಾಗಿ ಮಾಡಿ ಪರಾಕ್ರಮಪ್ರದರ್ಶನದಿಂದ ಇದು ನಿನ್ನ ತಮ್ಮಂದಿರು ಒಟ್ಟುಗೂಡಿಸಿದ ಐಶ್ವರ್ಯದಿಂದ ರಾಜಸೂಯವನ್ನು ಇಂದು ಅತ್ಯತಿಶಯವಾದ ಯಜ್ಞ ಎನ್ನುವ ಹಾಗೆ ನಡೆಸಿದೆ. ನಿನ್ನ ಕೀರ್ತಿಯ ಪ್ರವಾಹವು ದಿಗ್ಗಜಗಳ ದಂತಗಳಲ್ಲಿ ಧರಿಸಿದ ಕೀರ್ತಿಮುಖವೆಂಬ ಆಭರಣದ ಹಾಗೆ ಸೌಂದರ್ಯಯುಕ್ತವಾಗಿದೆ. ವ ಎಂಬುದಾಗಿ ಹೇಳಿದ ಕೃಷ್ಣನನ್ನು 'ನಿನ್ನ ಅನುಗ್ರಹವಿರುವಾಗ ಏನು ದೊಡ್ಡದು' ಎಂದು ಹೇಳಿ ವಸ್ತುವಾಹನಗಳನ್ನು ಕೊಟ್ಟು ಸತ್ಕರಿಸಿ ದ್ವಾರಾವತಿಗೆ ಕಳುಹಿಸಿ ಸುಖಸಂಕಥಾವಿನೋದಗಳಿಂದ ಪಾಂಡವರು ರಾಜ್ಯಲಕ್ಷ್ಮಿಯನ್ನು ಅನುಭವಿಸುತ್ತಿದ್ದರು. ಆ ಕಡೆ-೬೭. ಉತ್ತಮೋತ್ತಮವಾದ ಪರಾಕ್ರಮದ ಆವಾಸಸ್ಥಳವೆನಿಸಿಕೊಂಡು ಪ್ರಸಿದ್ಧರಾದ ಆ ಪಾಂಡವರ ಕಾರ್ಯದ, ತ್ಯಾಗದ, ಸೌಖ್ಯದ ಮಹಿಮೆಗೆ ದುರ್ಯೋಧನನು ಬೆರಗಾದನು. ವ| ದುಶ್ಯಾಸನ ಕರ್ಣ ಶಕುನಿ ಸೈಂಧವರೆಂಬ ನಾಲ್ಕು ದುಷ್ಟರಲ್ಲಿ (ದುಷ್ಟಚತುಷ್ಟಯ) ಜ್ಞಾತಿಗಳಾದರೋ
Page #329
--------------------------------------------------------------------------
________________
೩೨೪ / ಪಂಪಭಾರತಂ
ಸಮಕಟ್ಟುವಮತ್ತೊಡೆ ಸಪ್ತವ್ಯಸನಂಗಳಯ್ಯರುಮನೊಂದುಂ ಗೆಲ್ಲುವಲ್ಲವು ರಾಷ್ಟ್ರವ್ಯಸನಮಂ ಬಳವ್ಯಸನಮಂ ಪಾರ್ವಮಪ್ಲೋಡವು ಮುನ್ನಮಿಲ್ಲ ಪರಮಂಡಳವ್ಯಸನಮನಾರಯ್ಯಮಫೊಡಿತ್ತುಂ ತೆತ್ತುಂ ಬಾಳ್ವೆ ಮಂಡಲಮಲ್ಲದ ಕೀಟೆಯುಂ ಮಾಟಿಯುಂ ನೆಗು ಮಂಡಲಮಿಲ್ಲ ಪುರುಷಮಂ ಸಮಕಟ್ಟುವಮಪ್ಲೋಡ ಪೊಕ್ಕಿಯಲಣುವರಿಲ್ಲ ರಸದಾನಾದಿಗಳೊಳ್ ಛಿದ್ರಿಸುವ ಮಗ್ಗೂಡವರಾಪ್ತವಂತರುಂ ಬುದ್ಧಿವಂತರುವಾಗಿ ನೆಗರಿನ್ನಾವ ಮಾಯೊಳ್ ಬಗೆಯಂ ಕೆಯ್ದೆ ಮಾಡುವಂ ಪೇಟೆಮನೆ ಶಕುನಿಯಿಂತೆಂದಂ
ಚಂ | ಬೆಸಸಿದ ನಿನ್ನ ಮಾತಿನಿತುಮಂತುಟಿ ಗೆಲ್ಲವು ಪಾಂಡು ಪುತ್ರರಂ ಬಸನದೊಡಂಬಡಂ ಮದುಮಾ ಯಮನಂದನನ ನೆತ್ತದೊಳ್ | ಬಸನಿಗನಾತನಂ ಬರಿಸಿ ನೆತ್ತಮನಾಡಿಸಿ ಗೆದ್ದುಕೊಳ್ಳಮಾ ವಸುಮತಿಯಂ ಮನಂಬಸದೆ ನೀನ್ ಬಟ್ಟೆಯಟ್ಟು ಫಣೀಂದ್ರಕೇತನಾ ||೬೮
ವ|| ಎಂದು ನಾಲವಾಸಗೆಗಳಂ ಮುನ್ನಮೆ ಸಮಕಟ್ಟಿ ತಾಮುಮಾಮುಂ ಕೆಲವು ದೆವಸಂ ಗೋಷ್ಠಿಯೊಳಿರ್ಪ೦ ಬರ್ಕೆಂದು ಬಟ್ಟೆಯನಟ್ಟಿದೊಡವರ ಮನದ ಪುಗೆಯಂ ಪೊಲ್ಲಮೆಯುಮನಯದ ಸಮಸ್ತಬಳೋದ್ಯುಕ್ತನಾಗಿ ಶಕುನಂಗಳ ಕ್ರಮಮಂ ಬಗೆಯದೆ
ವಿಶೇಷವಾಗಿ ಹೆಚ್ಚಿದರು. ಅವರ ಅಭಿವೃದ್ಧಿಗೆ ಪ್ರತಿಯಾಗಿ ಏನುಮಾಡೋಣ, ವ್ಯಸನಗಳನ್ನೇರ್ಪಡಿಸೋಣವೆಂದರೆ ಏಳು ವ್ಯಸನಗಳಲ್ಲಿ ಒಂದೂ ಆ ಅಯ್ದುಜನರನ್ನು ಗೆಲ್ಲಲಾರದು. ರಾಜ್ಯವ್ಯಸನವನ್ನೂ ಬಲವ್ಯಸನವನ್ನೂ ನೋಡೋಣವೆಂದರೆ ಅವು ಮೊದಲೇ ಇಲ್ಲ. ಶತ್ರುಮಂಡಳಗಳಿಂದ ಆಗಬಹುದಾದ ವ್ಯಸನವನ್ನು ವಿಚಾರಿಸುವುದಾದರೆ ಅವೆಲ್ಲ ಕೊಟ್ಟೂ ತತ್ತೂ ಬಾಳುವ ದೇಶಗಳಲ್ಲದೆ ಮೀರಿಯೂ ರೇಗಿಯೂ ಕೆಲಸ ಮಾಡುವ ಮಂಡಲಗಳಲ್ಲ. ಪೌರುಷಪ್ರದರ್ಶನಮಾಡೋಣವೆಂದರೆ ಅವರಲ್ಲಿ ಹೊಕ್ಕು ಯುದ್ಧಮಾಡುವ ಶಕ್ತಿಯವರಿಲ್ಲ. ವಿಷದಾನಾದಿಗಳಿಂದ ಭೇದಿಸೋಣವೆಂದರೆ ಅವರು ಆಪ್ತವಂತರೂ ಬುದ್ಧಿವಂತರೂ ಆಗಿದ್ದಾರೆ. ಬೇರಾವ ರೀತಿಯಲ್ಲಿ ಶತ್ರುವನ್ನು ಅಧೀನಮಾಡಿಕೊಳ್ಳೋಣ ಹೇಳಿಯೆನಲು ಶಕುನಿಯು ಹೀಗೆ ಹೇಳಿದನು.-೬೮, 'ನೀನು ಹೇಳಿದ ಮಾತಿಷ್ಟೂ ಹಾಗೆಯೇ ಸತ್ಯವಾದುದು. ಪಾಂಡುಪುತ್ರರನ್ನು ಅವು ಗೆಲ್ಲಲಾರವು. ಮರೆತೂ ಆ ಧರ್ಮರಾಯನು ವ್ಯಸನವನ್ನು ಅಂಗೀಕರಿಸುವುದಿಲ್ಲ. ಆದರೆ ಧರ್ಮರಾಜನು ಪಗಡೆಯಾಟದಲ್ಲಿ ಆಸಕ್ತನಲ್ಲವೇ. ಅವನನ್ನು ಬರಮಾಡಿ ಪಗಡೆಯಾಟವನ್ನಾಡಿಸಿ ಈ ಭೂಮಿಯನ್ನು ಅವನಿಂದ ಗೆದ್ದುಕೊಳ್ಳೋಣ. ಒಂದೇ ಮನಸ್ಸಿನಿಂದ ದುರ್ಯೋಧನಾ, ನೀನು ದೂತರೊಡನೆ ಅವನಿಗೆ ಹೇಳಿಕಳುಹಿಸು. ವll ಎಂದು ಮೋಸದ ದಾಳಗಳನ್ನು ಮೊದಲೇ ಸಿದ್ಧಪಡಿಸಿ 'ತಾವೂ ನಾವೂ ಕೆಲವುಕಾಲ ಜೊತೆಯಲ್ಲಿ ಒಟ್ಟಿಗಿರೋಣ ಬನ್ನಿ' ಎಂದು ದೂತರನ್ನು ಕಳುಹಿಸಿದರು. ಅವರ ಮನಸ್ಸಿನ ದುರ್ಭಾವವನ್ನೂ ದೌಷ್ಟವನ್ನೂ ತಿಳಿಯದೆ ಪಾಂಡವರು ಸಮಸ್ತಸೈನ್ಯದಿಂದ ಕೂಡಿ ವಿರೋಧವಾದ ಶಕುನಗಳನ್ನೂ ಲಕ್ಷಿಸದೆ “ವಿಧಿಯನ್ನು ಮೀರುವವರಾರು” ಎಂಬ ಮಾತನ್ನು ನಿಜವನ್ನಾಗಿ ಮಾಡಿ ಹಸ್ತಿನಾಪಟ್ಟಣಕ್ಕೆ ಬಂದರು. ಧೃತರಾಷ್ಟ್ರನೇ ಮೊದಲಾದ ಕುಲದ ಹಿರಿಯರೊಡನೆ
Page #330
--------------------------------------------------------------------------
________________
ಪಾಶ್ವಾಸಂ / ೩೨೫ ಎಂಬ ನುಡಿಯಂ ನವಿಮಾಡಿ ಮದಗಜೇಂದಪುರಮನೆದ ಬರ ಧೃತರಾಷ್ಠಾದಿ ಕುಲವೃದ್ಧರೊಡನೆ ದುರ್ಯೋಧನನಿದಿರ್ವೋಗಿ ಧರ್ಮಪುತ್ರಂಗೆ ಪೊಡೆವಟ್ಟು .. ಭೀಮನಂ ಸಮಾನ ಪ್ರತಿಪತ್ತಿಯೊಳ್ ಕಂಡು ತನಗೆ ಪೊಡಮಟ್ಟ ಮತ್ತಿನ ಮೂವರುಮಂ ತೆಗೆದು ತಜ್ಸಿ ಪರಸಿ ತನ್ನ ತಮ್ಮಂದಿರೆಲ್ಲರುಮನಯ್ಯರ್ಗ೦ ಪೊಡವಡಿಸಿ ಫೋಟಲೊಳಗಣವಂದು ರಾಜಮಂದಿರಮಂ ಪೊಕ್ಕುಉll ನೋಡಿ ಪೃಥಾತನೂಜರ ಸಭಾಗೃಹದಂದಮನಂತುಟಪ್ಪುದಂ
ಮಾಡಿದನೆಂದು ಮಾಡಿಸಿ ಸಭಾಲಯಮಂ ನಿಜ ರಾಜಲೀಲೆಯೊಳ್ | ಕೂಡಿ ಯುಧಿಷ್ಠಿರ ಪ್ರಭುಗೆ ತಾನೆ ಸುಯೋಧನನುಯ್ದು ತೋಳದಂ | ನೋಡಿರೆ ಸಿಂಹಮಾಡುವರ ಬಾಲಮನಾಡಿದರೆಂಬ ಮಾಯಿಂ || ೬೯ :
ವ|| ಅಂತು ಸುಯೋಧನಂ ತನ ವಿಭವಮುಮಂ ವಿಳಾಸಮುಮಂ ಪಾಂಡವರ್ಗ ಮಣಿದು ಕಂದುಕಕ್ರೀಡಾದಿ ನಾನಾ ವಿಧ ವಿನೋದಂಗಳಿಂ ಕೆಲವು ದಿವಸಮನಿರ್ದೊಂದು ದಿವಸಂ ತನಗೆ ಸಾವಂ ಸಮಕಟ್ಟುವಂತೆ ಪಿಂಗಾಕ್ರನಕೃಕ್ರೀಡೆಯಂ ಶಕುನಿಯೊಳ್ ಸಮಕಟ್ಟಿ ಪೂಡಲ್ಬಟ್ಟು ಪುಸಿಯನೆ ಪುರಂ ಮುನ್ನಮಾಡಟ್ಟು ತಾನುಂ ಧರ್ಮಪುತ್ರನುಂ ಕೆಲದೊಳಿರ್ದು ನೋಡುತ್ತಿರೆ ಶಕುನಿಯಿಂತೆಂದಂಕ೦ll - ನೋಡುವುದಾಳೇನಟಿಯೊ
ಲಾಡುತ್ತಿರಲಾಗ ತಮುತಿರ್ವರುಮನೆ ನಾ | ಮಾಡುವಮ ಬನ್ನಿಮಂಬುದು ಮಾಡುವ ಬಗೆ ಬಂದು ನೆತ್ತಮಂ ಧರ್ಮಸುತಂ || ೭೦
ದುರ್ಯೋಧನನು ಎದುರಾಗಿ ಹೋಗಿ ಸ್ವಾಗತಿಸಿದನು. ಧರ್ಮರಾಜನಿಗೆ ನಮಸ್ಕಾರಮಾಡಿ ಭೀಮನನ್ನು ಸಮಾನಸತ್ಕಾರಗಳಿಂದ ನೋಡಿ ತನಗೆ ನಮಸ್ಕಾರ ಮಾಡಿದ ಇತರ ಮೂವರನ್ನು ಆಲಿಂಗನಮಾಡಿಕೊಂಡು ಹರಸಿದನು. ತನ್ನ ತಮ್ಮಂದಿರನ್ನೆಲ್ಲ ಆ ಅಯ್ತುಮಂದಿಗೆ ನಮಸ್ಕಾರಮಾಡಿಸಿ ಪಟ್ಟಣದೊಳಕ್ಕೆ ಬಂದು ಅರಮನೆಯನ್ನು ಪ್ರವೇಶಮಾಡಿಸಿದನು. ೬೯. ಪಾಂಡವರ ಸಭಾಮಂಟಪದ ಸೌಂದರ್ಯವನ್ನು ನೋಡಿ ಅಂತಹುದನ್ನು ನಾನೂ ಮಾಡಿಸುತ್ತೇನೆಂದು ದುರ್ಯೋಧನನು ಸಭಾಮಂಟಪವನ್ನು ನಿರ್ಮಿಸಿ ತನ್ನ ರಾಜಲೀಲೆಯಿಂದ ಅದನ್ನು ಸೇರಿ ಯುಧಿಷ್ಠಿರ ಚಕ್ರವರ್ತಿಯನ್ನು ತಾವೇ ಕರೆದುಕೊಂಡು ಹೋಗಿ 'ಸಿಂಹದಾಟ ವನ್ನಾಡುವವರಿಗೆ ಬಾಲದಾಟವನ್ನಾಡಿ ತೋರಿಸಿದರು' ಎಂಬಂತೆ ಅದರ ಸೌಂದರ್ಯ ವನ್ನು ತೋರಿಸಿದನು. ವ|| ದುರ್ಯೋಧನನು ತನ್ನ ವೈಭವವನ್ನೂ ವಿಳಾಸವನ್ನೂ ಪಾಂಡವರಿಗೆ ಪ್ರಕಾಶಪಡಿಸಿ ಚೆಂಡಾಟವೇ ಮೊದಲಾದ ನಾನಾವಿಧವಾದ ಸಂತೋಷಗಳಿಂದ ಕೆಲವು ದಿನವಿದ್ದು ಒಂದು ದಿನ ದುರ್ಯೋಧನನು ತನಗೆ ಸಾವನ್ನು ಸಿದ್ಧಪಡಿಸಿಕೊಳ್ಳುವ ಹಾಗೆ ಶಕುನಿಯಿಂದ ಪಗಡೆಯಾಟವನ್ನು ಸಿದ್ದಪಡಿಸಿದನು. ಪ್ರಾರಂಭದಲ್ಲಿ ಇತರರನ್ನು ಮೊದಲು ಹುಸಿಯಾಟ ಆಡುವಂತೆ ಹೇಳಿ ತಾನೂ ಧರ್ಮರಾಯನೂ ಪಕ್ಕದಲ್ಲಿದ್ದುಕೊಂಡು ನೋಡುತ್ತಿದ್ದರು. ಆಗ ಶಕುನಿಯು ಹೀಗೆಂದನು. ೭೦. ಸುಮ್ಮನೆ ನೋಡುವುದರಲ್ಲಿ ಏನು ಪ್ರಯೋಜನ ? ದುರ್ಯೋಧನನೂ ನೀನು ಪ್ರೀತಿಯಿಂದ ಆಡಬಾರದೇ ಎಂದು ಹೇಳಲು
Page #331
--------------------------------------------------------------------------
________________
೩೨೬ / ಪಂಪಭಾರತಂ
ಕರೆದೊಡೆ ಜೂದಿಂಗಂ ಧುರ ಭರಕಾಖೇಟಕ್ಕೆ ಭೂಭುಜಂಗಾಗದು ಮೆ | ಯರೆದಿರಲೆಂಬ ಪುರಾತನ ಗುರುವಚನಂ ತನಗೆ ನಿಟ್ಟೆಪಟ್ಟುದವೆಂದಂ ||
20
ವ|| ಅಂತು ಪೂಡಿಕೊಂಡು ನಾಟವಾಸಗೆಯನಿಕ್ಕಲ್ವೇಳ್ವುದುಂ ಶಕುನಿ ಮುನ್ನೆ ತನ್ನ ಮಾಡಿದ ನಾದವಾಸಗೆಗಳನರಸಾಳಂತೆ ಕಣ್ಣಡೆದು ಮೆಟ್ಟಿ ಮಟ್ಟಮಾದಿಕ್ಕುವಾಗಲೊಡ್ಡಮಂ ಪೇಟೆಮನೆ ಪೊಲುಪೋಗಿಂಗಮಗಮಾಡುವ ತಮ್ಮುತಿರ್ವರುಂ ಪಲಗೆಗೆ ಸಾಯಿರ ಗದ್ಯಾಣದ ಪೊನ್ನೇ ಸಾಲುಮಗಳಂ ಬೇಡೆಂದು ದುರ್ಯೋಧನನೊಕ್ಕಲಂ ಪುಡಿಯೊಳ್ ಪೊರಳುವಂತ ಪಾಸಂಗೆಯಂ ಪೊರಳ್ಳಿ ಮುನ್ನಂ ನೆತ್ತಮನಯದನಂತವರ ದಾಯಮನಾಡ ಮಡಿಮಡಿಗುಲುವುದು ಮೊಂದು ಪತ್ತೆಂಟು ಪಲಗೆಯಂ ಮೆಳಡಿಸಲೆಂದು ಸೋಲು ಸೋಲದೊಳೇವಯಿಸಿಯಿನೊಡಂ ಕೊಳ್ಳಿಮೆಂದು
ಚoll ಪಲಗೆಗೆ ಪತ್ತು ಸಾಯಿರಮ ಗದ್ಯಣಮಂದಿರದೊಡ್ಡಿ ತಾಮರ
ಜ್ವಲಗೆಯನಾಡಿ ಸೋಡೆ ಸುಯೋಧನನೇವದ ಧರ್ಮಪುತ್ರನಂ | ಕುಲಧನ ಸಂಕುಲನಂಗಳನೆ ತಂದಿದೆಯಿಟ್ಟವನಾಡಿ ಸೋಲ್ತನಾ
ಕುಲಮತಿ ಮುಂದೆ ಭಾರತದೊಳೊಡ್ಡುವುದು ಕಡು ನನ್ನ ಮಾವೋಲ್ ||೭೨ (ದುರ್ಯೊಧನನು) ನಾವಾಡೋಣವೇ ಬನ್ನಿ ಎಂದು ಕರೆದನು. ಆಡುವ ಮನಸ್ಸು ಧರ್ಮರಾಜನಿಗೂ ಉಂಟಾಯಿತು. ೭೧. ಜೂಜಿಗೂ ರಣಕ್ಕೂ ಬೇಟೆಗೂ ಕರೆದರೆ ರಾಜನಾದವನು ಮೈಮರೆಸಿಕೊಂಡಿರುವುದು ಯೋಗ್ಯವಲ್ಲ ಎಂಬ ಪುರಾತನವಾದ ಹಿರಿಯಮಾತು ಅವನ ವ್ರತವಾಗಿ ಬಿಟ್ಟಿತು. ವll ಇಬ್ಬರೂ ಆಟವಾಡಲು ಮೊದಲು ಮಾಡಿದರು. ದಾಳಗಳನ್ನು ಬಿಡುವಂತೆ ಹೇಳಲು ಶಕುನಿಯು ಮೊದಲೇ ತಾನು ಸಿದ್ಧಪಡಿಸಿದ್ದ ಕಳ್ಳದಾಳಗಳನ್ನು ರಾಜಭಟನಂತೆ ದುರ್ಯೋಧನನ ಇಂಗಿತವನ್ನು ತಿಳಿದು ದಾಳಗಳನ್ನು ಕುಟ್ಟಿ ಸಮಪ್ರದೇಶದಲ್ಲಿ ಉರುಳಿಸಿದನು. ಪಣ(ಒತ್ತೆವನ್ನು ಕೇಳಿ ಎಂದನು ದುರ್ಯೋಧನ, ಹೊತ್ತು ಹೋಗುವುದುದಕ್ಕೂ ಪ್ರೀತಿಗೂ ಆಡುವ ನಮ್ಮಿಬ್ಬರಿಗೂ ಪಗಡೆಯಾಟದ ಹಾಸಿನ ಒಂದ ಹಲಗೆಗೆ ಸಾವಿರಗದ್ಯಾಣದ (ನಾಣ್ಯ) ಚಿನ್ನ (ಹಣವೇ)ವೇ ಸಾಕು, ಹೆಚ್ಚಿನದು ಬೇಡ ಎಂದು ತೀರ್ಮಾನಿಸಿದರು. ದುರ್ಯೋಧನನು ತನ್ನ ಕುಲವನ್ನೇ ಧೂಳಿನಲ್ಲಿ ಹೊರಳಿಸುವಂತೆ ದಾಳಗಳನ್ನು ಹೊರಳಿಸಿ ಮೊದ ಮೊದಲು ಪಗಡೆಯಾಟವನ್ನು ತಿಳಿಯದವನ ಹಾಗೆ ಗರವನ್ನು ಹಾಕಿ, ಸಲಸಲಕ್ಕೂ ಇಟ್ಟಿ ಒತ್ತೆಯನ್ನು ಅವರನ್ನು ಮೋಸಗೊಳಿಸುವದಕ್ಕೋಸ್ಕರ ಸೋತು ಸೋಲದಿಂದ ಅಸಮಾಧಾನಪಟ್ಟವನಂತೆ ನಟಿಸಿದನು. ಈಗ ಇನ್ನೂ ಒತ್ತೆಯನ್ನು ತೆಗೆದುಕೊಳ್ಳುವ ಯೆಂದು-೭೨. ಹಲಗೆಗೆ (ಒಂದು ಆಟಕ್ಕೆ ಹತ್ತುಸಾವಿರ ಗದ್ಯಾಣವಿರಲಿ ಎಂದು ತಕ್ಷಣ ಒಡ್ಡಿ ಆ ಹಲಗೆಗಳನ್ನೂ ಸೋತನು. ಸಮಾಧಾನದಿಂದ ಧರ್ಮರಾಯನೂ ದುರ್ಯೋಧನನೂ ಕಲಕಿದ ಮನಸ್ಸುಳ್ಳವರಾಗಿ ಸಮಸ್ತಕುಲಧನಗಳನ್ನೂ ಒಡ್ಡಿದರು. ಮುಂದೆ ನಡೆಯಲಿರುವ ಭಾರತಯುದ್ಧದಲ್ಲಿ ತನ್ನ ವಂಶವನ್ನು ಬಲಿಯಾಗಿ ಒಡ್ಡುವುದನ್ನು ನಿಜವನ್ನಾಗಿಸುವಂತೆ ಧರ್ಮರಾಜನು ಕುಲಧನಸಮೂಹಗಳನ್ನೂ ತಂದು
Page #332
--------------------------------------------------------------------------
________________
ಷಷ್ಠಾಶ್ಚಾಸಂ | ೩೨೭ ವ|| ಅಂತು ಕಾಳಿಂಗಾಂಗ ವನಸಂಭವಂಗಳಪ್ಪ ಮದಾಂಧಗಂಧಸಿಂಧುರಂಗಳುಮನಾ ಜಾನೇಯ ಕಾಂಭೋಜ ಭೂಮಿಜಂಗಳಪ್ಪ ಜಾತ್ಯಶ್ವಂಗಳುಮನೊಡ್ಡಿದಾಗಳ್ ದುರ್ಯೋಧನಂ ಬಂದಿಕಾಳನಂತ ಹೆಗೆಯುಂ ಪ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ ಸೂಳೆಯಂತೆ ಕಚಿವುಟಿವನದುಂ ರಸವಾದಿಯಂತೆ..... ಕಟ್ಟಿಯುಂ ಪೆರ್ಜೊಡೆಯಂತೆ ನುಣ್ಣಿತಂ ವೇಟ್ಟುವಣು ಗಾಳಂತೆ ದಾಯಂಬಡೆದುಂ ಮೇಳದಂಕದಂತೆ ಸುತೆಯಳೆದುಂ ಡೊಂಬರ ಕೋಡಗದಂತಾಡಿ ಗೆಲ್ದಾಗಳ್ ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂಕoll ಭಯಮಯದ ಕಲಿಯುಂ ಚಾ
ಗಿಯುಮೆನಿಸದೆ ನಾಡ ಲೋಭಿಯುಂ ಪಂದೆಯುಮಾ | . ಗಿಯ ಬಾಲ್ವಿಂಗಲ್ಲದೆ ಸೂ
ಳೆಯ ಕಣ್ ಪಾಸಗೆಯ ಕಣ್ಣುಮನುಜುಗುರುಮೇ || ೭೩ ವ|| ಎಂದು ಕಯ್ಕೆಸರಂಬೆರಸು ನುಡಿದ ಭೀಮಸೇನನ ನುಡಿಗಳ ಕಿಡಿಗಳಂತೆ ತನ್ನ ಮನಮನೋನಲಿಸಯುಮರ್ದಯಂ ಕನಲಿಸೆಯುವೇನುಮೆನ್ಯದ ಮುಂತಣ ಕಜಮನೆ ಬಗೆದುಸಿರದಿರ್ದ ದುರ್ಯೋಧನನಗೆ ಗಾಂಗೇಯನುಂ ವಿದುರನುಂ ಬಂದುಉll ಸಾಲದೆ ಜೂದು ನಿಮ್ಮೊಳಗಿದೇಂ ಗಳ ಮಾಣಿಸಿಮೆಂದೊಡvಭೂ
ಪಾಲಕಿರೀಟತಾಟಿತಪದಂ ಯಮನಂದನನ ನಾಡೆಯುಂ | ಸೋಲದೊಳಾದಮೇವಯಿಸಿದೆಂ ನುಡಿಗಿನ್ನೆಡೆಯಿಲ್ಲ ಪೋಗಿಮಾ ತ್ಯಾಲಯಕೆಂದೊಡೇನುಮೇನಲಣದ ಬಾರಿಸಲಣದಿರ್ವರುಂ || ೭೪
ಒತ್ತೆಯನ್ನಾಗಿಟ್ಟು ಆಡಿ ಸೋತನು. ವll ಹಾಗೆ ಕಳಿಂಗ ಮತ್ತು ಅಂಗದೇಶದ ಕಾಡುಗಳಲ್ಲಿ ಹುಟ್ಟಿದ ಮದ್ದಾನೆಗಳನ್ನೂ ಉತ್ತಮ ಜಾತಿಯವುಗಳಾದ ಕಾಂಭೋಜದೇಶದಲ್ಲಿ ಹುಟ್ಟಿದ ಕುದುರೆಗಳನ್ನೂ ಒಡ್ಡಿದಾಗ ಸೆರೆಹಿಡಿಯುವಂತೆ ಬಂಧಿಸಿಯೂ ಹುಣ್ಣುಗಳನ್ನೂ ಚಿಕಿತ್ಸೆಮಾಡುವ ವೈದ್ಯನಂತೆ ಕೊಡಸಾರಿ (ಹಾಳ-ಒಂದು ಮೂಲಿಕೆಗಳನ್ನೂ ಹಿಡಿದೂ ಸೂಳೆಯರ ಹಾಗೆ ಕಳಿದು ಉಳಿದುದನ್ನೆಲ್ಲಾ ತಿಳಿದೂ ಪಾದರಸದಿಂದ ಚಿನ್ನವನ್ನು ಮಡುವ ರಸವಾದಿಯಂತೆ ಕಾಯಿಗಳನ್ನು ಕುಟ್ಟಿಯೂ ಹಿರಿಯ ಜಾರೆಯರಂತೆ ನಯವಾಗಿ ಮಾತನಾಡಿಯೂ ಪ್ರೀತಿಯ ಮನುಷ್ಯನಂತೆ ಗರಗಳನ್ನು ಹೊಂದಿಯೂ - ದಾಯಭಾಗವನ್ನು ಹೊಂದಿಯೂ ಪ್ರೇಮಕಲಹದಂತೆ ಸುಳಿವನ್ನು ತಿಳಿದುಕೊಂಡ ಡೊಂಬರ ಕೋತಿಯಂತೆ ಆಡಿ ಒತ್ತೆಯನ್ನೆಲ್ಲ ಗೆದ್ದಾಗ ಭೀಮಸೇನನು ತಮ್ಮಣ್ಣನ ಸೋಲನ್ನು ಕಂಡು ಹೀಗೆಂದನು. ೭೩. ಭಯವನ್ನೇ ತಿಳಿಯದ ಶೂರನೂ ತ್ಯಾಗಿಯೂ ಎನಿಸಿಕೊಳ್ಳದೆ ವಿಶೇಷವಾಗಿ ಜಿಪುಣನೂ ಹೇಡಿಯೂ ಆಗಿ ಬಾಳುವವನಿಗಲ್ಲದೆ (ಇತರರಿಗೆ) ಸೂಳೆಯ ಕಣ್ಣೂ ದಾಳಗಳ ಕಣ್ಮ ಬಗ್ಗೆ ಅಧೀನವಾಗುತ್ತವೆಯೇ? ವ|| ಎಂದು ಕಹಿಯಾದ (ಹಿತವಲ್ಲದ) ಧ್ವನಿಯೊಡನೆ ಕೂಡಿ ನುಡಿದ ಭೀಮಸೇನನ ಮಾತುಗಳು ಬೆಂಕಿಯ ಕಿಡಿಗಳಂತೆ ತನ್ನ ಮನಸ್ಸನ್ನು ಮೂದಲಿಸಿದರೂ ಕೆರಳಿಸಿದರೂ ಏನನ್ನೂ ಹೇಳದೆ ಮುಂದಿನ ಕಾರ್ಯವನ್ನೇ ಯೋಚಿಸಿ ಮಾತನಾಡದಿದ್ದ ದುರ್ಯೊಧನನ ಹತ್ತಿರಕ್ಕೆ ಭೀಷ್ಮವಿದುರರು ಬಂದು ೭೪. ನಿಮ್ಮಲ್ಲಿ ಇನ್ನೂ ಜೂಜು
Page #333
--------------------------------------------------------------------------
________________
೩೨೮ / ಪಂಪಭಾರತಂ
ವl ಧೃತರಾಷ್ಟ್ರನಲ್ಲಿಗೆ ಪೋಗಿ
ಚoll
ಕಂ
ನಿನಗೆ ಮಗಂ ಪುರಾಕೃತದ ಕರ್ಮಮೆ ಪುಟ್ಟುವವೋಲೆ ಪುಟ್ಟ ನಿ ಮಿನಿಬರುಮಂ ರಸಾತಳದೊಳದಪಂ ಪಗೆ ಪೊಲ್ಲ ಪಾಂಡು ನಂ | ದನರೊಳಹೀಂದ್ರಕೇತನನ ಬೂದಿನ ಗೆಲ್ಲಮದೆಂತುಟೆನ್ನ ನಂ ಜಿನ ಸವಿಯಂತುಟೆಂದೊಡಿನಿಸಂತದೊಳಂತಕನೆಲ್ಲಿಗಟ್ಟುಗುಂ
ಪುರುಡಿಸಿಕೊಂಡೀಗಳ ನೀ
ನರಸಿನ ಗರ್ವದೊಳೆ ಬೀಗಿ ಬೆಸೆಯದ ಮಗನಂ | ಕರೆದೊಪ್ಪಿಸವೇ ಯುಧಿ
ಷ್ಠಿರಂಗೆ ಮುನ್ನ ಗೆಲ್ಲ ವಸ್ತುವಾಹನ ಚಯಮಂ ||
2.98
೭೬
ಮ|| ಸ || ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿ ಭೂಭ ನದವನಾತಂಗಕುಂಭಸ್ಥಳ ದಳನಖರೋಗ್ರಾಸಿ ಪಂಚಾಸ್ಯ ಧೈರ್ಯಂ | ವಿದಿತ ಪ್ರತ್ಯಕ್ಷನಾಶಾಕರಿ ನಿಕಟತಟಶ್ರಾಂತ ದಾನಂ ಭರಂಗೆ ಯ್ದಿದಿರೊಳ್ ವಿಕ್ರಾಂತತುಂಗಂ ಹರಿಗನಿರೆ ಬಿಗುರ್ತಾಂಪನಂತಾವ ಗಂಡಂ ||೭೭
ಸಾಕಾಗಲಿಲ್ಲವೇ, ನಿಮ್ಮ ನಿಮ್ಮಲ್ಲಿಯೂ ಇದೇನಿದು ? ನಿಲ್ಲಿಸಿ ಎಂದರು. ಶತ್ರು ರಾಜರನ್ನು ಕಾಲ್ಕೆರಗಿಸಿದ ಯಮನಂದನನು ಅವರನ್ನು ಕಂಡು ಅಜ್ಞಾನನಗುಂಟಾದ ಸೋಲಿನಿಂದ ನಾನು ವಿಶೇಷ ನೊಂದಿದ್ದೇನೆ, ಈಗ ಮಾತನಾಡುವುದಕ್ಕೂ ಅವಕಾಶವಿಲ್ಲ ನಿಮ್ಮ ಮನೆಗೆ ದಯಮಾಡಿಸಿ ಎಂದನು. ಏನು ಹೇಳುವುದಕ್ಕೂ ಅಸಮರ್ಥರಾಗಿ ಅವನನ್ನು ತಪ್ಪಿಸುವುದಕ್ಕಾಗದೆ ಇಬ್ಬರೂ ಧೃತರಾಷ್ಟ್ರನಲ್ಲಿಗೆ ಬಂದು ೭೫. “ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮವೇ ಹುಟ್ಟಿದಂತೆ ಹುಟ್ಟಿದ ನಿನ್ನ ಮಗನು ನಿಮ್ಮೆಲ್ಲರನ್ನೂ ಪಾತಾಳದಲ್ಲಿ ಮುಳುಗಿಸುತ್ತಾನೆ. ಪಾಂಡುಪುತ್ರರಲ್ಲಿ ದ್ವೇಷವು ಸಲ್ಲದು (ಯೋಗ್ಯವಲ್ಲ) ದುರ್ಯೋಧನನ ಜೂಜಿನಲ್ಲಿ ಪಡೆದ ಗೆಲವು ಎಂತಹುದು ಎನ್ನುವ ಯಾದರೆ ಅದು ವಿಷದ ರುಚಿಯಂತಹುದು. ಕೊನೆಯಲ್ಲಿ ಯಮನಲ್ಲಿಗೆ ಕಳುಹಿಸಿತ್ತದೆ. ೭೬. ಈಗ ನೀನು ಅಸೂಯೆಯಿಂದಲೂ ರಾಜನೆಂಬ ಗರ್ವದಿಂದಲೂ ಉಬ್ಬಿ ಹೋಗದೆ ಮಗನನ್ನು ಕರೆದು ಮೊದಲು ಗೆದ್ದ ವಸ್ತುವಾಹನಗಳ ಸಮೂಹವನ್ನು ಧರ್ಮರಾಜನಿಗೆ ಒಪ್ಪಿಸುವಂತೆ ಹೇಳು ವ|| ಎಂದು ಮತ್ತೂ ಹೀಗೆಂದರು. ೭೭. ಯುದ್ಧೋದ್ಯೋಗದಲ್ಲಿ ಆಸಕ್ತಿಯುಳ್ಳವನೂ ಶತ್ರುರಾಜರ ಸೈನ್ಯಕ್ಕೆ ಕಾಡುಗಿಚ್ಚಿ ನಂತಿರುವವನೂ ವೈರಿರಾಜರೆಂಬ ಮದ್ದಾನೆಗಳ ಕುಂಭಸ್ಥಳವನ್ನು ಸೀಳುವ ಹರಿತವೂ ಭಂಯಕರವೂ ಆದ ಕತ್ತಿಯನ್ನುಳ್ಳ ಸಿಂಹಧೈರ್ಯವುಳ್ಳವನೂ ಇಂದ್ರಿಯಗಳಿಗೆ ಗೋಚರ ವಾದುದನ್ನೆಲ್ಲ ಚೆನ್ನಾಗಿ ತಿಳಿದಿರುವವನೂ ದಿಗ್ಗಜಗಳವರೆಗೂ ಹರಡಿರುವ ತ್ಯಾಗ ಗುಣವುಳ್ಳವನೂ ಆದ ಉನ್ನತ ಪರಾಕ್ರಮಿಯಾದ ಅರ್ಜುನನು ಆರ್ಭಟಮಾಡಿಕೊಂಡು
Page #334
--------------------------------------------------------------------------
________________
ಸಪ್ತಾಶ್ವಾಸಂ / ೩೨೯ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ಷಷ್ಠಾಶ್ವಾಸಂ
ಎದುರಿಗಿರುವಾಗ ಹಾಗೆಯೇ ಆರ್ಭಟಿಸಿ ಎದುರಿಸಿ ಭಯಪಡಿಸುವ ಶೂರನಾವ ನಿದ್ದಾನೆ ಎಂದರು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಆರನೆಯ ಆಶ್ವಾಸ.
Page #335
--------------------------------------------------------------------------
________________
ಕಂ||
ಸಪ್ತಮಾಶ್ವಾಸಂ
ಶ್ರೀ ರಮಣೀರಮಣಂಗರಿ
ನಾರೀ ವೈಧವ್ಯ ದಿವ್ಯ ದೀಕ್ಷಾ ದಕ್ಷಂ |
ಗಾರಣೆ ಹರಿಗಂಗೀಗಡೆ
ಬಾರಿಸು ನೀಂ ನಿನ್ನ ಮಗನನಂದನರೇಂದ್ರಾ ||
ಕಾದುದು ಸರವೆಂದರ
ನಾದುದು ಕಾಲಾಗ್ನಿಬಲವದರಿನೃಪತಿಗೆ ಕಾ | ಪಾದುದು ನೆಲಕ್ಕೆ ತೋಳ್ವಲ
ಮಾ ದೊರೆತೆನೆ ಮರುಳೆ ಹರಿಗನೊಳ್ ಪಗೆಗೊಳ್ವಾ ||
ವ! ಎಂದೆನಿತಾನುಂ ತದೊಳ ಸಾಜೆಯುಂ ಕೀಡೆಯುಂ ನುಡಿದೊಡೆ ಧೃತರಾಷ್ಟ ಮಗನಲ್ಲಿಗೆ ವಂದು ಜಡಿದು ನುಡಿದುಮೆಗೆಯುಮೊಡಂಬಡಿಸಲಾಗಿದಿರೆ ಯುಧಿಷ್ಠಿರಂ ತಲೆಗವಿ ವನಲ್ಲದೆಯುಮೇವದೊಳ್ ತಲೆಗವಿದು ಸಿಸ್ಟಂ ಕೊಂಡಾಡಿ ನೆತ್ತಮನಾಡಿ
ಕಂ ವ್ಯಾಳ ಗಜಂಗಳನಗ್ಗದ
و
ಸೂಳೆಯರೊಕ್ಕನಲನರ್ಘ ವಸ್ತುಗಳನಿಳಾ |
ಪಾಳಂ ಸೋಲೊಡ ಜೂದಿನ
ಕೇಳಿಯನಾ ಕೇಳಿಯನಿತಳ್ ಮಾಣಿಸಿದ ||
2
ವl ಮಾಣಿಸಿದೊಡೆ ಮಾಣದೆ ರಪಣಮಂ ತೋಡೆಯುಮೊತ್ತೆಯನುಗ್ಗಡಿಸಿಯುಮಾಡಿ ಮನೆ ಪೆತೇನುಮುಪಾಯಮಿಲ್ಲದೆಮ್ಯಾಳ ನೆಲನೊತ್ತೆಯೆಂದೊಡೆ ಬಗೆದು ನೋಡಿ ಗೆಲ್ಲಿಂ
೧. 'ಐಶ್ವರ್ಯಲಕ್ಷ್ಮೀಪತಿಯೂ ಶತ್ರುರಾಜಸ್ತ್ರೀಯರಿಗೆ ವೈಧವ್ಯದೀಕ್ಷೆಯನ್ನು ಕೊಡುವ ಶಕ್ತಿಯುಳ್ಳವನೂ ಆದ ಅರಿಕೇಸರಿಗೆ ಸಮಾನರಾದವರಾರು? ಕುರುಡ ದೊರೆಯೇ ನಿನ್ನ ಮಗನನ್ನು ಈ ಜೂಜಿನ ಕಾರ್ಯದಿಂದ ನಿವಾರಿಸುವವನಾಗು. ೨. ಅರ್ಜುನನ ತೋಳಿನ ಬಲವು ಶರಣಾಗತರನ್ನು ರಕ್ಷಿಸಿತು. ಬಲಿಷ್ಠರಾದ ಶತ್ರುರಾಜರಿಗೆ ಕಾಲಾಗ್ನಿಯಾಯಿತು. ಭೂಮಿಗೆ ರಕ್ಷಣೆಯಾಯಿತು. ಅವನ ಬಾಹುಬಲವು ಇಂತಹುದು ಎಂದು ತಿಳಿದೂ ಹುಚ್ಚ! ಅರ್ಜುನನಲ್ಲಿ ಹಗೆಗೊಳ್ಳುತ್ತೀಯಾ? ವ|| ಎಂದು ಎಷ್ಟೋ ರೀತಿಯಲ್ಲಿ ಸಾರಿ ಸ್ಪಷ್ಟವಾಗಿ ಕೋಪದಿಂದಲೂ ಬಲಾತ್ಕಾರದಿಂದಲೂ ಭೀಷ್ಮರು ಹೇಳಿದರು. ಧೃತರಾಷ್ಟ್ರನು ಮಗನ ಹತ್ತಿರಕ್ಕೆ ಬಂದು ಗದರಿಸಿ ಬಯ್ದು ಹೇಳಿ ಏನೂ ಮಾಡಿದರೂ ಒಪ್ಪಿಸಲಾಗಲಿಲ್ಲ. ಧರ್ಮರಾಜನು (ಸಾಮಾನ್ಯವಾಗಿ) ತಲೆತಗ್ಗಿಸುವವನಲ್ಲವಾದರೂ ತನಗುಂಟಾದ ಸೋಲಿನಲ್ಲಿ ತಲೆತಗ್ಗಿಸಿ ನಾಚಿಕೆಯಿಂದ ಪಗಡೆಯಾಟವಾಡಿ-೩. ಭಯಂಕರವಾದ (ತುಂಟಾದ) ಆನೆಗಳನ್ನೂ ಶ್ರೇಷ್ಠರಾದ ದಾಸಿಯರನ್ನೂ ಕುಟುಂಬಗಳನ್ನೂ ಬೆಲೆ ಯಿಲ್ಲದ ವಸ್ತುಗಳನ್ನೂ ಸೋತನು. ಜೂಜಿನಾಟವನ್ನು ಆ ಆಟಕ್ಕೆ ನಿಲ್ಲಿಸಿದರು. ವ ಹಾಗೆ ನಿಲ್ಲಿಸಿದರೂ ದುರ್ಯೋಧನನು ನಿಲ್ಲಿಸಲು ಇಷ್ಟಪಡದೆ ಪದಾರ್ಥಗಳನ್ನು
Page #336
--------------------------------------------------------------------------
________________
22
ಸಪ್ತಮಾಶ್ವಾಸಂ |೩೩೧ ಬಟ್ಟೆಯಂ ಮುದುಗಳ್ ಮಗು ಕುಡಿಸುವರೆಂಬ ಬಗೆಯೊಳಂ ವಿಕ್ರಮಾರ್ಜುನನುಂ ಭೀಮನುಂ ಯಮಳರುಮೆದುಕೊಳ್ಳರೆಂಬ ಸಂಕೆಯೊಳಮಂತಲು ನಿನ್ನ ನನ್ನಿಯೊಳಂ ವರ್ಷಾವಧಿಯೊಳಲ್ಲದೆ ನೆಲನನೊತ್ತೆವಿಡಿಯನೆಂದೊಡೆ ಧರ್ಮಪುತ್ರಂ ಪನ್ನೆರಡು ವರುಷಂಬರಂ ನಾಡು ಪುಗದರಣ್ಯದೊಳಿರ್ಪಂತುಮಜ್ಞಾತವಾಸವೆಂದೊಂದು ವರುಷದೊಳಾರಾನು ಮಂದರಪೊಡ ಮತ್ತಂ ದ್ರಾದಶಾಂಬರಂ ನಾಡ ದೆಸೆಯಂ ನೋಡದಂತಾಗೆಯೊಂದೆ ಪಲಗೆಯೊಳ ಗೆಲ್ಲಸೋಲಮಪ್ಪಂತು ನನ್ನಿ ನುಡಿದು ನೆಲನನೊತ್ತೆಯಿಟ್ಟಾಡಿ
ಕoll ಆ ಪಲಗೆಯುಮಂ ಸೋಲು ಮ
ಹೀಪತಿ ಚಲದಿಂ ಬಟಕ್ಕೆ ಸೋಲಂ ಗಡಮಾ | ದೌಪದಿಯುಮನೇನಾಗ
ಪಾಪದ ಫಳಮೆಯೆವಂದ ದವಸದೊಳಾರ್ಗಂ ||
ವ|| ಅಂತು ದುರ್ಯೋಧನನಜಾತಶತ್ರುವಿನ ಸರ್ವಸ್ವಮೆಲ್ಲಮಂ ಗೆಲ್ಲು ಗೆಲ್ಲ ಕಸವರ ಮೆಲ್ಲಂ ಬಂದುದು ಪಾಂಚಾಳರಾಜತನೂಜೆಯೋರ್ವಳ್ ಬಂದಳಿಲ್ಲಾಕೆಯಂ ತನ್ನಿಮೆಂದು ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯವಿಲ್ಲದುದನಡೆದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು ಕರ್ಣನ ಲೆಂಕಂ ಪ್ರಾತಿಕಾಮಿಯೆಂಬನುಮಂ ತನ್ನ ತಮ್ಮಂ
೪
ತೋರಿಸಿಯೂ ಒತ್ತೆಗಳನ್ನು ಕೂಗಿ ಹೇಳುತ್ತಲೂ ಆಡಿ ಎನ್ನಲು ಬೇರೆ ಉಪಾಯ ವಿಲ್ಲದೆ ಧರ್ಮರಾಜನು 'ನಾವು ಆಳುತ್ತಿರುವ ರಾಜ್ಯವೇ ಒತ್ತೆ'ಯೆಂದೊಡನೆಯೇ ಯೋಚನೆಮಾಡಿ ಗೆದ್ದ ಬಳಿಕ (ಇದನ್ನು) ಈ ಮುದಿಕಣ್ಣಳು ಪುನಃ ಹಿಂದಕ್ಕೆ ಕೊಡಿಸಿಬಿಡುತ್ತಾರೆಂಬ ಯೋಚನೆಯಿಂದಲೂ ಅರ್ಜುನಭೀಮನಕುಳರು ಸೆಳೆದುಕೊಳ್ಳುತ್ತಾರೆಂಬ ಸಂದೇಹದಿಂದಲೂ ದುರ್ಯೋಧನನು (ಧರ್ಮರಾಜನನ್ನು ಕುರಿತು) ಹಾಗಲ್ಲ ನಿನ್ನ ಮಾತಿನಲ್ಲಿ ನಂಬಿಕೆಯಿಲ್ಲದಿಲ್ಲ. ಆದರೂ ವರ್ಷದ ಕಾಲನಿರ್ದಿಷ್ಟವಾದಲ್ಲದೆ ನಿನ್ನ ಭೂಮಿಯನ್ನು ಒತ್ತೆಯಾಗಿ ಸ್ವೀಕರಿಸುವುದಿಲ್ಲ ಎನ್ನಲು ಧರ್ಮರಾಜನು 'ಹನ್ನೆರಡು ವರ್ಷದವರೆಗೆ ನಾಡನ್ನು ಪ್ರವೇಶಮಾಡದೆ ಕಾಡಿನಲ್ಲಿರುತ್ತೇವೆ. ಒಂದು ವರ್ಷ ಅಜ್ಞಾತವಾಸಮಾಡುತ್ತೇವೆ. ಆ ಅಜ್ಞಾತವಾಸವೆಂಬ ಒಂದು ವರ್ಷದಲ್ಲಿ ಯಾರಾದರೂ ತಿಳಿದರಾದರೆ ಪುನಃ ಹನ್ನೆರಡು ವರ್ಷದವರೆಗೆ ರಾಜ್ಯದ ಕಡೆಗೆ ನೋಡುವುದಿಲ್ಲ. ಒಂದು ಹಲಗೆ(ಆಟ)ಯಲ್ಲಿಯೇ ಗೆಲುವು ಸೋಲುಗಳನ್ನು ನಿಷ್ಕರ್ಷಿಸೋಣ' ಎಂದು ಹೇಳಿ ರಾಜ್ಯವನ್ನು ಒತ್ತೆಯಿಟ್ಟು ಆಡಿ ೪. ಆ ಹಲಗೆಯನ್ನೂ ಸೋತನು. ಧರ್ಮರಾಜನು ಅಷ್ಟಕ್ಕೇ ಬಿಡದೆ ಬಳಿಕ ಹಟದಿಂದ ದೌಪದಿಯನ್ನೂ ಸೋತನು. ಪಾಪದ ಫಲ ಕೂಡಿಬಂದ ದಿವಸ ಯಾರಿಗೆ ಏನು ತಾನೇ ಆಗುವುದಿಲ್ಲ. ವ|| ಹಾಗೆ ದುರ್ಯೋಧನನು ಶತ್ರು ಹುಟ್ಟದೆಯೇ ಇರುವ (ಸರ್ವಸಖನಾದ) ಯುಧಿಷ್ಠಿರನ ಸರ್ವಸ್ವವನ್ನೂ ಗೆದ್ದು, ಗೆದ್ದ ಬೆಲೆಯುಳ್ಳ ವಸ್ತುಗಳೆಲ್ಲವೂ ಬಂದುವು. ದೌಪದಿಯೊಬ್ಬಳು ಮಾತ್ರ ಬಂದಿಲ್ಲ. ಆಕೆಯನ್ನು ತನ್ನಿಯೆಂದು ಧರ್ಮರಾಜನು ಕೊಟ್ಟ ಸತ್ಯವಾಕ್ಕಿನ ಬಲದಿಂದಲೇ ತನಗೆ ಆಜ್ಞೆಗೆ ಕೇಡಿಲ್ಲವೆಂದು ತಿಳಿದು ಉತ್ತಮವಲ್ಲದ ತುಂಟಾಟವಾಡಲು (ಚೇಷ್ಟೆ ಮಾಡಲು)
Page #337
--------------------------------------------------------------------------
________________
೩೩೨) ಪಂಪಭಾರತಂ ದುಶ್ಯಾಸನನುಮಂ ಪೇಚಿಡವಂದಿರಾಗಳ ಬೀಡಿಂಗವರಿದು ರಜಸ್ವಲೆಯಾಗಿರ್ದಂ ಮುಟ್ಟಲಾಗದೆನೆಯುಮೊತ್ತಂಬದಿಂದೊಳಗಂ ಪೊಕ್ಕು ಪಾಂಚಾಳಿಯಂ ಕಣ್ಣಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದುಮll ಮನದೊಳ್ ನೊಂದಮರಾಪಗಾಸುತ ಕೃಪ ದ್ರೋಣಾದಿಗಳ ಬೇಡವೇ
ಡೆನೆಯುಂ ಮಾಣದೆ ತೋಚಿ ತೋಟ್ಟುವಸಕೆ ಪೋ ಪೋಗು ನೀನೆಂದು ಬ | ಹೈನಿತಾನುಂ ತೆಜದಿಂದಮುಟ್ಟುದುವರಂ ಕೆಯ್ಯಂದು ದುಶ್ಯಾಸನಂ ತನಗಂ ಮೆಲ್ಲನೆ ಮತ್ತು ಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣಯಾ ||
ವ|| ಅಂತು ಕೃಷ್ಣಯ ಕೃಷ್ಣಕಬರೀಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಕರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬೆಮರುತ್ತುಮಿರ್ದ ದುಶ್ಯಾಸನನುಮಂ ಕಣ್ಣೆತ್ತಿ ಕಿರುನಗೆ ನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು ಕಣ್ಣಳಿಂ ನೆತ್ತರ್ ತುಳುಂಕಉ11 ಕೋಪದ ಪರ್ಚಿನೊಳ್ ನಡುಗುವೂರುಯುಗಂ ಕಡುಪಿಂದರ ನಾ
ಸಾಪುಟಮಸ್ಯೆಯಿಂ ಪೊಡರ್ವ ಪುರ್ವು ಪೊದಲ್ಲ ಲಯಾಂತಕ ತ್ರಿಶೂ | ಲೋಪಮ ಭೀಷಣ ಭ್ರುಕುಟ ಮುನ್ನ ರೌದ್ರ ಗದಾಯುಧಂಬರಂ ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ || ೬
ಯೋಚಿಸಿ ಕರ್ಣನ ಸೇವಕನಾದ ಪ್ರಾತಿಕಾಮಿಯೆಂಬುವನಿಗೂ ತನ್ನ ತಮ್ಮನಾದ ದುಶ್ಯಾಸನನಿಗೂ ಆಜ್ಞೆ ಮಾಡಿದನು. ಅವರು ಆಗಲೇ ಅವಳ ಅಂತಃಪುರಕ್ಕೆ ಓಡಿಹೋಗಿ 'ರಸಜ್ವಲೆಯಾಗಿದ್ದೇನೆ ಮುಟ್ಟಕೂಡದು' ಎಂದರೂ ಬಲಾತ್ಕಾರದಿಂದ ಒಳಗೆ ಪ್ರವೇಶಿಸಿ ಬ್ರೌಪದಿಯನ್ನು ಭಯಪಡುವಂತೆ ಗದರಿಸಿ ಅವಳ ತುರುಬನ್ನು ಹಿಡಿದು ಆ ಮನೆಯ ಮಧ್ಯಭಾಗದಿಂದ ದುರ್ಯೊಧನನ ಸಭಾಮಂದಿರದ ಮಧ್ಯಭಾಗಕ್ಕೆ ಸೆಳೆದು ತಂದರು. ೫. ಭೀಷ್ಮ ಕೃಪ ದ್ರೋಣಾದಿಗಳು ಮನಸ್ಸಿನಲ್ಲಿ ದುಃಖಪಟ್ಟು ಬೇಡಬೇಡವೆಂದರೂ ಬಿಡದೆ 'ದಾಸಿ, ನಡೆ, ನೀನು ತೊತ್ತಿನ ಕೆಲಸಮಾಡು ಹೋಗು, ಹೋಗು' ಎಂದು ಎಷ್ಟೋ ರೀತಿಯಲ್ಲಿ ಬಯ್ದು ಉಟ್ಟ ಸೀರೆಯವರೆಗೆ ಕೈಹಾಕಿ ತನಗೆ ಮೃತ್ಯು ಸಮೀಪವಾಗಿರಲು ದುಶ್ಯಾಸನನು ಬ್ರೌಪದಿಯ ತುರುಬನ್ನು ಹಿಡಿದು ಸೆಳೆದನು. ವ|| ಹಾಗೆ ದೌಪದಿಯ ಕಪ್ಪಾದ ಮುಡಿಯ ಗಂಟನ್ನು ನೀಚವಾದ ರೀತಿಯಲ್ಲಿ ಹಿಡಿದು ಸೆಳೆದು ಕಾಳಸರ್ಪವನ್ನು ಹಿಡಿದ ಪೆಚ್ಚನಂತೆ ಸುಮ್ಮನೆ ಬೆವರುತ್ತಿದ್ದ ದುಶ್ಯಾಸನನೂ ಕಣ್ಣನ್ನೆಮಾಡಿ (ಹಾಸ್ಯದಿಂದ) ಹುಸಿನಗೆನಗುವ ಅಹಿತರ ಮುಖವನ್ನೂ ತಮ್ಮಣ್ಣನ ಖಿನ್ನವಾದ ಮುಖವನ್ನೂ ಭೀಮನು ನೋಡಿದನು. ಕಣ್ಣಿನಲ್ಲಿ (ಕೋಪದಿಂದ) ರಕ್ತವು ತುಳುಕಿತು. ೬. ಕೋಪದ ಆಧಿಕ್ಯದಿಂದ ಎರಡು ತೊಡೆಗಳೂ ನಡುಗಿದುವು. ವೇಗದಿಂದ (ಭಯಂಕರವಾಗಿ) ಮೂಗಿನ ಹೊಳ್ಳೆಗಳು ಅರಳಿದುವು. ಪ್ರಳಯಕಾಲದ ಯಮನ ತ್ರಿಶೂಲಕ್ಕೆ ಸಮಾನವೂ ಭಯಂಕರವೂ ಆದ ಹುಬ್ಬು ಗಂಟಿಕ್ಕಿತು. ಮೊದಲೇ ಭಯಂಕರವಾದ ಭೀಮಸೇನನ ಅಗುಳಿಯಂತಿರುವ ತೋಳುಗಳು ಗದೆಯ ಕಡೆ
Page #338
--------------------------------------------------------------------------
________________
ಸಪ್ತಮಾಶ್ವಾಸಂ | ೩೩೩ ಮll ನಲನಂ ನುಂಗುವ ಮೇರುಮಂ ಪಿಡಿದು ಕೀಬಾಶಾಗಜೇಂದ್ರಂಗಳಂ
ಚಲದಿಂ ಕಟ್ಟುವ ಸಪ್ತ ಸಪ್ತಿಯನಿಳಭಾಗಕ್ಕೆ ತರ್ಪೋಂದು ತೋ | ಜ್ವಲಮುಂ ಗರ್ವಮುಮು ಪೊಸ್ಮ ಮನದೊಳ್ ಕೋಪಾಗ್ನಿ ಕೆಯ್ಯಣ್ಮಕ ಇಲರೊಳ್ ಬಂದಿರೆ ನೋಡಿದಂ ಕಲುಷದಿಂ ಗಾಂಡೀವಿ ಗಾಂಡೀವಮಂ || ೭ ಕಂll ಪ್ರಕುಪಿತ ಮೃಗಪತಿ ಶಿಶು ಸ
ಕಾಶರತಿ ವಿಕಟ ಭೀಷಣ ಭೂ ಭಂಗರ್ ||
ನಕುಲ ಸಹದೇವರಿರ್ವರು - ಮಕಾಲ ಕಾಲಾಗ್ನಿರೂಪಮಂ ಕಯ್ಯೋಂಡರ್ 11
ವ|| ಅಂತು ವಿಳಯಕಾಲಜಳನಿಧಿಗಳಂತೆ ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗಮಂ ಕಂಡು ತನ್ನ ನುಡಿದ ನನ್ನಿಯ ಕೇಡಂ ಬಗೆದರೆಂದು ಕಟಾಕ್ಷ ವಿಕ್ಷೇಪದಿಂ ಬಾರಿಸಿಮll ಅನಿತೂಂದುರ್ಕಿನೋಳುರ್ಕಿ ಕೌರವ ಖಳರ್ ಪಾಂಚಾಳರಾಜಾಜಾ
ನನ ಪದಗ್ನಪನೈಕ ಕಾರಣಪರರ್ ತಾಮಾತೆಯುಂ ಮತ್ತಮ್ | ಇನ ಕಣ್ಣನ್ನೆಗೆ ಮಾಜಿಲಣದ ಸಮಂತಿರ್ದರ್ ವೃಥಾಪುರಂ ತಿನಿತೊಂದಾದೊಡಮೇಂ ಮಹಾಪುರುಷರಾಜ್ಞಾಲಂಘನಂಗೆಯ್ದರೇ || ೯
ವ|| ಆಗಳ ದೌಪದಿ ತನ್ನ ಕೇಶಪಾಶಮಂ ದುಶ್ಯಾಸನಂ ಪಿಡಿದು ತೆಗೆದನೆಂಬ ಸಿಗ್ಗಗಳಂ ಪೆರ್ಚ ಸಭೆಯೊಳಿಂತಂದಳ
.
ತಿರುಗಿ ಶತ್ರುಗಳ (ಕತ್ತನ್ನು ಹಿಡಿಯುವಂತಾಯಿತು. ೭. ಭೂಮಿಯನ್ನು ನುಂಗುವ, ಮೇರುಪರ್ವತವನ್ನು ಹಿಡಿದು ಕೀಳುವ, ದಿಗ್ಗಜಗಳನ್ನು ಹಟದಿಂದ ಕಟ್ಟುವ, ಸೂರ್ಯನನ್ನು ಭೂಭಾಗಕ್ಕೆ ತರುವ, ಬಾಹುಬಲವೂ ಅಹಂಕಾರವೂ ಚಿಮ್ಮಿ ಹೊಮ್ಮಲು ಕೋಪದ ಬೆಂಕಿಯು ಮಿತಿಮೀರಿ ಹೂವಿನಂತಿದ್ದ ಕಣ್ಣಿನಲ್ಲಿ ಬಂದಿರಲು ಅರ್ಜುನನು ಕೋಪದಿಂದ ತನ್ನ ಗಾಂಡೀವವನ್ನು ನೋಡಿದನು. ೮. ವಿಶೇಷವಾಗಿ ಕೋಪಗೊಂಡಿರುವ ಸಿಂಹದ ಮರಿಗೆ ಸಮಾನರೂ ಅತ್ಯಂತ ವಿಕಟವೂ ಭಯಂಕರವೂ ಹುಬ್ಬಿನ ಗಂಟುಳ್ಳವರೂ ಆದ ನಕುಲ ಸಹದೇವರಿಬ್ಬರೂ ಅಕಾಲದಲ್ಲಿ ಬರುವ ಪ್ರಳಯಾಗ್ನಿರೂಪವನ್ನು ತಾಳಿದರು. ವll ಹಾಗೆ ಪ್ರಳಯಕಾಲದ ಸಮುದ್ರಗಳ ಹಾಗೆ ಎಲ್ಲೆಮೀರಲು ಯೋಚಿಸಿದ ತನ್ನ ನಾಲ್ಕು ತಮ್ಮಂದಿರ ಕೋಪಗೊಂಡ ಮುಖಗಳನ್ನು ನೋಡಿ ಧರ್ಮರಾಜನು ತಾನಾಡಿದ ಸತ್ಯದ ಕೇಡನ್ನು ಯೋಚಿಸಿದ್ದಾರೆಂದು ತಿಳಿದು ಕಣ್ಮನ್ನೆಯಿಂದಲೇ ನಿವಾರಿಸಿದನು. ೯. ಅಷ್ಟೊಂದು ಗರ್ವದಲ್ಲಿ ಉಬ್ಬಿ ದುಷ್ಟಕೌರವರು ಬ್ರೌಪದಿಯ ಮುಖಕಮಲವು ಬಾಡುವುದಕ್ಕೆ ಮುಖ್ಯ ಕಾರಣರಾದರೂ ಅಣ್ಣನಾದ ಧರ್ಮರಾಜನ ಕಣ್ಣನ್ನೆಗೆ ಮೀರಲು ಸಮರ್ಥರಾಗದೆ ಪಾಂಡವರು ಸುಮ್ಮನೆ ಶಾಂತಿಯಿಂದಿದ್ದರು. ಮಹಾಪುರುಷರಾದವರು ಹಿರಿಯರ ಆಜ್ಞೆಯನ್ನು ದಾಟುತ್ತಾರೆಯೇ? ವಗಿ ಆಗ ದುಶ್ಯಾಸನನು ತನ್ನ ಕೂದಲಿನ ಗಂಟನ್ನು ಹಿಡಿದು ಸೆಳೆದನೆಂಬ ನಾಚಿಕೆಯು ವಿಶೇಷವಾಗಿ ಹೆಚ್ಚಲು ಬ್ರೌಪದಿಯು ಸಭೆಯಲ್ಲಿ ಹೀಗೆಂದಳು.
Page #339
--------------------------------------------------------------------------
________________
೩೩೪) ಪಂಪಭಾರತಂ ಕ೦ll ಮುಡಿಯಂ ಪಿಡಿದೆದವನಂ
ಮಡಿಯಿಸಿ ಮತ್ತವನ ಕರುಳ ಏಣಿಲಿಂದೆನ್ನಂ | ಮುಡಿಯಿಸುವಿನೆಗಂ ಮುಡಿಯಂ ಮುಡಿಯಂ ಗಡ ಕೇಳಿಮಾಗಳಾನ್ ನುಡಿ ನುಡಿದಂ ||
ವ|| ಎಂಬುದುಂ ಭೀಮಸೇನನಾ ಮಾತಂ ಕೇಳು ಸೈರಿಸಲಾಗಿದೆ~ ಉll ಆಲದ ಕೋಪ ಪಾವಕನಿನಣ್ಣನ ನನ್ನಿಯನಿಲ್ಲಿ ಮಾಡುವಂ
ಮಾಜವೆನೆನುತ್ತುಮಿರ್ಪ ಪದದಲ್ಲಿಯೆ ನೋಡೆ ಮರುಳೆ ಧೂಪಮಂ || ತೋಜಿದ ಮಾತ್ರೆಯಿಂ ದ್ರುಪದರಾಜಸುತಾ ವಚನಂಗಳಲ್ಲಿ ಮೆ ಯೋತಿ ಮರುತ್ತುತಂ ನುಡಿದನಾ ಸಭೆಯೊಳ್ ನವ ಮೇಘನಾದದಿಂ || ೧೧ ಮll ಮುಳಿಸಿಂದಂ ನುಡಿದೋಂದು ನಿನ್ನ ನುಡಿ ಸಲ್ಲಾರಾಗದೆಂಬರ್ ಮಹಾ
ಪ್ರಳಯೋಲೋಪಮ ಮದ್ಧದಾಹತಿಯಿನತ್ಕುಗ್ರಾಜಿಯೊಳ್ ಮುನ್ನಮಾ | ಖಳ ದುಶ್ಯಾಸನನ ಪೊರಳಿ ಬಸಿಅಂ ಪೋಚಿಕ್ಕಿ ಬಂಬಲ್ಲರು
ಛಳಿನಾನಿ ವಿಳಾಸದಿಂ ಮುಡಿಯಿಪಂ ಪಂಕೇಜಪತೇಕ್ಷಣೇ | ೧೨ ಮll || ಕುಡಿವಂ ದುಶ್ಯಾಸನೋರಸ್ಥಳಮನಗಲೆ ಪೋಚ್ಚಾರ್ದು ಕೆನ್ನೆತ್ತರಂ ಪೊ
ಕುಡಿವೆಂ ಪಿಂಗಾಕ್ಷನೂರುದ್ವಯಮನುರು ಗದಾಘಾತದಿಂ ನುಚ್ಚು ನೂಜಾ | ಗೊಡವೆಂ ತದ್ರತ್ವ ರ ಪ್ರಕಟ ಮಕುಟಮಂ ನಂಬು ನಂಬೆನ್ನ ಕಣ್ಣಿಂ ಕಿಡಿಯುಂ ಕೆಂಡಂಗಳುಂ ಸೂಸಿದಪುವಹಿತರಂ ನೋಡಿ ಪಂಕೇಜವಕ್ತ II ೧೩
೧೦. ಮುಡಿಯನ್ನು ಹಿಡಿದೆಳೆದವನನ್ನು ಕೊಂದು ಅವನ ಕರುಳಿನ ಜಡೆಯಿಂದ (ಸಮೂಹ) ನನ್ನ ಮುಡಿಯನ್ನು ಮುಡಿಯಿಸುವವರೆಗೂ ಆ ಮುಡಿಯನ್ನು ಪುನಃ ಮುಡಿಯುವುದಿಲ್ಲ; ಕೇಳಿ, ನೀವೆಲ್ಲ ಕೇಳಿ ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದಳು. ವll ಭೀಮಸೇನನು ಆ ಮಾತನ್ನು ಕೇಳಿ ಸೈರಿಸಲಾರದೆ-೧೧. ಕಡಿಮೆಯಾಗದ ಕೋಪಾಗ್ನಿಯಿಂದ ಅಣ್ಣನ ಸತ್ಯವಾಕ್ಕನ್ನು ಮೀರಲೇ ಬೇಡವೇ ಎನ್ನುತ್ತಿದ್ದ ಸಮಯದಲ್ಲಿಯೇ ಮರುಳಿಗೆ ಧೂಪವನ್ನು ತೋರಿಸಿದ ರೀತಿಯಿಂದ ಬ್ರೌಪದಿಯ ಮಾತುಗಳು ಅಲ್ಲಿ ಕಾಣಿಸಿಕೊಳ್ಳಲು ಭೀಮಸೇನನು ಆ ಸಭೆಯಲ್ಲಿ ಹೊಸಗುಡುಗಿನ ಶಬ್ದದಿಂದ ಹೇಳಿದನು. ೧೨. ಕೋಪದಿಂದ ನೀನು ಆಡಿದ ಮಾತು ಸಲ್ಲಲಿ, ಯಾರು ಬೇಡವೆನ್ನುತ್ತಾರೆ. ಮಹಾಪ್ರಳಯಕಾಲದ ಉಿಗೆ (ಬೆಂಕಿಯ ಕೊಳ್ಳಿ) ಸಮಾನವಾದ ನನ್ನ ಗದೆಯ ಪೆಟ್ಟಿನಿಂದ ಅತಿಭಯಂಕರವಾದ ಯುದ್ಧದಲ್ಲಿ ಮೊದಲು ದುಶ್ಯಾಸನನನ್ನು ಹೊರಳಿಸಿ ಹೊಟ್ಟೆಯನ್ನು ಸೀಳಿ ಹೆಣೆದುಕೊಂಡಿರುವ ಕರುಳಿನಿಂದ ಎಲ್ ಕಮಲದಳದ ಹಾಗೆ ಕಣ್ಣುಳ್ಳ ದೌಪದಿಯೇ ವೈಭವದಿಂದ ನಾನೇ ಮುಡಿಯಿಸುತ್ತೇನಲ್ಲವೇ ? ೧೩. ದುಶ್ಯಾಸನನ ಎದೆಯನ್ನು ಅಗಲವಾಗಿ ಹೋಳುಮಾಡಿ ರಕ್ತವನ್ನು ಕುಡಿಯುತ್ತೇನೆ. ಮೇಲೆಬಿದ್ದು ದುರ್ಯೊಧನನ ಎರಡುತೊಡೆಗಳನ್ನೂ ಶ್ರೇಷ್ಠವಾದ ನನ್ನ ಗದೆಯ ಪೆಟ್ಟಿನಿಂದ ಒಡೆಯುತ್ತೇನೆ. ರತ್ನಕಾಂತಿಗಳಿಂದ ಪ್ರಕಾಶವಾದ ಅವನ ಕಿರೀಟವನ್ನು ನುಚ್ಚುನೂರಾಗುವಂತೆ ಪುಡಿಮಾಡುತ್ತೇನೆ. ಬ್ರೌಪದಿ ಈ ನನ್ನ ಮಾತನ್ನು ನಂಬು,
Page #340
--------------------------------------------------------------------------
________________
ಸಪ್ತಮಾಶ್ವಾಸಂ | ೩೩೫ ಮ|| ಮುಳಿಸಂ ಮಾಡಿಯುಮೇವಮಂ ಪಡೆದುಮಿನ್ನೀ ಪಂದಗಳ ಪ್ರಾಣದಿಂ ದೊಳರಿನ್ನುಂ ತಲೆ ಮತ್ತಮಟ್ಟೆಗಳ ಮೇಲಿರ್ದಪುವೆಂದಂತೆ ದಲ್ | ಮುಳಿಸಿಲ್ಲಣ್ಣನ ನನ್ನಿಯೆಂಬುದನೆ ಪೇವೇಚ್ಚುಮಿ ಕೌರವ ರ್ಕಳನುಂತಿನ್ನೆಗಮುರ್ಚಿ ಮುಕ್ಕದೆ ಸಡಿಲ್ಲಿ ಭೀಮನೇಂ ಮಾಣ್ಣುಮೇ ll೧೪ ವl ಎಂದು ಪಾಂಚಾಳರಾಜತನೂಜೆಯ ಮನಮನಾ ನುಡಿದು ಮತ್ತಮಿಂತೆಂದಂಸುರಸಿಂಧುಪ್ರಿಯಪುತ್ರ ಕೇಳ್ ಕಳಶಜಾ ನೀಂ ಕೇಳ್ ಕೃಪಾ ಕೇಳ ಮಂ ದರದಿಂದಂಬುಧಿಯಂ ಕಲಂಕಿದಸುರಪ್ರಧ್ವಂಸಿವೋಲ್ ಬಾಹುಮಂ | ದರದಿಂ ವೈರಿಬಲಾಭಿ ಪೂರ್ಣಿಸ ಬಿಗುರ್ತಿ ಕೌರವರ್ ಕೂಡ ನೂ ರ್ವರುಮಂ ಕೊಲ್ವೆನಿದೆನ್ನ ಪೂಣೆ ನುಡಿದಂ ನಿಮ್ಮಿಾ ಸಭಾಮಧ್ಯದೊಳ್ || ೧೫
ಮ||
ವ|| ಎಂದು ವಿಳಯಕಾಳಜಳಧರನಿನಾದದಿಂ ಗಿರಿ ತಾಟಿಸಿದಂತಾನುಂ ನೆಲಂ ಮೊಲಗಿದಂತಾನುಂ ಗಜ ಗರ್ಜಿಸಿ ನುಡಿದು ಮಹಾಪ್ರತಿಜ್ಞಾರೂಢನಾದ ಭೀಮಸೇನನ ನುಡಿಯಂ ಕೇಳು ಕೌರವ ಕಡಲ ನಡುವಣ ಪರ್ವತದಂತಾಡೆ ಕುರುವೃದ್ಧನುಂ ಬುದ್ಧಿವೃದ್ಧನುಮಪ್ಪ ಗಾಂಗೇಯಂ ಧೃತರಾಷ್ಟ್ರಂಗಿಂತೆಂದಂ
ಚoll ಭರತ ಯಯಾತಿ ಕುಳ್ಳ ಪುರುಕುತ್ಸ ಪುರೂರವರಿಂದಮಿನ್ನೆಗಂ ಪರಿವಿಡಿಯಿಂದ ಬಂದ ಶಶಿವಂಶಮದೀಗಳಿವಂದಿರಿಂದ ನಿ |
ತರಿಸುವುದಕ್ಕುಮೆಂದ ಬಗೆದಿರ್ದೊಡ ಕೀಲೊಳೆ ಕಿಚ್ಚು ಪುಟ್ಟ ಭೋ ರ್ಗರೆದುರಿದಂತೆ ನಿನ್ನ ಮಗನಿಂದುರಿದತ್ತಿದನಾರೋ ಬಾರಿಪರ್ | ೧೬
ನಂಬು; ಶತ್ರುಗಳನ್ನು ನೋಡಿ ನನ್ನ ಕಣ್ಣಿನಿಂದ ಕಿಡಿಯೂ ಕೆಂಡಗಳೂ ಚೆಲ್ಲುತ್ತಿವೆ. ೧೪. ನಮಗೆ ಇಷ್ಟು ಕೋಪವನ್ನುಂಟುಮಾಡಿಯೂ ದುಃಖವನ್ನು ಬರಿಸಿಯೂ ಇನ್ನೂ ಈ ಹೇಡಿಗಳು ಜೀವದಿಂದಿದ್ದಾರೆ. ಇನ್ನೂ ಅವರ ತಲೆಗಳು ಅವರು ಮುಂಡಗಳ ಮೇಲಿವೆ ಎನ್ನುವುದು ಕೋಪವಿಲ್ಲವೆಂದೇ ಅರ್ಥಮಾಡುವುದಿಲ್ಲವೇ? ಅಣ್ಣನ ಸತ್ಯವೆಂಬುದೊಂದು ಇಲ್ಲದಿದ್ದರೆ ಏನು ಹೇಳಿದರೂ ಈ ಕೆರಳಿದ ಭೀಮನು ಇಷ್ಟು ಹೊತ್ತಿಗೆ ಸುಲಿದು ಬಾಯಿಗೆ ಹಾಕಿಕೊಳ್ಳದೆ ಬಿಡುತ್ತಿದ್ದನೇ? ವ|| ಎಂದು ದೌಪದಿಯ ಮನಸ್ಸಮಾಧಾನವಾಗುವ ಹಾಗೆ ನುಡಿದು ಪುನಃ ಹೀಗೆಂದನು-೧೫, ಭೀಷ್ಮರೇ ಕೇಳಿ, ದ್ರೋಣರೇ ಕೇಳಿ, ಕೃಪರೇ ಕೇಳಿ, ಮಂದರಪರ್ವತದಿಂದ ಕ್ಷೀರಸಮುದ್ರವನ್ನು ಕಲಕಿದ ನಾರಾಯಣನ ಹಾಗೆ ನನ್ನ ತೋಳೆಂಬ ಮಂದರದಿಂದ ಘೋಷಿಸುತ್ತಿರುವ ಶತ್ರುಸೇನಾಸಮುದ್ರವನ್ನು ಕಡೆದು ಮದಿಸಿರುವ ಈ ನೂರು ಕೌರವರನ್ನೂ ಒಟ್ಟಿಗೆ ಕೊಲ್ಲುತ್ತೇನೆ. ನಿಮ್ಮ ಈ ಸಭೆಯ ಮಧ್ಯದಲ್ಲಿ ಈ ನನ್ನ ಪ್ರತಿಜ್ಞೆಯನ್ನು ತಿಳಿಸಿದ್ದೇನೆ. ವ|| ಎಂದು ಪ್ರಳಯಕಾಲದ ಸಮುದ್ರಘೋಷದಂತೆ ಪರ್ವತವು ಅಪ್ಪಳಿಸಿದ ಭೂಮಿಯ ಗುಡುಗಿನಂತೆ ಆರ್ಭಟಿಸಿ ಗರ್ಜನೆಮಾಡಿ ನುಡಿದು ಮಹಾಪ್ರತಿಜ್ಞೆಯನ್ನು ಅಂಗೀಕರಿಸಿದ ಭೀಮಸೇನನ ಮಾತನ್ನು ಕೇಳಿ ಕೌರವರು ಸಮುದ್ರಮಧ್ಯದ ಪರ್ವತದಂತೆ ನಡುಗಿದರು. ಕೌರವರಲ್ಲಿ ಹಿರಿಯನೂ ಆದ ಭೀಷ್ಮನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು. ೧೬. ಭರತ ಯಯಾತಿ ಕುಳ್ಳ ಪುರೂರವರಿಂದ ಹಿಡಿದು
Page #341
--------------------------------------------------------------------------
________________
೩೩೬ | ಪಂಪಭಾರತ
ವ|| ಎಂದುಲ್ಲು ಧೃತರಾಷ್ಟ್ರನೊಳ್ ನುಡಿಯ ಕುಂಭಸಂಭವಾಶ್ವತ್ಥಾಮ ಕೃಪ ವಿದುರಾದಿಗಳ್ ನೀವೆನಿತು ನುಡಿದೊಡವಾನೆಯ ಕೋಡು ಬಾಗದೆಂಬಂತೆ ದುರ್ಯೋಧನನುದ್ವತ್ತತೆಯುಮಂ ಭೀಮಸೇನನ ಮಹಾಪ್ರತಿಜ್ಞೆಯುಮನಾರ್ಗ೦ ಬಾರಿಸಲಾರದು ಕೆಯ್ದದ ಮನೆವಾ ಬುದ್ಧಿವೇಬಲೆಡೆಯಿಲ್ಲ ತಾಮುಂ ತಾಮುಮಳವರ್ ಬನ್ನಿಮಂದು ನಿಜನಿವಾಸಂಗಕ್ಕೆ ಪೋದರಾಗಳ್ ಭೀಮಸೇನ ಧರ್ಮಪುತ್ರಂಗೆಂದನುಮ್ಮಿಕ್ಕಿದೂಡ ತುಪ್ಪದ ಮೆಳಡಿತೆಂಬಂತೆ ನಮ್ಮ ಕೆಮ್ಮನಿರ್ಪಿರವಿದೇ ಕಾರಣಂ ಬನ್ನಿ ಪೋಪಮೆಂದರಮನೆಯಂ ಪೋಲಮಟ್ಟು ಬರೆ ಧೃತರಾಷ್ಟ್ರ ದುರ್ಯೋಧನನನೇಗೆಯುಮೊಡಂಬಡಿಸಲಾಟದಿರೆಯು ದೌಪದಿ ಪರಸ್ತ್ರೀಯಂ ನಮ್ಮ ಮನೆಯೊಳಿರಿಸುವುದುಚಿತಮಲ್ಲೆಂದು ಕಟಿಪಿದೊಡ ಪಾಂಚಾಳರಾಜತನೂಜೆವರಸು ಬಿನ್ನ ಬಿನ್ನನೆ ಪೋಲಂ ಪೂಜಮಡ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಸೈರಿಸಲಾಗಿದೆ ತಮ್ಮೊಳಿಂತಂದರ್ಕಂ ಏದೊರೆಯಂ ಯಮನಂದನ
ನೇದೊರೆಯಂ ಭೀಮಸೇನನೇದೊರೆಯಂ ಕಂ | ಜೋದರನ ಮೈದುನಂ ತಾ ಮೇದೊರೆಯರಮಲ್ಗಳವರ್ಗಮಿಾ ಯಿರವಾಯೇ || ೧೭
ಇಲ್ಲಿಯವರೆಗೂ ಕ್ರಮವಾಗಿ ನಡೆದುಬಂದ ಚಂದ್ರವಂಶವು ಈಗ ಈ ಕೌರವರಿಂದ ಮುಂದೆ ಅಭಿದ್ದಿಯಾಗುತ್ತದೆ ಎಂದು ಯೋಚಿಸುತ್ತಿರಲು ಅದಕ್ಕೆ ವಿರೋಧವಾಗಿ ಕೀಲಿನಲ್ಲಿಯೇ ಬೆಂಕಿಹುಟ್ಟಿ ಶಬ್ದಮಾಡಿ ಉರಿಯುವ ಹಾಗೆ ನಿನ್ನ ಮಗನಿಂದ ನಮ್ಮ ವಂಶವೇ ಸುಟ್ಟು ಹೋಗುತ್ತದೆ. ಇದನ್ನು ನಿವಾರಿಸುವವರು ಯಾರಿದ್ದಾರೆ? ವll ಎಂದು ದುಃಖಿಸಿ ಧೃತರಾಷ್ಟ್ರನಲ್ಲಿ ಹೇಳಲು, ದ್ರೋಣ ಅಶ್ವತ್ಥಾಮ ಕೃಪವಿದುರರೇ ಮೊದಲಾದವರು ನೀವೆಷ್ಟು ಹೇಳಿದರೂ ಆನೆಯ ಕೊಂಬು ಬಗ್ಗುವುದಿಲ್ಲ ಎನ್ನುವ ಹಾಗೆ ದುರ್ಯೋಧನನ (ಕಡೆದು ನಿಲ್ಲುವಿಕೆ) ತುಂಟತನವನ್ನೂ ಭೀಮನ ಮಹಾಪ್ರತಿಜ್ಞೆಯನ್ನೂ ಯಾರಿಗೂ ತಪ್ಪಿಸಲಾಗುವುದಿಲ್ಲ: ಕೈಮೀರಿದ ಮನೆವಾರ್ತೆಗೆ ಬುದ್ದಿಹೇಳಲು ಅವಕಾಶವಿಲ್ಲ; ಅವರವರೇ ತಿಳಿಯಲಿ ಬನ್ನಿ ಎಂದು ತಮ್ಮ ಮನೆಗಳಿಗೆ ಹೋದರು. ಆಗ ಭೀಮಸೇನನು ಧರ್ಮರಾಜನಿಗೆ ಹೇಳಿದನು. ಉಪ್ಪನ್ನು ಬಡಿಸಿದರೆ ತುಪ್ಪಕ್ಕೆ ಮೋಸ ಎನ್ನುವ ಹಾಗೆ ನಾವು ಸುಮ್ಮನಿರುವುದರಿಂದ ಏನು ಪ್ರಯೋಜನ, ಬನ್ನಿ ಹೋಗೋಣ ಎಂದು ಅರಮನೆಯಿಂದ ಹೊರಟರು. ಧೃತರಾಷ್ಟ್ರನು ದುರ್ಯೋಧನನನ್ನು ಏನು ಮಾಡಿಯೂ ಒಪ್ಪಿಸಲಾರದಿದ್ದರೂ ಪರಸ್ತ್ರೀಯಾದ ಬ್ರೌಪದಿಯನ್ನು ನಮ್ಮ ಮನೆಯಲ್ಲಿಟ್ಟುಕೊಳ್ಳುವುದು ಯೋಗ್ಯವಲ್ಲವೆಂದು ಕಳುಹಿಸಿದನು. ಬ್ರೌಪದಿಯೊಡನೆ ಪಾಂಡವರು ದುಃಖದಿಂದ ಪಟ್ಟಣವನ್ನು ಬಿಟ್ಟು ಹೊರಟರು. ಪಟ್ಟಣದ ಜನರೆಲ್ಲರೂ ಒಟ್ಟುಗೂಡಿ ಅವರು ಆ ಸ್ಥಿತಿಯಲ್ಲಿ ಹೋಗುತ್ತಿರುವುದನ್ನು ನೋಡಿ ದುಃಖಪಟ್ಟು ಹೀಗೆಂದರು-೧೭. ಧರ್ಮರಾಜನೆಂತಹವನು - ಭೀಮನೆಂತಹವನು, ಕೃಷ್ಣನ ಮೈದುನನಾದ ಅರ್ಜುನನು ಎಂಥವನು; ಅವಳಿಗಳಾದ
Page #342
--------------------------------------------------------------------------
________________
ಸಪ್ತಮಾಶ್ವಾಸಂ / ೩೩೭ ಜೂದಾಡಿ ಸೋಲು ನನ್ನಿಗೆ ಮೇದಿನಿಯಂ ಕೊಟ್ಟು ಪಾಂಡುನಂದನರೀಗಳ್ | ಪೋದೊಡಮೇನ್ ತಿಣುಕಾಗದ ಪೋದಪುದೇ ನಮ್ಮ ನೃಪತಿಗವು ತವುದಲೆಯೊಳ್ || ೧೮ ಜೂದಿನ ಗಲ್ಲದೊಳಾದೀ ಮೇದಿನಿಯಂ ಕಂಡು ಕಜ್ಜಮಂ ಕಾಣದೆ ದು | ಜ್ಯೋದನನದೇನದೇಂ ಮರು ಳಾದ ಬಡಿಗಂಡನಿಲ್ಲ ಪಾಲನೆ ಕಂಡಂ || ಎನಿತಾನುಮಂದದಿಂ ಜೂ ದನಿಕೆಯುಂ ದ್ರುಪದಸುತೆಯನೆದುಯ್ಯಯುಮಿಂ | ತಿನಿತೂಂದಾದುದು ದುಶ್ಯಾ
ಸನನಿಂದಂ ಶಕುನಿಯಂಬ ಬೆಳ್ತಜೆಸಿಂದಂ || ವl ಎಂದಿರ್ದರಿರ್ದಲ್ಕಿಯ ತಂತಮ್ಮ ಕಂಡುದನೆ ನುಡಿಯೆಯುಂ ಕಲರವರ ಪೂಗಿಂಗಬಲ್ಲು ಕಣ್ಣ ನೀರನಿಯುಂ ಕಲರ್ ಪರಸಿ ಸೇಸೆಯನಿಕ್ಕೆಯುಂ ಪೊಬಲಂ ಪೂಣಮಟ್ಟು ಪುರದ ಬಾಹಿಗೆಯನೆಯುವಾಗ ಗಾಂಗೇಯ ದ್ರೋಣ ಕೃಪ ವಿದುರಾದಿಗಳ್ ಕೊಂತಿವರಸೆಯ್ದೆ ವಂದು ಕಿದಂತರಮಂ ಕಳಿಪುತ್ತುಂ ಬರ ಧರ್ಮಪುತ್ರನಮಗೆ ತಕ್ಕ ಬುದ್ಧಿಯಂ ಪೇಟ್ಟು ಮಗುಟಿಮೆಂದೊಡನಿಬರುಂ ಮನಂ ಬಂಧಿಸಿದ ಮೋಹದಿಂ ಗಲಗಲನೆ ಕಣ್ಣ ನೀರ್ಗಳಂ ಸುರಿದು
ನಕುಲಸಹದೇವರೆಂಥವರು. ಅವರಿಗೂ ಈ ಸ್ಥಿತಿಯಾಯ್ಕೆ? ೧೮. ಜೂಜಾಡಿ ಸೋತು ಸತ್ಯಕ್ಕಾಗಿ ರಾಜ್ಯವನ್ನು ಕೊಟ್ಟು ಪಾಂಡವರು ಹೋದರೇನು ? ರಾಜನಾದ ದುರ್ಯೋಧನನಿಗೆ ಕೊನೆಯಲ್ಲಿ ಇದು ಸ್ಪಷ್ಟವಾಗದೆ ಹೋಗುತ್ತದೆಯೇ? ೧೯. ಜೂಜಿನ ಗೆಲುವಿನಿಂದ ಬಂದ ಈ ರಾಜ್ಯವನ್ನು ನೋಡಿ ಮುಂದಾಗುವ ಕಾರ್ಯವನ್ನು ಕಾಣದೆ ದುರ್ಯೋಧನನು ಅದೇತಕ್ಕೆ ಅತ್ಯಂತ ಹುಚ್ಚನಾದ? ಮೇಲೆತ್ತಿದ ಕೊಡಚಿ (ಬಡಿ) ಯನ್ನು ಕಾಣದೆ ಹಾಲನ್ನು ಮಾತ್ರ ಕಂಡನಲ್ಲ. ೨೦. ವಿವಿಧರೀತಿಯಲ್ಲಿ ಜೂಜಾಡಿಸಿದುದೂ ಬ್ರೌಪದಿಯನ್ನು ಎಳೆದು ಸೆಳೆದುದೂ ಇವೆಲ್ಲ ಆ ದುಶ್ಯಾಸನನಿಂದ ಮತ್ತು ಶಕುನಿಯೆಂಬ ಬುದ್ದಿಯಿಲ್ಲದ ಪೊರಸಿನಿಂದ ಉಂಟಾಯಿತು. ವ|| ಎಂದು ಇದ್ದವರು ಇದ್ದ ಕಡೆಯಲ್ಲಿಯೇ ತಾವು ತಾವು ನೋಡಿದುದನ್ನು ನುಡಿಯುತ್ತಿದ್ದರು. ಕೆಲವರು ಪಾಂಡವರು ಹಾಗೆ ಹೋಗುತ್ತಿರುವುದನ್ನು ನೋಡಿ ಅತ್ತು ಕಣ್ಣೀರನ್ನು ಸುರಿಸಿದರು. ಮತ್ತೆ ಕೆಲವರು ಹರಸಿ ಅಕ್ಷತೆಯನ್ನಿಕ್ಕಿದರು. ಪಟ್ಟಣವನ್ನು ಬಿಟ್ಟು ಹೊರಟು ಹೊರಭಾಗವನ್ನು ಸೇರುವಾಗ ಭೀಷ್ಮದ್ರೋಣ ಕೃಪ ವಿದುರರೇ ಮೊದಲಾದವರು ಕುಂತಿಯೊಡಗೂಡಿ ಸ್ವಲ್ಪದೂರ ಬಂದು ಕಳುಹಿಸಿ ಬರಲು ಧರ್ಮರಾಜನು 'ನಮಗೆ ಯೋಗ್ಯವಾದ ಉಪದೇಶಮಾಡಿ ಹಿಂತಿರುಗಿ' ಎಂದನು. ಅವರೆಲ್ಲರೂ ಆಕರ್ಷಿತರಾಗಿ ಮನಸ್ಸಿನ ಪ್ರೀತಿಯಿಂದ ಗಳಗಳನೆ ಕಣ್ಣೀರನ್ನು ಸುರಿಸಿದರು.
Page #343
--------------------------------------------------------------------------
________________
೩೩೮/ಪಂಪಭಾರತಂ
ಚಂ|| ಪುಗುವುದರಮಿರ್ಪಿರವು ಹನ್ನೆರಡಬ್ಬಮದಲ್ಲದಲ್ಲಿ ಕೋ ಅಗದ ವನೇಚರಾಧಿಪರ ದಾಯಿಗರತ್ತಣಿನಪ್ಪಪಾಯ ಕೋ | ಟಿಗೆ ಪವಣಿಲ್ಲ ಕಲ್ಲಿಗೆಡೆಯಾವುದೋ ಪಾಳೆಯ ಬಟ್ಟೆದಪ್ಪಿ ಮುಂ ನೆಗಡೆಯಿಲ್ಲ ಪೋಗು ಜಯಮಕ್ಕೆ ಶುಭಂ ನಿಮಗಕ್ಕೆ ಮಂಗಳಂ || ೨೧
ವ|| ಎಂದೊಡಲ್ಲಿರ್ದು ನಿಮ್ಮ ಮನಕ್ಕೆ ಕೊಕ್ಕರಿಕ್ಕೆಯಾಗಿಯುಂ ಪಾಟೆಗೆ ಗಂಟಾಗಿಯುಂ ನೆಗಟ್ಟಮಲ್ಲೊಂದು ಪೊಡವಟ್ಟು ಕೊಂತಿಯಂ ವಿದುರನ ಮನೆಯೊಳಿರಲ್ವೇಟ್ಟು ಸುಭದ್ರೆಯನಭಿಮನ್ಯು ವರಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳಿಸಿ ನಿಜ ಪರಿಜನಂಬೆರಸು ಗಂಗೆಯಂ ಪಾಯದು ಪಡುವಣ ದೆಸೆಯ ಕಾಮ್ಯಕವನದ ಬಟ್ಟೆಯಂ ತಗುಳು ಪೋಗೆ ವೋಗ
ಚoll ದಸ ಪಸುರೇಟೆ ಪಚ್ಚೆಯೊಳ ಮುಚ್ಚಿ ಮುಸುಂಕಿದ ಮಾಯಾದುದಾ
ಗಸಮಳಿ ನೀಳ ನೀಳ ಗಳಕಂಠ ತಮಾಳ ವಿಳನೀರದ || ಪ್ರಸರ ವಿಭಾಸಿಯಾದುದು ಸಮಾರನುದಾರ ಕದಂಬ ಕೇತಕೀ ಪ್ರಸರ ರಜಸ್ವರ ಪ್ರಕಟ ಪಾಂಸುಳವಾದುದು ಮೇಘಕಾಲದೊಳ್ || ಕರಿಯ ಮುಗಿಲ್ಗಳಿಂ ಗಗನಮಂಡಳಮೊಟ್ಟರ ಸೋಗೆಯಿಂ ವನಾಂ ತರಮೆಸೆದೊಪ್ಪೆ ತೋರ್ಪ ಮೊಳೆವುಳಿನೀ ಧರಣೀವಿಭಾಗ | ಏರ ಪೊಸ ವೇಟಕಾರರ್ದಗಳ ಪೊಸ ಕಾರ ಪೊಡರ್ಪುಗಂಡದೇಂ ಕರಿತುವದೇಂ ಕಲಂಕಿದುವದೇಂ ಕುಡೆಗೊಂಡುವದೇಂ ಕನಲ್ಲುವೋ || ೨೩
ಚಂ।।
دو
೨೧. ನೀವು ಪ್ರವೇಶಮಾಡಬೇಕಾಗಿರುವುದು ಕಾಡು, ಇರಬೇಕಾದ ಕಾಲ ಹನ್ನೆರಡುವರ್ಷ; ಅದಲ್ಲದೆಯೂ ಅಲ್ಲಿ ಕ್ರೂರಮೃಗಗಳ, ಬೇಡನಾಯಕರ, ದಾಯಾದಿಗಳ ಕಡೆಯಿಂದ ಬರುವ ಅಪಾಯ ಸಮೂಹಕ್ಕೆ ಅಳತೆಯೇ ಇಲ್ಲ: ಬುದ್ಧಿ ಹೇಳುವುದಕ್ಕೆ ಅವಕಾಶವೆಲ್ಲಿದೆ? ಧರ್ಮಮಾರ್ಗವನ್ನು ಬಿಟ್ಟು ನೀವು ಇದುವರೆಗೆ ನಡೆದ ಸಂದರ್ಭವೇ ಇಲ್ಲ: ಧರ್ಮರಾಜ! ನಿನಗೆ ಶುಭವಾಗಲಿ ಮಂಗಳವಾಗಲಿ ಹೋಗಿಬಾ ಎಂದು ಆಶೀರ್ವದಿಸಿದರು. ವll ಧರ್ಮರಾಜನು 'ನಾವು ಅಲ್ಲಿದ್ದರೂ ನಿಮ್ಮ ಮನಸ್ಸಿಗೆ ಅಸಹ್ಯವಾಗುವ ಹಾಗೆಯೂ ಧರ್ಮಕ್ಕೆ ದೂರವಾಗಿಯೂ ನಡೆಯುವವರಲ್ಲ' ಎಂದು ಹೇಳಿ ನಮಸ್ಕಾರಮಾಡಿ ಕುಂತಿಯನ್ನು ವಿದುರನ ಮನೆಯಲ್ಲಿರಹೇಳಿ ಸುಭದ್ರೆಯನ್ನು ಅಭಿಮನ್ಯುವಿನೊಡನೆ ದ್ವಾರಾವತಿಗೆ ಕೃಷ್ಣನ ಹತ್ತಿರಕ್ಕೆ ಕಳುಹಿಸಿ, ತಮ್ಮಪರಿವಾರದೊಡನೆ ಮುಂದಕ್ಕೆ ನಡೆದರು. ಗಂಗಾನದಿಯನ್ನೂ ದಾಟಿ ಅದರ ಪಶ್ಚಿಮದಿಕ್ಕಿನಲ್ಲಿರುವ ಕಾಮ್ಯಕವನದ ಮಾರ್ಗವನ್ನನುಸರಿಸಿ ಹೋದರು. ೨೨. ಮಳೆಗಾಲವು ಪ್ರಾರಂಭವಾಯಿತು. ದಿಕ್ಕುಗಳು (ಪಚ್ಚೆ ಪೈರುಗಳಿಂದ) ಹಸಿರುಹತ್ತಲು ಪಚ್ಚೆಯ ರತ್ನದಿಂದ ಹೊದಿಸಿದ ಹಾಗಾಯಿತು. ಆಕಾಶವು ದುಂಬಿ ಯಂತೆ ಶಿವನ ಕೊರಳಿನಂತೆ, ಹೊಂಗೆಯ ಮರದಂತೆ ಕಪ್ಪಗಿರುವ ಅತ್ಯಂತ ನೀಲ ಬಣ್ಣದ ಮೋಡಗಳ ಸಮೂಹದಿಂದ ಪ್ರಕಾಶಮಾನವಾಯಿತು. ಗಾಳಿಯು ವಿಸ್ತಾರವಾಗಿ ಹಬ್ಬಿರುವ ಕದಂಬ ಮತ್ತು ಕೇದಗೆ ಹೂವುಗಳ ಸಮೂಹದಿಂದ ಹೊರಗೆ ಚೆಲ್ಲುತ್ತಿರುವ ಪರಾಗದಿಂದ ಕೂಡಿದುದಾಯಿತು. ೨೩. ಕಪ್ಪಾಗಿರುವ ಮೋಡಗಳಿಂದ
Page #344
--------------------------------------------------------------------------
________________
ಸಪ್ತಮಾಶ್ವಾಸಂ ೩೩೯ ವಗ ಅದಲ್ಲದೆಯುರಿಮll ಭವ ಲಾಲಾಟವಿಲೋಚನಾಗ್ನಿಶಿಖೆಯಿಂ ಬೆಂದಳ್ಳಿ ಮತ್ತು ಮನೋ
ಭವನೆಟ್ಟತೊಡೆ ಕಾಮಕಾಂತೆ ಬಟೆಯಂ ತನ್ನಿಚ್ಚೆಯಿಂ ಮೆಚ್ಚಿ ಬ | ಇವುರಂ ತೀವಿದ ಮಾಚ್ಯಾಯ್ತು ನವಿಲಿಂ ಕುಂದಂಗಳಿಂದಿಂದ
ಪವಿಳಾಸಂಗಳಿನಾಲಿಕಲ್ಲ ಪರಲಿಂ ಕಾರೊಳ್ ಮಹೀಮಂಡಲಂ || ೨೪ ಚಂii ಪೊಳೆವಮರೇಂದ್ರಗೋಪದ ಪಸುರ್ತೆಳವುಳ ತಳ ಕಾರ್ಮುಗಿ
ಲಳ ಕಿಜುಗೊಂಕುಗೊಂಕಿದ ಪೊನಲಳ ಕೆಂಪು ಪಸುರ್ಪು ಕರ್ಪು ಬೆ || ಳೊಳಕೊಳೆ ಶಕ ಕಾರ್ಮುಕ ವಿಳಾಸಮನೇನೆರ್ದೆಗೊಂಡು ಬೇಟದ ತಳಗಮನುಂಟುಮಾಡಿದುದೊ ಕಾಮನ ಕಾರ್ಮುಕದಂತೆ ಕಾರ್ಮುಕಂ || ೨೫
ವll ಅಂತು ತಮಗಿದಿರು ಬರ್ಪಂತ ಬಂದ ಪಯೋಧರಕಾಲದೋಳೆರಡು ತಡಿಯುಮಂ ಪೊಯ್ದು ಪರಿವ ತೊರೆಗಳುಮಂ ತೊವನ್ನು ಸೊಗಯಿಸುವಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸಿದಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ ಬಲಿಗೆದಳೆದಂತೆ ಉಪಾಶ್ರಯಂಬಡೆದಳಂಕರಿಸುವಿಂದ್ರಗೋಪಂಗಳುಮಂ ಕಿಸುಗಾಡ ನೆಲಂಗಳೆಳದಳಿರ ಬಣ್ಣಮಂ
ಆಕಾಶವೊಪ್ಪಿರಲು ಹೆಣ್ಣುನವಿಲುಗಳಿಂದ ಕಾಡಿನ ಮಧ್ಯಭಾಗವು ಒಪ್ಪಿರಲು ಆಗತಾನೆ ಕಾಣುತ್ತಿರುವ ಮೊಳೆಹುಲ್ಲುಗಳಿಂದ (ಹುಲ್ಲಿನ ಮೊಳಕೆಗಳಿಂದ) ಭೂಮಿಯು ಒಪ್ಪಿರಲು ಹೊಸ ಪ್ರಿಯಪ್ರೇಯಸಿಯರ ಹೃದಯವು ಹೊಸಮಳೆಗಾಲದ ವೈಭವವನ್ನು ನೋಡಿ ಅದೆಷ್ಟು ಕರಗಾದುವೋ, ಅದೆಷ್ಟು ಕೆರಳಿದುವೋ; ಅದೆಷ್ಟು ಗುಳಿಗೊಂಡವೋ! ವl ಅಷ್ಟೇ ಅಲ್ಲದೆ ೨೪. ಮಳೆಗಾಲದಲ್ಲಿ ಭೂಮಂಡಲವು ನವಿಲುಗಳಿಂದಲೂ ಮೊಲ್ಲೆಯ ಹೂವಿನಿಂದಲೂ ಮಿಂಚುಹುಳಗಳ ವಿಲಾಸದಿಂದಲೂ ಆಲಿಕಲ್ಲುಗಳ ಹರಳುಗಳಿಂದಲೂ ಕೂಡಿರಲು ಈಶ್ವರನ ಹಣೆಗಣ್ಣಿನ ಬೆಂಕಿಯ ಜ್ವಾಲೆಯಿಂದ ಸತ್ತ ಮನ್ಮಥನು ಪುನಃ ಸಜೀವನಾಗಲು ಅದರಿಂದ ಸಂತೋಷಗೊಂಡ ಕಾಮನ ಸತಿಯಾದ ರತಿಯು ತನ್ನಿಷ್ಟಬಂದಂತೆ ನೆಲಕ್ಕೆ ಹಾಸಿದ ವಿವಿಧ ಬಣ್ಣದ ವಸ್ತದಂತೆ ಭೂಮಿಯು ಪ್ರಕಾಶಿಸಿತು. ೨೫. ಹೊಳೆಯುವ ಮಿಂಚುಹುಳುಗಳ, ಹಸುರಾದ ಎಳೆಯ ಹುಲ್ಲುಗಳ, ಒತ್ತಾಗಿರುವ ಕರಿಯಮೋಡಗಳ, ಕಿರಿಕಿರಿದಾಗಿ ವಕ್ರವಾಗಿ ಹರಿಯುವ ಪ್ರವಾಹಗಳ ಕೆಂಪು ಹಸುರು ಬಿಳುಪು ಬಣ್ಣಗಳು ಒಟ್ಟಾಗಿ ಸೇರಿ ಕಾಮನಬಿಲ್ಲಿನ ಸೌಂದರ್ಯವನ್ನೂ ಒಳಗೊಂಡಿರಲು ಮಳೆಗಾಲದ ಪ್ರವೇಶವು ಕಾಮನಬಿಲ್ಲಿನಂತೆಯೇ ಮನಸ್ಸನ್ನಾಕರ್ಷಿಸಿ ಪ್ರೇಮಾಧಿಕ್ಯವನ್ನುಂಟುಮಾಡಿತು. ವ!! ಹಾಗೆ ತಮಗೆ ಎದುರಾಗಿ ಬರುವಂತೆ ಬಂದ ಮಳೆಗಾಲದಲ್ಲಿ ಎರಡುದಡವನ್ನು ಘಟ್ಟಿಸಿ ಹರಿಯುವ ನದಿಗಳನ್ನೂ ಚಿಗುರಿ ಸೊಗಯಿಸುವ ಕಾಡುಗಳನ್ನೂ ಹಸುರುಬಟ್ಟೆಯನ್ನು ಹರಡಿದಂತೆ ಹಸುರಾದ ನೆಲದಲ್ಲಿ ಪದ್ಮರಾಗರತ್ನದ ಹರಳು ಗಳನ್ನು ಚೆಲ್ಲಿದಂತೆ ಅವಲಂಬನವನ್ನು ಪಡೆದು ಅಲಂಕಾರವಾಗಿರುವ ಮಿಂಚು ಹುಳುಗಳನ್ನೂ ಕೆಂಪಗಿರುವ ಕಾಡುಗಳ ನೆಲಗಳ ಎಳೆಯ ಚಿಗುರಿನ ಬಣ್ಣವನ್ನು ಹೊಂದಿ ವಿರಹಿಗಳ ಮನಸ್ಸನ್ನು ಕೆರಳಿಸುವಂತೆ ಜಲಜಲನೆ ಹರಿಯುವ ಝರಿಗಳ
Page #345
--------------------------------------------------------------------------
________________
೩೪೦ / ಪಂಪಭಾರತಂ
ಕೆಯೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು ತಮ್ಮ ಕಣ್ಣಂ ಮನಕಂ ಸೊಗಯಿಸೆ ಪಯಣಂಬಂದು ಕಾಮ್ಯಕವನಮಂ ಪುಗುತಂದರದೆಂತೆಂದೊಡ
ದೆಸೆಗೆಂ ಗಜಲತ್ತುಮಿರ್ಪ ಪುಲಿಯಿಂ ನೀಳಾಭ್ರಮಂ ದಂತಿಗೆ ತು ಸಿಡಿಲಾಗಸಕೆಯೇ ಪಾ. ಪಲವುಂ ಸಿಂಗಂಗಳಿಂದತ್ತರು | ರ್ವಿಸಿ ಪಾಯ್ಕರ್ವಿಗಳಿಂ ಮದಾಂಧ ವನಗಂಧೇಭಂಗಳಿಂ ಕಣ್ಣಗು ರ್ವಿಸೆಯುಂ ಚಿತ್ತದೊಳಂದು ಕಾಮ್ಯಕವನಂ ಮಾಡಿತ್ತತಿ ಪ್ರೀತಿಯಂ || ೨೬ ವ|| ಅಂತು ಸೌಮ್ಯಭಯಂಕರಾಕಾರಮಪ್ಪ ಕಾಮ್ಯಕವನಮಂ ಪುಗುತಂದಲ್ಲಿ ತದ್ವನಾಧಿಪತಿಯಪ್ಪ ದೈತ್ಯಂ ಕಿತ್ಕಾರನವರಂ ಪುಗಲೀಯದಡ್ಡಮಾಗಿರೆ
ಮ||
ಮ|| ಮಸಿಯಂ ಪುಂಜಿಸಿದಂತುಟಪ್ಪ ತನು ನೀಳಾಂಭೋಧರಂ ದಾಡೆಗಳ
ಪೊಸ ಮಿಂಚುಗ್ರ ವಿಲೋಚನಂ ದಿವಿಜ ಗೋಪಂ ಕಾರೂ ಮೇಣ್ ಕಾಳ ರ 1 ಕಸನೋ ಪೇತೆನ ಬಂದು ತಾಗೆ ಗದೆಯಂ ಕೊಂಡೆಯ ಭೀಮಂ ಸಿಡಿ ಲ್ಕು ಸಿಡಿಲ್ ಪೊಯ್ದವೊಲಾಗೆ ಪೊಯ್ದನಿಳೆಯೊಳ್ ಕಿಮಾರನಂ ವೀರನಂ ||೨೭
ವ|| ಅಂತು ಕಿಮಾರನಂ ಕೊಂದು ಕಾಮ್ಯಕವನಮಂ ಪೊಕ್ಕು ತವ್ವನ ತಪೋಧನರ ಗೋಷ್ಠಿಯೊಳಮಾಟವಿಕರಟ್ಟಟ್ಟಿಯೊಳಂ ತಮಗಿಂದ್ರಪ್ರಸ್ಥದ ರಾಜಶ್ರೀಯಂ ಮಸುಳಿಸಿ
ಪ್ರವಾಹವನ್ನೂ ನೋಡಿ ಕಣ್ಣಿಗೂ ಮನಸ್ಸಿಗೂ ಆನಂದವಾಗಿರಲು ಪಾಂಡವರು ಪ್ರಯಾಣಮಾಡಿ ಕಾಮ್ಯಕವನವನ್ನು ಪ್ರವೇಶಮಾಡಿದರು. ಅದು ಹೇಗಿತ್ತೆಂದರೆ೨೬. ಎಲ್ಲ ದಿಕ್ಕುಗಳಲ್ಲಿಯೂ ಗರ್ಜಿಸುತ್ತಿರುವ ಹುಲಿಗಳಿಂದಲೂ ನೀಲಾಕಾಶವನ್ನು ಆನೆಯೆಂದು ಭ್ರಮಿಸಿ ಸಿಡಿದು ಆಕಾಶಕ್ಕೆ ವಿಶೇಷವಾಗಿ ಹಾರುವ ಹಲವು ಸಿಂಹಗಳಿಂದಲೂ ಎಲ್ಲೆಲ್ಲಿಯೂ ಭಯವನ್ನುಂಟುಮಾಡಿ ಹರಿಯುವ ಬೆಟ್ಟದ ಝರಿಗಳಿಂದಲೂ ಮದದಿಂದ ಸೊಕ್ಕಿದ ಕಾಡಾನೆಗಳಿಂದಲೂ ಕಾಮ್ಯಕವನವು ಕಣ್ಣಿಗೆ ಭಯವನ್ನುಂಟುಮಾಡಿದರೂ ಮನಸ್ಸಿಗೆ ಅತ್ಯಂತ ಪ್ರೀತಿಯನ್ನುಂಟುಮಾಡಿತು. ವ ಹಾಗೆ ಸೌಮ್ಯವೂ ಭಯಂಕರವೂ ಆದ ಕಾಮ್ಯಕವನವನ್ನು ಪ್ರವೇಶಿಸಲು ಆ ಕಾಡಿಗೆ ಒಡೆಯನಾದ ಕಿಮ್ಮಿರನೆಂಬ ರಾಕ್ಷಸನು ಅವರು ಪ್ರವೇಶಮಾಡುವುದಕ್ಕೆ ಅವಕಾಶಕೊಡದೆ ತಡೆದನು. ೨೭. ಮಸಿಯನ್ನು ಒಟ್ಟುಗೂಡಿಸಿದ ಹಾಗಿದ್ದ ಅವನ ಶರೀರವೇ ಕರಿಯಮೋಡ, ಕೋರೆಹಲ್ಲುಗಳೇ ಮಿಂಚು, ಭಯಂಕರವಾದ ಕಣ್ಣುಗಳೇ ಮಿಂಚುಹುಳುಗಳು, ಇದು ಮಳೆಗಾಲವೋ ಕಾಳರಾಕ್ಷಸನೋ ಎನ್ನುವ ಹಾಗೆ ಬಂದು ಮೇಲೆ ಬೀಳಲು ಭೀಮನು ಗದೆಯನ್ನು ತೆಗೆದುಕೊಂಡು ವಿಶೇಷವಾಗಿ ಆರ್ಭಟಿಸಿ ಸಿಡಿಲುಹೊಡೆದ ಹಾಗೆ ವೀರನಾದ ಕಿಮ್ಮಿರನನ್ನು ಹೊಡೆದು ಭೂಮಿಯಲ್ಲಿ ಕೆಡವಿದನು. ವ|| ಹಾಗೆ ಕಿಮ್ಮಿರನನ್ನು ಕೊಂದು ಕಾಮ್ಯಕವನವನ್ನು ಪ್ರವೇಶಿಸಿ ಆ ಕಾಡಿನಲ್ಲಿದ್ದ ತಪಸ್ವಿಗಳ ಗುಂಪಿನಲ್ಲಿಯೂ ಅಲ್ಲಿಯ ಕಾಡುಜನರ ಸೇವೆಗಳಲ್ಲಿಯೂ ಸುಖದಿಂದಿದ್ದರು. ಅಲ್ಲಿಯ ಸೌಖ್ಯವು ಅವರಿಗೆ ಇಂದ್ರಪ್ರಸ್ಥದ ರಾಜ್ಯವೈಭವವನ್ನು
Page #346
--------------------------------------------------------------------------
________________
ಸಪ್ತಮಾಶ್ವಾಸಂ | ೩೪೧ ಪಿರಿಯಕರ || ಪಿರಿಯ ಮರಂಗಳ ಮಾಡಮಾಗೆ ಪೊಳೆವಳದಳಿರ್ಗಳ ಸಜ್ಜೆಯಾಗೆ
ಪಿರಿಯ ಮಡುಗಳ ಮಜ್ಜನಮಾಗೆ ಪೊಸ ನಾರೆ ದೇವಾಂಗವಸ್ತಮಾಗೆ | ಪರೆದ ತಂಗಲೆಯ ಪರಿಯಣಮಾಗೆ ಪಣ್ಣಲಮೆತ್ತಿದ ಬೋನಮಾಗ ಸಿರಿಯ ಮಹಿಮೆಯಂ ಮಳಯಲೇನಾರ್ತುರೂ ಬನದೊಳಿರ್ಪಿರವಾ
, ಪಾಂಡವರಾ || ೨೮ ಉlು.
ಪಾಸಣ್ ಸಿಂಹಪೀಠಮಳೆನೀರುತಿ ಮಂಗಳಗೀತಿ ಭೂತಳಂ | ಪಾಸು ಮೃಗವ್ರಜಂ ಪರಿಜನಂ ಪೊದಟೋಲಗಸಾಲೆ ಮಕ್ಕಳಂ | ಬೀಸುವ ಗಾಳಿ ಚಾಮರದ ಗಾಳಿಯನಲ್ ದೂರವೆತ್ತದೇಂ ಸುಖಾ
ವಾಸ ನಿಮಿತ್ತವಾಯೊ ವನವಾಸನಿವಾಸಮ ಪಾಂಡುಪುತ್ರರಾ || ೨೯
ವ|| ಅಂತು ಕಾಮ್ಯಕವನದೊಳಲ್ಕು ವರುಷಮಿರ್ದಾನೆಯ ವರುಷದೊಳದಲಿ ಕೆಲದೊಳೊಂದಿ ಸಂದಿಸಿ ಗಗನತಳಮಂ ತಜುಂಬುವಂತಿರ್ದ ಶಿಖರಿಶಿಖರಂಗಳಿಂದಂ ದೆಸೆಗಳಂ ತಡವರಿಸಿ ಕೊಳ್ವಂತ ಬಳ್ಳವ ಬಳೆದು ಸೊಗಯಿಸುವ ಪೆರ್ಮರಂಗಳಿಂದಂ ವನಲಕ್ಷ್ಮಿ ಯ ಗೋಮಂಡಲದಂತಿರ್ದ ಕಡವಿನ ಕಾಡರ್ಮಯ ಪಿಂಡುಗಳಿಂದ ದೆಸೆಗಲ್ಲಿ ಚರ್ಚೆ ಮೂಂಕಿತವ ವನಮಹಿಷಿಗಳಿಂ ಮದಹಸ್ತಿಯಂತ ಮರವಾಯ್ತ ಪುಲಿಗಳಿನತಿ ಭಯಂಕರಾಕಾರಮಪ್ಪ ದೈತವನಕ್ಕೆ ಬಂದು ತದ್ವನೋಪಕಂಠವರ್ತಿಗಳಪ್ಪ ತಾಪಸಾಶ್ರಮಂಗಳೊಳ್ ವಿಶ್ರಮಿಸಲ್ ಬಗದು
'ಮರೆಯಿಸಿತು. ೨೮. ದೊಡ್ಡಮರಗಳೇ ಹಾಸುಗೆಯಾದವು, ಆಳವಾದ ಮಡುಗಳೇ ಸ್ನಾನ(ಗ್ರಹ)ವಾದುವು ಹೊಸ ನಾರೆ ರೇಷ್ಮೆಯ ಬಟ್ಟೆಯಾಯಿತು. ಹರಡಿದ ತರಗೆಲೆಯೇ ಊಟದತಟ್ಟೆಯಾಯಿತು. ಹಣ್ಣು ಹಂಪಲುಗಳೇ ಶ್ರೇಷ್ಠವಾದ ಭೋಜನ ವಾಯಿತು. ಪಾಂಡವರ ವನವಾಸವೂ ಐಶ್ವರ್ಯದ ಮಹತ್ವವನ್ನು ಪ್ರಕಟಿಸಲು ಸಹಾಯಕವಾಯಿತು. ೨೯. ಹಾಸು ಬಂಡೆಯೇ ಸಿಂಹಾಸನ, ದುಂಬಿಯ ಧ್ವನಿಯೇ ಮಂಗಳವಾದ್ಯ, ಭೂಮಿಯೇ ಹಾಸಿಗೆ, ಮೃಗಗಳ ಸಮೂಹವೇ ಪರಿಹಾರ, ಹೊದರುಗಳೇ ಸಭಾಸ್ಥಾನ, ವಿಶೇಷವಾಗಿ ಬೀಸುವ ಗಾಳಿಯೇ ಚಾಮರದ ಗಾಳಿ ಎನ್ನುವ ಹಾಗಿರಲು ಪಾಂಡವರ ವನವಾಸವೇ ರಾಜ್ಯಭಾರಕ್ಕೆ ಸಮಾನವಾಗಿ ಅವರ ಸುಖಾವಾಸಕ್ಕೆ ಕಾರಣವಾಯಿತು. ವ|| ಪಾಂಡವರ ಹಾಗೆ ಕಾಮ್ಯಕವನದಲ್ಲಿ ಅಯ್ದು ವರ್ಷಗಳ ಕಾಲವಿದ್ದರು. ಆರನೆಯ ವರ್ಷದಲ್ಲಿ ಅದರ ಪಕ್ಕದಲ್ಲಿಯೇ ಸೇರಿಕೊಂಡು ಆಕಾಶಪ್ರದೇಶವನ್ನು ಅಟ್ಟಿಹೋಗುವ ಹಾಗಿದ್ದ ಶಿಖರಗಳನ್ನುಳ್ಳ ಬೆಟ್ಟಗಳಿಂದಲೂ ದಿಕ್ಕುಗಳನ್ನೂ ಹುಡುಕುವಂತೆ ಕೊಬ್ಬಿ ಬೆಳೆದು ಸೊಗಯಿಸುತ್ತಿರುವ ದೊಡ್ಡ ಮರಗಳಿಂದಲೂ ವನಲಕ್ಷಿಯ ಗೋವುಗಳ ಗುಂಪಿನ ಹಾಗಿರುವ ಕಡವು ಮತ್ತು ಕಾಡುಕೋಣಗಳ ಹಿಂಡುಗಳಿಂದಲೂ ದಿಕ್ಕುದಿಕ್ಕುಗಳಲ್ಲಿ ಹೆದರಿ ವಾಸನೆ ನೋಡಲು ಮೂಗನ್ನು ಚಾಚುತ್ತಿರುವ ಕಾಡೆಮ್ಮೆಗಳಿಂದಲೂ ಮದ್ದಾನೆಯಂತೆ ಬಂದು ಮರಕ್ಕೆ ತಗಲುವ ಹುಲಿಗಳಿಂದಲೂ ಅತ್ಯಂತ ಭಯಂಕರವಾಗಿರುವ ದೈತವನಕ್ಕೆ ಬಂದು ಆ ವನದ ಸಮೀಪದಲ್ಲಿರುವ 'ತಪಸ್ವಿಗಳ ಆಶ್ರಮಗಳಲ್ಲಿ ವಿಶ್ರಮಿಸಿಕೊಳ್ಳಲು
Page #347
--------------------------------------------------------------------------
________________
೩೪೨) ಪಂಪಭಾರತಂ ಮ|ಪುಗಲಿ ಬನಮಾರ್ಗಮಿಂಬು ನೆಲಸಲ್ ನಾರುಂಟುಡಲ್ ಮೆಲ್ಲೆ ಕೋಂ
ಬುಗಳೊಳ್ ಪಣ್ಣಲಮುಂಟು ಮಾಯ ಕುಡಿಯಲ್, ನೀರುಂಟು ಪದ್ಮಾಕರಾ | ಳಿಗಳೊಳ್ ತಣುಗಳುಂಟು ಹೇಮಲತಿಕಾ ಕುಂಜಂಗಳೊಳ್ ನಮ್ಮ ನ ನೈಗೆ ಬನ್ನಂ ಬರಲೀಯದೀ ಬನದೊಳಿರ್ದಂ ಕಾಲಮಂ ಪಾರವೇ || ೩೦
ವಗೆ ಎಂದು ತಿಳಯ್ಯರುಷೇಕ ಕಾರ್ಯಾಲೋಚನಪರರಾಗಿ ದೈತವನದೊಳದೈತ ಸಾಹಸರಿರ್ಪನ್ನೆಗಮೊಂದು ದಿವಸಂ ದುರ್ಯೋಧನನ ಮಯ್ತುನಃ ಸಿಂಧುದೇಶಾಧೀಶ್ವರಂ ಸೈಂಧವನವರಂ ಛಿದ್ರಿಸಲೆಂದು ಮಯ್ಯರೆದು ಬಂದುಮ! ಮೃಗಯಾಕ್ರೀಡೆಗೆ ಪಾಂಡುರಾಜತನಯರ್ ಪೋಪನ್ನೆಗಂ ಬಂದು ತೊ
ಟ್ರಗೆ ಪಾಂಚಾಳಿಯನೆತ್ತಿ ತನ್ನ ರಥದೊಳ್ ತಂದಿಟ್ಟುಕೊಂಡುಯ್ಯನ | ನೈಗಮಂತಾ ಪಡೆಮಾತುಗೇಳತಿಬಳರ್ ಭೀಮಾರ್ಜುನರ್ ಕಾಯ್ದು ಕೆ ಯಿಗೆ ಬೆನ್ನಂ ಪರಿದತ್ತ ಪೋಪೆಯೆಲವೋ ಪೋ ಪೋಗಲೆಂದಯ್ದಿದರ್ || ೩೧
ವ! ಅಂತೆಯ್ಲಿ ತಮ್ಮದಾಘಾತದೊಳಂ ಬಾಣಪಾತದೊಳಮವನ ರಥಮಂ ಶತ ಚೂರ್ಣಂ ಮಾಡಿ ಜಯದ್ರಥನಂ ಕೋಡಗಗಟ್ಟುಗಟ್ಟಿ ಬೆನ್ನಂ ಬಿಲ್ ಕೊಪ್ಪಿನೊಳಿದು ನಡೆಯಂದು ನಡೆಯಿಸಿ ಪಾಂಚಾಳಿಯಂ ಲೀಲೆಯಿಂದೊಡಗೊಂಡು ಬೀಡಿಂಗೆ ವಂದು ಧರ್ಮಪುತ್ರಂಗೆ ತೋಚಿದೊಡೆ
ಯೋಚಿಸಿದರು. ೩೦. ಈ ವನವು ಮತ್ತಾರಿಗೂ ಪ್ರವೇಶಿಸಲಾಗುವುದಿಲ್ಲ: ಇರುವುದಕ್ಕೆ ಸ್ಥಳಾವಕಾಶವೂ ಉಡಲು ನಾರೂ ಉಂಟು; ಊಟಮಾಡಲು ಕೊಂಬೆಗಳಲ್ಲಿ ಹಣ್ಣು ಹಂಪಲುವುಂಟು; ಸ್ನಾನಮಾಡಲೂ ಕುಡಿಯಲೂ ಕೊಳಗಳಲ್ಲಿ ನೀರುಂಟು; ಹೊಂಬಣ್ಣದ ಬಳ್ಳಿವನೆಗಳಲ್ಲಿ ತಂಪುಂಟು; ಈ ವನದಲ್ಲಿ ನಮ್ಮ ಸತ್ಯಪರಿಪಾಲನೆಗೆ ಭಂಗಬರುವುದಿಲ್ಲ. ಈ ವನದಲ್ಲಿಯೇ ಇದ್ದು ಕಾಲಯಾಪನೆ ಮಾಡಬಹುದಲ್ಲವೇ ಎಂದು ಯೋಚಿಸಿ ವ|| ಅಯ್ಯರೂ ಏಕಾಭಿಪ್ರಾಯವಾಗಿ ಅದ್ವಿತೀಯ ಬಲಶಾಲಿಗಳಾದ ಅವರು ಆ ದೈತವನದಲ್ಲಿ ತಂಗಿದರು. ಅಷ್ಟರಲ್ಲಿ ಒಂದು ದಿವಸ ದುರ್ಯೊಧನನ ಮೈದುನನೂ ಸಿಂಧುದೇಶಾಧಿಪತಿಯೂ ಆದ ಸೈಂಧವನು ಅವರನ್ನು ಭೇದಿಸಬೇಕೆಂದು (ರಹಸ್ಯವನ್ನು ತಿಳಿಯಲೆಂದು) ಮೈಮರೆಸಿಕೊಂಡು ಬಂದನು. ೩೧. ಆ ಪಾಂಡುಪುತ್ರರು ಬೇಟೆಗೆ ಹೋಗಿರುವ ಸಮಯವನ್ನೇ ನೋಡಿ ಬಂದು ಇದ್ದಕ್ಕಿದ್ದ ಹಾಗೆ ಬ್ರೌಪದಿಯನ್ನೆತ್ತಿ ತನ್ನ ರಥದಲ್ಲಿಟ್ಟುಕೊಂಡು ಹೋದನು. ಅಷ್ಟರಲ್ಲಿ ಆ ಸಮಾಚಾರವನ್ನು ಕೇಳಿ ಬಹುಸಾಹಸಿಗಳಾದ ಭೀಮಾರ್ಜುನರ ಕೋಪವು ಮಿತಿಮೀರಿರಲು ಅವನ ಬೆನ್ನಿನ ಹಿಂದೆಯೇ ಓಡಿ ಎಲ್ಲಿಗೆ ಹೋಗುತ್ತೀಯೋ ಹೋಗಬೇಡ, ಹೋಗಬೇಡ (ನಿಲ್ಲು) ಎಂದು ಅವನನ್ನು ಸಮೀಪಿಸಿದರು. ವ|| ತಮ್ಮ ಗದೆಯ ಪೆಟ್ಟಿನಿಂದಲೂ ಬಾಣ ಪ್ರಯೋಗದಿಂದಲೂ ಅವನ ತೇರನ್ನು ನೂರು ಚೂರುಮಾಡಿ ಸೈಂಧವನನ್ನು ಕಪಿಯನ್ನು ಬಿಗಿಯುವಂತೆ ಬಿಗಿದು ಅವನ ಬೆನ್ನನ್ನು ಬಿಲ್ಲಿನ ತುದಿಯಿಂದ ತಿವಿದು ಗಾಯಮಾಡಿ ನಡೆ ಎಂದು ನಡೆಯಿಸಿ
Page #348
--------------------------------------------------------------------------
________________
೩೨
ಸಪ್ತಮಾಶ್ವಾಸಂ / ೩೪೩ ಕblು. ಲಾಕ್ಷಾಗೃಹಮಂ ಪುಗಿಸಲು
ಮಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಓಂ | ಗಾಕ್ಷಂಗೆಟ್ಟು ಸೈರಿಸ
ದಾಕ್ಷೇಪದಿನೆಮ್ಮನಿಲ್ಲಿ ಛಿದ್ರಿಸ ಬಂದೈ ||
ವಗಿರಿ ಎಂದು ನಿನ್ನಂ ಪರಿಭವಕ್ಕೆ ತಂದು ನಿನ್ನ ಯಶಮಂ ಕಿಡಿಸಿದೆವಿನ್ ಕೊಂದೊಡೇಮದ ಪುದೆಂದು ದುರ್ಯೋಧನನಲ್ಲಿಗೆ ಪೋಗೆಂದು ಕಟ್ಟಿದ ಕಟ್ಟುಗಳಂ ಬಿಟ್ಟು ಕಳೆದೊಡೆ ಜಯದ್ರಥಂ ಸಿಗಾಗಿ ಕೈಲಾಸದೊಳೀಶ್ವರಂಗೆ ತಪಂಗೆಯ್ದು ಮೆಚ್ಚಿಸಿ ಪಾಂಡವರನೊಂದು ದವಸದನುವರದೊಳ್ ಗೆಲ್ಸನಕ್ಕೆಂದು ಬರಂಬಡೆದು ಪೋದನಿತ್ತ ದುರ್ಯೊಧನಂ ಸಮಸ್ತಸಾಧನಸಹಿತನಾಗಿ ಕಾಡೊಳ್ ಬೇಡರಂತ, ತೋಟ ದಾಯಿಗರ ಕಂದಿ ಕುಂದಿದ ಮೊಗಂಗಳಂ ನೋಡುವುದುಮನ್ಯನವರಿಂ ನೋಡಿಸುವುದಮಾಯೆರಡೆ ಸಂಸಾರಫಲವೆಂದು ನಾಗಪುರದಿಂ ಪೊಣಮಟ್ಟು ದುಶ್ಯಾಸನಾದಿಗಳಪ್ಪ ನೊರ್ವರ್ ತಮ್ಮಂದಿರುಂ ಭಾನುಮತಿಯುಂ ಚಂದ್ರಮತಿಯುಮೆಂಬ ಬೇಟದರಸಿಯರುಂ ಲಕ್ಷಣಂ ಮೊದಲಾಗೆ ನೂರ್ವರ್ ಮಕ್ಕಳುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಕೃತಿಗಳುಮಶ್ವತ್ಥಾಮ ಕರ್ಣ ಶಲ್ಯ ಶಕುನಿ ಸೈಂಧವ ಪ್ರಮುಖನಾಯಕರುಂಬೆರಸು ಬೇಂಟೆಯ ನೆವದಿಂ ಬಂದು ದೈತವನದ ಕೆಲದ ನಂದನವನದೊಳ್ ಪಾಂಡವರ್ಗ ಸಮೀಪಮಾಗೆ ಬೀಡಂ ಬಿಟ್ಟು ಮಾಡಿಸುತ್ತುಂ ಪೊಗಟಿಸುತ್ತಮಿರ್ದನನ್ನೆಗಂ ಪಗೆಯಿಳಿಯಬಂದರ
ಬ್ರೌಪದಿಯೊಡನೆ ಬೀಡಿಗೆ ಬಂದು ಧರ್ಮರಾಜನಿಗೆ ತೋರಿದರು. ೩೨. 'ಅರಗಿನ ಮನೆಯನ್ನು ಪ್ರವೇಶಮಾಡಿಸಲೂ ಪಗಡೆಯಾಟದಿಂದ ರಾಜ್ಯವನ್ನು ಕಸಿದುಕೊಳಲೂ ದುರ್ಯೋಧನನಿಗೆ ಪ್ರೇರೇಪಿಸಿ (ಅಷ್ಟಕ್ಕೆ ತೃಪ್ತಿಪಡದೆ ನಮ್ಮನ್ನು ದೌಷ್ಟದಿಂದ ಇಲ್ಲಿಯೂ ಭೇದಿಸಲು ಬಂದೆಯಾ ?' ವು 'ನಿನ್ನನ್ನು ಅವಮಾನ ಪಡಿಸಿ ನಿನ್ನ ಯಶಸ್ಸನ್ನು ಕೆಡಿಸಿದೆವು. ಇನ್ನು ನಿನ್ನನ್ನು ಕೊಂದರೆ ಏನು ಬರುತ್ತದೆ,' ದುರ್ಯೊಧನನ ಹತ್ತಿರಕ್ಕೆ ಹೋಗಿ ಬದುಕು ಎಂದು ಕಟ್ಟಿದ್ದ ಕಟ್ಟುಗಳನ್ನೆಲ್ಲ ಬಿಚ್ಚಿ ಕಳುಹಿಸಲು ಸೈಂಧವನು ನಾಚಿಕೆಗೊಂಡು ಕೈಲಾಸದಲ್ಲಿ ಈಶ್ವರನನ್ನು ಕುರಿತು ತಪಸ್ಸುಮಾಡಿ ಮೆಚ್ಚಿಸಿ , “ಪಾಂಡವರನ್ನು ಒಂದು ದಿನದ ಯುದ್ದದಲ್ಲಿಯಾದರೂ ಗೆಲ್ಲುವಂತಾಗಲಿ' ಎಂದು ವರವನ್ನು ಪಡೆದು ಹೋದನು. ಈ ಕಡೆ ದುರ್ಯೊಧನನು ಕಾಡಿನಲ್ಲಿ ಬೇಡರಂತೆ ತೊಳಲುತ್ತಿರುವ ಜ್ಞಾತಿಗಳ ಬಾಡಿ ಕೃಶವಾದ ಮುಖಗಳನ್ನು ನೋಡುವುದೂ ವೈಭವಯುಕ್ತವಾದ ತನ್ನನ್ನು ಅವರಿಂದ ನೋಡಿಸುವುದೂ ಇವೆರಡೇ ಸಂಸಾರದ ಫಲವೆಂದು (ಭಾವಿಸಿ) ಸಮಸ್ತ ಸಲಕರಣೆಗಳೊಡನೆ ಹಸ್ತಿನಾಪುರದಿಂದ ಹೊರಟು ಧುಶ್ಯಾಸನನೇ ಮೊದಲಾದ ನೂರ್ವರು ತಮ್ಮಂದಿರನ್ನೂ ಭಾನುಮತಿ ಮತ್ತು ಚಂದ್ರಮತಿ ಎಂಬ ಇಬ್ಬರು ಪ್ರೀತಿಪಾತ್ರರಾದ ರಾಣಿಯರನ್ನು ಲಕ್ಷಣನೇ ಮೊದಲಾದ ನೂರುಜನ ಮಕ್ಕಳನ್ನೂ ಭೀಷ್ಮ ದ್ರೋಣ ಕೃಪ ವಿದುರ ಮೊದಲಾದ ಪ್ರಬೃತಿಗಳನ್ನೂ ಅಶ್ವತ್ತಾಮ, ಕರ್ಣ,ಶಲ್ಯ, ಶಕುನಿ ಸೈಂಧವನೇ ಮೊದಲಾದ ನಾಯಕರನ್ನೂ ಕೂಡಿಬೇಟೆಯ ನೆಪದಿಂದ ಬಂದು ದೈತವನದ ಪಕ್ಕದ ನಂದನವನದೊಳಗೆ ಪಾಂಡವರಿಗೆ ಸಮೀಪವಾಗಿರುವ ಹಾಗೆ ಬೀಡು ಬಿಟ್ಟನು. ತನ್ನ ವೈಭವವನ್ನು ಹಾಡಿಸುತ್ತಲೂ ಹೊಗಳಿಸುತ್ತಲೂ ಇದ್ದನು. ಅಷ್ಟರಲ್ಲಿ 'ಹಗೆಯನ್ನು ಕೊಲ್ಲಲು ಬಂದವರ ಮೂಗನ್ನು
Page #349
--------------------------------------------------------------------------
________________
೩೪೪) ಪಂಪಭಾರತಂ ಮೂಗನರಿದರೆಂಬಂತನಿಬರಂ ಬಾಯಂ ಬಿಟ್ಟು ನೋಡ ನೋಡ ಪೂರ್ವಜನ್ಮದ ಪಗೆ ಚಿತ್ರಾಂಗದನೆಂಬ ಗಂಧರ್ವನಲುವತ್ತು ಕೋಟಿ ಗಾಂಧರ್ವಬಲಂಬೆರಸು ಬಂದು ದುರ್ಯೋಧನ ದುಶ್ಯಾಸನರಿರ್ವರುಮಂ ಕೋಡಗಗಟ್ಟುಗಟ್ಟಿಚಂ|| ಮಿಡುಕದೆ ಭೀಷ್ಮ ನೋಡುತಿರು ಕುಂಭಜ ಸುರ್ಕಿರು ಕರ್ಣ ಮಿಕ್ಕು ಮಾ
ರ್ನುಡಿಯದ ಮೂಗುವಟ್ಟರು ಗುರು ಪ್ರಿಯನಂದನ ಕೂಗಡಂಗದಿ | ರ್ದೂಡೆ ಬರ್ದು ಕಾವುದಿರ್ ಪೊಡರ್ದೊಡೀಗಡ ಕೊಂದಹೆನೆಂದು ಕೂಡ ಕ ಇಡೆ ಜಡಿದುಯ್ದನಾ ಖಚರನಿರ್ವರುಮಂ ಪರಮಾಣುಮಾರ್ಗದಿಂ || ೩೩
ವ|| ಅಂತುಯ್ಯುದುಂ ನೆಗuಯ ಬೀರರೆಲ್ಲಂ ಬಡವರ ಪಿತರರಂತೆ ಮಿಕ್ಕಳ ನೋಡುತ್ತಿರೆ ಮಿಕ್ಕುದುಂಡರಂತ ತಲೆಯಂ ಬಾಗಿ ಬಿಲ್ಗಳಂ ಮುಂದಿಟ್ಟು ಬಿಲ್ಲುಂ ಬೆಳಗುಮಾಗಿರೆ ಸುಯೋಧನನ ಮಹಾದೇವಿ ಭಾನುಮತಿ ಬಾಯಟೆದು ಪುಯ್ಯಲಿಡುತುಂ ಬಂದು ಧರ್ಮನಂದನನ ಕಾಲ ಮೇಲೆ ಕವಿದುಪಟ್ಟುಕಂ|| ನೋಂತರ ಪಗೆವರನು
ದಂತಾಯ್ತಂದಿರದ ಪುರುಷಕಾರದ ಪಂಪಂ | ಚಿಂತಿಸಿ ತರಿಸಿ ಮಹೀಶನ
ನಂತಪೊಡಮನಗೆ ಪುರುಷಭಿಕ್ಷಮನಿಕ್ಕಿಂ | ವಗಿ ಎಂದು ಪುಯ್ಯಲಿಡುವ ಭಾನುಮತಿಯ ಪುಯ್ಯಲಂ ಕೇಳು ಸುಯೋಧನಂ ಬಂದ ವೃತ್ತಾಂತವನಳಿದು
ಕತ್ತರಿಸಿದರು' ಎಂಬಂತೆ ಎಲ್ಲರೂ ಆಶ್ಚರ್ಯದಿಂದ ಬಾಯಿಬಿಟ್ಟುಕೊಂಡು ನೋಡುತ್ತಿದ್ದ ಹಾಗೆಯೇ ಹಿಂದಿನ ಜನ್ಮದ ಶತ್ರುವಾದ ಚಿತ್ರಾಂಗದನೆಂಬ ಗಂಧರ್ವನು ಅರುವತ್ತು ಕೋಟಿ ಗಂಧರ್ವಸೈನ್ಯದೊಡನೆ ಕೂಡಿ ಬಂದು ದುರ್ಯೊಧನ ದುಶ್ಯಾಸನರಿಬ್ಬರನ್ನೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿದನು. ೩೩. 'ಭೀಷ್ಮ ಅಳ್ಳಾಡದೆ ನೋಡುತ್ತಿರು, ದ್ರೋಣನೇ ಮುದುರಿಕೊಂಡಿರು; ಕರ್ಣನೇ ಮೀರಿ ಮಾತನಾಡದೆ ಮೌನವಾಗಿರು; ಅಶ್ವತ್ಥಾಮ ನಿನ್ನ ಕೂಗು ಅಡಗದಿದ್ದರೆ ನಿನಗೆ ಬದುಕುವುದೆಲ್ಲಿ ಬಂತು, ಸುಮ್ಮನಿರು; ಜಂಬಮಾಡಿದರೆ ಈಗಲೆ ಕೊಲ್ಲುತ್ತೇನೆ' ಎಂದು ಅವರೆಲ್ಲರೂ ಹೆದರುವಂತೆ ಬೆದರಿಸಿ ಇಬ್ಬರನ್ನೂ ಆ ಚಿತ್ರಾಂಗದನು ಆಕಾಶಮಾರ್ಗದಿಂದ ಎತ್ತಿಕೊಂಡು ಹೋದನು. ವ|| ಹಾಗೆ ಎತ್ತಿಕೊಂಡು ಹೋಗಲು ಪ್ರಸಿದ್ಧರಾದ ವೀರರೆಲ್ಲ ಬಡವರ ತಂದೆಯರಂತೆ ಮಿಟಮಿಟನೆ ನೋಡುತ್ತಿದ್ದರು. ಎಂಜಲನ್ನು ತಿಂದವರಂತೆ ತಲೆಯನ್ನು ತಗ್ಗಿಸಿಕೊಂಡರು. ಬಿಲ್ಲುಗಳನ್ನು ತಮ್ಮ ಮುಂದಿಟ್ಟುಕೊಂಡು ಆಶ್ಚರ್ಯಚಕಿತರಾಗಿ ಏನು ಮಾಡಲೂ ತೋರದಿದ್ದರು, ದುರ್ಯೊಧನನ ಮಹಾರಾಣಿಯಾದ ಭಾನುಮತಿಯು ಅಳುತ್ತಲೂ ಅರಚುತ್ತಲೂ ಬಂದು ಧರ್ಮರಾಜನ ಕಾಲಿನ ಮೇಲೆ ಕವಿದು ಬಿದ್ದಳು. ೩೪. 'ತಾನೇ ಕೊಲ್ಲಬೇಕೆಂದು ಒತಮಾಡುತ್ತಿದ್ದವರ ಹಗೆಯನ್ನು ಎತ್ತು ಇರಿದ ಹಾಗಾಯ್ತು ಎಂದು ಸುಮ್ಮನಿರದೆ ಪುರುಷಪ್ರಯತ್ನದ ವೈಭವವನ್ನು ಯೋಚಿಸಿ ಹೇಗಾದರೂ ಮಹಾರಾಜನನ್ನು ತರಿಸಿ ನನಗೆ ಪುರುಷಭಿಕ್ಷೆಯನ್ನು ಕೊಡಿ' ವಎಂದು ಕೂಗಿಕೊಳ್ಳುತ್ತಿರುವ ಭಾನುಮತಿಯ ಗೋಳನ್ನು ಕೇಳಿ ದುರ್ಯೋಧನನು ಬಂದ
Page #350
--------------------------------------------------------------------------
________________
ಮ||
ಸಪ್ತಮಾಶ್ವಾಸಂ | ೩೪೫
ಪಿರಿದುಂ ಕಾಯ್ದಿನೊಳೆಯೇ ಕಾಯ್ದ ಸಮಕಟ್ಟಂ ದೋಷಮಲಕ್ಕ ಮ ಚರಮುಂ ಮೋಘಮೊಡಂಬಡುಂ ಕಲುಷಮುಂ ಮುನ್ನುಳ್ಳುದಂತೆತ್ತಿಯುಂ | ಪೊರೆಯುಂ ಪಂತಮುಮಿಲ್ಲದಂತೆ ಮನದೊಳ್ ನಿಷ್ಕಾರಣಂ ಕಾಯ್ಕರಂ ಪರ ಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳೆನಿಲ್ಲಾಗದೇ || ವ|| ಎಂದು ತನ್ನೊಳ ಬಗೆದು ಭಾನುಮತಿಯನಿಂತೆಂದಂ
ಮ|| ಸುರಿಯಲೇಡಮದರ್ಕೆ ಬಾಷಜಳಮಂ ನಿನ್ನಾಣ್ಯನಂ ನಿನ್ನೊಳಿಂ
ದಿರದಾಂ ಕೂಡುವವಮೊಳಾದ ಕಲಹಕ್ಕೆಂತಾದೊಡಂ ಕೇಳ ನೂ | ರ್ವರೆ ದಲ್ ಕೌರವರಾಮುಮಯ್ಯರ ವಲಂ ಮತ್ತೊರ್ವರೊಳ್ ತೊಟ್ಟ ಸಂ ಗರರಂಗಕ್ಕೆ ಜಸಕ್ಕೆ ಕೂಡುವೆಡೆಯೊಳ್ ನೂಅಯ್ಯರಾವಲ್ಲವೇ ||
Qと
2.99
ವ|| ಎಂದು ಯುಧಿಷ್ಠಿರಂ ಪಾಟಿಯ ಪಸುಗೆಯನಂದು ನುಡಿದೊಡಾ ಪೂಣ್ಣ ಬೆಸನಂ ಕರಮಾಸೆವಟ್ಟು ತನ್ನ ಕೆಲದೊಳಿರ್ದ ಸಾಹಸಾಭರಣನ ಮೊಗಮಂ ನೋಡಿ
ಕಂ!!
ಪಿಡಿದುಯುದು ಗಂಧರ್ವರ
ಪಡೆ ಗಡ ನಿಮ್ಮಣ್ಣನಂ ಸುಯೋಧನನನಿದಂ |
ಕಡೆಗಣಿಸಲಾಗ ನಮಗೀ
ಗಡ ಬೇಗಂ ಬಿಡಿಸಿ ತರ್ಪುದಾತನ ಜಯಂ ||
22
ವ|| ಎಂಬುದುಂ ಮಹಾಪ್ರಸಾದಮಂತೆಗೆಯ್ದನೆಲ್ಲಿವೊಕ್ಕೊಡು ಕೊಂಡು ಬಂದಪೆನೆಂದು ಬಗೆಯದಿದಿರು ನೋಡುತ್ತಿರಿಯೆಂದು ತವದೊಣೆಗಳು ಬಿಗಿದು ಗಾಂಡೀವಮನೇಟಿಸಿ ನೀವಿ
ಕಾರಣವನ್ನು ತಿಳಿದು ೩೫. ಈಗ ವಿಶೇಷವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ ತಾಯಿ! ಅಸೂಯೆಯೂ ವ್ಯರ್ಥವಾದ ತೊಂದರೆಯೂ ದ್ವೇಷವೂ ದುರ್ಯೋಧನನಿಗೆ ಸಹಜವಾದುದೇ. ಅದನ್ನೇ ಅನುಸರಿಸಿಕೊಂಡು ನಾನು ದುಃಖದಿಂದ ನಿಷ್ಕಾರಣವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ, ಇತರರಿಗೆ ಹಿಂಸೆಮಾಡುವ ಸ್ವಭಾವವು ನನ್ನಿಂದ ದೂರವಿರಲಿ ಎಂಬ ಮಾತನ್ನು ನಾನು ಹಿಂದೆಯೇ ಕೇಳಿಲ್ಲವೇ ? ವ|| ಎಂದು ತನ್ನಲ್ಲಿ ಯೋಚಿಸಿ ಭಾನುಮತಿಯನ್ನು ಕುರಿತು ಹೀಗೆಂದನು. ೩೬. ಇದಕ್ಕಾಗಿ ನೀನು ಕಣ್ಣೀರನ್ನು ಸುರಿಸಬೇಡ; ಸಾವಕಾಶಮಾಡದೆ ನಿನ್ನ ಗಂಡನನ್ನು ಈ ದಿನವೇ ತಂದು ಸೇರಿಸುವೆವು; ಕೇಳಮ್ಮ ನಮ್ಮ ಮನೆಯಲ್ಲಿಯೇ ಉಂಟಾದ ಜಗಳಕ್ಕೆ ಕೌರವರು ನೂರು ಜನ, ನಾವು ಅಯ್ದು ಜನವೇ ದಿಟ. ಆದರೆ ಮತ್ತೊಬ್ಬರಲ್ಲಿ ಉಂಟಾದ ಯುದ್ಧ ಸೇರುವ ಸಂದರ್ಭದಲ್ಲಿ ನಾವು ನೂರೈದು ಜನವಲ್ಲವೇ? ವ| ಎಂದು ಧರ್ಮರಾಜನು ಧರ್ಮದ ವಿವೇಕವನ್ನು ತಿಳಿಯುವ ಹಾಗೆ ಹೇಳಿ ತಾನು ಪ್ರತಿಜ್ಞೆ ಮಾಡಿದ ಕಾರ್ಯವನ್ನು ಶೀಘ್ರವಾಗಿ ಸಾಧಿಸಲು ಮನಸ್ಸು ಮಾಡಿ ತನ್ನ ಪಕ್ಕದಲ್ಲಿದ್ದ ಸಾಹಸಾಭರಣನಾದ ಅರ್ಜುನನ ಮುಖವನ್ನು ನೋಡಿ-೩೭. ನಿಮ್ಮಣ್ಣ ನಾದ ದುರ್ಯೋಧನನನ್ನು ಗಂಧರ್ವಸೈನ್ಯವು ಹಿಡಿದುಕೊಂಡು ಹೋಗಿದೆ. ನಾವು ಇದನ್ನು ಕಡೆಗಣಿಸಬಾರದು; ಈಗಲೇ ಬೇಗ ಆತನ ಬಂಧನವನ್ನು ಬಿಡಿಸಿ ತರತಕ್ಕದ್ದು. ವ|| ಎನ್ನಲು ಮಹಾಪ್ರಸಾದ, ಹಾಗೆಯೇ ಮಾಡುತ್ತೇನೆ; ಎಲ್ಲಿ ಹೊಕ್ಕಿದ್ದರೂ
1
1
Page #351
--------------------------------------------------------------------------
________________
೩೪೬ | ಪಂಪಭಾರತಂ ಜೇವೊಡೆದು ಗಂಧರ್ವರ ಪೋಪ ಬಡಿಯಂ ಬೆಸಗೊಂಡು ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂ ತನ್ನ ಕಣ್ಣನಭಿಮಂತ್ರಿಸಿಕೊಂಡು ಪಾಳುವ ಗಂಧರ್ವಬಲಮಂ ಜಲಕೃನೆ ಕಂಡು
ಕ೦ll ಕೊಳ್ ಕೊಳ್ಳೆಂದೆತ್ತೊಡೆ ಎಳ
ಯೋಳದ ತೆಳದಿಂದ ಮುಸುಳಿ ದಿವ್ಯಾಸ್ತಚಯಂ | ಗಳ ಕೊಳೆ ಗಾಂಧರ್ವಬಲಂ
ಗಳ ಕಡೆದುವು ಮಿಟ್ಟೆಗೊಂಡ ಚಿಟ್ಟೆಯ ತಳದಿಂ || ೩೮ ವ|| ಅಂತಲ್ಲಿ ಪದಿನಾಲ್ಟಾಸಿರ್ವರ್ ಗಂಧರ್ವರಂ ಕೊಂದೊಡೆ ಚಿತ್ರಾಂಗದಂ ಚರ್ಚಿ ಕೊಳೆ ನಿನ್ನ ನೆಚ್ಚಿನ ಸೆಳೆಯನೆಂದು ಬಿಸುಟೊಡೆ ನೋಯಲೀಯದ ನೆಲದಾಕಾಶದೆಡೆ ಯೋಳಂಬುಗಳಂ ತರತರದಿಂದೆಚ್ಚು ಸೋಪಾನ ಮಾಡಿ ದುರ್ಯೋಧನ ದುಶ್ಯಾಸನರನಿಟಿಪಿ ಕಟುಗಳಂ ಬಿಡದೊಡಗೊಂಡು ಬಂದು ಧರ್ಮಪುತ್ರಂಗೆ ತೋಚಿದೊಡೆ ಸಾಹಸಾಭರಣನ ಸಾಹಸಮನಳವಲ್ಲದೆ ಪೊಗಟ್ಟು ತೊಡೆಯನೇಟಿಸಿಕೊಂಡು ಬಾಯೊಳ್ ತಂಬುಲಂಗೋಟ್ಟಂ ಪಾಂಚಾಲರಾಜತನೂಜೆ ಪಗೆವರ ಕಟ್ಟುವಟ್ಟಿರ್ದೆಳಿದಿಕೆಗೆ ಸಂತಸಂಬಟ್ಟು ಸೈರಿಸಲಾಟದಿಂತೆಂದಳಕಂ|| ಎಮ್ಮಂ ಪಿಡಿದೆವಂದಿನ
ನಿಮ್ಮದಟುಗಳೀಗಳೆತ್ತವೋದುವೊ ಪಿಡಿವ | ಟ್ವಿಮ್ಮ ಬಬಲ್ಲಿರೆ ಕಂಡಿರೆ ನಿಮ್ಮಳವಂ ನಿಮಗಮಾಗಳೀಯಡರಾಯೇ ||
೩೯ ಕೊಂಡುಬರುತ್ತೇನೆ, ಆ ವಿಷಯವಾಗಿ ಚಿಂತಿಸದೆ ನಿರೀಕ್ಷಣೆ ಮಾಡುತ್ತಿರಿ ಎಂದು ತನ್ನ ಅಕ್ಷಯತೂಣೀರವನ್ನು ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯನ್ನೇರಿಸಿ ನೀವಿ ಶಬ್ದಮಾಡಿ ನೋಡಿ ಗಂಧರ್ವರು ಹೋದ ದಾರಿಯನ್ನು ಹುಡುಕಿಕೊಂಡು ಹೊರಟನು. ಹಿಮವತ್ವರ್ವತದಲ್ಲಿ ರಾಕ್ಷಸಿಯು ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂದ ತನ್ನ ಕಣ್ಣನ್ನು ಅಭಿಮಂತ್ರಿಸಿಕೊಂಡು ನೋಡಲು ಹಾರಿಹೋಗುತ್ತಿದ್ದ ಗಂಧರ್ವಸೈನ್ಯವನ್ನು ಸ್ಪಷ್ಟವಾಗಿ ಕಂಡನು. ೩೮. ತೆಗೆದುಕೊ ತೆಗೆದುಕೊ ಎಂದು ಹೊಡೆಯಲಾಗಿ ದಿವ್ಯಾಸ್ತಗಳ ಸಮೂಹವು ಪ್ರಳಯಕಾಲದ ಬೆಂಕಿಯ ಚೂರಿನಂತೆ ಮುತ್ತಿ ನಾಟಲಾಗಿ ಗಂಧರ್ವಸೈನ್ಯಗಳು ಮಣ್ಣು ಹೆಂಟೆಯು ತಗುಲಿದ ಚಿಟ್ಟೆಯ ಹುಳುವಿನ ಹಾಗೆ ಉರುಳಿ ಬಿದ್ದುವು. ವ! ಅಲ್ಲಿ ಹದಿನಾಲ್ಕು ಸಾವಿರ ಗಂಧರ್ವರನ್ನು ಕೊಲ್ಲಲು ಚಿತ್ರಾಂಗದನು ಹೆದರಿ ನಿನ್ನ ಪ್ರೀತಿಪಾತ್ರವಾದ ಬಂದಿಯನ್ನು ತೆಗೆದುಕೋ ಎಂದು ದುರ್ಯೊಧನ ಮತ್ತು ದುಶ್ಯಾಸನರನ್ನು ಬಿಸಾಡಿದನು. ಅವರು ನೋಯುವುದಕ್ಕೆ ಅವಕಾಶ ಕೊಡದೆ ಭೂಮ್ಯಾಕಾಶಗಳ ಮಧ್ಯದಲ್ಲಿ ಬಾಣಗಳನ್ನು ವಿಧವಿಧವಾಗಿ ಪ್ರಯೋಗಮಾಡಿ ಮೆಟ್ಟಿಲು ಗಳನ್ನು ಕಟ್ಟಿ ದುರ್ಯೊಧನ ದುಶ್ಯಾಸನರನ್ನು ಇಳಿಸಿ ಕಟ್ಟುಗಳನ್ನು ಬಿಡಿಸದೆಯೆ ಕರೆತಂದು ಧರ್ಮರಾಯನಿಗೆ ತೋರಿಸಿದನು. ಅವನು ಸಾಹಸಾಭರಣನ ಸಾಹಸವನ್ನು ಅಳತೆಯಿಲ್ಲದಷ್ಟು ಹೊಗಳಿ ತೊಡೆಯಮೇಲೆ ಕುಳ್ಳಿರಿಸಿಕೊಂಡು ಬಾಯಲ್ಲಿ ತಾಂಬೂಲ ವನ್ನು ಕೊಟ್ಟನು. ಬ್ರೌಪದಿಯು ಶತ್ರುಗಳು ಕಟ್ಟುಗಳನ್ನು ಕಟ್ಟಿಸಿಕೊಂಡು ಅವಮಾನ ಪಟ್ಟುದಕ್ಕೆ ಸಂತೋಷಪಟ್ಟು ಸಹಿಸಲಾರದೆ ಹೀಗೆಂದಳು-೩೯. ನಮ್ಮನ್ನು ಹಿಡಿದೆಳೆದ
Page #352
--------------------------------------------------------------------------
________________
ಸಪ್ತಮಾಶ್ವಾಸಂ / ೩೪೭ ವ|| ಎಂದು ಸಾಯ ಸರಸಂ ನುಡಿದು ಕಟ್ಟಿದ ಕಟ್ಟುಗಳಂ ತಾನೆ ಬಿಟ್ಟು ಕಳದು ಭಾನುಮತಿಗೆ ನಿನ್ನಾಣನುಮಂ ನಿನ್ನ ಮಯ್ತುನನುಮಂ ನೀನೂಪುಗೊಳ್ಳೆಂಬುದುಂ ದುರ್ಯೋಧನ ದಾಡೆಗಳೆದ ಕುಳಿಕನಂತೆಯುಂ ಕೊಡುಡಿದ ಮದಹಸಿಯಂತೆಯುಂ ನಖಮುಡಿದ ಸಿಂಹದಂತೆಯುಂ ಗಳಿತಗರ್ವನಾಗಿ ಪಾಂಡವರ ಮೊಗಮಂ ನೋಡಲ್ ನಾಣ್ಯ ಮದಗಜಪುರಕ್ಕೆ ಪೋಗಿ ಜೂದಿನೊಳ್ ಗೆಲ್ಲ ನೆಲನಂ ನಯಜ್ಞನಾಗಿ ತನ್ನೊಳ್ ಪಿಸಿ ದುಶ್ಯಾಸನನಂ ಯುವರಾಜನಂ ಮಾಡಿ ನಿರ್ವ್ಯಾಜಮರಸುಗೆಯುತ್ತುಮಿರ್ದನಿತ್ತ ಯುಧಿಷ್ಠಿರನಟ್ಟಿದ ಕಿರಾತತಂ ತಾಪಸ ವ್ಯಾಜನಾಗಿ ಪೋಗಿ ಸುಯೋಧನನ ವಾರ್ತೆಯೆಲ್ಲಮುಮನಳಿದು ಬಂದಜಾತಶತ್ರುಗಿಂತೆಂದು ಬಿನ್ನಪಂಗೆಯ್ದಂಚoll ಕಿವಿಗಿನಿದುಂ ನೃಪಂಗೆ ಹಿತಮಂ ನುಡಿಯಲ್ಲಿಯುಮಿಲ್ಲ ಕೇಳ ಬಿ
ನೃವಿಸುವನೆನ್ನ ಕಂಡುದನೆ ಜೂದಿಯೊಳುವದಿಂದ ಗೆಲ್ಲ ನಿ | (ವನಿತಳಂ ಕರಾತಳದವೋಲ್ ತನಗಂ ಬೆಸಕೆಯ್ಕೆ ಕೆಯ್ಕೆ ಮಾ
ಡುವ ನಯಮಾ ಬೃಹಸ್ಪತಿಯುಮಂ ಗೆಲೆವಂದುದು ಧಾರ್ತರಾಷ್ಟ್ರನಾ ll೪೦ ಮ|| ಮೊದಲೊಳ್ ತಿಮದೊಪ್ಪಿ ತಪ್ಪಿದುದನೀಯೆಂದಟ್ಟಿದಂ ದಂಡನ
ಟ್ಟದೆ ಸಾಮರ್ಥ್ಯದಿನಟ್ಟದೋಲೆಗೆ ಮಹಾಪ್ರತ್ಯಂತ ಭೂಪಾಳರ | ಟ್ಟಿದ ಕಾಳಿಂಗ ಗಜೇಂದ್ರ ದಾನಜಲಧಾರಾಸಾರದಿಂ ನೋಡ ಕುಂ ದಿದುದಿಲ್ಲೋಳೆಸಜಾ ಸುಯೋಧನ ನೃಷದ್ವಾರೋಪಕಂಠಗಳೊಳ್ || ೪೧
ಆ ದಿನದ ನಿಮ್ಮ ಪರಾಕ್ರಮಗಳು ಈಗ ಎಲ್ಲಿಗೆ ಹೋದವು; ಅಪ್ಪ ಬಳಲಿದಿರಲ್ಲಾ ನಿಮ್ಮ ಪರಾಕ್ರಮದ ಪ್ರಮಾಣವನ್ನು ತಿಳಿದುಕೊಂಡಿರಾ; ಛೇ, ನಿಮಗೂ ಈಗ ಈ ಪರಾಭವವುಂಟಾಯಿತೇ? ವ|| ಎಂದು ಸಾಯುವ ಹಾಗೆ ಹಾಸ್ಯಮಾಡಿ ಕಟ್ಟಿದ ಕಟ್ಟುಗಳನ್ನು ತಾನೇ ಬಿಚ್ಚಿ ಭಾನುಮತಿಗೆ ನಿನ್ನ ಗಂಡನನ್ನೂ ಮೈದುನನನ್ನೂ ಒಪ್ಪಿಸಿಕೊ ಎಂದಳು. ದುರ್ಯೋಧನನು ಹಲ್ಲುಕಿತ್ತ ಕ್ರೂರಸರ್ಪದಂತೆಯೂ ಕೊಂಬುಮುರಿದ ಮದ್ದಾನೆಯಂತೆಯೂ ಉಗುರು ಕತ್ತರಿಸಿದ ಸಿಂಹದಂತೆಯೂ ಗರ್ವಹೀನನಾಗಿ ಪಾಂಡವರ ಮುಖವನ್ನು ನೋಡಲು ನಾಚಿ ಹಸ್ತಿನಾಪುರಕ್ಕೆ ಹೋಗಿ ಜೂಜಿನಲ್ಲಿ ಗೆದ್ದ ರಾಜ್ಯವನ್ನು ನೀತಿಯುಕ್ತವಾಗಿ ಆಳುತ್ತಾ ದುಶ್ಯಾಸನನನ್ನೂ ಯುವರಾಜನನ್ನಾಗಿ ಮಾಡಿ ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಯುಧಿಷ್ಠಿರನು ಕಳುಹಿಸಿದ ಕಿರಾತದೂತನು ತಪಸ್ವಿ ವೇಷದಿಂದ ಹೋಗಿ ದುರ್ಯೊಧನನ ಸಮಾಚಾರವನ್ನೆಲ್ಲ ತಿಳಿದು ಬಂದು ಧರ್ಮರಾಯನಿಗೆ ವಿಜ್ಞಾಪಿಸಿದನು-೪೦. ಒಂದೇ ಮಾತು ಕಿವಿಗಿಂಪಾಗಿಯೂ ಶ್ರೇಯಸ್ಕರವಾಗಿಯೂ ಇರಲು ಸಾಧ್ಯವಿಲ್ಲ. ನಾನು ಕಂಡುದನ್ನು ವಿಜ್ಞಾಪಿಸುತ್ತೇನೆ. ಜೂಜಿನಲ್ಲಿ ಮೋಸದಿಂದ ಗೆದ್ದ ನಿನ್ನ ರಾಜ್ಯವು ಅಂಗಯ್ಯಲ್ಲಿರುವ ಹಾಗೆ ತನಗೆ ಆಜ್ಞಾಧಾರಕವಾಗಿರುವ ಹಾಗೆ ಮಾಡಿಕೊಳ್ಳುವ ದುರ್ಯೊಧನನ ಆ ಹೊಸರಾಜನೀತಿ ಬೃಹಸ್ಪತಿಯನ್ನೂ ಮೀರಿಸಿದೆ. ೪೧. ಮೊದಲು ನಿಷ್ಕರ್ಷೆಯಿಂದ ಒಪ್ಪಿದುದನ್ನು ಕೊಡದೆ ತಪ್ಪಿದವರಿಗೆ ಸೈನ್ಯವನ್ನಟ್ಟದೆ ಕೊಡು ಎಂದು ಸಾಮದಿಂದ ಹೇಳಿ ಕಳುಹಿಸುವನು. ರಾಜ್ಯಾಧಿಕಾರದಿಂದ ಕಳುಹಿಸಿದ ಇವನ ಆಜ್ಞಾಪತ್ರಕ್ಕೆ ರಾಜ್ಯದ ಎಲ್ಲೆಡೆಗಳಲ್ಲಿದ್ದ ಸಾಮಂತರಾಜರು ಕಳುಹಿಸಿದ ಕಳಿಂಗ ದೇಶದ ಉತ್ತಮವಾದ
23
Page #353
--------------------------------------------------------------------------
________________
೩೪೮) ಪಂಪಭಾರತಂ ಕoll ಕುಸಿದಂ ರಿಪುವಿಜಯದ ನಿ
ದ್ರಿಸಿದಂ ಕಂಡಂದಿನಂದಮಂ ತಪ್ಪಿದನಾ | ಲೈಸಕಗಿಯ ನುಡಿದನೆಂಬೀ ಪಿಸುಣನಣಂ ಕೇಳೆನಿಲ್ಲ ಬೀಡಿನೊಳವನಾ, ನೆಗರಿಗನ ಸಾಹಸವೂ ಗೊರೆ ಕೆಲದವರ ಮಾತಿನೊಳ್ ತನ್ನ ಮನಂ | ಬುಗೆ ಮಂತ್ರಪದಕ್ಕುರಗಂ ಸುಗಿವಂತೆವೊಲಗಿದು ಸುಗಿದು ತಲೆಗರೆದಿರ್ಪಂ || ಅಳೆವಿಂತು ರಾಜಕಾರ್ಯದ ತಜನನಗಳಿವಂತು ಮೊಗ್ಗೆ ದೇವರ ಮುಂದಾ | ನಡೆಯೆಂ ಪಿರಿದುಂ ಗಣಪಲ್
ಮಾಸೊಂದಿದನಲ್ಲನಹಿತನೆಚ್ಚಿತ್ತಿರ್ದ೦ | * ವll ಎಂದು ಬಿನ್ನಪಂಗೆಯ್ದು ಕಿರಾತದೂತಂ ಪೋಪುದುಮಾ ಮಾತೆಲ್ಲಮಂ ಕೇಳು ಯಜ್ಞಸೇನತನೂಜೆ ಯಮತನೂಜಂಗಿಂತೆಂದಳಚಂn ನುಡಿವೊಡೆ ರಾಜಕಾರ್ಯ ನಯಮತ್ತಬಲಾಜನದೊಂದು ಬುದ್ಧಿಯ
ತುಡುಪತಿವಂಶ ನೋಡುವೋಡಿದೊಂದಘಟಂ ಬಗವಾಗಳೆಂತು ಕೇಳ್| ನುಡಿಯದೆ ಕೆಮ್ಮಗಿರ್ದೋಡಮಿರಣಮಾಯದ ನಿಮೊಳೆನ್ನುಮಂ ನುಡಿಯಿಸಿದುವಾ ಕುರುಕುಳರ್ಕಳ ಗಯ್ಯಪರಾಧಕೂಟಗಳ್ ೧ ೪೫
ಆನೆಗಳ ಮದೋದಕದ ಧಾರಾಪ್ರವಾಹದಿಂದ ಉಂಟಾದ ಕೆಸರು ಆ ದುರ್ಯೊಧನ ರಾಜನ ಅರಮನೆಯ ಬಾಗಿಲುಗಳ ಸಮೀಪಪ್ರದೇಶದಲ್ಲಿ ಕಡಿಮೆಯೇ ಆಗಿಲ್ಲ. ೪೨. ಶತ್ರುವು ಆಡಿದ ಮಾತಿಗೆ ತಪ್ಪಿದ, ಗೆಲುವಿನಿಂದ ನಿದ್ರಿಸಿದುದನ್ನು ಕಂಡ, ಹಿಂದಿನಿಂದ ಇದ್ದ ರೀತಿಯನ್ನು ತಪ್ಪಿದ, ಸೇವೆಮಾಡುವ ವಿಷಯದಲ್ಲಿ ಕೆಟ್ಟಮಾತನಾಡಿದ ಎಂಬ ಈ ಚಾಡಿಮಾತುಗಳನ್ನೂ ಅವನ ಬೀಡಿನಲ್ಲಿ ಸ್ವಲ್ಪವೂ ಕೇಳಿಲ್ಲ. ೪೩. ಆದರೆ ಪ್ರಸಿದ್ಧನಾದ ಅರಿಕೇಸರಿಯ ಸಾಹಸವು ಒಂದೊಂದು ಸಲ ಪಕ್ಕದವರ ಮಾತಿನ ಮೂಲಕ ತನ್ನ ಮನಸ್ಸನ್ನು ಪ್ರವೇಶಿಸಲು ಮಂತ್ರಮುಗ್ಧವಾದ ಹಾವು ಹೆದರುವ ಹಾಗೆ ಹೆದರಿ ತಲೆಯನ್ನು ಬಗ್ಗಿಸಿಕೊಂಡಿರುತ್ತಾನೆ. ೪೪. ನನಗೆ ತಿಳಿದ ಸಮಾಚಾರವಿಷ್ಟು, ರಾಜಕಾರ್ಯದ ರೀತಿಯನ್ನು ತಿಳಿಯುವುದು ನನಗೆ ಸಾಧ್ಯವೇ? ಪ್ರಭುವಿನ ಮುಂದೆ ಹೆಚ್ಚಾಗಿ ಹರಟುವುದು ನನಗೆ ತಿಳಿಯದು; ಶತ್ರುವಾದ ದುರ್ಯೋಧನನು ಮೈಮರೆತಿಲ್ಲ: ಎಚ್ಚರದಿಂದಿದ್ದಾನೆ. ವ|| ಎಂದು ಬಿನ್ನವಿಸಿ ಕಿರಾತದೂತನು ಹೋಗಲು ಆ ಮಾತೆಲ್ಲವನ್ನೂ ಕೇಳಿ ಬ್ರೌಪದಿಯು ಧರ್ಮರಾಜನಿಗೆ ಹೀಗೆಂದಳು-೪೫. ಹೇಳುವುದಾದರೆ ರಾಜಕಾರ್ಯದ ರೀತಿಯಲ್ಲಿ ಸೀಜನರ ಬುದ್ದಿಯೆಲ್ಲಿ? ಎಲೈ ಚಂದ್ರವಂಶನಾದ ಧರ್ಮರಾಜನೇ ವಿಚಾರಮಾಡುವುದಾದರೆ ಈಗ ನಡೆದಿರುವ ಇದು (ಈ ಕೌರವರ ದುಶ್ಲೇಷೆ) ವಂಶಕ್ಕೆ ಹೊಂದಿಕೊಳ್ಳದಿರುವ ವಿಷಯ (ಅಸಂಗತವಾದುದು) ಕೇಳು ಯೋಚನೆಮಾಡಿ ಹೀಗೂ ಮಾತನಾಡದೆ
Page #354
--------------------------------------------------------------------------
________________
ಕಂii.
ಸಪ್ತಮಾಶ್ವಾಸಂ / ೩೪೯ ಕಂII ಆವಡವಿಗಳೊಳ್ ಪಣ್ಣಲ
ಮಾವಗಮೊಳವಲ್ಲಿಗಳಿಸಿ ಪರಿಪರಿದು ಕರಂ | ತಾವಡಿಗೊಳ್ಳಿ ಭೀಮನ
ಬೇವಸಮಿದು ನಿನ್ನ ಮನಮನೊನಲಿಸಿತಿಲ್ಲಾ || evolt ಪೋಗಿ ಸುಪರ್ವಪರ್ವತದ ಕಾಂಚನರೇಣುಗಳಂ ಪರಾಕ್ರಮೋ
ದ್ಯೋಗದಿನೆತ್ತಿ ತಂದು ನಿನಗಿತ್ತದಟಂ ಬಡಪಟ್ಟು ಬೆಟ್ಟದೊಳ್ | ಪೋಗಿ ತೋಳಲ್ಕು ನಾರ್ಗಳನುಡಲ್ ತರುತಿರ್ದೆಲೆ ಮಾಡಲಾರ್ತನಿ ಬ್ಲಾಗಳೆ ಕೋಪಮಂ ನಿನಗೆ ಸಂಚಿತಶರ್ಯಧನಂ ಧನಂಜಯಂ || ೪೭ ಕಾಯ ಕೇಶದಿನಡವಿಯ ಕಾಯಂ ಪಣುಮನುದಿರ್ಪಿ ತಿಂದಗಲದೆ ನಿಂ | ದೀ ಯಮಳರಾವ ತೆಳದಿಂ ನೋಯಿಸರಯ್ ನಿನ್ನ ನನ್ನಿಕಾಜನ ಮನಮಂ | ಆ ದುಶ್ಯಾಸನನಿಂದನ . ಗಾದ ಪರಾಭವಮನೇನುಮಂ ಬಗೆಯದೊಡಿಂ | ತಾರಮ ತೂವಾರುಮ - ನಾದರದೇಂ ನಿನ್ನ ಮನಕೆ ಚಿಂತೆಯುಮಿಲ್ಲಾ || ಎಮ್ಮಯ್ಯರ ಬೇವಸಮಂ ನೀಂ ಮನದೊಳ್ ನೆನೆಯೆಯಪೊಡಂ ನಿರವಂ | ನೀಂ ಮರುಳೆ ಬಗೆಯದಂತುಂ ಘುಂಬಡವಿಯೊಳಡಂಗಿ ಚಿಂತಿಸುತಿರ್ಪಾ ||
೫೦ ಸುಮ್ಮನಿರಬೇಕೆಂದಿದ್ದರೂ ಇರುವುದಕ್ಕೆ ಅವಕಾಶಕೊಡದೆ ಆ ಕುರುಕುಲದವರು ಮಾಡಿದ ಅಪರಾಧದ ಸಮೂಹಗಳು ನಿಮ್ಮಲ್ಲಿ ನನ್ನನ್ನು ಮಾತನಾಡುವಂತೆ ಮಾಡುತ್ತಿವೆ. ೪೬. ಯಾವ ಕಾಡುಗಳಲ್ಲಿ ಹಣ್ಣುಹಂಪಲುಗಳು ಯಾವಾಗಲೂ ಇರುತ್ತವೆ, ಅಲ್ಲಿಗೆ ಅದನ್ನು ಹುಡುಕಿಕೊಂಡು ಓಡಿ ಅಲೆಯುತ್ತಿರುವ ಈ ಭೀಮನ ಶ್ರಮವು ನಿನ್ನ ಮನಸ್ಸನ್ನು ಕೆರಳಿಸಿಲ್ಲವೇ? ೪೭. ಮೇರುಪರ್ವತಕ್ಕೆ ಹೋಗಿ ಪೌರುಷಪ್ರದರ್ಶನದಿಂದ ಚಿನ್ನದ ಕಣಗಳನ್ನು ನಿನಗೆ ತಂದುಕೊಟ್ಟು ಕೃಶವಾಗಿ ಬೆಟ್ಟದಲ್ಲಿ ತೊಳಲಿ ಉಡುವುದಕ್ಕೆ ನಾರುಗಳನ್ನು ತರುತ್ತಿರುವ ಶೌರ್ಯವನ್ನೇ ಕೂಡಿಟ್ಟ ಧನವಾಗಿ ಉಳ್ಳ ಪರಾಕ್ರಮಶಾಲಿಯಾದ ಧನಂಜಯನೂ (ಅರ್ಜುನನೂ) ನಿನಗೆ ಕೋಪವನ್ನುಂಟು ಮಾಡಲು ಶಕ್ತನಾಗಲಿಲ್ಲವೆ? ೪೮. ಶರೀರದ ಆಯಾಸದಿಂದ ಕಾಡಿನ ಕಾಯನ್ನೂ ಹಣ್ಣನ್ನೂ ಉದುರಿಸಿ ತಿಂದು ನಿಮ್ಮನ್ನು ಅಗಲದೆ ನಿಂತ ಈ ಯಮಳರೂ ಸತ್ಯಸಂಧನಾದ ನಿನ್ನ ಮನಸ್ಸನ್ನು ನೋಯಿಸುವುದಿಲ್ಲವೇ ? ೪೯. ಆ ದುಶ್ಯಾಸನನಿಂದ ನನಗುಂಟಾದ ಅವಮಾನವೇನನ್ನೂ ಎಣಿಸದಿರುವ ನಿನಗೆ ಈ ತೊಗಲುನಾರುಗಳು ಆದರಕ್ಕೆ ಪಾತ್ರವಾದುವೇ ? ಈ ಅನಾಸಕ್ತಿಯೇತಕ್ಕೆ? ನಿನ್ನ ಮನಸ್ಸಿಗೆ ಚಿಂತೆಯೇ ಇಲ್ಲವೇ ? ೫೦. ನಮ್ಮಝುಜನಗಳ ಕಷ್ಟವನ್ನೂ ನೀನು ಮನಸ್ಸಿನಲ್ಲಿ ನೆನೆಯದಿದ್ದರೂ
Page #355
--------------------------------------------------------------------------
________________
೫೧
೩೫೦ | ಪಂಪಭಾರತ
ಶಮಮನೆ ಕೆಯೊಳೊಡ ಬಿ qುಮಂಬುಮಂ ಬಿಸುಟು ತಪಕೆ ನೀಂ ಬಗೆವೊಡೆ ವಿ || ಕ್ರಮಮಂ ಪಗೆಯಂ ಕಿಡಿಸುವ ಶಮದಿಂ ಮುನಿಗಾಯ್ತು ಸಿದ್ದಿ ಭೂಪತಿಗಾಯ್ಕೆ || ತಪ್ಪುಮನೆ ನುಡಿಯೆನೆಂಬುಟ ದೊಪ್ಪದು ನಿನಗಹಿತರೆಯೆ ತಪ್ಪಿರ್ದರವರ್ | ತಪ್ಪಿದ ಬಟೆಕ್ಕೆ ತಪ್ಪಿದ ತಪ್ಪಂ ಗಳ ನಗೊದ್ದಮಲ್ಲದ ತಪ್ಪ !
೫೨ ವ|| ಎಂದ ಪಾಂಚಾಳರಾಜತನೂಜೆಯ ಮಾತಿಂಗೆ ಬೆಂಬಲಂಬಾಯ್ದಂತೆ ಭೀಮಸೇನ ನಿಂತೆಂದಂಕಂ|| ನುಡಿಯದೆ ಪಣತಂ ಬ್ರೌಪದಿ
ನುಡಿದ ತಕ್ಕುದನೆ ಕೇಳಿಮಿಂ ಕೇಳದಿರಿಂ | ನುಡಿಯಲೆಡೆಯಿಲ್ಲ ನಿಮ್ಮ ನುಡಿಯಿಸಿದಪುದೆನ್ನ ಮನದ ಮುನಿಸವನಿಪತೀ || ನಾಲ್ಕುಂ ನೃಪವಿದ್ಯೆಯನಾ ಡಲ್ ಕಲ್ಕುಂ ನೆಯ ಕಲೆಯಿಲ್ಲಾಗದೆ ಸೋ | ಲಿ ನೃಪ ದೂರೆಯ ನೆಲನಂ ವಲ್ಕಲವಸನಕ್ಕೆ ಮಯೂನಾಂಪುದು ಪಂಪೇ ||
೫೩.
೫೪
ಎಲೈ ಹುಚ್ಚೇ ನಿನ್ನ ಸ್ಥಿತಿಯನ್ನು ಯೋಚಿಸಿ ನೋಡು ಈ ಘಮ್ಮೆನ್ನುವ ಕಾಡಿನಲ್ಲಿ ಅಡಗಿಕೊಂಡು ಚಿಂತಿಸುತ್ತಿರಬಹುದೇ? ೫೧. ನೀನು ಶಾಂತಿಗುಣವನ್ನೇ ಅಂಗೀಕರಿಸುವುದಾದರೆ ಬಿಲ್ಲನ್ನೂ ಬಾಣವನ್ನೂ ಬಿಸಾಡಿ ತಪಸ್ಸನ್ನೇ ಅಪೇಕ್ಷಿಸುವು ದಾದರೆ ವಿಕ್ರಮವನ್ನೂ ದ್ವೇಷವನ್ನೂ ಹೋಗಲಾಡಿಸುವ ಶಾಂತಿಯಿಂದ ಋಷಿಗೆ ಸಿದ್ದಿಯಾಗುತ್ತದೆಯೇ ವಿನಾ ರಾಜನಿಗೆ ಸಿದ್ದಿಯಾಗುತ್ತದೆಯೇ (ಅಂದರೆ ಶಾಂತಿಯಿಂದ ಋಷಿಸಿದ್ದಿಯಾಗುತ್ತದೆಯೇ ವಿನಾ ರಾಜಸಿದ್ದಿಯಾಗುತ್ತದೆಯೇ?) ೫೨. ದೋಷವನ್ನೇ ಕುರಿತು ನಾನು ಮಾತನಾಡುವುದಿಲ್ಲವೆಂಬ ಮಾತು ಯೋಗ್ಯವಲ್ಲ; ಶತ್ರುಗಳಾದವರು ತಪ್ಪುಮಾಡಿದ್ದಾರೆ. ಅವರು ತಪ್ಪುಮಾಡಿದ ಬಳಿಕ ನೀನು ತಪ್ಪುಮಾಡಿದರೆ ಆ ತಪ್ಪು ನಿನ್ನ ಸತ್ಯಕ್ಕೆ ಒಪ್ಪದ ತಪ್ಪಾಗುತ್ತದೆಯೇ? ವ| ಎಂಬುದಾಗಿ ಹೇಳಿದ ದೌಪದಿಯ ಮಾತಿಗೆ ಬೆಂಬಲ ಬರುವ ಹಾಗೆ ಭೀಮಸೇನನು ಹೀಗೆಂದನು-೫೩. ಬ್ರೌಪದಿಯು ಅನ್ಯಥಾ ನುಡಿಯದೆ ಯೋಗ್ಯವಾದುದನ್ನೇ ಹೇಳಿದಳು. ನೀವು ಕೇಳಿ, ಬಿಡಿ; ಇನ್ನು ಮಾತನಾಡುವುದಕ್ಕೆ ಅವಕಾಶವೇ ಅಲ್ಲ, ರಾಜನೇ, ನನ್ನ ಮನಸ್ಸಿನ ಕೋಪ ನನ್ನನ್ನೂ ಮಾತನಾಡುವ ಹಾಗೆ ಮಾಡುತ್ತದೆ. ೫೪. ರಾಜನಿಗೆ ಯೋಗ್ಯವಾದ ಸಾಮ, ದಾನ, ಭೇದ, ದಂಡಗಳೆಂಬ ನಾಲ್ಕುಪಾಯಗಳನ್ನೂ ತಿಳಿದಿದ್ದರೂ ನೀನು ಪೂರ್ಣವಾಗಿ ಕಲಿತವನಾಗಲಿಲ್ಲವಲ್ಲ; ಭೂಮಿಯನ್ನು ಸೋಲುವುದುಚಿತವೇ? ಶರೀರಕ್ಕೆ ನಾರುಮಡಿಯನ್ನು ಧರಿಸಿರುವುದು ಹಿರಿಮೆಯೇ ? (ನಾರುಮಡಿಗೆ ಮೆಯ್ಯನ್ನೊಡ್ಡುವುದು
Page #356
--------------------------------------------------------------------------
________________
ಸಪ್ತಮಾಶ್ವಾಸಂ | ೩೫೧ ಉll ನನ್ನಿಗೆ ದಾಯಿಗಂಗೆಳೆಯನೊಪ್ಪಿಸಿದೆಂ ಗಡಿಯೆಂಬ ಮಾತುಗಳ
ನಿನ್ನವು ಕೂರದರ್ ನೆಲನನೊಟ್ಟಜೆಯಿಂ ಕೊಳೆ ಕೊಟ್ಟು ಮುಟ್ಟುಗೆ | ಟ್ಟನ್ನುಮರಣ್ಯದೊಳ್ ನಮದಪಂ ಯಮನಂದನನೆಂಬ ಬನ್ನಮುಂ
ಮುನ್ನಮೆ ಸೋಂಕಿ ಕಲವ ಮಾತುಗಳೆಲ್ಲರ ಪೇಟ್ಟ ಮಾತುಗಳ್ || ೫೫ ಕ೦ll ಸಲೆ ಸಂದಿರ್ಪತ್ತೂಂದುಂ
ತಲೆವರೆಗಂ ನಮಗೆ ಪರಿಭವಂ ಕೃಷ್ಠೆಯ ಮುಂ | ದಲೆಯಂ ಪಿಡಿದೆಳವಲ್ಲಿಯೆ ತಲೆವಿಡಿದ ನಮ್ಮ ಬೀರಮಂ ಕೌರವರುಂ |
೫೬ ಚಂ|| ಮಲೆ ಮಿದುರ್ಕಿ, ಸೊರ್ಕಿ ಸಭೆಯೊಳ್ ಕುಲಪಾಂಸುಲನೀ ಶಿರೀಷ ಕೋ
ಮಲೆಯ ವಿಲೋಲ ನೀಲ ಕಬರೀಭರಮಂ ತೆಗೆವಾಗಳಲ್ಲಿ ಕೆ | ಯ್ಯಲೆ ಸದೆದಂತೆ ಹತ್ತಿ ಬೆರಲಚ್ಚುಗಳಚ್ಚಳದಂತೆ ಕೊಂಕುಗಳ
ತಲೆ ನವಿರೊಂದಿ ಮೂದಲಿಸುವಂತವೊಲಿರ್ದುವು ನಮ್ಮ ವೀರಮಂ ||೫೭ ಮl.
ಅಸಿತೇಂದೀವರಲೋಲಲೋಚನೆಯನಂದಂತಾ ಸಭಾಮಧ್ಯದೊಳ್ ಪಸುವಂ ಮೋದುವವೋಲೆ ಮೊದೆಯುಮದಂ ಕಂಡಂತ ಪಲ್ಲರ್ಟಿ ಕೈ " ರಿಸಿದೆಂ ನಿನ್ನಯ ನನ್ನಿಗಿನ್ನವರಮಾ ದುಶ್ಯಾಸನೋರಸ್ಥಳೋ ಪ್ಲಸ್ಯತಾಸ್ಕಗ್ಗಲಪಾನಮಂ ಬಯಸಿ ಬಾಯ್ ತೇರೈಸೆ ಸೈತಿರ್ಪೆನೇ || ೫೮
ವೈಭವವೇ) ೫೫. ಸತ್ಯಕ್ಕಾಗಿ ದಾಯಾದಿಗಳಿಗೆ ರಾಜ್ಯವನ್ನೂ ಒಪ್ಪಿಸಿದೆವು ಎಂಬುದು ನೀವು ಹೇಳುವ ಮಾತುಗಳು, ಹಿತವಲ್ಲದವರು ರಾಜ್ಯವನ್ನು ಪರಾಕ್ರಮದಿಂದ ಕಿತ್ತುಕೊಳ್ಳಲು ಸಾಧನಸಾಮಗ್ರಿಗಳನ್ನೆಲ್ಲ ನೀಗಿಕೊಂಡು (ನಿಸ್ಸಹಾಯಕನಾಗಿ) ಧರ್ಮರಾಯನು ಕಾಡಿನಲ್ಲಿ ನವೆಯುತ್ತಿದ್ದಾನೆ ಎಂಬ ಅವಮಾನಕರವಾದ ಎಲ್ಲರೂ ಹೇಳುವ ಮಾತುಗಳು ನಮ್ಮನ್ನು ಮೊದಲೇ ಸೋಂಕಿ ಕಣ್ಣನ್ನು ಕೆರಳಿಸುವಂತಹವು ಗಳಾಗಿವೆ. ೫೬. ಪ್ರಸಿದ್ದವಾದ ನಮ್ಮ ಇಪ್ಪತ್ತೊಂದು ತಲೆಮಾರಿನವರೆಗೂ ನಮಗೆ ಅವಮಾನವಾದ ಹಾಗೆಯೇ ಆಯಿತು. ಬ್ರೌಪದಿಯ ಮುಂದಲೆಯನ್ನು ಹಿಡಿದೆಳೆದಾಗಲೇ ಕೌರವರು ನಮ್ಮ ಪರಾಕ್ರಮವನ್ನೂ ಸೆರೆಹಿಡಿದರು. ೫೭. ಅಹಂಕಾರ ದಿಂದ ಮಲೆತು ಉಬ್ಬಿ ಸೊಕ್ಕಿ ಆ ಕುಲಕಳಂಕನಾದ ದುಶ್ಯಾಸನನು ಸಭೆಯಲ್ಲಿ ಬಾಗೆಯ ಹೂವಿನಂತೆ ಕೋಮಲವೂ ಮೃದುವೂ ಚಂಚಲವೂ ಕರಗೂ ಇರುವ ಕೇಶರಾಶಿಯನ್ನು ಎಳೆದಾಗ ಕಯ್ಯಲ್ಲಿಯೇ ಹೊಡೆದ ಹಾಗೆ ಬೆರಳಿನ ಗುರುತುಗಳು ಅಂಟಿಕೊಂಡು ಮುದ್ರಿಸುವ ಹಾಗೆ ಇರುವ ಕೊಂಕಾದ ಮುಂಗುರುಳು ತಲೆಯ ಕೂದಲುಗಳೊಡನೆ ಸೇರಿ ನಮ್ಮವೀರ್ಯವನ್ನು ಮೂದಲಿಸುವಂತಿವೆ. ೫೮. ಕನೈದಿಲೆಯಂತೆ ಚಂಚಲವಾದ ಕಣ್ಣುಳ್ಳ ಬ್ರೌಪದಿಯನ್ನು ಆ ದಿನ ಆ ಸಭಾಮಧ್ಯದಲ್ಲಿ ಪಶುವನ್ನು ಹೊಡೆಯುವ ಹಾಗೆ ಹೊಡೆದುದನ್ನು ಕಂಡು ನಿನ್ನ ಸತ್ಯಕ್ಕಾಗಿ ಹಲ್ಲುಕಚ್ಚಿಕೊಂಡು ಇಲ್ಲಿಯವರೆಗೆ ಸಹಿಸಿದನು. ಆ ದುಶ್ಯಾಸನನ ಎದೆಯ ಬಿಸಿರಕ್ತವನ್ನು ಪಾನಮಾಡಲು ನನ್ನ ಬಾಯಿ ಬಯಸಿ ಆತುರ ಪಡುತ್ತಿರುವಾಗ ನಾನು ಇನ್ನು ಸುಮ್ಮನೆ ಇರುತ್ತೇನೆಯೇ?
Page #357
--------------------------------------------------------------------------
________________
೩೫೨/ ಪಂಪಭಾರತಂ
ವ|| ಎಂದು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು ಪಗೆವರಿರ್ದ ದೆಸೆಯಂ ನೋಡಿ ತಳರಲ್ ಬಗದ ಭೀಮಸೇನನಂ ಧರ್ಮಪುತ್ರಂ ಕೋಪತಾಪದಿಂ ಮಸಗಿದ ಮದಗಜಮನೆ ಮಾಣಿಸುವಂತೆಂತಾನುಂ ಮೃದುವಚನಂಗಳಿಂ ಮುಳಿಸನಾಳಿಸುತಿರ್ದನಿರ್ಪನೆಗಂಚಂll - ಕನಕ ಪಿಶಂಗ ತುಂಗ ಜಟಕಾವಳಯಂ ಕುಡುಮಿಂಚಿನೋಳಿಯಂ
ನೆನೆಯಿಸೆ ನೀಲ ನೀರದ ತನುಚ್ಚವಿ ಭಸ್ಮ ರಜೋವಿಲಿಪ್ತಮಂ | ಜನ ಗಿರಿಯಂ ಶರಜ್ಜಳಧರಂ ಕವಿದಂತಿರೆ ಚೆಲ್ವನಾಳು ಭೋಂ
ಕನೆ ನಭದಿಂದಮಂದಿಟಿದನಲ್ಲಿಗೆ ವೃದ್ಧ ಪರಾಶರಾತ್ಮಜಂ || ೫೯ ವ|| ಅಂತು ನಭೋವಿಭಾಗದಿಂ ಧರಾವಿಭಾಗಕ್ಕಿಟತಂದ ಕೃಷ್ಣಪಾಯನನಂ ಕಂಡಜಾತ ಶತ್ತು ತನ್ನೆಳೆದ ಸ್ಪಟಿಕ ಶಿಳಾತಳದ ಪಟ್ಟಕದಿಂದಿಳಿದು ನಿಜಾನುಜಸಹಿತಮಿದಿರ್ವಂದು ಧರಾತಳ ನಿಮ್ಮ ಲಲಾಟಪಟ್ಟಂ ಸಾಷ್ಟಾಂಗವೆಜಿಗಿ ಪೊಡವಟ್ಟು ತದೀಯಾಶೀರ್ವಾದಮನಾಂತು ತಚಿಳಾತಳದೊಳ್ ಕುಳ್ಳಿರಿಸಿ ವನಕುಸುಮಂಗಳಿಂದರ್ಘಮತಿ ಸರೋವರಜಲಂಗಳಂ ಪದಪತ್ರ ಪುಟಂಗಳಿಂ ತಂದು ಪದಪದಂಗಳಂ ಕರ್ಚಿ ತತ್ತಾದ ಪವಿತ್ರೋದಕಂಗಳನನಿಬರು ಮುತ್ತಮಾಂಗ ದೂಳ್ ತಳಿದುಕೊಂಡಿರ್ದಾಗಳ ಸತ್ಯವತೀನಂದನಂ ತನ್ನ ಮಕ್ಕಳ ಸಾಯಸಂಗಳ ಮನ್ಯುಮಿಕ್ಕು ಕಣ್ಣನೀರಂ ನೆಗಪ ಮಹಾಪ್ರಸಾದವೆಂದು ಧರ್ಮನಂದನನಿಂತೆಂದಂ
ವll ಎಂದು ತನ್ನ ಗದಾದಂಡವನ್ನು ಭುಜಾದಡದಲ್ಲಿ ಅಳವಡಿಸಿಕೊಂಡು ಶತ್ರುಗಳಿದ್ದ ಕಡೆಯನ್ನು ನೋಡಿ ಹೊರಡಲು ಯೋಚಿಸಿದ ಭೀಮಸೇನನನ್ನು ಧರ್ಮರಾಜನು ಕೋಪಾಗ್ನಿಯಿಂದ ಕೆರಳಿದ ಮದಗಜವನ್ನು ಸಂತೈಸುವಂತೆ ಹೇಗೋ ಮೃದುವಾದ ಮಾತುಗಳಿಂದ ಸಮಾಧಾನಮಾಡಿದನು. ಅಷ್ಟರಲ್ಲಿ-೫೯. ಹೊಂಬಣ್ಣದ ಎತ್ತರವಾದ ಜಟೆಯ ಸಮೂಹವು ಕುಡಿಮಿಂಚಿನ ಸಮೂಹವನ್ನು ಜ್ಞಾಪಿಸುತ್ತಿರಲು ವಿಭೂತಿಯಿಂದ ಲೇಪಿಸಿದ ಕೃಷ್ಣಮೇಘದಂತಿದ್ದ ಶರೀರಕಾಂತಿಯು ಅಂಜನಾದ್ರಿಯನ್ನು ಶರತ್ಕಾಲದ ಮೋಡಗಳು ಕವಿದಂತಿರಲು ಸೌಂದರ್ಯದಿಂದ ಕೂಡಿ ವೃದ್ಧನಾದ ವ್ಯಾಸಮಹರ್ಷಿಯು ಇದ್ದಕ್ಕಿದ್ದ ಹಾಗೆ ಆ ದಿನ ಆಕಾಶದಿಂದ ಅಲ್ಲಿಗೆ ಇಳಿದು ಬಂದನು. ವ|| ಹಾಗೆ ಆಕಾಶಭಾಗದಿಂದ ಭೂಭಾಗಕ್ಕೆ ಇಳಿದು ಬಂದ ವ್ಯಾಸಮಹರ್ಷಿ ಯನ್ನು ನೋಡಿ ಧರ್ಮರಾಯನು ತಾನು ಏರಿದ್ದ ಸ್ಪಟಿಕಶಿಲಾತಳಪೀಠದಿಂದ ಕೆಳಗಿಳಿದು ತನ್ನ ತಮ್ಮಂದಿರೊಡನೆ ಇದಿರಾಗಿ ಬಂದು ಭೂಮಿಯಲ್ಲಿಟ್ಟ ಮುಖಮಂಡಲವುಳ್ಳವನಾಗಿ ಸಾಷ್ಟಾಂಗ ನಮಸ್ಕಾರಮಾಡಿ ಅವನ ಹರಕೆಗಳನ್ನು ಪಡೆದು ಆ ಶಿಲಾಪಟ್ಟದಲ್ಲಿಯೇ ಅವನನ್ನು ಕುಳ್ಳಿರಿಸಿ ಕಾಡುಹೂವುಗಳಿಂದ ಅರ್ಭ್ಯವನ್ನು ಕೊಟ್ಟು ಕಮಲದೆಲೆಗಳಲ್ಲಿ ಸರೋವರದ ನೀರನ್ನು ತಂದು ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕವನ್ನು ಎಲ್ಲರೂ ತಲೆಯಲ್ಲಿ ಧರಿಸಿಕೊಂಡರು. ವ್ಯಾಸಮಹರ್ಷಿಯು ತನ್ನ ಮೊಮ್ಮಕ್ಕಳ ವಿಶೇಷವಾದ ಆಯಾಸ(ಶ್ರಮ)ಕ್ಕಾಗಿ ದುಃಖಮೀರಿ ಕಣ್ಣ ನೀರನ್ನು ತುಂಬಿಕೊಂಡರು. ಅವರು ಬಂದುದು ಪರಮಾನುಗ್ರಹವೆಂದು ಧರ್ಮರಾಜನು ಅವರನ್ನು ಕುರಿತು ಹೀಗೆಂದನು
Page #358
--------------------------------------------------------------------------
________________
ಉ||
ನೀಗಿದುದಿಗಳಮ್ಮ ವನವಾಸಪರಿಶ್ರಮಮಾಗಳಾಳವಾ ಸಾಗರ ಮೇಖಳಾವೃತ ಧರಿತ್ರಿಯನೀಗಳಡಂಗಿತಮ್ಮ ಹೈ ದ್ರೋಗಮನೇಕ ಮಂಗಳಪರಂಪರೆಗಳ್ ದೊರೆಕೊಂಡುವೀಗಳೇ ನಾಗದೆ ಪೇ ಭವಚ್ಚರಣಪದ್ಮನಿರೀಕ್ಷಣದಿಂ ಮುನೀಶ್ವರಾ ||
ಕಂ11
ಆಪಯೋಧಿಯೊಳಗ
ತ್ಯಾಪತ್ತೆಂದುಳ್ಳಿಮುಟ್ಟಿ ನಮವೆಮಗೆ ಶರಣ್ |
ಸಪ್ತಮಾಶ್ವಾಸಂ |೩೫೩
ಪಾಪಹರ ನೀಮ ಬಗೆದಮ
ಗಾಪತ್ಪತಿಕಾರಮಾವುದೀಗಳೆ ಬೆಸಸಿಂ ||
ವ|| ಎಂಬುದುಮಾ ಮುನೀಂದ್ರನಾಮುಮಂತೆಂದ ಬಂದವೆಂದು
ಕಂ
ಸುರರ್ಗಮೃತಮನುಂತ ಕಳಾ
ತರದಿಂದಿತ್ತಸಿಯನಾದ ಚಂದ್ರನವೋಲ್ ಭೂ | ಭರಮಂ ನನ್ನಿಗೆ ದಾಯಿಗೆ ರ್ಗಿರದಿತ್ತೆಡರೊತ್ತ ನೀನೆ ಧನ್ಯನೆಯಲ್ಲೇ ||
20
೬೧
وه
ನೀಂ ಬೇಮಗೆ ಸುಯೋಧನ
ನೇಂ ಬೇಜಯ ಕೂಸುತನದೊಳಾದೊಡಮಿನ್ನೇ | ನೆಂಬುದೂ ಪಿರಿದೈವರೊಳಂ
ಪಂಬಲ್ ಗುಣಪಕ್ಷಪಾತಮವುದು ನಿಮ್ಮೊಳ್ 11 ವ|| ಎಂದು ತನ್ನ ವರ್ತನಮುಂ ಮೋಹಮನುಂಟುಮಾಡಿ ಮತ್ತಮಿಂತೆಂದಂ
೬೩
೬೦. ಎಲೈ ಮುನೀಶ್ವರನೇ ನಿಮ್ಮಪಾದಕಮಲದ ದರ್ಶನದಿಂದ ನಮ್ಮವನವಾಸದ ಆಯಾಸಗಳೆಲ್ಲವೂ ಮಾಯವಾದುವು. ಸಾಗರವೆಂಬ ಒಡ್ಯಾಣದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ನಾವು ಈಗ ಆಳಿದವರಾದೆವು. ನಮ್ಮ ಹೃದಯಬೇನೆಗಳು ಅಡಗಿದುವು. ನಮಗೆ ಅನೇಕ ಶುಭಪರಂಪರೆಗಳುಂಟಾದುವು. ಇನ್ನೇನುತಾನೆ ಆಗವು ? ೬೧, ಆಪತ್ತುಗಳೆಂಬ ಸಮುದ್ರದಲ್ಲಿ ಅತಿಯಾದ ಅಪಾಯಗಳಿಂದ ಹೆದರಿ ಮುಳುಗಿ ಕೃಶವಾಗುತ್ತಿರುವ ನಮಗೆ ಪಾಪ ಹೋಗಲಾಡಿಸುವ ನೀವೇ ಶರಣು(ಆಶ್ರಯ). ನೀವು ಯೋಚಿಸಿ ಈ ಆಪತ್ತಿಗೆ ಪರಿಹಾರವಾವುದೆಂಬುದನ್ನು ಈಗಲೆ ತಿಳಿಸಿ. ವ|| ಎನ್ನಲು ಆ ಋಷಿಶ್ರೇಷ್ಠನು ನಾವೂ ಅದಕ್ಕಾಗಿಯೇ ಬಂದಿದ್ದೇವೆ ಎಂದನು. ೬೨. (ಯಾವ ಪ್ರತಿಫಲವೂ ಇಲ್ಲದೆ) ಸುಮ್ಮನೆ ದೇವತೆಗಳಿಗೆ ತನ್ನ ಕಲಾಸಮೂಹಗಳಿಂದ ಅಮೃತವನ್ನು ಕೊಟ್ಟು ಕೃಶವಾದ ಚಂದ್ರನ ಹಾಗೆ ಸತ್ಯಕ್ಕಾಗಿ ದಾಯಾದ್ಯರಿಗೆ ಭೂಭಾರವನ್ನು ಕೊಟ್ಟು ಅಪಾಯಕ್ಕೊಳಗಾದ ನೀನೇ ಧನ್ಯನಲ್ಲವೇ? ೬೩. ಬಾಲ್ಯದಿಂದ ನಮಗೆ ನೀವು ಬೇರೆಯಲ್ಲ ಸುಯೋಧನನು ಬೇರೆಯಲ್ಲ ಈಗ ಹೇಳುವುದು ತಾನೆ ಏನಿದೆ. ನಿಮ್ಮ ಅಯ್ದು ಜನರಲ್ಲಿ ಗುಣಪಕ್ಷಪಾತದಿಂದ ನನ್ನ ಮೆಚ್ಚಿಗೆ (ನಿಮ್ಮಲ್ಲಿ ಹೆಚ್ಚಾಗಿದೆ ವ ಎಂದು ಹೇಳಿ ತನ್ನ ನಡತೆಯನ್ನೂ ಮೋಹವನ್ನೂ
Page #359
--------------------------------------------------------------------------
________________
೩೫೪) ಪಂಪಭಾರತಂ , ಕ೦ll ಪನ್ನೆರಡು ವರುಷದವಧಿಯು
ಮಿಜಯಲ್ ಬಂದುದಹಿತನಿಳೆಯಂ ಕುಡನಾ | ಸನ್ನಂ ಕಾಳೆಗಮಪಿಯಿರೆ
ಪನ್ನಗಕೇತನನ ಚಲದ ಕಲಿತನದಳವಂ || ಅನವದ್ಯಂ || ಪರಶುರಾಮನನಂಜಿಸಿ ಬೀರಕ್ಕಾಗರಮಾದ ನದೀಜನೇ
ದೊರೆಯನೇದೊರೆಯಂ ಗಳ ಕುಂಭಪೊದ್ದವನಾತನ ಪುತ್ರನೇ | ದೊರೆಯನೇದೊರೆಯಂ ಕೃಪನಂತಾ ಪಾಟಿಯೊಳಂಕದ ಕರ್ಣನೇ
ದೊರೆಯನಿಂತಿವರೊರ್ಬರಿತೊರ್ಬರ್ ಗರ್ವಿತರಗಳಮಲ್ಲರೇ || ೬೫ ಕಂ| ಪ್ರಳಯದುರಿ ಕಾಳಕೂಟದ
ಗುಳಿಗೆ ಪುರಾಂತಕ ಲಲಾಟನೇತ್ರಾನಳಂ | ದಳವಿಗಮಗ್ಗಳಮವರ್ಗಳ ಮುಳಿಸುಗಳುಂ ಮುಳಿದು ತುಡುವ ದಿವೈಷುಗಳುಂ ||
೬೬ ವಗ ಅದು ಕಾರಣದಿಂದವರಂ ಗೆಲ್ಯಾಗಳ ವಿಕ್ರಮಾರ್ಜುನನಲ್ಲದೆ ಗೆಲ್ಲನದಳಂದಾತಂಗೆ ದಿವ್ಯಾಸಂಗಳಂ ಪಡೆಯುದದಂ ಪಡೆವುಪಾಯಮುಮಂ ಮಂತ್ರಮುಮನುಪದೇಶಂಗಯ್ಯ ಬಂದವೆಂದು ಯುಧಿಷ್ಠಿರಂಗೆ ವೇಚ್ಚು ವಿಕ್ರಮಾರ್ಜುನಂಗೆ ಮಂತ್ರಾಕ್ಷರಂಗಳನುಪದೇಶಂಗೆಯ್ದು ಗುಹ್ಯಕನೆಂಬನಂ ಸರಣಮಾತ್ರದೊಳ್ ಬರಿಸಿ ಸಾಹಸಾಭರಣನನಿಂದ್ರಕೀಲನಗೇಂದ್ರಮನಯಿಸಿ ಬರ್ಪುದೆಂದು ಪೇಳ್ವುದುಂ ಧರ್ಮಪುತ್ರನಾ ಮುನೀಂದ್ರಂಗೆ ಸಾಷ್ಟಾಂಗವೆಂಗಿ ಪೊಡವಡೆ
ಸ್ಪಷ್ಟಪಡಿಸುವ ಹಾಗೆ ಪುನಃ ಹೀಗೆಂದನು -೬೪, ಇನ್ನೇನು ಹನ್ನೆರಡು ವರ್ಷದ ಗಡುವು ಮುಗಿಯುತ್ತ ಬಂದಿದೆ. ಶತ್ರುವಾದ ಕೌರವನು ರಾಜ್ಯವನ್ನು ತಾನಾಗಿ ಕೊಡುವುದಿಲ್ಲ. ದುರ್ಯೋಧನನ ಹಟದ ಮತ್ತು ಪರಾಕ್ರಮದ ಪ್ರಮಾಣವು ನಿಮಗೆ ತಿಳಿಯದೇ ? ೬೫. ಪರಶುರಾಮನನ್ನು ಹೆದರಿಸಿ ಪರಾಕ್ರಮಕ್ಕೆ ಆವಾಸಸ್ಥಾನವಾದ ಭೀಷ್ಮನು ಸಾಮಾನ್ಯನೇ ? ಕುಂಭಸಂಭವನಾದ ದ್ರೋಣನು ಸಾಮಾನ್ಯನೇ? ಅವನ ಮಗನಾದ ಅಶ್ವತ್ಥಾಮನೇನು ಸಾಮಾನ್ಯನೇ, ಕೃಪನೇನು ಸಾಮಾನ್ಯನೇ? ಅದೇ ಕ್ರಮದಲ್ಲಿ ಶೂರನಾದ ಕರ್ಣನು ಯಾರಿಗೆ ಸಮಾನನು? ಈ ಗರ್ವಿಷ್ಠರಾದ ಇವರಲ್ಲಿ ಒಬ್ಬರಿಗಿಂತೊಬ್ಬರು ಮತ್ತೂ ಶ್ರೇಷ್ಠರು. ೬೬. ಅವರ ಕೋಪಗಳೂ ಕೋಪಿಸಿಕೊಂಡು ಪ್ರಯೋಗಿಸುವ ದಿವ್ಯಾಸ್ತಗಳೂ ಪ್ರಳಯಕಾಲದ ಬೆಂಕಿ ಕಾಳಕೂಟವೆಂಬ ವಿಷದ ಗುಳಿಗೆ ಈಶ್ವರನ ಹಣೆಗಣ್ಣಿನ ಅಗ್ನಿ ಇವುಗಳ ಪ್ರಮಾಣಕ್ಕಿಂತ ಅತಿಶಯವಾದುವು. ವ|| ಆದ ಕಾರಣದಿಂದ ಅವರನ್ನು ಗೆಲ್ಲಬೇಕಾದರೆ ವಿಕ್ರಾಮಾರ್ಜುನನಲ್ಲ ದವನು ಗೆಲ್ಲಲಾರ. ಆದುದರಿಂದ ಅವನನ್ನು ದಿವ್ಯಾಸ್ತಗಳನ್ನು ಗೆಲ್ಲುವಂತೆ ಹೇಳಬೇಕು. ಅದನ್ನು ಪಡೆಯುವ ಉಪಾಯವನ್ನೂ ಮಂತ್ರವನ್ನೂ ಉಪದೇಶಮಾಡು ವುದಕ್ಕಾಗಿಯೇ ಬಂದಿದ್ದೇವೆ ಎಂಬುದಾಗಿ ಧರ್ಮರಾಜನಿಗೆ ಹೇಳಿ ವಿಕ್ರಮಾರ್ಜುನನಿಗೆ ಮಂತ್ರಾಕ್ಷರಗಳನ್ನು ಉಪದೇಶಮಾಡಿದನು. ಗುಹ್ಯಕನೆಂಬುವನನ್ನು ಸ್ಮರಿಸಿಕೊಳ್ಳುವುದರಿಂದಲೇ ಬರಮಾಡಿ ಸಾಹಸಾಭರಣನಾದ ಅರ್ಜುನನನ್ನು ಇಂದ್ರಕೀಲಪರ್ವತವನ್ನು ಸೇರಿಸಿ ಬರುವುದು ಎಂದು ಹೇಳಿದನು. ಧರ್ಮರಾಜನು
Page #360
--------------------------------------------------------------------------
________________
೬೭
ಸಪ್ತಮಾಶ್ವಾಸಂ | ೩೫೫ ಪರಸಿ ಪಯೋಧರಪಥಕೊಗೆದನಿತ್ತ ವಿಕ್ರಾಂತತುಂಗನುಂ ಧರ್ಮಪುತ್ರಂಗಂ ವಾಯುಸುತಂಗಂ ಪೊಡವಟ್ಟು ಬೆಸಕೇಳ್ವೆನೆಂದಾಗಲ್ ಪಾಂಚಾಳರಾಜತನೂಜೆಯಿಂತೆಂದಳಕಂ| ಬಗೆಯದೆ ಮಯೋಕಮಂ ಬಗೆ :
ಪಗೆವರ ಕಡುವೆರ್ಚನೆನ್ನ ಪೂಣೆಯನೆರ್ದೆಯೊಳ್ | ಬಗ ಮುನಿಯ ಮಂತ್ರಪದಮಂ
ಬಗೆ ಕೂಡುಗೆ ನಿನ್ನ ಬಗೆದ ಬಗೆಯೋಳ್ ಪಾರ್ಥಾ || ವ|| ಎಂದು ಬುದ್ಧಿವೇಚ್ಚು ಮನದಟಕಂ ಮನೋವೇಗದಿಂ ಪರಿಯೆ ಸೈರಿಸಲಾಗಿದೆಉll ಬಳ್ಳಳ ನೀಳ ಕಣಲರ ತಿಮೆಯಿಂ ಕರೆಗಣಿ ಬೆಳಡ
ಅಳ್ವರಿಯಲ್ಯಮಾಟಿಸಿದೊಡೊಯ್ಯನೆ ಮಂಗಳ ಭಂಗ ಭೀತಿಯಂ | ತಳ್ಳದೆ ಮಾಡ ಬಾಷ್ಪಜಳಮಂ ಕಳದನೀಯ ಸಂಬಳಂ ಗೊಲ್ವವೊಲಾ ತಳೋದರಿಯ ಚಿತ್ರಮನಿಲ್ಕಟಿಗೊಂಡನರ್ಜುನಂ || ೬೮
ವ| ಅಂತು ಯಾತ್ರೋದ್ಯುಕ್ತನಾಗಿ ಗುಹಕನ ಹೆಗಲನೇ ಗಂಧೇಭ ವಿದ್ಯಾಧರಂ ವಿದ್ಯಾಧರನಂತೆ ಗಗನತಳಕೊಗೆದು ಮಹೇಂದ್ರಕೀಲಾಭಿಮುಖನಾದಾಗಚಂ|| ಕಡವಿನ ಕಂಪಡಂಗಿದುದು ಜಾದಿಯ ಕಂಪೊದವಿತ್ತು ಸೋಗೆಯು
ರ್ಕುಡುಗಿದುದಂಚೆಯುರ್ಕು ಪೊಸತಾಯ್ತು ಮುಗಿಲ್ಗಳ ಕರ್ಪುಪೀ ನಮೋ | ಗಡಿಸಿದುದಿಂದುಮಂಡಳದ ಕರ್ಪೆಸೆದತ್ತು ಘನಾಗಮಂ ಮೊದ ಅಡ ಶರದಾಗಮಂ ನೆಣಿಯೆ ಪರ್ಬೆ ಸಮಸ್ತ ಮbವಿಭಾಗಮಂ || ೬೯
ಋಷಿಶ್ರೇಷ್ಠನಿಗೆ ಸಾಷ್ಟಾಂಗಪ್ರಣಾಮ ಮಾಡಿ ನಮಸ್ಕರಿಸಲು ವ್ಯಾಸನು ಆಶೀರ್ವದಿಸಿ ಆಕಾಶಪ್ರದೇಶಕ್ಕೆ ತೆರಳಿದನು. ಈಕಡೆ ಪರಾಕ್ರಮದಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಅಪ್ಪಣೆಯನ್ನು ಕೇಳುತ್ತಿದ್ದೇನೆ ಎಂದು ಹೇಳಿದಾಗ ದೌಪದಿಯು ಹೀಗೆಂದಳು-೬೭.ನಿನ್ನ ಶರೀರಸೌಖ್ಯವನ್ನು ಚಿಂತಿಸದೆ ಶತ್ರುಗಳ ಹೆಚ್ಚಿನ ಅಭಿವೃದ್ಧಿಯನ್ನೂ ನನ್ನ ಪ್ರತಿಜ್ಞೆಯನ್ನೂ ಋಷಿಯ ಮಂತ್ರೋಪದೇಶವನ್ನೂ ಹೃದಯದಲ್ಲಿ ಚಿಂತಿಸು, ಅರ್ಜುನ ನಿನ್ನ ಇಷ್ಟಾರ್ಥಸಿದ್ದಿ ಯಾಗಲಿ ವ|| ಎಂದು ಬುದ್ಧಿಹೇಳಿ ಮನಸ್ಸಿನ ಪ್ರೀತಿಯು ಮನೋವೇಗದಿಂದ ಹರಿಯುತ್ತಿರಲು ಸಹಿಸಲಾರದೆ ೬೮, ಅತ್ಯಂತ ದೀರ್ಘವಾಗಿ ಬೆಳೆದಿರುವ ಹೂವಿನಂತಿರುವ ಕಣ್ಣುಗಳ ಮುಚ್ಚಿದ ರೆಪ್ಪೆಯಿಂದ ಎಲ್ಲೆ ಮೀರಿ ಬಿಳಿಯ ಕಾಂತಿ ಸಮುದ್ರವು ಹರಿಯುವುದಕ್ಕೆ ಬಯಸಲು ಅಮಂಗಳವಾಗುತ್ತದೆಯೆಂಬ ಭಯದಿಂದ ಕಣ್ಣೀರನ್ನು ಒರಸಿ ಬ್ರೌಪದಿಯು ಒಂದು ಮುತ್ತನ್ನು ಕೊಡಲು (ಚುಂಬಿಸಲು) ಅವಳಿಂದ ದಾರಿಯ ಬುತ್ತಿಯನ್ನು ಪಡೆಯುವ ಹಾಗೆ ಆ ಕೃಶಾಂಗಿಯಾದ ಬ್ರೌಪದಿಯ ಮನಸ್ಸನ್ನು ಅರ್ಜುನನು ಸೆಳೆದುಕೊಂಡನು. ವರ ಹಾಗೆ ಪ್ರಯಾಣದಲ್ಲಿ ಯಕ್ಷನ ಹೆಗಲನ್ನೇರಿ ಗ೦ಧೇಭವಿದ್ಯಾಧರನಾದ ಅರ್ಜುನನು ವಿದ್ಯಾಧರನಂತೆ ಆಕಾಶಕ್ಕೆ ತೆರಳಿ ಮಹೇಂದ್ರಕೀಲದ ಕಡೆಗೆ ನಡೆದನು. ೬೯. ವರ್ಷಾಕಾಲವು ಕಳೆದು ಶರತ್ಕಾಲವು ಪ್ರಾಪ್ತವಾಗಲು ಕದಂಬಪುಷ್ಪಗಳ ವಾಸನೆಯು ಅಡಗಿಹೋಯಿತು. ಜಾಜಿಯ
Page #361
--------------------------------------------------------------------------
________________
೩೫೬ | ಪಂಪಭಾರತ
ಅಳಿ ಬಿರಿದಿರ್ದ ಜಾದಿಯೊಳ ಪಲೊರೆಯುತ್ತಿರೆ ಹಂಸ ಪೂತ ಪೂ ಗೋಳದೊಳೆ ರಾಗಿಸುತ್ತಿರೆ ಶುಕಾವಳಿ ಬಂಧುರ ಗಂಧಶಾಳಿ ಸಂ | ಕುಳದೊಳೆ ಪಾಯು ವಾಯು ನಲಿಯುತ್ತಿರೆ ಸಾರೆ ಚಕೋರಮಿಂದುಮಂ
ಡಳ ಗಳಿತಾಮೃತಾಸವಮನುಂಡುಸಿರುತ್ತಿರೆ ಚೆಲ್ಲು ಶಾರದಂ || ೭೦ | ಮ|| ಪುಳಿಯೊಳ್ ಕರ್ಚಿದ ಬಾಳ ಬಣ್ಣಮನೆ ಪೋಲ್ಯಾಕಾಶಮಾಕಾಶಮಂ
ಡಳಮಂ ಪರ್ವಿದ ಬೆಳುಗಿಲ್ ಮುಗಿಲ ಬೆಳ್ಕೊಳೊಕ್ಕು ತಳ್ಕೊಮ್ಮೆ ಬ | ಧ್ವಳ ನೀಳಿರ್ದ ದಿಶಾಳಿಶಾಳಿವನ ಗಂಧಾಂಧ ದ್ವಿರೇಖಾಳಿ ಕ ಸ್ಫೂಳಿಸಿತ್ತೊರ್ಮೆಯ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ |೭೧
ವ|| ಆಗಳ್ ವಿಜಯಂ ತನ್ನ ವಿಜಯಶ್ರೀಯ ಬರವಿಂಗಿದಿರ್ವಂದಂತ ಬಂದ ಶರತ್ಕಾಲಶ್ರೀಯನುತ್ಕಂಠಿತಹೃದಯನಾಗಿ ಮೆಚ್ಚಿ ನೋಡುತ್ತುಂ ಬರ್ಪನ್ನೆಗಂ ಮುಂದೆ ಶಾರದ ನೀರದಂಗಳಿಲ್ಲಮೊಂದೆಡೆಗೆ ತರಳೊಟ್ಟಿ ಚಿಟ್ಟಾದಂತಿರ್ದ ನೀಹಾರಗಿರಿಯಂ ಕಂಡಿದಾವುದೆಂದು ಬೆಸಗೊಳೆ ಗುಹಕನಿಂತೆಂದಂಮll : ವಿದಳಕ್ಕುಂದ ಶಶಾಂಕ ಶಂಖಧವಳಂ ಗ೦ಧೇಭ ದಾನಾಂಬು ಪೂ
ರ್ಣ ದರೀ ಸುಂದರ ಕಂದರಂ ಮೃಗಪತಿ ಪ್ರಧಾನ ಗರ್ಜದ್ಯುಹಂ | ಮದಿರೋನು ನಿಳಿಂದ ಕಿಂಪುರುಷ ಕಾಂತಾರಬ್ಧ ಸಂಗೀತವೂ ಓದುದಲೇ ಸುರ ಸಿದ್ಧ ದಂಪತಿ ರತಿ ಶ್ರೀ ರಮ್ಮ ಹೈಮಾಚಳಂ || ೭೨
ವಾಸನೆಯು ಹೆಚ್ಚಿತು. ನವಿಲಿನ ವೈಭವವು ನಿಂತಿತು. ಹಂಸದ ವೈಭವವು ಹೊಸದಾಗಿ ಬಂದಿತು. ಮೋಡಗಳ ಕಪ್ಪು ಸಂಪೂರ್ಣವಾಗಿ ಹಿಂಜರಿಯಿತು. ಚಂದ್ರಮಂಡಲದ ಕಪ್ಪುಮಚ್ಚೆಯು ಪ್ರಕಾಶಮಾನವಾಯಿತು. ೭೦. ದುಂಬಿಗಳು ಅರಳಿದ ಜಾಜಿಯಲ್ಲಿ ಝೇಂಕರಿಸಿದುವು. ಹಂಸಪಕ್ಷಿಯು ಸುಮಭರಿತವಾದ ಪುಷ್ಟಸರೋವರದಲ್ಲಿ ಸಂತೋಷಪಡುತ್ತಿತ್ತು. ಗಿಳಿಗಳ ಸಮೂಹವು ಮನೋಹರವಾದ ಸುಗಂಧದಿಂದ ಕೂಡಿದ ಬತ್ತದ ಸಮೂಹದಲ್ಲಿ ನುಗ್ಗಿ ನುಗ್ಗಿ ನಲಿದುವು. ಪಕ್ಕದಲ್ಲಿಯೇ ಚಕೋರ ಪಕ್ಷಿಯು ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತವೆಂಬ ಮಕರಂದವನ್ನುಂಡು ಶಬ್ದಮಾಡಿತು. ಇವುಗಳಿಂದ ಶರತ್ಕಾಲವು ಸುಂದರವಾಯಿತು. ೭೧. ಹುಳಿನೀರಿನಲ್ಲಿ ತೊಳೆದ ಕತ್ತಿಯ ನೀಲಿಯ ಬಣ್ಣವನ್ನೇ ಹೋಲುವ ಆಕಾಶ, ಆಕಾಶಪ್ರದೇಶವನ್ನು ಹಬ್ಬಿರುವ ಬಿಳಿಯ ಮೋಡ, ಮೋಡಗಳ ಬಿಳುಪು ಒಳಗೆಲ್ಲಾ ವ್ಯಾಪಿಸಿರಲು ವಿಸ್ತಾರವಾಗಿ ಹರಡಿದ್ದ ದಿಕ್ಕುಗಳ ಸಮೂಹ, ಶಾಲಿವನದ (ಬತ್ತದ ಗದ್ದೆಯ) ಸುವಾಸನೆಯಿಂದ ಸೊಕ್ಕಿರುವ ದುಂಬಿಗಳ ಸಮೂಹ ಇವುಗಳಿಂದ ಆಕರ್ಷಕವಾಗಿರುವ ಶರತ್ಕಾಲವು ಲೋಕಕ್ಕೆ ಕಣ್ಣು ಬರುವಂತೆ ಪ್ರಾಪ್ತವಾಯಿತು. ವll ಆಗ ಅರ್ಜುನನು ತನ್ನ ವಿಜಯಲಕ್ಷ್ಮಿಯ ಬರುವಿಕೆಯನ್ನು ಸ್ವಾಗತಮಾಡುವುದಕ್ಕೆ ಇದಿರಾಗಿ ಬಂದಂತೆ ಬಂದ ಶರತ್ಕಾಲಲಕ್ಷ್ಮಿಯನ್ನು ಸಂತುಷ್ಟ ಹೃದಯದಿಂದ ಮೆಚ್ಚಿ ನೋಡುತ್ತ ಬರುವಷ್ಟರಲ್ಲಿ ಮುಂದೆ ಶರತ್ಕಾಲದ ಮೊಡಗಳೆಲ್ಲ ಒಟ್ಟಾಗಿ ಸೇರಿ ಬೆಟ್ಟವಾದಂತೆ ಇದ್ದ ಹಿಮವತ್ಪರ್ವತವನ್ನು ನೋಡಿ ಇದು ಯಾವುದು ಎಂದು ಪ್ರಶ್ನೆಮಾಡಿದನು. ಗುಹ್ಯಕನು ಹೀಗೆಂದು ಹೇಳಿದನು. ೭೨. ಅರಳುತ್ತಿರುವ ಮೊಲ್ಲೆಯ ಹೂವಿನಂತಿರುವ ಚಂದ್ರನಂತೆಯೂ ಶಂಖದಂತೆಯೂ ಬೆಳ್ಳಗಿರುವುದೂ ಮದ್ದಾನೆಗಳ ಮದೋದಕದಿಂದ
Page #362
--------------------------------------------------------------------------
________________
ಸಪ್ತಮಾಶ್ವಾಸಂ / ೩೫೭ ಕ೦ll - ಲಳಿತೋತ್ಸವ ಧ್ವಜಾಂಶುಕ
ವಿಳಸನಮಂ ಮುಂದೆ ನಿನಗೆ ತೋರ್ಪಂತಿರೆ ಕ || ಹೊಳಿಸಿರ್ದುದು ನೋಡ ಹಿಮಾ
ಚಳ ಶಿಖರದ ಮೇಲೆ ಹಾಯ್ದ ಗಂಗಾಸ್ಕೋತಂ | ವ|| ಎಂದು ಗುಹಕಂ ಹಿಮವನಹೀಧರಮಂ ತೋಜುತ್ತುಂ ಬಂದು ಕೈಲಾಸ ಪರ್ವತಮಂ ಕಂಡು ಮt 4 | ಇದು ಕೈಲಾಸಂ ಭವಾನೀಭವನ ನೆಲೆ ಮನೋಜಾತನಂ ಬೂದಿಮಾಡಿ
ದಜಿಲ್ ದಕ್ಷಾಧ್ವರಧ್ವಂಸಕನ ನೊಸಲ ಕಣ್ಣಾತನೊಳ್ ತನ್ನ ದೋರ್ಗ | ರ್ವದಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ನಿ ಕಿತ್ತಿ ಪತ್ತೆ
ದೂಡಿತ್ತಂ ಮಚ್ಚಿ ಲಂಕಾಧಿಪತಿಗೆ ಬರವಂ ರಾಗದಿಂ ನೀಲಕಂಠಂ || ೭೪ ಚಂll ತೊ ತೊಜಯಂಬ ಮಾತನಿನಿತಿಲ್ಲದೊಡಾಂ ತ್ವಂ ದಲೆಂದೂಡಾ
ತೋಣಿಯೊಳೆ ಪೋಯ್ತು ಸೂರುಳನೆ ಸೂರುಳವೇವುವೂ ನಂಬೆನೆಂಬುದುಂ | ಕಣ್ಣಿಗೊರಲಾತನಾತ್ಮ ಎಟತತ್ತಮನುಂಟೊಡತಾಗಿ ಮಾಡಿ ಬಾಂ ದೂಳಿಯನ ಪೊತ್ತು ಗೌರಿಗೆ ಕವಲೊಜಿಗೆಯ್ದಿದ ಪ್ರದೇಶದೊಳ್ || ೭೫
ತುಂಬಿದ ದರಿಗಳಿಂದ ಕೂಡಿ ಮನೋಹರವಾಗಿರುವ ಕಣಿವೆಗಳನ್ನುಳ್ಳುದೂ ಸಿಂಹದ ಅತಿಶಯವಾದ ಶಬ್ದದಿಂದ ಕೂಡಿದ ಗರ್ಜನೆಯನ್ನುಳ್ಳ ಗುಹೆಯನ್ನುಳ್ಳುದೂ ಮದ್ಯಪಾನದ ಅಮಲೇರಿದ ದೇವತೆಗಳ ಮತ್ತು ಕಿಂಪುರುಷಸೀಯರಿಂದ ಪ್ರಾರಂಭಿಸಲ್ಪಟ್ಟ ಸಂಗೀತವನ್ನುಳ್ಳುದೂ ದೇವತೆಗಳು ಮತ್ತು ಸಿದ್ದದಂಪತಿಗಳ ರತಿಕ್ರೀಡೆಯ ವೈಭವದಿಂದ ಮನೋಹರವಾಗಿರುವುದೂ ಆದ ಇದು ಹಿಮವತ್ಪರ್ವತ ಎಂದು ಹೇಳಿದನು. ೭೩. ಅದೋ ನಿನಗೆ ಶುಭೋತ್ಸವಸೂಚಕವಾದ ಬಾವುಟದ ಬಟ್ಟೆಯ ವಿಲಾಸವನ್ನು ನಿನ್ನೆದುರಿಗೆ ತೋರುವಂತೆ ಹಿಮವತ್ಪರ್ವತದ ಶಿಖರದ ಮೇಲೆ ಹರಿಯುತ್ತಿರುವ ಗಂಗಾಪ್ರವಾಹವು ಕಣ್ಣನ್ನು ಆಕರ್ಷಿಸುತ್ತಿದೆ ನೋಡು. ವ|| ಎಂದು ಗುಯ್ಯಕನು ಹಿಮಾಲಯಪರ್ವತವನ್ನು ತೋರಿಸುತ್ತ ಮುಂದೆ ಬಂದು ಕೈಲಾಸಪರ್ವತವನ್ನು ಕಂಡು-೭೪, ಇದು ಕೈಲಾಸಪರ್ವತ; ಪಾರ್ವತೀಪತಿಯ ವಾಸಸ್ಥಾನ, ದಕ್ಷಬ್ರಹ್ಮನ ಯಜ್ಞವನ್ನು ನಾಶಮಾಡಿದ ಈಶ್ವರನ ಹಣೆಗಣ್ಣು ಮನ್ಮಥನನ್ನು ಬೂದಿಮಾಡಿದುದು ಇದರಲ್ಲಿಯೇ, ಶಿವನ ಮುಂದೆ ತನ್ನ ಬಾಹುಬಲದ ಅಹಂಕಾರವನ್ನೂ ಅತಿಶಯವನ್ನೂ ಪ್ರಕಟಿಸುವ ಆಶೆಯಿಂದ ಈ ಪರ್ವತವನ್ನೇ ಬೇರಿನಿಂದ ಕಿತ್ತು ಹೊತ್ತು ಮೇಲಕ್ಕೆತ್ತಲು ಈಶ್ವರನು ತೃಪ್ತನಾಗಿ ಲಂಕಾಧಿಪತಿಯಾದ ರಾವಣನಿಗೆ ಸಂತೋಷದಿಂದ ಇಲ್ಲಿ ವರಪ್ರದಾನ ಮಾಡಿದನು. ೭೫. ನದಿ (ಗಂಗಾನದಿ)ಯೆಂಬ'ಮಾತನ್ನು ತಕ್ಷಣ ಬಿಟ್ಟುಬಿಡು. ಹಾಗಿಲ್ಲವಾದರೆ ನಾನು ಖಂಡಿತ ವಾಗಿಯೂ ನಿನ್ನನ್ನು ಬಿಟ್ಟುಬಿಡುತ್ತೇನೆ ಎಂದು (ಗೌರಿಯು ಸವತಿಮಾತ್ಸರ್ಯದಿಂದ) ಹೇಳಿದಳು. ಶಿವನು ಆ ನಿನ್ನ ಪ್ರತಿಜ್ಞೆಯು ಆ ನದಿಯ ಜೊತೆಯಲ್ಲಿಯೇ ಹೋಯಿತು, ಎಂದನು. ಗೌರಿಯು ಆ ಪ್ರತಿಜ್ಞೆಯದೇನು ನಾನು ನಂಬುವುದಿಲ್ಲ ಎನ್ನಲು
Page #363
--------------------------------------------------------------------------
________________
೩೫೮ / ಪಂಪಭಾರತಂ
ವ|| ಎಂದು ಗುಹಕಂ ಕೈಲಾಸಶೈಲದಲ್ಲೆಡೆಗಳುಮಂ ವಿಕ್ರಮಾರ್ಜುನಂಗೆ ತೋಜುತ್ತುಂ ಬಂದುಉll ಸಾಳ ತಮಾಳ ಕಾನನಭರೋಧೃತ ಸಿಂಧುರಕಂಠಗರ್ಜನಾ
ಭೀಳಮನಂಬರೇಚರವಧ್ರಕರಪಲ್ಲವಸಂಚಳಲ್ಲತಾಂ | ದೂಳಮನಾಶ್ರಿತಾದ್ರಿ ನದ ಕೂಳಮನತ್ಯಧರೀಕೃತಾನ್ಮ ಕು
ತ್ರೀಳಮನಿಂದುಕಾಂತ ಸುಸಲೀಳಮನೆಯ್ದಿದನಿಂದ್ರಕೀಳಮಂ | ೭೬ ಮll ಕಮಳಾಂತರ್ಗತ ಗಂಧ ಬಂಧು ನಯದಿಂ ಬಂದಪ್ಪಿಕೊಳ್ವಂತ ಗಾ
ಆ ಮನಂಗೊಂಡಿರೆ ತೀಡ ಶೃಂಗರುತಿಗಳ ಮಾಂಗಲ್ಯಗೇಯಂಗಳಂ | ದಮನಂದೀಯೆ ಮಡಲ್ಲು ಪೂತ ಲತೆಗಳ ಕೆಯ್ದೆಯು ಪೂನೀಡಲ್ಕ ರ್ಫಮವಂತೆವೋಲಾದುದದಿ ಹರಿಗಂಗಿಷ್ಟಾರ್ಥಸಂಸಿದ್ಧಿಯಂ || ೭೭
ವ| ಆಗಳ ಗುಹಕನಿಂದ್ರಸುತನನಿಂದ್ರಕೀಲನಗೇಂದ್ರದ ಚಂದ್ರಕಾಂತಲಾ ತಲದೊಳಿಪಿ ಬೀಳ್ಕೊಂಡು ಪೋದನಿತ್ತ ವಿಕ್ರಮಾರ್ಜುನಂ ಪರಂತಪಂ ತಪೋನಿಯಮ ನಿಯಮಿತನಾಗಿ
ವಿಷಕಂಠನಾದ ಈಶ್ವರನು ಆ ಗೌರಿಯನ್ನು ನಂಬಿಸುವುದಕ್ಕಾಗಿಯೂ ತನ್ನ ವಿಟವಿದ್ಯೆಯನ್ನು ಪ್ರದರ್ಶಿಸುವುದಕ್ಕಾಗಿಯೂ ಗಂಗೆಯನ್ನು ತಲೆಯಲ್ಲಿ ಮರೆಮಾಡಿ ಇಟ್ಟುಕೊಂಡು ಈ ಸ್ಥಳದಲ್ಲಿ ಕವಲೊಡೆದ ಬೇರೆಯ ನದಿಯನ್ನುಂಟುಮಾಡಿದನು. ಅಂದರೆ ತಲೆಯಲ್ಲಿಯೇ ಗಂಗೆಯನ್ನಿಟ್ಟುಕೊಂಡು ಅದನ್ನು ತೊರೆದುಬಿಟ್ಟ ಹಾಗೆ ಅದರ ಕವಲೊಡೆದ ಒಂದೆರಡು ಪ್ರವಾಹವನ್ನು ಹೊರಕ್ಕೆ ಬಿಟ್ಟನು. ವರ ಎಂದು ಗುಹ್ಯಕನು ಕೈಲಾಸಪರ್ವತದ ಎಲ್ಲಾ ಸ್ಥಳಗಳನ್ನೂ ಅರ್ಜುನನಿಗೆ ತೋರುತ್ತ ಬಂದನು. ೭೬. ಮುಂದೆ ಒತ್ತಾಗಿ ಬೆಳೆದ ತೆಂಗು ಮತ್ತು ಹೊಂಗೆಯ ಮರಗಳ ಕಾಡಿನಲ್ಲಿ ಎತ್ತರವಾಗಿ ಬೆಳೆದ ಮದ್ದಾನೆಗಳ ಕೊರಳಿನಿಂದ ಬರುತ್ತಿದ್ದ ಘೀಳಿಡುವಿಕೆಯಿಂದ ಭಯಂಕರವಾಗಿದ್ದರೂ ಆಕಾಶಗಾಮಿಗಳಾದ ಖೇಚರಸ್ತ್ರೀಯರ ಚಿಗುರಿನಂತಿರುವ ಕೈಗಳಿಂದ ಚಲಿಸಲ್ಪಟ್ಟ ಬಳ್ಳಿಗಳ ಉಯ್ಯಾಲೆಯನ್ನುಳ್ಳುದೂ (ತನ್ನ ಔನ್ನತ್ಯದಿಂದ) ಇತರ ಎಲ್ಲ ಪರ್ವತಗಳನ್ನೂ ಬಹು ಕೀಳನ್ನಾಗಿ ಮಾಡಿರುವುದೂ ಚಂದ್ರಕಾಂತಶಿಲೆಯ ಉಚ್ಚವೈಭವವನ್ನುಳ್ಳುದೂ ಆದ ಇಂದ್ರಕೀಲಪರ್ವತವನ್ನು ಅರ್ಜುನನು ಬಂದು ಸೇರಿದನು. ೭೭. ಕಮಲದ ಹೂವಿನಲ್ಲಿರುವ ವಾಸನೆಗೆ ಸ್ನೇಹಿತನಾದ ವಾಯುವು ವಿನಯದಿಂದ ಬಂದು ಆಲಿಂಗನಮಾಡಿಕೊಳ್ಳುವ ಹಾಗೆ ಆಹ್ಲಾದಕರವಾಗಿ ಬೀಸಲು ದುಂಬಿಯ ಶಬ್ದಗಳು ಮಂಗಳವಾದ್ಯದ ಸೊಗಸನ್ನುಂಟುಮಾಡುತ್ತಿರಲು ಹಬ್ಬಿ ಹೂವಿನಿಂದ ಕೂಡಿರುವ ಬಳ್ಳಿಗಳು ಅಲಂಕಾರಮಾಡಿಕೊಂಡು ಕೈಗೆ ನೀರನ್ನು ಕೊಡುವ ಹಾಗೆ ಹೂವನ್ನು ಕೊಡಲು ಅರ್ಜುನನಿಗೆ ಆ ಪರ್ವತವು ಇಷ್ಟಾರ್ಥಸಿದ್ದಿಯನ್ನುಂಟು ಮಾಡುವ ಹಾಗೆ ಕಂಡಿತು. ವll ಆಗ ಗುಹ್ಯಕನು ಅರ್ಜುನನನ್ನು ಶ್ರೇಷ್ಠವಾದ ಇಂದ್ರಕೀಲಪರ್ವತದ ಚಂದ್ರಕಾಂತಶಿಲಾತಲದಲ್ಲಿ ಇಳಿಸಿ ಅವನ ಅಪ್ಪಣೆಪಡೆದು ಹೋದನು. ಈ ಕಡೆ ಶತ್ರುಗಳನ್ನು ಸುಡುವ ಸ್ವಭಾವವುಳ್ಳ ಅರ್ಜುನನು ತಪೋನಿಯಮ
Page #364
--------------------------------------------------------------------------
________________
ಸಪ್ತಮಾಶ್ವಾಸಂ | ೩೫೯
ಮ|| ಸ || ಭಸಿತಂ ಕರ್ಪೂರ ಕಾಳಾಗರು ಬಹುಳ ರಜಂ ವಲಂ ಕಲ್ಪವೃಕ್ಷ ಪ್ರಸವಂ ಯಜ್ಯೋಪವೀತಂ ಕನಕ ಕಮಳನಾತ್ಕರಂ ನಿಚ್ಚನಿಚ್ಚಂ | ಪೊಸತೆಂಬಂತಾಗೆ ಪಾರ್ಥಂಗೊಸೆದು ತುಡಲುಡಲ್ ಪೂಸಲುಂ ಸಾಲ್ವಿನಂ ಸಾ ಧಿಸಿತುದದಕ್ತಿ ಭಾರಾನತ ವನವನಿತಾವೃಂದಮಾನಂದದಿಂದಂ ||
20
ಚoll
ಅದಿರದ ಚಿತ್ರಮಳ್ಳದ ಮನಂ ಬಗೆಗೊಳ್ಳದ ಮೋಹಮೆತ್ತಿ ಕ ಟ್ಟಿದ ಜಡೆ ತೊಟ್ಟ ರತ್ನಕವಚಂ ಕೊರಲೊಳ್ ಸಲೆ ಕೋದ ಬಿಲ್ ಪ್ರಯ | ಇದೆ ಬಿಗಿದಿರ್ದರು ಮಿಸುಪ್ಪಸಿಖೇಟಕಮಿಂತಿವೊಂದು ಗುಂ ದದೆ ನಿಲೆ ನೋಟ್ಟಿ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ ||
ವ|| ಅಂತು ಪರಾಶರನಂದನನುಪದೇಶದೊಳ್ ತಪನಪ್ರಭಂ ತಪಂಗೆಯ್ಯಲ್ ತಗುಡ
ಚoll
ಕರಿಣಿಯ ಸೀಯನಪ್ಪ ಮೊಲೆವಾಲೆ ತಗುಳುದು ತತಿಶೋರ ಕೇ ಸರಿ ಹರಿಪೋತಮಂ ಬೆದಲತುಂ ಕರಿಪೋತಮವುಂಡುಗರ್ಚಿ ಕೇ | ಸರಿಣಿಯ ಕೆಚ್ಚಲಂ ತುಡುಕುತುಂ ಪರಿದತ್ತು ಕುರಂಗಯೂಧದೊಳ್ ಬೆರಸಿದುವುದು ಪೆರ್ಬುಲಿಗಳಿಂದ್ರತನೂಜತಪಃಪ್ರಭಾವದಿಂ ||
26
eso
ನಿಷ್ಠನಾದನು. ೭೮. ಅರ್ಜುನನಲ್ಲುಂಟಾದ ಅತ್ಯತಿಶಯವಾದ ಭಕ್ತಿಯ ಭಾರದಿಂದ ನಮ್ರರಾದ ಅರಣ್ಯಾಭಿಮಾನಿ ದೇವತಾಸ್ತ್ರೀಯರ ಸಮೂಹವು ಅವನಿಗೆ ಪ್ರತಿನಿತ್ಯವೂ ಹೊಸಹೊಸದು ಎನ್ನುವ ಹಾಗೆ ಉಡಲು ತೊಡಲು ಲೇಪನಮಾಡಿಕೊಳ್ಳಲು ಸಾಕಾಗುವಷ್ಟು ವಿಭೂತಿ, ಪಚ್ಚಕರ್ಪೂರ, ಕರಿಯ ಅಗರಿನ ಶ್ರೇಷ್ಠವಾದ ಧೂಳು, ಕಲ್ಪವೃಕ್ಷದ ತೊಗಟೆಯಿಂದ ಮಾಡಿದ ನಾರುಮಡಿ, ಹೊಂದಾವರೆಯ ದಂಟಿನ ನೂಲಿನ ಸಮೂಹದಿಂದ ಮಾಡಿದ ಜನಿವಾರ ಇವುಗಳನ್ನು ಒದಗಿಸಿಕೊಟ್ಟಿತು. ೭೯. ಚಂಚಲವಾಗದ ಬುದ್ಧಿ, ಭಯಪಡದ ಮನಸ್ಸು, ಹೃದಯವನ್ನು ಪ್ರವೇಶಿಸಿದ ಪ್ರೀತಿ (ವಿರಕ್ತಿ), ಎತ್ತಿಕಟ್ಟಿರುವ ಜಡೆ, ತೊಟ್ಟಿರುವ ರತ್ನಖಚಿತವಾದ ಕವಚ (ಮೈಜೋಡು), ಕತ್ತಿನಲ್ಲಿ ವಿಶೇಷವಾಗಿ ಪೋಣಿಸಿಕೊಂಡಿರುವ ಬಿಲ್ಲು, ಪ್ರಯತ್ನ ಪೂರ್ವಕವಾಗಿ ಬಿಗಿದುಕೊಂಡಿರುವ ಎರಡು ಬತ್ತಳಿಕೆ, ಪ್ರಕಾಶಮಾನವಾಗಿರುವ ಕತ್ತಿಗುರಾಣಿಗಳು ಇವು ಸ್ವಲ್ಪವೂ ಊನವಾಗಿರದೆ ನೆಲಸಿರಲು ನೋಡುವವರಿಗೆ ಅರ್ಜುನನು ಸೌಮ್ಯವಾಗಿಯೂ ಭಯಂಕರವಾಗಿಯೂ ಕಂಡನು. ವ| ವ್ಯಾಸ ಮಹರ್ಷಿಯ ಉಪದೇಶದಿಂದ ಸೂರ್ಯನ ಕಾಂತಿಯನ್ನುಳ್ಳ ಅರ್ಜುನನು ತಪಸ್ಸು ಮಾಡಲು ಪ್ರಾರಂಭಿಸಿದನು. ೮೦. ಇಂದ್ರಪುತ್ರನಾದ ಅರ್ಜುನನ ತಪಸ್ಸಿನ ಪ್ರಭಾವ ದಿಂದ ಸಿಂಹದ ಮರಿಗಳು ಹೆಣ್ಣಾನೆಯ ಸಿಹಿಯಾದ ಮೊಲೆಹಾಲಿಗಾಗಿ ಅದರ ಹಿಂದೆಯೇ ಹೋದುವು. ಆನೆಯ ಮರಿಗಳು ಸಿಂಹದ ಮರಿಗಳನ್ನು ಹೆದರಿಸುತ್ತ ಅವಡುಗಚ್ಚಿ (ತುಟಿಯನ್ನು ಕಚ್ಚಿಕೊಂಡು) ಹೆಣ್ಣು ಸಿಂಹದ ಕೆಚ್ಚಲನ್ನು ಹಿಡಿದುಕೊಳ್ಳುತ್ತ ಓಡಿದುವು. ಹೆಬ್ಬುಲಿಗಳು ಜಿಂಕೆಯ ಸಮೂಹದಲ್ಲಿ ಬೆರಸಿಕೊಂಡವು. (ಅರ್ಜುನನ ತಪಃಪ್ರಭಾವದಿಂದ ಕಾಡುಪ್ರಾಣಿಗಳೂ ತಮ್ಮ ಸಹಜವೈರವನ್ನು ತೊರೆದು
Page #365
--------------------------------------------------------------------------
________________
೩೬೦) ಪಂಪಭಾರತಂ
ವll ಮತ್ತಮಾ ಗಿರೀಂದ್ರಕಂದರದೊಳ್ ತಪಂಗೆಯ್ಯ ತಪೋಧನರ ತಪಂಗಳೆಲ್ಲಮಾತನ ತಪೋಮಯಶಿಖಿಗಳಿಂ ಬೆಂದು ಬೆಂದ ನುಲಿಯಂತೇತರ್ಕಂ ಮುಟ್ಟಿಲ್ಲದ ಮುಟ್ಟಗಿಡ ದೇವೇಂದ್ರ ತನಗಾದ ಹೃತೂಪದೊಳಮಾಸನಕಂಪದೂಳಂ ನರೇಂದ್ರತಾಪಸಂ ತನ್ನಿಂದತ್ತಮಂ ಕೊಳಲೆಂದು ತಪಂಗಯಪನೆಂಬ ಸಂಕೆಯೊಳ್ ತಪೂವಿಘಾತ ಮಾಡಿಮಂದು ತನ್ನ ನೆಚ್ಚಿನಚರಣೆಯರು ಮನಾಜುಂ ಋತುಗಳುಮಂ ಗಂಧರ್ವರುಮಂ ಕಾಮದೇವನಂ ದಂಡನಾಯಕಂ ಮಾಡಿ ಪೇಚಾಗಳ್ಚಂ11 ವನರುಹಗರ್ಭನೆಂಬವನ ಮುನ್ನಿನ ಗೆಯ್ದ ತಪಂ ತಿಲೋತ್ತಮಾಂ
ಗನೆಯಿನದಂತುಟಾದುದನೆ ಮತ್ತಿನ ಬೂತು ತಪಂಗಳಮ್ಮ ಪು | ರ್ವಿನ ಕಡೆಯೊಂದು ಜರ್ವಿನೋಳೆ ತೀರ್ವುವವಲ್ಲದ ದೇವ ಬೆಂಬಲಂ
ಮನಸಿಜನಿಗಳಾಜು ಋತುವುಂ ನೆರವೆಂದೊಡೆ ಸೋಲದಿರ್ಪರಾರ್ 11 ೮೧
ವ|| ಎಂದು ದೇವಾಷ್ಟರೊಂದಮನಿತಾನುಮಂದದಿಂ ಪುರಂದರನ ಪಕ್ಕದೆ ಪೂಣ್ಣು ಬಂದು ಗಗನತಳಮಲ್ಲಂ ತಮ್ಮ ತೊಟ್ಟ ದಿವ್ಯಾಭರಣಕಿರಣಂಗಳೊಳ್ ತೊಳಗಿ ಬೆಳಗೆ ಬಂದು ಮಹೀತಳವತರಿಸಿ ನದನದೀಪುಳಿನಪರಿಸರಪ್ರದೇಶಂಗಳೊಳಂ ಕದಳೀವನಂಗಳೊಳಂ ಕನಕಲತಾಮಂಟಪಂಗಳೊಳಮಿಡಿದೆಡೆಗೊಳೆ ಪೂತ ಮಲ್ಲಿಗೆಯ ಬಳ್ಳಿಗಾವಣಂಗಳೊಳಂ ನನೆಯ ನಿರ್ಭಯದಿಂದ ಸ್ನೇಹದಿಂದಿದ್ದುವು ಎಂಬುದು ಅಭಿಪ್ರಾಯ) ವ ಮತ್ತು ಆ ಪರ್ವತಶ್ರೇಷ್ಠದ ಕಣಿವೆಗಳಲ್ಲಿ ತಪಸ್ಸು ಮಾಡುತ್ತಿದ್ದ ತಪೋಧನರ ತಪಸ್ಸುಗಳೆಲ್ಲವೂ ಆತನ ತಪಸ್ಸಿನಿಂದುಂಟಾದ ಬೆಂಕಿಯಿಂದ ಸುಟ್ಟುಹೋಗಿ ಸುಟ್ಟ ಹಗ್ಗದಂತೆ ಉಪಯೋಗವಿಲ್ಲದೆ ನಿಷ್ಟ್ರಯೋಜನವಾದುವು. ದೇವೇಂದ್ರನು ತನಗುಂಟಾದ ಎದೆನಡುಕದಿಂದಲೂ ಪೀಠದ ನಡುಗುವಿಕೆ (ಆಸನ ಕಂಪನ)ಯಿಂದಲೂ ಮನುಷ್ಯತಪಸ್ವಿಯು ತನ್ನಿಂದ ಪದವಿಯನ್ನು ಅಪಹರಿಸಲು ತಪಸ್ಸು ಮಾಡುತ್ತಿದ್ದಾನೆಂಬ ಸಂದೇಹದಿಂದ ಅವನ ತಪಸ್ಸಿಗೆ ವಿಘ್ನಮಾಡಿ ಎಂದು ತನಗೆ ಪರಮಪ್ರೀತಿಪಾತ್ರರಾದ ಅಪ್ಪರಸ್ತ್ರೀಯರನ್ನೂ ಆರು ಋತುಗಳನ್ನೂ ಗಂಧರ್ವರನ್ನೂ ಕಾಮದೇವನನ್ನು ದಂಡನಾಯಕನನ್ನಾಗಿ ಮಾಡಿ ಹೇಳಿಕಳುಹಿಸಿದನು - ೮೧. ಎಲೈ ಇಂದ್ರದೇವನೇ ಹಿಂದೆ ಬ್ರಹ್ಮನು ಮಾಡಿದ ತಪಸ್ಸು ತಿಲೋತ್ತಮೆಯೆಂಬ (ಒಬ್ಬ) ದೇವವೇಶೈಯಿಂದ ಹಾಗೆ ಆಯಿತು (ನಷ್ಟವಾಯಿತು ಎನ್ನುವಾಗ ಉಳಿದ ಪ್ರಾಣಿಗಳ ತಪಸ್ಸು ನಮ್ಮ ಹುಬ್ಬಿನ ಕೊನೆಯ ಒಂದು ಅಲುಗಾಟದಿಂದಲೇ ಮುಗಿದುಹೋಗುತ್ತವೆ. ಅಲ್ಲದೆ ಈಗ ಮನ್ಮಥನ ಬೆಂಬಲವೂ ಆರುಋತುಗಳ ಸಹಾಯವೂ ಇರುವಾಗ ಸೋಲದಿರುವವರಾರಿದ್ದಾರೆ ? ವ|| ಎಂದು ದೇವಲೋಕದ ಅಪ್ಪರಸ್ತ್ರೀಯರ ಸಮೂಹವು ಇಂದ್ರನ ಹತ್ತಿರ ಎಷ್ಟೋ ರೀತಿಯಲ್ಲಿ ಪ್ರತಿಜ್ಞೆಮಾಡಿ ಬಂದು ಆಕಾಶಪ್ರದೇಶವೆಲ್ಲವೂ ತಾವು ಧರಿಸಿದ್ದ ದಿವ್ಯವಾದ ಒಡವೆಗಳ ಕಾಂತಿಯಿಂದ ಪ್ರಕಾಶಿಸುತ್ತಿರಲು ಭೂಮಿಗೆ ಇಳಿದು ಬಂದು ಗಂಡು ಮತ್ತು ಹೆಣ್ಣುನದಿಗಳ ಮರಲುದಿಣ್ಣೆಗಳಲ್ಲಿಯೂ ಬಾಳೆಯ ತೋಟಗಳಲ್ಲಿಯೂ ಹೊಂಬಣ್ಣದ ಲತಾಮಂಟಪಗಳಲ್ಲಿಯೂ ಒತ್ತಾಗಿ ಸೇರಿ ಹೂ ಬಿಟ್ಟಿರುವ ಲತಾಗೃಹಗಳಲ್ಲಿಯೂ ಹೂವಿನಗೊಂಚಲುಗಳಲ್ಲಿಯೂ ಆಕಾಶದಲ್ಲಿ ಸಂಚರಿಸಿದುದರಿಂದುಂಟಾದ
Page #366
--------------------------------------------------------------------------
________________
ಸಪ್ತಮಾಶ್ವಾಸಂ | ೩೬೧ ಜೊಂಪಂಗಳೊಳಂ ಗಗನಗಮನಜನಿತಶ್ರಮಮನಾ ಗಜಗಮನೆಯರಾಜೆಸಿ ಪಾಲ್ಗಡಲೊಳ ಮಮರ್ದಿನೊಳಂ ಪುಟ್ಟಿದ ಕಳ್ಳ ಸೊರ್ಕಿನೊಳಮುಂತೆ ನಡುಗುವ ಬಡನಡುಗಳ ನಡುಕಮುಮನುಂತ ಪೊಡರ್ವ ಪುರ್ವುಗಳ ಪೊಡರ್ಪುಮನಂತೆ ಸೊಗಯಿಸುವ ಬೆಳರ್ವಾಯ ತನಿಗೆತ್ತುಮನುಂತೆ ಪೊಳೆವ ನಿಡಿಯಲರ್ಗಣ್ಣ ಮಳಮಳಿದ ನೋಟಮುಮನುಂತ ತೊದಳಿಸುವ ನುಡಿವ ನುಡಿಗಳೇ ತೊದಳುಮನೆಕ್ಕೆಯಿಂ ತಳೆಯೆ ನೆಲೆಯೆ ಕೆಯ್ದೆಯು ಮುನ್ನಮಾಯಿಂ ಋತುಗಳುಮಂ ನಿಮ್ಮ ನಿಮ್ಮ ಸ್ವರೂಪಂಗಳುಮನಾತನಿರ್ದಲ್ಲಿಗೆ ಪೋಗಿ ತೋಟೆಯೆಂದಾಗಳಕಂ ಆಜಂ ಋತುಗಳ ಹೂಗಳು
ಮಾತುಂ ಋತುಗಳ ಪೊದಳ ಚೆಲ್ಲುಗಳುಮಣಂ | ಬೇಟೆಲ್ಲದೊಂದು ಸೂ ಮೆ ಯೋದುವೊಡನೊಡನೆ ನೆಲದೊಳಂ ಗಗನದೊಳಂ ||
ಮೆಲ್ನೋಟದೊಡವಡನೆಯ
ಮೆಲ್ಲೋಅಲ್ ಬಗದನಂಗಜಂಗಮಲತೆಗಳ 1 ಮೆಯೋಲುವಂತ ಮೆಲ್ಲನೆ ಮೆಲ್ಲೋದರಮರಗಣಿಕೆಯರ್ ವಂದಾಗಳ್
ಸಮದ ಗಜಗಮನೆಯರ್ ಮುಗಿ
ಲ ಮೇಲೆ ನಡೆಪಾಡುವಾಕೆಗಳ ತಮಗೆ ಧರಾ | ಗಮನಂ ಪೊಸತಪ್ಪುದಳಂ
ದಮರ್ದಿರೆ ನಡೆ ನಡೆದು ನಡೆಯಲಾಟದ ಸುಟೆದರ್ |
೮೨
೮೩
೮೪
ಬಳಲಿಕೆಯನ್ನು ಆನೆಯಂತೆ ನಡಗೆಯುಳ್ಳ ಅಪ್ಪರಸ್ತ್ರೀಯರು ಪರಿಹರಿಸಿಕೊಂಡರು. ಕ್ಷೀರಸಮುದ್ರದಲ್ಲಿ ಹುಟ್ಟಿದ ಅಮೃತದಿಂದ ಉತ್ಪನ್ನವಾದ ಸೊಕ್ಕಿನಿಂದ (ಮದ್ಯಪಾನದಿಂದ) ಕೂಡಿದವರಾಗಿ ಸುಮ್ಮನೆ ನಡುಗುತ್ತಿರುವ ಕೃಶವಾದ ನಡುಗಳಿಗೆ ಮತ್ತಷ್ಟು ನಡುಕವನ್ನುಂಟುಮಾಡಿಕೊಂಡು, ಕುಣಿಯುತ್ತಿರುವ ದೀರ್ಘವಾದ ಹುಬ್ಬುಗಳಿಗೆ ಮತ್ತಷ್ಟು ಕುಣಿತವನ್ನು, ಮೊದಲೇ ಸೊಗಯಿಸುವ ಬಿಳಿಯ ಬಾಯಿಗಳಿಗೆ ಹೊಸದಾದ ಅದಿರಾಟವನ್ನು,ಹೊಳೆಯುತ್ತಿರುವ ದೀರ್ಘವಾದ ಹೂವಿನಂತಿರುವ ಕಣ್ಣುಗಳಿಗೆ ಕೆಂಪಾಗಿ ಕದಡಿದ ನೋಟವನ್ನು ಈಗಾಗಲೆ ಸುಮ್ಮನೆ ತೊದಳಿನಿಂದ ನುಡಿಯುತ್ತಿರುವ ತೊದಳುಮಾತಿಗೆ ಮತ್ತಷ್ಟು ತೊದಳುವಿಕೆಯನ್ನು ಏಕಕಾಲದಲ್ಲಿ ಕೂಡಿಕೊಳ್ಳುವಂತೆ ಪೂರ್ಣವಾಗಿ ಅಲಂಕರಿಸಿಕೊಂಡು ನಡೆಯುತ್ತಿರಲು ಆರು ಋತುಗಳೂ ತಮ್ಮ ತಮ್ಮ ಸ್ವರೂಪಗಳಿಂದ ಆತನಿದ್ದ ಸ್ಥಳಕ್ಕೆ ಹೋಗಿ ತೋರ್ಪಡಿಸಿಕೊಂಡವು. ೮೨. ಆರು ಋತುಗಳ ಹೂವುಗಳೂ ಆರು ಋತುಗಳಲ್ಲಿ ವ್ಯಾಪಿಸಿರುವ ಸೌಂದರ್ಯವೂ ಸ್ವಲ್ಪವೂ ಬೇರೆ ಬೇರೆಯಾಗಿರದೆ ಒಟ್ಟಿಗೇ ಒಂದೇ ಸಲ ಭೂಮಿಯಲ್ಲಿಯೂ ಆಕಾಶದಲ್ಲಿಯೂ ಕಾಣಿಸಿಕೊಂಡವು. ೮೩. ಆರು ಋತುಗಳೊಡನೆಯೇ ತಾವೂ ಕಾಣಿಸಿಕೊಳ್ಳಬೇಕೆಂದು ಭಾವಿಸಿ ಮನ್ಮಥನ ಜಂಗಮಲತೆಗಳು ಕಾಣಿಸಿಕೊಳ್ಳುವ ಹಾಗೆ ಅಪ್ಪರಸ್ತ್ರೀಯರೂ ಬಂದು ನಿಧಾನವಾಗಿ ಕಾಣಿಸಿಕೊಂಡರು. ೮೪, ಮೋಡಗಳ ಮೇಲೆ ನಡೆದಾಡುವ ಸ್ವಭಾವವುಳ್ಳ ಆ
Page #367
--------------------------------------------------------------------------
________________
esse
೩೬೨/ ಪಂಪಭಾರತ ಕಂ|| ಮುಡಿಯ ಕುಚಯುಗದ ಜಘನದ
ಕಡುವಿಣೀಂ ಮಣಲೊಳಟ್ಟು, ಬರೆ ಮೆಲ್ಲಡಿಗಳ್ || ನಡೆಯದ ಬೇವಸಮಂ ತಾಂ
ನಡೆಯಿಸುವಂತವರ್ಗಳೊಯ್ಯನೊಯ್ಯನೆ ನಡೆದರ್ || ಮ|| ಮುಡಿಯಂ ಸೋಗೆಯಗತ್ತು ಸೋಗೆ ನಡೆಯಂ ಪೆಣ್ಣಂಚೆಗೆತ್ತಂಚೆ ಮ
qುಡಿಯಂ ಕೋಗಿಲೆಗೆತ್ತು ಕೋಗಿಲೆ ಘನೋತ್ತುಂಗ ಸ್ತನದ್ವಂದ್ವದಿ | ಟೈಡೆಯಂ ಕೊಕಮಗತ್ತು ಕೋಕಮಳಕಾನೀಕಂಗಳಂ ಸೊರ್ಕಿದಾ
ಅಡಿಗೆತ್ತಾಡಿ ಸುತ್ತುತುಂ ಬರೆ ಬನಂ ಬರ್ಪಂತೆ ಬಂದಾಕೆಗಳ್ || ೮೬
ವ|| ಅಂತು ನರೇಂದ್ರತಾಪಸನಂ ಸೋಲಿಸಲೆಂದು ವಂದಾಕೆಗಳ್ ತಾಮೆ ಸೋಲು ಮುಂದು ಮುಂದನೆ ಸುಳೆಯಚಂ|| ಮಗಮಗಿಸುತ್ತುಮಿರ್ಪ ಮೃಗನಾಭಿಯ ನೀರ್ದಳಿನಲ್ಲಿ ಕಂಪನಾ
ಳ್ಳುಗುತ್ತಿಲಸುತ್ತುಮಿರ್ಪ ಪದದೊಳ್ ಪದವಟ್ಟು ಪೊದಳು ತೋರ ಮ | ಲಿಗೆಯ ತುಜುಂಬು ರಾಹು ತವೆ ನುಂಗಿದ ಚಂದ್ರನನೊಯ್ಯನೊಯ್ಯನಂ ದುಗುಟ್ಟವೊಲೊಪ್ಪಿರಲ್ ಬಲದೊಳುರ್ವಸಿ ದೇಸಿಗೆ ದೇಸಿಯಾಡಿದಳ್ |೮೭
ಮದಗಜಗಮನೆಯರು ನೆಲದ ಮೇಲೆ ನಡೆಯುವುದು ತಮಗೆ ಹೊಸದಾದುದರಿಂದ ಪಾದಗಳು ನೆಲಕ್ಕೆ ಹತ್ತಿಕೊಂಡಿರಲು ನಡೆದೂ ನಡೆದೂ ನಡೆಯಲಸಮರ್ಥರಾಗಿ ಸುತ್ತಾಡಿದರು. ೮೫. ತುರುಬಿನ, ಮೊಲೆಗಳ, ಪಿಿಗಳ, ಅತಿಯಾದ ಭಾರದಿಂದ ಅವರ ಮೃದುವಾದ ಪಾದಗಳು ಮರಳಿನಲ್ಲಿ ಹೂತುಹೋಗಲು ನಡೆಯಲು ಅಭ್ಯಾಸವಿಲ್ಲದ ತಮ್ಮ ಆಯಾಸವನ್ನು ಪ್ರದರ್ಶಿಸುವಂತೆ ಮೆಲ್ಲಮೆಲ್ಲಗೆ ನಡೆದರು. ೮೬. ತುರುಬಿನ ಗಂಟನ್ನು ಹೆಣ್ಣು ನವಿಲೆಂದು ಭ್ರಾಂತಿಗೊಂಡು ಗಂಡುನವಿಲೂ, ನಡಗೆಯನ್ನು ಹೆಣ್ಣು ಹಂಸವೆಂದು ಭ್ರಮಿಸಿ ಗಂಡುಹಂಸವೂ, ಮೃದುವಾದ ಮಾತನ್ನು ಹೆಣ್ಣುಕೋಗಿಲೆಯೆಂದು ಭಾವಿಸಿ ಗಂಡುಕೋಗಿಲೆಯೂ ದಪ್ಪವೂ ಎತ್ತರವೂ ಆದ ಮೊಲೆಗಳ ಒತ್ತಡವನ್ನು ಕಂಡು ಚಕ್ರವಾಕದ ಜೋಡಿಯೆಂದು ಭ್ರಮಿಸಿ ಚಕ್ರವಾಕವೂ, ಮುಂಗುರುಳುಗಳ ಸಾಲನ್ನು ಸೊಕ್ಕಿದ ಹೆಣ್ಣು ದುಂಬಿಯೆಂದೇ ಭ್ರಮಿಸಿ ಗಂಡುದುಂಬಿಗಳೂ ಆ ಅಪ್ಸರೆಯರನ್ನು ಸುತ್ತಿಕೊಂಡು ಬರುತ್ತಿರಲು ಅವರು ವನವೇ ಬರುವ ಹಾಗೆ ಬಂದರು. ವ|| ಹಾಗೆ ರಾಜತಪಸ್ವಿಯನ್ನು ಸೋಲಿಸುವುದಕ್ಕಾಗಿ ಬಂದ ಅವರು ತಾವೇ ಸೋತು ಅವನ ಮುಂದು ಮುಂದಕ್ಕೆ ಸುಳಿದಾಡಿದರು. ೮೭. ಗಮಗಮಿಸುವ ಕಸ್ತೂರಿಯ ನೀರನ್ನು ಚಿಮುಕಿಸುವುದರಿಂದ ವಾಸನಾಯುಕ್ತವಾಗಿ ಸ್ಪುಟಗೊಂಡು ಅರಳುತ್ತಿರುವ ಹೂವಿನಲ್ಲಿ ಹದವರಿತು ಸೇರಿ ಅಗಲವಾಗುತ್ತಿರುವ ದಪ್ಪಮಲ್ಲಿಗೆಯ ದಂಡೆಯು ತುರುಬಿನ ಮೇಲೆ ಗ್ರಹಣಕಾಲದಲ್ಲಿ ರಾಹುವು ಚಂದ್ರನನ್ನು ನಿಧಾನವಾಗಿ ಹೊರಚೆಲ್ಲುವ ಹಾಗೆ ಸೊಗಸಾಗಿರಲು ಬಲಗಡೆಯಲ್ಲಿ ಊರ್ವಶಿಯ
Page #368
--------------------------------------------------------------------------
________________
ಸಪ್ತಮಾಶ್ವಾಸಂ | ೩೬೩ ಚಂ|| ಪದ ಕೋರಲಿಂಪನಪ್ಪುಕೆಯ ಕೊಂಕು ನಯಂ ಗಮಕಂಗಳಿಂ ಪೊದ
ರ್ಕೊದಳೆಂದಿಕ್ಕಿದಂತೆ ಸುತಿಯೊಳ್ ಸಮವಾಗಿರೆ ಜಾಣನಾಂತು ಮೇ | ಚಿದ ತಂದಾಸವಟ್ಟಲಸದೆತ್ತಿದವೋಲ್ ದೊರೆವತ್ತು ದೂಳಿದಾ ಆದ ದನಿ ಮುಟ್ಟೆ ಮೇನಕೆ ಸರಸ್ವತಿ ಬಾಯ್ದೆರೆದಂತೆ ಪಾಡಿದ | ೮೮ ನಡು ನಡುಗಿ ಪುರ್ವು ಪೊಡರಿ ಕುರುಳ್ ಮಿಳಿರಕ್ಕೆ ಬಾಯ್ ಬೆಡಂ ಗಿಡಿದೆಳಸಲ್ ತರಳು ತುಡುಕಿ ತಗುಳುದು ಕೆಂದಕೆ ಕ | ನೃಡಿಪಳೊ ಪಾಡಿದೀ ನೆವದಿನೆಂಬಿನೆಗಂ ದನಿಯಿಂಪು ಬೀಣೆಯಂ ಮಿಡಿದವೊಲಾಗೆ ಗಾನದೊಳೊಡಂಬಡೆ ಮೇನಕೆ ಮುಂದೆ ಮಾಡಿದಳ್ || ೮೯ ಒದವಿದ ಕತ್ತ ಕಂಕಣದ ಪುರ್ವಿನ ಜರ್ವು ಲಯಕ್ಕೆ ಲಕ್ಕ ಲೆ ಕ್ರದ ಗತಿ ನಾಟಕಾಭಿನಯಮಾಯ್ತನೆ ಗೇಯದೊಳೀಕೆ ಸೊರ್ಕನಿ || ಕಿದಳೆನೆ ಕಳೆ ಚಕ್ಕಣಮೆನಿಪುದು ಸಾಕೆನಿಸಿ ಸಾಲ್ಯ ಸ. ಗದ ಪೊಸ ದೇಸಿಯೋಳಿಗಳನೊರ್ವಳೊಲ್ಲು ನೆಟ್ಟು ಪಾಡಿದ || ೯೦
ದೇಶೀಯನೃತ್ಯಕ್ಕಿಂತಲೂ ಉತ್ತಮವಾದ ನೃತ್ಯವನ್ನಾಡಿದಳು. ೮೮. ಹದವಾದ ಶಾರೀರವು ಇಂಪಿನಿಂದ ಕೂಡಿಕೊಂಡಿರಲು ಕೊಂಕು ನಯ ಗಮಕಗಳಿಂದ ಸ್ಪುರಣೆಗೊಂಡ ಮಧುರವಾದ ಮಾತು ತಂತಿಎಳೆದ ಹಾಗೆ ಶ್ರುತಿಯಲ್ಲಿ ಸೇರಿಕೊಂಡಿರಲು ಜಾಣತನದಿಂದ ಕೂಡಿ ತಾನೆ ಮೆಚ್ಚಿ ಆಸೆಗೊಂಡು ರಾಗವನ್ನು ಎತ್ತಿಕೊಂಡು ಹಾಗೆ ಸ್ವಲ್ಪವೂ ಆಯಾಸ ಪಡದೆ ಮಧ್ಯಮಸ್ವರದಿಂದ ಹೃದಯಸ್ಪರ್ಶಿಯಾಗಿರಲು ಸರಸ್ವತಿಯೇ ಬಾಯಿತೆರೆದ ಹಾಗೆ ಮೇನಕೆಯು ಹಾಡಿದಳು. ೮೯. ಸೊಂಟವು ನಡುಗುತ್ತಿರಲು ಹುಬ್ಬುಗಳು ಅದುರುತ್ತಿರಲು ಮುಂಗುರುಳು ಅಲುಗಾಡುತ್ತಿರಲು ಬಾಯಿಸೌಂದರ್ಯದಿಂದ ಕೂಡಿ ತವಕ ಪಟ್ಟು ಹಿಡಿದುಕೊಳ್ಳುವುದಕ್ಕೆ ಓಡಿಬಂದಿತು. ಹಾಡಿದ ಈ ನೆಪದಿಂದ ಇವಳು ರತಿಪ್ರೇಮವನ್ನು ಪ್ರತಿಬಿಂಬಿಸುತ್ತಿದ್ದಾಳೆಯೋ ಎನ್ನುವ ಹಾಗೆ ಧ್ವನಿಯ ಮಾಧುರ್ಯವು ವೀಣೆಯನ್ನು ಮೀಟಿದ ಹಾಗೆ ಹೊಂದಿಕೊಂಡಿರಲು ಮೇನಕೆಯು ಮುಂದೆ ಬಂದು ಹಾಡಿದಳು. ೯೦. ಉಂಟಾದ ಬಳೆಗಳ ಚಲನೆಯೂ ಹುಬ್ಬಿನ ಅಲುಗಾಟವೂ ತಾಳದ ಲಯಕ್ಕನುಗುಣವಾಗಿ ಲಕ್ಷ್ಮಸಂಖ್ಯೆಯ ಗತಿಯನ್ನುಳ್ಳ ನಾಟಕಾಭಿನಯವಾಯಿತೆನ್ನುವ ಹಾಗೆ ಹಾಡುಗಾರಿಕೆಯಲ್ಲಿ ಈಕೆ ಸೊಕ್ಕನ್ನುಂಟುಮಾಡಿದಳು (ಕಿಣ್ವವನ್ನಿಕ್ಕಿದಳು - ಮದ್ಯಪಾನ ಮಾಡುವುದರಿಂದುಂಟಾಗುವ ಮೈಮರೆಯುವಿಕೆ). ಇವಳ ಗೀತವು ಮದ್ಯಕ್ಕೆ ಚಾಕಣವನ್ನು ಬೆರಸಿದ ಹಾಗಿದೆ. ಹಾಗೆನಿಸಿಕೊಳ್ಳಲೂ ಸಾಕು ಎನ್ನಿಸಿಕೊಳ್ಳುವ ಸ್ವರ್ಗದ ಹೊಸದೇಸಿರಾಗಗಳ ಸಮೂಹವನ್ನು ಒಬ್ಬಳು ಅಪ್ಪರ ಪ್ರೀತಿಯಿಂದ ಸ್ಥಿರವಾಗಿ
24
Page #369
--------------------------------------------------------------------------
________________
೩೬೪] ಪಂಪಭಾರತಂ ಉll ಆಡದ ಮೆಗ್ಗಳಿಲ್ಲ ನಿಡುಮಯ್ದಳುಮಾಡಿದುವಂತೆ ಮೆಟ್ಟುವಲ್ :
ನೋಡಿದರೆಲ್ಲರಂ ಪಿಡಿದು ಮೆಟ್ಟಿದಳಿಟ್ಟಳಮಾಯು ದೇಸಿ ಕೆ || ಯೂಡಿದುದಿಲ್ಲ ಮಾರ್ಗಮನೆ ವಿಸ್ಮಯವಾಗಿರೆ ತನ್ನ ಮುಂದೆ ಬಂ
ದಾಡಿದಳಾ ತಿಲೋತ್ತಮೆಯನೊಲ್ಲನುಮಿಲ್ಲ ನರೇಂದ್ರತಾಪಸಃ || ೯೧
ವ|| ಅಂತಾಕೆಗಳೆಡೆಯಾಡಿಯುಂ ಮನಂಗೊಳೆ ಪಾಡಿಯುಂ ಮನುಜಮಾಂಧಾತನಂ ಸೋಲಿಸಲಾದ ಸಹಜಮನೋಜನ ರೂಪಿಂಗಂ ಸುರತಮಕರಧ್ವಜನ ಸೌಂದರ್ಯಕ್ಕಂ ಗಂಧೇಭವಿದ್ಯಾಧರನ ಗಂಡಗಾಡಿಗಂ ತಾಮೆ ಸೋಲೆಯೇ ವಂದುಕಂti ಬೂದಿ ಜೆಡೆ ಲಕ್ಕಣಂ ತಪ
ಕಾದುವರಣೆ ಶರಾಸನಂ ಕವಚಮಿವೆಂ | ತಾದುವೊ ಮುತ್ತುಂ ಮೆಣಸುಂ
ಕೋದಂತುಳೆ ನಿನ್ನ ತಪದ ಪಾಂಗೆಂತು ಗಡಾ | ಚಂ! ಕಡು ತಪದಿಂದ ನಿನ್ನ ಪಡೆಪಾವುದೊ ಗಾವಿಲ ಸಗ್ಗಮ ಪೋ
ನುಡಿಯವೊ ಮೂರ್ಖ ಸಗ್ಗದ ಫಲಂ ಸುಖಮ ಸುಖಕ್ಕೆ ಪೇಟೊಡಂ | ಬಡದವರಾರೊ ಪಂಡಿರೋಳಗಾರ್ ಪುರಾವೆ ದಲಾಮೆ ಬಂದು ಕಾ
ಊಡಿದಪೆವಿಂಬುಕೆಲ್ಯೂಡಿವು ಮಲ್ಲಡಿಗಳ ಗಡ ಕರ್ಚು ಬೂದಿಯಂ 1೯೩ ಹಾಡಿದಳು.* ೯೧. ಶರೀರದ ಯಾವ ಭಾಗವೂ ಚಲಿಸದಿರಲಿಲ್ಲ: ದೀರ್ಘವಾದ ಶರೀರವೂ ಹಾಗೆ ಪೂರ್ಣವಾಗಿ ಚಲಿಸಿತು. ಅವಳು ಪ್ರೇಕ್ಷಕರೆಲ್ಲರನ್ನು ಹಿಡಿದು ಮೆಟ್ಟಿದಳು; ಮಾರ್ಗಮಿಶ್ರವಿಲ್ಲದ ಇವಳ ದೇಶೀಯತೆ ಬಹು ರಮಣೀಯವಾಯಿತು; ಆದರೂ ಯಾರಿಗೂ ಅವಳು ಅಧೀನಳಾಗಲಿಲ್ಲ ಎಂದು ಆಶ್ಚರ್ಯವಾಗುವ ಹಾಗೆ ತನ್ನ ಮುಂದೆ ನಾಟ್ಯವಾಡಿದ ತಿಲೋತ್ತಮೆಯನ್ನೂ ರಾಜತಾಪಸನಾದ ಅರ್ಜುನನು ಮೋಹಿಸಲಿಲ್ಲ. ವ|| ಹಾಗೆ ಆ ಅಪ್ಪರಸ್ತ್ರೀಯರು ಸಮೀಪದಲ್ಲಿಯೇ ಓಡಿಯಾಡಿಯೂ ಮನೋಹರವಾಗಿರುವ ಹಾಗೆ ಹಾಡಿಯೂ ಮನುಜಮಾಂಧಾತನಾದ ಅರ್ಜುನನನ್ನು ಸೋಲಿಸಲು ಅಶಕ್ತರಾಗಿ ಸಹಜಮನ್ಮಥನಾದ ಅರ್ಜುನನ ರೂಪಕ್ಕೂ ಸುರತ ಮಕರ ಧ್ವಜನಾದ ಅವನ ಸೌಂದರ್ಯಕ್ಕೂ ಗಂಧೇಭವಿದ್ಯಾಧರನ ಪೌರುಷದ ಸೊಬಗಿಗೂ ತಾವೇ ಸೋತು ಅವನ ಸಮೀಪಕ್ಕೆ ಬಂದು ಅವನನ್ನೇ ಪ್ರಶ್ನಿಸಿದರು. ೯೨. ವಿಭೂತಿ ಮತ್ತು ಜಡೆಯ ಲಕ್ಷಣಗಳು ತಪಸ್ಸಿಗೆ ಹೊಂದಿಕೊಳ್ಳುತ್ತವೆ. ಆದರೆ ಎರಡು ಬತ್ತಳಿಕೆ ಬಿಲ್ಲು ಕವಚ ಇವು ಹೇಗೆ ಹೊಂದಿಕೊಳ್ಳುತ್ತವೆ? ಮುತ್ತನ್ನೂ ಮೆಣಸನ್ನೂ ಕೋದಂತಿರುವ ಈ ನಿನ್ನ ತಪಸ್ಸಿನ ರೀತಿ ಅದೆಂತಹುದು? ೯೩. ಎಲೋ ದಡ್ಡ, ತೀವ್ರವಾದ ತಪಸ್ಸಿನಿಂದ ನೀನು ಪಡೆಯಬೇಕಾದ ವಸ್ತು ತಾನೆ ಏನು ? ಸ್ವರ್ಗವಲ್ಲವೇ, ಹೋಗು ಮೂರ್ಖ, ಮಾತನಾಡಬೇಡ, ಸ್ವರ್ಗದ ಫಲವೂ ಸುಖವೇ ಅಲ್ಲವೇ?
*ಇಲ್ಲಿಯ ಸೊರ್ಕು, ಚಕ್ಕಣ, ಸಾಗು ಎನ್ನುವ ಪದಗಳಿಗೆ ಸರಿಯಾದ ಅರ್ಥವಾಗಿಲ್ಲ. ಮದ್ಯಪಾಮಾಡುವುದರಿಂದುಂಟಾಗುವ ಮೈಮರೆಯುವಿಕೆ, ಅಮಲೇರುವುದು ಎಂದು ಅರ್ಥವಾಗಬಹುದು.
Page #370
--------------------------------------------------------------------------
________________
ಸಪ್ತಮಾಶ್ವಾಸಂ / ೩೬೫ ಕಂ|| ಕೋಕಿಳಕುಳಕಳ ಗಳನಿನ
ದಾಕುಳರವಮಿಂಪನಾಗಳುಂ ಪಡೆದುದು ನೋ | ಡೀಕೆಗಳ ಚಳಿತ ಲುಳಿತ
ಭೂಕುಟಿಯೇ ಪರಮ ಸುಖದ ಕೋಟಿಯನೀಗುಂ || ೯೪ ವಗ ಎಂದೆನಿತಾನುಂ ತಳದೊಳಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳಂ ನುಡಿದುಂ ಕಾಲ್ವಿಡಿದುಮಚಳಿತಧೈರ್ಯನ ಮನಮಂ ಚಳಿಯಿಸಲಾಟದಚ್ಚರಸೆಯರಗಂಗೊಂಡಂತಾಗೆಯುಂ ಗಂಧರ್ವರ್ ಗರ್ವಮನುಟಿದು ಪೋಗೆಯುಂ ಕಾಮದೇವನೇವಮಂ ಕೆಯ್ಯೋಂಡು ಸೀಂತಂತೆ ಮೊಗಮಾಡಿ ಪೋಗಿ ದೇವೇಂದ್ರನ ಮೊಗಮಂ ನೋಡಲ್ ನಾಣ್ಣಿರ್ದನಾಗಳಿಂದ ನರೇಂದ್ರತಾಪಸನ ಧೈರ್ಯಕ್ಕೆ ಮೆಚ್ಚಿ ಧರಾಮರವೇಷದೊಳಿಂದ್ರಕೀಲನಗೇಂದ್ರಮನೆಯ್ದವಂದುಮll ಸll ಕಣಿಯಂ ಶೌರ್ಯಾಭಿಮಾನಕ್ಕೆಡದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ ಬ
qಣಿಯಂ ಕಲ್ಲಾರ ಸಾರಾಮೃತ ಶಶಿ ವಿಶದಾಯವಂಶಕ್ಕೆ ಚೂಡಾ | ಮಣಿಯಂ ತೀವ್ರ ಪ್ರತಾಪ ದ್ಯುಮಣಿಯನೆರೆದರ್ಥಿವಜಂಗಕ್ಕೆ ಚಿಂತಾ ಮಣಿಯಂ ಸಾಮಂತಚೂಡಾಮಣಿಯನಣಿಯರಂ ಬಂದು ಕಂಡಂ
ಸುರೇಂದ್ರಂ || ೯೫
ಸುಖಕ್ಕೆ ಒಪ್ಪದವರಾರಿದ್ದಾರೆ, ಸ್ತ್ರೀಯರಲ್ಲಿ ನಮಗಿಂತ ಸೌಂದರ್ಯವತಿಯ ರಾದವರಾರು ? ನಾವೇ ಅಲ್ಲವೇ (ಪರಮ ಸೌಂದರ್ಯವತಿಯರಾದವರು) ನಾವೇ ಬಂದು ನಿನ್ನ ಕಾಲನ್ನು ಹಿಡಿಯುತ್ತಿದ್ದೇವೆ. ಈ ಮೃದುವಾದ ನಿನ್ನ ಕಾಲುಗಳು ನಾವು ಆಶ್ರಯಿಸುವುದಕ್ಕೆ ಯೋಗ್ಯವಾದುವಲ್ಲವೇ? ಬೂದಿಯನ್ನು ತೊಳೆದುಕೊ. ೯೪. ಇಗೋ ಕೋಗಿಲೆಗಳ ಸಮೂಹದ ಕಂಠದ್ವನಿ ಯಾವಾಗಲೂ ಮಾಧುರ್ಯವನ್ನು ಪಡೆದಿದೆ. ನೋಡು ಈ ಅಪ್ಸರೆಯರ ಚಲಿಸುತ್ತಿರುವ ವಕ್ರವಾದ ಹುಬ್ಬುಗಳ ತುದಿಗಳೇ ಸುಖದ ಪರಮಾವಧಿಯನ್ನುಂಟುಮಾಡುತ್ತವೆ. ವ|| ಎಂಬುದಾಗಿ ಎಷ್ಟೋ ರೀತಿಯ ಪ್ರೇಮದ, ಮುದ್ದಿನ, ಚೆಲ್ಲಾಟದ, ಹುರುಡಿನ, ಕೋಪದ, ನೆಪದ ಪ್ರತಿಮಾತುಗಳನ್ನು ಆಡಿ ಕಾಲು ಹಿಡಿದೂ ಸ್ಥಿರ ಚಿತ್ತನಾದ ಅರ್ಜುನನ ಮನಸ್ಸನ್ನು ಕದಲಿಸಲಸಮರ್ಥರಾದರು. ಅಪ್ಪರಸ್ತ್ರೀಯರು ವ್ಯಸನಗೊಂಡವರಂತೆ ಅಸಮಾಧಾನ ವನ್ನು ಹೊಂದಿದರು. ಗಂಧರ್ವರು ತಮ್ಮ ಅಹಂಕಾರವನ್ನು ತೊರೆದರು. ಮನ್ಮಥನು ಅವಮಾನವನ್ನು ಹೊಂದಿ ಸೀಂತ ಹಾಗೆ ಮುಖವನ್ನು ಮಾಡಿಕೊಂಡು ಹೋಗಿ ದೇವೇಂದ್ರನ ಮುಖವನ್ನು ನೋಡಲು ನಾಚಿಕೆಗೊಂಡನು. ಆಗ ಇಂದ್ರನು ರಾಜತಾಪಸನಾದ ಅರ್ಜುನನ ಧೈರ್ಯಕ್ಕೆ ಮೆಚ್ಚಿ ಬ್ರಾಹ್ಮಣವೇಷದಲ್ಲಿ ತಾನೇ ಇಂದ್ರಕೀಲಪರ್ವತಕ್ಕೆ ಬಂದನು. ೯೫, ಶೌರ್ಯಾಭಿಮಾನಿಗಳಿಗೆ ಗಣಿಯೂ ಯುದ್ದದಲ್ಲಿ ಪ್ರತಿಭಟಿಸಿದ ಶತ್ರುಸೈನ್ಯಕ್ಕೆ ಬಹು ಶೂರನೂ, ಕಲ್ಲಾರ ಪುಷ್ಪದಂತೆಯೂ ಸಾರವತ್ತಾದ ಅಮೃತದಂತೆಯೂ, ಚಂದ್ರಮಂಡಲದಂತೆಯೂ ಸ್ವಚ್ಛವಾಗಿರುವ ತನ್ನ ವಂಶಕ್ಕೆ ತಲೆಯಾಭರಣವೂ ತೀಕ್ಷ್ಮವಾದ ಪ್ರತಾಪದಲ್ಲಿ ಸೂರ್ಯನೂ ಬೇಡುವ
Page #371
--------------------------------------------------------------------------
________________
೩೬೬ | ಪಂಪಭಾರತಂ
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ - ವರಪ್ರಸಾದೋತ್ಪನ್ನಪ್ರಸನ್ನಗಂಭೀರವಚನರಚನ ಚತುರಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್
ಸಪ್ತಮಾಶ್ವಾಸಂ
ಯಾಚಕವರ್ಗಕ್ಕೆ ಚಿಂತಾಮಣಿಯೂ ಸಾಮಂತಚೂಡಾಮಣಿಯೂ ಆದ ಅರ್ಜುನನನ್ನು ಇಂದ್ರನು ಬಂದು ಕಂಡನು.
ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಏಳನೆಯ ಆಶ್ವಾಸ.
Page #372
--------------------------------------------------------------------------
________________
ಅಷ್ಟಮಾಶ್ವಾಸಂ ಕಂ|| ಶ್ರೀಯಂ ಭುಜಬಳದಿಂ ನಿ
ರ್ದಾಯಾದ್ಯಂ ಮಾಲ್ಪ ಬಗೆಯಿನವಿಕಳನಿಯಮ | ಶ್ರೀಯನಳವಡಿಸಿ ನಿಂದ ಧ ರಾಯುವತೀಶನನುದಾತ್ತನಾರಾಯಣನಂ || ಕಂಡು ನಿಜತನಯನಳವರ್ದ ಗೊಂಡಿರ ಮುದುಪಾರ್ವನಾಗಿ ಮೆಲ್ಲನೆ ಸಾರ್ವಾ | ಖಂಡಳನಂ ಕಾಣಲೊಡಂ
ಗಾಂಡೀವಿಗಿರದುರ್ಚಿ ಪಾಯುವಶ್ರುಜಲಂಗಳ್ | ವ|| ಅಂತು ಮನದೊಳಾದ ಮೊಹರಸಮ ಕಣ್ಣಂ ತುಳುಂಕುವಂತ ಪೋಪೊಣುವ ನಯನಜಲಂಗಳನುತ್ತರೀಯವಲ್ಕಲವಸನೋಪಾಂತದೊಳೊತ್ತುತುಮತಿಥಿಗತಿಥಿಸತ್ಕಾರಮಲ್ಲಮಂ ನಯ ಮಾಡಿದಾಗಳಿಂದ್ರಂನರೇಂದ್ರತಾಪಸನನಿಂತೆಂದಂಕಂ|| ನೀನಾರ್ಗ ನಿನ್ನ ಹೆಸರೇ
ನೀ ನಿಯಮಕ್ಕೆಂತು ಮಯ್ಯನೊಡ್ಡಿದೆಯಿದು ದಲ್ | ತಾನಾಶ್ಚರ್ಯವಿದೇನ
ಜ್ಞಾನಿಯವೋಲ್ ತಪಕೆ ಬಿಲ್ಲುಮಂಬುಂ ದೊರೆಯ | ವ|| ಎನ ಸಾಹಸಾಭರಣನಿಂತೆಂದಂಕಂil ನಿನ್ನೆಂದಂತುಟಿ ಮೋಕ್ಷ
ಕೈರ್ಪಿರವಘಟಮಾನವೃಹಿಕದ ತೊಡ | ರ್ಪಭೈರವಿನೂಳುಂಟಪದ
ನಿನ್ನಂ ಪುಸಿಯಾಡಿ ಕಾಡನಗೇಂ ದೊರೆಯೇ || ೧. ತನ್ನ ಬಾಹುಬಲದಿಂದ ಜಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಅಭಿಪ್ರಾಯದಿಂದ ಸ್ವಲ್ಪವೂ ಊನವಿಲ್ಲದ ತಪೋನಿಷ್ಠೆಯೆಂಬ ಲಕ್ಷಿಯೊಡನೆ ಕೂಡಿಕೊಂಡು ತಪಸ್ಸು ಮಾಡುತ್ತಿದ್ದ ಭೂಪತಿಯೂ ಉದಾತ್ತ ನಾರಾಯಣನೂ ಆದ ಅರ್ಜುನನನ್ನು ಇಂದ್ರನು ಕಂಡನು. ೨. ತನ್ನ ಮಗನ ಪರಾಕ್ರಮವನ್ನು ನೋಡಿ ಎದೆಯು ಸೂರೆಗೊಂಡಿತು. ಮುದಿಬ್ರಾಹ್ಮಣನ ವೇಷದಲ್ಲಿ ಬರುತ್ತಿದ್ದ ಇಂದ್ರನನ್ನು ನೋಡಿ ಅರ್ಜುನನಿಗೆ ಕಣ್ಣೀರು ಥಟ್ಟನೆ ಚಿಮ್ಮಿತು. ವ|| ಹಾಗೆ ಮನಸ್ಸಿನಲ್ಲುಂಟಾದ ಮೊಹರಸವೇ ಕಣ್ಣಿನಿಂದ ತುಳುಕುವಂತೆ ಹೊರಹೊರಡುವ ಕಣ್ಣೀರನ್ನು ಮೇಲೆ ಹೊಡೆದಿದ್ದ ನಾರುಮಡಿಯ ಅಂಚಿನಿಂದ ಒರೆಸಿಕೊಳ್ಳುತ್ತ ಅತಿಥಿಯಾದ ಇಂದ್ರನಿಗೆ ಅತಿಥಿಸತ್ಕಾರವೆಲ್ಲವನ್ನೂ ಮಾಡಿದಾಗ ಇಂದ್ರನು ರಾಜತಪಸ್ವಿಯಾದ ಅರ್ಜುನನನ್ನು ಕುರಿತು ಪ್ರಶ್ನೆ ಮಾಡಿದನು.೩. ನೀನಾರವನು? ನಿನ್ನ ಹೆಸರೇನು ? ಈ ನಿಯಮಕ್ಕೆ ಶರೀರವನ್ನು ಏಕೆ ಅಧೀನಗೊಳಿಸಿದೆ. ಇದು ನಿಜವಾಗಿಯೂ ಆಶ್ಚರ್ಯ. ಅಜ್ಞಾನಿಯ ಹಾಗೆ ಇದೇನು ತಪಸ್ಸಿಗೆ ಯೋಗ್ಯವಲ್ಲದ ಬಿಲ್ಲು ಬಾಣಗಳನ್ನು ತೊಟ್ಟಿದ್ದೀಯಲ್ಲ, ವಗ ಎನ್ನಲು, ಸಾಹಸಾಭರಣನಾದ ಅರ್ಜುನನು ಹೀಗೆಂದನು. ೪. ನೀನು ಹೇಳಿದ ಹಾಗೆಯೇ
Page #373
--------------------------------------------------------------------------
________________
೩೬೮ | ಪಂಪಭಾರತಂ ಮಗ ನಿನಗಂ ಪೇಚಿತ್ತೊಡೆ ಪಾಂಡುರಾಜತನಯಂ ಗಾಂಡೀವಿಯಂ ದಾಯಿಗಂ
ಗೆ ನೆಲಂ ಊದಿನೊಳೊತ್ತವೋಗೆ ಬನಮಂ ಪೊಕ್ಕಣ್ಣನೆಂದೊಂದು ಮಾ || ತನಣಂ ಮಾಜಿದೆ ನಿಂದು ಶಂಕರನ ನೀನಾರಾಧಿಸಂದಿಂತಿದಂ
ಮುನಿ ಪಾರಾಶರನೊಲ್ಲು ಪೇಟ ಹರ ಬರ್ಪನ್ನಂ ತಪಂಗೆಯ್ಯಪಂ || ೫ ವ|| ಅಂತುಮಲ್ಲದೆಚಂl ಸುರಿತ ತಪೋಮಯಾನಳನಿಯೊಡಲಂ ನೆಗಟೀ ಗಿರೀಂದ್ರ ಕಂ
ದರದೊಳಗಿಂತ ದಲ್ ಕರಗಿಪಂ ಪೆಜತೇಂ ಪಡೆಮಾತೂ ಮೇಣ್ ಪುರಂ | ದರನೊಸೆದಿತ್ತುದೊಂದು ಬರದಿಂದುಜದನ್ನ ವಿರೋಧಿವರ್ಗಮಂ ಕರಗಿಪೆನಲ್ಲದಿಲ್ಲಿ ಸೆರಗ ಬೆರಗಂ ಬಗೆಯಂ ದ್ವಿಜೋತ್ತಮಾ || ಎನೆಯೆನೆ ರತ್ನ ರಶ್ಮಿ ಜಟಳಂ ಮಕುಟಂ ಮಣಿಕುಂಡಳಂ ಕನ ತನಕ ಪಿಶಂಗ ದೇಹರುಚಿ ನೀಳಸರೋಜವನಂಗಳಾಗಳು | ಇನಿತುಮರಲ್ಯವೋಲ್ ಪೊಳೆವ ಕಣ್ಣಳುಮಟ್ಕಜಿನೀಯ ವಿಕ್ರಮಾ
ರ್ಜುನನ ಮನಕ್ಕೆ ತೋಚಿದನಿಳಾಮರನಂದಮರೇಂದ್ರರೂಪಮಂ || ೭
ವ|| ಅಂತು ತನ್ನ ಸಹಜರೂಪಮಂ ತೋಟಿ ಮನದಲಿಂ ಅಲೆಂದು ಮಗನನಪ್ಪಿಕೊಂಡು
ನನ್ನ ಸ್ಥಿತಿ ಮೋಕ್ಷಸಾಧನೆಗೆ ಹೊಂದಿಕೊಳ್ಳತಕ್ಕುದಲ್ಲ; ಇದು ಇಹಲೋಕದ ಬಂಧನಕ್ಕೊಳಗಾದುದು. ಅದನ್ನು ಹೇಳದೆ ಸುಳ್ಳು ಹೇಳಿ ನಿಮ್ಮನ್ನು ಕಾಡುವುದು ನನಗೆ ಯೋಗ್ಯವಲ್ಲ. ೫. ನಿನಗೆ ಹೇಳುವುದಾದರೆ ನಾನು ಪಾಂಡುರಾಜನ ಮಗ, ಗಾಂಡೀವಿಯಾಗಿದ್ದೇನೆ. ರಾಜ್ಯವು ಜೂಜಿನಲ್ಲಿ ದಾಯಾದಿಯಾದ ದುರ್ಯೋಧನನಿಗೆ ಒತ್ತೆಯಾಗಿ ಹೋಗಲು ಅಣ್ಣನ ಮಾತನ್ನು ಸ್ವಲ್ಪವೂ ಮೀರದೆ ಅರಣ್ಯಪ್ರವೇಶಮಾಡಿ ಸ್ಥಿರವಾಗಿ ನಿಂತೆವು. ಶಂಕರನನ್ನು ಆರಾಧಿಸು ಎಂದು ವ್ಯಾಸಮಹರ್ಷಿಯು ಪ್ರೀತಿಯಿಂದ ಹೇಳಲಾಗಿ (ಅದರ ಪ್ರಕಾರ) ಈಶ್ವರನು ಪ್ರತ್ಯಕ್ಷವಾಗುವವರೆಗೆ ತಪಸ್ಸನ್ನು ಮಾಡುತ್ತೇನೆ. ವ|| ಹಾಗಲ್ಲದೆ - ೬. ಎಲೈ ಬ್ರಾಹ್ಮಣಶ್ರೇಷ್ಠನೇ ಪ್ರಕಾಶಮಾನವಾದ ತಪಸ್ಸೆಂಬ ಬೆಂಕಿಯಿಂದ ಈ ನನ್ನ ಶರೀರವನ್ನು ಪ್ರಸಿದ್ಧವಾದ ಈ ಕಣಿವೆಯಲ್ಲಿ ಹೀಗೆಯೇ ಕರಗಿಸುತ್ತೇನೆ ನನಗೆ ಬೇರೆ ಮಾತೇ ಇಲ್ಲ. ಮತ್ತು ಆ ಶಿವನು ಪ್ರೀತಿಯಿಂದ ಕೊಡುವ ಒಂದು ವರದಿಂದ ಸಾವಕಾಶ ಮಾಡದೆ ನನ್ನ ಶತ್ರುಸಮೂಹವನ್ನು ಕರಗಿಸುತ್ತೇನೆ: ಹಾಗಲ್ಲದೆ ಇಲ್ಲಿ ನಾನು ಅಪಾಯ ಉಪಾಯಗಳಾವುದನ್ನೂ ಯೋಚನೆಮಾಡುವುದಿಲ್ಲ. ೭. ಎನ್ನುತ್ತಿರುವಾಗಲೇ ರತ್ನಗಳ ಕಾಂತಿಯು ಹೆಣೆದಿರುವ ಕಿರೀಟವೂ ರತ್ನಖಚಿತವಾದ ಕಿವಿಯಾಭರಣವೂ ಹೊಳೆಯುವ ಚಿನ್ನದಂತೆ ಕೆಂಪುಮಿಶ್ರವಾದ ಹೊಂಬಣ್ಣದ ದೇಹಕಾಂತಿಯೂ ಕನ್ನೈದಿಲೆಯ ವನಗಳನ್ನು ಪೂರ್ಣವಾಗಿ ಅರಳುವ ಹಾಗೆ ಮಾಡುವ ಸಾವಿರ ಕಣ್ಣುಗಳೂ ವಿಕ್ರಮಾರ್ಜುನನ ಮನಸ್ಸಿಗೆ ಪ್ರೀತಿಯನ್ನುಂಟುಮಾಡುತ್ತಿರಲು ಆ ಬ್ರಾಹ್ಮಣನ ವೇಷದಲ್ಲಿದ್ದ ಇಂದ್ರನು ತನ್ನ ನಿಜಸ್ವರೂಪವನ್ನು ತೋರಿಸಿದನು. ವll ಹಾಗೆ ತನ್ನ ಸ್ವಭಾವಸಿದ್ಧವಾದ ಆಕಾರವನ್ನು ತೋರಿಸಿ ಮನಸ್ಸಿನ ಪ್ರೀತಿಯನ್ನು
Page #374
--------------------------------------------------------------------------
________________
ಕಂ|
ಅಷ್ಟಮಾಶ್ವಾಸಂ | ೩೬೯ ಸಾಧಿಸುವೊಡಮರಿನ್ನಪರಂ ಸಾಧಿಸುವೊಡಮಸ್ತಚಯಮನನ್ನುಂ ತನುವಂ | ಬಾಧಿಸು ತಪೋಗ್ನಿಯಿಂದಾ ರಾಧಿಸು ನೀಂ ಮಗನೆ ದುರಿತಹರನಂ ಹರನಂ ||
` ಎಂದು ತಿರೋಹಿತನಾಗಿ ಪು ರಂದರನುಂ ಪೋದನಿತ್ತ ತಪದೋಳ್ ನರನಿಂ || ತೊಂದಿ ನಿಲೆ ತಪದ ಬಿಸುಪಿಂ ಬೆಂದವಿದುದು ವನದೊಳುಳ್ಳ ತಪಸಿಯರ ತಪಂ || ೯ ಖರಕರಕಿರಣಾವಳಿಯಂ ಪರಿದುಟ್ಟಿದುವು ಹಗಲಿರುಳೂ ಶಶಿರುಚಿಯಂ | ಪರಿಭವಿಸಿ ನಭಮನಡರ್ದುವು
ನರೇಂದ್ರತಾಪಸತಪೋಮಯೂಖಾವಳಿಗಳ್ || ವ|| ಅಂತುಗೋಗ್ರತಪಂಗೆಯ್ಯ ತತ್ತಪತೃಪನವಿಪುಳಮರೀಚಿಗಳ ತಮಗೆ ತಪವಿಭಾ ತಮಂ ಮಾಡುವುದುಮಿಂದ್ರಕೀಲನಗೇಂದ್ರದ ತಪೋಧನರೆಲ್ಲಂ ನೆರೆದು ಬಂದು ಕೈಲಾಸದೊಳ್ ವಿಳಾಸಂಚರಸು ಗಿರಿಜೆಯೊಳ್ ತಳಿರ್ದ ಬಾಳೇಂದುಚೂಡಾಮಣಿಗೆ ಸಾಮಂತಚೂಡಾಮಣಿಯ ತಪಃಪ್ರಭಾವಮನಿಂತೆಂದು ಬಿನ್ನಪಂಗೆಯ್ದರ್ಮಲ್ಲಿಕಾಮಾಲೆ || ಆವನೆಂದರೆಯ ಬಾರದಪೂರ್ವನೋರ್ವನರಾತಿವಿ
ದ್ರಾವಣಂ ತಪಕೆಂದು ನಿಂತೊಡೆ ತತ್ತಪೋಮಯಪಾವಕಂ | ದಾವಪಾವಕನಂತೆವೋಲ್ ಸುಡ ಬೆಂದುವಮ್ಮ ತಪಂಗಳಿ
ನಾವ ಶೈಳದೊಳಿರ್ಪವಿರ್ಪಡೆವೇ ನೀಂ ತ್ರಿಪುರಾಂತಕಾ | ತೋರಬೇಕೆಂದು ಮಗನನ್ನು ತಬ್ಬಿಕೊಂಡು ೮. ಮಗನೇ ನೀನು ಶತ್ರುರಾಜರನ್ನು ಗೆಲ್ಲುವುದಕ್ಕಾಗಿ ಬಾಣ(ಅಸ್ತಸಮೂಹವನ್ನು ಪಡೆಯಬೇಕಾದ ಪಕ್ಷದಲ್ಲಿ ತಪೋಗ್ನಿಯಿಂದ ನಿನ್ನ ಶರೀರವನ್ನು ಇನ್ನೂ ದಂಡಿಸು, ಪಾಪವನ್ನು ಹೋಗಲಾಡಿಸುವ ಶಿವನನ್ನು ನೀನು ಆರಾಧನೆ ಮಾಡು. ೯. ಎಂಬುದಾಗಿ ಹೇಳಿ ಇಂದ್ರನು ಅದೃಶ್ಯನಾದನು. ಈ ಕಡೆ ಅರ್ಜುನನು ತಪಸ್ಸಿನಲ್ಲಿ ನಿರತನಾದನು. ತಪಸ್ಸಿನ ಬೆಂಕಿಯಿಂದ ಆ ಕಾಡಿನಲ್ಲಿದ್ದ ತಪಸ್ವಿಗಳ ತಪಸ್ಸೆಲ್ಲವೂ ಸುಟ್ಟು ನಾಶವಾದುವು. ೧೦. ರಾಜತಪಸ್ವಿಯಾದ ಅರ್ಜುನನ ತಪಸ್ಸಿನ ಕಿರಣಸಮೂಹಗಳು ಹಗಲಿನಲ್ಲಿ ಸೂರ್ಯಕಿರಣಗಳ ಸಮೂಹವನ್ನು ಹಿಮ್ಮೆಟ್ಟಿ ಎಬ್ಬಿಸಿ ಓಡಿಸಿದುವು. ರಾತ್ರಿಯಲ್ಲಿ ಚಂದ್ರನ ಕಾಂತಿಯನ್ನು ಹಿಯ್ಯಾಳಿಸಿ ಆಕಾಶಕ್ಕೇರಿದುವು. ವ|| ಹಾಗೆ ಅತ್ಯುಗ್ರವಾದ ತಪಸ್ಸನ್ನು ಮಾಡಲು ಆ ತಪೋಗ್ನಿಯ ವಿಶೇಷ ಕಿರಣಗಳು ತಮ್ಮ ತಪಸ್ಸಿಗೆ ಹಾನಿಯನ್ನುಂಟುಮಾಡಲು ಇಂದ್ರಕೀಲಪರ್ವತದಲ್ಲಿದ್ದ ತಪೋಧನರೆಲ್ಲರೂ ಒಟ್ಟುಗೂಡಿ ಬಂದು ಕೈಲಾಸಪರ್ವತದಲ್ಲಿ ವಿಳಾಸದಿಂದ ಕೂಡಿ ಪಾರ್ವತಿಯೊಡನಿದ್ದ ಶಿವನಿಗೆ ಸಾಮಂತಚೂಡಾಮಣಿಯ ತಪಸ್ಸಿನ ಪ್ರಭಾವವನ್ನು ಹೀಗೆಂದು ವಿಜ್ಞಾಪನೆಮಾಡಿದರು. ೧೧: ಯಾರೆಂದು ತಿಳಿಯಲಾಗುವುದಿಲ್ಲ. ಹಿಂದೆಂದೂ
Page #375
--------------------------------------------------------------------------
________________
೩೭೦ | ಪಂಪಭಾರತಂ ಕ೦ll ಆರೋಪಿತಚಾಪಂ ಸಂ
ಧಾರಿತಕವಚಂ ಧೃತೂಗ್ರಶರಧಿಯುಗಂ ತಾ | ನಾರಂದಮಲ್ಲವಂ ತ್ರಿಪು
ರಾರೀ ಕೇಳ್ ತ್ರಿಪುರಮಿಸುವ ನಿನ್ನನೆ ಪೋಲ್ವಂ || ವ|| ಎಂಬುದುಮದಲ್ಲಮಂ ಕೇಳ್ತಾತನವನೆಂಬುದನಟಿಯಲೆಂದುಕಂ|| ಧ್ಯಾನದೊಳಭವಂ ನೆಅದಿನಿ
ಸಾನುಮನರೆ ಮುಚ್ಚಿ ಕಣ್ಣಳಂ ನಿಶ್ಚಳಿತಂ | ತಾನಿರ್ದು ಮಣಿದು ಕೆಂದಿದ ಮಾನಂ ತಳ್ಳಾಡದಿರ್ದ ಮಡುವ ಪೋಲ್ಕಂ ||
೧೩ - ವ|| ಅಂತು ಫೋಲ್ಕು ದಿವ್ಯಜ್ಞಾನದೊಳ್ ಮಹೇಶ್ವರನುದಾರಮಹೇಶ್ವರನಪ್ಪುದನಳಿದು ಬೆರಲಂ ಮಿಡಿದು ಮುಗುಳ್ಳಗೆ ನಕ್ಕು ನೆನೆದಾತಂಗೆ ತಕ್ಕುದನಾನೆ ಬಲ್ಲೆನೆಂದು ಮುನೀಂದ್ರ ವೃಂದಮಂ ಪೋಗಲ್ವೆಟ್ಟು ಮುನ್ನ ದೇವೇಂದ್ರಂ ತನಗೆ ಮೂಕದಾನವನ ಪುಯ್ಯಲಂ ಬಿನ್ನಪಂಗೆ ಯುದನವಧಾರಿಸಿ ಮೂಕದಾನವನಾದಿವರಾಹರೂಪದೊಳಿರ್ದುದುಮನಳಿದು ಮನುಜ ಮಾಂಧಾತನಿಂದಮಾ ದೈತ್ಯನಂ ಕೊಲಿಸಲುಂ ಸಾಹಸಾಭರಣನೊಳೇನಾನುಮೊಡಂಬಡಂ ಮಾಡಿ ಮಾಯಾಯುದ್ಧದೊಳಾತನ ಸಾಹಸದ ಬಲದ ಬಿಲ್ಲಾಳನದಳವಿಗಳನಳೆದು ನೋಡಿ ವರದನಪ್ಪನೆಂಬುದುಮಂ ಬಗೆದು
ಕಾಣದಿರುವ ಶತ್ರುಸಂಹಾರಕನಾದ ಅವನು ತಪಸ್ಸಿಗೆಂದು ನಿಲ್ಲಲು ಅವನ ತಪಸ್ಸಿನಿಂದುಂಟಾದ ಬೆಂಕಿಯಿಂದ ಬೆಂಕಿಯು ಕಾಡಕಿಚ್ಚನ್ನು ಸುಡುವ ಹಾಗೆ ನಮ್ಮ ತಪಸ್ಸುಗಳೆಲ್ಲ ಬೆಂದು ಹೋದುವು. ಬೇರೆ ಯಾವ ಪರ್ವತದಲ್ಲಿರೋಣ, ನಾವು ಇರಬೇಕಾದ ಸ್ಥಳವನ್ನು ಶಿವನೇ ನೀನು ಹೇಳು. ೧೨. ಹೆದೆಯೇರಿಸಿದ ಬಿಲ್ಲು, ತೊಟ್ಟ ಕವಚ, ಬೆನ್ನಲ್ಲಿ ಧರಿಸಿರುವ ಭಯಂಕರವಾದ ಎರಡು ಬತ್ತಳಿಕೆಗಳು. ಇವನ್ನುಳ್ಳ ಅವನು ಬೇರೆಯಾದ ರೀತಿಯವನೂ ಅಲ್ಲ. ಪರಶಿವನೇ, ತ್ರಿಪುರಾಸುರಸಂಹಾರಕ್ಕೆ ಬಾಣಸಂಧಾನ ಮಾಡಿದ ನಿನ್ನನ್ನೇ ಹೋಲುತ್ತಾನೆ ಎಂದರು. ವ|| ಅದೆಲ್ಲವನ್ನೂ ಕೇಳಿ ಅವನು ಯಾರೆಂಬುದನ್ನು ತಿಳಿಯಬೇಕೆಂದು ೧೩. ಶಿವನು ಧ್ಯಾನಮಗ್ನನಾಗಿ ಕಣ್ಣುಗಳನ್ನು ಅರ್ಧಮುಚ್ಚಿ ನಿಶ್ಚಲಚಿತ್ತನಾಗಿದ್ದು ಮೈಮರೆತು ಮಲಗಿರುವ ಮೀನು ಗಳಿಂದ ಕೂಡಿದ ನಿಶ್ಚಲವಾಗಿರುವ ಮಡುವಿಗೆ ಸಮಾನನಾದನು. ವ|| ಹಾಗೆ ಹೋಲಿ ತನ್ನ ದಿವ್ಯಜ್ಞಾನದಿಂದ ಶಿವನು,ತಪಸ್ಸು ಮಾಡುತ್ತಿದ್ದವನು ಉದಾರಮಹೇಶ್ವರನಾದ ಅರ್ಜುನನಾಗಿರುವುದನ್ನು ತಿಳಿದನು. (ಸಂತೋಷದಿಂದ) ಬೆರಳನ್ನು ಚಿಟಿಕಿಸಿ ಹುಸಿನಗೆ ನಕ್ಕು ಜ್ಞಾಪಿಸಿಕೊಂಡು ಆತನಿಗೆ ಯೋಗ್ಯವಾದುದನ್ನು ಮಾಡುವುದಕ್ಕೆ ನಾನು ಬಲ್ಲೆ, ನೀವು ಹೊರಡಿ ಎಂದು ಋಷಿಶ್ರೇಷ್ಠರ ಸಮೂಹವನ್ನು ಕಳುಹಿಸಿಕೊಟ್ಟನು. ಹಿಂದೆ ದೇವೇಂದ್ರನು ತನಗೆ ಮೂಕದಾನವನಿಂದಾದ ಕೇಡನ್ನು ತನ್ನೊಡನೆ ವಿಜ್ಞಾಪಿಸಿಕೊಂಡು ದನ್ನು ಜ್ಞಾಪಿಸಿಕೊಂಡನು. ಆ ಮೂಕದಾನವನು ಆದಿವರಾಹರೂಪದಲ್ಲಿರುವುದನ್ನು ತಿಳಿದು ಅರ್ಜುನನಿಂದ ಆ ದೈತ್ಯನನ್ನು ಕೊಲ್ಲಿಸುತ್ತೇನೆ. ಅರ್ಜುನನೊಡನೆ ಏನಾದರೂ
Page #376
--------------------------------------------------------------------------
________________
ಚಂ||
ಅಷ್ಟಮಾಶ್ವಾಸಂ | ೩೭೧ ವನಚರನಾಗಿ ಶಂಭು ಗಿರಿಜಾತೆಯನೋತು ಪುಳಿಂದಿ ಮಾಡಿ ನ ಚಿನ ಗುಹನ ಕಿರಾತಬಲ ನಾಯಕನಾಗಿರೆ ಮಾಡಿ ಭೂತಮು | ಇನಿತುಮನಯ ಬೇಡವಡ ಮಾಡಿ ಯುಗಾಂತ ಪಯೋಧರಾ ಭೂಂ ಕನೆ ಕವಿವಂದದಿಂ ಕವಿದನಾ ಬನಮಂ ಮೃಗಯಾನಿಧಾನಮಂ ೧೪
ವl ಅಂತು ಕವಿದೊಡಾ ಕಳಕಳವಯಿಸಿ ವರಾಹರೂಪದ ಮೂಕದಾನವ
ತರಳ ಪೊರಳೆ ವಾರಿಧಿಗಳ ಕಲಂಕಿದುವುರ್ದ ಮಯ್ಯನುದಗ್ರಮಂ
ದರಮದಂದಲುಗಿತ್ತು ಬಾಯ್ದೆಯ ದಿಗ್ಗಜಂ ಪಳಗಿಟ್ಟುವಾಂ | ತರದೆ ತೊಟ್ಟನೆ ದಾಡೆಗುಡ್ಡೆ ಕಲ್ಲು ತಾರಗೆಗಳ ನಭಂ ಬೆರಸು ಬಿಚ್ಚುವು ಪೆಂಪಿದೇಂ ಪಿರಿದಾಯ್ಯೋ ದೈತ್ಯವರಾಹನಾ ಗ
೧೫
.
ವlು ಅಂತಾ ವರಾಹನಾದಿವರಾಹನಾದ ಮುರಾಂತಕನುಮನಿಸಿ ನೆಲಂ ಕಪ್ಪಂಗವಿಯು ಮಾಗೆ ಬರೆ ಪಗೆ ಕೃತಕ ಕಿರಾತನಟ್ಟುತ್ತುಂ ಬರೆ ತನ್ನತ್ತ ಮೊಗದೆ ಬರ್ಪುದಂ ಕಂಡಮೋಘಾಸ್ತ್ರ ಧನಂಜಯನೊಂದಮೋಘಾಸ್ತಮನಕ್ಕಣಬಾಣಧಿಯಿಂದಮುರ್ಚಿಕೊಂಡು ಗಾಂಡೀವದೊಳ್ ಪೂಡಿ
ಕೀಟಲೆ ಮಾಡಿ ಮಾಯಾಯುದ್ದದಲ್ಲಿ ಆತನ ಸಾಹಸದ ಚಲದ ಬಲದ ಬಿಲ್ಲಾಳನದ ಶಕ್ತಿಯನ್ನೂ ಪರೀಕ್ಷಿಸುತ್ತೇನೆ; ಅನಂತರ ಅವನಿಗೆ ವರದ (ವರವನ್ನು ಕೊಡುವವ) ನಾಗುತ್ತೇನೆ ಎಂದು ನಿಶ್ಚಯಿಸಿದನು. ೧೪. ಈಶ್ವರನು ತಾನು ಬೇಡರವನಾಗಿಯೂ ಪಾರ್ವತಿಯನ್ನು ಪ್ರೀತಿಯಿಂದ ಬೇಡಿತಿಯನ್ನಾಗಿಯೂ ತನ್ನ ನಂಬಿಕೆಗೆ ಪಾತ್ರನಾದ ಷಣ್ಮುಖನನ್ನು ಬೇಡರ ಸೈನ್ಯಕ್ಕೆ ನಾಯಕನನ್ನಾಗಿಯೂ ಮಾಡಿ ತನ್ನಲ್ಲಿರುವಷ್ಟು ಭೂತಗಣವನ್ನು ಬೇಡರ ಪಡೆಯನ್ನಾಗಿಸಿದನು. ಪ್ರಳಯಕಾಲದ ಮೇಘಸಮೂಹವು ಇದ್ದಕ್ಕಿದ್ದಂತೆ ಕವಿಯುವ ಹಾಗೆ ಬೇಟೆಗೆ ಆಧಾರವಾದ ಆ ಕಾಡನ್ನು ಮುತ್ತಿದನು. ವ|| ಆ ಕೋಲಾಹಲಶಬ್ದಕ್ಕೆ ಅಸಮಾಧಾನಪಟ್ಟು ಹಂದಿಯ ರೂಪದಲ್ಲಿದ್ದ ಆ ಮೂಕದಾನವನು ೧೫. ಹೊರಳಲು ಸಮುದ್ರಗಳು ಕಲಕಿಹೋದವು, ಮೆಯ್ಯನ್ನು ಉಜ್ಜಲು ಎತ್ತರವಾದ ಮಂದರಪರ್ವತವೂ ಅಲುಗಾಡಿತು. ಶಬ್ದಮಾಡಲು ದಿಗ್ಗಜಗಳೂ ಹಿಮ್ಮೆಟ್ಟಿದುವು. ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕೋರೆಹಲ್ಲುಗಳನ್ನು ಕಡಿಯಲು ನಕ್ಷತ್ರಗಳು ಆಕಾಶಸಹಿತ ಕಳಚಿಬಿದ್ದವು. ಹಂದಿಯ ರೂಪದಲ್ಲಿದ್ದ ಆ ರಾಕ್ಷಸನ ಹಿರಿಮೆಯೂ ಅದ್ಭುತವಾಯಿತು. ವ|| ಆ ಹಂದಿಯು ಆದಿವರಾಹಾವತಾರ ಮಾಡಿದ ಕೃಷ್ಣನನ್ನು ಹೀಯಾಳಿಸಿ (ತಿರಸ್ಕರಿಸಿ) ನೆಲವು ಮುಚ್ಚುವ ಮುಚ್ಚಳವಾಗುವ ಹಾಗೆ (ನೆಲವನ್ನಲ್ಲಾಡಿಸುತ್ತ ಬರುತ್ತಿರಲು ಹಿಂಭಾಗದಿಂದ ಕೃತಕ ಕಿರಾತನಾದ ಶಿವನು ಅದನ್ನಟ್ಟಿಕೊಂಡು ಬಂದನು. ತನ್ನ ಕಡೆಗೆ ಬರುತ್ತಿರುವುದನ್ನು ಧನಂಜಯನು ಕಂಡು ಒಂದು ಅಮೋಘವಾದ ಬಾಣವನ್ನು ತನ್ನ ಅಕ್ಷಯವಾದ ಬತ್ತಳಿಕೆಯಿಂದ
Page #377
--------------------------------------------------------------------------
________________
೩೭೨) ಪಂಪಭಾರತಂ ಮII ತೆಗೆದಚರ್ಜುನನಂಬು ತೀವ ತುದಿಯಿಂ ಬಾಲಂಬರಂ ಪಂದಿ ಸೌ
ಳಗವೋಪಂತಿರೆ ನೋಡ ಸಂಬಳಿಗೆವೋಯ್ತಂಬನ್ನೆಗಂ ಕೊಂಡುದೂ | ಯ್ಯಗೆ ಪಾರ್ದಚ್ಚ ವೃಷಾಂಕನಂಬು ತನುವಂ ಪಚ್ಚಂತೆ ಕೊಂಡತ್ತು ತೊ ಟ್ಟಿಗೆ ವೈಮಾನಿಕಕೋಟಿಗಂದು ಪಿರಿದೊಂದುತ್ಸಾಹಮಪ್ಪನ್ನೆಗಂ || ೧೬
ವl ಅಂತು ಮೂಕದಾನವನನಾ ನವದೋಳೆ ಕೊಂದು ವರಾಹಾರುಣಜಲಧಾರಾರುಣ ಮಾಗಿರ್ದಾತ್ಮೀಯಬಾಣಮಂ ಪರಾಕ್ರಮಧವಳನೊಯ್ಯನೆ ಕೊಂಡು ಬಾಣಧಿಯೊಳಿಟ್ಟು ಪೋಗಿ ಪೊಗೊಳದೊಳ್ ಕರಚರಣಪ್ರಕ್ಷಾಳನಂಗೆಯ್ದು ಮಗುಟ್ಟುಮೇಕಪಾದ ತಪದೊಳ್ ನಿಲೆ ಗೀರ್ವಾಣನಾಥಾತ್ಮಜನಲ್ಲಿಗೆ ಗುಹನನಹಿಭೂಷಣನೆಂಬಂ ಬೇಡಿಯಟ್ಟದೊಡಾತಂ ಬಂದುಚಂ|| ಗೊರವರ ಬೂದಿಯುಂ ಜಡೆಯುಮಕ್ಕೆ ತಪಕ್ಕೆ ತನುತ್ರಮಾ ಭಯಂ
ಕರ ಧನು ಖಮಪರಮಿಂತರಡುಂ ದೊನ ತೀವಿದಂಬುಮೊಂ | ದಿರವು ತಪಕ್ಕಿದೆಂತುಟೊ ತಪಂಗಳುಮಿಲ್ಲಮವುಳೊಡೀಗಳೆ ಮರಸರ ನಚ್ಚಿತೆಚ್ಚ ಶರಮಂ ಸೆರಗಿಲ್ಲದೆ ಕೊಂಡು ಬರ್ಪಿರೇ || ಕಂ ಅಣಿಯದೆ ತಂದೊಡಮೇನೆ
ಮಣಿಯಂಗದನಮ್ಮ ಕೆಯೊಳಟ್ಟಿಂ ನೀಮಿಂ | ತಳೆಯುತ್ತುಂ ಪೆರೂಡಮಯ ನುಜತಿ ಸೆವಿಡಿದಿರ್ಪಿರಿನ್ನರುರ್ವಿಯೊಳೊಳರೇ ||
೧೮ ಸೆಳೆದುಕೊಂಡು ಗಾಂಡೀವದಲ್ಲಿ ಹೂಡಿದನು. ೧೬. ಹೆದೆಯೆಳೆದು ಪ್ರಯೋಗಮಾಡಿದ ಅರ್ಜುನನ ಬಾಣವು ತುದಿಯಿಂದ ಬಾಲದವರೆಗೂ ವ್ಯಾಪಿಸಿ ಸೌಂದು ಶಬ್ದಮಾಡುತ್ತ ಸೀಳಿಕೊಂಡು ಹೋಗಿ ಸಂಪುಟದಲ್ಲಿ ಸೇರುವಂತೆ ಮೆಯ್ಯಲ್ಲಿಯೇ ಅಡಗಿಕೊಂಡಿತು. ಇದನ್ನು ನೋಡುತ್ತಿದ್ದ ಶಿವನು ನಿಧಾನವಾಗಿ ಗುರಿಯಿಟ್ಟು ಹೊಡೆದ ಬಾಣವು ಶರೀರವನ್ನು ಭಾಗಮಾಡಿದ ಹಾಗೆ ಒಳನುಗ್ಗಿತು. ವಿಮಾನದಲ್ಲಿ ಕುಳಿತು ನೋಡುತ್ತಿದ್ದ ದೇವತೆಗಳ ಸಮೂಹಕ್ಕೆ ವಿಶೇಷ ಸಂತೋಷವಾಯಿತು. ವ! ಹಾಗೆ ಮೂಕದಾನವನನ್ನು ಆ ನೆಪದಿಂದ ಕೊಂದ ಹಂದಿಯ ರಕ್ತಧಾರೆಯಿಂದ ಕೆಂಪಾಗಿದ್ದ ತನ್ನ ಬಾಣವನ್ನು ಪರಾಕ್ರಮಧವಳನು ನಿಧಾನವಾಗಿ ತೆಗೆದುಕೊಂಡು ಬಂದು ಬತ್ತಳಿಕೆಯಲ್ಲಿ ಸೇರಿಸಿ ಪಕ್ಕದಲ್ಲಿದ್ದ ಹೂಗೊಳದಲ್ಲಿ ಕೈ ಕಾಲುಗಳನ್ನು ತೊಳೆದು ಪುನಃ ಏಕಪಾದತಪಸ್ಸಿನಲ್ಲಿ ನಿಲ್ಲಲು ಅರ್ಜುನನ ಹತ್ತಿರಕ್ಕೆ ಸರ್ಪಾಭರಣನಾದ ಶಿವನು ತನ್ನ ಬಾಣವನ್ನು ಬೇಡಲು ಗುಹನನ್ನು ಕಳುಹಿಸಿದನು. ಅವನು ಬಂದು ೧೭. ತಪಸ್ವಿಗಳೇ, ಬೂದಿಯೂ ಜಡೆಯೂ ತಪಸ್ಸಿಗಿರಲಿ; ಕವಚ, ಈ ಭಯಂಕರವಾದ ಬಿಲ್ಲು ಕತ್ತಿ ಗುರಾಣಿ, ಬಾಣದಿಂದ ತುಂಬಿದ ಈ ಎರಡು ಬತ್ತಳಿಕೆಗಳು - ಇವು ತಪಸ್ಸಿಗೆ ಹೊಂದಿಕೊಳ್ಳಲಾರವು. ಇದು ಹೇಗೊ (ವಿಚಿತ್ರವಾಗಿದೆ) ತಪಸ್ಸು ಕೂಡ ಇಲ್ಲ, ಅದಿದ್ದ ಪಕ್ಷದಲ್ಲಿ (ನೀವು ತಪಸ್ವಿಗಳಾಗಿದ್ದರೆ) ನಮ್ಮರಾಜರು ನಂಬಿಕೆಯಿಂದ (ಗುರಿಯಿಟ್ಟು) ಹೊಡೆದ ಬಾಣವನ್ನು ಭಯವಿಲ್ಲದೆ ಕೊಂಡು ಬರುತ್ತಿದ್ದಿರಾ? ೧೮. ತಿಳಿಯದೆ ತಂದರೆ ತಾನೆ ಏನು ದೋಷ? ನಮ್ಮ ಯಜಮಾನರಿಗೆ ಅದನ್ನು ನನ್ನ ಕಯ್ಯಲ್ಲಿ ಕಳುಹಿಸಿಕೊಡಿ. ನೀವು ಹೀಗೆ ತಿಳಿದವರಾಗಿದ್ದರೂ ಇತರರ ಪದಾರ್ಥವನ್ನು ವಿಶೇಷವಾಗಿ ಬಂಧಿಸಿಟ್ಟಿದ್ದೀರಲ್ಲ!
Page #378
--------------------------------------------------------------------------
________________
ಅಷಮಾಶ್ವಾಸಂ | ೩೭೩ ವಗ ಎಂದು ಕಿರಾತದೂತಂ ತನ್ನನತಿಕ್ರಮಿಸಿ ನುಡಿದುದರ್ಕೆ ಮುಳಿದು ಪರಾಕ್ರಮಧವಳ ನಿಂತೆಂದಂ
ಕ೦ll ದಸಿಕೊಂದಕ್ಕಂ ಬೇಡಂ
ಗಿಸಿ ದೊರೆ ಮೃಗಮನೀ ಜಗಂಗಳನಾ | ಡಿಸುವ ಮದೀಯೋಗ್ಯಾಸ್ತಂ ಪೆಸರ್ಗೊಳಲೇಂ ತನಗೆ ದೊರೆಯ ಖಳನಳವಯಂ ||
೧೯
ಉll ವಿಜನ ಸೂರೆಗೊಂಡು ನುಡಿವೀ ನುಡಿಯಲ್ಲದೆ ಮತಮಾಸನಂ
ದೂಜುವ ಬಲುದೊಜುವೆರ್ದೆದೋಲುವ ಕಯ್ಕಸರಂಗಳನುಂ | ತೇಜವು ಬೇಡ ಬೇಡದಿರು ಬೇಡ ಚಲಂಬೆರಸಂಬನಂಬನಿ ಕಾಣುತ ಮೋದಲಾಟಿಪೊಡೆ ನೀಂ ಬರವೇಲ್ವುದು ನಿನ್ನನಾಳನಂ
೨೦
ವ|| ಎಂದು ಬಂದ ಕಿರಾತದೂತನಂ ವಿಕ್ರಾಂತತುಂಗಂ ಬಗ್ಗಿಸಿದೊಡಾ ಮಾತಲ್ಲಮನಾ ಮಾಲಿಯೊಳೆ ಪೋಗಿ ಕಪಟ ಕಿರಾತಂಗಣಿಸಿದೊಡಾತನುಂ ಮಾಯಾಯುದ್ಧಮಂ ಪೊಣರ್ಚಲ್ ಬಗೆದು ಹಸ್ತಶ್ವರಥಪದಾತಿಬಲಂಗಳನೆನಿತಾನುಮನಿದಿರೊಳ್ ತಂದೊಡ್ಡಿದಾಗಳ ಪರಸೈನ್ಯಭೈರವ ಮಹಾಪ್ರಳಯಭೈರವಾಕಾರಮಂ ಕೆಯ್ಯೋಂಡು ಸೆರಗಿಲ್ಲದೆ ಬಂದು ತಾಗಿ
ಇಂತಹವರೂ ಭೂಮಿಯಲ್ಲಿದ್ದಾರೆಯೇ? ವll ಎಂದು ಆ ಬೇಡನ ದೂತನಾದ ಗುಹನು ತನ್ನನ್ನು ಮೀರಿ ಮಾತನಾಡಿದುದಕ್ಕೆ ಕೋಪಿಸಿ ಪರಾಕ್ರಮಧವಳನಾದ ಅರ್ಜುನನು ಹೀಗೆಂದನು-೧೯. ಬೇಡನಿಗೆ ಒಂದು ಪ್ರಾಣಿಯನ್ನು ಹೊಡೆಯಲು ಒಂದು ಮೊಳೆ ಸಾಕು. ಈ ಲೋಕಗಳನ್ನೇ ನಡುಗಿಸುವಂತೆ ಮಾಡುವ ನನ್ನ ಭಯಂಕರವಾದ ಬಾಣದ ಹೆಸರು ಹೇಳಲು ತಾನೆ ಅವನಿಗೆ (ಆ ನಿನ್ನ ಒಡೆಯನಿಗೆ) ಸಾಧ್ಯವೇ, ಆ ದುಷ್ಟನು ನನ್ನ ಶಕ್ತಿಯನ್ನು ಇನ್ನೂ ತಿಳಿದಿಲ್ಲ. ೨೦. ಕೇವಲ ಕಲಹವಾಡುವುದಕ್ಕಾಗಿಯೂ ಪೊಳ್ಳು ಪರಾಕ್ರಮವನ್ನು ಮೆರೆಯುವುದಕ್ಕಾಗಿಯೂ ಇಂತಹ ಒರಟಾದ ಉಪೇಕ್ಷೆಯಿಂದ ಕೂಡಿದ ಕಹಿ ಮಾತುಗಳನ್ನು ನಮ್ಮಲ್ಲಿ ಆಡಬೇಡ. ಈ ಕಹಿಯಾದ ಮಾತುಗಳು ನಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು (ನಮ್ಮನ್ನು ಹೆದರಿಸಲಾರವು). ಎಲೋ ಬೇಡ ನಿನಗೆ ಹಟಬೇಡ, ಬಾಣವನ್ನು ಕೇಳದಿರು. ಬಾಣದ ಮೇಲೆ ಬಾಣವನ್ನು ಕಾರಿಸುತ್ತ ಯುದ್ದಮಾಡುವ ಅಪೇಕ್ಷೆಯೇ ಇದ್ದರೆ ನೀನು ನಿನ್ನ ಯಜಮಾನನನ್ನು ಬರಹೇಳು. ವ| ಎಂದು ಬಂದ ದೂತನಾದ ಗುಹನನ್ನು ವಿಕ್ರಾಂತತುಂಗನಾದ ಅರ್ಜುನನು ಹೆದರಿಸಿ ಕಳುಹಿಸಿದನು. ಅವನು ಆ ಮಾತೆಲ್ಲವನ್ನೂ ಆ ರೀತಿಯಲ್ಲಿಯೇ ಹೋಗಿ ಆ ಕಪಟಕಿರಾತನಾದ ಶಿವನಿಗೆ ತಿಳಿಸಿದನು. ಆತನೂ ಮಾಯಾಯುದ್ಧವನ್ನು ಹೂಡಲು ಮನಸ್ಸು ಮಾಡಿ ಅಸಂಖ್ಯಾತವಾದ ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಇದಿರಿನಲ್ಲಿ ತಂದೊಡ್ಡಿದನು. ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ
Page #379
--------------------------------------------------------------------------
________________
೩೭೪ | ಪಂಪಭಾರತಂ ಚಂ| ಕೆದಾ ಚತುರ್ಬಲಂ ಬೆದ ತಳ ದಟಂ ಕೆಡೆದಟ್ಟಿ ತಟ್ಟೆ ಮಾ
ಣದೆ ಪೆಂಗಿಟ್ಟು ಬಾಯ್ಲೆಡೆ ಘಟಾಳಿ ಗುರ್ಣಾವನಂಬು ಲಕ್ಕಲೆ | ಕದೆ ಕೊಳೆ ಚಾತುರಂಗಬಲಮಂತಳದ ಕನಲ್ಲೊನಲು ಮಾ ಣದೆ ಪಣದಂ ಹರಂ ದಿಗಿಭದೊಳ್ ದಿಗಿಭಂ ಪಡೆವಂತೆ ಪಾರ್ಥನೊಳ್ || ೨೧
ವ|| ಅಂತು ಶೂನ್ಯಹಸ್ತದೊಳಿರ್ವರುಂ ಪೆಣೆದು ಪಲವುಂ ಗಾಯದೊಳಾಯಂದಪ್ಪದೆ ಪಿರಿದುಂ ಪೋಟ್ಟು ಸಂತರ್ಪಿನಂ (?) ಪೋರ ದೇವರೆಲ್ಲರುಮಂಬರತಳದೊಳಿರ್ದು ತಮ್ಮ ನೋಂತೆ (? ನೋಡಿಕಂ|| ಇಕ್ಕಿದನಭವಂ ಪಾರ್ಥನ
ನಿಕ್ಕಿದನಾ ತ್ರಿಪುರಹರನನರ್ಜುನನನೆ 1 | ಲಕ್ಕೆ ಮುಡಿಗಿಕ್ಕುವಂತವೂ ಲಿಕ್ಕಿದನವಯವದ ನೆಲದೊಳರಿಗಂ ಹರನಂ ||
೨೨ ವ|| ಅಂತು ನೆಲಕ್ಕಿಕ್ಕಿ ಗಂಟಲಂ ಮೆಟ್ಟಿದಾಗಕull
ಪೊಜಕಣ್ಣಂ ಮುನ್ನಂ ತಾಂ ಮಣಿಸಿದ ನೊಸಲೊಂದು ಕಣ್ಣುಮಾಗಳ್ ನೊಸಲಿಂ | ಪೊಣಮಟ್ಟಂತಿರೆ ತೊಳೆದ ನೆಲಕದ ಹರಿಗಂಗೆ ರುದ್ರನಗ್ನಳಗಣ್ಣಂ || ಉರದೊಳ್ ಫಣಿ ಕರದೋಳ್ ಬಿಲ್ ಶಿರದೊಳ್ ತೊ ತೋ ತಿಯ ಕೆಲದೊಳೆಸೆದಿರೆ ಪತಿ ಮುಂ | ಗೊರಲೊಳ್ ಕಣ್ ಮಜಟೆಯಿಲ್ಲದ
ದೊರೆಕೊಳೆ ಮೃಡನಡಿಗೆ ಹರಿಗನೆಂಗಿದನಾಗಳ್ | ೨೪ ಆಕಾರವನ್ನು ತಾಳಿ ಭಯವಿಲ್ಲದೆ ಬಂದು ತಾಗಿದನು. ೨೧. ಚತುರಂಗಸೈನ್ಯವು ಚದುರಿತು. ನೆರೆದಿದ್ದ ಸೈನ್ಯವು ಬೆದರಿತು. ಆನೆಗಳ ಗುಂಪು ಕೆಳಗುರುಳಿ ನಾಶವಾಗಿ ನಿಲ್ಲದೆ ಹಿಂಜರಿದು ಕೂಗಿಕೊಂಡವು. ಅರ್ಜುನನ ಬಾಣವು ಲಕ್ಷಲೆಕ್ಕದಲ್ಲಿ ನಾಟಿದುದರಿಂದ ಚತುರಂಗಸೈನ್ಯವೂ ಕುಗ್ಗಿ ನಾಶವಾಯಿತು. ಶಿವನು ವಿಶೇಷವಾಗಿ ಕೋಪಿಸಿಕೊಂಡು ಉದಾಸೀನಮಾಡದೆ ಅರ್ಜುನನೊಡನೆ ದಿಗ್ಗಜವು ದಿಗ್ಗಜದೊಡನೆ ಹೆಣೆದುಕೊಳ್ಳುವಂತೆ ಹೆಣೆದುಕೊಂಡನು. ವll ಹಾಗೆ ಇಬ್ಬರೂ ನಿರಾಯುಧರಾಗಿ ಹೆಣೆದುಕೊಂಡು ಅನೇಕ ಪಟ್ಟುಗಳಲ್ಲಿ ಕ್ರಮತಪ್ಪದೆ ಬಹುಕಾಲ ಸಹಿಸಿಕೊಂಡು ಕಾದಿದರು. ದೇವತೆಗಳು ಆಕಾಶಪ್ರದೇಶದಲ್ಲಿದ್ದುಕೊಂಡು ಅವರ ದ್ವಂದ್ವಯುದ್ಧವನ್ನು ನೋಡುತ್ತಿದ್ದರು. ೨೨. ಶಿವನು ಪಾರ್ಥನನ್ನು ಬೀಳಿಸಿದನು; ಪಾರ್ಥನು ಶಿವನನ್ನು ಬೀಳಿಸಿದನು. ವಿಜಯಕ್ಕೆ ಸವಾಲು ಮಾಡುವ ಹಾಗೆ ಅರ್ಜುನನು ಶಿವನನ್ನು ಶ್ರಮ ವಿಲ್ಲದೆ ನೆಲದಲ್ಲಿ ಬೀಳಿಸಿ ವ|| ಅವನ ಗಂಟಲನ್ನು ಮೆಟ್ಟಿದನು. ೨೩. ಹೊರಗಡೆಯ ಕಣ್ಣುಗಳಿಗೆ ಕಾಣದಂತೆ ಮೊದಲೇ ಮರಸಿಟ್ಟಿದ್ದ ಹಣೆಗಷ್ಟೊಂದು ಆಗ ಹಣೆಯಿಂದ ಹೊರ ಹೊರಟ ಹಾಗಿರಲು ಶಿವನು ಅರ್ಜುನನಿಗೆ ಶ್ರೇಷ್ಠವಾದ ಆ ಕಣ್ಣನ್ನು ಪ್ರೀತಿಯಿಂದ ತೋರಿಸಿದನು. ೨೪. ಎದೆಯಲ್ಲಿ ಹಾವು, ಕಯ್ಯಲ್ಲಿ ಬಿಲ್ಲು, ತಲೆಯಲ್ಲಿ
Page #380
--------------------------------------------------------------------------
________________
೨೫
ಅಷ್ಟಮಾಶ್ವಾಸಂ | ೩೭೫ - ವl ಅಂತನಿಗಿ ಪೊಡವಟ್ಟುಕಂನೀನಪ್ಪುದನಣಮಣಿಯದೆ
ದಾನವ ಮಾನವ ಸುರೇಂದ್ರ ಮಣಿಮಕುಟತಟಾ | ವ್ಯಾನಪದಂಗಾ ನೆಗಟ್ಟುದ
- ನಾನೇತತೊಳೆಂತು ನೀಗುವೆಂ ನೀಂ ಬೆಸಸಾ || * ವll ಎಂದು ವಿನಯವಿನಮಿತೋತ್ತಮಾಂಗನಾಗಿ ಕರಕಮಳಂಗಳಂ ಮುಗಿದು ತನ್ನ ಮುಂದಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ವಿನಯಕ್ಕಂ ಮೆಚ್ಚಿ ಮೆಚ್ಚಿದೆಂ ಬರವಂ ಬೇಡಿ ಕೊಳೆನೆ ಮಹಾಪ್ರಸಾದಂ ಪೆತೇನುಮನೊಲ್ಲೆನನಗೆ ನಿಮ್ಮಡಿ ಪಾಶುಪತಾಸ್ತಮಂ ದಯೆಗೆಯ್ಯುದನೆ ನಿನ್ನ ತಪಶ್ಯಕ್ತಿಗಂ ಭಕ್ತಿಗೆ ಮೆಚ್ಚಿತ್ರನೆಂದುಕಂ11 ಕೇಶದ ಫಳಮರ್ದಗೊಳ್ಳದೆ -
ಈಶಂ ಮನಮೊಸೆದು ನೆಗಟ್ಟಿ ದಿವ್ಯಾಸ್ತಮನಾ | ಪಾಶುಪತಾಸ್ತಮನಿತ್ತು ವಿ ನಾಶಿತರಿಪುವಕ್ಕೆ ಹರಿಗನೆಂದಂ ದಯೆಯಿಂ ||
೨೬ ವ|| ಆಗಳೀಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು ಗೌರಿದೇವಿಯುಮಂಜರಿಕಾಸ್ತಮೆಂಬ ಮೋಘಾಸ್ತಮಂ ವಿಕ್ರಮಾರ್ಜುನಂಗೆ ಕುಡೆ ಮೂವತ್ತುಮೂದೇವರುಂ ತಂತಮ್ಮ ನೆಚ್ಚಿನಂಬುಗಳಂ ತಂದೀಯ ಗುಣಾರ್ಣವಂ ಸಂಪೂರ್ಣ ಮನೋರಥನಾಗಿರ್ದಾಗಳಿಂದಂ ಪರಾಕ್ರಮಧವಳನ
ಗಂಗಾನದಿ, ನದಿಯ ಪಕ್ಕದಲ್ಲಿ ಚಂದ್ರ, ಪ್ರಕಾಶಮಾನವಾಗಿರಲು ಮುಂಭಾಗದ ಕೊರಳಿನಲ್ಲಿ ಕರೆಯು ಪ್ರಕಟವಾಗಿ ಕಾಣಿಸಿಕೊಳ್ಳಲು ಶಿವನ ಪಾದಕ್ಕೆ ಅರ್ಜುನನು ತಕ್ಷಣ ನಮಸ್ಕರಿಸಿದನು. ವ| ಹಾಗೆ ಬಗ್ಗಿ ನಮಸ್ಕಾರಮಾಡಿ-೨೫. (ನನ್ನನ್ನು ಪ್ರತಿಭಟಿಸಿದವನು ಶಿವನಾದ) ನೀನು ಎಂಬುದನ್ನು ತಿಳಿಯದೆ ರಾಕ್ಷಸ, ಮನುಷ್ಯ, ದೇವೇಂದ್ರ ಇವರುಗಳ ರತ್ನಖಚಿತವಾದ ಕಿರೀಟಪ್ರದೇಶಗಳಿಂದ ಆವರಿಸಲ್ಪಟ್ಟ ಪಾದಗಳುಳ್ಳ ಶಿವನಾದ ನಿನಗೆ ನಾನು ಮಾಡಿದ ಅಪಚಾರವನ್ನು ಯಾವುದರಲ್ಲಿ ಹೇಗೆ ಕಳೆಯಲಿ ಎಂಬುದನ್ನು ನೀನೇ ಅಪ್ಪಣೆ ಕೊಡಿಸು. ವ|| ಎಂದು ವಿನಯದಿಂದ ಬಗ್ಗಿದ ತಲೆಯುಳ್ಳವನಾಗಿ (ನಮಸ್ಕರಿಸಿ) ಕರಕಮಲಗಳನ್ನು ಮುಗಿದು ತನ್ನ ಮುಂದುಗಡೆ ನಿಂತಿದ್ದ ಪರಾಕ್ರಮಧವಳನ ಪರಾಕ್ರಮಕ್ಕೂ ವಿನಯಕ್ಕೂ ಮೆಚ್ಚಿ ಶಿವನು “ಮೆಚ್ಚಿದ್ದೇನೆ ವರವನ್ನು ಕೇಳಿಕೊ' ಎಂದನು. ಅರ್ಜುನನು ಮಹಾಪ್ರಸಾದ, ಬೇರೆಯೇನೂ ಬೇಡ, ನನಗೆ ತಮ್ಮಪಾಶುಪತಾಸ್ತವನ್ನು ದಯಮಾಡಿ ಕೊಡಿಸಬೇಕು ಎಂದನು. ನಿನ್ನ ತಪ್ಪಶ್ಯಕ್ತಿಗೂ ಭಕ್ತಿಗೂ ಮೆಚ್ಚಿ ಕೊಟ್ಟಿದ್ದೇನೆ ಎಂದು ಶಿವನು ಹೇಳಿದನು. ೨೬. ಕಷ್ಟದಿಂದ ಸಂಪಾದಿಸಿದ ಫಲ ಹೃದ್ಯವಾಗದೇ ಇರುತ್ತದೆಯೇ? ಈಶ್ವರನು ಮನಃಪ್ರೀತಿಯಿಂದ ಪ್ರಸಿದ್ಧವಾದ ದಿವ್ಯಾಸ್ತವಾದ ಪಾಶುಪತಾಸ್ತ್ರವನ್ನು ದಯೆಯಿಂದ ಕೊಟ್ಟು ಅರ್ಜುನನನ್ನು 'ಶತ್ರುಗಳನ್ನು ಗೆಲ್ಲುವವನಾಗು' ಎಂದು ಹರಸಿದನು. ವ|| ಆಗ ಈಶ್ವರನು ಕೊಟ್ಟುದಕ್ಕೆ ಸಮಾನವಾದ ಬಹುಮಾನವೆಂದು ಗೌರೀದೇವಿಯು ಅಂಜರಿಕಾಸ್ತವೆಂಬ ಬಹು ಬೆಲೆಯುಳ್ಳ ಆಸ್ತವನ್ನು ವಿಕ್ರಮಾರ್ಜುನನಿಗೆ ಕೊಟ್ಟಳು.
Page #381
--------------------------------------------------------------------------
________________
೩೭೬ | ಪಂಪಭಾರತ ಪರಾಕ್ರಮಕ್ರಮೇಗೆಯ್ಯ ತನುಮತಿಯದೆಯುಮತಿಸ್ನೇಹದಿಂ ಪುಷ್ಪವೃಷ್ಟಿಯುಮನಾನಂದಬಾಷ್ಪ ವೃಷ್ಟಿಯುಮನೊಡನೊಡನೆ ಸುರಿದು ಪಲವು ದಿವಸಮುದ್ರೋಗ್ರತಪದೊಳ್ ಮೆಯ್ಯಂ ದಂಡಿಸಿದ ಪರಿಶಮಂ ಪೊಗೆ ಕೆಲವು ದಿವಸಮನೆಮ ಲೋಕದೊಳ್ ವಿಶಮಿಸಿ ಬರ್ಪೆ ಬಾ ಜೋಪಮಂದು ತನ್ನೊಡನೆ ರಥಮನೇಲಿಸಿಕೊಂಡು ಗಗನತಳಕೊಗೆದು ತನ್ನಮರಾವತೀಪುರಮನೆಯ್ದ ಮಗ ಬಂದೊಸಗೆಗೆ ಪೊಬಿಳಷ್ಟ ಶೋಭೆಯಂ ಮಾಡಿಸಿ ಪೊಲೀಲಂ ಪೊಕ್ಕಾಗಲ್ಮll ಪರಿತಂದಂದಮರಾವತೀಪುರದ ವಾರಸ್ತ್ರೀಯರೇನೀತನೇ
ನರನಾ ಖಾಂಡವಮೆಲ್ಲಮಂ ಶಿಖಿಗುಣಲ್ ಕೊಟ್ಟಾತನೀಗಲ್ ಮಹೇ | ಶ್ವರನಂ ಮೆಚ್ಚಿಸಿ ಮಿಕ್ಕ ಪಾಶುಪತವಂ ಪೆತ್ತಾತನೇ ಸಾಹಸಂ ಪಿರಿದುಂ ಚೆಲ್ವನುಮಪ್ಪನೆಂದು ಮನದೊಳ್ ಸೋಲ್ಕಟಂ ನೋಡಿದರ್ | ೨೭
ವ|| ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸ ಸೂಸುವ ವಾಸವಸೀಯರ ಮುಖಾಭ್ಯಾಸವ ಸಂಬಂಧಿಗಳಪ್ಪ ಶೇಷಾಕ್ಷತಂಗಳನೀಶ್ವರನಂ ಗೆಲ್ಲ ಗಲ್ಲಕ್ಕೆ ಸೇಸೆಗೊಳ್ವಂತ ಸೇಸೆಗೊಳುತ್ತುಂ ದೇವರಾಜನೊಡನೆ ದೇವಾಪ್ಟರೋನಿಚಯನಿಚಿತಮಪ್ಪ ದೇವವಿಮಾನಮಂ ಪೊಕ್ಕಾಗಳ್ ದೇವೇಂದ್ರಂ ತನ್ನೊಡನೆ ಮಜ್ಜನಂಬುಗಿಸಿ ದಿವ್ಯಾಹಾರಂಗಳನೊಡನಾರೋಗಿಸಿ ತಂಬುಲಂಗೊಂಡು
ಮೂವತ್ತು ಮೂರು ದೇವರುಗಳು ತಮ್ಮ ಪ್ರಧಾನಾಸ್ತಗಳನ್ನು ತಂದುಕೊಟ್ಟರು. ಗುಣಾರ್ಣವನಾದ ಅರ್ಜುನನು ಸಂಪೂರ್ಣ ಮನೋರಥನಾದನು. ಇಂದ್ರನು ಪರಾಕ್ರಮಧವಳನಾದ ಅರ್ಜುನನ ಶೌರ್ಯ ಪರಾಕ್ರಮಗಳಿಗೆ ಯಾವ ರೀತಿಯ ಸತ್ಕಾರ ಮಾಡಬೇಕೆಂಬುದನ್ನು ತಿಳಿಯದೆ ವಿಶೇಷವಾದ ಸ್ನೇಹದಿಂದ ಪುಷ್ಪವೃಷ್ಟಿಯನ್ನೂ ಆನಂದಬಾಷ್ಪವನ್ನೂ ಜೊತೆಜೊತೆಯಲ್ಲಿಯೇ ಸುರಿಸಿದನು. ಅನೇಕ ದಿನ ಬಹು ಕಠಿಣವಾದ ತಪಸ್ಸಿನಲ್ಲಿ ಶರೀರವನ್ನು ದಂಡಿಸಿದ್ದೀಯೆ. ಆಯಾಸಪರಿಹಾರವಾಗುವ ಹಾಗೆ ಕೆಲವು ಕಾಲ ನಮ್ಮಲೋಕದಲ್ಲಿ ವಿಶ್ರಾಂತಿಯನ್ನು ಪಡೆದು ಬರುವೆಯಂತೆ ಹೋಗೋಣ ಬಾ' ಎಂದು ತನ್ನ ಜೊತೆಯಲ್ಲಿಯೇ ತೇರನ್ನು ಹತ್ತಿಸಿಕೊಂಡು ಆಕಾಶ ಪ್ರದೇಶಕ್ಕೆ ನೆಗೆದು ತನ್ನ ರಾಜಧಾನಿಯಾದ ಅಮರಾವತೀಪಟ್ಟಣವನ್ನು ಸೇರಿದನು. ಮಗನು ಬಂದ ಸಂತೋಷಕ್ಕಾಗಿ ಪಟ್ಟಣವನ್ನು ತಳಿರು ತೋರಣಾದಿ ಎಂಟುಬಗೆಯ ಅಲಂಕಾರಗಳಿಂದ ಸಿಂಗರಿಸಿ ಪುರಪ್ರವೇಶ ಮಾಡಿಸಿದನು-೨೭. ಅಮರಾವತೀ ಪಟ್ಟಣದ ವೇಶ್ಯಾಸ್ತ್ರೀಯರು ಓಡಿ ಬಂದು ಇವನೇ ಅರ್ಜುನನೇನು! ಅಗ್ನಿಗೆ ಖಾಂಡವವನವೆಲ್ಲವನ್ನೂ ಉಣ್ಣಲು ಕೊಟ್ಟನೇನು, ಈಗ ಮಹೇಶ್ವರನನ್ನು ಮೆಚ್ಚಿಸಿ ಶ್ರೇಷ್ಠವಾದ ಪಾಶುಪತಾಸ್ತ್ರವನ್ನು ಪಡೆದವನೇ ಪರಾಕ್ರಮಶಾಲಿಯೂ ವಿಶೇಷ ಸೌಂದರ್ಯವಂತನೂ ಆಗಿದ್ದಾನೆ. ಎಂದು ಮನಸ್ಸಿನಲ್ಲಿ ಸೋತು ಪ್ರೀತಿಯಿಂದ ನೋಡಿದರು. ವ|| ಹಾಗೆ ಕಡೆಗಣ್ಣಿನ ವಿಲಾಸದಿಂದ ಕೂಡಿದ ಇಂದ್ರಲೋಕ ಸ್ತ್ರೀಯರ ಮುಖಕಮಲದ ವಧುವಿನ ಸಂಬಂಧವುಳ್ಳ ಮಂತ್ರಾಕ್ಷತೆಯನ್ನು ಈಶ್ವರನನ್ನು ಜಯಿಸಿದ ಜಯಕ್ಕೆ ಸೇಸೆಯೆಂಬಂತೆ ಸ್ವೀಕರಿಸುತ್ತ ದೇವೇಂದ್ರನೊಡನೆ ದೇವಲೋಕದ ಅಪ್ಪರಸ್ತ್ರೀಯರ ಸಮೂಹದಿಂದ ತುಂಬಿದ್ದ ದೇವವಿಮಾನವನ್ನು ಪ್ರವೇಶಿಸಿದನು. ದೇವೇಂದ್ರನು ಅರ್ಜುನನಿಗೆ ತನ್ನೊಡನೆ ಸ್ನಾನಮಾಡಿಸಿ ದಿವ್ಯಾಹಾರಗಳ ಸಹಪಂಕ್ತಿ
Page #382
--------------------------------------------------------------------------
________________
ಅಷಮಾಶ್ವಾಸಂ | ೩೭೭ ತನ್ನ ತುಡುವ ತುಡುಗೆಗಳೆಲ್ಲಮಂ ತುಡಿಸಿ ಕಿರೀಟಿಯಂ ಕೋಟಿ ಮಾಣಿಯಿಂ ಕೊಂಡಾಡಿ ಕೆಲವು ದಿವಸಮನಿರ್ದು ತನಗವಧ್ವರುಮಸಾದ್ಧರುವಾಗಿರ್ದ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರೆಂಬಲುವತ್ತು ಕೋಟಿ ರಕ್ಕಸರನೆನಗೆ ಗೆಲ್ಲೀಯಲ್ವೇಚ್ಚುಮೆಂದು ಮಾತಳಿಯೆಂಬ ಸಾರಥಿವರಸು ವಿವಿಧಾಸ್ತಗರ್ಭಮಪ್ಪ ರಥಮಂ ಕೊಟ್ರೊಡದನೇಟೆ ಪೋಗಿಮ|| ದನುಜಾನೀಕದ ನಿಂದದೊಂದು ನೆಲೆಯು ಮುಟ್ಟುತ್ತ ಮಾದೇವನಿ
ತ ನಿಜೋಗ್ರಾಸ್ತದೆ ದೈತ್ಯರೆಂಬ ಹೆಸರಿಲ್ಲೆಂಬಂತುಟಂ ಮಾಡಿ ಬಂ | ದೆನಿತಾನುಂ ಮಹಿಮಾಗುಣಕ್ಕೆ ಕಣಿಯಾಗಿರ್ದೊಂದು ಪೆಂಪಿಂದಮಿಂ ದ್ರನೊಳರ್ಧಾಸನಮೇಳದೊಳು ಹರಿಗಂಗಕ್ಕುಂ ಪೆಂಗಕ್ಕುಮೇ 1 - ೨೮
ವ| ಅಂತು ದೇವಲೋಕದೊಳ್ ತನ್ನ ಮಾತ ಮಾತಾಗಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ಗಂಡಗಾಡಿಗಂ ರಂಭೆ ಸೋಲ್ಕು ಸೈರಿಸಲಾದೇಕಾಂತದೊಳ್ ಮೇಲೆ ಬಿತ್ತೊಡೆಕಂ ಎಂದು ಪುರಂದರನರಸಿಯ
ಯಂದು ದಲೆನಗದ್ದೆಯೇ ತೊದಲ್ ನುಡಿಯದೆ ಪೋ | ಗಂಗೊಡದೊಂದಬ್ದದೊಳೆ ಬೃ ಹಂದಳೆಯಾಗೆಂದು ಮುನಿದು ಶಾಪವನಿತ್ತಳ್ ||
೨೯ ವ| ಇತೊಡೆಂತುಮಾನ್ ಪರಸ್ತ್ರೀಯರ ದೆಸೆಯೊಳಮಣ್ಣನ ನನ್ನಿಯ ವರ್ಷಾವಧಿಯೊಳ ಮೋತು ಪಿಡಿವ ನಿನ್ನ ನುಡಿಯೊಳೇ ದೋಷವೆಂದು ತನ್ನ ಶೌಚದ ಮೇಗಣ ಕಲಿತನಮುಮಂ
ಭೋಜನವನ್ನು ಮಾಡಿದನು. ಜೊತೆಯಲ್ಲಿಯೇ ತಾಂಬೂಲವನ್ನು ಸ್ವೀಕರಿಸಿದನು. ತಾನು ಧರಿಸುವ ಎಲ್ಲ ಆಭರಣಗಳನ್ನು ತೊಡಿಸಿ ಅರ್ಜುನನನ್ನು ಕೋಟಿರೀತಿಯಿಂದ ಕೊಂಡಾಡಿದನು. ಕೆಲವುದಿನಗಳಿದ್ದು ತಾನು ಕೊಲ್ಲಲು ಅಸಾಧ್ಯರಾಗಿದ್ದ ನಿವಾತಕವಚ ಕಾಲಕೇಯ ಪೌಲೋಮ ತುಳುತಾಳುಕರೆಂಬ ಅರುವತ್ತು ಕೋಟಿ ರಾಕ್ಷಸರನ್ನು ಗೆದ್ದು ಕೊಡಬೇಕು ಎಂದು ಕೇಳಿದನು. ಅರ್ಜುನನು ಸಾರಥಿಯಾದ ಮಾತಲಿಯೊಡನೆ ಕೂಡಿ ಅನೇಕ ರೀತಿಯ ಬಾಣಗಳಿಂದ ತುಂಬಿದ ತೇರನ್ನು ಹತ್ತಿ ೨೮, ರಾಕ್ಷಸ ಸಮೂಹವು ವಾಸಮಾಡುತ್ತಿದ್ದ ಸ್ಥಳವನ್ನು ಮುಟ್ಟಿದನು. ಮಹಾದೇವನು ತನಗೆ ಕೊಟ್ಟ ಭಯಂಕರವಾದ ಪಾಶುಪತಾಸ್ತದಿಂದ ಆ ರಾಕ್ಷಸರನ್ನು ಹೆಸರಿಲ್ಲದಂತೆ ಮಾಡಿ ಬಂದನು. ವಿಶೇಷ ಮಹಾತ್ಮಗೆ ಆಕರವಾದ ಗೌರವದಿಂದ ಇಂದ್ರನೊಡನೆ ಅರ್ಧಾಸನ (ಸಮಪೀಠ)ವನ್ನು ಹತ್ತುವ ಸೌಭಾಗ್ಯವು ಅರ್ಜುನನಿಗಲ್ಲದೆ ಮತ್ತಾರಿಗೆ ಸಾಧ್ಯ. ವ|| ಹಾಗೆ ದೇವಲೋಕದಲ್ಲಿ ತನ್ನ ಮಾತೇ ಮಾತಾಗಿದ್ದ ಪರಾಕ್ರಮಧವಳನ ಪೌರುಷಕ್ಕೂ ಸೌಂದರ್ಯಕ್ಕೂ ರಂಭೆಯು ಸೋತು ಸಹಿಸಲಾರದೆ ರಹಸ್ಯವಾಗಿ ಬಂದು ಮೇಲೆ ಬಿದ್ದು ತನ್ನನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದಳು. ೨೯. 'ಎಲ್ಲಿಯ ವರೆಗೆ ನೀನು ಇಂದ್ರನ ರಾಣಿಯಾಗಿದ್ದೀಯೋ ಅಲ್ಲಿಯವರೆಗೆ ನೀನು ನಿಜವಾಗಿಯೂ ನನಗೆ ತಾಯಿಯಾಗಿದ್ದೀಯೆ. ಕೆಟ್ಟ ಮಾತನಾಡದೆ ಹೋಗು ಎಂದು ಅವಳನ್ನು ಅರ್ಜುನನು ತಿರಸ್ಕರಿಸಿದನು. ರಂಭೆಗೆ ಕೋಪ ಬಂದಿತು. ಒಂದು ವರ್ಷಕಾಲ ಬೃಹಂದಳೆಯಾಗು' ಎಂದು ಶಾಪವನ್ನು ಕೊಟ್ಟಳು. ವ! ಹೇಗೂ ನಮ್ಮಣ್ಣನ ಪ್ರತಿಜ್ಞೆಯ
Page #383
--------------------------------------------------------------------------
________________
೩೭೮ ) ಪಂಪಭಾರತಂ ಸೌಭಾಗ್ಯದ ಮೇಗಣ ಬಲ್ಲಾಳನಮುಮನಿಂದ್ರಲೋಕದಿಂ ಪೊಗಟಿಸಿ ಸುಖಮಿರ್ಪನ್ನೆಗಮಿತ್ತ ವಿಕ್ರಾಂತತುಂಗನ ತಡೆದುದರ್ಕೆ ಯುಧಿಷ್ಠಿರ ಭೀಮಸೇನ ನಕುಳ ಸಹದೇವರುಂ ದೌಪದಿಯುಂ ವ್ಯಾಕುಳಚಿತ್ತರಾಗಿಸ |ಆ ದಿವ್ಯಾಸ್ತಂಗಳಂ ಸಾಧಿಸಲೆ ನೆಗಟ್ಟಿ ಪಾರಾಶರಂ ಪೇಳ ಮುನ್ನಂ
ಪೋದಂ ಸಂದಿಂದ್ರಕೀಲಕದನವಮದೇನಾದುದೋ ಕಾರ್ಯಸಿದ್ದಿ | ಪ್ರಾದುರ್ಭಾವಕ್ಕೆ ವಿಘ್ನಂ ಪಲವೊಳವಳಿಯಲ್ಕುರ್ಕುಮೇ ಬಾರದಲ್ಲಿಂ, ಪೋದಂ ವಿಕ್ರಾಂತತುಂಗಂ ಗಡಮದನಟಿಯಾಗದಿನ್ನಲ್ಲಿ ಕಾಲ್ಬಂ || ೩೦
ವ|| ಎಂದು ಪೋದ ದೆಸೆಯನಳೆಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಗಳ ದಿವೋಪದೇಶದೊಳಯ್ಯರುಂ ಗಂಧಮಾದನಗಿರಿಗೆವಂದು ತದ್ದಿರೀಂದ್ರದೊಳ್ ಭೀಮಸೇನರ ದೌಪದಿಯ ಬಯಕೆಗೆ ಧನದನ ಕೊಳದೊಳಗಣ ಕನಕಕಮಳಂಗಳಂ ತರಲೆಂದು ಪೋಗಿಕoll ಪ್ರಕಟಿತ ಸಾಹಸನಣುವ
ತು ಕೋಟಿ ಧನದಾನುಚರರನತಿ ರೌದ್ರಭಯಾ | ನಕಮಾಗೆ ಕೊಂದು ಸೌಗಂ ಧಿಕಕಾಂಚನಕಮಳಹರಣಪರಿಣತನಾದಂ ||
ವll ಮತ್ತಂ ಜಟಾಸುರನೆಂಬಸುರನನಾ ಗಿರೀಂದ್ರಕಂದರದೊಳ್ ಸೀಳು ಸೀಜುಂಬುಳಾಡಿ ಕೆಲವು ದಿವಸಮನಿರ್ದೊಂದು ದಿವಸವೊರ್ವನೆ ಬೇಂಟೆಯ ನೆವದಿಂದಲ್ಲಿಂ ತಳರ್ದು ಬಟ್ಟೆಯ ಕಣ್ಣೂಳಡ್ಡಂಬಿಟ್ಟಿರ್ದ ವೃದ್ಧ ವಾನರನಂ ಕಂಡು
ವರ್ಷಾವಧಿಯಲ್ಲಿ ಪರಸ್ತ್ರೀಯರ ಬಳಿ ಇರಬೇಕಾಗಿ ಬರುವ ಸಂದರ್ಭಕ್ಕಾಗಿ ಈ ಶಾಪವನ್ನು ಸಂತೋಷದಿಂದ ಅಂಗೀಕಾರಮಾಡುತ್ತೇನೆ. ನಿನ್ನ ಮಾತಿನಲ್ಲಿ ದೋಷ ವೇನಿಲ್ಲ ಎಂದನು. ಹೀಗೆ ತನ್ನ ಶುದ್ಧನಡತೆಯೊಡನೆ ಕೂಡಿದ ಪೌರುಷವನ್ನೂ ಸೌಭಾಗ್ಯದಿಂದ ಕೂಡಿದ ಪರಾಕ್ರಮವನ್ನೂ ಇಂದ್ರಲೋಕದವರಿಂದ ಹೊಗಳಿಸಿಕೊಂಡು ಕೆಲವುಕಾಲ ಇಂದ್ರಲೋಕದಲ್ಲಿ ಸುಖವಾಗಿದ್ದನು. ಅಷ್ಟರಲ್ಲಿ ಈ ಕಡೆ ವಿಕ್ರಾಂತತುಂಗನಾದ ಅರ್ಜುನನು ಹಿಂತಿರುಗುವುದಕ್ಕೆ ಸಾವಕಾಶಮಾಡಿದುದಕ್ಕಾಗಿ ಧರ್ಮರಾಜ, ಭೀಮ, ನಕುಳ, ಸಹದೇವ, ದೌಪದಿ ಮೊದಲಾದವರು ಚಿಂತಾಕ್ರಾಂತ ರಾದರು. ೩೦. ಪ್ರಸಿದ್ಧನಾದ ವ್ಯಾಸಮಹರ್ಷಿಯು ದಿವ್ಯಾಸ್ತಗಳನ್ನು ಪಡೆಯಲೇಬೇಕು ಎಂದು ಹೇಳಲು ಅರ್ಜುನನು ಪ್ರಸಿದ್ಧವಾದ ಇಂದ್ರಕೀಲಕ್ಕೆ ಹೋದನು. ಅದೇನಾಯಿತೋ ಫಲಪ್ರಾಪ್ತಿಯಾಗುವುದಕ್ಕೆ ಅನೇಕ ವಿಘ್ನಗಳಿವೆ. ಅದನ್ನು ತಿಳಿಯಲೂ ನಮಗೆ ಸಾಧ್ಯವಾಗುವುದಿಲ್ಲ. ಅರ್ಜುನನು ಇಂದ್ರಕೀಲದಿಂದ ಮುಂದೆ ಹೋದನೋ ಇಲ್ಲವೋ ಎಂಬುದನ್ನೂ ತಿಳಿಯಲಾಗುವುದಿಲ್ಲ; ಅವನನ್ನು ಇನ್ನೆಲ್ಲಿ ಹುಡುಕೋಣ. ವ|| ಎಂದು ಅರ್ಜುನನು ಹೋದ ದಿಕ್ಕನ್ನು ತಿಳಿಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಯ ದಿವೋಪದೇಶದಿಂದ ಅಯ್ತು ಮಂದಿಯೂ ಗಂಧಮಾದನಪರ್ವತಕ್ಕೆ ಬಂದರು. ಆ ಶ್ರೇಷ್ಠಪರ್ವತದಲ್ಲಿ ಭೀಮಸೇನನು ಬ್ರೌಪದಿಯ ಆಶೆಯನ್ನು ತೀರಿಸುವುದಕ್ಕಾಗಿ ಕುಬೇರನ ಸರೋವರದಲ್ಲಿದ್ದ ಚಿನ್ನದ ಕಮಲಗಳನ್ನು
Page #384
--------------------------------------------------------------------------
________________
ಆಪ್ತಮಾಶ್ವಾಸಂ / ೩೭೯ ಚoil ತೊಲಗನೆ ಬಟ್ಟೆಯಿಂ ತೊಲಗಲಾಜನಶಕ್ತನೆನಾರ್ಪೊಡೆನ್ನನಿನ್
ತೊಲಗಿಸಿ ಪೋಗು ನೀನೆನೆ ವೃಕೋದರನೊಯ್ಯನೆ ನಕ್ಕು ಬಾಲಮಂ | ಸಲೆ ಮುರಿದೆತ್ತಲಾಟಸ್ ಧರಿತ್ರಿಗೆ ಕೀಲಿಸಿದಂತುವಾಗೆ ದೋ ರ್ವಲದ ಪೊಡರ್ಪುಗೆಟ್ಟು ನಡೆ ನೋಡಿ ಮರುತ್ತುತನಂ ಮರುತ್ತುತಂ || ೩೨ ಕಂil ನೀನಮ್ಮಣ್ಣನ ವಂಶದ
ವಾನರನಲ್ಲ ವಲಂ ಮಹಾಬಲ ಪೇಚಿ | ಕೀ ನಗದೂಳಿರ್ದೆಯೆನೆ ತ ದ್ವಾನರನಂರ್ತು ಭೀಮನೆಂಬಂ ನೀನೇ
೩೩ ವ|| ಎಂಬುದುಮಪ್ಪೆನೆಂದೊಡೆ ನಿಮ್ಮಣ್ಣನಪ್ಪಣುವನೆ ನಾನಪ್ಪನೆಂದು ಪೇಟ್ಟುದುಮಾಗಳ್ ಸಾಷ್ಟಾಂಗಮನಿಗಿ ಪೊಡವಟ್ಟ ಭೀಮಸೇನನಂ ಪರಸಿಕಂ|| ಎನ್ನಂತಪೊಡವುಟ್ಟಿದ
ರಿನ್ನಿನಗೊಳರಾಗಲಹಿತರಿದಿರಾಂಪರೆ ಪೇಮ್ | ನಿನ್ನಂ ಪಗೆವರ ಬೇರೋಳ್ .
ಬೆನ್ನೀರಂ ಪೊಯ್ತು ನಿನಗೆ ಮಾಂ ಧರೆಯಂ || ತರಲು ಹೋಗಿ ೩೧. ಸಾಹಸವನ್ನು ಪ್ರದರ್ಶಿಸಿ ಕುಬೇರನ ಅರವತ್ತು ಕೋಟಿ ಭಟರನ್ನು ಬಹಳ ರೌದ್ರವೂ ಭಯಂಕರವೂ ಆಗಿರುವ ರೀತಿಯಲ್ಲಿ ಕೊಂದು ಸುಗಂಧದಿಂದ ಕೂಡಿದ ಚಿನ್ನದ ಕಮಲಗಳನ್ನು ಅಪಹರಿಸಿಕೊಂಡು ಬಂದನು. ೩೨. ಮತ್ತು ಜಟಾಸುರನೆಂಬ ರಾಕ್ಷಸನನ್ನು ಆ ಪರ್ವತದ ಗುಹೆಯಲ್ಲಿ ಸೀಳಿ ಚೆಲ್ಲಾಪಿಲ್ಲಿ ಮಾಡಿ ಅಲ್ಲಿ ಕೆಲವು ದಿವಸವಿದ್ದನು. ಒಂದು ದಿವಸ ಒಬ್ಬನೇ ಬೇಟೆಗಾಗಿ ಅಲ್ಲಿಂದ ಹೊರಟು ದಾರಿಯ ಎದುರಿಗೆ ಅಡ್ಡಲಾಗಿ ಬಿದ್ದಿದ್ದ ಮುದಿಕಪಿಯನ್ನು ಕಂಡು 'ದಾರಿ ಯಿಂದ ತೋಲಗು' ಎಂದನು. ಅದಕ್ಕೆ ಆ ಕಪಿಯು ತೊಲಗಲಶಕ್ತನಾಗಿದ್ದೇನೆ. ನಿನಗೆ ಸಾಮರ್ಥ್ಯವಿದ್ದರೆ ನೀನೇ ನನ್ನನ್ನು ತೊಲಗಿಸಿ ಹೋಗು' ಎಂದಿತು. ಭೀಮನು ಹುಸಿನಗೆ ನಕ್ಕು ಬಾಲವನ್ನು ಚೆನ್ನಾಗಿ ಬಗ್ಗಿಸಿ ಎತ್ತಲು ಪ್ರಯತ್ನಿಸಿದರೂ ಭೂಮಿಗೆ ಬೆಸೆದಿರು ವಂತಿರಲು ತನ್ನ ಬಾಹುಬಲದ ಸಾಮರ್ಥ್ಯವು ನಾಶವಾಯಿತೇ ವಿನಾ ಭೀಮಸೇನನು ಆ ವಾನರನ ಬಾಲವನ್ನು ಅಲುಗಿಸಲೂ ಆಗಲಿಲ್ಲ. ಆಗ ಆಂಜನೇಯನನ್ನು ದೀರ್ಘ ವಾಗಿ ನೋಡಿ ೩೩. 'ನೀನು ನಿಜವಾಗಿಯೂ ನಮ್ಮಣ್ಣನಾದ ವಾಯುಪುತ್ರನೇ (ಆಂಜನೇಯನೇ) ಅಲ್ಲವೇ ? ಪರಾಕ್ರಮಶಾಲಿಯೇ ಏಕೆ ಈ ಪರ್ವತದಲ್ಲಿದ್ದೀಯೆ ಎಂಬುದನ್ನು ಹೇಳು' ಎಂದು ಕೇಳಿದನು. ಆ ವಾನರನು ಪ್ರೀತಿಸಿ ನೋಡಿ ಓಹೋ ಭೀಮನೆಂಬುವವನು ನೀನೆಯೊ ವ|ಎನ್ನಲು 'ಭೀಮನು ನಾನು' ಎಂದನು. ಹೌದು, ಹಾಗಾದರೆ ನಿಮ್ಮಣ್ಣನಾದ ಹನುಮಂತನು ನಾನೆಂಬುದೂ ಸತ್ಯ ಎಂದನು, ಆಗ ಸಾಷ್ಟಾಂಗ ನಮಸ್ಕಾರಮಾಡಿದ ಬೀಮನನ್ನು ಆಂಜನೇಯನು ಹರಸಿದನು. ೩೪. ನನ್ನಂತಹ ಸಹೋದರರು ನಿನಗೆ ಇನ್ನೂ ಇರುವಾಗ ಶತ್ರುಗಳಾದವರು ನಿನ್ನನ್ನು ಪ್ರತಿಭಟಿಸಲು ಶಕ್ತರಾಗುತ್ತಾರೆಯೇ. ನಿನ್ನನ್ನು ದ್ವೇಷಿಸುವವರ ಬೇರಿನಲ್ಲಿ ಬಿಸಿನೀರನ್ನು
- 25
Page #385
--------------------------------------------------------------------------
________________
೩೮೦ | ಪಂಪಭಾರತಂ
ವ|| ಎಂಬುದುಂ ಭೀಮಸೇನನಿಂತೆಂದಂ
ಮ||
ಬೆಸನಂ ಪೂಣ್ಣು ಕಡಂಗಿ ಪಾಯ್ತು ಕಡಲಂ ಮುಂ ಪೂಣ್ಣರಂ ಕೊಂದು ಪೊ ಕು ಸಮಂತಾಗಡೆ ಲಂಕೆಯಂ ಬನಮನಾಟಂದುರ್ಕಿ ಕಿಟಕ್ಕಿ ಸಂ | ತಸಮಂ ಸೀತೆಗೆ ಮಾಡಿ ಸುಟ್ಟು ಪೊಲಂ ಕಾಳಾನಳಂಗಿತ್ತು ಬೇ ವಸಮಂ ರಾಮನಿನುಯ್ದ ನೀಂಬರೆಗಮೇನಾ ಕೌರವರ್ ಗಂಡರೇ || ಎನಗೆ ದಯೆಗೆಯ್ದುದೊಂದನೆ
ಮೊನೆಯೊಳ್ ವಿಜಯಂಗೆ ವಿಜಯಮಾಗಿರೆ ನೀಮಾ | ತನ ಕೇತನದೊಳ್ ಫಣಿಕೇ ತನಬಲಕುತ್ಪಾತಕೇತುವುದೆ ಸಾಲ್ಕುಂ ||
ಕಂ।।
2.99
&と
ವ|| ಎಂದು ಬೇಡಿಕೊಂಡೊಡದೇವಿರಿದಿತ್ತೆನೆಂದಣುವನದೃಶ್ಯನಾದನಾಗಳ್ ಭೀಮಸೇನ ಬೀಡಿಂಗೆ ಎಂದು ಧರ್ಮಪುತ್ರಂಗಾ ಮಾತೆಲ್ಲಮಂ ಪೇಟ್ಟು ವಿಕ್ರಮಾರ್ಜುನನ ಬರವನೆ ಪಾರುತ್ತಿರ್ಪನ್ನೆಗಮಿತ್ತ ವಿಬುಧವನಜವನಕಳಹಂಸನುಂ ಪಲವುಂ ದಿವಸಮಗಲ್ಲಿರ್ದ ತನ್ನೊಡವುಟ್ಟದರಂ ನೆನೆದು ಪೋಪೆನೆಂದಿಂದ್ರನಂ ಬೀಳ್ಕೊಂಡು ತನಗೆ ದೇವೇಂದ್ರನಿತ್ತ ಐಂದ್ರವೆಂಬ ದಿವ್ಯಾಸ್ತ್ರಮುಮಂ ನೈಷ್ಠಿಕಮೆಂಬ ಮುಷ್ಟಿಯುಮಂ ಕೆಯೊಂಡು ದೇವಯರ ಮನಮನಿಚ್ಚುಳಿಗೊಂಡಿಂದ್ರಂ ತನ್ನ ಪುಷ್ಪಕಮನೇಟಿಸಿ ಮಾತಳಿಯಂ ಸಾರಥಿಯಾಗಲ್ವೇಟ್ಟು
ಸುರಿದು ನಿನಗೆ ರಾಜ್ಯವನ್ನು ದೊರಕಿಸುತ್ತೇನೆ ಎಂದನು. ವ! ಅದಕ್ಕೆ ಭೀಮಸೇನನು ಹೀಗೆ ಹೇಳಿದನು. ೩೫. ಅಣ್ಣಾ: ಕಾರ್ಯ ಪ್ರತಿಜ್ಞೆಮಾಡಿ ಉತ್ಸಾಹಗೊಂಡು ಕಡಲನ್ನು ದಾಟಿದೆ ಪ್ರತಿಜ್ಞೆಮಾಡಿದ್ದವರನ್ನು ಕೊಂದೆ, ಆಗಲೇ ಲಂಕಾಪ್ರವೇಶಮಾಡಿದೆ, ಅಶೋಕವನ್ನಾಕ್ರಮಿಸಿ ಉತ್ಸಾಹದಿಂದ ಉಬ್ಬಿ (ಅದನ್ನು) ನಾಶಪಡಿಸಿದೆ. ಸೀತಾದೇವಿಗೆ ಸಂತೋಷವನ್ನುಂಟುಮಾಡಿದೆ. (ಲಂಕಾ) ಪಟ್ಟಣವನ್ನು ಸುಟ್ಟು ಹಾಕಿದೆ (ಕಾಲಾಗ್ನಿಗೆ ಕೊಟ್ಟು ರಾಮನ ದುಃಖವನ್ನು ಪರಿಹಾರಮಾಡಿದೆ. ನಿನ್ನವರೆಗೂ (ನಿನ್ನನ್ನೂ ಪ್ರತಿಭಟಿಸುವಷ್ಟು ಆ ಕೌರವರು ಶೂರರೇ ಏನು ? ೩೬. 'ನನಗೆ ದಯಮಾಡಿ ಒಂದನ್ನು ಕರುಣಿಸಬೇಕು; ಯುದ್ಧದಲ್ಲಿ ಅರ್ಜುನನಿಗೆ ವಿಜಯವಾಗುವ ಹಾಗೆ ನೀವು ಆತನ ಧ್ವಜದಲ್ಲಿದ್ದು ದುರ್ಯೋಧನನ ಸೈನ್ಯಕ್ಕೆ ಪ್ರತಿಶಕುನವನ್ನೂ ಸೂಚಿಸುವ ಕೇತುಗ್ರಹವಾಗಿರುವುದೇ ಸಾಕು? ಎಂದು ಬೇಡಿದನು. ವ| 'ಅದೇನು ದೊಡ್ಡದು ಆಗಬಹುದು' ಎಂದು ಹೇಳಿ ಹನುಮಂತನು ಅದೃಶ್ಯನಾದನು. ಭೀಮಸೇನನು ಬೀಡಿಗೆ ಬಂದು ಧರ್ಮರಾಜನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿದನು. ಎಲ್ಲರೂ ವಿಕ್ರಮಾರ್ಜುನನ ಬರವನ್ನೇ ಇದಿರುನೋಡುತ್ತಿದ್ದರು. ಈಕಡೆ ವಿದ್ವಾಂಸರೆಂಬ ಕಮಲವನಕ್ಕೆ ಶ್ರೇಷ್ಠವಾದ ಹಂಸದಂತಿರುವ ಅರ್ಜುನನೂ ಅನೇಕಕಾಲ ಅಗಲಿದ್ದ ತನ್ನ ಸಹೋದರರನ್ನು ಜ್ಞಾಪಿಸಿಕೊಂಡು ಹಿಂದಿರುಗಲು ಮನಸ್ಸುಮಾಡಿ ಇಂದ್ರನನ್ನು ಬೀಳ್ಕೊಟ್ಟು ತನಗೆ ದೇವೇಂದ್ರನು ಕೊಟ್ಟ ಐಂದ್ರವೆಂಬ ದಿವ್ಯಾಸ್ತ್ರವನ್ನೂ ನೈಷ್ಠಿಕವೆಂಬ ಮುಷ್ಟಿಯನ್ನೂ (ಮಂತ್ರವಿಶೇಷ) ಅಂಗೀಕಾರಮಾಡಿ ಇಂದ್ರನು ತನ್ನನ್ನು ಅವನ ಪುಷ್ಪಕವಿಮಾನವನ್ನು ಹತ್ತಿಸಿ ಮಾತಲಿಯನ್ನು ಸಾರಥಿಯಾಗಿರ ಹೇಳಿ ಕಳುಹಿಸಲು
Page #386
--------------------------------------------------------------------------
________________
ಅಷಮಾಶ್ವಾಸಂ / ೩೮೧ ಕಳಪೆ ನಾಕಲೋಕದ್ವಾರಮಾಗಿರ್ದ ಗಂಧಮಾದನಗಿರಿಗೆವಂದು ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ ತನ್ನ ಬರವನೆ ಮಾರುತ್ತಿರ್ದ ಧರ್ಮಪುತ್ರನ ಮರುತ್ತುತನ ಪಾದಕಮಲಂಗಳಂ ನಿಜಮಕುಟಮರೀಚಿಗಳಿಂದಮರ್ಚಿಸಿ ತದೀಯಾಶೀರ್ವಚನಮನಾಂತು ತನಗ ಪೆಡವಟ, ನಕುಳ ಸಹದೇವರಿರ್ಬರುಮನಂ ಪರಸಿ ಬಟಿಯಮಿಂದ್ರಕೀಲನಗೇಂದ್ರದೊಳೀಶ್ವರನ ವರ ಪ್ರಸಾದದಿಂ ಪಡೆದ ದಿವ್ಯಾಸ್ತಮಂ ತೋಟಿ ತನ್ನನಿಂದ್ರನೊಡಗೊಂಡು ಪೋದುದುಮನಿಂದ್ರಲೋಕದೊಳಾತನಲ್ಲಿ ಪಡೆದ ಮಹಿಮಯುಮನಳಿಯ ಪೇಟ್ಟು ನಾವಿಲ್ಲಿರಲ್ವೇಡ ದೈತವನದೊಳಿರ್ಪ೦ ಬನ್ನಿಮಂದು ಮಾತಳಿಯಂ ಬೀಳ್ಕೊಟ್ಟು ಕಟಿಪಿ ನಿಜಪರಿಜನಸಹಿತಂ ಬಂದು ಸುಖಮಿರ್ಪನ್ನೆಗಮೊಂದು ದಿವಸವೊಂದು ಮಾಯಾ ಮತ್ತಹಸ್ತಿಮ|| ಮಸಕಂ ಕಾಯ್ದು ಜವಂ ಜವಂಗಮಿರಿರೊಳ್ ನೋಡಲಗುರ್ವಾಗೆ ಮಾಂ
ದಿಸಿಮಾ ವಂದುದು ಕೊಂದುದೆಂದು ಭಯದಿಂ ವಿಪ್ರರ್ ತೆರಳೊಡೆ ತಾ | ಪಸರಂ ಬೆರ್ಚಿಸಿ ತಳಿ ಬೇಳೂರಣಿಯಂ ಕೊಂಡಾಶ್ರಮಕ್ಕಿಂತು ಬೇ ವಸಮಂ ಮಾಡುವುದಾಯದೊಂದು ವಿಭವಂ ಮತ್ತೇಭವಿಕ್ರೀಡಿತಂ | ೩೭
ವ|| ಆಗಳಾ ಮದಾಂಧಗಂಧಸಿಂಧುರದ ಕೋಳಾಹಳಮಂ ತಾಪಸರ್ ಬಂದು ಯುಧಿಷ್ಠಿರಂಗಪಿ ನೀಮಮಗದಲ್ಲಿ ಕೈಗೆ ಪೋದರಣಿಯಂ ತಂದೀಯದಾಗಳಿಷ್ಟಿ ವಿಘ್ನಂಗಳಂ ಮಾಡಿದಿರೆಂದೊಡಚ್ಚರುಂ ಪ್ರಚಂಡಕೋದಂಡಹಸ್ತರ್ ಕಾಳಕಾಳಸ್ವರೂಪಮಂ ಕೆಲ್ಗೊಂಡು ಸ್ವರ್ಗಲೋಕದ ಬಾಗಿಲಾಗಿದ್ದ ಗಂಧಮಾದನಪರ್ವತಕ್ಕೆ ಬಂದನು. ವರ್ಷಾಕಾಲದ ಆಗಮನವನ್ನು ಚಾತಕಪಕ್ಷಿಯು ನಿರೀಕ್ಷಿಸುವಂತೆ ತನ್ನ ಬರವನ್ನೇ ಎದುರು ನೋಡುತ್ತಿದ್ದ ಧರ್ಮರಾಜ ಮತ್ತು ಭೀಮರ ಪಾದಕಮಲಗಳನ್ನು ತನ್ನ ಕಿರೀಟದ ಕಿರಣಗಳಿಂದ ಪೂಜಿಸಿ ಅವರ ಆಶೀರ್ವಾದವನ್ನು ಧರಿಸಿದನು. ತನಗೆ ನಮಸ್ಕಾರಮಾಡಿದ ನಕುಲಸಹದೇವರಿಬ್ಬರನ್ನೂ ಪ್ರೀತಿಯಿಂದ ಆಶೀರ್ವಾದಮಾಡಿದನು. ಆನಂತರ ಇಂದ್ರಕೀಲಪರ್ವತದಲ್ಲಿ ಈಶ್ವರನ ವರಪ್ರಸಾದದಿಂದ ಪಡೆದ ದಿವ್ಯಾಸ್ತ್ರ (ಪಾಶುಪತಾಸ್ತುವನ್ನು ತೋರಿ ತನ್ನನ್ನು ಇಂದ್ರನು ಜೊತೆಯಲ್ಲಿ ಕರೆದುಕೊಂಡು ಹೋದುದನ್ನೂ ಇಂದ್ರಲೋಕದಲ್ಲಿ ಇಂದ್ರನಿಂದ ಪಡೆದ ಮಹಿಮೆ (ಗೌರವ) ತಿಳಿಯುವ ಹಾಗೆ ವಿಸ್ತಾರವಾಗಿ ಹೇಳಿದನು. ನಾವಿಲ್ಲಿರುವುದು ಬೇಡ ದೈತವನದಲ್ಲಿರೋಣ ಬನ್ನಿ ಎಂದು ಹೇಳಿ, ಮಾತಲಿಯನ್ನು ಕಳುಹಿಸಿಕೊಟ್ಟು ತನ್ನ ಬಂಧುಗಳ ಸಮೇತ ದೈತವನಕ್ಕೆ ಬಂದು ಸುಖವಾಗಿದ್ದನು. ೩೭. ಹಾಗಿರುವಾಗ ರಭಸ ಕೋಪ ಮತ್ತು ವೇಗದಲ್ಲಿ ಯಮನಿಗೂ ಅದರ ಎದುರಿನಲ್ಲಿ ನಿಂತು ನೋಡುವುದಕ್ಕೆ ಭಯಂಕರವಾಗುವ ಹಾಗೆ ಇರುವ ಮಾಯಾಗಜವು ಬಂದಿತು! ತಡೆಯಿರಿ; ಕೊಂದುಹಾಕುತ್ತಿದೆ' ಎಂದು ಬ್ರಾಹ್ಮಣರು ಭಯದಿಂದ ಗುಂಪಾಗಿ ಓಡಿದರು. ತಪಸ್ವಿಗಳನ್ನು ಹೆದರಿಸಿ ನೂಕಿ ಅವರು ಹೋಮಮಾಡುವುದಕ್ಕೆ ಸಹಾಯಕವಾದ ಅರಣಿಯನ್ನು (ಅಗ್ನಿಯನ್ನುಂಟುಮಾಡಲು ಉಪಯೋಗಿಸುವ ಕಡೆಗೋಲು) ಕೊಂಡು ಓಡಿತು. ವ|| ಆಗ ಆ ಮದ್ದಾನೆಯ ಕೋಲಾಹಲವನ್ನು ತಪಸ್ವಿಗಳು ಬಂದು ಧರ್ಮರಾಜನಿಗೆ ತಿಳಿಸಿ ಅದು ಕೊಂಡು ಹೋಗಿರುವ ಅರಣಿಯನ್ನು ನೀವು ನಮಗೆ ತಂದುಕೊಡದಿದ್ದರೆ ಯಜ್ಞವಿಘ್ನಮಾಡಿದವರಾಗುತ್ತೀರಿ ಎಂದರು. ಅಯ್ದು ಜನವೂ
Page #387
--------------------------------------------------------------------------
________________
೩೮೨ | ಪಂಪಭಾರತ ಮದಾಂಧಗಂಧಸಿಂಧುರದ ಬಳೆಯಂ ನಿರ್ವಂದದಿಂ ತಗುಳ್ಳುದುಮಾ ಮಾಯಾ ಮತ್ತಹಸ್ತಿಯುಂ ಮೂಲು ಜಾವಂಬರಂ ರೂಪುದೋಚಿ ಪರಿದು ಬಟೆಯಮದೃಶ್ಯಮಾದೊಡಯ್ಯರುಂ ಚೋದ್ಯಂ ಬಟ್ಟು ಘರ್ಮಕಿರಣಸಂತಾಪತಾಪಿತಶರೀರರೋಂದಾಲದ ಮರದ ಕೆಳಗೆ ವಿಶ್ರಮಿಸ ಧರ್ಮ ಪುತ್ರ ನೀರಡಸಿ ಸಹದೇವನನೆಲ್ಲಿಯಾದೊಡಂ ನೀರು ಕೊಂಡು ಬೇಗಂ ಬಾಯೆಂದು ಪೇಯ್ದುದು ಮಂತೆಗೆಯ್ದನೆಂದು ಕೂಜಳಚರಕುಳಕಳರವದೊಳಂ ಕಮಳಕುವಳಯರಜನಿಕಷಾಯ ಪರಿಮಳದಳಿಪಟಳಜಟಳಮಾಗಿ ಬಂದು ತೀಡುವ ಮಂದಾನಿಳನಿಂ ನೀರ ದಸೆಯನಳಿದು ಪೋಗೆ ವೋಗ
ಕಂ
ಬಕ ಕಲಹಂಸ ಬಲಾಕ ಪ್ರಕರ ಮೃದುಹೃಣಿತರಮ್ಯಮಿದಿರೊಳ್ ತೋಟ | ತ್ತು ಕೊಳಂ ಪರಿ ವಿಕಸಿತ ಕನ ಕ ಕಂಜಕಿಂಜಲಪುಂಜಪಿಂಜರಿತಜಳಂ ||
೩೮
ವ|| ಅಂತು ಸೊಗಯಿಸುವ ಸರೋವರಮಂ ಕಂಡು ತಾನುಂ ನೀರಡಸಿದನಪುದಳೆಂದದ ಕೆಲದ ಲತೆಯ ಮೆಳೆಯೋಳ್ ಬಿಲ್ಕುಮಂಬುಮಂ ಸಾರ್ಚಿ ಕೋಳನಂ ಪೊಕ್ಕು ಕರಚರಣ ವದನಪ್ರಕಾಲನಂಗೆಯು ನೀರು ಕುಡಿಯಲೆಂದು ನಿಜಾಂಜಲಿಪುಟಮಂ ನೀಡಿದಾಗಳೊಂದು ದಿವ್ಯವಚನಮಾಕಾಶದೊಳ್
ಭಯಂಕರವಾದ ಬಿಲ್ಲನ್ನು ತರಿಸಿ ಪ್ರಳಯಕಾಲದ ಯಮನ ಆಕಾರವನ್ನು ತಾಳಿ ಆ ಮದ್ದಾನೆಯ ಮಾರ್ಗವನ್ನೇ ಅನುಸರಿಸಿ ಹಿಂದೆ ನಿರ್ಬಂಧದಿಂದ ಅಟ್ಟಿಕೊಂಡು ಹೋಗಲು ಆ ಮಾಯಾಮದಗಜವು ಮೂರು ಜಾವದವರೆಗೂ ತನ್ನ ಆಕಾರವನ್ನು ತೋರಿಕೊಂಡಿದ್ದು ಓಡಿ ಬಳಿಕ ಕಣ್ಮರೆಯಾಯಿತು. ಅಯ್ದು ಜನವೂ ಆಶ್ಚರ್ಯಪಟ್ಟು ಸೂರ್ಯನ ಬಿಸಿಲಿನ ಬೇಗೆಯಿಂದ ಸುಡಲ್ಪಟ್ಟ ಶರೀರವುಳ್ಳವರಾಗಿ ಒಂದು ಆಲದಮರದ ಕೆಳಗೆ ವಿಶ್ರಮಿಸಿಕೊಂಡರು ಧರ್ಮರಾಜನು ಬಾಯಾರಿ ಸಹದೇವನನ್ನು ಎಲ್ಲಿಂದಲಾರದೂ ಬೇಗ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಹಾಗೆಯೇ ಮಾಡುತ್ತೇನೆ ಎಂದು ಶಬ್ದಮಾಡುತ್ತಿರುವ ಜಲಚರಪ್ರಾಣಿಗಳ ಕಲಕಲಶಬ್ದದಿಂದಲೂ ಕಮಲಕನೈದಿಲೆಗಳ ಧೂಳಿನ ಒಗರಿನಿಂದ ಕೂಡಿದ ದುಂಬಿಗಳ ಸಮೂಹದಿಂದ ವ್ಯಾಪ್ತವಾಗಿ ಬಂದು ಬೀಸುವ ಮಂದಮಾರುತದಿಂದಲೂ ನೀರಿರುವ ಸ್ಥಳವನ್ನು ತಿಳಿದು ಆ ಕಡೆ ಹೋದನು. ೩೮. ಬಕ, ಹಂಸ, ಮತ್ತು ಬೆಳ್ಳಕ್ಕಿಗಳ ಸಮೂಹದ ನಯವಾದ ಶಬ್ದದಿಂದಲೂ ರಮ್ಯವಾಗಿ ಅರಳಿರುವ ಹೊಂದಾವರೆಯ ಕೇಸರಗಳ ರಾಶಿಯಿಂದಲೂ ಕೆಂಪು ಮಿಶ್ರವಾದ ಹಳದಿಯ ಬಣ್ಣವನ್ನು ನೀರಿನಿಂದಲೂ ಕೂಡಿದ ಸರೋವರವೊಂದು ಇದಿರಿನಲ್ಲಿ ಕಾಣಿಸಿಕೊಂಡಿತು. ವ|| ಹಾಗೆ ಸೊಗಯಿಸುತ್ತಿರುವ ಸರೋವರವನ್ನು ನೋಡಿ ತಾನೂ ಬಾಯಾರಿದ್ದುದರಿಂದ ಅದರ ಪಕ್ಕದ ಬಳ್ಳಿಯ ಮೆಳೆಯಲ್ಲಿ ಬಿಲ್ಲನ್ನೂ ಬಾಣವನ್ನೂ ಇಟ್ಟು ಸರೋವರವನ್ನು ಪ್ರವೇಶಿಸಿ ಕೈಕಾಲುಮುಖವನ್ನು ತೊಳೆದುಕೊಂಡು ನೀರನ್ನು ಕುಡಿಯುವುದಕ್ಕೋಸ್ಕರ ತನ್ನ ಕೈಬೊಗಸೆಯನ್ನು ನೀಡಿದಾಗ ಒಂದು ಅಶರೀರವಾಣಿಯು ಆಕಾಶದಲ್ಲಿ ಹೀಗೆಂದಿತು.
Page #388
--------------------------------------------------------------------------
________________
ಅಷಮಾಶ್ವಾಸಂ | ೩೮೩ ಕಂ|| ತೋಯಜಷಂಡಮನಿದನಾ
ನಾಯತಿಯಿಂ ಕಾವೆನೆನ್ನ ಮಾತಿಂಗೆಲೆ ಕೌಂ | ತೇಯ ಮಜುಮಾತನಿತ್ತು ಮ
ದೀಯ ಸರೋವರದ ತೋಯಮಂ ಕುಡಿ ಕೊಂಡುಯ್ || ೩೯ ವಗ ಎಂಬುದುಮಾ ದಿವ್ಯವಚನಮನುಲ್ಲಂಘಿಸಿ ನೀರು ಪೋಪಿನಂ ನೀರು ಕುಡಿದು ಪದವಿಘಂಗಳಿಂ ತಮ್ಮಣ್ಣಂಗೆ ನೀರು ತೀವಿಕೊಂಡು ಸರೋವರದಿಂ ಪೂಣಮಟ್ಕಂದೆರಡಡಿಯ ನಿಡುತ ಗತಪ್ರಾಣನಾಗಿ ಬಿಟ್ಟಿರ್ದನಿತ್ತ ಧರ್ಮಪುತ್ರಂ ಸಹದೇವಂ ತಡದುದರ್ಕುಮ್ಮಳಿಸಿ ನಕುಲನ ಮೊಗಮಂ ನೋಡಿ ಸಹದೇವನೊಡಂಗೊಂಡು ನೀರಂ ಕೊಂಡು ಬೇಗಂ ಬಾಯೆಂದು ಪೇಟಿಡಂತಗೆಯ್ಯನೆಂದು ಸಹದೇವನ ಪೋದ ಪಜ್ಜೆಯನೆ ಪೋಗಿ ಕೊಳದ ತಡಿಯೊಳ್ ಬಿಟ್ಟಿರ್ದ ತಮ್ಮನಂ ಕಂಡು ಚೋದ್ಯಂಬಟ್ಟುಕ೦ll ತಾನುಂ ಸರೋಜಷಂಡಮ
ನಾನತರಿಪು ಪೊಕ್ಕು ದಿವ್ಯವಚನಮನದನಂ | ತೇನುಂ ಬಗೆಯದೆ ಕುಡಿದ ಜ್ಞಾನತೆಯಿಂ ನಂಜುಗುಡಿದರಂತಿರೆ ಕಡೆದಂ |
೪೦ ವಗೆ ಅನ್ನೆಗಂ ಯಮನಂದನನಿರ್ವರ ಬರವುಮಂ ಕಾಣದ ಶಂಕಾಕುಳಿತಚಿತ್ತನಾಗಿ ಕಿರೀಟಿಯಂ ಬೇಗಂ ಪೋಗಿ ನೀನಾ ಕೂಸುಗಳನೊಡಂಗೊಂಡು ನೀರಂ ಕೊಂಡು ತಡೆಯದೆ ಬಾಯೆಂಬುದುಮಂತಗೆಯೇನೆಂದು ಬಂದು ಕೊಳನ ತಡಿಯೋಳಚೇತನರಾಗಿ ಬಿಟ್ಟಿರ್ದ ತಮ್ಮಂದಿರಿರ್ವರುಮಂ ಕಂಡು ವಿಸ್ಮಯಂಬಟ್ಟು
೩೯. 'ಈ ಕೊಳವನ್ನು ನಾನು ಎಚ್ಚರದಿಂದ ಕಾಯುತ್ತಿದ್ದೇನೆ. ಎಲೈ ಕೌಂತೇಯನೆ ನನ್ನ ಮಾತಿಗೆ ಪ್ರತ್ಯುತ್ತರವನ್ನು ಕೊಟ್ಟು ನನ್ನ ಸರೋವರದ ನೀರನ್ನು ಕುಡಿದುಕೊಂಡು ಹೋಗು' ವ|| ಎನ್ನಲು ಆ ದಿವ್ಯವಚನವನ್ನುಲ್ಲಂಘನೆ ಮಾಡಿ ಬಾಯಾರಿಕೆ ಹೋಗುವವರೆಗೂ ನೀರು ಕುಡಿದು ಕಮಲಪತ್ರಗಳ ಸಮೂಹದಲ್ಲಿ ತಮ್ಮಣ್ಣನಿಗೆ ನೀರನ್ನು ತುಂಬಿಕೊಂಡು ಸರೋವರದಿಂದ ಹೊರಟನು. ಒಂದೆರಡು ಹೆಜ್ಜೆಯಿಡುವಷ್ಟರಲ್ಲಿಯೇ ಕೆಳಗೆ ಬಿದ್ದು ಗತಪ್ರಾಣನಾದನು. ಎಷ್ಟು ಹೊತ್ತಾದರೂ ಸಹದೇವನು ಹಿಂತಿರುಗಿ ಬರದಿದ್ದುದರಿಂದ ಕಳವಳಪಟ್ಟು ಯುಧಿಷ್ಠಿರನು ನಕುಲನನ್ನು ನೋಡಿ ಸಹದೇವನನ್ನು ಕರೆದುಕೊಂಡು ನೀರನ್ನೂ ತೆಗೆದುಕೊಂಡು ಬಾ ಎಂದು ಹೇಳಿದನು. ೪೦. ಅವನೂ ಸರೋವರವನ್ನು ಪ್ರವೇಶಿಸಿ ಶತ್ರುಗಳನ್ನು ಅಧೀನಮಾಡಿ ಕೊಂಡಿದ್ದ ಆ ನಕುಲನು ಆ ದೇವತೆಯ ಮಾತನ್ನು ಹೇಗೂ ಲಕ್ಷ್ಯಮಾಡದೆ ಅವಿವೇಕದಿಂದ ಕುಡಿದು ವಿಷಪಾನಮಾಡಿದವರ ಹಾಗೆ ಬಿದ್ದನು. ವ|| ಆಗ ಧರ್ಮರಾಯನು ಇಬ್ಬರ ಬರುವಿಕೆಯನ್ನೂ ಕಾಣದೆ ಸಂದೇಹದಿಂದ ಕಲಕಿದ ಮನಸ್ಸುಳ್ಳವನಾಗಿ ಅರ್ಜುನನನ್ನು ನೀನು ಬೇಗಹೋಗಿ ಆ ಮಕ್ಕಳುಗಳನ್ನೊಡಗೊಂಡು ನೀರನ್ನೂ ತೆಗೆದುಕೊಂಡು ಸಾವಕಾಶಮಾಡದೆ ಬಾ ಎಂದನು. ಹಾಗೆಯೇ ಮಾಡುತ್ತೇನೆ ಎಂದು ಅರ್ಜುನನು ಬಂದು ಕೊಳದ ದಡದಲ್ಲಿ ಸತ್ತು ಬಿದ್ದಿದ್ದ ಇಬ್ಬರು ತಮ್ಮಂದಿರನ್ನು
Page #389
--------------------------------------------------------------------------
________________
೩೮೪ | ಪಂಪಭಾರತಂ ಕಂll ಆ ಕಮಳಾಕರಮಂ ಪೊ
ಕ್ಯಾಕಾಶಧ್ವನಿಯನುಜದ ಕುಡಿದರಿಭೂಪಾ | ನೀಕಭಯಂಕರನುಂ ಗಡ
ಮೇಕೆಂದಳೆಯಂ ಬಬಿಲ್ಲು ಜೋಲ್ಲಂ ಧರೆಯೊಳ್ || ೪೧ ವಗ ಅನ್ನೆಗಮ ಯಮನಂದನಂ ಮೂವರ್ ತಮ್ಮಂದಿರ ಬರವಂ ಕಾಣದೆ ಭಗ್ನಮನನಾಗಿ ಭೀಮಸೇನನಂ ನೀಂ ಪೋಗಿ ಮೂವರುಮನೊಡಂಗೊಂಡು ನೀರಂ ಕೊಂಡು ಬಾಯೆಂದೊಡಂತೆಗಯ್ಯನೆಂದು ವಾಯುವೇಗದಿಂ ಬಂದು ಪುಂಡರೀಕಷಂಡೂಪಾಂತದೋಲ್ ವಿಗತಜೀವಿತರಾಗಿರ್ದ ಮೂವರನುಜರುಮಂ ಕಂಡಿದು ಮನುಜರಿಂದಾದುಪದ್ರವಮಲ್ಲ ಮೇನಾನುಮೊಂದು ದೇವತೋಪದ್ರವಮಾಗಿವೇಚ್ಚುಮೆಂದು
ಬಿಡದೆ ಕಡುಕೆಯ ದಿವ್ಯದ ನುಡಿಗೆ ಕಿವುಳ್ಳು ಕುಡಿದು ನೀರಂ ಭೀಮಃ | ಪಿಡಿದ ಗದವೆರಸು ಭೋಂಕನೆ
ಕೆಡದಂ ಗಿರಿಶಿಖರದೊಡನೆ ಕೆಡವಂತಾಗಳ್ || ವ|| ಅಂತು ನಾಲ್ವರುಂ ವಿಳಯಕಾಲವಾತಾಹತಿಯಿಂ ಕೆಡದ ಕುಲಗಿರಿಗಳಂತೆ ಕಡೆದು ಎಗತಜೀವಿತರಾಗಿರ್ದ ಪದದೊಳಕ್ಕೆ ದುರ್ಯೋಧನನ ಬೆಸದೊಳಾತನ ಪುರೋಹಿತಂ ಕನಕಸ್ವಾಮಿಯೆಂಬಂ ಪಾಂಡವರ್ಗಾಭಿಚಾರಮಾಗೆ ಬೇಟ್ಟ ಬೇಳ್ವೆಯ ಕೊಂಡದೊಳಗಣಿಂದಮಂಜನ ಪುಂಜದಂತಪ್ಪ ಮೆಯ್ಯುಂ ಸಿಡಿಲನಡಸಿದಂತಪ್ಪ ದಾಡೆಯುಮುರಿಯುರುಳಿಯಂತಪ್ಪ ಕಣ್ಣು ನೋಡಿ ಆಶ್ಚರ್ಯಪಟ್ಟನು. ೪೧. ಶತ್ರುರಾಜರ ಸಮೂಹಕ್ಕೆ ಭಯವನ್ನುಂಟುಮಾಡುವ ಅರ್ಜುನನೂ ಆ ಸರೋವರವನ್ನು ಪ್ರವೇಶಿಸಿ ಏನೆಂದು ತಿಳಿಯದೆ ಶಕ್ತಿಗುಂದಿ ಭೂಮಿಯಲ್ಲಿ ಜೋತುಬಿದ್ದನು. ವll ಅಷ್ಟರಲ್ಲಿ ಆ ಕಡೆ ಧರ್ಮರಾಯನು ಮೂವರು ತಮ್ಮಂದಿರ ಬರವನ್ನೂ ಕಾಣದೆ ಉತ್ಸಾಹಶೂನ್ಯನಾಗಿ (ಒಡೆದ ಮನಸ್ಸುಳ್ಳವನಾಗಿ) ಭೀಮಸೇನನನ್ನು 'ನೀನು ಹೋಗಿ ಮೂವರನ್ನೂ ಕೂಡಿಕೊಂಡು ನೀರನ್ನೂ ತೆಗೆದುಕೊಂಡು ಬಾ' ಎಂದನು, 'ಹಾಗೆಯೇ ಮಾಡುತ್ತೇನೆ' ಎಂದು ವಾಯು ವೇಗದಿಂದ ಬಂದು ಸರೋವರದ ಸಮೀಪದಲ್ಲಿ ಸತ್ತು ಹೋಗಿದ್ದ ಮೂವರು ತಮ್ಮಂದಿರನ್ನೂ ನೋಡಿ ಇದು ಮನುಷ್ಯರಿಂದಾದ ಕೇಡಲ್ಲ: ಯಾವುದಾದರೂ ದೇವತೆಯ ಹಿಂಸೆಯಾಗಿರಬೇಕೆಂದು ಊಹಿಸಿ ೪೨. ತನಗೂ ಅವಕಾಶಕೊಡದೆ ತಡೆದ ದೇವತೆಯ ಮಾತನ್ನು ಉದಾಸೀನಮಾಡಿ ನೀರನ್ನು ಕುಡಿದು ಹಿಡಿದ ಗದೆಯೊಡನೆಯೇ ಶಿಖರಸಹಿತವಾಗಿ ಪರ್ವತವು ಉರುಳುವಂತೆ (ಭೀಮ) ತಟಕ್ಕನೆ ಬಿದ್ದನು. ವ|| ಹಾಗೆ ನಾಲ್ಕು ಮಂದಿಯೂ ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಬಿದ್ದ ಕುಲಪರ್ವತಗಳಂತೆ ಕೆಡೆದು ಗತಪ್ರಾಣರಾಗಿದ್ದ ಸ್ಥಿತಿಯಲ್ಲಿ ಆ ಕಡೆ ದುರ್ಯೊಧನನ ಆಜ್ಞೆಯಿಂದ ಆತನ ಪುರೋಹಿತನಾದ ಕನಕಸ್ವಾಮಿಯೆಂಬುವನು ಪಾಂಡವರಿಗೆ ಮಾಟಮಾಡಲು ಒಂದು ಹೋಮಮಾಡುತ್ತಿದ್ದನು. ಆ ಯಜ್ಞಕುಂಡದಿಂದ ಕತ್ತಲೆಯ ಸಮೂಹದಂತಿರುವ ಶರೀರವೂ ಸಿಡಿಲನ್ನು ತುಂಬಿಕೊಂಡ ಹಾಗಿದ್ದ ಕೋರೆಹಲ್ಲುಗಳೂ ಬೆಂಕಿಯ ಉಂಡೆಯ ಹಾಗಿದ್ದ ಕಣ್ಣೂ
Page #390
--------------------------------------------------------------------------
________________
ಅಷ್ಠಮಾಶ್ವಾಸಂ | ೩೮೫ ಕೃತಾಂತನಂತಾಕಾರವಾಗಿ ತಟತಟಿಸಿ ಪೊಳೆವ ಕತ್ತಿಗೆಯುಂ ಬೆರಸು ಪೂಣಮಟ್ಟು ಕೀರ್ತಿಗೆ ಯಂಬುಗದೇವತೆ ಬೆಸಸು ಬೆಸಸೆಂದು ಬೆಸನಂ ಬೇಡೆ ಪಾಂಡವರನೆಲ್ಲಿಕೊಡು ಕೊಲ್ಲೆಂದೊಡಂತೆ ಗಯ್ಯನೆಂದು ಪೋಗಲ್ಲಿಯುಮನಿಸಿ ಕಾಣದೆ ಕೊಳನ ತಡಿಯೊಳ್ ಬಿಟ್ಟಿರ್ದ ನಾಲ್ವರುಮಂ ಕಂಡು ಬಾಪ್ಪು ಬದನೆಂದು ತಿನ ಸಾರ್ವಾಗಳವರ್ಗಳನಿತಂ ಮಾಡಿದ ದೈವಂ ಪ್ರತ್ಯಕ್ಷವಾಗಿ ಗಜ ಗರ್ಜಿಸುತ್ತುಂ ಬಂದುಕಂ|| ಎಲೆ ಏಳೆತಿನಿ ಪೋ ಮುಟ್ಟಿದೆ
ತೊಲಗೀ ನಾಲ್ವರ್ಕಳಸುವನವರ್ಗಳ ಮಲ್ಕಂ | ತೊಲಗಿಸಿ ಮುನ್ನಮೆ ಕಾದಿ
ರ್ದಲಂಘಬಲನೆನಿಸಿದನಗೆ ನೀನಗಳಮೇ || ವಅದಲ್ಲದಯುಂ ನೀನೆ ಜಾತಿದೇವತೆಯನ್ನೊಡೆನ್ನೆಂಜಲನೆಂತು ತಿಂಬೆಯೆಂಬುದುಂ ಪಾಂಡವರ್ ಮುನ್ನಮೆ ನಿನ್ನ ಕೆಯ್ದ ವಂದರೆನಗಮಾ ಬೆಸಂ ತಪ್ಪಿದುದಾನಾರಂ ತಿಂಚೆಂ ಪೇಜನ ನಿನ್ನನಾವನೊರ್ವನಕಾರಣಂ ಪುಟ್ಟಿಸಿದನಾತನನೆ ತಿನ್ನೆಂಬುದುಮಂತಗೆಯ್ದನೆಂದು ಪೋಗಿಕಂ! ಕನಕನ ಬೇಳೆ ತಗುಳುದು
ಕನಕನನೆಂಬೊಂದು ಮಾತು ಧರೆಗೆಸೆಯ ಸುಯೋ | ಧನನ ಪುರೋಹಿತನಪ್ಪಾ ಕನಕಸ್ವಾಮಿಯನೆ ಮುನಿದು ಕೀರ್ತಿಗೆ ತಿಂದಳ್ ||
(ಇವುಗಳಿಂದ ಕೂಡಿ) ಯಮನ ಹಾಗಿರುವ ಸ್ವರೂಪವೂ ಇವುಗಳನ್ನು ತಾಳಿ ಥಳಥಳನೆ ಹೊಳೆಯುತ್ತಿರುವ ಕತ್ತಿಯಿಂದ ಕೂಡಿ ಹೊರಟು ಕೀರ್ತಿಗೆಯೆಂಬ ಒಂದು ಭಯಂಕರವಾದ ದೇವತೆಯು ನಾನು ಏನು ಮಾಡಬೇಕೆಂಬುದನ್ನು ಅಪ್ಪಣೆಕೊಡು' ಎಂದು ತಾನು ಮಾಡಬೇಕಾದ ಕಾರ್ಯವನ್ನು ಬೇಡಿತು. 'ಪಾಂಡವರೆಲ್ಲಿ ಹೊಕ್ಕಿದ್ದರೂ ಕೊಲ್ಲು' ಎಂದು ಆಣತಿಯಿತ್ತನು. ಹಾಗೆಯೇ ಮಾಡುತ್ತೇನೆ ಎಂದು ಹೋಗಿ ಹುಡುಕಿ ಎಲ್ಲಿಯೂ ಕಾಣದೆ ಕೊಳದ ದಡದಲ್ಲಿ ಬಿದ್ದಿದ್ದ ನಾಲ್ವರನ್ನೂ ಕಂಡು 'ಶಹಭಾಸ್ ಬದುಕಿದೆನು' ಎಂದು ತಿನ್ನುವುದಕ್ಕೆ ಬಂದಾಗ ಅವರುಗಳಿಗೆ ಆ ಸ್ಥಿತಿಯನ್ನುಂಟು ಮಾಡಿದ ದೈವವು ಎದುರಿಗೆ ಕಾಣಿಸಿಕೊಂಡು ರೇಗಿ ಆರ್ಭಟಮಾಡುತ್ತ ಬಂದು ಹೇಳಿತು. ೪೩. ಎಲೆ ಪಿಶಾಚಿ, ತೋಲಗಿಹೋಗು. ಈ ನಾಲ್ಕು ಜನದ ಪ್ರಾಣವನ್ನು ಅವರ ಶರೀರದಿಂದ ತೊಲಗಿಸಿದ ಮೊದಲಿಂದ ಕಾದಿರುವ, ಮೀರುವುದಕ್ಕಾಗದ ಶಕ್ತಿಯುಳ್ಳವನೆನಿಸಿಕೊಂಡಿರುವ ನನಗೆ ನೀನು ಹೆಚ್ಚಿನವಳೇ? ವ ಹಾಗೆಲ್ಲಿಯೂ “ನೀನು ಉತ್ತಮಜಾತಿಯ ದೇವತೆಯೇ ಆಗಿದ್ದ ಪಕ್ಷದಲ್ಲಿ ನನ್ನ ಎಂಜಲನ್ನು ಹೇಗೆ ತಿನ್ನುತ್ತೀಯೆ' ಎಂದಿತು. ಪಾಂಡವರು ಮೊದಲೇ ನಿನ್ನ ಅಧೀನರಾದವರು ಆದುದರಿಂದ ನಾನು ಮಾಡಬೇಕಾದ ಆ ಕಾರ್ಯವು ತಪ್ಪಿಹೋಯಿತು. ನಾನು ಈಗ ಯಾರನ್ನು ತಿನ್ನಲಿ ಹೇಳು ಎಂದು ಕೇಳಿದಳು. ನಿನ್ನನ್ನು ಯಾವನು ಅಕಾರಣವಾಗಿ ಹುಟ್ಟಿಸಿದನೋ ಅವನನ್ನೇ ತಿನ್ನು ಎಂದು ಹೇಳಲು ಹಾಗೆಯೇ ಮಾಡುತ್ತೇನೆ ಎಂದು ಹೋಗಿ ೪೪. 'ಕನಕನ ಯಜ್ಞಕನಕನ ಬೆನ್ನನ್ನೇ ಅಂಟಿತು' ಎಂಬ ಒಂದು ಮಾತು ಭೂಮಿಯಲ್ಲಿ
Page #391
--------------------------------------------------------------------------
________________
೩೮೬ /ಪಂಪಭಾರತಂ
ವll ಅನ್ನೆಗಮಿತ್ತ ಕೃತಾಂತನಂದನಂ ತನ್ನ ನಾಲ್ವರ್ ತಮ್ಮಂದಿರುಂ ಬಾರದೆ ತಡೆದುದರ್ಕೆ ಚಿಂತಾಕ್ರಾಂತನಾಗಿ
ಕಂ
ಪೋದರನೊಡಗೊಂಡು ಬರಲ್
ಪೋದರುಮಾ ಪೋದ ಪೋಗೆ ಪೋದ ತಡೆಯಲ್ 1 ಪೋದವರಲೆಂದು ಮನಃ
ಖೇದಂಬೆರಸೆಯೇನಂದನಬ್ಬಾಕರಮಂ ||
೪೫
ವ|| ಅಂತೆಯೇವಂದು ಬಸಿಡಿಲ್ ಪೊಡೆಯ ಕಡೆದ ಶಾಲತರುಗಳಿ ರ್ಪಂತಿರ್ದ ನಾಲ್ವರ್ ತಮ್ಮಂದಿರುಮಂ ಕಂಡು ಬೆಕ್ಕಸಂಬಟ್ಟು
ಆರಿಂದಮಿವರ್ಗಿದಾಯಂ
ದಾರಯ್ಯಂ ಬಯವಾದೊಡೇನಾಯ್ತಂದಂ | ಭೋರುಹರಜಃಪಟಾವೃತ
ವಾರಿಯನಾ ನೃಪತಿ ಕುಡಿಯಲೊಡರಿಸಿದಾಗಳ್ ||
ಕಂ।।
ಮರುಳಾಗದನ್ನ ನುಡಿಗು
ತರಮಂ ಮುನ್ನಿತ್ತು ಕುಡಿಯ ಕಜ್ಜು ನಿನಗು | ತರಿಸುಗುಮಂತಲ್ಲದಿವಂ
ದಿರಂತೆ ನೀನುಂತ ಮೂರ್ಖನಾಗದಿರರಸಾ ||
೪೬
42
ಮ|| ಎಂಬುದುಮೆನ್ನ ತಮ್ಮಂದಿರ್ಗಿನಿತಂ ಮಾಡಿದ ದಿವ್ಯಮಾ ದಿವ್ಯಮಕ್ಕುಮಂದದು ಬೆಸಗೊಂಡುದರ್ಕೆಲ್ಲಂ ಮಲಮಾತುಗುಡುವುದುಂ ಮೆಚ್ಚಿ ತನ್ನ ಸ್ವರೂಪಮಂ ತೋಟ
ಪ್ರಖ್ಯಾತವಾಗುವ ಹಾಗೆ ದುರ್ಯೋಧನನ ಪುರೋಹಿತನಾದ ಆ ಕನಕಸ್ವಾಮಿಯನ್ನೇ ಕೋಪಿಸಿಕೊಂಡು ಕೀರ್ತಿಗೆ ತಿಂದುಹಾಕಿದಳು. ವ|| ಅಷ್ಟರಲ್ಲಿ ಧರ್ಮರಾಜನು ತನ್ನ ನಾಲ್ಕು ತಮ್ಮಂದಿರೂ ಬರದೆ ಸಾವಕಾಶಮಾಡಿದುದಕ್ಕಾಗಿ ಚಿಂತಾಕ್ರಾಂತನಾಗಿ ೪೫. ಹೋದವರನ್ನು ಒಡಗೊಂಡು ಬರಲು ಹೋದವರೂ ಅವರ ಹಿಂದೆಯೇ ಹೊರಟುಹೋದರು. ಅವರು ತಡೆಯಲು ಹೋದವರಲ್ಲ (ಅವರು ಹಾಗೆ ಸಾವಕಾಶಮಾಡುವವರಲ್ಲ ಎಂಬ ಮನಸ್ಸಿನ ಖೇದದಿಂದ ತಾನೇ ಸರೋವರದ ಸಮೀಪಕ್ಕೆ ಬಂದನು. ವ|| ಹಾಗೆ ಸಮೀಪಿಸಿ ಬರಸಿಡಿಲು ಹೊಡೆಯಲು ಕೆಡೆದ ಸಾಲವೃಕ್ಷಗಳಂತಿದ್ದ ನಾಲ್ವರು ತಮ್ಮಂದಿರನ್ನೂ ನೋಡಿ ಆಶ್ಚರ್ಯಪಟ್ಟನು. ೪೬. ಯಾರಿಂದ ಇವರಿಗಿದಾಯಿತು ಎಂಬುದನ್ನು ಅನಂತರ ವಿಚಾರಿಸುತ್ತೇನೆ. ಆದರೆ ಏನಾಯ್ತು ಎಂದು ಕಮಲದ ಧೂಳೆಂಬ ಬಟ್ಟೆಯಿಂದ ಮುಚ್ಚಿದ ನೀರನ್ನು ಆ ರಾಜನು ಕುಡಿಯಲು ತೊಡಗಿದನು. ೪೭. ಅವಿವೇಕಿ (ಹುಚ್ಚ)ಯಾಗದೆ ನನ್ನ ಮಾತಿಗೆ ಮೊದಲು ಉತ್ತರವನ್ನು ಕೊಟ್ಟು ನೀರು ಕುಡಿದರೆ ನಿನ್ನ ಕೆಲಸ ಜಯಪ್ರದವಾಗುತ್ತದೆ. ಹಾಗಲ್ಲದೆ ಎಲೈ ರಾಜನೇ ಇವರುಗಳ ಹಾಗೆ ನೀನೂ ಸುಮ್ಮನೆ ಮೂರ್ಖನಾಗಬೇಡ' ವ|| ಎನ್ನಲು ನನ್ನ ತಮ್ಮಂದಿರಿಗೆ ಇಷ್ಟು ಮಾಡಿದೆ ದೇವತೆಯಿದೇ ಆಗಿರ ಬಹುದೆಂದು ತಿಳಿದು ಅದು ಹಾಕಿದ ಪ್ರಶ್ನೆಗಳಿಗೆಲ್ಲ ಪ್ರತ್ಯುತ್ತರವನ್ನಿತ್ತು ತೃಪ್ತಿ
Page #392
--------------------------------------------------------------------------
________________
೩೮೮) ಪಂಪಭಾರತಂ
ವll ಎಂದು ಯುಧಿಷ್ಠಿರಂ ನಿಷ್ಠಿತಕಾರ್ಯಮನನನುಷ್ಠಿಸೆ ನಿಜ ಪರಿಜನಮಲ್ಲಮನೀ ಯೋಂದು ವರುಷಮುಂ ನಿಮ್ಮ ನಿಮ್ಮ ಬಲಂದದೊಳಿರಿಮೆಂದು ಧಮಸಮೇತಂ ಪೋಗಲೇಬು ತಮ್ಮಯ್ಯರುಂ ಪಾಂಚಾಳಿವೆರಸು ಪೋದ ದೆಸೆಯನಾರುಮತಿಯದಂತು ದೃತವನಮಂ ಪೊಅಮಟ್ಟು ಜಗುನೆಯಂ ಪಾಯು ಮೂಡಮೊಗದೆ ಪಯಣಂಬೋಗಿ ಮತ್ಸ ದೇಶಮಂ ಪುಗುತಂದರದಂತಪ್ಪು ದಂಡಕಂ|| ಇಂಚೆಯ ಪಸವಿನ ಬಜದ ಕ
ಇಂಚಿನ ಡಾವರದ ಬಾಧೆಯಿಲ್ಲದ ಪದದೊಳ್ || ಮುಂಚದ ಪಿಂಚದೆ ಬಳೆದು ವಿ
ರಿಂಚಿಯ ಕೆಮ್ಮಿಡಿವೊಲಾದುವಾ ನಾಡೂರ್ಗಳ್ || ವ|| ಆ ನಾಡಂ ನಾಡಾಡಿಯಲ್ಲದೆ ಮಚ್ಚುತ್ತುಂ ಬಂದುಕಂ|| ಧ್ವನದಳಿಕುಳಾಕುಳೀಕೃತ
ವನಂಗಳಿಂದೆಸೆವ ಪದಷಂಡಂಗಳ ಚ | ಲೈನೊಳಂ ಕಣ್ಣಂ ಮನಮುಮ
ನನುವಿಸುವ ವಿರಾಟಪುರಮನೆಯೀದರವರ್ಗಳ್ || ವ|| ಅಂತೆಯೆವಂದು ತಮ್ಮ ದಿವಾಯುಧಂಗಳನೆಲಮನಾ ಪುರೋಪವನದ ಒತವನದ ಕೆಲದ ಶಮಿವೃಕ್ಷದ ಮೇಲೆ ಪುರುಷಾಕೃತಿಯಾಗಿ ನೇಲ್ಕಟ್ಟ ಕೆಲದ ಪಣಂಗಳೆಲ್ಲಮನವು
ಆಶ್ರಯವಾಗಿರುತ್ತದೆ. ನಮ್ಮ ಶತ್ರುವಾದ ಕೌರವನಿಗೆ ಮತ್ಯರಾಜನು ಶತ್ರು; ಆದುದರಿಂದ ಅಜ್ಞಾತವಾಸದ ವಿಷಯವಾಗಿ ಯೋಚಿಸುವುದಾದರೆ ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ. ಆದುದರಿಂದ ಯಾರಿಗೂ ತಿಳಿಯದಂತೆ ವೇಷವನ್ನು ಮರೆಸಿಕೊಂಡು ವಿರಾಟಪುರವನ್ನು ಪ್ರವೇಶಿಸಿ ಆ ಅಜ್ಞಾತವಾಸವನ್ನು ಕಳೆಯೋಣ' ವು ಎಂದು ಧರ್ಮರಾಯನು ಮಾಡಬೇಕಾದ ಕಾರ್ಯವನ್ನು ಸೂಚಿಸಿ ತನ್ನ ಪರಿವಾರದವರನ್ನೆಲ್ಲ ಈ ಒಂದು ವರ್ಷ ಕಾಲ ನಿಮಗೆ ತಿಳಿದ ರೀತಿಯಲ್ಲಿ ಇರಿ ಎಂದು ಭೌಮ್ಯನೊಡನೆ ಕಳುಹಿಸಿದನು. ತಾವೈದು ಜನರೂ ಬ್ರೌಪದಿಯೊಡಗೂಡಿ ತಾವು ಹೋದ ದಿಕ್ಕನ್ನು ಯಾರೂ ತಿಳಿಯದಂತೆ ದೈತವನದಿಂದ ಹೊರಟು ಯಮುನಾನದಿಯನ್ನು ದಾಟಿ ಪೂರ್ವಾಭಿಮುಖವಾಗಿ ಪ್ರಯಾಣಮಾಡಿ ಮತ್ಯದೇಶವನ್ನು ಪ್ರವೇಶಮಾಡಿದರು. ಅದು ಹೇಗಾಯಿತೆಂದರೆ-೫೧. ಆ ನಾಡಿನ ಊರುಗಳು ಹಿಂಸೆ, ಕ್ಷಾಮ, ಬರ, ಮೋಸ, ಕ್ಲೋಭೆ ಇವುಗಳ ಉಪದ್ರವವಿಲ್ಲದ ಸ್ಥಿತಿಯಲ್ಲಿ ಯಾವ ಹೆಚ್ಚ ಕಡಿಮೆಯಿಲ್ಲದೆ, ಏಕಪ್ರಕಾರವಾಗಿ ಅಭಿವೃದ್ದಿಯಾಗಿ ಬ್ರಹ್ಮನ ಕೈಗನ್ನಡಿಯ ಹಾಗಿದ್ದುವು. ವ|| ಆ ದೇಶವನ್ನು ಅಸಾಧಾರಣವಾಗಿ ನೋಡುತ್ತ ಬಂದು, ೫೨. ಶಬ್ದಮಾಡುತ್ತಿರುವ ದುಂಬಿಗಳ ಸಮೂಹದಿಂದ ಆವರಿಸಲ್ಪಟ್ಟ ತೋಟಗಳಿಂದ ಪ್ರಕಾಶಿಸುವ, ಸರೋವರಗಳ ಸೌಂದರ್ಯದಿಂದ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ವಿರಾಟಪುರವನ್ನು ಅವರು ಬಂದು ಸೇರಿದರು. ವ|| ತಮ್ಮ ದಿವ್ಯಾಯುಧಗಳೆಲ್ಲವನ್ನೂ ಆ ಪಟ್ಟಣದ ಸಮೀಪದ ಶಶಾನದ ಪಕ್ಕದಲ್ಲಿದ್ದ ಬನ್ನಿಮರದ
Page #393
--------------------------------------------------------------------------
________________
ಅಷ್ಠಮಾಶ್ವಾಸಂ | ೩೮೭
ಕನಕನ ಬೇಳೆಯಿಂದೊಗೆದ ಕೀರ್ತಿಗೆಯಂ ನಿನಗಪ್ಪಪಾಯಮಂ ನೆನೆದು ಮದೇಭರೂಪಮನೆ ತೋಟ ನಿಜಾಶ್ರಮದಿಂದಗಲ್ಲಿ ನಿ | ನ್ನನುಜರನೀಯುಪಾಯದೊಳ ಕೀರ್ತಿಗೆಯೊಡ್ಡಿಗೆ ಕಾದೆನಾಂ ಕೃತಾಂ ತನೆನೆನಗಮ್ಮ ನೀಂ ಮಗನೆಯನ್ ಪೆಂತೇಂ ನಿನಗುತ್ತರೋತ್ತರಂ || ೪೮ ವ|| ಎಂದು ಮಕೆಂದಿದರನೆತ್ತುವಂತೆ ನಾಲ್ವರುಮನತ್ತಿ ತಾಂ ಮುನ್ನಂ ತಂದರಣಿಯಂ ಕೊಟ್ಟು ಕೃತಾಂತನಂತರ್ಧಾನಕ್ಕೆ ಸಂದಂ ಧರ್ಮತನೂಜನುಮನುಜರ್ ಸಹಿತಂ ನಿಜನಿವಾಸಕ್ಕೆ ವಂದರಣಿಯಂ ಪಾರ್ವಗೆ್ರ ಕೊಟ್ಟು ಕೆಲವು ದವಸಮಿರ್ದು ಧಮ್ಮ ಪುರೋಹಿತಂಬೆರಸಯ್ದರು ಮಾಲೋಚಿಸಿ
ಚಂ!!
ಚoll ನೆದುವು ಪನ್ನೆರರಿಸಮುಗ್ರವಿರೋಧಿಜನಕ್ಕೆ ಮಿಲ್ಕುಗಳ್ ನೆವವೊಲಾಗದಿನ್ನದಿರಲ್ ನಮಗುಮನೊಂದನಿರ್ದೊಡೇ | ತಂ ಪಡೆಮಾತೊ ಮತ್ತಮಿರವೇಟ್ಟದು ಪನ್ನೆರಡಬ್ಬಮಂ ಮನಂ ಮಲುಗೆ ಬನಂಗಳೊಳ್ ನುಡಿದ ನನ್ನಿಗೆ ಪೇಟೆಮಿದರ್ಕೆ ಕಜ್ಜಮಂ || ೪೯ ವ|| ಎನೆ ಯಮನಂದನನಿಂತೆಂದಂ
ಮ|| ಅಪವಾದಂ ಪೆತೊಂದುಮಿಲ್ಲ ನಮಗಿನ್ನು ಪೊಕ್ಕಿರಲಿಂಬು ಮ ತೃಪುರಂ ಶತ್ರುಗೆ ಶತ್ರು ಮತೃನದಂದಜ್ಞಾತವಾಸಕ್ಕೆ ಚಿಂ | ತಿಪೊಡಿನ್ನನ್ನವು ತಾಣವಿಲ್ಲದನುಂತಾರ್ಗಫೊಡಂ ಮಿಕ್ಕ ರೂ ಪ ಪರಾವರ್ತನದಿಂ ವಿರಾಟಪುರಮಂ ಪೊಕ್ಕಿರ್ದದಂ ನೀಗಮ್ || 980 ಪಡಿಸಿದನು. ಸಂತೋಷಗೊಂಡ ದೈವವು ಹೀಗೆ ಹೇಳಿತು. ೪೮. ಕನಕನ ಯಜ್ಞದಿಂದ ಹುಟ್ಟಿದ ಕೀರ್ತಿಗೆಯೆಂಬ ದೇವತೆಯಿಂದ ನಿನಗಾಗಬಹುದಾದ ಅಪಾಯವನ್ನು ತಿಳಿದು ಅದನ್ನು ತಪ್ಪಿಸಬೇಕೆಂದು ಹೀಗೆ ಮಾಡಿದೆ. ಮದಗಜದ ಆಕಾರವನ್ನು ತೋರಿಸಿ ನಿಮ್ಮನ್ನು ಆಶ್ರಮದಿಂದ ಆಗಲಿಸಿ (ಬೇರೆ ಮಾಡಿ) ಈ ಉಪಾಯದಿಂದ ಕೀರ್ತಿಗೆಯೆಂಬ ಆ ದೇವತೆಗೆ ಪ್ರತೀಕಾರಮಾಡಿ ನಿನ್ನ ತಮ್ಮಂದಿರನ್ನು ರಕ್ಷಿಸಿದ ನಾನು ಯಮ. ನೀನು ನನ್ನ ಮಗನಾಗಿದ್ದೀಯಪ್ಪ. ಇದಕ್ಕಿಂತ ನಿನಗೆ ಬೇರೆಯಾದ ಅಭಿವೃದ್ಧಿ ಏನಿದೆ. ವ|| ಎಂಬುದಾಗಿ ಹೇಳಿ ಮರೆತು ಮಲಗಿದ್ದವರನ್ನು ಎಬ್ಬಿಸುವ ಹಾಗೆ ನಾಲ್ಕು ಜನರನ್ನೂ ಎಬ್ಬಿಸಿ ತಾನು ತಂದಿದ್ದ ಅರಣಿಯನ್ನು ಕೊಟ್ಟು ಯಮನು ಅದೃಶ್ಯನಾದನು. ಧರ್ಮರಾಜನೂ ತಮ್ಮಂದಿರೊಡನೆ ತನ್ನ ವಾಸಸ್ಥಳಕ್ಕೆ ಬಂದು ಅರಣಿಯನ್ನು ಬ್ರಾಹ್ಮಣರಿಗೆ ಕೊಟ್ಟನು. ಕೆಲವು ದಿನಗಳಿದ್ದು ದೌಮ್ಯನೆಂಬ ಪುರೋಹಿತನೊಡಗೂಡಿ ಅಯ್ದುಜನರೂ ಆಲೋಚಿಸಿದರು. ೪೯. ಕ್ರೂರಿಗಳಾದ ಶತ್ರುಗಳಿಗೆ ಮೃತ್ಯುಪೂರ್ಣವಾಗುವ ಹಾಗೆ ಹನ್ನೆರಡುವರ್ಷಗಳು ತುಂಬಿದುವು. ಇನ್ನು ಒಂದು ವರ್ಷ ನಾವು ಯಾರೂ ತಿಳಿಯದಂತೆ ಇರಬೇಕು. ಅದು ತಪ್ಪಿದರೆ ಆಡಿದ ಸತ್ಯವಾಕ್ಕಿಗೆ ಅನುಗುಣವಾಗಿ ಮನಸ್ಸಿಗೆ ದುಃಖವಾಗುವ ಹಾಗೆ ಇನ್ನೂ ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿರಬೇಕಾಗುತ್ತದೆ. ಇದಕ್ಕೆ ಮಾಡಬೇಕಾದ ಕಾರ್ಯ (ಉಪಾಯ)ವನ್ನು ತಿಳಿಸಿ. ವ|| ಎನ್ನಲು ಧರ್ಮರಾಯನು ಹೀಗೆಂದನು-೫೦ 'ನಮಗೆ ಇದುವರೆಗೆ ಯಾವ ಅಪವಾದವೂ ಇಲ್ಲ; ಸುಖವಾಗಿರುವುದಕ್ಕೆ ಮತ್ಯಪುರವು
Page #394
--------------------------------------------------------------------------
________________
ಅಷಮಾಶ್ವಾಸಂ | ೩೮೯ ಮೇಲೊಟ್ಟಿ ಪರದೂರೊರ್ವರೊಂದೊಂದು ಬಟ್ಟೆಯೊಳ್ ಪೊಗಿ ಬೇಜವೇ ಪೊಬಲಂ ಪೊಕ್ಕು ಧರ್ಮಪುತ್ರಂ ಧರಾಮರವೇಷದೊಳ್ ವಿರಾಟನಂ ಕಂಡಾಶೀರ್ವಾದಮಂ ಕುಡ ವಿರಾಟಂ ನೀಮತಣಿಂ ಬಂದಿರೆಂಬುದುಮಾಂ ಧರ್ಮರಾಜನ ಸಮೀಪದೂಳಿರ್ಪವರಸಂಗ ಪೊಟ್ಟು ಪೋಗದಾಗಳೆನ್ನೊಡನೆ ನೆತ್ತಮನಾಡುವನದಲ್ಲದೆಯುರಿಕoll ಕನವರಿಸಿ ನಾಲ್ಕು ವೇದಮು
ಮನಗೆ ಮುಖೋದ್ಯಮದಲ್ಲದಾಯಿಂಗದ ಮಾ | ತನಿತ ಗಡ ನೃಪತಿ ಬಂದಂ ನಿನಗಾಳಾಗಿ ಕಂಕಭಟ್ಟನನೆಂಬಂ ||
೫೩ ವಗಿ ಎಂಬುದುಂ ವಿರಾಟನಾತನ ಭದ್ರಾಕಾರಮುಮಂ ಮೃದುಮಧುರಗಂಭೀರ ವಾಣಿಯುಮಂ ಕಂಡು ಕರಂ ಮನದಗೊಂಡು ಕರಮೋಳ್ಳಿತೆಂದು ಕಂಕಭಟ್ಟನನಿರಿಸಿದನನ್ನೆಗಂ ಭೀಮಸೇನನುಂ ಬೋನವೀಳಿಗೆಯಂ ಸಟ್ಟುಗಮುಮನೊರ್ವ ಪರಿಚಾರಕನಿಂ ಪಿಡಿಯಿಸಿಕೊಂಡು ಬಂದು ನಿಂದನಂ ಕಂಡು ವಿರಾಟಂ ನಿನ್ನ ಬಿನ್ನಾಣವೇನೆಂದು ಬೆಸಗೊಳೆಕoll ಎನ್ನಟ್ಟಡುಗಯನುಂಡೂಡ
ಬಿನ್ನಣಮೇನರಸ ನರಗಳಾಗವು ಸವಿಯೋಳ್ || ನಿನ್ನಂ ಮೆಚಿಪನಡದೂ ಡನ್ನರೊಳಂ ಮಲ್ಕನೊರ್ವ ವಲ್ಲಲನೆಂಬಂ ||
೫೪
ಮೇಲೆ ಮನುಷ್ಯಾಕೃತಿಯಲ್ಲಿ ನೇತುಹಾಕಿದರು. ಪಕ್ಕದಲ್ಲಿದ್ದ ಹೆಣಗಳೆಲ್ಲವನ್ನೂ ಆದರ ಮೇಲೆ ರಾಶಿ ಹಾಕಿದರು. ಬೇರೆಬೇರೆಯಾಗಿ ಒಬ್ಬೊಬ್ಬರೂ ಒಂದೊಂದು ದಾರಿಯಲ್ಲಿ ಪ್ರತ್ಯೇಕವಾಗಿ ಪುರಪ್ರವೇಶಮಾಡಿದರು. ಧರ್ಮರಾಯನು ಬ್ರಾಹ್ಮಣವೇಷದಲ್ಲಿ ವಿರಾಟನನ್ನು ನೋಡಿ ಆಶೀರ್ವದಿಸಿದನು. ವಿರಾಟನು 'ನೀವೆಲ್ಲಿಂದ ಬಂದಿರಿ' ಎನ್ನಲು ನಾವು ಧರ್ಮರಾಜನ ಸಮೀಪದಲ್ಲಿದ್ದವರು. ರಾಜನಿಗೆ ಹೊತ್ತುಹೋಗದಾಗ ಅವನು ನಮ್ಮೊಡನೆ ಪಗಡೆಯಾಡುತ್ತಿದ್ದನು. ಅದಲ್ಲದೆ ೫೩. ನಾನು ನಾಲ್ಕು ವೇದಗಳನ್ನು ಕನಸಿನಲ್ಲಿಯೂ ಹೇಳಬಲ್ಲೆ, ಅದಲ್ಲದೆ ಶಿಕ್ಷಾವ್ಯಾಕರಣವೇ ಮೊದಲಾದ ಆರು ವೇದಾಂಗಗಳೂ ಹಾಗೆಯೇ ಕಂಠಪಾಠವಾಗಿವೆ. ನಿನಗೆ ಆಳಾಗಿರುವುದಕ್ಕೆ ಬಂದಿದ್ದೇನೆ. ಕಂಕಭಟ್ಟನೆಂದು ನನ್ನ ಹೆಸರು ಎಂದನು. ವ|| ವಿರಾಟನು ಆತನ ಮಂಗಳಾಕಾರವನ್ನೂ ಮೃದುಮಧುರಗಂಭೀರವಾದ ಮಾತನ್ನೂ ನೋಡಿ ವಿಶೇಷವಾಗಿ ಸಂತೋಷಪಟ್ಟು ಬಹಳ ಒಳ್ಳೆಯದು ಎಂದು ಕಂಕಭಟ್ಟನನ್ನು ತನ್ನಲ್ಲಿ ಇರಿಸಿಕೊಂಡನು. ಅಷ್ಟರಲ್ಲಿ ಭೀಮಸೇನನು ಊಟದ ಪೆಟ್ಟಿಗೆಯನ್ನೂ ಸೌಟನ್ನೂ ಒಬ್ಬ ಆಳಿನ ಕಯ್ಯಲ್ಲಿ ತೆಗೆಸಿಕೊಂಡು ಬಂದು ನಿಂತನು. ಅವನನ್ನು ನೋಡಿ ನಿನ್ನ ವಿದ್ಯೆಯೇನು (ಕಸುಬು ವೃತ್ತಿ) ಎಂದು ಪ್ರಶ್ನೆಮಾಡಿದನು. ೫೪. ಅದಕ್ಕೆ ಭೀಮನು ನಾನು ಮಾಡಿದ ಅಡಿಗೆಯನ್ನು ಊಟಮಾಡಿದರೆ ತಲೆಯಲ್ಲಿ ನರೆಕೂದಲೇ ಬರುವುದಿಲ್ಲ. ಎಲೈ ರಾಜನೆ ವಿಚಾರಮಾಡುವುದೇನು ರುಚಿಯಲ್ಲಿ ನಾನು ನಿಮ್ಮನ್ನು ತೃಪ್ತಿಪಡಿಸಬಲ್ಲೆ, ಪ್ರತಿಭಟಿಸಿ ಬಂದರೆ ಎಂತಹವರನ್ನೂ ನೋಡಿಕೊಳ್ಳಲೂ ಸಮರ್ಥನಾದ ಜಟ್ಟಿ ನಾನು,
Page #395
--------------------------------------------------------------------------
________________
೩೯೦) ಪಂಪಭಾರತಂ
ವ|| ಎಂಬುದುಂ ನಿನ್ನನಾಳ್ವೆನೆಂದು ಬಾಣಸಿನ ಕರಣಕ್ಕೆ ನಿರೂಪಣಂಗಯ್ಯನನ್ನೆಗಂ ನಕುಳನುಮಂಕವಣಿಯುಂ ಬಾಳುಂ ಬಾರುಂ ಚಮ್ಮಟಗೆಯುಮನೊರ್ವ ಕೀಬಾಳಿ೦ ಪಿಡಿಯಿಸಿ ಕೊಂಡು ಬಂದು ವಿರಾಟನಂ ಕಂಡಂತಪ್ಪ ದುಷ್ಟಾಶ್ವಂಗಳುಮನೇಯಲುಂ ತಿರ್ದಲುಂ ಬಲ್ಲೆನೆಂದು ಪೇಯ್ಡಾಳಾಗಿ ತಂತ್ರನಾಳವೆಸರೊಳ ಮಾಸಾದಿಯಾಗಿರ್ದಂ ಸಹದೇವನುಂ ಗೋಪಾಳವೇಷದೊಳ್ ಬಂದು ಕಂಡವನ ಗೋಮಂಡಳಾಧ್ಯಕ್ಷನಾಗಿರ್ದಾಗಲ್ಮll ಎಳೆಯ ವಿಕ್ರಮದಿಂ ತರಲ್ ಮಹಿಧರ ಮುನ್ ಪಂದಿಯಾದಂತ ಪೋ
ಬೆಳೆಯಂ ದಾಯಿಗರಂ ಪಡಲ್ವಡಿಸಿ ಕೊಂಡಾಳಲ್ಕಮಾದೇವದಿಂ || ಮುಳಿಸಿಂ ರಂಭೆಯ ಕೊಟ್ಟ ಶಾಪಮನದಂ ನೀಗಲ್ಯಮಾಗಳ ಬೃಹಂ ದಳೆಯಾದಂ ನರನಾತ್ಮಕಾರ್ಯವಶದಿಂ ಶುದ್ಧಾಂತದೊಳ್ ಮತ್ರ ನಾ || ೫೫
ವ|| ಅಂತು ಬೃಹಂದಳೆಯಾಗಿ ಗಾಂಡೀವ ಜ್ಞಾಘಾತದೊಳಿಂದ್ರನೀಲಂಗಳನಡಸಿದಂತಿರ್ದ ರಡುಂ ಮುಂಗಯ್ಸಳ ಕರ್ಪ೦ ತೀವ ತೊಟ್ಟ ಬಳೆಗಳ ಮಆಸೆ ವಿರಾಟನ ಮಗಳಪುತ್ತರ ಮೊದಲಾಗೆ ಪಲವುಂ ಪಾತ್ರಂಗಳನಾಡಿಸುತ್ತುಂ ಮಹಾ ಭಾರಾವತಾರದೊಳಪ್ಪ ಸಂಗ್ರಾಮರಂಗದೋಳ ರಾತಿನಾಯಕರ ಕಬಂಧಪಾತ್ರಂಗಳನಾಡಿಸುವುದನುದಾಹರಿಸುವಂತಿರ್ದಂ ಪಾಂಚಾಳ
ವಲಲನೆಂಬುದು ನನ್ನ ಹೆಸರು ಎಂದನು. ವ|| ನಿನ್ನನ್ನಾಳುತ್ತೇನೆ ಎಂದು ವಿರಾಟನು ಅವನನ್ನು ಅಡುಗೆಯ ಕಾರ್ಯಕ್ಕೆ ನೇಮಿಸಿಕೊಂಡನು. ಅಷ್ಟರಲ್ಲಿ ನಕುಳನು ಕುದುರೆಯ ಮೇಲಿನ ತಡಿಯನ್ನೂ ಕತ್ತಿಯನ್ನೂ ಚರ್ಮದ ಲಗಾಮನ್ನೂ ಚಾವಟಿಯನ್ನೂ ಒಬ್ಬ ಸೇವಕನಿಂದ ತೆಗೆಯಿಸಿಕೊಂಡು ಬಂದು ವಿರಾಟನನ್ನು ಕುರಿತು ಎಂತಹ ದುಷ್ಟಕುದುರೆಯನ್ನಾದರೂ ಹತ್ತಲು ತಿದ್ದಲೂ ಬಲ್ಲೆ ಎಂದು ಹೇಳಿ ಆತನಲ್ಲಿ ಆಳಾಗಿ ಸೇರಿ ತಂತ್ರಪಾಲನೆಂಬ ಹೆಸರಿನಿಂದ ಕುದುರೆಯ ರಕ್ಷಕನಾಗಿದ್ದನು. ಸಹದೇವನೂ ದನಕಾಯುವವನ ವೇಷದಲ್ಲಿ ಬಂದು ಕಂಡು ಅವನ ಗೋಸಮೂಹದ ಮುಖ್ಯಾಧಿಕಾರಿಯಾಗಿದ್ದನು. ಆಗ ೫೫. ಪೌರುಷದಿಂದ ವಿಷ್ಣುವು ಭೂಮಿಯನ್ನು ತರಲು ಹಿಂದೆ ಹಂದಿಯಾದಂತೆ (ವರಾಹವತಾರವನ್ನೆತ್ತಿದ ಹಾಗೆ) ತಮಗೆ ನಷ್ಟವಾದ ರಾಜ್ಯವನ್ನು ದಾಯಾದಿಗಳಿಂದ ಬಿಡಿಸಿಕೊಂಡು ಆಳುವುಕ್ಕೂ ತನಗುಂಟಾದ ಅವಮಾನದಿಂದಲೂ ಕೋಪದಿಂದಲೂ ರಂಭೆಯು ಕೊಟ್ಟ ಶಾಪವನ್ನು ನೀಗುವುದಕ್ಕೂ ಆಗ ಅರ್ಜುನನು ತನ್ನ ಕಾರ್ಯಸಾಧನೆಗಾಗಿ ವಿರಾಟನ ಅಂತಃಪುರದಲ್ಲಿ ಬೃಹಂದಳೆಯೆಂಬ ನಪುಂಸಕನಾದನು. ವ|| ಗಾಂಡೀವದ ಹೆದೆಯ ಪೆಟ್ಟಿನಿಂದಾದ ಇಂದ್ರನೀಲಮಣಿಗಳನ್ನು ಕೆತ್ತಿಸಿದ ಹಾಗಿದ್ದ ಎರಡು ಮುಂಗೈಗಳ ಕಪ್ಪನ್ನು ಪೂರ್ಣವಾಗಿ ತೊಟ್ಟುಕೊಂಡಿದ್ದ ಬಳೆಗಳು ಮರೆಮಾಡಿದುವು. ವಿರಾಟನ ಮಗಳಾದ ಉತ್ತರೆಯೇ ಮೊದಲಾದ ಅನೇಕ ಪಾತ್ರಗಳನ್ನು ನಾಟ್ಯವಾಡಿಸುವ ಕಾರ್ಯವು ಅವನದಾಯಿತು. ಮುಂದೆ ಅದು ಬರುವ ಮಹಾಭಾರತ ಯುದ್ಧಭೂಮಿಯಲ್ಲಿ ಶತ್ರುನಾಯಕರ ರುಂಡಗಳೆಂಬ ಪಾತ್ರಗಳನ್ನು ಈ ರೀತಿಯಲ್ಲಿ ಆಡಿ ತೋರಿಸುತ್ತೇನೆ ಎನ್ನುವಂತಿದ್ದಿತು. ಬ್ರೌಪದಿಯೂ ಆಕಾರವನ್ನು ಮರೆಸಿಕೊಂಡು ಸೈರಂದ್ರೀವೇಷದಿಂದ ಹೋಗಿ ವಿರಾಟನ
Page #396
--------------------------------------------------------------------------
________________
ಅಷಮಾಶ್ವಾಸಂ | ೩೯೧ ರಾಜತನೂಜೆಯುಂ ರೂಪುಗರೆದು ಸೈರಂಧೀವೇಷದೊಳ್ ಪೋಗಿ ವಿರಾಟನ ಮಹಾದೇವಿ ಸುದೇಷ್ಟೆಯಂ ಕಾಣ್ಣುದುಮಾಕೆಯುಂ ಕೃಷ್ಣಯ ರೂಪಂ ಕಂಡು ಚೋದ್ಯಂಬಟ್ಟು ಸಾಮಾನೈಯಲ್ಲಿ ನೀನಾರ್ಗನೆಂಬೆಯೆಂದು ಬೆಸಗೊಳಕಂtl. ನವ ಮೃಗಮದ ಪರಿಮಳಮುಮ
ನಿವು ಮಸುಳಿಪುವೆನಿಪ ವಿವಿಧ ಗಂಧಂಗಳನಾ | ನವಯವದೊಳ್ ಮಾಡುವ ಘ ಟಿವಳಿಯೆಂ ದೇವಿ ಗಂಡವಳಿಯೆನಲ್ಲಂ || ಹೆಸರೊಳ್ ಸೈರಂಧಿಯನಟಿ ವಸನದ ದೆಸೆಯದೆಯೆನನಗೆ ಗಂಧರ್ವರ ಕಾ || ಪಸದಳವುಂಟರಿಸುವೊಡಾಂ
ಬೆಸಕೆಯ್ಯಂ ನಿನ್ನ ಬೆಸಸಿದಂದದೊಳಿರ್ಪೆಂ || ವ|| ಎಂದು ವಿರಾಟನ ಮಹಾದೇವಿಗಾವಗಮಣುಗೆಯಾಗಿ ಪಾಂಚಾಳಿಯಿರ್ದಳಂತು ಪಾಂಡವರೀ ಮಾಳಿಯಿಂದಿರ್ಪನ್ನೆಗಮೊಂದು ದೆವಸಂ ವಿರಾಟಂ ನೆಲದೊಳುಳ್ಳಮಲ್ಲರೆಲ್ಲರುಮಂ ಬರಿಸಿ ಮಲ್ಲಯುದ್ಧಮಂ ನೋಡೆ ಸುಯೋಧನನಮಲ್ಲಂ ವಿಷಖರ್ಪರನೆಂಬಂ ತನ್ನ ಮಲ್ಲರೆಲ್ಲರು ಮಂ ಕೊಂದೊಡೆ ಸಿಗ್ಗಾಗಿ ತನ್ನ ಬಾಣಸಿಗನಾಗಿರ್ದ ವಲಲನು ಕರೆದು ಪೇಸ್ತಾಗಳ್
೪೭
ಮಹಾರಾಣಿಯಾದ ಸುದೇಷ್ಠೆಯನ್ನು ಕಂಡಳು. ಅವಳು ಬ್ರೌಪದಿಯ ರೂಪವನ್ನು ನೋಡಿ ಆಶ್ಚರ್ಯಪಟ್ಟು “ನೀನು ಸಾಮಾನ್ಯಳಲ್ಲ, ನೀನು ಯಾರವಳು? ನಿನ್ನ ಹೆಸರೇನು ?' ಎಂದು ಪ್ರಶ್ನೆ ಮಾಡಿದಳು- ೫೬. ಹೊಸದಾದ ಕಸ್ತೂರಿಯ ವಾಸನೆಯನ್ನೂ ಮೀರಿಸುವ ನಾನಾಬಗೆಯಾದ ಗಂಧಗಳನ್ನು ಶ್ರಮವಿಲ್ಲದೆ ಅರೆದು ಸಿದ್ಧಪಡಿಸಬಲ್ಲ ಗಟ್ಟಿವಳಿಯು ನಾನು. ದೇವಿ ಗಂಡನಿಲ್ಲದವಳಾಗಿದ್ದೇನೆ-೫೭. ಸೈರಂಧಿಯೆಂಬುದು ನನ್ನ ಹೆಸರು. ನೀಚಕಾರ್ಯದ ಪರಿಚಯವಿಲ್ಲದವಳು, ನನಗೆ ಗಂಧರ್ವರ ರಕ್ಷಣೆ ಪೂರ್ಣವಾಗುಂಟು, ಒಪ್ಪುವುದಾದರೆ ದಾಸಿಯಾಗಿರುತ್ತೇನೆ. ಆಜ್ಞೆ ಮಾಡಿದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ. ವ|| ಎಂದು ಬ್ರೌಪದಿಯು ವಿರಾಟನ ಮಹಾರಾಣಿಗೆ ಅತ್ಯಂತ ಪ್ರೀತಿಪಾತ್ರಳಾದ ದಾಸಿಯಾಗಿದ್ದಳು. ಪಾಂಡವರು ಈ ರೀತಿಯಿಂದಿರುವಾಗ ಒಂದುದಿನ ವಿರಾಟನು ಭೂಮಿಯಲ್ಲಿರುವ ಜಟ್ಟಿಗಳೆಲ್ಲರನ್ನೂ ಬರಮಾಡಿ ಜಟ್ಟಿಕಾಳಗವನ್ನು ಆಡಿಸಿ ನೋಡಿದನು. ದುರ್ಯೊಧನನ ಜಟ್ಟಿಯಾದ ವಿಷಖರ್ಪರನೆಂಬುವನು ತನ್ನ ಜಟ್ಟಿಗಳೆಲ್ಲರನ್ನೂ ಕೊಲ್ಲಲು ಅವಮಾನಿತನಾಗಿ ತನ್ನ ಅಡುಗೆಯವನಾಗಿದ್ದ ವಲಲನನ್ನು ಕರೆದು ಕಾದಲು ಹೇಳಿದನು. ೫೮. ವಿಷಖರ್ಪರನು ತನ್ನ ವಿಶೇಷ ಕ್ರೌರ್ಯದಿಂದ ಪ್ರತಿಭಟಿಸಲು ವಲಲನು ಭೂಮಿಯನ್ನು ಕಮ್ಮಿಂದ ಉಜ್ಜಿ ಎದುರಿಸಿ ಕಣ್ಣುಗಳು ತಿರುಗುವ ಹಾಗೆ ಅವುಕಿಕೊಂಡು ಸಿಂಹಧ್ವನಿಯಿಂದ ಘರ್ಜಿಸಿದನು. ವ|| ದುರ್ಯೊಧನನ ಜಟ್ಟಿಯನ್ನು ಕೊಂದು ವಲಲನು ವಿರಾಟನ ಮನೆಯಲ್ಲಿ ತನ್ನ ಮಾತೇ ಮಾತಾಗಿದ್ದನು. ಅಷ್ಟರಲ್ಲಿ ವಿರಾಟನ ಮೈದುನನೂ ಸುದೇಷ್ಟೆಯ ಸೋದರನೂ ಸಿಂಹಬಲವುಳ್ಳವನೂ ಆದ ಕೀಚಕನೆಂಬುವನು ..
Page #397
--------------------------------------------------------------------------
________________
೫೮
೩೯೨) ಪಂಪಭಾರತಂ ಕoll ಪರ್ಪರಿಕೆಗಿಡದ ಕಲಿ ವಿಷ
ಖರ್ಪರನಿದಿರಾಂಡಾಂತು ವಲಲಂ ತಳಮಂ | ಮಾರ್ಪೊಸೆದು ತಳು ಕಣ್ಣಿರಿ
ತರ್ಪಿನೆಗಮವುಂಕಿ ಸಿಂಹನಾದದಿನಾರ್ದಂ || ವ|| ಅಂತು ಸುಯೋಧನನ ಮಲ್ಲನಂ ಕೊಂದು ವಲಲಂ ವಿರಾಟನ ಮನೆಯೊಳ್ ತನ್ನ ಮಾತೆ ಮಾತಾಗಿರ್ದನನ್ನೆಗಂ ವಿರಾಟನ ಮೈದುನಂ ಸುದೇಷ್ಠಯೊಡವುಟ್ಟಿದನೊರ್ವಂ ಸಿಂಹಬಲಂ ಕೀಚಕನೆಂಬಂ ಸುಯೋಧನನ ದಂಡೆಲ್ಲಮನದೋಡಿಸಿ ಬಂದು ವಿರಾಟನಂ ಕಂಡು ತಮ್ಮನಂ ಕಾಣಲ್ ಪೋದಾತನಾ ಮಹಾದೇವಿಯ ಕೆಲದೊಳಿರ್ದಚಂII ಸೊಗಯಿಸೆ ತೋಳ ಮೊತ್ತಮೊದಲೊಳ್ ಪೊಗರ್ವಟೈಸವೊಂದು ನುಣ್ಣು ಸಾ
ವಗಿಸುವ ಮೇಲುದಂ ಮೊಲೆಗಳಳ್ಳಿಯುತ್ತಿರೆ ಪೊಣೆ ಘರ್ಮ ಬಂ | ದುಗಳಲರಂಬುವೋಲೆಳಸೆ ಪಾಟಲಲೋಲವಿಲೋಚನಂ ಮನಂ |
ಬುಗೆ ನಳಿತೋಳ ಕೋಳೆಸೆಯ ಘಟ್ಟಮಗುಟ್ಟುವ ಘಟ್ಟವಳಿಯಂ |೫೯ - ವll ಭೋಂಕನೆ ಕಂಡು ಕೀಚಕಂ ಕಾಮದೇವಂ ಮಾಡಿದ ಯಾಚಕನಂತ ಕರಮ ನಾಣ್ಣಿಟ್ಟು ಮನಂಗಾಪಟಿದಳಿಪಿ ನೋಡಿ ತನ್ನ ಮನದೊಳಿಂತೆಂದು ಬಗೆದರಿಚಂ|| ಸುರಿಯ ಬೆಮರ್ ಕುರುಳ್ಳಿಡಿದು ಮುತ್ತುಗಳಂ ಮಣಿದುಂಬ ಕಾಣುವಂ
ತಿರ ನಳಿತೋಳ ಬಳಳಿಕ ಕಣೋಳೆ ಘಟಿ ಮಗುಚುವಂದನ | ಅರೆದು ಮಗುಟ್ಟುವಂದಮ ದಲನ್ನೆರ್ದೆಯಂ ಪವಿತೇನದೆಂತು ಪೇಯ್ ಪರಿಕಿಪನೀ ಮೃಗೋದ್ಭವದ ಕಂಪುಮನೀಕೆಯ ಸುಯ್ಯ ಕಂಪುಮಂ || ೬೦
ದುರ್ಯೊಧನನ ಸೈನ್ಯವನ್ನೆಲ್ಲ ಶೀಘ್ರವಾಗಿ ಓಡಿಸಿ ಬಂದು ವಿರಾಟನನ್ನು ನೋಡಿಯಾದ ಮೇಲೆ ತಮ್ಮಕ್ಕನನ್ನು ನೋಡಲು ಹೋದನು. ಆ ಮಹಾರಾಣಿಯ ಸಮೀಪದಲ್ಲಿದ್ದ ಬ್ರೌಪದಿಯನ್ನು ಕಂಡನು. ೫೯. ಅವಳ ತೋಳ ನುಣುಪು ವಿಶೇಷಕಾಂತಿಯಿಂದ ಸೊಗಸಾಗಿತ್ತು. ನೋಟಕರಿಗೆ ಸಾವನ್ನುಂಟುಮಾಡುತ್ತಿರುವ ಅವಳ ಮೊಲೆಗಳು ಮೇಲುಹೊದಿಕೆಯನ್ನು ಅಲುಗಾಡಿಸುತ್ತಿದ್ದುವು. ಬೆವರಹನಿಗಳು ಹೊರಹೊಮ್ಮು ತಿದ್ದುವು. ನಸುಗೆಂಪಾದ ಕಣ್ಣುಗಳು ಪುಷ್ಪಬಾಣದಂತೆ ಮನಸ್ಸನ್ನಾಕರ್ಷಿಸುತ್ತಿದ್ದುವು. ದುಂಡಾದ ತೋಳುಗಳ ಹಿಡಿತವು ಚೆಲುವಾಗಿರಲು ಗಂಧವನ್ನು ಅರೆಯುತ್ತಿದ್ದ ಸೈರಂದ್ರಿಯನ್ನು ಕೀಚಕನು ನೋಡಿದನು ವll ಇದ್ದಕ್ಕಿದ್ದ ಹಾಗೆ ಅವಳನ್ನು ನೋಡಿ ಕೀಚಕನು ಕಾಮದೇವನು ಮಾಡಿದ ಭಿಕ್ಷುಕನಂತೆ ವಿಶೇಷವಾಗಿ ನಾಚಿಕೆಗೆಟ್ಟು ಮನಸ್ಸಿನ ಹಿಡಿತ ತಪ್ಪಿ ಆಸೆಯಿಂದ ನೋಡಿ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿ ದನು - ೬೦. ಮರಿದುಂಬಿಗಳು ಮುತ್ತುಗಳನ್ನು ಕಾರುವ ಹಾಗೆ ಬೆವರು ಮುಂಗುರುಳು ಗಳನ್ನು ಅನುಸರಿಸಿ ಸುರಿಯುತ್ತಿವೆ. ದುಂಡಾದ ತೋಳಿನ ಸೌಂದರ್ಯವು ಆಕರ್ಷಕ ವಾಗಿದೆ. ಇದು ಗಂಧವನ್ನು ತೇಯುವ ರೀತಿಯಲ್ಲ ; ನನ್ನ ಎದೆಯನ್ನು ಅರೆದು ಹಿಂದುಮುಂದು ಮಾಡುವ ರೀತಿಯೇ ಸರಿ. ನಾನು ಈ ಕಸ್ತೂರಿಯ ವಾಸನೆಯನ್ನೂ
Page #398
--------------------------------------------------------------------------
________________
ಅಷಮಾಶ್ವಾಸಂ / ೩೯೩ ಕ೦ll ಇದೆ ಮದನಭವನಮಿಂತಿದೆ
ಮದನಾಮೃತಮಿದುವೆ ಮದನನಾಯಕಮಿದೆ ಪೊ | ಮದನಮಹೋತ್ಸವ ಪದಮೆನಿ
ಸಿದುದು ಕಟಾಕ್ಷೇಕ್ಷಣಂ ವಿಲೋಲೇಕ್ಷಣೆಯಾ || ಉll ಮಾಸಿದ ರೂಪು ನೋಡದೆ ಮಾಸಿದ ಚಿತ್ರದ ಹೆಣ್ಣ ರೂಪುಮಂ
ಮಾಸಿಸ ನಾಡ ಮಾಸದಿಕೆಯಂ ಪಡೆದಪುದು ಕಂಡ ಕಣ್ಣಳೊಳ್ | ಸೂಸುವ ಮಾಚಿಯಿಂ ಪೋಗೆ ಪೊಣುವುದಂದವಿದೆಂತೆ ಕಾಯ್ದು ಕೈ
ವೀಸುವ ಕಾವನಂದಮಿವಳೇಂ ಕುಲನಾರಿಯೊ ವಾರನಾರಿಯೋ || ೬೨ ಮಲ್ಲಿಕಾಮಾಲೆ || ಆವಳಷ್ಟೊಡಮಕ್ಕೆ ಪೋ ತಲೆಯಿಂದ ಪೋದೊಡಮಿಂದ ಮಾ
ದೇವನಾರ್ತೆಡೆಗೋದೊಡಂ ಲಯಮಿಂದೆ ಬರ್ಪೊಡಮನ್ನುರಂ | ತೀವಿ ತಳಿವಳೀ ಕುಚಂಗಳನಂದಮರ್ದಪ್ಪಿ ಪೋ
ಗಾವುಪಾಯದೊಳಾದೊಡಂ ನೆರೆದಲದಿನ್ನಿರೆನೀಕೆಯೊಳ್ | ೬೩
ವ|| ಎಂದು ಸೈರಂದ್ರಿಯಂ ನೋಡಿ ಸೈರಿಸಲಾಗಿದೆ ಸಿಂಹಬಲನಂತನಂಗಮತ್ತಮಾತಂಗ ಕೋಳಾಹಳೀಕೃತಾಂತರಂಗವಾಗಿ ತಮ್ಮಕ್ಷನನೀಕೆಯಾರ್ಗಂದು ಬೆಸಗೊಂಡೊಡಾತನ ಸೋಲ್ಲ ಕಣತಿದೀಕೆ ಸಾಮಾನವನಿತೆಯಲಿವಳ್ ಗಂದರ್ವವನಿತೆಯೆನೋಳಾದ ಮಚುಂ ಮೋಹಮುಂ ಕಾರಣಮಾಗಿರ್ಪಳೆಂಬುದುಮಾ ಮಾತಿನೊಳ ಬೇಟಮಗಳಿಗೆ ನಿಜನಿವಾಸಕ್ಕೆ ಬಂದಕನೆನಗೆ
ಈಕೆಯ ಉಸುರಿನ ಗಾಳಿಯ ವಾಸನೆಯನ್ನೂ ಹೇಗೆ ರಕ್ಷಿಸಲಿ ? ೬೧. ಈ ಚಂಚಲಾಕ್ಷಿಯ ಕಡೆಗಣ್ಣಿನ ನೋಟವೇ ಮದನಭವನ, ಇದೇ ಮದನಾಮೃತ, ಇದೇ ಮದನಬಾಣ. ಇದೇ ಮದನಮಹೋತ್ಸವದ ಸ್ಥಾನ ಎನಿಸಿತು. ೬೨. ನೋಡುವು ದಾದರೆ ಇವಳ ಮಲಿನವಾದ ರೂಪವು ಅರ್ಧಕೊಳೆಯಾದ ಚಿತ್ರದಲ್ಲಿರುವ ಸುಂದರ ವಾದ ಹೆಣ್ಣಿನ ರೂಪವನ್ನು ಮಸುಳಿಸುವಂತಿದೆ. ಇವಳ ಕಣ್ಣಿನಲ್ಲಿ ಹೊರಸೂಸುವ ಸೌಂದರ್ಯವನ್ನು ನೋಡಿದರೆ ಕೆರಳಿ ಕೈಬೀಸಿ ಮನ್ಮಥನೇ ವಿಲಾಸದಿಂದ ಜಗಳಕ್ಕೆ ಕೈಬೀಸುವಂತಿದೆ. ಇವಳೇನು ಕುಲಸ್ತೀಯೋ ಅಥವಾ ವೇಶ್ಯಾಸ್ತೀಯೋ ? ೬೩. ಯಾವಳಾದರೂ ಆಗಲಿ ಈ ದಿನವೇ ತಲೆಹೋದರೂ ಮಹಾದೇವನೇ ಸಮರ್ಥವಾಗಿ ಮಧ್ಯ ಪ್ರವೇಶಿಸಿದರೂ ಈ ದಿನವೇ ನಾಶವುಂಟಾದರೂ ನನ್ನ ಎದೆ ತುಂಬಿ ಸೇರಿದ ಇವಳ ಮೊಲೆಗಳನ್ನು ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು ಯಾವ ಉಪಾಯದಿಂದಲಾದರೂ ಈಕೆಯಲ್ಲಿ ಕೂಡಿಯಲ್ಲದೆ ಇರುವುದಿಲ್ಲ. ವll ಎಂದು ಸೈರಂದ್ರಿಯರನ್ನು ನೋಡಿ ಸಹಿಸಲಾರದೆ ಸಿಂಹಬಲನು ಮನ್ಮಥನೆಂಬ ಮದ್ದಾನೆಯಿಂದ ಹಿಂಸಿಸಲ್ಪಟ್ಟ ಮನಸ್ಸುಳ್ಳವನಾಗಿ ತಮ್ಮ ಅಕ್ಕನನ್ನು ಈಕೆ ಯಾರವಳು ಎಂದು ಪ್ರಶ್ನೆಮಾಡಿದನು. ಸುದೇಷ್ಟೆಯು ಅವನ ಮೋಹಪರವಶವಾದ ಕಣ್ಣನ್ನು ತಿಳಿದು ಈಕೆಯು ಸಾಮಾನ್ಯಸ್ತೀಯಲ್ಲ, ಇವಳು ಗಂಧರ್ವಪತ್ನಿ ; ನನ್ನಲ್ಲಾದ ಮೆಚ್ಚಿಗೆ ಯಿಂದಲೂ ಪ್ರೀತಿಯಿಂದಲೂ ಇಲ್ಲಿ ಇದ್ದಾಳೆ ಎಂದಳು. ಆ ಮಾತಿನಿಂದ ಅವನಿಗೆ ಪ್ರೀತಿಯೂ ಮೋಹವೂ ಮತ್ತೂ ಅಧಿಕವಾಯಿತು. ತನ್ನ ಮನೆಗೆ ಬಂದು ಅಕ್ಕನನ್ನು
Page #399
--------------------------------------------------------------------------
________________
೩೯೪ | ಪಂಪಭಾರತಂ ತನ್ನ ಘಟ್ಟಿವಳ್ಳಿಯ ಕೆಳಪೂರ್ವ ವಿಲೇಪನಂಗಳನಟ್ಟುವುದೆಂದಟ್ಟುವುದುಂ ತಮ್ಮನುಪರೋಧಕ್ಕಾದೆ ಸೈರಂದ್ರಿಯಂ ಪೋಗಲ್ವೇಲ್ವುದುಮಾಕೆಯವನ ಮನದ ಪಲುವಗೆಯನಳೆಯದಂತೆ - ಚಂl ಸ್ಮರನರಲಂಬು ಕೈಬರ್ದುಕಿ ಬರ್ಪವೊಲೊಯ್ಯನೆ ಬಂದು ನಿಂದ ಸುಂ
ದರಿಯನೊಲ್ಲು ಸಿಂಹಬಲನಂತಿರು ಮಾಸಿದೆಯಾದ ಮೇಣುಡಲ್ | ತರಿಪನೆ ತಂಬುಲಂಬಿಡಿ ಮನೋಜಶಿಖಾಳಿಗಳು ಮುನ್ನವೆ
ನುರಿವರ್ದೆ ಕಂಡು ನಿನ್ನನಿನಿಸಾದುದಂಬುಜಲೋಲಲೋಚನೇ || ೬೪ ಕಂ , ಪರದ ಕುರುಳಲುಗೆ ಘಟ್ಟಿಯ
ನರೆಯುತ್ತುಂ ನಾಣ್ಯ ತೆಗೆದು ನೋಟ್ಟುದುಮನ್ನಂ | ಸರ ಕುಳಿಕಾಗ್ನಿಯ ಕೊಂಡಂ
ತಿರೆ ಕೊಂಡುದು ನೋಡ ನಿನ್ನ ನೋಡಿದ ನೋಟಂ || ೬೫ ಮll ಮದನಾಸ್ತಂ ಕರ ಸಾಣೆಗಾಣಿಸಿದುದೆಂಬಂತಾಗ ನಿನ್ನೊಂದು ಕಂ
ದಿದ ಮೆಯ್ಕೆನ್ನಯ ತೋಳೊಳೊಂದ ಸಿರಿಯಂ ನೀನುಯ್ದು ತೊಟ್ಟಾಳು ರಾ | ಗದಿನೆನ್ನೊಳ್ ಸುಕಮಿರ್ಪುದೆನ್ನ ನುಡಿಯಂ ನೀಂ ಕೇಳುವೊಂದಂಚೆಯಂ ಪೊದೆಯೊಂದಂಚೆಯನುಟ್ಟ ನಿನ್ನಿರವಿದೇನಂಭೋಜಪತೇಕ್ಷಣೇ | ೬೬
ತನ್ನ ಗಂಧ ಅರೆಯುವವಳ ಕಯ್ಯಲ್ಲಿ ಅಪೂರ್ವವಾದ ಸುಗಂಧದ್ರವ್ಯವನ್ನು ಕಳುಹಿಸಿಕೊಡುವುದು ಎಂದು ಹೇಳಿ ಕಳುಹಿಸಿದನು. ತಮನ ಒತ್ತಾಯಕ್ಕೆ ತಡೆಯ ಲಾರದೆ ಸೈರಂದ್ರಿಯನ್ನು ಕಳುಹಿಸಲು ಅವಳು ಅವನ ಮನಸ್ಸಿನ ನೀಚಬುದ್ದಿಯನ್ನು ತಿಳಿಯದೆ ಹಾಗೆಯೇ ಆಗಲೆಂದು ಅವನ ಅರಮನೆಗೆ ಹೋದಳು. ೬೪. ಮನ್ಮಥನ ಪುಷ್ಪಬಾಣವು ಕೈಯಿಂದ ತಪ್ಪಿಸಿಕೊಂಡು ಬರುವ ಹಾಗೆ ನಿಧಾನವಾಗಿ ಬಂದು ನಿಂತ ಆ ಸುಂದರಿಯನ್ನು ಸಿಂಹಬಲನು ಪ್ರೀತಿಯಿಂದ ನೋಡಿ ಹೇ ಕಮಲಾಕ್ಷಿ ಹಾಗೆಯೇ ಇರು, ಮಲಿನವಾಗಿ ಬಿಟ್ಟಿದ್ದೀಯೆ, ಉಡುವುದಕ್ಕೆ ವಸ್ತ್ರವನ್ನು ತರಿಸಲೇ? ತಾಂಬೂಲವನ್ನು ಹಿಡಿ, ಮನ್ಮಥನ ಬಾಣಗಳ ಸಮೂಹವು ಈಗಾಗಲೇ ಸುಡುತ್ತಿರುವ ನನ್ನ ಎದೆಯು ನಿನ್ನನ್ನು ನೋಡಿ ಸ್ವಲ್ಪ ಉಪಶಮನವಾಯಿತು. ೬೪. ಚದುರಿದ ನಿನ್ನ ಮುಂಗುರುಳು ಚಲಿಸುತ್ತಿರುವ ಗಂಧವನ್ನು ಅರೆಯುತ್ತ ಲಜ್ಜೆಯಿಂದ ನನ್ನನ್ನು ಮೋಹಿಸಿ ನೋಡಲು ನಿನ್ನ ಆ ನೋಡಿದ ನೋಟ ನನ್ನನ್ನು ಮನ್ಮಥನೆಂಬ ಸರ್ಪದ ವಿಷಾಗಿಯೇ ಸುಟ್ಟ ಹಾಗೆ ಸುಟ್ಟಿತು ನೋಡು. ೬೬. ನಿನ್ನ ಕಂದಿಹೋಗಿರುವ ಶರೀರವನ್ನು ನನ್ನ ತೋಳಿನಲ್ಲಿ ಕೂಡಿಸಿ ಕಾಮಬಾಣವೇ ವಿಶೇಷವಾಗಿ ಸಾಣೆಯನ್ನು ಹೊಂದಿತು ಎನ್ನುವ ಹಾಗೆ ಸುಖಿಸು ನೀನು. ನನ್ನ ಈ ಐಶ್ವರ್ಯಲಕ್ಷ್ಮಿಯನ್ನು ಬರಸೆಳೆದು ನಿನ್ನ ಸೇವಕಿಯನ್ನಾಗಿ ಮಾಡಿಕೊ, ಪ್ರೀತಿಯಿಂದ ನನ್ನಲ್ಲಿ ಸುಖವಾಗಿರು. ನನ್ನ ಮಾತನ್ನು ಕೇಳಿ ಒಂದು ವಸ್ತವನ್ನು ಹೊದೆದುಕೊ ಎಲ್ ಕಮಲದಳದಂತೆ ಕಣ್ಣುಳ್ಳವಳೇ ಏಕವಸ್ತವನ್ನುಟ್ಟಿರುವೆ
Page #400
--------------------------------------------------------------------------
________________
ಅಷ್ಟಮಾಶ್ವಾಸಂ | ೩೯೫ ಕಂti ಬಿಗಿದೂಗದ ನಿನ್ನ ಮೊಲೆಗಳ
ಮೃಗಮದದ ಪುಳಿಂಚುಗಳ್ ಪಗಿರಲೆಡೆಯಾ | ದಗಲುರಮನನಗೆ ಪಡೆದಜ
ನೊಗಸುಗಮಲ್ಲೆಲಗೆ ನಿನ್ನನೆನಗೆಯ ಪಡೆದಂ | ಕoll. ಎನಗರಸಿಯಾಣೆ ನಿನ್ನೊಡ
ನನಗೇಗಟ್ಟಪುದಿದೆಂದು ಅಡಾಡಲ್ ಕೆ ! ಮನೆ ನುಡಿದೂಡನ್ನ ಕಣ್ಣಂ ಮನಕ್ಕೆ ತಂದಿರ್ದ ನಿನ್ನೊಳೆನಗೆರಡುಂಟೇ || ಬಾಯಟಿದೆನಿತರೆದೊಡಮಾ ಹಾಯೆನ್ನಯ ಕರಮೆ ಮಲುಗಿ ಮಲ್ಕಡಿದುರಿವೆ || ನೀ ಯರ್ದಯನಾಳಸಲ್ ನೀಂ ಬಾಯೊಳಂಬುಲಮನನ್ನೊಡಂ ದಯೆಗೆಯ್ಯೋ ||
೬೯ ವt' ಎಂದು ಮತ್ತಮೆನಿತಾನುಂ ತೆಜದ ಲಲ್ಲೆಯಿನಳಿಪಂ ತೋಟ ಬಾಯಟಿದು ತನ್ನ ನುಡಿಗಳಳಿಪಿಳಿಪೋಗೆ ಸೈರಿಸಲಾಗಿದೆ ಪಿಡಿವುದುಂ ಪಾಂಚಾಲರಾಜತನೂಜೆಯಿಂತೆಂದಳಮ|| ಸ || ನುಡಿಯಲ್ಲೇಡನ್ನೊಳಿಂತಪ್ಪಳಿಪಿನ ನುಡಿಯಂ ನಿನ್ನ ಮಾತಿಂಗೆ ಚಿಃ ಮ
ಆಡುವಂತದ್ದಾಕೆಯಲ್ಲಿ ಬಿಡು ಗಡ ಬಿಡದಂದನ್ನ ಗಂಧರ್ವರಿಂದಂ | ಮಡಿವ ನೀನೆಂದೂಡಂತಪೊಡ ಬಿಡನೆನಗು ಮಗುವೇಷ್ಟೆಯಿಲ್ಲಾ ರ್ಪೊಡ ನಿನ್ನಂ ಕಾವ ಗಂಧರ್ವರ ಬಿಡಿಸುಗೆ ಪೋಗೆಂದು ಪೊಯ್ದಂ
ದುರಾತ್ಮಂ || ೭೦ ನಿನ್ನ ಈ ದುರವಸ್ಥೆಯಿದೇನು ? ೬೭. ಬಿಗಿದುಕೊಂಡು ಗಟ್ಟಿಯಾಗಿ ಹೊರ ಚಿಮ್ಮುತ್ತಿರುವ ನಿನ್ನ ಮೊಲೆಗಳ ಕಸ್ತೂರಿಯ ಗುಳ್ಳೆಗಳು ಅಂಟಿಕೊಳ್ಳಲು ಯೋಗ್ಯ ವಾಗಿರುವ ಹಾಗೆ ಬ್ರಹ್ಮನು ನನ್ನ ಎದೆಯನ್ನು ವಿಶಾಲವಾಗಿ ಸೃಷ್ಟಿಸಿದ್ದಾನೆ. ಇದು ಅತಿಶಯವಲ್ಲ ನಿನ್ನನ್ನು ಬ್ರಹ್ಮನು ನನಗಾಗಿಯೇ ನಿರ್ಮಿಸಿದ್ದಾನೆ - ೬೮. ರಾಣಿಯಾದ ಸುದೇಷ್ಣಯಾಣೆ. ಇಂದು ನಾನು ಪರಿಹಾಸ್ಯಕ್ಕಾಗಿ ನಿನ್ನೊಡನೆ ಮಾತನಾಡಿದರೆ ದೋಷವೇನು ? ನನ್ನ ದೃಷ್ಟಿಗೂ ಮನಸ್ಸಿಗೂ ಒಪ್ಪಿಗೆಯಾಗಿರುವ ನಿನ್ನಲ್ಲಿ ನನಗೆ ಮೋಸವುಂಟೇ ? ೬೯. ಬಾಯಿಸೋಲುವಷ್ಟು ಬೇಡಿದರೂ ಅಯ್ಯೋ ಎಂದು ಹೇಳಲಾರೆಯಲ್ಲ. ವಿಶೇಷವಾಗಿ ಸಶರೀರವಾಗಿ ಉರಿಯುತ್ತಿರುರ ನನ್ನ ಎದೆಯನ್ನು ಸಮಾಧಾನಮಾಡಲು ನೀನು ಬಾಯಲ್ಲಿ ತಂಬುಲವನ್ನಾದರೂ ಕೊಡಲೊಲ್ಲೆಯಾ? ವ|| ಎಂದು ಇನ್ನೂ ಎಷ್ಟೋ ರೀತಿಯ ಮುದ್ದುಮಾತುಗಳಿಂದ ಆಸೆಯನ್ನು ತೋರಿಸಿ ಗೋಗರೆದು ತನ್ನ ಮಾತುಗಳೂ ಆಸೆಯೂ ತಿರಸ್ಕೃತವಾಗಲು ಸಹಿಸಲಾರದೆ ಕೀಚಕನು ಅವಳನ್ನು ಹಿಡಿದುಕೊಳ್ಳಲು ಹೋದನು. ಬ್ರೌಪದಿಯು ಹೀಗೆಂದಳು- ೭೦. ನನ್ನಲ್ಲಿ ಇಂತಹ ದುರಾಸೆಯ ಮಾತುಗಳನ್ನಾಡಬೇಡ, ಚಿಃ ನಿನ್ನ ಮಾತಿಗೆ ಮೋಸಹೋಗುವಂತಹವಳಲ್ಲ, ಬಿಟ್ಟುಬಿಡು, ಬಿಡದಿದ್ದರೆ ನೀನು ನನ್ನ ಗಂಧರ್ವರಿಂದ ಸಾಯುತ್ತೀಯ ಎಂದಳು. ಹಾಗಾದರೆ ಬಿಡುವುದಿಲ್ಲ. ನನಗೂ ವಂಚನೆಯ ಮಾತುಗಳನ್ನಾಡುತ್ತಿರವೆಯಲ್ಲ; ಸಮರ್ಥರಾಗಿದ್ದರೆ ನಿನ್ನನ್ನು ರಕ್ಷಿಸುವ
Page #401
--------------------------------------------------------------------------
________________
وع
೩೯೬ | ಪಂಪಭಾರತಂ
. ವll ಪೊಯೊಡ ಬಲುಬಂ ಪೊಯಿಲ್ವೆಂತೇನುಮನಳಿಯದ ಪರಿಭವಾನಿಲನಿಂ ಶೋಕಾನಲನಿರ್ಮಡಿಸೆ ನಡನಡುಗಿ ಕಾಯ್ತಿನೊಳ್ ಪಿಡುಗಿ ತಳೋದರಿ ವೃಕೋದರನಲ್ಲಿಗೆ ವಂದು ಕೃಟೇಕಾಂತದೊಳಿಂತೆಂದಳಮಗ ಸll ಪೆಜನಿಕುಂಗೂಬಳೊಳಂ ಕೀಚಲೋಳಮಳವಿಗಟ್ಟಿರ್ಷ ನಿಮ್ಮಿರ್ಪುದರ್ಕಂ
ಮಲುಗುತ್ತಿರ್ಪಳೆ ನೋಡಾದಲನೆನಗೆ ಕಸ್ತೂಲದಿಂ ಕೀಚಕಂ ಬಂ | ದುಂದೆನ್ನಂ ಕಾಡಿ ಕೈಗೆಲ್ಲುಗಿದನವನದೊಂದುರ್ಕನೇವೇಶ್ವಿನಿ ನಟಿವಯ್ ಪೂಣ್ಣನ್ನದೊಂದಂ ಪರಿಭವಮನಿದಂ ನೀಗು ನೀಂ ಭೀಮಸೇನಾ || ೭೧
ವll ಎಂಬುದುಂ ಭೀಮಸೇನನೇವದೊಳ್ ಕಾಣದಿವನೊರ್ವಂ ದುಶ್ಯಾಸನನ ನಂಟನಕುಮಾದೊಡೇನಾಯ್ತುಕಂ11 ಮುಳಿಸೆಂಬುದೆನಗೆ ಕೌರವ
ರೊಳೆ ಹಿರಿದಾ ಬಲಿದ ಬಯಕೆಯಂ ಮಾಧುರದೊಳ್ | ಕಳೆವಂತನ್ನೆಗಮಿವನೊಲ್
ಕಳೆವೆ ನಿನ್ನೊಂದು ಮುಳಿಸನಬ್ಬದಳಾಕ್ಷೀ | ವll ಎಂದು ನೀನೀ ವಿರಾಟನ ನಾಟಕಶಾಲೆಯನೆ ಸಂಕೇತನಿಕೇತನಂ ಮಾಡಿ ನೇಸರ್ಪಡಲೊಡಮೆನ್ನಿ೦ ಮುನ್ನಮ ಪೋಗಿರ್ಪುದಾನಲ್ಲಿಗೆ ವರ್ಹೆನೆಂದಾ ಪಾನಂ ನಂಬಿ ಗಂಧರ್ವರೆ ಬಿಡಿಸಿಕೊಳ್ಳಲಿ ಹೋಗು ಎಂದು ದುರಾತ್ಯನಾದ ಅವನು ಅವಳನ್ನು ಹೊಡೆದನು. ವll ಹೊಡೆಯಲಾಗಿ ಸಹಾಯವಿಲ್ಲದವನು ಪೆಟ್ಟು ತಿಂದಹಾಗೆ ಏನುಮಾಡಲೂ ತಿಳಿಯದೆ ಅವಮಾನವೆಂಬ ಗಾಳಿಯಿಂದ ದುಃಖಾಗ್ನಿಯು ಇಮ್ಮಡಿಸಲು ವಿಶೇಷವಾಗಿ ನಡುಗಿ ಕೋಪದಿಂದ ಸಿಡಿದು ದೌಪದಿಯು ಭೀಮನ ಬಳಿಗೆ ಬಂದು ಅತ್ಯಂತ ರಹಸ್ಯವಾಗಿ ಹೀಗೆಂದು ತನ್ನ ದುಃಖವನ್ನು ತೋಡಿಕೊಂಡಳು. ೭೧. ಪರಾನ್ನದಿಂದಲೂ ಪರರ ಸೇವಾವೃತ್ತಿಯಿಂದಲೂ ಕೀಳಂತಸ್ತಿನಲ್ಲಿ ದುಃಸ್ಥಿತಿಯಿಂದ ದುಃಖಪಡುತ್ತಿರುವ ನನಗೆ ಉಂಟಾದ ದುಃಖವನ್ನು ನೋಡು. ನನ್ನ ಮೇಲಿನ ಮೋಹದಿಂದ ಕೀಚಕನು ಬಂದು ವಿಶೇಷವಾಗಿ ನನ್ನನ್ನು ಹಿಂಸಿಸಿ ಕೈಮೀರಿ ಹೊಡೆದು ಬಿಸಾಡಿದನು. ಅವನ ಕೊಬ್ಬನ್ನು ಏನೆಂದು ಹೇಳಲಿ ; ಭೀಮಸೇನಾ ನನ್ನನ್ನು ಆವರಿಸಿರುವ ಈ ಅವಮಾನವನ್ನು ನೀನು ತಿಳಿದಿದ್ದೀಯೆ. ಇದನ್ನು ನೀನು ಪರಿಹಾರಮಾಡು ಎಂದು ಬಾಯಳಿದಳು. ವ|| ಭೀಮಸೇನನು ಕೋಪದಲ್ಲಿ ಕುರುಡನಾಗಿರುವ ಇವನು ಮತ್ತೊಬ್ಬ ದುಶ್ಯಾಸನನ ನೆಂಟನಾಗಿರಬೇಕು, ಆದರೇನಾಯ್ತು? ೭೨. ನನಗೆ ಕೌರವರಲ್ಲಿ ವಿಶೇಷ ಆಗ್ರಹವುಂಟು. ಈ ಸಂಪೂರ್ಣವಾದ ಬಯಕೆಯನ್ನು ಮಹಾಯುದ್ದದಲ್ಲಿ ಕಳೆಯುವವರೆಗೆ ನಿನಗಾಗಿ ಉಂಟಾದ ಕೋಪವನ್ನು ಎಲ್ ಕಮಲದಳನೇತ್ರೇ ಇವನಲ್ಲಿ ತೀರಿಸಿಕೊಳ್ಳುತ್ತೇನೆ. ವ ನೀನು ಈ ವಿರಾಟನ ನಾಟಕಶಾಲೆಯನ್ನೇ ರಹಸ್ಯವಾಗಿ ಕೂಡುವ ಮನೆಯನ್ನಾಗಿ ಮಾಡಿಕೊಂಡು ಸೂರ್ಯಾಸ್ತಮಾನವಾದ ಕೂಡಲೇ ನಮಗಿಂತ ಮುಂಚೆಯೇ ನೀನು ಹೋಗಿರು, ನಾನು ಅಲ್ಲಿಗೆ ಬರುತ್ತೇನೆಂದು ಕಾಮುಕನನ್ನು ನಂಬಿಕೆ ಬರುವಂತೆ
Page #402
--------------------------------------------------------------------------
________________
ಅಷ್ಟಮಾಶ್ವಾಸಂ / ೩೯೭ ನುಡಿದಾ ಪೊತ್ತಿಗೆನ್ನನಲ್ಲಿಗೆ ವರಿಸವಂಗೆ ತಕ್ಕುದನಾನೆ ಬಲ್ಲೆನೆಂದು ನುಡಿದು ಕಟಿಪಲಾ ದೌಪದಿ ಸಂತಸಂಬಟ್ಟಂತೆಗೆಯ್ದನೆಂದು ಪೋಗಿಚoll ಮಜುದೆವಸಂ ಲತಾಲಲಿತ ಕೀಚಕನಲ್ಲಿಗೆ ಕಾಮನೊಂದು ಕೈ
ಸೆಳೆಯನಿಪಂಗರಾಗಮನಿಳೇಶ್ವರವಲ್ಲಭೆಯಟ್ಟಲುಯೊಡಾ | ನಟಿಯದೆ ನಿನ್ನ ನೋಯಿಸಿದೆನೆಂದೆನಗೆಂಬುದನೆಂಬುದೆಂದು ಕಾ
ಲೈಂಗಿದೊಡೊಳ್ಳಿತಾಗೆ ನಿನಗಿಂತಿನಿತೊಂದೊಲವುಳ್ಕೊಡೊಲ್ಲೆನೇ || ೭೩
ವ|| ಎಂದು ನಂಬಿ ನುಡಿದು ವಿರಾಟನ ನಾಟಕಶಾಲೆಯನೆ ಪೂರ್ವಸೂಚಿತಕ್ರಮದೊಳ್ ಕುಜುಪುವೇಟ್ಟು ಸೂರ್ಯಾಸ್ತಮಯಸಮಯದೊಳ್ ಭೀಮಸೇನಂಗೆ ತತ್ತಕಮನಳಪಿದೊಡೆ ಬಾಹುಯುದ್ಧಸನ್ನದ್ದನಾಗಿ ಕಲಿಗಂಟಿಕ್ಕಿ ಗಂಡುಡೆಯುಮನುಟ್ಟು ಮೇಲುದನಿಟಿಯ ಮುಸುಕಿಟ್ಟು ಪೊಗಿ ಗುಣಣಯ ಬಾಗಿಲೊಳ್ ಬ್ರೌಪದಿಯನಿರಿಸಿ ವೀರಶ್ರೀಯ ವಿವಾಹಮಂಟಪಮಂ ಪುಗುವಂತೋಳಪೊಕ್ಕು
ಕಂl ಸಿಂಗಬಲನೆಂಬರುರ್ವಿನ
ಸಿಂಗಮನಸಿಧೇನುಕಿರಣಕೇಸರಮಾಲಾ | ಸಂಗತಮನಡಸಿ ನುಂಗಲ್ ಸಂಗತಬಲನೊಂದು ಶರಭಮಿರ್ಪಂತಿರ್ದಂ
ಮಾತನಾಡಿ ಆ ಹೊತ್ತಿಗೆ ನನ್ನನ್ನೂ ಅಲ್ಲಿಗೆ ಬರಮಾಡು. ಅವನಿಗೆ ತಕ್ಕುದನ್ನು ನಾನು ಬಲ್ಲೆ ಎಂದು ಹೇಳಿಕಳುಹಿಸಿದನು. ಬ್ರೌಪದಿಯು ಸಂತೋಷಪಟ್ಟು ಹಾಗೆಯೇ ಮಾಡುತ್ತೇನೆಂದು ಹೋದಳು. ೭೩. ಮಾರನೆಯ ದಿನ ಲತೆಯಂತೆ ಕೋಮಲವಾದ ಶರೀರವುಳ್ಳ ದೌಪದಿಯ ಕಯ್ಯಲ್ಲಿ ಮಹಾರಾಣಿಯಾದ ಸುದೇಷ್ಟೆಯು ಕಾಮನ ಬಂದಿಯೆಂಬ ಒಂದು ಲೇಪನದ್ರವ್ಯವನ್ನು ಕೀಚಕನಲ್ಲಿಗೆ ಕಳುಹಿಸಿದಳು. ಕೀಚಕನು ಬ್ರೌಪದಿಯನ್ನು ಕುರಿತು 'ನಾನು ತಿಳಿಯದೆ ನಿನ್ನೆಯ ದಿನ ನಿನಗೆ ನೋವನ್ನುಂಟುಮಾಡಿದೆ. ಈ ದಿನ ನನಗೆ ಹೇಳಬೇಕಾದುದನ್ನು ಹೇಳು' ಎಂದು ಅವಳ ಕಾಲಿಗೆ ಬಿದ್ದನು. 'ಓಳ್ಳೆಯದು ನಿನಗೆ ಇಷ್ಟು ಪ್ರೀತಿಯಿರುವುದಾದರೆ ನಾನು ಬೇಡವೆನ್ನುತ್ತೇನೆಯೆ ?' ವಎಂದು ನಂಬುವ ಹಾಗೆ ಮಾತನಾಡಿ ಹಿಂದೆಯೇ ಸೂಚಿತವಾಗಿದ್ದಂತೆ ವಿರಾಟನ ನಾಟಕಶಾಲೆಯನ್ನೇ ಗುರುತು ಹೇಳಿ ಸೂರ್ಯನು ಮುಳುಗುವ ವೇಳೆಯಲ್ಲಿ ಭೀಮಸೇನನಿಗೆ ಆ ಸಮಾಚಾರವನ್ನು ತಿಳಿಸಿದಳು. ಭೀಮಸೇನನು ಮಲ್ಲಯುದ್ಧಮಾಡುವುದಕ್ಕೆ ಸಿದ್ಧನಾಗಿ ವೀರಗಚ್ಚೆಯನ್ನು ಹಾಕಿ ಗಂಡಸಿನ ಉಡುಪನ್ನು ಧರಿಸಿ ಮೇಲುಹೊದಿಕೆ (ಉತ್ತರೀಯ)ಯನ್ನು ಕೆಳಗಿನವರೆಗೆ ಮುಸುಕುಹಾಕಿಕೊಂಡು ಹೋಗಿ ಬ್ರೌಪದಿಯನ್ನು ನಾಟ್ಯಶಾಲೆಯ ಬಾಗಿಲಿನಲ್ಲಿರಿಸಿ ವೀರಲಕ್ಷಿಯ ವಿವಾಹಮಂಟಪವನ್ನು ಪ್ರವೇಶಮಾಡುವ ಹಾಗೆ ಒಳಹೊಕ್ಕನು. ೭೪, ಕತ್ತಿಯ ಕಿರಣಗಳೆಂಬ ಕೇಸರದ ಮಾಲೆಯಿಂದ ಕೂಡಿರುವ ಸಿಂಹಬಲ (ಕೀಚಕನೆಂಬ ಸಿಂಹವನ್ನು ಹಿಡಿದು ನುಂಗಲು ಭೀಮನು ಶಕ್ತಿಯುತವಾದ
Page #403
--------------------------------------------------------------------------
________________
೩೯೮ | ಪಂಪಭಾರತಂ
ವ|| ಅನ್ನೆಗಮಿತ್ತ ಕೀಚಕನೆಂಬ ಪಾರಿಉll ಅಚ್ಚಗದಿಂದನನಡಂಗದ ಬೇಸತೊಳಂತೆ ನೀರೊಳಂ
ಕಿಚ್ಚನೊಳಂ ಪೊರಳು ಪಗಲಂದಿರುಳಾದೊಡೆ ರಾಜಮಾದವೋಲ್ || ಪರ್ಚಿ ಮನಕ್ಕೆ ಬಿಚ್ಚತಿಕವಂದಿರೆ ನಾಟಕಶಾಲೆವೊಕ್ಕು ವಿ
ದ್ಯುಚ್ಚಪಳಂ ಮನೋಜಪರಿತಾಪದಿನೋಪಳೆಗತ್ತು ಭೀಮನಂ || ೭೫ ಚಂ|| ನುಡಿಯದೆ ಕೆಮ್ಮನಿರ್ಪಿರವಿದಾವುದು ಕಾರಣವಾವುದೀ ಮೊಗಂ
ಗುಡದಿರವಿಂತು ಕಣ್ಮಡಿಗರದ್ದರೆ ಮಾನಸರಪ್ಪರೆಂದು ಮ | ಛಡ ನುಡಿದೆಯ್ದವಂದು ಮುಸುಕಂ ತಗೆದಾಗಡೆ ಮೇಲೆವಾಯ್ತು ಬ
ಅಡಿಗನವುಂಕಿ ಬಲ್ಲಡಿಗನಂ ಪಿಡಿದೊರ್ಮೆಯ ಮಲ್ಲಯುದ್ಧದೊಳ್ || ೭೬
ವಗ ಪೋರ್ದು ಮಾಮಲ್ಲಿಯಾಗ ಪಲವುಂ ಗಾಯಗಳೊಳಾಯಂದಪ್ಪದ ತನಗವಂ ಸಮಾನಬಳನಪ್ಪುದಂ ಪಿರಿದು ಪೊಟ್ಟು ಸಂತರ್ಪಿನಂ () ಪೋರ್ದು ಬಳೆಯ ಅನಾನೆ ಮಟ್ಟಿದಂತ ನುರ್ಚುನೂಅಪಿನಮವುಂಕಿ ಪಿಡಿದಡಸಿಯಗುರ್ವು ಪರ್ವ ಬೀಸಿ ಗುಣಣೆಯ ಕಂಭಂಗಳೊಳಂ ಕೇರ್ಗಳೊಳಮಾಸ್ಫೋಟಿಸಿ ತಾಟಿಸಿದಾಗಳ್ಕ೦ll ಬಿಸುನೆತ್ತರ್ ನೆಣನಡಗೆ
ಲ್ಕು ಸಮಸ್ತಂ ಸುರಿಯ ಕೈಗೆ ತೊವಲುಟಿಯಲಗು | ರ್ವಿಸಿದುದು ತೀವಿದ ಗುಳ್ಳೆಯ ಪಸುಂಬೆಯಂ ಸೋರ್ಚಿದಂತ ತನು ಕೀಚಕನಾ ||
ಶರಭಗವಿರುವ ಹಾಗಿದ್ದನು. ವ! ಸೂರ್ಯನು ಇನ್ನೂ ಅಸ್ತಮಯವಾಗದ ಬೇಸರಿಕೆಯ ದುಃಖದಿಂದ ವ್ಯಥೆಪಟ್ಟು ನೀರಿನಲ್ಲಿಯೂ ಬೆಂಕೆಯಲ್ಲಿಯೂ ಹೊರಳಿ ಹಗಲು ರಾತ್ರಿಯಾದ ತಕ್ಷಣ ರಾಜ್ಯಪ್ರಾಪ್ತಿಯಾದ ಹಾಗೆ ಉಬ್ಬಿ ಮನಸ್ಸಿಗೆ ಸಂತೋಷವುಂಟಾಗಿರಲು ನಾಟಕಶಾಲೆಯನ್ನು ಪ್ರವೇಶಿಸಿ ಮಿಂಚಿನಂತೆ ಚಪಲನಾದ ಕೀಚಕನು ಕಾಮತಾಪದಿಂದ ಭೀಮನನ್ನು ಪ್ರಿಯೆಯೆಂದೇ ಭಾವಿಸಿ ಇದೇನಿದು ಪ್ರಿಯ. ೭೬. ಮಾತನಾಡದೆ ಸುಮ್ಮನೆ ಇರುವುದಕ್ಕೆ ಕಾರಣವೇನು ? ಮುಖವನ್ನು ತೋರಿಸದೇ ಇರುವ ಈ ಸ್ಥಿತಿಯೇನು ? ಮನುಷ್ಯರಾಗಿರುವವರು ಈ ಸ್ಥಿತಿಯಲ್ಲಿ ಮೋಸಗಾರ ರಾಗುವುದುಂಟೇ ?' ಎಂದು ಮೋಹದ ಮಾತಗಳನ್ನಾಡಿ ಸಮೀಪಕ್ಕೆ ಬಂದು ಮುಸುಕನ್ನು ತೆಗೆದೊಡನೆಯೇ ಬಲುದಡಿಗನಾದ ಭೀಮನು ಬಲುದಡಿಗನಾದ ಕೀಚಕನನ್ನು ಅಮುಕಿ ಹಿಡಿದುಕೊಂಡು ಮಲ್ಲಯುದ್ದದಲ್ಲಿ ಒಂದೇ ಸಮನಾಗಿ ವ|| ಹೋರಾಡಿ ದ್ವಂದ್ವಯುದ್ದವಾಡಿ ಅನೇಕ ಪಟ್ಟುಗಳಲ್ಲಿ ಶಕ್ತಿಹೀನನಾಗದೆ ತನಗೆ ಅವನು ಸಮಾನಬಲನಾದುದರಿಂದ ಬಹಳಹೊತ್ತು ಸಮಾನನಾಗಿ ಕಾದಿ ಬಳೆಯ ರಾಶಿಯನ್ನು ಆನೆಯು ತುಳಿದ ಹಾಗೆ ನುಚ್ಚುನೂರಾಗುವಂತೆ ಅಮುಕಿ ಹಿಡಿದು ನಗ್ಗಿ ಭಯವು ಹಬ್ಬುವ ಹಾಗೆ ಬೀಸಿ ನಾಟ್ಯಶಾಲೆಯ ಕಂಭಗಳಿಗೂ ಗೋಡೆಗಳಿಗೂ ಬಡಿದು ಆಸ್ಫೋಟಿಸಿ ಬೀಸಿದನು. ೭೭. ಬಿಸಿರಕ್ತ, ಕೊಬ್ಬು, ಮಾಂಸ, ಎಲುಬು ಎಲ್ಲವೂ ಸುರಿದು ಹೋಗಿ ಕೈಯಲ್ಲಿ ತೊಗಲು ಮಾತ್ರ ಉಳಿಯಿತು. (ಪದಾರ್ಥದಿಂದ) ತುಂಬಿ
Page #404
--------------------------------------------------------------------------
________________
ervoll
ಅಷ್ಟಮಾಶ್ವಾಸಂ | ೩೯೯
ಆಂ ಜಗದೊಳ್ ಬಲಸ್ಥನೆನಿದಿರ್ಚುವರಾರೆನಗೆಂದು ಸೋಲದಿಂ ಕಂಜದಳಾಕ್ಷಿಯಂ ಪಿಡಿದನೀ ಖಳನೆಂಬಲಿಂದಮತ್ತಮಿ | ತಂ ಜವನೊಕ್ಕಲಿಕ್ಕಿದೊಡ ನಾಟಕಶಾಲೆಯೊಳೆಯ ರಕ್ತ ಪು ಸ್ಟಾಂಜಳಿಗೆ ಮಾಯವೊಲಿರ್ದುವು ಸೂಸಿದ ಖಂಡದಿಂಡೆಗಳ ||೭೮
ವ|| ಅಂತು ಸಂಧಿ ಸಂಧಿಯೊಳ್ ಸಹಸ್ರ ಸಿಂಹಬಲನೆನಿಪ ಸಿಂಹಬಲನನಶ್ರಮದೊಳೆ ಬಾಣಸಿನ ಮನೆಯೊಳ್ ಬಂದಿರ್ದನಿತ್ತ ದೌಪದಿಯುಮುವಾಯದೊಳ್ ಗುಣಣೆಯ ಮನೆಯ ಮುಂದೆ ನಿಂದು
ಕಂli
ಗಂಧರ್ವವನಿತೆಯಂ ನಿ
ರ್ಬಂಧಂ ಬೇಡಳಿಗೆ ಸಾವೆಯನೆ ಮಾಣದ ಕಾ | ಮಾಂಧಂ ಕೀಚಕನಾಟಿಸಿ
ಗಂಧರ್ವರಿನದನೆನಗೆ ದೂಱಪ್ಪಿನೆಗಂ ||
ವ|| ಎಂದು ಗಗ್ಗರಿಕಗೊಳೂ ಸರಮಂ ಕರ್ಣಪರಂಪರೆಯ ಕೇಳು ಸಿಂಹಬಲನೊಡವುಟ್ಟಿದರ್ ನೂರ್ವರ್ ಕೀಚಕರುಂ ಪರಿತಂದು ಮುಳಿಸಿನೊಳ್ ಕಾಣದಲ್ಲಮ ಡಾಮರ ಡಾಕಿನಿಯಿಂದಮಾದುದೀಕೆಗಮಮ್ಮಣ್ಣಂಗಮೊಂದೆ ವಿಧಿಯಂ ಮಾಮಂದಾಕೆಯಂ
26
ಉಬ್ಬಿಕೊಂಡಿದ್ದ ಹಸುಬೆಯ ಚೀಲವನ್ನು ಅದರಲ್ಲಿದ್ದ ಪದಾರ್ಥವನ್ನು ಖಾಲಿಮಾಡಿದಂತೆ ಕೀಚಕನ ಶರೀರವು ಭಯಂಕರವಾಯಿತು. ೭೮. ಪ್ರಪಂಚದಲ್ಲೆಲ್ಲ ನಾನೇ ಬಲಿಷ್ಠನಾದವನು. ನನ್ನನ್ನು ಇದಿರಿಸುವವರಾರಿದ್ದಾರೆ ಎಂದು ಮೋಹದಿಂದ ಕಮಲದಳನೇತ್ರೆಯಾದ ದೌಪದಿಯನ್ನು ಈ ದುಷ್ಟನು ಹಿಡಿದನು ಎಂಬ ದುಃಖದಿಂದ ಯಮನು ಆ ಕಡೆಯಿಂದ ಈ ಕಡೆಗೆ ಒಕ್ಕಣಮಾಡಲಾಗಿ ನಾಟಕಶಾಲೆಯಲ್ಲಿ ಚೆಲ್ಲಿದ ಮಾಂಸರಾಶಿಗಳು ಕೆಂಪುಹೂವುಗಳನ್ನು ಎರಚಿದ ರೀತಿಯಲ್ಲಿ ಇದ್ದುವು. ವ|| ಹಾಗೆ ಭೀಮನು ಕೀಲುಕೀಲುಗಳಲ್ಲಿಯೂ ಸಾವಿರ ಸಿಂಹದ ಬಲವುಳ್ಳವನೆನಿಸಿದ ಕೀಚಕನನ್ನು ಅನಾಯಾಸದಿಂದ ಕೊಂದು ಯಮನಿಗೆ ಔತಣವಿಕ್ಕಿ ನಿತ್ಯದ ಹಾಗೆ ಅಡುಗೆಮನೆಯನ್ನು ಸೇರಿದನು. ಈ ಕಡೆ ದೌಪದಿಯು ಉಪಾಯದಿಂದ ನಾಟ್ಯಶಾಲೆಯ ಮುಂದುಗಡೆ ನಿಂತುಕೊಂಡು ೭೯. ನಾನು ಗಂಧರ್ವಪತ್ನಿ, ಬಲಾತ್ಕಾರ ಮಾಡಬೇಡ; ದುರಾಸೆಪಟ್ಟರೆ ಸಾಯುತ್ತೀಯೆ ಎಂದರೂ ಬಿಡದೆ ಕಾಮಾಂಧನಾದ ಕೀಚಕನು ಆಶೆಪಟ್ಟು ನನಗೆ ಅಪಪ್ರಥೆ ಬರುವಹಾಗೆ ಗಂಧರ್ವರಿಂದ ನಾಶವಾದನು. ವ| ಎಂದು ಆರ್ತಸ್ವರದಿಂದ ಕೂಗಿಕೊಳ್ಳುವ ಧ್ವನಿಯನ್ನು ಕಿವಿಯಿಂದ ಕಿವಿಗೆ ಕೇಳಿದ
ಸಿಂಹಬಲನಾದ ಕೀಚಕನ ಸಹೋದರರಾದ ನೂರುಜನ ಕೀಚಕರು ಓಡಿಬಂದು ಕೋಪದಿಂದ ಕುರುಡರಾಗಿ ಎಲ್ಲವೂ ಈ ಪಿಶಾಚಿಯಿಂದಾಯಿತು, ಇವಳಿಗೂ `ನಮ್ಮಣ್ಣನಿಗೂ ಒಂದೇ ರೀತಿಯ ಸಂಸ್ಕಾರವನ್ನು ಮಾಡುವೆವು ಎಂದು ಅವಳನ್ನು ಮುಂದಿರಿಸಿಕೊಂಡು ಹೋದರು. ಇವನನ್ನು ಈ ರಾತ್ರಿಯೇ ದಹನಕ್ರಿಯಾದಿಗಳಿಂದ ಸಂಸ್ಕಾರ ಮಾಡಬೇಕು ಎಂದು ತೆಗೆದುಕೊಂಡು ಹೋಗುವಾಗ ಆ ಗಲಭೆಯ ಶಬ್ದವನ್ನು
Page #405
--------------------------------------------------------------------------
________________
೪೦೦ | ಪಂಪಭಾರತಂ' ಮುಂದಿಟ್ಟು ಪೋದರಿವನನಿರುಳೊಳೆ ಸಂಸ್ಕರಿಸಲ್ಬಟ್ಟುಮೆಂದು ಕೊಂಡುಪೋಷಾಗಳಾ ಕಳಕಳಮಂ ಭೀಮಸೇನ ಕೇಳವಂದಿರೊಡನೆ ರೂಪುಗರೆದು ಪೊಬಲಂ ಪೂಣಮಟ್ಟು ಬಸಿಡಿಲೆಂಗುವಂತೆ ನಿಜಭುಜಶಿಖರಾಸ್ಕಾಲನಂಗೆಯ್ದುಮll ವನಿತಾಹೇತುವೆ ಕೇತುವಾಯು ನಿಮಗಂ ಗಾಂಧರ್ವರಿಂದಿಂದು ನಿ
ಮ್ಯ ನಿಷೇಕಂ ನೆರೆದತ್ತು ಸತ್ತಿರೆನುತ್ತುಂ ಪೊಕ್ಕಾರ್ದು ಕಾಳಾಂಬುದ | ಧ್ವನಿಯಿಂ ಬಾಚಿಯ ಚೆಲ್ವನಪ್ಪ ಬನಮಂ ಕಾಡಾನೆ ಪೊಯ್ದಂತೆ ಪೂ
ಮೈನಿಸಂ ಮಾಣದೆ ನೀಚ ಕೀಚಕನಿಕಾಯ ಧ್ವಂಸನಂ ಮಾಡಿದಂ || ೮೦
ವಗಿ ಅಂತಳವಿಗತಿಯ ಕೊರ್ವಿದ ಕೀಚಕವನಮಲ್ಲಮೊಂದಿರುಳೊಳೆ ಸಾಹಸ ಭೀಮನುದ್ಧಾಮಕೊಪದವದಹನಜ್ವಾಲಾಸಹಸಂಗಳಿನಮಳ್ಳಿದಂತಪ್ಪುದುಂ ನೇಸಮ್ ಮೂಡಿದಾಗಳಾ ಪಡೆಮಾತನಿರ್ದರಿರ್ದಲ್ಲಿಯ ಕೇಳುಮ ಪಡಲಿಟ್ಟಂತೆವೊಲಾಯ್ತು ಕೀಚಕಬಲ೦ ಗಂಧರ್ವರಿಂದಿಂದಿರು
ಛಡಿದೇ ಸಂಗಡಮಿಬ್ರುವಾಯ್ಕೆ ಪಟವೆಲ್ಲಂಗಮೇನಾಗದಿಂ | ದುಡಿದತ್ತಾಗದೆ ಮತ್ನ ನೊಂದು ಬಲಗೆಯ್ಯಂದಕ್ಕಟಾ ಎಂಬುದು ನುಡಿಯಲ್ಮಾರ್ತರುಮಿಲ್ಲ ಪಾರದರದೂಳ್ ಸತ್ತಂಗಬಿನ್ನರಾರ್ || ೮೧ ಕಂtt ರಾವಣನುಂ ಗಡ ಸೀತಾ
ದೇವಿಗೆ ಸೋಲದ ಫಲಮನೆಯ್ದಿದನಿವನಾ | ರಾವಣನಿಂ ಪಿರಿಯನೆ ಪೇ ಆವುದೊ ಶುಚಿಯಲ್ಲದವನ ಗಂಡುಂ ತೂಂಡುಂ | - ೮೨
.
ಭೀಮಸೇನನು ಕೇಳಿ ಅವರ ಜೊತೆಯಲ್ಲಿಯೇ ಆಕಾರವನ್ನು ಮರೆಮಾಡಿಕೊಂಡು ಪಟ್ಟಣದಿಂದ ಹೊರಟು ಬರಸಿಡಿಲು ಮೇಲೆ ಬೀಳುವ ಹಾಗೆ ತನ್ನ ತೋಳುಗಳನ್ನು ತಟ್ಟಿಕೊಂಡು ೮೦. ನಿಮಗೂ ನಿಮಿತ್ತವೇ (ವಿಪತ್ಕಾರಕ) ಕೇತುಗ್ರಹವಾಯಿತು. ಗಂಧರ್ವರಿಂದ ಈ ದಿನ ಒಸಗೆ (ಮಂಗಳಕಾರ್ಯ-ತಕ್ಕಶಾಸ್ತಿಯಾಯಿತು. ಸರಿ; ಎನ್ನುತ್ತ ಪ್ರವೇಶಮಾಡಿ ಆರ್ಭಟಿಸಿ ಕಾಲಮೇಘದ ಧ್ವನಿಯಿಂದ ಸುಂದರವಾದ ಬಾಳೆಯ ತೋಟವನ್ನು ಕಾಡಾನೆಯು ನಾಶಮಾಡುವಂತೆ ಹೊಡೆದು ಸ್ವಲ್ಪವೂ ಬಿಡದೆ ನೀಚರಾದ ಕೀಚಕಸಮೂಹವನ್ನು ಧ್ವಂಸಮಾಡಿದನು. ವ! ಹಾಗೆ ಅಳತೆಯನ್ನು ಮೀರಿ ಕೊಬ್ಬಿದ ಕೀಚಕರೆಂಬ ಕಾಡೆಲ್ಲವನ್ನೂ ಒಂದೇ ರಾತ್ರಿಯಲ್ಲಿ ಸಾಹಸಭೀಮನು ಅತಿ ದೊಡ್ಡದಾದ ಕೋಪವೆಂಬ ಕಾಡುಗಿಚ್ಚಿನ ಸಾವಿರಾರು ಉರಿಗಳಿಂದ ನಾಶಪಡಿಸಿದಂತೆ ಆಗಲು ಸೂರ್ಯೋದಯವಾಯಿತು. ಆ ಸಮಾಚಾರವನ್ನು ಇದ್ದವರು ಇದ್ದಲ್ಲಿಯೇ ಕೇಳಿ ೮೧. ಕೀಚಕಸಮೂಹವು ರಾತ್ರಿ ಗಂಧರ್ವರಿಂದ ಚೆಲ್ಲಾಪಿಲ್ಲಿಯಾದ ಹಾಗಾಯಿತು. ಇದೂ ಸಾಮೂಹಿಕಮೃತ್ಯುವಾಯಿತಲ್ಲವೇ ? ಪರಸ್ತ್ರೀಗೆ ಅಳುಪಿದವನಿಗೆ ಏನುತಾನೆ ಆಗುವುದಿಲ್ಲ ? ಈ ದಿನ ವಿರಾಟನ ಬಲಗೈ ಮುರಿದುಹೋಯಿತಲ್ಲವೇ, ಅಯ್ಯೋ ಎಂದು ಹೇಳುವವರೂ ಇಲ್ಲವಲ್ಲಾ, ಹಾದರದಲ್ಲಿ ಸತ್ತವರಿಗೆ ಅಳುವವರಾರಿದ್ದಾರೆ ೮೨. ರಾವಣನೂ ಕೂಡ ಸೀತಾದೇವಿಗೆ ಮೋಹಿಸಿ ಅದರ ಫಲವನ್ನು ಹೊಂದಿದನು. ಇವನು ಆ ರಾವಣನಿಗಿಂತ ಹಿರಿಯನೆ ಹೇಳು. ಸ್ವಚ್ಛವಾದ
Page #406
--------------------------------------------------------------------------
________________
ಅವಮಾಶ್ವಾಸಂ / ೪೦೧ ವ|| ಎಂದು ಪೊಲೀಲ ಜನಂಗಳ್ ಗುಜುಗುಜುಗೊಂಡು ಕೀಚಕನ ಪಡೆಮಾತನೆ ನುಡಿಯೆ ವಿರಾಟನ ಮಹಾದೇವಿಯುಂ ಪೇಡಿ ಸತ್ತಂತೇನುಮನನಲಯದ ನಾಣ್ಯ ತನ್ನೊಳೆ ಮೂಗುತಿಯನಟ್ಟು ಕೆಮ್ಮನಿರ್ದಳಿತ್ತ ದುರ್ಯೋಧನನ ಗೂಢಪ್ರಣಿಧಿಗಳಾ ಮಾತಂ ಜಲಕ್ಕನದು ನಾಗಪುರಕ್ಕೆ ವಂದು ಸುಯೋಧನ ಸಭಾಮಧ್ಯದೊಳಿಂತೆಂದು ಬಿನ್ನಪಂಗೆಯ್ದರ್ಮll - ಗುಡಿಗಂ ಬದ್ದವಣಕ್ಕಮಪ್ಪ ಪಡೆಮಾತೇಮಾತಿದಂ ಕೇಳೊಡೀ
ಗಡೆ ಮೆಚೀಯಲೆವೇಚ್ಚುಗೆಯ ಷರಮದ್ರೋಹರ್ಕಳಾಗಿರ್ದು ನಿ ಮಡಿಯೊ ಪೋಗದೆ ಕಾಡುತಿರ್ದ ಸುಭಟರ್ಕಳ್ ನೂರ್ವರುಂ ಕೀಚಕರ್ ಮಡಿದರ್ ದೇವರದೊಂದು ಪುಣ್ಯಬಲದಿಂ ಗಂಧರ್ವಯುದ್ಧಾಗ್ರದೊಳ್|| ೮೩
ವll ಅದುಕಾರಣದಿಂದಾ ವಿರಾಟನ ಮಂಡಲಂ ಗೋಮಂಡಲದಂತೆ ಹೇಳಾಸಾಧ್ಯವಾಗಿ ಕೈಗೆವರ್ಕುಮಂಬುದುಂ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿಮll ಇದು ದಲ್ ಚೋದ್ಯಮತರ್ಕಮದ್ಭುತಮಸಂಭಾವ್ಯಂ ವಿಚಾರಕ್ಕೆ ಬಾ
ರದುದೆಂತೆಂದೊಡೆ ಸಂದ ಸಿಂಹಬಲನಂ ಕೊಲ್ವನ್ನರಾರ್ ಭೀಮನ ಲದವರ್ ಕೀಚಕ ಭೀಮ ಶಲ್ಯ ಬಲದೇವರ್ಕಳ್ ಸಮಾನರ್ಕಳ ಪುದಂ ತೋಳ್ವಲದೊಳ್ ಪಳಂಗಮರಿದೀ ವಿಕ್ರಾಂತಮುಂ ಗರ್ವಮುಂ || ೮೪
ನಡತೆಯಿಲ್ಲದವನ ಪೌರುಷಪರಾಕ್ರಮಗಳಿಂದೇನು ಪ್ರಯೋಜನ ? ವlು ಎಂದು ಪಟ್ಟಣದ ಜನಗಳು ಗುಂಪುಕೂಡಿಕೊಂಡು ಕೀಚಕನ ವಿಷಯವಾದ ಮಾತನ್ನೇ ಆಡುತ್ತಿರಲು ವಿರಾಟನ ಮಹಾರಾಣಿಯಾದ ಸುದೇಷ್ಠೆಯೂ ಹೇಡಿ ಸತ್ತ ಹಾಗೆ ಏನನ್ನು ಹೇಳಲೂ ತಿಳಿಯದೆ ಲಜ್ಜೆಪಟ್ಟು ತನ್ನಲ್ಲಿಯೇ ಮೂಗಳುವನ್ನು ಅತ್ತು ಸುಮ್ಮನಿದ್ದಳು. ಈ ಕಡೆ ದುರ್ಯೊಧನನ ಗೂಢಚಾರರು ಆ ಮಾತನ್ನು ಥಟ್ಟನೆ ತಿಳಿದು ಹಸ್ತಿನಾವತಿಗೆ ಬಂದು ದುರ್ಯೋಧನನ ಸಭೆಯ ಮಧ್ಯದಲ್ಲಿ ಹೀಗೆಂದು ವಿಜ್ಞಾಪನೆ ಮಾಡಿದರು. ೮೩. 'ಧ್ವಜಾರೋಹಣಮಾಡುವುದಕ್ಕೂ ಮಂಗಳವಾದ್ಯ ಮಾಡಿಸುವುದಕ್ಕೂ ಯೋಗ್ಯವಾದ ಸಮಾಚಾರ' ಎಂದರು ದೂತರು. ಅದೇನಂತಹ ಸುದ್ದಿ ಎಂದ ದುರ್ಯೊಧನ, ಇದನ್ನು ಕೇಳಿದ ತಕ್ಷಣವೇ ನಮಗೆ ಬಹುಮಾನವನ್ನು ಕೊಟ್ಟೇ ತೀರಬೇಕಾದುದು. 'ನಿಮ್ಮ ವಿಶೇಷಪರಮ ದ್ರೋಹಿಗಳಾಗಿದ್ದು ನಿಮ್ಮನ್ನು ಸದಾ ಹಿಂಸಿಸುತ್ತಿದ್ದ ನೂರುಜನ ಕೀಚಕರೂ ಸ್ವಾಮಿಯ ಪುಣ್ಯಬಲದಿಂದ ಗಂಧರ್ವರೊಡನೆ ಆದ ಯುದ್ಧದಲ್ಲಿ ಸತ್ತರು. ವt ಆದ ಕಾರಣದಿಂದ ವಿರಾಟದೇಶವು ಪಶುವಿನ ಹಿಂಡಿನಂತೆ ಆಟದಷ್ಟು ಸುಲಭಸಾಧ್ಯವಾಗಿ ಕೈವಶವಾಗುತ್ತದೆ' ಎಂದು ಹೇಳಿದರು. ದುರ್ಯೋಧನನು ಭೀಷ್ಮಾಚಾರ್ಯರ ಮುಖವನ್ನು ನೋಡಿದನು. ೮೪. ಇದು ನಿಜವಾಗಿಯೂ ಆಶ್ಚರ್ಯಕರವಾದುದದು, ತರ್ಕಿಸಲಾಗದುದು. ಅದ್ಭುತವಾದುದು, ನಡೆಯಲಾಗದುದು, ವಿಚಾರ ಮಾಡಲಾಗದುದು ; ಹೇಗೆಂದರೆ ಭೀಮನಲ್ಲದವರು ಸಿಂಹಬಲನನ್ನು ಕೊಲ್ಲುವವರಾರಿದ್ದಾರೆ ? ಬಾಹುಬಲದಲ್ಲಿ ಕೀಚಕ, ಭೀಮ, ಶಲ್ಯ, ಬಲದೇವರುಗಳು ಸಮಾನರಾಗಿರುವುದರಿಂದ ಈ ಪೌರುಷಮಾರ್ಗವು
Page #407
--------------------------------------------------------------------------
________________
೪೦೨) ಪಂಪಭಾರತಂ
ವಗ ಆದಂ ಪಾಂಡವರೈವರುಂ ವಿರಾಟಪುರದೊಳಿರ್ದರಾಗಲವೇಚ್ಚುಮವ ರಿರ್ದರಪ್ರೊಡಚಂ|| ಪರಿಭವದೊಂದು ತುತ್ತ ತುದಿ ಕೃಷ್ಠೆಯ ಬನ್ನದೊಳಾಗೆ ಜೂದಿಯೊಳ್
ಪೊರಸಚಿವಂತೆ ತಮ್ಮರಸುಗೆಟ್ಟು ಕಬಲ್ಲೆರ್ದೆಗೆಟ್ಟರಣ್ಯದೊಳ್ | ತಿರಿತರುತಿರ್ದ ಕಣ್ಮಡಿಗರಿನ್ ಮಗುಟ್ಟುಂ ಬಿಲುತೋಡಿ ಬೇಡರೊಲ್
ನೆರೆದಿರಲಲ್ಲದೊಡ್ಡಯಿಸಿ ರಾಜ್ಯದೊಳೇಂ ನೆರೆಯ ತೀರ್ಗುಮೋ || ೮೫ ವಗ ಎಂಬುದುಮಾ ಕೌರವನ ಮಾತಿಂಗಮರಾಪಗಾನಂದನನಿಂತೆಂದಂಮ|| ಸ | ರಸೆಯೊಳ್ ಕಾಲಾಗ್ನಿರುದ್ರ ಜಲಶಯನದೊಳಂಭೋಜನಾಭಂ ಪೊದಾ |
ಗಸದಿಂ ಸುತ್ತಿರ್ದಜಾಂಡೋದರದೊಳಜನಡಂಗಿರ್ಪಪೋಲ್ ಕಾರಣಕ್ಕಂ | ದೊಸೆದಿರ್ದ ಪಾಂಡವರ್ ಕಾನನದೊಳಿರದವರ್ ನನ್ನಿಯಂ ತಪ್ಪೆಯುಂ ಸ ಪ್ರಸಮುದ್ರ ಮೇರೆಯಂ ತಪ್ಪೆಯುಮೊಳರೆ ಬಿಗುರ್ತಾಂಪವರ್ ರಾಜರಾಜಾ || ೮೬
ವ|| ಎನೆ ಕುಂಭಸಂಭವನಿಂತೆಂದಂಮ। ಕೃತಶಾಸ್ತರ್ ಧೃತಶಾಸ್ತರಪ್ರತಿಹತ ಪ್ರಾಗ ರೀಗಳ ಪೈಥಾ
ಸುತರುದ್ಯೋಗಮವೆತ್ತಿಕೊಳ್ಳ ದವಸಂ ನಾರ್ಚಿತ್ತು ಕಾಲಾವಧಿ | ಹಿತಿಯುಂ ಬಂದುದಿದರ್ಕ ಮಾಣಿರದ ಮಂತಾವಾಸದೊಳ್ ಮಂತ್ರ ನಿ ಶಿತನಾಡೀಗಡ ಕಾದಿದಲ್ಲದಿಳೆಯಂ ನೀನೆಂತುಮೇನಿತ್ತಪ || ೮೭
ಇತರರಿಗೆ ಅಸಾಧ್ಯ. ವ|| ಆದುದರಿಂದ ಪಾಂಡವರೆದು ಜನವೂ ವಿರಾಟನಗರದಲ್ಲಿದ್ದ ತೀರಬೇಕು, ಅವರಿರುವುದಾದರೆ -೮೫. ಬ್ರೌಪದಿಯ ಅವಮಾನದ ಪರಮಾವಧಿ ಯಿಂದ ಜೂಜಿನಲ್ಲಿ ಪಾರಿವಾಳವು ನಾಶವಾಗುವಂತೆ ತಮ್ಮ ರಾಜ್ಯವನ್ನು ಕಳೆದು ಕೊಂಡು, ಗೌರವವನ್ನು ನೀಗಿ, ಉತ್ಸಾಹಶೂನ್ಯರಾಗಿ ಕಾಡಿನಲ್ಲಿ ಅಲೆದಾಡುತ್ತಿರುವ ಮೋಸಗಾರರು ಪುನಃ ಹೆದರಿ ಓಡಿಹೋಗಿ ಬೇಡರಲ್ಲಿ ಸೇರಿರಬೇಕಲ್ಲದೆ ಗುಂಪುಗೂಡಿ ರಾಜ್ಯದಲ್ಲಿ ಸೇರುವುದು ಸೂಕ್ತವೇ ? ಎಂದ ದುರ್ಯೊಧನ, ವll ಆ ದುರ್ಯೋಧನನ ಮಾತಿಗೆ ಭೀಷ್ಮನು ಹೇಳಿದನು : ೮೬. ಕಾಲಾಗ್ನಿರುದ್ರನು ಪಾತಾಳದಲ್ಲಿಯೂ ವಿಷ್ಣುವು ಜಲಶಯನದಲ್ಲಿಯೂ ಬ್ರಹ್ಮನು (ವ್ಯಾಪ್ತವಾದ) ಆಕಾಶದಿಂದ ಸುತ್ತಿರುವ ಬ್ರಹ್ಮಾಂಡದ ಮಧ್ಯಭಾಗದಲ್ಲಿಯೂ ಅಡಗಿರುವ ಹಾಗೆ ಯಾವುದೋ ಒಂದು ಕಾರಣಕ್ಕಾಗಿ ಪಾಂಡವರು ಸಮಾಧಾನ ಚಿತ್ತದಿಂದ ಕಾಡಿನಲ್ಲಿ ಅಡಗಿದ್ದರು. ದುರ್ಯೊಧನ ಅವರು ಹಾಗೆ ಮಾಡದೆ ಸತ್ಯವನ್ನು ತಪ್ಪಿದರೂ ಏಳು ಸಮುದ್ರಗಳು ಮೇರೆದಪ್ಪಿದರೂ ಪ್ರತಿಭಟಿಸುವವರು ಯಾರು ಇದ್ದಾರೆ? ಎನ್ನಲು ದ್ರೋಣಾಚಾರ್ಯರು ಹೀಗೆಂದರು. ೮೭. ಪಾಂಡವರು ಶಾಸ್ತ್ರವನ್ನು ತಿಳಿದವರು. ಶಸ್ತವನ್ನು ಧರಿಸಿರುವವರು. ತಡೆಯಿಲ್ಲದ ಪ್ರೌಢಿಮೆಯನ್ನುಳ್ಳವರು. ಅವರು ಕಾರ್ಯಾರಂಭಮಾಡುವ ಕಾಲ ಸಮೀಪಿಸಿದೆ. ಮಂತ್ರಾಲೋಚನಾಸಭೆಯಲ್ಲಿ ಈಗಲೇ ನಿಶ್ಚಿತವಾದ ಸೂಕ್ತವಾದ ಕಾರ್ಯವನ್ನು ನಿಶ್ಚಯಿಸು. ಯುದ್ದಮಾಡದೆ ಭೂಮಿಯನ್ನು ನೀನು ಹೇಗೂ ಕೊಡುವುದಿಲ್ಲವಲ್ಲವೆ?
Page #408
--------------------------------------------------------------------------
________________
ಅಷ್ಠಮಾಶ್ವಾಸಂ / ೪೦೩ ವ|| ಎಂದೂಡ ಕರ್ಣನಿಂತೆಂದಂಚoll ಬಗೆಯದ ಸಾಮಮಂ ಬಿಸುಟು ಭೇದಮನೊಲ್ಲದುದಗ್ರದಾನಮಂ
ನಗದದ ದಂಡಮಂ ನಿನಗೆ ಮಾಡಿದಕೃತ್ಯರನಂತು ಮಾಣುದೇ | ಬಗೆ ಪಗೆ ನೀಗೆಯುಂ ಮುಳಿಸು ಪೋಗೆಯುಮಾಯತಿ ಪರ್ಚಿಯುಂ ಜಗಂ ಪೊಗಳಯುಮಾಂತರಾತಿನೃಪರಂ ತವ ಕೊಲ್ಕುದಹೀಂದ್ರಕೇತನಾ || ೮೮
ವ|| ಎಂಬುದುಂ ಸುಯೋಧನನಿರ್ವರ ನುಡಿಯುಮಂ ಕೇಳು ತನ್ನ ಮನದೊಳಾದ ಕಜ್ಜಮನಿಂತೆಂದಂಚಂtl ಅಡಿಯಲವೇಚ್ಚುದಿರ್ದಡೆಯನಿರ್ದಡೆಯಿಂ ತಗದಾಜಿರಂಗದೊಳ್
ನಿಜಸಲಿವೇಟ್ಟುದಂತವರನಂತವರಿರ್ಪಯುಂ ವಿರಾಟನಿ | ರ್ಪತಿಕೆಯ ಪಟ್ಟಣಂ ನಮಗಿದೇವಿರಿದಪ್ಪುದು ತಳ್ಳದಯ್ಕೆ ನಾಂ ತುಲುವನೆ ಕೊಳ್ಳಮಂತು ತುಜುಗೊಂಡೊಡೆ ಪಾಂಡವರಿರ್ಪ ಗಂಡರೇ || ೮೯
ವ|| ಎಂದು ಪಿರಿದುಮಾಗ್ರಹಂಬೆರಸು ಗೋಗ್ರಹಣಪ್ರಪಂಚಮನೆ ನಿಶ್ಚಯಿಸಿ ವಿರಾಟನ ದಾಯಿಗಂ ತ್ರಿಗರ್ತಾಧೀಶಂ ಸುಶರ್ಮನುಮಂ ನಾಲ್ಕಾಸಿರ ರಥಂಬೆರಸು ದಕ್ಷಿಣದಿಶಾಭಾಗಕ್ಕೆ ವೇಟ್ಟು ತುಲುವ ಕೊಳಿಸಿದಾಗಚoll ಕರೆದು ವಿರಾಟನುತರನನಾತನೂಜನನಾ ಪೋಟಕ್ಕೆ ಕಾ
ಪಿರಿಸಿ ಧರಾತಳಂ ತಳರ್ವವೊಲೆ ನಡೆದಾಗ ಪಾಂಡುಪುತ್ರರ | ಮೃರುಮಿದು ನಮ್ಮನಾರಯಲೆ ವೈರಿಯ ಮಾಡಿದ ಗೊಡ್ಡಮಿಲ್ಲಿ ಮಾ ಣ್ಣಿರಲಣಮಾಗ ಪೂಣ್ಣವಧಿಯುಂ ನದತ್ತು ಕಡಂಗಿ ಕಾದುವಂ || ೯೦
ವlt ಎನ್ನಲು ಕರ್ಣನು ಹೀಗೆ ಹೇಳಿದನು - ೮೮. ದುರ್ಯೋಧನ, ಸಾಮೋಪಾಯ ವನ್ನು ಯೋಚಿಸದೆ ಭೇದೋಪಾಯವನ್ನು ಬಿಸಾಡಿ ಶ್ರೇಷ್ಠವಾದ ದಾನೋಪಾಯವನ್ನು ಅಂಗೀಕರಿಸದೆ ನಿನಗೆ ದಂಡೋಪಾಯವನ್ನೇ ನಿಷ್ಕರ್ಷಿಸಿದ ಆ ಕೃತಘ್ನರನ್ನು ಹಾಗೆಯೇ ಬಿಡುವುದು ಯೋಗ್ಯವಲ್ಲ, ಶತ್ರು ತೋಲಗುವಂತೆಯೂ ಕೋಪವು ಪರಿಹಾರವಾಗು ವಂತೆಯೂ ಪೌರುಷವು ಹೆಚ್ಚುವಂತೆಯೂ ಲೋಕವು ಹೊಗಳುವಂತೆಯೂ ಪ್ರತಿಭಟಿಸಿದ ಶತ್ರುರಾಜರನ್ನು ಪೂರ್ಣವಾಗಿ ಕೊಲ್ಲುವುದು ಸೂಕ್ತವಾದ ಮಾರ್ಗ ಎಂದನು. ೮೯. ಎನ್ನಲು ದುರ್ಯೋಧನನು ಇಬ್ಬರ ಮಾತನ್ನು ಕೇಳಿ ತನ್ನ ಅಭಿಪ್ರಾಯವನ್ನು ಸೂಚಿಸಿದನು. ಮೊದಲು ಅವರು ಇರುವ ಸ್ಥಳವನ್ನು ತಿಳಿಯಬೇಕು. ಅವರನ್ನು ಅವರಿರುವ ಸ್ಥಳದಿಂದ ಓಡಿಸಿ ಯುದ್ಧಭೂಮಿಯಲ್ಲಿ ನಿಲ್ಲಿಸಬೇಕು. ವಿರಾಟನು ವಾಸಿಸುವ ಪ್ರಸಿದ್ಧವಾದ ವಿರಾಟನಗರವು ಅವರಿರುವ ಸ್ಥಳ. ನಮಗೆ ಆ ವಿರಾಟನಗರವು ಏನು ದೊಡ್ಡದು ? ಸಾವಕಾಶಮಾಡದೆ ನಾವು ಹೋಗಿ ಗೋವುಗಳನ್ನು ಹಿಡಿಯೋಣ. ಹಾಗೆ ಹಸುಗಳನ್ನು ಬಂಧಿಸಿದರೆ ಪಾಂಡವರು ಸುಮ್ಮನಿರುವ ಶೂರರಲ್ಲ. ವ|| ಎಂದು ವಿಶೇಷ ಕೋಪದಿಂದ ಕೂಡಿ ಪಶುಗಳನ್ನು ಬಂಧಿಸುವ ವಿಷಯವನ್ನೇ ನಿಶ್ಚಯಿಸಿದರು. ವಿರಾಟನ ಜ್ಞಾತಿಯೂ ತ್ರಿಗರ್ತಾಧೀಶನೂ ಆದ ಸುಶರ್ಮನನ್ನು ನಾಲ್ಕು ಸಾವಿರ ತೇರುಗಳೊಡನೆ ದಕ್ಷಿಣದಿಗ್ಯಾಗಕ್ಕೆ ಕಳುಹಿಸಿ ಪಶುಗಳನ್ನು ಹಿಡಿಸಿದರು. ೯೦. ವಿರಾಟನು ತನ್ನ ಮಗನಾದ ಉತ್ತರವನ್ನು ಕರೆದು ಆ ಪಟ್ಟಣಕ್ಕೆ ಕಾವಲಾಗಿರಿಸಿ
Page #409
--------------------------------------------------------------------------
________________
೪೦೪ | ಪಂಪಭಾರತಂ
ವ|| ಎಂದು ತಮ್ಮಯ್ಯರುಮಾಲೋಚಿಸಿ ವಿಕ್ರಮಾರ್ಜುನನಂ ಪಳಗಣ ಕಾಪಿಂಗಿರತ್ತು ನಾಲ್ವರು ನಾಲ್ಕು ಸಮುದ್ರಗಳೆ ಮೇರೆದಪ್ಪಿದಂತೆ ವಿರಾಟನೊಳ್ ಕೂಡಿ ಪೋಗಿ ತಾಗಿದಾಗಚಂll ಕಡಲ ಪೊದಳ ಪರ್ದೆರಗಳೆಯ ಕುಲಾದ್ರಿಗಳೊಳ್ ಪಳಂಚಿ ತೂ
ಳೊಡನೆ ಮರಲ್ಲವೂಲ್ ಕಡೆಯೆ ಪಾಯಿಸಿದುಗ್ರರಥಂಗಳಚಿತ || ಇಡಿಗಿಡೆ ಪಾಯರಾತಿನೃಪರಂ ತದಾಂತಿರದಾ ಸುಶರ್ಮನಂ
ಪಿಡಿದು ನೆಗಲ್ಯಂ ಪಡೆದು ಸಾಹಸದಿಂ ತುಲುವಂ ಮಗುಟ್ಟಿದರ್ ೧೯೧ ವ| ಅನ್ನೆಗಮತ್ತ ಸುಯೋಧನಂ ಸಮಸ್ತ ಸಾಧನಂಬೆರಸುಉ) ಉತ್ತರಂ ಗೋಗ್ರಹಂ ಪಿರಿದುಮಾಗ್ರಹಮಂ ಮನದೊಳ್ ತಗುಳ್ಳೆ ದಿ
ಗಿ ವಿಭೇದಿ ಪೆರ್ಚ ಕದನಾನಕರಾವಮಗುರ್ವಿನುರ್ವು ಪ || ರ್ವುರೆ ಚಾರು ವೀರ ಭಟ ಕೋಟಿಗೆ ರಾಗರಸಂ ಪೊದಳು ತು
ಳ್ಳುತ್ತಿರ ಬಂದು ಮುತ್ತಿ ಮೊಗೆದಂ ವಿಭು ಗೋಕುಲಮಂ ವಿರಾಟನಾ || ೯೨ ಚಂ ಪಸರಿಸಿ ಪೊಕ್ಕು ಕೂಕಿಲೆದು ಕಾದುವ ಬಲ್ಲಣಿಗಳ ಪಳಂಚೆ ಪಾ
ಯಿಸುವ ದಲಕ್ಕಗುರ್ವಸೆಯ ನೂಂಕಿದ ಬಲ್ಬಣಿಗೆತ್ತಮೆಯ ಚೋ | ದಿಸುವ ರಥಕ್ಕೆ ಪೆಟ್ಟಳಿಸದೊರ್ವರಿನೊರ್ವರೆ ಮಿಕ್ಕು ಪಾರ್ದು ಸಾ ರ್ದಿಸ ತುಲುಗಾಜರಂದಿನಿಸು ಬಲ್ವಲನಾದುದದೊಂದು ಕಾಳಗಂ || ೯೩
ಭೂಮಂಡಲವೇ ಚಲಿಸುವ ಹಾಗೆ ಯುದ್ಧಕ್ಕೆ ನಡೆದನು. ಪಾಂಡವರೈವರೂ ನಮ್ಮನ್ನು ಕಂಡು ಹಿಡಿಯಲು ಶತ್ರುವಾದ ದುರ್ಯೋಧನನು ಹೂಡಿದ ಚೇಷ್ಟೆಯಿದು. ಇಲ್ಲಿ ತಡೆದಿರಲಾಗದು. ಪ್ರತಿಜ್ಞೆಮಾಡಿದ ಗಡುವೂ ಪೂರ್ಣವಾಗಿದೆ. ಉತ್ಸಾಹದಿಂದ ಯುದ್ದಮಾಡೋಣ' ವll ಎಂದು ತಾವಯುಜನವೂ ತಮ್ಮಲ್ಲಿ ಆಲೋಚಿಸಿ ವಿಕ್ರಮಾರ್ಜುನನನ್ನು ನಗರದ ಹಿಂಗಾವಲಿಗೆ ಇರಹೇಳಿ ನಾಲ್ಕು ಜನರೂ ನಾಲ್ಕು ಸಮುದ್ರಗಳೇ ಮೇರೆದಪ್ಪಿದಂತೆ ವಿರಾಟನೊಡನೆ ಕೂಡಿ ಹೋಗಿ ಪ್ರತಿಭಟಿಸಿದರು. ೯೧. ಸಮುದ್ರದಲ್ಲಿ ವ್ಯಾಪ್ತವಾದ ದೊಡ್ಡ ಅಲೆಗಳು ಕುಲಪರ್ವತಗಳನ್ನು ತಗುಲಿ ಹಿಂದಕ್ಕೆ ಮರಳಿದಂತೆ ಮುಂದಕ್ಕೆ ನುಗ್ಗಿಸಿದ ಭಯಂಕರವಾದ ರಥಗಳನ್ನು ಹಿಂದಕ್ಕೆ ತಳ್ಳಿ ಬೀಳಿಸಿ ತಳಭಾಗವು ನಾಶವಾಗಿ ಅಡಿಮೇಲಾಗಲು ನುಗ್ಗಿದ ಶತ್ರುರಾಜರನ್ನೂ ಸುಶರ್ಮನನ್ನೂ ಬಿಡದೆ ಎದುರಿಸಿ ಹಿಡಿದು ಪ್ರಸಿದ್ದಿಯನ್ನು ಪಡೆದು ಸಾಹಸದಿಂದ ಪಾಂಡವರು ವಿರಾಟನ ಗೋವುಗಳನ್ನು ಹಿಂದಕ್ಕೆ ತಿರುಗಿಸಿದರು. ವ|| ಅಷ್ಟರಲ್ಲಿ ಆ ಕಡೆ ದುರ್ಯೋಧನನು ಸಮಸ್ತ ಸೈನ್ಯದೊಡಗೂಡಿ - ೯೨. ಉತ್ತರದಿಕ್ಕಿನ ಗೋವು ಗಳನ್ನು ಹಿಡಿಯಲು ಯೋಚಿಸಿ ದಿಗಂತವನ್ನು ಒಡೆಯುತ್ತಿರುವ ಯುದ್ದಭೇರಿಯ ಭಯಂಕರವಾದ ಶಬ್ದವು ಹೆಚ್ಚುತ್ತಿರಲು ಪ್ರಸಿದ್ಧರಾದ ಶೂರರನೇಕರಿಗೆ ಸಂತೋಷರಸವು ಹೆಚ್ಚಿ ಹೊರ ಹೊಮ್ಮುತ್ತಿರಲು ಪ್ರಭುವಾದ ದುರ್ಯೋಧನನು ಬಂದು ವಿರಾಟನ ಗೋಸಮೂಹವನ್ನು ಆಕ್ರಮಿಸಿ ಸೆರೆಹಿಡಿದನು. ೯೩. ಪ್ರಸರಿಸಿ ಹೊಕ್ಕು ಮೇಲಕ್ಕೆ ನೆಗೆದು ಹೋರಾಡುವ ಬಲಿಷ್ಠರಾದ ಕಾಲಾಳುಗಳು ತಾಗಲು, ಮುನ್ನುಗ್ಗಿಸುವ ಸೈನ್ಯಕ್ಕೆ ಭಯವುಂಟಾಗುವಂತೆ ಮುಂದೆ ನುಗ್ಗಿದ ಬಲವಾದ ಕಾಲಾಳುಗಳಿಗೂ ವೇಗವಾಗಿ ನಡೆಸುತ್ತಿರುವ ತೇರುಗಳಿಗೂ ಹೆದರದೆ ಒಬ್ಬರನ್ನೊಬ್ಬರು ಮೀರಿ ಗುರಿಯಿಟ್ಟು ನೋಡಿ
Page #410
--------------------------------------------------------------------------
________________
ಅಷ್ಟಮಾಶ್ವಾಸಂ / ೪೦೫ ಮಚರದಿನೊರ್ವರೋರ್ವರ ನುಚ್ಚಳಿಸಿ ತಗುಳು ಗೋವರಾರ್ದಿಸಿ ಕೀಬಂ | ಕರ್ಚಿ ಪುಡಿಯೊಳ್ ಪೊರಳುವು ನೆಚ್ಚಿನ ಕಾಂಭೋಜವಾಜಿಗಳ ಕೆಲವಾಗಳ್ ||
೯೪ ವll ಅಂತು ಮತ್ತು ಮನದೊಳೊಡಂಬಟ್ಟಂತೆ ಮನಮನೆಡಗಲಿಸಿ ಪರಿವ ಜಾತ್ಯಶ್ವಂಗಳೆಲ್ಲ ಮಳೆಗಾಳಗದೊಳ್ ಸತ್ತೊಡಚಂ| ತುಲು ಪರಿವಾಗಳೆಮ್ಮ ಪಣನಂ ತುಟಿದುಂ ಪರಿಗುಂ ದಲೆಂದು ಚಿಃ
'ತುಜುಗೊಳೆ ಬಾಳೆಮೆಂದು ತುಜುಗೋಳ್ಳೆ ಸಾವುದು ಸೈಪಿದಂದು ಪಾ | ಯತಿಕಯ ಗೋವರಣಿ ಬರ ಪಾಯಿಸಿ ಘೋಟಿಯಿಲರ್
ತಳ ತಳೆದಿಕ್ಕಿ ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್ || ೯೫ : ವ|| ಆಗಳೊರ್ವ ಗೋವಳನನಿಬರ ಸಾವುಮಂ ಕಂಡು ಮನದೊಳಾದೇವ ಪೆರ್ಚೆಯುಂ ತುಲುವ ಪೋಗಿಂಗಾಜದ ವಿರಾಟಪುರಕ್ಕೆ ವಂದುತ್ತರಂಗೆ ಪೇಯ್ದಾಗಚಂ11 ಬೆಂಗಣ ಕಾಪೆನ್ನನೆ ಮಹೀಪತಿ ಪೂಣಿಸಿ ಪೋದನಾಂ ಗಡಂ
ತುಜುಗೂಳ ಮಾಸನನಿದಿರ್ಗ ರಾವಣ ಕೋಟಿಯುಮಾಂತುಮಂ ಗೆಲಲ್ | ನಗುಮ ತಮಿನೈನಗ ಸಾರಥಿಯಪ್ಪನನೀಗಲೆಂದು ಪೊ | ಚಳಿಗೆ ವಿರಾಟನಂದನನದಲ್ಲಮನಾಗಡ ವಿಕ್ರಮಾರ್ಜುನಂ ||
೯೬
ಸಮೀಪಕ್ಕೆ ಬಂದು ಬಾಣಪ್ರಯೋಗಮಾಡಲು ದನಕಾಯುವವರ ಅಂದಿನ ಯುದ್ಧವು ಸ್ವಲ್ಪ ಬಲಿಷ್ಠವೇ ಆಯಿತು. ೯೪, ಮತ್ಸರದಿಂದ ಒಬ್ಬರನ್ನೊಬ್ಬರು ಹಾರಿಸಿ ದನಕಾಯುವವರು ಆರ್ಭಟದಿಂದ ಹೊಡೆಯಲು (ಜಯಿಸಿಯೇ ತೀರುತ್ತೇವೆಂದು) ನಂಬಿದ್ದ ಕೆಲವು ಕಾಂಭೋಜದೇಶದ ಕುದುರೆಗಳು ಕಡಿವಾಣವನ್ನು ಕಚ್ಚಿಕೊಂಡೇ ಹುಡಿಯಲ್ಲಿ ಹೊರಳಿದುವು. ವll ಹಾಗೆ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಮನಸ್ಸನ್ನೂ ಮೀರಿ ಓಡುವ ಜಾತಿಕುದುರೆಗಳೆಲ್ಲ ಆ ಸಾಮಾನ್ಯಯುದ್ಧದಲ್ಲಿ ಸತ್ತವು. ೯೫. ದನಗಳು ಓಡುವಾಗ ನಮ್ಮ ಹೆಣವನ್ನು ತುಳಿದುಕೊಂಡು ಓಡುತ್ತವೆಯಲ್ಲವೇ ? ದನಗಳನ್ನು ಶತ್ರುಗಳು ಹಿಡಿದರೆ ನಾವು ಬದುಕಿರಲಾರೆವು. ತುರುಗಾಳಗದಲ್ಲಿ ಸಾಯುವುದು ನಮ್ಮ ಪುಣ್ಯವೇ ಸರಿ (ಅದೃಷ್ಟ ಎಂದು ಹಾಯ್ದು ಪ್ರಸಿದ್ಧರಾದ ಗೋಪಾಲಕರು ಪೌರುಷಪ್ರದರ್ಶನಮಾಡಿ ಬರಲು ಕುದುರೆಯ ರಾವುತರು ಕುದುರೆಗಳನ್ನು ಮುನ್ನುಗ್ಗಿಸಿ ಅವರನ್ನು ಬೆನ್ನಟ್ಟಿ ದೇವಾಲಯಕ್ಕೆ ದೊಡ್ಡಮರವನ್ನು ಕಡಿಯುವಂತೆ ಚೂರುಚೂರಾಗಿ ಕತ್ತರಿಸಿದರು. ವ|| ಆಗ ಒಬ್ಬ ಗೋಪಾಲಕನು ಅಷ್ಟುಮಂದಿಯ ಸಾವನ್ನು ಕಂಡು ಮನಸ್ಸಿನಲ್ಲಿ ಕೋಪವು ಹೆಚ್ಚಿಯೂ ಪಶುಗಳ ನಾಶವನ್ನು ಸಹಿಸಲಾರದೆಯೂ ವಿರಾಟನಗರಕ್ಕೆ ಬಂದು ಉತ್ತರನಿಗೆ ಆ ವಿಷಯವನ್ನು ತಿಳಿಸಿದನು. ೯೬. ನಗರದ ಹಿಂಗಾವಲಿಗೆ ರಾಜನು ನನ್ನನ್ನು ನಿಯಮಿಸಿ ಹೋದನು. ಆದರೂ ಪಶುಗಳನ್ನು ಸೆರೆಹಿಡಿಯವುದಕ್ಕೆ ನಾನು ಅವಕಾಶಕೊಡುವುದಿಲ್ಲ, ನನ್ನ ಇದಿರಾಗಿ ಕೋಟಿ ರಾವಣರು ಬಂದರೆ ತಾನೆ ನನ್ನನ್ನು ಗೆಲ್ಲಲು ಸಾಧ್ಯವೇ ? ಈ ನನಗೆ ಸಾರಥಿಯಾಗುವವನನ್ನು
Page #411
--------------------------------------------------------------------------
________________
೪೦೬ | ಪಂಪಭಾರತಂ
ವll ಕೇಳ್ತಾ ಪೂಜ್ ಪೂಾಗೆ ದೌಪದಿಗೆ ಬಚಿಯನಟ್ಟ ಬರಿಸಿಉlು ಸಾರಥಿ ಮಾಡು ಮತ್ನ ಸುತನುತ್ತರನಂ ತದಾತಿಸೆನ್ನ ಕೂ
ಪಾರದ ಪಾರಮಂ ತಡೆಯದೆಯುವನೆಂಬುದುಮಂತ ಬಂದು ಪಂ | ಕೇರುಹವಕ್ಕೆ ಮತ್ನ ಸುತನಂ ನುಡಿದಳ ನಿನಗಾಜಿರಂಗದೊಳ್
ಸಾರಥಿಯಿಡಪ್ಪುದು ಶಿಖಂಡಿಯೆ ನಿನ್ನೊರಗುಂತೆ ಗಂಡರಾರ್ || ೯೭
ವ|| ಎಂಬುದುಂ ಬೃಹಂದಳೆಯಲ್ಲಿರುತ್ತರಂ ತನ್ನ ತಂಗೆಯುತ್ತರೆಯನ ಬಳಿಯನಟ್ಟಿ ಬರಿಸಿ
ಉll.
ಸಾರಥಿಯಫೊಡಪ್ಪನನಗೀತನ ಪೋ ಪರೇವರಿನ್ ನರಂ ಬಾರನೆನುತ್ತ ತನ್ನ ರಥಮಂ ತರವೇತ್ತಿರದೆಯ ಘೋರ ಕಾಂ | ತಾರಮನೊಂದು ಬೇಗ ಪರಿವಂತು ರಥಂ ಪರಿದತ್ತು ವೈರಿ ಕಾಂ
ತಾರಮನಸ್ವೀಲಂಕದ ಬೃಹಂದಳೆ ಚೋದಿಸೆ ಚೋದ್ಯಮಪ್ಪಿನಂ | ವ|| ಅಂತು ಕಿಚಿದಂತರಮಂ ಪೋಗವೋಗಚಂt ಕರಿಘಟಿ ನೀಳಮೇಘಘಟೆಯಂತ ತುರಂಗದಲಂ ಸಮುದ್ರದೊಳ್
ತರತರದಿಂದಮೇಟ್ಟಿ ತರೆಯಂತ ರಥಂ ಮಕರಂಗಳಂತಗು ರ್ವುರಿವರಿಯುತ್ತುಮಿರ್ಪಣಿ ಬೃಹದ್ಬಡಬಾನಳನಂತ ತೋಜಿ ಭೀ
ಕರತರವಾದುದುತ್ತರನ ಕಣೆ ಸುಯೋಧನನಸಾಗರಂ || ಈಗಲೇ ತನ್ನಿರಿ ಎಂದು ಉತ್ತರಕುಮಾರನು ವಿಜೃಂಭಿಸಲು (ಜಂಬ ಕೊಚ್ಚಲು) ಅದೆಲ್ಲವನ್ನೂ ಅರ್ಜುನನು ಕೇಳುತ್ತಿದ್ದನು. ವ|| ತಕ್ಷಣವೇ ಬ್ರೌಪದಿಗೆ ದೂತರ ಮೂಲಕ ಸಮಾಚಾರವನ್ನು ಕಳುಹಿಸಿ ಬರಮಾಡಿದನು. ೯೭. 'ಮತ್ಯನ ಮಗನಾದ ಉತ್ತರನಿಗೆ ನನ್ನನ್ನು ಸಾರಥಿಯನ್ನಾಗಿ ಮಾಡು. ಅವನ ಶತ್ರುಸೇನಾಸಮುದ್ರವನ್ನು ನಾನು ಜಯಿಸಿ ಬಿಡುತ್ತೇನೆ ಎಂದು ಹೇಳಿದನು. ಬ್ರೌಪದಿಯು ಉತ್ತರನಿಗೆ ಹಾಗೆಯೇ ಬಂದು ತಿಳಿಸಿದಳು. ಯುದ್ಧರಂಗದಲ್ಲಿ ನಿನಗೆ ಸಾರಥಿಯಾಗಬೇಕಾದರೆ ಶಿಖಂಡಿಯೇ ಆಗಬಹುದು. ನಿನಗೆ ಸಮಾನರಾದ ಶೂರರಾಗಿದ್ದಾರೆ ? ಎಂದಳು. ವ|ಉತ್ತರನು ತನ್ನ ತಂಗಿಯಾದ ಉತ್ತರೆಯ ಮೂಲಕ ಸಮಾಚಾರವನ್ನು ಕಳುಹಿಸಿ ಬೃಹಂದಳೆಯನ್ನು ಬರಮಾಡಿದನು. ೯೮. ಸಾರಥಿಯಾಗುವುದಾದರೆ ಈತನೇ ಸಮರ್ಥ ಬಿಡು; ಇತರರು ಏನು ಮಾಡಿಯಾರು ? ಇನ್ನು ಯಾರ ಸಹಾಯವನ್ನೂ ನಾನು ಅಪೇಕ್ಷಿಸುವುದಿಲ್ಲ. ಎಂದು ಹೇಳುತ್ತ ತನ್ನ ತೇರನ್ನು ತರಹೇಳಿ ಸಾವಕಾಶಮಾಡದೆ ಹೊರಟನು. ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ಶೂರನಾದ ಬೃಹಂದಳೆಯು ಆಶ್ಚರ್ಯವಾಗುವ ಹಾಗೆ ತೇರನ್ನು ನಡೆಸಿದನು. ಶತ್ರುಗಳೆಂಬ ಕಾಡಿನ ಕಡೆಗೆ ತೇರು ಧಾವಿಸಿತು. ವll ಹಾಗೆ ಸ್ವಲ್ಪ ದೂರ ಹೋಗುತ್ತಲು ೯೯. ಆನೆಯ ಸಮೂಹವು ಕರಿಯ ಮೋಡಗಳ ಸಮೂಹದಂತೆಯೂ ಕುದುರೆಯ ಸೈನ್ಯವು ಸಮುದ್ರದಲ್ಲಿ ವಿಧವಿಧವಾಗಿ ಏಳುವ ಅಲೆಗಳಂತೆಯೂ ತೇರುಗಳು ಮೊಸಳೆಗಳಂತೆಯೂ ದೊಡ್ಡ ಕಿಚ್ಚಿನಂತೆ ಹರಿದುಬರುತ್ತಿರುವ ಪದಾತಿಸೈನ್ಯವು ದೊಡ್ಡ ಬಡಬಾಗ್ನಿಯಂತೆಯೂ
Page #412
--------------------------------------------------------------------------
________________
ಅವಮಾಶ್ವಾಸಂ) ೪೦೭ ವ|| ಆಗಳದಂ ಕಂಡುತ್ತರನೊತ್ತರವೆತ್ತಿದಂತೆ ಬೆರ್ಚಿ ಬಿಗಡುಗೊಂಡುಉil ನೋಡಲಟುಂಬವೆಂದೂಡಿದನಾಂತಿದಾರ್ ತವಿಪನ್ನರೆಂದು ನಾ
ಕೂಡ ವಿರಾಟಸೂನು ರಥದಿಂದಿಳಿದೋಡಿದೊಡೆಯ ಪೂಣ್ಣು ಚ | ರ್ಚೊಡೆ ಕಿರೀಟ ತನ್ನನಚಿಪುತ್ತ ಶಮಿಾದ್ರುಮದಲಿಗಾತನಂ' ನೀಡಿರದುಯ್ದು ನೀಡಿಸಿದನಾತನಿನಲ್ಲಿಯ ಕೈದುವೆಲ್ಲಮಂ || ೧೦೦
ವ|| ಅಂತು ಗಾಂಡೀವಿ ಗಾಂಡೀವಂ ಮೊದಲಾಗೆ ದಿವ್ಯಶರಾಸನಶರಧಿ ವಿಚಿತ್ರತನುತ್ರಂಗಳೆಲ್ಲಮಂ ಗೆಲ್ಲಮಂ ತನಗಾವಗಂ ಕೊಲ್ವಂತೆ ಕೊಂಡು ಪಗೆವರ ಗಂಟಲ ಬಳೆಯನೊಡೆದು ಕಳೆವುದನನುಕರಿಸುವಂತೆ ತೀವಿ ತೊಟ್ಟ ಮುಂಗೈಯ್ಯ ಬಳೆಗಳನೊಡೆದು ಕಳೆದುಚಂ! ಪಿಣಿಲಂ ಕುರುಧ್ವಜಿನಿ ತೊಟ್ಟನ ಬಾಯನೆ ಬಿಟ್ಟುದಂದು ಗಂ.
ಡುಡೆಯುಡೆ ಗಂಡುಗಟ್ಟುದು ನೆಗಟ್ಯ ಗಾಂಡಿವಮಂ ತಗುಳು ಜೇ | ವೊಡೆಯ ಸಿಡಿ ಸಿಡಿಲು ಪೊಡವಂತವೊಲಾಯ್ತನೆ ಗಂಡಗಾಡಿ ನೂ
ರ್ಮಡಿ ಮಿಗಿಲಾದುದಾ ರಥಮನೇಲಲೊಡಂ ಪಡೆಮಚ್ಚೆಗಂಡನಾ || ೧೦೧
ವ|| ಅನ್ನೆಗಮ ಪರಸೈನ್ಯಭೈರವನ ಬರವಿಂಗಳ್ಳಿ ಗಾಡಿಗೊಡ್ಡಿದ ಸೊಡರಂತೆ ನಡನಡ ನಡುಗುವ ಕುರುದ್ವಜಿನಿಯಂ ಕಂಡು ಸುಯೋಧನಂಗೆ ಗಾಂಗೇಯನಿಂತೆಂದಂ
ಕಾಣಲು ದುರ್ಯೋಧನನ ಸೇನಾಸಮುದ್ರವು ಉತ್ತರನ ಕಣ್ಣಿಗೆ ಅತ್ಯಂತ ಭಯಂಕರವಾಗಿ ಕಂಡಿತು. ವ| ಅದನ್ನು ನೋಡಿ ಉತ್ತರನು ಇದ್ದಕ್ಕಿದ್ದ ಹಾಗೆ ಆಕ್ರಮಿಸಲ್ಪಟ್ಟವನ ಹಾಗೆ ಬೆಚ್ಚಿ ಭಯವನ್ನು ಹೊಂದಿದನು. ೧೦೦. 'ನೋಡುವುದಕ್ಕೆ, ಅಸಾಧ್ಯವಾದ ಇದನ್ನು ಪ್ರತಿಭಟಿಸಿ ನಾಶಮಾಡುವವರಾರು' ಎಂದು ಉತ್ತರನು ನಾಚಿಕೆಗೆಟ್ಟು ತೇರಿನಿಂದಿಳಿದು ಓಡಿದನು. (ಹಿಂದ) ಹೆಮ್ಮಯಿಂದ ಪ್ರತಿಜ್ಞೆಮಾಡಿ ಈಗ ಹೆದರಿ ಭಯದಿಂದ ಓಡಿಹೋಗುತ್ತಿರುವ ಉತ್ತರನಿಗೆ ಅರ್ಜುನನು ತನ್ನ ಪರಿಚಯವನ್ನು ಮಾಡಿಕೊಟ್ಟು ಅವನನ್ನು ಬನ್ನಿಯ ಮರದ ಹತ್ತಿರಕ್ಕೆ ತಕ್ಷಣ ಕರೆದುಕೊಂಡು ಹೋಗಿ ಅವನಿಂದ ಆಯುಧಗಳೆಲ್ಲವನ್ನೂ ತನಗೆ ನೀಡುವ ಹಾಗೆ ಮಾಡಿದನು - (ತೆಗೆದುಕೊಂಡನು) ವಹಾಗೆ ಅರ್ಜುನನು ಗಾಂಡೀವವೇ ಮೊದಲಾದ ದಿವ್ಯವಾದ ಬಿಲ್ಲುಬತ್ತಳಿಕೆಗಳನ್ನೂ ವಿಚಿತ್ರವಾದ ಕವಚಗಳನ್ನೂ ತನಗೆ ವಿಜಯಸೂಚಕವಾಗಿಯೇ ಅಂಗೀಕರಿಸಿದನು. ಶತ್ರುಗಳ ಗಂಟಲ ಬಳೆಯನ್ನು ಒಡೆದು ಹಾಕುವುದನ್ನು ಅನುಸರಿಸುವಂತೆ ಪೂರ್ಣವಾಗಿ ತೊಟ್ಟಿದ್ದ ಮುಂಗಯ್ಯನ ಬಳೆಗಳನ್ನು ಒಡೆದುಹಾಕಿದನು. ೧೦೧. ಕೂದಲಿನ ಗಂಟನ್ನು (ಹೆರಳನ್ನು) ಬಿಚ್ಚಲು ಕೌರವ ಸೈನ್ಯವು ಇದ್ದಕ್ಕಿದ್ದ ಹಾಗೆ ಆಶ್ಚರ್ಯ ಮತ್ತು ಭಯದಿಂದ ಬಾಯಿಬಿಟ್ಟಿತು. ಪುರುಷನಿಗೆ ಯೋಗ್ಯವಾದ ಗಂಡುಗಚ್ಚೆಯ ಉಡುಪನ್ನು ಧರಿಸಲು ತನ್ನ ಪೌರುಷವನ್ನು ನೀಗಿತು. ಗಾಂಡೀವವನ್ನು ಹಿಡಿದು ಹೆದೆಯಿಂದ ಶಬ್ದಮಾಡಲು ಸಿಡಿಲು ಸಿಡಿದು ಹೊಡೆಯುವ ಹಾಗಾಯಿತು ಎನ್ನಲು ಪಡೆಮಚ್ಚೆಗಂಡನಾದ ಅರ್ಜುನನು ರಥವನ್ನು ಹತ್ತಲು ಅವನ ಪೌರುಷವೂ ಸೌಂದರ್ಯವೂ ನೂರರಷ್ಟು ಹೆಚ್ಚಾಯಿತು. ವ|| ಅಷ್ಟರಲ್ಲಿ ಆ ಕಡೆ
Page #413
--------------------------------------------------------------------------
________________
೪೦೮ / ಪಂಪಭಾರತಂ ಚoll ಅವಧಿಯ ಲೆಕಮಂ ನೆಸಿಪಿ ನಗೆ ಮಾಣದೆ ಕಾದಲೆಂದು ಬಂ
ದವನಿವನರ್ಜುನಂ ತೂಡರ್ದು ನಿಲ್ಲದೆ ನೀನೊಡಗೊಂಡು ಪೋಗು ಗೋ | ವಹಮನಂಗರಾಜ ಕೃಪ ಕುಂಭಭವ ಪ್ರಮುಖ ಪ್ರವೀರರೆಂ ಬಿವರ್ವೆರಸಾಂಪೆನಾನಿನಿಸನೀ ಯಡೆಯೋಳ್ ಕದನತ್ರಿಣೇತ್ರನಂ |
೧೦೨ ವl ಎಂಬುದುಂ ಸುಯೋಧನಂ ಪಿರಿದುಮಾಕುಳಂಬೆರಸು ಗೋಕುಲಮಂ ಕೊಂಡುಪೋಗೆ ಪೋಗಲೀಯದುತ್ತರನಂ ರಥಮಂ ಚೋದಿಸೆಂದು ಮುಟ್ಟೆವಂದುಮ|| ಪಗೆ ತೀರ್ಗುಂ ಬಗೆ ತೀರ್ಗುಮಾ ಕುರುಕುಳಪ್ರಖ್ಯಾತನಂ ಕಾದಿ ತೂ
೬ಗೆ ಗೋವೃಂದಮನಾಂ ಮಗುಟ್ಟಿದವನೆಂದಾರ್ದಚ್ಚು ತನ್ನಂಕದಂ | ಬುಗಳೊಂದೊಂದಲೋಂದು ಲಕ್ಷ ಬಲಮಂದಬಾಡ ದುರ್ಯೋಧನಂ
ಮಿಗೆ ಸೋಲ್ನೋಡೆ ಮಗುಟ್ಟಿದಂ ತುಜುಗಳ ವಿದ್ವಿಷವಿದ್ರಾವಣಂ ll೧೦೩ ಚಂll ಅದಟರ ಚೆನ್ನಪೊಂಗರ ಸಬಂಗಳ ತೋಯ್ತುಟಿಯೊಳ್ ತೊಡಂಕಿ ನಿ
ಲ್ಲದೆ ಪೂಣಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಜುವ | ಗದ ನಿಡುಗೋಡು ಮೇಡುಮಮರುತ್ತುಮಿಳುಂಕಿದ ಕೆಚ್ಚಲೆತ್ತಮ ತಿದ ಕುಡಿವಾಲಮಂದೆಸೆಯ ಕರ್ಬಸುಗಳ ಪರಿಗೊಂಡುವಾಜಿಯೋ | ೧೦೪
ಪರಸೈನ್ಯಭೈರವನಾದ ಅರ್ಜುನನ ಬರವಿಕೆಗೆ ಹೆದರಿ ಗಾಳಿಗೊಡ್ಡಿದ ದೀಪದ ಹಾಗೆ ವಿಶೇಷವಾಗಿ ನಡುಗುತ್ತಿರುವ ಕೌರವಸೈನ್ಯವನ್ನು ಕಂಡು ದುರ್ಯೋಧನನಿಗೆ ಭೀಷ್ಮನು ಹೀಗೆಂದನು. ೧೦೨. ಅಜ್ಞಾತವಾಸದ ಗಡುವಿನ ಲೆಕ್ಕವನ್ನು ಪೂರ್ಣಮಾಡಿ ಸತ್ಯವಾಕ್ಕಿಗೆ ತಪ್ಪದೆ ನಡೆದು ಯುದ್ಧಮಾಡುವುದಕ್ಕಾಗಿ ಬಂದ ಇವನು ಅರ್ಜುನ. ಇವನಲ್ಲಿ ಸಿಕ್ಕಿ ನಿಂತುಕೊಳ್ಳದೆ ನೀನು ಪಶುಸಮೂಹವನ್ನು ಕರ್ಣ, ಕೃಪ, ದ್ರೋಣರೇ ಮುಖ್ಯರಾದ ಯೋಧಾಗ್ರೇಸರರನ್ನು ಒಡಗೊಂಡು ಹಿಂತಿರುಗಿಸು. ಈ ಸ್ಥಳದಲ್ಲಿ ನಾನು ಕದನತ್ರಿಣೇತ್ರನಾದ ಅರ್ಜುನನನ್ನು ಸ್ವಲ್ಪಮಟ್ಟಿಗೆ ಎದುರಿಸುತ್ತೇನೆ ಎಂದನು. ವ|| ದುರ್ಯೊಧನನು ವಿಶೇಷಗಾಬರಿಯಿಂದ ಕೂಡಿ ಪಶುಸಮೂಹವನ್ನೊಡಗೊಂಡು ಹೋಗಲು ಹಾಗೆ ಹೋಗುವುದಕ್ಕೆ ಬಿಡದೆ ಉತ್ತರವನ್ನು ತೇರನ್ನು ನಡೆಸುವಂತೆ ಹೇಳಿ (ಅರ್ಜುನನು ದುರ್ಯೊಧನನ) ಸಮೀಪಕ್ಕೆ ಬಂದನು. ೧೦೩. ಶತ್ರುವೂ ನಾಶವಾಗುತ್ತದೆ. ಇಷ್ಟಾರ್ಥವೂ ನೆರವೇರುತ್ತದೆ. ಆದುದರಿಂದ ಕುರುಕುಲದಲ್ಲಿ ಪ್ರಖ್ಯಾತನಾದ ಈ ದುರ್ಯೋಧನನೊಡನೆ ನಾನು ಯುದ್ದಮಾಡಿ ಗೋಸಮೂಹವನ್ನು ಹಿಂತಿರುಗಿಸುತ್ತೇನೆ ಎಂದು ಆರ್ಭಟಿಸಿ ಹೊಡೆದು ತನ್ನ ಪ್ರಸಿದ್ದವಾದ ಒಂದೊಂದು ಬಾಣದಿಂದಲೂ ಲಕ್ಷಸೈನ್ಯವು ನಾಶವಾಗಲು ದುರ್ಯೋಧನನು ಪೂರ್ಣವಾಗಿ ಸೋತು ಓಡಿಹೋದನು. ಅರ್ಜುನನು ಗೋವುಗಳನ್ನು ಹಿಂತಿರುಗಿಸಿದನು. ೧೦೪. ಶೂರರ ಮತ್ತು ಪರಾಕ್ರಮಶಾಲಿಗಳ ಶವಗಳ ತುಳಿದಾಟದಲ್ಲಿ ಸಿಕ್ಕಿಕೊಂಡು ನಿಂತುಕೊಳ್ಳದೆ ಹೊರಟು ತಮ್ಮ ಮನಸ್ಸಿನಲ್ಲಿ ವಿಶೇಷವಾಗಿ ಹೆದರಿದಂತೆ ಕಾಣುವ ಕೊನೆ ಬಾಗಿಯೂ ನೀಳವಾಗಿಯೂ ಇರುವ ಕೊಂಬುಗಳೂ ಹಿಣಿಲೂ, ಒಳಗೆ ಸೇರಿಕೊಂಡು ಬಿಗಿದುಕೊಂಡಿರುವ ಕೆಚ್ಚಲೂ, ಸಂಪೂರ್ಣವಾಗಿ ಮೇಲೆತ್ತಿಕೊಂಡಿರುವ ಬಾಲದ
Page #414
--------------------------------------------------------------------------
________________
TV9 999
ಚಂ|| ಪಟುವಟಿಯಂ ತಗುಳಳುರ್ವ ಬೇಗವೊಲೆಚ್ಚ ಶರಾಳಿಗಳ ಛಟಿಲ್
ಛಟಿಲೆನೆ ಪಾಯ ಪಾಯ್ಕ ಬಿಸುನೆತ್ತರ ಸುಟ್ಟುರೆ ಚಾತುರಂಗಮಂ | ಕಲಕುಮಾಗೆ ಪೇಪಸರಿನ ಪಾಯಿಸಿ ತೇರನೆಯ ತೊ ತಂದುಟಿದತ್ತು ವೈರಿಬಲಮಲ್ಲಮನಮನ ಗಂಧವಾರಣಂ || ೧೦೫ ಕುರುಬಲದೊಳ್ ಕರಂ ನಗು ಬೀರರ ಚೆನ್ನರ ಸಂದ ಚೆನ್ನವೊಂ ಗರ ತಲೆ ತಾಪಣ್ ಕೆದಕಿದಂತೆ ನಿರಂತರವಾಜಿರಂಗದೊಳ್ | ಪರೆದಿರೆ ಲೋಹಿತಾಂಬುಧಿಯೊಳಾನಗಳಟ್ಟೆಗಳಾಡೆ ನೋಡಲ
ಚರಿಯುಮಗುರ್ವುಮದ್ಭುತಮುವಾಯ್ತು ರಣಂ ಕದನತ್ರಿಣೇತ್ರನಾ || ೧೦೬
ವ|| ಆಗಳದಂ ಕಂಡಂಗರಾಜಂ ರಾಜರಾಜನ ನಡಪಿದುದುಮಂ ತನ್ನ ಬಲ್ಲಾಳನಮುಮಂ ನೆನೆದು ವಿಕರ್ಣಂಬೆರಸರ್ಣವನಿನಾದದಿಂದಾರುತ್ತುಂ ಬಂದ ಗುಣಾರ್ಣವನೊಳ್ ತಾರೆಚಂl ಸಮೆದುದು ಪೋಗು ಗೋಗ್ರಹಣದಲ್ಲಿಯೇ ಭಾರತಮಂಬ ಮಾತನಂ
ದಮರ ನರೋರಗರ್ ನುಡಿಯ ರೌದ್ರಶರಂಗಳಿನೆಚ್ಚು ಯುದ್ಧದೊಳ್ | ಸಮಸಮನಾಗಿ ಕಾದಿದೊಡೆ ಕರ್ಣನ ವಕ್ಷಮನೆಚ್ಚು ಗರ್ವಮಂ ಸಮಯಿಸಿ ಕೊಂದನಂಕದ ವಿಕರ್ಣನನೊಂದ ವಿಕರ್ಣದಿಂ ನರಂ || ೧೦೭
ತುದಿಯೂ ಪ್ರಕಾಶಿಸುತ್ತಿರಲು ಕರಿಯ ಹಸುಗಳು, ಯುದ್ಧರಂಗದಲ್ಲಿ ಓಡಿಹೋದುವು. ವ|| ಹಾಗೆ ಹಸುಗಳನ್ನು ಹಿಂತಿರುಗಿಸಿ ಹಿಂತಿರುಗದೆ ತನಗೆ ಪ್ರತಿಭಟಿಸಿ ನಿಂತ ಶತ್ರುಸೈನ್ಯವನ್ನು ಪುಡಿಮಾಡಿ ನಾಶಪಡಿಸಿದನು. ೧೦೫. ಅರಣ್ಯಮಾರ್ಗವನ್ನನುಸರಿಸಿ ವ್ಯಾಪಿಸುವ ಕಿಚ್ಚಿನ ಹಾಗೆ ಪ್ರಯೋಗ ಮಾಡಿದ ಅರ್ಜುನನ ಬಾಣಸಮೂಹಗಳು ಛಳಿಲ್ ಛಳಿಲ್ ಎಂದು ನುಗ್ಗಿಸುತ್ತಾ ಹರಿದುಬರುತ್ತಿರುವ ಬಿಸಿರಕ್ತದ ಸುಂಟರಗಾಳಿಯಿಂದ ಚತುರಂಗಸೈನ್ಯವನ್ನು ಅಸ್ತವ್ಯಸ್ತವಾಗುವ ಹಾಗೆ ಮಾಡಿದನು. ಹೇಳುವುದಕ್ಕೂ ಒಂದು ಹೆಸರಿಲ್ಲ ಎನ್ನುವ ಹಾಗೆ ತೇರನ್ನು ಹಾಯಿಸಿ ಸೊಕ್ಕಿದಾನೆಯಂತೆ ಅರ್ಜುನನು ಶತ್ರುಸೈನ್ಯವನ್ನೆಲ್ಲ ಸಂಪೂರ್ಣವಾಗಿ ತುಳಿದು ಹಾಕಿದನು. ೧೦೬. ಕೌರವಸೈನ್ಯದಲ್ಲಿ ವಿಶೇಷಪ್ರಖ್ಯಾತರಾದ ವೀರರ ಸೌಂದರ್ಯಶಾಲಿಗಳ ಪ್ರಸಿದ್ದರಾದ ಶೂರರುಗಳ ತಲೆಗಳು ತಾಳೆಯ ಹಣ್ಣು ಹರಡಿರುವ ಹಾಗೆ ಅವಿಚ್ಛಿನ್ನವಾಗಿ ಯುದ್ಧಭೂಮಿಯಲ್ಲಿ ಚದುರಿದುವು, ರಕ್ತಸಮುದ್ರದಲ್ಲಿ ಆನೆಯ ಶರೀರಗಳು ಆಡುತ್ತಿರಲು ಕದನತ್ರಿಣೇತ್ರನಾದ ಅರ್ಜುನನ ಯುದ್ಧವು ನೋಡುವುದಕ್ಕೆ ಆಶ್ಚರ್ಯವೂ ಭಯಂಕರವೂ ಅದ್ಭುತವೂ ಆಯಿತು. ವ|| ಆಗ ಕರ್ಣನು ಅದನ್ನು ನೋಡಿ ದುರ್ಯೋಧನನು ತನ್ನನ್ನು ಸಾಕಿದುದನ್ನೂ ತನ್ನ ಪರಾಕ್ರಮವನ್ನೂ
Page #415
--------------------------------------------------------------------------
________________
೪೧೦ | ಪಂಪಭಾರತಂ
ವ|| ಅಂತು ಕರ್ಣನ ನೋವುಮಂ ವಿಕರ್ಣನ ಸಾವುಮಂ ಕಂಡುಉll ತಕಿನ ಕುಂಭಸಂಭವ ನದೀಜ ಕೃಪ ಪ್ರಮುಖ ಪ್ರವೀರರೆ
ಕೊಯಿನೊರ್ವರೋರ್ವರೆ ಬಿಗುರ್ತಿರದಾಂತು ನಿಶಾತ ಬಾಣ ಜಾ | ಲಕ್ಕೆ ಸಿಡಿಲು ಜೋಲ್ಲು ಸೆರಗು ಬಗೆದೋಡಿದರೊಂದು ಪೊಟ್ಟಮೊಂ
ದರ್ಕಮಿದಿರ್ಚಲಾಜಿದೆ ಮನಂಗಲಿಗಳ ಕದನತ್ರಿಣೇತ್ರನಾ || ೧೦೮ ಕಂ|| ಮನದೊಳ್ ಕರುಣಿಸಿ ಸಂಮೋ
ಹನಾಸ್ತದಿಂದೆಚ್ಚು ಬೀರರು ಬೀರದ ಶಾ | ಸನಮನೆ ನಿಳಿಸುವ ಬಗೆಯಿಂ ದನಿಬರ ಪದವಿಗೆಯನೆಳೆದುಕೊಂಡಂ ಹರಿಗಂ ||
೧೦೯ ವಗ ಅಂತು ವರ ಶತಿ ವಿಶದಯಶಃಪಟಂಗಳಂ ನನ್ನಿಪಟಂಗೊಳ್ವಂತ ವಿವಿಧ ಧ್ವಜಪಟಂಗಳಂ ಕೊಂಡು ಗೆಲ್ಲಂಗೊಂಡು ತಾನುಮುತ್ತರನುಂ ವಿರಾಟಪುರಕ್ಕೆ ಮಗುಟ್ಟು ಬರ್ಪಾಗಲ್ಉll ಸೂಸುವ ಸೇಸೆ ಬೀಸುವ ಚಳಚಮರೀರುಹಮಯಿಂ ರಣಾ
ಯಾಸ ಪರಿಶ್ರಮಾಂಬು ಲವಮಂ ತವ ಪೀರೆ ಪುರಾಂಗನಾಮುಖಾ | ಬ್ಯಾಸವಗಂಧದೊಳ್ ಬೆರಸಿದೊಂದಲರೊಯ್ಯನೆ ತೀಡ ಪೊಕನಾ ವಾಸವನಂತೆ ಮತ್ಥ ಮಹಿಪಾಳಕಮಂದಿರಮಂ ಗುಣಾರ್ಣವಂ | ೧೧೦
ಮನುಷ್ಯರೂ ಉರಗರೂ (ಮೂರು ಲೋಕದವರೂ) ಹೇಳುವ ಹಾಗೆ ಅರ್ಜುನನು ಭಯಂಕರವಾದ ಬಾಣಗಳಿಂದ ತನಗೆ ಯುದ್ಧದಲ್ಲಿ ಸರಿಸಮವಾಗಿ ಕಾದಿದ ಕರ್ಣನ ಎದೆಗೆ ಹೊಡೆದು ಅವನ ಅಹಂಕಾರವನ್ನು ಕಡಿಮೆ ಮಾಡಿ ಶೂರನಾದ ವಿಕರ್ಣನನ್ನು ಒಂದೆ ಬಾಣದಿಂದ ಕೊಂದನು. ವ|| ಹಾಗೆ ಕರ್ಣನ ನೋವನ್ನೂ ವಿಕರ್ಣನ ಸಾವನ್ನೂ ನೋಡಿ - ೧೦೮. ಸಮರ್ಥರಾದ ದ್ರೋಣ, ಭೀಷ್ಮ ಕೃಪರೇ ಮುಖ್ಯರಾದ ವೀರಾಗ್ರೇಸರರೂ ಗುಂಪುಗುಂಪಾಗಿ ಒಬ್ಬೊಬ್ಬರೂ ಅರ್ಜುನನ ಹರಿತವಾದ ಬಾಣಸಮೂಹಗಳಿಗೆ ತಡೆಯಲಾರದೆ ಹೆದರಿ ಓಡಿಹೋದರು. ಮನಸ್ಸಿನಲ್ಲಿ ಮಾತ್ರ ಶೂರರಾದ ಅವರು ಕದನತ್ರಿಣೇತ್ರನಾದ ಅರ್ಜುನನ ಒಂದು ಹೊತ್ತಿನ ಯುದ್ದಕ್ಕೂ ಪ್ರತಿಭಟಿಸಿ ನಿಲ್ಲಲಾರದೆ ಹೋದರು. ೧೦೯. ಆಗ ಅರ್ಜುನನು ಅವರ ಮೇಲೆ ದಯೆತೋರಿ ಸಮ್ಮೋಹನಾಸ್ತವನ್ನು ಪ್ರಯೋಗಿಸಿ ಅವರು ಮೈಮರೆತಿರಲು ವೀರಶಾಸನವನ್ನು ಸ್ಥಾಪಿಸುವ ಮನಸ್ಸಿನಿಂದ ಅವರೆಲ್ಲರ ಧ್ವಜವನ್ನೂ ಕಸಿದುಕೊಂಡನು. ವರೆಗೆ ಹಾಗೆ ಶ್ರೇಷ್ಠವಾದ ಚಂದ್ರನಂತೆ ವಿಸ್ತಾರವಾಗಿರುವ ಯಶಸ್ಸೆಂಬ ವಸ್ತಗಳನ್ನು ಸತ್ಯಶಾಸನದ ಕಡತವನ್ನು ಸ್ವೀಕರಿಸುವ ಹಾಗೆ ನಾನಾ ರೀತಿಯ ಬಾವುಟಗಳನ್ನು ತೆಗೆದುಕೊಂಡು ಜಯಪ್ರದನಾಗಿ ತಾನೂ (ಅರ್ಜುನನೂ) ಉತ್ತರನೂ ವಿರಾಟನಗರಕ್ಕೆ ಹಿಂತಿರುಗಿ ಬಂದರು. ೧೧೦. ಸೂಸುತ್ತಿರುವ ಮಂತ್ರಾಕ್ಷತೆಗಳೂ ಚಲಿಸುತ್ತಿರುವ ಚಾಮರಗಳೂ ಒಟ್ಟಿಗೆ ಸೇರಿ ಯುದ್ಧಾಯಾಸದಿಂದುಂಟಾದ ಬೆವರುಹನಿಗಳನ್ನು
Page #416
--------------------------------------------------------------------------
________________
ಅಷಮಾಶ್ವಾಸಂ | ೪೧೧ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೂತನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್
ಅಷ್ಟಮಾಶ್ವಾಸಂ
ಸಂಪೂರ್ಣವಾಗಿ ಹೀರಲು ಪುರಸ್ತ್ರೀಯರ ಮುಖಕಮಲದ ನಸುಗಂಧದಿಂದ ಬೆರಸಿದ ಗಾಳಿಯು ನಿಧಾನವಾಗಿ ಬೀಸುತ್ತಿರಲು ವಿರಾಟನ ಅರಮನೆಯನ್ನು ಅರ್ಜುನನು ದೇವೇಂದ್ರನಂತೆ ಪ್ರವೇಶಮಾಡಿದನು- ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದ ವಿಕ್ರಮಾರ್ಜುನವಿಜಯದಲ್ಲಿ ಎಂಟನೆ ಆಶ್ವಾಸ.
27
Page #417
--------------------------------------------------------------------------
________________
ಕಂ
ಮ||
ನವಮಾಶ್ವಾಸಂ
ಶ್ರೀಗೆ ನೆಗಳಿಗೆ ವೀರ
ಶ್ರೀಗಾಗರಮಪ್ಪನೆಂಬ ಕಳ ಕಳ ವಿಜಯೋ । ದ್ಯೋಗದೊಳ ನೆಗನೆಂಬು ದ್ಯೋಗಿಗೆ ಮಲೆವನ್ಯನೃಪತಿಮಂಡಳಮೊಳವೇ | ಎಂದು ಜಗಜ್ಜನಮಳವನ
ಗುಂದಲೆಯಾಗಡರೆ ಬಿಡದ ಪೊಗಳುತ್ತಿರೆ ಕುಂ | ದೇಂದು ಯಶಂ ರಥದಿಂದಿದೆ ತಂದೆಗಿದನಗ್ರಜನ್ಮ ಪದ ಸರಸಿಜದೊಳ್ ||
ಅಮಗನ ಪವನತನಯನ
ನೆದಾಶೀರ್ವಚನಶತಮನಾಂತನುನಯದಿಂ |
ದೆಂಗಿದಮಳರುಮನ
ನೋವಲ್ಲು ತೆಗೆದಪ್ಪಿ ಪರಸೆ ನಲ್ವರಕೆಗಳಿಂ ||
ಚಲ ಚಲದಿನುಱದ ಪಗವರ
ತಲೆಗಳನರಿದಂದು ಬಂದು ಪಾಂಡುತನೂಜರ್ |
ತಲೆದೋರ ರಾಗಮಗುಂ
ದಲೆಯುಂ ಪೊಂಪುಟಿಯುವಾಯ್ತು ಮತ್ಸ ಗಾಗಳ್ || ಗುಡಿಯಂ ಕಟ್ಟಿಸಿ ಪೊಯ್ಲಿ ಬದ್ದವಣಮಂ ಪ್ರಾಣಕ್ಕಮರ್ಥಕ್ಕಮಿ ನ್ನೆಡ ನೇತಳಪುದೆಂದು ಕುರುಡಂ ಕಣ್ಣೆತ್ತವೋಲ್ ರಾಗದಿಂ | ದೊಡೆಯಂತಾಂ ಬಗೆದುಳ್ಳ ಸಾರ ಧನಮಂ ಮುಂದಿಟ್ಟತಿ ಪ್ರೀತಿಯಂ ಪಡೆದಂ ಮಪ್ಪ ಮಹೇಶನಂದು ಮನದೊಳ್ ತತ್ಪಾಂಡುಪುತ್ರರ್ಕಳಾ || 9 ೧. ಸಂಪತ್ತಿಗೂ ಕೀರ್ತಿಗೂ ಜಯಲಕ್ಷ್ಮಿಗೂ ಆವಾಸಸ್ಥಾನವಾಗುತ್ತೇನೆಂಬ, ಉತ್ಸಾಹಕರವೂ ಜಯಪ್ರದವೂ ಆದ ಕಾರ್ಯದಲ್ಲಿ ತೊಡಗಿರುತ್ತೇನೆನ್ನುವ ಕಾರ್ಯಶೀಲನಾದವನಿಗೆ ಪ್ರತಿಭಟಿಸುವ ಶತ್ರುರಾಜಸಮೂಹವುಂಟೇ ೨. ಎಂದು ಲೋಕದ ಜನಗಳು ಅವನ ಶಕ್ತಿಯನ್ನು ಅತಿಶಯವಾಗಿ ಅಭಿವೃದ್ಧಿಯಾಗುವ ಹಾಗೆ ಒಂದೇ ಸಮನಾಗಿ ಹೊಗಳುತ್ತಿರಲು ಕುಂದಪುಷ್ಪದಂತೆಯೂ ಚಂದ್ರನಂತೆಯೂ ಇರುವ ಯಶಸ್ಸುಳ್ಳ ಅರ್ಜುನನು ರಥದಿಂದಿಳಿದು ಬಂದ ಅಣ್ಣನ ಪಾದಕಮಲದಲ್ಲಿ ನಮಸ್ಕಾರ ಮಾಡಿದನು. ೩. ಧರ್ಮರಾಯನ ಮತ್ತು ಭೀಮನ ಸಂಪೂರ್ಣವಾದ ನೂರು ಆಶೀರ್ವಾದಗಳನ್ನೂ ಪಡೆದು ಅಮಳರನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಒಳ್ಳೆಯ ಹರಕೆಗಳಿಂದ ಹರಸಿದನು. ೪. ಪಾಂಡವರು ಉದಾಸೀನರಾಗಿರದೆ ಹಟದಿಂದ ಶತ್ರುಗಳ ತಲೆಗಳನ್ನು ಕತ್ತರಿಸಿ ಅಂದು ಕಾಣಿಸಿಕೊಳ್ಳಲು ವಿರಾಟರಾಜನಿಗೆ ಅತ್ಯತಿಶಯವಾದ ಸಂತೋಷವುಂಟಾಯಿತು. ೫. ಬಾವುಟಗಳನ್ನು ಕಟ್ಟಿಸಿದನು. ಮಂಗಳವಾದ್ಯಗಳನ್ನು ಬಾಜಿಸಿದನು. ನನ್ನ ಪ್ರಾಣಕ್ಕೂ ಐಶ್ವರ್ಯಕ್ಕೂ ಇನ್ನು ಯಾವುದರಿಂದಲೂ ವಿಘ್ನವುಂಟಾಗುವುದಿಲ್ಲ ಎಂದು ಭಾವಿಸಿ ಕುರುಡನು ಕಣ್ಣನ್ನು
Page #418
--------------------------------------------------------------------------
________________
ನವಮಾಶ್ವಾಸಂ | ೪೧೩. ಉll .ಕೇಳಿರೆ ಕಂಕಭಟ್ಟನೆ ಯುಧಿಷ್ಠಿರನಾ ವಲಲಂ ವೃಕೋದರಂ
ಬಾಳೆಯರಂ ದಲಾಡಿಪ ಬೃಹಂದಳೆ ಫಲ್ಗುಣನಂಕದಶ್ವ ಗೋ | ಪಾಳಕರೆಂಬರಾ ನಕುಲನುಂ ಸಹದೇವನುಮಾಧರೇಂ ಮಹೀ
ಪಾಳರೊಳಾದ ಕಾರ್ಯಗತಿಗಳ ಬಗೆಯ ಬಹು ಪ್ರಕಾರಮೋ ೬
ವ|| ಎಂಬ ಪುರಜನಾಳಾಪಂಗಳ ನೆಗ ವಿರಾಟನ ಮಹಾದೇವಿ ಸುದೇಷ್ಟೆ ಕೃಷ್ಣಗಾಗಳೆಲಗಿ ಪೊಡವಡ ಧರ್ಮತನೂಜಂಗೆ ವಿರಾಟನವತಮಣಿಮಕುಟನಿಂತೆಂದು ಬಿನ್ನಪಂಗೆಯ್ದಂಚಂ|| ಇರದುಟಿದಾವ ಮಂಡಲದೊಳಂ ನೃಪ ನೀಂ ದಯೆಯಿಂದಮಿಲ್ಲಿ ಬಂ
ದಿರ ದೂರವೆತ್ತುದನ್ನ ಮಜ್ವಾಲೈಸನೆನ್ನ ತನೂಜೆಗಂಕದು | ತರೆಗೆ ವಿವಾಹಮಂಗಳಮನಿನ್ನಭಿಮನ್ಯುಗೆ ಮಾಟ್ಟುದುತ್ತರೋ ತರಮನೆ ಮಾಡು ನಿನ್ನ ದಯೆಯಿಂ ಮೆಳವಂ ಯಮರಾಜನಂದನಾ || ೭
ವ|ಎಂಬುದುಮಂತಗೆಯ್ಯಂ ನಿಮ್ಮಮ್ಮ ನಣುಗಳೀಗಳಾದುವಲ್ಲ ಹಿರಣ್ಯಗರ್ಭ ಬ್ರಹ್ಮರಿಂ ತಗುಳವ್ಯವಚ್ಚಿನ್ನಮಾಗಿ ಬಂದುವು ನಿನ್ನ ದೂರಯ ನಂಟನುಮನಲ್ಲಿ ಪಡವನೆಂದು ವಿರಾಟನಂ ಸಂತಸಂಬಡೆ ನುಡಿದು ಚಾಣೂರಾರಿಯಂ ಸುಭದ್ರೆಯುಮನಭಿಮನುವುಮನೊಡ ಗೊಂಡು ಬರ್ಪುದೆಂದು ಬಟಿಯನಟ್ಟಿ ಬರವಣಿದು ಪಾಂಡವರಯ್ಯರುಂ ವಿರಾಟ ಸಮೇತಮಿದಿವೊಳಗಿ ಕಂಡಾಗಳ
ಪಡೆದ ಹಾಗೆ ವಿರಾಟನು ಸಂತೋಷಿಸಿದನು. ತನ್ನಲ್ಲಿದ್ದ ಸಾರವತ್ತಾದ ಐಶ್ವರ್ಯವನ್ನೆಲ್ಲ ಪಾಂಡವರ ಮುಂದಿಟ್ಟು ಅವರ ಮನಸ್ಸಿಗೆ ಅತ್ಯಂತ ಸಂತೋಷವನ್ನುಂಟುಮಾಡಿದನು. ೬. ಕೇಳಿರಿ, ಕಂಕಭಟ್ಟನೇ ಧರ್ಮರಾಜನು, ವಲಲನು ಭೀಮಸೇನ, ಬಾಲಕಿಯರನ್ನು ಲಕ್ಷಣವಾಗಿ ಆಡಿಸುವ ಬೃಹಂದಳೆಯು ಅರ್ಜುನ, ಪ್ರಸಿದ್ದರಾದ ಕುದುರೆ ಮತ್ತು ಗೋವುಗಳ ಪಾಲಕರಾದವರು ನಕುಲ ಮತ್ತು ಸಹದೇವರುಗಳಾಗಿದ್ದಾರೆ. ಈ ರಾಜರುಗಳಲ್ಲಿ ಆದ ಕಾರ್ಯಗಳ ಪರಿಣಾಮವನ್ನು ಯೋಚನೆಮಾಡುವುದಾದರೆ ಇವರಿಗೆ ಏನು ವಿಪರೀತ ವಿಧಿಯೋ? ವ|| ಎಂಬ ಪಟ್ಟಣಿಗರ ಮಾತುಗಳು ಪ್ರಸಿದ್ಧವಾಗಲು ವಿರಾಟನ ಮಹಾರಾಣಿಯಾದ ಸುದೇಷ್ಠೆಯು ಬ್ರೌಪದಿಗೆ ಬಗ್ಗಿ ನಮಸ್ಕಾರ ಮಾಡಿದಳು. ಧರ್ಮರಾಯನಿಗೆ ವಿರಾಟನು ಬಗ್ಗಿದ ಮಕುಟವುಳ್ಳವನಾಗಿ (ನಮಸ್ಕರಿಸಿ) ವಿಜ್ಞಾಪನೆ ಮಾಡಿದನು - ೭. ಧರ್ಮರಾಜನೇ ನೀವು ಬೇರೆ ದೇಶದಲ್ಲಿ ತಂಗದೆ ಕೃಪೆಯಿಂದ ಇಲ್ಲಿಗೆ ಬಂದಿದ್ದೀರಿ. (ಇದರಿಂದ) ನನ್ನ ದೊರೆತನ ಗೌರವಾನ್ವಿತವಾಯಿತು. ಪ್ರಸಿದ್ದಳಾದ ನನ್ನ ಮಗಳು ಉತ್ತರೆಗೆ ಉತ್ತರೋತ್ತರಾಭಿ ವೃದ್ಧಿಯಾಗುವ ಹಾಗೆ ನಿನ್ನ ಮಗನಾದ ಅಭಿಮನ್ಯುವಿನೊಡನೆ ಮದುವೆಯ ಮಂಗಳಕಾರ್ಯವನ್ನು ಮಾಡುವುದು. ನಿನ್ನ ದಯೆಯಿಂದ ನಾನು ಪ್ರಸಿದ್ಧಿಪಡೆಯುತ್ತೇನೆ. ವಗಿ ಎನ್ನಲು ಹಾಗೆಯೇ ಮಾಡುತ್ತೇನೆ. ನಿಮ್ಮ ನಮ್ಮ ಸ್ನೇಹ ಸಂಬಂಧಗಳು ಈಗ ಆದುವಲ್ಲ. ಹಿರಣ್ಯಗರ್ಭಬ್ರಹ್ಮನಿಂದ ಹಿಡಿದು ಎಡಬಿಡದೆ ಏಕಪ್ರಕಾರವಾಗಿ ಬಂದಂತಹವು. ನಿನಗೆ ಸಮಾನವಾದ ಬಂಧುವನ್ನು ನಾನೆಲ್ಲಿ ಪಡೆಯಲು ಸಾಧ್ಯ ?
Page #419
--------------------------------------------------------------------------
________________
೪೧೪ / ಪಂಪಭಾರತಂ
ಚoll
ಮುರರಿಪು ಧರ್ಮನಂದನ ಪದಾಯುಗಕ್ಕೆ ಮರುತ್ತುತಾದಿಗಳ್ ಹರಿ ಚರಣಾಂಬುಜಕ್ಕೆಅಗೆಯುತ್ಸವದಿಂದಭಿಮನ್ಯು ತಮುತ್ವ | ವರ ಲಲಿತಾಂ ಪದನಿವಹಕ್ಕೆ ಆಗುತ್ತಿರ ತನ್ಮುಖಾಬದೊಳ್
ಪರಕೆಗಳು ಪೊಣಿದುವು ಪಂಕಜದಿಂ ಮಕರಂದದಂತವೋಲ್ || ಆ
ವ|| ಅಂತು ಮಂದರಧರನುಂ ತಾಮುನೊಂದೊರ್ವರನಗಲ್ಲಿಂ ಬಡೆಯಮಾದ ಸುಖದುಃಖಗಳನನ್ನೋನ್ಮನಿವೇದನಂಗೆಯಾನಂದದಿಂ ಪೋಲಂ ಪೊಕ್ಕು ಮಜ್ಜನ ಭೋಜನಾದಿಗಳಿಂದಮಪಗತಪರಿಶ್ರಮನಂ ಮಾಡಿ ಮುರಾಂತಕನನಂತಕನಂದನನಭಿಮನ್ಯು ವಿವಾಹಕಾರ್ಯ ಪರ್ಯಾಲೋಚನೆಯೊಳೊಡಂಬಡಿಸಿ ಶುಭಲಗೋದಯದೊಳ್
ಉ ವಾರಿಧಿಘೋಷದಂತೆಸೆವ ಮಂಗಳರ್ಯರವಂಗಳಿಂ ಬಿಯಂ ಮೇರುವ ಪೊನ್ನಣಂ ನಯದೆಂಬಿನಮಿಟ್ಟಳಮಾಗೆ ವಾರನಾ | ರೀ ರಮಣೀಯ ನೃತ್ತಮಮರುತ್ತಿರೆ ಸಂದ ವಿರಾಟನೆಂದು ಕೆ ಯೀರದೀಯ ಗೆಯ್ದರಭಿಮನ್ಯುಗಮುತ್ತರೆಗಂ ವಿವಾಹಮಂ || 6 ವ|| ಅಂತಾ ವೀರನಂ ವೀರಯೊಳ್ ನೆರಪುವಂತುತ್ತರೆಯೊಳ್ ನೆರಪಿ ಕಂಸಧ್ವಂಸಿಯಂ ದ್ವಾರಾವತಿಗೆ ಕಳಿಸಿ
ಎಂದು ವಿರಾಟನಿಗೆ ಸಂತೋಷವಾಗುವ ಹಾಗೆ ಮಾತನಾಡಿ ಶ್ರೀಕೃಷ್ಣನಿಗೆ ಸುಭದ್ರೆಯನ್ನೂ ಅಭಿಮನ್ಯುವನ್ನೂ ಜೊತೆಯಲ್ಲಿ ಕರೆದುಕೊಂಡು ಬರಬೇಕು ಎಂದು ಸಮಾಚಾರವನ್ನು ದೂತರ ಮೂಲಕ ಕಳುಹಿಸಿದರು. ಅವರ ಬರುವಿಕೆಯನ್ನು ತಿಳಿದು ಪಾಂಡವರೆದುಮಂದಿಯೂ ವಿರಾಟನೊಡಗೊಂಡು ಎದುರಾಗಿ ಹೋಗಿ ಕಂಡರು. ೮. ಕೃಷ್ಣನು ಧರ್ಮರಾಜನ ಪಾದಯುಗಳಗಳಿಗೂ ಭೀಮಸೇನಾದಿಗಳು ಕೃಷ್ಣನ ಪಾದಕಮಲಕ್ಕೂ ನಮಸ್ಕಾರಮಾಡಿದರು. ಅಭಿಮನ್ಯುವು ಆ ಅಯ್ದು ಜನರ ಮನೋಹರವಾದ ಪಾದಕಮಲಗಳಿಗೆ ನಮಸ್ಕಾರಮಾಡಿದನು. ಅವರ ಮುಖಕಮಲದಲ್ಲಿ ಕಮಲದಿಂದ ಮಕರಂದವು ಉಕ್ಕಿ ಹರಿಯುವಂತೆ ಹರಕೆಗಳು ಅಭಿವೃದ್ಧಿಗೊಂಡು ಚಿಮ್ಮಿದುವು. ವ|| ಹಾಗೆ ಶ್ರೀಕೃಷ್ಣನೂ ತಾವೂ ಒಬ್ಬೊಬ್ಬರನ್ನು ಅಗಲಿದ ಬಳಿಕ ಆದ ಸುಖದುಃಖಗಳನ್ನು ಪರಸ್ಪರ ತಿಳಿಯಪಡಿಸಿ ಸಂತೋಷದಿಂದ ಪುರಪ್ರವೇಶಮಾಡಿದರು. ಧರ್ಮರಾಜನು ಕೃಷ್ಣನೊಡನೆ ಅಭಿಮನ್ಯುವಿನ ಮದುವೆಯ ವಿಚಾರವಾಗಿ ಆಲೋಚನೆ ಮಾಡಿ ಅವನನ್ನು ಒಪ್ಪಿಸಿದನು. ಒಳ್ಳೆಯ ಶುಭಮುಹೂರ್ತದಲ್ಲಿ ೯, ಮಂಗಳವಾದ್ಯವು ಕಡಲ ಮೊರೆಯಂತೆ ಘೋಷಿಸುತ್ತಿರಲು ದಾನಮಾಡಿದ ಸುವರ್ಣಕ್ಕೆ (ದಕ್ಷಿಣೆ) ಮೇರುಪರ್ವತವೂ ಸಮಾನವಾಗಲಾರದು ಎನ್ನುವಷ್ಟು ಅತಿಶಯವಾಗಿರಲು ವೇಶ್ಯಾಸ್ತ್ರೀಯರ ಮನೋಹರವಾದ ನೃತ್ಯವು ರಮಣೀಯವಾಗಿರಲು ಪ್ರಸಿದ್ಧನಾದ ವಿರಾಟಮಹಾರಾಜನು ಧಾರಾಜಲವನ್ನೆರೆದು ಕನ್ಯಾದಾನಮಾಡಲು ಉತ್ತರೆಗೂ ಅಭಿಮನ್ಯುವಿಗೂ ಮದುವೆಯನ್ನು ಮಾಡಿದನು. ವ|| ಆ ವೀರನನ್ನು ವೀರಲಕ್ಷ್ಮಿಯಲ್ಲಿ ಕೂಡಿಸುವಂತೆ ಅಭಿಮನ್ಯುವನ್ನು ಉತ್ತರೆಯಲ್ಲಿ
Page #420
--------------------------------------------------------------------------
________________
ನವಮಾಶ್ವಾಸಂ / ೪೧೫ ಮll, ಮಲೆಪರ್ ಮಂಡಳಿಕರ್ ಕರುಂಬರದಟರ್ ವೀರರ್ಕಳುಂ ತಮ್ಮ ಬಾ
ಆಲಯಂ ಬೇಡಿದ ವಸ್ತುವಾಹನಮುಮಂ ಮುಂದಿಟ್ಟು ಮೂವಿಟ್ಟಿಯೊ | ಕಲವೋಲಿಂ ಬೆಸಕೆಯ್ಯ ಸಂತವಿರುತುಂ ಕುಂತೀಸುತರ್ ತಮ್ಮ ತೋ ಧ್ವಲಮಂ ನಚ್ಚರೆ ದಾಯಿಗ ಧರೆಯನಾಳಂದದ್ದರೆಂಬೇವದಿಂ || ೧೦
ವ|| ಅಂತು ತಮ್ಮ ಪೂಣ್ಣ ವರ್ಷಾವಧಿ ನೆದೊಡಮರಾತಿಗಳಂತ್ಯಕಾಲಂ ನೆಯದುದರ್ಕುಮ್ಮಳಿಸಿ ನಮಗೆ ಕಮ್ಮಗಿರಲಾಗದು ದುರ್ಯೊಧನನಪೊಡೆ ಶ್ವೇತ ಕೃಷ್ಣಕಾರಕಂ ಕೃಷ್ಣನಂ ತನಗೆ ಮಾಡದನ್ನೆಗಂ ಮುನ್ನಮೆ ಪನ್ನಗಶಯನನಂ ನಮಗೆ ಮಾಡುವುದುತ್ತಮಪಕ್ಷವೆಂಬೀ ಪ್ರಧಾನ ಕಾರ್ಯಮಂ ತಮ್ಮೊಳಾಳೋಚಿಸಿ ವಿಕ್ರಮಾರ್ಜುನನಂ ನೀನೆ ಪೋಗಲ್ವೇಚ್ಚುಮಂಬುದು ಮಪ್ರತಿರಥಂ ರಥಮನೇ ಮನಃಪವನವೇಗದಿಂ ದ್ವಾರಾವತಿಯನೆ ರಾಜಮಂದಿರಮಂ ಪೊಕ್ಕು ದುಗ್ದಾಬಿಧವಳ ಶಯ್ಯಾತಳದೊಳ್ ಮಜದೂಅಗಿದ ಮಧುಮಥನನನೆತ್ತಲಣದೆ ಕಾಲ ದೆಸೆಯೊಳುಸಿರದೆ ಕುಳ್ಳಿರೆ ದುರ್ಯೋಧನನುಮಾಗಳೆ ಬಂದು ಬಲಿಬಂಧನನ ತಲೆದೆಸೆಯೊಳ್ ಕುಳ್ಳಿರೆ ಕಿಂದಾನುಂ ಬೇಗದಿಂಕಂil ಪವಡಿಸಿದನಂತನೊಸೆದು
ಪವಡಿಸಿ ತನ್ನೆರಡುಮಡಿಯನೊತ್ತುತಿರ್ದಾ | ಹವ ವಿಜಯಿಯಪ್ಪ ವಿಜಯನ |
ನೆ ವಲಂ ಮುಂ ಕಂಡು ಬಟಿಕೆ ನೃಪನಂ ಕಂಡಂ | ೧೧ ಕೂಡಿಸಿ ಶ್ರೀಕೃಷ್ಣನನ್ನು ದ್ವಾರಕಾಪಟ್ಟಣಕ್ಕೆ ಕಳುಹಿಸಿದನು. ೧೦. ಉದ್ಧತರಾದ ಸಾಮಂತರೂ ಸಣ್ಣಪುಟ್ಟ ರಾಜರೂ ಪರಾಕ್ರಮಶಾಲಿಗಳೂ ವೀರರೂ ತಮ್ಮ ಪ್ರಾಣವನ್ನೂ ಕೇಳಿದ ಎಲ್ಲ ವಸ್ತು ಸಮೂಹಗಳನ್ನೂ ಪಾಂಡವರ ಮುಂದಿಟ್ಟು ಮೂರು ಬಗೆಯಾದ ಬಿಟ್ಟಿಸೇವೆಯನ್ನು ಮಾಡುವ ಜನರಂತೆ ಆಜ್ಞಾಧಾರಿಗಳಾಗಿರಲು ಪಾಂಡವರು ದಾಯಿಗರಾದ ಕೌರವರು ತಮ್ಮ ರಾಜ್ಯವನ್ನು ಅಪಹರಿಸಿ ಆಳುತ್ತಿರುವ ಕೇಶವು ತಮ್ಮನ್ನು ಬಾಧಿಸುತ್ತಿದ್ದರೂ ತಮ್ಮ ಬಾಹುಬಲವನ್ನೇ ನೆಚ್ಚಿರುತ್ತಿದ್ದರು. ವ|| ಹಾಗೆ ತಾವು ಪ್ರತಿಜ್ಞೆ ಮಾಡಿದ್ದ ಗಡುವು ತೀರಿದರೂ ಶತ್ರುಗಳಿಗೆ ಅಂತ್ಯಕಾಲವು ತುಂಬದೇ ಇದ್ದುದಕ್ಕಾಗಿ ದುಃಖಪಟ್ಟು 'ನಾವು ಸುಮ್ಮನಿರಲಾಗದು, ದುರ್ಯೋಧನ ನಾದರೆ ಬಿಳಿಯದನ್ನು ಕಪ್ಪನ್ನಾಗಿ ಮಾಡುವ ಮೋಸಗಾರ. (ಶ್ವೇತಕೃಷ್ಣಕಾರಕ) ಅವನು ಕೃಷ್ಣನನ್ನು ತನ್ನವನನ್ನಾಗಿ ಮಾಡಿಕೊಳ್ಳುವುದಕ್ಕೆ ಮೊದಲೇ ಶ್ರೀಕೃಷ್ಣನನ್ನು ನಮಗೆ ಸಹಾಯಕನನ್ನಾಗಿ ಮಾಡಿಕೊಳ್ಳುವುದು ಉತ್ತಮಪಕ್ಷ ಎಂಬ ಈ ಪ್ರಧಾನ ಕಾರ್ಯವನ್ನು ತಮ್ಮಲ್ಲಿ ಆಲೋಚಿಸಿದರು. ಆ ಕಾರ್ಯಕ್ಕೆ ವಿಕ್ರಮಾರ್ಜುನನನ್ನು 'ನೀನೇ ಹೋಗಬೇಕು' ಎಂದರು. ಅಪ್ರತಿರಥನಾದ ಅವನು ರಥವನ್ನು ಹತ್ತಿ ಮನಃಪವನವೇಗ (ಮನಸ್ಸಷ್ಟೂ ಗಾಳಿಯಷ್ಟೂ ವೇಗ)ದಿಂದ ದ್ವಾರಾ ವತೀಪಟ್ಟಣವನ್ನು ಸೇರಿ ಅರಮನೆಯನ್ನು ಪ್ರವೇಶಿಸಿದನು. ಕ್ಷೀರಸಮುದ್ರದಷ್ಟು ಬೆಳ್ಳಗಿರುವ ಹಾಸಿಗೆಯ ಮೇಲೆ ನಿದ್ರಿಸುತ್ತಿದ್ದ ಕೃಷ್ಣನನ್ನು ನೋಡಿದನು. ಅವನನ್ನು ಎಬ್ಬಿಸಲು ಇಷ್ಟಪಡದೆ ಕಾಲ ದೆಸೆಯಲ್ಲಿ ಮಾತನಾಡದೆ ಕುಳಿತನು. ದುರ್ಯೋಧನನೂ ಆಗಲೇ ಬಂದು ಶ್ರೀಕೃಷ್ಣನ ತಲೆದೆಸೆಯಲ್ಲಿ ಕುಳಿತನು. ಸ್ವಲ್ಪಕಾಲದ ಮೇಲೆ ೧೧. ಮಲಗಿದ್ದ ಶ್ರೀಕೃಷ್ಣನು ಸಂತೋಷದಿಂದ ಎದ್ದು ತನ್ನ ಎರಡು ಪಾದಗಳನ್ನು ಒತ್ತುತ್ತಿದ್ದ ಯುದ್ಧದಲ್ಲಿ
Page #421
--------------------------------------------------------------------------
________________
೪೧೬ | ಪಂಪಭಾರತಂ
ವll ಕಂಡು ತನಗೆ ಪೊಡವಟ್ಟರ್ವರುಮಂ ಪರಸಿ ನೀನಿರ್ವರುಂ ಬಂದಂದಮುಮಂ ಮನೆವಾಚಿಯಂ ಪೇಟೆಮಂದೂಡಮ್ಮಮ್ಮಂ ಕೆಯ್ಯೋಂಡು ಗೆಲಿಸಯ್ಯುಮೆಂದು ಬಂದವನೆಕಂll ಮನ್ನಣೆಗೆನಗಿರ್ವರು
ರನ್ನರೆ ವಿಜಯನನೆ ಮುನ್ನ ಕಂಡುದಂರಾ | ನೆನ್ನಂ ಕೊಟ್ಟಿಂ ನಿನಗಂ
ಪನ್ನಗಕೇತನ ಚತುರ್ವಲಂಗಳನಿತ್ತಂ || - ವ|| ಎಂದು ತನ್ನೊಳ್ ಸಮಾನಬಲನಪ್ಪ ತನ್ನ ತಮ್ಮ ಕೃತವರ್ಮನುಮಂ ತನ್ನೊಡನಾಡಿಗಳಪ್ಪ ತೊಂಬತ್ತಾಜು ಸಾಸಿರ ಗೋಪಕುಮಾರರೊಡನೆ ಕೂಡಿ ಕಳಿಪಿ ವಿಕ್ರಮಾರ್ಜುನನುಂ ತಾನುಂ ವಿರಾಟಪುರಕ್ಕೆ ವಂದು ಮಜ್ಜನ ಭೋಜನಾದಿಗಳೊಳ್ ವಿಗತ ಪರಿಶ್ರಮರಾಗಿ ಮುದವಸಮಯವರುಮಾಲುಂಗುಣಂಗಳ ಮೂರ್ತಿಮಂತಂಗಳಾದಂತ ಮಂತ್ರಶಾಲೆಯಂ ಪೊಕ್ಕಿರ್ದಾಗಳಕ೦ll ಪ್ರಿಯ ವಿಷಯಕಾಂಕ್ಷೆಯಿಂದಿಂ
ದ್ರಿಯಂಗಳೆಂತಯ್ಕೆ ಮನಮನಾಶ್ರಯಿಸುಗುಮಂ || ತಯ ನಯ ಪರರಯ್ಯರುಮಾ ಶ್ರಯಿಸಿರ್ದರ್ ವಿಷಯಕಾಂಕ್ಷೆಯಿಂ ಮುರರಿಪುವಂ || ಲೋಕಕ್ಕಿದರ್ಥಶಾಸ್ತ್ರದ ಟೀಕೆನಿಸಿದ ತನ್ನ ನುಡಿ ಮನಂಗೊಳಿಸೆ ದಳ 1 ತೋಕನದ ಜಠರನಂ ನಿ ರ್ವ್ಯಾಕುಳಮಿಂತಂದು ಧರ್ಮತನಯಂ ನುಡಿದಂ 1, ೧೪
ಜಯಶಾಲಿಯಾದ ಅರ್ಜುನನನ್ನೇ ಮೊದಲು ನೋಡಿ ಬಳಿಕ ದುರ್ಯೋಧನನನ್ನು ನೋಡಿದನು. ವll ನೋಡಿ ತನಗೆ ನಮಸ್ಕರಿಸಿದ ಇಬ್ಬರನ್ನೂ ಆಶೀರ್ವದಿಸಿ ನೀವಿಬ್ಬರೂ ಬಂದ ಕಾರಣವನ್ನೂ ಗೃಹಕೃತ್ಯವನ್ನೂ ಹೇಳಿ ಎಂದನು. 'ನಮ್ಮ ನಮ್ಮನ್ನು ಅಂಗೀಕಾರ ಮಾಡಿ ಗೆಲ್ಲಿಸಬೇಕೆಂದು ಕೇಳಿಕೊಳ್ಳಲು ಬಂದೆವು ಎಂದರು. ೧೨. ನನ್ನ ಮನ್ನಣೆಗೆ ನೀವಿಬ್ಬರೂ ಸಮಾನರಾದರೂ ಅರ್ಜುನನನ್ನು ಮೊದಲು ಕಂಡದ್ದರಿಂದ ನಾನು ನನ್ನನ್ನು ಅವನಿಗೆ ಕೊಟ್ಟಿದ್ದೇನೆ. ದುರ್ಯೊಧನ ! ನಿನಗೆ ನನ್ನ ಚತುರ್ಬಲಗಳನ್ನೂ ಕೊಟ್ಟಿದ್ದೇನೆ. ವll ಎಂದು ಹೇಳಿ ತನಗೆ ಸಮಾನವಾದ ಶಕ್ತಿಯುಳ್ಳ ತನ್ನ ತಮ್ಮನಾದ ಕೃತವರ್ಮನನ್ನು ತನ್ನ ಜೊತೆಗಾರರಾದ ತೊಂಬತ್ತಾರುಸಾವಿರ ಗೋಪಕುಮಾರರೊಡನೆ ಸೇರಿಸಿ ಕಳುಹಿಸಿದನು. ವಿಕ್ರಮಾರ್ಜುನನೂ ತಾನೂ ವಿರಾಟನಗರಕ್ಕೆ ಬಂದು ಸ್ನಾನಭೋಜನಾದಿಗಳಿಂದ ಶ್ರಮ ಪರಿಹಾರ ಮಾಡಿಕೊಂಡರು. ಮಾರನೆಯ ದಿನ ಆರುಮಂದಿಯೂ ರಾಜ್ಯಶಾಸ್ತ್ರದ ಆರುಗುಣಗಳೇ ಪ್ರತ್ಯಕ್ಷವಾಗಿ ಮೂರ್ತಿತಾಳಿದ ಹಾಗೆ ಆಲೋಚನಾಮಂದಿರವನ್ನು ಪ್ರವೇಶಮಾಡಿದರು. ೧೩. ಕಿವಿ, ಕಣ್ಣು ಮೊದಲಾದ ಪಂಚೇಂದ್ರಿಯಗಳು ತಮ್ಮ ಪ್ರಿಯಳಾದ ವಸ್ತುಗಳ ಅಪೇಕ್ಷೆಯಿಂದ ಮನಸ್ಸನ್ನು ಹೇಗೆ ಆಶ್ರಯಿಸುತ್ತವೆಯೋ ಹಾಗೆ ವಿಧಿನಿಯಮಗಳಲ್ಲಿ ಆಸಕ್ತರಾದ ಅಯ್ದುಜನ ಪಾಂಡವರೂ ತಮ್ಮ ಇಷ್ಟಾರ್ಥಸಿದ್ದಿಗಾಗಿ ಶ್ರೀಕೃಷ್ಣನನ್ನು ಆಶ್ರಯಿಸಿದ್ದರು. ೧೪. ಧರ್ಮರಾಜನು ರಾಜನೀತಿಶಾಸ್ತ್ರದ ವ್ಯಾಖ್ಯಾನದಂತಿದ್ದ ತನ್ನ ಮಾತು
Page #422
--------------------------------------------------------------------------
________________
ನವಮಾಶ್ವಾಸಂ | ೪೧೭
ಎಳೆ ರಸೆಯೊಳಟ್ಟುದಂ ಭುಜ
ಬಳದಿಂ ಮುನ್ನೆತ್ತಿದಂತೆ ವಿಷಯಾಂಬುಧಿಯೊಳ್ | ಮುಲುಗಿರ್ದಮ್ಮಯ್ಯರುಮಂ ಬಳಿಹರ ಪಿಡಿದೆತ್ತಲೆಂದು ಬಂದ್ ಬರವಂ || ಬಸಿಳ್ ಜಗತೀತ್ರಯಮುಮ ಹೊಸೆದಿಟ್ಟರಂತೆ ಕಾದ ಪೆಂಪಿನ ನಿಮ್ಮಿ | ಬಸಿಯಂ ಪೊಕ್ಕೆಮ್ಮಯ್ಯರ ನಸುರಕುಳಾಂತಕ ಕಡಂಗಿ ಕಾವುದು ಪಿರಿದೇ ||
ಮಲ್ಲಿಕಾಮಾಲೆ || ಎನ್ನ ನನ್ನಿಯ ಪೆಂಪು ನಿನ್ನ ಮಹತ್ವದಿಂದ ಸಂದುದಂ ತನ್ನ ಪನ್ನಗಕೇತನಂಗೆ ಧರಾವಿಭಾಗಮನಿತ್ತು ಸಂ |
ಪನ್ನ ಯೋಗ ನಿಯೋಗದಿಂದಮರಣದೊಳ್ ನೆಲಸಿರ್ದುಣಲ್ ಬನ್ನವಿಲ್ಲದೆ ಬಾಳ್ವುದೇಂ ಪುಲುವಾನಸಂಗನಗಕ್ಕುಮೇ ||
೧೫
-
೧೬
02
ವ! ಅದಲ್ಲದೆಯುಮೀ ಸೂಂದುಮೊಡಂಬಡಿಲ್ಲದೆ ಗೋಗ್ರಹಣಮನ ನವಂ ಮಾಡಿ ಸುಯೋಧನನೆಂಬ ಪಾಪಕರ್ಮನ ಮಾಡಿದನುವರು ನಿಮ್ಮನುಬಲದೊಳಮರಿಕೇಸರಿಯ ಭುಜಬಲದೊಳಮಮಗಿಂಬುವಂದುದು
Goll ಕಾದದೆ ಪನ್ನಗಧ್ವಜನಿಳಾತಳಮಂ ಕುಡನಾನುಮಿರ್ಪುದುಂ ಸೋದರರೆಂದು ನಾಣಿ ಸೆಡೆದಿರ್ದಪೆನಿರ್ದೊಡವಸ್ತುಭೂತನಂ | ದಾದಮ ಭೂತಳಂ ಪತಿಯ ತೇಜಮ ಕಟ್ಟಪುದಿಂತಿರ್ದ ಪ. ದೋದರ ನೀನೆ ಪೇ ಬಗೆದು ಕಜ್ಜಮನೀಗಳ ದಿವ್ಯಚಿತ್ತದಿಂ || ಆಕರ್ಷಕವಾಗಿರಲು ಅರಳಿದ ತಾವರೆಯನ್ನು ನಾಭಿಯಲ್ಲುಳ್ಳ (ಕಮಲನಾಭನಾದ) ಶ್ರೀಕೃಷ್ಣನಿಗೆ ಅನಾಯಾಸವಾಗಿ ಈ ರೀತಿ ಹೇಳಿದನು. ೧೫. ಕೃಷ್ಣಾ ನೀನು ಮೊದಲು ಪಾತಾಳದಲ್ಲಿ ಮುಳುಗಿದ್ದ ಭೂಮಿಯನ್ನು ನಿನ್ನ ಬಾಹುಬಲದಿಂದ ಎತ್ತಿದ ಹಾಗೆ ಇಂದ್ರಿಯಭೋಗವೆಂಬ ಸಮುದ್ರದಲ್ಲಿ ಮುಳುಗಿದ್ದ ನಮ್ಮದು ಜನವನ್ನೂ ಉದ್ಧಾರಮಾಡಬೇಕೆಂದೇ ಬಂದಿದ್ದೀಯೆ. ೧೬. ಕೃಷ್ಣಾ, ಮೂರು ಲೋಕಗಳನ್ನೂ ಸಂತೋಷದಿಂದ ಹೊಟ್ಟೆಯಲ್ಲಿಟ್ಟು ಕ್ರಮದಿಂದ ರಕ್ಷಿಸಿದ ಮಹಿಮೆಯುಳ್ಳ ನಿಮ್ಮ ಅಂತರಂಗವನ್ನು ಪ್ರವೇಶಿಸಿರುವ ನಮ್ಮೆದುಜನರನ್ನು ಉತ್ಸಾಹದಿಂದ ರಕ್ಷಿಸುವುದು ಹಿರಿದೇ ? ೧೭. ನನ್ನ ಸತ್ಯದ ಹಿರಿಮೆಯಿಂದಲೇ ಸಾಧ್ಯವಾಯಿತು. ಅದು ಹೇಗೆನ್ನುವೆಯೊ ದುರ್ಯೋಧನನಿಗೆ ಭೂಮಿಯ ಭಾಗವನ್ನು ಕೊಟ್ಟು ಪರಿಪೂರ್ಣವಾದ ಯೋಗಮಾರ್ಗದಲ್ಲಿ ಕಾಡಿನಲ್ಲಿ ನೆಲಸಿ ನಿರ್ವಿಘ್ನವಾಗಿ ಊಟಮಾಡುತ್ತ ಬದುಕುವುದು ಹುಳುವಂತೆ ಇರುವ ಸಾಮಾನ್ಯ ಮನುಷ್ಯನಾದ ನನಗೆ ಸಾಧ್ಯವಾಗುತ್ತದೆಯೇ, ವ|| ಅಷ್ಟೆ ಅಲ್ಲದೆ ಈ ಸಲವೂ ಒಂದು ಕಾರಣವೂ ಇಲ್ಲದೆ ಗೋಗ್ರಹಣವನ್ನು ನೆಪಮಾಡಿಕೊಂಡು ದುರ್ಯೋಧನನೆಂಬ ಪಾಪಿಯು ಏರ್ಪಡಿಸಿದ ಯುದ್ಧವು ನಿಮ್ಮ ಸಹಾಯದಿಂದಲೂ ಅರಿಕೇಸರಿಯಾದ ಅರ್ಜುನನ ಬಾಹುಬಲದಿಂದಲೂ ಪ್ರಿಯವಾಗಿ ಮುಗಿಯಿತು. ೧೮. ದುರ್ಯೋಧನನು ಯುದ್ಧಮಾಡದೆ ರಾಜ್ಯವನ್ನು ಕೊಡುವುದಿಲ್ಲ; ನಾನೂ ಒಡಹುಟ್ಟಿದವರೆಂದು
೧೮
Page #423
--------------------------------------------------------------------------
________________
ಮ।
೪೧೮ / ಪಂಪಭಾರತಂ
ವll ಎಂಬುದುಮಂಬುಜೋದರಂ ನಯದ ವಿನಯದ ಮಾತು ನೀನೆಂದಂತು ತೊಳೆಗೆ ನೀರಡಕಲುಮಾದಿತ್ಯಂಗೆ ಸೊಡರಿಡಲುಮಿಂದ್ರಂಗೆ ದೇವಲೋಕಮಂ ಬಣ್ಣಿಸುವಂತಯುಂ ನಿನಗೇನೆಂದು ಕಜ್ಜಂಪೇಟ್ಟುದಾದೊಡಂ
ಬೆಸಮಾರ್ ಕೊಂಡವೊಲಕ್ಕುಮೊಂದೆ ನಯಮಂ ಕೇಳೆ ನಿನ್ನ ಮುಂದೀಗಳಾ ನುಸಿರ್ದಪ್ಟೆಂ ಸಲೆ ಮಲ್ಕು ಬಲ್ಬನಟಿಗುಂ ಕೈವಾರಮುಂ ಕೂಡ ಕೂ || ರಿಸುಗುಂ ನಿಕ್ಕುವಮಪ್ಪ ಕಾರಣದಿನಿಂತೀ ಸಾಮಮಂ ಮುಂ ಪ್ರಯೋ . ಗಿಸಿಕೊಟ್ಟವುದಂದು ದಂಡಮನೆ ಮುಂ ಮುಂತಿಕ್ಕುವಂ ಮಂತ್ರಿಯೇ || ೧೯. ಬಲಿಯಂ ವಾಮನರೂಪದಿಂದಮ ವಲಂ ಮುಂ ಬೇಡಿದಂ ಭೂರಿ ಭೂ ತಲಮಂ ಕುಂದನಗಾಯ ಕೊಂಡನಿಳಯಂ ಕಟಟಿನಿನುಂ ರಸಾ | ತಲದೊಳ್ ದೈತ್ಯನನಂತ ನೀನುಮಿಣಿಯಂ ಮುಂ ಚೀಡಿಯಟ್ಟ ಮಾ ರ್ಮಲೆದಾತಂ ಕುಡದಿರ್ದೊಡಂದಿಯ ನೀಂ ಲೋಕಂ ಗುಣಂಗೊಳ್ಳಿನಂ ೨೦
ವ|| ಎಂದು ನುಡಿದ ಮಂದರಧರನ ನುಡಿಗೆ ಕಿನಿಸಿ ಕಿಂಕಿಮೋಗಿ ಭೀಮಸೇನನಿಂತೆಂದಂ
ನಾಚಿಕೆಯಿಂದ ಸಂಕೋಚದಿಂದಿದ್ದೇನೆ. ಹಾಗಿದ್ದರೆ ಲೋಕದ ಜನರೆಲ್ಲ ಇವನು ಆಸ್ತಿಯಿಲ್ಲದವನು ಎಂದು ನಿಂದಿಸಿದರೆ ನನ್ನ ಕೀರ್ತಿಯೂ ಮಾಸಿಹೋಗುತ್ತದೆ. ಎಲೆ ಕಮಲನಾಭ ಇದಕ್ಕೆ ಮಾಡಬೇಕಾದ ಕಾರ್ಯವನ್ನು ನೀನು ನಿನ್ನ ದಿವ್ಯಚಿತ್ತದಲ್ಲಿ ಯೋಚಿಸಿ ಹೇಳು. ವ|| ಎನ್ನಲು ಕೃಷ್ಣನು (ಧರ್ಮರಾಜನನ್ನು ಕುರಿತು) 'ಧರ್ಮರಾಜ ನೀತಿ ಮತ್ತು ನಡತೆಯ ದೃಷ್ಟಿಯಿಂದ ನೋಡಿದರೆ ನೀನು ಹೇಳಿದ ಹಾಗೆಯೆ ಸತ್ಯ. ನಿನಗೆ ಕಾರ್ಯರೀತಿಯನ್ನು ಹೇಗೆಂದು ತಿಳಿಸುವುದು ನದಿಗೆ ನೀರು ತುಂಬುವ ಹಾಗೆ, ಸೂರ್ಯನಿಗೆ ದೀಪವನ್ನು ಹಚ್ಚುವ ಹಾಗೆ, ಇಂದ್ರನಿಗೆ ಸ್ವರ್ಗಲೋಕವನ್ನು ಪರಿಚಯ ಮಾಡಿಸುವ ಹಾಗೆ ಆಗುತ್ತದೆ. ಆದರೂ ೧೯. ಆರಂಭಿಸಿದ ಕಾರ್ಯ ಉದ್ದೇಶಿಸಿದ ಹಾಗೆಯೇ ಆಗುವುದಿಲ್ಲ, ಕಾರ್ಯಸಾಧನೆಯಾಗುವ ಒಂದು ನೀತಿಯನ್ನು ಈಗ ನಿಮಗೆ ತಿಳಿಸುತ್ತೇನೆ. ಮಾರ್ದವವು ಒರಟುತನವನ್ನು ನಾಶಪಡಿಸುತ್ತದೆ. ಹೊಗಳಿಕೆಯು ತಕ್ಷಣವೇ ಪ್ರೀತಿಯನ್ನುಂಟುಮಾಡುತ್ತದೆ. ಆದುದರಿಂದ ಮೊದಲು ಸಾಮೋಪಾಯವನ್ನು ಉಪಯೋಗಿಸುವುದು ಸೂಕ್ತ ಎಂದು ಉಪದೇಶ ಮಾಡುವವನು ನಿಜವಾದ ಮಂತ್ರಿ, ಹಾಗಲ್ಲದೆ ಉದಾಸೀನತೆಯಿಂದ ಏನೀಗ ಎಂದು ಮೊದಲು ದಂಡೋಪಾಯವನ್ನು ಸೂಚಿಸುವವನು ಮಂತ್ರಿಯಾಗಬಲ್ಲನೇ?” ೨೦. ಹಿಂದಿನ ಕಾಲದಲ್ಲಿ ವಾಮನನ ಆಕಾರದಲ್ಲಿ ಬಲಿಚಕ್ರವರ್ತಿಯಿಂದ ಈ ವಿಸ್ತಾರವಾದ ಭೂಮಿಯನ್ನು ತೆಗೆದುಕೊಂಡೆನು. ಆ ರಾಕ್ಷಸನನ್ನು ಇನ್ನೂ ಪಾತಾಳದಲ್ಲಿಯೇ ಕಟ್ಟಿಟ್ಟಿದ್ದೇನೆ. ಹಾಗೆಯೇ ನೀನು ರಾಜ್ಯಕ್ಕಾಗಿ ಮೊದಲು ಬೇಡಿ ದೂತನನ್ನು ಕಳುಹಿಸಿಕೊಡು. ಆತನು ಪ್ರತಿಭಟಿಸಿ ಕೊಡದಿದ್ದರೆ ಆಗ ಲೋಕವೆಲ್ಲ ಗುಣಗ್ರಹಣಮಾಡುವ ಹಾಗೆ ಯುದ್ಧಮಾಡು. ವ|| ಎಂಬುದಾಗಿ ಹೇಳಿದ ಕೃಷ್ಣನ ಮಾತಿಗೆ ಕರಳಿ ಕೋಪಗೊಂಡು ಭೀಮಸೇನನು ಹೀಗೆಂದನು
Page #424
--------------------------------------------------------------------------
________________
ಶಾ
ಕಂ||
ಕಂ||
611
ನಿಜ ಮತಮನನಗೆ ಮಾಜಿ
ಅಜಾತ ದೊರೆಯಲ್ಲವಲ್ಲದಿರ್ದೊಡಮಂ |
ದ ಜನಿಸಿ ನುಡಿಯಿಸಿದುವಹಿ
ಧ್ವಜನೋವದ ಮುನ್ನೆ ನೆಗಟ್ಟಿ ದುಶ್ಚರಿತಂಗಳ್ |
ನವಮಾಶ್ವಾಸಂ | ೪೧೯
೨೧
ಜಟಮಟಿಸಿಕೊಂಡು ನಿಮ್ಮ
ಘಟಿಯಿಸುವೀ ಸಂಧಿ ಕೌರವರ್ಕಳೊಳೆನ್ನಿ |
ಘಟತ ಜರಾಸಂಧೋರ
ಸಟ ಸಂಧಿವೊಲೊಂದ ಪೊಳ್ ವಿಘಟಿಸದೇ || ತೋಡುವನೊರ್ವನೊಳರುಳನುರ್ವಿಗೆ ನೆತ್ತರನೆಯ ಪೀರ್ದುವಿ ರ್ದಾಡುವನೊರ್ವನೂರುಗಳನನ್ನ ಗದಾಶನಿಘಾತದಿಂದ ನು | ರ್ಗಾಡುವೆನೆಂದು ಲೋಕಮಳೆಯುತ್ತಿರ ಪೂನಗಂತ ಸಂತಸಂ ಮಾಡದ ಸಂಧಿ ಮಾಡಿ ಕುರುಪುತ್ರರೊಳೆನ್ನನೆ ಜೋಡುಮಾರೇ || ೨೪ ವll ಎಂದು ಮಸಗಿದ ಮದಾಂಧಗಂಧಸಿಂಧುರದಂತೆ ದೆಸೆಗೆ ಮಸಗಿದ ವಾಯುಪುತ್ರನಂ ಧರ್ಮಪುತ್ರ ಸಂತೈಸಿ
ಆ ಲಾಕ್ಷಾಗೃಹ ದಾಹವೊಂದ ವಿಷಸಂಯುಕ್ತಾನ್ನಮಂತೊಂದ ಪಾಂ ಚಾಲೀ ನಿಗ್ರಹವೊಂದ ಟಕ್ಕುವಗೆಯಿಂ ಗೆಲ್ಲಿರ್ದ ಜೂದೊಂದೆ ಶಾ | ರ್ದೂಲಾಭೀಲ ವನಂಗಳೊಳ್ ತಿರಿಪಿದೀಯುರ್ಕೊಂದ ಲೆಕ್ಕಂಗೊಳಲ್ ಕಾಲಂ ಸಾಲವೆ ಕಂಡುಮುಂಡುಮಮಗಿನ್ನಾತಂಗಳೊಳ್ ಪಾಟಿಯೇ | ೨೨
೨೩
೨೧. ಕೃಷ್ಣ, ನಿನ್ನ ಮಾತನ್ನು ಮೀರುವುದು ನನಗೆ ಯೋಗ್ಯವಲ್ಲ, ಅಲ್ಲದಿದ್ದರೂ ದುರ್ಯೋಧನನು ಲಕ್ಷಿಸದೆ ಮಾಡಿದೆ ಕೆಟ್ಟ ಕೆಲಸಗಳು ನನ್ನಿಂದ ಒರಟಾಗಿ ಮಾತನಾಡಿಸುತ್ತಿವೆ. ೨೨. ಅರಗಿನ ಮನೆಯಲ್ಲಿ ಸುಟ್ಟುದೊಂದೇ, ವಿಷಮಿಶ್ರವಾದ ಆಹಾರವನ್ನು ತಿನ್ನಿಸಿದುದೊಂದೇ, ದೌಪದಿಗೆ ಅವಮಾನಪಡಿಸಿದುದೊಂದೇ, ಮೋಸದ ರೀತಿಯಿಂದ ಗೆದ್ದ ಜೂಜೊಂದೇ, ಹುಲಿಗಳಿಂದ ಭಯಂಕರವಾದ ಕಾಡಿನಲ್ಲಿ ಅಲೆಯುವ ಹಾಗೆ ಮಾಡಿದ ಆ ಅಹಂಕಾರವೊಂದೇ-ಗಣನೆ ಮಾಡುವುದಕ್ಕೆ ಕಾಲಾವ ಕಾಶವೇ ಸಾಕಾಗುವುದಿಲ್ಲ! ನೋಡಿ ಅನುಭವಿಸಿಯೂ ಇನ್ನೂ ಅವರಲ್ಲಿ ನಮಗೆ ಧರ್ಮಪಾಲನೆಯೆ? ೨೩. ಉತ್ಸಾಹದಿಂದ ಈಗ ನೀವು ಕೌರವರಲ್ಲಿ ಮಾಡ ಬೇಕೆಂದಿರುವ ಸಂಧಿಕಾರ್ಯವು ಕೂಡಿಕೊಂಡಿರುವ ಜರಾಸಂಧನ ಎದೆಯ ಜೋಡಣೆಯ ಹಾಗೆ ನನ್ನಿಂದ ಅಲ್ಪಕಾಲದಲ್ಲಿ ಮುರಿದುಹೋಗದೆ ಇರುತ್ತದೆಯೇ? ೨೪. ಒಬ್ಬನ (ದುಶ್ಯಾಸನನ) ಹೊಟ್ಟೆಯೊಳಗಿನ ಕರುಳನ್ನು ನೆಲಕ್ಕೆ ತೋಡಿಹಾಕುತ್ತೇನೆ. ರಕ್ತವನ್ನು ಪೂರ್ಣವಾಗಿ ಹೀರಿ ಔತಣಮಾಡುತ್ತೇನೆ. ಒಬ್ಬನ (ದುರ್ಯೋಧನನ) ತೊಡೆಗಳನ್ನು ನನ್ನ ಗದೆಯೆಂಬ ವಜ್ರಾಯುಧದ ಪೆಟ್ಟಿನಿಂದ ನುಚ್ಚುನೂರಾಗಿ ಮಾಡುತ್ತೇನೆ ಎಂದು ಪ್ರಪಂಚವೆಲ್ಲ ತಿಳಿದ ಹಾಗೆ ಪ್ರತಿಜ್ಞೆಮಾಡಿದ ನನಗೆ ಸಂತೋಷ ವನ್ನುಂಟು ಮಾಡದೆ ಕೌರವರೊಡನೆ ಸಂಧಿಮಾಡಿ ನನ್ನನ್ನು ಅವರಿಗೆ ಜೊತೆಮಾಡು ತೀರಾ? ವ|| ಎಂದು ಮದದಿಂದ ಕುರುಡಾದ ಮದ್ದಾನೆಯಂತೆ ದಿಕ್ಕುದಿಕ್ಕಿಗೂ
Page #425
--------------------------------------------------------------------------
________________
೨೫
೪೨೦) ಪಂಪಭಾರತಂ ಮl ಬಕ ಕಿಮ್ಯಾರ ಜಟಾಸುರೋತ ಜರಾಸಂಧರ್ಕಳಂ ಸಂದ ಕೀ
ಚಕರಂ ನೂರ್ವರುಮಂ ಪಡಲ್ವಡಿಸಿದೀ ತ್ವಚ್ಚಂಡದೋರ್ದಂಡಮು | ಗ್ರ ಕುರುಕ್ಷಾ ಪ ಮಹೀರುಹಪ್ರಕರಮಂ ಮತ್ತೇಭವಿಕ್ರೀಡಿತ ಕೈ ಕರಂ ಪೋಲ್ವೆಗೆ ವಂದು ಭೀಮ ರಣದೊಳ್ ನುರ್ಗಡದೇಂ ಪೋಕುಮ ||
ವ|| ಎಂದು ನಾರಾಯಣನುಂ ಧರ್ಮಪುತ್ರನುಂ ವೃಕೋದರನ ಮನಮನಾಳ ನುಡಿದು ಮತ್ತು ನಾರಾಯಣಂಗೆ ಯುಧಿಷ್ಠಿರಂ ನಿಷ್ಠಿತ ಕಾರ್ಯಮನನುಷ್ಟಿಸಲಂದಿಂತೆಂದಂಮll ಅವನೀನಾಥನ ಗೆಯ್ದ ಪೊಲ್ಲಮಗಮನ್ನೊಳಿಂಗಮಿರಿ ಸಕ್ರಿಯಾ
ಗವನೀವಂತುಟನೀಯದಂತುಟನದಂ ಬಲ್ಲಂತು ಕಾಲುತ್ತಿನೋ | ಡವನೀ ಭಾಗದೊಳೆನ್ನ ಭಾಗಮನದಂ ತಾನೀಯದಿರ್ದಾಗಳ ನವನೀ ರಕ್ಷಣ ದಕ್ಷ ದಕ್ಷಿಣ ಭುಜಸ್ತಂಭಂ ಕೊಲಲ್ ಸಾಲದೇ 1 , ೨೬
ವ|| ಎಂದು ಧರ್ಮರಾಜಂ ರಾಜರಾಜನಲ್ಲಿಗೆ ನಿರ್ವ್ಯಾಜದಿಂ ದಿತಿಜಕುಳ ವಿಜಯಿಯಪ್ಪಜಿತನನೆ ದೂತಕಾರ್ಯಕ್ರಟ್ಟಿದೊಡಸುರವಿಜಯಿಯುಂ ಕತಿಷಯ ಪ್ರಯಾಣಂಗಳಿಂ ಮದಗಜೇಂದ್ರಪುರಮನೆಯ್ದಚಂ| ಮದಗಜ ಬೃಂಹಿತಧ್ವನಿ ತುರಂಗಮ ಹೇಪಿತಘೋಷದೊಳ್ ಪೊದ
ದವ ಗಭೀರ ಧೀರ ಮುರಜಧ್ವನಿ ವನ ಮತ್ತಕಾಮಿನೀ | ಮೃದು ಪದ ನೂಪುರ ಶೃಣಿತದೊಳ್ ಪಕ್ಷದೊಂದಿಗೆ ಚಕ್ರಿಗುಂಟುಮಾ
ಡಿದುದು ಪೋಬಲ್ ಸುರಾದ್ರಿಮಧಿತಾಂಬುಧಿಜಾತನಿನಾದ ಶಂಕೆಯಂ || ೨೭ ವಿಜೃಂಭಿಸಿದ ಭೀಮಸೇನನನ್ನು ಧರ್ಮರಾಯನು ಸಮಾಧಾನಮಾಡಿದನು. ೨೫. ಬಕ, ಕಿಮೀರ, ಜಟಾಸುರ, ಗರ್ವಿಷ್ಠರಾದ ಜರಾಸಂಧಾದಿಗಳನ್ನೂ ಪ್ರಸಿದ್ದರಾದ ನೂರು ಕೀಚಕರನ್ನೂ ಕೆಳಗೆ ಬೀಳುವ ಹಾಗೆ ಮಾಡಿಸಿದ ನಿನ್ನ ಭಯಂಕರವಾದ ಕೌರವರಾಜರೆಂಬ ಮರಗಳ ಸಮೂಹವು ಮದ್ದಾನೆಯಾಟಕ್ಕೆ ಸಮನಾಗಿ ನುಚ್ಚು ಮಾಡದೇ ಬಿಡುತ್ತದೆಯೆ ? ವ|| ಎಂದು ಕೃಷ್ಣನೂ ಧರ್ಮರಾಯನೂ ಭೀಮನ ಮನಸ್ಸನ್ನು ಸಮಾಧಾನಪಡಿಸಿದರು. ಪುನಃ ಧರ್ಮರಾಯನು ಕೃಷ್ಣನಿಗೆ ಮಾಡಬೇಕಾದ ಕಾರ್ಯವನ್ನು ಹೀಗೆಂದು ತಿಳಿಸಿದನು. ೨೬. ರಾಜನಾದ ದುರ್ಯೋಧನನು ಮಾಡಿದ ಅಪರಾಧಕ್ಕೂ ನನ್ನ ಒಳ್ಳೆಯ ಸ್ವಭಾವಕ್ಕೂ ನೀನು ಸಾಕ್ಷಿಯಾಗಿದ್ದುಕೊಂಡು ಅವನು ಭೂಮಿಯನ್ನು ಕೊಡುವುದನ್ನೂ ಕೊಡದಿರುವುದನ್ನೂ ಸಾಧ್ಯವಿದ್ದಷ್ಟು ವಿಚಾರಮಾಡಿ ನೋಡು. ನ್ಯಾಯಯುತವಾಗಿ ನನಗೆ ಬರಬೇಕಾದುದನ್ನು ಅವನು ಕೊಡದಿದ್ದಾಗ ನನ್ನ ಭೂಭಾರರಕ್ಷಣಾಸಮರ್ಥವಾದ ಕುಂಭದಂತಿರುವ ಬಲತೋಳು ಅವನನ್ನು ಕೊಲ್ಲಲು ಸಾಲದೇ ಹೋಗುತ್ತದೆಯೇ ? ವ| ಎಂದು ಧರ್ಮರಾಯನು ಕೃಷ್ಣನನ್ನು ಕೌರವಚಕ್ರವರ್ತಿಯ ಹತ್ತಿರಕ್ಕೆ ನಿಷ್ಕಪಟಿಯಾಗಿ - ಸರಳಹೃದಯನಾಗಿ ದೂತಕಾರ್ಯ ಕ್ಕಾಗಿ ಸಂಧಿಯನ್ನು ಏರ್ಪಡಿಸುವ ರಾಯಭಾರಿಯಾಗಿ ಕಳುಹಿಸಿದನು. ಕೃಷ್ಣನು ಕೆಲವು ದಿವಸದ ಪ್ರಯಾಣದಿಂದ ಹಸ್ತಿನಾಪಟ್ಟಣವನ್ನು ಸೇರಿದನು. ೨೭. ಆ ಹಸ್ತಿನಾಪಟ್ಟಣವು ಕುದುರೆಗಳ ಹೇಷಾರವ, ಮದ್ದಾನೆಗಳ ಫೀಂಕಾರಶಬ್ದ, ಮದ್ದಲೆಗಳ ಗಂಭೀರನಾದ,
Page #426
--------------------------------------------------------------------------
________________
ನವಮಾಶ್ವಾಸಂ | ೪೨೧
ವ|| ಅಂತು ನಾಗಪುರಮನಿತಿಸುವ ನಾಗಪುರಮನಾ ನಾಗಶಯನಂ ಪೊಕ್ಕು ವಿದುರಂ ಪಾಂಡವ ಪಕ್ಷಪಾತಿಯಪುದಳೆಂದಾತನ ಮನೆಗೆ ವರೆ ತನಗಿದಿರ್ವಂದ ಕೊಂತಿಗಸುರಾಂತಕನೆಗಿ ತನಗಳಿಗಿದ ವಿದುರನಂ ಪರಸಿ ರಥದಿಂದಮಿದು ಮಣಿಮಯ ಪೀಠದೊಳ್ ಕುಳ್ಳಿರ್ದು ಪಾಂಡುತನೂಜರ ಕುಶಲವಾರ್ತೆಯನಪ ತದನಂತರಂ ವಿದುರನಜನನೇಗೆಯ್ಯ ತನುಮನಳಯದ
ಕoll ತೀವಿದ ಮಜ್ಜನದಿಂ ಸ
ದ್ಯಾವದಿನೊಸೆದೆತ್ತಿದೊಂದು ಚೀನದೊಳು ನಾ | ನಾ ವಿಧದ ಪದಪಿನೊಳ್ ಹರಿ ಗಾವಗಮಾಡಿದುದು ಪಥಪರಿಶ್ರಮಮಲ್ಲಂ ||
೨೮
ವ|| ಅಂತು ವಿದುರನಜನನುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ಬಂದ ಬರವನಾಗಳ ಸುಯೋಧನಂಗಳಪುವುದುಂ ರಾಜರಾಜನುಂದೆ ಕಿರುನಗೆ ನಕ್ಕು ನಾಳಿನೋಲಗದೊಳ್ ತಂದು ಕಾಣಿಸೆಂಬುದುಂ ಮಲದಿವಸಂ ನೇಸ ಮೂಡಿದಾಗಳಾದಿತ್ಯನಂತನೇಕಮಣಿಮಯೂಖ ವಿಜೃಂಭಮಾಣಾಖಂಡಳ ವಿಳಂಬಿತಾಭೀಳ ಕೋದಂಡವಿಳಾಸ ವಿಭ್ರಮ ಸಿಂಹಾಸನಾಸೀನನುಂ ಪ್ರಮದಾಹಸ್ತವಿನ್ಯಸ್ತ ವಾಮಕ್ರಮಕಮಳನುಮನವರತ ಸುರಿತ ತಾರಕಾಕಾರ ಮುಕ್ತಾಭರಣ ಕಿರಣ ನಿಕರ ವಿಳಸಿತ ವಿಶಾಲೋರಸ್ಥಳನುಮನಂತ ಸಾಮಂತ ಮಕುಟ ಮಾಣಿಕ್ಯ ಮಯೂಖ
ಯುವತಿಯರೂ, ಮದಿಸಿರುವವರೂ ಆದ ಸ್ತ್ರೀಯರ ಕಾಲಂದಿಗೆಗಳ ಶಬ್ದ ಇವುಗಳಿಂದ ಮಂದರ ಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಶಂಕೆಯನ್ನು ಕೃಷ್ಣನಿಗೆ ಉಂಟುಮಾಡಿತು. ವll ಭೋಗವತೀಪಟ್ಟಣವನ್ನು ಕೀಳುಮಾಡುವ ಹಸ್ತಿನಾಪಟ್ಟಣ ವನ್ನು ಶ್ರೀಕೃಷ್ಣನು ಪ್ರವೇಶಿಸಿದನು. ವಿದುರನು ಪಾಂಡವಪಕ್ಷಪಾತಿಯಾದುದರಿಂದ ಆತನ ಮನೆಗೆ ಬಂದನು. ತನಗೆ ಎದುರಾಗಿ ಬಂದ ಕುಂತಿದೇವಿಗೆ ಕೃಷ್ಣನು ನಮಸ್ಕಾರ ಮಾಡಿ ತನಗೆ ನಮಸ್ಕಾರ ಮಾಡಿದ ವಿದುರನನ್ನು ಹರಸಿದನು. ತೇರಿನಿಂದಿಳಿದು ರತ್ನಖಚಿತವಾದ ಪೀಠದಲ್ಲಿ ಕುಳಿತುಕೊಂಡು ಪಾಂಡವರ ಕ್ಷೇಮಸಮಾಚಾರವನ್ನು ತಿಳಿಸಿದನು. ಕೃಷ್ಣನಿಗೆ ಸತ್ಕಾರಮಾಡುವ ರೀತಿಯು ವಿದುರನಿಗೆ ತೋರದಾಯಿತು. ೨೮. ಅವನು ಸಿದ್ಧಪಡಿಸಿದ ಸ್ನಾನದಿಂದಲೂ ಒಳ್ಳೆಯ ಮನಸ್ಸಿನಿಂದ ಬಡಿಸಿದ ಆಹಾರದಿಂದಲೂ ನಾನಾರೀತಿಯಾದ ಸಾಮಾನ್ಯ ಸತ್ಕಾರಗಳಿಂದಲೂ ಕೃಷ್ಣನಿಗೆ ಮಾರ್ಗಾಯಾಸವೆಲ್ಲ ಪೂರ್ಣವಾಗಿ ಶಮನವಾಯಿತು. ವ! ವಿದುರನು ಕೃಷ್ಣನನ್ನು ಯೋಗ್ಯವಾದ ಸನ್ಮಾನಗಳಿಂದ ಸಂತೋಷಪಡಿಸಿ ಅವನ ಬರುವಿಕೆಯನ್ನು ದುರ್ಯೋಧನನಿಗೆ ತಿಳಿಸಿದನು. ಚಕ್ರವರ್ತಿಯು ಸುಮ್ಮನಿರಲಾರದೆ ಹುಸಿನಗೆ ನಕ್ಕು ನಾಳೆಯ ಸಭೆಯಲ್ಲಿ ತಂದು ಕಾಣಿಸು ಎಂದನು. ಮಾರನೆಯ ದಿನ ಸೂರ್ಯೋದಯವಾದಾಗ ಸೂರ್ಯನಂತೆ ಅನೇಕ ರತ್ನಕಿರಣಗಳಿಂದ ಮೆರೆಯುತ್ತಿರುವ ಇಂದ್ರನಂತೆ ಉದ್ದವೂ ಭಯಂಕರವೂ ಆದ ಬಿಲ್ಲಿನ ವೈಭವಯುಕ್ತವಾದ ವಿಳಾಸದಿಂದ ಕೂಡಿದ ಸಿಂಹಾಸನದಲ್ಲಿ ಕುಳಿತನು. ಸ್ತ್ರೀಯರು ತಮ್ಮಕಮ್ಮಿಂದ ಅವನ ಎಡಗಾಲನ್ನು ಒತ್ತುತ್ತಿದ್ದರು. ಅವನ ವಿಸ್ತಾರವಾದ ಎದೆಯನ್ನು ಅಲಂಕರಿಸಿದ ಆಭರಣಗಳು ನಕ್ಷತ್ರಗಳಂತೆ ಪ್ರಕಾಶಮಾನವಾಗಿದ್ದುವು. ಅನಂತ ಸಾಮಂತ ರಾಜರ ಕಿರೀಟದ
Page #427
--------------------------------------------------------------------------
________________
೪೨೨/ ಪಂಪಭಾರತಂ ಮಂಜರೀಜಾಳ ಪಲ್ಲವಿತಾಸ್ಥಾನಮಂಟಪನುಮಾಗಿ ಸಭಾಮಂಟಪದೊಳೊಡೋಲಗಂಗೊನ್ನೆಡ ವಲಯದವರವರ ಪಡೆದ ಪ್ರತಿಪತ್ತಿಗಳನುದಿಕ್ಕಿದ ಲೋಹಾಸನಂಗಳೊಳಂ ಮಣಿಖಚಿತ ಕನಕ ಪೀಠಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಂ ಭೀಷ್ಮ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಶಲ್ಯ ಶಕುನಿ ಬಾತ್ಮೀಕ ಸೋಮದತ್ತ ಭಗದತ್ತ ಭೂರಿಶ್ರವಃ ಪ್ರಕೃತಿಗಳನಿರಿಸಿ ಮತ್ತಮನೇಕ ದೇಶಾದೀಶರರೆಲರುಮನಡೆಯಲಿದು ಕುಳ್ಳಿರಿಸಿ ಪೆಂಡವಾಸದೊಳೆಂಡಿರನೆರಡೂಳಿಯೋಳಮಿರಿಸಿ ನೂರ್ವರ್ ತಮ್ಮಂದಿರುಮಂ ಪಿಂತಿರಿಸಿ ಲಕ್ಕಣಂ, ಮೊದಲಾಗೆ ನೂರ್ವರ್ ಮಕ್ಕಳುಮಂ ಮುಂತಿರಿಸಿ ಯುವರಾಜನಪ್ಪಣುಗ ದುಶ್ಯಾಸನನುಮನಂಗರಾಜನಪ್ಪಣುಗಾಳ್ ಕರ್ಣನುಮನೆರಡುಂ ಕೆಲದೊಳಂ ತೊಡೆ ಸೋಂಕೆ ಕುಳ್ಳಿರಿಸಿಮಗ ನನೆಯಂಬಂ ಮಸದನ್ನರಪ್ಪ ಪಲರೊಳೊಂಡಿರ್ ಮನಂಗೊಂಡೊಯ
ನಮಂ ಕೊಳೆ ಪಾಡೆ ಜೇನ ಮತಿ ಕೊಂಡಂತಪ್ಪ ಗೇಯಂ ಮನ | ಕ್ಕೆ ನೆಲಕ್ಕಿಟ್ಟಳಮಾಗೆ ಸಂದ ರಥಿಕರ್ ಕಸ್ತೂಳ್ಳಿನಂ ತುಯೋ
ಧನನೊಡೋಲಗಮಿಂದ್ರನೋಲಗಮುಮಂ ಕೀಲಾಡಿ ಕಣೋಪುಗುಂ || ೨೯
ವli ಅಂತು ಪಿರಿರೋಲಗಂಗೊಟ್ಟಿರ್ಪನ್ನೆಗಂ ಮುನ್ನಮ ಮೂಜನೆಯ ಬಾಗಿಲೊಳ ಬಂದಿರ್ದನಂತನ ಬರವಂ ಪಡಿಯಂ ಬಿನ್ನಪಂಗೆಯ್ಕೆ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿಮಾಣಿಕ್ಯರತ್ನಕಾಂತಿಸಮೂಹದಿಂದ ಸಭಾಮಂಟಪವು ವಿರಾಜಮಾನವಾಗಿದ್ದಿತು. ಆ ಸಭಾಮಂಟಪದಲ್ಲಿ ದುರ್ಯೋಧನನು ಒದ್ದೋಲಗದಲ್ಲಿದ್ದನು. ಆ ಸಭಾಮಂಟಪದ ಮಧ್ಯೆ ಅವಕಾಶವೇ ಇಲ್ಲದೆ ಒತ್ತಾಗಿ ಅವರ ಮದ್ಯಾದಾನುಗುಣವಾಗಿ ಸಿದ್ಧಪಡಿಸಿದ್ದ ಲೋಹಪೀಠಗಳಲ್ಲಿಯೂ ರತ್ನಖಚಿತವಾದ ಸುವರ್ಣಾಸನಗಳಲ್ಲಿ ಸೇರಿಸಿರುವ ಮತ್ತೆಗಳಲ್ಲಿಯೂ ಭೀಷ್ಮ ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಶಲ್ಯ, ಶಕುನಿ, ಬಾಹೀಕ, ಸೋಮದತ್ತ, ಭಗದತ್ತ, ಭೂರಿಶ್ರವರೇ ಮೊದಲಾದವರು ಕುಳಿತಿದ್ದರು. ಇತರ ಅನೇಕದೇಶಾಧೀಶರೆಲ್ಲ ತಮ್ಮ ತಮ್ಮ ಸ್ಥಾನಾನುಗುಣವಾಗಿ ಮಂಡಿಸಿದ್ದರು. ರಾಣಿವಾಸದ ಉತ್ತಮಸ್ತೀಯರು ಎರಡುಪಕ್ಕದಲ್ಲಿಯೂ ಇದ್ದರು. ನೂರುಜನ ತಮ್ಮಂದಿರೂ ಹಿಂದುಗಡೆ ಇದ್ದರು. ಲಕ್ಷಣನೇ ಮೊದಲಾದ ನೂರು ಜನ ಮಕ್ಕಳು ಮುಂಭಾಗವನ್ನಲಂಕರಿಸಿದ್ದರು. ಯುವರಾಜನೂ ಪ್ರೀತಿಯ ತಮ್ಮನೂ ಆದ ದುಶ್ಯಾಸನನೂ ಪ್ರೀತಿಯ ಸೇವಕನೂ ಅಂಗರಾಜನೂ ಆದ ಕರ್ಣನೂ ಎರಡು ಪಕ್ಕಗಳಲ್ಲಿಯೂ ತೊಡೆಸೋಂಕುವ ಹಾಗೆ ಹತ್ತಿರದಲ್ಲಿ ಕುಳಿತಿದ್ದರು. -೨೯. ಪುಷ್ಪಬಾಣವನ್ನು ಮಸೆದ ಹಾಗಿರುವ ಅನೇಕ ಒಳ್ಳೆಯ ಸ್ತ್ರೀಯರು ಆಕರ್ಷಕವಾಗಿ ಪ್ರೀತಿಯಿಂದ ಹಾಡುತ್ತಿದ್ದರು, ಜೇನಮಳೆಯನ್ನು ಸುರಿಸಿದಂತಿರುವ ಸಂಗೀತವು ಎಲ್ಲೆಡೆಯಲ್ಲಿಯೂ ವ್ಯಾಪಿಸಿದ್ದಿತು. ಮನಸ್ಸಿಗೂ ಆಸ್ಥಾನಮಂಟಪಕ್ಕೂ ರಮಣೀಯ ವಾಗಿರುವಂತೆ ಪ್ರಸಿದ್ಧವಾಗಿರುವ ರಥಿಕರು ಚಿತ್ತಾಕರ್ಷಕವಾಗಿರಲು ಆ ದುರ್ಯೊಧನನ • ಆಸ್ಥಾನಮಂಟಪವು ಇಂದ್ರನ ಸಭೆಯನ್ನು ಕೀಳಾಗಿ ಕಣ್ಣಿಗೆ ಒಪ್ಪುವಂತಿತ್ತು. ವ|| ಅಂತಹ ಒಡೋಲಗದಲ್ಲಿದ್ದ ದುರ್ಯೋಧನನಿಗೆ ಮೂರನೆಯ ಬಾಗಿಲಿನಲ್ಲಿ ಬಂದಿದ್ದ ಕೃಷ್ಣನ ಆಗಮನವನ್ನು ಪ್ರತೀಹಾರಿಯು ಬಂದು ತಿಳಿಸಲು ದುರ್ಯೊಧನನು
Page #428
--------------------------------------------------------------------------
________________
ನವಮಾಶ್ವಾಸಂ / ೪೨೩ ಕಂll ಲೋಕ ಗುರು ಶಂಖ ಚಕ್ರ ಗ
ದಾಕರನತಿಶಯ ಚತುರ್ಭುಜಂ ಜನಜನಿತ | ವ್ಯಾಕುಳದೆ ಬಂದನೆಂದೂಡ
ಲೋಕದೊಳಿನ್ನನ್ನ ದೊರೆಗೆ ಪಿರಿಯರುಮೊಳರೇ || ೩೦ ವ|| ಎಂದು ತನ್ನ ಬೆಸನನ ಪಾರ್ದು ಲಲಾಟ ತಟ ಘಟಿತ ಮುಕುಳಿತ ಕರಕಮಳನಾಗಿರ್ದ ಮಹಾಪ್ರತಿಹಾರನ ಮೊಗಮಂ ನೋಡಿಮ!! ಬರವೇನೆಂಬುದುಮಂಜನಾಚಲದವೋಲ್ ಕಣೋ ಬರ್ಪಂಬುಜೋ
ದರನಂ ಮೆಲ್ಲನೆ ನೋಡಿ ಮೆಚ್ಚಲಸಿದಂತಂತಾನುಮತ್ತಿರ್ದು ಕೇ | ಸರಿ ಪೀಠಾಗ್ರದಿನಪ್ಪಿಕೊಂಡು ಪೊಡವಟ್ಟುಶ್ಯಾಸನಾಸೀನನಾ
ಗಿರವೇರ್ಷ್ಟಮನಿತ್ತನಂತರಮೆ ತಾಂ ಕುಳ್ಳಿರ್ದು ದುರ್ಯೋಧನಂ || ೩೧ ವ|| ಅಂತು ಮಧುಕೈಟಭಾರಾತಿಯ ಮೊಗಮಂ ನೋಡಿಕ೦ll ಸಂಸಾರದೊಳಿನ್ನೆನ್ನವೊ
ಲೇಂ ಜಿಪಂ ಪಡೆದರೂಳಗೆ ನೀಂ ಬರ ಪತೇಂ | ಕಂಸಾರೀ ಯುಷ್ಯತ್ವದ ಪಾಂಸುಗಳಿಂದಾಂ ಪವಿತ್ರಗಾತ್ರನೆನಾದಂ || ಬಂದ ಬರವಾವುದಿದು ಬಿಸ ವಂದಂ ಬೆಸನಾವುದಾವ ಬೆಸನಂ ಬೆಸಸಲ್ | ಬಂದಿರ್ ಬರವಿನೊಳೀಗಳ ಗುಂದಲೆಯಾಯ್ತನಗಮೀಗಳೆಂಬುದುಮಾಗಳ್ ||
ಭೀಷ್ಮನ ಮುಖವನ್ನು ನೋಡಿ-೩೦. ಲೋಕಗುರುವೂ ಶಂಖಚಕ್ರಗದಾಪಾಣಿಯೂ ಅತಿಶಯವಾದ ನಾಲ್ಕುತೋಳುಗಳುಳ್ಳವನೂ ಆದ ಕೃಷ್ಣನೇ ಲೋಕಪ್ರಸಿದ್ಧವಾದ ಚಿಂತೆಯಿಂದ ನನ್ನ ಬಳಿಗೆ ಬಂದಿದ್ದಾನೆ ಎನ್ನುವಾಗ ಲೋಕದಲ್ಲಿ ನನಗೆ ಸಮಾನವಾದ ಹಿರಿಮೆಯುಳ್ಳವರೂ ಇದ್ದಾರೆಯೇ ಎಂದನು. ವಗಿ ತನ್ನ ಅಪ್ಪಣೆಯನ್ನೇ ನಿರೀಕ್ಷಿಸುತ್ತ ಕೈಮುಗಿದು (ಮೊಗ್ಗಾಗಿ ಮಾಡಿದ್ದ ಕರಕಮಲವನ್ನು ಮುಖದ ಸಮೀಪದಲ್ಲಿ ಸೇರಿಸಿದ್ದು) ನಿಂತಿದ್ದ ಮಹಾದ್ವಾರಪಾಲಕನ ಮುಖವನ್ನು ನೋಡಿ-೩೧. 'ಬರಹೇಳು' ಎಂದನು. ಅಂಜನ ಪರ್ವತದಂತೆ ಕಣ್ಣಿಗೆ ಮನೋಹರವಾಗಿರುವಂತೆ ಕೃಷ್ಣನು ಪ್ರವೇಶಿಸಿದನು. ಅವನನ್ನು ನಿಧಾನವಾಗಿ ನೋಡಿ ಶರೀರಕ್ಕೆ ಏನೋ ಆಯಾಸವಾಗಿರುವಂತೆ ಹೇಗೋ ಎದ್ದು ಸಿಂಹಾಸನದಿಂದಲೇ ಆಲಿಂಗನಮಾಡಿಕೊಂಡು ನಮಸ್ಕಾರಮಾಡಿ ಎತ್ತರವಾದ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ಹೇಳಿದನು. ಅರ್ಭ್ಯವನ್ನು ಕೊಟ್ಟಾದಮೇಲೆಯೇ `ದುರ್ಯೊಧನನು ತಾನೂ ಕುಳಿತುಕೊಂಡನು. ವ|| ಮಧುಕೈಟಭರೆಂಬವರ ಶತ್ರುವಾದ ಕೃಷ್ಣನ ಮುಖವನ್ನು ನೋಡಿ ಹೇಳಿದನು. ೩೨. 'ಕೃಷ್ಣ, ನೀನು ಬರಲಾಗಿ ಸಂಸಾರದಲ್ಲಿ ಇನ್ನು ಮೇಲೆ ನನ್ನಂತಹ ಅದೃಷ್ಟಶಾಲಿಗಳಾದವರೂ ಇದ್ದಾರೆಯೇ ? ಮತ್ತೇನು ನಿನ್ನ ಪಾದಧೂಳಿಯಿಂದ ನಾನು ಪರಿಶುದ್ಧವಾದ ಶರೀರವುಳ್ಳವನಾಗಿದ್ದೇನೆ. ೩೩. ತಾವು ದಯಮಾಡಿಸಿದ ಕಾರಣ ಯಾವುದು ? ನಿಮ್ಮ ಆಗಮನ ಆಶ್ಚರ್ಯಕರವಾದುದು;
Page #429
--------------------------------------------------------------------------
________________
೪೨೪ | ಪಂಪಭಾರತಂ
ಅಯ ನಯ ಪರಾಕ್ರಮೋವಾ ಶ್ರಯಂಗಳಂ ಶ್ರೀಗಡರ್ಪುಮಾಡಿದ ನಿನ್ನಿಂ | ದ್ರಿಯ ಜಯಮ ಕೂಡ ಲೋಕ
ತಯದಿಂ ಪೊಗಟಿಸಿದುದಿಂತು ಪಿರಿಯರುಮೊಳರೇ || ಕಂil.
ಉನ್ನತನೆ ಆಗಿಯುಂ ನುಡಿ ನಯನಳವಣನಳವು ವಿನಯಮನಾದಂ | ಮನ್ನಣೆ ಗುರುಜನಮಂ ನಾ ಮನ್ನಿಸಿದುದು ಹಿರಿಯ ಸಿರಿಯೊಳೇಂ ಸುಜನತೆಯೋ | ಕುವಳಯಬಾಂಧವನಸವನ ಕುವಳಯಮಂ ಬೆಳಸಿ ಕುವಳಯಂ ಪೊಅಗೆನೆ ಪಾಂ | ಡವರ ಪೊಅಗಾಗ ನಿನಗೀ ಕುವಳಯಪತಿಯೆಂಬ ಪಂಪೊಡಂಬಡೆ ನೃಪತೀ | ೩೭ ಮನಕತದಿಂದೊರ್ವರ ನಿನಿಸನಗಲಿರ್ದಿರಿನಿಸ ನಿಮಗಂ ತಮಗಂ | ಮುನಿಸುಂಟೆ ಕಾಯ್ದ ಬೆನ್ನೀರ್ ಮನೆ ಸುಡದಂಬೊಂದು ನುಡಿಯವೊಲ್ ಕುರುರಾಜಾ || ೩೮ ಪೊಂಗುವ ಮಲಪರ ಮಲೆಗಳ ಡಂಗಂ ಕಣಲೆವ ಮಂಡಲಂಗಳ ಪ್ರತ್ಯಂ | ತಂಗಳನಲೋಳವ ಪಾಂಡವ | ರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ |.
ಯಾವ ಕಾರ್ಯವನ್ನು ಆಜ್ಞೆ ಮಾಡಲು ಬಂದಿದ್ದೀರಿ ? ಈಗ ನಿಮ್ಮ ಬರುವಿಕೆಯಿಂದ ನನಗೂ ಗೌರವವುಂಟಾಗಿದೆ ಎಂದು ಪ್ರಶ್ನೆಮಾಡಿದನು. ಆಗ -೩೪. ಆ ಸಭಾಸ್ಥಾನದಲ್ಲಿ ಕೃಷ್ಣನು ತನ್ನ ಅಭಿನಯದಿಂದಲೇ ಮಾತುಗಳನ್ನು ಜೋಡಿಸುತ್ತಿರಲು ಹಲ್ಲುಗಳ ಕಾಂತಿಯು ಹಾಸುಹೊಕ್ಕಾಗಿ ಹರಡಿ ಸಭಾಭವನವು ಪ್ರಕಾಶಮಾನವಾಗಿರಲು ಮಾತನಾಡಿದನು. ೩೫. ನಯ ನೀತಿ ಪರಾಕ್ರಮಗಳನ್ನು ಯಶೋಲಕ್ಷ್ಮಿಗೆ ಅಧೀನವನ್ನಾಗಿಸಿರುವ ಜಿತೇಂದ್ರಿಯತ್ವವು ಮೂರುಲೋಕಗಳಿಂದಲೂ ಹೊಗಳಿಸಿಕೊಳ್ಳುತ್ತಿದೆ. ನಿನ್ನಂತಹ ಹಿರಿಯರು ಯಾರಿದ್ದಾರೆ ? ೩೬. ಉನ್ನತವಾಗಿದ್ದರೂ ನಿನ್ನ ಮಾತಿನಲ್ಲಿ ಸತ್ಯಸಂಧತೆಯೂ ಶಕ್ತಿಯಲ್ಲಿ ಪರಾಕ್ರಮವೂ ಪಾಂಡಿತ್ಯದಲ್ಲಿ ವಿನಯವೂ ಹಿರಿಯರಲ್ಲಿ ಮರ್ಯಾದೆಯೂ ನಿನ್ನಲ್ಲಿ ಶೋಭಿಸುತ್ತಿವೆ. ಹೆಚ್ಚಾದ ಸಿರಿಯಿದ್ದರೂ ನಿನ್ನಲ್ಲಿ ಸೌಜನ್ಯವಿದೆ! ೩೭. ಚಂದ್ರನು ಭೂಮಿಯನ್ನೆಲ್ಲ ಬೆಳಗಿಸಿ ಕನ್ನೈದಿಲೆಗೆ ಮಾತ್ರ ಹೊರಗಾಗಿದ್ದಾನೆ ಎಂದರೆ ಸೊಗಯಿಸುತ್ತಾನೆಯೆ ? ಹಾಗೆಯೇ ಪಾಂಡವರು ಹೊರಗಾಗಿದ್ದರೆ ನಿನಗೆ ಭೂಪತಿ (ಚಕ್ರವರ್ತಿ)ಯೆಂಬ ಹಿರಿಮ ಒಪ್ಪುತ್ತದೆಯೇ ? ೩೯. ಇದುವರೆಗೆ ಏನೋ ಮನಸ್ತಾಪದಿಂದ ಒಬ್ಬರನ್ನೊಬ್ಬರು ಅಗಲಿದ್ದೀರಿ ಇಷ್ಟೇ. ನಿಮಗೂ ಅವರಿಗೂ ಕ್ರೋಧವುಂಟೆ? ದುರ್ಯೊಧನ, ಕಾದ
Page #430
--------------------------------------------------------------------------
________________
ನವಮಾಶ್ವಾಸಂ (೪೨೫ ಪಟ್ಟದ ಮೊದಲಿಗರಾಜಿಗೆ ಜಟ್ಟಿಗರವರೆಂದುಮಾಳ್ ಮುನ್ನಿನ ನೆಲನಂ | ಕೊಟ್ಟು ಬಯಟ್ಟು ನಿನಗೊಡ ವುಟ್ಟಿದರಾ ದೂರೆಯರಾಗೆ ತೀರದುದುಂಟೇ || ಮುನ್ನಿನ ನೆಲನಂ ಕುಡುಗೆಮ ಗೆನ್ನರ್ ದಾಯಿಗರೆಮೆನ್ನರತಂತ | ಲೆನ್ನರ್ ಕರುಣಿಸಿ ದಯೆಯಿಂ
ದಿನ್ನಿತ್ತುದೆ ಸಾಲುಮೆಂಬರೆಂಬುದನೆಂಬರ್ | ಚoll ಕರಿ ಕಳಭ ಪ್ರಚಂಡ ಮೃಗರಾಜ ಕಿಶೋರ ಕಠೋರ ಘೋರ ಹೂಂ
ಕರಣ ಭಯಂಕರಾಟವಿಯೊಳಿನ್ನೆವರಂ ನಲಸಿರ್ದ ಸೇದ ನೀಂ | ಕರುಣಿಸಿದಾಗಳಲ್ಲದವರ್ಗಾಅದು ಕಮ್ಮಗೆ ನಾಡ ಚಲ್ಲವ ತರ ನುಡಿಗೊಳ್ಳದಿರ್ ನಿನಗೆ ಪಾಂಡವರಪುದನಾರುಮಪ್ಪರೇ || ೪೨ ಒಂದುಮೊಡಂಬಡುಂ ಪೊರೆಯುಮಿಲ್ಲವರ್ಗೆಂಬುದನೆಯ ನಂಬಿ ನಾ ಡಂ ದಯೆಗೆಯ್ದು ನೀಂ ಕುಡುವಿನಂ ರ್ಪತೇ ಪಡೆಮಾತೂ ಪಳ್ಳಿರ | ಲೈಂದವರ್ಗಿವುದೂಳು ನಿಲೆ ಕೆಂಚಿ ನಗಚ್ಯ ವಾರಣಾಸಿ ಕಾದ ಕಂದಿ ಕುರುಸ್ಥಳಂ ವರ ವೃಕಸ್ಥಳಮಂಬಿವನನ್ನು ಬಾಡಮಂ ॥ ೪೩
ಉll
ಬಿಸಿನೀರು ಮನೆಯನ್ನು ಸುಡುವುದೆ ? ೩೯. ಕೌರವವಂಶವೆಂಬ ಆಕಾಶಕ್ಕೆ ಸೂರ್ಯನಂತಿರುವ ಎಲೈ ದುರ್ಯೋಧನನೇ ಪಾಂಡವರೊಡನೆ ಸ್ನೇಹವನ್ನು ಗಳಿಸಿದರೆ ನಿನಗೆ ಪ್ರತಿಭಟಿಸುವ ಪರ್ವತರಾಜರ ಸುಂಕದ ಕಟ್ಟೆಗಳೂ ಅಹಂಕಾರದಿಂದ ವರ್ತಿಸುವ ದೇಶಗಳ ಗಡಿಪ್ರದೇಶಗಳೂ ಎನ್ನುವುವು ಇರುತ್ತವೆಯೇ ? ೪೦. ಅದೂ ಇರಲಿ, ಅವರು ರಾಜ್ಯಪಟ್ಟಕ್ಕೆ ಮೊದಲು ಅರ್ಹರಾದವರು, ಯುದ್ದದಲ್ಲಿ ಶೂರರಾದವರು. ಅವರು ಯಾವಾಗಲೂ ಮೊದಲಿಂದ ಆಳುತ್ತಿದ್ದ ರಾಜ್ಯವನ್ನು ಅವರಿಗೆ ಕೊಟ್ಟು ಆ ಸಮಾಚಾರವನ್ನು ದೂತರ ಮೂಲಕ ಹೇಳಿಕಳುಹಿಸು. ನಿನ್ನ ಸಹೋದರರು ಅಂತಹ ಸಮರ್ಥರಾಗಿರಲು ನಿನಗಸಾಧ್ಯವಾದುದೂ ಉಂಟೇ ? ೪೧. ಅವರು ನಮಗೆ ಮೊದಲಿನ ನೆಲವನ್ನೆ ಕೊಡು ಎನ್ನುವುದಿಲ್ಲ, ನಾವು ದಾಯಾದಿಗಳು (ಸಮಭಾಗಿಗಳು) ಎನ್ನುವುದಿಲ್ಲ. ಹೀಗಲ್ಲ ಹಾಗಲ್ಲ ಎನ್ನುವುದಿಲ್ಲ. ನೀನು ದಯೆಯಿಯಿಂದ ಕೊಟ್ಟುದು ಸಾಕು ಎನ್ನುತ್ತಾರೆ. ನೀನು ಹೇಳಿದಂತೆ ಕೇಳುವರು. ೪೨. ಆನೆಯ ಮತ್ತು ಭಯಂಕರವಾದ ಸಿಂಹದ ಮರಿಗಳ ಕರ್ಕಶವೂ ಭಯಂಕರವೂ ಆದ ಹೂಂಕರಣ ಶಬ್ದದಿಂದ ಕೂಡಿದ ಘೋರವಾದ ಕಾಡಿನಲ್ಲಿ ಇದುವರೆಗೂ ಅವರು ವಾಸಮಾಡಿದ ಆಯಾಸವು ನೀನು ದಯೆತೋರಿಸಿದಲ್ಲದೆ ಶಮನವಾಗುವುದಿಲ್ಲ. ಸುಮ್ಮನೆ ನಂಬಿಸಿ ಹೊಟ್ಟೆಹೊರೆಯುವ ಬೀದಿಹೋಕರ ಮಾತುಗಳನ್ನು ಕೇಳಬೇಡ, ನಿನ್ನ ಕಷ್ಟಸುಖಕ್ಕೆ ಪಾಂಡವರಾಗುವಂತೆ ಇತರರಾಗುತ್ತಾರೆಯೆ ? ೪೩. ಪಾಂಡವರಿಗೆ ಯಾವ ಒಡಂಬಡಿಕೆಯೂ ರಕ್ಷಣೆಯೂ ಇಲ್ಲ ಎಂದು ಚೆನ್ನಾಗಿ ನಂಬಿ ಬೇರೆ ಮಾತಿಲ್ಲದೆ
Page #431
--------------------------------------------------------------------------
________________
೪೨೬ | ಪಂಪಭಾರತಂ
ವ|| ಎಂಬುದು ಸುಯೋಧನಂ ಕ್ರೋಧಾನಲೋದ್ದೀಪಿತ ಹೃದಯನಾಗಿ ಶೌರ್ಯಮ ದಾಡಂಬರದೊಳಂಬರಂಬರಂ ಸಿಬಲ್ಲುಚಂ1 ತೊಲಗದ ಗೋವುಗಾದ ಕಿಯಂದಿನ ಗೋವಿಕೆ ನಿನ್ನ ಚಿತ್ತದೊಳ್
ನೆಲಸಿದುದಕ್ಕುಮಗಳದ ವೈಷ್ಣವ ಮೋಹಮೆ ನಿನ್ನ ಮಯ್ಯೋಳ | ಗಲಿಸಿದುದಕುಮಾ ಜಡಧಿ ಸಂಗತಿಯಿಂ ಜಡಬುದ್ಧಿ ಬುದ್ಧಿಯಂ ತೊಲಗಿಸಿತಕ್ಕುಮಲ್ಲದೂಡ ನೀನಿನಿತಂ ನುಡಿವೈ ಪಳಾಳಮಂ || ಕಂ | ಪಳಪಟ್ಟ ಪಗೆವರಂ ನೆ |
ಪಟಪಡಲಣವೀಯದವರನವರ್ಗಳ ಬಾಳ್ | ನಿಳಸಲ್ ಬಗದ್ಯ ಕರಮನ
ಗುಜದಿರ್ಕುಮೆ ನಿನ್ನ ಪೇಟ್ಟ ಧರ್ಮಶ್ರವಣಂ || ಉll
ಭಾಗಮನಾಸೆವಟ್ಟಳಿಪಿ ಬೇಟ್ಟುದು ನಿನ್ನಯ ಕಲ್ಕ ವಿದ್ದ ನೀ ನಾಗಳುಮಣ್ಣ ಬೇಡಿದಪ ಸಜ್ಜನದಂತೆನಗೆಕ್ಕಬಾಗ ನೋ | ಡೀಗಳಿಳಾಲತಾಂಗಿ ಪುದವಲ್ಲಳದಂತನೆ ಮುನ್ನ ನೂಲ ತೋ ಡಾಗದೆ ಕೆಟ್ಟು ಪೋದವರನಿಂ ಮಗುಟ್ಟುಂ ನಿಪಂತು ಬೆಳ್ಳನೇ || ೪೬
ರಾಜ್ಯವನ್ನು ದಯಮಾಡಿ ಕೊಡುವುದಾದರೆ ಕಂಚಿ, ಶ್ರೇಷ್ಠವಾದ ವಾರಣಾಸಿ, ಕಾಕಂದಿ, ಕುರುಸ್ಥಳ, ಉತ್ತಮವಾದ ಕಸ್ಥಳ ಎಂಬ ಅಯ್ದ ಹಳ್ಳಿಗಳನ್ನು ಅವರಿಗೆ ಮಲಗುವುದಕ್ಕೆ (ಸಾಕಷ್ಟು ನೆಲವನ್ನು) ಲೋಕ ಮೆಚ್ಚುವ ಹಾಗೆ (ನಿನ್ನ ಸದ್ಗುಣ ಸ್ಥಿರವಾಗುವ ಹಾಗೆ) ಕೊಟ್ಟರೆ ಸಾಕು. ವ|| ಎನ್ನಲು ದುರ್ಯೋಧನನು ಕ್ರೋಧಾಗ್ನಿಯಿಂದ ಉರಿಯುತ್ತಿರುವ ಹೃದಯವುಳ್ಳವನಾಗಿ ಶೌರ್ಯದ ಸೊಕ್ಕಿನ ಉಬ್ಬರದಲ್ಲಿ ಆಕಾಶದವರೆಗೂ ಸಿಡಿದು ಕೃಷ್ಣನನ್ನು ಕುರಿತು ಹೇಳಿದನು. ೪೪. ಬಾಲ್ಯದ ದನಕಾಯುವ ಮನೋಭಾವ ನಿನ್ನಲ್ಲಿ ಹೋಗದೆ ಇನ್ನೂ ನೆಲೆಸಿರುವಂತಿದೆ. ಅತಿಶಯವಾದ ವೈಷ್ಣವ ಮೋಹವು ನಿನ್ನ ಶರೀರದಲ್ಲಿ ಮಿತಿಮೀರಿರಬೇಕು. ಆ ಜಲಧಿ (ಕ್ಷೀರಸಮುದ್ರ) ಸಂಬಂಧದಿಂದ ಬಂದ ಜಡಬುದ್ದಿಯು ನಿನ್ನ ಬುದ್ದಿಯನ್ನು ತೊಲಗಿಸಿರಬೇಕು. ಅಲ್ಲದಿದ್ದರೆ ನೀನು ಈ ಮೋಸದ ಮಾತನ್ನು ಆಡುತ್ತಿದ್ದೆಯಾ ೪೫. ಹರಿದುಹೋದ (ಕತ್ತರಿಸಿಹೋಗಿರುವ) ಸಂಬಂಧವುಳ್ಳ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವುದಕ್ಕೆ ಅವಕಾಶಕೊಡದೆ ಅವರ ಮೊದಲ ಉನ್ನತಸ್ಥಿತಿಯಲ್ಲಿ ಪುನಃ ಸ್ಥಾಪಿಸಲು ಮನಸ್ಸು ಮಾಡಿದ್ದೀಯ. ನೀನು ಹೇಳಿದ ಧರ್ಮಶ್ರವಣವು ನನಗೆ ಹಿಡಿಸುವುದಿಲ್ಲವಲ್ಲವೆ ? ೪೬. ಭೂಭಾಗವನ್ನು ಕೊಡೆಂದು ಆಶೆಪಟ್ಟು ಕೇಳಿಕೊಳ್ಳುವುದು ನೀನು ಮೊದಲಿಂದ ಕಲಿತ ವಿದ್ಯೆ, ನೀನು ಯಾವಾಗಲೂ ಬೇಡುವ ಸ್ವಭಾವವುಳ್ಳವನು ತಾನೆ. ಈಗ ನನಗೆ ಭೂಮಿಯಂಬ ಸ್ತ್ರೀಯು ಕುಲವಧುವಿನಂತೆ ಒಬ್ಬನೇ ಅನುಭವಿಸುವುದಕ್ಕೆ ಯೋಗ್ಯಳಾದವಳು. ಮತ್ತೊಬ್ಬರೊಡನೆ ಜೊತೆಗೂಡಿ ಇರುವವಳಲ್ಲ. ಅದು ಹೇಗೆಂದರೆ ಮೊದಲು ಕತ್ತರಿಸಿ ಹೋದ ನೂಲಿನಂತೆ ತಿರುಗಿ ಸೇರಿಸಲಾಗದುದು. ಕೆಟ್ಟು ಹೋದವರನ್ನು ಪುನಃ
Page #432
--------------------------------------------------------------------------
________________
ನವಮಾಶ್ವಾಸಂ / ೪೨೭ ಮll ವಿಜಿಗೀಷುತ್ವದೊಳೊಂದಿ ಗೋವುಳಿಗನಪ್ಪಂ ಮತ್ಸ ನಾಳಾಗಿ ವಾ
ರಿಜನಾಭಂ ಹರಿಯಂಬ ದೊಡ್ಡಿವೆಸರು ಪೊತ್ತಿರ್ದ ನೀಂ ಮಂತ್ರಿಯಾ | ಗೆ ಜಯೋದ್ಯೋಗಮನೆತ್ತಿಕೊಂಡು ರಣದೊಳ್ ಭೂಭಾಗಮಂ ನೆಟ್ಟನೂ
ಬೃಜೆಯಿಂದಂಜಿಸಿಕೊಳ್ಳದಿರ್ಪಿರೆ ಸಮಂತಾ ಗಂಡರೀ ಗಂಡರಂ || ೪೭ ಚಂ! ಪುಸಿಯನೆ ಸಾಮಮಂ ನುಡಿದು ಭೇದಮನುಂಟೊಡತಾಗೆ ಮಾಡಿ ಛಿ
ದ್ರಿಸಲೊಳಪೊಕ್ಕು ಮಿಕ್ಕು ನೆಗಟ್ಟುಗ್ರವಿರೋಧಿಗಳೆತ್ತಮೆಯ್ದೆ ಬಂ | ಚಿಸಿ ಪೊಂಗಕ್ಕೆ ಸರನೆ ತಾವೊಳಗಂ ತವೆ ತೋಡಿ ತಿಂದು ರ ಕಸಿಯರ ಕಂಡ ಕುಂಬಳದ ಮಾವೊಲಾಗಿರೆ ಮಾಡದಿರ್ಪಿರೇ || ೪೮
ವll ನಾಮಲ್ಲಮೊಂದೆ ಗರುಡಿಯೊಳೋದಿದ ಮಾನಸರೆವಮ್ಮ ನಿಮ್ಮಡಿ ಕೆಮ್ಮನೆ ಬಬಲಿಸಲ್ಬಡ ಬಂದ ಬಟ್ಟೆಯಿನ ಬಿಜಯಂಗೆಯ್ಕೆಮೆನೆ ಮುರಾಂತಕನಂತಕನಂತ ಮಾಮಸಕಂ ಮಸಗಿ ದುರ್ಯೋಧನನನಿಂತೆಂದಂಉll ಸೀತಯ ದೂಸಂದಣಿದ ರಾವಣನಂತಿರೆ ನೀನುಮೀಗಳೇ
ಸೀತೆಯ ದೂಸಂದಣಿಯಲಾಟಸಿದೆ ನಿನಗಂತು ಸೀತೆಯೇ ! ಸೀತೆ ಕಡಂಗಿ ಕಾಯ್ದು ಕಡೆಗಣಿದಳಪ್ರೊಡೆ ಧಾತ್ರನಿಂ ತೊದ ಊಾತಿನೊಳೇನೂ ಪಾಂಡವರ ಕೆಯ್ಯೋಳೆ ನಿನ್ನ ನಿಸೇಕಮಾಗದೇ ೪೯
ಸ್ಥಾಪಿಸುವುದಕ್ಕೆ ನಾನು ದಡ್ಡನೇ ? ೪೭. ಗೋವಳಿಗನಾಗಿದ್ದು ಜಯಾಕಾಂಕ್ಷೆಯಿಂದ ಕೂಡಿ ವಿರಾಟನ ಸೇವಕನಾಗಿ (ಮನುಷ್ಯನ ಆಳಾಗಿ) ಕಮಲನಾಭ, ಹರಿ, ಎನ್ನುವ ದೊಡ್ಡ ಹೆಸರನ್ನು ಹೊತ್ತಿರುವ ನೀನು ಮಂತ್ರಿಯಾಗಿರಲು ಆ ಶೂರರಾದ ಪಾಂಡವರು ಜಯೋದ್ಯೋಗವನ್ನು ಹೂಡಿ (ಯುದ್ಧದಲ್ಲಿ ಗೆಲ್ಲುವ ಕಾರ್ಯದಲ್ಲಿ ತೊಡಗಿ) ಶೂರರಾದ ನಮ್ಮನ್ನು ಪರಾಕ್ರಮದಿಂದ ಹೆದರಿಸಿ ಯುದ್ದದಲ್ಲಿ ನೇರವಾಗಿ ಭೂಮಿಯ ಭಾಗವನ್ನು ಪೂರ್ಣವಾಗಿ ಪಡೆಯದೇ ಇರುತ್ತಾರೆಯೇ ? ೪೮. ಸುಳ್ಳು ಸಾಮವನ್ನು ಹೇಳಿ, ಕೂಡಲೆ ಭೇದವನ್ನುಂಟುಮಾಡಿ, ಛಿದ್ರಿಸಲು ಒಳಹೊಕ್ಕು, ಉಗ್ರ ವಿರೋಧಿಗಳಾದ ನೀವು ಎಲ್ಲ ರೀತಿಯಿಂದಲೂ ವಂಚನೆಮಾಡಿ ರಾಕ್ಷಸಿಯರು ನೋಡಿದ ಕುಂಬಳದ ಕಾಯಿಯಂತೆ ಹೊರಗಡೆ ಮಾತ್ರ ಸರಿಯಾದವರಂತೆ ತೋರಿ ಒಳಗೆಯೆ ಕೇಡನ್ನು ಮಾಡದಿರುತ್ತೀರಾ ? ವ|| ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರಾಗಿದ್ದೇವೆ. ನೀವು ನಮ್ಮನ್ನು ವೃಥಾ ಆಯಾಸಪಡಿಸಬೇಡಿ ; ಬಂದ ದಾರಿಯಲ್ಲಿ ಬಿಜಯಮಾಡಿಸಿ ಎಂದನು. ಕೃಷ್ಣನು ಯಮನಂತೆ ವಿಶೇಷವಾಗಿ ಕೋಪಿಸಿಕೊಂಡು ದುರ್ಯೋಧನನಿಗೆ ಹೀಗೆಂದನು. ೪೯. ಸೀತಾದೇವಿಯ ಕಾರಣದಿಂದ ನಾಶವಾದ ರಾವಣನ ಹಾಗೆ ಈಗ ನೀನೂ ಕೂಡ ರಾಜ್ಯದ (ಭೂಮಿಯ) ಆಸೆಯಿಂದ ನಾಶವಾಗಲು ಆಶಿಸುತ್ತಿದ್ದೀಯೆ ; ನಿನಗೆ ಈ ಸೀತೆ (ಭೂಮಿಯು) ಆ ಸೀತೆಯೇ ಆಗಿದ್ದಾಳೆ. (ನಾಶಕಾರಕಳು). ಉತ್ಸಾಹಿಸಿ ಕೋಪದಿಂದ ನಿನ್ನನ್ನು ಭೂಮಿಯು ತಿರಸ್ಕರಿಸುವುದಾದರೆ ಬ್ರಹ್ಮನ ಸಹಾಯದಿಂದಲೇ ಪಾಂಡವರ ಕಮ್ಮಿಂದಲೇ ನಿನಗೆ ನಿಷೇಕ (ಶಾಸ್ತಿ, ಪ್ರಸ್ತುತ) ಆಗದಿರುತ್ತದೆಯೇ ? ಅಡ್ಡ
28
Page #433
--------------------------------------------------------------------------
________________
೪೨೮ ಪಂಪಭಾರತಂ
ಆರ್ಕಡುಕೆಯು ಪಾಂಡವರೊಳಾಂತಿಯಲ್ ನೆರೆವನ್ನರಿಂತಿದೇ ತರ್ಕ ಬಿಗುರ್ತಪೈ ನೆಲನೊಪ್ಪಿಸಿ ತಪ್ಪದೆ ಬಾಬನನ್ನದೀ | ಯುರ್ಕಿನೊಳೆಂತು ನಿಂದು ಸೆಣಸಲ್ ಬಗೆ ಬಂದುದು ನಿನ್ನ ಮಯ್ಯ ನೆ
ತರ್ಕುದಿದುರ್ಕಿ ಸಾವ ಬಗೆಯಿಂ ಸೆಣಸಲ್ ಬಗೆ ಬಂದುದಾಗದೇ || ೫೦ ಕoli ಮುಳಿಯಿಸಿ ಬರ್ದು೦ಕಲಾದನು
ಮೊಳನೆ ಯುಧಿಷ್ಠಿರನನಮಳರಳವೆಂಬುದು ಭೂ | ವಳಯ ಪ್ರಸಿದ್ಧಮರಿತೃಪ ಬಳಂಗಳವರಿಚೆಯೆ ಪಳವೆಂಬರುಮೊಳರೇ ||
೫೧ ಚಂii ಗಜೆಗೊಳೆ ಭೀಮಸೇನನಿದಿರಾಂತು ಬರ್ದುಂಕುವ ವರಿ ಭೂಭುಜ
ಧ್ವಜಿನಿಗಳಿಲ್ಲದಲ್ಲದೆಯುಮೀ ಯುವರಾಜನ ನೆತ್ತರಂ ಕುರು | ಧ್ವಜಿನಿಯೆ ನೋಡೆ ಪೀರ್ದು ಭವದೂರುಯುಗಂಗಳನಾಜಿರಂಗದೊಳ್ ಗಿಜಿಗಿಜಿ ಮಾಡಲೆಂದವನ ಪೂಣ್ಣುದು ನಿಕ್ಕುವಮಾಗದಿರ್ಕುಮೇ || ೫೨
ವll ಅದಲ್ಲದೆಯುಂ ರಾಜಸೂಯ ವ್ಯತಿಕರದೊಳ್ ದಿಗ್ವಿಜಯಂ ಗೆಯ್ದು ಲಂಕೆಯ ವಿಭೀಷಣನನೊಂದ ದಿವ್ಯಾಸ್ತದೊಳೆಚ್ಚು ಕಪ್ಪಂಗೊಂಡ ವಿಕ್ರಮಾರ್ಜುನನ ವಿಕ್ರಮಮುಮಂ ಕಾಪಿನ ದೇವರೋಂದು ಪೊಬುಮಗಲದ ನೂಜು ಯೋಜನದಳಮಿ ಖಾಂಡವವನಮನನಲಂ
ಮಾತುಗಳಿಂದಲೇನು ಪ್ರಯೋಜನ ೫೦. ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ಯಾರು ಸಮರ್ಥರು ? ಹೀಗೇಕೆ ಉಬ್ಬಿಹೋಗಿದ್ದೀಯೆ ? ಅವರಿಗೆ ಸಲ್ಲಬೇಕಾದ ಭೂಮಿಯನ್ನು ಒಪ್ಪಿಸಿ ತಪ್ಪದೆ (ಶಾಶ್ವತವಾಗಿ) ಬದುಕುತ್ತೇನೆ ಎನ್ನದೆ ಹೀಗೆ ಅಹಂಕಾರದಿಂದ ಪ್ರತಿಭಟಿಸಿ ಸೆಣಸಲು ಹೇಗೆ ನಿನಗೆ ಮನಸ್ಸು ಬಂದಿತು ? ನಿನ್ನ ಶರೀರದ ರಕ್ತ ಕುದಿದು ಉಕ್ಕಿ ಸಾಯುವ ಇಚ್ಛೆಯಿಂದಲೇ ಯುದ್ದಮಾಡಲು ನಿನಗೆ ಮನಸ್ಸು ಬಂದಿರಬೇಕಲ್ಲವೇ ? ೫೧. ಧರ್ಮರಾಜನಿಗೆ ಕೋಪ ಬರುವ ಹಾಗೆ ಮಾಡಿ ಬದುಕಬಲ್ಲವನೂ ಇದ್ದಾನೆಯೇ ? ಯಮಳರಾದ ನಕುಲಸಹದೇವರ ಪರಾಕ್ರಮವೆಂಬುದು ಲೋಕಪ್ರಸಿದ್ಧವಾದುದು. ಅವರು ಯುದ್ದಮಾಡಲು, ಹೆದರವು ಎನ್ನುವ ಶತ್ರುಗಳೂ ಉಂಟೆ ? ೫೨. ಭೀಮಸೇನನು ಗದೆಯನ್ನು ಹಿಡಿಯಲು ಪ್ರತಿಭಟಿಸಿ ಬದುಕುವ ಶತ್ರುಸೈನ್ಯವಿಲ್ಲ ? ಅದೂ ಅಲ್ಲದೆ ಈ ಯುವರಾಜನಾದ ದುಶ್ಯಾಸನನ ರಕ್ತವನ್ನು ಕೌರವಸೈನ್ಯವು ನೋಡುತ್ತಿರುವ ಹಾಗೆಯೇ ಹೀರಿ ನಿನ್ನ ಎರಡು ತೊಡೆಗಳನ್ನೂ ಯುದ್ಧಭೂಮಿಯಲ್ಲಿ ಅಜ್ಜಿಗುಜ್ಜಿ ಮಾಡುತ್ತೇನೆಂದು ಅವನು ಪ್ರತಿಜ್ಞೆ ಮಾಡಿದುದು ನಿಜವಾಗದೇ ಹೋಗುತ್ತದೆಯೇ ? ವll ಅದಲ್ಲದೆ ರಾಜಸೂಯದ ಸಂದರ್ಭದಲ್ಲಿ ದಿಗ್ವಿಜಯವನ್ನು ಮಾಡಿ ಲಂಕಾಪಟ್ಟಣದ ವಿಭೀಷಣನನ್ನು ಒಂದೇ ದಿವ್ಯಾಸ್ತದಿಂದ ಹೊಡೆದು ಕಪ್ಪವನ್ನು ತೆಗೆದುಕೊಂಡ ವಿಕ್ರಮಾರ್ಜುನನ ಪರಾಕ್ರಮವನ್ನು, ರಕ್ಷಣೆಗೋಸ್ಕರ ಇದ್ದ ದೇವತೆಗಳು ಒಂದು ಹೊತ್ತೂ ಅಗಲದಿದ್ದ ನೂರು ಯೋಜನ ವಿಸ್ತಾರದ ಖಾಂಡವವನವನ್ನು ಅಗ್ನಿಗೆ ಸಮರ್ಪಿಸಿದ ಅರಾತಿಕಾಳಾನಳನ ಶಕ್ತಿಯನ್ನೂ, ಯಮನನ್ನೂ ಶ್ರಮವಿಲ್ಲದೆ ಗೆದ್ದು ಬ್ರಾಹ್ಮಣನ ಮಗನ ಹೋಗಿದ್ದ ಪ್ರಾಣವನ್ನು ತಂದ
Page #434
--------------------------------------------------------------------------
________________
ನವಮಾಶ್ವಾಸಂ | ೪೨೯ ಗೂಡಿದರಾತಿಕಾಳಾನಳನಳವುವಂ ಜವನನವಯವದೊಳ್ ಗಲ್ಲು ಪಾರ್ವರ ಒಳ್ಳೆಯ ಪೋದ ಪ್ರಾಣಮಂ ತಂದ ಸಾಹಸಾಭರಣನ ಸಾಹಸಮುಮನಿಂದ್ರಕೀಲ, ನರೇಂದ್ರಮೋಳಿಂದ್ರನ ಬೆಸದೊಳ್ ತಪೋವಿಘಾತಂ ಮಾಡಲೆಂದು ಬಂದ ಪುರಂದರನ ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕೆ ಮಳದ ಶೌಚಾಂಜನೇಯನ ಶೌಚಮುಮಂ ದಾನವಾಧಿಪನಪ್ಪ ಮೂಕದಾನವ ಸೂಕರನನೊಂದೆ ಸೂಬಿಂಬಿನೊಳೆಚ್ಚು ಕೊಂದ ಪರಾಕ್ರಮಧವಳನ ಪರಾಕ್ರಮಮುಮಂ ತ್ರಿಣೇತ್ರನೊಳ್ ಕಾದಿ ಪಾಶುಪತಾಸ್ತಮಂ ಪಡೆದ ಕದನತ್ರಿಣೇತ್ರನ ಗಂಡಗರ್ವಮುಮನಿಂದ್ರಲೋಕಕ್ಕೆ ಪೋಗಿ ದೇವೇಂದ್ರನ ಪಗೆವರಪ್ಪ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರೆಂಬ ದೈತ್ಯರಂ ಪಡಲ್ವಡಿಸಿದ ಪಡೆಮಚ್ಚೆ ಗಂಡನ ಗಂಡುಮಂ ದೇವೇಂದ್ರನೊಳರ್ಧಾಸನಮೇಜೆದ ಗುಣಾರ್ಣವನ ಮಹಿಮಯುಮಂ ಚಳುಕಕುಳತಿಳಕನಷ ವಿಜಯಾದಿತಂಗೆ ಗೋವಿಂದರಾಜಂ ಮುಳಿಯ ತಳರದೆ ಪಂಗಿಕ್ಕಿ ಕಾದ ಶರಣಾಗತ ಜಳನಿಧಿಯ ಪೆಂಪುಮಂ ಗೋಜಿಗನೆಂಬ ಸಕಲ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿಳೆದು ಗೆ ಸಾಮಂತ ಚೂಡಾಮಣಿಯ ಬೀರಮುಮನತಿವರ್ತಿಯಾಗಿ ಮಾರ್ಮಲೆವ ಚಕ್ರವರ್ತಿಯಂ ಕಿಡಿಸಿ ತನ್ನ ನಂಬಿ ಬಂದ ಬದ್ದಗ ದೇವಂಗೆ ಸಕಳ ಸಾಮ್ರಾಜ್ಯಮನೋರಂತು ಮಾಡಿ ತಿಳಿಸಿದರಿಕೇಸರಿಯ ತೋಳ್ಳಲಮುಮಂ ಸಮದಗಜಘಟಾಟೋಪಂಬೆರಸು ನೆಲನದಿರವಂದು ತಾಗಿದ ಕಕ್ಕಲನ ತಮ್ಮನಪ್ಪ ಬಪ್ಪುವನಂಕಕಾಲನನೊಂದ ಮದಾಂಧಗಂಧಸಿಂಧುರದೊಳೋಡಿಸಿದ ವೈರಿಗಜಘಟಾ
ಸಾಹಸಾಭರಣನ ಸಾಹಸವನ್ನೂ, ಇಂದ್ರಕೀಲಪರ್ವತದಲ್ಲಿ ಇಂದ್ರನ ಆಜ್ಞೆಯ ಪ್ರಕಾರ ತಪಸ್ಸಿಗೆ ವಿಚ್ಛಮಾಡಬೇಕೆಂದು ಬಂದ ಇಂದ್ರನ ವೇಶೈಯರ ಕಟಾಕ್ಷದೃಷ್ಟಿಗೂ ಅವರ ಹಿಂಸೆಗೂ ಹೆದರದ ಶೌಚಾಂಜನೇಯನ ಶುಚಿತ್ವವನ್ನೂ, ರಾಕ್ಷಸಾಧಿಪತಿಯಾದ ಮೂಕರಾಕ್ಷಸನೆಂಬ ಹಂದಿಯನ್ನು ಒಂದೇ ಸಲದ ಬಾಣದಲ್ಲಿ ಹೊಡೆದು ಕೊಂದ ಪರಾಕ್ರಮಧವಳನ ಪರಾಕ್ರಮವನ್ನೂ ಈಶ್ವರನಲ್ಲಿ ಕಾದಿ ಪಾಶುಪತಾಸ್ತ್ರವನ್ನು ಪಡೆದ ಕದನತ್ರಿಣೇತ್ರನ ಪೌರುಷಾಹಂಕಾರವನ್ನೂ ಇಂದ್ರಲೋಕಕ್ಕೆ ಹೋಗಿ ದೇವೇಂದ್ರನ ಶತ್ರುಗಳಾಗಿದ್ದ ನಿವಾಚಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರನ್ನು ಕೆಳಗೆ ಬೀಳುವ ಹಾಗೆ ಮಾಡಿದ ಪಡೆಮೆಚೆಗಂಡನ ಪೌರುಷವನ್ನೂ, ದೇವೇಂದ್ರನಲ್ಲಿ ಅರ್ಧಾಸನವನ್ನು ಪಡೆದ ಗುಣಾರ್ಣವನ ಮಹಿಮೆಯನ್ನೂ, ಚಾಳುಕ್ಯಕುಲತಿಲಕನಾದ ವಿಜಯಾದಿತ್ಯನಿಗೆ ಗೋವಿಂದರಾಜನು ಪ್ರತಿಭಟಿಸಲು ಅವನನ್ನು ಸಾವಕಾಶಮಾಡದೆ ಹಿಂದಕ್ಕೆ ನೂಕಿ ರಕ್ಷಿಸಿದ ಶರಣಾಗತ ಸಮುದ್ರನ ಮಹಿಮೆಯನ್ನೂ ಗೊಜ್ಜಿಗನೆಂಬ ಸಕಲಚಕ್ರವರ್ತಿಯು ಆಜ್ಞೆಮಾಡಲು ದಂಡೆತ್ತಿಬಂದ ಮಹಾಸಾಮಂತರನ್ನೆಲ್ಲ ಹಿಮ್ಮೆಟ್ಟುವಂತೆ ಹೊಡೆದು ಗೆದ್ದ ಸಾಮಂತ ಚೂಡಾಮಣಿಯ ವೀರ್ಯವನ್ನೂ, ಎಲ್ಲೆ ಮೀರಿ ಪ್ರತಿಭಟಿಸುವ ಚಕ್ರವರ್ತಿಯನ್ನು ಹಾಳುಮಾಡಿ ತನ್ನನ್ನೇ ನಂಬಿ ಬಂದ ಬದ್ದೆಗದೇವನಿಗೆ ಸಕಲಸಾಮ್ರಾಜ್ಯವನ್ನು ಏಕಪ್ರಕಾರವಾಗಿ ಮಾಡಿ ಸ್ಥಾಪಿಸಿದ ಅರಿಕೇಸರಿಯ ತೋಳ ಬಲವನ್ನು ಮದ್ದಾನೆಗಳ ಗುಂಪಿನ ಆರ್ಭಟದಿಂದ ಕೂಡಿ ಭೂಮಿಯು ನಡುಗುವಂತೆ ಬಂದು ತಾಗಿದ ಕಕ್ಕಲನ ತಮ್ಮನಾದ ಬಪ್ಪುವನೆಂಬ ಜಟ್ಟಿಯನ್ನು ಒಂದೇ ಮದ್ದಾನೆಯಿಂದ ಓಡಿಸಿದ ವೈರಿಗಜಘಟಾವಿಘಟನಪಟುವಾದ
Page #435
--------------------------------------------------------------------------
________________
೪೩೦ | ಪಂಪಭಾರತ ವಿಘಟನನದಟುಮಂ ಪರಚಕ್ರಂಗಳನಂಜಿಸಿದ ಪರಸೈನ್ಯ ಭೈರವನ ಮೇಗಿಲ್ಲದ ಬಲ್ಲಾಳ್ತನಮುಮಂ ಕಂಡುಂ ಕೇಳ್ಳುಂ ನಿನಗೆ ಸೆಣಸಲೆಂತು ಬಗೆ ಬಂದಪುದುಉlli ನೆಟ್ಟನೆ ಬೂತುಗೊಳ್ಳ ತಳದಿಂ ದಶಕಂಧರನಾಡಿ ಪಾಡಿ ನಾ
ಇಟ್ಟರೆ ಕೊಂಡನಲ್ಲದೆ ಬರಂಗಳನೀಶ್ವರನಲ್ಲಿ ಪೇಟಿಮಾ | ಮೊಟ್ಟಜೆಯಿಂದ ಕೊಂಡನೆನುತುಂ ವಿಜಯಂ ನೆಲಕಿಕ್ಕಿ ಗಂಟಲಂ ಮಟ್ಟದ ಕೊಂಡನೇ ಹರನ ಪಾಶುಪತಾಸ್ತಮನಿಂದ್ರಕೀಲದೊಳ್ || ೫೩ ಪೊಂಗಿ ಕಡಂಗಿ ಬೀರದೊಳೆ ಬೀಗುವ ನಿನ್ನಣುಗಾಳೆ ನೋಡೆ ನಿ ಇಂಗನೆಯರ್ ತೂವಳ ಭಯಂಗೊಳೆ ಕೋಡಗಗಟ್ಟುಗಟ್ಟಿ ಚಿ | ತ್ರಾಂಗದನುಮ್ಮೆ ನಿನ್ನನೆಡೆಮಾಡದಸುಂಗೊಳೆ ಕಾದಿ ತಂದ ವೀ
ರಂಗರಿಗಂಗೆ ನೀಂ ಮಲೆದು ನಿಲ್ಲುದು ಪಾಟವಲಂ ಸುಯೋಧನಾ || ೫೪ ಮ|| ಸ | ಗುರುವಿಲ್ಲಾ ಕರ್ಣನಿಲ್ಲಾ ಗುರುವಿನ ಮಗನಿಲ್ಲಾ ಕೃಪಾಚಾರ್ಯನಿಲ್ಲಾ
ಕುರುರಾಜಾ ನಿನ್ನ ತಮ್ಮಂದಿರೊಳಿನಿಬರೊಳಾರಿಲ್ಲ ಗಾಂಗೇಯನಿಲ್ಲಾ | ಮರುಳೇ ಗಾಂಡೀವಿಯಾರೆಂದೆಣಿಕೆಗಳೆವೆ ಗಂಧರ್ವರುಯ್ಯಂದು ನಿನ್ನಂ ಕರುವಿಟ್ಟಂತಿರ್ದುದಿಲ್ಲಾ ನೆರೆದ ಕುರುಬಲಂ ತಂದವಂ ಪಾರ್ಥನಲ್ಲಾ || ೫೫
(ಶತ್ರುಗಳ ಆನೆಯ ಸಮೂಹವನ್ನು ಒಡೆದುಹಾಕುವ ಶಕ್ತಿಯನ್ನುಳ್ಳು ಅರ್ಜುನನ ಪರಾಕ್ರಮವನ್ನೂ, ಶತ್ರುಸೈನ್ಯವನ್ನು ಹೆದರಿಸಿದ ಪರಸೈನ್ಯಭೈರವನ ಅತಿಶಯವಾದ ಪೌರುಷವನ್ನೂ ಕಂಡೂ ಕೇಳಿಯೂ ನಿನಗೆ ಹೋರಾಡಲು ಹೇಗೆ ಮನಸ್ಸು ಬರುತ್ತದೆ. ೫೩. ದುರ್ಯೊಧನ ! ರಾವಣನು ಸಾಮಾನ್ಯವಾದ ಬಡಪ್ರಾಣಿಯಂತೆ ಹಾಡಿ ಪಾಡಿ ಬೇಡಿ ನಾಚಿಕೆಯಾಗುವ ರೀತಿಯಲ್ಲಿ ಈಶ್ವರನಿಂದ ವರಗಳನ್ನು ಪಡೆದನಲ್ಲದೆ ತನ್ನ ಪರಾಕ್ರಮದಿಂದ ತೆಗೆದುಕೊಂಡನೆ ಹೇಳು. ಅರ್ಜುನನಾದರೋ ಶಿವನನ್ನು ನೆಲಕ್ಕೆ ತಳ್ಳಿ ಗಂಟಲನ್ನು ಮೆಟ್ಟಿದೆ ಈಶ್ವರನ ಪಾಶುಪತಾಸ್ತವನ್ನು ಇಂದ್ರಕೀಲಪರ್ವತದಲ್ಲಿ ತೆಗೆದುಕೊಂಡನೆ ? (ಅರ್ಜುನನು ತನ್ನ ಪರಾಕ್ರಮದಿಂದಲೇ ಈಶ್ವರನಿಂದ ಅಸ್ತವನ್ನು ಪಡೆದುದರಿಂದ ರಾವಣನಿಗಿಂತ ಇವನು ಪರಾಕ್ರಮಿ ಎಂದರ್ಥ.) ೫೪, ಕೊಬ್ಬಿ ಉತ್ಸಾಹಿಸಿ ಶೌರ್ಯದಿಂದ ಅಹಂಕಾರಪಡುವ ನಿನ್ನ ಪ್ರೀತಿಪಾತ್ರರಾದ ಯೋಧರೇ ನೋಡುತ್ತಿರಲು ನಿನ್ನ ಸ್ತ್ರೀಯರು ತಮ್ಮ ಅಪಾಯವನ್ನು ಸೂಚಿಸುವ ಚಿಗುರನ್ನು ಹಿಡಿದುಕೊಂಡು ಹೆದರಿರಲು ಚಿತ್ರಾಂಗದನೆಂಬ ಗಂಧರ್ವನು ನಿನ್ನನ್ನು ಕೋಡಗವನ್ನು ಕಟ್ಟುವಂತೆ ಕಟ್ಟಿ ತೆಗೆದುಕೊಂಡು ಹೋಗುತ್ತಿರಲು ತಡಮಾಡದೆ ಪ್ರಾಣವನ್ನೆ ಸೆಳೆಯುವಂತೆ ಕಾದಿ ತಂದ ವೀರನಾದ ಅರ್ಜುನನಿಗೆ ಮಲೆತು ನೀನು ಪ್ರತಿಭಟಿಸಿ ನಿಲ್ಲುವುದು ಕ್ರಮವಲ್ಲವೇ ದುರ್ಯೊಧನ? ೫೫. ನಿನ್ನನ್ನು ಗಂಧರ್ವರು ಸೆಳೆದುಕೊಂಡು ಹೋದಾಗ ದ್ರೋಣಾಚಾರ್ಯರಿಲ್ಲ, ಕರ್ಣನಿಲ್ಲ, ಅಶ್ವತ್ಥಾಮನಿಲ್ಲ, ಕೃಪಾಚಾರ್ಯನೂ ಇಲ್ಲ, ನಿನ್ನ ಇಷ್ಟು ಜನ ತಮ್ಮಂದಿರಲ್ಲಿ ಯಾರೂ ಇಲ್ಲ, ಭೀಷ್ಮನೂ ಇಲ್ಲ. ಯಾರೂ ಸಮಯಕ್ಕಾಗಲಿಲ್ಲ. ಬುದ್ದಿಯಿಲ್ಲದವನೇ ಅರ್ಜುನನು ಯಾರೆಂದು ಕೀಳಾಡಿ ನುಡಿಯುತ್ತಿರುವೆ ? ಕುರುಸೈನ್ಯವು ಎರಕಹೊಯ್ದಂತೆ ಸ್ತಬ್ಧವಾಗಿತ್ತಲ್ಲವೆ ? ನಿನ್ನನ್ನು
Page #436
--------------------------------------------------------------------------
________________
ಮುಂ .
- ನವಮಾಶ್ವಾಸಂ | ೪೩೧ ಬವರಂಗಯ್ಯಮಮೋಘಮಂಬ ಬಗೆಯಿಂ ನೀಮೆಲ್ಲಮಾದಂ ರಣೋ ತೃವದಿಂ ನಿನ್ನೆಯೆ ಪೋದ ಗೋಗ್ರಹಣದಂದೇನಾದಿರಂತಾ ಪರಾ | ಭವಮಂ ಚಃ ಮಣಿದಿರ್ದಿರಪೊಡಮದೇನೇವೋದುದಿನ್ನುಂ ಗುಣಾ ರ್ಣವನಿಂ ನಾಳೆಯ ಕೇಳದಿರ್ಪೆರೆ ಮಹಾ ಗಾಂಡೀವ ನಿರ್ಘೋಷಮಂ || ೫೬
ಚಂ|| ಸುರಿವ ಸರಲ್ ನರ ಭಟರತ್ತಮುರುತ್ವ ದಲಿಂ ಪೂರ ಸಿಂ
ಧುರ ಘಟೆ ಬರ್ಪ ನೆತ್ತರ ಕಡಲ್ ಕುಣಿವಟ್ಟೆಗಳಾಜಿಯೊಳ್ ಭಯಂ | ಕರತರಮಪ್ಪಿನಂ ಪಗೆವರೊಕ್ಕಲೊಳೊವನಲೊರ್ವರಿಲ್ಲದಂ ತಿರೆ ತಲೆ ಕೊಲ್ಲುಮಂತುಮರಿಕೇಸರಿಗಾಂತು ಬರ್ದುಂಕಲಕುಮೇ || ೫೭
ವ|| ಎಂದು ಕಾಳನೀಳಮೇಘದಂತು ಮಸಗಿ ಗರ್ಜಿಸುವಸುರಕುಳವಿಷಯಕೇತುಗೆ ಫಣಿಕೇತು ಮುಳಿದು ತಳಮಳಿಸಿ ಕಾಣದ
ಕಂll ಎಗು ದೂತನಪ್ಪನ
ಬೆಟ್ಟಿನ ನುಡಿಗೇಳು ಮುಳಿಯಲಾಗದು ನೀನುಂ | ಮುಟ್ಟು ವಿದುರನೆಂಬೀ ತೋಬ್ಬುಟ್ಟಿಯ ಮನೆಯ ಕೂಟ ನುಡಿಯಿಸಿ ನುಡಿದೆ ||
೫೮
ವ|| ಎನೆ ವಿದುರನತಿಕುಪಿತಮನನಾಗಿ
ಬಿಡಿಸಿ ತಂದವನು ಅರ್ಜುನನಲ್ಲವೇ? ೫೬. ಉತ್ತಮರೀತಿಯಲ್ಲಿ ಯುದ್ದಮಾಡೋಣ ಎಂಬ ಮನಸ್ಸಿನಿಂದ ನೀವೆಲ್ಲರೂ ವಿಶೇಷಾಸಕ್ತಿಯಿಂದ ಬಂದು ನಿನ್ನೆ ನಡೆದ ಪಶುಗಳನ್ನು ಹಿಡಿಯುವ ಸಂದರ್ಭದಲ್ಲಿ ಏನಾದಿರಿ ? ಆಗುಂಟಾದ ಸೋಲನ್ನು ಚಿಃ ಮರೆತಿರುವಿರಾದರೆ ಏನಂತೆ ? ಇನ್ನೂ ಗುಣಾರ್ಣವನಾದ ಅರ್ಜುನನಿಂದ ನಾಳೆಯೇ ಮಹಾಗಾಂಡೀವದ ಟಂಕಾರ ಶಬ್ದವನ್ನು ಕೇಳದಿರುತ್ತೀರಾ? ೫೭. ಸುರಿಯುವ ಬಾಣಗಳು, ನರಳುತ್ತಿರುವ ಯೋಧರು, ಉರುಳುತ್ತಿರುವ ಸೈನ್ಯ, ಹೊರಳುವ ಆನೆಗಳ ಸಮೂಹ, ಹರಿದು ಬರುತ್ತಿರುವ ರಕ್ತಸಮುದ್ರ, ಕುಣಿವ ತಲೆಯಿಲ್ಲದ ಮುಂಡಗಳು, ಯುದ್ಧದಲ್ಲಿ ಭಯಂಕರವಾಗುವ ಹಾಗೆ ಶತ್ರುಶಿಬಿರದಲ್ಲಿ ಓ ಎನ್ನುವುದಕ್ಕೆ ಒಬ್ಬರೂ ಇಲ್ಲದಂತೆ ಸಂಪೂರ್ಣವಾಗಿ ಕೊಲ್ಲುತ್ತಾನೆ. ಹಾಗೆ ಅರಿಕೇಸರಿಗೆ ಪ್ರತಿಭಟಿಸಿ ಬದುಕಲು ಸಾಧ್ಯವೇ? ವ|| ಎಂದು ಪ್ರಳಯಕಾಲದ ಕಾರ್ಮೊಡದ ಹಾಗೆ ರೇಗಿ ಗರ್ಜನೆ ಮಾಡುವ ಕೃಷ್ಣನಿಗೆ ದುರ್ಯೋಧನನು ಕೋಪಿಸಿಕೊಂಡು ಕುದಿದು ಕುರುಡನಾದನು. ೫೮. “ಎದ್ದು ಹೋಗು ; ದೂತನಾದವನ ದಡ್ಡಮಾತನ್ನು ಕೇಳಿ ಕೋಪಿಸಬಾರದು. ನೀನು ಮೋಸಹೋಗಿ ವಿದುರನೆಂಬ ದಾಸೀಪುತ್ರನ ಮನೆಯ ಕೂಳಿನ ಕೊಬ್ಬು
ಮಾತನಾಡಿಸಲು ನೀನು ಹೀಗೆ ಮಾತನಾಡಿದ್ದೀಯೆ. (ನೀಚ ಆಹಾರದ ಪ್ರಭಾವ . ಇದು ಎಂದರ್ಥ) ವಎನ್ನಲು ವಿದುರನು ವಿಶೇಷ ಕೋಪದಿಂದ ಕಿಡಿಕಿಡಿಯಾದನು.
Page #437
--------------------------------------------------------------------------
________________
೪೩೨) ಪಂಪಭಾರತಂ ಕಂll ಕಡು ಮುಳಿದು ನಿನ್ನ ತೊಡೆಗಳ
ನುಡಿವಡೆಯೋಳ್ ಭೀಮಸೇನನಾನಾ ಪದದೊಳ್ | ಪಿಡಿಯಿಂದಿರ್ದೆನಿದಂ ಪಿಡಿಯಂ ಪೋಗೆಂದು ಸಭೆಯೊಳುಡಿದಂ ಬಿಲ್ಲಂ ||
- ೫೯ ವ|| ಅಂತು ವಿದುರಂ ವಿಚ್ಚಿದುರಮನನಾಗಿ ಬಿಲ್ಲನುಡಿವುದುಂ ಸುಯೋಧನಂ ತನ್ನ ಬಲದ ತೋಳುಡಿದಂತಾಗಿ ಸಿಗ್ಗಾಗಿ ಬಾಳಂ ಕಿಂದರೆ ಮನದೊಳಾದೇವದಿಂ ದೇವಕೀನಂದನನ ಮೇಲೆವಾಯ್ತುದುಂ ನಂಜಿನ ಮೇಲೆವಾಯ್ ನೊಳವಿನಂತುರುಳರೆ ಪಾಯುಉll ಮೂಡಿ ಮಾಡಿದಂದು ನೆಲನೆಲ್ಲಮನಾ ಬಲಿಗಾದ ರೂಪಮಂ
ತೋಳದನೀ ಜಗತ್ತಯಮನೂರ್ಮಯ ನುಂಗುವ ಕಾಲ ರೂಪಮಂ | ತೊಳೆದನಂತೆ ರೌದ್ರತರ ರೂಪಮನೊರ್ಮಯ ವಿಶ್ವರೂಪಮಂ ತೋಚಿದನಿರ್ದರಂ ನಟಿಯ ಮೋಹಿಸಿ ವೈಷ್ಣವದಿಂ ಮುರಾಂತಕಂ || ೬೦
ವ|| ಆಗಳ್ ಧೃತರಾಷ್ಟ್ರ ಬಂದು ಮುಕುಂದನನೇಕಸ್ತುತಿಶತಸಹಸಂಗಳಿಂ ಸ್ತುತಿಯಿಸಿದೊಡಾತಂಗೆ ವರದನಾಗಿ ದಿವ್ಯ ದೃಷ್ಟಿಯಂ ದಯೆಗೆಯ್ದು ಮುನ್ನಿನಂತೆ ಮನುಷ್ಯದೇಹಮಂ ಕೆಯೊಂಡು ತೈಲೋಕ್ಯ ಗುರು ಗುರುತನೂಜನ ಕೆಯ್ಯಂ ಪಿಡಿದರಮನೆಯಂ ಪೂಣಮಟ್ಟು ಕಪಟ ಪ್ರಪಂಚದಿಂದಾತನುಮಂ ತನಗೆ ಮಾಡಿ ಬೀಡಿಂಗೆ ಎಂದು ಕುಂತಿಗೇಕಾಂತದೊಳಿಂತೆಂದಂ
- ೫೯. ಎಲವೊ ದುರ್ಯೊಧನ, ಮುಂದೆ ಭೀಮಸೇನನು ವಿಶೇಷವಾಗಿ ಕೋಪಿಸಿಕೊಂಡು ನಿನ್ನ ತೊಡೆಯನ್ನು ಒಡೆಯುವ ಸಂದರ್ಭದಲ್ಲಿ ಇದನ್ನು ಪ್ರಯೋಗಿಸಬೇಕೆಂದಿದ್ದೆ. ಈಗ ಹಿಡಿಯುವುದಿಲ್ಲ ಹೋಗು ಎಂದು ಸಭೆಯಲ್ಲಿ ಎಲ್ಲರೆದುರಿಗೂ ಬಿಲ್ಲನ್ನು ಮುರಿದು ಹಾಕಿದನು. ವll ಹಾಗೆ ವಿದುರನು ಭಗ್ನಮನಸ್ಕನಾಗಿ ಬಿಲ್ಲನ್ನು ಮುರಿದುಹಾಕಲು ದುರ್ಯೋಧನನಿಗೆ ತನ್ನ ಬಲತೋಳೇ ಭಿನ್ನವಾದಂತೆ ಆಯಿತು. ಅವಮಾನಿತನಾಗಿ ಒರೆಯಿಂದ ಕತ್ತಿಯನ್ನು ಸೆಳೆದು ಒದರಿ ಮನಸ್ಸಿನಲ್ಲುಂಟಾದ ಕೋಪದಿಂದ ಕೃಷ್ಣನ ಮೇಲೆ ಹಾಯಲು ವಿಷದ ಮೇಲೆ ಹಾಯುವ ನೊಣದಂತೆ ಉರುಳಿಬೀಳುವ ಹಾಗೆ. ಹಾಯಲು-೬೦, ಶ್ರೀಕೃಷ್ಣನು ತನ್ನ ವಿಷ್ಣುಮಾಯೆಯಿಂದ ಸಭೆಯಲ್ಲಿದ್ದವರನ್ನೆಲ್ಲಾ ಪೂರ್ಣವಾಗಿ ಮೂರ್ಛಗೊಳಿಸಿ ಭೂಮಿಯನ್ನೆಲ್ಲ ಮೂರಡಿಯಾಗಿ ಅಳೆದಾಗ ಬಲಿಚಕ್ರವರ್ತಿಗೆ ತೋರಿದ ದೊಡ್ಡಆಕಾರವನ್ನು ತೋರಿಸಿದನು. ಈ ಮೂರು ಲೋಕಗಳನ್ನೂ ಒಂದೇ ಸಲಕ್ಕೆ ನುಂಗುವ ಪ್ರಳಯಕಾಲದ ರೂಪವನ್ನು ತೋರಿಸಿದನು. ಹಾಗೆಯೇ ಒಂದೇಸಲಕ್ಕೆ ವಿಶ್ವರೂಪವನ್ನು ತೋರಿಸಿದನು. ವ|| ಆಗ ಧೃತರಾಷ್ಟ್ರನು ಬಂದು ನೂರಾರು ಸಾವಿರಾರು ಸ್ತೋತ್ರಗಳಿಂದ ಸ್ತುತಿಸಲು ಆತನಿಗೆ ವರಪ್ರದನಾಗಿ ದಿವ್ಯದೃಷ್ಟಿಯನ್ನು ದಯಪಾಲಿಸಿ ಮೊದಲಿನ ಮನುಷ್ಯರೂಪವನ್ನು ತಾಳಿ ಮೂರುಲೋಕದ ಗುರುವಾದ ಕೃಷ್ಣನು ಅಶ್ವತ್ಥಾಮನ ಕೈಹಿಡಿದು ಅರಮನೆಯಿಂದ ಹೊರಟು ಅವನನ್ನು ಕಪಟದಿಂದ ತನ್ನವನನ್ನಾಗಿ ಮಾಡಿಕೊಂಡು ಬೀದಿಗೆ ಬಂದು ಕುಂತೀದೇವಿಗೆ ರಹಸ್ಯವಾಗಿ ಹೀಗೆ
Page #438
--------------------------------------------------------------------------
________________
ಚಂ।।
ನವಮಾಶ್ವಾಸಂ | ೪೩೩ ಗುರು ಕೃಪ ಶಲ್ಯ ಸಿಂಧುಸುತರಪೊಡೆ ನಮ್ಮಯ ಪಕ್ಷವೊಂದಿದಂ ಗುರುಸುತನೀಗಳೆದೊಳಖಿಳಾಸ್ತ್ರ ವಿಶಾರದನಪ್ಪನುಂ ಗೆಲ | ರಿಯನುಮೊಂದಿ ಬಾರದನುಮಂಕದ ಕರ್ಣನೆ ಬೀರಮಾತನಿಂ ದುರಿವರಿದತ್ತು ಚಾಗಮವನಿಂದೆಸೆದತ್ತು ಸಮಸ್ತ ಧಾತ್ರಿಯೊಳ್ ||
೬೧
ಈ ಎಂತನೆ ವಜ್ರ ವಜ್ರಕವಚಕ್ಕೆ ನಿಜೋಳಕುಂಡಳಕ್ಕೆ ಕೆ
ಯಾಂತೊಡ ಪಾಂಡುಪುತ್ರರನೆ ಕಾದರೆವಂದುಗಿಂ ದಲೆಂದಿನಂ || ಮಂತಣದಿಂದ ಬಾರಿಸೆಯುಮಂದುದನೆನ್ನದೆ ಮೀಲೆ ಕೊಟ್ಟನೋ ರಂತು ಜಸಕ್ಕೆ ನೋಂತು ಬಿಡ ನೇರ್ದೊಡಲೊಳ್ ತೊಡರ್ದಾ ತನುತಮಂ ||೬೨
ಮ|| ಬರವಂ ಬೇಡಿದರ್ಗಿವ ದೇವನೆ ವಲಂ ನಾಣೆಟ್ಟು ಬಂದೆನ್ನನಿಂ ತರೆದಂ ಬರ್ದರೊಳಾನೆ ಬರ್ದನೆನುತುಂ ನೇರ್ವಲ್ಲಿ ಕೆನ್ನೆತ್ತರುಂ | ಬಿರಿ ಕಂಡಂಗಳ ಬೀದಿಲು ಮನದೊಂದಣಿಟ್ಟಳಂ ಪೊಕ್ಷ್ಮ ವೀ ರರಸಕ್ಕಾಗರಮಾಯ್ತು ನೋಡ ಕವಚಂಗೊಂಡಂದಮಾ ಕರ್ಣನಾ || ೬೩
ವ| ಅಂತು ಸಹಜಕವಚ ರತ್ನಕುಂಡಲಂಗಳಂ ನೆತ್ತರ್ ವನಪನ ಪನಿಯ ತಿದಿಯುಗಿವಂತುಗಿದು ಕೊಟ್ಟುದರ್ಕೆ ಮೆಚ್ಚಿ ದೇವೇಂದ್ರನಾತಂಗಮೋಘಶಕ್ತಿಯನಿತ್ತನಾತನಂ ನಾನುಮೆನ್ನ ಬಲ್ಲ ಮಾಯಂ ಭೇದಿಸಿದಲ್ಲಿಂ ನೀಮುಂ ನಿಮ್ಮ ಚೊಚ್ಚಲ ಮಗನಪ್ಪ ಸೂರ್ಯಸೂನುವಂ ಸೂರ್ಯದಿನದಂದು ಕಂಡು ಕಾರ್ಯಸಿದ್ಧಿಯಂ ಮಾಡಿ ಬನ್ನಿಮೆಂದು ಕೊಂತಿಯಂ ಬೀಳ್ಕೊಂಡು ಪರಕೆಯಂ ಕೈಕೊಂಡು ರಥಾಂಗಧರಂ ರಥಮನೇಹಿ ಕರ್ಣನ ಮನೆಯ ಮುಂದನೆ ಬಂದು ಮೇಲೆ ಬಿಮ್ಮಂ ಕಿಟದಂತರಂ ಕಳಿಸಿ ಮಗು ಬಾ ಪೋಪಮೆಂದು ತನ್ನೊಡನೆ ರಥಮನೇಟಿಸಿಕೊಂಡುಪೋಗಿ ಮುಂದೊಂದೆಡೆಯೊಳ್ ನಿಂದು
ಹೇಳಿದನು-೬೧. ಗುರು, ಕೃಪ, ಶಲ್ಯ, ಭೀಷ್ಮರಾದರೆ ನಮ್ಮ ಪಕ್ಷದವರೇ. ಈಗ ಅಶ್ವತ್ಥಾಮನೂ ನಮ್ಮಲ್ಲಿ ಸೇರಿದನು. ಸಮಸ್ತ ಶಾಸ್ತ್ರದಲ್ಲಿ ವಿಶಾರದನೂ ಜಯಿಸುವುದಕ್ಕೆ ಅಸಾಧ್ಯನೂ ನಮ್ಮಜೊತೆಯಲ್ಲಿ ಸೇರುವುದಕ್ಕೆ ಒಪ್ಪದವನೂ ಆದವನು ಪ್ರಸಿದ್ಧನಾದ ಕರ್ಣನೊಬ್ಬನೇ. ಸಮಸ್ತ ಪ್ರಪಂಚದಲ್ಲಿ ಅವನ ಶೌರ್ಯ ಪ್ರತಾಪವು ಬೆಂಕಿಯಂತೆ ಪ್ರಸರಿಸಿದೆ. ತ್ಯಾಗವೂ ಅವನಿಂದಲೇ ಪ್ರಕಾಶಮಾನವಾಗಿದೆ. ೬೨. ಹೇಗೆಂದರೆ ಇಂದ್ರನು ಕರ್ಣನ ವಜ್ರಕವಚವನ್ನೂ ಅವನ ಬಹುಪ್ರಕಾಶವಾದ ಕಿವಿಯಾಭರಣ ಗಳನ್ನೂ ಕೈನೀಡಿ ಯಾಚಿಸಿದಾಗ “ಪಾಂಡುಪುತ್ರರನ್ನು ರಕ್ಷಿಸುವುದಕ್ಕಾಗಿ ಇಂದ್ರನು ಬಂದು ನಿನ್ನನ್ನು ಛಿದ್ರಿಸುತ್ತಿದ್ದಾನೆ, ಕೊಡಬೇಡ ಎಂದು ಸೂರ್ಯನು ಬಂದು ಉಪದೇಶಮಾಡಿ ತಡೆದರೂ ಅವನು ಹೇಳಿದುದನ್ನು ಕೇಳದೆ ಯಶಸ್ಸಿಗಾಗಿ ಆಶೆಪಟ್ಟು ತನ್ನ ಶರೀರದಲ್ಲಿ ಅಂಟಿಕೊಂಡಿದ್ದ ಆ ವಜ್ರಕವಚವನ್ನು ಸುಲಿದುಬರುವ ಹಾಗೆ ಕತ್ತರಿಸಿ ದಾನವಾಗಿ ಕೊಟ್ಟನು. ೬೩. ಬೇಡಿದವರಿಗೆ ವರವನ್ನು ಕೊಡುವ ಇಂದ್ರದೇವನೇ ನಾಚಿಕೆಗೆಟ್ಟು ಬಂದು ನನ್ನನ್ನು ಈರೀತಿ ಬೇಡಿದನು. ಬಾಳಿದವರಲೆಲ್ಲ ನಾನೆ ಬಾಳಿದವನು ಎಂದುಕೊಳ್ಳುತ್ತ ದೇಹದಿಂದ ಕವಚವನ್ನು ಕೆಂಪಾದ ರಕ್ತವೂ ಸೀಳಿದ ಮಾಂಸಖಂಡವೂ ಒಂದೇ ಸಮನಾಗಿ ಸುರಿಯುತ್ತಿರಲು ಮನೋದಾರ್ಡ್ಯವೂ ಅತಿಶಯವಾಗಿ ಅಭಿವೃದ್ಧಿಯಾಗುತ್ತಿರಲು ಕರ್ಣನು ಕವಚವನ್ನು ಶರೀರದಿಂದ ಕಿತ್ತ
Page #439
--------------------------------------------------------------------------
________________
೪೩೪] ಪಂಪಭಾರತಂ ಈ ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ
ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್ | ಸೋದರರೆಯ್ದ ಮಯ್ತುನನೆನಾಂ ಪೆಜತೇಂ ಪಡೆಮಾತೂ ನಿನ್ನದೀ
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಬೆಜರ್ ನರೇಂದ್ರರೇ || ೬೪ ಕಂ|| ಗಂಗೆಗೆ ಕೆಯ್ಯಡೆಯೆಂದು
ತುಂಗಸ್ತನಿ ಕೊಟ್ಟು ಪೋಗ ಸೂತಂ ಕಂಡಾ | ತ್ಯಾಂಗನೆಗ ರಾಧಗಿತ್ತು ಮ ? ನಂಗೊಳೆ ರಾಧೇಯನೆನಿಸಿ ಸೂತಜನಾದ್ಯ ಗೆ ನಿನ್ನುತ್ಪತ್ತಿಯನಿಂತಂ ದನ್ನರುಮಣಮಣಿಯರಳವೆನಾಂ ಸಹದೇವಂ | ಪನ್ನಗಕೇತು ದಿನೇಶಂ ನಿನ್ನಂಬಿಕೆ ಕುಂತಿಯಿಂತಿವರ್ ನ ಬಲ್ಲರ್ ||
ರೀತಿ ನೋಡುವವರಿಗೆ ವೀರರಸಕ್ಕೆ ಆಗರವಾಗಿತ್ತು. ವ|| ಹಾಗೆ ಅವನಿಗೆ ಸಹಜವಾಗಿ ಹುಟ್ಟಿದ ಕವಚ ಮತ್ತು ರತ್ನಕುಂಡಲಗಳನ್ನು ರಕ್ತವು ಪನಪನ ಎಂದು ತೊಟ್ಟುತ್ತಿರಲು ಚರ್ಮವನ್ನು ಸುಲಿಯುವ ಹಾಗೆ ಸುಲಿದುಕೊಟ್ಟುದಕ್ಕೆ ಮೆಚ್ಚಿ ದೇವೇಂದ್ರನಾತನಿಗೆ ಬೆಲೆಯಿಲ್ಲದ ಶಕ್ಕಾಯುಧವನ್ನು ವರವಾಗಿ ಕೊಟ್ಟಿದ್ದಾನೆ. ಆತನನ್ನು ನಾನೂ ನನಗೆ ತಿಳಿದ ಮಟ್ಟಿನ ರೀತಿಯಲ್ಲಿ ಛಿದ್ರಿಸುತ್ತೇನೆ. ನೀವೂ ನಿಮ್ಮ ಚೊಚ್ಚಲಮಗನಾದ ಸೂರ್ಯಪುತ್ರನಾದ ಕರ್ಣನನ್ನು ಭಾನುವಾರದ ದಿನ ನೋಡಿ ಕಾರ್ಯಸಿದ್ದಿಯನ್ನು ಮಾಡಿಕೊಂಡು ಬನ್ನಿ ಎಂದು ಕುಂತಿಯನ್ನು ಕಳುಹಿಸಿಕೊಟ್ಟನು. ಅವಳ ಆಶೀರ್ವಾದವನ್ನು ಪಡೆದು ಕೃಷ್ಣನು ತೇರನ್ನು ಹತ್ತಿ ಕರ್ಣನ ಮನೆಯ ಮುಂದುಗಡೆಯೇ ಬಂದು ತಾನೇ ಮೇಲೆ ಬಿದ್ದು “ಕರ್ಣ ! ನಮ್ಮನ್ನು ಸ್ವಲ್ಪ ದೂರ ಕಳುಹಿಸಿಕೊಟ್ಟು ಬರುವೆಯಂತೆ ಬಾ ಹೋಗೋಣ' ಎಂದು ತನ್ನೊಡನೆ ರಥದಲ್ಲಿ ಹತ್ತಿಸಿಕೊಂಡು ಹೋಗಿ ಮುಂದೆ ಬಂದು ಒಂದು ಕಡೆಯಲ್ಲಿ ನಿಂತು ಹೇಳಿದನು. ೬೪. ಕರ್ಣ ಕೇಳು, ನಿನ್ನನ್ನು ಭೇದಿಸಲು ಹೀಗೆ ಹೇಳಿದೆನೆಂದು ನುಡಿಯದಿರು. ಆದಿಯಲ್ಲಿ ಕುಂತಿಯು ನಿನ್ನ ತಾಯಿ, ಸೂರ್ಯನು ನಿನ್ನ ತಂದೆ, ಪಾಂಡವರು ನಿನ್ನ ಸಹೋದರರು, ನಾನು ನಿನಗೆ ಮೈದುನ, ಹೆಚ್ಚು ಹೇಳುವುದೇನು ? ಈ ಭೂಮಿಯೆಲ್ಲವೂ ನಿನ್ನದೇ. ಪಟ್ಟವೂ ನಿನ್ನದೇ, ನೀನಿರುವಲ್ಲಿ ಇತರರು ರಾಜರಾಗಬಲ್ಲರೇ ? ೬೫. ನಿನ್ನನ್ನು ಯುವತಿಯಾದ ನಿನ್ನ ತಾಯಿಯಾದ ಕುಂತಿಯು ಗಂಗೆಗೆ ನ್ಯಾಸವೆಂದು (ರಕ್ಷಿಸುವ ಪದಾರ್ಥ) ಕೊಟ್ಟು ಹೋಗಲು ಅದನ್ನು ನೋಡಿದ ಸೂತನು ತನ್ನ ಹೆಂಡತಿಯಾದ ರಾಧೆಗೆ ಕೊಟ್ಟುದರಿಂದ ನೀನು ರಾಧೇಯನೆನಿಸಿಕೊಂಡು ಸೂತಪುತ್ರನಾಗಿದ್ದೀಯ. ೬೬. ನೀನು ಹುಟ್ಟಿದ ರೀತಿ ಹೀಗೆಂದು ಯಾರಿಗೂ ಸ್ವಲ್ಪವೂ ತಿಳಿಯದು. ನಾನು, ಸಹದೇವ, ದುರ್ಯೊಧನ, ಸೂರ್ಯ, ನಿನ್ನ ತಾಯಿಯಾದ ಕುಂತಿ ಇವರು
Page #440
--------------------------------------------------------------------------
________________
ನವಮಾಶ್ವಾಸಂ / ೪೩೫ ವಗ ದುರ್ಯೋಧನಂ ನಿನ್ನನೇತಕ್ ನಂಬವನೆಂದೂಡ ನೀನುಂ ತಾನುಮರ್ಮ ಗಂಗಾನದೀತೀರದೂ ಬೇಂಟೆಯಾಡುವಲ್ಲಿ ತತ್ಸಮೀಪದ ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯಜ್ಞಾನಿಗಳು ಕಂಡು ಪೊಡವಟ್ಟರ್ವರುಮಂ ಪರಸಿ ನಿನಗೆ ಮುನ್ನಮೇಜಿಲ್ ತರಿಸಿದೊಡೆ ಸುಯೋಧನನೇವಯಿಸಿ ನಿನ್ನಂ ಪೋಗಲ್ವೆಟ್ಟುಉll ಆನಿರೆ ನೀಮಿದೇಕೆ ದಯೆಗೆಯಿರೊ ಮೀಂಗುಲಿಗಂಗೆ ಪೇಟಿಮಂ
ದಾ ನರನಾಥನಂ ತಿಳಿಪ ತನ್ಮುನಿ ಭೂಭುಜನೆಯ ನಂಬಿ ಕಾ | ನೀನ ಸಮಂತು ಪಾಟಿಸುವೆನೊಯ್ಯನೆ ಮುಳ್ಳೂಳೆ ಮುಳ್ಳನೆಂದು ತಾ
ನೀ ನಯದಿಂದ ಪೆರ್ಚಿ ಪೂರೆದಳಂದೂಡನುಂಡನಲ್ಲನೇ || ೬೭ ಚಂಗಿ ಎನೆಯೆನೆ ಬಾಷ್ಪವಾರಿ ಪುಳಕಂಬೆರಸೊರ್ಮೆಯೆ ಪೊಕ್ಕೆ ಮುನ್ನೆ ನೀ
ವೆನಗಿದನೇಕೆ ಪೇಟೆರೊ ವೆಗಳ ಪೊಗwಯನಾಂಪಿನಂ ಸುಯೋ | ಧನನೆನಗೊಳ್ಳಿಕೆಯ ಕೃತಮಂ ಪಳಗಿಕ್ಕಿ ನೆಗಳೂ ಮಾಸೆ ನ
ಣ್ಣಿನ ನೆವದಿಂದ ಪಾಂಡವರನಾನೊಳವೊಕ್ಕೊಡೆ ನೀಮ ಸಿರೇ ೬೮ eoll ನೆತ್ತಮನಾಡಿ ಭಾನುಮತಿ ಸೋಲೊಡೆ ಸೋಲಮನೀವುದೆಂದು ಕಾ
ಡುತ್ತಿರೆ ಲಂಬಣಂ ಪಳಯ ಮುತ್ತಿನ ಕೇಡನೆ ನೋಡಿ ನೋಡಿ ಬ | ಳ್ಳುತ್ತಿದೆಯೇವಮಿಲ್ಲದಿವನಾಯ್ದುದೂ ತಪ್ಪದೆ ಪೇಟಿಮೆಂಬ ಭೂ ಪೋತ್ತಮನಂ ಬಿಸುಟ್ಟಿರದ ನಿಮ್ಮೊಳೆ ಪೂಕೊಡೆ ಬೇಡನಲ್ಲನೇ || , ೬೯
ಪೂರ್ಣವಾಗಿ ಬಲ್ಲೆವು. ವ|| ದುರ್ಯೋಧನನು ನಿನ್ನನ್ನು ಯಾವುದರಿಂದ ನಂಬಿದನೆಂದರೆ ನೀನೂ ಆತನೂ ಒಂದು ಸಲ ಗಂಗಾತೀರದಲ್ಲಿ ಬೇಟೆಯಾಡುತ್ತಿರುವಾಗ ಸಮೀಪದಲ್ಲಿದ್ದ ತಾಪಸಾಶ್ರಮದಲ್ಲಿ ಸತ್ಯಂತಪರೆಂಬ ದಿವ್ಯಜ್ಞಾನಿಗಳನ್ನು ಕಂಡು ನಮಸ್ಕಾರಮಾಡಿದಿರಿ. ನಿಮ್ಮಿಬ್ಬರನ್ನೂ ಹರಸಿ ಅವರು ನಿನಗೆ ಮೊದಲು ಆಸನವನ್ನು ತರಿಸಿಕೊಟ್ಟರು. ದುರ್ಯೋಧನನು ಲಜ್ಜಿತನಾಗಿ ನಿನ್ನನ್ನು ಹೊರಗೆ ಹೋಗಹೇಳಿ ೬೭. 'ನಾನಿರುವಾಗ ತಾವಿದೇಕೆ ಆ ಮೀಂಗುಲಿಗನಿಗೆ (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು-ಬೆಸ್ತ ದಯೆಗೆಯ್ದಿರಿ' ಎಂದು ಆ ಋಷಿಯನ್ನು ಕೇಳಿದಾಗ ಅವರು ದೊರೆಗೆ ಎಲ್ಲವನ್ನೂ ತಿಳಿಸಿದರು. ದೊರೆಯು ನಂಬಿ ಕರ್ಣ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಉಪಾಯವನ್ನು ಮಾಡುವೆನೆಂದು ನಿನ್ನನ್ನು ಈ ನಯದಿಂದ ಪೋಷಿಸುತ್ತ ಪ್ರೀತಿಯಿಂದ ನಿನ್ನೊಡನೆ ಉಂಡನಲ್ಲವೇ ?” ೬೮. ಹೀಗೆಂದು ಕೃಷ್ಣನು ಹೇಳಲು ಕರ್ಣನಿಗೆ ರೋಮಾಂಚನದೊಡನೆ ಕಣ್ಣೀರು ಸುರಿಯಲಾರಂಭಿಸಿತು. ಅವನು ಕೃಷ್ಣನನ್ನು ಕುರಿತು 'ತಾವು ಮೊದಲು ನನಗೆ ಏಕೆ ತಿಳಿಸಿದರೋ? ಪ್ರಸಿದ್ದಿಗೂ ಹೊಗಳಿಕೆಗೂ ಪಾತ್ರವಾಗುವಷ್ಟು ಆತ್ಮವಿಶ್ವಾಸದಿಂದ ದುರ್ಯೊಧನನು ನನಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಹೊರಗಿಕ್ಕಿ ನನ್ನ ಕೀರ್ತಿ ಮಾಸಿ ಹೋಗುವ ಹಾಗೆ ನೆಂಟಿನ ನೆಪದಿಂದ ಪಾಂಡವರಲ್ಲಿ ಸೇರಿಕೊಂಡರೆ ನೀವೂ ಹೇಸುವುದಿಲ್ಲವೇ ? ೬೯. ದುರ್ಯೊಧನನೂ ರಾಣಿಯಾದ ಭಾನುಮತಿಯೂ ಪಗಡೆಯಾಡಿ ಭಾನುಮತಿ ಸೋತು ಎದ್ದುಹೋಗಲು ಪಣವನ್ನು ಕೊಟ್ಟು ಹೋಗು
Page #441
--------------------------------------------------------------------------
________________
೪೩೬ | ಪಂಪಭಾರತಂ
ವn ಎಂಬುದುಂ ಕರ್ಣಂ ತನಗೆಂತುಮೊಡಂಬಡದುದಂ ನಿರ್ಣಯವಾಗದು ಮಗುಲ್ಬಟ್ಟು ನಾರಾಯಣಂ ಪೋದನಿತ್ತಲಂಗರಾಜನುಮಾತ್ರಾಲಯಕ್ಕೆ ಮದು ಚಿಂತಾಕ್ರಾಂತನಾಗಿಚoll ಕುರುಪತಿಗಿಲ್ಲ ದೈವಬಲಮಾಜಿಗೆ ಮೇಲ್ಮಲೆಗೆಯ್ಯರಾಗಳುಂ
ಗುರು ಗುರುಪುತ್ರ ಸಿಂಧುಸುತರಾಳನುಮನನ ನಚ್ಚಿ ಪರ್ಚಿ ಮುಂ | ಪೂರೆದನಿದಿರ್ಚಿ ಕಾದುವರುಮನ್ವಯ ಸೋದರರೆಂತು ನೋಡಿ ಕೂ
ಕರಿಸದೆ ಕೊಲ್ವೆನೆನ್ನೊಡಲನಾಂ ತವಿಪೆಂ ರಣರಂಗಭೂಮಿಯೊಳ್ | ೭೦ ಮ|| ಅಲೆದೆಂ ಸೋದರರೆಂದು ಪಾಂಡವರನ್ನೆಂತೆನ್ನರಂ ಕೊಲ್ವೆನು
ಜತೊಳೆನ್ನಂ ಪೂರದೆಯ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವಂ | ತಳಿಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡ ಲೆಕ್ಕಕ್ಕೆ ತ
ಇದನ್ನಾಳನಿನಾನ ಮುಂಚೆ ನಿಜಪಂ ಕೆಯ್ಯೋಂಡು ಕಟ್ಟಾಯಮಂ || ೭೧ ಎಂದು ದುರ್ಯೋಧನನು ಹಿಂಸಿಸುತ್ತಿರಲು ಮುತ್ತಿನ ಹಾರವು ಕಿತ್ತುಹೋಯಿತು. ತನ್ನ ಮುತ್ತಿನ ಕೇಡನ್ನೇ ನೋಡುತ್ತ ನಡುಗುತ್ತಿದ್ದ ಭಾನುಮತಿಯನ್ನು ದುರ್ಯೊಧನನು ಕರ್ಣನಿಗೆ ತೋರಿಸಿ, ನಾಚಿಕೆಯಿಲ್ಲದೆ ಮುತ್ತುಗಳನ್ನು ಆಯುವುದೇ ತಪ್ಪಿಲ್ಲದೇ ಹೇಳು' ಎಂದು ಹೇಳುವ ರಾಜಶ್ರೇಷ್ಠನಾದ ದುರ್ಯೋಧನನನ್ನು ಬಿಟ್ಟು ನಿಮ್ಮಲ್ಲಿ ಸೇರಿಕೊಂಡರೆ ನಾನು ಯಾರಿಗೂ ಬೇಡದವನಾಗುತ್ತೇನಲ್ಲವೇ? ಎಂದನು.* ವll ಕರ್ಣನು ಹೇಗೂ ತನ್ನ ಮಾತಿಗೆ ಒಪ್ಪುವುದಿಲ್ಲವೆಂಬುದನ್ನು ಸ್ಥಿರವಾಗಿ ತಿಳಿದುಕೊಂಡು ಕೃಷ್ಣನು ಅವನನ್ನು ಹಿಂತಿರುಗಹೇಳಿ ತಾನೂ ಹೋದನು. ಈ ಕಡೆ ಕರ್ಣನು ತನ್ನ ಮನೆಗೆ ಬಂದು ದುಃಖದಿಂದ ಕೂಡಿ-೭೦. ದುರ್ಯೋಧನನಿಗೆ ದೈವಬಲವಿಲ್ಲ, ದ್ರೋಣ ಅಶ್ವತ್ಥಾಮ ಭೀಷ್ಮರು ತೋರಿಕೆಯ ಯುದ್ಧವನ್ನು ಮಾಡುವವರು, ನನ್ನ ಯಜಮಾನನಾದ ದುರ್ಯೋಧನನು ನನ್ನನ್ನೇ ನಂಬಿ ಉಬ್ಬಿ ಮೊದಲು ಸಾಕಿದ್ದಾನೆ. ಯುದ್ಧಮಾಡುವವರು ನನ್ನ ಸಹೋದರರು, ತಿಳಿದು ತಿಳಿದು ಅಸಹ್ಯಪಡದೆ ಅವರನ್ನು ಹೇಗೆ ಕೊಲ್ಲಲಿ. ರಣರಂಗಭೂಮಿಯಲ್ಲಿ ನನ್ನ ಶರೀರವನ್ನೇ ನಾಶಮಾಡುತ್ತೇನೆ. ೭೧. ಪಾಂಡವರನ್ನು ಸೋದರರೆಂದು ತಿಳಿದೆನು. ಇನ್ನು ನನ್ನವರನ್ನು ಹೇಗೆ ಕೊಲ್ಲಲಿ? ಪ್ರೀತಿಯಿಂದ ಸಲಹಿ ಪೂರ್ಣವಾಗಿ ನಂಬಿದ ರಾಜನಿಗೆ ಹೇಗೆ ಯುದ್ಧದಲ್ಲಿ ತಪ್ಪಿ ನಡೆಯಲಿ. ಎರಡೂ
* ಈ ಪದ್ಯದಲ್ಲಿ ಕರ್ಣನು ತನಗೆ ದುರ್ಯೋಧನನಲ್ಲಿದ್ದ ಸದರವನ್ನೂ ಆಂತರ್ಯ ಮನೋಭಾವವನ್ನೂ ವಿಶದಪಡಿಸುತ್ತಾನೆ. ಇಲ್ಲಿ ಪಗಡೆಯಾಡುತ್ತಿರುವವರು ದುರ್ಯೋಧನ ಭಾನುಮತಿಯರು, ಕರ್ಣ ಪ್ರೇಕ್ಷಕ, ದುರ್ಯೋಧನನ ಏಕಾಂತವಾದ ಅಂತಃಪುರಕ್ಕೂ ಅವನಿಗೆ ಪ್ರವೇಶವುಂಟು. ರಾಜರಾಣಿಯರ ಆಟದಲ್ಲಿಯೂ ಇವನ ಮಧ್ಯಸ್ಥಿಕೆ ಇರುತ್ತಿತ್ತು ಎಂಬುದು ಸೂಕ್ತವಾದ ಅರ್ಥ. ಅದು ಬಿಟ್ಟು ಕರ್ಣನು ಭಾನುಮತಿಯೊಡನೆ ಪಗಡೆಯಾಟವಾಡುತ್ತಿದ್ದು ಅವಳ ಹಾರಕ್ಕೆ ಕೈ ಹಾಕಿ ಹರಿದುಹಾಕಿದ ಎಂಬುದು ಲೌಕಿಕದೃಷ್ಟಿಯಿಂದ ಹಾಸ್ಯಾಸ್ಪದವಾಗುತ್ತದೆ. ಎಷ್ಟೇ ಸದರವಿದ್ದರೂ ಸ್ನೇಹಿತ ಅಥವಾ ಕೈಕೆಳಗಿನ ಅಧಿಕಾರಿಯೊಬ್ಬನು ರಾಣಿಯ ಮುತ್ತಿನ ಹಾರಕ್ಕೆ ಕೈಹಾಕಿ ಹರಿಯುವುದು ಅಪಚಾರದ ಪರಮಾವಧಿ. ರಾಜರಾಣಿಯರ ಪ್ರಣಯಕಲಹ ದಲ್ಲಿಯೂ ಕರ್ಣನ ಮಧ್ಯಸ್ಥಿಕೆಯಿತ್ತೆಂಬುದು ಅವರ ಪರಸ್ಪರ ಮೈತ್ರಿಯ ಪರಾಕಾಷ್ಠತೆಯನ್ನು ವಿಶದಪಡಿಸುತ್ತದೆ.
Page #442
--------------------------------------------------------------------------
________________
ನವಮಾಶ್ವಾಸಂ / ೪೩೭ ವ|| ಎಂದು ಮುಂತಪ್ಪ ಕಜ್ಜಮಂ ತನ್ನೊಳ ಬಗೆದವಾರ್ಯ ವೀರ್ಯ೦ ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು ಬಂದು ದುರ್ಯೋಧನನಟ್ಟಿದ ದೇವಸವಳದ ಪದಿನೆಂಟು ಕೋಟಿ ಪೊನ್ನುಮನೊಟ್ಟಿ ಬೆಟ್ಟಾಗ ಪುಂಜಿಸಿಕoll ಸೋರ್ವ ವಸುಥಾರೆಯಂ ಕೆ
ಯಾರ್ವ ನಿಧಾನಮುಮನಿಸಿ ತವಳಎಂ | ಪಾರ್ವoಗಮಳಿಪಿ ಬೇಡಿದ
ಪಾರ್ವಂಗಂ ಪಿರಿದನಿತ್ತನಂಗಮಹೀಶಂ || ವ|| ಅಂತು ಚಾಗಂಗೆಯು ಜಗನ್ಮಂಗಳ ಗಂಗಾವಾರಿಯೊಳನಿವಾರಿತ ಪರಾಕ್ರಮನಘಮರ್ಷಣಪೂರ್ವಕಂ ಮಿಂದು ಕನಕಪಾತ್ರದೊಳ್ ತಕ್ಕನೆ ತೀವಿದ ಕನಕ ಕಮಳಂಗಳಿಂದಾದಿತ್ಯತೇಜನಾದಿತ್ಯಂಗರ್ಥ್ಯಮತಿ ಸೂರ್ಯಜಂ ಸೂರ್ಯಮಂತ್ರಂಗಳನೋದಿ ನೀರ ಸೂಸಿ ರ್ಪದಕ್ಷಿಣಂಗೆಯ್ದಾಗಳ್ಕಂt ಸಂಗತ ತರಂಗಯುತಯಂ
ಮಂಗಳಲಕ್ಷಣೆಯನಂದು ಭೋಂಕನೆ ಕಂಡಂ | ಗಂಗಾಂಗನೆಯಂ ಕಾಣ್ಣವೂ ಲಂಗನ್ನಪಂ ಮುಂದೆ ನಿಂದ ಕೊಂತಿಯನಾಗಳ್ ||
೭೩
ಸಾಧ್ಯವಿಲ್ಲ. ನಿಷ್ಕರ್ಷೆಮಾಡಿಕೊಂಡು ಉದ್ಧತರಾದ ಶತ್ರುಸೈನ್ಯಸಮೂಹವನ್ನು ನಾಶವಾಗುವ ಹಾಗೆ ಲೆಕ್ಕಕ್ಕೆ ಮಾತ್ರ ಹೋರಾಡಿ ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ. ವ|| ಎಂದು ಮುಂದೆ ಆಗಬೇಕಾದ ಕಾರ್ಯವನ್ನು ತನ್ನಲ್ಲಿ ನಿಷ್ಕರ್ಷೆಮಾಡಿಕೊಂಡನು. ಅವಾರ್ಯವೀರ್ಯನಾದ ಕರ್ಣನು ಒಂದು ಆದಿತ್ಯವಾರದ ದಿನ ಗಂಗೆಯಲ್ಲಿ ಸ್ನಾನಮಾಡಬೇಕೆಂದು ಬಂದು ದುರ್ಯೊಧನನು ಕಳುಹಿಸಿದ ದೇವಮಾನದ ಹದಿನೆಂಟು ಕೋಟಿ ಚಿನ್ನವನ್ನು ಒಟ್ಟಾಗಿ ಬೆಟ್ಟದಂತೆ ರಾಶಿಮಾಡಿದನು. ೭೨. ತಾನು ಮಾಡುವ ದಾನವು ಧಾರಾಕಾರವಾಗಿ ಸುರಿಯುವ ಸುವರ್ಣವೃಷ್ಟಿಯನ್ನೂ ಕೈವಶವಾದ ನಿಧಿಯನ್ನೂ ಕಡೆಗಣಿಸುತ್ತಿರಲು ದಕ್ಷಿಣೆಯನ್ನು ನಿರೀಕ್ಷಿಸುತ್ತಿರುವವನಿಗೂ ಆಶೆಪಟ್ಟು ಬೇಡಿದ ಬ್ರಾಹ್ಮಣರಿಗೂ ಕರ್ಣನು ಕೊಡುಗೈಯಿಂದ ದಾನಮಾಡಿದನು. ವ|| ಹಾಗೆ ತ್ಯಾಗ ಮಾಡಿ ಲೋಕಮಂಗಳ ಸ್ವರೂಪೆಯಾದ ಗಂಗಾನದಿಯಲ್ಲಿ ತಡೆಯಿಲ್ಲದ ಪರಾಕ್ರಮವುಳ್ಳ ಕರ್ಣನು ಪಾಪಪರಿಹಾರವಾದ ಮಂತ್ರೋಚ್ಚಾರಣಪೂರ್ವಕವಾಗಿ ಸ್ನಾನಮಾಡಿ ಚಿನ್ನದ ಪಾತ್ರೆಯಲ್ಲಿ ಪೂರ್ಣವಾಗಿ ತುಂಬಿದ ಚಿನ್ನದ ಕಮಲಗಳಿಂದ ಆದಿತ್ಯತೇಜನಾದ ಕರ್ಣನು ಸೂರ್ಯನಿಗೆ ಅರ್ಭ್ಯವೆತ್ತಿ ಸೂರ್ಯಮಂತ್ರವನ್ನು ಜಪಿಸಿ ಅರ್ಭ್ಯಪ್ರದಾನ ಮಾಡಿ ಮೂರುಪ್ರದಕ್ಷಿಣೆ ಮಾಡಿದನು. ೭೩. ಆಗ ಅಲೆಗಳಿಂದ ಕೂಡಿದವಳೂ ಮಂಗಳಲಕ್ಷಣವುಳ್ಳವಳೂ ಆದ ಗಂಗಾದೇವಿಯನ್ನು ಕಾಣುವ ಹಾಗೆ ಮುಂದೆ ನಿಂತಿದ್ದ
Page #443
--------------------------------------------------------------------------
________________
೪೩೮/ಪಂಪಭಾರತಂ
ವ|| ಅಂತು ಕಂಡು ಮನದೊಳಾದಕದಿಂ ಸಾಷ್ಟಾಂಗಮಗಿ ಪೊಡೆವಟ್ಟ ನಿಜನಂದನನ ನಂದಪ್ಪಿಕೊಂಡು ಪರಮಾಶೀರ್ವಚನಂಗಳಿಂ ಪರಸಿ
ಕಂ11 ತೊರೆದ ಕುಚಯುಗಳವಂದಂ
ಬಿರಿವಿಡೆ ಮೊಲೆವಾಲನಯೆಂದಂ ಮೆಯ್ಯಂ । ಕುರಿಸ ಸುರಿವಶ್ರುಜಲಮು
ಬರಿಸಿ ಪೊನಲ್ ಪೊನಲನಟ್ಟೆ ಜನನುತೆಗಾಗಳ್
ಆಗಳ ಮಗನಂ ಪೆತ್ತವೊ
ಲಾಗಿ ಲತಾಲಲಿತ ನೊಸಲ ಕಣ್ಣೆತ್ತವೊಲಂ | ತಾಗಡೆ ರಾಗಕ್ಕಾಗರ
ಮಾಗೆ ದಿನಾಧಿಪತನೂಜನೊಸೆದಿರ್ಪಿನೆಗಂ
ವ|| ಗಂಗಾದೇವಿಯುಂ ದಿವ್ಯಮೂರ್ತಿಯಂ ಕಳ್ಕೊಂಡು ಬಂದು
ಕಂ।।
ಒಪ್ಪಿಸಿದಂ ಕಯ್ಯಡೆಯಂ
ದಬ್ಬಿಸಿದ ನಿನ್ನ ಮಗನನೀಗಳೆ ನಿನಗಂ | ದಪೈಸಿ ಗಂಗೆ ಪೋಪುದು
ಮೊಪ್ಪುವ ನಿಜಬಿಂಬದೊಳಗಣಿಂದಂ ದಿನಪಂ
ಪೋಮಟ್ಟು ಬರಲ್ ತನ್ನಡಿ
ಗೆಳಗಿದ ನಿಜಸುತನನಂ ಪರಸಿ ಮನಂ | ಮಲುಗಿ ರವಿ ನುಡಿದನೆನ್ನುಮ ನುಗಿದ ಮರುಳಗನೆ ಹರಿಗೆ ಕವಚಮನಿ ||
24
2.89
22
22
ಕುಂತಿದೇವಿಯನ್ನು ಕರ್ಣನು ಥಟಕ್ಕನೆ ಕಂಡನು. ವll ಮನಸ್ಸಿನಲ್ಲುಂಟಾದ ಪ್ರೀತಿಯಿಂದ ಸಾಷ್ಟಾಂಗನಮಸ್ಕಾರ ಮಾಡಿದನು. ಕುಂತಿಯು ತನ್ನ ಮಗನನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಅತ್ಯುತ್ತಮವಾದ ಹರಕೆಗಳಿಂದ ಹರಸಿದಳು. ೭೪. ತೊರೆದ ಎರಡು ಮೊಲೆಗಳೂ ಆಗ ಎದೆಯ ಹಾಲನ್ನು ಧಾರಾಕಾರವಾಗಿ ಸುರಿಸಿದುವು. ಪ್ರೀತಿಯಿಂದ ಶರೀರದಲ್ಲಿ ರೋಮಾಂಚನವುಂಟಾಯಿತು. ಸಂತೋಷದಿಂದ ಹರಿಯುತ್ತಿರುವ ಕಣ್ಣೀರು ಅತ್ಯಧಿಕ ಪ್ರವಾಹವಾಗಿ ಗಂಗೆಯ ಪ್ರವಾಹವನ್ನು ಹೆಚ್ಚಿಸಿತು. ಜನರ ಸ್ತುತಿಗೆ ಪಾತ್ರಳಾದ ಆ ಕುಂತೀದೇವಿಗೆ-೭೫, ಆಗತಾನೆ ಪುತ್ರೋತ್ಸವ ವಾದಂತಾಯಿತು. ಬಳ್ಳಿಯಂತೆ ಕೋಮಲವಾದ ಗಂಗಾದೇವಿಗೆ ಹಣೆಗಣ್ಣನ್ನು ಪಡೆದಷ್ಟು ಸಂತೋಷವಾಯಿತು. ಸೂರ್ಯಪುತ್ರನಾದ ಕರ್ಣನು ಸಂತೋಷಿಸುತ್ತಿದ್ದನು. ವ|| ಆ ವೇಳೆಗೆ ಸರಿಯಾಗಿ ಗಂಗಾದೇವಿಯು ದಿವ್ಯಾಕಾರವನ್ನು ತಾಳಿ ಬಂದು ೭೬. ಕುಂತಿಯನ್ನು ಕುರಿತು 'ನನಗೆ ನ್ಯಾಸವೆಂದು ಒಪ್ಪಿಸಿದ್ದ ನಿನ್ನ ಮಗನನ್ನು ನಿನಗೆ ಈಗ ಒಪ್ಪಿಸಿದ್ದೇನೆ' ಎಂದು ಹೇಳಿ ಗಂಗೆಯು ಅದೃಶ್ಯಳಾದಳು. ಸೂರ್ಯನು ತನ್ನ ಪ್ರಕಾಶಮಾನವಾದ ಬಿಂಬದಿಂದ ೭೭. ಹೊರಟು ಬಂದು ತನ್ನ ಪಾದಕ್ಕೆ ಭಕ್ತಿಯಿಂದ ನಮಸ್ಕಾರಮಾಡಿದ ಮಗನನ್ನು ಪ್ರೀತಿಯಿಂದ ಹರಸಿ ಮನಸ್ಸಿನಲ್ಲಿ ದುಃಖಪಟ್ಟು 'ಹಿಂದೆ ನನ್ನನ್ನೂ ಲಕ್ಷ್ಯಮಾಡದೆ ಬುದ್ಧಿಯಿಲ್ಲದೆ ಮಗನೇ ಇಂದ್ರನಿಗೆ ಕವಚವನ್ನು ಕೊಟ್ಟೆ.
Page #444
--------------------------------------------------------------------------
________________
ನವಮಾಶ್ವಾಸಂ | ೪೩೯
ನುಡಿಯನಿದಂ ನಿನ್ನಂಬಿಕೆ
ಪಡಮಾತೇಂ ಕೊಂತಿ ಹರಿಯ ಮತದಿಂ ಕಾಯ | ಲೊಡರಿಸಿ ಬಂದ ಸುತರಂ
ಕುಡದಿರ್ ಪುರಿಗಣೆಯನೆನಿತು ಲಕ್ಷ್ಮಿಸಿದೊಡಂ ||
ಎಂದರವಿಂದಪ್ರಿಯಸಖ
ನಂದಂಬರತಳಮನಡರ್ವುದುಂ ಕೆಯುಗಿದಿಂ || ತಂದಂ ಕುಂತಿಯನಬ್ಬೇಂ
ವಂದಿರ್ಪುದದನಗೆ ಸಯ್ತು ಬರ್ಪಂತೀಗಳ್ ||
ಚಲಮುಂ ಚಾಗಮುಮಳವುಂ
ಕಲಿತನಮುಂ ಕುಲಮುಮೀಗಳೆನ್ನಯ ಮೆಯೊಳ್ | ನೆಲಸಿದುವು ನಿಮ್ಮ ಕರುಣಾ ಬಲದಿಂ ನೀವೆನ್ನನಿಂದು ಮಗನೆಂದುದಂ
ಪಡೆದ ತಾಯುಂ ತಂದೆಯು
ಮೊಡಲಂ ಪ್ರಾಣಮುಮನವರವವು ಕೆಯೆಡೆಯಂ | ಕುಡುವುದರಿದಾಯ್ತ ನೀಮನ
ಗಡ ಮಡಗದ ಬೆಸಪ ತೊಬ್ರವಸನಂ ಬೆಸಸಿಂ ||
ಎಂಬುದುಮಂಬಿಕ ಮಗನ ಮ
ನಂಬೆಳದ ನೀನುಮಿತ್ತೆಯಾನುಂ ಪತ್ರಂ | ನಂಬಿದ ನಿನ್ನನುಜರ್ ನಿ
ನ್ನಂ ಬೆಸಕೆಯ ನೀನೆ ನೆಲನನಾಳ್ವುದು ಕಂದಾ ||
2.8
26
೮೦
33
೮೨
೭೮. ಇದನ್ನು ಈಗ ಹೇಳುತ್ತಿಲ್ಲ ; ಇಂದಿನ ಮಾತು ಬೇರೆ. ಈಗ ನಿನ್ನ ತಾಯಿಯಾದ ಕುಂತೀದೇವಿಯು ಕೃಷ್ಣನ ಸೂಚನೆಯ ಪ್ರಕಾರ ತನ್ನ ಮಕ್ಕಳ ರಕ್ಷಣೆಯ ಪ್ರಯತ್ನದಲ್ಲಿ ತೊಡಗಿ ಬಂದಿದ್ದಾಳೆ. ಎಷ್ಟು ಲಲ್ಲೆಯ (ಪ್ರೀತಿಯ) ಮಾತುಗಳನ್ನಾಡಿದರೂ ದಿವ್ಯಾಸ್ತ್ರಗಳನ್ನು ಕೊಡಬೇಡ. ೭೯. ಎಂದು ಹೇಳಿ ಸೂರ್ಯನು ಆಕಾಶಪ್ರದೇಶವನ್ನು ಹತ್ತಿದನು. ಕರ್ಣನು ಕುಂತಿಗೆ ಕೈಮುಗಿದು ಹೀಗೆಂದನು: ನನಗೆ ಅದೃಷ್ಟಪ್ರಾಪ್ತಿಯಾದ ಹಾಗೆ ನೀವು ಬಂದಿರುವ ಕಾರ್ಯವಾವುದು ? ೮೦. ನೀವು ತಮ್ಮ ಕರುಣೆಯ ಬಲದಿಂದ ಈಗ ನನ್ನನ್ನು ಮಗನೆಂದು ಹೇಳಿದುದರಿಂದ ನನಗೆ ಛಲವೂ ತ್ಯಾಗವೂ ಮೇಲೆಯೂ ಪರಾಕ್ರಮವೂ ಕುಲವೂ ನನ್ನ ಶರೀರದಲ್ಲಿ ನೆಲಸಿದುವು. ೮೧. ತಾಯಿಯೂ ತಂದೆಯೂ ಮಗನ ಶರೀರವನ್ನೂ ಪ್ರಾಣವನ್ನೂ ಪಡೆದವರು, ಆದುದರಿಂದ ಅದು ಅವರಿಗೆ ಸೇರಿದುವು. ಅವರು ದಯಪಾಲಿಸಿರುವ ಅವನ್ನು ಅವರಿಗೇ ಹಿಂದಿರುಗಿ ಕೊಡುವುದು ಅಸಾಧ್ಯವೇ? ನೀವು ನನಗೆ ಸ್ವಲ್ಪವೂ ಮರೆಮಾಚದೆ ಅಪ್ಪಣೆ ಕೊಡಿಸಬೇಕೆಂದಿರುವ ಸೇವಾಕಾರ್ಯವನ್ನು ಮರೆಮಾಚದೆ ತಿಳಿಸಿ ೮೨. ಎನ್ನಲು ತಾಯಿಯು 'ಮಗನೆ ಮನಸ್ಸಿನಲ್ಲಿ ಹೆದರದೆ ನೀನೂ ಕೊಟ್ಟೆ ನಾನೂ ಪಡೆದಿದ್ದೇನೆ. ಕಂದಾ ನಿನ್ನನ್ನೇ ನಂಬಿರುವ ನಿನ್ನ ತಮ್ಮಂದಿರು ನಿನಗೆ ಸೇವೆ ಮಾಡುವ
Page #445
--------------------------------------------------------------------------
________________
೪೪o | ಪಂಪಭಾರತಂ ಕಂ|| ನಿನಗಪ್ಪರಸಂ ದುರ್ಯೋ
ಧನನೊಲವಂ ಮುಂದುಗೆಯ್ದು ಬೆಸಕೆಯ್ದರೆ ನಿ. " ನನುಜರೆರಾಸೆಗಂ ಕಿಸು
ತಿನಿಸಾಗದು ಮಗನೆ ನೀನೊಡಂಬಡಲ್ಕುಂ || ವ|| ಎಂಬುದುಮದಲ್ಲಮಂ ಕೇಳು ಕರ್ಣಂ ಮುಗುಳಗೆ ನಕ್ಕುಮಗ ಭಯಮಂ ಲೋಭಮುಮಂಬ ತಮುತೆರಡುಂ ಪಾಪಕ್ಕೆ ಪಕ್ಕಾಗೆ ಪಾ
ಟೆಯನೊಕ್ಕಾಳನ ಗೆಯ್ದು ಸತ್ತಮುಮಂ ಪಿಂತಿಕ್ಕಿ ಜೋಳಕ್ಕೆ ತ || ಪಿಯುಮಿಂ ಬಾಬುದ ಪೂಣು ನಿಲದಿಕೆಯಿಂ ಬಾಲಂತು ವಿಖ್ಯಾತ ಕೀ ರ್ತಿಯವೋಲೀಯೊಡಲಬ್ಬೆ ಪೇಟಿಮನಗೇಂ ಕಲ್ಲಾಂತರಸ್ಥಾಯಿಯೇ || ೮೪ ಕಂ1 ಮೀಂಗುಲಿಗನೆನಾಗಿಯುಮಣ
ಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ | ದಂಗೆನಗೆ ಬಿಸುಡಲಕ್ಕುಮೆ
ನೀಂ ಗಳ ಪಂಬಲನ ಬಿಸುಡಿಮಿನ್ನನ್ನೆಡೆಯೊಳ್ || . ವ|| ಎಂಬುದುಂ ಕೊಂತಿ ಭೋಂಕನರ್ದದಂದು- ಮl ಅಳೆದೆಂ ನೆಟ್ಟನೆ ಬೆಟ್ಟಿನಿಂತು ನುಡಿ ನೀಂ ಕಂದ ಪೋಗಿಂದ ಕೆ
ಮೃತಿದತ್ತಾಗದೆ ಸೋಮವಂಶಮನಗಿಂ ಬಾಯ್ತಾಸೆಯಲ್ಲಿತ್ತೂ ಬಿ | ಮೀುಟಿದಂ ಮನ ಮಕ್ಕಳಾಸೆಯುಮನಾನೆಂದಲ್ಲಿ ಶೋಕಾಗ್ನಿ ಪೊಂ ಪುಟವೊಗುತ್ತಿರೆ ಕರ್ಣನೆಂದನಿನಿತೇಂ ಪೇಬಿಟ್ಟೆ ಚಿಂತಾಂತರಂ || ೮೬
esge
ಹಾಗೆ (ನಿನ್ನ ಅಜ್ಞಾಧಾರಕರಾಗಿರುವ ಹಾಗೆ) ನೀನೇ ರಾಜ್ಯವನ್ನು ಆಳು, ೮೩. ನಿನಗೆ ಪ್ರಾಪ್ತವಾದ ರಾಜ್ಯವನ್ನು ನಿನ್ನ ತಮ್ಮಂದಿರು ದುರ್ಯೊಧನನ್ನು ಮುಂದುಮಾಡಿಕೊಂಡು ಸೇವೆಮಾಡುವರು, ಇದರಿಂದ (ನೀನು ರಾಜನಾಗುವುದರಿಂದ) ಉಭಯಪಕ್ಷಕ್ಕೂ ಸ್ವಲ್ಪವೂ ದೋಷವುಂಟಾಗುವುದಿಲ್ಲ. ಮಗನೇ ನೀನು ಒಪ್ಪಬೇಕು' ಎಂದಳು ವ|| ಅದನ್ನೆಲ್ಲವನ್ನು ಕರ್ಣನು ಕೇಳಿ ಹುಸಿನಗೆ ನಕ್ಕನು. ೮೪, ಭಯವೂ ಲೋಭವೂ ಇವೆರಡೂ ಪಾಪಕ್ಕೆ ಭಾಗಿಯಾಗಿರಲು ಹಿಂದಿನ ಸಂಪ್ರದಾಯ (ಕ್ರಮ)ವನ್ನು ಬಿಟ್ಟು ಸ್ವಾಮಿಯು ಮಾಡಿರುವ ಸತ್ಕಾರ್ಯಗಳನ್ನೆಲ್ಲ ಹಿಂದಕ್ಕೆ ಹಾಕಿ (ಮರೆತು) ಅನ್ನದ ಋಣಕ್ಕೆ (ಕೃತಜ್ಞತೆಗೆ) ಮೀರಿಯೂ ಬಾಳುವುದೇ ? ಅಶಾಶ್ವತತೆಗೆ ಪ್ರಸಿದ್ದವಾದ ಈ ಶರೀರವು ಪ್ರಖ್ಯಾತಕೀರ್ತಿಯು ಬಾಳುವ ಹಾಗೆ ಯುಗಯುಗಗಳಲ್ಲಿಯೂ ನಿಲ್ಲುವಂತಹುದೇ ಹೇಳಿ ತಾಯಿ, ೮೫. ಮೀನನ್ನು ಕೊಲ್ಲುವ ಸ್ವಭಾವವುಳ್ಳ ಬೆಸ್ತರ ಜಾತಿಯವನಾಗಿದ್ದು ಇಲ್ಲಿಯವರೆಗೆ ನಾನು ಸ್ವಲ್ಪವೂ ಸದ್ಗುಣವನ್ನು ಬಿಟ್ಟಿಲ್ಲ. ಸತ್ಕುಲಪ್ರಸೂತರಾದ ನಿಮ್ಮ ಮಗನಾದ ನನಗೆ (ಆ ಗುಣಗಳನ್ನು ತ್ಯಾಗಮಾಡುವುದು ಆಗುತ್ತದೆಯೇ? ಇನ್ನು ನೀವು ನನ್ನಲ್ಲಿರುವ ಹಂಬಲವನ್ನು ಬಿಸಾಡಿಬಿಡಿ. ವlt ಎನ್ನಲು ಕುಂತಿಯು ಇದ್ದಕ್ಕಿದ್ದ ಹಾಗೆ ಎದೆಯೊಡೆದು-೮೬. ಅಯ್ಯೋ ನಾನು ಹಾಳಾದೆ ಕಂದ, ನೀನು ನೇರವಾಗಿ ಇಷ್ಟು ಒರಟಾಗಿ ಮಾತನಾಡುತ್ತಿದ್ದೀಯೆ. ಚಂದ್ರವಂಶವು ಇಂದೇ
Page #446
--------------------------------------------------------------------------
________________
ನವಮಾಶ್ವಾಸಂ (೪೪೧ ಕ೦ll ಪಿಡಿಯಂ ಪುರಿಗಡಯಂ ನರ
ನಡೆಗೊಂಡೊಡಮುಟದ ನಿನ್ನ ಮಕ್ಕಳನಿನ್ನೇ | ರ್ದೊಡಮಣಿಯಂ ಪರ್ಜಸಮನೆ ಪಿಡಿದೆನ್ನನೆ ರಣದೊಳಟೆವೆನಿರದಡಿಯಂ 11
೮೭ ವ|| ಎಂದು ಕೊಂತಿಯಂ ವಿಸರ್ಜಿಸಿ ಚಲದ ಚಾಗದ ಕುಲದ ನಯನಾವರ್ಜಿಸಿ ರಾಧೇಯನೂಂಗಾಧೇಯನಾಗಿರ್ದನಿತ್ತ ಪುರುಷೋತ್ತಮನುಂ ಕತಿಪಯ ಪ್ರಯಾಣಂಗಳಿಂ ವಿರಾಟಪುರ ನಿಕಟವರ್ತಿಯಪ್ಪ ದಿವಿಜಾಪಗಾತಟದುಪವನದೊಳರಿನೃಪವನಕುಪದ್ರವಕಾರಿಯಾಗಿ ನಲಂ ಮೂರಿವಿಟ್ಟಂತ ಬಿಟ್ಟಿರ್ದಜಾತಶತ್ರುವನವನತೋತ್ತಮಾಂಗನಾಗಿ ಕಂಡುಮll ಹಿಮಕೃದ್ವಂಶಜರಪ್ಪ ಪಾಂಡುಸುತರಂ ಕೆಯೊಂಡು ನಿನ್ನಯ್ದು ಬಾ
ಡಮನಿತ್ತು ನಡಪೆಂದು ಸಾಮಮನೆ ಮುಂ ಮುಂತಿಳ್ಕೊಡಾತಂ ಪರಾ| ಕ್ರಮಮಂ ತೋಡಿ ಸಿಡಿಲು ಹಾಯ್ದುದುಮಸುಂಗೊಳ್ಳನ್ನೆಗಂ ವಿಶ್ವರೂ ಪಮನಾಂ ತೋಟದೆನಿಂ ಕಡು ರಣದೊಳ್ ನೀಂ ತೋಜು ನಿನ್ನಾರ್ಪುಮಂ II೮೮
ವll ಎಂಬನ್ನೆಗಂ ದುರ್ಯೋಧನನಟ್ಟಿದ ದೂತಂ ಸಂಜಯನೆಂಬಂ ಬಂದು ಸಕಲ ಸಾಮಂತ ಮಣಿಮಕುಟ ಮರೀಚಿ ಮಸೃಣಿತ ಚರಣಾರವಿಂದನಪ್ಪ ಧರ್ಮನಂದನನಂ ಕಂಡು
ಕೆಟ್ಟು ನಾಶವಾಗಲಿಲ್ಲವೇ. ನನಗೂ ಇನ್ನು ಮೇಲೆ ಬದುಕುವ ಆಸೆಯೆಲ್ಲಿದೆ ? ಉಳಿದ ಮಕ್ಕಳ ಆಸೆಯನ್ನು ಬಿಟ್ಟು ಬಿಟ್ಟಿದ್ದೇನೆ ಎಂದು ಹೇಳಿದ ಕುಂತೀದೇವಿಗೆ ಕರ್ಣನು ದುಃಖಾಗ್ನಿಯು ವೃದ್ಧಿಯಾಗುತ್ತಿರಲು ಇಷ್ಟೊಂದು ಚಿಂತೆಯೇಕೆ ತಾಯಿ, ಯೋಚಿಸ ಬೇಡಿ. ೮೭. ಅರ್ಜುನನು ಪ್ರತಿಭಟಿಸಿದರೂ ದಿವ್ಯಾಸ್ತವನ್ನು ಹಿಡಿಯುವುದಿಲ್ಲ. ಉಳಿದ ನಿನ್ನ ಮಕ್ಕಳು ಗಾಯಪಡಿಸಿದರೂ ಅವರನ್ನು ಕೊಲ್ಲುವುದಿಲ್ಲ. ಪ್ರಖ್ಯಾತಕೀರ್ತಿಯನ್ನೇ - ಆಶ್ರಯಿಸಿ ಯುದ್ದದಲ್ಲಿ ನನ್ನನ್ನೇ ನಾಶಮಾಡಿಕೊಳ್ಳುತ್ತೇನೆ. ಸಾವಕಾಶಮಾಡದೆ ಅಡಿಯೆತ್ತಿ (ಹೊರಡಿರಿ) ವll ಎಂದು ಕುಂತಿಯನ್ನು ಬಿಟ್ಟು ಕಳೆದು ಛಲ, ತ್ಯಾಗ, ಕುಲ, ಮತ್ತು ಸತ್ಯವನ್ನು ಸಂಪಾದಿಸಿಕೊಂಡು ಕರ್ಣನು ಸದ್ಗುಣಕ್ಕೆ ಆಶ್ರಯವಾಗಿದ್ದನು. ಈಕಡೆ ಕೃಷ್ಣನು ಕೆಲವು ಪ್ರಯಾಣಗಳಿಂದ ವಿರಾಟನಗರದ ಸಮೀಪದಲ್ಲಿದ್ದ ಗಂಗಾನದಿಯ ದಡದ ಉಪವನದಲ್ಲಿ ಶತ್ರುರಾಜರೆಂಬ ಕಾಡಿಗೆ ಹಿಂಸಾಕಾರಿಯಾಗಿ ಜಗತ್ತಿನ ಜನವೆಲ್ಲ ಗುಂಪು ಕೂಡಿಕೊಂಡಿರುವಂತೆ ಬೀಡುಬಿಟ್ಟಿದ್ದ ಧರ್ಮರಾಜನನ್ನು ಕುರಿತು ನಮಸ್ಕಾರಪೂರ್ವಕ ಕಂಡು - ೮೮. ಸೋಮವಂಶದಲ್ಲಿ ಹುಟ್ಟಿದ ಪಾಂಡವರನ್ನು ಅಂಗೀಕಾರಮಾಡಿ (ಪುರಸ್ಕರಿಸಿ) ನಿನ್ನ ಅಯ್ತು ಹಳ್ಳಿಗಳನ್ನು ಕೊಟ್ಟು ಕಾಪಾಡು (ನಡಸು) ಎಂದು ಸಾಮೋಪಾಯವನ್ನೇ ಮುಂದುಮಾಡಿ ನುಡಿದೆ. ಅವನು ತನ್ನ ಪರಾಕ್ರಮವನ್ನೇ ಪ್ರದರ್ಶಿಸಿ ಸಿಡಿದು ಮೇಲೆ ಹಾಯ್ದ. ಅವನ ಪ್ರಾಣಗಳನ್ನೇ ಸೆಳೆದುಕೊಳ್ಳುವಂತೆ ನಾನು ವಿಶ್ವರೂಪವನ್ನು ತೋರಿದೆ. ಇನ್ನು ನೀನು ಉತ್ಸಾಹಶಾಲಿಯಾಗಿ ಯುದ್ಧದಲ್ಲಿ ನಿನ್ನ ಶಕ್ತಿಯನ್ನು ಪ್ರದರ್ಶಿಸು ವು ಎನ್ನುವಷ್ಟರಲ್ಲಿ ದುರ್ಯೋಧನನು ಕಳುಹಿಸಿದ ಸಂಜಯನೆಂಬ ದೂತನು ಬಂದು ಸಾಮಂತರಾಜರ ರತ್ನಕಿರೀಟದ ಕಾಂತಿಯಿಂದ
Page #447
--------------------------------------------------------------------------
________________
೪೪೨) ಪಂಪಭಾರತ ಉll ಅಟ್ಟದ ನಿಮ್ಮ ಪೆರ್ಗಡೆ ಬರ್ದುಂಕಿದನೆಂಬುದನಿಂದ್ರಜಾಲಮಂ
ತೊಟ್ಟನೆ ತೋಳ ಬಂದು ಬರ್ದುಕಾಡಿದನಿನ್ನಳಿಪಿಂಡವಟ್ಟುವ | ಟ್ವಿಟ್ಟಿಗಳಂ ಬಿಸುಟ್ಟುದಮಗಂ ತಮಗಂ ಮುಳಿಸಿಂದಮೀಗಳ
ಟ್ಟಗಳಷ್ಟುವೆಂದಿದನೆ ದಲ್ ನುಡಿದಟ್ಟಿದನಮ್ಮ ಭೂಭುಜಂ || ೮೯ ಮll ಬಳ ಸಂಪನ್ನರನಾಸೆಗೆಯ ಚತುರಂಗಾನೀಕಮಂ ಕೂಡಿ ಕೊ
ಳ್ಳುಳಮಂ ಗಂಡುಮನಪುಕೆಯ ಮನಮಂ ಬಲ್ಲಿತ್ತು ಮಾತಿಂದುಮಾ | ನಳೆಯಂ ಕಾದಿದೊಡಲ್ಲದೀಯನಳದಿರ್ಕೆಂದಾ ಕುರುಕ್ಷೇತ್ರಮಂ ಕಳವೇಲ್ಗಟ್ಟಿದನ ಸಾಯಿಮುಟಿಯಿಂ ನಿಮ್ಮೊಂದು ಬಾಯ್ತಾಸೆಯಂ 10 ೯೦ ವ|| ಎಂಬುದುಂ ವೃಕೋದರಂ ಮುಳಿದಾಸ್ಪೋಟಿಸಿಚಂII ಎಷಸನರ೦ಗಮಪ್ಪುದೆನಗಂ ತನಗಂ ದೊರೆ ಕಾಯುಮೇವಮುಂ
ಪಸರಿಸಿ ಪರ್ವಿ ತನ್ನೊಳಮದನ್ನೂಳಮಿರ್ದುದು ಭೀಮನೆಂದೊಡಾ | ಹೆಸರನೆ ಕೇಳು ಸೈರಿಸದ ನಿನ್ನರಸಂ ಕಲಿಯಾಗಿ ನಾಳೆ ಸೈ
ರಿಸುಗುಮ ವೈರಿಭೂಪ ರುಧಿರಾದ್ರ್ರ ಮದೀಯ ಗದಾಭಿಘಾತಮಂ 1೯೧ ವ|| ಎಂಬುದು ಪರಾಕ್ರಮಧವಳನಿಂತೆಂದಂಮll ಕಲುಪುಂ ಕಾಯುಮನುಂಟುಮಾಡಿ ನೆಲನಂ ದುರ್ಯೊಧನಂ ತಾಗಿ ತ
ಇಳಿದುದಲ್ಲದೆ ಕೂಡನಾಜಿ ಭರಮುಂ ಸಾರ್ಚಿತ್ತದೇನೆಂದು ಮು || ಜುದಿಂಗಳ ಜಜುಚುತ್ತುಮಿರ್ಪುದ ರಣಕ್ಕಾರನ್ನರೆಂದೀಗಳೆಂ
ತಲುಯಲ್ ಬರ್ಕುಮೆ ಬರ್ಕೆ ಬಂದೊಡನೆಯಕ್ಕುಂ ಕುರುಕ್ಷೇತ್ರದೊಳIt೯೨ ಪ್ರಕಾಶವಾದ ಪಾದಕಮಲಗಳನ್ನುಳ್ಳ ಧರ್ಮರಾಜನನ್ನು ನೋಡಿ -೮೯. ನೀವು ಕಳುಹಿಸಿದ ಹೆಗ್ಗಡೆಯು ಇಂದ್ರಜಾಲವನ್ನು ತೋರಿ ಬದುಕಿ ಬಂದಿದ್ದಾನೆ. ಇನ್ನು ದೂತರನ್ನು ಕಳುಹಿಸುವುದನ್ನು ನಿಲ್ಲಿಸಿರಿ. ಇನ್ನು ಮೇಲೆ ಕೋಪದಿಂದ ನಮಗೂ ನಿಮಗೂ ಅಟ್ಟಿಯಾಡುವ ಯುದ್ಧಕಾರ್ಯವು ಪ್ರಾಪ್ತವಾಗುವುದು ಎಂಬ ಈ ಸಂದೇಶವನ್ನು ಹೇಳಿ ನಮ್ಮ ರಾಜನು ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ್ದಾನೆ. ೯೦. ಬಲಸಂಪನ್ನರಾದವರನ್ನು ಕೂಡಿಕೊಳ್ಳಲಿ (ಸೇರಿಸಿಕೊಳ್ಳಲಿ) ; ಚತುರಂಗ ಸೈನ್ಯವನ್ನು ಕೂಡಿಸಿ ರಣರಂಗವನ್ನು ಸೇರಿ ಪರಾಕ್ರಮವನ್ನು ಅಂಗೀಕರಿಸಲಿ ; ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲಿ ; ನಾನು ಎಂದೂ ಯುದ್ದಮಾಡಿದಲ್ಲದೆ ಭೂಮಿಯನ್ನು ಕೊಡುವುದಿಲ್ಲ ತಿಳಿದಿರಲಿ ಎಂದು ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ಗೊತ್ತು ಮಾಡಿ ಕಳುಹಿಸಿದ್ದಾನೆ. ಪೌರುಷಪ್ರದರ್ಶನಮಾಡಿ ಸಾಯಿರಿ, ಬಾಳುವ ಆಸೆಯನ್ನು ಬಿಡಿರಿ ವ|| ಎನ್ನಲು ಭೀಮಸೇನನು ಕೋಪಿಸಿಕೊಂಡು ಆರ್ಭಟಿಸಿ ನುಡಿದನು. ೯೧. ಯುದ್ಧರಂಗವು ನನಗೂ ದುರ್ಯೋಧನನಿಗೂ ಸಮಾನವಾದುದೇ. ನನ್ನಲ್ಲಿಯೂ ಅವನಲ್ಲಿಯೂ ಕೋಪ ಮಾತ್ಸರ್ಯಗಳು ಪ್ರಸರಿಸಿ ಅಧಿಕವಾಗಿವೆ. ಭೀಮನೆಂಬ ಹೆಸರನ್ನೇ ಕೇಳಿ ಸಹಿಸದ ನಿಮ್ಮ ರಾಜನು ಶೂರನಾಗಿ ನಾಳೆಯ ದಿನ ಶತ್ರುರಾಜರ ರಕ್ತದಿಂದ ಒದ್ದೆಯಾದ ನನ್ನ ಗದೆಯ ಪೆಟ್ಟನ್ನು ಸೈರಿಸುತ್ತಾನೆಯೇ ? (ತಡೆದುಕೊಳ್ಳುತ್ತಾನೆಯೇ ?) ವ|| ಎನ್ನಲು ಅರ್ಜುನನು ಹೀಗೆಂದನು ೯೨. ಕೋಪವನ್ನೂ ತಾಪವನ್ನೂ
Page #448
--------------------------------------------------------------------------
________________
ನವಮಾಶ್ವಾಸಂ / ೪೪೩ ವ|| ಎಂಬುದುಂ ಯಮನಂದನನಿಂತೆಂದಂಮll » 1 ಎಳೆಯಂ ದುರ್ಯೋಧನಂ ತಿಳಿಯದೆ ಕುಡನೆಂದಟ್ಟ ಕಾಧಲ್ಯಮಿಗಳ
ಕಳನಂ ಪೇಯ್ದಂ ಕುರುಕ್ಷೇತಮನೆನೆ ತಡವಿನ್ನಾವುದುಗ್ರಾಜಿಯೊ ದೋ | ರ್ವಳದಿಂದ ತನ್ನ ಮಚ್ಚಂ ಸಲಿಸಿಯ ನೆಲನಂ ಕೊಳ್ಳೆನಿಂ ತನನ್ನೊಳ್ ಕಳನಂ ಬೇಡಯ್ ಕೆಲ್ಲೆಂ ಬಗೆಯನಳಿಯಲಾಟಮಂತಂದ ಪೇಟೆಂ || ೯೩
ವ|| ಎಂದಜಾತಶತ್ರು ಶತ್ರುಪಕ್ಷಕ್ಷಯಂ ಮಾಡುವುದ್ಯೋಗಮವೆತ್ತಿಕೊಂಡು ಪ್ರಯಾಣ ಭೇರಿಯಂ ಪೊಯ್ತಿದಾಗಮll ದಸೆಯಂ ಪೊತ್ತ ಮಜೀಭರಾಜಿ ದಸೆಗೆಟ್ರೋಡಲ್ಕಗಳನ್ನು ಸ
ಪ್ರ ಸಮುದ್ರ ಕರೆಗಣಿ ತನ್ನವಧಿಯಂ ದಾಂಟತ್ತಜಾಂಡಂ ಸಿಡಿ | ಲ್ಲು ಸಿಡಿಲೊಯೊಡೆದೊಂದು ತತ್ತಿಯವೊಲಾಯ್ತಂಬೊಂದು ಸಂದೇಹಮಂ ಪೊಸತಂ ಭೂಭುವನಕ್ಕೆ ಮಾಡಿದುದು ತತ್ಸಾಹಭರೀರವಂ | ೯೪ ಕರಿಗಳ ಭ್ರಂಗಕುಳಾಕುಳೀಕೃತ ಕಟೋಪೇತಂಗಳೊಂಬತ್ತು ಸಾ ಸಿರಮಂತೊಂದು ಗಜಕ್ಕೆ ನೂಲು ರಥಮಂತಾ ಸ್ವಂದನಕ್ಕೊಂದಳೊಳ್ | ತುರಗಂ ನೂಅನಿತುಂ ತುರಂಗದಳದೊಂದೂಂದರ್ಕೆ ನೂಜಾಟ್ ತಗು
ಇರೆ ಬಲ್ಲರ್ ನಡೆ ನೋಡಿ ಕೂಡ ಪಡೆದತ್ತಕೋಹಿಣೀಸಂಖ್ಯೆಯಂ || ೯೫ ಉಂಟುಮಾಡಿ ಪ್ರತಿಭಟಿಸಿ ಯುದ್ಧಮಾಡಿದಲ್ಲದೆ ದುರ್ಯೊಧನನು ರಾಜ್ಯವನ್ನು ಕೊಡುವುದಿಲ್ಲ. ಯುದ್ದಭಾರವೂ ಸಮೀಪಿಸಿದೆ. ಆರು ತಿಂಗಳ ಮೊದಲಿಂದಲೂ ಅದೇನಾಗುತ್ತದೆಂದು ಹರಟುತ್ತಿರುವುದೇ ? ರಣದಲ್ಲಿ ಯಾರು ಎಂಥವರು ಎಂಬುದನ್ನು ಈಗ ತಿಳಿಯುವುದು ಸಾಧ್ಯವೇ? ಕುರುಕ್ಷೇತ್ರಕ್ಕೆ ಬರಲಿ, ಬಂದರೆ ತಿಳಿಯುತ್ತದೆ. ವ|| ಎನ್ನಲು ಧರ್ಮರಾಜನು ಹೀಗೆಂದನು ೯೩. ದುರ್ಯೋಧನನನ್ನು ಸಂಧಿಸಿ ಯುದ್ದಮಾಡಿದ ಹೊರತು ಭೂಮಿಯನ್ನು ಕೊಡುವುದಿಲ್ಲ ಎಂದು ದೂತನ ಮೂಲಕ ಹೇಳಿಕಳುಹಿಸಿ ಈಗ ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ನಿಶ್ಚಯಿಸಿದ್ದೇನೆ ಎಂದ ಮೇಲೆ ಇನ್ನು ಸಾವಕಾಶವೇತಕ್ಕೆ? ಘೋರಯುದ್ದದಲ್ಲಿ ನನ್ನ ಬಾಹುಬಲದಿಂದಲೇ ಅವನ ಆಶೆಯನ್ನು ಪೂರೈಸಿ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಇನ್ನು ಸಾವಕಾಶ ಮಾಡುವುದಿಲ್ಲ. ನಮ್ಮಲ್ಲಿ ಯುದ್ಧಮಾಡುವುದನ್ನಪೇಕ್ಷಿಸಿ ಸರಿಯಾದುದನ್ನೇ ಕೇಳಿದ್ದಾನೆ. ಅವನ ಅಭಿಪ್ರಾಯವನ್ನು ಚೆನ್ನಾಗಿ ತಿಳಿಯಲಾಯ್ತು; ಇನ್ನು ಏಳಿ; ಹಾಗೆಯೇ ಹೇಳಿ ಎಂದು ಅವನನ್ನು ಕಳುಹಿಸಿದನು. ವ|| ಧರ್ಮರಾಯನು ಶತ್ರುಪಕ್ಷವನ್ನು ನಾಶಮಾಡುವ ಕಾರ್ಯವನ್ನು ಅಂಗೀಕರಿಸಿ ಪ್ರಯಾಣಭೇರಿಯನ್ನು ಹೊಡೆಯಿಸಿದನು- ೯೪. ದಿಕ್ಕುಗಳ ಭಾರವನ್ನು ಹೊತ್ತಿರುವ ಮದದಿಂದ ಕೂಡಿದ ದಿಗ್ಗಜಗಳ ಸಮೂಹವು ದಿಕ್ಕೆಟ್ಟು ಓಡಲು ಪ್ರಾರಂಭಿಸಿದವೋ, ಏಳು ಸಮುದ್ರಗಳೂ ಮೇರೆಯನ್ನು ಮೀರಿ ತಮ್ಮ ಎಲ್ಲೆಯನ್ನು ದಾಟಿದುವೋ, ಬ್ರಹ್ಮಾಂಡವು ಸಿಡಿದು ಹೋಗಿ ಸಿಡಿಲಿನಿಂದ ಒಡೆದು ಚೂರಾದ ಒಂದು ಮೊಟ್ಟೆಯಂತಾಯಿತೋ ಎಂಬ ಒಂದು ಸಂದೇಹವನ್ನು ಆ ಭೇರಿಯು ಶಬ್ದವು ಭೂಲೋಕಕ್ಕೆಲ್ಲ ಉಂಟುಮಾಡಿತು. ೯೫. ದುಂಬಿಗಳ ಸಮೂಹದಿಂದ ಹಿಂಸಿಸಲ್ಪಟ್ಟ ಕಪೋಲಗಳನ್ನುಳ್ಳ ಒಂಬತ್ತು ಸಾವಿರ ಆನೆಗಳು, ಅಂತಹ
Page #449
--------------------------------------------------------------------------
________________
೪೪೪) ಪಂಪಭಾರತಂ
ವ|| ಅಂತು ಮಾಡಿದ ಪರಿಸಂಖ್ಯೆಯೊಂದಕ್ಕೋಹಿಣಿ ಬಲಂಬೆರಸು ತಲೆಬಟವಚಿಯೆಂದಭಿಮನ್ಯುಗೆ ಕೂಸಂ ಕೊಟ್ಟ ಜಟ್ಟಿಗಂ ವಿರಾಟಂ ಶ್ವೇತನುತ್ತರಂ ಶಂಖನೆಂಬ ಮೂವರ್ ಮಕ್ಕಳುಂ ಶತಾನೀಕ ಶತದ್ಯುಮ್ಮ ಶತಚಂದ್ರಂ ಮೊದಲಾಗಿ ಪನ್ನೊರ್ವರ್ ತಮ್ಮಂದಿರುಂಬೆರಸು ನೆಲನದಿರೆ ಮುಂಗೋಳೊಳ್ ನಡೆಯ ದೌಪದಿಯ ಕೊಟ್ಟ ಕಣ್ಣುಮಂ ದ್ರೋಣನೊಳಾದ ಪರಿಭವಮುಮಂ ನೆನೆದೊಂದಕ್ಕೋಹಿಣಿ ಬಲಂಬೆರಸು ದ್ರುಪದಂ ಧೃಷ್ಟದ್ಯುಮ್ಮ ಶಿಖಂಡಿ ಚೇಕಿತಾನ ಯುಧಾಮನ್ನೂತ್ತಮೌಜಃ ಪುರುಕುತ್ಸು ವಿಚಿತ್ರಾದಿಗಳಪ್ಪ ತನ್ನ ಮಕ್ಕಳೊರಸು ನಲಂ ಮೂರಿವಿಟ್ಟಂತೆ ಬಲವಕ್ಕದೊಳ್ ನಡೆಯ ಸುಭದ್ರೆಯ ಕೊಟ್ಟ ನಣ್ಣಿಂಗನುಬಲವಾಗಿ ಪುಂಡರೀಕಾಕ್ಷನ ತಮ್ಮಂ ಸಾತ್ಯಕಿ ವೃಷ್ಠಿ ಕಾಂಭೋಜಕುಳತಿಳಕರಪ್ಪ ಯಾದವರ ಕುಲದೊಡನೆಯಕ್ಕೋಹಿಣೀಪತಿ ನಾಯಕಂ ಭೂಪತಿಯೆಡವಕ್ಕದೊಳ್ ನಡೆಯ ಕೇಕಯ ವಿಷಯಾಧೀಶರರಪ ಕೃಕಯರಯರುಮೊಂದಕೊಹಿಣಿ ಬಲದೊಡನೆ ಸಿಡಿಲನುರುಳಿ ಮಾಡಿದಂತು ಒಂಗೋಲ್ ನಡಯ ಪಾಂಡಂ ಶ್ರೀಜಯಹೋಮಕರೊಡನೊಂದಕೋಹಿಣೀ ಬಲಂಬೆರಸು ಸುತ್ತಿಳದು ಬಳಸಿ ಬರೆ ಧರಣೀಂದ್ರನ ತಂಗೆಯಪ್ಪ ಕನಕಲತೆಗಂ ವಿಕ್ರಮಾರ್ಜುನಂಗಂ ಪುಟ್ಟಿದ ಮಗನಿಳಾವಂತನನಂತ ನಾಗರಾಜ ಬಲಂಬೆರಸು ನಾಗಲೋಕಮ ಕಿಟ್ಟುಬರ್ಪಂತೆ
ಒಂದು ಆನೆಗೆ ನೂರು ತೇರುಗಳು ; ಆ ತೇರು ಒಂದೊಂದಕ್ಕೆ ನೂರು ಕುದುರೆಗಳು, ಅಷ್ಟು ಕುದುರೆಯ ಸೈನ್ಯದ ಒಂದೊಂದಕ್ಕೆ ನೂರಾಳು ಸೇರಿಕೊಂಡಿರಲು, ಅದು ತಿಳಿದವರ ಗಣನೆಯ ಪ್ರಕಾರ ಒಂದು ಅಕ್ಟೋಹಿಣೀ ಎಂದೆನಿಸಿತು ವlು ಹೀಗೆ ಮಾಡಿದ ಲೆಕ್ಕದ (ಈ ಗಣನೆಗೆ ಅನುಗುಣವಾದ) ಒಂದು ಅಕ್ಟೋಹಿಣಿ ಸೈನ್ಯದಿಂದ ಕೂಡಿ ತನ್ನ ತಲೆಯನ್ನೇ ಬಳುವಳಿಯನ್ನಾಗಿ ಮಾಡಿ ಉತ್ತರನಿಗೆ ಮಗಳನ್ನು ಕೊಟ್ಟ ಶೂರನಾದ ವಿರಾಟನು, ಶ್ವೇತ, ಉತ್ತರ, ಶಂಖರೆಂಬ ಮೂರು ಮಕ್ಕಳನ್ನೂ ಶತಾನೀಕ, ಶತದ್ಯುಮ್ಮ, ಶತಚಂದ್ರ ಮೊದಲಾದ ಹನ್ನೊಂದು ತಮ್ಮಂದಿರೊಡಗೂಡಿ ಭೂಮಿಯು ನಡುಗುವಂತೆ ಮುಂಭಾಗದಲ್ಲಿ ನಡೆದನು. ಬ್ರೌಪದಿಯನ್ನು ಕೊಟ್ಟಿರುವ ಬಾಂಧವ್ಯವನ್ನೂ ದ್ರೋಣಾಚಾರ್ಯನಿಂದುಂಟಾದ ಅವಮಾನವನ್ನೂ ನೆನೆಸಿಕೊಂಡು ಒಂದು ಅಕ್ಟೋಹಿಣೀ ಸಮೇತನಾಗಿ ದ್ರುಪದನು ಧೃಷ್ಟದ್ಯುಮ್ಮ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜ, ಪುರುಕುತ್ಸು, ವಿಚಿತ್ರರೇ ಮೊದಲಾದ ತನ್ನ ಮಕ್ಕಳೊಡಗೂಡಿ ಭೂಮಿಯ ಜನವೆಲ್ಲ ಗುಂಪುಗೂಡಿದ ಹಾಗೆ ಬಲಪಾರ್ಶ್ವದಲ್ಲಿ ನಡೆದನು. ಸುಭದ್ರೆಯನ್ನು ಕೊಟ್ಟಿರುವ ನಂಟುತನಕ್ಕನುಗುಣವಾಗಿ ಶ್ರೀಕೃಷ್ಣನ ತಮ್ಮನಾದ ಸಾತ್ಯಕಿಯು ವೃಷ್ಠಿ ಕಾಂಭೋಜಕುಲತಿಲಕರಾದ ಯಾದವಕುಲದವರೊಡನೆ ಅಕ್ಟೋಹಿಣಿ ಸೈನ್ಯದ ನಾಯಕನಾಗಿ ರಾಜನ ಎಡಭಾಗದಲ್ಲಿ ನಡೆದನು. ಕೇಕಯ ದೇಶಾಧೀಶರಾದ ಕೈಕಯಿದು ಮಂದಿಯೂ ಒಂದಕ್ಟೋಹಿಣೀ ಬಲದೊಡನೆ ಸಿಡಿಲನ್ನು ಉಂಡೆ ಮಾಡಿದ ಹಾಗೆ ಹಿಂಭಾಗದಲ್ಲಿ ನಡೆದರು. ಪಾಂಡ್ಯನು ಶ್ರೀಜಯ ಸೋಮಕರೊಡನೆ ಒಂದಕ್ಟೋಹಿಣಿ ಸೈನ್ಯಸಮೇತನಾಗಿ ಸುತ್ತಲೂ ವ್ಯಾಪಿಸಿ ಬಂದನು. ರಾಜನ ತಂಗಿಯಾದ ಕನಕಲತೆಗೂ ವಿಕ್ರಮಾರ್ಜುನನಿಗೂ ಹುಟ್ಟಿದ ಮಗನಾದ ಇಳಾವಂತನು ಸಮಸ್ತ ನಾಗರಾಜಸೈನ್ಯದೊಡನೆ ಪಾತಾಳಲೋಕವೇ ಕಿತ್ತು
Page #450
--------------------------------------------------------------------------
________________
ನವಮಾಶ್ವಾಸಂ / ೪೪೫ ಬರೆ ಹಿಡಿಂಬೆಗಂ ಭೀಮಂಗಂ ಪುಟ್ಟಿದ ಮಗ ಘಟೋತ್ಕಚನಜುವತ್ತೆಂಟು ಕೋಟಿ ರಾಕ್ಷಸ ಬಲಂಬೆರಸು ಬರ ಸಾಮಂತ ಚೂಡಾಮಣಿಯ ಕೃತೋಪಕಾರಮಂ ನೆನದಂಗದಪರ್ಣನೆಂಬ ಗಂಧರ್ವ೦ ನಾಲ್ಕು ಕೋಟಿ ಗಂಧರ್ವಬಲಮುಮುವತ್ತು ಸಾಸಿರ ಗಿಳಿಯ ಬಣ್ಣದ ಕುದುರೆಗಳುಂ ಬೆರಸು ಗಂಧರ್ವಲೋಕಮೆ ಕಿತ್ತಿಟ್ಟು ಬರ್ಪಂತೆ ಬರೆ ಮಹಾ ಪ್ರಚಂಡರುಂ ಪ್ರತಾಪಿಗಳುಮಪ್ಪ ಪಂಚಪಾಂಡವರುಮಂಕದಭಿಮನ್ಯುವುಂ ಕೆಲ ಕೆಲದೊಳೋಲಗಿಸುತ್ತುಂ ಬರ ಕೊಂತಿಯ ಮಾವನಪ್ಪ ಕೊಂತಿಭೋಜನುಂ ಸೋಮಕಂ ಬೆರಸೊಂದಕೊಹಿಣೀ ಬಲಂಬೆರಸು ಬರೆ ಮತ್ತು ಪ್ರಭಕಬಲಮುಮಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟಕ ರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕಾಂಧ ದ್ರವಿಳ ಗಜಮುಬಾಹ್ನ ಮುಖೋಪ್ರಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣಾಶ್ವಕರ್ಣ ತುರುಷ್ಕ ಪ್ರವರ ನಾನಾದೀಪ ದೇಶಾಧೀಶ್ವರರುಂ ಪಗೆಗಂ ಪಾಟಿಗಂ ಪರಿಭವಕ್ಕಂ ಪಣವೆಗಂ ಪಾಗುಡಕ್ಕಂ ಪಳಬದ್ದಕ್ಕಂ ವೈವಾಹಿಕ ಸಂಬಂಧಕ್ಕಂ ಮೈತ್ರಕ್ಕಂ ಮೇರೆಗಂ ಅಟ್ಟಟ್ಟಿಗಂ ಸ್ವಾಮಿ ನೃತ್ಯ ಸಂಬಂಧಕ್ಕಂ ದೋರ್ವಲಕ್ಕಂ ಮೈಮೆಗಂ ಮೋಕ್ಷಕ್ಕಂ ಮಹಾಸಮುದ್ರದೊಳ್ ಮಹಾನದಿಗಳ ಕೂಡುವಂತೇಬಿಕ್ಕೋಹಿಣೀ ಬಲಂ ಕೂಡಿ ನಡೆಯೆ ತನ್ನ ನಾಲ್ವರ್ ತಮ್ಮಂದಿರೊಡನೆ
ಎದ್ದುಬರುವಂತೆ ಬಂದನು. ಹಿಡಿಂಬೆಗೂ ಭೀಮನಿಗೂ ಹುಟ್ಟಿದ ಘಟೋತ್ಕಚನು ಅರವತ್ತೆಂಟು ಕೋಟಿ ರಾಕ್ಷಸಸೈನ್ಯದೊಡಗೂಡಿ ಬಂದನು. ಅರ್ಜುನನು ಮಾಡಿದ ಉಪಕಾರವನ್ನು ನೆನೆಸಿಕೊಂಡು ಅಂಗದಪರ್ಣನೆಂಬ ಗಂಧರ್ವನು ನಾಲ್ಕು ಕೋಟಿ : ಗಂಧರ್ವಸೈನ್ಯವೂ ಅರವತ್ತು ಸಾವಿರ ಗಿಳಿಯ ಬಣ್ಣದ ಕುದುರೆಗಳೂ ಕೂಡಿ ಗಂಧರ್ವಲೋಕವೇ ಕಿತ್ತು ಎದ್ದು ಬರುವ ಹಾಗೆ ಬಂದನು. ಮಹಾಪ್ರಚಂಡರೂ ಪ್ರತಾಪಿಗಳೂ ಆದ ಶ್ರುತಸೋಮಕರೇ ಮೊದಲಾದ ಪಂಚ ಉಪಪಾಂಡವರೂ ಶೂರನಾದ ಅಭಿಮನ್ಯುವೂ ಪಕ್ಕಪಕ್ಕದಲ್ಲಿ ಸೇವೆಮಾಡುತ್ತಿದ್ದರು.ಕುಂತಿಯ ಮಾವನಾದ ಕುಂತೀಭೋಜನು ಸೋಮಕನೊಡಗೂಡಿ ಒಂದಕ್ಟೋಹಿಣಿ ಸೈನ್ಯದ ಜೊತೆಯಲ್ಲಿ ಬಂದು ಸೇರಿದನು. ಮತ್ತು ಪ್ರಭದೈಕ ಬಲವೂ ಅಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟ ಕರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕ ಆಂಧ್ರ ದ್ರವಿಡ ಗಜಮುಖ ಅಶ್ವಮುಖ ಉಷ್ಟಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣ ಅಶ್ವಕರ್ಣ ತುರುಷ್ಕರೇ ಮುಖ್ಯರಾದ ನಾನಾದ್ವೀಪದ ಒಡೆಯರೂ ಧರ್ಮಕ್ಕೂ ಸೋಲಿಗೂ ಹಳೆಯ ಸಂಬಂಧಕ್ಕೂ ಕಪ್ಪಕಾಣಿಕೆಗೂ ಲಾಭ ಮತ್ತು ಪ್ರಯೋಜನಾದಿಗಳಿಗೂ ಮದುವೆಯ ನಂಟುತನಕ್ಕೂ ಸ್ನೇಹಕ್ಕೂ ಗಡಿಯಲ್ಲಿದ್ದು ದಕ್ಕೂ ದೌತ್ಯಕ್ಕೂ ಆಳರಸರ ಸಂಬಂಧಕ್ಕೂ ತೋಳಬಲಕ್ಕೂ ಮಹಿಮೆಗೂ ಮೋಕ್ಷಕ್ಕೂ ಹೀಗೆ ನಾನಾ ಕಾರಣಕ್ಕಾಗಿ ಮಹಾಸಮುದ್ರಕ್ಕೆ ಮಹಾನದಿಗಳು ಬಂದು ಕೂಡುವಂತೆ ಏಳು ಅಕ್ಟೋಹಿಣಿ ಸೈನ್ಯಸಮೇತರಾಗಿ ಬಂದು ಸೇರಿದರು. ತನ್ನ ನಾಲ್ಕು ಜನ ತಮ್ಮಂದಿರೊಡನೆ ಮಂಗಳಾಭರಣಗಳಿಂದಲಂಕೃತನಾಗಿ ಮಂಗಳಪ್ರಧಾನವಾದ
Page #451
--------------------------------------------------------------------------
________________
೪೪೬ | ಪಂಪಭಾರತಂ ಮಂಗಳವಸದನಂಗೊಂಡು ಮಂಗಳ ಪ್ರಧಾನೋಚಿತ ವಿಜಯಗಜಮನೇಲಿ ವಿದ್ಯೋತವಾಗಿ ದಕ್ಷಿಣಾವರ್ತಮಪ್ಪ ಹೋಮಾಗ್ನಿಯಂ ಬಲಂಗೊಂಡು ಬಲದ ಕೊಡ ಮೇಲೆ ಕೆಯ್ಯಂ ಪೇಟೆ ಮುಖವಿಕ್ಷೇಪಣಂಗೆಯ್ದು ಘನಾಘನನಿನಾದದಿಂ ಬೃಂಹಿತಂಗೆಯ ವಿಜಯಗಜಮಂ ನೆಲನಂ ಪೊಕ್ಕಡಂಗಿದ ಪಗೆವರನಗುಟ್ಟು ಕೊಲ್ಕುದನುದಾಹರಿಸುವಂತೆ ದಕ್ಷಿಣ ಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಪಿತಂಗೆಯ್ಯ ವಿಜಯಹಯಮುಂ ವಿಜಯನ ವಿಜಯಮನ ಸೂಚಿಸಿಮಂll ಎಸಗಿತ್ತಂದನುಕೂಲಮಂದಪವನಂ ಪೆಣ್ಣುಂಬಿಗಳ ಮುತ್ತುತುಂ
ಮುಸುಜುತ್ತುಂ ಬರೆ ಬಂದುದಿಂದ್ರವನದಿಂ ಪೂದಂದಲಂಭೋಧಿ ಗ | ರ್ಜಿಸುವಂತಾದುದು ದೇವದುಂದುಭಿ ಜಯಪ್ರಾರಂಭಮಂ ಸಾಳುವಂ ತೆಸೆದತ್ತಚ್ಚರಿಯಪ್ಪಿನಂ ಜಯಜಯಧ್ಯಾನಂ ದಿಗಂತಂಗಳೊಳ್ || ೯೬ ವ|| ಆ ಪ್ರಸ್ತಾವದೊಳ್ಶಾ|| ವಾತ್ಯಾ ದುರ್ಧರ ಗಂಧ ಸಿಂಧುರ ಕಟ ಸ್ರೋತಸ್ಸಮುದ್ಯನದ
ವಾತಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕ ಶ್ರೇಯಸಃ | ಕಿಂಚಾಕಸ್ಮಿಕ ಪಾಂಸು ಪಲ್ಲವ ಜಳಸ್ಕಂದೀ ಸದಾ ಸಿಂಧುರ ಪ್ರಾಗೇಯಂ ಪ್ರಿಯಗಳ ಭೂಪತಿ ಚಮ್ರಪ್ರಸ್ಥಾನಮಾಚಕ್ಷತೇ || ೯೭
ವಿಜಯಗಜವನ್ನೇರಿ ಪ್ರಕಾಶಿಸುತ್ತ ಬಲಗಡೆಯ ಸುಳಿಯನ್ನುಳ್ಳ ಹೋಮಾಗ್ನಿಯನ್ನು ಪ್ರದಕ್ಷಿಣೆ ಮಾಡಿ ಬಲದ ಕೊಂಬಿನ ಮೇಲೆ ಸೊಂಡಿಲನ್ನಿಟ್ಟು ಮುಖವನ್ನು ಅತ್ತಿತ್ತ ಕೊಡವಿ ಗುಡುಗಿನ ಶಬ್ದದಿಂದ ಘೀಳಿಡುವ ವಿಜಯಗಜವೂ ಭೂಮಿಯನ್ನು ಪ್ರವೇಶಿಸಿ ಅಡಗಿಕೊಂಡಿರುವ ಶತ್ರುಗಳನ್ನು ಅಗೆದು ಕೊಲ್ವುದನ್ನು ಉದಾಹರಿಸುವಂತೆ ಬಲಗಾಲಿನಿಂದ ನೆಲವನ್ನು ಕೆದರಿ ಗಂಭೀರ ಧ್ವನಿಯಿಂದ ಕೆನೆಯುವ ವಿಜಯಹಯವೂ ಅರ್ಜುನನ ವಿಜಯವನ್ನೇ ಸೂಚಿಸಿದುವು. ೯೬, ಆಗ ಗಾಳಿಯು ನಿಧಾನವಾಗಿ ಹಿತಕರವಾಗಿ (ಆಪ್ಯಾಯಮಾನವಾಗಿರುವ ರೀತಿಯಲ್ಲಿ ಬೀಸಿತು. ಹೆಣ್ಣುದುಂಬಿಗಳು | ಮುತ್ತುತ್ತಲೂ ಕವಿಯುತ್ತಲೂ ಬರಲು ಇಂದ್ರವನದಿಂದ ಪುಷ್ಪವೃಷ್ಟಿಯಾಯಿತು. ಸಮುದ್ರವು ಘೋಷಿಸುವ ಹಾಗಾಯಿತು. ದಿಕ್ಕುಗಳ ಅಂಚಿನಲ್ಲಿ ಜಯ ಜಯ ಧ್ವನಿಯು ಆಶ್ಚರ್ಯವನ್ನುಂಟುಮಾಡಿದುವು. ದೇವದುಂದುಭಿರವವು ಜಯೋದ್ಯೋಗವನ್ನು ಸಾರುವಂತೆ ಮೊಳಗಿದುವು. ವ|| ಆ ಸಂದರ್ಭದಲ್ಲಿ ಬಿರುಗಾಳಿಯಿಂದ ಧರಿಸಲಸಾಧ್ಯವಾದ ಮದ್ದಾನೆಗಳ ಕಪೋಲಪ್ರದೇಶದ ಮದಧಾರೆಯನ್ನುಳ್ಳುದೂ ಹಾರುತ್ತಿರುವ ಮದೋದಕದ ಮುತ್ತುತ್ತಿರುವ ದುಂಬಿಗಳ ವೇಗವಾದ ಕುಣಿತದ ರಮಣೀಯ ನಾದದಿಂದ ಸಹಜವಾದ ಶ್ರೇಯಸ್ಸನ್ನುಳ್ಳುದೂ ಮತ್ತು ಅಕಸ್ಮಾತ್ತಾಗಿ ಎದ್ದ ಧೂಳನ್ನುಳ್ಳುದೂ ಆನೆಯ ಸೊಂಡಿಲಿನ ತುದಿಯ ನೀರಿನ ಪ್ರವಾಹದಿಂದ ಯಾವಾಗಲೂ ಹರಿಯುತ್ತಿರುವ ನದಿಯನ್ನುಳ್ಳುದೂ ಆದ ಸೇನಾಪ್ರಯಾಣವನ್ನು ಪ್ರಿಯಗಳ್ಳನೆಂಬ ಬಿರುದುಳ್ಳ ಅರಿಕೇಸರಿರಾಜನು ಅಪೂರ್ವ ರೀತಿಯಲ್ಲಿ
Page #452
--------------------------------------------------------------------------
________________
ನವಮಾಶ್ವಾಸಂ / ೪೪೭ ವ|| ಎಂಬ ಮಂಗಳಪಾಠಕರ ಮಂಗಳ ವೃತ್ರೋಚ್ಚಾರಣೆಗಳೆಸೆಯೆ ಧರ್ಮಪುತ್ರ ಕುರುಕ್ಷೇತ್ರಾಭಿಮುಖನಾದಾಗಚಂ|| ಧ್ವಜಮಯಮಂಬರಂ ಗಜಮಯಂ ಭುವನಂ ಪ್ರಳಯ ಪ್ರಚಂಡ ಭೂ
ಭುಜಮಯಮಷ್ಟದಿಗ್ಗಳಯಮಶ್ವಮಯಂ ಜಗತೀತಳಂ ರಥ | ವಜಮಯಮುಂ ಪದಾತಿಮಯಮುಂ ನೆಲೆಯಾದುದು ಕಾಡು ಕೋಡುಮಾರ್ ತ್ರಿಜಗದೊಳಾಂಪರೀ ಬಲಮನಿನ್ನೆನಿಸಿತ್ತು ಚತುರ್ಬಲಾರ್ಣವಂll ೯೮
ಎಣಿಕೆಗಳುಂಬಮುಂ ಪಿರಿದುಮಾದ ಪದಾತಿ ವರೂಥ ವಾಜಿ ವಾ ರಣ ಬಲದಿಂದಮಿರ್ಮಡಿಸ ಧಾತ್ರಿಯ ಬಿನಗೆಂದಿನಂದವ | ಅಣಕಮಿದಂದು ಕಣ್ ತುಮುಳ ಪರ್ಬೆಡೆಯಿಂ ಮಣಿ ಸೂಸೆ ಬೇಸಟಿಂ
ತಿಣುಕಿದನಾನಲುಮ್ಮಳಿಸಿ ಶೇಷನಶೇಷಮbವಿಭಾಗಮಂ || ೯೯ ಉit ಏಳದ ಪೊನ್ನ ಪುಗೆಯ ಪರ್ವಿಡಿ ಕಟ್ಟದಿರಾಗೆ ಮುಂದೆ ಬಂ
ದೇಳಿದ ಚಿನ್ನಗನ್ನಡಿಯ ಚೀಟಕೆ ಬೀಸುವ ಕುಂಚಮಯ ಮ | ಯೋಜುವ ಗಾಡಿ ಕಾಂಚನದ ದಂಡದ ಸೀಗುರಿ ನೋಡಾರುಮಂ ಮಾಜಿ ಮನೋಜನೊಡ್ಡನಿಸಿದರ್ ನಡತಂದ ನರೇಂದ್ರಕಾಂತಯರ್ || ೧೦೦
ನಿರೀಕ್ಷಿಸುತ್ತಿದ್ದಾನೆ. ವ|| ಎಂಬ ಅರ್ಥದಿಂದ ಕೂಡಿದ ಹೊಗಳುಭಟ್ಟರ ಮಂಗಳಶ್ಲೋಕಪಠನವು ಶೋಭಾಯಮಾನವಾಗಿರಲು ಧರ್ಮರಾಜನು ಕುರುಕ್ಷೇತ್ರಕ್ಕೆ ಅಭಿಮುಖನಾದನು. ೯೮, ಆಕಾಶವು ಬಾವುಟಗಳಿಂದ ತುಂಬಿದೆ ; ಲೋಕವೆಲ್ಲ ಆನೆಗಳಿಂದ ತುಂಬಿದೆ. ಎಂಟು ದಿಕ್ಕುಗಳ ಸಮೂಹವು ಪ್ರಳಯಕಾಲದಷ್ಟು ಭಯಂಕರರಾದ ರಾಜರಿಂದ ತುಂಬಿದೆ. ಭೂಮಂಡಲವು ಕುದುರೆಯಿಂದ ತುಂಬಿದೆ. ಕಾಡು ಕೋಡುಗಳು ರಥಗಳ ಸಮೂಹದಿಂದಲೂ ಕಾಲಾಳುಗಳ ಸಮೂಹದಿಂದಲೂ ಸಂಪೂರ್ಣವಾಗಿ ತುಂಬಿವೆ. ಮೂರುಲೋಕಗಳಲ್ಲಿ ಯಾರು ಈ ಸೈನ್ಯವನ್ನು ಪ್ರತಿಭಟಿಸುತ್ತಾರೆ ಎನ್ನುವ ಹಾಗೆ ಚತುರಂಗಸೇನಾಸಮುದ್ರವು ಎನ್ನಿಸಿತು. ೯೯. ಲೆಕ್ಕಕ್ಕೆ ಮೀರಿದುದೂ ಮಹತ್ತಾದುದೂ ಆದ ಚತುರಂಗಸೈನ್ಯದ ಭಾರದಿಂದ ಭೂಮಿಯ ಭಾರವು ಎರಡರಷ್ಟಾಗಲು ಈ ಹಿಂಸೆ ನನಗೆ ಎಂದಿನ ರೀತಿಯದಲ್ಲ ಎಂದು ಆದಿಶೇಷನು ಕಣ್ಣನ್ನು ಅರ್ಧಮುಚ್ಚಿ ದೊಡ್ಡ ಹೆಡೆಯಿಂದ ರತ್ನಗಳು ಚೆಲ್ಲುತ್ತಿರಲು ಸಮಸ್ತ ಭೂಮಂಡಲದ ಭಾರವನ್ನು ಧರಿಸಲು ತಿಣುಕಿದನು. ೧೦೦. ತಾವು ಹತ್ತಿದ ಸುವರ್ಣಾಲಂಕಾರದಿಂದ ಕೂಡಿದ ದೊಡ್ಡ ಹೆಣ್ಣಾನೆಯು ಆ ಸೈನ್ಯದೊಂದಿಗೆ ರಾಜಪತ್ನಿಯರು ವೈಭವಯುಕ್ತವಾದ ಆನೆಯನ್ನೇರಿ ಬಂದರು. ಸೌಂದರ್ಯವತಿಯರಾದ ದಾಸಿಯರು ಸುವರ್ಣಾಲಂಕೃತವಾದ ಆನೆಗಳನ್ನೇರಿ ತಾವು ಧರಿಸಿರುವ ರತ್ನಗನ್ನಡಿಗಳೂ, ಚಿನ್ನದ ಕಾವನ್ನುಳ್ಳ ಸೀಗುರಿಗಳೂ ತಮ್ಮ ಶರೀರಕಾಂತಿಯಿಂದ ಕೂಡಿ ನೋಡಿದವರು ಮಾರುಹೋಗುವಂತೆ
Page #453
--------------------------------------------------------------------------
________________
೪೪೮ / ಪಂಪಭಾರತಂ ಕoll ಅಂತು ತಿರುವಿಂ ಬರ್ದುಂಕಿದ
ಕಂತುವ ನನಗಣಗಳಂತವೊಲೆ ನಡೆತಂದರ್ | ಸಂತಸದ ಪೊನ್ನ ಕಳಸದ
ದಂತದ ಸಿವಿಗೆಗಳನೇ ಭೋಗಿಯರರೆಬರ್ || ಹರಿಣೀಪುತಂ | ನಡೆಯ ತುರಗ ಪೊನ್ನಾಯೋಗಂಗಳಿಂದಮರ್ದಪ್ತಿಯಿಂ
ಪಡೆಯ ನೆಬಲಂ ಚಂಚಂಛಾತಪತ್ರಮ ಕೂಡ ತ |' ಮೊಡನೆ ಬರೆ ಬಂದತ್ತಂ ಪತ್ತೆಂಟು ದೇಸಿ ವಿಳಾಸದೊಳ್
ತೊಡರೆ ಚರಿತಂಬಂದರ್ ಕಣ್ಣಪ್ಪರಲ್ ವರ ಭೋಗಿಯರ್ || ೧೦೨ ಚಂ11 ಸಡಹುಡನಪ್ಪ ಕಟ್ರಿ ಕೊಡೆ ಸಂತಸದಿಂ ಪಗೇಟಿ ಬರ್ಪ ಕ
ನೃಡಿವಿಡಿದಾಕೆ ಚಿನ್ನದ ಸವಂಗಮಪೂರ್ವದ ಮೊಚಿಯಂ ಪವ | ಇಡದ ಸುವರ್ಣ ಪಾರಿವದ ಕುಪ್ಪಸಮೊಟ್ಟೆ ಬೆಡಂಗನಾಳು ಕ
ಡದೆ ಪಂಡವಾಸದ ವಿಳಾಸದ ಸೂಳೆಯರೊಟ್ಟಿ ತೋಟದರ್ | ೧೦೩ ಮll ನಡೆಯಲ್ಬಂದಿಯ ತಕ್ಕ ತುರಂಗಂ ಭೋರೆಂದು ಬರ್ಪೊಂದೊಡಂ
ಬಡು ಬಂದಿಸಿದೊಂದು ಸತ್ತಿಗೆ ಕರಂ ಮೆಯ್ಯತ್ತು ಮುಯ್ಯಾಗಮಾ | ಗಡುಮಾರ್ಗ೦ ಕುಡುತಿರ್ಪ ಕಪುರದ ಬಂಬಲ್ಲಂಬುಲಂ ರಾಗಮಂ ಪಡೆಗೆಲ್ಲಂ ಪಡೆವನ್ನೆಗಂ ನಡೆದರಂದತ್ತಂ ಕೆಲ ನಾಯಕರ್ || ೧೦೪
ಆಕರ್ಷಕವಾಗಿರಲು ಮನ್ಮಥನ ಸೈನ್ಯವೆನ್ನಿಸಿ ಪ್ರಕಾಶಿಸಿದರು. ೧೦೧. ಹಾಗೆ ಬಿಲ್ಲಿನ ಹಗ್ಗದಿಂದ ತಪ್ಪಿಸಿಕೊಂಡ ಮನ್ಮಥನ ಪುಷ್ಪಬಾಣದಂತೆ ಕೆಲವರು ವಿಲಾಸಿನಿಯರು ಚಿನ್ನದ ಕಲಶವನ್ನುಳ್ಳ ದಂತದ ಪಲ್ಲಕ್ಕಿಗಳನ್ನು ಹತ್ತಿ ಸಂತೋಷದಿಂದ ಬಂದರು. ೧೦೨. ಕುದುರೆಗಳು ಚಿನ್ನದ ಅಲಂಕಾರಗಳಿಂದ ಕೂಡಿ ಸಂತೋಷದಿಂದ ನಡೆದು ಬರಲು, ಚಲಿಸುತ್ತಿರುವ ನವಿಲುಗರಿಯ ಕೊಡೆಯು ನೆರಳನ್ನುಂಟು ಮಾಡುತ್ತ ಜೊತೆಯಲ್ಲಿ ಬರಲು, ಎಲ್ಲೆಲ್ಲಿಯೂ ಹತ್ತೆಂಟು ವಿಳಾಸಗಳು ಶೋಭಾಯಮಾನವಾಗಿರಲು ಶ್ರೇಷ್ಠರಾದ ಭೋಗಸ್ತೀಯರು ಕಣ್ಣಿಗೆ ಆಕರ್ಷಕವಾಗಿರುವ ರೀತಿಯಲ್ಲಿ ಜಾಗ್ರತೆಯಾಗಿ ಬಂದರು. ೧೦೩. ಸಡಗರದಿಂದ ಕೂಡಿದ ಹೇಸರಗತ್ತೆಯ ಮೇಲೆ ಸಂತೋಷದಿಂದ ಹಿಂದ ಕುಳಿತು ಬರುವ ಕನ್ನಡಿಯನ್ನು ಹಿಡಿದಿರುವ ದಾಸಿಯೂ ಚಿನ್ನದ ಸರಿಗೆಯ ಕವಚವೂ ಅಪೂರ್ವವಾದ ಪಾದರಕ್ಷೆಯೂ ಪ್ರಯಾಣಕ್ಕನುಗುಣವಾದ ಹೊಂಬಣ್ಣದ ಪಾರಿವಾಳದ ಬಣ್ಣದ ಕುಪ್ಪಸವೂ ಸುಂದರವಾಗಿರಲು ಬೆಡಗಿನಿಂದ ಕೂಡಿ ಕಣ್ಣಿಗೆ ಸಹ್ಯವಾದ ರೀತಿಯಲ್ಲಿ (ಹಿತವಾಗಿ) ರಾಣಿವಾಸದ ವಿಳಾಸವನ್ನು ವೇಶ್ಯಾಸ್ತ್ರೀಯರು ಚೆಲುವಿನಿಂದ ಕೂಡಿ ಕಾಣಿಸಿಕೊಂಡರು. ೧೦೪, ಯುದ್ಧಕ್ಕೆಂದು ಬಂದ ಕುದುರೆಯು ಭೋರೆಂದು ಯೋಗ್ಯವಾದ ರೀತಿಯಲ್ಲಿ ನಡೆಯಲು, ತಮಗೆ ಹಿತಕರವಾದ ರೀತಿಯಲ್ಲಿ (ಒಪ್ಪುವ ರೀತಿಯಲ್ಲಿ ಹಿಡಿದು ಬರುತ್ತಿರುವ ಛತ್ರಿ, ಪೂರ್ಣವಾಗಿ ಪುಷ್ಟವಾಗಿ ಬೆಳೆದ ತಮ್ಮ
Page #454
--------------------------------------------------------------------------
________________
ನವಮಾಶ್ವಾಸಂ (೪೪೯ ವlು ಮತ್ತು ಸಸಂಭ್ರಮ ಪ್ರಚಲಿತ ಸಮದ ಗಜ ಘಟಾ ಘಂಟಾರವಂಗಳಿಂದಂ ತುರಂಗಮಹಷಿತಂಗಳಿಂದಂ ಮಹಾಸಾಮಂತರ ಪದಿರ ಪಳಿಗಳಿಂದಮಗುರ್ವಾಗ ನಡವ ಬೀಡಿಂಗೆ ಬೀಡುವಿಡಲ್ ನಲನುಮೊಲೆಗಲ್ಲಲ್ಲಿ ಬೆಟ್ಟುಗಳುಂ ಗುಡಿಯ ಗೂಂಟಕ್ಕೆ ಬಲ್ಲಡವಿಂಗಳುಂ ದಂಡಿಗೆಗೆ ವೇಣುವನಂಗಳುಮಾನಗಂಬಕ್ಕೆ ಪರ್ಮರುಂಗಳುಮಾ ಪಡೆಗೆ ನೆಯವೆನಿಸಿ ಪಾಂಡವರೇಬಿಕ್ಕೋಹಿಣೀ ಬಲಂಬೆರಸೇಲಂ ಸಮುದ್ರಗಳುಂ ಮೇರೆದಪ್ಪಿ ಬರ್ಪಂತಿರ ಬಂದು ಕಡಿತಮಿಕ್ಕಿದಂತಿರ್ದ ಸಮಚತುರಶ್ರಂ ನಾಲ್ವತ್ತಣ್ಣಾವುದು ಪರಿ ಪ್ರಮಾಣವನಿಪ ಕುರುಕ್ಷೇತ್ರವನೆಯ್ದವಂದದ ಪಶ್ಚಿಮ ದಿಶಾಭಾಗದೊಳ್ ಮುನ್ನ ಪರಶುರಾಮನೀ ಲೋಕದೊಳುಳ್ಳರಸುಮಕ್ಕಳೆಲ್ಲರುಮನಿರ್ವತ್ತೂಂದುಸೂಲ್ವರಂ ಪೇ ಪಸರಿಲ್ಲದಂತೆ ಕೊಂದು ತಂದಯ ಪಗೆಗೆಂದಲ್ಲಿಯೆ ತಂದು ನಿಜನಿಶಿತ ಪರಶುಧಾರೆಗಳಿಂ ನೆತ್ತರ್ ಸೂಸಿ ಪಾಯ ಕಡಿದವರ ನೆತ್ತರ ಧಾರೆಯೊಳ್ ತೀವಿ ತನ್ನ ತಾಯಂ ನೀರಿಟೆಪಲುಂ ತಾನುಂ ಮಿಂದು ತನ್ನ ತಂದೆಗೆ ನೀರ್ಗುಡಲುಮೆಂದು ಮಾಡಿದ ಶಮಂತ ಪಂಚಕಂಗಳೆಂಬಯ್ದು ಪೆರ್ಮಡುಗಳ ಕೆಲದೊಳೆಡೆಯದು ಬೀಡಂ ಬಿಡಿಸಿ
ಭುಜಭಾಗ, ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಕೊಡುತ್ತಿರುವ ಕರ್ಪೂರ ತಾಂಬೂಲ ರಾಶಿ ಇವು ಸೈನ್ಯಕ್ಕೆಲ್ಲ ಸಂತೋಷವನ್ನುಂಟುಮಾಡುವಂತೆ ಕೆಲವು ನಾಯಕರು ಎಲ್ಲ ಕಡೆಯಲ್ಲಿಯೂ ನಡೆದರು. ವ ಮತ್ತು ಸಂಭ್ರಮದಿಂದ ಕೂಡಿದ ಮದ್ದಾನೆಗಳ ಗಂಟೆಗಳ ಶಬ್ದ, ಕುದುರೆಗಳ ಕೆನೆಯುವಿಕೆ, ಮಹಾಸಾಮಂತರ ಸಂಕೇತವಾದ್ಯ - ಇವು ಭಯಂಕರವಾಗಿರಲು ನಡೆಯುತ್ತಿರುವ ಸೈನ್ಯಕ್ಕೆ ತಂಗುವುದಕ್ಕೆ ನೆಲವೇ ಸಾಲದಾಯಿತು. ಒಲೆಯ ಕಲ್ಲುಗಳಿಗೆ ಪರ್ವತಗಳು ಸಾಲದಾಯಿತು, ಬಾವುಟಗಳ ಗೂಟಕ್ಕೆ (ಗೂಡಾರದ ಗೂಟಕ್ಕೆ ?) ಹಿರಿಯ ಕಾಡುಗಳು ಸಾಲದಾದುವು. ಪಲ್ಲಕ್ಕಿಗಳಿಗೆ ಬಿದರ ಕಾಡುಗಳು ಸಾಲದಾದುವು. ಆನೆಯನ್ನು ಕಟ್ಟುವ ಕಂಬಗಳಿಗೆ ದೊಡ್ಡ ಮರಗಳು ಸಾಲದಾದುವು ಎನ್ನಿಸಿ ಪಾಂಡವರು ಏಳಕ್ಟೋಹಿಣಿ ಸೈನ್ಯದಿಂದ ಕೂಡಿ ಏಳು ಸಮುದ್ರಗಳೂ ಎಲ್ಲೆ ಮೀರಿ ಬರುತ್ತಿರುವ ಹಾಗೆ ಒಂದು ಕಡಿತದಲ್ಲಿ (ಬಟ್ಟೆಯನ್ನು ಮಡಿಸಿ ಮಾಡಿರುವ ಪುಸ್ತಕ) ಬರೆದಂತಿದ್ದ ಚಚೌಕವಾಗಿರುವ ನಲವತ್ತೆಂಟು ಗಾವುದ ಸುತ್ತಳತೆಯನ್ನು ಕುರುಕ್ಷೇತ್ರಕ್ಕೆ ಬಂದು ಸೇರಿದರು. ಅದರ ಪಶ್ಚಿಮ ದಿಗ್ನಾಗದಲ್ಲಿ ಶಮಂತಪಂಚಕಗಳು. ಇವು ಪೂರ್ವಕಾಲದಲ್ಲಿ ಈ ಲೋಕದಲ್ಲಿರುವ ಅರಸುಮಕ್ಕಳನ್ನೆಲ್ಲ ಹೇಳಲು ಹೆಸರಿಲ್ಲದಂತೆ ಇಪ್ಪತ್ತೊಂದು ಸಲ ಕೊಂದು ತನ್ನ ತಂದೆಯ ಹಗೆತನಕ್ಕಾಗಿ ಅಲ್ಲಿಗೆ ತಂದು ತನ್ನ ಹರಿತವಾದ ಕೊಡಲಿಯ ಅಲಗಿನಿಂದ ರಕ್ತವು ಚೆಲ್ಲಿ ಹರಿಯುವಂತೆ ಕತ್ತರಿಸಿ ಅವರ ರಕ್ತಧಾರೆಯಿಂದ ತುಂಬಿ ತನ್ನ ತಾಯಿಗೆ ಸ್ನಾನ ಮಾಡಿಸುವುದಕ್ಕೂ ತಾನು ಸ್ನಾನ ಮಾಡಿ ತನ್ನ ತಂದೆಗೆ ತರ್ಪಣ ಕೊಡುವುದಕ್ಕೂ ಮಾಡಿದ ಅಯ್ತು ದೊಡ್ಡ ಮಡುಗಳಾದುವು. ಅವುಗಳ ಸಮೀಪದಲ್ಲಿ ಸ್ಥಳವನ್ನು ನಿಷ್ಕರ್ಷಿಸಿ ಬೀಡನ್ನು
Page #455
--------------------------------------------------------------------------
________________
೪೫೦ / ಪಂಪಭಾರತಂ
ಶಾ
ವೀರಕ್ಷೇತ್ರಮಗುರ್ವಿಗಂಕದ ಕುರುಕ್ಷೇತ್ರಂ ಬಲಸ್ಥ ಮಹಾ ಕ್ರೂರಾರಾತಿಗಳನ್ನ ದೋರ್ವಲದಗುರ್ವಿಂದಂ ತ್ರಿಲೋಕಕ್ಕೆ ಸಂ | ಹಾರಂ ಮಾಡಿದ ಭೈರವ ಪ್ರಭುವಿನೊಂದಾಕಾರದಿಂ ವೈರಿ ಸಂ ಹಾರಂ ಮಾಡದೆ ಮಾಣೆನೆಂದು ಹರಿಗಂ ಕೆಂಡನುತ್ಸಾಹಮಂ ||೧೦೫
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ನವಮಾಶ್ವಾಸಂ
ಬಿಟ್ಟಿತು. ೧೦೫. ಪ್ರಸಿದ್ಧವಾದ ಈ ಕುರುಭೂಮಿಯು ವೀರಕ್ಷೇತ್ರವೂ ಅಹುದು, ಮಹಾಕ್ರೂರರಾದ ನನ್ನ ಶತ್ರುಗಳು ಶಕ್ತಿವಂತರು, ಬಲಿಷ್ಠರೆಂಬುದೂ ನಿಜ. ಆದರೂ (ಅವರನ್ನು ನಾನು ನನ್ನ ತೋಳಿನ ಶಕ್ತಿಯಿಂದ ಹಿಂದೆ ಭಯಂಕರವಾಗಿ ಮೂರು ಲೋಕವನ್ನು ಸಂಹಾರಮಾಡಿದ ಭೈರವಸ್ವಾಮಿಯ ಆಕಾರವನ್ನು ತಾಳಿ ವೈರಿಸಂಹಾರ ಮಾಡದೆ ಬಿಡುವುದಿಲ್ಲ ಎಂದು ಅರ್ಜುನನು ಉತ್ಸಾಹವನ್ನು ತಾಳಿದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾ ಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಒಂಬತ್ತನೆಯ ಆಶ್ವಾಸ.
Page #456
--------------------------------------------------------------------------
________________
- ದಶಮಾಶ್ವಾಸಂ ಕಂtl. ಶ್ರೀ ನಾರೀವಲ್ಲಭನಭಿ
ಮಾನಧನಂ ಹರಿಗನಾ ಕುರುಕ್ಷೇತ್ರದೊಳಂ | ತೇನುಂ ಮಾಣದೆ ಬಿಟ್ಟುದ ನಾ ನಗು ಸುಯೋಧನಂಗೆ ಚರರಪುವುದುಂ | ಗುರು ಗುರುಸುತ ಶಕುನಿ ಕೃಪಾಂ ಗರಾಜರಂ ಬರಿಸಿ ನುಡಿದನವನಿಪನೇಂ ಕೇ | ಆರ ಪಾಂಡುಸುತರ ಮುನಿಸಿನ ತಳಸಲವಿನ ಚಲದ ಬಲದ ಕಲಿತನದಳವಂ || ಬಂದು ಕುರುಕ್ಷೇತ್ರದೊಳಳ ಮೊಂದಿಗೆ ನಮ್ಮೊಳ್ ಕಡಂಗಿ ಮಿಗೆ ತಳಿಯ | ಲೈಂದಾನುಂ ಬಂದಿರ್ದರಿ
ದೇಂ ದಾಯಿಗತನಮನೆಮಗವರ್ ತೋಚಿದಪರ್ || ಮll ಪಡವಳೂಂ ಗಡಮಾ ಬಲಕ್ಕೆ ದಲೆ ಧೃಷ್ಟದ್ಯುಮ್ಮನೆಂಬೋಳೆಯಾ
ಪಡೆಯೊಳ್ ಗಂಡನುಮಾ ಮೊಲಂ ದ್ರುಪದನುಂ ಪೇರೊಟ್ಟೆಯಾ ಮತ್ಸ ನುಂ | * ಗಡಮಂತಾ ಬಲಕಾಳನೇನತಿಯಿರೇ ಧರ್ಮಜನಾ ಧರ್ಮಜಂ ಗಡಮೇಂ ನಾಯಕರೊಳ್ಳಿದರ್ ನೆರೆದರೋ ಕಾದಿ ಮನದೊಳ್ | ೪
ವ|| ಎಂಬುದುಂ ಕುಂಭಸಂಭವನಿಂತೆಂದಂಮlು ಕಳವೇ ಕುರುಭೂಮಿಯಂ ಕಳಕವರ್ ವಂದಿರ್ದರೆಂದಂತ ದೋ .
ರ್ವಳ ಚಾತುರ್ವಳ ತತ್ಸುಹೃದ್ದಳಮನಿನ್ನೇಗಳಪೈ ಪಾಂಡವರ್ | ಬಳಸಂಪನ್ನರುದಗ್ರದೈವಬಳಸಂಪನ್ನರ್ ಮರುಳಾತನಿ ಮೈುಟಿ ಗಾಂಗೇಯರ ಪೇಟ್ಟದೊಂದು ತುದಿಂ ನೀಂ ಕಾದು ದುರ್ಯೋಧನಾ 11೫
೧. ಸಂಪಲ್ಲಕ್ಷ್ಮೀಪತಿಯೂ ಅಭಿಮಾನಧನನೂ ಆದ ಅರ್ಜುನನು ಕುರುಕ್ಷೇತ್ರದಲ್ಲಿ ಯಾವ ತಡೆಯೂ ಇಲ್ಲದೆ ಬೀಡುಬಿಟ್ಟುದನ್ನು ಆ ಪ್ರಸಿದ್ಧನಾದ ದುರ್ಯೋಧನನಿಗೆ ದೂತರು ತಿಳಿಸಿದರು. ೨. ದ್ರೋಣ, ಅಶ್ವತ್ಥಾಮ, ಶಕುನಿ, ಕೃಪ, ಕರ್ಣರನ್ನು ಬರಮಾಡಿ ದುರ್ಯೋಧನನು ಹೇಳಿದನು - ಪಾಂಡವರ ಕೋಪದ, ನಿಶ್ಚಯದ, ಛಲದ, ಬಲದ, ಪರಾಕ್ರಮದ ಅಳತೆಯನ್ನು ಕೇಳಿದಿರಾ? ೩. ಸಮರ್ಥರಾಗಿ ಕುರುಕ್ಷೇತ್ರಕ್ಕೆ ಬಂದು ವಿಶೇಷ ಉತ್ಸಾಹದಿಂದ ನಮ್ಮಲ್ಲಿ ಯುದ್ಧಮಾಡುವುದಕ್ಕಾಗಿಯೇ ಬಂದಿದ್ದಾರೆ. ಅವರು ನಮ್ಮಲ್ಲಿ ಎಂತಹ ಜ್ಞಾತಿತ್ವವನ್ನು ತೋರಿಸುತ್ತಿದ್ದಾರೆ! ೪. ಆ ಪಾಂಡವಸೈನ್ಯಕ್ಕೆ ನಿಜವಾಗಿಯೂ ಸೇನಾನಾಯಕ ನಾಗಿರುವವನು ಧೃಷ್ಟದ್ಯುಮ್ಮನೆಂಬ ನೀರುಹಾವು, ಆ ಸೈನ್ಯದಲ್ಲಿ ಶೂರನಾಗಿರುವವರು ದ್ರುಪದನೆಂಬ ಮೊಲ, ಮತ್ಯನೆಂಬ ಒಂಟೆ, ಆ ಸೈನ್ಯಕ್ಕೆ ಯಜಮಾನ ಧರ್ಮದ ಗೊಡ್ಡಾದ ಧರ್ಮರಾಯ (ಅವರ ಯೋಗ್ಯತೆ ನನಗೆ ತಿಳಿಯದೇ ?) ಒಳ್ಳೆಯ ನಾಯಕರು ನನ್ನ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಸೇರಿದ್ದಾರೆ! ವ|| ಎಂಬುದಾಗಿ ಹೇಳಲು ದ್ರೋಣಾಚಾರ್ಯನು ಹೀಗೆಂದನು. ೫. ನೀನು ಕುರುಕ್ಷೇತ್ರವನ್ನು ಯುದ್ಧ
Page #457
--------------------------------------------------------------------------
________________
೪೫೨ / ಪಂಪಭಾರತಂ
ವ|| ಎಂಬುದುಮಾ ಮಾತಂ ಮನದೇಗೊಂಡಂತೆಗೆಯ್ಯನೆಂದನಿಬರುಮಂ ವಿಸರ್ಜಿಸಿ ನಿಶಾಸಮಯದೊಳ್ ಪತ್ತೆಂಟು ಕೆಯೀವಿಗೆಗಳ ಬೆಳಗಿನೊಳಂ ಕತಿಪಯ ಪರಿಜನ ಪರಿವೃತನಾಗಿ ರಾಜರಾಜಂ ಸಿಂಧುಜನರಮನೆಗೆವಂದು ವಾಹನದಿಂದಮಿಂದು ಕುರುಪಿತಾಮಹಂಗಳಗಿ ಪೊಡವಡುವುದುಂ ಪರಸಿ ಮಂಚದೊಳೇಯಲ್ ಕರೆದೊಡೊಲ್ಲಂ ಮಹಾಪ್ರಸಾದಮಿಂತಿರ್ಪನೆಂದು ಮಣಿಮಯ ಹೇಮಾಸನದೊಳ್ ಕುಳ್ಳಿರ್ದನು ನೋಡಿ ಕಜ್ಜಂ ಪುಟ್ಟದೊಡಮಗೆ ಬಟ್ಟೆಯಟ್ಟದೀ ಪೊಟ್ಟಿದಾವುದು ಮನವಾಗೆಂದೆಯೆಂದೊಡೆ ಸುಯೋಧನನಿಂತೆಂದಂ
ಕಂ ಹರಿ ಬಲದಿಂ ಪಾಂಡವರನು
ವರಮಂ ಪೊತಿಸಿದರೆನ್ನೊಳಾಂ ಕರಮತಿದಾ | ಹರಿಯಂ ಕೋಡಗಗಟ್ಟಾ
ಗಿರೆ ಕಟ್ಟಿದೊಡಂದು ನೀಮೆ ಬಿಡಿಸಿದಿರಲ್ಲೇ
ಕರಿಗಂ ಪರಮಾಣುಗಮಂ
ತರಮಾವುದೊ ನಿಮಗಮಸುರವೈರಿಗಮೇನಂ | ತರಮಂತ ನಿಮ್ಮೊಳಗ್ಗದ ಪರಶುಧರಂ ಪೂಣರ್ದು ತಾನದಂದೇನಾದಂ
2
ಭೂಮಿಯನ್ನಾಗಿ ನಿಷ್ಕರ್ಷಿಸಿದೆ. ನೀನು ಹೇಳಿದ ಹಾಗೆ (ಅದರಂತೆ) ಅವರು ಯುದ್ಧರಂಗಕ್ಕೆ ಬಂದಿದ್ದಾರೆ. ಅವರ ಬಾಹುಬಲವನ್ನೂ ಚತುರಂಗಸೈನ್ಯದ ಬಲವನ್ನೂ ಅವರ ಮಿತ್ರವರ್ಗದ ಶಕ್ತಿಯನ್ನೂ ಇನ್ನೇನೆಂದು ಕೇಳುತ್ತೀಯಾ? ಪಾಂಡವರು ಬಲಸಂಪನ್ನರು, ಉತ್ತಮವಾದ ದೈವಬಲದಿಂದ ಕೂಡಿರುವವರು. ಅವಿವೇಕದ ಮಾತನ್ನು ಬಿಟ್ಟುಬಿಡು, ದುರ್ಯೋಧನಾ, ಭೀಷ್ಮರು ಹೇಳಿದ ರೀತಿಯಲ್ಲಿ ಯುದ್ಧಮಾಡು. ವ|| ಎನ್ನಲು ಆ ಮಾತನ್ನು ಅಂಗೀಕರಿಸಿ ಹಾಗೆಯೇ ಮಾಡುತ್ತೇನೆಂದು ಒಪ್ಪಿದನು. ಅಷ್ಟು ಮಂದಿಯನ್ನೂ ಬಿಟ್ಟು ಕಳೆದು ರಾತ್ರಿಯ ಸಮಯದಲ್ಲಿ ಹತ್ತೆಂಟು ಕೈದೀವಿಗೆಗಳ ಬೆಳಕಿನಲ್ಲಿ ಕೆಲವೇ ಜನ ಸೇವಕರಿಂದ ಕೂಡಿದವನಾಗಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನ ಅರಮನೆಗೆ ಬಂದನು. ವಾಹನದಿಂದಿಳಿದು ಕುರುಪಿತಾಮಹನಾದ ಭೀಷ್ಮನಿಗೆ ಬಗ್ಗಿ ನಮಸ್ಕಾರ ಮಾಡಿದನು. ಅವರು ಹರಸಿ ಅವನನ್ನು ಮಂಚದ ಮೇಲೆ ಹತ್ತಿ ಕುಳಿತುಕೊಳ್ಳಹೇಳಿದರು, 'ಒಲ್ಲೆ ಹಾಗೆ ಮಾಡಲಾರೆ, ಇದೇ ನನಗೆ ಪರಮಾನುಗ್ರಹ, ಹೀಗಿರುತ್ತೇನೆ, ಎಂದು ರತ್ನಖಚಿತವಾದ ಚಿನ್ನದ ಪೀಠದ ಮೇಲೆಯೇ ಕುಳಿತುಕೊಂಡನು. ಭೀಷ್ಮನು ಅವನನ್ನು ನೋಡಿ 'ಕಾರ್ಯ ವುಂಟಾದರೆ ನಮಗೆ ದೂತರ ಮೂಲಕ ಹೇಳಿಕಳುಹಿಸದೆ ಈ ಹೊತ್ತಿನಲ್ಲಿಯೂ ಮನೆವಾರ್ತೆಗಾಗಿ ಬಂದೆ' ಎಂದರು. ದುರ್ಯೋಧನನು ಹೀಗೆಂದನು-೬, ಆ ಪಾಂಡವರು ಕೃಷ್ಣನ ಬಲದಿಂದ ನಮ್ಮಲ್ಲಿ ಯುದ್ಧವನ್ನು ಹತ್ತಿಸಿದ್ದಾರೆ. ಇದನ್ನು ನಾನು ತಿಳಿದೇ ಅಂದು ಕೃಷ್ಣನನ್ನು ಕೋಡಗಗಟ್ಟಿನಿಂದ ಕಟ್ಟಿದರೆ ಆ ದಿನ ನೀವೆ ಬಿಡಿಸಿದಿರಲ್ಲವೇ ೭. ಆನೆಗೂ ಸೂಕ್ಷ್ಮವಾದ ಅಣುವಿಗೂ ಎಷ್ಟು ವ್ಯತ್ಯಾಸ? ನಿಮಗೂ ಕೃಷ್ಣನಿಗೂ ಯಾವ ಅಂತರ ? ನಿಮ್ಮಲ್ಲಿ ಆ ಪ್ರಸಿದ್ಧನಾದ ಪರಶುರಾಮನು ಜಗಳವಾಡಿ ಆದಿನ
Page #458
--------------------------------------------------------------------------
________________
ದಶಮಾಶ್ವಾಸಂ / ೪೫೩ ಪಿಡಿದರವರಸುರವೈರಿಯ ನೊಡಂಬಡಿಂ ತೊಬ್ರುವಸದಿನಾಂ ನಿಮ್ಮಡಿಯಂ | ಪಿಡಿದೆನದೇಂ ತಾನೆಚ್ಚು
ಪಿಡಿದೊಡವರ್ವಂದು ಪಿಡಿದರೆನ್ನರೆ ಗೆಲ್ಲಂ | ಮll ಕೊರಳೊಳ್ ಕಟ್ಟಿದ ದೇವಿಯಂತಿರುರದೊಳ್ ಶ್ರೀ ತೊಟ್ಟಿಲೊಳ್ ತೊಟ್ಟನಂ
ತರಮೆನ್ನೊಳ್ ನೆಲಸಿತ್ತು ನಿಮ್ಮ ದಯೆಯಿಂ ನಿಮ್ಮ ಕರಂ ನಚ್ಚಿ ಸಂ | ಗರಮಂ ಬಲ್ಲಿದರೊಳ್ ಪೊಣರ್ಚಿದನದರ್ಕೆನ್ನೊಳ ರಣ ರಣಾ ಜರದೊಳ್ ಮಾಣದ ಪೊರ್ದುವಂತೆ ಬೆಸಸಿಂ ನಿಮ್ಮೊಂದಭಿಪ್ರಾಯಮಂ || ೯
ವ|| ಎಂದು ನುಡಿದ ತನ್ನ ಮೊಮ್ಮನ ನಯದ ವಿನಯದ ನುಡಿಗಳೆ ಕರುಣಿಸಿ ಕುರುವೃದ್ಧನಿಂತೆಂದಂಮll ಧೃತರಾಷ್ಟಂ ನುಡಿದಾರ್ತನೇ ಹರಿ ಭರಂಗಯಾರ್ತನೇ ನೀಂ ಪ್ರಭಾ
ಸುತರಂ ನೋಯಿಸಲಾಗದೆಂದು ನುಡಿದೇನಾಮಾರ್ತವೇ ನಿನ್ನೊರಂ | ಟುತನಂ ಕೈಗವಾಯದಪ್ರೊಡ ಮಹಾಭಾರಾವತಾರಂ ರಣೋ
ದೃತನಾಗಂಬುದನಮನಸ್ಕರವೊಲೇಂ ನೀಂ ಪ್ರಾರ್ಥಿಸಲ್ಬಟ್ಟುದೇ 11 ೧೦
ವರಿ ಎಂಬುದುಂ ಮಹಾಪ್ರಸಾದವೆಂದು ದುರ್ಯೊಧನಂ ಪೋದನಿತ್ತ ಗಾಂಗೇಯಂ ತನ್ನಂತರ್ಗತದೊಳ್
ತಾನೇ ಏನಾದ? ೮. ಅವರು ಶ್ರೀಕೃಷ್ಣನನ್ನು ಸಮಾನಪ್ರತಿಪತ್ತಿಯಿಂದ ಆಶ್ರಯಿಸಿದ್ದಾರೆ. ನಾನು ನಿಮ್ಮ ಪಾದವನ್ನು ಸೇವಕವೃತ್ತಿಯಿಂದ ಹಿಡಿದಿದ್ದೇನೆ. ಒಂದು ಸಲ ಹೊಡೆದೂ ಪುನಃ ಆಶ್ರಯಿಸಿದ್ದಾರೆ ಎನ್ನುವುದಿಲ್ಲವೇ (?) ೯. ನಿಮ್ಮದಯೆಯಿಂದ ರಾಜ್ಯಲಕ್ಷ್ಮಿಯು ಕೊರಳಲ್ಲಿ ಕಟ್ಟಿದ ದುರ್ಗಾಪದಕದಂತೆ ತೊಟ್ಟಿಲಲ್ಲಿ ಬಾಲ್ಯತನದಿಂದ ಇಲ್ಲಿಯವರೆಗೆ ಏಕಪ್ರಕಾರವಾಗಿ ನನ್ನಲ್ಲಿ ನೆಲಸಿದ್ದಾಳೆ. ನಿಮ್ಮನ್ನು ಪೂರ್ಣವಾಗಿ ನಂಬಿ ಬಲಿಷ್ಠರಾದವರಲ್ಲಿ ಯುದ್ಧವನ್ನು ಹೂಡಿದ್ದೇನೆ. ಈಗ ರಣರಂಗದಲ್ಲಿ ಯುದ್ದಲಕ್ಷಿಯು ನನ್ನನ್ನೇ ತಪ್ಪದೆ ಸೇರುವಂತೆ ಮಾಡಬೇಕು. ನಿಮ್ಮ ಅಭಿಪ್ರಾಯವನ್ನು ಕೊಡಿರಿ. ವ|| ಎಂದು ನುಡಿದ ತನ್ನ ಮೊಮ್ಮಗನ ವಿನಯದಿಂದ ಕೂಡಿದ ಮಾತುಗಳಿಗೆ ಕರುಣಿಸಿ ಭೀಷ್ಮನು ಹೀಗೆ ಹೇಳಿದನು. ೧೦. ನೀನು ಪಾಂಡವರನ್ನು ನೋಯಿಸಬಾರದು ಎಂದು ಹೇಳಿ ನಿನ್ನ ತಂದೆಯಾದ ದೃತರಾಷ್ಟ್ರನು ನಿನ್ನನ್ನು ತಿದ್ದಲು ಪ್ರಯತ್ನಿಸಿದ. ಕೃಷ್ಣನು ಆರ್ಭಟಮಾಡಿ ನೋಡಿದ. ಅವರಿಬ್ಬರೂ ಸಮರ್ಥರಾಗಲಿಲ್ಲ. ಕುಂತೀ ಪುತ್ರರನ್ನು ನೋಯಿಸಬಾರದೆಂದು ಹೇಳಿದೆವು. ನಾವು ಸಮರ್ಥರಾದವೇ? ನಿನ್ನ ಒರಟುತನ ಕೈಮೀರಿದ್ದಾಯಿತು. ಮುಂದಾಗುವುದಾದರೋ ಮಹಾಭಾರತ ಯುದ್ಧ, ಯುದ್ಧಕಾರ್ಯದಲ್ಲಿ ತೊಡಗು ಎಂದು ನಮ್ಮನ್ನು, ಇತರರ ಹಾಗೆ ನೀನು ಪ್ರಾರ್ಥಿಸಬೇಕೆ ? ವ|| ಎನ್ನಲು ದುರ್ಯೋಧನನು ಮಹಾಪ್ರಸಾದ ಎಂದು ಹೇಳಿಹೋದನು. ಈ ಕಡೆ ಭೀಷ್ಕನು ತನ್ನ ಮನಸ್ಸಿನಲ್ಲಿ ಚಿಂತಾಕ್ರಾಂತನಾದನು.
Page #459
--------------------------------------------------------------------------
________________
೪೫೪ | ಪಂಪಭಾರತಂ ಕoll ಅಣಿಯರಮೋದವಿದ ಮುಳಿಸಿನೂ
ಳಣಮುಜದವರೆಂದು ರಣದ ಜಯಿಸಲ್ ನಾರಾ ಯಣನೊಳಮುದಾತ್ತನಾರಾ ಯಣನೆಳಮಿಂಡೆತ್ತಿಕೊಂಡ ಗಂಡರುಮೊಳರೇ 10 ನಿನ್ನನೆ ನಚ್ಚಿದನನುವರ ಕೆನ್ನನೆ ಪೂಣಿಸಿದನೆನಗರyಂಡಮುಮೋ | ರನ್ನರೆ ದಲೆಂತು ಕಾದು ನನ್ನಯ ಮಕ್ಕಳೊಳಮೆನ್ನ ಮೊಮ್ಮಕ್ಕಳೊಳಂ | ಮಕ್ಕಳ ಮೊಮ್ಮಕ್ಕಳ ರಥ. ಮಯಿನೆಡೆಗೊಂಡೊಡವರನೋವದ ರಣದೊಳ್ | ಮಕ್ಕಳನಾಂ ಕೊಂದೊಡೆ ತ ೩ಕ್ಕಿದ ತತ್ತಿಯನಪಾವು ನೊಣವಂತಕ್ಕುಂ || ನರ ನಾರಾಯಣರಿರ್ವರ ಧುರದೊಳ್ ಮಾರ್ಕೊಳ್ಳರನ್ನನೊರ್ವಂ ಮೊಮ್ಮಂ | ಪರಮಗುರುವೊರ್ವನವರಿ
ರ್ವರುಮಂ ಕಾದಳವೆನುತಿದ ರಿಪುನೃಪಬಲಮಂ || ೧೪ ವ|| ಎಂದು ತನ್ನೊಳ್ ಬಗೆಯುತ್ತಿರ್ಪಿನಮತ್ತ ದುರ್ಯೋಧನಂ ಸಹಸ್ರ ಕಿರಣೋದಯದೊಳನೇಕಸಹಸ್ರನರಪತಿ ಪರಿವತನುಮಾಗಿ ಮಂದಾಕಿನೀತನೂಜಂಗೆ ಬಲಿಯನಟ್ಟಿ ಬರಿಸಿ ಮಣಿಮಯಪೀಠದೊಳ್ ಕುಳ್ಳಿರಿಸಿ ದೇವಾಸುರಯುದ್ಧದೊಳ್ ಗುಹಂಗೆ ವೀರಪಟ್ಟಮಂ ಕಟ್ಟುವ ಪುರಂದರನಂದಮನೆ ಪೋಲು೧೧. ದುರ್ಯೋಧನನು ವಿಶೇಷವಾಗಿ ತನಗುಂಟಾದ ಕೋಪದಲ್ಲಿ ಪಾಂಡವರು ನಿಶ್ಯಕ್ತರು, ಸತ್ವಶಾಲಿಗಳಲ್ಲ ಎಂದು ಜಯ ಪಡೆಯುವುದಕ್ಕಾಗಿ ನಾರಾಯಣನನ್ನೂ ಉದಾತ್ತನಾರಾಯಣನನ್ನೂ ಲಕ್ಷ್ಯಮಾಡದೆ ಯುದ್ಧದಲ್ಲಿ ಜಯಿಸುವುದಕ್ಕೆ ಹೊರಟಿದ್ದಾನೆ. ಇಂತಹ ಶೂರನು ಬೇರೆ ಇದ್ದಾನೆಯೇ. ೧೨. ದುರ್ಯೋಧನನು ನನ್ನನ್ನೇ ನಂಬಿದ್ದಾನೆ. ಯುದ್ದಮಾಡುತ್ತೇನೆಂದು ನನ್ನಿಂದ ಪ್ರತಿಜ್ಞೆ ಮಾಡಿಸಿದ್ದಾನೆ. ನನಗೆ ಎರಡು ಗುಂಪಿನವರೂ ಸಮಾನರಾದವರಲ್ಲವೇ? (ಸಮಾನಬಂಧುಗಳಲ್ಲವೇ ?) ನನ್ನ ಮಕ್ಕಳೊಡನೆಯೂ ಮೊಮ್ಮಕ್ಕಳೊಡನೆಯೂ ಹೇಗೆ ಯುದ್ಧಮಾಡಲಿ? ೧೩. ಮಕ್ಕಳ ಮೊಮ್ಮಕ್ಕಳ ತೇರುಗಳು ಗುಂಪುಗುಂಪಾಗಿ ನಡುವೆ ಎದುರಿಸಿದರೆ ಅವರನ್ನು ರಕ್ಷಿಸದೆ ಯುದ್ಧದಲ್ಲಿ ಮಕ್ಕಳನ್ನು ಕೊಂದನಾದರೆ ಹಾವು ತಾನು ಇಕ್ಕಿದ (ಪ್ರಸವಿಸಿದ-ಹತ್ತ) ಮೊಟ್ಟೆಗಳನ್ನು ತಾನೆ ನುಂಗಿದಂತಾಗುತ್ತದೆಯಲ್ಲವೇ? ೧೪. ನರನಾರಾಯಣರಿಬ್ಬರೇ ಯುದ್ದದಲ್ಲಿ ನನ್ನನ್ನು ಪ್ರತಿಭಟಿಸುವವರು, ಅವರಲ್ಲಿ ಒಬ್ಬ ಮೊಮ್ಮಗ, ಮತ್ತೊಬ್ಬ ಪರಮಗುರು. ಅವರಿಬ್ಬರನ್ನೂ ರಕ್ಷಿಸಿ ಉಳಿದ ಶತ್ರುರಾಜಸೈನ್ಯವನ್ನು ನಾಶ ಪಡಿಸುತ್ತೇನೆ. ವ|| ಎಂದು ತನ್ನಲ್ಲಿ ಯೋಚಿಸುತ್ತಿರಲಾಗಿ ಆ ಕಡೆ ದುರ್ಯೋಧನನು ಸೂರ್ಯೊದಯದಲ್ಲಿ ಅನೇಕ ಸಾವಿರರಾಜರುಗಳಿಂದ ಸುತ್ತುವರಿಯಲ್ಪಟ್ಟು ಭೀಷ್ಮನಿಗೆ ದೂತರ ಮೂಲಕ ಹೇಳಿಕಳುಹಿಸಿ ಬರಮಾಡಿದನು. ರತ್ನಖಚಿತವಾದ ಪೀಠದಲ್ಲಿ
Page #460
--------------------------------------------------------------------------
________________
ಈ
ದಶಮಾಶ್ವಾಸಂ / ೪೫೫ ತುಂಗ ಮೃದಂಗ ಶಂಖ ಪಟಹಧ್ವನಿ ದಿಕ್ತಟದಂತನೆಯ ವಾ ರಾಂಗನೆಯರ್ ಚಳಲ್ಕುಳಿತ ಚಾಮರಮಂ ನೆರೆದಿಕ್ಕೆ ಪಂಚ ರ | - ತಂಗಳುಮಂ ಪುದುಂಗೊಳಿಸಿ ಪೊಂಗಳಸಂಗಳೊಳಿರ್ದ ಪುಣ್ಯ ಯಂಗಳೊಳಂ ಮಿಸಿಸಿ ಕಟ್ಟದನಾ ವಿಭು ವೀರಪಟ್ಟಮಂ ೧೫
ವ|| ಅಂತು ಪರಶುರಾಮನನಂಜಿಸಿದ ವೀರಂಗ ವೀರಪಟ್ಟಮಂ ಕಟ್ಟಿ ಪಗೆವರನನ್ನ ಮಂಚದ ಕಾಲೂಲ್ ಕಟ್ಟಿದನೆಂದು ಪೊಟ್ಟಳಿಸುವ ಸುಯೋಧನನ ನುಡಿಯನವಕರ್ಣಿಸಿ ಕರ್ಣನಿಂತೆಂದಂ
ಭಗವತಿಯೇಜುವೇಟ್ಟಿ ತರದಿಂ ಕಥೆಯಾಯ್ತಿವರೇಣ ನೀನಿದಂ ಬಗದಿವರಿನ್ನುಮಾಂತಿವರೆಂದು ವಿಹಿಸಿ ವೀರಪಟ್ಟಮಂ | ಬಗೆಯದೆ ಕಟ್ಟಿದ್ದೆ ಗುರುಗಳಂ ಕುಲವೃದ್ಧರನಾಜಿಗುಯ್ದು ಕೆ ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ ll೧೬
ಕಂ|| ಕೆಟ್ಟದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗಳ ಕ |
ಕೆಟ್ಟ ಮುದುಪಂಗೆ ಪಗೆವರ *, ನಿಟ್ಟೆಲ್ವಂ ಮುಳವೊಡೆನಗೆ ಪಟ್ಟಂಗಟ್ಟಾ |
೧೬
ಕುಳ್ಳಿರಿಸಿದನು. ದೇವಾಸುರಯುದ್ದದಲ್ಲಿ ಷಣ್ಮುಖನಿಗೆ ವೀರಪಟ್ಟವನ್ನು ಕಟ್ಟುವ ಇಂದ್ರನ ರೀತಿಯನ್ನೇ (ಅನುಕರಿಸಿ) ೧೫. ಶ್ರೇಷ್ಠವಾದ ಮೃದಂಗ, ಶಂಖ, ತಮಟೆ, ಮೊದಲಾದವುಗಳ ಉಚ್ಚದ್ವನಿಯು ದಿಕ್ಕುಗಳ ಕೊನೆಯನ್ನು ಮುಟ್ಟುತ್ತಿರಲು ವೇಶ್ಯಾಸ್ತ್ರೀಯರು ಚಲಿಸುತ್ತಿರುವ ಚಾಮರವನ್ನು ಗುಂಪಾಗಿ ಬೀಸುತ್ತಿರಲು ಪಂಚರತ್ನಗಳ ರಾಶಿಗಳಿಂದ ಕೂಡಿದ ಚಿನ್ನದ ಕಲಶಗಳ ಪುಣ್ಯ ತೀರ್ಥಗಳಲ್ಲಿ ಪ್ರೀತಿಯಿಂದ ಸ್ನಾನ ಮಾಡಿಸಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನಿಗೆ ವೀರಪಟ್ಟವನ್ನು ಕಟ್ಟಿದನು. ವ ಹಾಗೆ ಪರಶುರಾಮನನ್ನೇ ಹೆದರಿಸಿದ ವೀರನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಗಳನ್ನು ನನ್ನ ಮಂಚದ ಕಾಲಿನಲ್ಲಿ ಕಟ್ಟಿದೆನೆಂದು ಅಹಂಕಾರ ಪಡುತ್ತಿರುವ ದುರ್ಯೊಧನನ ಮಾತನ್ನು ಕೇಳಿ ಕರ್ಣನು ಹೀಗೆಂದನು. ೧೬. ಹಿಂದಿನ ಕಟ್ಟುಕಥೆಯಂತಾಯ್ತು ಇವರ ಯುದ್ದದ ಕತೆ. ಇದನ್ನು ತಿಳಿಯದೆ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ದಮಾಡುತ್ತಾರೆ ಎಂದು ಭ್ರಾಂತಿಗೊಂಡು ವಿಚಾರಮಾಡದೆ ಇವರಿಗೆ ಸೇನಾಧಿಪತ್ಯದ ಪಟ್ಟವನ್ನು ಕಟ್ಟಿದೆ. ಗುರುಗಳೂ ಕುಲವೃದ್ಧರೂ ಆದ ಇವರನ್ನು ಯದ್ದರಂಗಕ್ಕೆ ಸೆಳೆದು ನಿಷ್ಟ್ರಯೋಜನವಾಗಿ ಶತ್ರುಗಳ ಗುಂಪಿನಲ್ಲಿ ನಗಿಸಿಕೊಂಡರೆ ನಿನಗೆ ಬರುವ ಪ್ರಯೋಜನವೇನು ದುರ್ಯೊಧನ ? ೧೭. ಕಣ್ಣು ಕಾಣದ ಈ ಮುದುಕನಿಗೆ ಕಟ್ಟಿದ ವೀರಪಟ್ಟವು ಹಗ್ಗಕ್ಕೆ ಸಮಾನವಲ್ಲವೇ? ಆತನು ಧರಿಸಿರುವ ಬಿಲ್ಲು ದಂಟಿಗೆ ಸಮಾನವಲ್ಲವೇ? ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬೇಕಾದರೆ
Page #461
--------------------------------------------------------------------------
________________
೪೫೬ | ಪಂಪಭಾರತಂ
ಆದಿಯೊಳವರಂ ಪಿರಿದೊಂ ದಾದರದಿಂ ನಡಪಿದಜ್ಜರಪುದಣಿಂದಂ | ಕಾದರಿವರವರೊಳವರುಂ
ಕಾದ ನೆರೆದಿವರೊಳೆಂತು ನಂಬುವ ನೃಪತೀ || ವ|| ಎಂಬುದುಮಾ ನುಡಿಗೆ ಸಿಡಿಲು ಕುಂಭಸಂಭವನಿಂತೆಂದಂಕಂl ಸಿಂಗದ ಮುಪ್ಪು ನೆಗಟೀ
ಗಾಂಗೇಯರ ಮುಪ್ಪುಮಿಟಿಕವಡಗುಮ ವನಮಾ | ತಂಗಂಗಳಿನಸುಹೃಚತು ರಂಗಬಲಂಗಳಿನದಂತುಮಂಗಾಧಿಪತೀ || ಕುಲಜರನುದ್ದತರಂ ಭುಜ ಬಲಯುತರಂ ಹಿತರನೀ ಸಭಾಮಧ್ಯದೊಳ | ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲ್ಕುಜದ ನೀಂ ಕಡೆನುಡಿವೈ | ೨೦ ವ|| ಎಂದು ನುಡಿದ ಗುರುವಿನ ಕರ್ಣಕಠೋರವಚನಂಗಳೆ ಕರ್ಣ೦ ಕಿನಿಸಿಚಂ!! ಕುಲಮನೆ ಮುನ್ನಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲವನನಟ್ಟಿ ತಿಂಬುವ ಕುಲಂ ಕುಲಮಲ್ತು ಚಲಂ ಕುಲಂ ಗುಣಂ | ಕುಲಮಭಿಮಾನಮೊಂದೆ ಕುಲಮಣ್ಣು ಕುಲಂ ಬಗೆವಾಗಳೀಗಳೇ
ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ || ೨೧ ನನಗೆ ಪಟ್ಟ ಕಟ್ಟಯ್ಯ. ೧೮. ಬಾಲ್ಯದಿಂದಲೂ ಅವರನ್ನು ವಿಶೇಷ ಪ್ರೀತಿಯಿಂದ ಸಾಕಿದ ಅಜ್ಜರಾದುದರಿಂದ ಇವರು ಅವರೊಡನೆ ಕಾದುವುದಿಲ್ಲ. ಅವರೂ ಇವರೊಡನೆ ಪ್ರತಿಭಟಿಸಿ ಕಾದುವುದಿಲ್ಲ. ರಾಜನೇ ಹೇಗೆ ಇವರನ್ನು ನಂಬುತ್ತೀಯೆ? ವll ಎನ್ನಲು ಆ ಮಾತಿಗೆ ದ್ರೋಣನು ಸಿಡಿದು ಹೀಗೆಂದನು. ೧೯. ಸಿಂಹದ ಮುಪ್ಪನ್ನೂ ಭೀಷ್ಕರ ಮುಪ್ಪನ್ನೂ ಅಲ್ಲಗಳೆಯಬೇಡ, ಸಿಂಹವು ಮುಪ್ಪಾದರೆ ಆನೆಗಳಿಗೆ ಸದರವೇನು ? ಹಾಗೆಯೇ ಭೀಷ್ಮರು ಮುದುಕರಾದುದರಿಂದ ಚತುರಂಗಸೈನ್ಯವು ಅವರನ್ನು ಗೆಲ್ಲಬಲ್ಲವೇ? ೨೦. ಸತ್ಕುಲಪ್ರಸೂತರಾದವರನ್ನು ಶ್ರೇಷ್ಠರಾದವರನ್ನು ಎಲ್ಲರಿಗೂ ಹಿತರಾದವರನ್ನು ಕುರಿತು ಈ ಸಭಾಮಧ್ಯದಲ್ಲಿ ಹೆಚ್ಚಿದ ಕೊಬ್ಬಿನಿಂದ ನೀನು ನಿಷ್ಟಯೋಜನವಾಗಿ ತಿರಸ್ಕಾರದ ಮಾತನಾಡಿದ್ದೀಯೆ. ಕುಲವನ್ನು ನಾಲಗೆ ಆಡಿ ತೋರಿಸುತ್ತದೆಯಲ್ಲವೆ? ವl ಎಂದು ನುಡಿದ ಕಿವಿಗೆ ಕರ್ಕಶವಾದ ಮಾತುಗಳಿಗೆ ಕರ್ಣನು ಕೋಪಿಸಿಕೊಂಡು ೨೧. ಮಾತಿಗೆ ಮೊದಲು ಕುಲವನ್ನೇ ಏಕೆ ಕುರಿತು ಘೋಷಿಸುತ್ತೀರಿ? ನಿಮ್ಮ ಕುಲಗಳು ಪ್ರತಿಭಟಿಸಿದವರನ್ನು ಎದುರಿಸಿ ಹಿಂಬಾಲಿಸಿ ತಿಂದು ಹಾಕುತ್ತವೆಯೇನು? ಹುಟ್ಟಿದ ಜಾತಿ ನಿಜವಾದ ಕುಲವಲ್ಲ; ಛಲ-ಕುಲ, ಸದ್ಗುಣ-ಕುಲ, ಆತ್ಮಗೌರವವೊಂದೆ ಕುಲ, ಪರಾಕ್ರಮವೆಂಬುದು ಕುಲ. ವಿಚಾರಮಾಡುವುದಾದರೆ ಈಗ ಈ ಯುದ್ಧದಲ್ಲಿ ಅಣ್ಣಾ, ನಿಮ್ಮ ಈ ಕುಲವು ನಿಮಗೆ
Page #462
--------------------------------------------------------------------------
________________
ದಶಮಾಶ್ವಾಸಂ ೪೫೭ ಕ೦ll ಗಂಗಾಸುತಂ ಪೃಥಾಸುತ
ರಂ ಗೆಲ್ಗೊಡ ತಪಕೆ ಪೋಪೆನವರ್ಗಳ ಕೆಯ್ಯೋಳ್ || ಗಾಂಗೇಯನತಿದೂರಹಿತರ ನಾಂ ಗಲೆ ತಳಿವನನ್ನೆಗಂ ಬಿಲ್ವಡಿಯಂ !
೨೨ ವ|| ಎಂದು ಕರ್ಣ೦ ಪ್ರತಿಜ್ಞೆಗೆಯ್ದುದುಂ ಸಿಂಧುತನೂಜನಿಂತೆಂದಂಚಂ|| ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು ಮಿಕ್ಕ ತೋ
ಆಲದ ಪೊಡರ್ಪು ಕರ್ಣ ನಿನಗುಳ್ಳನಿತೇನನಗುಂಟೆ ಭಾರತಂ | ಕಲಹಮಿದಿರ್ಚುವಂ ಹರಿಗನಪೊಡ ಮಕ್ಕಳಮೇಕೆ ನೀಂ ಪಳಂ
ಚಲೆದಪೆಯಣ್ಣ ಸಂಡೆಯಲಪ್ಪುದು ಕಾಣ ಮಹಾಜಿರಂಗದೊಳ್ || ೨೩ ವ|| ಎಂದು ಮತ್ತಮಿಂತೆಂದಂ- ಕ೦ll ಮುದುಪರ ಬಿಲ್ಕಲೈಯುಮಿತಿ
ವದಟುಂ ಬಗೆವಾಗಳಣ್ಣನೆಂದಂತುಟಿ ತ ಪದು ಕರಮ ಶುಚಮಕ್ಕು ಕದನದೊಳಿನ್ನನ್ನ ನುಡಿದ ನುಡಿಯಂ ಕೇಳಿ೦ ||
೨೪ ಮll ಪಿಡಿಯಂ ಚಕ್ರಮನೆಂಬ ಚಕ್ರಿಯನಿಳಾಚಕ್ರಂ ಭಯಂಗೊಳ್ಳಿನಂ
ಪಿಡಿಯಿಪ್ಪಂ ಕರಚಕ್ರಮಂ ನರರಥಂ ತೂಣ್ಣಾ ಕುರುಕ್ಷೇತ್ರದಿಂ 1 ಪಡುವಣ್ಣಾವುದು ಪೋಗೆ ಪೋಗಡಿಸುವ ನಿಚ್ಚಂ ಧರಾಧೀಶರು
ಪಡಲಿಟ್ಟಂತಿರ ಮಾಚ್ನೋವದ ಪಯಿಂಛಾಸಿರ್ವರು ಯುದ್ಧದೊಳ್ ||೨೫ ವ್ಯಥೆಯನ್ನುಂಟುಮಾಡುತ್ತದೆ. ೨೨. ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ. ಅವರುಗಳ ಕಯ್ಯಲ್ಲಿ ಭೀಷ್ಮನು ನಾಶವಾದರೆ ಶತ್ರುಗಳನ್ನು ಗೆಲ್ಲುವುದಕ್ಕಾಗಿ ನಾನು ಸಂಧಿಸಿ ಯುದ್ಧಮಾಡುತ್ತೇನೆ. ಅಲ್ಲಿಯವರೆಗೆ ನಾನು ಬಿಲ್ಲನ್ನೇ ಹಿಡಿಯುವುದಿಲ್ಲ. ವ|| ಎಂಬುದಾಗಿ ಕರ್ಣನು ಪ್ರತಿಜ್ಞೆ ಮಾಡಲು ಭೀಷ್ಮನು ಹೀಗೆ ಹೇಳಿದನು. ೨೩. ಕರ್ಣ ಶೌರ್ಯದ ಗರ್ವ, ಯವ್ವನದ ಮದ, ಸ್ವಾಮಿಯ ನಂಬಿಕೆ, ಮೀರಿದ ಬಾಹುಬಲದ ವೈಭವ - ಇವು ನಿನಗಿರುವಷ್ಟು ನನಗಿದೆಯೇನಪ್ಪ, ಇದು ಭಾರತದ ಯುದ್ಧ ಎದುರಿಸುವವನು ಹರಿಗನಾಗಿರುವಾಗ ಈ ಹೀಯಾಳಿಕೆಯೇಕೆ? ನೀನು ಪ್ರತಿಭಟಿಸಿ ಕಾದುವೆಯಣ್ಣಾ, ಈ ಮಹಾಯುದ್ದದಲ್ಲಿ ನಿನಗೂ ಸರದಿ ಬರುತ್ತದೆ ನೋಡುವೆಯಂತೆ ವll ಎಂದು ಪುನಃ ಹೀಗೆಂದನು-೨೪. ನಾನೇನೋ ಮುದುಕ. ಮುದುಕರ ಅಸ್ತವಿದ್ಯಾಕೌಶಲ್ಯವನ್ನೂ ಯುದ್ಧಮಾಡುವ ಪರಾಕ್ರಮವನ್ನೂ ವಿಚಾರಮಾಡಿ ನೋಡಿದರೆ ಕರ್ಣನು ಹೇಳಿದ ಹಾಗೆಯೇ. ತಪ್ಪೇನಿಲ್ಲ, ವಿಶೇಷವಾಗಿ ನಿಜವೇ ಆಗುತ್ತದೆ. ಆದರೂ ಯುದ್ದದಲ್ಲಿ ಇನ್ನು ಮೇಲೆ ನನ್ನ ಪ್ರತಿಜ್ಞೆಯನ್ನು ಕೇಳಿ೨೫. ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಭೂಮಂಡಲವೆಲ್ಲ ಭಯಪಡುವ ಹಾಗೆ ಚಕ್ರವನ್ನು ಹಿಡಿಸುತ್ತೇನೆ. ಅರ್ಜುನನ ತೇರು ಹಾರಿ ಕುರುಕ್ಷೇತ್ರದಲ್ಲಿ ಪಶ್ಚಿಮಕ್ಕೆ ಎಂಟುಗಾವುದ ಹೋಗುವ ಹಾಗೆ ಬಾಣಪ್ರಯೋಗ
Page #463
--------------------------------------------------------------------------
________________
೪೫೮ / ಪಂಪಭಾರತ
ವ|| ಎಂದು ಮಹಾ ಪ್ರತಿಜ್ಞಾರೂಢನಾದ ಗಾಂಗೇಯನಳವನಳವಲ್ಲದ ಪೂಗಲ್ಲವರಂ ಬೀಡಿಂಗೆ ಬಿಜಯಂಗೆಯ್ದಿಮೆಂದು ಕಳಿಪಿ ಮುದಿವಸಂ ಯುದ್ಧಸನ್ನದ್ದನಾಗಿ ಪ್ರಯಾಣಭೇರಿಯಂ ಪೊಯ್ದಿದಾಗಮll ಕೆಡದಂ ಪದ್ಮಜನಾಸನಾಂಬುರುಹದಿಂದಾಗಳ್ ಸುರೇಂದ್ರಾಚಳಂ
ನಡುಗಿತ್ತರ್ಕನಳುರ್ಕೆಗೆಟ್ಟು ನಭದಿಂ ತೂಳಂ ಮರುಳಸಿದಳ್ | ಮೂಡನಂ ಗೌರಿ ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್
ನಡುಗಿತ್ತೆಂಬಿನಮುರ್ವಿ ಪರ್ವಿದುದು ತತ್ಸನ್ನಾಹಭೇರೀರವಂ || ೨೬
ವ|| ಅಂತು ಮೊಲಗುವ ಭೇರೀರವದೊಡನೆ ನೆಲಂ ಮೋಲಗೆಯುಂ ತಳೆದ - ವಿಚಿತ್ರಕೇತುಗಳೊಡನುತ್ಪಾತಕೇತುಗಳ್ ಮೂಡೆಯುಂ ಪರ್ವಂಡಿ ಸೂಸುವ ಸೇನೆಯೊಡನೆ ರುಧಿರವರ್ಷಂ ಸುರಿಯೆಯುಂ ಹಿತ ಪುರೋಹಿತ ಜಯ ಜಯ ಧ್ವನಿಗಳೊಡನೆ ಹಾಹಾಕ್ರಂದನ ಧ್ವನಿಗಳನಿಮಿತ್ತಮಾಕಾಶದೊಳ್ ನೆಗಟಿಯುಂ ಕಾದುವೆನೆಂದು ನೆಗಳ ನುಡಿದ ನುಡಿಯುಮಂ ಪಿಡಿದ ಚಲಮುಮಂ ಬಗೆದು ಸರಗಂ ಬೆರಗುಮಂ ಬಗೆಯದೆ ಮಂಗಳಾಭರಣದೊಳ್ ನೆಯ ಕೆಯ್ಯ್ದು ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳಾಯೋಗಂಗೊಂಡು ಬಂದ ಮದಾಂಧಗಂಧಸಿಂಧುರಮಪ್ಪ ಪಟ್ಟವರ್ಧನದ ಬೆಂಗವಾಯ್ತು
ಮಾಡುತ್ತೇನೆ. ಪ್ರತಿದಿನವೂ ಯುದ್ದದಲ್ಲಿ ಹತ್ತು ಸಾವಿರ ರಾಜರನ್ನು ಕೆಳಗುರುಳಿಸುತ್ತೇನೆ. (ಕೆಳಗೆ ಮಲಗುವ ಹಾಗೆ ಮಾಡುತ್ತೇನೆ) ವ|| ಎಂದು ಮಹಾಪ್ರತಿಜ್ಞೆಯನ್ನು ಮಾಡಿದ ಭೀಷ್ಮನ ಶಕ್ತಿಯನ್ನು ಅಳತೆಯಿಲ್ಲದಷ್ಟು ಎಲ್ಲರೂ ಹೊಗಳಿದರು. ಅವರನ್ನು ಬೀಡಿಗೆ ದಯಮಾಡಿಸಿ' ಎಂದು ಕಳುಹಿಸಿಕೊಟ್ಟನು. ಮಾರನೆಯದಿನ ಯುದ್ಧಸನ್ನದ್ದನಾಗಿ ಪ್ರಯಾಣಸೂಚಕವಾದ ಭೇರಿಯನ್ನು ಶಬ್ದಮಾಡಿಸಿದನು. ೨೬. ಆ ಭೇರಿಯ ಶಬ್ದವನ್ನು ಕೇಳಿ ಬ್ರಹ್ಮನು ಕಮಲಾಸನದಿಂದ ಉರುಳಿದನು; ಮೇರುಪರ್ವತವು ನಡುಗಿತು. ಸೂರ್ಯನು ಸ್ಥಾನಭ್ರಷ್ಟನಾಗಿ ಆಕಾಶದಿಂದ ಹಾರಿದನು. ಪಾರ್ವತಿಯು ಭ್ರಾಂತಿಗೊಂಡು ಈಶ್ವರನನ್ನು ತಬ್ಬಿಕೊಂಡಳು. ಈ ಸಮಸ್ತ ಭೂಮಂಡಲವು ಕಮಲದೆಲೆಯ ಮೇಲಿನ ನೀರಿನ ಹಾಗೆ ನಡುಗಿತು ಎನ್ನುವಂತೆ ಆ ಪ್ರಯಾಣಭೇರೀ ಶಬ್ದವು ಹೆಚ್ಚಿ ಹಬ್ಬಿತು. ವ|| ಆಗ ಭೂಮಿಯು ಗುಡುಗಿತು. ಎತ್ತಿ ಕಟ್ಟಿರುವ ಚಿತ್ರಮಯವಾದ ಧ್ವಜಗಳೊಡನೆ ಅಪಶಕುನ ಸೂಚಕವಾದ ನಕ್ಷತ್ರಗಳು ಕಾಣಿಸಿಕೊಂಡವು. ವೃದಯರು ಚೆಲ್ಲುವ ಮಂತ್ರಾಕ್ಷತೆಗಳೊಡನೆ ರಕ್ತದ ಮಳೆಯು ಸುರಿಯಿತು. ಹಿತರಾದ ಪುರೋಹಿತರ ಜಯಜಯಶಬ್ದಗಳೊಡನೆ ಅಳುವ ಶಬ್ದವು ಅಕಾರಣವಾಗಿ ಆಕಾಶದಲ್ಲಿ ಉಂಟಾಯಿತು. ಆದರೂ ದುರ್ಯೋಧನನು ಯುದ್ಧ ಮಾಡುತ್ತೇನೆಂದು ಸ್ಪಷ್ಟವಾಗಿ ಆಡಿದ ಮಾತನ್ನೂ ಹಿಡಿದ ಛಲವನ್ನೂ ಯೋಚನೆ ಮಾಡಿ ಭಯವನ್ನೂ ಅಪಾಯವನ್ನೂ ಯೋಚಿಸಲೇ ಇಲ್ಲ. ಮಂಗಳಕರವಾದ ಒಡವೆಗಳಿಂದ ಪೂರ್ಣವಾಗಿ ಅಲಂಕಾರಮಾಡಿಕೊಂಡು ಮುತ್ತು ಮಾಣಿಕ್ಯದ ಆಭರಣಗಳಿಂದ ಅಲಂಕೃತವಾಗಿ ಬಂದ ಮದಗಜವಾದ ಪಟ್ಟದಾನೆಯನ್ನು ಹತ್ತಿ
Page #464
--------------------------------------------------------------------------
________________
ದಶಮಾಶ್ವಾಸಂ / ೪೫೯ ಕಂ11 ನಯಮನಯಂ ಜಯಮನಗಪ
ಜಯವಿದು ಯಶಮಯಶಮಂಬಿದಂ ಬಗೆಯದೆ ನಿ | ಶಯಿಸಿ ಕಲಹಮನೆ ಮನದೊಳ್
ಭಯಮಯದ ಕಲಿ ಸುಯೋಧನಂ ಪೋಲಮಟ್ಟಂ || ೨೭ ವ|| ಅಂತು ಪೊಆಮಟ್ಟು ಮುಂದೆ ಪರಿವ ಧವಳಚ್ಛತ್ರಚಾಮರಂಗಳುಂ ಮಿಳಿರ್ವ ಪಾಳಿ ಕೇತನಂಗಳುಂ ಪೊಯ್ಯ ಪಂಚಮಹಾಶಬ್ದಂಗಳುಂ ತನಗೆ ರಾಜರಾಜ ಶಬ್ದಮನನ್ವರ್ಥಂ ಮಾಡೆ ಜಯದ್ರಥ ಜಯತೇನ ಸುದಕ್ಷಿಣ ಶಲ್ಯ ಶಕುನಿ ಧೃಷ್ಟಕೇತು ನೀಳ ಭಗದತ್ತ ಶ್ರುತಾಯುಧ ನಿಯತಾಯುಧಾಚ್ಯುತಾಯುಧಾದಿಗಳಪ್ಪ ಪನ್ನೊಂದಕ್ಕೋಹಿಣೀಪತಿಗಳುಂ ಗಾಂಗೇಯ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಪ್ರಕೃತಿಗಳುಂ ಕರ್ಣ ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳ್ ಮೂವರುಂ ಬೆರಸು ಬರೆ ಬಾಹಿಕ ಭೂರಿಶ್ರವಸೋಮದತ್ತರೆಂಬ ಮೂವರುಮನಂತ ಬಲಂ ಬೆರಸು ಕೂಡಿಬರೆಯವತಿದೇಶಾಧೀಶ್ವರರಷ್ಟ ವಿಂದಾನುವಿಂದರೆಣ್ಣನ್ನು ನಾಲ್ಕಾರ ಮದದಾನೆ ವರಸು ಬಂದು ಕೂಡ ಕಳಿಂಗರಾಜಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೋಳ್ ಸತ್ತ ಬಕಾಸುರ ಜಟಾಸುರರ ಮಕ್ಕಳ ಚತುಸ್ಲಿಂಶತೃಹಸ್ತ ನಕ್ತಂಚರ ಪರಿವೃತ ಹಳಂಭೂಷ ಮುಸಲಾಯುಧ ಕಾಳನೀಳ ವಿದ್ಯುನ್ಮಾಲ್ಯಾದಿಗಳುಂ ಬಂದು ಕೂಡ ತಿಗರ್ತಾಧೀಶಂ ಸುಶರ್ಮನು ಸಂಸಪಕರ್ ಪದಿನೆಂಟು ಕೋಟಿ ರಥಂ ಬೆರಸು ಬಂದು ಕೂಡ ಮತ್ತಮನೇಕ ದೇಶಾಧೀಶ್ವರರುಂ
೨೭. ಇದು ನೀತಿ ಇದು ಅನೀತಿ, ಇದು ಜಯ ಇದು ಅಪಜಯ, ಇದು ಯಶಸ್ಸು ಇದು ಅಪಯಶಸ್ಸು ಎಂದು ವಿಚಾರಮಾಡದೆ ಯುದ್ಧವನ್ನೇ ಮನಸ್ಸಿನಲ್ಲಿ ನಿಷ್ಕರ್ಷಿಸಿ ಭಯವೆಂದರೇನೆಂಬುದನ್ನೇ ತಿಳಿಯದ ಶೂರನಾದ ದುರ್ಯೋಧನನು ಯುದ್ದಕ್ಕೆ ಹೊರಟನು. ವ|| ಹಾಗೆ ಹೊರಟು ತನ್ನ ಮುಂದೆ ನಡೆಯುತ್ತಿದ್ದ ಶ್ವೇತಚ್ಛತ್ರಚಾಮರಗಳೂ ಅಲುಗಾಡುತ್ತಿದ್ದ ಕೊಂಬು, ತಮಟೆ, ಭೇರಿ, ಘಂಟೆ ಮತ್ತು ಚಿನ್ನಂಗಹಳಗಳೆಂಬ ಪಂಚಮಹಾವಾದ್ಯಗಳೂ ತನ್ನ ಚಕ್ರವರ್ತಿ ಎಂಬ ಶಬ್ದವನ್ನು ಅನ್ವರ್ಥವಾಗಿ ಮಾಡುತ್ತಿದ್ದವು. ಜಯದ್ರಥ, ಜಯನ, ಸುದಕ್ಷಿಣ, ಶಲ್ಯ, ಶಕುನಿ, ಧೃಷ್ಟಕೇತು, ನೀಳ, ಭಗದತ್ತ, ಶ್ರುತಾಯುಧ, ನಿಯತಾಯುಧ, ಅಚ್ಯುತಾಯುಧರೇ ಮೊದಲಾದ ಹನ್ನೊಂದಕ್ಟೋಹಿಣೀ ನಾಯಕರೂ ಭೀಷ್ಮ ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ ಮೊದಲಾದವರೂ ಕರ್ಣ, ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳು ಮೂವರೂ ಒಟ್ಟುಗೂಡಿ ಬಂದರು. ಬಾಸ್ತಿಕ ಭೂರಿಶ್ರವ ಸೋಮದತ್ತರೆಂಬ ಮೂವರೂ ಕಡೆಯಿಲ್ಲದಷ್ಟು ಸೇನಾಸಮೇತರಾಗಿ ಬಂದು ಸೇರಿದರು. ಅವಂತೀದೇಶದ ಒಡೆಯರಾದ ವಿಂದಾನುವಿಂದರು ಎಂಬತ್ತುನಾಲ್ಕು ಸಾವಿರ ಮದ್ದಾನೆಯೊಡಗೂಡಿ ಬಂದು ಕೂಡಿದರು. ಕಳಿಂಗ ರಾಜನಾದ ಕ್ಷೇಮಧೂರ್ತಿಯೂ ಭೀಮಸೇನನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಹಳಂಭೂಷ ಮುಸಲಾಯುಧ ಕಾಳ ನೀಳ ವಿದ್ಯುನ್ಮಾಲಿ ಮೊದಲಾದವರೂ ಮೂವತ್ತುನಾಲ್ಕುಸಾವಿರ ರಾಕ್ಷಸರಿಂದ ಸುತ್ತುವರಿಯಲ್ಪಟ್ಟು ಬಂದು ಜೊತೆಗೂಡಿದರು. ತ್ರಿಗರ್ತಾಧೀಶ್ವರನಾದ ಸುಶರ್ಮನೂ ಸಂಶಪ್ತಕರೂ ಹದಿನೆಂಟು ಕೋಟಿ ತೇರಿನೊಡನೆ ಬಂದು ನೆರೆದರು. ಇನ್ನೂ ಅನೇಕ ದೇಶಾಧೀಶರು ಬಂದು ಒಟ್ಟುಗೂಡಿದರು. ಯುಯುತ್ಸು, ದುಶ್ಯಾಸನ, ಚಿತ್ರಸೇನ,
- 30
Page #465
--------------------------------------------------------------------------
________________
೪೬೦ / ಪಂಪಭಾರತಂ
ಬರೆ ಯುಯುತ್ಸು ದುಶ್ಯಾಸನ ಚಿತ್ರಸೇನ ದುಸ್ಸಹ ದುಸ್ಸಳ ಎಂದಾನುವಿಂದ ದುರ್ಧಷ್ರಣ ದುರ್ಮಷ್ರಣ ದುಸ್ಸರ್ಶನ ಸುಬಾಹು ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಚಿತ್ರಪಚಿತ್ರ ನಂದೋಪನಂದ ಚಿತ್ರಾಂಗದ ಚಿತ್ರಕುಂಡಲ ಜರಾಸಂಧ ಸತ್ಯಸಂಧ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹುಗಳ ಮೊದಲಾಗೆ ತನ್ನ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸುತ್ತಿಳೆದು ಬಳಸಿ ಬರೆ ವಿಳಯಕಾಳ ವಾತಾಹತಿಯಿಂ ಜಳನಿಧಿಯ ತಳರ್ವಂತೆ ತಳರ್ದು ಕುರುಕ್ಷೇತ್ರಕ್ಕೆ ಮೊಗಸಿದಾಗಳ್
ಚoll ಕರಿ ಮಕರಂಗಳಂ ಕರಿ ಘಟಾವಳಿಯಬಕುಳಂಗಳಂ ಭಯಂ ಕರತರಮಾದ ಪೆರ್ದೆರೆಗಳಂ ಹಯಸಂತತಿ ಮತ್ಸಕೋಟಿಯಂ | ಸುರಿತ ನಿಶಾತಹೇತಿಯುತ ಸದ್ಧಟಕೋಟಿ ನಿರಂತರಂ ತಿರ ಸ್ಮರಿಸಿರೆ ಪೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಾರ್ಣವಂ || ಮದವದ್ದಂತಿ ವರೂಥ ವಾಜಿ ಭಟ ಸಂಘಾತಂಗಳಿ ಲೆಕ್ಕಮಂ ಬುದನಾಂ ನಿಟ್ಟಿಸಲಾನೊಂದನವೆಂ ತತ್ತ್ವನ ಪಾದೋತಂ | ಪುದಿದತ್ತಂ ರಜಮಂಬರಸ್ಥಳಮುಮಂ ಮುಟ್ಟಿತ್ತು ತಳುರ್ವಿ ಪ ರ್ವಿದೊಡಾ ಮುನ್ನಿನ ತೆಳುಗೆಟ್ಟು ಕೆಸಲಾಯಾಕಾಶ ಗಂಗಾಜಲಂ || ೨೯
ಮ||
ಚಂ
ರವಿಕಿರಣಾಳಿಗಳ ಧ್ವಜಪಟಾಳಿಯ ತಿಂತಿಣಿಯಿಂದಮುರ್ಚಲಾ ಅವ ರವಿವಾಜಿಗಳ ನೆಗೆದ ಪಾಂಸುಗಳಿಂ ದೆಸೆಗೆಟ್ಟು ಹೋಗಲಾ | ಅವ ರವಿಬಿಂಬಮಂದಸೆಯಲಾದ ಪೆಂಪಿನ ತಿನಾಂತ ಕೌ ರವಬಳದಂತು ಮೇರೆ ಪವಣೆಂಬುದನಿನ್ನಳವಂದನಾವುದೋ ||
೨೮
202
ಮುಸ್ಸಹ, ದುಸ್ಸಳ, ವಿಂದಾನುವಿಂದ, ದುರ್ಧಷ್ರಣ, ದುರ್ಮಷ್ರಣ, ದುಸ್ಪರ್ಶನ, ದುಷ್ಕರ್ಣ, ಸುಬಾಹು, ದುರ್ಮುಖ, ವಿಕರ್ಣ, ವಿವಿಂಶತಿ, ಸುಲೋಚನ, ಚಿತ್ರೋಪಚಿತ್ರ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹುಗಳೇ ಮೊದಲಾದ ನೂರುಜನ ತಮ್ಮಂದಿರೂ ಲಕ್ಷಣನೇ ಮೊದಲಾದ ನೂರುಜನ ಮಕ್ಕಳೂ ಸುತ್ತುಗಟ್ಟಿ ಬಂದರು. ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಸಮುದ್ರವೇ ಚಲಿಸುವಂತೆ ಚಲಿಸಿ ಸೈನ್ಯವು ಕುರುಕ್ಷೇತ್ರವನ್ನು ಮುತ್ತಿಕೊಂಡಿತು. ೨೮. ನೀರಾನೆಗಳನ್ನೂ ಮೊಸಳೆಗಳನ್ನೂ ಆನೆಯ ಸಮೂಹವೂ, ಮೇಘಸಮೂಹವನ್ನೂ ಅತಿಭಯಂಕರವಾದ ದೊಡ್ಡ ಅಲೆಗಳನ್ನೂ ಕುದುರೆಗಳ ಸಮೂಹವೂ, ಮೀನಿನ ಸಮೂಹವನ್ನು ಪ್ರಕಾಶಮಾನವೂ ಹರಿತವೂ ಆದ ಕತ್ತಿಗಳಿಂದ ಕೂಡಿದ ಒಳ್ಳೆಯ ಭಟಸಮೂಹವೂ ಒಂದೇಸಮನಾಗಿ ತಿರಸ್ಕರಿಸುತ್ತಿರಲು ಚತುರಂಗಸೇನಾಸಮುದ್ರವು ಘೋಷಿಸುತ್ತಿರುವ ಸಮುದ್ರವನ್ನೇ ಮೀರಿ ಬಂದಿತು. ೨೯. ಮದ್ದಾನೆ, ತೇರು, ಕುದುರೆ, ಕಾಲಾಳುಗಳು ಈ ಲೆಕ್ಕವುಳ್ಳದ್ದು ಎಂದು ನಾನು ಹೇಳಲಾರೆ. ಇಷ್ಟು ಮಾತ್ರ ಹೇಳಬಲ್ಲೆ. ಆ ಸೈನ್ಯದ ತುಳಿತದಿಂದ ಮೇಲೆದ್ದು ಎಲ್ಲ ಕಡೆಯಲ್ಲೂ ವ್ಯಾಪಿಸಿ ಆಕಾಶಪ್ರದೇಶವನ್ನು ಮುಟ್ಟಿದ್ದ ಧೂಳು ಮತ್ತೂ ಹೆಚ್ಚಾಗಿ ವ್ಯಾಪಿಸಲು ಆಕಾಶಗಂಗಾನದಿಯ ನೀರು ತನ್ನ ಮೊದಲಿನ ಸ್ವಚ್ಛತೆಯನ್ನು ಕಳೆದುಕೊಂಡು ಬಗ್ಗಡವಾಯಿತು. ೩೦. ಸೂರ್ಯನ ಕಿರಣಗಳ ಸಮೂಹವು ಬಾವುಟದ ಬಟ್ಟೆಗಳ ಸಮೂಹವನ್ನು ಭೇದಿಸಿಕೊಂಡು
Page #466
--------------------------------------------------------------------------
________________
ದಶಮಾಶ್ವಾಸಂ / ೪೬೧ ಮ! ಮದವದ್ದಂತಿ ಮದಾಂಬುಧಾರಗಳವಂದೊಂದೊಂದಲೊಳ್ ಕೂಡ ಪ
ಇದ ಜಾತ್ಯತ್ವ ರಥಾಶ್ವ ಸಂಕುಳ ಖಲೀನೋದೂತ ಲಾಲಾಜಲಂ | ಕದಡತ್ರಮವುಂಕೆ ಬೇಜ ಪರಭಾಗಂಬತ್ತು ಲೋಕಕ್ಕೆ ಸ ನಿದಮಾಗಿರ್ದುವು ಕೌರವಧ್ವಜಿನಿಯೊಳ್ ಕಾಳಿಂದಿಯುಂ ಗಂಗೆಯುಂ || ೩೧
ವ|| ಅಂತು ದುರ್ಯೋಧನಂ ತನ್ನ ಬಲದ ಕರಿಘಟೆಗಳ ಕರ್ಣ ತಾಳಾಹತಿಯಿಂ ಕುಲಗಿರಿಗಳನ್ನಾಡಯುಂ ತನ್ನ ಬಲದ ಪದಾಭಿಘಾತದೊಳಂ ಕುಲಗಿರಿಗಳ ಜೀಣಿಟ್ಟು ವಾಜಪೇಯಿಯುಂ ತನ್ನ ಬಲದ ಪದೋತ್ಥಿತ ರಜಮೆ ಮಹಾಸಮುದ್ರಂಗಳಂ ತೆಕ್ಕನೆ ತೀವೆಯುಂ ನಿಚವಯಣದಿಂ ಬಂದು ಕುರುಕ್ಷೇತ್ರದ ಪೂರ್ವ ದಿಗ್ನಾಗದೋಳ್ ಪ್ರಳಯಂ ಮೂರಿವಿಟ್ಟಂತೆ ಬೀಡಂಬಿಟ್ಟು ಧರ್ಮಪುತ್ರನಲ್ಲಿಗುಳೂಕನೆಂಬ ದೂತನನಿಂತೆಂದಟ್ಟಿದಂಚಂಗಿ ಮಸೆಯಿಸುಗುಳ್ಳ ಕೆಯ್ತುಗಳನರ್ಚಿಸುಗಾನಗಳು ತಗುಳು ಪೂ
ಜಿಸುಗೆ ವಿಶುದ್ದ ವಾಜಿಗಳನಾಜಿಗೆ ಜೆಟ್ಟಿಗರಾಗಿ ಕೊಬ್ಬಿವೀ ! ' ಸಿಸುಗೆ ನಿರಂತರಂ ರವಳಿ ಘೋಷಿಸುಗಿಂದ ಕಡಂಗಿ ಸಾರ್ಚಿ ಬಿ
ಟ್ಟುಸಿರದೆ ನಿಲ್ವ ಕಾರಣಮದಾವುದೊ ನೆಟ್ಟನೆ ನಾಳೆ ಕಾಳೆಗಂ | ೩೨
ಬರಲಾರವು, ಸೂರ್ಯನ ಕುದುರೆಗಳು ಮೇಲೆದ್ದ ಧೂಳಿನಿಂದ ದಿಕ್ಕೆಟ್ಟು ಮುಂದೆ ಹೋಗಲಾರವು, ಸೂರ್ಯಬಿಂಬವು ಪ್ರಕಾಶಹೀನವಾಗಿ ವೈಭವದ ಭಾರದಿಂದ ಕೂಡಿದ ಕೌರವಸೇನೆಯಂತೆಯೇ ಕೊನೆ, ಎಲ್ಲೆ, ಪ್ರಮಾಣಗಳನ್ನು ತಿಳಿಯಲಾರದಂತಿದ್ದುವು ೩೧, ಮದ್ದಾನೆಗಳ ಮದೋದಕದ ಒಟ್ಟುಗೂಡಿದ ಪ್ರವಾಹವೂ ಸಿದ್ದವಾಗಿ ಅಲಂಕೃತವಾಗಿರುವ ಜಾತ್ಯತ್ವ ಮತ್ತು ರಥಾಶ್ವ (ಜಾತಿ ಕುದುರೆ ಮತ್ತು ತೇರಿನ ಕುದುರೆಗಳ ಕಡಿವಾಣಗಳ ಸಮೂಹದಿಂದ ಹುಟ್ಟಿದ ಜೊಲ್ಲಿನ ರಸವೂ ಒಂದರೊಡನೊಂದುಗೂಡಲು (ಒಂದನ್ನೊಂದು ಒತ್ತರಿಸಲು) ಗಂಗಾ ಯಮುನಾನದಿಗಳು ಬೇರೆ ಆಕಾರವನ್ನು ಪಡೆದು ಕೌರವ ಸೈನ್ಯ ಪ್ರದೇಶದಲ್ಲಿ ಹರಿಯುವ ಹಾಗಿದ್ದುವು. ವ ದುರ್ಯೋಧನನು ಸೈನ್ಯದ ಆನೆಗಳ ಸಮೂಹದ ಕಿವಿಯ ಬೀಸುವಿಕೆಯ ಪೆಟ್ಟಿನಿಂದ ಕುಲಪರ್ವತಗಳಳ್ಳಾಡಿದುವು. ಅವನ ಸೈನ್ಯದ ಕಾಲಿನ ತುಳಿತದಿಂದ ಕುಲಪರ್ವತಗಳು ಪುಡಿಯಾಗಿ ಮೇಲಕ್ಕೆದ್ದು ಹಾರಿದುವು. ಅವನ ಸೈನ್ಯದ ಕಾಲಿನಿಂದ ಎದ್ದ ಧೂಳೇ ಮಹಾಸಮುದ್ರಗಳನ್ನು ಇದ್ದಕ್ಕಿದ್ದ ಹಾಗೆ ತುಂಬಿತು. ಹೀಗೆ ನಿತ್ಯಪ್ರಯಾಣದಿಂದ ಬಂದು ಕುರುಕ್ಷೇತ್ರದ ಪೂರ್ವದಿಗ್ಯಾಗದಲ್ಲಿ ಪ್ರಳಯ ಕಾಲವೇ ಗುಂಪುಗೂಡಿದ ಹಾಗೆ ಬೀಡನ್ನು ಬಿಟ್ಟು ದುರ್ಯೋಧನನು ಧರ್ಮರಾಜನ ಹತ್ತಿರಕ್ಕೆ ಉತೂಕನೆಂಬ ಆಳಿನ ಮೂಲಕ ಹೀಗೆಂದು ಹೇಳಿ ಕಳುಹಿಸಿದನು. ೩೨. ಇರುವ ಆಯುಧಗಳನ್ನು ಹರಿತಮಾಡಲಿ, ಆನೆಗಳನ್ನು ಪೂಜಿಸಲಿ, ಪರಿಶುದ್ಧರಾದ ಕುದುರೆಗಳನ್ನು ಶ್ರದ್ದೆಯಿಂದ ಪೂಜಿಸಲಿ; ಯುದ್ಧವೀರರಾಗಿ ಯುದ್ಧ ಸೂಚಕಗಳಾದ ದೀವಟಿಗೆಗಳನ್ನು ಬೀಸಿಸಲಿ. ನಿಲ್ಲಿಸದೆ ಒಂದೇಸಮನಾಗಿ ಯುದ್ಧ ಘೋಷವಾಗುತ್ತಿರಲಿ; ಉತ್ಸಾಹದಿಂದ ಕೂಡಿ ಯುದ್ದಮಾಡಬೇಕಾದ ಈದಿನ ಯುದ್ಧರಂಗದಲ್ಲಿ ವ್ಯರ್ಥಾಲಾಪ ಮಾಡುತ್ತಿರಲು ಕಾರಣವೇನು ? ನೇರವಾಗಿ ನಾಳೆಯಿಂದಲೇ ಕಾಳಗ
Page #467
--------------------------------------------------------------------------
________________
೪೬೨) ಪಂಪಭಾರತಂ
ವ|| ಎಂದಾ ದೂತನಾ ಮಾಚಿಯೊಳೆ ಬಂದು ಪೇಟ ಕೇಳು ಯಮನಂದನನಿಂತೆಂದಂಚಂ|| ಪಗೆ ಮಸೆದಂದೆ ಕೆಯ್ದು ಮಸೆದಿರ್ದುವು ಪೂಜಿಸುವಂಕದಾನೆ ವಾ
ಜಿಗಳೆಮಗಿಲ್ಲ ಜಟ್ಟಿಗರೆ ಎನ್ನೊಡವುಟ್ಟಿದರಲ್ಲಿ ನಾಲ್ಕುಮಾ | ನೆಗಳಿವನಾಂ ದಲಿಂ ರಣದೊಳರ್ಚಿಸಿ ಬಿಟ್ಟಪನೇಕ ಮಾಗ್ಟನಾ ವಗಮಿದನಿಂತೆ ಪೇಮ್ ನಾಳೆಯ ಕಾಳೆಗಮಂತ ಗೆಯ್ಯಮಾಂ || ೩೩
ವll ಎಂದಾ ದೂತನಂ ವಿಸರ್ಜಿಸಿ ಪುಂಡರೀಕಾಕ್ಷಂಗೆ ಬಲಿಯನಟ್ಟ ಬರಿಸಿ ನಮ್ಮ ಪಡೆಯೊಳಾರ್ಗೆ ವೀರಪಟ್ಟಮಂ ಕಟ್ಟುವಂ ಪೇಟೆಮನೆಶಾll ಮಾತಂಗಾಸುರವೇರಿಯಲ್ಲಿ ಪಡೆದುಂ ಬಿಲ್ಲಂ ಧನುರ್ವಿದ್ಯೆಗಂ
ತಾತಂಗಗ್ಗಳಮಾರುಮಲದನಾ ಶ್ವೇತಂಗಮಂತಾ ನದೀ ಜಾತಂಗಂ ದೊರೆ ಯುದ್ಧಮೆಂದದು ತಚ್ಚತಂಗೆ ಭೂಲೋಕವಿ
ಖ್ಯಾತಂಗಗಳ ವೀರಪಟ್ಟಮನುದಾರ ಕಟ್ಟಿದಂ ಧರ್ಮಜಂ ||
ವ|| ಅಂತು ವಿರಾಟನಂದನನಂ ಧರ್ಮನಂದನಂ ಸೇನಾನಾಯಕನಂ ಮಾಡ ನಾಳೆ ಕಾಳಗವೆಂದು ಪಡೆವಳರ್ ಪೋಗಿ ಸಾಜೆಮೆಂಬುದುಮರ್ ಬೀಡುವೀಡುಗಳೆಲ್ಲಂ ಸಾಟಿದಾಗಚಂ|| ಪಗೆ ಸುಗಿವನ್ನೆಗಂ ಮಸೆವ ವೀರಭಟರ್ಕಳ ರೌದ್ರಮಪ್ಪ ಕೆ
ಯುಗಳಿನಗುರ್ವಿನದ್ರುತದಿನುರ್ವಿದ ಕೆಂಗಿಡಿಗಳ್ ಪಳಂಚಿ ತೋ | ಟ್ಟಗೆ ಕೊಳೆ ಪಾಯವೋಲ್ ಪೊಳೆವ ಸಂಜೆಯ ಕೆಂಪದು ಸಾಣೆಗೊಡ್ಡಿದಿ ಮೃಗೆಯ ರಜಂಬೋಲೆಂಬಿನೆಗಮಸ್ತಮಯಕ್ಕಿಟೆದಂ ದಿವಾಕರಂ || ೩೫
೩೪.
ಪ್ರಾರಂಭವಾಗತಕ್ಕದ್ದು. ವ|| ಎಂದು ಹೇಳಿದ ಆ ಮಾತನ್ನು ಆ ದೂತನು ಆ ರೀತಿಯಿಂದಲೇ ಬಂದು ಹೇಳಲಾಗಿ ಧರ್ಮರಾಜನು ಕೇಳಿ ಹೀಗೆಂದನು. ೩೩. ಹಗೆತನ ಪ್ರಾರಂಭವಾದ ದಿನವೇ ಆಯುಧಗಳು ಸಾಣೆಗೊಂಡಿವೆ. ಪೂಜಿಸಬೇಕಾದ ಪ್ರಸಿದ್ದವಾದ ಪ್ರತ್ಯೇಕ ಆನೆ ಕುದುರೆಗಳು ನಮಗಿಲ್ಲ: ನನ್ನೊಡನೆ ಹುಟ್ಟಿದವರೇ ಜಟ್ಟಿಗಳಾದವರಲ್ಲವೇ? ಈ ನಾಲ್ಕು ಆನೆಗಳನ್ನೇ ಪೂಜಿಸಿ ಯುದ್ದದಲ್ಲಿ ಬಿಡುತ್ತೇನೆ. ಏಕೆ ತಡೆಯಲಿ? ಇದನ್ನು ಹೀಗೆಯೇ ಪೂರ್ಣವಾಗಿ ಹೇಳು, ನಾಳೆಯೇ ಯುದ್ಧವಾಗಲಿ. ನಾವೂ ಹಾಗೆಯೇ ಮಾಡುತ್ತೇವೆ. ವ|| ಎಂದು ಆ ದೂತನನ್ನು ಕಳುಹಿಸಿ ಕೊಟ್ಟನು. ಶ್ರೀಕೃಷ್ಣನಿಗೆ ಸಮಾಚಾರವನ್ನು ದೂತರ ಮೂಲಕ ಕಳುಹಿಸಿ ಬರ ಮಾಡಿದನು. 'ನಮ್ಮ ಸೈನ್ಯದಲ್ಲಿ ಯಾರಿಗೆ ವೀರಪಟ್ಟವನ್ನು ಕಟ್ಟೋಣ ಅಪ್ಪಣೆ ಕೊಡಿ' ಎಂದು ಕೇಳಿದನು. ೩೪, ಶ್ವೇತನು ಈಶ್ವರನಲ್ಲಿ ಬಿಲ್ಲನ್ನು ಪಡೆದಿದ್ದಾನೆ. ಬಿಲ್ವಿದ್ಯೆಯಲ್ಲಿ ಆತನನ್ನು ಮೀರಿಸುವವರಾರೂ ಇಲ್ಲ. ಆದುದರಿಂದ ಆ ಶ್ವೇತನಿಗೂ ಭೀಷ್ಮನಿಗೂ ಯುದ್ಧವು ಸಮಾನವಾದುದು ಎಂದು ತಿಳಿದು ಆ ಉದಾರಿಯಾದ ಧರ್ಮರಾಜನು ಭೂಲೋಕವಿಖ್ಯಾತನಾದ ಶ್ವೇತನಿಗೆ ಅತಿಶಯವಾದ ವೀರಪಟ್ಟವನ್ನು ಕಟ್ಟಿದನು. ವ|| ಹಾಗೆ ವಿರಾಟನ ಮಗನಾದ ಶ್ವೇತನನ್ನು ಧರ್ಮರಾಜನು ಸೇನಾನಾಯಕನನ್ನಾಗಿ ಮಾಡಿ ನಾಳೆಯೇ ಯುದ್ಧವೆಂದು ಸೇನಾಧಿಪತಿಗಳು ಹೋಗಿ ಸಾರಿರಿ ಎನ್ನಲು ಅವರು ಬೀಡುಬೀಡುಗಳಲ್ಲೆಲ್ಲ ಘೋಷಿಸಿದರು-೩೫. ಶತ್ರುವು ಹೆದರುವಂತೆ ಮಸೆದಿರುವ ವೀರಭಟರುಗಳ ಭಯಂಕರವಾದ ಆಯುಧಗಳಿಂದ
Page #468
--------------------------------------------------------------------------
________________
ದಶಮಾಶ್ವಾಸಂ / ೪೬೩ ವ|| ಆಗಳುಭಯಬಲಂಗಳೊಳಂ ಚಾತುರ್ಯಾಮಾವಸಾನಘಟಿತ ಘಂಟಕಾಧ್ವನಿಗಳುಂ ಸಂಧ್ಯಾಸಮಯಸಮುದಿತ ಶಂಖಧ್ವನಿಗಳುಂ ಪಂಚಮಹಾಶಬ್ದವ್ವನಿಗಳುಮೊಡನೊಡನೆ ನೆಗಟ್ಟು ವಾಗಳೆರಡುಂ ಬೀಡುಗಳೊಳಂ ಭೂರೆಂದಾರ್ದು ರವಳಿ ಘೋಷಿಸಿ ಕೊಳ್ಳಿವೀಸಿದಾಗ
ಕ೦li , ಉರಿಮುಟ್ಟಿದರಳೆಯಂತಂ
ಬರಮುರಿದತ್ತಜನ ಪದ್ಮವಿಷ್ಕರದೆಸಳಂ | ದರಸೀದುವಖಿಳ ದಿಗ್ವಿರ
ದರದಂಗಳ್ ಕರಮ್ ಕರಿಪುಗಾಳದುವಾಗಳ್ || ವ|| ಅಂತು ಕೊಳ್ಳಿವೀಸಿದಿಂಬಟೆಯಂಕಂ| ಧೃತ ಧವಳವಸನರಾರಾ
ಧಿತಶಿವರರ್ಚಿತ ಸಮಸ್ತಶಸ್ತರ್ ನೀರಾ | ಜಿತತುರಗರೊದರ್ ಕೆಲ ರತಿರಥ ಸಮರಥ ಮಹಾರಥಾರ್ಧರಥರ್ಕಳ್ || ಉಡಲುಂ ತುಡಲುಂ ವಸ್ತು ತುಡುಗೆಯನಾನೆಯುಮನರ್ಥಿಸಂತತಿಗೀಯಲ್ | ಬಿಡುವೊನ್ನುಮನಾಳಟ್ಟುವ ತೊಡರೊಳ್ ತೊಡರ್ದಿದ್ರರರಸುಮಕ್ಕಳ್ ಕೆಲಬರ್ ||
೩೮
ಭಯಂಕರವೂ ಆಶ್ಚರ್ಯಕರವೂ ಆಗಿ ಎದ್ದಿರುವ ಕೆಂಗಿಡಿಗಳು ತಗಲಿ ಆವರಿಸಲು ಮೇಲೆ ಹಾಯುವ ಹಾಗೆ ಹೊಳೆಯುತ್ತಿರುವ ಆ ಸಂಜೆಗೆಂಪು ಸಾಣೆಗೆ ಕೊಟ್ಟ ಇಟ್ಟಿಗೆಯ ಧೂಳೆನ್ನುವ ಹಾಗಿರಲು ಸೂರ್ಯನು ಮುಳುಗಿದನು. ವ|| ಆಗ ಎರಡು ಸೈನ್ಯಗಳಲ್ಲಿಯೂ ನಾಲ್ಕು ಯಾಮಗಳ ಕಡೆಯಲ್ಲಿ ಉಂಟಾಗುವ ಗಂಟೆಯ ಶಬ್ದಗಳೂ ಸಂಧ್ಯಾಕಾಲದಲ್ಲಿ ಶಂಖಧ್ವನಿಗಳೂ ಪಂಚಮಹಾಧ್ವನಿಗಳೂ ಜೊತೆಜೊತೆಯಲ್ಲಿಯೇ ಉಂಟಾದುವು. ಆಗ ಎರಡು ಬೀಡುಗಳಲ್ಲಿಯೂ ಭೋರೆಂದು ಸಾಮೂಹಿಕ ಶಬ್ದವನ್ನು ಘೋಷಿಸಿ ಆ ಯುದ್ಧಸೂಚಕವಾದ ದೀವಟಿಗೆಗಳನ್ನು ಬೀಸಿದರು. ೩೬. ಬೆಂಕಿ ತಗುಲಿದ ಹತ್ತಿಯಂತೆ ಆಕಾಶವು ಉರಿದುಹೋಯಿತು. ಬ್ರಹ್ಮನ ಕಮಲಾಸನದ ದಳಗಳು ಅರ್ಧ ಸುಟ್ಟವು. ಎಲ್ಲ ದಿಗ್ಗಜಗಳ ದಂತಗಳೂ ವಿಶೇಷವಾಗಿ ಕರಗಾದುವು ವll ಹಾಗೆ ಕೊಳ್ಳಿ ಬೀಸಿದ ಬಳಿಕ ೩೭. ಆ ಸೈನ್ಯದಲ್ಲಿ ವಸ್ತ್ರವನ್ನು ಧರಿಸಿದವರೂ ಶಿವನನ್ನು ಆರಾಧಿಸಿದವರೂ ಸಮಸ್ತ ಆಯುಧಗಳನ್ನು ಪೂಜಿಸಿದವರೂ ಕುದುರೆಗಳಿಗೆ ಆರತಿಯನ್ನೆತ್ತಿದವರೂ ಆದ ಕೆಲವರು ಅತಿರಥ, ಸಮರಥ, ಮಹಾರಥ, ಅರ್ಧರಥರುಗಳು ಪ್ರಕಾಶಿಸಿದರು. ೩೮. ಉಡಲು ವಸ್ತವನ್ನೂ ತೊಡಲು ಆಭರಣವನ್ನೂ ಆನೆಯನ್ನೂ ಯಾಚಕಸಮೂಹಕ್ಕೆ ಕೊಡಲು ಬಿಡಿ ಹೊನ್ನುಗಳನ್ನೂ ಸೇವಕರಿಗೆ ಕಳುಹಿಸುವ ಸಡಗರದಲ್ಲಿ ಕೆಲವು ಅರಸು ಮಕ್ಕಳು ತೊಡಗಿದ್ದರು.
Page #469
--------------------------------------------------------------------------
________________
೪೬೪ | ಪಂಪಭಾರತಂ
ವ|| ಆ ಪ್ರಸ್ತಾವದೊಳೊರ್ವಂ ತನ್ನ ದೋರ್ವಲದಗುರ್ವಿನೊಳುರ್ವಿಪತಿಯ ನಿಂತೆಂದಂಉll ನಾಳೆ ವಿರೋಧಿ ಸಾಧನ ಘಟಾಘಟಿತಾಹವದಲ್ಲಿ ನಿನ್ನ ಕ
ಟ್ಬಾಳಿಕೆ ಮುಂಚಿ ತಾಗದೊಡಮಳ್ಳು ತಾಗಿ ವಿರೋಧಿಸೈನ್ಯ ಭೂ | ಪಾಳರನೊಂದೆ ಪೊಯ್ಯದೊಡಮೀ ತಲೆ ಪೋದೊಡಮಟ್ಟೆಯಟ್ಟ ಕ ||
ಟ್ವಾಳನೆ ಮುಟ್ಟಿ ತಳಿಯದಿರ್ದೊಡಮಂಜಿದೆನಾಂ ಮಹೀಪತೀ || ೩೯
ವ|| ಎಂದು ತನ್ನ ಮನದ ಪೊಡರ್ಫುಮಂ ಕೂರ್ಪುಮನುಂಟುಮಾಡಿ ನುಡಿದಂ ಮತ್ತೊರ್ವಂ ತನ್ನನಾಳಂ ಪೆರ್ಚಿ ಪೊರೆದುದರ್ಕೆ ಕರಂ ಮೆಯ್ಯರ್ಚಿ ನುಡಿದಂಚಂil ಒದವಿದ ನಿನ್ನದೊಂದು ದಯೆ ಮೇಣ್ ಪಿರಿದೂ ನೆಗಳನ್ನ ಗಂಡುಮಾ
ದದಟುಮಳುರ್ಕೆಯುಂ ಪಿರಿದೊ ಸಂದಯಮಾದಪುದಿಂದಿಲ್ಲಿ ತೂ | ಗಿದೊಡತಿಯ ಬಾರದದು ಕಾರಣದಿಂ ರಿಪುಭೂಪ ದಂತಿದಂ ತದ ತೊಲೆಯೊಳ್ ಪರಾಕ್ರಮದಿನನ್ನನೆ ಭೂಪತಿ ತೂಗಿ ತೋಜನೇ ೪೦
ವ|| ಎಂದು ತನ್ನ ಸೆರಗುಂ ಬೆರಗುಮಿಲ್ಲದ ಕಲಿತನಮನಳಿಯ ನುಡಿದ ಮತ್ತಮೊಂದೆಡೆ ಯೊಳೊರ್ವ ವೀರಭಟನುದಾರ ವೀರರಸರಸಿಕನಾಗಿಚಂ|| ಕುದುರೆಯನೇದಂಬೆರಸು ಸೌಳೆನೆ ವೋಗಿರೆ ಪೊಯ್ಯುಮೆಯ್ದೆ ಕ
ಟ್ನದಿರೊಳೆ ನೂಕಿದಾನೆಗಳ ಕೋಡುಗಳಂ ಬಳೆವೋಗೆ ಪೊಯ್ಯುಮಾಂ | ತದಟರನೊಂದವೊಯ್ದುಮರಡುಂ ಬಲಮನ್ನನೆ ನೋಡ ತಕ್ಕಿನ
ನದಟುಮನನ್ನ ವೀರಮುಮನಾಜಿಯೊಳೆನ್ನರಸಂಗ ತೋಜುವೆಂ || ೪೧ ವ|| ಆ ಸಂದರ್ಭದಲ್ಲಿ ಒಬ್ಬನು ತನ್ನ ತೋಳಬಲದ ಆಧಿಕ್ಯದಿಂದ ರಾಜನಿಗೆ ಹೀಗೆ ಹೇಳಿದನು -೩೯. ಎಲೈ ರಾಜನೆ ನಾಳೆ ನಡೆಯಲಿರುವ ಶತ್ರುಸೈನ್ಯದ ಗಜಯುದ್ದದಲ್ಲಿ ನಿನ್ನ ಶೂರರಿರಲು ಅವರನ್ನು ಮುಂಚಿ ಶತ್ರುಸೈನ್ಯವನ್ನು ಪ್ರತಿಭಟಿಸುತ್ತೇನೆ. ಭಯವುಂಟಾಗುವಂತೆ ತಗುಲಿ ಶತ್ರುರಾಜರನ್ನು ಒಂದೇಸಮನಾಗಿ ಹೊಡೆದು ಹಾಕುತ್ತೇನೆ. ಈ ತಲೆ ಹೋದರೂ ಮುಂಡವೇ ಶೂರರನ್ನು ಬೆನ್ನಟ್ಟಿ ಹೋಗಿ ತಗಲಿ ಕತ್ತರಿಸುತ್ತದೆ. ಹಾಗೆ ಮಾಡದಿದ್ದರೆ ನಾನು ಅಂಜಿದವನಾಗುತ್ತೇನೆ. ವಗಿ ಎಂದು ತನ್ನ ಮನದ ಉತ್ಸಾಹವನ್ನೂ ಕೆಚ್ಚನ್ನೂ ಪ್ರದರ್ಶನ ಮಾಡಿ ತೋರಿಸಿದನು. ಮತ್ತೊಬ್ಬನು ತನ್ನ ಯಜಮಾನನು ತನ್ನನ್ನು ವಿಶೇಷವಾಗಿ ಸಾಕಿದುದಕ್ಕೆ ತೃಪ್ತಿಗೊಂಡು ಮೆಯ್ಯುಬ್ಬಿ ಮಾತನಾಡಿದನು-೪೦. ನನ್ನಲ್ಲಿ ನಿನಗುಂಟಾದ ದಯೆ ಹೆಚ್ಚಿನದೊ ಅಥವಾ ನನ್ನ ಪ್ರಸಿದ್ಧವಾದ ಪೌರುಷವೂ ಪರಾಕ್ರಮವೂ ಕೀರ್ತಿಯೂ ದೊಡ್ಡದೋ ಎನ್ನುವುದು ಸಂದೇಹವಾಗಿದೆ. ಇಲ್ಲಿ ಇವೆರಡನ್ನೂ ತೂಗಿ ನೋಡಲು ಸಾಧ್ಯವಿಲ್ಲ. ಆದುದರಿಂದ ಶತ್ರುರಾಜರ ಆನೆಯ ದಂತದ ತಕ್ಕಡಿಯಲ್ಲಿ ಪರಾಕ್ರಮದ ದೃಷ್ಟಿಯಿಂದ ನನ್ನನ್ನು ತಾನೇ ತೂಗಿ ತೋರಿಸುತ್ತೇನೆ. ವ|| ಎಂದು ತನ್ನ ಭಯವೂ ಅಪಾಯವೂ ಇಲ್ಲದ ಶೌರ್ಯವನ್ನು ಸ್ಪಷ್ಟವಾಗಿ ಪ್ರದರ್ಶಿಸಿದನು. ಬೇರೊಂದು ಸ್ಥಳದಲ್ಲಿ ವೀರಭಟನು ಔದಾರ್ಯದಿಂದ ಕೂಡಿದ ವೀರರಸದಲ್ಲಿ ಮಗ್ನನಾಗಿ ನುಡಿದನು. ೪೧. ಹತ್ತಿದ ಕುದುರೆಯೊಡನೆ ಸವಾರನನ್ನು 'ಸಿಲ್' ಎಂದು ಕತ್ತರಿಸುವ ಹಾಗೆ ಚೆನ್ನಾಗಿ ಹೊಡೆದು,
Page #470
--------------------------------------------------------------------------
________________
ದಶಮಾಶ್ವಾಸಂ | ೪೬೫ ವll ಎಂದರಭಸ ರಣವ್ಯಸನಮನಾತೀಯಶಾಸನಾಯಂ ಮಾಡಿದಂ ಮತ್ತೋರ್ವ ನತ್ಯುಗ್ರ ಮಂಡಳಾಗ್ರಮನನುಗೆಯ್ದು ವೀರಗ್ರಹಗ್ರಸ್ತನಾಗಿಚಂಗಿ ಸಿಡಿಲೋಳೆ ತಳ್ಳು ಪೂರ್ವ ಸಿಡಿಲಂತಿರೆ ಬಾಳೋಳೆ ಬಾಳ್ ಪಳಂಚಿ ಮಾ
ರ್ಕಿಡಿವಿಡ ನೋಡಲಂಜಿ ದೆಸೆದೇವತೆಗಳ್ ಪೆಂಪಿಂಗೆ ತೋಳ ತೀನ್ || ಕಿಡೆ ನಲಿದೊಂದೆರಬುದುರೆಯಟ್ಟೆಯುಮೊಂದೆರಡಾನೆಯಟ್ಟೆಯುರಿ ತೊಡರ್ದೊಡನಾಡೆ ತಳಿಯದಿರ್ದೊಡ ಜೋಳಮನೆಂತು ನೀಗುವೆಂ || ೪೨
ವ|| ಎಂದು ನಿಜಭುಜವಿಜಯಮನಪ್ಪುಕೆಯ್ದು ನುಡಿದಂ ಮತ್ತೊರ್ವನಲ್ಲಿಯೆಮ|| ಸುರಲೋಕಂ ದೊರಕೊಳ್ಳುದೊಂದು ಪರಮ ಶ್ರೀಲಕ್ಷ್ಮಿ ಯುಂ ಬರ್ಪುದಾ
ದರದಿಂ ದೇವನಿಕಾಯದೊಳ್ ನೆರೆವುದೊಂದುತ್ತಾಹಮುಂ ತನ್ನ ಮ | ↑ರಿ ಭಾಗ್ಯಂ ನೆರಮಪ್ಪುದೊಂದೆ ರಣದೊಳ್ ಗೆಲಾಜಿಯಂ ತಳು ಸಂ ಗರದೊಳ್ ಜೋಳದ ಪಾಳೆಯಂ ನೆರಪಿದಂ ಗಂಡಂ ಪೆಣಂ ಗಂಡನೇ || ೪೩ ವ|| ಎಂದು ನುಡಿದಂಮll ತವ ಮಾಜಾಂತ ಬಲಂ ಕಲುಟಿದು ತನ್ನಾಳಂ ಕರಂ ಮಚ್ಚೆ ಗೆ
ಅವನಂ ಶ್ರೀವಧು ಪತ್ತುಗುಂ ಮಡಿದನಂ ದೇವಾಂಗನಾನೀಕಮು | ತೃವದಿಂದುಯುಮದಂತುಮಿಂಬು ಸುಭಟಂಗಿಂತಪ್ಪುದಂ ಕಂಡುಮಂ
ಜುವನೇಕಂಜುವನೆಂದು ಪರ್ಚಿ ನುಡಿದಂ ಮತ್ತೊರ್ವನಾಸ್ಥಾನದೊಳ್ ll೪೪ ನೇರ ಎದುರಾಗಿ ನುಗ್ಗಿದ ಆನೆಗಳ ಕೊಂಬುಗಳನ್ನು ಅವುಗಳ ಅಣಸು ಬಿದ್ದುಹೋಗುವಂತೆ ಎದುರಿಸಿದ ಶೂರರನ್ನೂ ಒಟ್ಟಿಗೆ ಧ್ವಂಸ ಮಾಡಿ ಎರಡು ಸೈನ್ಯಗಳೂ ನನ್ನನ್ನೇ ನೋಡುವಷ್ಟು ಸಮರ್ಥವಾದ ನನ್ನ ಪರಾಕ್ರಮವನ್ನೂ ನನ್ನ ವೀರವನ್ನೂ ಯುದ್ದದಲ್ಲಿ ನನ್ನ ಸ್ವಾಮಿಗೆ ತೋರಿಸುತ್ತೇನೆ ವll ಎಂದು ಅತ್ಯಂತ ರಭಸದಿಂದ ಕೂಡಿದ ತನ್ನ ಯುದ್ಧಾಸಕ್ತಿಯನ್ನು ತೋರ್ಪಡಿಸಿಕೊಂಡನು. ಮತ್ತೊಬ್ಬನು ಬಹಳ ಭಯಂಕರವಾದ ಕತ್ತಿ ಸಿದ್ಧಪಡಿಸಿಕೊಂಡು ಪರಾಕ್ರಮವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾದನು. ೪೨, ಸಿಡಿಲನ್ನು ಸಂಧಿಸಿ ಹೋರಾಡುವ ಸಿಡಿಲಿನಂತೆ ಕತ್ತಿಯಲ್ಲಿ ಕತ್ತಿಯು ಘಟ್ಟಿಸಿ ಎದುರು ಕಿಡಿಗಳನ್ನು ಚೆಲ್ಲುತ್ತಿರಲು ಅದನ್ನು ನೋಡಿ ದಿಗ್ಗೇವತೆಗಳೆಲ್ಲ ಹೆದರಿ ಹಿಮ್ಮೆಟ್ಟುತ್ತಿರಲು ತೋಳಿನ ನವೆಯು ತೀರುವ ಹಾಗೆ ಒಂದೆರಡು ಕುದುರೆಯ ಮುಂಡಗಳೂ ಒಂದೆರಡಾನೆಯ ಮುಂಡಗಳೂ ಕತ್ತಿಗೆ ಸಿಕ್ಕಿ ಜೊತೆಯಲ್ಲಿ ಕುಣಿಯುವಂತೆ ಸಂತೋಷದಿಂದ ಸಂಧಿಸಿ ಕಾದದಿದ್ದರೆ ಜೋಳದ ಋಣವನ್ನು ನಾನು ಹೇಗೆ ತೀರಿಸುತ್ತೇನೆ ? ವ|| ಎಂದು ತನ್ನ ತೋಳಿನ ಜಯವನ್ನು ಕ್ರಯಿಸಿ ಮಾತನಾಡಿದನು. ಅಲ್ಲಿಯೇ ಮತ್ತೊಬ್ಬನು ೪೩, ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ, ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಮತ್ತೊಂದ ಫಲ. ನನ್ನ ಉತ್ಸಾಹವೂ ಮೆಯ್ದಿರಿಯೂ ಹೆಚ್ಚುವುದು. ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಅನ್ನದ ಋಣವನ್ನು ತೀರಿಸಿದವನೇ ನಿಜವಾಗಿ ಶೂರ. ಬೇರೆಯವನು ಶೂರನೇ ವ|| ಎಂಬುದಾಗಿ ಹೇಳಿದನು. ೪೪. ಪ್ರತಿಭಟಿಸಿದ ಸೈನ್ಯವು ಸಂಪೂರ್ಣವಾಗಿ ನಾಶವಾಗುವಂತೆ
Page #471
--------------------------------------------------------------------------
________________
೪೬೬ / ಪಂಪಭಾರತಂ
ವ|| ಅಂತು ನುಡಿದೆರಡುಂ ಬಲಂಗಳುಂ ತಂತಮ್ಮ ವೀರಮಂ ಚಾಗಮಂ ಮೆದು ತಮ್ಮ ಕೆಯ್ದುಗಳನರ್ಚಿಸಿ ದರ್ಭಶಯನಂ ಮಾಡಿ ಪಲ್ಲಂ ಸುಲಿದು ಶಸ್ತ್ರಸಂಗ್ರಹರಾಗಿ ಪಲರುಂ ವೀರಭಟರ್ ತಮ್ಮಂ ತಾಮ ಪರಿಚ್ಛೇದಿಸಿರ್ದರು ಮತ್ತಮೊರ್ವಂ ತನ್ನ ನಲ್ಲಳಿಂತೆಂದನೀ ಪೊ ಪೊತ್ತು ನಾಳೆ ದೇವಲೋಕದ ಕನ್ನಕೆಯರೋಲಗದೊಳಿರ್ಪನೆಂದು ನುಡಿಯೆ ನೀನೆಂದಂತು ಪೋಗಲ್ ತೀರದು ನಾಳೆ ಮಗುಟ್ಟು ಬಂದೆನ್ನೊಳ್ ನೆರೆವೆಯೆಂದು ಪೇಟೆ ನಿನಗಳವುಂಟೆ ಎಂದು ಕೇಳೆಯನ್ನೋಲೆವಾಗ್ಯಮುಂಟೆಂದಳ ಮತ್ತವೊಂದೆಡೆಯೊಳೊರ್ವಳ್ ದರ್ಭಶಯನಸ್ಥನಾದ ನಿಜಪ್ರಾಣೇಶ್ವರನ ಪರಿಚ್ಛೇದಮನಂದು ತನ್ನ ಸಾವಂ ಪರಿಚ್ಛೇದಿಸಿ
611 ತಾಂ ಗಡ ನಾಳೆ ಪೋಗಿ ದಿವಿಜಾಂಗನೆಯೊಳ್ ತೊಡದಿರ್ಪನಲ್ಲಿ ಮಾ ಸ್ಟಾಂ ಗಡಮಿರ್ಪೆನಂತನಿತು ಬೆಳ್ಳಿಗೆ ಮುನ್ನಮೆ ಪೋಗಿ ನಲೆಗೆ | ಅಂಗೊಳೆ ದೇವಲೋಕದೊಳಧೀಶನನಾನಿದಿರ್ಗೊಳ್ಳೆನೋವೂ ಸ ಗಂಗಳೊಳಿರ್ಪ ದೇವಡಿತಿ ತೊರೊಳಯನಾಗಲೀವನೇ ||
೪೫
ವ|| ಎಂದು ಕೈದವಮಿಲ್ಲದ ನಲೆಯಂ ನಾಲಗೆಯ ತುದಿಗೆ ತಂದು ನುಡಿದಳ ಮತ್ತೋರ್ವಳ್ ತನ್ನಾಣನ ದೋರ್ವಲದಗುರ್ವ೦ ನೆಚ್ಚಿ
ಗುರಿಯಿಟ್ಟು ಹೊಡೆದು ತನ್ನ ಸ್ವಾಮಿಯು ವಿಶೇಷವಾಗಿ ಮೆಚ್ಚುವಂತೆ ಗೆದ್ದವನು ಅಪಾರವಾದ ಐಶ್ವರ್ಯವನ್ನು ಪಡೆಯುತ್ತಾನೆ. ದೇವಸ್ತ್ರೀಯರ ಸಮೂಹವು ಸಂತೋಷದಿಂದ ಸ್ವಾಗತಿಸುತ್ತದೆ. ಇವೆರಡೂ ಸುಭಟನಿಗೆ ಸಂತೋಷಕರವಾದುದೇ. ಹೀಗಿರುವುದನ್ನು ತಿಳಿದೂ ಹೆದರುವವನು ಏಕೆ ಹೆದರುತ್ತಾನೆ ಎಂದು ಮತ್ತೊಬ್ಬನು ಆ ರಾಜಸಭೆಯಲ್ಲಿ ಉಬ್ಬಿ ಹೇಳಿದನು. ವ| ಹೀಗೆ ಮಾತನಾಡಿ ಎರಡು ಸೈನ್ಯದವರೂ ತಮ್ಮ ತಮ್ಮ ವೀರವನ್ನೂ ತ್ಯಾಗವನ್ನೂ ಪ್ರದರ್ಶಿಸಿ ತಮ್ಮ ಆಯುಧಗಳನ್ನು ಪೂಜಿಸಿ ದರ್ಭೆಯ ಮೇಲೆ ಮಲಗಿ, ಹಲ್ಲನ್ನು ತೊಳೆದು ಶಸ್ತ್ರಧಾರಿಗಳಾಗಿ ಅನೇಕ ವೀರಭಟರು ತಮ್ಮ ವಿಷಯವನ್ನು ತಾವೇ ನಿಶ್ಚಯಿಸಿದರು. ಆ ಕಡೆ ಮತ್ತೊಬ್ಬನು ತನ್ನ ಪ್ರಿಯಳೊಡನೆ ಹೀಗೆಂದನು. ಈ ಹೊತ್ತೇ ಹೊತ್ತು. ನಾಳೆ ದೇವಲೋಕದ ಸ್ತ್ರೀಯರಲ್ಲಿ ಸಂತೋಷದಿಂದಿರುತ್ತೇನೆ ಎಂದು ಹೇಳಿದನು. ಅವಳು “ನೀನು ಹೇಳಿದ ಹಾಗೆ ಹೋಗುವುದು ಸಾಧ್ಯವಿಲ್ಲ. ನಾಳೆ ಪುನಃ ನೀನು ಬಂದು ನನ್ನಲ್ಲಿ ಸೇರುತ್ತೀಯ' ಎಂದಳು. “ಅದು ನಿನಗೆ ಹೇಗೆ ಗೊತ್ತು' ಎಂದು ಪ್ರಶ್ನಿಸಿದನು. ಅವಳು 'ನನ್ನ ಓಲೆಭಾಗ್ಯವುಂಟು' ಎಂದಳು. ಬೇರೊಂದು ಕಡೆಯಲ್ಲಿ ಒಬ್ಬಳು ದರ್ಭೆಯ ಹಾಸಿಗೆ ಯಲ್ಲಿದ್ದ ತನ್ನ ಪತಿಯ ನಿಶ್ಚಯವನ್ನು ತಿಳಿದು ತನ್ನ ಸಾವನ್ನು ನಿಷ್ಕರ್ಷಿಸಿ ೪೫. ನನ್ನ ಪತಿಯು ನಾಳೆ ಹೋಗಿ ದೇವತಾಸ್ತ್ರೀಯರಲ್ಲಿ ಸೇರಿರುತ್ತಾನೆ, ಇಲ್ಲಿ ನಾನು ಮಾತ್ರ ಇರುತ್ತೇನಲ್ಲವೆ? ಅಷ್ಟು ದಡ್ಡಳೇ ನಾನು! ಮೊದಲೇ ಹೋಗಿ ನನ್ನ ಸದ್ಗುಣವು ಪ್ರಕಾಶವಾಗುವ ಹಾಗೆ ದೇವಲೋಕದಲ್ಲಿ ನನ್ನ ಪತಿಯನ್ನು ಇದಿರುಗೊಳ್ಳುತ್ತೇನೆ. ಓಹೋ ಸ್ವರ್ಗದಲ್ಲಿರುವ ದೇವಸ್ತ್ರೀಯರೆಂಬ ದಾಸಿಯರಲ್ಲಿ (ನನ್ನ ಪತಿಯು) ಪ್ರೀತಿಸುವುದಕ್ಕೆ ಅವಕಾಶ ಕೊಡುತ್ತೇನೆಯೇ? ವ|| ಎಂದು ಕಪಟವಿಲ್ಲದ ತನ್ನ ಪ್ರೇಮವನ್ನು ನಾಲಗೆಯ ತುದಿಗೆ ತಂದು ಸ್ಪಷ್ಟವಾಗಿ ಹೇಳಿದಳು. ಮತ್ತೊಬ್ಬಳು ತನ್ನ
Page #472
--------------------------------------------------------------------------
________________
ದಶಮಾಶ್ವಾಸಂ / ೪೬೭ ಚಂ|| ಜಳಧಿಯೊಳಾದ ಮುತ್ತುಗಳವೇಂ ಪೊಸತಾದುವ ನಿನ್ನ ತೋಳ ಬಾ
ಲೋಳೆ ಬಲಗರ್ವದಿಂ ತೆಗೆದುದರ ವಿರೋಧಿ ಮದೇಭ ಮಸ್ತಕ | ಸ್ಥಳ ಜಳರಾಶಿಯೊಳ್ ಬಳೆದ ನಿರ್ಮಳ ನಿರ್ವಣ ವೃತ್ತಮಕ್ರಿಕಾ
ವಳಿಯನ ತರ್ಪುದೆಂದು ನುಡಿದಳೊಳಾಳಿಸಿದಳ್ ನಿಜೇಶನಂ || ೪೬
ವ|| ಅಂತುಭಯ ಬಲಂಗಳೊಳಂ ವೀರಜನಜನಿತಾಳಾಪಂಗಳ್ ನಗುತಿ ವಿಕ್ರಮಾರ್ಜುನನನಂತನುಂ ತಾನುಂ ಜಲಕ್ಕನಿರೆ ಪಲ್ಲಂ ಸುಲಿದಗಣ್ಯ ಪುಣ್ಯ ತೀರ್ಥೋದಕಂಗಳಂ ಮಿಂದು ಮಂಗಳವಸದನಂಗೊಂಡು ಸಾಮಾನ್ಯಯಜ್ಞಂಗೆಯ್ದು ಪಲವುಂ ತಂದ ಪಕ್ಗಳೆಸೆಯ ನಾಂದೀಮುಖಮಂ ನಿರ್ವತಿ್ರಸಿ ಶುಭಲಕ್ಷಣಲಕ್ಷಿತನುಂ ಸನ್ನಾಹಕರ್ಮನಿರ್ಮಿತನುಂ ಹಸ್ತಾಯುಧ ಕುಶಳನುಂ ಭದ್ರಮನನುಮಪ್ಪ ವಿಜಯಗಜಮುಮನಕ್ಷಯರಥಾಶ್ವಕೇತನ ಶರಾಸನ ಶರಧಿ ವಿಚಿತ್ರ ತನುತ್ರ ವಿವಿಧಾಸ್ತಶಸ್ತಂಗಳುಮಂ ಗಂಧ ಧೂಪ ದೀಪಾದಿಗಳಿಂದರ್ಚಿಸಿ ಪೊಡವಟ್ಯಾಗಲ್ಕoll ಬೆಳಗುವ ಸೊಡರ್ಗಳ ಬೆಳಗುವ
ನಿಳಿಸಿ ತಬತ್ತಟಿಸಿ ಪೊಳೆಯ ತಮ್ಮಯ ಬೆಳಗ | ಗಳಿಸಿ ತಟತಟಿಸಿ ವಿದ್ಯು ದ್ವಿಳಸಿತಮನಿಸಿದುವು ನರನ ದಿವ್ಯಾಸ್ತಂಗಳ್ ||
೪೭
ಒಡೆಯನ ಬಾಹುಬಲದ ಆಧಿಕ್ಯವನ್ನು ನಂಬಿ ೪೬. ಸಮುದ್ರದಲ್ಲಿ ಹುಟ್ಟಿದ ಮುತ್ತುಗಳು ಮಹತ್ತಾದುವೇನು ? ನಿನ್ನ ತೋಳೆಂಬ ಕತ್ತಿಯಿಂದ ಬಲಪ್ರದರ್ಶನಮಾಡಿ ಉದ್ದಾರ ಮಾಡಿದ ಭಯಂಕರವಾದ ಶತ್ರುರಾಜರ ಮದ್ದಾನೆಯ ಕುಂಭಸ್ಥಳವೆಂಬ ಮುತ್ತುಗಳೇ ಅನರ್ಥ್ಯವಾದುವು. ಅವು ನಿರ್ಮಲವೂ ಊನವಿಲ್ಲದುದೂ ದುಂಡಾದುದೂ ಆಗಿವೆ. ಆ ಮುತ್ತಿನ ರಾಶಿಯನ್ನೇ ತಂದುಕೊಡಬೇಕು ಎಂದು ಪ್ರೀತಿಯಿಂದ ನುಡಿದು ತನ್ನ ಪತಿಯನ್ನು ಸಮಾಧಾನಪಡಿಸಿದಳು. ವ|| ಹಾಗೆ ಎರಡು ಸೈನ್ಯದಲ್ಲಿಯೂ ವೀರಾಲಾಪಗಳು ಮೊಳಗುತ್ತಿದ್ದುವು. ವಿಕ್ರಮಾರ್ಜುನನೂ ಕೃಷ್ಣನೂ ನಿರ್ಮಲವಾಗಿ ಹಲ್ಲನ್ನು ತೊಳೆದು ಅಸಂಖ್ಯಾತವಾದ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ ಮಂಗಳಾಭರಣಗಳನ್ನು ತೊಟ್ಟು ನಿತ್ಯಕರ್ಮಗಳನ್ನು ಮುಗಿಸಿದರು. ನಾನಾ ರೀತಿಯ ವಾದ್ಯಗಳು ಮೊಳಗುತ್ತಿರಲು ನಾಂದಿಮುಖವೆಂಬ ಪಿತೃಕಾರ್ಯವನ್ನು ಮುಗಿಸಿದರು. ಶುಭಲಕ್ಷಣಗಳಿಂದ ಕೂಡಿದುದೂ ಯುದ್ಧಕಾರ್ಯಕ್ಕೆ ಸಿದ್ದಮಾಡಲ್ಪಟ್ಟುದೂ ಕರಕೌಶಲ್ಯ ಉಳ್ಳುದೂ ಭದ್ರಜಾತಿಗೆ ಸೇರಿದುದೂ ಆದ ವಿಜಯಗಜವನ್ನೂ ನಾಶವಿಲ್ಲದ ತೇರು, ಕುದುರೆ, ಧ್ವಜ, ಬಿಲ್ಲು, ಬಾಣ, ಕವಚ, ವಿವಿಧ ಅಸ್ತ ಶಸ್ತ- ಮೊದಲಾದುವುಗಳನ್ನೂ ಗಂಧ,ಧೂಪ, ದೀಪ, ಮೊದಲಾದವುಗಳಿಂದ ಪೂಜಿಸಿ ನಮಸ್ಕರಿಸಿದರು. ೪೭. ಅರ್ಜುನನ ದಿವ್ಯಾಸ್ತಗಳು ಅಲ್ಲಿ ಕಾಂತಿಯುಕ್ತವಾಗಿ ಪ್ರಕಾಶಮಾನವಾಗಿದ್ದ ದೀಪದ ಬೆಳಕನ್ನು ಕೀಳುಮಾಡಿ ಥಳಥಳನೆ ಹೊಳೆಯಲು ತಮ್ಮ ಕಾಂತಿಯು ಅತ್ಯಧಿಕವಾಗಿ ಮಿಂಚಿನಿಂದ ಕೂಡಿದುವೋ ಎಂಬಂತೆ ಪ್ರಕಾಶಿಸಿದುವು.
Page #473
--------------------------------------------------------------------------
________________
೪೬೮ / ಪಂಪಭಾರತಂ ಕಂ| ಕೊಡರ್ಗುಡಿಯ ಕೆಂಪಿನೋಲ್ ಕಂ
ಪಿಡಿದಿರೆ ರಿಪುನೃಪತಿಬಲದ ಶೋಣಿತಜಳಮಂ | ಕುಡಿಯದೆಯುಂ ದಲ್ ಮುನ್ನಮೆ ಕುಡಿದಂತೆಸೆದಿರ್ದುವರಿಗನಸ್ತಚಯಂಗಳ 11
೪೮ ವll ಅಂತಾಯಿರುಳಂ ವಿಜಯಂ ವಿಜಯೋದ್ಯೋಗದೂಳ್ ಕಳೆಯ ಬೆಳಗಪ್ಪ ಜಾವದೊಳ್ ಬೀಡುವೀಡುಗಳೆಲ್ಲಂ ತೋಲಲ್ಲೇಕಿರ್ಪೀರೇಟಿಂ ಪಣಿಮನೆಈಗ ತಂಡದ ಕೀತಿ ಸಾಕುವ ಪಲರ್ ಪಡೆವಳ್ಳರ ಮಾತುಗಳ ಮನಂ
ಗೊಂಡಿರೆ ಸನ್ನಣಂದುಡುವ ಪಣುವ ಬಾಚಿಯವಂದಿರಂ ಮರು | ಲೈಂಡವೊಲೂಲ್ಯ ಬಗ್ಗಿಸುವ ಬೇಗದೂಳಾ ಕಟಕಂಗಳೆಯ ಕೆ
ಆ್ಯಂಡುವು ಮಂದರ ಕ್ಷುಭಿತ ದುಗ್ಗಪಯೋಧಿ ಗಭೀರನಾದಮಂ || ೪೯ ಚoll ಕತ ವಿವಿದಾಸ ವೀರಭಟಕೋಟ ಭಯಂಕರವಾಗ ಬೀಸುವಾ
ವುತಿಯ ಕಳಂಕ ಪಂಕದೊಳೆ ಪೆರ್ಚದ ಕಲೆ ತೀವ್ರ ಶಸ್ತ್ರಸಂ | ಹತಿಗಳ ದೀಪ್ತಿಯಿಂ ಬಿಸುಗೆಯಾಗಿ ಕರಂ ಪೊಗರ್ವಟ್ಟಗುರ್ವುಮ
ದ್ಭುತಮುಮನೀಯ ಪಣಿದುವು ಪಾಂಡವ ಕೌರವ ರೌದ್ರಸಾಧನಂ || ೫೦ ವll ಅಂತೆರಡುಂ ಪಡೆಗಳುಂ ಪಣ್ಣಪಣ್ಣನ ಪಣ್ಣ ಕಾಳಗಕ್ಕೆ ನಡೆಯತೊಡರಿಸಿದಾಗ
೪೮. ಆತನ ಬಾಣಸಮೂಹವು ದೀಪದ ಕುಡಿಯ ಕೆಂಪುಬಣ್ಣದಿಂದ ಕೆಂಪಾಗಿ ಶತ್ರುರಾಜರ ರಕ್ತಜಲವನ್ನು ಕುಡಿಯದಿದ್ದರೂ ಅದಕ್ಕೆ ಮೊದಲೇ ಅವು ಕುಡಿದಿದ್ದಂತೆ ಶೋಭಾಯಮಾನವಾಗಿದ್ದುವು. ವ|| ಹಾಗೆ ಈ ರಾತ್ರಿಯನ್ನು ಅರ್ಜುನನು ಯುದ್ಧೋದ್ಯೋಗದಲ್ಲಿಯೇ ಕಳೆದು ಬೆಳಗಿನ ಜಾವದಲ್ಲಿ ಬೀಡು ಬೀಡುಗಳಲ್ಲೆಲ್ಲ ಅಲೆದು “ಏಕೆ ಸುಮ್ಮನಿದ್ದೀರಿ ಎದ್ದು ಸಿದ್ದರಾಗಿ' ಎಂದನು. ೪೯. ಗುಂಪುಗುಂಪಾಗಿ ಕೋಪಿಸಿಕೊಂಡು ಸಾರಿ ಹೇಳುತ್ತಿರುವ ಅನೇಕ ಸೇನಾನಾಯಕರ ಮಾತುಗಳು ಮನಸ್ಸನ್ನು ಸೆಳೆಯುತ್ತಿರಲು, ಕಡಿವಾಣವನ್ನು ತೊಡಿಸುವ, ಯುದ್ಧಕ್ಕೆ ಅಣಿಮಾಡುತ್ತಿರುವ, ಕೆಲಸದಲ್ಲಿರುವವರನ್ನು ಹುಚ್ಚು ಹಿಡಿದವರ ಹಾಗೆ ಹೆದರಿಸುತ್ತಿರುವ ಆ ಸೈನ್ಯವು ವೇಗದಲ್ಲಿ ಮಂದರಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಗಭೀರನಾದವನ್ನು ಅಂಗೀಕಾರಮಾಡಿತು. ೫೦. ನಾನಾವಿಧವಾದ ಅಸ್ತಶಸ್ತಗಳಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವ ವೀರಭಟರ ಸಮೂಹವು ಭಯವಾಗುವ ಹಾಗೆ ಬೀಸುತ್ತಿರುವ ಆವುತಿಯೆಂಬ ಆಯುಧದ ಕರೆಯೆಂಬ ಕೆಸರಿನಲ್ಲಿಯೇ ಹೆಚ್ಚಾದ ಕತ್ತಲೆಯು ಹರಿತವಾದ ಶಸ್ತ ಸಮೂಹಗಳ ಕಾಂತಿಯೊಡನೆ ಚೆನ್ನಾಗಿ ಬೆಸೆದುಕೊಂಡು ಕಾಂತಿಯುಕ್ತವಾಗಿ ಭಯವನ್ನೂ ಆಶ್ಚರ್ಯವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿರಲು ಪಾಂಡವ ಕೌರವರ ಭಯಂಕರವಾದ ಸೈನ್ಯಗಳು ಯುದ್ಧಕ್ಕೆ ಸಿದ್ದವಾದುವು. ವ|| ಹಾಗೆ ಎರಡು ಸೈನ್ಯಗಳೂ ಮೆಲ್ಲಮೆಲ್ಲನೆ ಯುದ್ಧಸನ್ನದ್ದವಾಗಿ ಯುದ್ಧಕ್ಕೆ ಹೊರಡಲು ಪ್ರಾರಂಭಿಸಿದಾಗ ಸೂರ್ಯೊದಯ
Page #474
--------------------------------------------------------------------------
________________
ದಶಮಾಶ್ವಾಸಂ / ೪೬೯ ಲೋಕಚಕ್ಕು ನವ ಕಮ ಲಾಕರ ಬಾಂಧವನನೇಕ ದಿತಿಸುತ ಸಮರಾ | ನೀಕ ಭಯಂಕರನೆರಡುಮ ನೀಕಂಗಳನಡರೆ ನೋಡುವಂತುದಯಿಸಿದಂ ||
೫೧ ವ|| ಆಗಳೇಳೆಸಿದ ಬೆಸುಗೆಗಳುಮಿಕ್ಕಿದ ಲೋಹವಕ್ಕರೆಗಳುಮುರ್ಚಿದ ಮೊಗವಡಂಗಳುಂ ಕಟ್ಟದ ಪಬಯಿಗೆಗಳುಮೊಟ್ಟದ ಮೂವತ್ತೆರಡಾಯುಧಂಗಳುಂ ಬೆರಸeಂಕವೆರಸಿದ ಕುಲಗಿರಿಗಳೆ ತಳರ್ವಂತ ತಳರ್ವ ಮದಾಂಧಗಂಧಸಿಂಧುರಂಗಳುಮಂ ಚಕಚೇತೃತನಾದದೊಳ್ ದಿಕ್ಷಕ ಮುಮಂ ಚಕ್ರಘಾತದೂ ಧರಾಚಕ್ರಮನಾಕ್ರಮಿಸಿ ನಿಶಾತಕೇತಿಗರ್ಭಂಗಳುಮನೇಕ ಪ್ರಕಾರ ಕೇತನ ವಾಜಿರಾಜಿಗಳುಮಾಗಿ ದೊಮ್ಮಳಿಸಿ ನಡೆವ ರಥಂಗಳುಮಂ ಕಣ್ಣುಂ ಖುರಮುಂ ತೋಟಿ ಪಕ್ಕರೆಯಿಕ್ಕಿ ಪೊಳೆವ ಪೊನ್ನ ಪರ್ಯಾಣಂಗಳುಮಸೆಯ ಘೋಳಾಯ್ದರ್ ಪೊಳೆಯಿಸಿ ಬಿಸಿಲ್ಗುದುರೆಗಳ ಪೊಳೆವಂತ ಪೊಳೆವ ಕಡುಗುದುರೆಗಳುಮಂ ಮಿಡುಮಿಡುಕನೆ ಮಿಡುಕುವ ಸಿಡಿಲೇಬಿಯುಮಂ ಕೋಳಸಗಿದ ಪುಲಿಯ ಪಿಂಡುಗಳುಮನನುಕರಿಸಿ ನಡೆವಣಿಯ ಸಂದಣಿಯುಮಂ ಕಾಬ್ರುಜು ಮಸಗಿದಂತೆ ಮಸಗಿದ ದುರ್ಧರ ಧನುರ್ಧರಬಲಮುಮಂ ಶ್ವೇತ ಭೀಷರ ಪೇಜೆಯೊಳೆರಡುಂ ಪಡೆಗಳ ಪಡವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೊಡ್ಡಿ ನಿಂದಾಗಳ್
ವಾಯಿತು, ೫೧. ಲೋಕಚಕ್ಷು, ಕಮಲಬಾಂಧವನೂ ಭಯಂಕರನೂ ಆದ ಸೂರ್ಯನು ಎರಡೂ ಸೈನ್ಯಗಳನ್ನು ಮೇಲಿಂದ ನೋಡುವಂತೆ ಉದಯಿಸಿದನು. ವ|| ಆಗ ಎತ್ತಿ ಕಟ್ಟಿದ ಅಂಬಾರಿಗಳು, ಹಾಕಿರುವ ಲೋಹದ ಪಕ್ಷರಕ್ಷೆಗಳು, ಬಿಚ್ಚಿರುವ ಮೊಗವಾಡಗಳು, ಕಟ್ಟಿದ ಧ್ವಜಗಳು ರಾಶಿಮಾಡಿರುವ ಮೂವತ್ತೆರಡಾಯುಧಗಳು ಇವುಗಳಿಂದ ಕೂಡಿ ರೆಕ್ಕೆಗಳಿಂದ ಕೂಡಿದ ಕುಲಪರ್ವತಗಳೇ ನಡೆಯುವಂತೆ ಮದಾಂಧವಾದ ಆನೆಗಳು ನಡೆದುವು. ಚಕ್ರದ ಚೀತ್ಕಾರ ಶಬ್ದದಿಂದ ದಿಕ್ಕುಗಳ ಸಮೂಹವನ್ನೂ, ಚಕ್ರಗಳ ಹೊಡೆತದಿಂದ ಭೂಮಂಡಲವನ್ನೂ ಆಕ್ರಮಿಸಿ ಹರಿತವಾದ ಆಯುಧಗಳನ್ನೊಳಗೊಂಡು ನಾನಾ ರೀತಿಯ ಬಾವುಟ ಮತ್ತು ಕುದುರೆಗಳ ಸಮೂಹಗಳನ್ನುಳ್ಳುದಾಗಿ ಸಡಗರದಿಂದ ತೇರುಗಳು ನಡೆದುವು. ಕಣ್ಣು ಗೊರಸುಗಳನ್ನುಳಿದು ಪಾರ್ಶ್ವಕ್ಕೆ ಹಾಕಿದ ಗುಳದಿಂದಲೂ ಹೊಳೆಯುತ್ತಿರುವ ಚಿನ್ನದ ಜೀನುಗಳಿಂದಲೂ ಅಲಂಕರಿಸಲ್ಪಟ್ಟ ಬಿಸಿಲ್ಗುದುರೆಗಳ ಹಾಗೆ ಹೊಳೆಯುತ್ತಿರುವ ವೇಗಶಾಲಿಗಳಾದ ಕುದುರೆಗಳು ಮುಂದುವರಿದುವು. ವಿಶೇಷವಾಗಿ ಪ್ರಕಾಶಿಸುತ್ತಿರುವ ಸಿಡಿಲಿನ ವೈಭವವನ್ನೂ ಕೋಪಗೊಂಡ ಹುಲಿಗಳ ಹಿಂಡನ್ನೂ ಅನುಕರಿಸುತ್ತಿರುವ ಕಾಲಾಳುಗಳ ಸಮೂಹ ಮುಂದೆ ನಡೆಯಿತು. ಕಾಡ ಹಸು ರೇಗಿದ ಹಾಗೆ ರೇಗಿರುವ ಧರಿಸಲಸಾಧ್ಯವಾದ ಬಿಲ್ಲಾಳಿನ ಸೈನ್ಯವೂ ಮುನ್ನುಗ್ಗಿತು. ಎರಡು ಸೈನ್ಯವೂ ಶ್ವೇತ ಮತ್ತು ಭೀಷ್ಮರು ಆಜ್ಞೆ ಮಾಡಿದ ರೀತಿಯಲ್ಲಿ ನಡೆದು ಕುರುಕ್ಷೇತ್ರದ ರಣರಂಗದಲ್ಲಿ
Page #475
--------------------------------------------------------------------------
________________
೪೭೦ / ಪಂಪಭಾರತಂ ಚಂ
ಜಲಶಯನೋದರಾಂತರದಿನೀ ತ್ರಿಜಗಂ ಪೊಱಮಟ್ಟುದೀಗಳೆಂ ಬುಲಿ ಸಲೆ ತಮ್ಮ ತಮ್ಮ ಶಿಬಿರಂಗಳಿನುಗ್ರ ಚತುರ್ಬಲಂಗಳಂ | ಪಲವುಮನೊಂದೆ ಮಾಡಿ ದೆಸೆಗಳ ಮಸುಳ ನಡೆತಂದರಾಜಿಗಿ ರ್ವಲದಲರಾತಿನಾಯಕರುಮೊರ್ಬರನೊರ್ಬರ ಗಲ್ವ ತಕ್ಕಿನೊಳ್ ||೫೨
ವ||
ಆಗಳ್ ಕೌರವಬಲದ ಸೇನಾನಾಯಕಂ ಗಾಂಗೇಯನಡ್ಡಮಾಗೆ ತನ್ನೊಡ್ಡಿದ ಮಕರವ್ಯೂಹದ ಮೊನೆಯೊಳ್ ಸುತ್ತಿದೆತ್ತಿದ ಪೊನ್ನ ತೊಳಪ ಪಡೆಯಿಗೆಗಳುಂ ಮೆಜ ಬೆಳ್ಳಿಯ ರಥಮುಮಾ ರಥದೊಳೊಡಂಬಡೆ ಹೂಡಿದ ಕುದುರೆಗಳುಂ ಜೋಲ್ಲ ಪುರ್ವನ ಕಟ್ಟಿದ ಲಲಾಟಪಟ್ಟದೊಳಿಟ್ಟಳನೊಪ್ಪುವ ಬೀರವಟ್ಟಮುಮಸದಳಮಸೆಯ ದಿವ್ಯಕವಚಮಂ ತೊಟ್ಟು ಪರಶುರಾಮಂ ಬಾಂದು ಪ್ರಚಂಡ ಕೋದಂಡಮಂ ಕೊಂಡು ಪಾಂಡವಬಲಮಂ ಮಾರ್ಕೊಂಡು ನಿಂದಾಗಳ್ ಶ್ವೇತನುಮಾ ವ್ಯೂಹಕ್ಕೆ ಪ್ರತಿವ್ಯೂಹವಾಗಿ ಸೂಚೀವ್ಯೂಹಮನೊಡ್ಡಿ ಕನಕಕವಚಾಲಂಕೃತ ಶರೀರನುಮಾರೂಢ ಸಮರ ರಸನುಮುಪಾರೂಢ ಕನಕರಥನುವಾಗಿ ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗದಿರದಿದಿರ್ಚಿ ನಿಂದಾಗಳ್
ಕಂ|| ಶ್ವೇತನ ಗಂಗಾಜಾತನ
ಮಾತನೆ ಪಾರ್ದರಡುಮೊಡ್ಡಣಂ ಕಾದಂ | ದೀ ತಂದಿನೊಡ್ಡಿ ನಿಂದುವು ಭೂತಳಮಳ್ಳಾಡ ಕೆಸು ಕಡಿತದ ತದಿಂ ||
982
ಸೇರಿರಲು ಅವು ಚಿತ್ರದಲ್ಲಿ ಬರೆದ ಹಾಗೆ ಕಂಡವು. ೫೨. ವಿಷ್ಣುವಿನ ಗರ್ಭದಿಂದ ಈಗ ಮೂರುಲೋಕಗಳೂ ಹೊರಹೊರಟವು ಎಂಬ ಮಾತು ಸಲ್ಲುತ್ತಿರಲು ದಿಕ್ಕುಗಳು ಕಾಂತಿಹೀನವಾಗುತ್ತಿರಲು ಎರಡು ಸೈನ್ಯದ ಶತ್ರುನಾಯಕರೂ ಒಬ್ಬರನ್ನೊಬ್ಬರು ಗೆಲ್ಲುವ ಸಾಮರ್ಥ್ಯದಿಂದ ಯುದ್ಧಕ್ಕೆ ನಡೆದು ಬಂದರು. ವ! ಆಗ ಕೌರವ ಸೈನ್ಯದ ನಾಯಕನಾದ ಭೀಷ್ಮನು ತಾನು ಅಡ್ಡಲಾಗಿ ಮೊಸಳೆಯ ಆಕಾರದ ಸೈನ್ಯರಚನೆಯನ್ನು ಒಡ್ಡಿದನು. ಅದರ ಮುಂಭಾಗದಲ್ಲಿ ಸುತ್ತಲೂ ಎತ್ತಿ ಕಟ್ಟಿರುವ ಪ್ರಕಾಶಮಾನವಾದ ಚಿನ್ನದ ಬಾವುಟಗಳೂ ಶೋಭಾಯಮಾನವಾಗಿರುವ ಬೆಳ್ಳಿಯ ತೇರು, ಆ ರಥಕ್ಕೆ ಹೊಂದಿಕೊಳ್ಳುವ ಹಾಗೆ ಹೂಡಿರುವ ಕುದುರೆಗಳು ಸಿದ್ಧವಾಗಿದ್ದುವು. ಜೋತು ಹೋಗಿರುವ ಹುಬ್ಬನ್ನು ಎತ್ತಿ ಕಟ್ಟಿರುವ ಹಣೆಯಲ್ಲಿ ಸೊಗಸಾಗಿ ಪ್ರಕಾಶಿಸುತ್ತಿರುವ ವೀರಪಟ್ಟವು ಅತಿಶಯವಾಗಿ ಮೆರೆಯುತ್ತಿರಲು ದಿವ್ಯವಾದ ಕವಚವನ್ನು ತೊಟ್ಟು 'ಪರಶುರಾಮನು ಬಾಳಲಿ' ಎಂದು ತನ್ನ ಆಚಾರ್ಯನನ್ನು ನೆನೆದನು. ಭಯಂಕರವಾದ ಬಿಲ್ಲನ್ನು ಹಿಡಿದು ಪಾಂಡವಸೈನ್ಯವನ್ನು ಪ್ರತಿಭಟಿಸಿ ನಿಂತನು. ಈ ಕಡೆ ಶ್ವೇತನೂ ಆ ಮಕರವ್ಯೂಹಕ್ಕೆ ಪ್ರತಿಯಾಗಿ ಸೂಜಿಯ ಆಕಾರದ ಸೇನಾರಚನೆಯನ್ನು ಒಡ್ಡಿದನು. ಚಿನ್ನದ ಕವಚದಿಂದ ಅಲಂಕೃತವಾದ ಶರೀರವುಳ್ಳವನೂ ಯುದ್ಧೋತ್ಸಾಹದಿಂದ ಕೂಡಿದವನೂ ಆಗಿ ಕೈಲಾಸವಾಸಿಯಾದ ಈಶ್ವರನಿಗೆ ನಮಸ್ಕರಿಸಿ ಬಿಲ್ಲನ್ನು ಹಿಡಿದು ಭೀಷ್ಮನಿಗೆ ಹೆದರದೆ ಎದುರಿಸಿ ನಿಂತನು. ೫೩. ಶ್ವೇತ ಮತ್ತು ಭೀಷ್ಮರ ಆಜ್ಞೆಯನ್ನೇ ನಿರೀಕ್ಷಿಸುತ್ತ ಎರಡು ಸೈನ್ಯವೂ ಯುದ್ಧ ಮಾಡುವುದಕ್ಕಾಗಿ ಈ ರೀತಿಯಲ್ಲಿ ನಿಂತಿರಲು
Page #476
--------------------------------------------------------------------------
________________
ದಶಮಾಶ್ವಾಸಂ / ೪೭೧ ವ|| ಆಗಳ್ ಧರ್ಮಪುತ್ರಂ ಪುರುಷೋತ್ತಮನ ಮೊಗಮಂ ನೋಡಿ ಕೌರವ ಬಲದೂಡ್ಡಣದ ನಾಯಕರಿವರಾರೆಂದು ಬೆಸಗೊಳೆ ಮಕರ ಮಸ್ತಕಭೂಮಿಯೊಳ್ ಯುದ್ಧಸನ್ನದ್ಧನಾಗಿಕಂ| ಕೆಂಬಣದ ಕುದುರೆಗಳೊಳೊ
ಡಂಬಡೆ ನಿಜರಜತರಥಮಗುರ್ವುರ್ವರೆಯಂ | ತಿಂಬೆ ಕಳಶಧ್ವಜಂ ಮಿಳಿ ರ್ದಂಬರಮಂ ಬಳಸಿ ನಿಂದನಾತಂ ದ್ರೋಣಂ || ಆತನ ಸಾರೆ ಕಮಂಡಲು ಕೇತನಮಂಬರಮನಡರ ಚತುರಂಗ ಬಲೋ | ಪೇತನತಿ ಧವಳ ರಥನಲ್ಲಿ
ಜಾತಂ ಕ್ಷತ್ರಿಯರನುಜದ ಕಲಿ ಕೃಪನಾತಂ | ವಗಿ ಮತ್ತಿತ್ತ ಗಾಂಗೇಯನ ದಕ್ಷಿಣೋಪಾಂತದೊಳ್ ಕರ್ರನೆ ಕರ್ಗಿದ ಸಮದ ಗಜಘಟಾಟೋಪದ ನಡುವಕ೦ll ಸರದದ ಮುಗಿಲನೆ ಬಿಡದನು
ಕರಿಸುವ ಧವಳಾಶ್ವದಿಂದಮಸೆದೊಪ್ಪುವ ಲೋ | ಹ ರಥಮದು ಪುಲಿಯ ಪಬಯಿಗೆ ವರಸು ತುಟಿಗೆ ನಿಂದನಾತಂ ಶಲ್ಯಂ ||
೫೬ * ವll ಮತ್ತಿತ್ತ ಗಂಗಾಸುತನ ವಾಮಭಾಗದೊಳಂಬರಭಾಗಮಂ ಕಟ್ಟಿ ಮಡಚಿದಂತಾಗಿ ತನ್ನ ರಥದೊಳೊಟ್ಟದ ಕೆಯ್ತುಗಳ ಬೆಳಗೆ ಬೆಳಗಾಗ
ಕೆಸರಿನ ಮೇಲೆ ಹರಡಿದ ಕಡಿತದಂತೆ ನೆಲವು ನಡುಗುತ್ತಿತ್ತು. ವ|| ಆಗ ಧರ್ಮರಾಜನು ಕೃಷ್ಣನ ಮುಖವನ್ನು ನೋಡಿ ಕೌರವ ಸೇನಾವ್ಯೂಹದ ಒಡೆಯರಾದವರಿವರಾರು ಎಂದು ಪ್ರಶ್ನಿಸಿದನು. ಮಕರವ್ಯೂಹದ ತಲೆಯ ಪ್ರದೇಶದಲ್ಲಿ (ಮುಂಭಾಗದಲ್ಲಿ) ಯುದ್ಧ ಸನ್ನದ್ದನಾಗಿ ೫೪. ತನ್ನ ಬೆಳ್ಳಿಯ ತೇರು ಕೆಂಪು ಬಣ್ಣದ ಕುದುರೆಗಳಿಂದ ಒಪ್ಪಿರಲು ಭಯಂಕರನಾದ ಕಳಶ ಚಿಹ್ನೆಯುಳ್ಳ ಬಾವುಟವು ಚಲಿಸುತ್ತ ಆಕಾಶವನ್ನು ಬಳಸಿರುವಂತೆ ನಿಂತಿರುವವನು ದ್ರೋಣಾಚಾರ್ಯ ೫೫. ಅವನ ಪಕ್ಕದಲ್ಲಿಯೇ ಕಮಂಡಲು ಗುರುತಿನ ಬಾವುಟವು ಆಕಾಶವನ್ನು ವ್ಯಾಪಿಸಿರಲು ಚತುರಂಗಸೈನ್ಯದಿಂದ ಕೂಡಿರುವವನೂ ಅತ್ಯಂತ ಬಿಳುಪಾದ ತೇರನ್ನುಳ್ಳವನೂ ಒಳ್ಳೆಯ ಕುಲದಲ್ಲಿ ಹುಟ್ಟಿದವನೂ ಕ್ಷತ್ರಿಯರನ್ನು ಲಕ್ಷ್ಯಮಾಡದವನೂ ಶೂರನೂ ಆದವನು ಕೃಪಾಚಾರ್ಯ. ವ| ಮತ್ತು ಈ ಕಡೆ ಭೀಷ್ಮನ ಬಲಗಡೆಯ ಪಕ್ಕದಲ್ಲಿ ಬಹಳ ಕಪ್ಪಾದ ಮದ್ದಾನೆಗಳ ಸಮೂಹದ ಆರ್ಭಟದ ನಡುವೆ ೫೬. ಶರತ್ಕಾಲದ ಮೋಡವನ್ನೇ ಅನುಕರಿಸುತ್ತಿರುವ ಬಿಳಿಯ ಕುದುರೆಗಳಿಂದ ಪ್ರಕಾಶಿಸುತ್ತಿರುವ ಆ ಲೋಹ ರಥದಲ್ಲಿ ಹುಲಿಯ ಬಾವುಟ ದಿಂದ ಕೂಡಿ ಥಳಥಳಿಸುತ್ತ ನಿಂತಿರುವವನು ಶಲ್ಯ, ವ11 ಮತ್ತು ಈ ಕಡೆ ಭೀಷ್ಮನ ಎಡಪಾರ್ಶ್ವದಲ್ಲಿ ಆಕಾಶ ಭಾಗವನ್ನು ತಡಿಕೆಯಿಂದ ಹೆಣೆದ ಹಾಗೆ ಮಾಡಿ ತನ್ನ
Page #477
--------------------------------------------------------------------------
________________
೫೭
೪೭೨) ಪಂಪಭಾರತಂ . ಕ೦ll ಕತೆ ಕೊರಳೊಳ್ ಕಣೋಸಲೋಳ್
ಪ ಮಕುಟದೋಳುಗಧನು ಕರಾಗ್ರದೊಳಿರೆಯ | ಇತಿಯ ಹರಿಕೇತು ನಭದೋಲ್
ಮಿಜುಗುವ ಚೆಂಬೊನ್ನ ರಥದನಶ್ವತ್ಥಾಮಂ || ವ|| ಆ ರುದ್ರಾವತಾರನ ಕೆಲದೊಳ್ ಕಿಕ್ಕಿಳಿಗಿಳಿದ ತಂದುಜುಗಲ ನಡುವೆ ಪೊನ್ನ ರಥಮನೇ ನಿಂದಂ ಭೂರಿಶ್ರವನಾತನ ಕೆಲದೊಳ್ ಬಾಳಬಟ್ಟಂ ತೂಂತಿಟ್ಟಂತ ಸಂದಣಿಸಿ ನಿಂದ ಗೋಪಕುಮಾರರಣಿಯ ನಡುವೆ ಪೊನ್ನ ರಥಮನೇ ನಿಂದಾತನನ್ನ ತಮ್ಮ ಕೃತವರ್ಮನಾತನ ಕೆಲದೊಳೊಂದಕ್ಕೋಹಿಣೀ ಬಲಂಬೆರಸು ಸುತ್ತಿಳೆದು ಕನಕ ದಂಡ ಮಂಡಿತ ವಿಚಿತ್ರಾತಪತ್ರಗಳ ನಡುವೆ ಮಣಿಮಕುಟ ಮರೀಚಿಗಳ ಪೊಳೆಯ ನಾನಾ ವಾಹನಂಗಳನೇ ನಿಂದ ಜಯತ್ತೇನ ಕಾಂಭೋಜ ಸುದಕ್ಷಿಣ ದಂಡಧಾರ ಶತದಂಡಧರರವರ ಕೆಲದೊಳ ನೀಳ ಶ್ರುತಾಯುಧ ನಿಯುತಾಯುಧಾಚ್ಯುತಾಯುಧರೆಂಬರವರ ಕೆಲದೊಳ್ ನಿಲೆ ಬಲದ ಸೆಲೆಕೊಲೊಳೊಂದ ಕ್ಷೌಹಿಣಿಬಲಂಬೆರಸುಮತ್ತುಸಾಸಿರ ಮದದಾನವರಸು ನಿಂದಂ ಸುಯೋಧನನಣುಗ ಮಯ್ತುನಂ ಸಿಂಧುದೇಶಾಧೀಶ್ವರಂ ಜಯದ್ರಥನಾತನ ಕೆಲದೊಳ್ ಮಕರಮಸ್ತಕಭೂಮಿಯೊಳ್ ಕರಟತಟಗಳಿತ ಮದಜಳಧಾರಾಪೂರ ಪರಿಸ್ಲಾವಿತ ಸಕಳ ಭೂತಳಮಪ್ಪ ನಾಲ್ಕು ಲಕ್ಕ ಭದ್ರಹಸ್ತಿಯುಮನೊಂದು ಮಾಡಿ ಘಟೆಯ ಮೊನೆಯೊಳ್ ದಿಗ್ಗಜೇಂದ್ರಮನಿಸಿದ ಸುಪ್ರತೀಕ
ರಥದಲ್ಲಿ ರಾಶಿ ಹಾಕಿದ ಆಯುಧಗಳ ಬೆಳಕೇ ಬೆಳಕಾಗಿರಲು ೫೭. ಕತ್ತಿನಲ್ಲಿ ಕರಿಯ ಮಚ್ಚೆ ಹಣೆಯಲ್ಲಿ ಕಣ್ಣು ಕಿರೀಟದ ತುದಿಯಲ್ಲಿ ಚಂದ್ರ ಕೈಯ್ಯಲ್ಲಿ ಉಗ್ರವಾದ ಬಿಲ್ಲು ಇವುಗಳಿಂದ ಕೂಡಿ ಆಕಾಶದಲ್ಲಿ ಸಿಂಹದ್ವಜವು ಮಿಡುಕುತ್ತಿರುವ ಪ್ರಕಾಶವಾದ ಹೊಂಬಣ್ಣದ ತೇರಿನಲ್ಲಿರುವವನು ಅಶ್ವತ್ಥಾಮ: ವ|| ಆ ರುದ್ರಾವತಾರನ ಪಕ್ಕದಲ್ಲಿ ಒಟ್ಟಾಗಿ ಸೇರಿಕೊಂಡಿರುವ ಛತ್ರಿಗಳ ಸಮೂಹದ ಮಧ್ಯದಲ್ಲಿ ಚಿನ್ನದ ರಥವನ್ನು ಹತ್ತಿ ನಿಂತಿರುವವನು ಭೂರಿಶ್ರವ; ಆತನ ಪಕ್ಕದಲ್ಲಿ ಆಕಾಶ ಪ್ರದೇಶವನ್ನು ತೂತುಮಾಡಿದ ಹಾಗೆ ಗುಂಪುಗೂಡಿಸಿ ನಿಂತಿರುವ ಗೋಪಕುಮಾರರ ಸೈನ್ಯದ ನಡುವೆ ಚಿನ್ನದ ತೇರನ್ನು ಹತ್ತಿ ನಿಂತಿರುವವನು ನನ್ನ ತಮ್ಮನಾದ ಕೃತವರ್ಮ, ಆತನ ಪಕ್ಕದಲ್ಲಿ ಒಂದಕ್ಟೋಹಿಣಿ ಸೈನ್ಯದಿಂದ ಕೂಡಿ ಸುತ್ತಲೂ ವ್ಯಾಪಿಸಿ ಚಿನ್ನದ ದಂಡಿಗೆಯಿಂದಲಂಕೃತವಾದ ಚಿತ್ರಖಚಿತವಾದ ಛತ್ರಿಗಳ ನಡುವೆ ರತ್ನಖಚಿತವಾದ ಕಿರೀಟವು ಹೊಳೆಯುವ ಹಾಗೆ ಅನೇಕ ವಿಧವಾದ ವಾಹನಗಳನ್ನು ಹತ್ತಿ ನಿಂತಿರುವವರು ಜಯತ್ತೇನ, ಕಾಂಭೋಜ, ಸುದಕ್ಷಿಣ, ದಂಡಧಾರ, ಶತದಂಡಧರರು. ಅವರ ಪಕ್ಕದಲ್ಲಿ ಬಲದಂಚಿನಲ್ಲಿ ಒಂದಕ್ಟೋಹಿಣಿ ಸೈನ್ಯದಿಂದಲೂ ಐವ್ವತ್ತು ಸಾವಿರ ಮದ್ದಾನೆಯಿಂದಲೂ ಕೂಡಿ ನಿಂತಿರುವವನು ದುರ್ಯೊಧನನ ಪ್ರೀತಿಯ ಮೈದುನನೂ ಸಿಂಧುದೇಶಾಧೀಶ್ವರನೂ ಆದ ಜಯದ್ರಥ. ಆತನ ಪಕ್ಕದಲ್ಲಿ ಮಕರವ್ಯೂಹದ ಮುಂಭಾಗದಲ್ಲಿ ಕಪೋಲಪ್ರದೇಶದಿಂದ ಧಾರಾಕಾರವಾಗಿ ಹರಿಯುತ್ತಿರುವ ಮದೋದಕದಿಂದ ತೊಳೆಯಲ್ಪಟ್ಟ ಭೂಮಿಯನ್ನುಳ್ಳ ನಾಲ್ಕು ಲಕ್ಷ ಭದ್ರಜಾತಿಯ ಆನೆಗಳನ್ನು ಒಟ್ಟುಗೂಡಿಸಿಕೊಂಡು ಅವುಗಳ ಮುಂಭಾಗದಲ್ಲಿ ದಿಗ್ಗಜವೆಂದು
Page #478
--------------------------------------------------------------------------
________________
ದಶಮಾಶ್ವಾಸಂ / ೪೭೩ ಗಜೇಂದ್ರಮನೇ ನಿಂದಾತನಿಂದ್ರನ ಕಳೆಯಂ ಭಗದತ್ತನಾತನ ಕೆಲದೊಳೊಂದು ಲಕ್ಕ ಕುದುರೆಯುಮಗುವತ್ತು ಸಾಸಿರ ರಥಮುಮೊಂದಕ್ಕೋಹಿಣಿಯ ಕಾಲಾಳ್ವರಸು ನಿಂದರ್ ಸೋಮದತ್ತ ಬಾಹೀಕರವರ ಕೆಲದೊಳ್ ದೇವೇಂದ್ರಂಗೆ ಪಗೆವರಾಗಿ ವಿಕ್ರಮಾರ್ಜುನನ ಕೆಯ್ಯೋಳ್ ಸತ್ತ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರೆಂಬ ದೈತ್ಯರ್ ವೃದ್ಧ ವೈರಮಂ ನೆರೆದು ತ್ರಿಗರ್ತಾಧೀಶ ಸುಶರ್ಮ ಪ್ರಕೃತಿಗಳುಂ ಸಂಸಪಕರುಮಾಗಿ ಪುಟ್ಟ ಮೂರು ಕೋಟಿಯುಮಜುವತ್ತು ಸಾಸಿರ ದೈತ್ಯಪ್ರಧಾನನಾಯಕರುಮರ್ಜುನನೊಳ್ ಕಾದುವ ಬೆಸನಂ ದುರ್ಯೋಧನನೋಳ್ ಬೇಡಿ ಪಡೆದು ಹದಿನೆಂಟು ಕೋಟಿ ರಥಂಬೆರಸ ಬೇಡಿ ನಿಂದರ್ ಮತ್ತಿತ್ತ ಚತುರಂಗಬಳಜಳನಿಧಿಯ ನಡುವೆ ಕಳಿಂಗರಾಜ ವಂಗ ಕೊಂಗ ದೇಶಾಧೀಶ್ವರ ರೆತುಸಾಸಿರ ಗಜಘಟೆಗಳುಂ ಮೂಜುಲಕ್ಕ ರಥಮುಮುವತ್ತು ಕೋಟಿ ಪದಾತಿಯುಂ ಬೆರಸು ನಿಂದರ್ ಮತ್ತು ಕ್ಷೇಮಧೂರ್ತಿಯುಂ ಭೀಮಸೇನನ ಕೆಯೊಳ್ ಸತ್ತ ಬಕಾಸುರ ಜಟಾಸುರರನ ಮಕ್ಕಳಳಂಭೂಷ ಹಲಾಯುಧ ಮುಸಲಾಯುಧ ಕಾಳ ನೀಳ ಪ್ರಮುಖ ರೂಕ್ಷರಾಕ್ಷಸ ಬಲಂಬೆರಸು ಸುತ್ತಿಳೆದು ಬಳಸಿಯುಮಿರೆ ದುಶ್ಯಾಸನಂ ಮೊದಲಾಗೆ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಮುವತ್ತು ಸಾಸಿರ ರಥಮುಂ ಹದಿನೆಂಟು ಸಾಸಿರ ಮದಾಂಧಗಂಧಸಿಂಧುರಂಗಳುಂ ಬೆರಸು ಪೊಯ್ದ ಪಂಚಮಹಾಶಬ್ದಂಗಲ್
ಪ್ರಸಿದ್ದಿಗೊಂಡಿರುವ ಸುಪ್ರತೀಕವೆಂಬ ಆನೆಯನ್ನು ಹತ್ತಿ ನಿಂತಿರುವವನು ಇಂದ್ರನ ಸ್ನೇಹಿತನಾದ ಭಗದತ್ತ, ಆತನ ಪಕ್ಕದಲ್ಲಿ ಒಂದು ಲಕ್ಷ ಕುದುರೆಯನ್ನು ಅರವತ್ತು ಸಾವಿರ ರಥವನ್ನು ಒಂದು ಲಕ್ಷ ಕಾಲಾಳನ್ನು ಕೂಡಿಕೊಂಡು ನಿಂತವರು ಸೋಮದತ್ತ ಬಾಸ್ತಿಕರು. ಅವರ ಪಕ್ಕದಲ್ಲಿ ದೇವೇಂದ್ರನಿಗೆ ಶತ್ರುಗಳಾಗಿ ವಿಕ್ರಮಾರ್ಜುನನ ಕಯ್ಯಲ್ಲಿ ಸತ್ತ ನಿವಾತಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರು ಹಳೆಯ ಶತ್ರುತ್ವವನ್ನು ನೆನೆಸಿಕೊಂಡು ಈಗ ಗರ್ತಾಧೀಶ, ಸುಶರ್ಮರೇ ಮೊದಲಾದವರಾಗಿಯೂ ಸಂಸಪ್ತಕರಾಗಿಯೂ ಹುಟ್ಟಿ ಬಂದಿರುವ ಮೂರುಕೋಟಿ ಅರವತ್ತು ಸಾವಿರ ರಾಕ್ಷಸಮುಖ್ಯರಾದ ನಾಯಕರು ಅರ್ಜುನನೊಡನೆ ಯುದ್ಧ ಮಾಡುವ ಕಾರ್ಯವನ್ನು ದುರ್ಯೊಧನನಲ್ಲಿ ಬೇಡಿ ಪಡೆದು ಹದಿನೆಂಟು ಕೋಟಿ ರಥದಿಂದ ಕೂಡಿ ಪ್ರತ್ಯೇಕವಾಗಿ ಸನ್ನದ್ದರಾಗಿ ನಿಂತಿದ್ದಾರೆ. ಅಲ್ಲದೆ ಈ ಕಡೆ ಚತುರಂಗ ಸೇನಾಸಮುದ್ರದ ಮಧ್ಯದಲ್ಲಿ ಕಳಿಂಗ ಕೊಂಗ ವಂಗಾಧೀಶರು ಎಂಬತ್ತು ಸಾವಿರ ಆನೆಯ ಗುಂಪುಗಳನ್ನೂ ಮೂರುಲಕ್ಷ ರಥವನ್ನೂ ಅರವತ್ತು ಕೋಟಿ ಕಾಲಾಳು ಸೈನ್ಯವನ್ನೂ ಕೂಡಿ ನಿಂತಿದ್ದಾರೆ. ಅಲ್ಲದೆ ಕ್ಷೇಮಧೂರ್ತಿಯೂ ಭೀಮನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳನೀಳರೇ ಮೊದಲಾದವರೂ ಕ್ರೂರರಾಕ್ಷಸಸೈನ್ಯದೊಡನೆ ಸುತ್ತಲೂ ವ್ಯಾಪಿಸಿ ಬಳಸಿ ನಿಂತಿದ್ದಾರೆ. ದುಶ್ಯಾಸನನೇ ಮೊದಲಾದ ನೂರು ಜನ ತಮ್ಮಂದಿರೂ ಲಕ್ಷಣನೇ ಮೊದಲಾದ ನೂರು ಜನ ಮಕ್ಕಳೂ ಅರವತ್ತು ಸಾವಿರ ರಥದಿಂದಲೂ ಹದಿನೆಂಟು ಸಾವಿರ ಮದದಿಂದ ಕುರುಡಾದ ಶ್ರೇಷ್ಟವಾದ ಆನೆಗಳಿಂದಲೂ ಕೂಡಿ ಪಂಚಮಹಾಶಬ್ದಗಳು ಪ್ರಳಯಕಾಲದ ಕರಿಯ ಮೋಡಗಳು ಮೊಳಗುವ ಹಾಗೆ ಮೊಳಗುತ್ತಿರಲು ಆಕಾಶ ಪ್ರದೇಶವೇ ಚಿಗುರಿದ ಹಾಗೆ ಹೊಳೆದು ,
Page #479
--------------------------------------------------------------------------
________________
೪೭೪ / ಪಂಪಭಾರತಂ
ಕಾಳ ನೀಳ ಜಳಧರಂಗಳ್ ಮೊಳಗುವಂತ ಮೊಗೆ ಗಗನತಳಂ ತಳಿರ್ತಂತೆ ಪೊಳೆದು ಮಿಳಿರ್ವ ಪಾಳಿ ಮಹಾಧ್ವಜಂಗಳುಂ ಗಗನಸಿಂಧು ಫೇನ ಪಟಳ ಶಂಖ ಸಂಕಾಶ ಪಾಂಡು ಛತ್ರಚಾಮರಂಗಳುಂ ಪಲವುಂ ರಾಜಚಿಹ್ನಂಗಳುಮಸೆಯ
ಚಂ
ಕನಕ ಗಿರೀಂದ್ರ ರುಂದ್ರ ಶಿಖರಸ್ಥಿತ ಬಾಳದಿನೇಶಬಿಂಬಮಂ ನೆನೆಯಿಸೆ ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದ ಭೀ 1 ಮನ ಮೊನೆಯಂ ವನೀಪಕರನಾರಯಲಟ್ಟಿ ಯುಗಾಂತವಾರ್ಧಿ ಭೋಂ ಕೆನೆ ತಳರ್ವಂದದಿಂ ತಳರಲಟ್ಟಿಪನ ಫಣೀಂದ್ರಕೇತನಂ ||
ಕಂ।।
ಸೆಕೋಲ್ ಸೆಕೋಲಿಂ ಪ
ತಲುಗಾವುದ ಬಲದ ಪವಣನನಿತಿನಿತಂದಾ | ನಡೆಯಂ ದೇವಾಸುರರೊಳ
ಮಳೆಯಂ ಕಂಡಿನಿತು ಬಲಮನಾನವನಿಪತೀ ||
೫೮
೫೯
ವl ಎಂದು ನಾಮುಂ ನಮ್ಮ ಬಲದ ನಾಯಕರನೆಡೆಯಂದೊಡ್ಡುವಮೆಂದು ದ್ರೋಣನ ಮೊನೆಗಲುವತ್ತು ಸಾಸಿರ ರಥಂಬೆರಸು ದೃಷ್ಟದ್ಯುಮ್ನನುಮನಶ್ವತ್ಥಾಮನ ಮೊನೆಗೆ ನಾಲ್ವತ್ತು ಸಾಸಿರ ರಥಂ ಬೆರಸು ಶಿಖಂಡಿಯುಮಂ ಕೃತವರ್ಮನ ಮೊನೆಗೊಂದಕ್ಕೊಹಿಣೀ ಬಲಂ ಬೆರಸು ಸಾತ್ಯಕಿಯುಮಂ ದುರ್ಯೋಧನನ ಮೊನೆಗೊಂದು ಕೋಟಿ ರಥಮುವೊಂದು ಲಕ್ಕ ಭದ್ರಹಸ್ತಿಯುಂ ಬೆರಸು ಭೀಮನುಮಂ ಬೃಹದ್ಬಳನ ಮೊನೆಗೆ ಮೂವತ್ತು ಸಾಸಿರ ರಥಂಬೆರಸಭಿಮನ್ಯುವುಮಂ ದುಶ್ಯಾಸನನ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ನಕುಲನುಮಂ
ಚಲಿಸುತ್ತಿರುವ ಧ್ವಜ ಮಹಾಧ್ವಜಗಳೂ ದೇವಗಂಗಾನದಿಯ ನೊರೆ ಮತ್ತು ಶಂಖಗಳಿಗೆ ಸಮಾನವಾದ ಬಿಳಿಯ ಬಣ್ಣದಿಂದ ಕೂಡಿದ ಛತ್ರಚಾಮರಗಳೂ ಇನ್ನೂ ಇತರ ರಾಜ್ಯಚಿಹ್ನೆಗಳೂ ಪ್ರಕಾಶಿಸುತ್ತಿರಲು-೫೮. ಮೇರುಪರ್ವತದ ವಿಶಾಲವಾದ ಶಿಖರದ ಮೇಲಿರುವ ಬಾಲಸೂರ್ಯನ ಬಿಂಬವನ್ನು ಜ್ಞಾಪಕಕ್ಕೆ ತರುತ್ತ ತನ್ನ ಸುವರ್ಣರಥದಲ್ಲಿದ್ದುಕೊಂಡು ವೈಭವದಿಂದ ಭೀಮನ ಯುದ್ಧರೀತಿಯನ್ನು ವಿಚಾರಮಾಡಿ ಬರಲು ಗೂಢಚಾರರನ್ನು ಕಳುಹಿಸಿ, ಪ್ರಳಯಕಾಲದ ಸಮುದ್ರವು ಇದ್ದಕ್ಕಿದ್ದ ಹಾಗೆ ಚಲಿಸುವಂತೆ ಚಲಿಸಲು ದುರ್ಯೋಧನನು (ಸಂದೇಶವನ್ನು) ಕಳುಹಿಸಿದನು. ೫೯, ಒಂದು ಪಕ್ಕದ ಅಂಚಿನಿಂದ ಇನ್ನೊಂದು ಪಕ್ಕದ ಅಂಚಿನವರೆಗಿರುವ ಹತ್ತಾರು ಗಾವುದ ವಿಸ್ತಾರವಾದ ಪ್ರದೇಶದಲ್ಲಿರುವ ಸೈನ್ಯದ ಪ್ರಮಾಣವನ್ನು ಅಷ್ಟಿಷ್ಟೆಂದು ನಾನು ಹೇಳಲಾರೆ, ರಾಜನೇ ದೇವಾಸುರರ ಯುದ್ಧದಲ್ಲಿಯೂ ಇಷ್ಟು ಸೈನ್ಯವನ್ನು ನಾನು ಕಂಡಿರಲಿಲ್ಲ. ವ|| ಎಂದು ನಾವೂ ನಮ್ಮ ಸೈನ್ಯದ ನಾಯಕರನ್ನು ವಿಚಾರಮಾಡಿ ಒಡೋಣ ಎಂದನು. ದ್ರೋಣನ ಸೈನ್ಯಕ್ಕೆ ಪ್ರತಿಯಾಗಿ ಅರವತ್ತು ಸಾವಿರ ರಥದೊಡನೆ ಕೂಡಿದ ದೃಷ್ಟದ್ಯುಮ್ನನನ್ನು ಗೊತ್ತುಮಾಡಿದನು. ಅಶ್ವತ್ಥಾಮನ ಸೈನ್ಯಕ್ಕೆ ನಲವತ್ತು ಸಾವಿರ ತೇರಿನಿಂದ ಕೂಡಿದ ಶಿಖಂಡಿಯನ್ನು ನೇಮಿಸಿದನು. ಕೃತವರ್ಮನ ಕಾಳಗಕ್ಕೆ ಒಂದಕ್ಕೋಹಿಣಿ ಸೈನ್ಯದಿಂದ
Page #480
--------------------------------------------------------------------------
________________
31
ದಶಮಾಶ್ವಾಸಂ | ೪೭೫ ಶಕುನಿಯ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ಸಹದೇವನುಮಂ ಕೃಪನ ಮೊನೆಗೊಂದಕ್ಕೋಹಿಣೀ ಬಲಂಬೆರಸು ಕೇಕಯರುಮಂ ಸಿಂಧುರಾಜನ ಮೊನೆಗೊಂದಕ್ಕೋಹಿಣೀ ಬಲಂಬೆರಸು ದ್ರುಪದನುಮಂ ಭಗದತ್ತನ ಮೊನೆಗೊಂದಕ್ಕೋಹಿಣೀ ಬಲಂಬೆರಸು ವಿರಾಟನುಮಂ ಜಟಾಸುರ ಬಕಾಸುರರ ಮಕ್ಕಳಳಂಭೂಷ ಹಳಾಯುದ್ಧ ಮುಗಳಾಯುದ್ಧ ಕಾಳ ನೀಳ ನಕ್ತಂಚರರ ಮೊನೆಗೊಂದಕ್ಕೋಹಿಣೀ ಬಲಂಬರಸು ಘಟೋತ್ಕಚನುಮಂ ವಿಂದನ ಮೊನೆಗೆ ಹದಿನೆಂಟು ಸಾಸಿರ ರಥಮುವೊಂದುಲಕ್ಕೆ ಮದದಾನೆಯುಂ ಬೆರಸು ಕೊಂತಿಯ ಮಾವನಪ್ಪ ಕೊಂತಿಭೋಜನುಮಂ ಎಂದಾನುವಿಂದರ ಮೊನೆಗಲುವತ್ತು ಸಾಸಿರ ರಥಂಬೆರಸು ನಾಗಕುಮಾರನನಂತಬಲಸಮನ್ವಿತನಿಳಾವಂತನುಮಂ ಭೂರಿಶ್ರವನ ಮೊನೆಗೆ ನಾಲ್ವತ್ತು ಸಾಸಿರ ರಥಮುಂ ನಾಲ್ವತ್ತು ಸಾಸಿರ ಮದಹಸ್ತಿಗಳುಂ ಬೆರಸು ಮದಗಜಾರೂಢನುತ್ತರನುಮಂ ಸುಯೋಧನನ ಮಕ್ಕಳ್ ಲಕ್ಕಣಂ ಮೊದಲಾಗೆ ನೂರ್ವರ ಮೊನೆಗುವತ್ತು ಸಾಸಿರ ರಥಂಬೆರಸು ಸುತ ಸೋಮಕ ಪ್ರಮುಖರಪ್ಪ ಪಂಚಪಾಂಡವರುಮಂ ಪೆಟ್ಟು ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂವರಹಿಣೀಪತಿಗಳ ಮೊನೆಗೆ ಮೂಲಕೋಟಿ ರಥಂಬೆರಸು ಪಾಂಡ್ಯ ಶ್ರೀಜಯ
ಕೂಡಿದ ಸಾತ್ಯಕಿಯನ್ನು ನಿಯಮಿಸಿದನು. ದುರ್ಯೋಧನನೊಡನೆ ಯುದ್ಧ ಮಾಡುವುದಕ್ಕೆ ಒಂದು ಕೋಟಿ ರಥವನ್ನೂ ಒಂದಲಕ್ಷ ಉತ್ತಮಜಾತಿಯ ಆನೆಗಳನ್ನೂ ಒಳಗೊಂಡ ಭೀಮನನ್ನು ಸಿದ್ಧಪಡಿಸಿದನು. ಬೃಹದ್ಬಳನನ್ನು ಎದುರಿಸುವುದಕ್ಕೆ ಮೂವತ್ತು ಸಾವಿರ ರಥದಿಂದ ಕೂಡಿದ ಅಭಿಮನ್ಯುವೂ ದುಶ್ಯಾಸನನ ಕಾಳಗಕ್ಕೆ ನಲವತ್ತು ಸಾವಿರ ರಥದಿಂದ ಕೂಡಿದ ನಕುಲನೂ ಕೃಪನೊಡನೆ ಯುದ್ಧಮಾಡುವುದಕ್ಕೆ ಒಂದಕ್ಕೋಹಿಣೀ ಬಲದಿಂದ ಕೂಡಿದ ಕೇಕಯರೂ ಸೈಂಧವನ ಯುದ್ದಕ್ಕೆ ಒಂದಕ್ಕೋಹಿಣೀ ಬಲದಿಂದ ಕೂಡಿದ ದ್ರುಪದನೂ ಸಿದ್ಧರಾದರು. ಭಗದತ್ತನ ಸೈನ್ಯಕ್ಕೆ ಒಂದಕ್ಕೋಹಿಣೀ ಬಲದೊಡನೆ ವಿರಾಟನೂ ಬಕಾಸುರನ ಮಕ್ಕಳಾದ ಅಳಂಬೂಷ ಹಳಾಯುಧ ಮುಸಳಾಯುಧ ಕಾಳನೀಳರಾಕ್ಷಸರ ಮೊನೆಗೆ ಒಂದಕ್ಕೋಹಿಣೀಬಲದಿಂದ ಕೂಡಿದ ಘಟೋತ್ಕಚನೂ ನೇಮಕರಾದರು. ವಿಂದನೊಡನೆ ಯುದ್ಧ ಮಾಡುವುದಕ್ಕೆ ಹದಿನೆಂಟು ಸಾವಿರ ರಥವೂ ಒಂದು ಲಕ್ಷ ಮದ್ದಾನೆಗಳೂ ಕೂಡಿದ ಕುಂತಿಯ ಮಾವನಾದ ಕುಂತಿಭೋಜನು ಸಿದ್ಧನಾದನು. ವಿಂದಾನುವಿಂದರ ಸೈನ್ಯಕ್ಕೆ ಅರವತ್ತು ಸಾವಿರರಥದೊಡಗೂಡಿ ನಾಗಕುಮಾರನನ್ನೂ ಅನಂತಬಲದಿಂದ ಕೂಡಿದ ಇಳಾವಂತನನ್ನೂ ಭೂರಿಶ್ರವನೊಡನೆ ಯುದ್ಧ ಮಾಡುವುದಕ್ಕೆ ನಲವತ್ತು ಸಾವಿರ ತೇರುಗಳನ್ನೂ ನಲವತ್ತು ಸಾವಿರ ಮದ್ದಾನೆಗಳನ್ನೂ ಕೂಡಿ ಮದ್ದಾನೆಯನ್ನೇರಿದ್ದ ಉತ್ತರನನ್ನೂ ಏರ್ಪಡಿಸಿದನು. ದುರ್ಯೋಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರು ಜನಗಳ ಯುದ್ಧಕ್ಕೆ ಅರವತ್ತು ಸಾವಿರ ತೇರಿನೊಡನೆ ಕೂಡಿದ ಸುತ ಸೋಮಕರೇ ಮುಖ್ಯರಾದ ಪಂಚಪಾಂಡವರನ್ನು ನೇಮಿಸಿದನು. ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂರುಮಂದಿ ಅಕ್ಟೋಹಿಣೀಪತಿಗಳ ಯುದ್ಧಕ್ಕೆ ಮೂರುಕೋಟಿ ರಥಗಳಿಂದ ಕೂಡಿದ ಪಾಂಡ್ಯ ಶ್ರೀಜಯ ಸೋಮಕರನ್ನೂ ಗೊತ್ತುಮಾಡಿದನು. ವೀರರಾದ ಪುಷ್ಕರ ಪಾರಿಯಾತ್ರ ಬರ್ಬರ
Page #481
--------------------------------------------------------------------------
________________
೪೭೬ | ಪಂಪಭಾರತಂ
ವೀರ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ಮಹೀಪಾಳರ ಮೊನೆಗೆರಡು ಕೋಟಿ ರಥಂಬೆರಸು ಹೈಹಯರು ಪಟ್ಟು ನೀಳನನಲುವತ್ತು ಸಾಸಿರ ಭದ್ರಹಸ್ತಿವರಸು ತನ್ನ ಚಕ್ರರಶ್ನೆಗೆ ಪೇಟ್ಟು ಸಂಸಪ್ತಕರ ಪದಿನೆಂಟು ಕೋಟಿ ರಥಕ್ಕರಿಕೇಸರಿಯ ರಥಮನೊಂದನೆ ಪೇಟ್ಟು ಯುಧಿಷ್ಠಿರಂ ಶಲ್ಯನ ಮೊನೆಗೆ ನೆಳೆದು ನಿಂದು ಕಮ್ಮಿಸುವಾ .ಪ್ರಗಾವದೊಳ್ ಶೂರಂ ಭೇದೇನ ಯೋಜಯೇತ್' ಎಂಬ ನಯಮಂ ಕೆಯ್ಯೋಂಡು ವಿನಯಮನೆ ಮುಂದಿಟ್ಟುಕ೦ll ಬಳಮೆರಡುಂ ತನ್ನನೆ ಮಿಳ
ಮಿಳ ನೋಡೆ ನರೇಂದ್ರನೊಂದ ರಥದಿಂದಸುಹ್ಮ | ದೃಳಮನಿರದೆಯ್ಲಿ ಭೀಷ್ಕರ
ಚಳಣಯುಗಕ್ಕೆಗೆ ನಿನಗೆ ಜಯಮಂದಂ || ವ|| ಎಂದು ಭೀಷ್ಕರ್ ತಮ್ಮ ಮೊಮ್ಮನ ವಿನಯಕ್ಕೆ ಮೆಚ್ಚಿ ಪರಸೆ ಪರಕೆಯಂ ಕೆಯೊಂಡುಕಂ ಗುರು ಕೃಪ ಗುರುಸುತ ಶಲ್ಯರ
ಚರಣಂಗಳಿಗಿ ಪೊಗಿ ಪೊಡೆವಡುವುದುಮಾ | ದರದಿಂದಂ ನಲೆಯೊಳಂ ಪರಸಿ ಮನಂಗೊಂಡು ನುಡಿದರವರಾ ನೃಪನಂ || ನಿನ್ನ ಬರವಿಂದವಮ್ಮ ಮ ನನ್ನಿನಗಳಿಗಿದುದು ಜಯಮುಮೆಮ್ಮಿ ದಸೆಯಿಂ | ದನ್ನಿನಗೆ ಸಾರ್ಗ ಪೋಗನೆ ಮನ್ನಿಸಿ ಗುರುಜನಮನಾಗಳಂತಕತನಯಂ ||
ಶಬರ ನೇಪಾಳ ರಾಜರುಗಳ ಬಲಕ್ಕೆ ಎರಡುಕೋಟಿ ರಥಗಳಿಂದ ಕೂಡಿದ ಹೈಹಯರನ್ನು ನಿಯಮಿಸಿದನು. ಅರವತ್ತು ಸಾವಿರ ಭದ್ರಗಜಗಳೊಡನೆ ನೀಲನನ್ನು ತನ್ನ ಸೇನಾರಕ್ಷಣೆಗೆ ಇರಹೇಳಿದನು. ಸಂಸಪಕರ ಹದಿನೆಂಟುಕೋಟಿ ರಥಕ್ಕೆ ಅರಿಕೇಸರಿಯ (ಅರ್ಜುನ) ರಥವೊಂದನ್ನೇ ಸಿದ್ದಪಡಿಸಿದನು. ಧರ್ಮರಾಯನು ತಾನೇ ಶಲ್ಯನ ಇದಿರಾಗಿ ನಿಂತನು. 'ಶೂರನನ್ನು ಭೇದೋಪಾಯದಿಂದಲೇ ಗೆಲ್ಲಬೇಕು' ಎಂಬ ನೀತಿಯನ್ನು ಅಂಗೀಕರಿಸಿ ವಿನಯವನ್ನೇ ಮುಂದುಮಾಡಿಕೊಂಡು ೬೦. ಎರಡು ಬಲವೂ ತನ್ನನ್ನೇ ಮಿಟಮಿಟನೆ ನೋಡುತ್ತಿರಲು ಧರ್ಮರಾಯನು ಸಾವಕಾಶಮಾಡದೆ ಒಂದೇ (ಏಕಾಕಿಯಾಗಿ) ತೇರಿನಿಂದ ಶತ್ರುಸೈನ್ಯವನ್ನು ಸೇರಿ ಭೀಷ್ಕರ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು. ಅವರು ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದರು. ವll ಆ ಹರಕೆಯನ್ನು ಸ್ವೀಕರಿಸಿದನು. ೬೧. ದ್ರೋಣ ಕೃಪ ಅಶ್ವತ್ಥಾಮ ಶಲ್ಯರ ಪಾದಗಳಿಗೂ ಹಾಗೆಯೇ ಹೋಗಿ ನಮಸ್ಕಾರಮಾಡಿದನು. ಅವರೂ ಆದರದಿಂದಲೂ ಸದ್ಯಾವದಿಂದಲೂ ಹರಸಿ ತೃಪ್ತರಾಗಿ ರಾಜನನ್ನು ಕುರಿತು ಹೇಳಿದರು. ೬೨. ನಿನ್ನ ಬರುವಿಕೆಯಿಂದ ನಮ್ಮ ಮನಸ್ಸು ನಿನ್ನ ಕಡೆಗೆ ಓಸರಿಸಿತು. ಹಾಗೆಯೇ ನಮ್ಮ ಕಡೆಯಿಂದ ನಿನಗೂ ಜಯವು ಉಂಟಾಗುತ್ತದೆ ಹೋಗು ಎಂದರು.
Page #482
--------------------------------------------------------------------------
________________
ದಶಮಾಶ್ವಾಸಂ / ೪೭೭ ವlು ಮಗುಟ್ಟು ತನ್ನೊಡ್ಡಣಕ್ಕೆ ಬರುತ್ತುಂ ದುರ್ಯೊಧನನ ತಮ್ಮನಪ್ಪ ಯುಯುತ್ಸುವಂ ಕಂಡುಚoll ಪವನಜನಿಂದ ಕೌರವಕುಲಂ ಪಡಲಿಟ್ಟವೋಲಕ್ಕುಮಾದೋಡಿ'
ನೃವರವರಾರುವಿಲ್ಲಣಮ ಸಂತತಿ ಕೆಟ್ಟಪುದಿಲ್ಲಿ ಕಾಣಿನೀ | ಬವರದೊಳೀಗಳಾನಿವನನೆಂದು ನೃಪಂ ದಯೆಯಿಂದಮಾ ಯುಯು ತುವನೊಡಗೊಂಡು ಬಂದನೆನಿತಾದೊಡಮೇಂ ಪ್ರಭು ಪೊಲ್ಲಕೆಯುಮೇ || ೬೩
ವlು ಅಂತಾ ಯುಯುತ್ತುವನೊಡಗೊಂಡು ಬಂದು ಧರ್ಮಪುತ್ರನುತ್ತಾಹದೊಳಿರ್ಪ ಪದದೊಳ್ ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯಸ್ವರೂಪಮಂ ತೋಟಿ* ಚಂt ಆದಿರದಿದಿರ್ಚಿ ತಳಿಟಿಯಲೀ ಮಲೆದೊಡ್ಡಿದ ಚಾತುರಂಗಮಂ .
ಬುದು ನಿನಗೊಡ್ಡಿ ನಿಂದುದಿದನೋವದ ಕೊಲ್ವಡೆ ನೀನುಮೆನ್ನ ಕ || ಜದೊಳೆಸಗೆಂದು ಪ್ರತಜಿತನಾದಿಯ ವೇದರಹಸದೊಳ್ ನಿರಂ
ತದ ಪರಿಚರ್ಯೆಯಿಂ ನೆಯ ಯೋಜಿಸಿದಂ ಕದನತ್ರಿಣೇತ್ರನಂ || ೬೪
ವ|| ಆಗಳ ಪರಸೈನ್ಯಬೈರಮ ಪುರಾಣಪುರುಷನಪ್ಪ ಪುರುಷೋತ್ತಮಂಗಜಿಗಿ ಪೊಡಮಟ್ಟು ರಿಪುಪಕ್ಷಕ್ಷಯಕರಮಪ್ಪ ವಿಶ್ವಕರ್ಮನಿರ್ಮಿತವಾದ ತನ್ನ ದಿವ್ಯರಥಮಂ ಮನೋರಥಂ ಬೆರಸು
ಧರ್ಮರಾಜನು ತಮ್ಮ ಹಿರಿಯರನ್ನು ಗೌರವಿಸಿ ವ| ತನ್ನ ಸೈನ್ಯಕ್ಕೆ ಹಿಂತಿರುಗಿ ಬರುತ್ತ ದಾರಿಯಲ್ಲಿ ದುರ್ಯೋಧನನ ತಮ್ಮನಾದ ಯುಯುತ್ಸುವನ್ನು ಕಂಡನು. ೬೩. ಹೇಗೂ ಭೀಮನಿಂದ ಕೌರವಕುಲವು ನಾಶವಾದಂತಾಗುತ್ತದೆ. ಅವರ ಕಡೆಯವರಾರೂ ಇಲ್ಲದಂತಾಗುತ್ತದೆ. ಸಂತತಿಯು ಸಂಪೂರ್ಣವಾಗಿ ನಾಶವಾಗುತ್ತದೆ. ಈ ಯುದ್ಧದಲ್ಲಿ ಇವನನ್ನಾದರೂ ರಕ್ಷಿಸುತ್ತೇನೆ ಎಂದು ರಾಜನು ದಯೆಯಿಂದ ಆ ಯುಯುತ್ಸುವನ್ನು ಒಡಗೊಂಡು ಬಂದನು. ಪ್ರಭುವಾದವನು ಕೆಟ್ಟದ್ದನ್ನು ಮಾಡುತ್ತಾನೆಯೇ ? ವ|| ಯುಯುತ್ಸುವನ್ನು ಒಡಗೊಂಡು ಬಂದು ಧರ್ಮರಾಜನು ಉತ್ಸಾಹದಿಂದಿರುವ ಸಮಯದಲ್ಲಿ ವಿಕ್ರಮಾರ್ಜುನನ ಮನಸ್ಸಿನಲ್ಲುಂಟಾದ ವ್ಯಾಮೋಹವನ್ನು ಕಳೆಯುವುದಕ್ಕಾಗಿ ಕೃಷ್ಣನು ವಿಶ್ವರೂಪವನ್ನು ತೋರಿದನು. ೬೪. “ಹೆದರದೆ ಎದುರಿಸಿ ಪ್ರತಿಭಟಿಸಿ ಯುದ್ದಮಾಡಲು ಮಲೆತು ಚಾಚಿದ ಈ ಚತುರಂಗ ಸೈನ್ಯವು ನಿನಗೆ ಪ್ರತಿಭಟಿಸಿ ನಿಂತಿದೆ. ಇದನ್ನು ಕೊಲ್ಲಬೇಕಾದರೆ ನೀನು ನಾನು ಹೇಳಿದ ರೀತಿಯಲ್ಲಿ ಕೆಲಸ ಮಾಡು” ಎಂದು ಶ್ರೀಕೃಷ್ಣನು ನೇರವಾಗಿ ಆದಿಕಾಲದಿಂದ ಬಂದ ವೇದ ರಹಸ್ಯವನ್ನು ಮನದಟ್ಟಾಗುವಂತೆ ಉಪದೇಶಿಸಿ ಅರ್ಜುನನನ್ನು ಯುದ್ಧಕಾರ್ಯದಲ್ಲಿ ನಿಯೋಜಿಸಿದನು. ವ|| ಆಗ ಅರ್ಜುನನು ಪುರಾಣಪುರುಷನಾದ ಶ್ರೀಕೃಷ್ಣನಿಗೆ ನಮಸ್ಕಾರಮಾಡಿ ಶತ್ರುಪಕ್ಷವನ್ನು ನಾಶಮಾಡುವ ಶಕ್ತಿಯನ್ನುಳ್ಳ ವಿಶ್ವಕರ್ಮನಿಂದ ನಿರ್ಮಿತವಾದ ತನ್ನ ದಿವ್ಯರಥವನ್ನು ಶ್ರೀಕೃಷ್ಣನನ್ನು ಮೊದಲು ಹತ್ತಲುಹೇಳಿ ಅದನ್ನು
Page #483
--------------------------------------------------------------------------
________________
೪೭೮ | ಪಂಪಭಾರತಂ ರಥಾಂಗಧರನಂ ಮುನ್ನಮೇಜಲ್ಬಟ್ಟು ಮೂಟು ಸೂಯ್ ಬಲವಂದು ಪೊಡಮಟ್ಟು ಬಟಿಯಂ ತಾನೇ ವಜ್ರಕವಚಮಂ ತೊಟ್ಟು ತವದೊಳಗಳನೆರಡುಂ ದಿಸೆಯೊಳಂ ಬಿಗಿದು ದ್ರೋಣಾಚಾರ್ಯಂಗೆ ಮನದೋಳ್ ನಮಸಾರಂಗೆಯು ದೊಣಂ ಬಾಂದು ಮಹಾಪ್ರಚಂಡ ಗಾಂಡೀವಮಂ ಕೊಂಡೇಜೆಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ ಸಂಸಪಕರೊಡ್ಡಣದತ್ತ ರಥಾಂಗಧರನಂ ರಥಮಂ ಚೋದಿಸಲ್ವಾಗಳ್ಮ|| ಸ | ಕುಳಶೈಲೇಂದ್ರಂಗಳಂಭೋನಿಧಿಗಳಖಿಳ ದಿಗಂತಿಗಳ್ ವಿಶ್ವಧಾತ್ರೀ
ವಳಯಂ ಪಾತಾಳಮೂಲಂ ಸಕಲ ಭುವನಮೋಂದೊಂದನ್ ಕೇಣಿಗೊಂಡು | ಚಳಿಸಲ್ ಸೂಸಲ್ ಪಳಂಚಲ್ ಸಿಡಿದೊಡೆದಳಅಲ್ ಫಾತಿ ಜೀಜಬಲಂದು ಮೃಳಿಸುತ್ತರ್ದರಾವಂ ಹರಿಗನೊಳಿದಿರು ಮೀಟಿ ಮಾಜಾಂಪ ಗಂಡಂ || ೬೫
ವ|| ಎಂಬನ್ನೆಗಂ ಪ್ರಳಯಕಾಲ ಜಾತ್ರೋತ್ಸಾತ ವಾತ ನಿರ್ಘಾತದಿಂದಮಳ್ಳಾಡಿ ತಳ್ಳಂಕಂಗುಟ್ಟುವ ಜಳನಿಧಿಗಳಂತೆ ಮೆರೆದಪ್ಪಲ್ ಬಗೆವುಭಯಸೈನ್ಯಂಗಳಂ ಕಂಡ ರಾಜರಾಜನು ಮಿತ್ತ ಧರ್ಮರಾಜನುಮೊಡನೊಡನೆ ಕೆಯ್ದಿಸಿದಾಗ
ಕoll ಪೂರ್ವಾಪರ ಜಳನಿಧಿಗಳ
ಗುರ್ಮಿಸುವಿನಮೊಂದನೊಂದು ತಾಗುವವೊಲಗು | ರ್ವುರ್ವಿರೆ ಪರ್ವಿ ಚತುರ್ವಲ ಮೇರ್ವಸದಿಂದಂದು ಬಂದು ತಾಗಿತ್ತಾಗಳ್ ||
೬೬
ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದ ಬಳಿಕ ತಾನೂ ಹತ್ತಿದನು. ವಜ್ರಕವಚ ವನ್ನು ಧರಿಸಿದನು. ಅಕ್ಷಯತೂಣೀರ (ಬತ್ತಳಿಕೆ)ಗಳನ್ನು ಎರಡುಕಡೆಯಲ್ಲಿಯೂ ಬಿಗಿದುಕೊಂಡನು. ದ್ರೋಣಾಚಾರ್ಯರಿಗೆ ಮನಸ್ಸಿನಲ್ಲಿಯೇ ನಮಸ್ಕರಿಸಿ 'ದ್ರೋಣಾಚಾರ್ಯರು ಬಾಳಲಿ' ಎಂದು ಪ್ರಾರ್ಥಿಸಿದನು. ಮಹಾಪ್ರಚಂಡವಾದ ತನ್ನ ಗಾಂಡೀವವೆಂಬ ಬಿಲ್ಲಿಗೆ ಹೆದೆಯನ್ನೇರಿಸಿ ನೀವಿ ಟಂಕಾರಮಾಡಿದನು. ದೇವದತ್ತ ಶಂಖವನ್ನು ಊದಿ ಸಂಸಪ್ತಕರ ಸೈನ್ಯದ ಕಡೆಗೆ ತೇರನ್ನು ನಡೆಸುವಂತೆ ಕೃಷ್ಣನಿಗೆ ಹೇಳಿದನು. ೬೫. ಕುಲಪರ್ವತಗಳೂ, ಸಮುದ್ರಗಳೂ, ದಿಗ್ಗಜಗಳೂ, ಸಮಗ್ರಭೂಮಂಡಲವೂ ಪಾತಾಳಲೋಕದ ತಳಭಾಗವೂ ಸಮಸ್ತಲೋಕಗಳೂ ಒಂದೊಂದೂ ಸಾಲಾಗಿ ಮೇಲಕ್ಕೆ ಚಿಮ್ಮಿ ಚೆಲ್ಲಾಡಿ, ತಾಗಿ, ಸಿಡಿಲೊಡೆದು, ನಡುಗಿ, ಹಾರಿ, ಜೀರೆಂದು ಶಬ್ದಮಾಡಿ ವ್ಯಾಕುಲಪಟ್ಟವು. ಅರ್ಜುನನಿಗೆ ಇದಿರಾಗಿ ಪ್ರತಿಭಟಿಸುವ ಶೂರನು ಯಾವನಿದ್ದಾನೆ ? ವll ಎನ್ನುವಷ್ಟರಲ್ಲಿ ಪ್ರಳಯಕಾಲದಲ್ಲಿ ಹುಟ್ಟಿ ಮೇಲಕ್ಕೆ ನೆಗೆದ ಗಾಳಿಯ ಹೊಡೆತದಿಂದ ಅಲುಗಿ ಕ್ಲೋಭೆಗೊಂಡ ಸಮುದ್ರದಂತೆ ಎಲ್ಲೆಯನ್ನು ಮೀರಲು ಯೋಚಿಸುತ್ತಿರುವ ಎರಡು ಕಡೆಯ ಸೈನ್ಯಗಳನ್ನೂ ಕಂಡು ಈ ಕಡೆ ಚಕ್ರವರ್ತಿಯಾದ ದುರ್ಯೊಧನನೂ ಆ ಕಡೆ ಧರ್ಮರಾಜನೂ ಯುದ್ಧ ಸೂಚಕವಾಗಿ ಕೈಬೀಸಿದರು. ೬೬. ಪೂರ್ವಪಶ್ಚಿಮ ಸಮುದ್ರಗಳು ಭಯವನ್ನುಂಟುಮಾಡುತ್ತ ಒಂದನ್ನೊಂದು ತಗಲುವ ಹಾಗೆ ಭಯಂಕರವಾದ ಚತುರಂಗಸೇನೆಗಳು ಉತ್ಸಾಹದಿಂದಲೂ ಯುದ್ಧೋದ್ಯೋಗದಿಂದಲೂ ಬಂದು
Page #484
--------------------------------------------------------------------------
________________
ದಶಮಾಶ್ವಾಸಂ / ೪೭೯ ಘಟೆಯ ದಂದುಲಿವು ಲಯ ಘನ ಘಟೆಗಳ ಮೊಬಗನಿಗೆ ಪೊಟ್ಟಡದ ತೊಟು ಪಟಹ ಶಂಖ ಭೇರಿಯ ಚಟುವಳಿತದಿಂದಟಳಪಟಳಮಂಬರಪಟಳಂ | ಕರಿ ತುರಗ ರಥ ಪದಾತಿಯ ಚರಣಾಸಂಘಾತ ಜಾತ ರಜಮಾಜಸ್ತಂ | ನೆರೆದಂಬರಕೂಗಯಲ್ ಬಳ ಭರದಿಂ ಧರೆಯೆಟ್ಟು ಪಾಳುವಂತಾಯಾಗಳ್ || ಸಮರ ರಸಪ್ರಿಯರೊಳ್ ಸ
ಮುಮಿಳೆಯೊಳ್ ರಜಮುಮೊದನೆ ರಣಗಲೆಯೊಳ್ || ತಮಮುಂ ಮಿಗೆ ಸತ್ವ ರಜ ಸಮಂಗಳುಂ ಕಾಣಲಾದುವೆರಡುಂ ಪಡೆಯೊಳ್ |
೬೯ ಪಡೆಯ ಪೊಗಗಿದು ಶೇಷಂ ಪಡೆಗಳನುಡುಗುವುದುಮಳೆ ಬೊದಿಲ್ವೇನೆ ಬಿಟ್ಟ | ತಡಿಗಿಡ ಕೂರ್ಮನ ಬೆನ್ನಂ.
ದೊಡೆದು ಸಿಡಿಲೊಡನೆ ನುಚ್ಚುನೂಅಪಿನೆಗಂ | ವ|| ಅಂತು ನೆಲನುಮಾಕಾಶಮೋಂದೊಂದು ತಾಗಿದ ಬೇಗದೊಳಂಬರಂ ಬರಂ ನೆಗೆದ ಧೂಳಿಯೊಳ ದೆಸೆಯಳಿಯದೆಯುಂ ತಮ್ಮ ಬಲಮಂ ಮಾರ್ವಲಮನಳಿಯದೆಯುಂ
ಸಂಘಟಿಸಿದುವು. ೬೭. ಆನೆಯ ಸೈನ್ಯದ ಫೀಂಕಾರ ಶಬ್ದವು ಪ್ರಳಯಕಾಲದ ಮೋಡಗಳ ಸಮೂಹದ ಗುಡುಗೆನ್ನಿಸಿತು. ಉಗ್ರವಾಗಿ ಶಬ್ದಮಾಡುತ್ತಿರುವ ದಮಟೆ, ಶಂಖ, ನಗಾರಿಯ ಧ್ವನಿಯಿಂದ ಅತಲವೆಂಬ ಪಾತಾಳ ಲೋಕದ ಮಾಳಿಗೆಯೂ ಆಕಾಶದ ಮೇಲ್ದಾವಣಿಯೂ ಏಕಕಾಲದಲ್ಲಿ ಒಡೆದು ಹೋದುವು. ೬೮, ಆನೆ ಕುದುರೆ. ತೇರು ಕಾಲಾಳುಗಳ ಪಾದಘಟ್ಟಣೆಯಿಂದ ಉಂಟಾದ ಧೂಳು ಒಟ್ಟಿಗೆ ಕೂಡಿ ಆಕಾಶಕ್ಕೆ ಹಾರಲು ಸೈನ್ಯದ ಭಾರದಿಂದ ಭೂಮಿಯೇ ಎದ್ದು ಹಾರುವ ಹಾಗಾಯಿತು. ೬೯. ಯುದ್ಧಾಸಕ್ತರಾದವರಲ್ಲಿ ಸತ್ಯಗುಣವೂ (ಶಕ್ತಿಯೂ) ಭೂಮಿಯಲ್ಲಿ ರಜೋಗುಣವೂ (ಧೂಳೂ) ರಣಗತ್ತಲೆಯಲ್ಲಿ ತಮೋ ಗುಣವೂ (ಕತ್ತಲೆ) ಉಂಟಾಗಲು ಎರಡು ಸೈನ್ಯಗಳಲ್ಲಿಯೂ ಸ,ರಜಸ್ತಮೋಗುಣಗಳು ತೋರಿ ಬಂದುವು. ೭೦. ಸೈನ್ಯಗಳ ಭಾರಕ್ಕೆ ಹೆದರಿ ಆದಿಶೇಷನು ಹೆಡೆಗಳನ್ನು ಸಂಕೋಚ ಮಾಡಿಕೊಂಡನು. ಭೂಮಿಯು ಬೊದಿಲ್ಲೆಂದು ಬಿದ್ದಿತು. ತಳಭಾಗವು ನಷ್ಟವಾಗಲು ಆಮೆಯ ಬೆನ್ನು ಒಡೆದು ತಕ್ಷಣ ನುಚ್ಚುನೂರಾಯಿತು. ವl1 ಹಾಗೆ ಭೂಮ್ಯಾಕಾಶಗಳು ಒಂದೊಂದರಲ್ಲಿ ತಗುಲಿದ ವೇಗದಲ್ಲಿ ಆಕಾಶದವರೆಗೆ ಹಾರಿದ ಧೂಳಿನಿಂದ ದಿಕ್ಕು ಕಾಣದೆಯೂ ತಮ್ಮ ಪಕ್ಷ ಪ್ರತಿಪಕ್ಷಗಳನ್ನರಿಯದೆಯೂ ಚತುರಂಗ ಸೈನ್ಯವು ತಮ್ಮ ಮೊದಲಿನ ವ್ಯವಸ್ಥೆ ತಪ್ಪಿಹೋಗಿ ಹುಡುಕಾಡುತ್ತ ಥಟ್ ಪೊಟ್ಟೆಂದು ಹೊಡೆದು ಇಟ್ಟು ಕತ್ತರಿಸಿ ತರಿದು ಪ್ರತಿಭಟಿಸಿ
Page #485
--------------------------------------------------------------------------
________________
೪೮೦ | ಪಂಪಭಾರತಂ
ಚಾತುರ್ವಲಂಗಳ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದಚ್ಚುಮಿಟ್ಟು ಮಿದು ತಡೆದು ಘಟ್ಟಿಸೆಯುಮಾಂಕೆಗೊಂಡು ಕಿಳೆದುಪೊತ್ತು ಕಾದೆ ಕಾದ ಸುರಿವ ಬಿಸುನೆತ್ತರ ಸರಿಯೊಳಮಂಬಿನ ಸರಿಯೊಳಮಂಬರಿವಿಟ್ಟು ಪಾಯ್ದ ಮದಗಜಂಗಳ ಮದಜಲದೊಳಂ ಬಲದ ಕಳಕಳಕ್ಕೆ ಮಸಗಿ ದೆಸೆಯಟೆಯದೆಯುಂ ಪಡೆಯ ಘಟ್ಟಿಸಿದ ಕೀಳ ಘಟ್ಟಣೆಯೊಳ್ ಪೊಟ್ಟಗೊಡೆದ ತಾಳುಗೆಗಳ ರುಧಿರಜಲದೊಳ್ ಬೆರಸಿ ಪದಗಂಪನಾಳ ಜಾತ್ಯತ್ವದ ಲಾಳಾಜಳದೊಳಂ ನೆಲದೊಳೊಗೆವ ರಜಂ ಮೊದಲೂಲಂಗಿದೆಯುಂ ತಿಳಿದಿಕ್ಕಿದಂತೆ ತಲೆಗಳ ಪಡೆದುರುಡೆ ಪರ್ಮರಂಗಳ ಪೋಳೊಳಗಣಿಂದಮೊಗದ ಕೇಸುರಿಗಳ ಬಳಗದಂತಟ್ಟೆಗಳಿಂದಂಬರಂಬರಂ ನೆಗೆದು ಪಾಡುವ ನೆತ್ತರ ಸುಟ್ಟುರೆಗಳಿಂದಂ ಮೇಗೆ ನೆಗೆದ ರಜಂ ಮಸುಳನಾಗೆ ದೆಸೆಯಂದು ತಮ್ಮ ಬಲಮುಮಂ ಮಾರ್ವಲಮುಮನಡೆದು ನವರುಧಿರ ಜಳ ಚಳಚನದೊಳ್ ಘಟ್ಟಿಸಿ ಸಿಂದುರದೊಳ್ ನೆಲಗಟ್ಟಿಸಿದಂತಿರ್ದ ರಂಗಭೂಮಿಯೊಳೆರಡುಂ ಪಡೆಯ ನಾಯಕರ್ ಬಿಲ್ಲಾಳೆಗಂಗಾದುವಾಗಳ
ಕಂll ಪಿಡಿಕೆಯ್ ತೀವಿದ ಕೂರ್ಗಣೆ
ಮಡಕಾಲ್ವರಮಲೆವ ಕಚ್ಚೆ ನಿಡಿಯಸಿಯೊ ಕ || ರ್ಪಿಡಿದ ಪಣೆಗಟ್ಟು ಕೆಳ್ಕೊಡ ಬೆಡಂಗನೊಳಕೊಳ ಧನುರ್ಧರ ಹೆಣೆದಚ್ಚರ್ |
ಶರಸಂಧಾನಂ ನಿಟ್ಟಿಸ
ಲರಿದೆಂಬಿನವೆರಡು ಬಲದ ಕಡುವಿಲ್ಲರ್ ಭೋ | ರ್ಗರೆದಿಗೆ ಕೂರ್ಗಣೆಯೊಳ್ ಪಂ ದರಿಕ್ಕಿದಂತಾಯ್ತು ಗಗನಮಂಡಳಮಲ್ಲಂ ||
20
20
ಕೆಲವು ಕಾಲ ಯುದ್ಧಮಾಡಿದರು. ಸುರಿಯುತ್ತಿರುವ ಬಿಸಿರಕ್ತದ ಮಳೆ, ಬಾಣವರ್ಷದಿಂದ ಪ್ರವಾಹವಾಗಿ ಹರಿಯುವ ಮದ್ದಾನೆಗಳ ಮದೋದಕ, ಸೈನ್ಯದ ಗದ್ದಲಕ್ಕೆ ರೇಗಿ ದಿಕ್ಕು ತೋಚದಂತೆ ಓಡಿ ತಗುಲಿದ ಕಡಿವಾಣದ ಸಂಘರ್ಷಣೆಯಿಂದ ಪೂರ್ಣವಾಗಿ ಸೀಳಿದ ನಾಲಗೆಗಳ ರಕ್ತ, ಹದವಾದ ಕೆಂಪು ಬಣ್ಣವನ್ನು ತಾಳಿದ ಜಾತಿಕುದುರೆಗಳ ಜೊಲ್ಲುರಸ, ಇವುಗಳಿಂದ ನೆಲದಿಂದ ಹೊರಟ ಧೂಳಿನ ಮೂಲವು ನಾಶವಾಯಿತು. (ನೆಲವು ಒದ್ದೆಯಾದುದರಿಂದ ಧೂಳೇಳುವುದೂ ನಿಂತುದರಿಂದ) ಕತ್ತರಿಸಿ ಹಾಕಿದ ತಲೆಗಳು ಹರಿದು ಹಾರಲು ದೊಡ್ಡ ಮರಗಳ ಹೋಳುಗಳ ಒಳಭಾಗದಿಂದ ಹುಟ್ಟಿದ ಕೆಂಪುಜ್ವಾಲೆಯ ಸಮೂಹದಂತೆ ಮುಂಡ ಗಳಿಂದ ಆಕಾಶದವರೆಗೆ ಚಿಮ್ಮಿ ಹಾರುವ ರಕ್ತದಿಂದ ಕೂಡಿದ ಸುಂಟರುಗಾಳಿಯಿಂದ ಮೇಲೆ ಎದ್ದಿದ್ದ ಧೂಳೂ ಮಾಯವಾಯಿತು. ಧೂಳು ಅಡಗಲಾಗಿ ದಿಕ್ಕುಗಳನ್ನು ತಿಳಿದು ತಮ್ಮ ಸೈನ್ಯವನ್ನೂ ಪರಸೈನ್ಯವನ್ನೂ ತಿಳಿದು ಹೊಸದಾದ ರಕ್ತವನ್ನು ಚಿಮಿಕಿಸುವುದರಿಂದ ದಮ್ಮಸ್ಸು ಮಾಡಿ ಕೆಂಪು ಕಾವಿಕಲ್ಲನ್ನು ನೆಲಕ್ಕೆ ಹಾಸಿದಂತಿದ್ದ ಯುದ್ಧಭೂಮಿಯಲ್ಲಿ ಎರಡು ಸೈನ್ಯದ ನಾಯಕರು ಬಿಲ್ಲಿನ ಕಾಳಗವನ್ನು ಕಾದಿದರು. ೭೧. ಕೈತುಂಬ ತುಂಬಿದ ಹರಿತವಾದ ಬಾಣ, ಮೊಳಕಾಲುವರೆಗೆ ಜೋಲಾಡುವ ವೀರಗಚ್ಚೆ, ದೀರ್ಘವಾದ ಕತ್ತಿಯ ಒರೆ, ಕಪ್ಪಾದ ಹಣೆಗಟ್ಟು, ಕೈಚೀಲ ಇವು ಬೆಡಗನ್ನು ಹುಟ್ಟಿಸುತ್ತಿರಲು ಬಿಲ್ದಾರರು ಪರಸ್ಪರ ಹೆಣೆದುಕೊಂಡು ಹೊಡೆದಾಡಿದರು. ೭೨. ಬಾಣವನ್ನು ಹೂಡುವುದನ್ನು ನೋಡಲಸಾಧ್ಯವೆನ್ನುವ ಹಾಗೆ ಎರಡು ಸೈನ್ಯದ
Page #486
--------------------------------------------------------------------------
________________
ದಶಮಾಶ್ವಾಸಂ | ೪೮೧ ಗಳಸನ್ನೆಗಯ್ಯು ತಗನೆ ದಗಿ ಪರಂಕಲಿಸಿ ಪರ್ಮಿ ಕೂಕಿಳಿದಿಸೆ ಕಂ | ಗತಿಯ ಮೊನೆಯಂಬುಗಳ ಕ ಈಜಯಿಸಿದುವು ಪೊಣರ್ವ ಬಿಲ್ಲ ಕಡುವಿಗರಂ || ೭೩ ಅರಿವ ನಡುವುಡಿವ ನೀರ್ಗೊ ಊರಿದುರ್ಚುವ ನಟ್ಟು ತೊನೆವ ಕಣಗಳೆ ಸೊಗಂ | ದಿರಿಯದಿದಿರಿದಿರನದಿರದೆ ಸುರಿಗಿಳಿವಂತಚರಂಬನಂಬಟ್ಟುವಿನಂ || ಪಿಡಿಕೆಯ್ಯ ದೊಣೆಯ ಪೊದೆಯಂ ಬಿಡೆ ಮುಡಿವಿನಮೆಚ್ಚು ಸುರಿಗೆಗಿದ್ರೆದಿರಿದಿರಂ | ಪಡ ಬೆಳದಿಳದುಂ ಬಿಲ್ವಡೆ
ಪಡೆದುದು ಭೋರ್ಗರೆದು ಹರಿವ ನೆತ್ತರ ಕಡಲಂ || ವಗ ಅಂತುಭಯಬಲ ಧನುರ್ಧರಬಲಂಗಳುಮತ್ತೆ ಮತ್ತಿದಾಗಚಂtು ತೊಳಗುವ ಬಾಳ್ ತಲತ್ತಟಪ ಕಕ್ಕಡೆ ಬುಂಚುಕದೊಳ್ ತಗುಳು ಪ
ಇಳಿಸುವ ಪಂಚರಾಯುಧಮಗುರ್ವಿಸುವಾವುತಿ ಪೂಸಿದಂತಿರಿ || ಮೃಳಮಮರ್ದಿದ್ರ ಮಾಳಜಿಗೆ ಸಕ್ಕರೆಯಿಕ್ಕಿದ ಜಾಯಿಲಂ ಭಯಂ ಗೊಳಿಸಿ ಕಡಂಗಿ ತಾಗಿದುದಸುಂಗೊಳೆ ತುಂಗ ತುರಂಗ ಸಾಧನಂ || ೭೬
ಗಟ್ಟಿಗರಾದ ಬಿಲ್ದಾರರು ಶಬ್ದಮಾಡಿ ಹೊಡೆಯಲಾಗಿ ಆಕಾಶಮಂಡಳವೆಲ್ಲ ಚಪ್ಪರ ಹಾಕಿದಂತಾಯಿತು. ೭೩. ಹರಿತವಾದ ಬಾಣಗಳಿಂದ ಗರಿಸನ್ನೆ ಮಾಡಿ ದೀರ್ಘವಾಗಿ ಸೆಳೆದು ವಿಸ್ತಾರವಾಗಿ ಹರಡಿ ಹಬ್ಬಿ ಆರ್ಭಟಮಾಡಿ ಬಾಣಪ್ರಯೋಗ ಮಾಡಲು ಕೆಂಪಾದ ಗರಿಯನ್ನುಳ್ಳ ಬಾಣಗಳು ಯುದ್ಧ ಮಾಡುತ್ತಿರುವ ಶೂರರಾದ ಬಿಲ್ದಾರರನ್ನು ಕಣ್ಣು ತೆರೆಯುವ ಹಾಗೆ ಮಾಡಿದುವು. ೭೪, ಕತ್ತರಿಸುವ, ನಾಟುವ, ಒಡೆದು ಹಾಕುವ, ನೇರವಾದ ಬಾಣಗಳು ಹಾರಿ ಸೀಳುವ, ನಾಟಿ ತೂಗುವ ಬಾಣಗಳಿಗೆ ಮುಖವನ್ನು ತಿರುಗಿಸಿಕೊಳ್ಳದೆ ಪ್ರತಿಭಟಿಸುವುದಕ್ಕೆ ಹೆದರದೆ ಕತ್ತಿಯಿಂದ ಹೊಡೆದ ಹಾಗೆ ಬಾಣವನ್ನು ಬಾಣವು ಹಿಂಬಾಲಿಸುವ ಹಾಗೆ ಹೊಡೆದರು. ೭೫. ಕಯ್ಯಲ್ಲಿ ಹಿಡಿದಿರುವ ಬತಳಿಕೆಯ ಹೊದೆಯಂಬುಗಳು ಸಂಪೂರ್ಣವಾಗಿ ಮುಗಿಯುವವರೆಗೂ ಪ್ರಯೋಗಮಾಡಿ ಅದು ಮುಗಿಯಲು ಕತ್ತಿಯನ್ನು ಸೆಳೆದು ಎದುರೆದುರಿಗೆ ಬಂದು ಸೈನ್ಯದಲ್ಲಿ ಹೆಣೆದುಕೊಂಡು ಬಿಲ್ದಾರರು ಆರ್ಭಟಮಾಡಿ ರಕ್ತ ಸಮುದ್ರವನ್ನು ಹರಿಯಿಸಿದರು. ವ|| ಹಾಗೆ ಎರಡು ಸೈನ್ಯದ ಬಿಲ್ದಾರ ಸೈನ್ಯವೂ ಸತ್ತು ನಾಶವಾಗಲು ೭೬. ಹೊಳೆಯುತ್ತಿರುವ ಕತ್ತಿ, ತಳತಳಿಸುತ್ತಿರುವ ಮುಳ್ಳುಗೋಲು, ಕುಚ್ಚಿಲಿನಲ್ಲಿ ಸೇರಿ ಪ್ರಜ್ವಲಿಸುವ ಪಂಚರಾಯುಧ, ಹೆದರಿಸುವ ಆವುತಿ, ಲೇಪಮಾಡಿದಂತೆ ಒತ್ತಾಗಿ ಸೇರಿರುವ ಮಾಳಜಿಗೆ, ಜೀನುಹಾಕಿದ ಜಾತಿಯ ಕುದುರೆಗಳು - ಇವು ಭಯವನ್ನುಂಟುಮಾಡಲು ಕುದುರೆಯ ಸೈನ್ಯವು ಪ್ರಾಣವನ್ನಪಹರಿಸುವ ಹಾಗೆ ತಾಗಿತು. (ಟಿ ಇಲ್ಲಿ ಬರುವ ಪಂಚರಾಯುಧ, ಆವುತಿ, ಮಾಳಜಿಗೆ ಮೊದಲಾದುವುಗಳ
Page #487
--------------------------------------------------------------------------
________________
೪೮೨ | ಪಂಪಭಾರತಂ
- ವ|| ಅಂತು ವಿಳಯಕಾಳದ ಕಾಟ್ಕರ್ಚಿನ ಬೇಗೆ ಸಾರ್ವಂತಿರ್ವಲದಳವುಂ ಕಿರ್ಚು೦ ಕಿಡಿಯುಮಾಗೆ ತಾಗಿದಾಗಚoll ಪಸುಗ ನೆಲ ಜಲಂ ಹಯದೊಡಂಬಡು ವಂಚನೆ ಕೇಣಮಾಸನಂ
ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಕ್ಕೆ ಪರ್ವಿದೇ | ರ್ವಸನದೊಳಾದ ಬಲೆಯೊಳೊಡಂಬಡ ತಳಿವಲ್ಲಿ ಮಿಂಚಿನೋಲ್ ಮುಸುಕಿದ ಮಾಯಾಯ್ತು ಸಮರಾಂಗಣಮುಳ್ಳುವ ಬಾಟ್ಗಳುಳ್ಳದಿಂ || ೭೭ ಕರ ಕರವಾಳಘಾತದೊಳರಾತಿಯ ಪಂದಲೆ ಪಂಚರಾಯುಧಂ ಬೆರಸಸೆವಟ್ಟೆ ತೊಟ್ಟ ಕವಚಂಚೆರಳಿದ ವಾಜಿ ಲೋಹವ | ಕರೆವೆರಸೊಂದೆ ಸೂಳೆ ಪಡಲ್ಡಡ ದೊರ್ವಲದುರ್ವು ಬೀರದೊಳ್
ಪೊರೆದಿರೆ ಬಿನ್ನಣಂ ನೆಗಟಿ ತಳೆದರ್ ಕೆಲರಾಜಿರಂಗದೊಳ್ || ೭೮ ಕಂt ಪಿಡಿದುದಿರ್ವ ಬಾಳ ಕಿಡಿಗಳ
ನೊಡನೊಡನರೆವೊತ್ತಿ ಕೊಟ್ಟ ಸನ್ನಣವುರಿಯ | ಲೋಡರಿಸಿದೊಡವ ಪರ್ವ
ಬಿಡೆಯರಿದರಿಸಮಿತಿಯೊಡನೆ ಕಾದಿದರರೆಬರ್ | ಚಂll ಭುಗಭುಗನುರ್ಚಿ ಪಾಯ್ಕ ಬಿಸುನೆತ್ತರ ಸುಟ್ಟುರೆಯಂ ನೆಲಕ್ಕೆ ಪ
ರ್ದುಗಳುಗಲೀಯದವ್ವಳಿಸಿ ಪೀರ್ವಿನಮೊರ್ಮಯ ಪೊಯ್ದ ಪೊಯ್ದಳಿಂ | ನೆಗೆದು ಮುಗಿಳಿಟ್ಟೆಡೆಗಳೊಳ್ ತಲೆಗಳ ತೊಡರ್ದಿದ್ರ ಜೇನಪು
ಟ್ಟಿಗಳನೆ ಪೋಲ್ಕುವೇಂ ಕಲಹಮಚ್ಚರಿಯಾಯೋ ತುರಂಗಸೈನ್ಯದೊಳ್ || ೮೦ | ಅರ್ಥ ಅನಿರ್ದಿಷ್ಟ ವ!! ಹಾಗೆ ಪ್ರಳಯಕಾಲದ ಕಾಡುಗಿಚ್ಚಿನ ಬೆಂಕಿಯು ಬರುವ ಹಾಗೆ ಎರಡು ಸೈನ್ಯದ ಸಾಮರ್ಥ್ಯವೂ ಕಿಚ್ಚು ಕಿಡಿಯಾಗಿ ದಳ್ಳಿಸಿ ತಾಗಿತು. ೭೭. ವಿಭಾಗ, ನೆಲ, ಜಲ, ಕುದುರೆಗಳ ಹೊಂದಾಣಿಕೆ, ಮೋಸ, ಮಾತ್ಸರ್ಯ, ಔದಾಸೀನ್ಯ, ವಾಹನದ ಆರೋಹಣ, ದಿಕ್ಕು ದೃಷ್ಟಿ ಮುಷ್ಟಿ, ಮುನ್ನುಗ್ಗುವಿಕೆ, ಹೆದರಿಸುವಿಕೆ, ಹಿಂದಿರುಗುವಿಕೆ, ಪುನಃ ಕಾಣಿಸಿಕೊಳ್ಳುವಿಕೆ ಇವು ವ್ಯಾಪ್ತವಾದ ಯುದ್ಧಕಾರ್ಯದ ಬಲೆಯಲ್ಲಿ ಸಮನ್ವಯವಾಗಿರುವಂತೆ ಸೇರಿಕೊಂಡಿರಲು ತಾಗಿ ಯುದ್ದಮಾಡುವಾಗ ಆ ಯುದ್ಧರಂಗವು ಪ್ರಕಾಶಮಾನವಾದ ಕಾಂತಿಯಿಂದ ಮಿಂಚಿನಲ್ಲಿ ಮುಸುಕಿದಂತಾಯಿತು. ೭೮. ಕೈಗತ್ತಿಯ ಪೆಟ್ಟಿನಿಂದ ಕೂಡಿದ ಶತ್ರುವಿನ ಹಸಿಯ ತಲೆ ಪಂಚರಾಯುಧದಿಂದ ಕೂಡಿದ ಪ್ರಕಾಶಮಾನವಾದ ಮುಂಡ, ಧರಿಸಿದ ಕವಚದೊಡನೆ ಕೂಡಿ ಹತ್ತಿರುವ ಕುದುರೆ, ಕಬ್ಬಿಣದ ಗಾಳ ಸಮೇತವಾಗಿ ಒಂದೇ ಬಾರಿಗೆ ಕೆಳಗೆ ಬೀಳಲು ಬಾಹುಬಲದ ಆಧಿಕ್ಯವು ಪರಾಕ್ರಮದಲ್ಲಿ ತೋರಿ ಬರುತ್ತಿರಲು ಪ್ರೌಢಿಮೆಯು ಉಂಟಾಗುವ ಹಾಗೆ ಕೆಲವರು ಯುದ್ಧರಂಗದಲ್ಲಿ ಬೆರಸಿ ಹೊಯ್ದಾಡಿದರು. ೭೯. ಎಡಬಿಡದೆ ಸುರಿಯುತ್ತಿರುವ ಕತ್ತಿಯ ಕಿಡಿಗಳಿಂದ ತಕ್ಷಣವೇ ಅರ್ಧ ಹತ್ತಿಕೊಂಡ ತೊಟ್ಟ ಕವಚವು ಉರಿಯುವುದಕ್ಕೆ ಮೊದಲಾಗಲು ಆ ಕವಚಗಳ ಜೋಡಣೆಯನ್ನು ಬಿರಿಯುವಂತೆ ಕತ್ತರಿಸಿ ಅನೇಕರು ಶತ್ರುಸಮೂಹದೊಡನೆ ಕಾದಿದರು. ೮೦. ಭುಗಭುಗನೆ ಸೀಳಿಕೊಂಡು ಹಾಯುವ ಬಿಸಿರಕ್ತದ ಪ್ರವಾಹವನ್ನು
Page #488
--------------------------------------------------------------------------
________________
ದಶಮಾಶ್ವಾಸಂ / ೪೮೩ ವlು ಅಂತೆರಡುಂ ಬಲದ ದಂಗಳ ಕೊಲಾಟಮಾಡುವಂತೆ ಕಿಟೆದಾನುಂ ಬೇಗಂ ತಟ್ಟುಪೊಟೊಂದು ಕೋಲ್ಕುಟ್ಟಿ ಪತ್ತೆಂಟು ಸಾಸಿರ ಕುದುರೆಯಟ್ಟೆಯುಮೆಂಟು ನೆತ್ತರ. ಕಡಲ್ ಕಡಲನಟ್ಟೆಯುಂ ಕಾದಿ ಬಸಮಣಿದು ಪಂಪಿಂಗಿ ನಿಂದಾಗಳ್ ಪ್ರಳಯದುರಿಯನುರುಳಿ ಮಾಡಿದಂತಾನುಂ ಬಡವಾಗ್ರಿಯನನುವಿಸಿದಂತಾನುಂ ಬಯಸಿಡಿಲ ಕಿಡಿಗಳ ಬಳಗಮನೊಳಗು ಮಾಡಿದಂತಾನುಂ ಗೊಂದಣಿಸಿ ಸಂದಣಿಸಿ ನಿಂದಣಿಯನೆರಡುಂ ಬಲದ ಕಡಿತಲೆಯ ನಾಯಕರ್ ಕೆಯೊಂದು ಬಳುಗಡದವಾಜುವಾತಿ ಸಲಗವಾಡಿ ಗೂಳಿಸೊರ್ಕಿ ಮಾರ್ಕೊಂಡು ಕಾದಕoll ಪುಸಿ ನಸುವಂಚನೆ ನೋರ್ವನು
ವಸಿದಗಲಿತು ತಕ್ಕುದಕ್ಕು ಪಗೆ ಕೆಯ್ಯಗೆ ಕ | ಯುಸುರಿ ನುಸುಳೆಂಬ ಕೇಣದ ಕುಸುರಿಯನಳದಿಳಿದು ಮಣಿದು ನಡೆದುಆದರೆಬರ್ 11* ೮೧ . ಬಳಸಿಡಿಲೆಜಪತಿರೆ ಬಂ ದೆಂಗಿದರಂ ತಳು ಬಾಳ ಕೀಚಿನೆಯಿಂ ತ ಇಜದ ದುಬ್ರಮೆಂಬಿವ . ನಡೆದಿವೆದಿರ್ ಪೆಣಬಣಂಬೆಗಳ ನೆಗೆವಿನೆಗಂ ||
೮೨
ನೆಲಕ್ಕೆ ಬೀಳಲು ಬಿಡದಂತೆ ಹದ್ದುಗಳು ಮೇಲಕ್ಕೆ ಹಾರಿ ಕುಡಿಯುತ್ತಿದ್ದುವು. ಒಂದೇ ಸಲ ಹೊಡೆದ ಹೊಡೆತದಿಂದ ಮೋಡಗಳ ಸಂದುಗಳೊಳಕ್ಕೆ ಹಾರಿ ಸಿಕ್ಕಿಕೊಂಡಿರುವ ತಲೆಗಳು ಜೇನಿನ ಗೂಡುಗಳನ್ನೇ ಹೋಲಿದುವು. ಕುದುರೆಯ ಸೈನ್ಯದಲ್ಲಿ ಕಾಳಗವು ಎಷ್ಟು ಆಶ್ಚರ್ಯಕರವಾಯಿತೋ? ವll ಹಾಗೆ ಎರಡು ಸೈನ್ಯದ ಸಾಮಾನ್ಯದಳಗಳೂ ಕೋಲಾಟವಾಡುವ ಹಾಗೆ ಸ್ವಲ್ಪ ಹೊತ್ತು ಥಟ್ ಪಟ್ ಎಂದು ಬಾಣಗಳಿಂದ ಹೊಡೆದಾಡಲು ಹತ್ತೆಂಟುಸಾವಿರ ಕುದುರೆಯ ಶರೀರಗಳು ನಾಶವಾದವು. ಏಳೆಂಟು ಸಮುದ್ರಗಳು ಸಮುದ್ರವನ್ನೂ ಮುಂದಕ್ಕೆ ನೂಕುವಂತೆ ಹರಿದುವು. ಅಶ್ವಾರೋಹಿಗಳು ಕಾದಿ ಶಕ್ತಿಗುಂದಿ ಹಿಂಜರಿದು ನಿಂದಾಗ ಎರಡು ಪಕ್ಷದ ಕತ್ತಿಯ ನಾಯಕರು ಪ್ರಳಯ ಕಾಲದ ಉರಿಯನ್ನು ಉಂಡಮಾಡಿದ ಹಾಗೂ ಬಡಬಾಗ್ನಿಯನ್ನು ಒಟ್ಟುಗೂಡಿಸಿದ ಹಾಗೂ ಬರಸಿಡಿಲಿನ ಕಿಡಿಗಳ ಸಮೂಹವನ್ನು ತನ್ನಲ್ಲಿ ಸೇರಿಕೊಂಡ ಹಾಗೂ ಗುಂಪಾಗಿ ಒಂದುಗೂಡಿ ನಿಂತ ಸೇನೆಯ ಸಾಲನ್ನು ವಹಿಸಿಕೊಂಡು ನರಿಯಂತೆ ಕೂಗಿ ಒಂದೇ ನೆಗೆತವನ್ನು ಹಾರಿ ಕತ್ತಿಗಳನ್ನು ಝಳಪಿಸಿ ಸೊಕ್ಕಿನಿಂದ ಪ್ರತಿಭಟಿಸಿ ಕಾದಿದರು. ೮೧. ಪುಸಿ, ನಸುವಂಚನೆ, ನೋರ್ವನುವಿಸಿದಗಲಿತು, ತಕ್ಕುದಕ್ಕು, ಪಗೆ, ಕಯ್ಯಗೆ, ಕಮ್ಯುಸುರಿ, ನುಸುಳು, ಎನ್ನುವ ಮಾತ್ಸರ್ಯದ ಸೂಕ್ಷ್ಮ ವಿವರವನ್ನು ತಿಳಿದು ದಕ್ಷತೆಯಿಂದ ಹೊಡೆದು ಕೆಲವರು ಉತ್ಸಾಹಶೂನ್ಯರಾಗದೆ ಹೊಯ್ದಾಡಿದರು. ೮೨. ಬರಸಿಡಿಲು ಮೇಲೆ ಬೀಳುವಂತೆ ಮೇಲೆ ಬಿದ್ದವರನ್ನು ಸಂಧಿಸಿ ಕತ್ತಿಯ ಕೆಳತುದಿಯಿಂದ ಚೂರುಚೂರಾಗಿ ತರಿದು ಉಬ್ಬರ (?) ವೆಂಬುದನ್ನು ತಿಳಿದು
* ಈ ಪದ್ಯದಲ್ಲಿ ಸುರಗಿಕಾಳಗದ ಹಲವು ಪರಿಭಾಷಾ ಶಬ್ದಗಳಿವೆ. ಅವುಗಳ ಅರ್ಥ ಸ್ಪಷ್ಟವಲ್ಲದುದರಿಂದ ಪದ್ಯದ ಅರ್ಥವೂ ಅಸ್ಪಷ್ಟ.
Page #489
--------------------------------------------------------------------------
________________
೪೮೪) ಪಂಪಭಾರತಂ
ಚಾರಿಸಿ ಬಾಳಾಗಮಮವ ತಾರಂ ಗೆಯ್ದಂತ ಕಾಲದಂತಕನನೆ ಪೋ | ಝಾರುತ್ತುಂ ಕವಿವದಟರ . ` ನೂರೊಂದೋರೊಂದವೊಯ್ದು ಕೊಂದರ್ ಪಲರಂ || ೮೩ ಬಾಳ್ತಾಳಳ ಘಟ್ಟಣೆಯೊಳ್ ಬಳ್ಳಳ ಬಳೆದೂಗದು ನೆಗೆದ ಕಿಡಿಗಳ ಬಂಬ | ಅಳ್ವರು ಪೊಳೆದು ನೆಗೆದುದು ಬಾಳ್ಕೊಗೆ ಕಾಜಮುಗಿಲ್ ಬಳ್ಳಿಮಿಂಚಿನಿಂದುಳ್ಳುವವೋಲ್ |೮೪ ತಲೆ ನೆಲದೊಳುರುಳೊಡಂ ಮ ಯಲಿಯೊರ್ವಂ ಪಿಡಿದು ತಲೆಯನಿಟ್ಟಟ್ಟೆಯೋಳ | ಗಳಿಸಿದ ಮುಳಿಸಿಂ ಮಾಟದ ತಲೆಯಿಟ್ಟಾಡುವನನಿನಿಸು ಪೋಲ್ಕನುಗೆಯ್ಯಂ
೮೫ ವll ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಳೆದುಪೊತ್ತು ಕಾದಿ ನಿಂದಾಗಳ್ಉll ಮಾರುತ ಘಾತ ಸಂಚಳಿತ ಕೇತು ಸಮೂಹಮುದಗ್ರ ಚಕ್ರ ಚೀ
ತಾರಮುದಾರ ವೀರಭಟ ಸಿಂಹನಿನಾದ ವಿಮಶಿತೋಟ | ಜ್ಞಾರಾವಮಂಬರತರಮನಳ್ಳಿಚಿದವ್ವಳಿಪನ್ನೆಗಂ ಶಾರಾ ಸಾರದಗುರ್ವು ಪರ್ವಿನಿಲೆ ತಾಗಿದುವುಗ್ರರಥಂ ರಥಾಳಿಯೊಳ್ || ೮೬' .
ಹೆಣದ ರಾಶಿಗಳು ಬೀಳುವವರೆಗೆ ಹೊಡೆದಾಡಿದರು. ೮೩. ಶಸ್ತಶಾಸ್ತ್ರವೇ . ಅವತಾರಮಾಡಿದ ಹಾಗೆ ಕತ್ತಿಯನ್ನು ಝಳಪಿಸಿ ಪ್ರಳಯಕಾಲದ ಯಮನ ಹಾಗೆ ಆರ್ಭಟ ಮಾಡುತ್ತ ಮೇಲೆ ಬೀಳುವ ಪರಾಕ್ರಮಶಾಲಿಗಳನೇಕರನ್ನು ಒಂದೊಂದೇ ಸಲ ಹೊಡೆದು ಕೊಂದರು. ೮೪, ಕತ್ತಿಕಗಳ ತಗಲುವಿಕೆಯಿಂದ ಹುಟ್ಟಿ ಹೆಚ್ಚಿ ಮೇಲಕ್ಕೆ ಹಾರಿದ ಕಿಡಿಗಳ ಸಮೂಹದಿಂದ ಕೂಡಿದ ಕತ್ತಿಯ ಹೊಗೆಯು ಮಳೆಗಾಲದ ಮೋಡವು ಬಳ್ಳಿಮಿಂಚಿನಿಂದ ಪ್ರಕಾಶಿಸುವ ಹಾಗೆ ಹೊಳೆದು ಮೇಲಕ್ಕೆ ಹಬ್ಬಿತು. ೮೫. ತಲೆಯು ನೆಲದಲ್ಲಿ ಉರುಳಿದರೂ ಶೂರನೊಬ್ಬನು ಆ ತಲೆಯನ್ನು ಹಿಡಿದು ಮುಂಡದಲ್ಲಿಟ್ಟುಕೊಂಡು ಅಧಿಕವಾದ ಕೋಪದಿಂದ ಕೃತಕವಾದ ತಲೆಯನ್ನು ಧರಿಸಿ ಆಟವಾಡುವವನನ್ನು ಸ್ವಲ್ಪಮಟ್ಟಿಗೆ ಅನುಕರಿಸಿ ಕಾದಿದನು. ವ|| ಹಾಗೆ ಸೇನಾಸಮೂಹವು ಭಯಪಡದೆ ಮತ್ಪರಿಸಿ ಜಗಳವಾಡಿ ಸ್ವಲ್ಪ ಕಾಲ ಕಾದಿ ನಿಂತರು. ೮೬. ಗಾಳಿಯ ಹೊಡೆತದಿಂದ ಚಲಿಸುತ್ತಿರುವ ಬಾವುಟಗಳ ಸಮೂಹವೂ ಎತ್ತರವಾದ ಚಕ್ರಗಳ ಚೀತ್ಕಾರ ಶಬ್ದವೂ ಶ್ರೇಷ್ಠರಾದ ವೀರಭಟರ ಸಿಂಹನಾದದಿಂದ ಕೂಡಿದ ಅತ್ಯಧಿಕವಾದ ಬಿಲ್ಲಿನ ಹೆದೆಯ ಟಂಕಾರಧ್ವನಿಯೂ ಆಕಾಶಪ್ರದೇಶದ ಒಳಭಾಗವನ್ನು ನಡುಗುವಂತೆ ಮಾಡಿ ಪ್ರವೇಶಿಸಿದುವು. ಬಾಣದ ಮಳೆಯು ವಿಶೇಷವಾಗಿ ಹಬ್ಬಿ ಹರಿಯಿತು. ಭಯಂಕರವಾದ ರಥಗಳು ರಥಸಮೂಹದೊಡನೆ ತಾಗಿದುವು.
Page #490
--------------------------------------------------------------------------
________________
ದಶಮಾಶ್ವಾಸಂ / ೪೮೫ ವ|| ಅಂತು ತಾಗಿದಾಗಳ್ ಚಂ|| ಕುದುರೆಯ ಬಣ್ಣದಿಂ ರಥದ ತೋರ್ಕೆಯಿಸಿದ ಚಿತ್ರಕೇತು ವೃಂ
ದದ ಕುಲುಪಿಂದುದಗ್ರ ರಥಚೋದಕ ಚಿಹ್ನದಿನಾತನೀತನಂ | ಬುದನಳಿದೂರ್ವರೋರ್ವರನೆ ಮಚ್ಚರದಿಂ ಗಸನ್ನೆಗೆಯ್ತಿದಿ
ರ್ಚಿದ ಪದದೂಳ ಪತಿಮಯಮಂಬಿನಿತಾಯ್ತು ಸಮಸ್ತ ದಿಕ್ತಟಂ | ೮೭ ಕ೦ll ಪರಶು ಶರ ನಿಕರದಿಂ ಕು
ಮರಿಗಡಿದವೊಲೊಡನೆ ಕಡಿಯ ರಥಿಗಳ ರಥದಿಂ | ಧರೆಗಿಳಿದು ವಿರಥರತಿರಥ ರರೆಬರ್ ಮೇಲ್ವಾಯ್ತು ರಥಿಗಳಂ ಸುರಿಗಿಳಿದರ್ || ತರಂ ಪಾಯಿಸಿ ನೋಯಿಸಿ. ಪಾರುವ ಕುದುರೆಗಳನರೆಬರೆರ್ದೆಯುರಿಯಚ್ಚರ್ | ಸಾರಥಿಯ ರಥಿಯ ತಲೆಗಳ ನೂರೊಂದಸ್ತದೊಳೆ ಪಾಟಿ ಜೀಜಟ್ಟಿನೆಗಂ ನೆತ್ತರ ಕಸ ಗಾಲಿಗ ಇತ್ತಂ ತಳರದ ಜಿಗಿಟ್ಟು ನಿಲೆ ಧರೆಗಿಳಿದಾ | ರ್ದ ಸರಿಯಿಸಿದರೇಂ ಮ
↑ತ್ತುದೂ ರಥಕಲ್ಪಮಲ್ಲಿ ಸೂತರ್ ಕೆಲಬರ್ | ವ|| ಅಂತುಭಯ ವರೂಥಿನಿಯ ವರೂಥಂಗಳ್ ಮಲ್ಲಾಮಲಿಯಾಗೆ ಕಾದುವಾಗಳ
ವ|| ಹಾಗೆ ತಾಗಿದಾಗ-೮೭. ಕುದುರೆಯ ಬಣ್ಣದಿಂದಲೂ ರಥಗಳ ತೋರಿಕೆ ಯಿಂದಲೂ ಎತ್ತಿ ಕಟ್ಟಿರುವ ಚಿತ್ರಖಚಿತವಾದ ಧ್ವಜಗಳ ಗುರುತಿನಿಂದಲೂ ಶ್ರೇಷ್ಠರಾದ ಸಾರಥಿಗಳ ಚಿಹ್ನೆಗಳಿಂದಲೂ ಪರಸ್ಪರ ಪರಿಚಯ ಮಾಡಿಕೊಂಡು (ಗುರುತು ಹಿಡಿದು) ಒಬ್ಬರನ್ನೊಬ್ಬರು ಮತ್ಸರದಿಂದ ಬಾಣದ ಗರಿಯ ಮೂಲಕ ಸನ್ನೆಮಾಡಿ ಎದುರಿಸಿದ ಸಂದರ್ಭದಲ್ಲಿ ಸಮಸ್ತವಾದ ದಿಕ್ತಟವೂ ಬಾಣಮಯವೆನ್ನುವ ಹಾಗಾಯಿತು. ೮೮. ಕೊಡಲಿಯಾಕಾರದ ಬಾಣಗಳ ಸಮೂಹದಿಂದ ಕಾಡಿನ ಮರಗಳನ್ನು ತರಿಯುವಂತೆ ತಕ್ಷಣವೇ ತರಿದುಹಾಕಲು ರಥದಲ್ಲಿದ್ದವರು ಭೂಮಿಗಿಳಿದು ರಥವಿಲ್ಲದ ಅನೇಕ ಅತಿರಥರ ಮೇಲೆ ಬಿದ್ದು ರಥದಲ್ಲಿದ್ದವರನ್ನು ಕತ್ತಿಯಿಂದ ಕತ್ತರಿಸಿದರು. ೮೯. ಕೆಲವರು ತೇರನ್ನು ಹರಿಯಿಸಿ ಹಾರುತ್ತಿರುವ ಕುದುರೆಗಳನ್ನು ನೋಯಿಸಿ ಸಾರಥಿಯ ಮತ್ತು ರಥದೊಳಗಿರುವವನ ತಲೆಗಳನ್ನು ಒಂದೇ ಬಾಣದಿಂದ ಹಾರಿ ಜೀರೆಂದು ಶಬ್ದ ಮಾಡುವ ಹಾಗೆ ಹೊಡೆದರು. ೯೦. ರಕ್ತದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿ ಯಾವ ಕಡೆಯೂ ಚಲಿಸದೆ ಅಂಟಿಕೊಂಡು ನಿಲ್ಲಲು ಭೂಮಿಗಿಳಿದು ಆರ್ಭಟಮಾಡಿ ಕೆಲವರು ಸೂತರು ಎತ್ತಿ ಹರಿಯುವ ಹಾಗೆ ಮಾಡಿದರು. ಆ ಸಮಯದಲ್ಲಿ ಅಲ್ಲಿ ಅವರ ರಥಕಲ್ಪಕೌಶಲವು ಅದ್ಭುತವಾಗಿದ್ದಿತು. ವ|| ಹಾಗೆ ಎರಡುಸೈನ್ಯದ ತೇರುಗಳು ಪರಸ್ಪರ ಎದುರೆದುರಿಗೆ ಯುದ್ಧ
Page #491
--------------------------------------------------------------------------
________________
೪೮೬ | ಪಂಪಭಾರತ ಮ|| ಉಡಿದಿರ್ದಚಟಿದೀಸು ತಟ್ಟಿದ ನೊಗಂ ಜೀು ಚಕ್ರಂ ಸಿಡಿಲ್
ಪೊಡೆದಂತೂರ್ಮೆಯ ಸೂಸಿ ಪಾಳದ ಮಡಂ ನುರ್ಗಾದ ಕೀಲ್ ಸಾಯಕಂ | ನಡೆ ನೊಂದಯ್ಕೆ ಸುರುಳುರುಳ ತುರಗಂ ಸುರ್ಕಿದ್ರ ಸೂತಂ ಕಡಲ್ ಕಡಲಂ ಮುಟ್ಟಿ ತೆರಳ್ತ ನೆತ್ತರ ಪೊನಲ್ ಕಸ್ಕೊಂಡುದುಗ್ರಾಜಿಯೊಳ್ || ೯೧
ವ|| ಅಂತು ಪತ್ತೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ವರೂಥಯೂಥಂಗಳಲ್ಲಿ ಮೆಟ್ಟಿದಂತಾದಾಗಳ್ಉll ಇಕ್ಕಿದ ಲೋಹವಕ್ಕರೆಯ ಕರ್ಪುಗಳಿಂ ಕವಿತರ್ಪ ವಿಂಧ್ಯ ಕೈ
ಲಕೃಣೆಯಾಗೆ ಜೋದರಿಸುವಂಬಿನ ಬಲ್ಬರಿ ತಿಣಮಾಗಿ ಕ | ಹೈಕು ವಿರೋಧಿ ಸಾಧನ ಘಟಾಳಿಯನೋಡಿಸಲಾಗಳಾರ್ದು ಬಿ
ಟ್ರಕ್ಕಿದರುy ಸಿಂಧುರ ಘಟಾವಳಿಯಂ ಮುಳಿಸಿಂ ನಿಷಾದಿಗಳ್ || ೯೨ ಶಾll ಆದಿತ್ಯಂ ಮಸುಳ್ಳನ್ನೆಗಂ ಧ್ವಜ ಘಟಾಟೋಪಂಗಳಿಂದಂ ಲಯಾಂ
ಭೋದಂಗಳ ಕವಿವಂತವೋಲ್ ಕವಿವುದುಂ ಕಾಲ್ಕಾಪು ಕಾಲ್ದಾಪಿನೊಳ್ | ಜೋದರ್ ಜೋದರೊಳಾನಯಾನೆಯೋಳಗುರ್ವಪನ್ನೆಗಂ ಕಾದ ಕ
ಣ್ಣಾದಂ ಚೆಲ್ವೆಸೆದತ್ತು ಮೂಜು ನೆಲೆಯಿಂ ಮಾದ್ಯದ್ಭಜೇಂದ್ರಾಹವಂ | ೯೩
ವ|| ಅಂತಾ ದಂತಿಘಟಿಗಳನಾರೂಹಕರ್ ತೂಕೊಟೊಂದೊಂದರ್ಕೆ ಮೊಗಂಬುಗಿಸಿದಾಗಳುಭಯವ್ಯಾಳದಂತಿ ವಧ್ಯಕ್ರಮಂಗಳೊಳ್ ಭಾರ್ಗವ ಸುರಿಗಿಳಿವಂತಿಕೆಯ ಮಾಡುತ್ತಿರಲು ೯೧. ಒಡೆದುಹೋದ ಅಚ್ಚಿನ ಮರವೂ ನಾಶವಾದ ಇರಚಿನ ಮರವೂ ತಗ್ಗಿಹೋದ ನೊಗವೂ ಜೀರೆಂದು ಶಬ್ದಮಾಡುತ್ತಿರುವ ಚಕ್ರಗಳೂ ಸಿಡಿಲು ಹೊಡೆದ ಹಾಗೆ ಒಂದೇ ಸಲ ಹಾರಿದ ಪಾರೆಯ ಮರವೂ ಜಜ್ಜಿಹೋದ ಕೀಲೂ, ಬಾಣವು ನಾಟಲಾಗಿ ನೊಂದು ಸಂಪೂರ್ಣವಾಗಿ ಸೊರಗಿಕೊಂಡು ಬಿದ್ದ ಕುದುರೆಯೂ ಸಮುದ್ರವು ಸಮುದ್ರವನ್ನು ಮುಟ್ಟುವಂತೆ ಹರಿದ ರಕ್ತಪ್ರವಾಹವೂ ಯುದ್ಧಭೂಮಿಯಲ್ಲಿ ಭಯಂಕರವಾಗಿ ಕಂಡವು. ವ ಹಾಗೆ ಹತ್ತೆಂಟು ಸಮುದ್ರವನ್ನು ಹಿಮ್ಮೆಟ್ಟಿಸಲು ರಥಸಮೂಹಗಳು ಸಂಪೂರ್ಣವಾಗಿ ನಾಶವಾದವು. ೯೨. ತೊಡಿಸಿದ ಗುಳದಿಂದ ಕೂಡಿದ ಕಪ್ಪುಬಣ್ಣದ ಆನೆಗಳು ಮೇಲೆ ಕವಿದುಬೀಳುವ ವಿಂಧ್ಯಪರ್ವತಕ್ಕೆ ಸಮಾನವಾಗಿರಲು ಮಾವಟಗರು ಪ್ರಯೋಗಿಸುವ ಬಾಣದ ಬಲವಾದ ಮಳೆಯು ಅಧಿಕವಾಗಿ ಕೈಮೀರಿ ಶತ್ರುಪಕ್ಷದ ಆನೆಯ ಸಮೂಹವನ್ನು ಓಡಿಸಲು ಆಗ ಘಟ್ಟಿಯಾಗಿ ಕೂಗಿಕೊಂಡು ಮಾವಟಿಗರು ಭಯಂಕರವಾದ ಆನೆಯ ಸಮೂಹವನ್ನು ಭೂಬಿಟ್ಟರು. ೯೩. ಸೂರ್ಯನು ಕಾಂತಿಹೀನನಾಗುವ ಹಾಗೆ ಧ್ವಜದಿಂದ ಕೂಡಿದ ಆನೆಗಳು ವಿಜೃಂಭಣೆಯಿಂದ ಪ್ರಳಯಕಾಲದ ಮೋಡಗಳು ಮುತ್ತುವ ಹಾಗೆ ಮುತ್ತಲು ಪದಾತಿ ಸೈನ್ಯವು ಪದಾತಿಗಳೊಡನೆಯೂ ಮಾವಟಿಗರು ಮಾವಟಿಗರೊಡನೆಯೂ ಭಯವುಂಟಾಗುವ ಹಾಗೆ ಕಾಡುತ್ತಿರಲು ಆ ಮದ್ದಾನೆಗಳ ಕಾಳಗವು ಮೂರು ಅವಸ್ಥೆಗಳಲ್ಲಿಯೂ ಕಣ್ಣಿಗೆ ಸುಂದರವಾಗಿದ್ದಿತು. ವ|| ಹಾಗೆ ಆ ಮಂದೆಯ ಸಮೂಹಗಳನ್ನು ಮೇಲಿದ್ದ ಮಾವಟಿಗರು ಛಬಿಟ್ಟು ಒಂದಕ್ಕೊಂದಕ್ಕೆ
Page #492
--------------------------------------------------------------------------
________________
ದಶಮಾಶ್ವಾಸಂ / ೪೮೭ ಸೂಸುವ ಕೆನ್ನೆತ್ತರ್ ಕಬಲ್ಲುದಿರ್ವ ಸಕ್ಕದ ಸಿಪ್ಪುಗಳುಂ ಸಿಡಿಲು ಜೀತೇಲ್ವ ಕೋಲ್ಕಳುಮಗುರ್ವ೦ ಪಡೆಯಚಂ|| ನಡುವ ಸರಲ್ಲಿ ಮೆಟ್ರೊಳಗಡಂಗುವ ಸಂಕುಗೆ ದಿಂಕುಗೊಳ್ಳ ಕ
ಕಡೆಗಿದಿರುರ್ಚುವಿಟ್ಟಿಗಿದಿರಾನೆಯ ಕೋಲ್ಕಳ ಕೊಳ್ಳೆ ನೊಂದು ಬಾ | ಮೈಡದಿನಿಸಪ್ರೊಡಂ ಪಳಯದಳದೆ ಪಾವಿನಲಿಟ್ಟವೋಲ್ ಪೊಡ
ರ್ಪುಡುಗದೆ ಬಿಟ್ಟುವಿರ್ದ ನೆಲೆಯಿಂ ಕಲವುನದ ಗಂಧಸಿಂಧುರಂ || ೯೪ ಕಂ ಪಾಳುವ ಪಾಕುಂಬಳ ಕೊಳೆ
ಜೀಜುಂಬರಕೆ ತಲೆ ಸಿಡಿಲೊಡಮಾ ಕಾ | ಯಾಣದ ಹರಣಂಗಯ್ಯುವು
ಜಾಜಿಲ್ಲದೆ ಜೋದರಟ್ಟೆಗಳ್ ಕೆಲವಾಗಳ್ || ಚಂil ಕಣಕೆನೆ ಚಕ್ರತೀವ್ರ ಹತಿಯಿಂ ತಲೆ ಪೋದೊಡೆ ಜೋದರಟ್ಟೆ ಸಂ
ದಣಿಸಿದ ಬಂಧದಿಂ ಬಿಸುಗೆಯೊಳ್ ನೆಲಸಿರ್ದಸೆದಾಡೆ ನಟ್ಟ ಕೂ| ರ್ಗಸವೆರಸಿರ್ದ ಕೂರ್ಗಣೆಗಳುಚ್ಚಳಿಸುತ್ತಿರೆ ಸುಯ್ಯು ಪುಣ್ಯತಿಂ
ಥಿಣಿಗಳಿನಂದಗುರ್ವುವೆರಸಾಡಿದುವೊಂದರಡಾನೆಯಟ್ಟೆಗಳ್ ||
ವಗಿ ಅಂತರಡುಂ ಬಲದ ಕರಿಘಟೆಗಳೊಂದೊಂದಲೊಳ್ ತಾಗಿ ತಟ್ಟಲಿಯ ಬಿಸುನೆತ್ತರರ್ದಿಗಳುರ್ವಿ ಪಾಯೆ ಪೇರರ್ವಿಗಳೊರಸು ಜಾಜಿನ ಪರ್ವತಗಳಂತೆ ಕಡೆದಟ್ಟಿ ತಟ್ಟಿದಾಗ
೯೫
ವಿದಾಯಮಾಡಿಸಿದಾಗ ಎರಡು ಕಡೆಯ ತುಂಟಾನೆಗಳೂ ಕೊಲ್ಲುವ ವಿಧಾನಗಳಲ್ಲಿ ಧನುರ್ಧರರು ಕತ್ತಿಯಿಂದ ಇರಿಯುವಂತೆ ಇರಿಯಲು ಚೆಲ್ಲುವ ರಕ್ತವೂ ಸಡಿಲವಾಗಿ ಕೆಳಗೆ ಬೀಳುವ ಕಟವಾಯಿಚಪ್ಪುಗಳೂ ಜೀರೆಂದು ಸಿಡಿಯುವ ಕೊಂಬುಗಳೂ ಭಯವನ್ನುಂಟುಮಾಡಿದುವು. ೯೪. ಶರೀರದೊಳಕ್ಕೆ ನಾಟಿಕೊಳ್ಳುವ ಬಾಣಗಳಿಗೂ ಮೆಯ್ಯೋಳಕ್ಕೆ ಹೋಗಿ ಅಡಗಿಕೊಳ್ಳುವ ಕಠಾರಿಗಳಿಗೂ ಹಾರಿ ಬರುವ ಮುಳ್ಳು ಕೋಲು ಗಳಿಗೂ ಎದುರಾಗಿ ಚುಚ್ಚಿ ಬರುತ್ತಿರುವ ಈಟಿಗಳಿಗೂ ಆನೆಯ ಕೊಂಬುಗಳ ತಿವಿತಕ್ಕೂ ನೊಂದು ಕೂಗಿಕೊಳ್ಳದೆ ಸ್ವಲ್ಪವೂ ಹೆದರದೆ ಶಕ್ತಿಗುಂದದೆ ಹಾವಿನಿಂದ ಹೊಡೆದ ಹಾಗೆ ಸಾಮರ್ಥ್ಯವನ್ನು ಕಡಿಮೆಮಾಡಿಕೊಳ್ಳದೆ ಕೆಲವು ಮದ್ದಾನೆಗಳು ತಾವಿದ್ದ ಸ್ಥಳ ದಿಂದಲೇ ಉರುಳಿದುವು. ೯೫. ಹಾರಿ ಬರುವ ಚಕ್ರಾಯುಧವು ತಲೆಗಳನ್ನು ಕತ್ತರಿಸಿ ಜೀರೆಂದು ಶಬ್ದಮಾಡುತ್ತ ಆಕಾಶಕ್ಕೆ ಸಿಡಿದರೂ ಮಾವಟಿಗರ ಕೆಲವು ಮುಂಡಗಳು ಆಗ ಉತ್ಸಾಹಗುಂದದೆ ಹಿಂಜರಿಯದೆ ಶತ್ರುಗಳ ಪ್ರಾಣಾಪಹಾರ ಮಾಡಿದುವು. ೯೬. ಹರಿತವಾದ ಚಕ್ರಾಯುಧದ ಪೆಟ್ಟಿನಿಂದ ತಲೆಗಳು ಕಣಕ್ಕೆಂದು ಕತ್ತರಿಸಿ ಹೋದರೂ ಮಾವಟಿಗರ ಮುಂಡಗಳು ಗುಂಪಾಗಿ ಸೇರಿ ಅಂಬಾರಿಯಲ್ಲಿಯೇ ಇದ್ದು ಸೊಗಸಾಗಿ ನೆಗೆದು ಕುಣಿದುವು. ಹರಿತವಾದ ಬಾಣಗಳು ನಾಚಿಕೊಂಡಿದ್ದರೂ ತೀವ್ರ ಬಾಣಗಳು ಮೇಲಕ್ಕೆದ್ದು ಹಾರುತ್ತಿದ್ದರೂ ಆರುತ್ತಿದ್ದ ಹುಣ್ಣಿನ ಸಮೂಹಗಳು ಭಯಂಕರವಾಗಿ ಕಾಣುತ್ತಿದ್ದರೂ ಒಂದೆರಡು ಆನೆಯ ಮುಂಡಗಳು ಅದ್ಭುತವಾಗಿ ಕುಣಿದಾಡಿದುವು. ವ|| ಹಾಗೆ ಎರಡು ಸೈನ್ಯದ ಆನೆಯ ಸಮೂಹಗಳು ತಗುಲಿ
Page #493
--------------------------------------------------------------------------
________________
೪೮೮ / ಪಂಪಭಾರತಂ
ಕoll
ಆನಿರೆಯೇನಿವುದು ಗಡ
ಮೀ ನಾಲ್ಕುಂ ಬಲಮಿದ ಪರಿಭವಮನಗಂ | ದೇನುಂ ಮಾಣದ ಭೀಮನ
ನೂನಬಲಂ ಬಂದು ತಾಗಿದಂ ಕುರುಬಲದೊಳ್ ||
eroll
ವ|| ಅಂತು ಕುರುಬಲದ ಕರಿಘಟೆಗಳಂ ನುಂಗುವಂತೆ ದಸದಸೆಗೆ ಮಿಳಿರ್ದು ಮಿಳ್ಳಿಸಿದ ಸಿಂಗದ ಪದವಿಗೆಯುಂ ಕುರುಬಲಕ್ಕೆ ಮತ್ತು ಪರೆವಂತೆ ಮೊರೆದು ಪರಿವ ತನ್ನ ಕಿಸುವೊನ್ನ ರಥಮುಂ ಭಯಂಕರಾಕಾರಮಾಗೆ ಪಗೆವರ ಗಂಟಲಿನೊತ್ತುವಂತ ಪೌಂಡ್ರವೆಂಬ ಶಂಖಮನೊತ್ತಿ ಮುಂದೊಡ್ಡಿದೊಡ್ಡೆಲ್ಲಮನಂಬಿನ ಬಂಬಲೊಳೆ ಪಡಲ್ವಡಿಸುತ್ತುಂ ಬರ್ಪ ಭೀಮಸೇನಂಗೆ ದುರ್ಯೊಧನನದಿರದಿದಿರಾಂತಾಗಳ್
62
ಎಂತಿದಿರಾಂತೆಯಂತ ಕಲಿಯಾಗೊಳಸೋರದಿರೆಂದು ಭೀಮನೋ ರಂತ ಕನಲ್ಲು ತಿಣ್ಣಮಿಸಿ ಪಾಯ್ದ ಸರಲ್ಗಳನೆಯಲೀಯದಾಂ | ತಾಂತು ನಿರಂತರಂ ತಳೆದು ಸೂತನನಾತನ ವಾಜಿಯಂ ಮಹೀ ಶಂ ತೆಗೆದಚ್ಚನಚ್ಚ ಬಿಸುನೆತ್ತರ ಸುಟ್ಟುರ ಸೂಸುವನ್ನೆಗಂ ||
೯೮
ಅಪ್ಪಳಿಸಿ ಹೊಡೆಯಲು ಬಿಸಿರಕ್ತದ ಜರಿಗಳು ಉಬ್ಬಿ ಹರಿದುವು. ದೊಡ್ಡ ಝರಿಗಳಿಂದ ಕೂಡಿದ ಕೆಂಪುಕಲ್ಲಿನ ಬೆಟ್ಟಗಳಂತೆ ಆನೆಗಳು ಕೆಳಗೆ ಬಿದ್ದು ನಾಶವಾಗಿ ರಾಶಿಯಾದುವು. ೯೭.ಈ ಚತುರಂಗಬಲವು ನಾನಿದ್ದರೂ ಯುದ್ಧ ಮಾಡುತ್ತದೆಯಲ್ಲವೇ? ಇದಲ್ಲವೇ ನನಗೆ ಅವಮಾನಕರ' ಎಂದು ಯಾವುದನ್ನೂ ಲಕ್ಷಿಸದೆ ಸ್ವಲ್ಪವೂ ಕಡಿಮೆ ಯಿಲ್ಲದ ಶಕ್ತಿಯುಳ್ಳ ಭೀಮನು ಕೌರವಸೈನ್ಯವನ್ನು ಬಂದು ತಾಗಿದನು. ವ| ಕೌರವಸೈನ್ಯದ ಆನೆಗಳ ಸಮೂಹವನ್ನು ನುಂಗುವ ಹಾಗೆ ದಿಕ್ಕುದಿಕ್ಕಿಗೂ ಕಂಪಿಸಿ ಚಲಿಸುತ್ತಿದ್ದ ಸಿಂಹಧ್ವಜವೂ ಕೌರವಸೈನ್ಯಕ್ಕೆ ಮೃತ್ಯುದೇವತೆಯೇ ಹಲ್ಲುಕಡಿಯುವಂತೆ ಶಬ್ದಮಾಡಿ ಕೊಂಡು ಬರುತ್ತಿದೆಯೋ ಎಂಬಂತೆ ಹರಿದು ಬರುತ್ತಿದ್ದ ತಾಮ್ರದ ತೇರೂ ಭಯಂಕರ ವಾಗಿರಲು ಶತ್ರುಗಳ ಗಂಟಲನ್ನು ಒತ್ತುವ ಹಾಗೆ ಪೌಂಡ್ರವೆಂಬ ಶಂಖವನ್ನು ಊದುತ್ತ, ಮುಂದೆ ಒಡ್ಡಿದ್ದ ಸೈನ್ಯವೆಲ್ಲವನ್ನೂ ಬಾಣಗಳ ಸಮೂಹದಿಂದ ಕೆಳಗೆ ಉರುಳಿಸುತ್ತ ಬರುತ್ತಿದ್ದ ಭೀಮಸೇನನಿಗೆ ಹೆದರದೆ ದುರ್ಯೋಧನನು ಪ್ರತಿಭಟಿಸಿದನು-೯೮. ಹೇಗೆ ಎದುರಿಸಿದೆಯೋ ಹಾಗೆಯೇ ಶೂರನೂ ಆಗು; ಹಿಂಜರಿಯಬೇಡ ಎಂದು ಭೀಮನು ಒಂದೇ ಸಮನಾಗಿ ಕೋಪಿಸಿಕೊಂಡು ಬಲವಾಗಿ ಬಾಣಪ್ರಯೋಗ ಮಾಡಲು (ಹಾಗೆ) ಹಾರಿಬರುತ್ತಿದ್ದ ಬಾಣಗಳು ತನ್ನಲ್ಲಿಗೆ ಬರಲು ಅವಕಾಶಕೊಡದೆ ದುರ್ಯೋಧನನು ಅದನ್ನು ಪ್ರತಿಭಟಿಸಿ ಒಂದೇ ಸಮನಾಗಿ ಕತ್ತರಿಸಿ (ಭೀಮನ) ಸಾರಥಿಯನ್ನೂ ಆತನ ಕುದುರೆಯನ್ನೂ ಬಾಣದಿಂದ ಹೊಡೆದು ಸ್ವಚ್ಛವಾದ ಬಿಸಿರಕ್ತದ ಪ್ರವಾಹವನ್ನು
Page #494
--------------------------------------------------------------------------
________________
ದಶಮಾಶ್ವಾಸಂ | ೪೮೯ ಕಂil ಆಸೆ ಮಸಗಿ ಭೀಮನೀರ
ಯು ಶಿತಾಸ್ತದಿನುರುಳೆ ಸೂತನುಡಿಯ ರಥಂ ಕೀ | ಲಿ ಕುದುರೆ ಮುಳಿಯ ಪಲವಿಗೆ ಮಸಕದಿನೆಚ್ಚೆಚ್ಚನೊಲುದ ಸರಳ ನೊಸಲಂ || ಪಟ್ಟಂಗಟ್ಟಿದ ನೊಸಲಂ ನಟ್ಟ ಸರಲ್ವಿಡಿದು ನೆತ್ತರಂಬಿರಿವಿಡೆ ಕ || ಶೆಟ್ಟರ್ದ ನೃಪನನಂಕದ
ಕಟ್ಟಾಳಳ ಕಾದು ಕಳಪೆ ದುರ್ಯೋಧನನಂ | ವ|| ಆಗಳವನನುಜರ್ ನೂರ್ವರುಂ ಬಂದು ತನ್ನನೊರ್ವನಂ ತಾಗಿದೊಡನಿಬರುಮಂ ಎರಥರ್ಮಾಡಿ ಭಾರತಮನಿಂದ ಸಮಯಿಸುವನೆಂದು ಕೋದಂಡಮಂ ಬಿಸುಟು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು ಚಂ|| ಕುರುಬಲಮಂ ಪಡಲ್ವಡಿಸ ತಕ್ಕಿನೊಳೆಯ್ದರೆ ಬರ್ಪ ಭೀಮನಂ
ಬರೆ ಬರಲೀಯದಿರ್ದವರನಾ ಪದದೊಳ್ ಪಂಗಿಕ್ಕಿ ಗಂಧಸಿಂ 1 ಧುರ ಘಟಿ ನಾಲ್ಕು ಕೋಟಿವರಸಾಗಡೆ ಬಂದು ಕಳಿಂಗರಾಜನಾಂ ತಿರೆ ಪಗೆ ಕೆಯ್ದವಂದು ಬರ್ದುಕಾಡಿದ ಬಲ್ಕುಳಿಸಿಂ ವೃಕೋದರಂ || ೧೦೧
ವ|| ಅಂತು ಕಳಿಂಗರಾಜ ಮತ್ತಮಾತಂಗಘಟೆಗಳ ಮೇಲೆ ಮುಳಿಸಂ ಕಳವೆನೆಂದು ಸಿಂಹನಾದದಿನಾರ್ದು
ಹರಿಯಿಸಿದನು. ೯೯. ಹಾಗೆ ಹೊಡೆಯಲಾಗಿ ಭೀಮನು ರೇಗಿ ಹರಿತವಾದ ಹತ್ತು ಬಾಣಗಳಿಂದ ಸೂತನು ಉರುಳುವ ಹಾಗೆಯೂ ರಥವು ಒಡೆದುಹೋಗುವ ಹಾಗೆಯೂ ಕುದುರೆಯು ಮೊಳೆಯಿಂದ ನಾಟಿಕೊಂಡಹಾಗೆಯೂ ಧ್ವಜವು ಮುರಿದು ಹೋಗುವ ಹಾಗೆಯೂ ಹೊಡೆದು ಕೋಪದಿಂದ ಒಂದೇ ಬಾಣದಿಂದ ದುರ್ಯೊಧನನ ಹಣೆಗೆ ಹೊಡೆದನು. ೧೦೦. ಪಟ್ಟಕಟ್ಟಿದ ಹಣೆಯನ್ನನುಸರಿಸಿ ನಾಟಿದ ಬಾಣವನ್ನು ಅನುಸರಿಸಿ ರಕ್ತವು ಧಾರಾಕಾರವಾಗಿ ಹರಿಯಲು ಕಣ್ಣು ಕಾಣದೆ ಇದ್ದ ರಾಜನನ್ನು ಪ್ರಸಿದ್ಧರಾದ ಶೂರರು ರಕ್ಷಿಸಿ ಶಿಬಿರಕ್ಕೆ ಕಳುಹಿಸಿದರು. ವ|| ಆಗ ಅವನ ನೂರು ತಮ್ಮಂದಿರೂ ಬಂದು ತನ್ನೊಬ್ಬನನ್ನು ತಾಗಲು ಅಷ್ಟು ಜನವನ್ನೂ ರಥದಿಂದ ಉರುಳಿಸಿ ಭಾರತಯುದ್ಧವನ್ನು ಈ ದಿನವೇ ಮುಗಿಸಿಬಿಡುತ್ತೇನೆ ಎಂದು ಬಿಲ್ಲನ್ನು ಬಿಸಾಡಿ ಗದಾದಂಡವನ್ನು ದಂಡದಂತಿರುವ ತನ್ನ ತೋಳಿನಲ್ಲಿ ಅಳವಡಿಸಿಕೊಂಡನು. ೧೦೧. ಕೌರವಸೈನ್ಯವನ್ನು ಉರುಳಿಸುವ ಸಾಮರ್ಥ್ಯದಿಂದ ಬರುತ್ತಿದ್ದ ಭೀಮಸೇನನನ್ನು ಬರುವುದಕ್ಕೆ ಅವಕಾಶಮಾಡದೆ ಅಲ್ಲಿದ್ದವರನ್ನು (ಅಲ್ಲಿಂದ) ಹೊರಕ್ಕೆ ತಳ್ಳಿ ಶ್ರೇಷ್ಠವಾದ ನಾಲ್ಕುಕೋಟಿ ಮದ್ದಾನೆಗಳೊಡಗೂಡಿ ಕಳಿಂಗರಾಜನು ಬಂದು ಎದುರಿಸಿದನು. ಶತ್ರುವು ಕೈಗೆ ಸಿಕ್ಕಿಯೂ ನುಣುಚಿಕೊಂಡ ವಿಶೇಷ ಕೋಪವನ್ನು ಭೀಮನು-ವಕಳಿಂಗರಾಜನ ಮದ್ದಾನೆಗಳ ಸಮೂಹದ ಮೇಲೆ ತೀರಿಸಿಕೊಳ್ಳುತ್ತೇನೆ ಎಂದು ಸಿಂಹಗರ್ಜನೆಯಿಂದ ಆರ್ಭಟಿಸಿದನು.
Page #495
--------------------------------------------------------------------------
________________
೪೯೦) ಪಂಪಭಾರತಂ ಮII ಗಜೆಯಂ ಭೋರೆನೆ ಪರ್ವಿ ಬೀಸಿ ಕಡುಪಿಂದೆಯಂದು ಮಾಜಾಂತ ಸಾ
ಮಜಸಂಘಾತಮನೊಂದುಗೊಳ್ಳೆರಡುಗೊಳ್ಳೆಂದುರ್ವಿ ಪೊಲ್ಲೊಂದು, ಪೊ * ಹೈ ಜವಂಗುಂದಿ ಸಿಡಿಲು ಮುನ್ನಡಿಗುರುಳರ್ಪನ್ನೆಗಂ ಬೀಟ್ ದಿ ಗಜಮಂ ಪೋಲ್ವ ಗಜಂಗಳಂ ಪಲವುಮಂ ಕೊಂದು ಮರುನ್ನಂದನಂ || ೧೦೨ ಕಂ|| ಬಡಿಗೊಳೆ ಬಿದು ಬಿಬ್ಬರ ಬಿರಿ * ದೊಡನುಗೆ ಪೊಸಮುತ್ತು ಕೋಡನೂ ಮದೇಭಂ | ಕೆಡೆದುವು ಕೊಲ್ಲದಿರೆಂದಿರ ದಡಿಗೆಲಗುವ ತೇಜನನಿನಿಸನನುಕರಿಸುವಿನಂ ||
೧೦೩ ವ|| ಅಂತು ಪತ್ತೆಂಟುಸಾಸಿರಮಾನೆಯಂ ಪಡಲ್ವಡಿಸಿಯುಂ ಸೈರಿಸಲಾದ - ಮlು ಪಿಡಿದೊಂದೊಂದ ಗಾತಮಂ ತಿರಿಸಿಕೊಂಡೋಂದೊಂದeಳೊಳ್ ಪೊಯುಮ
ಅಡಗಪನೆಗಮತಿಕೊಂಡಸಗವೊಯೋಯೊಳ್ ತಡಂಬೋಯ್ತುಮು || ಇಡುಗುಂ ನೆತ್ತರುಮಲ್ಕುಮಲ್ಲ ದೆಸೆಗಂ ಜೀಏಟ್ಟು ಪಾಡ್ತೆ ಬ
ಅಡಿಗಂ ಬೀಸಿಯುಮೊಂದು ಕೋಟಿವರೆಗಂ ಕೊಂದಂ ಮದ್ಭಂಗಳಂ loo೪ ಮll ಸಿಡಿಲಂತೂರ್ಮಯ ಪೊಯ್ಯ ಪೊಯ್ಯ ಭರದಿಂದೊಂದಾನೆ ತೋಲ್ ನೆತ್ತರೆ
ಬೃಡಗೊಂದೋಂದಳೊಂದುಮೊಂದದೆ ಗದಾನಿರ್ಘಾತದಿಂ ಮಾಯಮಾ | ದೊಡೆ ಪೋ ತಪ್ಪಿದೆನೆಂದು ಪರದಗುರ್ವಪನ್ನೆಗಂ ಮೀಸೆಯಂ ಕಡಿದಂ ತೋಳ್ವಲದೇ ಮೆಚ್ಚುವನಿತರ್ಕುಗ್ರಾಜಿಯೊಳ್ ಭೀಮನಾ || ೧೦೫
೧೦೨. ಭೀಮನು ಗದೆಯನ್ನು ಭೋರೆಂದು ವಿಸ್ತಾರವಾಗಿ ಬೀಸಿ ಕ್ರೌರ್ಯದಿಂದ ಬಂದು ಪ್ರತಿಭಟಿಸಿದ ಆನೆಗಳ ಸಮೂಹವನ್ನು ಒಂದು ತಕ್ಕೊ, ಎರಡು ತಕ್ಕೋ ಎಂದು ಉಬ್ಬಿ ಹೊಡೆಯುವ ಹೊಡೆತಕ್ಕೆ ಆನೆಗಳು ತಮ್ಮವೇಗವನ್ನು ಕಳೆದುಕೊಂಡು ಸಿಡಿದು ಮೊದಲೇ ಅಡಿಗುರುಳುವ ಹಾಗೆ ಉರುಳಲು ದಿಗ್ಗಜಗಳಂತಿದ್ದ ಅನೇಕ ಆನೆಗಳನ್ನು ಕೊಂದನು. ೧೦೩. ಭೀಮನ ಗದೆಯ ಪೆಟ್ಟಿನಿಂದ ಕುಂಭಸ್ಥಳವು ಸಂಪೂರ್ಣವಾಗಿ ಬಿರಿದುಹೋಯಿತು. ಜೊತೆಯಲ್ಲಿಯೇ (ಕುಂಭಸ್ಥಳದಲ್ಲಿದ್ದ ಹೊಸಮುತ್ತುಗಳು ಚೆಲ್ಲಾಡಿದುವು. ಮದ್ದಾನೆಗಳು ಕೊಂಬನ್ನು ಕೆಳಕ್ಕೆ ಊರಿ 'ನಮ್ಮನ್ನು ಕೊಲ್ಲಬೇಡ' ಎಂದು ಭೀಮನ ಕಾಲಿಗೆ ಬೀಳುವ ರೀತಿಯನ್ನು ಸ್ವಲ್ಪ ಮಟ್ಟಿಗೆ ಅನುಕರಿಸುತ್ತ ಬಿದ್ದುವು. ವ! ಹಾಗೆ ಹತ್ತೆಂಟು ಸಾವಿರ ಆನೆಗಳನ್ನೂ ನಾಶಪಡಿಸಿದರೂ ತೃಪ್ತಿಹೊಂದದೆ ೧೦೪. ಒಂದು ಆನೆಯ ಶರೀರವನ್ನು ಹಿಡಿದುಕೊಂಡು ವೇಗವಾಗಿ ತಿರುಗಿಸಿ ಒಂದರೊಡನೆ ಒಂದನ್ನು ಎಲುಬೂ ಮಾಂಸವೂ ಆಗುವ ಹಾಗೆ ಹೊಡೆದು ಮೇಲಕ್ಕೆತ್ತಿಕೊಂಡು ಅಗಸನು ಒಗೆಯುವ ರೀತಿಯಲ್ಲಿ ಬಿರುಸಾಗಿ ಮೇಲಕ್ಕೆತ್ತಿ ಒಗೆದು ಒಳಗಿದ್ದ ಮಾಂಸವೂ ರಕ್ತವೂ ಎಲುಬುಗಳೂ ಜೀರೆಂದು ಶಬ್ದಮಾಡುತ್ತ ಎದ್ದು ಎಲ್ಲ ದಿಕ್ಕುಗಳಿಗೂ ಹಾರಿ ನೆಗೆಯುವ ಹಾಗೆ ಬೀಸಿ ಪರಾಕ್ರಮಶಾಲಿಯಾದ ಭೀಮನು ಒಂದುಕೋಟಿ ಲೆಕ್ಕದವರೆಗಿನ ಮದ್ದಾನೆಗಳನ್ನು ಕೊಂದನು. - ೧೦೫, ಸಿಡಿಲಿನ ಹಾಗೆ ಒಂದೇ ಸಲ ಹೊಡೆಯಲು ಹೊಡೆದ ವೇಗಕ್ಕೆ ಆನೆಯ ಚರ್ಮ ರಕ್ತ ಎಲುಬು
Page #496
--------------------------------------------------------------------------
________________
ದಶಮಾಶ್ವಾಸಂ / ೪೯೧ ಕಂ ಧ್ವಜಮುಂ ಬಿಸುಗಯುಮೇಟಿ
ರ್ದ ಜೋದರುಂ ಬೆರಸು ಗಜೆಯನರಿಗಜಘಟೆಯಂ | ಗಿಜಿಗಿಜಿಯಾಗಿರೆ ಪೊಯೊಡೆ. ಗುಜುಗುಜುಗೊಂಡಾರ್ದರಮರರಂಬರತಳದೊಳ್|
೧೦೬ ವಗ ಅಂತು ಗಾಳಿಗೊಡ್ಡಿದ ಘನಘಟೆಯಂತೆ ತನಗೆ ಂಗರಾಜ ಮತ್ತಮಾತಂಗ ಘಟೆಗಳಂ ಕಲಕುಲಂ ಮಾಡಿದನನ್ನೆಗಮಿತ್ತ ಶಲ್ಯನ ಮೊನೆಯೊಳ್ ಧರ್ಮಪುತ್ರಂ ಕಾದಿ ನಾಲ್ಕು ಕೆಲ್ಲಂಬುಗಳಿಂದಾತನ ವರೂಥ ಸೂತಕೇತನಂಗಳಂ ಕಡಿದುಕಂ11 ಉರಮಂ ಬಿರಿವಿನಮಿಸೆ ಮ
ದ್ರರಾಜನಳಿಯನ ಪರಾಕ್ರಮಕೊಸೆದು ಮೊಗಂ | ಮುರಿಯದ ಪೆಜತುಂ ರಥಮಂ ತರಿಸಿ ಕನಡರ್ದು ಕದನಕಾಗಳೆ ನೆಳೆದಂ |
೧೦೭ ಮುಳಿದು ರಥಮಂ ರಥಾಶ್ವಮ ನುಳಿದೆರಡುಂ ಶರದೆ ನಾಲ್ಕತಿಂ ಸೂತನಂ | ದಟಿಕೆಯ ಸರಳ್ ಮಾಣದೆ ತಲೆದಂ ಪರಿವಿಗೆಯನೇಂ ಕೃತಾಸ್ತನೊ ಶಲ್ಯಂ |
೧೦೮ ವll ಅಂತು ಎರಥನಂ ಮಾಡಿ ಧರ್ಮಪುತ್ರನಂ ಪಿಡಿಯಲೆಯರ್ಪ ಮದ್ರರಾಜನಂ ಪರ್ಛಾಸಿರಮಾನವೆರಸು ನೃಪನ ಚಕ್ರರಕ್ಷಕಂ ನೀಳನೆಡೆಗೊಂಡು ತಾಗಿದಾಗಳ್
ಮಾಂಸಗಳು ಒಂದರಲ್ಲಿ ಒಂದು ಸೇರಿರದೆ ಗದೆಯ ಪೆಟ್ಟಿನಿಂದ ಮಾಯವಾಗಲು ಭೀಮನು 'ಛೀ ತಪ್ಪುಮಾಡಿದೆ' ಎಂದು ಹಲ್ಲುಕಡಿದು ಭಯಂಕರವಾದ ಆ ಯುದ್ಧರಂಗದಲ್ಲಿ ತನ್ನ ಬಾಹುಶಕ್ತಿಯ ಏಳಿಗೆಯನ್ನು ಮೆಚ್ಚುವಷ್ಟು ಭಯಂಕರವಾದ ರೀತಿಯಲ್ಲಿ ಮೀಸೆಯನ್ನು ಕಡಿದನು. ೧೦೬. ಧ್ವಜದಿಂದಲೂ ಅಂಬಾರಿಯನ್ನು ಹತ್ತಿದ್ದ ಯೋಧರಿಂದಲೂ ಕೂಡಿದ ಸಮೂಹವನ್ನು ಗದೆಯಿಂದ ಅಜ್ಜಿಗುಜ್ಜಾಗುವ ಹಾಗೆ ಹೊಡೆಯಲು ಆಕಾಶಪ್ರದೇಶದಲ್ಲಿ ದೇವತೆಗಳು (ಗುಂಪುಗೂಡಿ) ಪಿಸುಗುಟ್ಟುತ್ತ ಆರ್ಭಟ ಮಾಡಿದರು. ವll ಹಾಗೆ ಗಾಳಿಗೆ ಎದುರಾದ ಮೋಡಗಳ ಸಮೂಹದ ಹಾಗೆ ತನಗೆ ಎದುರಾದ ಕಳಿಂಗರಾಜನ ಮದ್ದಾನೆಗಳ ಸಮೂಹವನ್ನು ಚೆಲ್ಲಾಪಿಲ್ಲಿಮಾಡಿದನು. ಅಷ್ಟರಲ್ಲಿ ಈಕಡೆ ಶಲ್ಯನ ಯುದ್ದದಲ್ಲಿ ಧರ್ಮರಾಜನು ಕಾದಿ ನಾಲ್ಕು ಮೊನಚಾದ ಬಾಣಗಳಿಂದ ಅವನ ತೇರು ಸಾರಥಿ ಧ್ವಜಗಳನ್ನು ಕತ್ತರಿಸಿದನು. ೧೦೭. ಎದೆಯು ಬಿರಿದು ಹೋಗುವ ಹಾಗೆ ಹೊಡೆಯಲು ಶಲ್ಯನು ಅಳಿಯನಾದ ಧರ್ಮರಾಜನ ಪರಾಕ್ರಮಕ್ಕೆ ಸಂತೋಷಪಟ್ಟು ಮುಖ ತಿರುಗಿಸದೆ ಬೇರೊಂದು ರಥವನ್ನು ತರಿಸಿ ಕೋಪದಿಂದ ಹತ್ತಿ ಆಗಲೇ ಯುದ್ಧಕ್ಕೆ ಸಿದ್ದವಾದನು. ೧೦೮. ಶಲ್ಯನು ಅವನ ತೇರನ್ನು ಮುರಿದು ವೇಗವಾಗಿ ಎರಡು ಬಾಣಗಳಿಂದ ರಥದ ಕುದುರೆಯನ್ನೂ ನಾಲ್ಕರಿಂದ ಸಾರಥಿಯನ್ನೂ ಒಂದು ಪ್ರಸಿದ್ದವಾದ ಬಾಣದಿಂದ ಧ್ವಜವನ್ನೂ ಬಿಡದೆ ತರಿದು ಹಾಕಿದನು. ಶಲ್ಯನು ಶಸ್ತ್ರವಿದ್ಯೆಯಲ್ಲಿ ಮಹಾಪಂಡಿತನಷ್ಟೆ! ವl ಹಾಗೆ ತೇರಿರದವನನ್ನಾಗಿ ಮಾಡಿ ಧರ್ಮರಾಜನನ್ನು ಹಿಡಿಯಲು ಬರುತ್ತಿದ್ದ
32
Page #497
--------------------------------------------------------------------------
________________
೪೯೨ | ಪಂಪಭಾರತಂ
ಕಂ
ಮೃಗರಾಜನಖರ ಬಾಣಾ
ಳಿಗಳಿಂ ತೆಗೆನೆದು ಶಲ್ಯನುದಿಗೆ ಬಿದುವಂ ಮೃಗರಾಜಂಗಳ ಪೋಟ್ಟವೊ
ಅಗಲ್ವಿನಂ ಪೋಟ್ಟುವುದ ಬಾಣಾವಳಿಗಳ
೧೦೯
ವ|| ಅಂತಾ ದಂತಿಘಟೆಯಂ ಪಡಲ್ವಡಿಸಿ ನೀಳನೇಟದಾನೆಯುಮಮೂತಿ ಕೊಂಡೆಚ್ಚಾಗಳ್
ಕಂ।।
ಪೆಗಿಡುವ ದಂತಿಯಂ ಕಲಿ
ನಿಸಿ ಚಲಂ ನೆಲಸೆ ತೋಟಿಕುಡುವುದುಮಾಗಳ್ | ಪೊಮುಯ್ಯುವರಂ ತನ ದುಅದಚ್ಚು ಶಲ್ಯನಾಂತ ನೀಳನ ತಲೆಯಂ
೧೧೦
;
ವ|| ಅಂತು ನೀಳಂ ನೀಳಗಿರಿಯ ಮೇಗಣಿಂ ಬರಿಸಿಡಿಲ್ ಪೊಡೆಯ ಕಡವ ಮೃಗರಾಜನಂತೆ ಹಸ್ತಿಮಸ್ತಕದಿಂ ಕೆಡೆವುದುಮತ್ತ ಭೂರಿಶ್ರವನ ಮೊನೆಯೊಳ್ ಕಾದುತ್ತಿರ್ದುತ್ತರಂ ನಾಲ್ವತ್ತು ಸಾಸಿರಮಾನೆವೆರಸರಸನಂ ಹೆಳಗಿಕ್ಕಿ ಬಂದಾಂತಾಗಳ್
ಚಂ।। ನಗೆ ಪಗೆವಾಡಿ ಗೋಗ್ರಹಣದೊಳ್ ಪೋಮಾಳದ ಬನ್ನದೊಂದು ನೆ ಟ್ಟಿಗೆ ಮನಮಂ ಪಳಂಚಲೆಯೆ ಮಾಣದೆ ಶಲ್ಯನನಂದಶಲ್ಯನಂ | ಬಗೆವವೊಲೇಳಿದಂ ಬಗೆದು ದಂತಿಯನಾಗಡ ತೊಟೆಕೊಟ್ಟು ತೊ ಟ್ಟಗೆ ರಥಮಂ ಪಡಲ್ವಡಿಸಿ ಪೂನರಾತಿಯನಸ್ತ್ರಕೋಟಿಯಿಂ ।।
000
ಶಲ್ಯನನ್ನು ರಾಜನ ಸೇನಾಧಿಪತಿಯಾದ ನೀಲನು ಮಧ್ಯೆ ನುಗ್ಗಿ ಹನ್ನೆರಡು ಸಾವಿರ ಆನೆಗಳೊಡನೆ ಕೂಡಿ ಪ್ರತಿಭಟಿಸಿದನು. ೧೦೯. ಸಿಂಹದ ಉಗುರಿನಂತಿದ್ದ ಬಾಣಗಳ ಸಮೂಹದಿಂದ ಶಲ್ಯನು ದೀರ್ಘವಾಗಿ ಸೆಳೆದು ಹೊಡೆಯಲಾಗಿ ಕುಂಭಸ್ಥಳಗಳನ್ನು ಸಿಂಹಗಳೇ ಸೀಳುವ ಹಾಗೆ ಆ ತೀಕ್ಷ್ಮವಾದ ಬಾಣಸಮೂಹಗಳು (ಕುಂಭಸ್ಥಳಗಳನ್ನು) ಬೇರೆಯಾಗುವ ಹಾಗೆ (ಹೋಳುಗಳಾಗುವ ಹಾಗೆ) ಸೀಳಿ ಹಾಕಿದುವು. ವ|| ಹಾಗೆ ಆ ಆನೆಯ ಸಮೂಹವನ್ನು ಚೆಲ್ಲಾಪಿಲ್ಲಿಯಾಗುವ ಹಾಗೆ ಮಾಡಿ ನೀಲನು ಹತ್ತಿದ ಆನೆಯನ್ನೂ ಬಲವಾಗಿ ಅಮುಕಿ ಹೊಡೆದನು. ೧೧೦. ಹಿಮ್ಮೆಟ್ಟುತ್ತಿದ್ದ ಆನೆಯನ್ನು `ಶೂರನಾದ ನೀಲನು ನಿಲ್ಲಿಸಿ ಹೆಚ್ಚಿನ ಛಲದಿಂದ ಅದನ್ನು ಶಲ್ಯನ ಮೇಲೆ ಬಿಡಲು ಆಗ ಶಲ್ಯನು ಭುಜದವರೆಗೆ ಬಾಣಗಳನ್ನು ಸೆಳೆದು ತನ್ನನ್ನು ಪ್ರತಿಭಟಿಸಿದ ನೀಲನ ತಲೆಯನ್ನು ಸಾವಕಾಶಮಾಡದೆ ವೇಗವಾಗಿ ಹೊಡೆದನು. ವ| ನೀಲನು ಬರಸಿಡಿಲು ಹೊಡೆಯಲು ನೀಲಪರ್ವತದ ಮೇಲಿನಿಂದ ವೇಗವಾಗಿ ಕೆಳಗುರುಳುವ ಸಿಂಹದ
;
ಹಾಗೆ ಆನೆಯ ಕುಂಭಸ್ಥಳದಿಂದ ಕೆಡೆದನು. ಆಕಡೆ ಭೂರಿಶ್ರವನ ಯುದ್ಧದಲ್ಲಿ ಕಾದುತ್ತಿದ್ದ ಉತ್ತರನು ನಲವತ್ತುಸಾವಿರ ಆನೆಯೊಡನೆ ಕೂಡಿ ಬಂದು ರಾಜನನ್ನು ಹಿಂದಿಕ್ಕಿ ಪ್ರತಿಭಟಿಸಿದನು. ೧೧೧. ಗೋಗ್ರಹಣಕಾಲದಲ್ಲಿ ಶತ್ರುಸೈನ್ಯವು ನುಗ್ಗುವ ಹಾಗೆ ಬೆನ್ನಿತ್ತುಹೋದ ಅವಮಾನವು ನೇರವಾಗಿ ತನ್ನ ಮನಸ್ಸನ್ನು ತಗುಲಿ ವೇದನೆಯನ್ನುಂಟುಮಾಡುತ್ತಿರಲು ತಡೆಯದೆ ಉತ್ತರನು ಶತ್ರುರಾಜನನ್ನು
Page #498
--------------------------------------------------------------------------
________________
ದಶಮಾಶ್ವಾಸಂ / ೪೯೩ ವ|| ಅಂತುತ್ತರಂ ತನಗಳವುಮದಟುಂ ರಾಜೋತ್ತರಮಾಗೆ ಕಾದಿದೊಡೆ ಶಲ್ಯಂ ವಿರಥನಾಗಿ ಸಿಗ್ಗಾಗಿ
ಉlು.
ತಾರಕನಂ ಗುಹಂ ಮುಳಿದು ಶಕ್ತಿಯಿನಾಂತಿಡುವಂತರಾತಿ ಸಂ ಹಾರಕವಪ್ಪ ವಿನ್ನುರಿತ ಶಕ್ತಿಯಿನಾತನವಿಟ್ಟು ಖದಿಂ | ವಾರಣಮಂ ಪಡಲ್ವಡಿಸಿ ತಾಂ ಪೆಂಪಿಂಗುವುದುಂ ಬಲಕ್ಕೆ ಹಾ ಹಾ ರವಮುಹ್ಮ ದಂತಿವರಸಾಜಿಯೊಳುತ್ತರನಟ್ಟಿ ತಟ್ಟೆದಂ ||
೧೧೨
ವ|| ಅಂತುತ್ತರನಂ ಜವಂಗೆ ಪೊಸತಿಕ್ಕುವ೦ತಿಕ್ಕಿ ಬಸವಳದ ಶಲ್ಯನಂ ಕೃತವರ್ಮ೦ ತನ್ನ ರಥಮನೇಳಿಸಿಕೊಂಡು ನಿಂದನನ್ನೆಗಮಿತ್ತಲಮರಾಪಗಾಸುತನ ಮೊನೆಯೊಳ್ ಭರಂಗೆಯ್ದು ಕಾದುವ ಸೇನಾನಾಯಕಂ ಶ್ವೇತಂ ತನ್ನ ತಮ್ಮನತೀತನಾದುದಂ ಕೇಳು
ಚಂ|| ಪ್ರಳಯಪಯೋಧಿವೋಲಳುರ್ದು ಪಂಕುಳಿಗೊಂಡ ಮದೇಭವೈರಿವೋಲ್
ಕೆಳರ್ದು ಲಯಾಗ್ನಿಮೋಲಳುರ್ದು ಮದ್ರಮಹೀಶನನೆಮ್ಮೆ ತಾಗೆ ಬ | wಳ ಬಳದತ್ತು ಶಲ್ಯನೊಳೆ ಕಾಳಗಮೀಗಳೆನುತ್ತುಮಂತೆ ಕೆ ಯೊಳಲಂಕೇತು ಸಿಂಧುತನಯಂಬೆರಸಾಗಡೆ ಬಂದು ತಾಗಿದಂ || ೧೧೩
ಅಸ್ತರಹಿತನಾದವನನ್ನು ನೋಡುವ ಹಾಗೆ ಉದಾಸೀನದಿಂದ ಕಡೆಗಣಿಸಿ ನೋಡಿ (ತನ್ನ ಆನೆಯನ್ನು ಅವನ ಮೇಲೆ ಭೂಬಿಟ್ಟು ಒಮ್ಮೆಯೇ ತೇರಿನಿಂದ ಕೆಳಗುರುಳಿಸಿ ಶತ್ರುವನ್ನು ಬಾಣಸಮೂಹದಿಂದ ಹೂಳಿದನು. ವ|| ಹಾಗೆ ಉತ್ತರನು ತನಗೆ ಪರಾಕ್ರಮವೂ ಶಕ್ತಿಯೂ ಚಂದ್ರನಂತೆ ಅಭಿವೃದ್ಧಿಯಾಗುವ ಹಾಗೆ ಕಾದಲು ಶಲ್ಯನು ರಥಹೀನನಾಗಿ ಅವಮಾನಗೊಂಡು-೧೧೨. ಹಿಂದೆ ತಾರಕಾಸುರನನ್ನು ಷಣ್ಮುಖನು ಎದುರಿಸಿ ಶಕ್ತಾಯುಧದಿಂದ ಹೊಡೆದ ಹಾಗೆ ಶತ್ರುಸಂಹಾರವೂ ಕಾಂತಿಯುಕ್ತವೂ ಆದ ಶಸ್ತ್ರಾಯುಧದಿಂದ ಉತ್ತರವನ್ನು ಹೊಡೆದು ಆತನ ಆನೆಯನ್ನು ಕೆಳಗುರುಳಿಸಿದನು. ಪಾಂಡವಸೈನ್ಯದಲ್ಲಿ ಹಾ ಹಾ ರವವನ್ನುಂಟುಮಾಡಿ ಶಲ್ಯನು ಹಿಂದಿರುಗುತ್ತಿರಲು ಯುದ್ದದಲ್ಲಿ ಉತ್ತರನು ಆನೆಯೊಡನೆ ಸತ್ತು ಕೆಳಗುರುಳಿದನು (ಕುಸಿದನು). ವಗೆ ಉತ್ತರವನ್ನು ಯಮನಿಗೆ ಹೊಸದಾಗಿ ಬಲಿ ಕೊಡುವ ಹಾಗೆ ಬಲಿಕೊಟ್ಟು ಶಕ್ತಿಗುಂದಿದ ಶಲ್ಯನನ್ನು ಕೃತವರ್ಮನು ತನ್ನ ರಥದಲ್ಲಿ ಹತ್ತಿಸಿಕೊಂಡು ತಾನು ಯುದ್ಧಕ್ಕೆ ನಿಂತನು. ಅಷ್ಟರಲ್ಲಿ ಈಕಡೆ ಭೀಷ್ಮನು ಯುದ್ಧದಲ್ಲಿ ಆರ್ಭಟಿಸಿ ವೇಗದಿಂದ ಯುದ್ದಮಾಡುತ್ತಿದ್ದ ಸೇನಾನಾಯಕನಾದ ಶ್ವೇತನು ತನ್ನ ತಮ್ಮನು ಸತ್ತುಹೋದುದನ್ನು ಕೇಳಿದನು -೧೧೩. ಪ್ರಳಯಕಾಲದ ಸಮುದ್ರದಂತೆ ವ್ಯಾಪಿಸಿ ಹುಚ್ಚುಹಿಡಿದ ಸಿಂಹದಂತೆ ಪ್ರಳಯಾಗ್ನಿಯಂತೆ ಹರಡಿ ಶಲ್ಯರಾಜನನ್ನು ವೇಗದಿಂದ ಬಂದು ತಾಗಿದನು. ಈಗ ಶಲ್ಯನಲ್ಲಿ ಯುದ್ಧವು ಅಧಿಕವಾಗಿ ಬೆಳೆದಿದೆ ಎಂದು ಹೇಳುತ್ತ ದುರ್ಯೋಧನನು ಆ ಯುದ್ದಭಾರವನ್ನು ತಾನೇ ವಹಿಸುವುದಕ್ಕಾಗಿ (ಶಲ್ಯನನ್ನು ರಕ್ಷಿಸುವುದಕ್ಕಾಗಿ) ಭೀಷ್ಮನೊಡನೆ ಅಲ್ಲಿಗೆ ಬಂದು ತಾಗಿದನು.
Page #499
--------------------------------------------------------------------------
________________
೪೯೪ | ಪಂಪಭಾರತಂ
ವll ಇತ್ತ ಧರ್ಮಪುತ್ರನುಂ ವಿರಾಟ ದೃಷ್ಟದ್ಯುಮ್ಮ ಶಿಖಂಡಿ ಚೇಕಿತಾನ ಕೇಕಯ ಸಾತ್ಯಕಿ ನಕುಳ ಸಹದೇವ ಸೌಭದ ಪ್ರಮುಖ ನಾಯಕರ್ವೆರಸು ರಣಪಟಹಂಗಳಂ ನೆಗಟ್ಸ್ ಕೃಪ ಕೃತವರ್ಮ ವಿವಿಂಶತಿ ವಿಕರ್ಣ ಚಿತ್ರಸೇನ ಸೋಮದತ್ತ ಭಗದತ್ತ ಬಾತ್ಮೀಕ ಭೂರಿಶ್ರವಃ ಪ್ರಕೃತಿಗಳ ಗಣಿಸನ್ನೆಗೈದು ಕಾದುವಾಗಳ್ಚoll ನಡುವ ಸರಲ್ ಸರಳ್ಕೊಳೆ ಸುರುಳ್ ಹಯಂ ಹಯದುರುಳಳೊಳ್
ತೊಡರ್ವ ಭಟರ್ ಭಟರ್ಕಳೊಳೆ ತೋಚ್ಚಟೆಮಾ ರಥಂ ರಥಕ್ಕೆ ವಾ | ಯಡಿಗಿಡ ಮೆಯ್ಯೋಣರ್ಚುವ ಮಹಾರಥರಾಜಿಯೊಳಂತಗುರ್ವಿನ ಚುಡಿದಿರೆ ಕಾದಿ ಬಿಚ್ಚಣಿಸಿದರ್ ಬಸುನೆತ್ತರ ಸುಟ್ಟುರೆ ಸೂಸುವನ್ನೆಗಂ || ೧೧೪
ವ|| ಅಂತೆರಡುಂ ಪಡೆಯ ನಾಯಕರೊರ್ವರೊರ್ವರೊಳ್ ತಲೆಮಟ್ಟು ಕಾದುವಾಗಳ್ ಶ್ವೇತಂ ತನ್ನ ತಮ್ಮನಳೆವಿನೊಳಾದ ಮುಳಿಸಿಕೊಳ್ ಕಣ್ಣಾಣದೆ ಶಲ್ಯನಂ ಮುಟ್ಟೆವಂದು
ಚಂ ಮುಳಿಸಿಕೊಳೆಯ್ದ ಕೆಂಪಡರ್ದ ಕಣ್ಣಳಿನೊರ್ಮಯೆ ನುಂಗುವಂತಸುಂ
ಗೋಳೆ ನಡೆ ನೋಡಿ ಮಾಣದುರಮಂ ಬಿರಿಯತೊಡೆ ಸೂಸಿ ಪಾಯಸ | ಗಳಮವನುಗ್ರ ಕೋಪಶಿಖಿ ತಳಳುರ್ವಂತವೊಲಾಗೆ ಶಲ್ಯನಾ ಗಳೆ ರಣದೊಳ್ ನೆಲ್ಗೊಡವನಂ ಪಂಗಿಕ್ಕಿ ಸುರಾಪಗಾತ್ಮಜಂ || ೧೧೫
ವ ಈಕಡೆ ಧರ್ಮರಾಜನೂ ವಿರಾಟ, ಧೃಷ್ಟದ್ಯುಮ್ಮ, ಶಿಖಂಡಿ, ಚೇಕಿತಾನ, ಕೇಕಯ, ಸಾತ್ಯಕಿ, ನಕುಲ, ಸಹದೇವ, ಅಭಿಮನ್ಯುವೇ ಮೊದಲಾದ ನಾಯಕರೊಡಗೂಡಿ ಯುದ್ಧರಂಗಕ್ಕೆ ಬಂದು ರಣಭೇರಿಯನ್ನು ಹೊಡೆಯಿಸಿದನು. ಕೃಪ, ಕೃತವರ್ಮ, ವಿವಿಂಶತಿ, ವಿಕರ್ಣ, ಚಿತ್ರಸೇನ, ಸೋಮದತ್ತ, ಭಗದತ್ತ, ಬಾಹಿಕ, ಭೂರಿಶ್ರವರೇ ಮೊದಲಾದ ಪ್ರತಿಪಕ್ಷದವರು ಬಾಣದ ಗರಿಗಳಿಂದಲೇ ಸನ್ನೆಮಾಡಿ ಯುದ್ದಮಾಡಲು ಪ್ರಾರಂಭಿಸಿದರು. ೧೧೪. ಬಾಣಗಳು ನಾಟಿಕೊಂಡವು. ಕುದುರೆಗಳು ಸುರುಳಿಕೊಂಡು ಬಿದ್ದುವು. ಅವುಗಳ ಒಳಗರುಳಿನಲ್ಲಿ ಶೂರರು ಸಿಕ್ಕಿಕೊಂಡರು. ತೇರು ಹರಿದು ಅವರನ್ನು ಅಜ್ಜುಗುಜ್ಜಿಮಾಡಿದವು. ಮಹಾರಥರು ನುಗ್ಗಿ ತೇರನ್ನೆಡವಿ ಮುರಿದು ಬಿದ್ದು ಬಿಸಿರಕ್ತದ ಪ್ರವಾಹವು ಹರಿಯುವವರೆಗೆ ಅದ್ಭುತವಾಗಿ ಯುದ್ಧಮಾಡಿದರು. ವ ಹಾಗೆ ಎರಡುಸೈನ್ಯದ ನಾಯಕರೂ ಪರಸ್ಪರ ಪ್ರತ್ಯಕ್ಷವಾಗಿ ಯುದ್ಧಮಾಡುತ್ತಿದ್ದಾಗ ಶ್ವೇತನು ತನ್ನ ತಮ್ಮನ ಸಾವಿನಿಂದ ಆದ ಕೋಪದಿಂದ ಮುಂದಾಲೋಚನೆಯಿಲ್ಲದೆ ಶಲ್ಯನ ಸಮೀಪಕ್ಕೆ ಬಂದನು. ೧೧೫. ಕೋಪದಿಂದ ವಿಶೇಷವಾಗಿ ಕೆಂಪೇರಿದ್ದ ಕಣ್ಣುಗಳಿಂದ ಒಂದೇಸಲ ನುಂಗುವಹಾಗೆಯೂ ಪ್ರಾಣಾಪಹಾರ ಮಾಡುವ ಹಾಗೆಯೂ ದೀರ್ಘವಾಗಿ (ಗುರಿಗುಟ್ಟಿ) ನೋಡಿ ಅಷ್ಟಕ್ಕೇ ಬಿಡದೆ ಎದೆಯು ಸೀಳುವ ಹಾಗೆ ಹೊಡೆದನು. (ಅದರಿಂದ) ರಕ್ತಪ್ರವಾಹವು ಹರಿಯಿತು. ಅವನ ತೀಕ್ಷವಾದ ಕೋಪಾಗ್ನಿಯು ಸೇರಿ ವ್ಯಾಪಿಸಿದ ಹಾಗಾಯಿತು. ಶಲ್ಯನು ಆಗಲೇ ಯುದ್ಧದಲ್ಲಿ ನಿಶ್ಲೇಷ್ಟನಾದನು. ಭೀಷ್ಮನು ಅವನನ್ನು ಹಿಂದಿಕ್ಕಿ ತಾನು ಮುನ್ನುಗ್ಗಿದನು.
Page #500
--------------------------------------------------------------------------
________________
ದಶಮಾಶ್ವಾಸಂ / ೪೯೫ ವ|| ಅಂತು ಪ್ರಳಯಕಾಲದಂದು ಮೂಡುವ ಪರ್ವರಾದಿತ್ಯರ ತೇಜಮುಮಂ ಮಹೇಶ್ವರ ಭೈರವಾಡಂಬರಮುಮಂ ಯುಗಾಂತ ಕಾಲಾಂತಕನ ಮಸಕಮುಮಂ ತನ್ನೊಳಳವಡಿಸಿಕೊಂಡು ಚಂ|| ಖರ ಕಿರಣ ಪ್ರಚಂಡ ಕಿರಣಾವಳಿ ಲೋಕಮನೆಯ್ದೆ ಪರ್ವುವಂ
ತಿರೆ ಕಡುಕೆಯ್ದು ತನ್ನೆರಡು ಕೆಯ್ಯೋಳಮೆಚ್ಚ ಶರಾಳಿಗಳ ಭಯಂ || ಕರತರಮಾಗೆ ಭೂಭುವನಮಲ್ಲಮನೊರ್ಮೆಯ ಸುತ್ತಿ ಮುತ್ತಿ ಕೊಂ
ಡಿರೆ ದೆಸೆಗಾಣಲಾಗದು ದಲಾ ರಣಗಲೆ ಮಂದವಾದುದೋ || ೧೧೬
ವ|| ಎಂಬಿನಮಂಬಿನ ಬಂಬಲೊಳಂ ಜೋಡಾಗಿ ಕೋಡನೂ ಕೆಡದ ಗಜ ವಜಂಗಳ ಡೊಣೆವುಗಳಿಂದೋಜಿತು ಪರಿವ ನೆತ್ತರ ಕಡಲ್ಗಳುಂ ನೆತ್ತರ ಕಡಲ್ಗಳೊಳ್ ಮಿಳಿರ್ವ ಪದವಿಗಗಳ ತಲೆದೂತಿ ಮುಜುಂಗಿದ ರಥಂಗಳುಂ ರಥಂಗಳ ಗಾಲಿಗಳಡ್ಡಮಾಗಿ ಬಿಟ್ಟಿರ್ದ ಮದಹಸ್ತಿಗಳುಂ ಮದಹಸಿಮಸ್ತಕಂಗಳನೋಸರಿಸಿ ರಥಮಂ ಪರಿಯಿಸುವ ರಥಚೋದಕರುಂ ರಥಚೋದಕರ ಬಿಟ್ಟ ಬಾಯ್ ಬಿಟ್ಟಂತಿರೆ ಬಿಟ್ಟ ತಮ್ಮ ಕರುನ್ಗಳೊಳ್ ತವ ತೊಡರ್ದು ಕೀಲಿಂ ಕರ್ಚಿ ದಿಂಡುಮಗುಳು ಕಡೆವ ಜಾತ್ಯಶ್ವಂಗಳುಂ ಜಾತ್ಯಶ್ವಂಗಳ ಹೆಣದ ತಿಂತಿಣಿಯೊಳ್ ತೊಡರ್ದಡಪುತ್ತುಮಾಡುವ ಸುಭಟರಟ್ಟೆಗಳುಂ ಸುಭಟರಟ್ಟೆಗಳನೆಲ್ಡಟ್ಟಿ ಕುಟ್ಟುವ ತೊಂಡು ಮರುಳುಂ ಮರುಳಾಟಮಂ ಪಳಪಳನೆಮಯಿಕ್ಕದೆ ನೋಡಿ ಮುಗುಳಗೆ ನಗುವ ವೀರ
ವ! ಪ್ರಳಯಕಾಲದ ದ್ವಾದಶಾದಿತ್ಯರ ತೇಜಸ್ಸನ್ನು ಮಹೇಶ್ವರನ ಭಯಂಕರವಾದ ಅಟಾಟೋಪವನ್ನು ಯುಗಾಂತದ ಯಮನ ರೇಗುವಿಕೆಯನ್ನು ತನ್ನಲ್ಲಿ ಅಳವಡಿಸಿಕೊಂಡನು. ೧೧೬. ಸೂರ್ಯನ ತೀಕ್ಷ್ಮವಾದ ಕಿರಣಸಮೂಹಗಳು ಲೋಕವನ್ನೆಲ್ಲ ಪೂರ್ಣವಾಗಿ ಆವರಿಸುವ ಹಾಗೆ ವೇಗಶಾಲಿಯಾದ ತನ್ನ ಎರಡು ಕೈಗಳಿಂದಲೂ ಬಿಟ್ಟ ಬಾಣಸಮೂಹಗಳು ಅತ್ಯಂತ ಭಯಂಕರವಾಗಿ ಪ್ರಪಂಚ ವೆಲ್ಲವನ್ನೂ ಒಟ್ಟಿಗೆ ಸುತ್ತಮುತ್ತಿಕೊಂಡುವು. ಆ ಯುದ್ದದ ಕತ್ತಲೆಯಿಂದ ನಿಜವಾಗಿಯೂ ದಿಕ್ಕೇ ಕಾಣದಂತಾಯಿತು. ಆ ರಣಗತ್ತಲೆ ಅತ್ಯಂತ ಸಾಂದ್ರವಾಗಿತ್ತು. ವ|| ಬಾಣಗಳ ಸಮೂಹದಿಂದ ಜೊತೆ ಜೊತೆಯಾಗಿ ಕೊಂಬನ್ನೂರಿ ಕೆಡೆದಿದ್ದ ಆನೆಗಳ ಗಾಯದ ಡೊಗರುಗಳಿಂದ ಜಿನುಗಿ ಹರಿಯುವ ರಕ್ತದ ಸಮುದ್ರಗಳೂ, ರಕ್ತಸಮುದ್ರದಲ್ಲಿ ಚಲಿಸುತ್ತಿರುವ ಬಾವುಟಗಳ ತುದಿಗಳು ಮಾತ್ರ ತೋರುತ್ತ ಮುಳುಗಿದ್ದ ತೇರುಗಳೂ ತೇರುಗಳಿಗೆ ಅಡ್ಡವಾಗಿ ಬಿದ್ದಿದ್ದ ಮದ್ದಾನೆಗಳೂ ಮದ್ದಾನೆಗಳ ತಲೆಗಳನ್ನು ಒಂದು ಕಡೆಗೆ ಓಸರಿಸಿ ತೇರನ್ನು ಹರಿಯಿಸುವ ಸಾರಥಿಗಳೂ ಸಾರಥಿಗಳು ಬಿಟ್ಟ ಬಾಯಿ ಬಿಟ್ಟ ಹಾಗೆ ತಮ್ಮ ಕರುಳುಗಳೂ ಸೇರಿಕೊಂಡ ಹಾಗೆಯೇ ಕಡಿವಾಣವನ್ನು ಕಚ್ಚಿಕೊಂಡು ರಾಶಿರಾಶಿಯಾಗಿ ಬಿದ್ದಿದ್ದ ಉತ್ತಮವಾದ ಜಾತ್ಯತ್ವಗಳೂ ಜಾತಿಕುದುರೆಗಳ ಸಮೂಹದಲ್ಲಿ ಸೇರಿಕೊಂಡು ಎಡವುತ್ತ ಆಡುತ್ತಿರುವ ಶೂರರ ಮುಂಡಗಳೂ ಆ ಶೂರರ ಮುಂಡಗಳನ್ನು ಎಬ್ಬಿಸಿ ಓಡಿಸಿ ಬಡಿಯುತ್ತಿರುವ ತುಂಟ ಪಿಶಾಚಿಗಳ ಆಟವನ್ನು ಪಳಪಳನೆ ರೆಪ್ಪೆಬಡಿಯದೆ ನೋಡಿ ಹುಸಿನಗೆ ನಗುವ ಪರಾಕ್ರಮಶಾಲಿಗಳ ಹಸಿಯ ತಲೆಗಳೂ ಭಯ, ಆಶ್ಚರ್ಯ, ಅದ್ಭುತ, ಭಯಾನಕ, ವೀರ, ಬೀಭತ್ಸ, ರೌದ್ರರಸಗಳನ್ನು
Page #501
--------------------------------------------------------------------------
________________
೪೯೬) ಪಂಪಭಾರತಂ ಭಟರ ಪಂದಲೆಗಳುಮಗುರ್ವುಮದ್ಭುತ ಭಯಾನಕ ವೀರ ಬೀಭತ್ಸ ರೌದ್ರ ರಸಂಗಳಂ ಪುದುಂಗೊಳಿಸೆ ಗಾಂಗೇಯಂ ನಾಡೆಯುಂ ಪೊತ್ತು ಕಾದೆಮll ಪಟ್ಟಂಗಟ್ಟದಿಳಾಧಿನಾಥರೆ ಪಯಿಂಛಾಸಿರ್ವರೊಳಾನೆಗಳ
ಪಟ್ಟಂಗಟ್ಟಿದುವೊಂದು ಲಕ್ಕ ತುರಗ ಪತ್ತೆಂಟು ಲಕ್ಕಂ ಪಡ | ಊಟ್ಟಯ್ಯಾಡಿದುವೊಂದೆ ಬಲ್ಲೆನೆ ನದೀಪುತ್ರಂಗೆ ಪೇಜಾರ್ ಚಲಂ ಬಟ್ಟುಂ ಮಾರ್ಮಲೆದಂಬುದೊಟ್ಟುಮುಟಿವರ್ ಸಂಗ್ರಾಮರಂಗಾಗ್ರದೊಳ್ ||೧೧೭
ವll ಎಂಬನ್ನೆಗಂ ಶೈತನುಮನವರತ ಶರಾಸಾರದಿಂ ಕುರುಬಲಮಲ್ಲಮನರೆದು ಸಣ್ಣಿಸಿದಂತೆ ಮಾಡಿ ತವ ನೆರವಿಯನೆನಿತಂ ಕೊಂದೊಡಮೇನಂದಪುದೆಂದು ಗಾಂಗೇಯಂಗ ದಿರದಿದಿರಂ ಮಾರ್ಕೊಂಡು ಬಿಲ್ಗೊಯ್ತು ನಿಂದಾಗಳ್ಉll ಶ್ವೇತನ ಬಿಲ್ಲೊಳಿರ್ದ ಮದನಾರಿಯ ರೂಪರ್ದಗೊಳ್ಳುದುಂ ನದೀ
ಜಾತನುದಾತ್ತ ಭಕ್ತಿಯೊಳೆ ಕೆಯುಗಿದಾಗಳಿದ್ದಂತೂ ನಿಮ್ಮ ಪ || ರ್ಮಾತಿನ ಬೀರಮೀಯೆಡೆಗೆವಂದುದೆ ಮುಪ್ಪಿನೊಳೆಯ ಲೋಕ ವಿ
ಖ್ಯಾತರಿರಾಗಿ ಕೆಯ್ದುವಿಡಿವಲ್ಲಿಯ ಕಾಲ್ವಿಡಿಯಕ್ಕೆ ತಕ್ಕುದೇ || ೧೧೮ ಚill ಎನಗೆ ರಣಾಗ್ರದೊಳ್ ಪೊಣರ್ವೊಡಂಕದ ಪೂಂಕದ ಸಿಂಧುಪುತ್ರನೂ
ರ್ವನೆ ದೊರೆಯೆಂದು ನಿಮ್ಮೊಳೆ ವಲಂ ತಣಿಸಂದಿಯಲೈ ಪೂಸ್ಟನಾ | ನನಗಿವತ್ತಿಯಂ ಕಿಡಿಸಿ ನಿಮ್ಮಳವಂ ಪಂಗಿಕ್ಕಿ ನೀಮುಮಿಂ ತಿನಿತೆರ್ದೆಗೆಟ್ಟರಿಂ ತುಟಿಲ ಸಂದರನಾರುಮನೆಂತು ನಂಬುವರ್|| ೧೧೯
ಒಟ್ಟುಗೂಡಿಸಿದ್ದಂತೆ ಕಾಣುತ್ತಿತ್ತು. ೧೧೭. ಭೀಷ್ಮನ ಒಂದೇ ಬಿಲ್ಲಿಗೆ ಪಟ್ಟಾಭಿಷಿಕ್ತರಾದ ಹತ್ತು ಸಾವಿರ ಚಕ್ರವರ್ತಿಗಳೂ ಪಟ್ಟಾಭಿಷಿಕ್ತವಾದ ಒಂದು ಲಕ್ಷ ಭದ್ರಗಜಗಳೂ (ಮಂಗಳಕರವಾದ ಆನೆ) ಹತ್ತೆಂಟುಲಕ್ಷ ಕುದುರೆಗಳೂ ಕೆಳಗುರುಳಿ ನಾಶವಾದುವು ಎನ್ನಲು ಯುದ್ಧದಲ್ಲಿ ಪಣದೊಟ್ಟು (ಹಟಮಾಡಿ) ಭೀಷ್ಮನಿಗೆ ಪ್ರತಿಭಟಿಸಿ ಬಾಣಪ್ರಯೋಗಮಾಡಿ ಉಳಿಯುವವರು ಯಾರಿದ್ದಾರೆ? ವ|ಎನ್ನುತ್ತಿರುವಲ್ಲಿ ಶ್ವೇತನೂ ಒಂದೇ ಸಮನಾದ ಬಾಣದ ಮಳೆಯಿಂದ ಕೌರವಸೈನ್ಯವನ್ನೆಲ್ಲ ಅರೆದು ಪುಡಿಮಾಡಿದಂತೆ ಮಾಡಿ ನಾಶಪಡಿಸಿ ಈ ಸಾಮಾನ್ಯ ಸೈನ್ಯವಷ್ಟನ್ನೂ ಕೊಂದರೆ ಏನು ಪ್ರಯೋಜನ ಎಂಬುದಾಗಿ ಭೀಷ್ಮನಿಗೆ ಹೆದರದೆ ಇದಿರಾಗಿ ಪ್ರತಿಭಟಿಸಿ ಬಿಲ್ಲನ್ನು ಸೆಳೆದು ನಿಂತನು - ೧೧೮. ಶ್ವೇತನ ಬಿಲ್ಲಿನಲ್ಲಿದ್ದ ಮಹಾಶಿವನ ಆಕಾರವು ತನ್ನ ಹೃದಯವನ್ನು ಸೂರೆಗೊಂಡಿತು. ಭೀಷ್ಮನು ಅತ್ಯಂತ ಶ್ರೇಷ್ಠವಾದ ಭಕ್ತಿಯಿಂದ ಕೈಮುಗಿದನು. (ಶ್ವೇತನು ಅವರನ್ನು ಕುರಿತು) ಇದೇನಿದು? ನಿಮ್ಮ ಪ್ರಸಿದ್ಧವಾದ ಪರಾಕ್ರಮವು ಮುಪ್ಪಿನಲ್ಲಿ ಈ ಸ್ಥಿತಿಗೆ ಬಂದಿತೇ? ಪೂರ್ಣವಾಗಿ ಲೋಕಪ್ರಸಿದ್ಧವಾಗಿರುವ ನೀವು ಶಸ್ತ್ರಗ್ರಹಣ ಮಾಡಬೇಕಾದ ಕಾಲದಲ್ಲಿ ಶರಣಾಗತರಾಗುವುದು ಯೋಗ್ಯವೇ ? ೧೧೯. ಯುದ್ಧಮುಖದಲ್ಲಿ ಕಾದಬೇಕಾದರೆ ಪ್ರಸಿದ್ಧನೂ ಗರ್ವಿಷ್ಠನೂ ಆದ ಭೀಷ್ಮನೊಬ್ಬನೇ ನನಗೆ ಸಮಾನನಾದವನು ಎಂದು ಪೂರ್ಣವಾಗಿ ನಿಷ್ಕರ್ಷೆ ಮಾಡಿಕೊಂಡು ಯುದ್ಧ ಮಾಡುವುದಕ್ಕೆ ನಾನು ಪ್ರತಿಜ್ಞೆ
Page #502
--------------------------------------------------------------------------
________________
ದಶಮಾಶ್ವಾಸಂ / ೪೭ ವ|| ಎಂದು ತನ್ನಂ ನೋಯ ನುಡಿದೊಡೆ ಸಿಂಧುಪುತ್ರನಿಂತೆಂದಂ
ಮll.
ನಿನಗೇನೆಂದೊಡಮಂದುದೊಪ್ಪಿದಪುದಂತೇಕೆನ್ನನಿ ಶರಾ ಸನದೂಳ ಶೂಲಕಪಾಲಪಾಣಿ ದಯೆಯಿಂ ಬಂದಿರ್ದನು೦ತಾನುಮಿಂ | ತಿನಿತಂ ನೀಂ ನುಡಿವನ್ನೆಗಂ ತಡವನೇ ತ್ರೈಲೋಕ್ಯನಾಥಂ ಕಣಾ ವಿನಮನಸ್ತಕನಾದೆನಣುವೊಡೆ ನೀನೀ ದೇವನಂ ತೋಜುವೈ | ೧೨೦
ಕಂ!
ಇಳವಂತು ನಿನಗೆ ಮನದೊಳ್ . ತಳಸಲವುಂಟಪೊಡೆಲಿ ದೇವೇಶನನೇಂ | ಸೆವಿಡಿದೆ ತೋಲಗು ದೇವನ ಮಜಯಂ ಬಟಿಕಳೆಯಲುಮನಗಂ ನಿನಗಂ ||
ವ|| ಎಂಬುದುಂ ಶ್ವೇತನಿಂತೆಂದಂ
ಉll.
ಕಾಗೆವೊಲಿಂತು ಬಿಟ್ಟೆ ಕರಮಂಜುವಿರಂಜಲಿಮಾ ತ್ರಿಣೇತ್ರನಂ ಪೋ ಗೆಡೆಗೊಂಡು ಕಾದುವನೆ ಕಾದೆನಿದಂ ಹರನಿತ್ತನೆಂದು ನೋ | ಡಾಗಡುಮಟ್ಟಿಯಿಂ ಪಿಡಿವನಕ್ಕಟ ನಿಮ್ಮನದಿರ್ಪುವಲ್ಲಿ ಚಾ ನಾಗಮಮೇವುದಂತೆನಗೆ ಬಿಲ್ವರಮಾಜಿಯೋಣಂಪ ಗಂಡರಾರ್ || ೧೨೨
ಮಾಡಿ ಬಂದೆ. ನನಗುಂಟಾದ ಯುದ್ಧೋತ್ಸಾಹವನ್ನು ಕೆಡಿಸಿ ನಿಮ್ಮ ಪರಾಕ್ರಮವನ್ನು ಹಿಂದುಮಾಡಿ ನೀವೂ ಹೇಗೆ ಧೈರ್ಯಹೀನರಾಗಿದ್ದೀರಿ. ಇನ್ನು ಮೇಲೆ ಪರಾಕ್ರಮಶಾಲಿಗಳನ್ನು ಯಾರನ್ನಾದರೂ ಹೇಗೆ ನಂಬುವುದು? ವು ಎಂದು ತನಗೆ ನೋವುಂಟಾಗುವ ಹಾಗೆ ನುಡಿಯಲು ಭೀಷ್ಮನು ಹೇಳಿದನು - ೧೨೦. ನೀನು ಏನು ಹೇಳಿದರೂ ನಿನಗೆ ಒಪ್ಪುತ್ತದೆ. ಏಕೆನ್ನುವೆಯಾ? ನಿನ್ನ ಈ ಬಿಲ್ಲಿನಲ್ಲಿರುವ ಶೂಲಕಪಾಲಪಾಣಿಯಾದ ಈಶ್ವರನು ದಯೆಯಿಂದ ಕಾಣಿಸಿಕೊಂಡಿದ್ದಾನೆ. ಹಾಗಿಲ್ಲದ ಪಕ್ಷದಲ್ಲಿ ನೀನು ಇಷ್ಟು ಹರಟುವವರೆಗೆ ತಡೆಯುತ್ತಿದ್ದೆನೇ ? ಶಿವನು ಮೂರುಲೋಕದ ಒಡೆಯನಲ್ಲವೇ? ಆದುದರಿಂದ ನಮಸ್ಕಾರ ಮಾಡಿದೆ. ನಾನು ಯುದ್ಧ ಮಾಡುವುದಕ್ಕೆ ಬರಲು ನೀನು ಈಶ್ವರದೇವನನ್ನು ತೋರಿಸುತ್ತೀಯೆ. ೧೨೧. ನಿನಗೆ ಮನಸ್ಸಿನಲ್ಲಿ ಯುದ್ಧಮಾಡುವ ನಿಶ್ಚಯವೇ ಇದ್ದರೆ ದೇವಶ್ರೇಷ್ಠನಾದ ಈಶ್ವರನನ್ನೇಕೆ ಮರೆಹಿಡಿದಿದ್ದೀಯೆ? ದೇವನ ಆಶ್ರಯವನ್ನು ಬಿಟ್ಟು ಕಳೆ. ಬಳಿಕ ನನಗೂ ನಿನಗೂ ಇರುವ ಅಂತರವನ್ನು ತಿಳಿಯಲು ಸಾಧ್ಯವಾಗುತ್ತದೆ. ವl ಎನ್ನಲು ಶ್ವೇತನು ಹೀಗೆಂದನು. ೧೨೨. ಕಾಗೆಯ ಹಾಗೆ ಬಿಲ್ಲಿಗೆ ಹೆದರುತ್ತೀರಿ; ಹೆದರಬೇಡಿ, ಛೀ ಆ ಮುಕ್ಕಣ್ಣನನ್ನು ಆಶ್ರಯಿಸಿ ಕಾದುತ್ತೇನೆಯೆ? ನಾನು! ಇಲ್ಲ, ಇದು ಈಶ್ವರದತ್ತನೆಂಬ ಪ್ರೀತಿಯಿಂದ ಮಾತ್ರ ಇದನ್ನು ಯಾವಾಗಲೂ ಧರಿಸಿದ್ದೇನೆ. ಅಯ್ಯೋ ನಿಮ್ಮನ್ನು ಅಡಗಿಸುವುದಕ್ಕೆ ಧನುರ್ವಿದ್ಯೆ ತಾನೆ ಏಕೆ ನನಗೆ? ಅಲ್ಲದೆ ನಾನು ಬಿಲ್ಲನ್ನು ಹಿಡಿದರೆ ನನ್ನನ್ನು ಪ್ರತಿಭಟಿಸುವ
Page #503
--------------------------------------------------------------------------
________________
೪೯೮ / ಪಂಪಭಾರತಂ
ಮ||
ಕಂ
ಬಿಸುಟೆಂ ಬಿಲ್ಲನದೇವುದೆಂದು ಕಡುಪಿಂದೀಡಾಡಿ ಸೂರ್ಯಪ್ರಭಾ ಪ್ರಸರಂಗಳ ಮಸುಳ್ಳನ್ನೆಗಂ ಪೊಳೆವುದೊಂದಂ ಶಕ್ತಿಯಂ ಕೊಂಡಗು ರ್ವಿಸಿ ಗಾಂಗೇಯನನಿಟ್ಟನಿಡದನೀರಯಸ್ಮದಿಂದೆಚ್ಚು ಖಂ ಡಿಸಿ ಪೇರಾಳ ತಿಳಿದಿಕ್ಕಿದಂತೆ ತಲೆಯಂ ಪೋಗಚ್ಚನಾ ಶ್ವೇತನಾ ||
ಶ್ವೇತನ ಬೀರಮನುಪಮಾ
ತೀತಮನೀ ಧರೆಗೆ ನೆಗಟ ನೆಗಟ್ಟುದನಿದನಾಂ |
ಪಾತಾಳಕ್ಯಪುವನಂ
ಬೀ ತಂದೊಳೆ ದಿನಪನಪರಜಲನಿಧಿಗಿಂದಂ ||
೧೨೩
ܦܘ
ವ|| ಆಗಳೆರಡುಂ ಪಡೆಯ ನಾಯಕರಪಹಾರತೂರ್ಯಂಗಳಂ ಬಾಜಿಸಿ ತಮ್ಮ ತಮ್ಮ ಬೀಡುಗಳ್ಳಿ ಪೋದರನ್ನೆಗಮಿತ್ತ ಸಂಸಪ್ತಕಬಲಮನೆಲ್ಲಮನೊಂದೆ ರಥದೊಳಾದಿತ್ಯ ನಸುರರನದಿರ್ಪುವಂತಾಟಂದು ವಿಕ್ರಮಾರ್ಜುನನುಮರಾತಿಕಾಳಾನಳನುಮತಿರಥ ಮಥನನುಂ ರಿಪುಕುರಂಗಕಂಠೀರವನುಂ ಸಾಹಸಾಭರಣನುಮಮ್ಮನ ಗಂಧವಾರಣನುಂ ಪಡಮಚ್ಚೆಗಂಡನುಂ ಪರಸೈನ್ಯಭೈರವನುವೆಂಬ ಪೆಸರ್ಗಳನನ್ವರ್ಥಂ ಮಾಡಿ
ಶೂರನೂ ಇದ್ದಾನೆಯೇ? ೧೨೩. ಇದೋ ಬಿಲ್ಲನ್ನು ಬಿಸುಟಿದ್ದೇನೆ. ಅದರಿಂದೇನಾಗಬೇಕು ಎಂದು ವೇಗದಿಂದ ಎಸೆದು ಸೂರ್ಯಕಾಂತಿ ಸಮೂಹವನ್ನೂ ಮಸಕುಮಾಡುವಷ್ಟು ಕಾಂತಿಯುಕ್ತವಾದ ಒಂದು ಶಕ್ತಾಯುಧವನ್ನು ತೆಗೆದುಕೊಂಡು ಆರ್ಭಟಮಾಡಿ ಹೊಡೆದನು. ಆ ಹಿರಿಯನು (ಭೀಷ್ಮನು) ಅದನ್ನು ಹತ್ತು ಬಾಣಗಳಿಂದ ಹೊಡೆದು ಕತ್ತರಿಸಿ ಆ ಶ್ವೇತನ ತಲೆಯನ್ನು ತಿರುಪಿ (ಜಿಗಟಿ) ಕತ್ತರಿಸಿದಂತೆ ಹೊಡೆದು ಹಾಕಿದನು. ೧೨೪. ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವನ್ನು ನಾನು ಪಾತಾಳಕ್ಕೂ ತಿಳಿಸುತ್ತೇನೆ ಎನ್ನುವ ರೀತಿಯಲ್ಲಿ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು. ವll ಆಗ ಎರಡು ಸೈನ್ಯದ ನಾಯಕರೂ ಯುದ್ಧವನ್ನು ನಿಲ್ಲಿಸಲು ಸೂಚಕವಾದ ವಾದ್ಯಗಳನ್ನು ಬಾಜಿಸಿ ತಮ್ಮ ತಮ್ಮ ಬೀಡುಗಳಿಗೆ ಹೋದರು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯವೆಲ್ಲವನ್ನೂ ಒಂದೇ ತೇರಿನಲ್ಲಿ ಕುಳಿತು ಸೂರ್ಯನು ರಾಕ್ಷಸರನ್ನು ಅಡಗಿಸುವಂತೆ ಶತ್ರುಗಳ ಮೇಲೆ ಬಿದ್ದು ಅರ್ಜುನನೂ ಕೂಡಿ ತನ್ನ ಅರಾತಿಕಾಳಾನಳ, ಅತಿರಥಮಥನ, ರಿಪುಕುರಂಗಕಂಠೀರವ, ಸಾಹಸಾಭರಣ, ಗಂಧವಾರಣ, ಪಡೆಮೆಚ್ಚಗಂಡ, ಪರಸೈನ್ಯಭೈರವ ಎಂಬ ತನ್ನ ಹೆಸರುಗಳನ್ನು ಸಾರ್ಥಕವಾಗುವಂತೆ (ಅರ್ಥಕ್ಕನುಗುಣವಾಗುವಂತೆ) ಮಾಡಿದನು.
Page #504
--------------------------------------------------------------------------
________________
ದಶಮಾಶ್ವಾಸಂ | ೪೯೯
ಚoll ನೆರೆದನುರಾಗದಿಂ ಪಡೆಯ ಪಾಡಿಯ ಬೀರರ ಪೆಂಡಿರಂ ಪರಸಿಯೊಲ್ಲು ಸೇಸೆಗಳನಿಕ್ಕೆ ಮುರಾರಿಯ ಪಾಂಚಜನ್ಮ ವಿ | ಸುರಿತ ರವಂ ಜಯೋತ್ಸವದ ಘೋಷಣೆಯಂತಿರ ಪೊಕ್ಕನಾತ್ಮ ಮಂ ದಿರಮನುದಾತ್ತಚಿತ್ತನವನೀತಳ ಪೂಜ್ಯಗುಣಂ ಗುಣಾರ್ಣವಂ ||
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ದಶಮಾಶ್ವಾಸಂ
೧೨೫
೧೨೫. ಸೈನ್ಯಸಮೂಹದಲ್ಲಿದ್ದ ವೀರಸ್ತ್ರೀಯರು ಸಂತೋಷದಿಂದ ಒಟ್ಟುಗೂಡಿ ಪ್ರೀತಿಯಿಂದ ಹರಸಿ ಸೇಸೆಯನ್ನಿಕ್ಕಿದರು. ಶ್ರೀಕೃಷ್ಣನ ಪಾಂಚಜನ್ಯವೆಂಬ ಶಂಖದ ವಿಜೃಂಭಿತ ಧ್ವನಿಯು ವಿಜಯೋತ್ಸವದ ಡಂಗುರದಂತಿತ್ತು. ಉದಾತ್ತಚಿತ್ತನೂ ಭೂಮಂಡಲದಲ್ಲಿ ಪೂಜಿಸಲ್ಪಡುವ ಗುಣಗಳಿಂದ ಕೂಡಿದವನೂ ಆದ ಗುಣಾರ್ಣವನು ತನ್ನ ಮಂದಿರವನ್ನು ಪ್ರವೇಶಿಸಿದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ 'ವಿಕ್ರಮಾರ್ಜುನ ವಿಜಯ'ದಲ್ಲಿ ಹತ್ತನೆಯ ಆಶ್ವಾಸ.
Page #505
--------------------------------------------------------------------------
________________
ಕಂ
ಏಕಾದಶಾಶ್ವಾಸಂ
ಶ್ರೀ ಯುವತಿಯನಾ ವೀರ
ಶ್ರೀ ಯುವತಿಗೆ ಸವತಿಮಾನೆಂದರಿ ನೃಪರು | ಛಾಯವೆರಸೆದುಕೊಂಡು ಧ
ರಾ ಯುವತಿಗೆ ನೆಗಟ್ಟಿ ಹರಿಗನೊರ್ವನೆ ಗಂಡಂ !!
ಎಂಬ ನಿಜ ಚರಿತಮಂ ಪಲ
ರುಂ ಬಣ್ಣಿಸೆ ಕಿವಿಯನಾಂತು ಕೇಳುತ್ತುಮಳುಂ |
ಬಂ ಬೀರಮೆನಿಸಿ ತನಗಿದಿ
ರಂ ಬಂದು ಕಡಂಗಿ ಸತ್ತರಂ ಪೊಗಲುತ್ತುಂ ||
C
ವ|| ಅಂತು ವಿಕ್ರಾಂತ ತುಂಗನಿರ್ಪನ್ನೆಗಮಿತ್ತಲೆರಡುಂ ಪಡೆಯ ನಾಯಕರಡೆಯ ನೊಂದ ತಮ್ಮಣುಗಾಳಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಣಳನುಡಿಯಲುಮೋವಲುಂ ಮರ್ದುಬೆಜ್ಜರಮನಟ್ಟುತ್ತುಮಿಕ್ಕಿದ ಸನ್ನಣಂಗಳಂ ಗೆಲ್ಲು ಕಣಕೆನೆ ಪೋಗುರ್ಚಿ ತಮ್ಮ ಮೆಯೊಳುಡಿದಂಬುಗಳುಮನೆಲ್ವಂ ನಟ್ಟುಡಿದ ಬಾಳ ಕಕ್ಕಡೆಯುಡಿಗಳುಮನಯಸ್ಕಾಂತಮಂ ತೋಳ ತೆಗೆಯಿಸುತ್ತುಂ ವಜ್ರಮುಷ್ಟಿಯ ಪೊಯೊಳಂ ಬಾಳ ಕೋಳೊಳಮುಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ
೧. ಐಶ್ವರ್ಯಲಕ್ಷ್ಮಿಗೆ ಜಯಲಕ್ಷ್ಮಿಯನ್ನು ಸವತಿಯನ್ನಾಗಿ ಮಾಡುತ್ತೇನೆಂದು ಶತ್ರುರಾಜರನ್ನು ಅವರ ಸಮರಸಾಮರ್ಥ್ಯದಿಂದ ಸೆಳೆದು ಅಧೀನಮಾಡಿಕೊಂಡು ಭೂದೇವಿಯ ಒಡೆಯನಾದ (ಭೂಪತಿ) ಅರ್ಜುನನೊಬ್ಬನೇ ಶೂರನಾದವನು ೨. ಎಂಬ ತನ್ನ ಚರಿತ್ರವನ್ನು ಅನೇಕರು ವರ್ಣಿಸುತ್ತಿರಲು ಅದನ್ನು ಕಿವಿಗೊಟ್ಟು ಕೇಳುತ್ತಲೂ ಅತಿಶಯ ಸಾಹಸಿಗಳೆನಿಸಿಕೊಂಡು ಉತ್ಸಾಹದಿಂದ ತನಗೆ ಇದಿರಾಗಿ ಬಂದು ಕಾದಿ ಸತ್ತವರನ್ನು ಹೊಗಳುತ್ತಲೂ ಇದ್ದನು. ವ|| ಹಾಗೆ ಅತ್ಯಂತ ಪರಾಕ್ರಮಿಯಾದ ಅರ್ಜುನನು ಇರುತ್ತಿರಲು ಎರಡು ಸೈನ್ಯದ ನಾಯಕರೂ ಸಾಯುವಷ್ಟು ನೋವನ್ನು ಪಡೆದಿದ್ದ ತಮ್ಮ ಪ್ರೀತಿಪಾತ್ರರಾದ ಸೇವಕರ, ತಮ್ಮ ಹೊಗಳಿಕೆಗೆ ಪಾತ್ರವಾದ ಆನೆಗಳ, ತಮ್ಮ ಮೆಚ್ಚಿನ ಕುದುರೆಗಳ ಹುಣ್ಣುಗಳನ್ನು (ಗಾಯವನ್ನು) ಗುಣಪಡಿಸುವುದಕ್ಕೂ ರಕ್ಷಿಸುವುದಕ್ಕೂ ಔಷಧವನ್ನೂ ಲೇಪನವನ್ನೂ ಕಳುಹಿಸುತ್ತಿದ್ದರು. ಅವರು ಧರಿಸಿದ್ದ ಕವಚಗಳನ್ನೂ ಭೇದಿಸಿಕೊಂಡು ನೇರವಾಗಿ ಒಳಕ್ಕೆ ಪ್ರವೇಶಿಸಿ ಚುಚ್ಚಿಕೊಂಡು ಶರೀರದೊಳಗೆ ಮುರಿದುಹೋಗಿದ್ದ ಬಾಣಗಳನ್ನೂ ಎಲುಬುಗಳನ್ನೂ ಕತ್ತಿ ಮತ್ತು ಮುಳ್ಳುಗೋಲುಗಳ ಚೂರುಗಳನ್ನೂ ಸೂಜಿಗಲ್ಲನ್ನು (ಅಯಸ್ಕಾಂತ) ತೋರಿಸಿ ತೆಗೆಯಿಸುತ್ತಿದ್ದರು. ವಜ್ರಮುಷ್ಟಿಯ ಪೆಟ್ಟಿನಿಂದಲೂ ಕತ್ತಿಯ ಇರಿತದಿಂದಲೂ ಸಿಡಿದುಹೋದ ತಲೆಯ ಚಿಪ್ಪುಗಳನ್ನು ಗಂಗಾನದಿಗೆ ಕಳುಹಿಸುತ್ತಿದ್ದರು.
Page #506
--------------------------------------------------------------------------
________________
ಏಕಾದಶಾಶ್ವಾಸಂ | ೫೦೧ ಉll ಉನ್ನತಮಸ್ತಕಸ್ಥಳದೊಳಂಬುಗಳಟ್ಟುಡಿದಿರ್ದೊಡತ್ತಮಿ
ತನ್ನ ತಂದು ಬಲ್ನಡಿಗರಿಲ್ಕುಟಿನೊಳ್ ಕಿಟ್ ನೊಂದೆನೆನ್ನದಃ | ಎನ್ನದಣಂ ಮೊಗಂ ಮುರಿಯದಳದೆ ಬೇನೆಗಳೊಳ್ ಮೊಗಂಗಳಂ ಬಿನ್ನಗೆ ಮಾಡದಿರ್ದರಳವಚ್ಚರಿಯಾಗೆ ಕೆಲರ್ ಮಹಾರಥರ್ ||
ಚಂil ರಸಮೋಸರ್ವನೆಗಂ ತಗುಳೆ ಪಾಡುವ ಗಾಣರ ಗೇಯಮಟ್ಕಜಂ
ಪೊಸಯಿಸೆ ಸೋಂಕುವೊಲ್ಲೊಲಿಸುವೋಪಳ ಸೋಂಕು ಪೊದು ಜಾದಿಯೊಳ್ | ಮಸಗಿದ ಕಂಪು ಕಂಪನೊಳಕೊಂಡಲ್ವೊಂದಲರೆಂಬಿವಂದು ಪಾ ಆಸುವುವುದರ ವೀರ ಭಟರಾಹವಕೇಳಿ ಪರಿಶ್ರಮಂಗಳಂ |
ವll ಆಗಳ್ ಧರ್ಮನಂದನಂ ಮುಕುಂದಂಗೆ ಬಲಿಯನಟ್ಟಿ ಬರಿಸಿ ನಮ್ಮ ಸೇನಾನಾಯಕ ನುತ್ತಾಯಕನಾಗಿ ಗಾಂಗೇಯರಿಂದಮದನಿನ್ನಾರ್ಗೆ ವೀರಪಟ್ಟಮಂ ಕಟ್ಟುವಂ ಪೇಟೆಮನೆ
ಕoll ,
ಬೇಳೆಯ ಕೊಂಡದೊಳುರ್ಚಿದ ಬಾಳ್ವರಸರಿಬಲಮನರಿಯಲೆಂದಂಕದ ಕ | ಟ್ನಾಳ್ವರನ ಬಲಂ ನಿನ ಗಾಳ್ವೆಸಕೆಂದಿರ್ದನ ಧೃಷ್ಟದ್ಯುಮ್ಮಂ !
೩. ಎತ್ತರವಾದ ತಲೆಯ ಪ್ರದೇಶದಲ್ಲಿ ಬಾಣಗಳು ನಾಟಿಕೊಂಡು ಮುರಿದಿರಲು ಬಲಿಷ್ಠರಾದ ದಾಂಡಿಗರು ಆ ಕಡೆಯಿಂದ ಈ ಕಡೆಯಿಂದ ಒಟ್ಟಾಗಿ ಬಂದು ಸೇರಿ ಇಕ್ಕಳದಿಂದ ಅವುಗಳನ್ನು ಕೀಳುತ್ತಿದ್ದರೂ ನೋವಾಯಿತು ಎನ್ನದೆ ಅಃ ಎನ್ನದೆ ಸ್ವಲ್ಪವೂ ಮುಖವನ್ನು ತಿರುಗಿಸದೆ ಹೆದರದೆ ಮುಖವನ್ನು ಹೆಚ್ಚಾಗಿ ಮಾಡಿಕೊಳ್ಳದೆ ಕೆಲವು ಮಹಾರಥರು ತಮ್ಮ ಸಾಮರ್ಥ್ಯವು ಆಶ್ಚರ್ಯಕರವಾಗುವ ಹಾಗೆ ಇದ್ದರು. ೪. ರಸವು ಪ್ರಸರಿಸುವವರೆಗೂ ಬಿಡದೆ ಹಾಡುವ ಗಾಯಕಿಯರ ಗಾನ, ಪ್ರೀತಿಯನ್ನು ಉಂಟುಮಾಡುವಂತೆ ಹತ್ತಿರವೇ ಕುಳಿತು ಸುಖವನ್ನು ಹೆಚ್ಚಿಸುತ್ತಿರುವ ಪ್ರಿಯಳ ಸ್ಪರ್ಶ, ಎಲ್ಲೆಡೆಯೂ ಹರಡಿದ ಜಾಜಿಯ ವಿಜೃಂಭಿಸಿದ ವಾಸನೆಯಿಂದ ಕೂಡಿದ ಗಾಳಿ ಎಂಬವು ಶ್ರೇಷ್ಠರಾದ ವೀರಭಟರ ಯುದ್ಧಪರಿಶ್ರಮವನ್ನು ಹೋಗಲಾಡಿಸುತ್ತಿದ್ದುವು. ವ|| ಆಗ ಧರ್ಮರಾಜನು ಶ್ರೀಕೃಷ್ಣನಲ್ಲಿಗೆ ದೂತನನ್ನು ಕಳುಹಿಸಿ ಬರಮಾಡಿಕೊಂಡು “ನಮ್ಮನಾಯಕನು ತನ್ನ ಪ್ರತಾಪವನ್ನು ಮೆರೆದು ಭೀಷ್ಕರಿಂದ ನಾಶವಾದನು. ಇನ್ನಾರಿಗೆ ವೀರಪಟ್ಟವನ್ನು ಕಟ್ಟೋಣ ಹೇಳಿ' ಎಂದು ಕೇಳಿದನು. ೫. ಯಜ್ಞಕುಂಡದಲ್ಲಿ ಬಿಚ್ಚಿದ ಕತ್ತಿಯಿಂದ ಕೂಡಿ ಶತ್ರುರಾಜರನ್ನು ಕತ್ತರಿಸುವುದಕ್ಕಾಗಿಯೇ ಉದ್ಭವಿಸಿದ, ಸುಪ್ರಸಿದ್ಧನೂ ಮಹಾಬಲಿಷ್ಠನೂ ವೀರನೂ ಆದ ಧೃಷ್ಟದ್ಯುಮ್ಮನು ನಿನಗೆ ಸೇವೆಮಾಡಲೆಂದೇ ಸಿದ್ಧನಾಗಿದ್ದಾನೆಯಲ್ಲವೇ ? ವ| ಎನ್ನಲು ಈ ಕಾರ್ಯ ನನ್ನ ಮನಸ್ಸಿಗೂ ಒಪ್ಪಿದ ಕಾರ್ಯವೇ. ಅವನೇ ವೀರಪಟ್ಟಕ್ಕೆ ಯೋಗ್ಯನಾದವನು ಎಂದು ಧರ್ಮರಾಜನು ದ್ರುಪದನ ಮಗನಾದ ಧೃಷ್ಟದ್ಯುಮ್ಮನಿಗೆ ಹೇಳಿಕಳುಹಿಸಿ ಬರಮಾಡಿ ವಿಶೇಷಪ್ರೀತಿಯಿಂದ
Page #507
--------------------------------------------------------------------------
________________
೫೦೨) ಪಂಪಭಾರತಂ
ವll ಎಂಬುದುಮಿ ಕಜಮನ್ನ ಮನದೊಳೊಡಂಬಟ್ಟ ಕಜಮಾತನೆ ವೀರಪಟ್ಟಕ್ಕೆ ತಕ್ಕನೆಂದು ಧರ್ಮನಂದನಂ ದ್ರುಪದನಂದನಂಗೆ ಬಲೆಯನಟ್ಟಿ ಬರಿಸಿ ಪಿರಿದುಮೊಸಗೆವೆರಸು ತಾನೆ ವೀರಪಟ್ಟಮಂ ಕಟ್ಟಿಕಂti ಆ ಸಮರಮುಖದೊಳೆಸೆವರಿ
ಕೇಸರಿಯ ವಿರೋಧಿ ರುಧಿರ ಜಲನಿಧಿವೊಲ್ ಸಂ | ಧ್ಯಾಸಮಯಮಸೆಯ ತಲತಲ
ನೇಸಬ್ ಮೂಡುವುದುಮೊಡ್ಡಣಕ್ಕೆಂದರ್ | ವ|| ಅಂತಜಾತಶತ್ರು ಮುನ್ನಮೆ ಬಂದೊಡ್ಡಿ ಶತ್ರುಬಲಜಲನಿಧಿಯಾಡ ವಿಳಯ ಕಾಳಾನಿಳನೆ ಬೀಸುವಂತೆ ಕೆಯ್ದಿಸಿದಾಗಳ್ಮ|| ಚತುರಂಗಂ ಚತುರಂಗ ಸೈನ್ಯದೊಳಡುರ್ತ್ತುಂ ತಜ್ರನೆಯಂದು ತಾ
ಗಿ ತಡಂಮಟ್ಟದ ಕಾದೆ ಬಾಳಳುಡಿಗಳ್ ಜೀಪಿಟ್ಟು ಮಾರ್ತಾಗಿ ಶೋ | ಣಿತ ಧಾರಾಳಿಗಳುರ್ಚಿ ಪರ್ಚಿ ಸಿಡಿಯಲ್ ತೇಂಕಲ್ ವಿಮಾನಂಗಳ,
ಲೈ ತಗುಳ್ಳಾಗಳೆ ಮತ್ತಮತ್ತ ತಳರ್ದರ್ ದೇವರ್ ನಭೋಭಾಗದೊಳ್ ||೭ ' ' ವ| ಆಗಳೆರಡುಂ ಪಡೆಯ ನಾಯಕರೊಂದೊರ್ವರೊಳ್ ತಾಗಿ ಕಿಡಿಗುಟ್ಟಿದಂತೆ ಕಾದುವಾಗಳಭಿಮನ್ನು ಉಗ್ರತೇಜನಪ್ಪ ಮಗಧತನೂಜನನೊಂದೆ ಪಾಳಯಂಬಿನೊಳ್ ಕೆಯ್ಯ ಕೂಸನಿಕ್ಕುವ೦ತಿಕ್ಕುವುದುಂ ನೆಪ್ಪಿಂಗೆ ನೆಪುಗೊಳ್ಳದೆ ಮಾಣೆನೆಂಬಂತೆ ಬಕಾಸುರನ ಮಗನಳಂಭೂಷನರ್ಜುನನ ಮಗನಿಳಾವಂತನನಂತಕಲೋಕವನೆಯುಸುವುದುಂ
ಕೂಡಿ ತಾನೆ ವೀರಪಟ್ಟವನ್ನು ಕಟ್ಟಿದನು. ೬. ಆ ಯುದ್ಧಪ್ರಾರಂಭದಲ್ಲಿ ಪ್ರಸಿದ್ಧನಾದ ಅರ್ಜುನನ ಶತ್ರುಗಳ ರಕ್ತ ಸಮುದ್ರದ ಹಾಗೆ ಸಂಧ್ಯಾಕಾಲವು ಪ್ರಕಾಶಿಸುತ್ತಿರಲು ಸೂರ್ಯನು ತಳತಳನೆ ಉದಯಿಸಿದನು. ಎಲ್ಲರೂ ಯುದ್ಧರಂಗಕ್ಕೆ ಬಂದು ಸೇರಿದರು. ವ|| ಧರ್ಮರಾಜನು ಮೊದಲೇ ಬಂದು ಸೈನ್ಯವನ್ನೊಡ್ಡಿ ಶತ್ರುಸೇನಾಸಮುದ್ರವು ನಡುಗುವಂತೆಯೂ ಪ್ರಳಯಕಾಲದ ಮಾರುತವು ಬೀಸುವ ಹಾಗೆಯೂ ಯುದ್ಧಪ್ರಾರಂಭಸೂಚಕವಾಗಿ ಕೈಬೀಸಿದನು. ೭. ಒಂದು ಚತುರಂಗಸೈನ್ಯವು ಮತ್ತೊಂದು ಚತುರಂಗಸೈನ್ಯವನ್ನು ಸಮೀಪಿಸಿ ಬಂದು ತಿನೆ ತಗುಲಿ ಸಾವಕಾಶ ಮಾಡದೆ ಕಾದಿದವು. ಕತ್ತಿಯ ಚೂರುಗಳು ಜೀರ್ ಎಂದು ಶಬ್ದ ಮಾಡಿಕೊಂಡು ತಮ್ಮತಮ್ಮನ್ನೇ ತಗಲಿದುವು. ರಕ್ತಧಾರೆಗಳು ಮೇಲಕ್ಕೆದ್ದು ಹಾರಿ ಸಿಡಿದುವು. ವಿಮಾನಗಳು ತೇಲಾಡಿದುವು. ಅಂತರಿಕ್ಷಭಾಗದಲ್ಲಿ ದೇವತೆಗಳು ಹೆದರಿ ಒಟ್ಟಾಗಿ ಸೇರಿ ಅತ್ತಿತ್ತ ಜಾರಿದರು. ವ|| ಆಗ ಎರಡು ಸೈನ್ಯದ ನಾಯಕರೂ ಒಬ್ಬರಲ್ಲಿ ಒಬ್ಬರು ತಾಗಿ ಕೆಂಡವನು ಸುರಿಸುವ ಹಾಗೆ ಯುದಮಾಡಲು ಅಭಿಮನ್ಯುವು ಬಹಳ ಉಗ್ರವಾದ ತೇಜಸ್ಸನ್ನುಳ್ಳ ಭಗದತ್ತನನ್ನು ಒಂದೇ ಹಾರುವ ಬಾಣದಿಂದ ಕಯ್ಯಲ್ಲಿರುವ ಕೂಸನ್ನು ಬಡಿಯುವಂತೆ ನೆಲಕ್ಕೆ ಅಪ್ಪಳಿಸಿದನು. ಕೊಲೆಗೆ ಪ್ರತಿಯಾಗಿ ಕೊಲೆಮಾಡದೆ ಬಿಡುವುದಿಲ್ಲ ಎನ್ನುವ ಹಾಗೆ ಬಕಾಸುರನ ಮಗನಾದ ಅಳಂಭೂಷನೆಂಬುವನು ಅರ್ಜುನನ ಮಗನಾದ ಇಳಾವಂತನೆಂಬುವನನ್ನು ಯಮಲೋಕಕ್ಕೆ ಕಳುಹಿಸಿದನು.
Page #508
--------------------------------------------------------------------------
________________
ಏಕಾದಶಾಶ್ವಾಸಂ | ೫೦೩ ಘಟೋತ್ಕಚನಿಳಾವಂತನ ಸಾವಂ ಕಂಡು ಸೈರಿಸದಳಂಭೂಷನನೆಕ್ಕಟ್ಟುವುದುಮವನಳ್ಳಿ ಭಗದತ್ತನಾನೆಯ ಮಯಂ ಪುಗುವುದುಮಳಂಭೂಷನಂ ಪಿಂತಿಕ್ಕಿ ಭಗದತ್ತಂ ಘಟೋತ್ಕಚನಂ ಮಾರ್ಕೋಂಡು- :
ಉತ್ತೊಪ ದಹನದೊಡನೆ ಪೈ ಪತಂಗಳ್ ಕೋಟಿ ಗಣಿತದಿಂದುಜುವಿನಮಾ | ರ್ದುತ್ಕಚ ದಿತಿಜನನುಜದೆ ಘ
ಟೋತ್ಕಚನಂ ಬಿಟ್ಟು ಮೂರ್ಛವೋಪಿನಮೆಚ್ಚಂ || ವll ಅನ್ನೆಗಂ ವೃಕೋದರಂ ಚತುರ್ದಶ ಭುವನಂಗಳೆಲ್ಲಮಂ ತೆರಳ್ಳಿ ತೇರೈಸಿ ನುಂಗುವಂತೆ ಮಸಕದಿಂ ಭಗದತ್ತನಂ ಮಾರ್ಕೊಂಡುಚಂ|| ಇಸುವುದುಮೆಚ್ಚ ಶಾತ ಶರ ಸಂತತಿಯಂ ಭಗದತ್ತನೆಯ ಖಂ
ಡಿಸಿ ರಥಮಂ ಪಡಲ್ವಡಿಸೆ ಮಚ್ಚರದಿಂ ಗಜೆಗೊಂಡು ತಾಗೆ ಮಾ | ಣಿಸಲಮರಾಪಗಾಸುತನಿದಿಚುವುದುಂ ರಥಮಲ್ಪೆ ಪೊಯ್ದು ಶಂ . ಕಿಸದಿದಿರಾಂತ ಸೈಂಧವನುಮಂ ಪವನಾತ್ಮಜನೋಡೆ ಕಾದಿದಂ || ೯
ವ|| ಅಂತು ಕಾದೆ ಸಿಂಧುರಾಜನ ಬೆಂಬಲದೊಳ್ ಕಾದಲೆಂದು ಬಂದ ನೂರ್ವರ್ ಕೌರವರುಂ ಭೀಮನೋಳ್ ತಾಗೆ ತಾಗಿದ ಬೇಗದಿಂ ದುರ್ಧಷ್ರಣ ದುರ್ಮಷ್ರಣ ದೀರ್ಘಬಾಹು ಮಹಾಬಾಹು ಚಿತ್ತೋಪಚಿತ್ರ ನಂದೋಪನಂದರ್ ಮೊದಲಾಗೆ ಮೂವತ್ತು ಮೂವರಂ ಜವಂಗೆ ಬಿರ್ದನಿಕ್ಕುವ೦ತಿಕ್ಕಿ ಮಿನುಟಿದರುಮನುಚಿಯಲೀಯದೆ ಬಟಿಸಂದಾಗಳ್--
ಘಟೋತ್ಕಚನು ಇಳಾವಂತನ ಸಾವನ್ನು ಸೈರಿಸಲಾರದೆ ಅಳಂಭೂಷನನ್ನು ಎದುರಿಸಲು ಅವನು ಹೆದರಿ ಭಗದತ್ತನ ಆನೆಯನ್ನು ಮರೆಹೊಕ್ಕನು. ಭಗದತ್ತನು ಅಳಂಭೂಷನನ್ನು ಹಿಂದಕ್ಕೆ ತಳ್ಳಿ ಘಟೋತ್ಕಚನನ್ನು ಪ್ರತಿಭಟಿಸಿದನು. ೮. ಅತ್ಯತಿಶಯವಾದ ಕೋಪಾಗ್ನಿಯೊಡನೆ ಬಾಣಗಳು ಕೋಟಿಸಂಖ್ಯೆಯಿಂದ ಹೆಚ್ಚಾಗುತ್ತಿರಲು ಆರ್ಭಟಿಸಿ ಕೆದರಿದ ಕೂದಲನ್ನುಳ್ಳ ರಾಕ್ಷಸನಾದ ಘಟೋತ್ಕಚನನ್ನು ಮೂರ್ಛಹೋಗುವ ಹಾಗೆ ಭಗದತ್ತನು ಹೊಡೆದನು. ವ|| ಅಷ್ಟರಲ್ಲಿ ಭೀಮನು ಹದಿನಾಲ್ಕು ಲೋಕಗಳನ್ನೂ ಉಂಡೆ ಮಾಡಿ ಚಪ್ಪರಿಸಿ ನುಂಗುವಂತೆ ರೇಗಿ ಭಗದತ್ತನನ್ನು ಪ್ರತಿಭಟಿಸಿದನು. ೯. ಅವನ ಆ ಹರಿತವಾದ ಬಾಣಸಮೂಹವನ್ನು ಭಗದತ್ತನು ಪೂರ್ಣವಾಗಿ ಕತ್ತರಿಸಿ ರಥವನ್ನು ಉರುಳಿಸಲು ಭೀಮನು ಮತ್ಸರದಿಂದ ಗದೆಯನ್ನು ಧರಿಸಿ ತಾಗಿದನು. ಅದನ್ನು ತಪ್ಪಿಸಲು ಭೀಷ್ಮನು ಎದುರಿಸಿದನು. ಭೀಮನು ಅವನ ರಥವನ್ನು ನಾಶವಾಗುವಂತೆ ಹೊಡೆದು ಸಂದೇಹವೇ ಪಡದೆ, ತನ್ನನ್ನು ಎದುರಿಸಿದ ಸೈಂಧವನನ್ನು ಪಲಾಯನಗೊಳ್ಳುವಂತೆ ಕಾದಿದನು. ವlು ಸೈಂಧವನ ಸಹಾಯಕನಾಗಿ ಕಾದಲು ಬಂದ ನೂರುಮಂದಿ ಕೌರವರೂ ಭೀಮನನ್ನು ಮುತ್ತಿದರು. ತಕ್ಷಣವೇ ದುರ್ಧಷ್ರಣ, ದುರ್ಮಷ್ರಣ, ದೀರ್ಘಬಾಹು, ಮಹಾಬಾಹು, ಚಿತ್ತೂಪ ಚಿತ್ರ, ನಂದೋಪನಂದರೇ ಮೊದಲಾದ ಮೂವತ್ತುಮೂರು ಜನರನ್ನು ಭೀಮನು ಯಮನಿಗೆ ಆತಿಥ್ಯ ಮಾಡುವ ಹಾಗೆ ಹೊಡೆದು ಕೊಂದನು. ಇನ್ನುಳಿದವರನ್ನೂ ಉಳಿಯುವುದಕ್ಕೆ
Page #509
--------------------------------------------------------------------------
________________
೫೦೪) ಪಂಪಭಾರತಂ ಮll ಮೊದಲಿಟ್ಟಂ ಕೊಲಲೆಂದು ಕೌರವರನಿಕಿರ್ಪನಾರ್ದುರ್ಚಿ ಮು
ಕದಿವಂಗಾಂ ಕರಮೆಯ ಕೂರ್ಪನಿವರುಂ ಸತ್ತದ್ದರಿಂದಿಂಗೆ ಕಾ | ವುದನಾಂ ಕಾವನನುತ್ತ ಬೇತೆ ರಥಮಂ ಬಂದೇಳಿ ಪೋ ಪೋಗಲೆಂ ದೊದುತ್ತುಂ ಪರಿತಂದು ತಾಗಿ ತಗರ್ದ೦ ಗಂಗಾಸುತಂ ಭೀಮನಂ Iloo
ವll ಅನ್ನೆಗಮ ಸಂಸಪ್ತಕ ಬಲಮಲ್ಲಮನಳ ಪಳ ಕಿವುಟಿದುಟಿದು ಕೊಲ್ವಲ್ಲಿ ವಿಕ್ರಮಾರ್ಜುನಂ ಮುರಾಂತಕನೊಳಿಂತೆಂದಂಚಂil ಪ್ರಳಯ ಪಯೋಧಿ ನಾದಮನೆ ಪೋಲು ರಣಾನಕ ರಾವಮೀಗಳ
ಗಳಮೆಸೆದಪುದತ್ತ ಕಳವಂಬಿನ ಬಲ್ಬರಿಯಿಂದಮಾ ದಿಶಾ || ವಳಿ ಮಸುಳ್ಳಿಂತು ನೀಳಪುದು ಪೋಗದೆ ಕಾದುವ ಗಂಡರಿಲ್ಲ ನಿ
ಇಳಿಯನುಮಾ ವೃಕೋದರನುಮಲ್ಲದರಿಲ್ಲ ಪುರ್ ಮುರಾಂತಕಾ || ೧೧ ಚಂll .ಗುರು ಗುರುಪುತ್ರ ಶಲ್ಯ ಭಗದತ್ತ ನದೀಸುತರೆಂಬ ಸಂದ ಬೀ
ರರೆ ಮಜುವಕ್ಕಮಣನೊಡನಿರ್ವರೆ ಕೂಸುಗಳೆಂಬ ಶಂಕೆಯುಂ | ಪಿರಿದೆನಗೀಗಳಾದಪುದು ಮಾಣದೆ ಚೋದಿಸು ಬೇಗಮತ್ತಲ
ರಥವನೆಂದು ಭೋರ್ಗರೆಯ ಬಂದನರಾತಿಗೆ ಮತ್ತು ಬರ್ಪವೋಲ್೧೨
ವ|| ಅಂತು ನೆಲನದಿರೆ ಬರ್ಪ ವಿಕ್ರಮಾರ್ಜುನನ ಬರವಿಂಗೆ ಕುರುಬಲಮೆಲ್ಲ ಮೋಲ್ಕನುಲಿದೋಡಿ ಸುರಾಪಗಾನಂದನನ ಮತಯಂ ಪೊಕ್ಕಾಗಲ್
ಅವಕಾಶ ಕೊಡದೆ ಸಮೀಪಕ್ಕೆ ಬಂದಾಗ ೧೦. 'ಇವನು ಕೌರವರನ್ನು ಕೊಲ್ಲಬೇಕೆಂದು ಪ್ರಾರಂಭಿಸಿದ್ದಾನೆ. ಆರ್ಭಟಮಾಡಿ ಕತ್ತರಿಸಿ ನುಂಗದೇ ಬಿಡುವುದಿಲ್ಲ. ಇವನನ್ನು ನಾನು ವಿಶೇಷವಾಗಿ ಪ್ರೀತಿಸುತ್ತೇನೆ. ಇವರೂ ಸತ್ತುಹೋಗುತ್ತಾರೆ ಎಂಬುದು ನಿಜವೇ ಆದರೂ ಈ ದಿನ ನಾನು ಸಾಮರ್ಥ್ಯವಾದಷ್ಟು ರಕ್ಷಿಸುತ್ತೇನೆ ಎನ್ನುತ್ತ ಬೇರೊಂದು ರಥವನ್ನು ತರಿಸಿ ಅದನ್ನು ಏರಿಕೊಂಡು ಹೋಗಬೇಡ, ಹೋಗಬೇಡ' ಎಂಬುದಾಗಿ ಕೂಗಿಕೊಳ್ಳುತ್ತಾ ಓಡಿ ಬಂದು ಭೀಷ್ಮನು ಭೀಮನನ್ನು ತಡೆಗಟ್ಟಿದನು. ವll ಅಷ್ಟರಲ್ಲಿ ಆ ಕಡೆ ವಿಕ್ರಮಾರ್ಜುನನು ಸಂಸಪ್ತಕಬಲವನ್ನೆಲ್ಲ ಹೆದರಿ ಬೆವರುವಂತೆ ಅವುಕಿ ಹಿಂಡಿ ಕೊಲ್ಲುತ್ತ ಕೃಷ್ಣನೊಡನೆ ಹೀಗೆಂದನು- ೧೧. ಈಗ ರಣಭೇರಿಯ ಧ್ವನಿಯು ಪ್ರಳಯಸಮುದ್ರದ ಧ್ವನಿಯಂತೆ ಕೇಳಿಸುತ್ತಿದೆ. ಆ ಕಡೆ ಸುರಿಯುತ್ತಿರುವ ಬಾಣದ ಮಳೆಯಿಂದ ಆ ದಿಕ್ಕುಗಳ ಸಮೂಹವು ಮಾಸಲಾಗಿ ಕಾಂತಿಹೀನವಾಗಿ ಚಾಚಿಕೊಂಡಿದೆ. ಕೃಷ್ಣ ನಿನ್ನಳಿಯನಾದ ಅಭಿಮನ್ಯು ಮತ್ತು ಭೀಮನು ವಿನಾ ಕಾದುವ ಶೂರರು ಮತ್ತಾರೂ ಅಲ್ಲಿ ಇಲ್ಲ. ೧೨. ಶತ್ರುಪಕ್ಷದಲ್ಲಿ ದ್ರೋಣ, ಅಶ್ವತ್ಥಾಮ, ಶಲ್ಯ, ಭಗದತ್ತ, ಭೀಷ್ಮ ಮೊದಲಾದ ಪ್ರಸಿದ್ದ ವೀರರಿದ್ದಾರೆ. ನಮ್ಮ ಕಡೆ ಅಣ್ಣನಾದ ಭೀಮನೊಡನೆ ಮಕ್ಕಳಿಬ್ಬರು ಇದ್ದಾರಲ್ಲ (ಅಭಿಮನ್ಯು ಮತ್ತು ಘಟೋತ್ಕಚರು) ಎಂಬ ಶಂಕೆಯಾಗಿದೆ. ಆದುದರಿಂದ ಜಾಗ್ರತೆಯಾಗಿ ರಥವನ್ನು ತಡೆಯದೆ ಆ ಕಡೆ ನಡೆಯಿಸು ಎಂದು ಶಬ್ದಮಾಡುತ್ತ ಶತ್ರುವಿಗೆ ಮೃತ್ಯು ಬರುವ ಹಾಗೆ (ಆ ಕಡೆಗೆ) ಬಂದನು. ವ ಹಾಗೆ ನೆಲವು ನಡುಗುವ ಹಾಗೆ ಬರುತ್ತಿರುವ ಅರ್ಜುನನ ಬರುವಿಕೆಗೆ
Page #510
--------------------------------------------------------------------------
________________
ಏಕಾದಶಾಶ್ವಾಸಂ | ೫೦೫ ಮಃ ಎಡೆಗೊಂಡಂಕದ ಶಲ್ಯ ಸೈಂಧವ ಕೃಪ ದ್ರೋಣರ್ಕಳುಂ ಸಾಯಕಂ
ಗಿಡ ತನ್ನೆಚ್ಚ ಶರಾಳಿಗಳ ವಿಲಯ ಕಾಲೋಲ್ಬಂಗಳಂ ತಾಗಿದಾ | *ಗಡೆ ತತ್ತೂತ ರಥಾಶ್ವ ಕೇತನ ಶರವಾತಂಗಳುಂ ನುರ್ಗಿಕ
ಇಡೆ ಬೆನ್ನಟ್ಟಿದನಂತು ನಮ್ಮ ಹರಿಗಂ ಗಂಡಂ ಪೆಟರ್ ಗಂಡರೇ | ೧೩
ವ|| ಅಂತತಿರಥ ಸಮರಥ ಮಹಾರಥಾರ್ಧರಥರ್ಕಳನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆದೆಸೆಗೆ ಕೆದಕುವನ್ನಮೆಚ್ಚಿಟ್ಟಿದಾಗಳ್ ಸೋಲ್ಕ ತನ್ನ ಬಲಮನಳುಂಬಮಾದ ವಿಕ್ರಮಾರ್ಜುನನ ಭುಜಬಲಮುಮಂ ಕಂಡು ಕನಕತಾಳಧ್ವಜಂಗೆ ಪನ್ನಗಧ್ವಜನಿಂತೆಂದಂತರಳ 11 ಮುಳಿಯೆ ಬಿನ್ನಪಮಜ್ಜ ದಾಯಿಗರೊಳ್ ವಿರೋಧಮನಿಂತು ಬ
ಛಳನೆ ಮಾಲುದನಂದು ನಿಮ್ಮನೆ ನಂಬಿ ಮಾಡಿದೆನಿಂತು ಗೋ || ವಳಿಗನಂ ಗೆಡೆಗೊಂಡು ಮುಂ ಬಳೆದೊಟ ಪೇಡಿಯ ನಿಮನಿಂ .
ತಿಳಿಸಿ ಮದ್ದಲಮೆಲ್ಲಮಂ ಕೊಲೆ ನೋಡುತಿರ್ಪುದು ಪಾಟಿಯೇ || ೧೪ ಕoll ಮೇಳದೊಳೆಂತುಂ ಪೋ ಪೆಜಿ
ರಾಳಂ ಛಿದ್ರಿಸುವೆವೆಂಬ ಪಾಡವರೊಳ್ ನೀಂ | ಮೇಳಿಸಿ ನಣನೆ ಬಗೆದಿರ್
ಜೋಳದ ಪಾಟಿಯುಮನಿನಿಸು ಬಗೆಯಿಂ ನಿಮ್ಮೊಳ್ || ವ|| ಎಂಬುದುಂ ಸಿಂಧುತನೂಜನಿಂತೆಂದಂ
೧೫
ಕೌರವಸೈನ್ಯವೆಲ್ಲ ಒಟ್ಟಿಗೆ ಕೂಗಿಕೊಂಡು ಓಡಿ ಭೀಷ್ಮನ ಮರೆಹೊಕ್ಕವು. ೧೩. ನಡುವೆ ಬಂದ ಶಲ್ಯ ಸೈಂಧವ ಕೃಪ ದ್ರೋಣಾದಿಗಳ ಬಾಣಗಳು ನಿಷ್ಟಯೋಜಕವಾದುವು. ಭೀಷ್ಮರು ಪ್ರಯೋಗಿಸಿದ ಬಾಣಸಮೂಹಗಳು ಪ್ರಳಯಕಾಲದ ಉಲ್ಕಾಪಾತಗಳು ಸರಿ, ಆದರೂ ಅರ್ಜುನನು ಅವರ ಆ ಸಾರಥಿ, ತೇರು, ಕುದುರೆ, ಬಾವುಟ, ಬಾಣಸಮೂಹ - ಎಲ್ಲವೂ ಪುಡಿಯಾಗುವ ಹಾಗೆ ಹಿಂಬಾಲಿಸಿದನು. ಶೂರನೆಂದರೆ ಅರಿಕೇಸರಿ, ಅವನಂತೆ ಮತ್ತಾರಿದ್ದಾರೆ. ವ|| ಹಾಗೆ ಅತಿರಥ ಸಮರಥ ಮಹಾರಥ ಅರ್ಧರಥರುಗಳನ್ನು ಆನೆ ತುಳಿದು ಕದಡಿದ ಕುಂಟೆಯ ನೀರಿನ ಹಾಗೆ ದಿಕ್ಕುದಿಕ್ಕಿಗೂ ಚದುರುವ ಹಾಗೆ ಎಬ್ಬಿಸಿ ಓಡಿಸಿದಾಗ ದುರ್ಯೋಧನನು ಭೀಷ್ಮನನ್ನು ಕುರಿತು ಹೀಗೆಂದನು. ೧೪. ಅಜ್ಜ ವಿಜ್ಞಾಪನೆ; ಕೋಪಮಾಡಬೇಡಿ, ದಾಯಾದಿಗಳಲ್ಲಿ ಈ ರೀತಿಯ ವಿರೋಧವನ್ನು ಮಾಡುವಾಗ ನಿಮ್ಮ ವಿಶೇಷವಾದ ಸಹಾಯವನ್ನೇ ನಂಬಿ ಮಾಡಿದೆನು. ಹೀಗಿರುವಲ್ಲಿ ಈಗ ಹೀಗೆ ದನಕಾಯುವವನೊಬ್ಬನ ಸ್ನೇಹಮಾಡಿಕೊಂಡು ಬಳೆದೊಟ್ಟ ಹೇಡಿಯೊಬ್ಬನು ನಿಮ್ಮನ್ನು ಹೀಗೆ ಅವಮಾನಮಾಡಿ ನನ್ನ ಸೈನ್ಯವೆಲ್ಲವನ್ನೂ ಕೊಲ್ಲುತ್ತಿರಲು ಅದನ್ನು ನೀವು ಉದಾಸೀನವಾಗಿ ನೋಡುತ್ತಿರುವುದು ಸೂಕ್ತವೇ? ೧೫. 'ಸ್ನೇಹದಿಂದ ಪರಪಕ್ಷದ ಶೂರರನ್ನು ಭೇದಿಸಬಲ್ಲೆವು ಬಿಡು' ಎಂಬುದಾಗಿರುವ ಪಾಂಡವರಲ್ಲಿ ನೀವು ಸೇರಿಕೊಂಡು ಬಾಂಧವ್ಯವನ್ನೇ ಬಗೆದಿರಿ; ನಿಮ್ಮ ಮನಸ್ಸಿನಲ್ಲಿ ಉಪ್ಪಿನ ಋಣವನ್ನು ಸ್ವಲ್ಪ ಯೋಚಿಸಿ. ವll ಎನ್ನಲು ಭೀಷ್ಮನು ಹೀಗೆ ಹೇಳಿದನು.
Page #511
--------------------------------------------------------------------------
________________
೫೦೬ | ಪಂಪಭಾರತಂ ಮll ತ್ರಿಜಗಕ್ಕ ಗುರು ದೇವನಾದಿಪುರುಷಂ ಕೇಳೊರ್ವನೊರ್ವಂ ರಿಪು
ಧ್ವಜಿನೀ ಧ್ವಂಸಕನಾಗಿ ಸಂದ ಕಲಿಯುಂ ಬಿಲ್ಲಾಳುಮಿನ್ನೆಂದೊಡೆಂ | - ತು ಜಗತ್ಕಾತರನೇಳಿಪೈ ಮಜವನೇ ಮುಂ ಪೂಣ್ಮುದಂ ಬಿಲ್ ರಥಂ ಧ್ವಜಮಂಬೆಂಬಿವನೆಯೇ ಸಂಧಿಸು ಜಸಂ ನಿಲ್ವನ್ನೆಗಂ ಕಾದುವೆಂil ೧೬
ವ|| ಎಂಬುದುಮನೇಕ ಶರಭರಿತ ಶಕಟಸಹಸ್ರಮನೊಂದುಮಾಡಿ ಗಾಂಗೇಯನ ಪಗೆ ನಿಲಿಸಿದಾಗಳಮರಾಪಗಾನಂದನನುಮಮರೇಂದ್ರನಂದನನುಮೊರ್ವರೊರ್ವರು ಗಳಸನೆಗೆಯ್ದು ಕಾದುವಾಗಳಂಬರತಳದೊಳೆಲ್ಲಂ ಬಿಳಿಯ ಮುಗಿಲ್ಗಳ ಚಾಪಳಿಗೆಗಳೊಳ್ ಬಂದಿರ್ದ ದೇವ ವಿಮಾನಂಗಳುಮೊಡನೊಡನೆ ಕಲಂಕೆ ಕುಲಗಿರಿಗಳುಂ ದಿಕ್ಕರಿಗಳುಮೊಡನೊಡನೆ ತಾಗಿದಂತೆ ತಾಗಿದಾಗಮ|| ಉಪಮಾತೀತದ ಬಿಲ್ಲ ಬಿ ಸಮಸಂದೊಂದೊರ್ವರೊಳ್ ಪರ್ವೆ ಪ
ರ್ವಿ ಪರವೂಹ ಭಯಂಕರಂ ನೆಗೆದು ಪಾರ್ದಾರ್ದೆಚೊಡಂಬಂಬನ | ಟ್ಟಿ ಪಳಂಚುತ್ತೆ ಸಿಡಿಲ್ಲ ತೋರಗಿಡಿಯಿಂದೊಂದೊಂದುತೋಳ್ ಬೇವುದುಂ | ತ್ರಿಪುರಂಚೊತ್ತಿಸಿದಂತೆ ಪೊತ್ತಿ ಪೊಗದತ್ತ ವಿಯuಂಡಳಂ || ೧೭ ವ|| ಅಂತು ಬ್ರಹ್ಮಾಂಡಮುರಿಯ ಕಾದ
೧೬. “ದುರ್ಯೊಧನ, ಕೇಳು, ಅವರಲ್ಲಿ ಒಬ್ಬನಾದ ಕೃಷ್ಣನು ಮೂರುಲೋಕಕ್ಕೂ ಗುರು, ಒಡೆಯ, ಆದಿಪುರುಷ, ಮತ್ತೊಬ್ಬನಾದ ಅರ್ಜುನನು ಶತ್ರುಪಕ್ಷವನ್ನು ನಾಶಮಾಡುವುದರಲ್ಲಿ ಪ್ರಸಿದ್ಧನಾದ ಶೂರ. ಹೀಗಿರುವಾಗ, ಲೋಕಪ್ರಸಿದ್ದರಾದವರನ್ನು ಹೇಗೆ ತಿರಸ್ಕರಿಸುತ್ತೀಯೆ? ನಾನು ಮೊದಲು ಮಾಡಿದ ಪ್ರತಿಜ್ಞೆಯನ್ನು ಮರೆಯುತ್ತೇನೆಯೆ? ಬಿಲ್ಲು ಬಾವುಟ, ಬಾಣ, ತೇರುಗಳನ್ನು ಸಿದ್ಧಮಾಡು. ಯಶಸ್ಸು ಶಾಶ್ವತವಾಗಿ ನಿಲ್ಲುವ ಹಾಗೆ ಕಾದುತ್ತೇನೆ ವ ಎನ್ನಲು ದುರ್ಯೋಧನನು ಅನೇಕ ಬಾಣಗಳಿಂದ ತುಂಬಿದ ಸಾವಿರಾರು ಬಂಡಿಗಳನ್ನು ಒಟ್ಟುಗೂಡಿಸಿ ಭೀಷ್ಮನ ಹಿಂದೆ ನಿಲ್ಲಿಸಿದನು. ಭೀಷ್ಮನೂ ಅರ್ಜುನನೂ ಒಬ್ಬರನ್ನೊಬ್ಬರು ಬಾಣದ ಗರಿಯಿಂದ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದರು. ಆಕಾಶಪ್ರದೇಶದಲ್ಲೆಲ್ಲ ಚೌಕಾಕಾರದ ಮಂಟಪ (ತೇರುಗಳಲ್ಲಿ ಬಂದಿದ್ದ ದೇವವಿಮಾನಗಳು ಜೊತೆ ಜೊತೆಯಲ್ಲಿಯೇ ಕ್ರಮತಪ್ಪಿ ಕಲಕಿಹೋದುವು. ಕುಲಪರ್ವತಗಳೂ ದಿಗ್ಗಜಗಳೂ ಒಟ್ಟಿಗೆ ತಾಗುವ ಹಾಗೆ ತಾಗಿದುವು. ೧೭. ಒಬ್ಬೊಬ್ಬರಲ್ಲಿಯೂ ಹೋಲಿಕೆಯಿಲ್ಲದ ಅಸ್ತ್ರವಿದ್ಯಾ ನೈಪುಣ್ಯವು ಕೂಡಿಕೊಂಡು ವ್ಯಾಪಿಸುತ್ತಿತ್ತು. ಶತ್ರುಸೈನ್ಯಭಯಂಕರನಾದ ಅರ್ಜುನನು ಎದುರುನೋಡುತ್ತ ಆರ್ಭಟಿಸಿ ಹೊಡೆಯಲು ಅವನ ಒಂದು ಬಾಣವು ಮತ್ತೊಂದನ್ನು ಹಿಂಬಾಲಿಸುತ್ತ ತಟ್ಟನೆ ತಗುಲಿ ಸಿಡಿದು ಅದರ ದಪ್ಪನಾದ ಕಿಡಿಗಳು ಒಂದೊಂದರಲ್ಲಿಯೂ ಬೇಯುತ್ತಿರಲು ತ್ರಿಪುರಾಸುರರ ಪಟ್ಟಣಗಳು ಹತ್ತಿ ಉರಿದಂತೆ ಆಕಾಶಮಂಡಲವು ಎಲ್ಲೆಡೆಯಲ್ಲಿಯೂ ಹತ್ತಿ ಹೊಗೆಯಾಡು ತ್ತಿತ್ತು. ವ|| ಹಾಗೆ ಬ್ರಹ್ಮಾಂಡವೇ ಉರಿಯುವ ಹಾಗೆ ಕಾಡುತ್ತಿರಲು
Page #512
--------------------------------------------------------------------------
________________
ಏಕಾದಶಾಶ್ವಾಸಂ | ೫೦೭ 'ಚಂtು ನಡಪಿದನಜ್ಜನೆಂದು ವಿಜಯಂ ಕಡುಕೆಯಿಸನೆನ್ನ ಮಂಮನಾಂ
ನಡಪಿದನೆಂದು ಸಿಂಧುತನಯಂ ಕಡುಕೆಯ್ದಿಸನಿಂತು ಪಾಡುಗಾ | ದೊಡನೊಡನಿರ್ವರುಂ ಮೆಳಯಲೆಂದೆ ಶರಾಸನ ವಿದ್ಯೆಯ ಪಡ ಊಡಿಸಿದರೆಮಿದಿರೊಳ್ ಮಲೆದೊಡ್ಡಿದ ಚಾತುರಂಗಮಂ || ೧೮
ವ|| ಅಂತು ತಿಳಿದು ಪೊತ್ತು ಕೆಯಾದು ಕಾದೆ ಸರಿತ್ತುತನ ಸುರಿವ ಸರಲ ಮಳಯೊಳಚಿದ ನಿಜ ವರೂಥಿನಿಯ ಸಾವು ನೋವುಮೇವಮಂ ಮಾಡೆಚಂ|| ಮುನಿದೆರಡಂಬಿನೊಳ್ ರಥಮುಮಂ ಪದವಿಲುಮನೆಯ ಪಾರ್ದು ನ
ಕನೆ ಕಡಿದಿಂದ್ರನಂದನನಳುರ್ಕೆಯಿನಾರ್ದೊಡೆ ದಿವ್ಯ ಸಿಂಧುನಂ | ದನನಿರದೇಬೇತೆ ರಥಮಂ ಪೆಜತೋಂದು ಶರಾಸನಕ್ಕೆ ಮೆ. ಲನೆ ನಿಡುದೋಳನುಯ್ದು ಕರಮಚ್ಚರಿಯಾಗೆ ಕಡಂಗಿ ಕಾದಿದಂ 11 ೧೯
ವ| ಅಂತು ತೋಡುಂ ಬೀಡುಂ ಕಾಣಲಾಗದೆರ್ದೆಗಾಯಲೆಕ್ಕೆಯೆನೆಂಬತ್ತು ನಾಲ್ಕು ಲಕ್ಕ ಬಂಡಿಯೊಳಂಡ ತಂಡದೆ ತೀವಿದಕಾಂಡ ಪ್ರಳಯಾನಳ ವಿಸ್ತುಲಿಂಗೋಪಮಾನಂಗಳಪ್ಪ ನಿಶಿತ ಕಾಂಡಂಗಳಿಂದೊಡ್ಡಿದ ಚತುರ್ಬಲಂಗಳ ಮೆಯ್ಯೋಳ್ ರೋಮ ರೋಮಂದಪ್ಪದೆ ನಡುವನ್ನಮೆಚ್ಚು ಪಯಿಂಛಾಸಿರ್ವರ್ ಮಕುಟಬದ್ಧರುಮನೊಂದು ಲಕ್ಕ ಮದದಾನೆಯುಮಂ
೧೮. ಅಜ್ಜನು ನನ್ನನ್ನು ಸಾಕಿದನು ಎಂದು ಅರ್ಜುನನೂ ವಿಶೇಷ ಉತ್ಸಾಹದಿಂದ ಬಾಣಪ್ರಯೋಗಮಾಡುವುದಿಲ್ಲ. ನಾನು ಸಾಕಿದ ನನ್ನ ಮೊಮ್ಮಗ ಎಂದು ಭೀಷ್ಮನೂ ಕ್ರೂರವಾಗಿ ಬಾಣಪ್ರಯೋಗ ಮಾಡುವುದಿಲ್ಲ. ಹೀಗೆ ಇಬ್ಬರೂ ಸಾಂಪ್ರದಾಯಕವಾಗಿ ಶಸ್ತಕೌಶಲವನ್ನು ಮೆರೆಯುವುದಕ್ಕಾಗಿ ಮಾತ್ರ ಬಾಣಪ್ರಯೋಗಮಾಡಿ ಉತ್ಸಾಹದಿಂದ ಕೂಡಿದ ಚತುರಂಗಸೈನ್ಯವನ್ನು ಎಲ್ಲೆಡೆಯಲ್ಲಿಯೂ ಉರುಳಿಸಿದರು. ವ ಹಾಗೆ ಭೀಷ್ಮನು ಸ್ವಲ್ಪಕಾಲ (ಶತ್ರುಸೈನ್ಯಕ್ಕೆ ರಕ್ಷಣೆಕೊಟ್ಟು ಕಾದಿದರೂ ಭೀಷ್ಮನ ಧಾರಾಕಾರವಾಗಿ ಸುರಿಯುತ್ತಿರುವ ಬಾಣದ ಮಳೆಯಲ್ಲಿಯೇ ನಾಶವಾದ ತನ್ನ ಸೈನ್ಯದ ಸಾವೂ ನೋವೂ ಅರ್ಜುನನಿಗೆ ವಿಶೇಷ ಕೋಪವನ್ನುಂಟುಮಾಡಿತು. ೧೯. ಅವನು ಕೋಪಿಸಿಕೊಂಡು ಭೀಷ್ಕರ ರಥವನ್ನು ಹದವಾದ ಬಿಲ್ಲನ್ನು ಚೆನ್ನಾಗಿ ನೋಡಿ ನೆಕ್ಕನೆ ಕತ್ತರಿಸಿ ಅತಿಶಯವಾಗಿ ಆರ್ಭಟಮಾಡಿದನು. ಭೀಷ್ಮನು ಸಾವಕಾಶಮಾಡದೆ ಬೇರೆ ರಥವನ್ನು ಹತ್ತಿಕೊಂಡು ತನ್ನ ದೀರ್ಘವಾದ ತೋಳನ್ನು ಬತ್ತಳಿಕೆಗೆ ನೀಡಿ ವಿಶೇಷ ಆಶ್ಚರ್ಯಕರವಾಗುವ ಹಾಗೆ ಉತ್ಸಾಹದಿಂದ ಕಾದಿದನು. ವ|| ಹಾಗೆ ಬಾಣವನ್ನು ತೊಡುವುದೂ ಬಿಡುವುದೂ ಕಾಣಲಾಗದ ರೀತಿಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಂದೇಸಲ ಎಂಬತ್ತು ನಾಲ್ಕು ಲಕ್ಷ ಬಂಡಿಯಲ್ಲಿ ರಾಶಿರಾಶಿಯಾಗಿ ತುಂಬಿದ್ದ ಅಕಾಲದ ಪ್ರಳಯಾಗ್ನಿಯ ಕಿಡಿಗಳಿಗೆ ಸಮಾನವಾದ ಹರಿತವಾದ ಬಾಣಗಳಿಂದ ಚತುರಂಗಸೈನ್ಯದ * ಶರೀರದಲ್ಲಿ ಒಂದು ಕೂದಲೂ ತಪ್ಪದೆ ನಾಟುವ ಹಾಗೆ ಹೊಡೆದು ಹತ್ತು ಸಾವಿರ `ರಾಜರನ್ನೂ ಒಂದು ಲಕ್ಷ ಮದ್ದಾನೆಯನ್ನೂ ಮೂರುಲಕ್ಷ ರಥವನ್ನೂ ಒಂದುಕೋಟಿ ತುರುಷ ಕುದುರೆಗಳನ್ನೂ ಹದಿನೆಂಟು ಕೋಟಿ ಕಾಲಾಳುಬಲವನ್ನೂ ಶ್ರಮವಿಲ್ಲದೆ
33
Page #513
--------------------------------------------------------------------------
________________
೫೦೮ | ಪಂಪಭಾರತಂ
ಮೂಲಕ್ಕೆ ರಥಮುಮನೊಂದು ಕೋಟಿ ತುರುಷ್ಕ ತುರಂಗಂಗಳುಮಂ ಪದಿನೆಂಟು ಕೋಟಿ ಪದಾತಿಯುಮನಲಸದೆ ಪೇಸೇಜ್ ಕೊಂದು ಪರಶುರಾಮನಲ್ಲಿ ಪಡೆದ ದಿವ್ಯಾಸ್ತ್ರಂಗಳನೊಂದನೊಂದು ಸೂಳೆ ತೊಟ್ಟು
ಕಂ।।
ನುಡಿವಳಿಗೆ ನರನ ರಥಮಂ
ಪಡುವಣ್ಣಾವುದುವರಂ ಸಿಡಿಲ್ವಿನಮೆಚ್ಚ | ಚುಡಿಯೆ ಭುಜಬಲದೆ ಹರಿಯುರ
ದೆಡೆಯಂ ಬಿರಿಯೆಚ್ಚು ಮೆದನಳವಂ ಭೀಷಂ ||
ವ|| ಆಗಳ
ಕಂ।।
ದೇವಾಸುರದೊಳಮಿಂದಿನ
ನೋವಂ ನೊಂದಯೆನುಟೆದ ಕೆಯ್ದುವಿನೊಳಿವು |
ಸಾವನೆ ಸೆರಗಂ ಬಗೆದೊಡೆ
ಸಾವಾದಪುದೆಂದು ಚಕ್ರಿ ಚಕ್ರದೊಳಿಟ್ಟಂ ||
ಇಷ್ಟೊಡೆ ತನಗಸುರಾರಿಯ
ಕೊಟ್ಟ ಮಹಾ ವೈಷ್ಣವಾಸ್ತಮಂ ಗಾಂಗೇಯಂ | ತೊಟ್ಟಿಸುವುದುಮೆರಡುಂ ಕಿಡಿ
ಗುಟ್ಟಿ ಸಿಡಿಲ್ ಸಿಡಿಯ ಪೋರ್ದುವಂಬರತಳದೊಳ್ ||
ಪೋರ್ವುದುಮಿಂ ಪೆಜತಂಬಿಂ
ತೀರ್ವುದೆ ಪಗೆಯೆಂದು ಪಾಶುಪತಮಂ ಪಿಡಿಯಲ್ | ಪಾರ್ವುದುಮರ್ಜುನನಾಗ
• ಬೇರ್ವೆರಸು ಕಿಲೆ ಬಗೆಯ ಸುರರೆಡೆವೊಕ್ಕರ್ ||
UG
ود
೨೩
ಜುಗುಪ್ಪೆಯಾಗುವ ಹಾಗೆ ಕೊಂದನು. ಪರಶುರಾಮನಿಂದ ಪಡೆದಿದ್ದ ದಿವ್ಯಾಸ್ತ್ರಗಳೊಂದೊಂದನ್ನೂ ಒಂದೊಂದು ಸರದಿಯಿಂದ ತೊಟ್ಟು ೨೦. ಆಡಿದ ಮಾತನ್ನು ಪೂರ್ಣಗೊಳಿಸುವುದಕ್ಕೆ (ಮಾತ್ರ) ಅರ್ಜುನನ ತೇರನ್ನು ಪಶ್ಚಿಮದ ಕಡೆ ಎಂಟುಗಾವುದದವರೆಗೆ ಸಿಡಿದು ಹೋಗುವಂತೆ ಹೊಡೆದನು. ರಥದ ಅಚ್ಚು ಮುರಿಯಿತು. ಬಾಹುಬಲದಿಂದ ಕೃಷ್ಣನ ಹೃದಯಪ್ರದೇಶವನ್ನು ಬಿರಿಯುವಂತೆ ಹೊಡೆದು ಭೀಷ್ಮನು ತನ್ನ ಶಕ್ತಿಯನ್ನು ಪ್ರದರ್ಶಿಸಿದನು. ವ|| ಆಗ ೨೧. ದೇವಾಸುರರ ಯುದ್ಧದಲ್ಲಿಯೂ ಈ ದಿನದ ನೋವನ್ನು ಅನುಭವಿಸಿರಲಿಲ್ಲ; ಉಳಿದ ಆಯುಧಗಳಿಂದ ಇವನು ಸಾಯುತ್ತಾನೆಯೇ? ಸಹಾಯವನ್ನು ಅಪೇಕ್ಷಿಸಿದರೆ ಮರಣವುಂಟಾಗುತ್ತದೆ ಎಂದು ಶ್ರೀಕೃಷ್ಣನು ಚಕ್ರಾಯುಧದಿಂದಲೇ ಹೊಡೆದನು. ೨೨. ಭೀಷ್ಮನು ವಿಷ್ಣುವು ಕೊಟ್ಟ ಮಹಾವೈಷ್ಣವಾಸವನ್ನು ಪ್ರಯೋಗಿಸಿದನು. ಎರಡು ಅಸ್ತ್ರಗಳೂ ಕಿಡಿಗಳನ್ನು ಚೆಲ್ಲಿ ಸಿಡಿಲು ಸಿಡಿಯುವಂತೆ ಆಕಾಶಪ್ರದೇಶದಲ್ಲಿ ಹೋರಾಡಿದುವು. ೨೩. ಶತ್ರುವು ಇನ್ನು ಬೇರೆಯ ಬಾಣದಿಂದ ನಾಶವಾಗುವುದಿಲ್ಲವೆಂದು ಯೋಚಿಸಿ ಮೂಲೋತ್ಪಾಟನಮಾಡುವುದಕ್ಕೆ ಅರ್ಜುನನು ಪಾಶುಪತಾಸ್ತ್ರವನ್ನೇ ಹಿಡಿಯಲು
Page #514
--------------------------------------------------------------------------
________________
ವ|| ಆ ಪ್ರಸ್ತಾವದೊಳ್
ಕಂ।।
ಎನ್ನುಮನಸುರಾರಿಯ ಪಿಡಿ
ವುನ್ನತ ಕರಚಕ್ರಮಂದು ಭೀಷಂ ತಡೆಗುಂ 1 ಮುನ್ನಮಡಂಗುವೆನೆಂಬವೂ ಲನ್ನೆಗಮಸ್ತಾಚಳಸ್ಥನಾದಂ ದಿನಪಂ ||
ಕಂ।। ಬರಿಸಿ ಮನೆಗಸುರವೈರಿಯ
ವ|| ಆಗಳೆರಡುಂ ಪಡೆಗಳನಹಾರತೂರ್ಯಂಗಳಂ ಬಾಜಿಸಿ ಮುನ್ನೊತ್ತಿದ ವೇಳೆಗಳ ಸಮುದ್ರಂಗಳಂ ಪುಗುವಂತೆ ತಂತಮ್ಮ ಬೀಡುಗಳಂ ಪೊಕ್ಕರಾಗಳ್
ನರಸಂ ಭೀಷ್ಮಂಗೆ ಚಕ್ರಮಿಂತೇಕೆ ಮೊಗಂ | ದಿರಿದುದೊ ನಿಮ್ಮಂ ಪಿಡಿದನ ಗರಿದೆನಲರಿದುಂಟೆ ಧುರದೊಳೇನಸುರಾರೀ ||
ಏಕಾದಶಾಶ್ವಾಸಂ | ೫೦೯
ಬೆಸಸೆನೆ ನುಡಿದಂ ಮುರನೆಂ ಬಸುರನನೆನಗಾಗಿ ಕಾದಿ ಭೀಷಂ ಪಿಡಿದೊ | ಪ್ಪಿಸಿದೊಡೆ ವೈಷ್ಣವ ಬಾಣಮ ನೊಸೆದಿತ್ತೆನದಂ ಗೆಲ ಕೆಯ್ದುಗಳೊಳವೇ ||
೨೪
ಭೇದದೊಳಲ್ಲದೆ ಗೆಲಲರಿ
ದಾದಂ ಸುರಸಿಂಧುಸುತನನಿಂದಿರುಳೊಳ್ ನೀಂ | ಭೇದಿಸೆ ನೃಪತಿಯೊರ್ವನೆ
ಆದರದಿಂ ಬಂದು ಸಿಂಧುಸುತನಂ ಕಂಡಂ ||
೨೫
೨೬
೨೭
ನೋಡುತ್ತಿರಲು (ಅವನನ್ನು ತಡೆಯುವುದಕ್ಕಾಗಿ) ದೇವತೆಗಳು ಮಧ್ಯೆ ಪ್ರವೇಶ ಮಾಡಿದರು. ೨೪. ನನ್ನನ್ನು ಕೃಷ್ಣನು ಹಿಡಿಯುವ ಶ್ರೇಷ್ಠವಾದ ಚಕ್ರವೆಂದೇ ಭೀಷ್ಮನು ತರಿದುಹಾಕುತ್ತಾನೆ. ಮೊದಲೇ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಅಸ್ತಾಚಲದಲ್ಲಿ ಸೇರುವವನಾದನು. (ಸೂರ್ಯನು ಅಸ್ತವಾದನು). ವ|| ಆಗ ಎರಡು ಸೈನ್ಯಗಳೂ ಯುದ್ಧ ನಿಂತಿತೆಂದು ತಿಳಿಸುವ ವಾದ್ಯಗಳನ್ನು ಬಾಜಿಸಿದುವು. ಮೊದಲು ಎದ್ದಿದ್ದ ಅಲೆಗಳು ಸಮುದ್ರವನ್ನು ಪ್ರವೇಶಿಸುವಂತೆ ಸೈನ್ಯಗಳು ತಮ್ಮತಮ್ಮ ಶಿಬಿರಗಳನ್ನು ಪ್ರವೇಶಿಸಿದವು. ಆಗ ೨೫. ಧರ್ಮರಾಜನು ಕೃಷ್ಣನನ್ನು ಮನೆಗೆ ಬರಮಾಡಿಕೊಂಡು ನಿಮ್ಮ ಚಕ್ರವು ಭೀಷ್ಮನಿಗೇಕೆ ವಿಮುಖವಾಯಿತೋ? ಕೃಷ್ಣ! ನಿಮ್ಮನ್ನಾಶ್ರಯಿಸಿದ ನನಗೆ ಯುದ್ಧದಲ್ಲಿ ಅಸಾಧ್ಯವೆಂಬುದಿಲ್ಲ ಎಂದನು. ೨೬. ಕೃಷ್ಣ ಹೇಳಿದನು : ಮುರನೆಂಬ ಅಸುರನೊಂದಿಗೆ ಕಾದಿ ಸೋಲಿಸಿ ನನಗೊಪ್ಪಿಸಿದುದರಿಂದ ಮಚ್ಚಿ ಭೀಷ್ಮನಿಗೆ ನಾನು ವೈಷ್ಣವಾಸ್ತ್ರ ಕೊಟ್ಟಿದ್ದೆ. ಅದನ್ನು ಯಾರೂ ಗೆಲ್ಲಲಾರರು ಎಂದನು. ೨೭. ಭೀಷ್ಮನನ್ನು ಭೇದೋಪಾಯದಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಈ ರಾತ್ರಿ ನೀನು ಅವನನ್ನು ಭೇದಿಸು ಎನ್ನಲು ರಾಜನೊಬ್ಬನೇ ಆದರದಿಂದ ಬಂದು ಭೀಷ್ಮನನ್ನು ಕಂಡನು.
Page #515
--------------------------------------------------------------------------
________________
೫೧೦ | ಪಂಪಭಾರತಂ
ಕಣ್ಣು ಪೊಡೆವಟ್ಟು ನಯಮರ್ದ
ಗೊಣ್ಣಿರೆ ಪತಿ ನುಡಿದನೆನಗೆ ದೇವ ಕಲುಷಂ 1 ಗೊಣ್ಣಾಗಳ್ ಕಾವರ್ ಕಣೆ ಗೊಣ್ಣವೊಲೆಂದೆಂಬ ಮಾತಿನಂತಾಗಿರದೇ ||
ತೊಂಬಯ್ಯಾಸಿರ್ವರ್ ನಿ
ಮಂಬಿನ ಬಂಬಲೊಳೆ ಮಕುಟಬದ್ಧ ಮಡಿದರ್ |
ನಂಬಿಂ ನಂಬಲಿಮಿಂದಿಂ
ಗೊಂಬತ್ತು ದಿನಂ ದಲೆಮ್ಮ ಬೆನ್ನಲೆ ನಿಂದಿರ್ ||
ಚಕ್ರಿಯ ಚಕ್ರದೊಳಂ ತೊಡ
ರ್ದಾಕ್ರಮಿಸಿದುದೆಚ್ಚ ನಿಜ ಪತತಿ ದಲೆನೆ ನಿ | ಯೀ ಕ್ರಮಕಮಲಕ್ಕೆಳಗದೆ
ವಕ್ರಿಸಿ ಭೂಚಕ್ರದೊಳಗೆ ಬಾಲ್ವರುಮೊಳರೇ ||
ಸಾವೆ ನಿಮತಿಚ್ಚೆಯೆನೆ ಪೊಣ
ರ್ದಾವಂ ತಳಿಯೆದು ಗೆಲ್ವನೆಮಗದಂದಂ | ಸಾವು ದಿಟಂ ನಿಮಡಿ ಕೊಲೆ ಸಾವುದು ಲೇಸ ಸುಗತಿವಡೆಯಕ್ಕುಂ
೨೮
೨೯
20
೩೧
ವ|| ಎಂದೊಡದೆಲ್ಲಮನೆಯೇ ಕೇಳು ಕರುಣಾರಸ ಹೃದಯನಾಗಿ ಮಮ್ಮನ ಮೊಗಮಂ ಕೂರ್ಮೆಯಿಂ ನೋಡಿ ಕಣ್ಣ ನೀರಂ ನೆಗಪಿ
೨೮. ನಮಸ್ಕಾರಮಾಡಿ ಪೂರ್ವಕವಾಗಿ ಧರ್ಮರಾಜನು ಹೇಳಿದನು. ನನಗೆ ಸ್ವಾಮಿಯಾದ ತಾವು ಕೋಪಮಾಡಿದರೆ 'ರಕ್ಷಿಸಬೇಕಾದವರೇ ಬಾಣವನ್ನು ಹೂಡಿದ ಹಾಗೆ' ಎಂಬ ಗಾದೆಯ ಮಾತಿನಂತಾಗುವುದಿಲ್ಲವೆ? ೨೯. ತೊಂಬತ್ತುಸಾವಿರ ಕಿರೀಟಧಾರಿಗಳಾದ ರಾಜರು ನಿಮ್ಮ ಬಾಣದ ಸಮೂಹದಿಂದ ಸತ್ತರು. ನಂಬಿ, ನಂಬದಿರಿ ಈ ಒಂಬತ್ತು ದಿನವೂ ನೀವು ನಮಗೆ ವಿರೋಧವಾಗಿ ನಿಂತಿರಿ. ೩೦. ನೀವು ಪ್ರಯೋಗಿಸಿದ ಬಾಣವು ಶ್ರೀಕೃಷ್ಣನ ಚಕ್ರವನ್ನೂ ಅಡ್ಡಗಟ್ಟಿ ಆಕ್ರಮಿಸಿತು ಎನ್ನುವಾಗ ನಿಮ್ಮಈ ಪಾದಕಮಲಕ್ಕೆ ನಮಸ್ಕಾರಮಾಡದೆ ವಕ್ರವಾಗಿ ನಿಂತು ಈ ಭೂಮಂಡಲದಲ್ಲಿ ಬಾಳುವವರೂ ಇದ್ದಾರೆಯೇ ? ೩೧. ನಾವು ಸಾಯುವುದೇ ನಿಮ್ಮಿಚ್ಛೆಯಾದರೆ (ನೀವು ಕೊಲ್ಲುವೆನೆಂದು ಮನಸ್ಸು ಮಾಡಿಬಿಟ್ಟರೆ ನಿಮ್ಮನ್ನು ಪ್ರತಿಭಟಿಸಿ ಯುದ್ಧಮಾಡಿ ಯಾವನು ಗೆಲ್ಲುತ್ತಾನೆ. ಆದುದರಿಂದ ನಮಗೆ ಸಾವೆಂಬುದು ನಿಶ್ಚಯ. ಸದ್ಗತಿಯನ್ನು ಹೊಂದುವುದಕ್ಕೆ ನಿಮ್ಮಿಂದ ಕೋಪಿಸಿಕೊಂಡು ಸಾಯುವುದು ಉತ್ತಮವಲ್ಲವೇ ? ವll ಅದನ್ನು ಪೂರ್ಣವಾಗಿ ಕೇಳಿ ಕರುಣಾರಸಹೃದಯನಾಗಿ ಭೀಷ್ಮನು ಮೊಮ್ಮಗನ ಮುಖವನ್ನು ಪ್ರೀತಿಯಿಂದ ನೋಡಿ ಕಣ್ಣಿನಲ್ಲಿ ನೀರನ್ನು ತುಂಬಿಕೊಂಡು ಹೇಳಿದನು.
Page #516
--------------------------------------------------------------------------
________________
ಏಕಾದಶಾಶ್ವಾಸಂ | ೫೧೧ ಚಂ|| ಜಗದೊಳವಧನಂ ಗೆಲಲೆಬಾರದದಾದೊಡಮೇಂ ಶಿಖಂಡಿ ತೊ
ಟ್ರಗೆ ಕೊಳೆ ಬಂದು ಮುಂದೆ ನಿಲೆ ಸಾವನಗಪುದು ನಾಳಿನೊಂದು ಕಾ | ಆಗದೂಳಿದಂ ನರಂಗಳಪದೀ ತೆಜದಿಂ ನೆಗಲ್ಯೇ ವೀರ ಲ ೬ ಗೆ ನೆಲೆಯಾಗು ಪೋಗೆನೆ ನೃಪಂ ಪೊಡೆವಟ್ಟು ಮನೋನುರಾಗದಿಂ || ೩೨
ವll ಬಂದು ಮಂದರಧರಂಗೆ ತದ್ವತ್ತಾಂತಮನೆಲ್ಲಮನಳೆಪಿ ನಿಶ್ಚಿಂತಮನನಾಗಿ ಪವಡಿಸಿದಾಗ ಚಂ ಚಲ ಚಲದಾಂತು ಕಾದುವ ಸುಯೋಧನ ಸಾಧನದೊಡ್ಡುಗಳ್ ಕಲ
ಇಲಳೆ ತೆರಳು ತೂಳು ಬಿಜುಡೆ ಗುಣಾರ್ಣವನಿಂದಮಾಜಿಯೊಳ್ | ಕೊಲಿಸಿ ಸಮಸ್ತ ಧಾತ್ರಿಯುಮನಾಳಿಪವೆಂದುಲಿವಂತೆ ಪಕ್ಕಿಗಳ
ಚಿಲಿಮಿಲಿಯೆಂಬ ಪೊಳೆ ಬಂದುದೊಡ್ಡಿದನಂತಕಾತ್ಮಜಂ || ೩೩
ವ|| ಆಗಳ್ ಕುರುಧ್ವಜಿನಿಯುಮನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳಂತಕಾಲಾಂತಕ ವಿಕಟಾಟ್ಟಹಾಸಗಳೆಂಬಂತೆ ಮೊಲಗೆ ಮಲೆದು ಬಂದೊಡ್ಡಿ ನಿಂದಾಗಕಂ!.
ಉಭಯ ಬಲದರಸುಗಳ ರಣ ರಭಸಂಗಳೊರಸು ಮುಳಿದು ಕೆಸೆ ಲಯ | ಕ್ಷುಭಿತ ಜಲನಿಧಿ ನಿನಾದಮ ನಭಿನಯಿಸಿದುದೊಗೆದು ನೆಗೆದ ಸಮರಾರಾವಂ ||
೩೪
೩೨. 'ಲೋಕದಲ್ಲಿ ಕೊಲ್ಲಲಾಗದವನನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ತಾನೆ ಏನು ? ನಾಳೆಯ ದಿನದ ಯುದ್ದದಲ್ಲಿ ಶಿಖಂಡಿಯು ಬೇಗನೆ ಮುಂದೆ ಬಂದು ನಿಂತರೆ ನನಗೆ ಮರಣವಾಗುತ್ತದೆ. ಈ ವಿಷಯವನ್ನು ಅರ್ಜುನನಿಗೆ ತಿಳಿಸದೆ ಮಾಡಿ ವೀರಲಕ್ಕಿಗೆ ಪೂರ್ಣವಾಗಿ ನೆಲೆಯಾಗು ಹೋಗು' ಎಂದನು: ಧರ್ಮರಾಜನು ಮನಸ್ಸಿನ ಸಂತೋಷದಿಂದ ನಮಸ್ಕಾರ ಮಾಡಿ ಹಿಂತಿರುಗಿದನು. ವ|| ಬಂದು ಶ್ರೀಕೃಷ್ಣನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿ ಚಿಂತೆಯಿಲ್ಲದ ಮನಸ್ಸಿನಿಂದ ಮಲಗಿದನು- ೩೩. 'ಹೆಚ್ಚಿನ ಹಠದಿಂದ ಕಾದುತ್ತಿರುವ ದುರ್ಯೊಧನನ ಸೈನ್ಯದ ಗುಂಪುಗಳು ಕೃಶವಾಗಿ ಚೆದರಿ ಒತ್ತರಿಸಲ್ಪಟ್ಟು ಬೆದರಿ ಓಡಿಹೋಗುವಂತೆ ಅರ್ಜುನನಿಂದ ಕೊಲ್ಲಿಸಿ ಸಮಸ್ತ ಭೂಮಂಡಲವನ್ನು ಅವನಿಂದಲೇ ಆಳುವ ಹಾಗೆ ಮಾಡುತ್ತೇವೆ' ಎಂದು ಕೂಗುವ ಹಾಗೆ ಹಕ್ಕಿಗಳು ಚಿಲಿಮಿಲಿಯೆಂದು ಶಬ್ದ ಮಾಡುತ್ತಿರುವ ಹೊತ್ತಿನಲ್ಲಿಯೇ (ಅರುಣೋದಯದಲ್ಲಿಯೇ) ಧರ್ಮರಾಯನು ಬಂದು ಸಾವಕಾಶ ಮಾಡದೆ ಸೈನ್ಯವನ್ನು ಒಡ್ಡಿದನು. ವll ಆಗ ಕೌರವ ಸೈನ್ಯವೂ ಅನೇಕ ಶಂಖ, ಕೊಂಬು, ನಗಾರಿ, ಪಣವ, ಜಲ್ಲರಿ, ಮೃದಂಗವೆಂಬ ವಾದ್ಯಗಳು ಪ್ರಳಯಕಾಲದ ಯಮನ ವಿಕಾರವಾದ ನಗುವಿನಂತೆ ಶಬ್ದಮಾಡಲು ಮದಿಸಿ ಬಂದು ಒಡ್ಡಿ ನಿಂತಿತು. ೩೪. ಎರಡು ಸೈನ್ಯದ ರಾಜರುಗಳೂ ಯುದ್ಧವೇಗದಿಂದ ಕೂಡಿ ಕೋಪದಿಂದ ಕೈಬೀಸಲಾಗಿ ಆಗ ಹುಟ್ಟಿ ಚಿಮ್ಮಿದ ಯುದ್ಧದ ಮೊಳಗು ಪ್ರಳಯಕಾಲದ ಕಲಕಿದ ಸಮುದ್ರಧ್ವನಿಯನ್ನು
Page #517
--------------------------------------------------------------------------
________________
೫೧೨/ ಪಂಪಭಾರತಂ
, ಇಸುವ ಧನುರ್ಧರರಿಂ ಪಾ ಯಿಸುವ ದಬಂಗಳಿನಗುರ್ವು ಪರ್ವುವಿನಂ ಚೋ | ದಿಸುವ ರಥಂಗಳಿನೆಂಟುಂ ದೆಸೆ ಮಸುಳ್ಳಿನಮಿದುವಾಗಳುಭಯಬಲಂಗಳ | ಅಲೆದಟ್ಟಿದ ಕರಿ ಘಟೆಗಳ ಬಳಗದಿನುಚ್ಚಳಿಸಿ ಮೊರೆವ ನೆತ್ತರ ತೆರೆಗಳ | ಸುಟಿಸುತಿದೊಡವರಿದುವು ಕ ಊಟೆಯೊಳ್ ಭೋರ್ಗರೆದು ಹರಿವ ತೋಜಗಳ ತೆಜದಿಂ || ೩೬
ವll ಅಂತು ಚಾತುರ್ದಂತಮೊಂದೊಂದರಂತೆ ನಡುವಗಲ್ವರು ಕಾಡುವುದುಂ ನಾವಿಂದಿನನುವರಮನನಿಬರುಮೊಂದಾಗಿ ಭೀಷ್ಮರೋಳ್ ಕಾದುವಮೆಂದು ಸಮಕಟ್ಟಿ ಧರ್ಮಪುತ್ರ ಕದನತ್ರಿಣೇತ್ರನಂ ಮುಂದಿಟ್ಟು ಸಮಸ್ತಬಲಂಬೆರಸು ಕಾದುವ ಸಮಕಟ್ಟಂ ದುರ್ಯೋಧನ ನಡೆದುಚ
ಕುರುಬಲಮೆಂಬುದೀ ಸುರನದೀಜನ ತೋಳ್ವಲಮಂಬ ವಜ್ರ ಪಂ ಜರದೊಳಗಿರ್ದು ಬಪುದು ಪಾಂಡವ ಸೈನ್ಯಮುಮಿಂದು ಭೀಷರೊ || ರ್ವರೊಳಿರದಾಂತು ಕಾದಲವರಂ ಪೊಅಗಿಕ್ಕಿ ಕಡಂಗಿ ಕಾದಿ ನಿ
ತರಿಸುವೆನೆಂದು ಪಾಂಡವ ಬಲದಿರಂ ತಳೆಸಂದು ತಾಗಿದಂ || ೩೭
ವ|| ಅಂತು ತಾಗುವುದುಂ ಸಾತ್ಯಕಿ ಕೃತವರ್ಮನೊಳ್ ಯುಧಿಷ್ಠಿರಂ ಶಲ್ಯನೊಳ್ ಸೌಭದ್ರನಶ್ವತ್ಥಾಮನೊಳ್ ಸಹದೇವಂ ಶಕುನಿಯೊಳ್ ನಕುಲಂ ಚಿತ್ರಸೇನನೊಳ್ ಚೇಕಿತಾನಂ ಅನುಕರಿಸಿತು. ೩೫. ಬಾಣಪ್ರಯೋಗಮಾಡುವ ಬಿಲ್ದಾರರಿಂದಲೂ ಮುನ್ನುಗ್ಗಿಸುವ ಸೈನ್ಯಗಳಿಂದಲೂ ಭಯಂಕರತೆಯು ಹೆಚ್ಚುತ್ತಿರಲು ನಡೆಸುತ್ತಿರುವ ತೇರುಗಳಿಂದ ಎಂಟು ದಿಕ್ಕುಗಳೂ ಮಂಕಾಗುತ್ತಿರಲು ಎರಡು ಸೈನ್ಯಗಳೂ ಯುದ್ಧ ಮಾಡಿದುವು. ೩೬. ಸತ್ತು ನಾಶವಾದ ಆನೆಗಳ ರಾಶಿಯಿಂದ ಮೇಲಕ್ಕೆ ಹಾರಿ ಶಬ್ದಮಾಡುತ್ತಿರುವ ರಕ್ತದ ಅಲೆಗಳು ಸುಳಿಸುಳಿದು ಕಲ್ಲುದಾರಿಯಲ್ಲಿ ಭೋರೆಂದು ಶಬ್ದ ಮಾಡುತ್ತ ಹರಿಯುವ ನದಿಗಳ ರೀತಿಯಿಂದ ಒಡನೆ ಹರಿದುವು. ವ|| ಚತುರಂಗಬಲವೂ ಒಂದೊಂದು ಒಂದೊಂದರಲ್ಲಿ ನಡುಹಗಲಿನವರೆಗೆ ಒಂದೇ ಸಮನಾಗಿ ಕಾದಿದುವು. ಧರ್ಮರಾಜನು ನಾವು ಭೀಷರೊಡನೆ ಇಂದಿನ ಯುದ್ಧವನ್ನು ಎಲ್ಲರೂ ಒಟ್ಟಿಗೆ ಸೇರಿ ಕಾಡೋಣ ಎಂದು ನಿಷ್ಕರ್ಷಿಸಿ ಅರ್ಜುನನನ್ನು ಮುಂದಿಟ್ಟುಕೊಂಡು ಸಮಸ್ತಸೈನ್ಯವನ್ನೂ ಕೂಡಿಸಿದನು. ಈ ಸುದ್ದಿ ದುರ್ಯೊಧನನನ್ನೂ ಮುಟ್ಟಿತು. ೩೭. 'ಈ ಕೌರವ ಸೈನ್ಯವೆಂಬುದು ಭೀಷ್ಮನ ಬಾಹುಬಲವೆಂಬ ವಜ್ರಪಂಜರದಲ್ಲಿದ್ದು ಬದುಕುತ್ತಿದೆ. ಪಾಂಡವಸೈನ್ಯವು ಈ ದಿನ ಭೀಷರೊಬ್ಬರನ್ನು ಬಿಡದೆ ಪ್ರತಿಭಟಿಸಿ ಕಾದಲು ಯೋಚಿಸಿದೆ. ಆದುದರಿಂದ ಅವರನ್ನು ಈ ದಿನ ನಾನು ಹಿಂದಿಕ್ಕಿ (ರಕ್ಷಿಸಿ) ಉತ್ಸಾಹದಿಂದ ಕಾದಿ ಕಾರ್ಯಸಾಧನೆ ಮಾಡುತ್ತೇನೆ' ಎಂದು ದುರ್ಯೊಧನನು ನಿಶ್ಚಯಿಸಿ ಪಾಂಡವಸೈನ್ಯಕ್ಕೆ ಇದಿರಾಗಿ ಬಂದು ತಾಗಿದನು (ಪ್ರತಿಭಟಿಸಿದನು). ವ|| ಸಾತ್ಯಕಿಯು ಕೃತವರ್ಮನೊಡನೆಯೂ ಧರ್ಮರಾಜನು ಶಲ್ಯನೊಡನೆಯೂ
Page #518
--------------------------------------------------------------------------
________________
ಏಕಾದಶಾಶ್ವಾಸಂ | ೫೧೩ ಸೈಂಧವನೊಳ್ ಘಟೋತ್ಕಚಂ ಕೃಪನೊಳ್ ಭೀಮಸೇನಂ ಕೌರವನೊಳ್ ಕಳಿಂಗರಾಜಂ ಪಾಂಚಾಳರಾಜನೊಳ್ ಅತಿರಥಮಥನಂ ದ್ರೋಣಾಚಾರ್ಯರೊಳ್ ಅವರವರೊಳದಿರದಾಂತಾಗಳ್
ಚoll
ನಡುವಿಡುವುರ್ಚುವಾರ್ದರಿವ ನೇರ್ವ ಪಳಂಚುವ ಪೋರ್ವ ಬಾಣದಿಂ ದುಡಿದು ಸಿಡಿಲ್ಲು ಸೂಸಿಯೆ ಕುಲ್ಲು ಬಹಲ್ಲು ಸಡಿಲ್ಲು ಜೊಲ್ಲು ನೇ || ಲುಡಿದ ನೊಗಂ ಧ್ವಜಂ ಪಲಗೆ ಕೀಲ್ ಕವರಚ್ಚು ತುರಂಗಮಂ ರಥಂ ಕಿಡೆ ಕವರಿಂದಗುರ್ವನೊಳಗೊಂಡಿರ ತಳಿದರ್ ಮಹಾರಥರ್
ವ|| ಅಂತು ಕಿಡಿಗುಟ್ಟಿದಂತೆ ತಳಿಗೆಯೆ ಜಗದೇಕಮಲ್ಲಂಗ ಮಾರ್ತಲೆಯಲಾಗಿದೆ ಕುರುಬಲಮೆಲ್ಲಮೆಲ್ಲನುಲಿದೋಡಿ ಭೀಷರ ಮಯಂ ಪೊಕ್ಕಾಗಳ್
ಕಂ ಧವಳ ಹಯಂ ಧವಳ ರಥಂ
೩೮
ಧವಳೊಷಂ ಶಶಾಂಕ ಸಂಕಾಶ ಯಶೋ | ಧವಳಿತ ಭುವನಂ ತಾಗಿದ
ನವಯವದಿಂ ಬಂದು ಧರ್ಮತನಯನ ಬಲದೊಳ್ ||
೩೯
ವ|| ಅಂತು ತಾಗಿದ ಸಿಂಧುನಂದನನ ಕೋಪಶಿಖಿ ಶಿಖಾಕಳಾಪಂಗಳೊಳ್ ಪುಡುಪುಡನ ಸಾಯಲೆಂದು ಪಾಯ್ದ ಪತಂಗಂಗಳಂತೆ ಸೋಮಕ ಶ್ರೀಜಯ ಪ್ರಮುಖ ನಾಯಕರೊಂದಕ್ಕೋಹಿಣೀ ಬಲಂಬೆರಸು ಭರಂಗೆಯಾಂತೊಡೆ
ಅಭಿಮನ್ಯುವು ಅಶ್ವತ್ಥಾಮನೊಡನೆಯೂ ಸಹದೇವನು ಶಕುನಿಯೊಡನೆಯೂ ನಕುಲನು ಚಿತ್ರಸೇನನೊಡನೆಯೂ ಚೇಕಿತಾನನು ಸೈಂಧವನೊಡನೆಯೂ ಘಟೋತ್ಕಚನು ಕೃಪನೊಡನೆಯೂ ಭೀಮಸೇನನು ದುರ್ಯೋಧನನೊಡನೆಯೂ ಕಳಿಂಗರಾಜನು ದ್ರುಪದನೊಡನೆಯೂ ಅರ್ಜುನನು ದ್ರೋಣಾಚಾರ್ಯರೊಡನೆಯೂ ಪರಸ್ಪರ ಹೆದರದೆ ಪ್ರತಿಭಟಿಸಿದರು. ೩೯. (ಬಾಣಗಳನ್ನು) ನಾಟುವ, ಬೀಸಿ ಎಸೆಯುವ, ಚುಚ್ಚುವ, ಶಬ್ದಮಾಡಿ ಕತ್ತರಿಸುವ, ತುಂಡುಮಾಡುವ, ಪ್ರತಿಭಟಿಸಿ ತಗಲುವ ಹೋರಾಡುತ್ತಿರುವ, ಬಾಣಗಳಿಂದ ಮುರಿದು ಸಿಡಿದು ಚೆಲ್ಲಿ ಶಿಥಿಲವಾಗಿ ಜೋತು ಬಿದ್ದು ನೇತಾಡಿ ತುಂಡರಿಸಿದ ನೊಗ, ಬಾವುಟ, ಹಲಗೆ, ಕೀಲು, ಕವಲುಮರ, (ತೇರಿನ) ಅಚ್ಚು, ಕುದುರೆ, ತೇರು ಇವುಗಳು ನಾಶವಾಗಲು ಮಹಾರಥರು ಒಟ್ಟುಗೂಡಿ ಭಯಂಕರವಾಗಿ ಯುದ್ಧಮಾಡಿದರು. ವ| ಬೆಂಕಿಯ ಕಿಡಿಯು ಚೆಲ್ಲುವ ಹಾಗೆ : ಜಗದೇಕಮಲ್ಲನಾದ ಅರ್ಜುನನು ಯುದ್ಧಮಾಡುತ್ತಿರಲು ಅವನನ್ನು ಪ್ರತಿಭಟಿಸಲಾರದೆ ಕೌರವಸೈನ್ಯವೆಲ್ಲವೂ ಮೆಲ್ಲನೆ ಕೂಗಿಕೊಂಡು ಓಡಿ ಭೀಷ್ಮರ ಮರೆಯನ್ನು ಸೇರಿತು. -೩೯. ಬಿಳಿಯ ಕುದುರೆ, ಬಿಳಿಯ ತೇರು, ಬಿಳಿಯ ತಲೆಯುಡಿಗೆ, ಚಂದ್ರನಿಗೆ ಸಮಾನವಾದ (ಶುಭ್ರಕಾಂತಿಯಿಂದ ಕೂಡಿದ) ಯಶಸ್ಸಿನಿಂದ ಲೋಕವನ್ನೇ ಬಿಳುಪಾಗಿ ಮಾಡಿದ (ಕೀರ್ತಿ ಇವುಗಳಿಂದ ಕೂಡಿದ) ಭೀಷ್ಮನು ಅಶ್ರಮದಿಂದ ಧರ್ಮರಾಜನ ಸೈನ್ಯದೊಡನೆ ಬಂದು ತಾಗಿದನು. ವll ಭೀಷ್ಮನ ಕೋಪಾಗ್ನಿಜ್ವಾಲೆಯ ರಾಶಿಯಲ್ಲಿ `ಬಿಸಿಬಿಸಿಯಾಗಿ ಬೆಂದು ನಾಶವಾಗಿ ಸಾಯಬೇಕೆಂದು ಹಾಯುವ 'ದೀಪದ ಹುಳುಗಳ ಹಾಗೆ ಸೋಮಕ ಶ್ರೀಜಯನೇ ಮೊದಲಾದ ನಾಯಕರು ಒಂದಕ್ಕೋಹಿಣೀ
Page #519
--------------------------------------------------------------------------
________________
೫೧೪ | ಪಂಪಭಾರತಂ ಮll ಶರಸಂಧಾನದ ಬೇಗಮಂಬುಗಳನಂಬೀಂಬಂತೆ ಮಣಂಬಿನಾ
ಗರವೆಂಬಂತೆನೆ ಪಾಯ್ಯರಾತಿ ಶರ ಸಂಘಾತಂಗಳಂ ನುರ್ಗಿ ನೇ || ರ್ದರಿದಟ್ಟು೦ಬರಿಗೊಂಡು ಕೂಡ ಕಡಿದಂತಾ ಸೈನಮಂ ಪರ್ವಿ ಗೂ
ಉರಿಗೊಂಡುರ್ವಿದುವಾ ರಸಾತಳಮುಮಂ ಗಾಂಗೇಯನಸ್ತಾಳಿಗಳ 1 ೪೦
ವ|| ಅಂತು ಭೀಷ್ಮಂ ಗ್ರೀಷ್ಮಕಾಲದಾದಿತ್ಯನಂತೆ ಕಾಯ್ದಂತಕಾಲದಂತಕನಂತ ಕೆಳರ್ದು ವಿಳಯಕಾಲಮೇಘದಂತೆ ಮೋಟಗಿ ಮಹಾಪ್ರಳಯಭೈರವನಂತೆ ಮಸಗಿ ಪಯಿಂಛಾಸಿರ್ವರ್ ಮಕುಟಬದ್ಧರಂ ಕೊಂದಾಗಳ್ಚಂ|| ಮಣಿಮಕುಟಾಳಿಗಳ್ವರಸುರುಳ ನರೇಂದ್ರರಿರಂಗಳೊಳಣಾ
ಮಣಿಗಳ ದೀಪ್ತಿಗಳ್ ಬೆಳಗೆ ಧಾತ್ರಿಯನೊಯ್ಯನೆ ಕಂಡಿ ಮಾಡಿ ಕಣ್ | ತಣಿವಿನಮಂದು ನಿಂದಿಳಿದ ಕೊಳ್ಳುಳನಂ ನಡೆ ನೋಟ್ಟಿಹೀಂದ್ರರೊಳ್ |
ಸೆಣಸಿದುವೆಂದೊಡೇವೊಗಟ್ಟುದೇರ್ವಸನಂ ಸುರಸಿಂಧುಪುತ್ರನಾ || ೪೧
ವ|| ಅಂತು ಸೋಮಕಬಲಮೆಲ್ಲಮಂ ಪೇಳ ಹೆಸರಿಲ್ಲದಂತು ಕೊಂದು ಶ್ರೀ ಜಯಬಲಕ್ಕಪಜಯಮಾಗೆ ಕೊಂದುವೊಡಿಸಿಯುಮಿಕ್ಕಿ ಗಲ್ಲ ಮಲ್ಲನಂತಿರ್ದಾಗಳ ಜಗದೇಕಮಲ್ಲಂ ಮೊದಲಾಗೆ ವಿರಾಟ ವಿರಾಟಜ ದ್ರುಪದ ದ್ರುಪದಜ ಚೇಕಿತಾನ ಯುಧಾಮನೂತಮೋಜಸ್ವಭದ್ರ ಘಟೋತ್ಕಚ ಭೀಮಸೇನ ನಕುಲ ಸಹದೇವ ಸಾತ್ಯಕಿ
ಸೈನ್ಯದಿಂದೊಡಗೂಡಿ ಬಂದು ಆರ್ಭಟಿಸಿ ಮುತ್ತಿದರು. ೪೦. ಭೀಷ್ಮನ ಬಾಣಪ್ರಯೋಗಮಾಡುವ ವೇಗವು ಬಾಣಗಳು ಬಾಣಗಳನ್ನು ಹೆರುತ್ತಿರುವ ಹಾಗೆ, ಅಥವಾ ಬಾಣಗಳ ಆಕರದಂತಿರಲು ಆ ಭೀಷ್ಮನ ಬಾಣಗಳು ಹಾರಿ ಬರುತ್ತಿರುವ ಶತ್ರುಗಳ ಬಾಣಸಮೂಹವನ್ನು ಪುಡಿಮಾಡಿ ನೇರವಾಗಿ ಕತ್ತರಿಸಿ, ತುಂಡುಮಾಡಿ, ಹಿಂಬಾಲಿಸಿ ಆಗಲೇ ಕತ್ತರಿಸಿದಂತೆ, ಆ ಸೈನ್ಯವನ್ನು ಆವರಿಸಿ ಕತ್ತನ್ನು ಕತ್ತರಿಸಿ ಪಾತಾಳವನ್ನು ತುಂಬಿದುವು ವll .ಭೀಷ್ಮನು ಬೇಸಿಗೆಯ ಸೂರ್ಯನಂತೆ ಕೋಪಗೊಂಡು ಪ್ರಳಯಕಾಲದ ಯಮನಂತೆ ರೇಗಿ ವಿಳಯಕಾಲದ ಮೋಡದಂತೆ ಶಬ್ದಮಾಡಿ ಮಹಾಪ್ರಳಯಭೈರವನಂತೆ ಕೆರಳಿ ಹತ್ತು ಸಾವಿರ ರಾಜರನ್ನು ಕೊಂದನು. ೪೧. ರತ್ನಖಚಿತವಾದ ಕಿರೀಟಗಳ ಸಮೂಹದೊಡನೆ ಉರುಳಿದ ಚಕ್ರವರ್ತಿಗಳ ತಲೆಗಳು ಆ ದಿನದ ಭಗ್ನವಾದ ಯುದ್ದವನ್ನು ನೋಡಬೇಕೆಂಬ ಕುತೂಹಲದಿಂದ ಭೂಮಿಯನ್ನು ನಿಧಾನವಾಗಿ ರಂಧ್ರಮಾಡಿಕೊಂಡು ಪಾತಾಳಲೋಕದಿಂದ ಬಂದು ಕಣ್ಣು ತೃಪ್ತಿಯಾಗುವಷ್ಟು ಇಣಿಕಿ ನೋಡುತ್ತಿರುವ ಸರ್ಪಗಳ ಹೆಡೆಯ ರತ್ನಗಳ ಕಾಂತಿಯನ್ನೂ ಸ್ಪರ್ಧಿಸುವಂತಿತ್ತು ಎನ್ನುವಾಗ ವl (ಭೀಷ್ಮನು) ಹಾಗೆ ಸೋಮಕ ಸೈನ್ಯವೆಲ್ಲವನ್ನೂ ಹೇಳಲು ಹೆಸರಿಲ್ಲದ ಹಾಗೆ ಕೊಂದು ಶ್ರೀಜಯಬಲಕ್ಕೆ ಸೋಲುಂಟಾಗುವ ಹಾಗೆ ಸಂಹರಿಸಿಯೂ ಓಡಿಸಿಯೂ ಹೊಡೆದೂ ಗೆದ್ದ ಜಟ್ಟಿಯ ಹಾಗೆ ಇದ್ದನು. ಜಗದೇಕಮಲ್ಲನಾದ ಅರ್ಜುನನೇ ಮೊದಲಾದ ವಿರಾಟ, ಉತ್ತರ, ದ್ರುಪದ, ದೌಪದೇಯ, ಚೇಕಿತಾನ, ಯುಧಾಮನ್ಯು, ಉತ್ತಮೋಜ, ಅಭಿಮನ್ಯು, ಘಟೋತ್ಕಚ, ಭೀಮಸೇನ, ನಕುಲ, ಸಹದೇವ, ಸಾತ್ಯಕಿ, ಪಂಚಪಾಂಡವರೇ
Page #520
--------------------------------------------------------------------------
________________
ಏಕಾದಶಾಶ್ವಾಸಂ | ೫೧೫ ಪಂಚಪಾಂಡವ ಪ್ರಮುಖನಾಯಕರೆಲ್ಲರುಂಬೆರಸು ಧರ್ಮಪುತ್ರಂ ಶಿಖಂಡಿಯಂ ಮುಂದಿಟ್ಟುಕೊಂಡು : ಬಂದು ಪೇಂಕುಳಿಗೊಂಡ ಸಿಂಹಮಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್ಉ|| ಅಂಬರಮಲ್ಲಮಂಬಿನೊಳೆ ಪೂತಿ ಮಹೀಭುಜರತ್ತಮಚ ಕಿ
ತಂಬುಗಳತ್ತಮವ್ವಳಿಗೆ ಮಾಣದವಂ ಕಡಿದಿಕ್ಕಿ ತನ್ನ ನ | ಇಂಬುಗಳಿಂದಮಾರ್ದಿರದಡುರ್ತಿಸೆ ಭೂಭುಜರೆಲ್ಲಮಲ್ಲಿ ಬಿ
ಝುಂ ಬೆಳಗಾಗೆ ಬಂದು ಪೊಣರ್ದ೦ ಸೆರಗಿಲ್ಲದೆ ವಿಕ್ರಮಾರ್ಜುನಂ || ೪೨ ವ|| ಅಂತು ಪೂಣರ್ದಾಗಳೆಮ್ಮ ಮಮ್ಮಂಗಮೆಮಗಮೀಗಳನುವರು ದೊರೆಯಾಯ್ಕೆಂದು ಪರಶುರಾಮನ ಕೊಟ್ಟ ದಿವ್ಯಾಸ್ತಂಗಳನೊಂದನೊಂದು ಸೂಳೆ ತೊಟ್ಟೆಚ್ಚಾಗಳಚಂtt ಜ್ವಳನ ಪತಿಯಂ ಕಡಿದು ವಾರುಣ ಪತಿಯಿನೈಂದ್ರ ಬಾಣಮಂ
ಕಳೆದು ಸಮೀರಣಾಸದಿನಿದಿರ್ಟದ ಭೂಭುಜರೆಲ್ಲರಂ ಭಯಂ | ಗೊಳಿಸಿ ನಿಶಾತ ವಿಶರದಿಂ ಸುರರಂಬರದೊಳ್ ತಗುಳು ಬಿ
ಚಳಿಗೆ ನದೀಜನುಚ್ಚಳಿಸೆ ಕಾದಿದನೇಂ ಕಲಿಯೋ ಗುಣಾರ್ಣವಂ || ೪೩
ವl ಅಂತಮೋಘಾ ಧನಂಜಯಂ ತನ್ನಮೋಘಾಸ್ತ್ರಂಗಳಂ ಕಡಿದೊಡೆ ಸಾಮಾನ್ಯಾಸ್ತಂಗಳೊಳ್ ಧರ್ಮಪುತ್ರಂಗೆ ತನ್ನ ನುಡಿದ ನುಡಿವಳಿಯಂ ನೆನೆದಲ್ಲಳಿಗಾಳಗಂಗಾದೆಚoll ಕಡಿದನುದಗ್ರ ನಾಯಕರ ಸಾಯಕಮಲ್ಲಮನಾ ಶಿಖಂಡಿ ಪೊ
ಕಡಿಗಿಡೆ ಬಂದು ಮುಂದೆ ನಿಲೆಯುಂ ಮೊಗಮಂ ನಡೆ ನೋಡಿಯಾತನಾ | ರ್ದೊಡನೊಡನೆಚೊಡೆಚ್ಚ ಮೊನೆಯಂಬುಗಳಲ್ಲೆಡಿಪೋಗೆಯುಂ ಮನಂ
ಗಿಡನವನಾಂಕಗೊಳ್ಳನಗಿಯಂ ಸುಗಿಯಂ ಸುರಸಿಂಧುನಂದನಂ || ೪೪ ಮುಖ್ಯವಾಗಿರುವ ನಾಯಕರೆಲ್ಲರೊಡಗೂಡಿ ಧರ್ಮರಾಯನು ಶಿಖಂಡಿಯನ್ನು ಮುಂದುಮಾಡಿಕೊಂಡು ಬಂದು, ಹುಚ್ಚು ಹಿಡಿದ ಸಿಂಹವನ್ನು ಮುತ್ತುವ ಹಾಗೆ ಮುತ್ತಿದನು. ೪೨. ಭೀಷ್ಮನು ಆಕಾಶಪ್ರದೇಶವೆಲ್ಲವೂ ಬಾಣಸಮೂಹಗಳಲ್ಲಿಯೇ ಹೂತುಹೋಗುವ ಹಾಗೆ ರಾಜರುಗಳು ಎಲ್ಲ ಕಡೆಗಳಿಂದಲೂ ಪ್ರಯೋಗಿಸಿದ ಬಾಣಗಳು ಯಾವ ಕಡೆಗೂ ನುಗ್ಗಲು ಅವಕಾಶಕೊಡದೆ ತನ್ನ ಉತ್ತಮ ಬಾಣಗಳಿಂದ ಕತ್ತರಿಸುತ್ತಿರಲು ಅರ್ಜುನನು ಆರ್ಭಟಮಾಡಿ ಸಾವಕಾಶಮಾಡದೆ ಸಮೀಪಿಸಿ ಹೊಡೆದು ಅಲ್ಲಿಯ ರಾಜರುಗಳೆಲ್ಲ ಸಂಭ್ರಾಂತರಾಗುವ ಹಾಗೆ ಭಯವಿಲ್ಲದೆ ಮುಂದೆ ಬಂದು ಹೋರಾಡಿದನು. ವ|| ನಮ್ಮ ಮೊಮ್ಮಗನಿಗೂ ನಮಗೂ ಈಗ ಯುದ್ಧವು ಸಮಾನವಾಯಿತು ಎಂದು ಭೀಷ್ಮನು (ತಮ್ಮ ಆಚಾರ್ಯರಾದ) ಪರಶುರಾಮನು ಕೊಟ್ಟ ದಿವ್ಯಾಸ್ತಗಳನ್ನು ಒಂದೊಂದಾಗಿ ಕ್ರಮದಿಂದ ಪ್ರಯೋಗಿಸಿದನು. ೪೩. ಆಸ್ಟ್ರೇಯಾಸ್ತ್ರವನ್ನು ವಾರಣಾಸ್ತದಿಂದ ಕತ್ತರಿಸಿ ಐಂದ್ರಾಸ್ತವನ್ನು ವಾಯ್ಸಸ್ತದಿಂದ ಎದುರಿಸಿ ರಾಜರುಗಳನ್ನೆಲ್ಲ ಹೆದರುವ ಹಾಗೆ ಮಾಡಿ ದೇವತೆಗಳೆಲ್ಲ ಆಕಾಶದಲ್ಲಿ ಗುಂಪುಗುಂಪಾಗಿ ಕೂಡಿ ಸ್ತೋತ್ರಮಾಡುತ್ತಿರಲು ಅರ್ಜುನನು ಇಂದ್ರಾಸ್ತದಿಂದ ಭೀಷ್ಕನು ಮೇಲಕ್ಕೆ ನೆಗೆಯುವ ಹಾಗೆ ಹೋರಾಡಿದನು. ಅರ್ಜುನನ ಶೌರ್ಯ ಸಾಮಾನ್ಯವೆ? ವll ಹಾಗೆ ಬೆಲೆಯೇ ಇಲ್ಲದ ಅಸ್ತಗಳನ್ನುಳ್ಳ ಅರ್ಜುನನು ತನ್ನ ಅಮೋಘಾಸ್ತ್ರಗಳನ್ನು ಕತ್ತರಿಸಲು ಭೀಷ್ಮನು ಧರ್ಮರಾಜನಿಗೆ ತಾನು ಕೊಟ್ಟ ಮಾತನ್ನು ಜ್ಞಾಪಿಸಿಕೊಂಡು ಸಾಮಾನ್ಯವಾದ ಬಾಣಗಳಿಂದ ಮೇಳಗಾಳೆಗವನ್ನು ಕಾದಿದನು. ೪೪. ಶ್ರೇಷ್ಠರಾದ
Page #521
--------------------------------------------------------------------------
________________
ಚoll
೫೧೬ | ಪಂಪಭಾರತ
ಇದು ರಣಮೆನ್ನೊಳಾಂತಿವ ಮೆಯ್ಯಲಿಯುಂ ಸಮರೈಕಮೇರುವೆ . ನದಟುಮಳುರ್ಕೆಯುಂ ಪಿರಿದು ಸೇಡಿಗದಂತಿದಿರಾಂಪೆನೆಂದಣಂ || ಬೆದಳದೆ ನಟ್ಟ ಕೂರ್ಗಣೆಯ ಬಿಣೇಯತೆಯಿಂದ ಬಬಿಲ್ಲನುರ್ವಿ ಪೆ
ರ್ವಿದಿರ ಸಿಡಿಂಬಿನೊಳ್ ಪುದಿದದೊಂದು ಕುಳಾಚಳದಂತೆ ಸಿಂಧುಜಂ || ೪೫ ಉ11 ತಿಂತಿಣಿಯಾಗೆ ನಟ್ಟ ಕಣೆಯೊಳ್ ನೆಲ ಮುಟ್ಟದೆ ಮಯೊಳತ್ತಮಿ
ತಂ ತೆರೆದಿರ್ದ ಪುಣ್ಣಳೆಸೆವಕ್ಕರದಂತಿರೆ ನೋಡಿ ಕಲ್ಲಿಮಂ | ಬಂತವೊಲಿರ್ದನಟ್ಟವಣೆ ಕೋಲ್ಗಳ ಮೇಲೆಸೆದಿರ್ದ ವೀರ ಸಿ ದ್ಧಾಂತದ ಶಾಸನಂ ಬರೆದ ಪೊತ್ತಗೆಯಂತಮರಾಪಗಾತ್ಮಜಂ || ೪೬ ನಡೆದುದು ಬಾಳ ಕಾಲದೊಳೆ ತೊಟ್ಟೆನಗಂಕದ ಶೌಚವೀಗಳೊ ಗಡಿಪುದೆ ಮುಟ್ಟಿ ನಾಂ ನೆಲನನೇಕದು ಪೆಣ್ಣಡಿಮೆಂದು ಮೆಯ್ಯೋಳ | ಆಡಿದ ವಿಕರ್ಣ ಕೋಟಿಯೊಳಣಂ ನೆಲ ಮುಟ್ಟದೆ ನೋಡೆ ಬಿಳ್ಕೊಡಂ ಬಡಿಸಿದನಯ್ಯ ಶೌಚ ಗುಣದುನ್ನತಿಯಂ ಸುರಸಿಂಧುನಂದನಂ || ೪೭
ವ|| ಅಂತು ಶರಪಂಜರದೊಳೊಅಗಿಯುಮೊಡಲಿಂ ಪತ್ತುವಿಟ್ಟು ಪೋಪ ಜೀವಮಂ ಪೋಗಲೀಯದೆ ಸ್ವಚ್ಚಂದಮಿಚ್ಚುವಪ್ಪುದಳೆಂದುತ್ತರಾಯಣಂ ಬರ್ಪನ್ನಮಿರಿಸಿದನಂತುಮಾಗಳ್ ನಾಯಕರ ಬಾಣಗಳೆಲ್ಲವನ್ನೂ ಭೀಷ್ಮನು ಕಡಿದು ಹಾಕಿದನು. (ಆಗ) ಆ ಶಿಖಂಡಿಯು ಹೆಜ್ಜೆ ತಪ್ಪಿ ಮುಂದೆ ಬಂದು ನಿಂತರೂ ಮುಖವನ್ನು ದೀರ್ಘವಾಗಿ ನೋಡಿದರೂ ಆರ್ಭಟಮಾಡಿ ಹೊಡೆದರೂ ಮೊನಚಾದ ಬಾಣಗಳು ತನ್ನ ಶರೀರದಲ್ಲಿ ನಾಟಿ ಕಿಕ್ಕಿರಿದರೂ ಭೀಷ್ಮನು ತನ್ನ ಮನಸ್ಥೆರ್ಯವನ್ನು ಕಳೆದುಕೊಳ್ಳಲಿಲ್ಲ, ಪ್ರತಿಭಟಿಸಲಿಲ್ಲ, ಹೆದರಲಿಲ್ಲ, ಬೆದರಲಿಲ್ಲ. ೪೫. ಇದು ಯುದ್ದ ನನ್ನನ್ನು ಪ್ರತಿಭಟಿಸುವ ಶೂರನಾದರೋ ಸಮರೈಕಮೇರುವೆಂಬ ಬಿರುದುಳ್ಳ ಅರ್ಜುನ; ನನ್ನ ಪರಾಕ್ರಮವೂ ಅದರ ವ್ಯಾಪ್ತಿಯೂ ಹಿರಿದಾದುದು. ಹೇಡಿಗೆ ಹೇಗೆ ಪ್ರತಿಭಟಿಸಲಿ ? ಎಂದು ಸ್ವಲ್ಪವೂ ಹೆದರದೆ ತನ್ನ ಶರೀರದಲ್ಲಿ ನಾಟಿಕೊಂಡಿರುವ ಹರಿತವಾದ ಬಾಣಗಳ ವಿಶೇಷವಾದ ಭಾರದಿಂದ ಉಬ್ಬಿ ಬೆಳೆದ ಹೆಬ್ಬಿದಿರಿನ ಮೆಳೆಯಿಂದ ತುಂಬಿದ ಒಂದು ಕುಲಪರ್ವತದಂತೆ ಭೀಷ್ಮನು ಆಯಾಸದಿಂದ ಜೋತುಬಿದ್ದನು. ೪೬. ಶರೀರದ ನಾನಾಕಡೆಗಳಲ್ಲಿ ಎಲ್ಲೆಲ್ಲಿಯೂ ನೆಲವನ್ನು ಮುಟ್ಟದೆ ಗುಂಪುಗುಂಪಾಗಿ ನಾಟಿಕೊಂಡಿರುವ ಬಾಣಗಳಿಂದ ಬಾಯಿಬಿಟ್ಟುಕೊಂಡಿರುವ ಹುಣ್ಣುಗಳು ಇಲ್ಲಿ ನೋಡಿ ಕಲಿಯಿರಿ' ಎಂಬ ಪ್ರಕಾಶಮಾನವಾದ ಅಕ್ಷರಗಳ ಹಾಗಿರಲು ಭೀಷ್ಮನು ವ್ಯಾಸಪೀಠದ ಮೇಲಿರುವ ಪ್ರತಾಪತತ್ವದ ವೀರಶಾಸನವನ್ನು ಬರೆದಿರುವ ಪುಸ್ತಕದ ಹಾಗೆ ಶೋಭಿಸುತ್ತಿದ್ದನು. ೪೭. ಬಾಲ್ಯಕಾಲದಿಂದ ಹಿಡಿದು ಪ್ರಸಿದ್ದವಾದ ಬ್ರಹ್ಮಚರ್ಯವು ನಡೆದುಬಂದಿದೆ. ಈಗ ನಾನು ಸ್ತ್ರೀಯಾದ ಅವಳನ್ನು ಮುಟ್ಟಿ ನನ್ನ ಶೌಚಗುಣವನ್ನು ಹೋಗಲಾಡಿಸುವುದೇ? ಕೆಡಿಸುವುದೇ ? ಎಂದು ಶರೀರದಲ್ಲಿ ನಾಟಿಕೊಂಡು ತುಂಬಿದ್ದ ಲೆಕ್ಕವಿಲ್ಲದ ಬಾಣಗಳಿಂದ ಭೂದೇವಿಯನ್ನು ಸ್ವಲ್ಪವೂ ಮುಟ್ಟದೆ ಭೀಷ್ಮನು ತನ್ನ ಶೌಚಗುಣವನ್ನು ಪ್ರಸಿದ್ದಪಡಿಸಿದನು. ವ|| ಹೀಗೆ ಶರಪಂಜರದಲ್ಲೊರಗಿದ್ದರೂ
Page #522
--------------------------------------------------------------------------
________________
ಏಕಾದಶಾಶ್ವಾಸಂ /೫೧೭ ಕುರುಬಲಮೆಲ್ಲಂ ಕುರುಕುಳವನಸಿಂಹಂ ಶರಪಂಜರದೊಳೊಆಗಿದನಿನ್ನೆಮ್ಮಂ ಕಾವರಾರೆಂದೊಲ್ಲ ನುಲಿದೋಡಿ ಬೀಡಂ ಪೊಕ್ಕಾಗಳ್ ಧರ್ಮಪುತ್ರಂ ನಿಜಾನುಜ ಸಹಿತಂ ಬಂದು ಬಲಗೊಂಡು ಕಾಲ ಮೇಲೆ ಕವಿದು ಪಟ್ಟು
ಕಂ
ಕರುಣದಿನಮ್ಮಂ ತಾಸ್ಟೋಲ್ ತರುವಲಿಗಳನೆ
ತಿರೆಯುಂ ನೋಡಿದವೇನಮ
ಗರಸಿಕೆಯೋ ಪೇಟೆಮೆಂದು ಶೋಕಂಗೆಯರ್ I
ನಡಪಿದಜ್ಜ ನೀಮಿಂ |
೪೮
ವ|| ಅಂತು ಶೋಕಂಗೆಯೊಡೆ ನೀಮಂತನಲ್ವೇಡ ಕ್ಷತ್ರಿಯಧರ್ಮಮಿಂತರ್ದಲ್ವೇಡ ಬೀಡಿಂಗೆ ಪೋಗಿಮೆಂದೊಡೆ ಮಹಾಪ್ರಸಾದಮಂತೆ ಗೆಲ್ವಮೆಂದನಿಬರುಮೆಆಗಿ ಪೊಡೆವಟ್ಟು ಪೋದರಾಗಳ್ ದುರ್ಯೋಧನಂ ಬಂದು ಪೊಡೆವಟ್ಟು
ಚoll ಇತಿವುದನಾಂತ ಮಾರ್ವಲಮನಿನ್ನೆಗಮಚ್ಚರಿಯಾಗೆ ತಾಗಿ ತ ಆಟದಿರಿದೊಂದವಸ್ಥೆ ನಿಮಗೆನ್ನಯ ಕರ್ಮದಿನಾದುದೆಂದೊಡಿಂ | ಮರೆವುದು ಕಂದ ಪಾಂಡವರ ವೈರಮನೆನ್ನೊಡವೋಕೆ ಕೋಪಮುಂ ಕಲುಪುಮೊಡಂಬಡೇವುದದನಿನ್ನುಮೊಡಂಬಡು ಸಂಧಿಮಾಡುವಂ || ೪೯ ವ|| ಎಂಬುದುಂ ದುರ್ಯೋಧನನಿಂತೆಂದಂ
ಶರೀರದಿಂದ ತೊಲಗಿಹೋಗುವ ಜೀವವನ್ನು ಹೋಗುವುದಕ್ಕೆ ಅವಕಾಶ ಕೊಡದೆ ಸ್ಟೇಚ್ಛಾಮರಣಿಯಾದುದರಿಂದ ಉತ್ತರಾಯಣವು ಬರುವವರೆಗೆ ಇರಿಸಿದನು. ಆಗ ಕೌರವಸೈನ್ಯವೆಲ್ಲವೂ ಕುರುಬಲವೆಂಬ ಕಾಡಿಗೆ ಸಿಂಹದೋಪಾದಿಯಲ್ಲಿದ್ದ ಭೀಷ್ಮನು ಶರಪಂಜರದಲ್ಲೊರಗಿದನು, ಇನ್ನು ನಮ್ಮನ್ನು ರಕ್ಷಿಸುವವರಾರು ಎಂದು ನಿಧಾನವಾಗಿ ನುಡಿದು ಓಡಿ ಬೀಡನ್ನು ಸೇರಿತು. ಧರ್ಮರಾಜನು ತನ್ನ ತಮ್ಮಂದಿರೊಡನೆ ಬಂದು ಪ್ರದಕ್ಷಿಣೆ ಮಾಡಿ ಭೀಷ್ಮರ ಕಾಲ ಮೇಲೆ ಕವಿದುಬಿದ್ದು ಅತ್ತನು. ೪೮. ತಬ್ಬಲಿಗಳಾದ ನಮ್ಮನ್ನು ದಯೆಯಿಂದ ತಾಯಿಯ ಹಾಗೆ ಸಾಕಿದ ಅಜ್ಜರಾದ ನೀವು ಈ ಸ್ಥಿತಿಯಲ್ಲಿರುವುದನ್ನು ನೋಡಿದೆವು. ನಮಗೆ ಎಂತಹ ಅರಸಿಕೆಯೋ ಹೇಳಿ ಎಂದು ದುಃಖಪಟ್ಟನು. ವ| 'ನೀವು ಹಾಗೆ ಹೇಳಬೇಡಿ; ಕ್ಷತ್ರಧರ್ಮವೇ ಹಾಗೆ; ಬೀಡಿಗೆ ಹೋಗಿ' ಎನ್ನಲು 'ಮಹಾಪ್ರಸಾದ ಹಾಗೆಯೇ ಮಾಡುತ್ತೇವೆ' ಎಂದು ಎಲ್ಲರೂ ಎರಗಿ ನಮಸ್ಕಾರ ಮಾಡಿ ಹೋದರು. ಆಗ ದುರ್ಯೋಧನನು ಬಂದು `ನಮಸ್ಕಾರಮಾಡಿ ಹೇಳಿದನು. ೪೯. 'ಪ್ರತಿಭಟಿಸಿದ ಪರಪಕ್ಷವನ್ನು ಇಲ್ಲಿಯವರೆಗೆ ಆಶ್ಚರ್ಯವಾಗುವ ಹಾಗೆ ತಗುಲಿ ಕೂಡಿಕೊಂಡು ಕತ್ತರಿಸಿದಿರಿ. ಈಗ ಈ `ಶರಶಯನದಲ್ಲಿ ಮಲಗುವ ದುರವಸ್ಥೆಯು ನನ್ನ ಪುರಾತನ ಕರ್ಮದಿಂದಾಯಿತು ಎನ್ನಲು ಭೀಷ್ಮನು 'ಮಗು, ಪಾಂಡವರ ಮೇಲಿನ ದ್ವೇಷವನ್ನು ಇನ್ನು ಮೇಲಾದರೂ ಬಿಡು. ಕೋಪವೂ ದ್ವೇಷವೂ ನನ್ನೊಡನೆ ಹೋಗಲಿ; ವೈರದಿಂದೇನು ಪ್ರಯೋಜನ? ನೀನು ಒಪ್ಪುವವನಾಗು ಸಂಧಿಯನ್ನು ಮಾಡುತ್ತೇನೆ. ವ|| ಎನ್ನಲು ದುರ್ಯೊಧನನು
Page #523
--------------------------------------------------------------------------
________________
೫೧೮ | ಪಂಪಭಾರತ ಚಂ|| ಆದಟನಳುರ್ಕೆಯಂ ಬಲದಳುರ್ಕೆಯುಮಂ ಗಡೆಗೊಂಡು ನೀಮಿದಾ
ವುದು ಪಡೆಮಾತನಿಂತು ನುಡಿದಿರ್ ಪುದುವಾಳಿಯೊಳನ್ನ ಬಳಿದ ಆ್ಯದ ಬಗೆಗಂಡಿರೇ ಮಗನೆ ನೀಂ ಪಗೆಯಂ ತಳದೊಟ್ಟು ನೆಟ್ಟನೆ
ನದ ಬಗೆಗೆಟ್ಟು ದಾಯಿಗಳಿಂ ಮಗುಟ್ಟುಂ ಪುದುವಟ್ಟುದೆಂಬಿರೇ ||೫೦
ವ|| ಎಂಬುದುಮಿಲ್ಲಿಂದಂ ಮೇಲಾದ ಕಜ್ಜಮಂ ನೀನೆ ಬಲೆ ಬೀಡಿಂಗೆ ಬಿಜಯಂಗೆಯ್ಕೆಮೆನೆ ಪೊಡೆವಟ್ಟು ಸುಯೋಧನಂ ಪೋದನಾಗಳ್ಚಂ|| ನರದ ವಿರೋಧಿನಾಯಕರನಾಹವದೊಳ್ ತಳೆದೊಟ್ಟಲೊಂದಿದೆ
ಡ್ಕುರುಳ್ಳಿನಮಾ ಗುಣಾರ್ಣವನಡುರ್ತಿದಲ್ಲಿ ಸಿಡಿ ನೆತ್ತರೊಳ್ | ಪೊರದು ನಿರಂತರಂ ಪೊಲಸು ನಾಚುವ ಮೆಯ್ಯನೆ ಕರ್ಚಲೆಂದು ಚೆ
ಚರಮಪರಾಂಬುರಾಶಿಗಿಟಿವಂತಿಲೆದಂ ಕಮಳ್ಳೆಕಬಾಂಧವಂ ||
ವ|| ಆಗಳ್ ದುರ್ಯೋಧನನಾಯ ಸೇನಾನಾಯಕನಪ್ಪ ಗಾಂಗೇಯಂ ಬಿದಿರ ಸಿಡಿಂಬಿನ ಪೊದಳೊಳಗೆ ಮಜದೋಣಗಿದ ಮೃಗರಾಜನಂತ ಶರಶಯನದೊಳೊಗಿದಂ ಕದನತ್ರಿಣೇತ್ರನನೆಂತು ಗೆಲ್ವೆನೆಂದು ಚಿಂತಿಸಿ ಮಂತ್ರಶಾಲೆಯಂ ಪೊಕ್ಕು ಕರ್ಣ ದ್ರೋಣ ಕೃಪ ಕೃತವರ್ಮಾಶ್ವತ್ಥಾಮ ಶಲ್ಯ ಶಕುನಿ ಸೈಂಧವ ಭೂರಿಶ್ರವಃ ಪ್ರಕೃತಿಗಳೆಲ್ಲಂ ಬಲೆಯನಟ್ಟಿ ಬರಿಸಿಶಾ!! ಆಯ್ಕೆ ಸಾಧಿಸಿಕೊಂಡು ಪಾಂಡುಸುತರಂ ನಗ್ನೆಂಗೆ ಬೆನ್ನಿತ್ತು ದಲ್
ಸಯಾಯ್ತಜ್ಜನ ಮಾತು ನಮ್ಮ ಪಡೆಯಂ ಕಾವನ್ನರಿನ್ನಾರೊ ಸು | ಪ್ರೀತಂ ಕಾವೊಡೆ ಕರ್ಣನುಮದಲಿಂ ನಾಮೆಲ್ಲಮಾತಂಗೆ ನಿ| ರ್ದೈತಂ ಬೀರದ ಬೀರವಟ್ಟಮನಿದಂ ನಿರ್ವ್ಯಾಜದಿಂ ಕಟ್ಟುವಂ
ಹೀಗೆಂದನು-೫೦, ಪರಾಕ್ರಮದ ಅತಿಶಯವನ್ನೂ ಸೈನ್ಯದ ಆಧಿಕ್ಯವನ್ನೂ ಒಟ್ಟಿಗೇ ಹೊಂದಿ ನೀವು 'ಕೂಡಿ ಬಾಳಿ' ಎಂಬ ಈ ಪ್ರತಿಮಾತನ್ನು (ಉಪದೇಶವನ್ನು) ಈ ರೀತಿ ನುಡಿದಿರಿ. ನನ್ನ ಅಳುಕಿದ ಹೆದರಿದ ಮನಸ್ಸನ್ನೇನಾದರೂ ಕಂಡಿರೇನು? ಮಗನೆ ನೀನು ನೇರವಾಗಿ ಶತ್ರುವನ್ನು ಕತ್ತರಿಸಿ ರಾಶಿಮಾಡು ಎಂದು ಹೇಳದೆ ಜ್ಞಾತಿಗಳಲ್ಲಿ ಇನ್ನೂ ಕೂಡಿ ಬಾಳು ಎನ್ನುವುದೇ ? ವ|| ಎನ್ನಲು 'ಇನ್ನು ಇದಕ್ಕಿಂತಲೂ ಉತ್ತಮವಾದ ಕಾರ್ಯವನ್ನು (ಇನ್ನು ಮೇಲಾಗಬೇಕಾದ ಕಾರ್ಯವನ್ನು) ನೀನೇ ಬಲ್ಲೆ, ಬೀಡಿಗೆ ಹೊರಡು' ಎನ್ನಲು ನಮಸ್ಕಾರಮಾಡಿ ದುರ್ಯೋಧನನು ಹೋದನು. ೫೧. ಒಟ್ಟುಗೂಡಿದ ಶತ್ರುನಾಯಕರನ್ನು ತರಿದು ಯುದ್ಧದಲ್ಲಿ ರಾಶಿ ಮಾಡಲು ಸೇರಿದ್ದ ಆ ಸೈನ್ಯದ ರಾಶಿಯು ಉರುಳುವಂತೆ ಅರ್ಜುನನು ಸಮೀಪಕ್ಕೆ ಬಂದು ಇರಿದಾಗ ಸಿಡಿದ ರಕ್ತದಿಂದ ಲೇಪನಗೊಂಡು ಯಾವಾಗಲೂ ದುರ್ನಾತ ಹೊಡೆಯುತ್ತಿದ್ದ ತನ್ನ ಶರೀರವನ್ನು ತೊಳೆಯಬೇಕೆಂದು ಸೂರ್ಯನು ಜಾಗ್ರತೆಯಾಗಿ ಪಶ್ಚಿಮಸಮುದ್ರಕ್ಕೆ ಇಳಿದನೋ ಎಂಬಂತೆ ಸೂರ್ಯನು ಮುಳುಗಿದನು. ವ|| ಆಗ ದುರ್ಯೊಧನನು ತನ್ನ ಸೇನಾನಾಯಕನಾದ ಭೀಷ್ಕನು ಬಿದಿರ ಮೆಳೆಯ ಪೊದರಿನಲ್ಲಿ ಮರೆತು ಮಲಗಿದ ಸಿಂಹದಂತೆ ಶರಶಯನದಲ್ಲಿ ಮಲಗಿದನು. ಅರ್ಜುನನನ್ನು ಹೇಗೆ ಗೆಲ್ಲಲಿ ಎಂದು ಚಿಂತಿಸಿ ಮಂತ್ರಶಾಲೆಯನ್ನು ಪ್ರವೇಶಮಾಡಿ ಕರ್ಣ, ದ್ರೋಣ, ಕೃಪ, ಕೃತವರ್ಮ, ಅಶ್ವತ್ಥಾಮ, ಶಲ್ಯ, ಶಕುನಿ, ಸೈಂಧವ, ಭೂರಿಶ್ರವನೇ ಮೊದಲಾದವರಿಗೆಲ್ಲ ದೂತರನ್ನು ಕಳುಹಿಸಿ ಬರಮಾಡಿದನು. ೫೨. ಪಾಂಡವರನ್ನು ಗೆದ್ದುದಾಯಿತೇ? ಬಾಂಧವ್ಯಕ್ಕೆ
Page #524
--------------------------------------------------------------------------
________________
ಏಕಾದಶಾಶ್ವಾಸಂ /೫೧೯ ವ|| ಎಂಬುದುಂ ಕರ್ಣನಿಂತೆಂದಂಮ|| ಸುರಸಿಂಧೂದ್ಭವನಿಂ ಬಚೆಕ್ಕೆ ಪೆರಾರ್ ಸೇನಾಧಿಪತ್ಯಕ್ಕೆ ತ
ಕರೆ ಲೋಕೈಕ ಧನುರ್ಧರಂ ಕಳಶಜಂ ತಕ್ಕಂ ನದೀನಂದನಂ | ಗೆ ರಣಕ್ಕಾಂ ನೆರವಾದೆನಪ್ರೊಡಿನಿತೇಕಾದಪ್ಪುದೀ ಪೊಲಿ ಪೊ
ಟಿರವೇಡೀವುದು ಬೀರವಟ್ಟಮನದಂ ದ್ರೋಣಂಗೆ ನೀಂ ಭೂಪತೀ || ೫೩ * ವ|| ಅಂತು ಭೀಷ್ಮಾದನಂತರಂ ದ್ರೋಣಯೆಂಬುದು ಪರಾಶರ ವಚನಮನೆ ಕರ್ಣನ ನುಡಿಗೊಡಂಬಟ್ಟುಕಂ| ವಿಸಸನ ರಂಗಕ್ಕಾನಿರೆ
ಬೆಸಗೊಳ್ಳುದೆ ಪರನೆಂದು ಜಯಪಟಹಂಗಳ | ದೆಸೆದೆಸೆಗೆಸವಿನೆಗಂ ಕ
ಟ್ಟಿಸಿಕೊಂಡು ಬೀರವಟ್ಟಮಂ ಕಳಶಭವಂ || ವಗಿ ಅಂತು ಕುಂಭಸಂಭವನನೇಕ ಶಾತಕುಂಭ ಕುಂಭಸಂಭ್ರತ ಮಂಗಳಗಂಗಾ ಜಲಂಗಳಿಂ ಪವಿತ್ರೀಕೃತಗಾತ್ರನಾಗಿ ಕೌರವಬಳಾಗ್ರಗಣ್ಯನಾಗಿರ್ದನಿತ್ತ ತದ್ವತ್ತಾಂತ ನೆಲ್ಲಮನಜಾತಶತ್ರು ಕೇಳು ಜನಾರ್ದನನೊಡನೆ ರಿಪುಬಳಮರ್ದನೋಪಾಯಮಂ ಸಮಕಟ್ಟುತಿರ್ಪನ್ನೆಗಂ -
ಆಶ್ರಯಕೊಟ್ಟು (ಸೋತು) ಅಜ್ಞನಾಡಿದ ಮಾತು ನೆಟ್ಟಗಾಯಿತಲ್ಲವೇ? ಇನ್ನು ಮೇಲೆ ನಮ್ಮ ಸೈನ್ಯವನ್ನು ರಕ್ಷಿಸುವವರಾರಿದ್ದಾರೆ. ರಕ್ಷಿಸುವುದಕ್ಕೆ ಸಮರ್ಥನಾದವನು ಈ ಕರ್ಣನೇ! ಆದುದರಿಂದ ನಾವೆಲ್ಲ ಎರಡನೆಯ ಮಾತಿಲ್ಲದೆ (ಸರ್ವಾನುಮತದಿಂದ) ಯಾವ ನೆಪವೂ ಇಲ್ಲದೆ ವೀರಪಟ್ಟವನ್ನು (ಸೇನಾಧಿಪತ್ಯವನ್ನು ಅವನಿಗೆ ಕಟ್ಟೋಣ ವ|| ಎನ್ನಲು ಕರ್ಣನು ಹೀಗೆಂದನು-೫೩. ಭೀಷ್ಮನಾದ ಮೇಲೆ ಸೇನಾಧಿಪತ್ಯಕ್ಕೆ ಯೋಗ್ಯರಾದವರು ಬೇರೆ ಯಾರಿದ್ದಾರೆ? ಯೋಗ್ಯರಾದವರಿರುವ ಪಕ್ಷದಲ್ಲಿ ಪ್ರಪಂಚದ ಬಿಲ್ದಾರರಲ್ಲೆಲ್ಲ ಅಗ್ರೇಸರನಾದ ದ್ರೋಣನೇ ಯೋಗ್ಯನಾದವನು. ನಾನು ಭೀಷ್ಮನಿಗೆ ಸಹಾಯಮಾಡಿದ್ದಿದ್ದರೆ ಹೀಗೇಕಾಗುತ್ತಿತ್ತು. ಈ ಹೊತ್ತೇ ಹೊತ್ತು (ಇದೇ ಸರಿಯಾದ ಕಾಲ), ಸಾವಕಾಶ ಮಾಡಬೇಡ; ದುರ್ಯೊಧನ, ವೀರಪಟ್ಟವನ್ನು ನೀನು ದ್ರೋಣನಿಗೆ ಕೊಡು, ವt 'ಭೀಷ್ಮನಾದ ಮೇಲೆ ದ್ರೋಣ ಎಂಬುದು ವ್ಯಾಸಋಷಿಗಳ ಮಾತು' ಎನ್ನಲು ಹಾಗೆಯೇ ಆಗಲಿ ಎಂದು ಕರ್ಣನ ಮಾತಿಗೆ ಒಪ್ಪಿದನು. ೫೪. ಯುದ್ಧರಂಗಕ್ಕೆ ನಾನಿರುವಾಗ ಬೇರೆಯವರನ್ನು ಪ್ರಶ್ನೆಮಾಡುವುದೇ (ವಿಚಾರಮಾಡುವುದೇ) ಎಂದು ಹೇಳುತ್ತ ಜಯಭೇರಿಗಳು ದಿಕ್ಕುದಿಕ್ಕುಗಳಲ್ಲಿಯೂ ಭೋರ್ಗರೆಯುತ್ತಿರಲು ದ್ರೋಣನು ವೀರಪಟ್ಟವನ್ನು ಕಟ್ಟಿಸಿಕೊಂಡನು. ವ|| ಹಾಗೆ ದ್ರೋಣಾಚಾರ್ಯನು ಅನೇಕ ಚಿನ್ನದ
ಕಲಶಗಳಲ್ಲಿ ತುಂಬಿಟ್ಟಿದ್ದ ಮಂಗಳ ಗಂಗಾಜಲದಿಂದ ಶುದ್ದಿ ಮಾಡಲ್ಪಟ್ಟ ಶರೀರ . ವುಳ್ಳವನಾಗಿ ಕೌರವಸೈನ್ಯದ ಮೊದಲಿಗನಾಗಿದ್ದನು. ಈ ಕಡೆ ಈ ವೃತ್ತಾಂತವನ್ನೆಲ್ಲ ಧರ್ಮರಾಯನು ಕೇಳಿ ಕೃಷ್ಣನೊಡನೆ ಶತ್ರುಸೈನ್ಯವನ್ನು ನಾಶಪಡಿಸುವ ಉಪಾಯವನ್ನು
Page #525
--------------------------------------------------------------------------
________________
೫೨೦ | ಪಂಪಭಾರತಂ ಮII ಅದಟಂ ಸಿಂಧುತನೂಭವಂ ವಿಜಯನೋಟ್ ಮಾರ್ಕೊಂಡಣಂ ಕಾದಲಾ
ಆದ ಬೆಂಬಿಡೆ ಕಾದಲೆಂದು ಬೆಸನಂ ಪೂಣಂ ಗಡಂ ದ್ರೋಣನಂ || ತರುವಂ ನೋಡುವೆನೆಂದು ಕಣ್ ತಣಿವಿನಂ ನೋಡಿ ಬರ್ಪಂತೆ ಬಂ
ದುದಯಾದ್ರೀಂದ್ರಮನೇಯ ಭಾನು ಪೊಮಟೊಟ್ಟಿತ್ತನೀಕಾರ್ಣವಂ || ೫೫
ವll ಆಗಲ್ ಪಾಂಡವ ಬಲದ ಸೇನಾನಾಯಕಂ ಧೃಷ್ಟದ್ಯುಮ್ಮನೊಡ್ಡಿದ ವಜ್ರವೂಹಕ್ಕೆ ಪದವೂಹಮನೊಡ್ಡಿ ತದ್ರೂಹದ ಮೊನೆಗೆ ವಂದುಮಂ || ಕ್ರಾಂ ॥ ಶೋಣಾಶ್ವಂಗಳ ರಜತ ರಥಮಂ ಪೊಡೆ ಕುಂಭಧ್ವಜಂ ಗೀ |
ರ್ವಾಣಾವಾಸಂಬರಮಡರೆ ಮಾತೊಡ್ಡು ದಲ್ ಸಾಲದ | ಬಾಣಾವಾಸಕ್ಕೆನುತುಮಳವಂ ಬೀಳುತುಂ ಬಿಲ್ ಜಾಣಂ
ದ್ರೋಣಂ ನಿಂದಂ ಮಸಗಿ ತಿರುಪುತ್ತೂಂದು ಕೂರಂಬನಾಗಳ್ || ೫೬ ಕoll ಆ ಸಕಳ ಧರಾಧೀಶರ
ಬೀಸುವ ಕುಂಚಮನ ಪಾರ್ದು ಬೀಸಲೊಡಂ ಕೆ | ಯೀಸಲೊಡಮಣಿದು ತಾಗಿದು ವಾಸುಕರಂ ಬೆರಸು ತಡೆಯದುಭಯ ಬಲಂಗಳ್||
೫೭ ವll ಅಂತು ಚಾತುರ್ದಂತವೊಂದೊಂದುತೋಳ್ ತಾಗಿ ತಳಿಟಿವಲ್ಲಿ ತಲೆಗಳ ಪಳೆಯೆ ಬರಿಗಳ್ ಮುಜೆಯ ತೊಡೆಗಳುಡಿಯ ಪುಣ್ಣಳ್ ಸುಲಿಯೆ
ಏರ್ಪಡಿಸಿದ್ದನು. ೫೫. ಪರಾಕ್ರಮಶಾಲಿಯಾದ ಭೀಷ್ಮನು ಅರ್ಜುನನನ್ನು ಪ್ರತಿಭಟಿಸಿ ವಿಶೇಷವಾಗಿ ಕಾದಲಾರದೆ ಬೆನ್ನು ತಿರುಗಿಸಲು ದ್ರೋಣನು ತಾನು ಕಾದುವೆನೆಂದು ಕಾರ್ಯವನ್ನು ಪ್ರತಿಜ್ಞೆ ಮಾಡಿದನಲ್ಲವೇ? ಅದನ್ನು ನೋಡಿಯೇಬಿಡುತ್ತೇನೆ ಎಂದು ಕಣ್ಣು ತೃಪ್ತಿಪಡುವವರೆಗೆ ನೋಡಲು ಬರುವ ಹಾಗೆ ಸೂರ್ಯನು ಉದಯ ಪರ್ವತವನ್ನೇರಿದನು. ಸೇನಾಸಮುದ್ರವು ಹೊರಟು ಚಾಚಿಕೊಂಡಿತು. ವ11 ಆಗ ಪಾಂಡವಸೈನ್ಯದ ಸೇನಾನಾಯಕನಾದ ಧೃಷ್ಟದ್ಯುಮ್ಮನು ಒಡ್ಡಿದ್ದ ವಜ್ರವ್ಯೂಹಕ್ಕೆ ಪ್ರತಿಯಾಗಿ ಪದ್ಮವ್ಯೂಹವನ್ನೊಡ್ಡಿ ಆ ವ್ಯೂಹದ ಮುಂಭಾಗಕ್ಕೆ ಬಂದು ೫೬. ಬೆಳ್ಳಿಯ ತೇರಿಗೆ ಕೆಂಪುಕುದುರೆಗಳನ್ನು ಹೂಡಿರಲು ಕಲಶದ ಚಿಹ್ನೆಯುಳ್ಳ ಬಾವುಟವು ದೇವಲೋಕದವರೆಗೆ ಹತ್ತಿರಲು, ಶತ್ರುಸೈನ್ಯವು ಈ ನನ್ನ ಬತ್ತಳಿಕೆಗೆ ಸಾಕಾಗು ವುದಿಲ್ಲವಲ್ಲವೇ ಎಂದು ಹೇಳಿ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತ ಬಿಲ್ಲಿನಲ್ಲಿ ಜಾಣನಾದ ದ್ರೋಣನು ರೇಗಿ ಒಂದು ಹರಿತವಾದ ಬಾಣವನ್ನು ಬೀಸುತ್ತ ನಿಂತು ಕೊಂಡನು. ೫೭. ಆ ರಾಜರುಗಳಲ್ಲಿ ಬೀಸುವ ಚವುರಿಗಳನ್ನೇ ನೋಡಿಕೊಂಡು ಕೈಬೀಸಿದೊಡನೆಯೇ ಎರಡುಸೈನ್ಯಗಳೂ ಅದನ್ನು ತಿಳಿದು ಸಾವಕಾಶಮಾಡದೆ ವೇಗದಿಂದ ಕೂಡಿ ತಾಗಿದುವು. ವ ಚತುರಂಗಬಲವೂ ಒಂದರೊಡನೊಂದು, ತಾಗಿ ಕೂಡಿಕೊಂಡು ಯುದ್ದಮಾಡುವಾಗ ತಲೆಗಳು ಹರಿದುವು, ಪಕ್ಕೆಗಳು
Page #526
--------------------------------------------------------------------------
________________
ಏಕಾದಶಾಶ್ವಾಸಂ | ೫೨೧
ಒಡನೆ ನಭಂಬರಂ ಸಿಡಿಲ್ವ ಪಂದಲೆ ಸೂಸುವ ಕಂಡದಿಂಡೆಗಳ ತೊಡರೆ ತೆರಳ ನೆತ್ತರ ಕಡಲ್ ನೆಣದೊಳೆಸಳ್ ಜಿಗಿಲಗು | ವಡರೆ ನಿರಂತರಂ ಪೊಳೆವ ಬಾಳುಡಿ ಸುಯ್ಯ ನವ ಪ್ರಣಂಗಳೊಳ್ ಪೊಡರೆ ಪೊದಟ್ಟುದದ್ಭುತ ಭಯಾನಕಮಾಹವ ರಂಗಭೂಮಿಯೊಳ್ ||೫೮ ವ|| ಆಗಳೆರಡುಂ ಬಲದ ಸೇನಾನಾಯಕರೊಂದೊರ್ವರೊಳ್ ಕಾದುವಾಗಳ್
ಚoll
ಕುಂಭಸಂಭವಂ ಧರ್ಮಪುತ್ರನ ಮೊನೆಯೊಳ್ ಭರಂಗೆಯು ಕಾದುವಾಗ
ವ|| ಧ್ವಜಮಂ ಖಂಡಿಸಿ ಪೂಣ್ಣು ಬಾಣದೊಳೆ ದೃಷ್ಟದ್ಯುಮ್ನನಂ ನೆಟ್ಟನೊ
ಟೂಜೆಯಿಂ ತೂಳ್ಳಿ ಶಿಖಂಡಿಯಂ ದ್ರುಪದನಂ ಕಾಯಿಂದಮೇಸಾಡಿ ಮಿ |' ಕು ಜವಂ ಕೊಲ್ವವೊಲಾತನಿಂ ಕಿಯರಂ ಪನ್ನೊರ್ವರು ಕೊಂದು ಮ 'ಜನಂ ಮಾಣದೆ ಕೊಂದನೊಂದೆ ಶರದಿಂ ನಿಶ್ಯಂಕನಂ ಶಂಕನಂ || ೫೯ ವ|| ಆಗಳ್ ಸಾಲ್ವಲ ದೇಶದರಸಂ ಚೇಕಿಂ ಪ್ರಳಯಕಾಲದ ಮೇಘಘಟೆಗಳೆನಿಸುವ ನೇಕಾನೇಕಪ ಘಟೆಗಳೆರಸರಸನಂ ಪೆರಿಗಿಕ್ಕಿ ಬಂದು ತಾಗಿದಾಗಳ್
ಕಂ।।
ಓರೊಂದ ಪಾರೆಯಂಬಿನೊ
ಊರೊಂದೆ ಗಜೇಂದ್ರಮುರುಳ ತೆಗೆನೆದೆ 1
ಚೋರಣದೊಳ್ ಚೇಕಿತ್ಸನ ನಾರುಮಗುರ್ವಿಸೆ ಘಟೋದ್ಭವಂ ತಟದಾರ್ದಂ ||
೬೦
ಮುರಿದುವು, ತೊಡೆಗಳು ಒಡೆದುವು, ಹುಣ್ಣುಗಳು ಬಿರಿದುವು-೫೮. ಒಡನೆಯೇ ಆಕಾಶದವರೆಗೂ ಸಿಡಿಯುವ ಹಸಿಯ ತಲೆಯೂ ಚೆಲ್ಲುವ ಮಾಂಸಖಂಡದ ಮುದ್ದೆ ಗಳೂ ಸಾಂದ್ರವಾದ ರಕ್ತಸಮುದ್ರದ ಕೊಬ್ಬಿನ ಒಳ್ಳೆಯ ಕೆಸರಿನಲ್ಲಿ ಅಂಟಿಕೊಂಡು ಭಯವನ್ನು ಹೆಚ್ಚಿಸುತ್ತಿರಲು, ಒಂದೇ ಸಮನಾಗಿ ಹೊಳೆಯುತ್ತಿರುವ ಕತ್ತಿಯ ಚೂರುಗಳು ದುಡಿಯುತ್ತಿರುವ ಹೊಸಗಾಯಗಳಲ್ಲಿ ಥಳಥಳಿಸುತ್ತಿರಲು ಯುದ್ಧಭೂಮಿ ಯಲ್ಲಿ ಆಶ್ಚರ್ಯವೂ ಭಯವೂ ವ್ಯಾಪಿಸಿದುವು. ವll ಆಗ ಎರಡು ಸೈನ್ಯದ ಸೇನಾ ನಾಯಕರೂ ಪರಸ್ಪರ ಕಾದುವಾಗ ದ್ರೋಣನು ಧರ್ಮರಾಜನೊಡನೆ ಆರ್ಭಟಮಾಡಿ ಕಾದಿದನು. ೫೯, ಬಾವುಟವನ್ನು ಕತ್ತರಿಸಿ ದೃಷ್ಟದ್ಯುಮ್ನನನ್ನು ಬಾಣಗಳಲ್ಲಿ ಹೂಳಿ ಶಿಖಂಡಿಯನ್ನು ನೇರವಾಗಿ ಪೌರುಷದಿಂದ ತಳ್ಳಿ ದ್ರುಪದನನ್ನು ಕೋಪದಿಂದ ಹೊಡೆದು ಮೀರಿ ಆತನ ತಮ್ಮಂದಿರಾದ ಹನ್ನೊಂದು ಜನರನ್ನೂ ಯಮನು ಕೊಲ್ಲುವ ಹಾಗೆ ಕೊಂದು ವಿರಾಟನ ಮಗನಾದ ಶಂಕಾರಹಿತನಾದ ಶಂಖನನ್ನು ಒಂದೇ ಬಾಣದಿಂದ ಕೊಂದು ಹಾಕಿದನು. ವll ಆಗ ಸಾಲ್ವಲದೇಶದ ಅರಸನಾದ ಚೇಕಿತ್ಸನು ಪ್ರಳಯಕಾಲದ ಮೋಡಗಳೆನಿಸುವ ಅನೇಕ ಆನೆಯ ಗುಂಪುಗಳನ್ನು ಕೂಡಿಕೊಂಡು ರಾಜನನ್ನು ಹಿಂದಿಕ್ಕಿ ಬಂದು ತಗುಲಿದನು. ೬೦. ಒಂದೊಂದು ಪಾರೆಯಂಬಿನಿಂದಲೇ ಒಂದೊಂದು ಆನೆಯುರುಳಲು ಹೆದೆಯನ್ನು ಕಿವಿಯವರೆಗೆ ಸೆಳೆದು ಹೊಡೆದು ಕ್ರಮವಾಗಿ ಎಲ್ಲರೂ ಭಯಪಡುವ ಹಾಗೆ ಚೇಕಿತ್ಸನನ್ನು ದ್ರೋಣನು ಕತ್ತರಿಸಿ ಆರ್ಭಟಮಾಡಿದನು.
Page #527
--------------------------------------------------------------------------
________________
೫೨೨) ಪಂಪಭಾರತಂ
ವl ಅಂತು ಪಾಂಡವ ಬಲಮೆಲ್ಲಮನಲ್ಲಕಲ್ಲೋಲಂ ಮಾಡಿ ಕಳಶಕೇತನನಜಾತಶತ್ರುವ ಪಿಡಿಯಲೆಯರ್ಷಾಗಲ್ಗ್ರ | ಕಾದಲ್ ಸಂಸಪ್ತಕರ್ಕಳ್ ಕರದೊಡವರ ಬೆನ್ನಂ ತಗುಟ್ಟಾದ ಕಾಯ್ಲಿಂ
ಕಾದುತ್ತಿರ್ಪಾತನಂತಾ ಕಳಕಳಮನದಂ ಕೇಳು ಭೋರೆಂದು ಬಂದ | ಚ್ಯಾ ದಿವ್ಯಾಸ್ತಂಗಳಿಂ ತಮ್ಮೊವಜರುಗಿಯ ತಮ್ಮಣ್ಣನ ಶೌರ್ಯದಿಂದಂ ಕಾದಂ ಮುಂ ಬಿಜ್ಜನಂ ಕಾದರಿಗನುಟಿದರಂ ಕಾವುದೇಂ ಚೋದ್ಯಮಾಯೇ 11೬೧
ವ|| ಆಗಳ್ ಮಾರ್ತಾಂಡಂ ಪ್ರಚಂಡಮಾರ್ತಾಂಡನ ಶರ ನಿಕರ ಸುರಿತ ಕಿರಣಂಗಳ ಕವಿಯ ತನ್ನ ಕಿರಣಂಗಳ್ ಮಸುಳಪರಜಳನಿಧಿಗಿಲೆದನಾಗಳೆರಡುಂ ಪಡೆಗಳಪಹಾರಡೂರ್ಯಂಗಳಂ ಬಾಜಿಸಿದಾಗಹರಿಣೀಪುತಂ || ಪಡೆಗಳೆರಡುಂ ಬೀಡಿಂಗಂ ತೆರಳು ನಗುತ್ತಿಯಂ
ಪಡೆದದರಂ ಮೆಚ್ಚುತ್ತುತ್ಸಾಹದಿಂ ಪೊಗಲುತ್ತು | ಛಡರೆ ನುಡಿಯುತಂತಿರ್ದಾದಿತ್ಯನಂದುದಯಾದಿಯ ತಡರೆ ಪೋಲಮಟ್ಕಾಗಳ್ ಬಂದೊಡ್ಡಿ ನಿಂದುವು ಕೋಪದಿಂ | ೬೨ ಕಂ! ಅಂತೊಡ್ಡಿ ನಿಂದ ಚಾತು
ರ್ದಂತಂ ಕೆಯ್ದಿಸುವನ್ನೆಗಂ ಸೈರಿಸದೋ | ರಂತೆ ಪಡೆದಿರುವಂತೆ ದಿ ಗಂತಾಂತಮನೆಮ್ಮೆ ಪರಿಯ ನೆತ್ತರ ತೋಜನೆಗಳ |
ವ|| ಪಾಂಡವಸೈನ್ಯವನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಚೆದುರಿಸಿ ದ್ರೋಣನು ಧರ್ಮರಾಜನನ್ನು ಹಿಡಿಯಲು ಬಂದನು. ೬೧. ಸಂಸಪಕರುಗಳು ತಮ್ಮೊಡನೆ ಕಾದಲು ಕರೆಯಲಾಗಿ ಅವರ ಬೆನ್ನಟ್ಟಿಹೋಗಿ ವಿಶೇಷಕೋಪದಿಂದ ಕಾದುತ್ತಿದ್ದ ಅರ್ಜುನನು ಆ ಕಳಕಳಶಬ್ದವನ್ನು ಕೇಳಿ ಭೋರೆಂದು ಬಂದು ಪ್ರಯೋಗಿಸಿದ ಶ್ರೇಷ್ಠವಾದ ಬಾಣಗಳಿಂದ ದ್ರೋಣಾಚಾರ್ಯರು ಹಿಮ್ಮೆಟ್ಟಿಸಲು ಅರ್ಜುನನು ತಮ್ಮಣ್ಣನಾದ ಧರ್ಮರಾಜನನ್ನು ಪರಾಕ್ರಮದಿಂದ ರಕ್ಷಿಸಿದನು. ಮೊದಲು ವಿಜಯಾದಿತ್ಯನನ್ನು ರಕ್ಷಿಸಿದವನಿಗೆ ಉಳಿದವರನ್ನು ರಕ್ಷಿಸುವುದೇನು ಆಶ್ಚರ್ಯವೇ ? ವ! ಆಗ ಸೂರ್ಯನು ಪ್ರಚಂಡಮಾರ್ತಾಂಡನಾದ ಅರ್ಜುನನ ಬಾಣರಾಶಿಯ ಪ್ರಕಾಶಮಾನವಾದ ಕಿರಣಗಳಿಂದ ನಿಸ್ತೇಜವಾಗಿ ಪಶ್ಚಿಮಸಮುದ್ರಕ್ಕಿಳಿದನು. ಆಗ ಎರಡುಸೈನ್ಯಗಳೂ ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವೆ ವಾದ್ಯಗಳನ್ನು ಬಾಜಿಸಿದುವು. ೬೨. ಸೈನ್ಯಗಳೆರಡೂ ತಮ್ಮ ಪಾಳೆಯಗಳ ಕಡೆಗೆ ಹೋಗಿ (ಸೇರಿ) ಖ್ಯಾತಿಯನ್ನು ಪಡೆದು ಸತ್ತವರನ್ನು ಉತ್ಸಾಹದಿಂದ ಮೆಚ್ಚಿ ಹೊಗಳುತ್ತ ಸದ್ಗುಣವು ಪ್ರಕಾಶವಾಗುವ ಹಾಗೆ ಮಾತನಾಡುತ್ತ ಸೂರ್ಯನು ಉದಯಪರ್ವತವನ್ನೇರಲು ಹೊರಟು ಕೋಪದಿಂದ ಬಂದೊಡ್ಡಿ ನಿಂದವು. ೬೩. ಹಾಗೆ ಬಂದೊಡ್ಡಿ ನಿಂತ ಚತುರಂಗಸೈನ್ಯವು (ಯುದ್ಧಸೂಚಕವಾದ) ಕೈಬೀಸುವಷ್ಟರವರೆಗೂ ಸೈರಿಸದೆ ಒಂದೇಸಮನಾಗಿ ಹೆಣೆದುಕೊಂಡು ರಕ್ತಪ್ರವಾಹವು ದಿಗಂತದ ಕೊನೆಯನ್ನು ಸೇರಿ ಹರಿಯುವ ಹಾಗೆ
Page #528
--------------------------------------------------------------------------
________________
೬೪
ಏಕಾದಶಾಶ್ವಾಸಂ | ೫೨೩ ಅಚಿದ ಬಿಲ್ವಡೆ ಮಾಣದೆ ತಟ್ಟಿದ ರಥಮೆಯ ಬಗಿದ ಪುಣ್ಯಳ ಪೊಜತೆಯಿಂ | ಮೋಬೈದ ಕರಿ ಘಟೆ ಜವನಡು
ವಯನನುಕರಿಸೆ ವೀರ ಭಟ ರಣರಂಗಂ || ವ|| ಆಗಳ್ ದೃಷ್ಟಕೇತು ವೃಷಸೇನನೊಳ್ ಸಾತ್ಯಕಿ ಭಗದತ್ತನೊಳ್ ದ್ರುಪದ ಧೃಷ್ಟದ್ಯುಮ್ಮರಿರ್ವರುಂ ದ್ರೋಣಾಚಾರ್ಯನೊಳ್ ಪ್ರತಿವಿಂಧ್ಯಂ ಸೌಬಲನೊಳ್ ಘಟೋತ್ಕಚಂ ಕರ್ಣನೋಳ್ ಪೆಣೆದು ಕಾದೆಚಂti ಪೊಸಮಸೆಯಂಬುಗಳ್ ದಸೆಗಳಂ ಮಸುಳ್ಳನ್ನೆಗಮೆಮ್ಮೆ ಪಾಯೆ ಪಾ
ಯಿಸುವ ರಥಂಗಳಾ ರಥದ ಕೀಲುಣಿದಾಗಳೆ ಕೆಯ್ಯನಲ್ಲಿ ಕೋ | ದೆಸಗುವ ಸೂತರಂಬು ಕೊಳೆ ಸೂತರುರುಳುಮಿಳಾತಳಕ್ಕೆ ಪಾ
ಯಸಿಯೊಳೆ ತಾಗಿ ತಳಿವ ನಿಚ್ಚಟಗೊಪ್ಪಿದರಾಜಿರಂಗದೊಳ್ || ೬೫
ವ|| ಆಗಳ ಕಳಿಂಗರಾಜನ ಗಜಘಟೆಗಳನಿತುಮೊಂದಾಗಿ ಭೀಮಸೇನನ ರಥಮಂ ವಿಳಯ ಕಾಳ ಜಳಧರಂಗಳೆಲ್ಲದೊಂದಾಗಿ ಕುಲಗಿರಿಯಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್ ಮll. ರಥದಿಂ ಧಾತ್ರಿಗೆ ಪಾಯ್ದು ಕೊಂಡು ಗದೆಯಂ ಕೆಯ್ದಾರ್ದುದಗ್ನನನೋ
ರಥಮಿಂದೆಂದು ಕಡಂಗಿ ಮಾಣದೆ ಸಿಡಿಲ್ ಪೊಯ್ಕಂತೆವೋಲ್ ಪೊಯ್ಯುದುಂ | ರಥಯೂಥ ಧ್ವಜ ಶಸ್ತ್ರ ಶಂಖಪುಟದೊಳ್ ಘಂಟಾಸಮೇತಂ ಮಹಾ ರಥನಿಂದಂ ಕುಳಶೈಳದಂತೆ ಕರಿಗಳ್ ಬೀಚಿಂದುವುಗ್ರಾಜಿಯೊಳ್ || ೬೬
ಯುದ್ಧಮಾಡಿದುವು. ೬೯. ವೀರಭಟ ರಣರಂಗವು ನಾಶವಾದ ಬಿಲ್ದಾರರ ಸೈನ್ಯದಿಂದಲೂ ತಪ್ಪದೆ ತಗ್ಗಿದ ರಥದಿಂದಲೂ ಅದರುವ ಹುಣ್ಣುಗಳ ಭಾರದಿಂದಲೂ ಕುಗ್ಗಿದ ಆನೆಗಳ ಸಮೂಹದಿಂದಲೂ ಯಮನು ಅಡುಗೆಮಾಡುವ ಅಡುಗೆಯ ಮನೆಯನ್ನು ಹೋಲುತ್ತಿತ್ತು. ವ|| ಆಗ ಧೃಷ್ಟಕೇತುವು ವೃಷಸೇನನಲ್ಲಿಯೂ ಸಾತ್ಯಕಿಯು ಭಗದತ್ತನಲ್ಲಿಯೂ ದ್ರುಪದ ಧೃಷ್ಟದ್ಯುಮ್ಮರಿಬ್ಬರೂ ದ್ರೋಣಾಚಾರ್ಯನಲ್ಲಿಯೂ ಪ್ರತಿವಿಂದ್ಯನು ಶಕುನಿಯಲ್ಲಿಯೂ ಘಟೋತ್ಕಚನು ಕರ್ಣನಲ್ಲಿಯೂ ಹೆಣೆದುಕೊಂಡು ಕಾದಿದರು. ೬೫. ಹೊಸದಾಗಿ ಮಸೆದ ಬಾಣಗಳೂ, ದಿಕ್ಕುಗಳನ್ನೆಲ್ಲ ಮಲಿನಮಾಡುವ ರೀತಿಯಲ್ಲಿ ವ್ಯಾಪಿಸಲು ಚೋದಿಸುತ್ತಿದ್ದ ರಥಗಳೂ, ಆ ರಥಗಳ ಕೀಲು ಮುರಿದೊಡನೆ ತಮ್ಮ ಕೈಗಳನ್ನೇ ಆ ಕೀಲಿನ ಸ್ಥಾನದಲ್ಲಿ ಪೋಣಿಸಿ ರಥವನ್ನು ನಡೆಸುತ್ತಿದ್ದ ಸಾರಥಿಗಳೂ, ಪ್ರತಿಪಕ್ಷದಿಂದ ಬಂದ ಬಾಣಗಳು ತಮ್ಮ ಶರೀರದಲ್ಲಿ ನಾಟಲು ಸೂತರು ನೆಲಕ್ಕೆ ಉರುಳಿದರೂ ರಥದಿಂದ ನೆಲಕ್ಕೆ ನೆಗೆದು ಕತ್ತಿಯಿಂದ ಘಟ್ಟಿಸಿ (ಪರಸೈನ್ಯವನ್ನು) ಪ್ರತಿಭಟಿಸಿ ಸೈರ್ಯದಿಂದ ಹೋರಾಡುವ ಯೋಧಾಗ್ರೇಸರರೂ ಯುದ್ಧರಂಗದಲ್ಲಿ ಶೋಭಿಸಿದರು. ವ|| ಆಗ ಕಳಿಂಗರಾಜನ ಆನೆಯ ಸಮೂಹವನ್ನೂ ಒಂದಾಗಿ ಭೀಮಸೇನನ ತೇರನ್ನು ಪ್ರಳಯಕಾಲದ ಮೋಡಗಳೆಲ್ಲ ಒಂದಾಗಿ ಕುಲಪರ್ವತವನ್ನು ಮುತ್ತುವಂತೆ ಸುತ್ತಿ ಮುತ್ತಿದುವು. ೬೬. ಭೀಮಸೇನನು ರಥದಿಂದ ಭೂಮಿಗೆ ಹಾರಿ ಗದೆಯನ್ನೆತ್ತಿಕೊಂಡು 'ನನ್ನ ಇಷ್ಟಾರ್ಥ ಈದಿನ ಕೈಗೂಡಿತು' ಎಂದು ಉತ್ಸಾಹಿಸಿ
Page #529
--------------------------------------------------------------------------
________________
೫೨೪ | ಪಂಪಭಾರತಂ ಮ|| ಮದವದ್ದಂತಿಗಳಂ ಕಲುತ್ರಸಗವೊಯ್ಯೋ ಯಾಜಿಯೊಳ್ ಭೀಮನಾ
ರ್ದೊದೆದೀಡಾಡಿದೊಡತ್ತಜಾಂಡ ತಟಮಂ ತಾಪನ್ನೆಗಂ ಪಾಳಿ ತಾ | ಆದ ಪೇರಾನೆಯೊಡಳಭೂತಳದೊಳ್ ಸಿಲಿರ್ದುವೋರೊಂದು ಮಾ |
ಣದೆ ಬೀರ್ಪುವು ಬಿಟ್ಟು ಬಿಟ್ಟ ತೆದಿಂದಿನ್ನುಂ ಕುರುಕ್ಷೇತ್ರದೊಳ್ ||೬೭ ಕ೦ll ತೊಡರೆ ತಡಂಗಾಲ್ ಪೊಯೊಡೆ
ಕೆಡೆದುಂ ತಿವಿದೊಡೆ ಸುರುಳು ಮೋದಿದೊಡಿರದೆ ಲ್ವಡಗಾಗಿ ಮಡಿದು ಬಿಟ್ಟುವು ಗಡಣದ ಕರಿಘಟೆಗಳೇಂ ಬಲಸ್ಥನೊ ಭೀಮಂ ||
೬೮ ವ|| ಅಂತಲ್ಲಿ ಹದಿನಾಲ್ಕಾಸಿರ ಮದದಾನೆಯುಮಂ ಕಳಿಂಗನಾಯಕಂ ಭಾನುದತ್ತಂ ಮೊದಲಾಗೆ ನೂರ್ವರರಸುಮಕ್ಕಳುಮಂ ಕೊಂದೊಡೆ ಕೌರವಬಲಮೆಲ್ಲಮೆಲ್ಲನುಲಿದೋಡಿ ಭಗದತ್ತನಾನೆಯ ಮತಯಂ ಪೊಕ್ಕಾಗಲ್ಮ|| ಸ | ನೆಗಂ ದೇವೇಂದ್ರರಾವತದ ಕೆಳೆಯನನ್ನೇಟಿದೀಯಾನೆಯುಂ ದಲ್
`ದಿಗಿಭಂ ದುರ್ಯೊಧನಂ ನಚ್ಚಿದನೆನಗಿದಿರಂ ಭೀಮನೆಂದನೀಗಲ್ | ಮುಗಿಲ೦ ಮುಟ್ಟಿತ್ತು ಸಂದೆನ್ನಳವುಮದಟುಮಂದಾರ್ದು ದೂರ್ದರಯುಕಂ ಭಗದತ್ತಂ ಸುಪ್ರತೀಕದ್ವಿಪಮನುಪಚಿತ್ರೋತ್ಸಾಹದಿಂ ತೋಟೆಕೊಟ್ಟಂ ಗೆ ೬೯
ತಡಮಾಡದೆ ಸಿಡಿಲು ಹೊಡೆಯುವ ಹಾಗೆ ಹೊಡೆಯಲು ರಥಗಳ ಸಮೂಹ, ಬಾವುಟಗಳು, ಆಯುಧಗಳು ಇವುಗಳ ಪರಸ್ಪರ ತಾಕಲಾಟದಲ್ಲಿ ಕತ್ತಿನ ಗಂಟೆಯೊಡನೆ ಆನೆಗಳು ಆ ಘೋರಯುದ್ದದಲ್ಲಿ ಕುಲಪರ್ವತಗಳ ಹಾಗೆ ಕೆಳಕ್ಕೆ ಬಿದ್ದವು. ೬೭. ಸೊಕ್ಕಿದ ಆನೆಗಳನ್ನು ಗುರಿಯಿಟ್ಟು ಅಗಸನು ಒಗೆಯುವ ಹಾಗೆ ಒಗೆದು ಆರ್ಭಟಮಾಡಿ ಭೀಮನು ಯುದ್ದದಲ್ಲಿ ಒದ್ದು ಎಸೆದನು. ಆ ಒಣಗಿದ ಹಿರಿಯಾನೆಯ ಶರೀರಗಳು ಬ್ರಹ್ಮಾಂಡದ ದಡವನ್ನು ತಗಲುವಷ್ಟು ದೂರ ಹಾರಿ ಮೋಡಗಳ ಪದರದ ಮಧ್ಯೆ ಸಿಕ್ಕಿದ್ದು ಅಲ್ಲಿಂದ ಬೆಟ್ಟಗಳು ಬೀಳುವ ಹಾಗೆ ಇನ್ನೂ ಕುರುಕ್ಷೇತ್ರದಲ್ಲಿ ಬೀಳುತ್ತಿವೆ. ೬೮. ಭೀಮನು ಅಡ್ಡಗಾಲಿಗೆ ಸಿಕ್ಕಿಸಿಕೊಂಡು ಒದೆದರೆ ಕೆಳಕ್ಕೆ ಬಿದ್ದೂ ತಿವಿದರೆ ಸುರುಳಿಕೊಂಡೂ ಗುದ್ದಿದರೆ ತಡವಿಲ್ಲದೆ ಎಲುಬು ಮಾಂಸಗಳಾಗಿಯೂ ಆನೆಗಳ ಸಮೂಹವು ರಾಶಿಯಾಗಿ ಬಿದ್ದವು. ಭೀಮನು ಎಷ್ಟು ಬಲಶಾಲಿಯೋ! ವll ಹಾಗೆ ಅಲ್ಲಿ ಹದಿನಾಲ್ಕು ಸಾವಿರ ಮದ್ದಾನೆಗಳನ್ನೂ ಕಳಿಂಗನಾಯಕನಾದ ಭಾನುದತ್ತನೇ ಮೊದಲಾದ ನೂರುಮಂದಿ ರಾಜಕುಮಾರರನ್ನೂ ಕೊಂದನು. ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಭಗದತ್ತನಾನೆಯ ಮರೆಯನ್ನು ಹೊಕ್ಕಿತು. ೬೯. ನಾನು ಪ್ರಖ್ಯಾತನಾದವನು; ನಾನು ಹತ್ತಿರುವ ಈ ಆನೆಯೂ ದೇವೇಂದ್ರನ ಐರಾವತದ ಸ್ನೇಹಿತ. ಹಾಗೆಯೇ ದಿಗ್ಗಜವೂ ಹೌದು. ನನ್ನನ್ನು ದುರ್ಯೋಧನನು ನಂಬಿಕೊಂಡಿದ್ದಾನೆ. ಈಗ ನನಗೆ ಭೀಮನೇ ಪ್ರತಿಭಟಿಸಿ ಬಂದಿದ್ದಾನೆ. ಈಗ ನನ್ನ ಪೌರುಷವೂ ಪರಾಕ್ರಮವೂ ಗಗನವನ್ನು ಮುಟ್ಟಿದೆ ಎಂದು ಆರ್ಭಟಮಾಡಿ ಬಾಹುಬಲದ ಅಹಂಕಾರದಿಂದ ಕೂಡಿದ ಭಗದತ್ತನು ಕೂಡಿಕೊಂಡಿರುವ ಉತ್ಸಾಹದಿಂದ ಸುಪ್ರತೀಕವೆಂಬ ಆನೆಯನ್ನು
Page #530
--------------------------------------------------------------------------
________________
ಏಕಾದಶಾಶ್ವಾಸಂ | ೫೨೫ ಕoll ಮದಕರಿಯ ಪರಿವ ಭರದಿಂ
ದದಿರ್ದೊಡೆ ನೆಲನೊಡ್ಡಿ ನಿಂದ ಚತುರಂಗಮುಮೋ | ರ್ಮೊದಲೆ ನಡುಗಿದುದು ಕೂಡಿದ
ಚದುರಂಗದ ಮಣೆಯನಲ್ಲಿದಂತಪ್ಪಿನೆಗಂ || . ೭೦ ವ|| ಆಗಳಸುರನುಯ ನೆಲನನಾದಿ ವರಾಹನಅಸಲೆಂದು ಸಕಳ ಜಳಚರಕಳಿತ ಜಳನಿಧಿಗಳಂ ಕಲಂಕುವಂತೆ ಪಾಂಡವ ಬಳ ಜಳನಿಧಿಯನಳಿಕುಳ ಝೇಂಕಾರ ಮುಖರಿತ ವಿಶಾಳ ಕರಟ ತಟಮಾ ದಿಶಾಗಜೇಂದ್ರಂ ಕಲಂಕೆಚಂ|| ತಳರ್ದುದು ಕರ್ಣತಾಳ ಪವನಾಹತಿಯಿಂ ಜಳರಾಶಿ ಕೆಯ್ಯ ಬ
ಧ್ವಳಿಕೆಗೆ ದಿಗ್ಗಜಂ ದೆಸೆಯಿನತ್ತ ತೆರಳುವು ಕಾಯ್ದಿನಿಂ ದಿಶಾ | ವಳಿವೆರಸಂಬರಂ ಪೊಗೆದು ಪೊತ್ತಿದುದಾದ ಮದಾಂಬುವಿಂ ಜಗಂ
ಜಳಧಿವೊಲಾಯ್ದಂ ನೆಲೆಯ ಬಣ್ಣಿಪರಾರ್ ಗಳ ಸುಪ್ರತೀಕಮಂ || ೭೧ ಚಂll ಕರ ನಖ ದಂತ ಘಾತದಿನುರುಳ ಚತುರ್ಬಲದಿಂ ತೆರಳ ನೆ
ತರ ಕಡಲಾ ಕಡಲ್ಕರೆಗಮಯ್ಯ ಮಹಾಮಕರಂ ಸಮುದ್ರದೊಳ್ | ಪರಿವವೋಲಿಂತಗುರ್ವುವೆರಸಾ ಭಗದತ್ತನ ಕಾಲೋಳಂತಂ
ಪರಿದುದೊ ಸುಪ್ರತೀಕ ಗಜಮಚ್ಚರಿಯಪ್ಪಿನಮಾಜಿರಂಗದೊಳ್ || ೭೨
ವ|| ಅಂತು ಪರಿದ ಬೀದಿಗಳೆಲ್ಲಂ ನೆತ್ತರ ತೊಳೆಗಳ ಪರಿಯ ಕೆಂಡದ . ತೊಜಯಂತೆ ಪರಿದ ಸುಪ್ರತೀಕಂ ಕೆಯ್ಯ ಕಾಲ ಕೋಡೇಟಿನೊಳ್ ಬಲಮನೆಲ್ಲಂ ಜವನೆ
ಸೈನ್ಯದ ಮುಂದುಗಡೆ ನೂಕಿದನು. ೭೦. ಆ ಮದ್ದಾನೆಯು ನಡೆಯುವ ವೇಗದಿಂದ ಭೂಮಿಯು ಅಲುಗಾಡಲು ಅದರ ಮೇಲೆ ನಿಂತಿರುವ ಚತುರಂಗ ಸೈನ್ಯವೂ ಕಾಯಿಗಳಿಂದ ಕೂಡಿದ ಚದುರಂಗದ ಮಣೆಯನ್ನು ಅಲುಗಾಡಿಸಿದಂತೆ ಇದ್ದಕ್ಕಿದ್ದ ಹಾಗೆ ಒಡನೆಯೇ ನಡುಗಿದವು. ವ|| ಆಗ ರಾಕ್ಷಸನಾದ ಹಿರಣ್ಯಾಕ್ಷನು ಎತ್ತಿಕೊಂಡು ಹೋದ ಭೂದೇವಿಯನ್ನು ಆದಿವರಾಹನಾದ ವಿಷ್ಣುವು ಹುಡುಕಬೇಕೆಂದು ಸಮಸ್ತ ಜಲಚರಗಳಿಂದ ತುಂಬಿದ ಸಮುದ್ರಗಳನ್ನು ಕಲಕಿದ ಹಾಗೆ ಪಾಂಡವಸೇನಾಸಮುದ್ರವನ್ನು ದುಂಬಿಗಳ ಝೇಂಕಾರಶಬ್ದದಿಂದ ಧ್ವನಿಮಾಡಲ್ಪಟ್ಟ ವಿಶಾಲವಾದ ಕಪೋಲಪ್ರದೇಶವುಳ್ಳ ಆ ದಿಗ್ಗಜವು ಕಲಕಿತು. ೭೧. ಅದು ಕಿವಿಯನ್ನು ಬೀಸುವುದರಿಂದುಂಟಾದ ಗಾಳಿಯ ಹೊಡೆತದಿಂದ ಸಮುದ್ರವು ಚಲಿಸಿತು. ಸೊಂಡಿಲಿನ ಬಲವಾದ ಬೀಸುವಿಕೆಗೆ ದಿಗ್ಗಜಗಳು ದಿಕ್ಕುಗಳಿಂದ ಆಚೆಗೆ ಹೋದುವು. (ಅದರ) ಕೋಪದಿಂದ ದಿಕ್ಕುಗಳ ಸಮೂಹದೊಡನೆ ಆಕಾಶವೂ ಹೊಗೆಯಿಂದ ಕೂಡಿ ಉರಿಯಿತು. ಸುರಿದ ಮದೋದಕದಿಂದ ಭೂಮಂಡಲವು ಸಮುದ್ರದ ಹಾಗಾಯಿತು. ಆ ಸುಪ್ರತೀಕವನ್ನು ಸಂಪೂರ್ಣವಾಗಿ ವರ್ಣಿಸುವವರಾರಿದ್ದಾರೆ? ೭೨. ಸೊಂಡಿಲು, ಉಗುರು, ದಂತಗಳ ಹೊಡೆತದಿಂದ ಉರುಳಿ ಬೀಳುವ ಚತುರಂಗ ಬಲದಿಂದ ಹೊರಡುವ ರಕ್ತಸಮುದ್ರವು ಆ ಸಮುದ್ರದವರೆಗೂ ಹರಿಯಲು ಸಮುದ್ರ ಮಧ್ಯೆ ಹರಿಯುವ ದೊಡ್ಡ ಮೊಸಳೆಯ ಹಾಗೆ ಭಯಂಕರತೆಯಿಂದ ಕೂಡಿ ಆ
Page #531
--------------------------------------------------------------------------
________________
೫೨೬ ) ಪಂಪಭಾರತಂ ಜಿವುಳಿದುವಂತೆ ತೊಟ್ಟುಳದುಟಿದು ಪದಿನಾಲ್ಕಾಸಿರ ಮದಾಂಧ ಗಂಧಸಿಂಧುರಂಗಳುಮನೊಂದು ಲಕ್ಕ ರಥಮುಮನರೆದು ಸಣ್ಣಿಸಿದಂತೆ ಮಾಡಿದಾಗಳ್ ಗಜಾಸುರನೊಳಾಸುರಂಬೆರಸು ತಾಗುವಂಧಕಾರಾತಿಯಂತೆ ಭೀಮಸೇನಂ ಬಂದು ಪೊಣರೆ- ಚಂll ತೊಲಗಿದು ಸುಪ್ರತೀಕ ಗಜಮಾಂ ಭಗದತ್ತನೆನಿಲ್ಲಿ ನಿನ್ನ ತೋ
ಊಲದ ಪೊಡರ್ಪು ಸಲ್ಲದಲೆ ಸಾಯದೆ ಪೋಗೆನೆ ಕೇಳು ಭೀಮನಾಂ | ತೊಲೆಯದಿರುರ್ಕಿನೊಳ್ ನುಡಿವೆಯೇ ಕರಿ ಸೂಕರಿಯಲ್ಲಿ ಪತ್ನಿ ಗಂ|
ಟಲನೊಡೆಯೊತ್ತಿ ಕೊಂದಪನಿದದಮ್ಮನುಮೆನ್ನನಾಂಫುದೇ || ೭೩
ವ|| ಎಂದು ನಾರಾಚಂಗಳಿಂ ತೋಡುಂ ಬೀಡುಂ ಕಾಣಲಾಗದಂತು ಸುಪ್ರತೀಕ ಕರಿಯೆಂಬ ಗಿರಿಯ ಮೇಲೆ ಭೀಮನೆಂಬ ಕಾಲಮೇಘಂ ಸರಲ ಸರಿಯಂ ಸುರಿಯೆಚಂ|| ಸಿಡಿಲೆಜಪಂದದಿಂದಾಗಿ ದಿಕ್ಕರಿ ತನ್ನ ವರೂಥಮಂ ಪಡ
ಡಿಸೆ ಮರುತ್ತುತಂ ಮುಳಿದು ಮಚ್ಚರದಿಂ ಗಜೆಗೊಂಡು ಸುತ್ತುಗೊಂ || ಡಡಿಗಿಡೆ ನುರ್ಗಿ ಪೊಯ್ಯು ಪಂಪಿಂಗುವುದುಂ ಕರಿ ನೊಂದು ಕೋಪದಿಂ ಪಿಡಿದಆಗಿತ್ತು ಭೀಮನನಗುರ್ವಿಸಿ ಪಾಂಡವ ಸೈನ್ಯಮಳ್ಳುಜಿಲೆ || ೭೪
ಭಗದತ್ತನು ನಡೆಸುತ್ತಿದ್ದ ಸುಪ್ರತೀಕವೆಂಬ ಆನೆಯು ಯುದ್ಧರಂಗದ ಮಧ್ಯೆ ಆಶ್ಚರ್ಯವಾಗುವ ಹಾಗೆ ನಿರಾಯಾಸವಾಗಿ ಹರಿಯಿತು! ವ ಹಾಗೆ ಓಡಿದ (ಪರಿದ) ಬೀದಿಗಳಲ್ಲೆಲ್ಲ ರಕ್ತನದಿಗಳು ಹರಿದುವು. ಕೆಂಡದ ಪ್ರವಾಹದಂತೆ ಹರಿಯುತ್ತಿರುವ ಸುಪ್ರತೀಕದ ಸೊಂಡಲಿನ, ಕಾಲಿನ, ಕೊಂಬಿನ ಪೆಟ್ಟಿನಿಂದ ಸೈನ್ಯವೆಲ್ಲವನ್ನು ಯಮನೇ ಚೂರ್ಣ ಮಾಡಿದಂತೆ (ಚಿಗುಳಿಯನ್ನು ತುಳಿದಂತೆ) ಸಂಪೂರ್ಣವಾಗಿ ತುಳಿದು ಹದಿನಾಲ್ಕು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳನ್ನೂ ಒಂದು ಲಕ್ಷ ರಥವನ್ನೂ ಅರೆದು ಪುಡಿಮಾಡಿತು. ಅದನ್ನು ನೋಡಿದ ಭೀಮನು ಗಜಾಸುರನೆಂಬ ರಾಕ್ಷಸನೊಡನೆ ರಭಸದಿಂದ ಕೂಡಿ ತಗಲುವ ಈಶ್ವರನಂತೆ ಬಂದು ಹೋರಾಡಿದನು-೭೩. (ಭಗದತ್ತನು ಭೀಮನನ್ನು ಕುರಿತು) ತೊಲಗು ಇದು ಸುಪ್ರತೀಕವೆಂಬ ಆನೆ. ನಾನೇ ಭಗದತ್ತ. ಇಲ್ಲಿ ನಿನ್ನ ತೋಳಿನ ಶಕ್ತಿಯ ಹಿರಿಮೆಯು ಸಲ್ಲುವುದಿಲ್ಲ. ಎಲವೋ ಸಾಯದೆ ಹೋಗು ಎಂದನು. ಅದನ್ನು ಕೇಳಿ ಭೀಮನು (ಎಲವೋ) ನಾನು 'ಭೀಮ; ಅಹಂಕಾರದಿಂದ ತೂಗಾಡಬೇಡ, ಗರ್ವದಿಂದ ಅಹಂಕಾರದಿಂದ ಮಾತನಾಡುತ್ತಿದ್ದೀಯೆ. ಈ ಆನೆಯು ನನಗೆ ಹಂದಿಗೆ ಸಮಾನ. ಇದರ ಮೇಲೆ ಹತ್ತಿ ಇದರ ಗಂಟಲನ್ನು ಅಮುಕಿ ಕೊಲ್ಲುತ್ತೇನೆ. ಇದಲ್ಲ ಇದರಪ್ಪನೂ ನನ್ನನ್ನು ಪ್ರತಿಭಟಿಸಬಲ್ಲುದೇ ? ವli ಎಂದು ಬಾಣಗಳನ್ನು ತೊಡುವುದೂ ಬಿಡುವುದೂ ಕಾಣದಂತೆ ಸುಪ್ರತೀಕಗಜವೆಂಬ ಬೆಟ್ಟದ ಮೇಲೆ ಭೀಮನೆಂಬ ಪ್ರಳಯಕಾಲದ ಮೋಡವು ಬಾಣದ ಮಳೆಯನ್ನು ಸುರಿಸಿತು. ೭೪. ದಿಗ್ಗಜವಾದ ಸುಪ್ರತೀಕವು ಸಿಡಿಲೆರಗುವ ವೇಗದಿಂದ ಎರಗಿ ತನ್ನ ತೇರನ್ನು ತಲೆಕೆಳಗುಮಾಡಲು ಭೀಮನು ಕೋಪಿಸಿಕೊಂಡು ಮತ್ಸರದಿಂದ ಗದೆಯನ್ನು ತೆಗೆದುಕೊಂಡು ಸುತ್ತಲೂ ಬಳಸಿ ಹೆಜ್ಜೆ ಕೆಡುವಂತೆ ನುಗ್ಗಿ ಹೊಡೆದು ಹಿಂದಕ್ಕೆ ಹೋದನು. ಆನೆಯು ವಿಶೇಷವಾಗಿ
Page #532
--------------------------------------------------------------------------
________________
ಏಕಾದಶಾಶ್ವಾಸಂ /೫೨೭ ವ! ಅಂತಗಿದೊಡೆ ಕೋಡಕೆಯ್ಯ ಕಾಲೆಡೆಗಳೊಳ್ ಬಿಣ್ಣುಮಂ ಪೆಣೆವಂದದಿಂದೇರ್ದು ಡೊಕ್ಕರಂಗೊಂಡು ಕುರುಕ್ಷೇತ್ರದಿಂದ ಪನ್ನೆರಡು ಯೋಜನಂಬರನೊತ್ತುವುದು
ಕಂ।। ಕರಿಯುಂ ಕುರುಭೂಮಿಯ ನಡು
ವರೆಗಂ ಪವನಜನನೊತ್ತೆ ತೋಳ್ವಲವಾಗಳ್ 1 ಸರಿ ಸರಿಯಾದುದು ತದ್ದಿ
ಕರಿಗಂ ಭೀಮಂಗಮುಗ್ರ, ಸಂಗರ ಧರೆಯೊಳ್ ||
2.99
ವ|| ಅನ್ನೆಗಮಿತ್ತ ಸಂಸಪಕಬಲಮೆಲ್ಲಮನಳತೆ ಪೆಳ ಕಿವುದುದು ಕೊಲ್ವ ವಿಕ್ರಾಂತತುಂಗಂ ಚಕ್ರಿಯನಿಂತೆಂದಂ
ಚoll ಪರಿದುದು ಸುಪ್ರತೀಕ ಗಜಮೇಳದವಂ ಭಗದತ್ತನಾಮದ
ದ್ವಿರದಮನಾಂಕೆಗೊಂಡು ಪೆಣೆವಂ ಪವನಾತ್ಮಜನೀಗಳಾಹವಂ | ಪಿರಿದುದಲತ್ತ ಪೋಪಮನ ತದ್ರಥಮಂ ಹರಿ ವಾಯುವೇಗದಿಂ ಪರಿಯಿಸೆ ತಾಗಿದಂ ಹರಿಗನಂಕದ ಪೊಂಕದ ಸುಪ್ರತೀಕಮಂ | 22
ವ! ಅಂತು ತಾಗಿ ಮೃಗರಾಜ ನಖರ ಮಾರ್ಗಣಂಗಳೊಳಂ ಕೂರ್ಮನಖಾಸ್ತ್ರಂಗಳೊಳ ಮಾನೆಯುಮಂ ಭಗದತ್ತನುಮಂ ಪೂಡ ಭಗದತ್ತ ಮುಳಿದು ಭೂದತ್ತಮಪ್ಪ ದಿವ್ಯಾಂಕುಶಮಂ ಕೊಂಡು
ಯಾತನೆಯನ್ನನುಭವಿಸಿ ಕೋಪದಿಂದ ಭೀಮನನ್ನು ಹೆದರಿಸಿ ಪಾಂಡವಸೈನ್ಯವು ಭಯಪಡುವ ಹಾಗೆ ಅವನನ್ನು ಹಿಡಿದು ಮೇಲೆ ಬಿದ್ದಿತು. ವ|| ಭೀಮನು ಆ ಆನೆಯ ಕೊಂಬು, ಸೊಂಡಿಲು ಕಾಲಿನ ಮಧ್ಯದಲ್ಲಿ ಭಾರವನ್ನು ಹೊರಳಿಸುವ ರೀತಿಯಿಂದ ಹತ್ತಿ ಡೊಕ್ಕರವೆಂಬ ಪಟ್ಟಿನಿಂದ ಆನೆಯನ್ನು ಕುರುಕ್ಷೇತ್ರದಿಂದ ಆ ಕಡೆಗೆ ಹನ್ನೆರಡುಯೋಜನದವರೆಗೆ ನೂಕಿದನು. ೭೫. ಆನೆಯೂ ಭೀಮನನ್ನು ಕುರುಭೂಮಿಯ ಮಧ್ಯದವರೆಗೆ ನೂಕಲು ಆಗ ಆ ಭಯಂಕರವಾದ ಯುದ್ಧರಂಗದಲ್ಲಿ ಬಾಹುಬಲ ಭೀಮನಿಗೂ ಆ ಆನೆಗೂ ಸರಿಸಮಾನವಾಯಿತು. ವ|| ಅಷ್ಟರಲ್ಲಿ ಸಂಸಪ್ತಕರ ಸೈನ್ಯವನ್ನೆಲ್ಲ ಹೆದರಿ ಬೆದರುವಂತೆ ಅಜ್ಜುಗುಜ್ಜಿಯಾಗುವ ಹಾಗೆ ತುಳಿದು ಕೊಲ್ಲುವ ಮಹಾಪರಾಕ್ರಮಿಯಾದ ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು. ೭೬. ಸುಪ್ರತೀಕವೆಂಬ ಆನೆಯು ಓಡಿಬರುತ್ತಿದೆ. ಅದನ್ನು ಹತ್ತಿ ಬರುತ್ತಿರುವವನು ಭಗದತ್ತ; ಆ ಮದ್ದಾನೆಯನ್ನು ತಡೆದು ಹೆಣೆದುಕೊಂಡಿರುವವನು ಭೀಮ. ಈಗ ಆ ಕಡೆ ಯುದ್ಧವು ಹಿರಿದಾಗಿದೆ. ಆ ಕಡೆ ಹೋಗೋಣ' ಎಂದನು. ಆ ತೇರನ್ನು ಕೃಷ್ಣನು ವಾಯುವೇಗದಿಂದ ಆ ಕಡೆಗೆ ಓಡಿಸಿದನು. ಅರ್ಜುನನು ಖ್ಯಾತವೂ ಅಹಂಕಾರಿಯೂ ಆದ ಸುಪ್ರತೀಕವೆಂಬ ಆನೆಯನ್ನು ಬಂದು ತಾಗಿದನು. ವ| ಸಿಂಹದ ಉಗುರಿನಂತಿರುವ ಬಾಣಗಳಲ್ಲಿಯೂ ಆಮೆಯ ಉಗುರಿನಂತಿರುವ ಅಸ್ತ್ರಗಳಲ್ಲಿಯೂ ಆನೆಯನ್ನೂ ಭಗದತ್ತನನ್ನೂ ಹೂಳಿದನು. ಭಗದತ್ತನು ಕೋಪಿಸಿಕೊಂಡು ಭೂದೇವಿಯಿಂದ
ಆ
Page #533
--------------------------------------------------------------------------
________________
೫೨೮ / ಪಂಪಭಾರತಂ
ಕಂ।।
ಉ||
ಇಡುವುದುಮದು ವಿಲಯಾಗಿಯ ಕಿಡಿಗಳನುಗುಲುತ್ತುಮೆಯ್ದವರ್ಪುದುಮಿದಿರಂ |
ವ|| ಆಗಳ್ ವಿಕ್ರಾಂತತುಂಗಂ ಚೋದ್ಯಂಬಟ್ಟಿದೇನೆಂದು ಬೆಸಗೊಳೆ
ಚಂ।
ಕಂ।।
ನಡೆದಜರನುರದಿನಾಂತೊಡೆ
ತುಡುಗೆವೊಲೆಸೆದಿರ್ದುದಂಕುಶಂ ಕಂಧರದೊಳ್ ||
22
ಇದು ಪಂತಲು ಭೂತಲಮನಾಂ ತರಲಾದಿ ವರಾಹನಾದನಂ ದದಲ್ಲಿ ವಿಷಾಣಮಂ ಬಡೆಯವಾ ವಸುಧಾಂಗನೆಗಿತ್ತನೀತನಾ | ಸುದತಿಯ ಪೌತ್ರನಾಕೆ ಕುಡೆ ಬಂದುದಿವಂಗೆನಗಲ್ಲದಾನಲಾ ಗದುದನಾಂತನಿಂ ತಳವುದೀ ಕರಿ ಕಂಧರಮಂ ಗುಣಾರ್ಣವಾ || 20
ಎಂಬುದುಮೊಂದ ದಿವ್ಯಶರದಿಂ ಶಿರಮಂ ಪತಿಯೆಚೊಡಾತನೊ ತಂಬದಿನಾಂತೊಡಾಂ ಬಳದೆ ತಪ್ಪಿದೆನೆಂದು ಕಿರೀಟಿ ತನ್ನ ಬಿ | ಲ್ಲಂ ಬಿಸುಟಿರ್ದೊಡಚ್ಚುತನಿದೇತರಿನಾಕುಲಮಿರ್ದೆ ನೋಡಿದಂ ತೆಂಬುದುಮೆಚ್ಚನಂತೆರಡು ಕೆಯ್ದಳುಮಂ ಮುಳಿಸಿಂ ಗುಣಾರ್ಣವಂ || ೭೯
ಎಚ್ಚವನ ತಲೆಯುಮಂ ಪತಿ
ಯೆಕ್ಕೊಡೆ ದಿಕ್ಕರಿಯ ತಲೆಯುಮಾತನ ತಲೆಯುಂ | ಪಚ್ಚಿಕ್ಕಿದಂತೆ ಕೆಯ್ದಳು
ಮಚ್ಚರಿಯಪ್ಪಿನೆಗಮೊಡನುರುಳುವು ಧರೆಯೊಳ್ ||
೮೦
ಕೊಡಲ್ಪಟ್ಟ ದಿವ್ಯಾಂಕುಶವನ್ನು ತೆಗೆದುಕೊಂಡು ೭೭. ಎಸೆಯಲು ಅದು ಪ್ರಳಯಾಗ್ನಿಯ ಕಿಡಿಯನ್ನು ಉಗುಳುತ್ತ ಸಮೀಪಕ್ಕೆ ಬರಲು ಕೃಷ್ಣನು ಎದುರಾಗಿ ಹೋಗಿ ಎದೆಯಿಂದ ಅದನ್ನು ಎದುರಿಸಿದನು. ಆ ಅಂಕುಶವು ಅವನ ಕತ್ತಿನಲ್ಲಿ ಆಭರಣದ ಹಾಗೆ ಪ್ರಕಾಶಿಸಿತು. ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಆಶ್ಚರ್ಯಪಟ್ಟು ಇದೇನೆಂದು ಪ್ರಶ್ನೆ ಮಾಡಿದನು-೭೮. ಇದು ಬೇರೆಯಲ್ಲ: ಭೂಮಂಡಲವನ್ನು ತರಲು ನಾನು ಆದಿವರಾಹನಾದೆನು. ಇದು ಅದರ ಕೋರೆಹಲ್ಲು. ಬಳಿಕ ಅದನ್ನು ನಾನು ಭೂದೇವಿಗೆ ಕೊಟ್ಟೆನು. ಈತನು ಆ ಭೂದೇವಿಯ ಮೊಮ್ಮಗ, ಅವಳು ಕೊಡಲು ಇವನಿಗೆ ಬಂದಿತು. ನಾನಲ್ಲದೆ ಮತ್ತಾರೂ ಇದನ್ನು ಎದುರಿಸಲಾಗದುದರಿಂದ ನಾನು ಎದುರಿಸಿದೆನು. ಅರ್ಜುನಾ, ಇನ್ನು ಈ ಆನೆಯ ಕತ್ತನ್ನು ಕತ್ತರಿಸು ಎಂದನು. ೭೯. ಒಂದೆ ದಿವ್ಯಾಸ್ತ್ರದಿಂದ ಆನೆಯ ತಲೆಯನ್ನು ಹರಿದುಹೋಗುವ ಹಾಗೆ ಹೊಡೆದನು. ಆ ಭಗದತ್ತನು ಅದನ್ನು ಬಲಾತ್ಕಾರದಿಂದ ತಾನು ಎದುರಿಸಿದನು. ಅರ್ಜುನನು ನಾನು ವ್ಯರ್ಥವಾಗಿ ಪ್ರಯೋಗಮಾಡಿದೆ (ಆನೆಯ ತಲೆಯನ್ನೂ ಭಗದತ್ತನ ತಲೆಯನ್ನೂ ಒಟ್ಟಿಗೆ ಹೊಡೆಯಬೇಕಾಗಿದ್ದಿತು) ಎಂದು ಬಿಲ್ಲನ್ನು ಬಿಸುಟಿರಲು ಕೃಷ್ಣನು ಇದೇಕೆ ವ್ಯಾಕುಲನಾಗಿದ್ದೀಯೆ? 'ನೋಡು ಇದು ಹೀಗೆ' ಎಂದು ತೋರಿಸಿದನು. ಅರ್ಜುನನು ಕೋಪದಿಂದ ಭಗದತ್ತನ ಎರಡು ಕೈಗಳನ್ನು ಹೊಡೆದನು. ೮೦. ಕೈಗಳನ್ನು ಕತ್ತರಿಸಿ ಅವನ ತಲೆಯನ್ನು
Page #534
--------------------------------------------------------------------------
________________
ಏಕಾದಶಾಶ್ವಾಸಂ | ೫೨೯ ಉll ಇತ್ತರಿಗಂಗಮಿತ್ರ ಜಯಮಪುದುಮತ್ತಮರರ್ಕಳಾರ್ದು ಸೂ
ಸುತ್ತಿಗೆ ಪುಷ್ಪವೃಷ್ಟಿಗಳನೋಗರವೂಗಳ ಬಂಡನೆಯೆ ಪೀ | ರುಡವಂದುವಿಂದ್ರವನದಿಂ ಮಣಿದುಂಬಿಗಳಿಂದ್ರನೀಲಮಂ ಮುತ್ತುಮನೋಳಿಯೋಳಿಯೊಳ ಕೂದಲಲಿಕ್ಕಿದ ಮಾಲೆಯಂತೆವೋಲ್ |೮೧ ಕ೦ll ಧರಣೀಸುತನದಂ ದಿ |
ಕರಿ ಕಡೆದುದು ನರಶರಂಗಳಿಂ ಭುವನಮುಮಿ || ನುರಿಯದಿರದಾನಡಂಗುವೆ ನಿರದೆಂಬವೋಲರ್ಕನಪರಜಳನಿಧಿಗೀಚಿದಂ ||
೮೨ ವ|| ಆಗಳೆರಡುಂ ಪಡೆಗಳಪಹಾರಡೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳೆ ಪೋಪುದುಂ ಸುಯೋಧನಂ ಭಗದತ್ತನ ಸಾವಿಂಗಲಲ್ಲು ತೊಟ್ಟ ಸನ್ನಣಮನಪೊಡಂ ಕಳೆಯದೆಯು ಮರಮನೆಗೆ ಪೋಗದ ಕುಂಭಸಂಭವನಲ್ಲಿಗೆ ವಂದುಮll ಮಸಕಂಗುಂದದ ಸುಪ್ರತೀಕ ಗಜಮಂ ಧಾತ್ರೀಸುತಂ ಕೀತಿ ಚೋ
ದಿಸಿ ಭೀಮಂ ಗೆಲೆ ಮುಟ್ಟೆವಂದು ಹರಿಯುಂ ತಾನುಂ ಭರಂಗೆಯು ತ | ನೈಸಕಂಗಾಯದಧರ್ಮಯುದ್ಧದೆ ನರಂ ಕೊಲ್ವಲ್ಲಿ ಕಂಡಿಂತುಪೇ ಕ್ಷಿಸಿ ನೀಮುಂ ನಡೆ ನೋಡುತಿರ್ದರನೆ ಮತ್ತಿನ್ನಾರನಾಂ ನಂಬುವಂ || ೮೩
ಹರಿದುಹೋಗುವಂತೆ ಹೊಡೆಯಲು ದಿಕ್ಕರಿಯ ತಲೆಯೂ ಆತನ ತಲೆಯೂ ಕೈಗಳೂ ಭಾಗಮಾಡಿದಂತೆ ಆಶ್ಚರ್ಯಯುತವಾಗಿ ಜೊತೆಯಾಗಿಯೇ ಭೂಮಿಯ ಮೇಲೆ ಉರುಳಿದುವು. ೮೧, ಈ ಕಡೆ ಅರಿಗನಿಗೆ (ಅರ್ಜುನನಿಗೆ ಶತ್ರುಜಯವಾಗಲು ಆ ಕಡೆ ದೇವತೆಗಳು ಜಯಘೋಷಮಾಡಿ ಹೂಮಳೆಯನ್ನು ಸುರಿಸಿದರು. ಆ ಮಿಶ್ರಪುಷ್ಪಗಳ ವಾಸನೆಯನ್ನು ಪೂರ್ಣವಾಗಿ ಹೀರುತ್ತ ಇಂದ್ರನ ತೋಟವಾದ ನಂದನವನದಿಂದ ಮರಿದುಂಬಿಗಳು ಇಂದ್ರನೀಲಮಣಿರತ್ನವನ್ನೂ ಮುತ್ತುಗಳನ್ನೂ ದಂಡದಂಡೆಯಾಗಿ ಸಾಲಾಗಿ ಪೋಣಿಸಿ ಜೋಲುಬಿಟ್ಟ ಹಾರದಂತೆ ಜೊತೆಯಲ್ಲಿಯೇ ಬಂದುವು. ೮೨. ಅರ್ಜುನನ ಬಾಣದಿಂದ ಭೂಪುತ್ರನಾದ ಭಗದತ್ತನು ನಾಶವಾದನು. ದಿಗ್ಗಜವು ಕೆಳಗುರುಳಿತು. ಪ್ರಪಂಚವು ಇನ್ನು ಸುಟ್ಟು ಹೋಗದೇ ಇರುವುದಿಲ್ಲ: ನಾನು ಇಲ್ಲಿರದೆ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮ ಸಮುದ್ರಕ್ಕಿಳಿದನು. ವ|| ಆಗ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಸೂಚಿಸುವ ವಾದ್ಯಗಳನ್ನು ಬಾಜಿಸಲು ತಮ್ಮತಮ್ಮಶಿಬಿರಕ್ಕೆ ಹೋದುವು. ದುರ್ಯೊಧನನು ಭಗದತ್ತನ ಸಾವಿಗೆ ದುಃಖಪಟ್ಟು ಧರಿಸಿದ ಯುದ್ಧಕವಚವನ್ನು ಕಳೆಯದೆಯೂ ಅರಮನೆಗೆ ಹೋಗದೆಯೂ ದ್ರೋಣಾಚಾರ್ಯರ ಹತ್ತಿರಕ್ಕೆ (ಬಳಿಗೆ) ಬಂದನು-೮೩. ಮದವಡಗದ ಸುಪ್ರತೀಕಗಜವನ್ನು ಭಗದತ್ತನು ಭಯಶಬ್ದಮಾಡುತ್ತ ರೇಗಿಸಿ ಮುಂದೆ ನುಗ್ಗಿಸಿ ಭೀಮನನ್ನು ಗೆಲ್ಲಲು ಕೃಷ್ಣನೂ ಅರ್ಜುನನೂ ಹತ್ತಿರಕ್ಕೆ ಬಂದು ವೇಗದಿಂದ (ತನ್ನ ಮಾತಿನಂತೆ ನಡೆದುಕೊಳ್ಳದೆ ಯುದ್ಧ ಮಾಡುವುದಿಲ್ಲವೆಂಬ ತನ್ನ ಪ್ರತಿಜ್ಞೆಯನ್ನು, ಕಾರ್ಯವನ್ನು, ಮಾತನ್ನು ಪರಿಪಾಲಿಸದೆ) ಅಧರ್ಮಯುದ್ಧದಲ್ಲಿ ಅರ್ಜುನನು
Page #535
--------------------------------------------------------------------------
________________
೫೩೦/ ಪಂಪಭಾರತಂ
ವ|| ಎಂದು ನುಡಿದ ಪನ್ನಗಧ್ವಜನ ನುಡಿಗೆ ಕಾರ್ಮುಕಾಚಾರ್ಯನಿಂತೆಂದಂ
ಮ||
ಎನಗಾರ್ಗಮಸಾಧನ ವಿಜಯಂ ನೀನಾತನಂ ಗೆಲ್ವ ಮಾ ತನಮೋಘಂ ಬಿಸುಡಿಂದ ನಾಳೆ ವಿಜಯಂ ಮಾರ್ಕೊಳ್ಳದಂದುರ್ಕಿ ಪೊ | ಕನನಾಂತೋರ್ವನನಿಕ್ಕುವಂ ಕದನದೊಳ್ ಮೇಣ್ ಕಟ್ಟುವಂ ಧರ್ಮ ನಂ ದನನಂ ನೀನಿದನಿಂತು ನಂಬು ಬಗೆಯಲ್ವೇಡನ್ನನಂ ಭೂಪತೀ 1 ೮೪ ವ|| ಎಂಬುದುಮಾನಿನಿತಂ ನಿಮ್ಮ ಪೂಣಿಸಲೆ ಬಂದೆನೆಂದು ಪೊಡಮಟ್ಟು ಬೀಳ್ಕೊಂಡು ಪೋಗಿ ಸಂಸಪಕರ್ಕಳ್ ಬಡೆಯನಟ್ಟಿ ಬರಿಸಿ
ಚಂll
ಅರಿಗನನಾಂಗ ಗಂಡುಮದಟು ನಿಮಗಾವಗಮಾದುದಾಹವಾ ಜಿರದೊಳದರ್ಕೆ ನಾಳೆ ನರನಂ ತೆಗೆದುಯ್ದುದು ಧರ್ಮಪುತ್ರನಂ | ಗುರು ಪಿಡಿದಪ್ಪನೆಂದವರನಾಗಲೆ ಪೂಣಿಸಿ ಪೋಗವೇಟ್ಟು ಮ ಚರದೊಳೆ ಮಾಣದೊಡ್ಡಿದನಸುಂಗೊಳೆ ಕಕ್ಕರ ಸಂಜೆ ಸಂಜೆಯೊಳ್ || ೮೫
ವ|| ಆಗಳ್ ಪಾಂಡವ ಪತಾಕಿನಿಯುಮಿರದ ಪೊಮಟ್ಟರ್ಧಚಂದ್ರವೂಹಮನೊಡ್ಡಿ ನಿಲೆ ಸಂಸಪಕರ್ ತಮಗೆ ಮಿಲ್ಕುಗರೆವಂತೆ ವಿಕ್ರಮಾರ್ಜುನನಂ ಕರೆದುಯರಿತ್ತ
ಕೊಲ್ಲುತ್ತಿರುವುದನ್ನು ನೋಡಿ ನೀವು ಹೀಗೆ ಉಪೇಕ್ಷಿಸಿ ನೋಡುತ್ತೀರಿ ಎಂದ ಮೇಲೆ ನಾನು ಮತ್ತಾರನ್ನು ನಂಬಲಿ ವ ಎಂದು ಹೇಳಿದ ದುರ್ಯೋಧನನ ಮಾತಿಗೆ ದ್ರೋಣನು ಹೀಗೆ ಹೇಳಿದನು-೮೪, ಮಹಾರಾಜನೇ ಅರ್ಜುನನು ನನಗಲ್ಲ, ಯಾರಿಗೂ ಅಸಾಧ್ಯನಾದವನು. ನೀನು ಅವನನ್ನು ಗೆಲ್ಲುವ ಮಾತು ವ್ಯರ್ಥವಲ್ಲವೇ? ಅದನ್ನು ಈ ದಿನವೇ ಬಿಸಾಡು. ನಾಳೆಯ ದಿನ ಅರ್ಜುನನು ಪ್ರತಿಭಟಿಸದಿರುವಾಗ ಅಹಂಕಾರದಿಂದ ಹೊಕ್ಕಂಥ ಯಾವನನ್ನಾದರೂ ಎದುರಿಸಿ ಯುದ್ಧದಲ್ಲಿ ಕೊಲ್ಲುತ್ತೇನೆ. ಅಲ್ಲದೆ ಧರ್ಮರಾಜನನ್ನು ಸೆರೆಹಿಡಿಯುತ್ತೇನೆ. ನೀನು ಇದನ್ನು ನಂಬು ನನ್ನನ್ನು ಅಂಥವನೆಂದು ಗಣಿಸಬೇಡ, ವ|| ಎನ್ನಲು ನಾನು ನಿಮ್ಮಲ್ಲಿ ಇಷ್ಟನ್ನು ಪ್ರತಿಜ್ಞೆಮಾಡಿಸಬೇಕೆಂದೇ ಬಂದೆನೆಂದು ನಮಸ್ಕಾರಮಾಡಿ ಅವರನ್ನು ಬಿಟ್ಟುಹೋಗಿ ಸಂಸಪ್ತಕರುಗಳಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡನು. ೮೫. ಯುದ್ಧರಂಗದಲ್ಲಿ ಅರ್ಜುನನನ್ನು ಪ್ರತಿಭಟಿಸುವ ಪೌರುಷವೂ ಶಕ್ತಿಯೂ ನಿಮಗೆ ಯಾವಾಗಲೂ ಇದೆ. ಅದಕ್ಕಾಗಿ ನಾಳೆ ಅರ್ಜುನನನ್ನು ದೂರಕ್ಕೆ ಕರೆದುಕೊಂಡು ಹೋಗುವುದು. ದ್ರೋಣಾಚಾರ್ಯನು ಧರ್ಮಪುತ್ರನನ್ನು ನಾಳೆ ಸೆರೆಹಿಡಿಯುತ್ತಾನೆ ಎಂದು ಅವರನ್ನು ಆಗಲೇ ಪ್ರತಿಜ್ಞೆ ಮಾಡಿಸಿ ಹೋಗಹೇಳಿದನು. ಮಾತ್ಸರ್ಯದಿಂದ ತಡವಿಲ್ಲದೆ ಬೆಳಗಿನ ಜಾವದಲ್ಲಿಯೇ ಎಂತಹ ಕಠಿಣರಾದವರೂ ಹೆದರುವ ಹಾಗೆ ಶತ್ರುಗಳ ಪ್ರಾಣಾಪಹಾರಕ್ಕಾಗಿ ಭಯಂಕರವಾದ ಸೈನ್ಯವನ್ನು ಒಡ್ಡಿದನು-ವ|| ಆಗ ಪಾಂಡವಸೈನ್ಯವೂ ಸುಮ್ಮನಿರದೆ ಹೊರಟು ಅರ್ಧಚಂದ್ರಾಕಾರದ ಸೈನ್ಯರಚನೆಯನ್ನು ಚಾಚಿ ನಿಲ್ಲಲು ಸಂಸಪ್ತಕರು ತಮಗೆ ಮೃತ್ಯುವನ್ನು ಕರೆಯುವಂತೆ ಅರ್ಜುನನನ್ನು
Page #536
--------------------------------------------------------------------------
________________
ಏಕಾದಶಾಶ್ವಾಸಂ /೫೩೧
ಅನವದ್ಯ || ಅಜೆಪಿದಂ ಗುರು ಭಾರ್ಗವನಿಂತೀಯೊ ನಿದಂ ಗೆಲಲಾವನುಂ ನೆಯನುರ್ಕಿನಳುರ್ಕಯಿನೊರ್ವಂ ಪೊಕ್ಕೊಡೆ ಪೊಕ್ಕನೆ ಮತ್ತಣಂ । ಪೊಮಡಂ ತಲೆದೊಟ್ಟುವನಂತಾ ಪಾಂಡವಸೈನ್ಯಮನೆಂದು ಬಿ ಲೆಯನೊಡ್ಡಿದನಂಕದ ಚಕ್ರವ್ಯೂಹಮನಾಹವರಂಗದೊಳ್ || ೮೬
ವ|| ಅಂತೊಡ್ಡಿದ ಚಕ್ರವ್ಯೂಹದ ನಡುವೆಡೆಯಂದು ಕಳಿಂಗರಾಜನ ಕರಿಘಟೆಗಳುಮಂ ಕರ್ಣ ಶಲ್ಯ ಶಕುನಿ ಕೃಪ ಕೃತವರ್ಮ ಭೂರಿಶ್ರವೋಶ್ವತ್ಥಾಮ ದುರ್ಯೋಧನ ವೃಷಸೇನ ಲಕ್ಕಣಾದಿಗಳಪ್ಪತಿರಥ ಮಹಾರಥ ಸಮರಥಾರ್ಧರಥರ್ಕಳನಿರಿಸಿ ಮತ್ತಮವರ ಬಳಸಿಯುಮನೇಕ ಸಾಮಜಬಲಂಬೆರಸು ಜಯತೇನ ಸುದಕ್ಷಿಣ ಕಾಂಭೋಜಾದಿ ನಾಯಕರನಿರಿಸಿ ಮತ್ತಮವರ ಕೆಲದೊಳೆಡೆಯಲೆದು ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಷಣ ಹಳಾಯುಧ ಮುಸಳಾಯುಧ ಕಾಳ ನೀಳ ರೂಕ್ಷ ರಾಕ್ಷಸ ಬಲಮನಿರಿಸಿ ಮತ್ತಮವರ ಕೆಲದೊಳಿವರ್ಗಿವರ್ ಪಾಸಟಿಯಾಗಿರ್ಪುದೆಂದು ನಿಂದ ನೆಲೆಯೊಳ್ ತಳರದ ನಿಲ್ದಂತಾಗಿರಿಸಿ ಗುಹೆಯ ಬಾಗಿಲೊಳ್ ಸಿಂಹಮಿರ್ಪಂದದಿಂ ಭಾರದ್ವಾಜಂ ಸಿಂಧುರಾಜಂಬೆರಸು ಚಕ್ರವ್ಯೂಹದ ಬಾಗಿಲೊಳ್ ನೆದು ಮೆದು ನಿಂದಾಗಳ್ ಧರ್ಮಪುತ್ರನೇಗೆಯ್ದ ತನುಮನಯದಭಿಮನ್ಯುವಂ ಕರೆದಿಂತೆಂದಂ
ಕರೆದುಕೊಂಡೊಯ್ದರು. ಈ ಕಡೆ ೮೬. ಚಕ್ರವ್ಯೂಹ ರಚನೆಯನ್ನು ಆಚಾರ್ಯನಾದ ಪರಶುರಾಮನು ನನಗೆ ಉಪದೇಶಮಾಡಿದ್ದಾನೆ. ಇದನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಉತ್ಸಾಹಾತಿಶಯದಿಂದ ಯಾವನಾದರೊಬ್ಬ ಪ್ರವೇಶಮಾಡಿದರೆ ಅವನು ಪ್ರವೇಶಮಾಡಿದವನೇ. ಪುನಃ ಹೇಗೂ ಹೊರಟುಹೋಗಲಾರ; ಆ ಪಾಂಡವ ಸೈನ್ಯವನ್ನು ಇದರಿಂದ ಕತ್ತರಿಸಿ ಹಾಕುತ್ತೇನೆ ಎಂದು ಬಿಲ್ಲೋಜನಾದ ದ್ರೋಣನು ಪ್ರಸಿದ್ಧವಾದ ಚಕ್ರವ್ಯೂಹವನ್ನು ಯುದ್ಧರಂಗದಲ್ಲಿ ಹೂಡಿದನು - ವ|| ಹಾಗೆ ಒಡ್ಡಿದ ಚಕ್ರವ್ಯೂಹದ ಮಧ್ಯಭಾಗದಲ್ಲಿ ಯೋಗ್ಯವಾದ ಸ್ಥಳಗಳನ್ನು ಗೊತ್ತುಮಾಡಿ ಕಳಿಂಗ ರಾಜನ ಆನೆಯ ಸಮೂಹವನ್ನೂ ಕರ್ಣ, ಶಲ್ಯ, ಶಕುನಿ, ಕೃತವರ್ಮ, ಭೂರಿಶ್ರವ, ಅಶ್ವತ್ಥಾಮ, ದುರ್ಯೋಧನ, ವೃಷಸೇನ, ಲಕ್ಷಣನೇ ಮೊದಲಾದ ಅತಿರಥ ಮಹಾರಥ ಸಮರಥ ಅರ್ಧರಥರುಗಳನ್ನು ಇರಿಸಿದನು. ಅದರ ಸುತ್ತಲೂ ಅನೇಕ ಆನೆಯ ಸೈನ್ಯದೊಡನೆ ಜಯತೇನ, ಸುದಕ್ಷಿಣ, ಕಾಂಭೋಜರೇ ಮೊದಲಾದ ನಾಯಕರುಗಳನ್ನಿಟ್ಟನು. ಮತ್ತು ಅವರ ಪಕ್ಕದಲ್ಲಿ ಸೂಕ್ತ ಸ್ಥಳವನ್ನು ವಿಚಾರಮಾಡಿ ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷಣ, ಹಳಾಯುಧ, ಮುಸಳಾಯುಧ, ಕಾಳನೀಳರ ಭಯಂಕರವಾದ ರಾಕ್ಷಸ ಸೈನ್ಯವನ್ನಿರಿಸಿದನು. ಅವರ ಪಕ್ಕದಲ್ಲಿ ಇವರಿಗೆ ಇವರು ಸಮನಾಗಿರುತ್ತದೆ ಎಂದು ನಿಂತ ಸ್ಥಳದಲ್ಲಿಯೇ ಚಲಿಸದೆ ನಿಲ್ಲುವ ಹಾಗೆ ಇರಿಸಿ ಗುಹೆಯ ಬಾಗಿಲಿಗೆ ಸಿಂಹವಿರುವ ಹಾಗೆ ದ್ರೋಣಾಚಾರ್ಯನು ಸೈಂಧವನೊಡಗೂಡಿ ಚಕ್ರವ್ಯೂಹದ ಬಾಗಿಲಿನಲ್ಲಿ ಕೂಡಿಕೊಂಡು ಮೆರೆದು ನಿಂತನು. ಧರ್ಮರಾಜನು ಏನು
Page #537
--------------------------------------------------------------------------
________________
೫೩೨ / ಪಂಪಭಾರತಂ
ಮ|| ಸ || ಇದು ಚಕ್ರವ್ಯೂಹಮಿ ವ್ಯೂಹಮನೊಡವದಟಂ ಪಾರ್ಥನಂತಾತನುಂ ಗಂ ಟದನ ನಾಲ್ವರುಂ ಭೇದಿಸಲಯೆವಿದಂ ಕಂದ ನೀಂ ಬಲ್ಲ ಪೇಂ | ಬುದುಮಾನೆಮ್ಮಯ್ಯನಲ್ ಕೇಳವೆನಿದನಿದೇನಯ್ಯ ಚಿಂತಾಂತರಂ ಪೊ ಕಿದನೀಗಲ್ ವನ್ಯಗಂಧದ್ವಿರದ ಕೊಳನಂ ಪೊಕ್ಕವೋಲ್ ಕಾದಿ
ತೋರ್ಪಂ || ೮೭
ಅನಲನ ಕೊಟ್ಟ ಗಾಂಡಿವದ ತೇರ ಮುರಾರಿಯ ಮೆಚ್ಚ ದೇವ ದೇ ವನ ದಯೆಗೆಯ್ದ ಸಾಯಕದ ಬೆಂಬಲದೊಳ್ ಕಲಿಯೆಂದು ಕಮ್ಮನ | ಮನನದಟುತಿರ್ಷಿರವಿದೇಂ ಹಗೆಯೊಡ್ಡು ಗೆಲಳುಂಬಮಂ ಬನಿತುವರಂ ಮನಕ್ಕೆ ನಿಮಗತ್ತಳಗಂ ಬರೆ ಮತ್ತೆ ಮಾಸ್ಟನೇ | ನೆದು ಚತುರ್ವಲಂಬೆರಸು ಬಂದುದೊಡ್ಡಿದ ಗಂಡರಾರುಮ ನಡೆಯದ ಗಂಡರೇ ನೆಗೆದ ನೆತ್ತರ ಸುಟ್ಟುರೆ ಕಂಡದಿಂಡೆಗಳ | ಪಡೆದು ನಭಂಬರಂ ಪರೆದು ಪರ್ವಿ ಲಯಾಗಿ ಶಿಖಾಕಳಾಪಮಂ ಮರೆಯಿಸೆ ತಾಗಿ ತಳಿಯೆಯದನ್ನೆಗಮಂತು ನರಂಗೆ ವುಟ್ಟಿದಂ || ವ|| ಎಂಬುದುಂ ಯಮನಂದನನಿಂತೆಂದಂ
ಚoll
ಚoll
ಚಂ
65
೮೯
ಅನುವರದಲ್ಲಿ ತಳ್ಳು ಪಗೆಯಂ ತವ ಕೊಂದೊಡಮಾಂತರಾತಿ ಸಾ ಧನದೊಳಗ ತಟ್ಟೆದೊಡವೆನ್ನಯ ಸಂತತಿಗಾಗಿಸಿರ್ದ ನಿ | ನ್ನನೆ ಮದದಂತಿ ದಂತ ಮುಸಲಾಹತಿಗಂ ಕರವಾಳ ಬಾಯಮಂ ಬಿನ ಮೊನೆಗಂ ಮಹಾರಥರ ತಿಂತಿಣಿಗಂ ಪಿಡಿದೆಂತು ನೂಂಕುವೆಂ || ೯೦ ಮಾಡಬೇಕೆಂಬುದನ್ನು ತಿಳಿಯದೆ ಅಭಿಮನ್ಯುವನ್ನು ಕರೆದು ಹೀಗೆ ಹೇಳಿದನು. ೮೭, ಇದು ಚಕ್ರವ್ಯೂಹ, ಈ ಚಕ್ರವ್ಯೂಹವನ್ನು ಒಡೆಯುವ ವೀರ ಅರ್ಜುನ, ಅವನೂ ದೂರವಾದನು. ನಾವು ನಾಲ್ಕು ಜನವೂ ಇದನ್ನು ಭೇದಿಸಲು ತಿಳಿಯವು. ಮಗು ನೀನೇನಾದರೂ ತಿಳಿದಿದ್ದೀಯಾ ಹೇಳು ಎನ್ನಲು ಇದನ್ನು ತಂದೆಯಲ್ಲಿ ಕೇಳಿ ತಿಳಿದಿದ್ದೇನೆ. ಇದಕ್ಕೇಕೆ ವಿಶೇಷ ಚಿಂತೆ. ಇದನ್ನು ಈಗಲೇ ಪ್ರವೇಶಿಸಿ ಮಹಾಸತ್ವಶಾಲಿಯಾದ ಕಾಡಾನೆಯು ಕೊಳವನ್ನು ಪ್ರವೇಶಿಸುವ ಹಾಗೆ ಕಾದಿ ತೋರಿಸುತ್ತೇನೆ. ೮೮. ಅಗ್ನಿಯು ದಾನಮಾಡಿದ ಗಾಂಡೀವಾಸ್ತ್ರದ, ಸಾರಥಿಯಾಗಿರುವ ಕೃಷ್ಣನ ಪ್ರಸಾದದ, ದೇವದೇವನಾದ ಈಶ್ವರನು ಅನುಗ್ರಹಿಸಿದ ಪಾಶುಪತಾಸ್ತ್ರದ ಬೆಂಬಲದಿಂದ ಶೂರನೆಂದು ವ್ಯರ್ಥವಾಗಿ ಕರೆಯಿಸಿಕೊಳ್ಳುವ ತಂದೆಯಾದ ಅರ್ಜುನನ ಪರಾಕ್ರಮವನ್ನು ಒಲಿದು ಮೆಚ್ಚುತ್ತಿರುವ ಈ ಸ್ಥಿತಿಯದೇನು ? ಶತ್ರುಸೈನ್ಯವು ಗೆಲ್ಲುವುದಕ್ಕೆ ಸಾಧ್ಯವೆಂದು ಹೇಳುವವರೆಗೆ ಮನಸ್ಸಿಗೆ ಚಿಂತೆಯುಂಟಾದರೆ ಪುನಃ ನಿಲ್ಲುತ್ತೇನೆಯೇ ? (ಇಲ್ಲಿ ಈಗಲೇ ಯುದ್ಧಕ್ಕೆ ಹೊರಡುತ್ತೇನೆ) ೮೯, ಚತುರಂಗ ಬಲದೊಡನೆ ಕೂಡಿಕೊಂಡು ವೇಗವಾಗಿ ಸೈನ್ಯವನ್ನೊಡ್ಡಿರುವ ಶೂರರು ನನಗೆ ತಿಳಿಯದ ಶೂರರೇ? ಮೇಲಕ್ಕೆ ಚಿಮ್ಮಿದ ರಕ್ತಪ್ರವಾಹವು ಆಕಾಶಕ್ಕೆ ಚಿಮ್ಮುವಂತೆಯೂ ಮಾಂಸಖಂಡದ ರಾಶಿಗಳು ಕತ್ತರಿಸಿ ಮುಗಿಲವರೆಗೆ ಚೆಲ್ಲಾಡುವಂತೆಯೂ ಪ್ರಳಯಾಗ್ನಿ ಜ್ವಾಲೆಗಳನ್ನು ಮರೆಮಾಡುತ್ತಿರಲು ಎದುರಿಸಿ ಕೂಡಿ ಯುದ್ಧ ಮಾಡದಿದ್ದರೆ ನಾನು ಅರ್ಜುನನಿಗೆ ಹೇಗೆ ಹುಟ್ಟಿದವನಾಗುತ್ತೇನೆ ? ವ! ಎನ್ನಲು ಯಮನ ಪುತ್ರನಾದ ಧರ್ಮರಾಯನು ಹೀಗೆಂದನು-೯೦. ಯುದ್ಧದಲ್ಲಿ ಸೇರಿ ಶತ್ರುವನ್ನು ಪೂರ್ಣವಾಗಿ ಕೊಲ್ಲಬಹುದು
Page #538
--------------------------------------------------------------------------
________________
ಏಕಾದಶಾಶ್ವಾಸಂ | ೫೩೩ ಕಂti ಮಗನೆ ಪದಿನಾಲ್ಕು ವರುಷದ
ಮಗನೆ ನಿನ್ನನ್ನನೊರ್ವನಂ ಪಗೆವಡೆಯೊ | ಡುಗಳನೊಡೆಯಲೆವೇಳೆರ್ದ
ಧಗಮನೆ ಸೈರಿಸುವುಪಾಯಮಾವುದು ಕಟುವೇ || .. ೧ ವ!! ಎಂದೊಡಾ ಮಾತಂ ಮಾರ್ಕೊಂಡಭಿಮನ್ಯುವಿಂತೆಂದಂಮರ ಕ್ರಮಮಂ ಕೆಯ್ಯೋಳಲೆಂದು ಪುಟ್ಟ ರಣದೊಳ ಸಾವನ್ನೆಗಂ ಮಾತ್ತೂಡ
ಕ್ರಮಮಕ್ಕುಂ ಕ್ರಮಮರುಮೇ ಕ್ರಮಮನಾನೇಗೆಯಪಂ ವಿಕ್ರಮಂ | ಕ್ರಮಮಾಂ ವಿಕ್ರಮದಾತನಂ ಕ್ರಮದ ಮಾತಂತಿರ್ಕೆ ಮಾಣ್ಣಿರ್ದೊಡಾಂ | ಕ್ರಮಕೆಂದಿರ್ದೆನೆ ಬಿಟೊಡಂ ಬಿಡದೊಡಂ ಬೀಳ್ಕೊಂಡೆನಿಂ ಮಾಪ್ಟನೇ ||೯೨
ವಗಿರಿ ಎಂದು ತನ್ನೆಡೆದ ಕನಕ ರಥಮಂ ತನ್ನ ಮನದನ್ನನಪ್ಪ ಜಯನೆಂಬ ಸಾರಥಿಯಂ ಚೋದಿಸೆಂದಾಗಳ್ಚoll ಎಗುವ ಬಟ್ಟನಂಬುಗಳ ಬಲ್ಬರಿ ಕುಂಭಜನಂ ಮರಳ್ಳಿ ಪಾ
ಝಳಕೆಯ ಪಾರೆಯಂಬುಗಳ ತಂದಲಗುರ್ವಿಸಿ ಸಿಂಧುರಾಜನಂ | ಮಜುಗಿಸೆ ಬಾಗಿಲೊಳ್ ಮುಸುಳಿ ನಿಂದ ಘಟಾವಳಿಯಂ ತೆರಳಿ ತ
ತಂದುದೊ ಪೊಕ್ಕನಭಿಮನ್ನು ವಿರೋಧಿಬಳಾಂಬುರಾಶಿಯಂ || ೯೩ ಅಥವಾ ಪ್ರತಿಭಟಿಸಿದ ಶತ್ರುಸೈನ್ಯದಲ್ಲಿ ನಾಶವಾಗಬಹುದು. ಆದರೆ ನನ್ನ ವಂಶೋದ್ದಾರಕ್ಕಾಗಿಯೇ ಹುಟ್ಟಿರುವ ನಿನ್ನನ್ನೇ ಮದ್ದಾನೆಯ ದಂತವೆಂಬ ಒನಕೆಯ ಪೆಟ್ಟಿಗೂ ಕತ್ತಿಯ ಬಾಯಿಗೂ ಬಾಣದ ತುದಿಗೂ ಮಹಾರಥರ ಸಮೂಹಕ್ಕೂ ಹಿಡಿದು ಹೇಗೆ ನೂಕಲಿ? ೯೧. ಮಗು ನೀನು ಇನ್ನೂ ಹದಿನಾಲ್ಕು ವರ್ಷದ ಮಗುವಪ್ಪಾ, ನಿನ್ನಂತಹ ಒಬ್ಬನನ್ನು ಶತ್ರುಸೈನ್ಯದ ಗುಂಪನ್ನು ಭೇದಿಸಲು ಹೇಳಿ ಎದೆ ಧಣ್ಣೆಂದು ಉರಿಯಲು ತಡೆದುಕೊಳ್ಳುವ ಉಪಾಯವಾವುದು ಕಂದಾ? ವ|| ಎನ್ನಲು ಆ ಮಾತನ್ನು ಪ್ರತಿಭಟಿಸಿ ಅಭಿಮನ್ಯುವು ಹೀಗೆ ಹೇಳಿದನು. ೯೨. ಯುದ್ಧದಲ್ಲಿ ಕ್ರಮಪ್ರಾಪ್ತವಾದುದನ್ನು ಸ್ವೀಕರಿಸುವುದಕ್ಕಾಗಿಯೇ ಹುಟ್ಟಿ, ಸಾಯುವುದಕ್ಕೆ ತಪ್ಪಿದರೆ (ಹೆದರಿದರೆ) ಅದು ಅಕ್ರಮವಾಗುತ್ತದೆ; ಕ್ರಮವಾಗುತ್ತದೆಯೇ? ಕ್ರಮವನ್ನು ನಾನು ಏನು ಮಾಡುತ್ತೇನೆ. ಕ್ರಮದ ಮಾತು ಹಾಗಿರಲಿ; ಪರಾಕ್ರಮವೇ ಕ್ರಮ. ನಾನು ಪರಾಕ್ರಮಶಾಲಿ. ನೀವು ಅಪ್ಪಣೆ ಕೊಡದಿದ್ದರೂ ನಾನು ಕ್ರಮಕ್ಕಾಗಿ ಇದ್ದೇನೆ. ನೀವು ಬಿಡಲಿ ಬಿಡದಿರಲಿ ಹೊರಟಿದ್ದೇನೆ. ಅದನ್ನು ಇನ್ನು ಬಿಡುತ್ತೇನೆಯೇ? ವ| ಎಂದು ತಾನು ಹತ್ತಿದ್ದ ಚಿನ್ನದ ತೇರನ್ನು ತನಗೆ ಪ್ರೀತಿಪಾತ್ರನಾದ ಜಯನೆಂಬ ಸಾರಥಿಯನ್ನು ನಡಸೆಂದು ಹೇಳಿ-ಹೊರಟೇಬಿಟ್ಟನು: ೯೩. ಮೇಲೆ ಬೀಳುತ್ತಿರುವ ದುಂಡಾದ ಬಾಣಗಳ ಬಲವಾದ ಮಳೆಯು ದ್ರೋಣನನ್ನು ಹಿಂದಿರುಗಿಸಿತು. ಹಾರಿಹೋಗುತ್ತಿರುವ ಪ್ರಸಿದ್ದವಾದ ಪಾರೆಯಂಬುಗಳ ಜಿನುಗು ಮಳೆಯು ಸೈಂಧವನನ್ನು ಹೆದರಿಸಿ ವ್ಯಥೆಪಡಿಸಿತು. ಚಕ್ರವ್ಯೂಹದ ಬಾಗಿಲಿನಲ್ಲಿ ಮುತ್ತಿಕೊಂಡು ನಿಂತಿದ್ದ ಆನೆಯ ಸೈನ್ಯವನ್ನು ಓಡಿಸಿ ಚೂರುಚೂರಾಗಿ ತರಿದು ಶತ್ರುಸೇನಾಸಮುದ್ರವನ್ನು ಅಭಿಮನ್ಯುವು ನೂಕಿ
Page #539
--------------------------------------------------------------------------
________________
೫೩೪) ಪಂಪಭಾರತಂ
ವ|| ಅಂತು ಪೊಕ್ಕು ವಿರೋಧಿ ಸೈನ್ಯಮಂ ಮಾರಿ ಪೊಕ್ಕಂತೆ ಪಣಮಯಂ ಮಾಡಿ ತೋಳಕೊಂಡ ಜೋಳದಂತಿರೆ ಪಡಲ್ವಡಿಸಿದಾಗಳ್ಚಂll ಒಣಗಿದುದೊಂದು ಪೆರ್ವಿದಿರ ಪರ್ವೊದಳೆಂ ಮೊರೆದುರ್ವುವಾಶುಶು ಕ್ಷಣಿಯವೊಲಾಂತ ಖಟ್ಟ ನಿವಹಕ್ಕೆ ರಥಕ್ಕೆ ದಕ್ಕೆ ಮತ್ತವಾ | ರಣ ನಿವಹಕ್ಕೆ ತಕ್ಕಿನಭಿಮನ್ನುವ ಕೂರ್ಗಣೆ ಪಾಯ್ತು ನುಂಗಲು ಟೊಣೆಯಲುಮುರ್ಚಿ ಮುಕ್ಕಲುಮಿದೇಂ ನೆಹಿತೆ ಕಲ್ಕುವೊ ಯುದ್ಧರಂಗದೊಳ್ ti೯೪
ವll ಅಂತಿದಿರಾಂತ ಮಾರ್ಪಡೆಯೆಲ್ಲಮಂ ಜವನ ಪಡೆಗೆ ಪಡಿಗಚಿಕ್ಕುವ೦ತಿಕ್ಕಿ ನಿಂದ ನರನಂದನನಂ ಕಂಡು ವಿಕ್ರಮಕ್ರಂ ಕ್ರಮಕ್ರಂ ಪುರುಡಿಸುವ ಸುಯೋಧನನ ಮಕ್ಕಳ್: ಲಕ್ಷಣಂ ಮೊದಲಾಗೆ ನೂರ್ವರುಮೊಂದಾಗೆ ಬಂದು ತಾಗಿದಾಗಳ್|ಸೂಸೆಚ್ಚೆಚ್ಚು ಬಿಲ್ಲಂ ರಥದ ಕುದುರೆಯಂ ಸೂತನಂ ಖಂಡಿಸುತ್ತಾ
ಆಂಟೊಂಬತ್ತು ಪತ್ತೆಂಬಳಕೆಯ ಸರಬಿಂದೂಳಿಕೊಂಡಾವ ಮೆಯ್ಯುಂ | ಪಾಟಂಬಂತಾಗೆ ಪಾರ್ದಾರ್ದುಅದಿಸೆ ಮುಳಿಸಿಂ ನೂರ್ವರುಂ ಪೊನ್ನ ತಾಳ್ ಸೂಳೊಳ್ ಬೀಚ್ಚಿಂತೆ ಬಿಲ್ಡರ್ ಮಕುಟಮಣಿಗಣಜ್ಯೋತಿಸಾರರ್
ಕುಮಾರರ್ || ೯೫ ವ|| ಆಗಳ್ ಸುಯೋಧನನ ಮಕ್ಕಳ ಸಾವಂ ಕಂಡು ತಮ್ಮಣ್ಣನ ಮೊಗಮನಾವ ಮೊಗದೊಳ್ ನೋಟಿನೆಂದು ದುಶ್ಯಾಸನಂ ಬಂದು ತಾಗಿದಾಗಳ್
ನುಗ್ಗಿದನು. ವ|| ಹಾಗೆ ಶತ್ರುಸೈನ್ಯವನ್ನು ಪ್ರವೇಶಮಾಡಿ ಮಾರಿ ಹೊಕ್ಕಂತೆ ಹೆಣಮಯವನ್ನಾಗಿ ಮಾಡಿ ಗಾಳಿಯಲ್ಲಿ ತೂರಿದ ಜೋಳದ ಹಾಗೆ ನೆಲಕ್ಕೆ . ಚೆಲ್ಲಾಪಿಲ್ಲಿಯಾಗಿ ಬೀಳಿಸಿದನು. ೯೪, ಒಣಗಿಸಿದ ಒಂದು ಹೆಬ್ಬಿದಿರಿನ ದೊಡ್ಡ ಮಳೆಯಿಂದ ಶಬ್ದಮಾಡಿಕೊಂಡು ಉಬ್ಬುವ ಅಗ್ನಿಯ ಹಾಗೆ ಪ್ರತಿಭಟಿಸಿದ ಖಡ್ಡಧಾರಿಗಳ ಗುಂಪಿಗೆ, ತೇರಿಗೆ, ಸೈನ್ಯಕ್ಕೆ, ಮದ್ದಾನೆಗಳ ಸಮೂಹಕ್ಕೆ, ಯೋಗ್ಯವಾದ (ಸಮರ್ಥವಾದ) ಅಭಿಮನ್ಯುವಿನ ಹರಿತವಾದ ಬಾಣಗಳು ಹಾಯ್ದು ನುಂಗುವುದಕ್ಕೂ ಚಪ್ಪರಿಸುವುದಕ್ಕೂ ಮುಕ್ಕುವುದಕ್ಕೂ ಯುದ್ಧರಂಗದಲ್ಲಿ ಎಷ್ಟು ಚೆನ್ನಾಗಿ ಕಲಿತುವೋ! ವ! ಹಾಗೆ ಪ್ರತಿಭಟಿಸಿದ ಸೈನ್ಯವೆಲ್ಲವನ್ನೂ ಯಮನ ಸೈನ್ಯಕ್ಕೆ ನಿಯಮಿತ ನಿತ್ಯಾಹಾರ(?)ವನ್ನು ಕೊಡುವ ಹಾಗೆ ಕೊಟ್ಟು ನಿಂತಿರುವ ಅಭಿಮನ್ಯುವನ್ನು ಕಂಡು ಪರಾಕ್ರಮಕ್ಕೂ ಸಂಪ್ರದಾಯಕ್ಕೂ ಸ್ಪರ್ಧೆಮಾಡುತ್ತಿದ್ದ ದುರ್ಯೊಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರುಮಂದಿಯೂ ಒಟ್ಟಾಗಿ ಬಂದು ತಾಗಿದರು. ೯೫. ಸರದಿಯ ಪ್ರಕಾರ ಬಿಲ್ಲನ್ನೂ ರಥದ ಕುದುರೆಯನ್ನೂ ಸಾರಥಿಯನ್ನೂ ಹೊಡೆಹೊಡೆದು ಕತ್ತರಿಸುತ್ತ ಆರು, ಏಳು, ಎಂಟು, ಒಂಬತ್ತು, ಹತ್ತು ಎಂಬ ಸಂಖ್ಯೆಯ ಸಿದ್ದವಾದ ಬಾಣಗಳಿಂದ ನಾಟಿಕೊಳ್ಳುವ ಹಾಗೆ ಮಾಡಿ ಎಲ್ಲ ಶರೀರಗಳೂ ಹಾಳು (ದದ್ದು -ಪೊಳ್ಳು) ಎನ್ನುವ ಹಾಗೆ ಆರ್ಭಟ ಮಾಡಿ ಹೊಡೆಯಲು ಕಿರೀಟದ ರತ್ನಸಮೂಹದ ಕಾಂತಿಯಿಂದ ಪ್ರಕಾಶರಾದ ನೂರ್ವರು ಕುಮಾರರು ಹೊಂದಾಳೆಯ ಮರಗಳು ಸರದಿಯ ಮೇಲೆ ಬೀಳುವ ಹಾಗೆ ಬಿದ್ದರು. ವ| ಆಗ ದುರ್ಯೊಧನನ
Page #540
--------------------------------------------------------------------------
________________
ಏಕಾದಶಾಶ್ವಾಸಂ | ೫೩೫ ಕoll ಒಂದೆ ಸರಲಿಂದಮವನೆರ್ದೆ
ಯಂ ದೊಕ್ಕನೆ ತಿಣ್ಣಮೆಚ್ಚು ಕೊಲಲೊಲ್ಕನೆ ಸಂ | ಕಂದನ ನಂದನ ತನಯಂ ತಂದೆಯ ಪೂಣೆಯನೆ ನೆನೆದು ದುಶ್ಯಾಸನನಂ |
೯೬ ವಗ ಆಗಲ್ ಕಾನೀನಸೂನು ವೃಷಸೇನನೇನುಂ ಮಾಣದೆ ಕಾದುತ್ತಿರ್ದನನ್ನೆಗಮಿತ್ತ ನರನಂದನನ ಬಟವಡೆಯಂ ತಗುಳು ಗವಟೆಯ ಪಾವಿನಂತೆ ಚಕ್ರವ್ಯೂಹಮಂ ಪುಗಲೆಂದು ಬರ್ಪ ದ್ರುಪದ ವಿರಾಟ ದೃಷ್ಟದ್ಯುಮ್ಮ ಭೀಮಸೇನ, ಸಹದೇವ ನಕುಲ ಯುಧಿಷ್ಠಿರ ಘಟೋತ್ಕಚಾದಿಗಳೊಡನೆ ಮಲ್ಲಾಮಲ್ಲಿಯಾಗಿ ಕಾದುವ ಕುಂಭಸಂಭವನಲ್ಲಿಗೆ ದುರ್ಯೊಧನಂ ಬಂದು ನಮ್ಮ ಬಲಮೆಲ್ಲಮಭಿಮನ್ಯುವಿನಂಬಿನ ಮೊನೆಯೊಳ್ ತೊಟ್ಟು ತೆರಳೋಡಿದಪ್ಪುದು ನಿಮಗಲ್ಲಿ ಕಾಳೆಗಮತಿಭರಮೇಗೆಯ್ಯಮೆನೆ ಸಿಂಧುರಾಜನಿಂದಿನನುವರಕೀಯತೆಯೊಳೆ ನಿತಾದೊಡಮೀಶ್ವರ ವರಪ್ರಸಾದದೊಳಾನೆ ಸಾಲ್ವೆನೆಂದಿಂತೆಂದಂ
ಉಳಿದಿದಿರಾಂತು ನಿಂದ ರಿಪುಸೆನ್ಯಮನಾಹವರಂಗದಲ್ಲಿ ತ ಇಂದಳದಿಕ್ಕಲಾಂ ನಿಜವೆನಿರವೇಡೊಡಗೊಂಡು ಪೋಗು ನಿ | ನೈಟಿಕೆಯ ಕುಂಭಸಂಭವನನೆಂದೊಡೆ ಪಾಂಡವಸೈನಮಂ ಕಳು ತಿಳೆವನಿತೊಂದಳುರ್ಕೆ ನಿನಗೇತಳಾದುದೊ ಪೇಮ್ ಜಯದ್ರಥಾ || ೯೭
ಮಕ್ಕಳ ಸಾವನ್ನು ನೋಡಿ ನಮ್ಮಣ್ಣನ ಮುಖವನ್ನು ಯಾವ ಮುಖದಲ್ಲಿ ನೋಡಲಿ ಎಂದು ದುಶ್ಯಾಸನನು ಬಂದು ಮೇಲೆ ಬಿದ್ದನು. ೯೬. ಒಂದೇ ಬಾಣ ಅವನ ಎದೆಯನ್ನು ದೊಕ್ಕೆಂದು ತೀಕ್ಷವಾಗಿ ಹೊಡೆದು ತಂದೆಯಾದ ಭೀಮನ ಪ್ರತಿಜ್ಞೆಯನ್ನು ಜ್ಞಾಪಿಸಿಕೊಂಡು ಅಭಿಮನ್ಯುವು ದುಶ್ಯಾಸನನನ್ನು ಕೊಲ್ಲಲು ಒಪ್ಪದವನಾದನು. ವ|| ಆಗ ಕರ್ಣನ ಮಗನಾದ ವೃಷಸೇನನು ಒಂದೇ ಸಮನಾಗಿ ಕಾದುತ್ತಿದ್ದನು. ಅಷ್ಟರಲ್ಲಿ ಈ ಕಡೆ ಅಭಿಮನ್ಯುವು ಬಂದ ದಾರಿಯನ್ನೇ ಹಿಡಿದು ಬಿದುರುಗಣೆಯ ಮೇಲಿರುವ ಹಾವಿನಂತೆ ಚಕ್ರವ್ಯೂಹವನ್ನು ಪ್ರವೇಶಿಸಬೇಕೆಂದು ಬರುತ್ತಿರುವ ದ್ರುಪದ, ವಿರಾಟ, ಧೃಷ್ಟದ್ಯುಮ್ಮ, ಭೀಮಸೇನ, ಸಹದೇವ, ನಕುಲ, ಯುಧಿಷ್ಠಿರ, ಘಟೋತ್ಕಚನೇ ಮೊದಲಾದವರೊಡನೆ ದ್ವಂದ್ವಯುದ್ಧದಿಂದ ಯುದ್ಧಮಾಡುತ್ತಿರುವ ದ್ರೋಣನಲ್ಲಿಗೆ `ದುರ್ಯೊಧನನು ಬಂದು ನಮ್ಮ ಸೈನ್ಯವೆಲ್ಲ ಅಭಿಮನ್ಯುವಿನ ಬಾಣದ ತುದಿಯಲ್ಲಿ ತೂಗಲ್ಪಟ್ಟು ಚದುರಿ ಓಡಿಹೋಗುತ್ತಿದೆ. ನಿಮಗೆ ಅಲ್ಲಿ ಕಾಳಗವು ಬಹಳ ಜೋರಾಗಿದೆ. ಏನು ಮಾಡೋಣ ಎಂದು ಕೇಳಿದನು. ಸೈಂಧವನು ಈ ದಿನ ಯುದ್ಧಕ್ಕೆ ಹೇಗಾದರೂ ಈಶ್ವರನ ಪ್ರಸಾದದಿಂದ ಈ ಸಂದರ್ಭದಲ್ಲಿ ನಾನೇ ಸಮರ್ಥನಾಗುತ್ತೇನೆ ಎಂದು ಹೀಗೆ ಹೇಳಿದನು. ೯೭. ವೇಗವಾಗಿ ಪ್ರತಿಭಟಿಸಿ ನಿಂತಿರುವ ಶತ್ರುಸೈನ್ಯವನ್ನು "ಯುದ್ಧರಂಗದಲ್ಲಿ ಚೂರು ಚೂರಾಗಿ ಕತ್ತರಿಸಿ ತರಿದಿಕ್ಕಲು ನಾನು ಸಮರ್ಥನಾಗಿದ್ದೇನೆ. ಇನ್ನು ನೀನು ಇಲ್ಲಿರಬೇಕಾಗಿಲ್ಲ. ಪ್ರಸಿದ್ಧನಾದ ನಿನ್ನ ದ್ರೋಣನನ್ನೂ ಜೊತೆಯಲ್ಲಿಯೇ ಕರೆದುಕೊಂಡುಹೋಗು ಎಂದನು. ಅದಕ್ಕೆ ರಾಜರಾಜನು 'ಎಲೈ ಸೈಂಧವನೇ ಪಾಂಡವ ಸೈನ್ಯವನ್ನು ಗುರಿಯಿಟ್ಟು ಕತ್ತರಿಸುವ ಅಷ್ಟೊಂದು ಪರಾಕ್ರಮವು ನಿನಗೆ ಹೇಗೆ ಬಂದಿತು'
Page #541
--------------------------------------------------------------------------
________________
೫೩೬ | ಪಂಪಭಾರತಂ
ವ|| ಎನೆ ಜಯದ್ರಥನಿಂತೆಂದಂಮl ನರನೊಳ್ ಮುನ್ನಗಪಟ್ಟುದೊಂದಬಲೊಳಾಂ ಕೈಲಾಸ ಶೈಲೇಶನಂ
ಪಿರಿದುಂ ಭಕ್ತಿಯೊಳರ್ಚಿಸುತ್ತುಮಿರೆ ತದ್ದೇವಾಧಿಪಂ ಮೆಚ್ಚಿದಂ | ನರನೋರ್ವ೦ ಪೂಜಗಾಗಲೋಂದು ದಿವಸಂ ಕೌಂತೇಯರಂ ಕಾದಿ ಗಲ್ ನಿರುತಂ ನೀನೆನೆ ಪತ್ತೆನಾಂ ಬರಮನದೀಂದ್ರಾತ್ಮಜಾಧೀಶನೊಳ್ || ೯೮ ವ|| ಎಂದ ಸಿಂಧುರಾಜನ ನುಡಿಗೆ ರಾಜಾಧಿರಾಜನೆರಡು ಮುಯ್ಯುಮಂ ನೋಡಿ'ಉli ' ನಿನ್ನನೆ ನಚ್ಚಿ ಪಾಂಡವರೊಳಾಂತಿಯಲ್ ತಳೆಸಂದು ಪೂನಾಂ
ನಿನ್ನ ಶರಾಳಿಗಳಗಿದು ನಿಂದುವು ಪಾಂಡವ ಸೈನ್ಮೆಂದೊಡಿಂ | ನಿನ್ನ ಭುಜಪ್ರತಾಪದಳವಾರ್ಗಮಸಾಧ್ಯಮಾಯಂ
ನಿನ್ನಳವಿಂದಮಿನೆನಗೆ ಸಾರ್ದುದರಾತಿ ಜಯಂ ಜಯದ್ರಥಾ || ೯೯. * ವl ಎಂದು ಪೊಗಟ್ಟು ಸಿಂಧುರಾಜನನಿರಟ್ಟು ಕುಂಭಸಂಭವನುಂ ತಾನುಮಭಿ ಮನ್ಯುವಿನ ಸಂಗ್ರಾಮರಂಗಮನಯ ವಂದುಚಂ|| ಉಡಿದ ರಥಂಗಳಿಟ್ಟೆಡೆಗಳೊಳ್ ಮಕುಟಂಗಳ ರತ್ನದೀಪ್ತಿಗಳ
ಪೊಡರ್ವಿನಮಟ್ಟಿ ತಟ್ಟೆದ ನಿಜಾತ್ಮಜರಂ ನಡೆ ನೋಡಿ ಕಣ್ಣ ನೀ | ರೂಡನೊಡನುರ್ಚಿ ಪಾಯ ಮುಳಿಸಿಂದದನೊಯ್ಯನೆ ತಾಳಿ ಕಾಯ್ಲಿನೋಳ ಕಡಗಿ ಜಗಂಗಳಂ ನೊಣೆದು ನುಂಗಲುಮಾಟಿಸಿದಂ ಸುಯೋಧನಂ Il೧೦೦
ಎಂದು ಕೇಳಿದನು. ವ|| ಎನ್ನಲು ಸೈಂಧವನು ಹೀಗೆಂದನು. ೯೮. ಅರ್ಜುನನಲ್ಲಿ ಮೊದಲು ಸೆರೆಸಿಕ್ಕಿದ ಒಂದು ವ್ಯಥೆಯಿಂದ ನಾನು ಕೈಲಾಸಾಧಿಪತಿಯಾದ ಈಶ್ವರನನ್ನು - ಭಕ್ತಿಯಿಂದ ಪೂಜೆ ಮಾಡುತ್ತಿರಲು ಆ ದೇವತೆಗಳ ಒಡೆಯನಾದ ಈಶ್ವರನು 'ಮೆಚ್ಚಿದ್ದೇನೆ', ಅರ್ಜುನನೊಬ್ಬನನ್ನು ಬಿಟ್ಟು ಉಳಿದ ಪಾಂಡವರೊಡನೆ ನೀನು ಕಾದಿ ಒಂದು ದಿವಸ ನಿಶ್ಚಯವಾಗಿ ಗೆಲ್ಲು ಎನ್ನಲು ಆ ವರವನ್ನು ಪಾರ್ವತಿಪತಿಯಿಂದ ಪಡೆದೆನು. ವ|| ಎಂದು ಹೇಳಿದ ಸೈಂಧವನ ಮಾತಿಗೆ ಚಕ್ರವರ್ತಿಯಾದ ದುರ್ಯೋಧನನು (ತನ್ನ ಎರಡು ಹೆಗಲುಗಳನ್ನು ನೋಡಿಕೊಂಡು ಸಂತೋಷಪಟ್ಟನು. ವ! ನಿನ್ನನ್ನು ನಂಬಿಕೊಂಡೇ ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ನಿಷ್ಕರ್ಷಿಸಿ ಪ್ರತಿಜ್ಞೆಮಾಡಿದೆನು. ನಿನ್ನ ಬಾಣಗ ಸಮೂಹಗಳಿಗೆ ಹೆದರಿ ಪಾಂಡವಸೈನ್ಯವು ನಿಂತಿತು ಎಂದಾಗ ನಿನ್ನ ತೋಳಿನ ಬಲದ ಪ್ರಮಾಣ ಮತ್ತಾರಿಗೂ ಅಸಾಧ್ಯವಾಯಿತು. ಸೈಂಧವನೇ ನಿನ್ನ ಪರಾಕ್ರಮದಿಂದ ನನಗೆ ಶತ್ರುಜಯವುಂಟಾಯಿತು ವll ಎಂದು ಹೊಗಳಿ ಸೈಂಧವನನ್ನು ಅಲ್ಲಿಯೇ ಇರುವಂತೆ ಹೇಳಿ ದ್ರೋಣನೂ ತಾನೂ ಅಭಿಮನ್ಯುವಿನ ಯುದ್ಧರಂಗವನ್ನು ಸೇರಿದರು. ೧೦೦. ಮುರಿದ ತೇರುಗಳ ಸಂದಿಯಲ್ಲಿ ಕಿರೀಟಗಳ ರತ್ನಕಾಂತಿಗಳು ಹೊಳೆಯುತ್ತಿರಲು ನಾಶವಾಗಿ ಸತ್ತುಬಿದ್ದಿರುವ ತನ್ನ ಮಕ್ಕಳುಗಳನ್ನು ದುರ್ಯೋಧನನು ನಿಟ್ಟಿಸಿ ನೋಡಿದಾಗ ಕಣ್ಣೀರು ಒಡನೆಯೇ ಚಿಮ್ಮಿ ಹರಿಯಿತು. ಅದನ್ನು ನಿಧಾನವಾಗಿ ಸಹಿಸಿಕೊಂಡು ಕೋಪದಿಂದ ರೇಗಿ ಲೋಕವನ್ನೆಲ್ಲ
Page #542
--------------------------------------------------------------------------
________________
OOD
ಏಕಾದಶಾಶ್ವಾಸಂ | ೫೩೭ - ವ|| ಆಗಳ್ ದ್ರೋಣ ದ್ರೋಣಪುತ್ರ ಕೃಪ ಕೃತವರ್ಮ ಕರ್ಣ ಶಲ್ಯ ಶಕುನಿ ದುಶ್ಯಾಸನ ವೃಷಸೇನಾದಿಗಳಾಳನ ಮುಳಿದ ಮೊಗಮನದು ಧರ್ಮಯುದ್ಧಮಂ ಬಿಸುಟು ನರನಂದನನ ರಥಮಂ ಸುತ್ತಿ ಮುತ್ತಿಕೊಂಡು ಕಂil ತೇರಂ ಕುದುರೆಯನೆಸಗುವ
ಸಾರಥಿಯಂ ಬಿಲ್ಲನದ ಗೊಣೆಯುಮನುಜದಾ | ರ್ದೊರೋರ್ವರೊಂದನೆಯೊಡೆ ಬೀರಂ ಗದೆಗೊಂಡು ಬೀರರಂ ಬೆಂಕೊಂಡಂ || ಬೆಂಕೊಳೆ ಕಳಿಂಗ ರಾಜನ ನೂಕಿದ ಕರಿಘಟೆಯನುಡಿಯೆ ಬಡಿ ಬಡಿದೆತ್ತಂ | ಕಿಂಕೋಟಮಾಲ್ಕುದುಮುಂದೆ ಚಂ ಕರ್ಣ೦ ನಿಶಿತ ಶರದಿನೆರಡುಂ ಕರಮಂ ||
೧೦೨ ಕರಮೆರಡುಂ ಪಳೆವುದುಮಾ ಕರದಿಂದಂ ತನ್ನ ಕುನ್ನಗೆಯೊಳೆ ಕೊಂಡು ದ್ಭುರ ರಥಚಕ್ರದಿನಿಟ್ಟಂ ತಿರಿಪಿ ನರಪ್ರಿಯ ತನೂಜನಕ್ಕೋಹಿಣಿಯಂ ||
೧೦೩ ವ|| ಆಗಳ್ ದುಶ್ಯಾಸನನ ಮಗಂ ಗದಾಯುಧನಟಿಯ ನೊಂದ ಸಿಂಗದ ಮೇಲೆ ಬೆರಗಳಯದ ಬೆಳ್ಳಾಲ್ ಪಾಯ್ದಂತೆ ಕಿ ಬಾಳ್ವೆರಸು ಪಾಯ್ದುದುಂ
ಚಪ್ಪರಿಸಿ ನುಂಗಲು ಆಶಿಸಿದನು. ವ|| ಆಗ ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಕರ್ಣ ,ಶಲ್ಯ, ಶಕುನಿ, ದುಶ್ಯಾಸನ, ವೃಷಸೇನನೇ ಮೊದಲಾದವರು ಒಡೆಯನಾದ ದುರ್ಯೋಧನನ ಕೋಪದಿಂದ ಕೂಡಿದ ಮುಖವನ್ನು ನೋಡಿ ತಿಳಿದು ಧರ್ಮಯುದ್ಧವನ್ನು ಬಿಸಾಡಿ (ಬಿಟ್ಟು) ಅಭಿಮನ್ಯುವಿನ ರಥವನ್ನು ಸುತ್ತಿ ಮುತ್ತಿಕೊಂಡರು. ೧೦೧. ತೇರನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯನ್ನೂ ಬಿಲ್ಲನ್ನೂ ಅದರ ಹೆದೆಯನ್ನೂ ಸಾವಕಾಶಮಾಡದೆ ಒಬ್ಬೊಬ್ಬರೊಂದನ್ನು ಹೊಡೆಯಲು ವೀರನಾದ ಅಭಿಮನ್ಯುವು ಗದೆಯನ್ನು ತೆಗೆದುಕೊಂಡು ವೀರರನ್ನು ಬೆನ್ನಟ್ಟಿದನು. ೧೦೨. ಕಳಿಂಗ ರಾಜನು ಮುಂದಕ್ಕೆ ತಳ್ಳಿದ ಆನೆಯ ಸಮೂಹವನ್ನು ಒಡೆಯುವ ಹಾಗೆ ಬಡಿಬಡಿದು ಎಲ್ಲೆಲ್ಲಿಯೂ ಸಂಕಟಪಡಿಸಲು ಕರ್ಣನು ವೇಗವಾಗಿ ಬಂದು ಹರಿತವಾದ ಬಾಣದಿಂದ ಅಭಿಮನ್ಯುವಿನ ಎರಡುಕೈಗಳನ್ನು ಹೊಡೆದನು (ಕತ್ತರಿಸಿದನು). ೧೦೩. ಕೈಗಳೆರಡೂ ಕತ್ತರಿಸಿಹೋದರೂ ಅಭಿಮನ್ಯುವು ವೇಗವಾಗಿ ತನ್ನ ಮೋಟುಗೈಗಳಿಂದಲೇ ಕಳಚಿ ಬಿದ್ದಿದ್ದ ಗಾಲಿಯೊಂದನ್ನು ತೆಗೆದುಕೊಂಡು ಸುತ್ತಿ ತಿರುಗಿ ಪ್ರಯೋಗಮಾಡಿ ಒಂದಕ್ಟೋಹಿಣಿ ಸೈನ್ಯವನ್ನು ಹೊಡೆದು ಹಾಕಿದನು. ವಗಿ ಆಗ ದುಶ್ಯಾಸನನ ಮಗನಾದ ಗದಾಯುಧನು ಸಾಯುವ ಹಾಗೆ ಯಾತನೆ ಪಡುತ್ತಿರುವ ಸಿಂಹದ ಮೇಲೆ ಅವಿವೇಕಿಯಾದ ದಡ್ಡನು ಹಾಯುವ ಹಾಗೆ ಒರೆಯಿಂದ ಹೊರಗೆ ಕಿತ್ತ (ಸೆಳೆದ)
Page #543
--------------------------------------------------------------------------
________________
೧೦೫
೫೩೮ / ಪಂಪಭಾರತಂ ಚಂii #ುರಿತ ಕೃಪಾಣಪಾಣಿಗಿದಿರಂ ನಡೆದಳ್ಳು ತೊಟ್ಟು ನಾಲ್ಕು ಡೊ
ಕರದೂಳೆ ಮಿಕ್ಕ ದಿಕ್ಕರಿಯನಿಕ್ಕುವವೋಲ್ ನೆಲಕಿಕ್ಕಿ ಪತ್ತಿ ಕ | ತರಿಗೊಳೆ ಕಾಯ್ದು ಕಣ್ಣುಮುಟ್ಟುಸಿರ್ ಕುಸಿದಂತಕನಂತಮೆಯ ಮೆಯ್
ಪರವಶವಾಗೆ ಜೋಲನಭಿಮನ್ಯು ಭಯಂಕರ ರಂಗಭೂಮಿಯೊಳ್ II೧೦೪ ಕಂ|| ಅನಿತಿ ಸತ್ತ ನರನಂ
ದನಂಗೆ ಕಣ್ ಸೋಲ್ಕು ಬಗೆಯದಮರೇಂದ್ರನನಿ | ನೆನಗೆ ತನಗೆಂಬ ದೇವಾಂ ಗನೆಯರ ಕಳಕಳಮೆ ಪಿರಿದುಮಾಯ್ತಂಬರದೊಳ್ || ಅಭಿಮನ್ಯು ಮರಣ ವಾರ್ತಾ ಪ್ರಭೂತ ಶೋಕಾಗಿ ಧರ್ಮತನಯನನಿರದಂ | ದಭಿಭವಿಸಿ ತನ್ನನಳುರ್ದಂ ತೆ ಭಾಸ್ಕರಂ ಕೆಂಕಮಾದನಸ್ತಾಚಲದೊಳ್ ||
೧೦೬ ವli ಅಂತು ನಿಜತನೂಜನ ಮರಣ ಶ್ರವಣಾಶನಿಘಾತದಿಂ ಕುಳಶೈಲಂ ಕೆಡವಂತ ಕೆಡೆದು ಮೂರ್ಛಾಗತನಾದ ಧರ್ಮಪುತ್ರನಂ ಭೀಮಸೇನ ನಕುಳ ಸಹದೇವ ಸಾತ್ಯಕಿ ದ್ರುಪದ ವಿರಾಟಾದಿಗಳಪಹತ ಕದನ ಮುಂದಿಟೊಡಗೊಂಡು ಬೀಡಿಂಗೆ ಪೊದರಾಗಳ ಧರ್ಮಪುತನ ಶೋಕಮನಾಳೆಸಲೆಂದು ಕೃಷ್ಣಪಾಯನಂ ಬಂದು ಸಂಸಾರಸ್ಥಿತಿಯನಳೆಯದವರಂತೆ ನೀನಿಂತು ಶೋಕಾಕ್ರಾಂತನಾದೊಡೆಕತ್ತಿಯೊಡನೆ ಹಾಯ್ದನು. ೧೦೪, ಪ್ರಕಾಶದಿಂದ ಕೂಡಿರುವ ಕತ್ತಿಯನ್ನು ಹಿಡಿದಿರುವ ಗದಾಯುಧನಿಗೆ ಅಭಿಮನ್ಯುವು ಇದಿರಾಗಿ ನಡೆದು ಭಯಂಕರವಾದ ರೀತಿಯಲ್ಲಿ ಥಟ್ಟನೆ ಹಾಯ್ದು ಡೊಕ್ಕರವೆಂಬ ಪಟ್ಟಿನಿಂದ ದಿಗ್ಗಜವನ್ನು ಇಕ್ಕುವಂತೆ ಅವನನ್ನು ನೆಲಕ್ಕೆ ಅಪ್ಪಳಿಸಿ ಅವನ ಮೇಲೆ ಹತ್ತಿ ಕತ್ತರಿಯಂತೆ ಹಿಡಿಯಲು ಆ ಗದಾಯುಧನ ಕೋಪದಿಂದ ಅವನ ಕಣ್ಣಿನ ಗುಳ್ಳೆ ಹೊರಕ್ಕೆ ಬಂದು ಉಸಿರು ಕುಗ್ಗಿ ಸತ್ತನು. ಅಭಿಮನ್ಯುವು ಭಯಂಕರವಾದ ಯುದ್ಧಭೂಮಿಯಲ್ಲಿ ಮೂರ್ಛಹೋಗಿ ಜೋತುಬಿದ್ದನು. ೧೦೫. ಅಷ್ಟು ಪರಾಕ್ರಮವನ್ನು ಪ್ರದರ್ಶಿಸಿ ಸತ್ತ ಅಭಿಮನ್ಯುವಿಗೆ ಮೋಹಗೊಂಡು ದೇವೇಂದ್ರನನ್ನೂ ಅಲಕ್ಷಿಸಿ ಅಭಿಮನ್ಯುವು ನನಗೆ ಬೇಕು ತನಗೆ ಬೇಕು ಎನ್ನುವ ಅಪ್ಪರಸ್ತ್ರೀಯರ ಕಳಕಳ ಶಬ್ದವೇ ಆಕಾಶಪ್ರದೇಶದಲ್ಲಿ ವಿಶೇಷವಾಯಿತು. ೧೦೬. ಅಭಿಮನ್ಯುವಿನ ಮರಣವಾರ್ತೆಯಿಂದ ಉಂಟಾದ ಶೋಕಾಗ್ನಿಯು ಧರ್ಮರಾಜನನ್ನು ಅಂದು ಬಿಡದೆ ಆಕ್ರಮಿಸಿ ತನ್ನನ್ನೂ ವ್ಯಾಪಿಸಿದಂತೆ (ಆವರಿಸಿರುವಂತೆ) ಅಸ್ತಪರ್ವತದಲ್ಲಿ ಸೂರ್ಯನು ಕೆಂಪಗಾದನು. ವ| ಹಾಗೆ ತನ್ನ ಮಗನು ಸತ್ತ ಮಾತನ್ನು ಕೇಳುವಿಕೆಯೆಂಬ ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳು ಉರುಳುವಂತೆ ಉರುಳಿ ಮೂರ್ಛ ಹೋದನು. ಭೀಮಸೇನ, ನಕುಲ, ಸಹದೇವ, ಸಾತ್ಯಕಿ, ದ್ರುಪದ, ವಿರಾಟನೇ ಮೊದಲಾದವರು ಯುದ್ಧವನ್ನು ನಿಲ್ಲಿಸಿ ಧರ್ಮಜನನ್ನು ಮುಂದಿಟ್ಟುಕೊಂಡು ಯುದ್ಧದಿಂದ ಹಿಂತಿರುಗಿದವರಾಗಿ ತಮ್ಮಬೀಡಿಗೆ ಹೋದರು. ಆಗ ಧರ್ಮರಾಜನ ದುಃಖವನ್ನು ಶಮನಮಾಡಬೇಕೆಂದು ವೇದವ್ಯಾಸರೇ ಬಂದರು.
Page #544
--------------------------------------------------------------------------
________________
ಏಕಾದಶಾಶ್ವಾಸಂ | ೫೩೯ ಚಂll. ಎನಿತಿದಿರಾಂತರಾತಿಬಲಮಂತನಿತಂ ತವೆ ಕೊಂದು ತತ್ಯುಯೋ
ಧನ ಸುತರೆನ್ನ. ಬಾಣಗಣದಿಂ ತವದಿರ್ದರೊ ಯುದ್ಧದಾಳೆ ರೋ | ದನಮನಗಾವುದಯ್ಯನೆನಗೇಕೆಯೋ ಶೋಕಿಪನೆಂದು ಧರ್ಮನಂ
ದನ ನರನಂದನಂ ನಿನಗೆ ಸಗ್ಗದೊಳೇನಭಿಮನ್ನು ನೋಯನೇ || ೧೦೭ ಕಂ ಜ್ಞಾನಮಯನಾಗಿ ಸಂಸಾ
ರಾನಿತ್ಯತೆಯಂ ಜಲಕ್ಕನಾಗದಿರ್ದ | ಜ್ಞಾನಿಯವೋಲ್ ನೀನುಂ ಶೋ ಕಾನಲ ಸಂತಪ್ತ ಚಿತ್ತನಪ್ಪುದು ದೊರೆಯೇ ||
೧೦೮ ವll ಎಂದು ಷೋಡಶರಾಜೋಪಾಖ್ಯಾನಮನಳೆಪಿ ಧರ್ಮಪುತ್ರನ ಶೋಕಮನಾಜಿ ನುಡಿದು ಪಾರಾಶರ ಮುನೀಂದ್ರಂ ಪೋದನಿತ್ತಲ್ಚಂil ಅಟಿದುದು ಮತ್ತನೂಜಶತಮಾಷೆಯೊಳಿತ್ತಭಿಮನ್ನುವೊರ್ವನ
ತಟಿದನಿದಾವ ಗೆಲ್ಲಮೆನಗಂ ಕಲಿಯಾದನೊ ಪೂಣ್ಣ ಗಂಡವಾ | ತಡೆಯದೆ ಗಂಡನಿಂತಚಿವುದೀಯಟಿವಿನೈನಗಾಜಿರಂಗದೊಳ್ ಗಟಿಯಸುಗೆಂಬಿದಂ ನುಡಿಯುತುಂ ಘಟಸಂಭವನೋಳ್ ಸುಯೋಧನಂ Il೧೦೯
ವ|| ಅಂತು ಬೀಡಿಂಗೆ ಪೋದನನ್ನೆಗಮಿತ್ತ ಸಂಸಪಕಬಳಜಳನಿಧಿಯಂ ಬಡಬಾನಳ ನಳುರ್ವಂತಳುರ್ದು, ನಿಜವಿಜಯಕಟಕಕ್ಕೆ ವಿಜಯಂ ಬರೆವರೆ
(ಧರ್ಮರಾಜನನ್ನು ಕುರಿತು) 'ಮಹಾರಾಜ, ಸಂಸಾರಸ್ಥಿತಿಯನ್ನು ತಿಳಿಯದವರಂತೆ ನೀನು ಹೀಗೆ ದುಃಖಿಸಬಾರದು. ೧೦೭, ಪ್ರತಿಭಟಿಸಿದಷ್ಟು ಶತ್ರುಸೈನ್ಯವನ್ನೆಲ್ಲ ಪೂರ್ಣವಾಗಿ ಕೊಂದು ದುರ್ಯೊಧನನ ಮಕ್ಕಳೆಷ್ಟೋ ಜನವನ್ನು ತನ್ನ ಬಾಣದ ಸಮೂಹದಿಂದ ನಾಶಪಡಿಸಿದ ಶೂರನಾದ ನನಗಾಗಿ ಆರ್ಯನಾದ ಧರ್ಮರಾಜನು ಏಕೆ ಅಳುತ್ತಿದ್ದಾನೆ ಎಂದು ಸ್ವರ್ಗದಲ್ಲಿರುವ ಅಭಿಮನ್ಯುವು ನೊಂದುಕೊಳ್ಳುವುದಿಲ್ಲವೆ? ೧೦೮. (ಲೋಕ) ಜ್ಞಾನದಿಂದ ಪರಿಪೂರ್ಣವಾಗಿ ಈ ಸಂಸಾರದ ಅಶಾಶ್ವತೆಯನ್ನು ಚೆನ್ನಾಗಿ ತಿಳಿದೂ ತಿಳಿವಿಲ್ಲದವನ ಹಾಗೆ ನೀನೂ ಶೋಕಾಗ್ನಿಯಿಂದ ಸುಡಲ್ಪಟ್ಟ ಮನಸ್ಸುಳ್ಳವನಾಗುವುದು ಯೋಗ್ಯವೇ ?' ವ|| ಎಂದು ಹದಿನಾರುರಾಜರ ಕಥೆಯನ್ನು ತಿಳಿಸಿ ಧರ್ಮರಾಜನ ದುಃಖವು ಶಮನವಾಗುವ ಹಾಗೆ ಉಪದೇಶಿಸಿ ವ್ಯಾಸಮಹರ್ಷಿಯು ಹೊರಟುಹೋದನು. ಈ ಕಡೆ-೧೦೯. ನಮ್ಮ ಪಕ್ಷದಲ್ಲಿ ನನ್ನ ನೂರುಮಕ್ಕಳೂ ಯುದ್ದದಲ್ಲಿ ನಾಶವಾದರು. ಆ ಪಕ್ಷದಲ್ಲಿ ಅಭಿಮನ್ಯುವೊಬ್ಬನು ಮಾತ್ರ ಸತ್ತಿದ್ದಾನೆ. ನನಗೆ ಯಾವ ಜಯವಿದು. ಶೂರನಾದವನು ಪ್ರತಿಜ್ಞೆ ಮಾಡಿದ ಧೀರವಾಕ್ಕು ನಾಶವಾಗದಂತೆ ಪರಾಕ್ರಮಶಾಲಿಯಾಗಿ ಹೀಗೆ ಸಾಯಬೇಕು. ನನಗೆ ಯುದ್ದದಲ್ಲಿ ಇಂತಹ ಸಾವು ಲಭಿಸಲಿ ಎಂಬ ಈ ಮಾತನ್ನು ಆಡುತ್ತ ದುರ್ಯೊಧನನು ದ್ರೋಣಾಚಾರ್ಯರೊಡನೆ ವ|| ಬೀಡಿಗೆ ಹೋದನು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯಸಾಗರವನ್ನು ಬಡಬಾಗ್ನಿ ಸುಡುವಂತೆ ಸುಟ್ಟು ತನ್ನ ಜಯಶಾಲಿಯಾದ ಸೈನ್ಯಕ್ಕೆ
35
Page #545
--------------------------------------------------------------------------
________________
೫೪೦ | ಪಂಪಭಾರತಂ
ಹರಿ ನಿಜಯೋಗದಿಂದಲೆದು ತನ್ನಳಿಯಂ ಲಯವಾದುದಂ ಭಯಂ ಕರ ಕಪಿಕೇತನಂಗಳಿಪಲೋಲದೆ ಬಂದು ಶಮಂತ ಪಂಚಕಂ | ಬರಮಿಟೆದಲ್ಲಿ ಸಂಗರ ಪರಿಶ್ರಮಮಂ ಕಳೆಯೆಂದು ಮಯ್ತುನಂ
ಬೆರಸು ಜಳಾವಗಾಹದೊಳಿರುತ್ತೆ ಮಹಾಕಪಟಪ್ರಪಂಚದಿಂ ಕ೦ll ಜಳಮಂತ್ರ ಮಂತ್ರಿತಾಶಯ
ಜಳದೊಳ್ ನರನಿನಿಸು ಮುಜುಗೆ ನಿಜಸುತನ ಸುಕ್ಕ | ದೃಳ ಜಳನಿಧಿಯೊಳ್ ಫಲ್ಗುಣ ಮುಲುಗಿದನೆಂಬಿದನೆ ನುಡಿದು ಹರಿ ಮುಲುಗುವುದುಂ || ೧೧೧ ಭೋಂಕನೆ ಕೇಳೆರ್ದ ಕದಡಿ ಕ ಲಂಕಿದ ಬಗವೆರಸು ನೆಗೆದು ನಾಲ್ಕು ದೆಸೆಯಂ | ಶಂಕಾಕುಳಿತಂ ನೋಡಿ ಮ ನಂ ಕೊಳುಕೆನೆ ಮುಲುಗಿ ನೆಗೆದ ಹರಿಯಂ ನುಡಿದಂ || - ೧೧೨ ಆಕಾಶ ವಚನವಿದು ಸುತ ಶೋಕಮನನಗಳಪಿದಪುದಸ್ಯತನಯಂ | ಗೇಕೆಂದರೆಯಂ ಮರಣಮ ದಾ ಕುರುಪತಿಯಿಂದಮಾದುದಾಗಲೆವೇಲ್ಕುಂ || ಇಂದಿನ ಚಕ್ರವ್ಯೂಹಮ ನಾಂ ದಲಣಂ ಮೆಚ್ಚಲಾಯಿತೆನೆನುತುಂ ರಥಮಂ || ಬಂದೇಳಿ ಮಗನ ಮನಕತ ಮೊಂದುತ್ತರಮೆರ್ದೆಯನಲೆಯ ನರನಿಂತೆಂದಂ || ೧೧೪
ಅರ್ಜುನನು ಹಿಂತಿರುಗಿ ಬರುತ್ತಿರಲು ೧೧೦. ಕೃಷ್ಣನು ತನ್ನ ಯೋಗದೃಷ್ಟಿಯಿಂದ ತನ್ನಳಿಯನಾದ ಅಭಿಮನ್ಯುವು ಸತ್ತುದನ್ನು ತಿಳಿದನು. ಅದನ್ನು ಭಯಂಕರಾಕಾರನೂ ಕಪಿಧ್ವಜನೂ ಆದ ಅರ್ಜುನನಿಗೆ ತಿಳಿಸಲಾರದೆ ಶಮಂತಪಂಚಕವೆಂಬ ಕೊಳದವರೆಗೂ ಬಂದನು. ಅಲ್ಲಿ ಇಳಿದು ಯುದ್ಧಾಯಾಸವನ್ನು ಕಳೆಯೋಣ ಬಾ ಎಂದು ಮಯ್ತುನನಾದ ಅರ್ಜುನನೊಡಗೂಡಿ ಅಂದು ಸ್ನಾನಮಾಡುತ್ತಿರುವಾಗ ವಿಶೇಷವಾದ ಕೃತ್ರಿಮದ ರೀತಿಯಲ್ಲಿ ೧೧೧. ಜಲಸ್ತಂಭನಮಂತ್ರದಿಂದ ಮಂತ್ರಿಸಲ್ಪಟ್ಟ ಕೊಳದಲ್ಲಿ ಅರ್ಜುನನು ಸ್ವಲ್ಪ ಮುಳುಗಲು ಕೃಷ್ಣನು ಅರ್ಜುನಾ ನಿನ್ನ ಮಗನು ಶತ್ರುಸೇನಾಸಮುದ್ರದಲ್ಲಿ ಮುಳುಗಿದನು' ಎಂದು ಹೇಳಿ ತಾನೂ ಮುಳುಗಿದನು. ೧೧೨. ಥಟ್ಟನೆ (ಈ ಮಾತನ್ನು ಕೇಳಿ ಎದೆ ಕದಡಿ ಕಲಕಿದ ಮನಸ್ಸಿನಿಂದೊಡಗೂಡಿ ನೀರಿನಿಂದ ಮೇಲೆದ್ದು ಸಂದೇಹದಿಂದ ಕೂಡಿ ನಾಲ್ಕು ದಿಕ್ಕುಗಳನ್ನೂ ನೋಡಿ ಮನಸ್ಸು ಕಳಕ್ಕೆನಲು ಮುಳುಗಿ ಮೇಲೆದ್ದ ಕೃಷ್ಣನನ್ನು ಕೇಳಿದನು. ೧೧೩. ಈ ಅಶರೀರವಾಣಿಯು ಸುತಶೋಕವನ್ನು ನನಗೆ ತಿಳಿಸುತ್ತಿದೆ. ನನ್ನ ಮಗನಿಗೆ ಸಾವು ಆ ದುರ್ಯೋಧನನಿಂದಲೇ ಆಗಿರಬೇಕು. . ಏಕಾಯಿತೆಂದು ತಿಳಿಯದವನಾಗಿದ್ದೇನೆ. ೧೧೪. ಈ ದಿನದ ಚಕ್ರವ್ಯೂಹವನ್ನು ನಾನು ಸ್ವಲ್ಪವೂ ಮೆಚ್ಚಲಾರೆ ಎನ್ನುತ್ತ (ನೀರಿನಿಂದೆದ್ದು) ತೇರನ್ನು ಬಂದೇರಿ ಬೀಡಿನ ಕಡೆ
Page #546
--------------------------------------------------------------------------
________________
ಏಕಾದಶಾಶ್ವಾಸಂ | ೫೪೧
ಕದನದಿನಾಂ ಬರೆ ನಿಚ್ಚಲು
ಮಿದಿರ್ವಂದು ಕೊರ ವಾಯ್ತು ಬಾಯ್ಕಾಯೊಳಲು |
ಪಿದಿರ್ಗೊಳೆ ತಂಬುಲಮಂ ಕೊ
ಇದೆ ಮಾಣಿ ಮಗನ ತಡವಿದೇನಸುರಾರೀ ||
೧೧೫
ವ|| ಎನುತ್ತುಂ ಬೀಡನೆಯೆ ಎಂದು ಶೋಕಸಾಗರದೊಳ್ ಮುಲುಗಾಡುವ ಪರಿಜನಮುಂ ತನ್ನ ಮೊಗಮಂ ನೋಡಲ್ ನಾಯ್ಕ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರ್ದ ವೀರಭಟರುಮಂ ಕಂಡು ಮಗನ ಸಾವಂ ನಿಶ್ಚಿಸಿ ರಾಜಮಂದಿರಮಂ ಪೊಕ್ಕು ರಥದಿಂದಮಿದು ಧರ್ಮಪುತ್ರಂಗಂ ವಾಯುಪುತ್ರಂಗಂ ಪೊಡೆವಟ್ಟು ಕುಳ್ಳಿರ್ಪುದುಮವ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರೆ ಕಿರೀಟಿ ಕಂಡಿದೇನೆಂದು ಬೆಸಗೊಳೆ ಧರ್ಮಪುತ್ರನಿಂತೆಂದಂಮಸ್ತ ಗುರು ಚಕ್ರವ್ಯೂಹಮಂ ಪಣ್ಣಿದೊಡೆ ಪುಗಲಿದಂ ಬಲ್ಲರಾರೆಂದೊಡಿಂ ನಾ
ನಿರೆ ಮತ್ತಾರ್ ಬಲ್ಲರೆಂದೂರ್ವನೆ ರಿಪುಬಳವಾರಾಶಿಯಂ ಪೊಕ್ಕು ಮಿಕ್ಕಾಂ ತರನಾಟಂದಿಕ್ಕಿ ದುರ್ಯೋಧನನ ತನಯರಂ ನೂರ್ವರಂ ಕೊಂದು ತತ್ಸಂ ಗರದೊಳ್ ಕಾದಮ್ಮನಿಂತಾಂತಿಡಿದು ನಿಜಸುತಂ ದೇವಲೋಕಕ್ಕೆ ಸಂದಂ ||೧೧೬
ಬಂದನು. ಮಗನ ಬಗೆಗೆ ಮನೋವ್ಯಥೆ ಮನಸ್ಸನ್ನು ವಿಶೇಷವಾಗಿ ಪೀಡಿಸುತ್ತಿರಲು ಅರ್ಜುನನು ಹೀಗೆಂದನು ೧೧೫. ದಿನದಂತೆ ನಾನು ಯುದ್ಧದಿಂದ ಬರಲು ಎದುರಾಗಿ ಬಂದು ಕೊರಳಿಗೆ ಹಾರಿ ಅಪ್ಪಿಕೊಂಡು ನನ್ನ ಬಾಯಿಂದ ತನ್ನ ಬಾಯಿಗೆ ಸುಖವಾಗಿರುವ ಹಾಗೆ ತಾಂಬೂಲವನ್ನು ಕೊಳ್ಳದೇ ಇರುವ ಮಗನ ಈ ಸಾವಕಾಶವಿದೇನು ಕೃಷ್ಣ? ವ!! ಎನ್ನುತ್ತ ಬೀಡನ್ನು ಸೇರಿ (ಮನೆಯ ಹತ್ತಿರಕ್ಕೆ ಬಂದು) ದುಃಖಸಮುದ್ರದಲ್ಲಿ ಮುಳುಗಾಡುವ ಸೇವಕರನ್ನೂ ತನ್ನ ಮುಖವನ್ನು ನೋಡಲು ನಾಚಿಕೆಯಿಂದ ಕೂಡಿ ತಲೆಯನ್ನು ಬಗ್ಗಿಸಿಕೊಂಡು ನೆಲವನ್ನು ಬರೆಯುತ್ತಿದ್ದ ವೀರಭಟರನ್ನೂ ನೋಡಿ ಮಗನ ಸಾವನ್ನು ನಿಶ್ಚಯಿಸಿದನು. ಅರಮನೆಯನ್ನು ಪ್ರವೇಶಮಾಡಿದನು. ರಥದಿಂದಿಳಿದು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಕುಳಿತುಕೊಂಡನು. ಅವರು ತಲೆಯನ್ನು ತಗ್ಗಿಸಿ (ದುಃಖದಿಂದ) ನೆಲವನ್ನು ಬರೆಯುತ್ತಿರಲು ಅರ್ಜುನನು ಇದೇನೆಂದು ಪ್ರಶ್ನೆ ಮಾಡಿದನು. ಧರ್ಮರಾಜನು ಹೀಗೆ ಹೇಳಿದನು. ೧೧೬. ಗುರುವಾದ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಲು ಇದನ್ನು ಪ್ರವೇಶಿಸಲು ತಿಳಿದವರಾರು ಎಂದು ಕೇಳುತ್ತಿರುವಾಗಲೇ ಮತ್ತಾರು ತಿಳಿದಿದ್ದಾರೆ ಎಂದು ಶತ್ರುಸೇನಾಸಮೂಹವನ್ನು ಒಬ್ಬನೇ ಪ್ರವೇಶಿಸಿದನು. ಮೀರಿ ಪ್ರತಿಭಟಿಸಿದವರನ್ನು ಕೊಂದು ದುರ್ಯೋಧನನ ನೂರು ಜನ ಮಕ್ಕಳನ್ನೂ ಸಂಹರಿಸಿ ಆ ಯುದ್ಧದಲ್ಲಿ ನಮ್ಮನ್ನು ರಕ್ಷಿಸಿ ಹೀಗೆ ಎದುರಾಗಿ ಯುದ್ಧಮಾಡಿ ನಿನ್ನ ಮಗನಾದ ಅಭಿಮನ್ಯುವು ದೇವಲೋಕವನ್ನು ಸೇರಿದನು.
Page #547
--------------------------------------------------------------------------
________________
೫೪೨ / ಪಂಪಭಾರತಂ
ಮ||
ಬರಮಂ ಬಾಳ ಶಶಾಂಕಮೌಳಿ ಕುಡೆ ಪೆತ್ತೊಂದುರ್ಕಿನಿಂದೋವದಾಂ ತು ರಣೋತ್ಸಾಹದಿನೆಮ್ಮನೊರ್ವನೆ ಭರಂಗೆಯತ್ತ ದುರ್ಯೋಧನಂ | ಬೆರಸಾ ದ್ರೋಣನನಟ್ಟಿ ಸಿಂಧು ವಿಷಯಾಧೀಶಂ ಪೊದರೊಂದು ಮ ಚರದಿಂ ನಿನ್ನ ತನೂಜನಂ ಕೊಲಿಸಿದಂ ಮತ್ತಾಂತವರ್ ಕೊಲ್ವರ್ || ೧೧೭
ವ|| ಎಂಬುದುಂ ಪ್ರಚಂಡ ಕೋಪ ಪಾವಕ ಪ್ರಶಮಿತ ಶೋಕರಸನುಮುನ್ನತ ಲಲಾಟ ತಟ ಘಟಿತ ಭೀಷಣ ಭ್ರುಕುಟಿಯುಂ ಕಲ್ಪಾಂತ ದಿನಕರ ದುರ್ನಿರೀಕ್ಷನುಮುತ್ತಾತ ಮಾರುತನಂತೆ ಸಕಲ ಭೂಭೂತ್ಕಂಪಕಾರಿಯುಂ ವಿಂಧ್ಯಾಚಳದಂತೆ ವರ್ಧಮಾನೋತ್ಸಧನು ಮಂಧಕಾರಾತಿಯಂತೆ ಭೈರವಾಕಾರನುಮಾಗಿ
ಮ|| ರಸೆಯಿಂ ಭೂತಳದಿಂ ಕುಳಾದಿ ದಿಗ್ಧಂತಿಯಿಂ ವಾರ್ಧಿಯಿಂ
ದೆಸೆಯಿಂದಾಗಸದಿಂದಜಾಂಡ ತಟದಿಂದಲ್ಲಿ ಪೊಕ್ಕಿರ್ದುಮಿಂ | ಮಿಸುಕಲ್ ತೀರ್ಗುಮೆ ವೈರಿಗೆನ್ನ ಸುತನಂ ಕೊಂದಿರ್ದುದು ಕೇಳು ಸೈ ರಿಸಿ ಮಾರ್ದಪೆನಿನ್ನು ಮೆಂದೊಡಿದನಾಂ ಪೇರಿತಳ್ ನೀಗುವಂ || ೧೧೮ ಕಂ11 ಬಳೆದ ಸುತಶೋಕದಿಂದೀ
ಗಳೆ ಸುರಿಗುಮ ಸುರಿಯವಾ ಜಯದ್ರಥನ ಚಿತಾ | ನಳನಿಂದಮೊಗೆದ ಪೊಗೆಗಳ್
ಕೊಳೆ ಸುರಿವೊಡೆ ಸುರಿವುದೆನ್ನ ನಯನಜಲಂಗಳ್ ||
೧೧೯
೧೧೭. ಸೈಂಧವನು ಈಶ್ವರನಿಂದ ಪಡೆದ ವರದ ಅಹಂಕಾರದಿಂದ ದಾಕ್ಷಿಣ್ಯರಹಿತನಾಗಿ ನಮ್ಮನ್ನು ಎದ್ದು ಎದುರಿಸಿ ಆರ್ಭಟ ಮಾಡುತ್ತ, ದುರ್ಯೋಧನನೊಡನೆ ದ್ರೋಣನನ್ನು ಬೇರೆ ಕಡೆಗೆ ಕಳುಹಿಸಿ ತನ್ನಲ್ಲಿ ನೆಲೆಗೊಂಡಿದ್ದ ಮತ್ಸರದಿಂದ ನಿನ್ನ ಮಗನನ್ನು ಕೊಲ್ಲಿಸಿದನು. ಬೇರೆಯವರು ಅಭಿಮನ್ಯುವನ್ನು ಕೊಲ್ಲಲು ಸಾಧ್ಯವೇ? ವ| ಎನ್ನಲು ಅತ್ಯಂತ ಘೋರವಾದ ಕೋಪಾಗ್ನಿಯಿಂದ ಶೋಕರಸವು ಆರಿಹೋಯಿತು. ಎತ್ತರವಾದ ಮುಖದಲ್ಲಿ ಹುಬ್ಬು ಭಯಂಕರವಾಗಿ ಗಂಟಿಕ್ಕಿತು. ಪ್ರಳಯಕಾಲದ ಸೂರ್ಯನಂತೆ (ಕಣ್ಣಿನಿಂದ) ನೋಡಲಾಗದವನೂ ವಿಪತ್ಕಾಲದ ಗಾಳಿಯಂತೆ ಸಮಸ್ತ ಬೆಟ್ಟಗಳನ್ನೂ ನಡುಗಿಸುವವನೂ ವಿಂಧ್ಯಪರ್ವತದಂತೆ ಎತ್ತರವಾಗಿ ಬೆಳೆಯುತ್ತಿರುವವನೂ ಈಶ್ವರನಂತೆ ಭಯಂಕರಾಕಾರವುಳ್ಳವನೂ ಆದನು. ೧೧೮. ಪಾತಾಳದಿಂದಲೂ ಭೂಮಂಡಲದಿಂದಲೂ ಕುಲಪರ್ವತಗಳ ಸಮೂಹದಿಂದಲೂ ದಿಗ್ಗಜಗಳಿಂದಲೂ ಸಮುದ್ರಗಳಿಂದಲೂ ದಿಕ್ಕುಗಳಿಂದಲೂ ಬ್ರಹ್ಮಾಂಡದಿಂದಲೂ ಆಚೆಯ ಕಡೆ ಎಲ್ಲಿ ಹೊಕ್ಕಿದ್ದರೂ ನನ್ನ ಶತ್ರುವಿಗೆ (ಅಲ್ಲಿಂದ) ಅಳ್ಳಾಡಲು ಸಾಧ್ಯವೇ? ನನ್ನ ಮಗನನ್ನು ಕೊಂದಿರುವುದನ್ನು ಕೇಳಿಯೂ ಸೈರಿಸಿಕೊಂಡು ಇನ್ನೂ ಸುಮ್ಮನಿದ್ದೇನೆ ಎಂದರೆ ಈ ದುಃಖವನ್ನು ನಾನು ಮತ್ತಾವುದರಿಂದ ಪರಿಹಾರಮಾಡಿಕೊಳ್ಳಲಿ, ೧೧೯. ಅಭಿವೃದ್ಧಿಯಾಗುತ್ತಿರುವ ಪುತ್ರಶೋಕದಿಂದ ಈಗ ನನ್ನ ಕಣ್ಣೀರು ಸುರಿಯುತ್ತಿಲ್ಲ, ಸುರಿಯುವುದಿಲ್ಲ; ಆ ಸೈಂಧವನ ಚಿತಾಗ್ನಿಯಿಂದ ಹುಟ್ಟಿದ ಹೊಗೆಗಳು ಸುತ್ತಿ ಅವರಿಸಲು
Page #548
--------------------------------------------------------------------------
________________
ಏಕಾದಶಾಶ್ವಾಸಂ | ೫೪೩ ಬಿಸಜಭವನಕ್ಕೆ ಮೃಡನ ಕೃಸುರಾಂತಕನಕ್ಕೆ ಕಾವೊಡಂ ನಾಳಿನೋಳ | ರ್ವಿಸೆ ಕೊಂದು ಸಿಂಧುರಾಜನ ಬಸಿಯಿಂ ಪೊನ್ನ ಮಗನನಾಂ ತೆಗೆಯದಿರೆಂ ||
೧೨೦
ಕೊಂದೆನ್ನ ಮಗನನಿಂ ಭಯ ದಿಂದಂ ರಸೆವೊಕ್ಕುಮಜನ ಗುಂಡಿಗೆವೊಕ್ಕಂ | ಮಂದರಧರನೀ ಪೊರ್ಕು
ಪೊಂದಾವರೆವೊಕ್ಕು ಮೇಣವ ಬರ್ದುಕುವನೇ || ೧೨೧ - ಚ೦ll ಪಡೆ ಪಡೆಮೆಚೆಗಂಡನೆನೆ ಸಂದರಿಕೇಸರಿಯಂಬಗುರ್ವು ನೇ
ರ್ಪಡೆ ನೆಗಾನಣಂ ಸೆಡೆದು ಮಾಣೆನೆ ನಾಳೆ ದಿನೇಶನಸ್ತದೆ ! ತುಡುಗದ ಮನ್ನ ಸೈಂಧವನಗುರ್ವಿಸೆ ಕೊಲ್ಲದೊಡೇನೊ ಗಾಂಡಿವಂ
ಬಿಡಿದನೆ ಚಿಃ ತೊವಲ್ವಿಡಿದೆನಲ್ಲನೆ ವೈರಿಗೆ ಯುದ್ಧರಂಗದೊಳ್ || ೧೨೨
ವll ಎಂದು ನೃಪ ಪರಮಾತ್ಮ ಕೃತಪ್ರತಿಜ್ಞನಾದುದಂ ಸೈಂಧವನ ಸಜ್ಜನಂ ದುಜ್ಯೋದನನ ತಂಗೆ ದುಶ್ಯಳೆ ಕೇಳು ಮಲಮಲ ಮೃಲುಗಿ ತಮ್ಮಣ್ಣನಲ್ಲಿಗೆ ವಂದು ಕಾಲ ಮೇಲೆ ಕವಿದು ಪಟ್ಟುಕ೦ll ತನ್ನ ಸುತನವಿಯಲಟಿಯಲ್
ನಿನ್ನಯ ಮಯ್ತುನನನರ್ಜುನಂ ಪೂನದ | ರ್ಕಾನ್ನಡುಗಿ ಬಂದೆನಿ ನನ್ನೊಲೆಯ ಕಡಗದಣಿವನೇಂ ನೋಡಿದಪಾ ||
೧೨೩ ಆಗ ಮಾತ್ರ ನನ್ನ ಕಣ್ಣೀರು ಸುರಿಯುವುದು. ೧೨೦. ಬ್ರಹ್ಮನಾಗಲಿ ರುದ್ರನಾಗಲಿ ವಿಷ್ಣುವಾಗಲಿ ರಕ್ಷಿಸಿದರೂ ನಾಳೆ ಭಯಂಕರವಾದ ರೀತಿಯಲ್ಲಿ ಕೊಂದು ಆ ಸೈಂಧವನ ಹೊಟ್ಟೆಯನ್ನು ಸೀಳಿ ನನ್ನ ಮಗನನ್ನು ತೆಗೆಯದೆ ಇರುವುದಿಲ್ಲ. ೧೨೧. ನನ್ನ ಮಗನನ್ನು ಕೊಂದು ಭಯದಿಂದ ಇನ್ನು ಅವನು ಪಾತಾಳವನ್ನು ಪ್ರವೇಶಿಸಿದರೂ ಬ್ರಹ್ಮನ ಕಮಂಡಲವನ್ನು ಪ್ರವೇಶಿಸಿದರೂ ವಿಷ್ಣುವಿನ ನಾಭಿಕಮಲವನ್ನು ಸೇರಿದರೂ ಪುನಃ ಆ ಸೈಂಧವನು ಬದುಕಬಲ್ಲನೇ? ೧೨೨. ಸೈನ್ಯವು ನನ್ನನ್ನು 'ಪಡೆಮೆಚ್ಚೆಗಂಡ' ಎನ್ನುತ್ತಿರುವಾಗ ಪ್ರಸಿದ್ಧವಾದ ಅರಿಕೇಸರಿಯೆಂಬ ಪ್ರಶಸ್ತಿಯಿಂದ ನೇರವಾಗಿ ಪ್ರಸಿದ್ಧವಾಗಿರುವಾಗ ನಾನು ಸ್ವಲ್ಪ ಹೆದರಿ ಭಯದಿಂದ ಕುಗ್ಗಿಬಿಡುತ್ತೇನೆಯೇ? ನಾಳೆ ಸೂರ್ಯನು ಮುಳುಗುವುದಕ್ಕೆ ಮುಂಚೆಯೇ ಜಯದ್ರಥನು ಹೆದರುವಂತೆ ಅವನನ್ನು ಕೊಲ್ಲದಿದ್ದರೆ ನಾನು ಗಾಂಡೀವವನ್ನು ಧರಿಸಿದವನೇ ಅಲ್ಲ. ಯುದ್ಧರಂಗದಲ್ಲಿ ಹೆದರಿ ಭಯಸೂಚಕವಾದ ಚಿಗುರು ಹಿಡಿದವನಾಗುವುದಿಲ್ಲವೇ ? ವ|| ಎಂದು ನೃಪಪರಮಾತ್ಮನಾದ ಅರ್ಜುನನು ಪ್ರತಿಜ್ಞೆಮಾಡಿದುದನ್ನು ಸೈಂಧವನ ಪತ್ನಿಯೂ ದುರ್ಯೊಧನನ ತಂಗಿಯೂ ಆದ ದುಶ್ಯಳೆಯು ಕೇಳಿ ವಿಶೇಷವಾಗಿ ದುಃಖಪಟ್ಟು ತಮ್ಮಅಣ್ಣನ ಹತ್ತಿರಕ್ಕೆ ಬಂದು ಕಾಲಿನ ಮೇಲೆ ಕವಿದು ಬಿದ್ದಳು. ೧೨೩. ಅರ್ಜುನನು ತನ್ನ ಮಗನು ಸಾಯಲು ನಿನ್ನ ಮಯ್ತುನನ ಸಾವಿಗೆ ಪ್ರತಿಜ್ಞೆಮಾಡಿದ್ದಾನೆ. ಅದಕ್ಕಾಗಿ
Page #549
--------------------------------------------------------------------------
________________
೫೪೪ | ಪಂಪಭಾರತಂ
ವ|| ಎಂಬುದುಂ ಸುಯೋಧನಂ ಮುಗುಳಗೆ ನಕ್ಕಿಂತೆಂದಂಕಂt! ಮರುಳು ಮಗನ ಶೋಕದಿ
ನುರುಳುಂ ಪೂಣ್ಣವನ ಪೂಣೆ ದುಶ್ಯಾಸನನೊಳ್ | ಕರತನದಿಂದನ್ನೊಳಮಾ ಮರುತ್ತುತಂ ಪೂಣ್ಣ ಪೂಣೆಯಂತೆವೋಲಕ್ಕುಂ ||
೧೨೪ ಚಂ|| ಕೃತ ವಿವಿಧಾಸ್ತಶಸ್ತ ಯಮಪುತ್ರ ಮರುತ್ತುತ ಯಜ್ಞಸೇನರು
ದೃತ ಬಳರ ಕಾದಿ ಸುಗಿದೋಡಿದರಲ್ಲರೆ ಕಾವರೀ ವಿಎಂ | ಶತಿ ಕೃಪ ಕರ್ಣ ಶಲ್ಕ ಕಳಶೋದ್ಭವ ತಪ್ಪಿಯ ಪುತ್ರರೆಂದೂಡ
ಪ್ರತಿರಥನಂ ಜಯದ್ರಥನನಾಜಿಯೊಳೆಯರೆ ವರ್ಷ ಗಂಡರಾರ್ || ೧೨೫
ವ|| ಎಂದು ದುತ್ಕಳೆಯನೊಡಗೊಂಡು ಕುಂಭಸಂಭವನಲ್ಲಿಗೆ ವಂದಿಂತೆಂದಂಮll ಸll ಸುತಶೋಕೋದ್ರೇಕದಿಂ ಸೈಂಧವನನಟಿವೆನೆಂದರ್ಜುನಂ ಪೂಣ್ಣನಿಂತೀ
ಸತಿ ಬಂದಳ್ ಕಾವುದಾತ್ಮಾನುಜೆಯ ಕಡಗಮಂ ನೀಮ ಮಾರ್ಕೊಳೊಡಾರ ವಿತರರ್ ಮುಟ್ಟಲ್ ಸಮರ್ಥರ್ ಕದನದೊಳೆನೆ ಗೆಲ್ತಾಸೆಯಂತಿರ್ಕ ಸಿಂಧು ಕ್ಷಿತಿಪಂ ತಾನೇನನಾದಂ ರಣದೊಳದನೆ ಪೋಗಾನುಮಪ್ಟೆಂ ನರೇಂದ್ರಾ || ೧೨೬
ನಾನು ನಡುಗಿ ಬಂದೆನು. ನೀನು ನನ್ನ ಓಲೆ ಮತ್ತು ಕಡಗದ ನಾಶವನ್ನು (ಸೌಮಂಗಲ್ಯದ ನಾಶವನ್ನು ನೋಡುತ್ತೀಯಾ? ವ|| ಎನ್ನಲು ದುರ್ಯೋಧನನು ಹುಸಿನಗೆ ನಕ್ಕು ಹೀಗೆಂದನು. ೧೨೪, ಹುಚ್ಚುತಂಗೀ, ಮಗನ ದುಃಖದಿಂದ ಅರ್ಜುನನು ಉರುಳಾಡಿಮಾಡಿದ ಪ್ರತಿಜ್ಞೆಯು ಭೀಮನು ದುಶ್ಯಾಸನನಲ್ಲಿಯೂ ನನ್ನಲ್ಲಿಯೂ ಬಹಳ ತೀವ್ರತೆಯಿಂದ ಮಾಡಿದ ಪ್ರತಿಜ್ಞೆಯಂತೆಯೇ ನಿಷ್ಪಲವಾಗುತ್ತದೆ. ೧೨೫. ನಾನಾ ಶಸ್ತ್ರಾಸ್ತ್ರಗಳಲ್ಲಿ ಪ್ರವೀಣರಾದ ಧರ್ಮರಾಜ, ಭೀಮ, ಧೃಷ್ಟದ್ಯುಮ್ಮರು ವಿಶೇಷ ಶಕ್ತಿಯುಳ್ಳವರು - ದಂಡೆತ್ತಿ ಬಂದು ಯುದ್ಧಮಾಡಿ ಹೆದರಿ ಓಡಿದವರಲ್ಲವೇ? (ಜಯದ್ರಥನೊಡನೆ ಕಾದಲಾರದೆ ಹೆದರಿ ಓಡಿ ಹೋದರಲ್ಲವೇ ?) ವಿವಿಂಶತಿ, ಕೃಪ, ಕರ್ಣ, ಶಲ್ಯ, ದ್ರೋಣ, ಅವನ ಪ್ರಿಯಪುತ್ರನಾದ ಅಶ್ವತ್ಥಾಮ ಮೊದಲಾದವರು ಜಯದ್ರಥನನ್ನು ರಕ್ಷಿಸುವರು ಎನ್ನುವಾಗ ಸಮಾನವಾದ ರಥಿಕರೇ ಇಲ್ಲದ ಜಯದ್ರಥನು ಯುದ್ದದಲ್ಲಿ ಬರುತ್ತಿದ್ದರೆ ಅವನನ್ನು ಬಂದು ಎದುರಿಸುವ ಶೂರರಾರಿದ್ದಾರೆ? ವ| ಎಂದು ದುಕ್ಕಳೆಯನ್ನು ಜೊತೆಯಲ್ಲಿ ಕರೆದುಕೊಂಡು ದ್ರೋಣಾಚಾರ್ಯರಲ್ಲಿಗೆ ಬಂದು ಹೀಗೆಂದು ಹೇಳಿದನು - ೧೨೬. ಪುತ್ರಶೋಕೋದ್ರೇಕದಿಂದ ಅರ್ಜುನನು ಸೈಂಧವನನ್ನು ಕೊಲ್ಲುವೆನೆಂದು ಪ್ರತಿಜ್ಞೆಮಾಡಿದನು. ಅದಕ್ಕಾಗಿ ಈ ತಂಗಿ ಬಂದಿದ್ದಾಳೆ. ನನ್ನ ತಂಗಿಯ ಕಡಗವನ್ನು ನೀವೆ ರಕ್ಷಿಸಬೇಕು. ಯುದ್ಧದಲ್ಲಿ ನೀವೆ ಪ್ರತಿಭಟಿಸಿದರೆ ಅವನನ್ನು ಮುಟ್ಟಲು ಸಮರ್ಥರಾಗುತ್ತಾರೆಯೇ ಎಂದನು. ಗೆಲ್ಲುವಾಸೆ ಹಾಗಿರಲಿ, ದುರ್ಯೋಧನಾ, ಯುದ್ಧದಲ್ಲಿ ಸೈಂಧವನೇನಾಗುತ್ತಾನೆಯೋ ಅದನ್ನೇ ನಾನೂ ಆಗುತ್ತೇನೆ ಹೋಗು.
Page #550
--------------------------------------------------------------------------
________________
ಏಕಾದಶಾತ್ನಾಸಂ | ೫೪೫ ಮll ಬಿಜಯಂಗೆಯ್ಯನ ಪೋಪುದುಂ ನೃಪನದಂ ಧರ್ಮಾತ್ಮಜಂ ಕೇಳು ಪೇ
ಅಜಿತಂಗಾ ಹರಿ ಪೇಟ್ಟುದೊಂದು ನಯದಿಂದಾ ರಾತ್ರಿಯೋಲ್ ಪೋಗಿ ಕುಂ | ಭಜನಂ ಕಂಡು ವಿನಮ್ರನಾಗಿ ನುಡಿದಂ ನೀಮಿಂತು ಕೆಯೋಂಡು ಕಾ ದ ಜಗತ್ತೂಜಿತ ಬೆಟ್ಟನಾದೊಡಮಗಿಂ ಬಾಯ್ತಾಸೆಯಾವಾಸೆಯೋ 1 ೧೨೭ ಕoll - ನಿಮ್ಮಳವನಣಿದು ಮುನಮೆ
ನಿಮ್ಮ ಪ್ರಾರ್ಥಿಸಿದೆಮೀಗಳದುವಂ ಮಂದಿರ್ | ನಿಮ್ಮಯ ಧರ್ಮದ ಮಕ್ಕಳ ಎಮ್ಮಂ ಕಡೆಗಣಿಸಿ ನಿಮಗೆ ನೆಗಟ್ಟುದು ದೊರೆಯೇ || ೧೨೮ ಎನೆ ಗುರು ಕರುಣಾರಸಮದು ಮನದಿಂ ಪೊಅಪೊಸ್ಟ್ ನಿನಗೆ ಜಯಮಕ್ಕುಮನಂ | ತನ ಪೇಟ್ಟ ತಂದೆ ನೆಗಟನೆ
ವಿನಯದ ಬೀಳ್ಕೊಂಡು ನೃಪತಿ ಬೀಡಂ ಪೊಕ್ಕಂ || ೧೨೯ ವ|| ಆಗಳಾರೂಢಸರ್ವಜ್ಞ ಪ್ರತಿಜ್ಞಾರೂಢನಾಗಿ ಗಂಗಾನದೀ ತರಂಗೋಪಮಾನ ದುಕ್ಲಾಂಬರ ಪರಿಧಾನನುಮಾಗಿ ಧವಳಶಯಾತಳದೊಳ್ ಮಜ್ದೂಅಗಿದನಮೋಘಾಸ್ತ್ರ ಧನಂಜಯನಂ ಪುಂಡರೀಕಾಕ್ಷಂ ನೋಡಿಚoll ಅರಿದು ಕೋಲಿ ಸೈಂಧವನನಾಜಿಯೊಳೀತನ ಪೂಣ್ಣ ಪೂಣೆಯುಂ
ಪಿರಿದವನುಗ್ರ, ಪಾಶುಪತ ಬಾಣದಿನಲ್ಲದೆ ಸಾಯನಂತದಂ | ಹರನೊಸೆದಿತ್ತುಮೇನದು ಮುಷ್ಟಿಯನೀಯನೆ ಬೇಡವೇಚ್ಚುದಾ ದರದದನೆಂದು ಚಕ್ರಿ ಶಿವನಲ್ಲಿಗೆ ಕೊಂಡೊಗದಂ ಕಿರೀಟಿಯಂ || ೧೩೦
೧೨೭. ನೀನು ದಯಮಾಡಿಸು ಎನ್ನಲು ರಾಜನು ಹೊರಟು ಹೋದನು, ಅದನ್ನು ಧರ್ಮರಾಯನು ಕೇಳಿ ಕೃಷ್ಣನಿಗೆ ತಿಳಿಸಿದನು. ಅದನ್ನು ಹೇಳಿದ ಒಂದು ನೀತಿ (ಉಪಾಯ)ಯಿಂದ ರಾತ್ರಿಯಲ್ಲಿ ಹೋಗಿ ದ್ರೋಣನನ್ನು ಕಂಡು ಬಹಳ ನಮ್ರತೆಯಿಂದ ಹೇಳಿದನು. ನೀವು ಹೀಗೆ ಅಂಗೀಕಾರಮಾಡಿ (ದುರ್ಯೋಧನನ ಪಕ್ಷವನ್ನು) ಕರುಣವಿಲ್ಲದೆ ಕಾದಿದರೆ ಲೋಕಪೂಜ್ಯರಾದವರೇ ನಮಗೆ ಇನ್ನು ಬಾಳುವಾಸೆ ಯಾವುದು? ೧೨೮. ನಿಮ್ಮ ಶಕ್ತಿಯನ್ನು ತಿಳಿದು ಮೊದಲೇ ನಿಮ್ಮನ್ನು ಪ್ರಾರ್ಥಿಸಿದನು. ಈಗ ಅದನ್ನೂ ಮರೆತು ನಿಮ್ಮಧರ್ಮದ ಮಕ್ಕಳಾದ ನಮ್ಮನ್ನು ಉದಾಸೀನ ಮಾಡಿ ನೀವು ನಡೆದುಕೊಳ್ಳುವುದು ಸರಿಯೇ ? ೧೨೯. ಎನ್ನಲು ಆಚಾರ್ಯನಾದ ದ್ರೋಣನು ಕರುಣಾರಸವು ಮನಸ್ಸಿನಿಂದ ಹೊರಹೊಮ್ಮುತ್ತಿರಲು 'ಕೃಷ್ಣನು ಹೇಳಿದ ಹಾಗೆ ಮಾಡು, ನಿನಗೆ ಜಯವಾಗುತ್ತದೆ' ಎಂದನು. ವಿನಯದಿಂದ ಅಪ್ಪಣೆಯನ್ನು ಪಡೆದು ಹೊರಟು ಧರ್ಮರಾಜನು ತನ್ನ ಮನೆಯನ್ನು ಪ್ರವೇಶಿಸಿದನು. ವ|| ಆಗ ಆರೂಢಸರ್ವಜ್ಞನಾದ ಅರ್ಜುನನು ಪ್ರತಿಜ್ಞೆಯನ್ನು ಮಾಡಿದವನಾಗಿ ಗಂಗಾನದಿಯ ಅಲೆಗಳಿಗೆ ಸಮಾನವಾದ ರೇಷ್ಮೆಯ ಬಟ್ಟೆಯ ಹೊದಿಕೆಯುಳ್ಳವನಾಗಿ ಬಿಳಿಯ ಹಾಸಿಗೆಯ ಮೇಲೆ ಮರೆತು ಮಲಗಿದನು. ಹಾಗೆ ಮಲಗಿದ್ದ ಅಮೋಘಾಸ್ತಧನಂಜಯನಾದ ಅರ್ಜುನನನ್ನು ಕೃಷ್ಣನು ನೋಡಿ -೧೩೦. ಸೈಂಧವನನ್ನು ಯುದ್ಧದಲ್ಲಿ ಕೊಲ್ಲುವುದು ಅಸಾಧ್ಯ. ಇವನು (ಅರ್ಜುನನು) ಮಾಡಿದ ಆಜ್ಞೆಯೂ ಗುರುತರವಾದುದು. ಜಯದ್ರಥನು ಉಗ್ರವಾದ
Page #551
--------------------------------------------------------------------------
________________
೫೪೬ | ಪಂಪಭಾರತಂ
ವ|| ಅಂತು ಮನಃಪವನವೇಗದಿಂ ಕೈಲಾಸ ಶೈಳಮನೆಮ್ಮೆ ಕದನತ್ರಿಣೇತ್ರನಂ ತ್ರಿಣೇತ್ರನ ಮುಂದಿಟಿಪುವುದುಮಭವ ತನ್ನ ಪಾದಪದಂಗಳೆಯಗಿದತಿರಥ ಮಥನನುಮಂ ಮಧುಮಥನನು ಮನಮ್ಮತದೃಷ್ಟಿಯಿಂ ನೋಡಿ ಪಾಶುಪತದ ಮುಷ್ಟಿಯಂ ಬೇಡಲೆಂದು ಬಂದುದಂ ತನ್ನ ದಿವ್ಯಜ್ಞಾನದಿಂದಮಣಿದುಕ೦ll ಅಪಗತ ಕಪಟದೆ ನಟನದ
ನುಪದೇಶಂಗೆಯು ಪರಸಿ ಪೋಗೆನೆ ಪೊಡೆಮ್ | ಟ್ಟು ಪಸಾದವೆಂದ ಹರಿಗನ
ನುಪೇಂದ್ರನಾ ದರ್ಭಶಯನ ತಳಕಿಟೆಪುವುದುಂ || ' ೧೩೧ ವ|| ಅಂತುದಾರ ಮಹೇಶ್ವರನೀಶ್ವರ ವರಪ್ರಸಾದಮೆಲ್ಲಂ ತನಗೆ ನನಸಾಗೆಯುಂ ಕನಸಿನಂದಮಾಗಿ ತೋತಿ ಮಂಗಳಪಾಠಕರವಂಗಳೊಳ್ ಭೋಂಕನೆಂತನನ್ನೆಗಂಕ೦ll ತನ್ನ ಸುತನಲಲೊಳರ್ಜುನ
ನೆನ್ನುದಯಮನೆಯ ಪಾರ್ದು ಪಗೆವರ ಬೇರೋಲ್ | ಬೆನ್ನೀರನೆಯದಿರನದ ನಾನೊಡುವೆನೆಂಬ ತೆಲದಿನಿನನುದಯಿಸಿದಂ ||
೧೩೨ ವ|| ಅಗಳುಭಯ ಸೈನ್ಯಾಂಬುರಾಶಿಗಳಂಬುರಾಶಿಗಳ ನೆಲೆಯಿಂ ತಳರ್ವಂತೆ ತಳರೆ ಕಳಶಸಂಭವನಂದಿನನುವರದೊಳ್ ತನ್ನಂ ಪರಿಚ್ಛೇದಿಸಿ ಕನಕ ಕಳಶ ಸಂಭ್ರತ ಮಂಗಳ ಜಳಂಗಳಂ
ಪಾಶುಪತದಿಂದಲ್ಲದೆ ಸಾಯುವುದಿಲ್ಲ. ಹಾಗೆ ಅದನ್ನು ಈಶ್ವರನು ಪ್ರೀತಿಯಿಂದ ಕೊಟ್ಟಿದ್ದರೆ ತಾನೆ ಏನು ಪ್ರಯೋಜನ? ಅದರ ಪ್ರಯೋಗ ಮಂತ್ರವನ್ನು ಕೊಟ್ಟಿಲ್ಲವಲ್ಲ; ಅದನ್ನು ಭಕ್ತಿಯಿಂದ ಬೇಡಬೇಕಾಗಿದೆ ಎಂದು ಕೃಷ್ಣನು ಅರ್ಜುನನನ್ನು ಶಿವನಲ್ಲಿಗೆ ಕರೆದುಕೊಂಡು ಹೋದನು. ವ|| ಮನೋವೇಗ ವಾಯುವೇಗದಿಂದ ಕೈಲಾಸಪರ್ವತವನ್ನು ಸೇರಿ ಅರ್ಜುನನನ್ನು ಈಶ್ವರನ ಮುಂದೆ ಇಳಿಸಿದನು. ಶಿವನು ತನ್ನ ಪಾದಕಮಲಗಳಿಗೆರಗಿದ ಅರ್ಜುನನನ್ನೂ ಕೃಷ್ಣನನ್ನೂ ಅಮೃತದೃಷ್ಟಿಯಿಂದ ನೋಡಿದನು. ಪಾಶುಪತದ ಮುಷ್ಟಿಯನ್ನು ಬೇಡುವುದಕ್ಕಾಗಿ ಬಂದಿರುವುದನ್ನು ತನ್ನ ದಿವ್ಯಜ್ಞಾನದಿಂದ ತಿಳಿದನು. ೧೩೧. ನಿಷ್ಕಪಟದಿಂದ ಆ ಮಂತ್ರೋಪದೇಶ ಮಾಡಿ ಹರಸಿದನು. ನಮಸ್ಕರಿಸಿ ಅನುಗ್ರಹೀತನಾದೆನೆಂದು ಹೇಳಿದ ಅರ್ಜುನನನ್ನು ಕೃಷ್ಣನು ದರ್ಭೆಯಿಂದ ಮಾಡಿದ (ಹಿಂದಿನ ಹಾಸಿಗೆಯ ಮೇಲಕ್ಕೆ ತಂದು ಇಳಿಸಿದನು. ವಉದಾರಮಹೇಶ್ವರನಾದ ಅರ್ಜುನನು ಈಶ್ವರನ ವರಪ್ರಸಾದವೆಲ್ಲ ತನಗೆ ಪ್ರತ್ಯಕ್ಷನಾಗಿದ್ದರೂ ಕನಸಿನಂತೆ ತೋರುತ್ತಿರಲು ಸ್ತುತಿಪಾಠಕರ ಮಂಗಳಧ್ವನಿಯಿಂದ ಭೋಂಕನೆ ಎಚ್ಚರಗೊಂಡನು; ಅಷ್ಟರಲ್ಲಿ ೧೩೨. ತನ್ನ ಮಗನ ಸಾವಿನ ದುಃಖದಲ್ಲಿ ಅರ್ಜುನನು ನನ್ನುದಯವನ್ನೇ ನಿರೀಕ್ಷಿಸುತ್ತಿದ್ದು ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಎರೆಯದೇ ಇರುವುದಿಲ್ಲ; ಅದನ್ನು ನಾನು ನೋಡುತ್ತೇನೆ ಎಂಬ ರೀತಿಯಲ್ಲಿ ಸೂರ್ಯನು ಉದಯವಾದನು. ವಆಗ ಎರಡು ಸೇನಾಸಮುದ್ರಗಳೂ ನೆಲೆಯಿಂದ ಹೊರಡುವಂತೆ ಹೊರಟರು. ದ್ರೋಣಾಚಾರ್ಯನು ಆ ದಿನದ ಯುದ್ಧದಲ್ಲಿ ತನ್ನನ್ನು
Page #552
--------------------------------------------------------------------------
________________
ಏಕಾದಶಾಶ್ವಾಸಂ | ೫೪೭ ಮಿಂದು ಧವಳ ವಸನ ದುಕೂಲಾಂಬರ ಮಂಗಳ ವಿಭೂಷಣನುಂ ನಿರ್ವತಿ್ರತ ಸಂಧೋಪಾಸನನುಂ ಪರಿಸಮಾಪ್ತ ಜಪನುಮರ್ಚಿತ ಶಿತಿಕಂಠನುಮಾಹುತಿ ಹುತಾಗ್ನಿಹೋತ್ರನುಂ ಪೂಜಿತ ಧರಾಮರನುಂ ನೀರಾಜಿತ ರಥತುರಗನುಮಾಗಿ ರಜತ ರಥಮನೇಣಿ, ಸಂಗ್ರಾಮ ಭೂಮಿಯನೆಯ್ದವಂದು ಸಾಮಂತ ಚೂಡಾಮಣಿಯನಿನಿಸು ಮಾರ್ಕೊಂಡು ನಿಮ್ಮೊಡಂ ಸಿಂಧುರಾಜನಂ ಕಾವೊಡಮನೇಕ ಮೊಹರಚನೆಯೊಳಲ್ಲದೆ ಗೆಲಲ್ ಬಾರದೆಂದು ಚಕ್ರವ್ಯೂಹಮನಿದಿರೊಳೊಡ್ಡಿ ಸಕಳ ಸಾಮಂತ ಚಕ್ರಮನಿರಲ್ವೇಲ್ಲಿಗೆ ನಾಲ್ಕುಂ ಯೋಜನದ ಪದುಮವ್ಯೂಹದೊಳಂಗರಾಜ ಶಲ್ಯ ವೃಷಸೇನ ಕೃಪ ಕೃತವರ್ಮಾಶ್ವತ್ಥಾಮರಂ ದುರ್ಯೋಧನಂ ಬೆರಸಿರಿಸಿ ಮತ್ತಿತ್ತ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲೊಳ್ ಬಾಘೀಕ ಸೋಮದತ್ತ ವಿಂದಾನುವಿಂದರೊಡನೆ ಸ೦ಸಕರ ನಿರಿಸಿ ಶಕಟವ್ಯೂಹದ ಪೆ ಅಗೆ ನಾಲ್ಕು ಯೋಜನದೊಳರ್ಧಚಂದ್ರವೂಹದೊಳಧಿಕ ಬಲರಪ್ಪ ಸೌಬಲ ದುಶ್ಯಾಸನಾದಿ ಪ್ರಧಾನ ವೀರಭಟ ಕೋಟಿಯ ನಡುವೆ ಸಿಂಧುರಾಜನನಿರಿಸಿ ಮೊದಲ ಚಕ್ರವ್ಯೂಹದ ಬಾಗಿಲೋಳ್ ಶರಾಸನಾಚಾರ್ಯ ನಿಂದನಿತ ಪಾಂಡವಬಲಮೆಲಮುಂ ವಿಕ್ರಮಾರ್ಜುನನುಂ ವಜ್ರಪಂಜರದಂತಭೇದಮಪ ವಜವೂಹಮನೊಡಿ ಧರ್ಮರಾಜನೊಡನೆ ಭೀಮ ನಕುಲ ಸಹದೇವ ಸಾತ್ಯಕಿ ಧೃಷ್ಟದ್ಯುಮ್ಮ ಘಟೋತ್ಕಚ ಪ್ರಮುಖ ನಾಯಕರ೦ ಪಟ್ಟು ದ್ರುಪದ ವಿರಾಟ ಶಿಖಂಡಿ
(ತನ್ನ ಸ್ಥಿತಿಯನ್ನು ನಿಶ್ಚಯಿಸಿಕೊಂಡು ಚಿನ್ನದ ಕಲಶಗಳಲ್ಲಿ ತುಂಬಿದ ಮಂಗಳಜಲದಲ್ಲಿ ಸ್ನಾನಮಾಡಿ ಬಿಳಿಯ ರೇಷ್ಮೆಯ ಉಡುಪೇ ಮೊದಲಾದ ಮಂಗಳಾಭರಣಯುತನಾಗಿ ಸಂಧ್ಯಾವಂದನವನ್ನೂ ಜಪವನ್ನೂ ಮುಗಿಸಿ ಶಿವನನ್ನು ಆರಾಧಿಸಿ ಅಗ್ನಿಗಾಹುತಿಯನ್ನಿತ್ತು ಬ್ರಾಹ್ಮಣರನ್ನು ವಂದಿಸಿ ರಥ ಕುದುರೆಗಳಿಗೆ ಆರತಿಮಾಡಿ ಬೆಳ್ಳಿಯ ತೇರನ್ನು ಹತ್ತಿ ಯುದ್ಧರಂಗದ ಸಮೀಪಕ್ಕೆ ಬಂದನು. ಸಾಮಂತ ಚೂಡಾಮಣಿಯಾದ ಅರ್ಜುನನನ್ನು ಸ್ವಲ್ಪ ಎದುರಿಸಿ ನಿಲ್ಲಬೇಕಾದರೂ ಸೈಂಧವನನ್ನು ರಕ್ಷಿಸಬೇಕಾದರೂ ಅನೇಕ ವ್ಯೂಹರಚನೆಯಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲವೆಂದು ಚಕ್ರವ್ಯೂಹವನ್ನೇ ಮುಂಭಾಗದಲ್ಲಿ ಒಡ್ಡಿ ಸಾಮಂತರಾಜರ ಸಮೂಹವನ್ನು ಅಲ್ಲಿ ಇರಹೇಳಿದನು. ಅಲ್ಲಿಗೆ ನಾಲ್ಕು ಯೋಜನದ ದೂರದಲ್ಲಿದ್ದ ಪದ್ಮವ್ಯೂಹದಲ್ಲಿ ಕರ್ಣ, ಶಲ್ಯ, ವೃಷಸೇನ, ಕೃಪ, ಕೃತವರ್ಮಾಶ್ವತ್ಥಾಮರನ್ನು ದುರ್ಯೊಧನನೊಡನೆ ಇರಿಸಿದನು. ಮತ್ತೆ ಈ ಕಡೆ 'ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲಿನಲ್ಲಿ ಬಾಹಿಕ ಸೋಮದತ್ತ ವಿಂದಾನುವಿಂದರೊಡನೆ ಸಂಸಪ್ತಕರನಿಟ್ಟನು. ಶಕಟವ್ಯೂಹದ ಹಿಂದೆ ನಾಲ್ಕು ಯೋಜನದಲ್ಲಿ ಅರ್ಧಚಂದ್ರವ್ಯೂಹದಲ್ಲಿ ಅಧಿಕಬಲರಾದ ಶಕುನಿ ದುಶ್ಯಾಸನನೇ ಮೊದಲಾದ ಪ್ರಧಾನ ನಾಯಕರ ಸಮೂಹದ ಮಧ್ಯದಲ್ಲಿ ಸಿಂಧುರಾಜನನ್ನು ಇರಿಸಿದನು. ಮೊದಲನೆಯ ಚಕ್ರವ್ಯೂಹದ ಬಾಗಿಲಿನಲ್ಲಿ ಚಾಪಾಚಾರ್ಯನಾದ ದ್ರೋಣನೇ ನಿಂತುಕೊಂಡನು. ಈ ಕಡೆ ಅರ್ಜುನನೂ ಪಾಂಡವಸೈನ್ಯವನ್ನೆಲ್ಲ ವಜ್ರಪಂಜರದಂತೆ ಭೇದಿಸುವುದಕ್ಕಾಗದಿರುವ ವಜ್ರವ್ಯೂಹವನ್ನೊಡ್ಡಿ ಧರ್ಮರಾಜನೊಡನೆ ಭೀಮ ನಕುಲ ಸಹದೇವ ಸಾತ್ಯಕಿ ಧೃಷ್ಟದ್ಯುಮ್ಮ ಘಟೋತ್ಕಚರೇ ಮುಖ್ಯರಾದ ನಾಯಕರನ್ನು ಇರಹೇಳಿ ದ್ರುಪದ ವಿರಾಟ ಶಿಖಂಡಿ
Page #553
--------------------------------------------------------------------------
________________
೫೪೮ / ಪಂಪಭಾರತಂ ಯುಧಾಮನ್ನೂತ್ತಮೌಜಃಕೈಕಯ ಪ್ರಧಾನ ನಾಯಕರಂ ತನ್ನೊಡನೆ ಕೂಡಿಕೊಂಡು ನಿಜಾಗ್ರಜನಂ ಬೀಳ್ಕೊಂಡು ನಿಜರಥಮಂ ರಥಾಂಗಧರನಂ ಮುನ್ನಮೇಜಲ್ಬಟ್ಟು ಮೂರು ಸೂಯ್ ಬಲವಂದು ಪೊಡಮಟ್ಟು ರಥವನೇ ವಜ್ರಕವಚಮಂ ತೊಟ್ಟು ತವಕಗಳನಮರ ಬಿಗಿದು ಗಾಂಡೀವಮನೇಲಿಸಿ ನೀವಿ ಜೇವೊಡೆದಾಗಳ್ಪದ್ಧಿ | ಭವಂ ಭವನ ಗೋತ್ರದಿಂದಜನಜಾಂಡದಿಂ ಭಾನು ಭಾ
ನು ವೀಧಿಯಿನಿಳಾತಳಂ ತಳದಿನೆಯ್ದ ಕಿಟ್ಟು ತೂ | ಇವಾರ್ಯ ಭುಜವೀರ್ಯಮಂ ನೆಯ ತೋರ್ಪಿನಂ ಕುಂಭ ಸಂ
ಭವಂ ಮರಲೆ ತಾಗಿದಂ ರಿಪುಕುರಂಗ ಕಂಠೀರವಂ ||
ವ|| ಅಂತು ತಾಗಿ ಚಕ್ರವ್ಯೂಹದ ಬಾಗಿಲೊಳ್ ತನ್ನಂ ಪುಗಲೀಯದಡ್ಡವಾಗಿ ನಿಂದ - ಕಾರ್ಮುಕಾಚಾರ್ಯನನುಜ ಸಗೆಯ್ಯದೆ ವಿನಯಾಸ್ತಮನೆಚ್ಚು ವಿನಯಮನೆ ಮುಂದಿಟ್ಟು ಬಲವಂದು ಪೊಡಮಟ್ಟು ಪೋಗವೋಗಮll ಕಮನೀಯಂ ಬಲವಂದು ಪೋಪನನಲೇ ಪೋಪೋಗದಿರ್ ಪೋಗದಿರ್
ಸಮರಕ್ಕೆನ್ನೂಡನಂಜಿ ಪೊದೆಯೆನಲಿಂತೆಂದಂ ನರಂ ದ್ರೋಣರಂ | ನಿಮಗಾನಂಜುವುದೆನ್ನ ಬಾಲತನದಿಂದಂದಾದುದಿಂದಾದುದೇ ನಿಮಗಾನಂಜದೊಡಂಜಿಸಲ್ ನೆಟವನೇ ತೈಲೋಕಮಂ ಯುದ್ಧದೊಳ್|| ೧೩೪
೧೩೩
ಯುಧಾಮನ್ನೂತ್ತಮೌಜಸ್ ಕೈಕಯರೇ ಮೊದಲಾದ ನಾಯಕರನ್ನು ತನ್ನೊಡನೆ ಸೇರಿಸಿಕೊಂಡು ತಮ್ಮಣ್ಣನ ಅಪ್ಪಣೆಯನ್ನು ಪಡೆದು ಹೋದನು. ಕೃಷ್ಣನನ್ನು ಮೊದಲು ತನ್ನ ತೇರನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣ ನಮಸ್ಕಾರಮಾಡಿ ರಥವನ್ನು ಹತ್ತಿ ವಜ್ರಕವಚವನ್ನು ತೊಟ್ಟು ಬರಿದಾಗದ ಬತ್ತಳಿಕೆಯನ್ನು (ಅಕ್ಷಯತೂಣೀರ) ಬಿಗಿಯಾಗಿ ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯೇರಿಸಿ ನೀವಿ ಶಬ್ದಮಾಡಿದನು. ೧೩೩. ಆ ಶಬ್ದದಿಂದ ಈಶ್ವರನು ಕೈಲಾಸಪರ್ವತದಿಂದಲೂ ಬ್ರಹ್ಮನು ಬ್ರಹ್ಮಾಂಡದಿಂದಲೂ ಸೂರ್ಯನು ಆಕಾಶಮಾರ್ಗದಿಂದಲೂ ಭೂಮಂಡಲವು ತನ್ನ ಮೂಲದಿಂದಲೂ ಪೂರ್ಣವಾಗಿ ಕಿತ್ತು ಎದ್ದು ಬರುವ ಹಾಗಾಯಿತು. ತಡೆಯಲಸಾಧ್ಯವಾದ ತನ್ನ ಬಾಹುಬಲವನ್ನು (ಅರ್ಜುನನು) ಪೂರ್ಣವಾಗಿ ಪ್ರದರ್ಶಿಸಿ ದ್ರೋಣಾಚಾರ್ಯನು ಸಂತೋಷಪಡುವಂತೆ ರಿಪುಕುರಂಗ ಕಂಠೀರವನಾದ ಅರ್ಜುನನು (ಪ್ರತಿಸೈನ್ಯವನ್ನು) ತಾಗಿದನು. ವ|| ಚಕ್ರವ್ಯೂಹದ ಬಾಗಿಲಿನಲ್ಲಿ ತಾನು ಪ್ರವೇಶಿಸುವುದಕ್ಕೆ ಅಡ್ಡವಾಗಿ ನಿಂತಿದ್ದ ಚಾಪಾಚಾರ್ಯನಾದ ದ್ರೋಣಾಚಾರ್ಯನನ್ನು ಚೆನ್ನಾಗಿ ಸೆರೆಹಿಡಿಯದೆ ವಿನಯಾಸ್ತ್ರವನ್ನೇ ಪ್ರಯೋಗಿಸಿ ನಮ್ರತೆಯನ್ನೆ ಮುಂದುಮಾಡಿಕೊಂಡು ಪ್ರದಕ್ಷಿಣನಮಸ್ಕಾರಮಾಡಿ ಮುಂದೆ ಹೋದನು. ೧೩೪. ಮನಗೊಳ್ಳುವಂತೆ (ಆಕರ್ಷಕವಾದ ರೀತಿಯಲ್ಲಿ ಪ್ರದಕ್ಷಿಣೆ ಮಾಡಿ ಹೋಗು ತಿರುವ ಅರ್ಜುನನನ್ನು ದ್ರೋಣಾಚಾರ್ಯರು ತಡೆದು 'ಎಲವೋ ಹೋಗಬೇಡ, ಹೋಗಬೇಡ, ನನ್ನೊಡನೆ ಯುದ್ಧಮಾಡುವುದಕ್ಕೆ ಹೆದರಿ ಹೋಗುತ್ತಿದ್ದೀಯೆ' ಎಂದರು. ಅರ್ಜುನನು ಆಚಾರ್ಯರನ್ನು ಕುರಿತು ಹೀಗೆಂದನು-'ನಿಮಗೆ ಹೆದರುವುದು
Page #554
--------------------------------------------------------------------------
________________
ಏಕಾದಶಾಶ್ವಾಸಂ | ೫೪೯ ವll ಅಂತು ವಿನಯಮನೆ ನುಡಿದ ವಿಕ್ರಮಾರ್ಜುನನಂ ಗುರುವನೇಕಾಶೀರ್ವಚನಂಗಳಿಂ ಪರಸುವುದುಂ ಪದುಮನಾಭನ ಚೋದಿಸುವ ರಥವೇಗದಿಂ ಪದ್ಮವ್ಯೂಹಮನೆಯ್ದವಂದು ಸುಯೋಧನನ ಸಾಧನದೊಳ್ ತಾಗಿದಾಗಚಂ ಪೊಸ ಮಸೆಯಂಬು ಕಾರಮವೋಲ್ ಕಳಿಯುತ್ತಿರೆ ನೇರ್ದು ಸೀಳು ಖಂ ಡಿಸಿ ಕಡಿದೊಟ್ಟಿ ಸುಟ್ಟನಿತುಮಂ ನಿಜ ಮಾರ್ಗಣ ಕೋಟಿಯಿಂದರು | ರ್ವಿಸ ತೆಗೆದೆಚ್ಚು ತನ್ನ ಮೊನೆಯಂಬುಗಳಿಂ ಚತುರಂಗಮಯ್ಯ ಕೀ ಲಿಸೆ ಪಡ ಚಿತ್ರದೊಂದೆ ಪಡೆಯಂತವೊಲಾಯಕಳಂಕರಾಮನಿಂ ||
೧೩೫ ಅಡಿ ತೊಡೆ ಫೋರ್ಕುಜಂ ತೆಗಲೆ ಕೈ ಕಣಕಾಲ್ ಕೊರಲೆಂಬಿವುಂ ಬೆರಲ್ ನಡುವುರ ಬೆನ್ ಬಸಿಖ್ ತೊಳಕು ಕರ್ಚರ ಮುಯ್ಯು ಮುಸುಂಬು ಮೂಗು ಪ ರ್ದೊಡ ಕಟ ಮುಂಮಡಂ ಪರಡು ಸಂದಿ ನೊಸಲ್ ಪಹ ಕಣ್ ಕದ೦ಪಿವೆಂ ಬೆಡೆಯನೆ ನಟ್ಟುವುರ್ಚಿದುವು ನೇರ್ದುವು ಸೀಳುವು ಪಾರ್ಥನಂಬುಗಳ್ || ೧೩೬
ವ|| ಅಂತು ಮಾಜಾಂತ ಮಾರ್ಪಡೆಯೆಲ್ಲಮಂ ಜವನೊಕ್ಕಲಿಕ್ಕಿ ತನ್ನೊಳ್ ಪೋಗದ ಪಳದ ಬಾಹೀಕ ಸೋಮದತ್ತ ಭೂರಿಶ್ರವರನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆ ದೆಸೆಗೆ ಸೂಸುವನ್ನೆಗಮೆಂಟ್ಟಿ ಕಾಂಭೋಜ ಸುದಕ್ಷಿಣ ಜಯತ್ತೇನರೆಂಬರಯ್ತರೆ ಮೂವರಕ್ಕೋಹಿಣೀ ಪತಿಗಳೊರಸು ನಾಲ್ಯಾಸಿರ್ವರ್ ಮಕುಟವರ್ಧನಂ ಕೊಂದು ಶಲ್ಯನುರಮಂ ಬಿರಿಯಚ್ಚು
ಬಾಲ್ಯದಿಂದಾದುದು, ಇಂದಾಯಿತೇ? ನಿಮಗೆ ನಾನು ಹೆದರದಿದ್ದರೆ ಯುದ್ಧದಲ್ಲಿ ಮೂರುಲೋಕವನ್ನು ಹೆದರಿಸಲು ಸಮರ್ಥನಾಗುತ್ತೇನೆಯೇ?' ವ|| ಎಂದು ನಮ್ರತೆಯಿಂದಲೇ ಮಾತನಾಡಿದ ವಿಕ್ರಮಾರ್ಜುನನನ್ನು ದ್ರೋಣಾಚಾರ್ಯರು ಅನೇಕ ಆಶೀರ್ವಚನಗಳಿಂದ ಹರಸಿದರು. ಕೃಷ್ಣನು ನಡೆಸಿದ ರಥದ ವೇಗದಿಂದ ಪದ್ಮವ್ಯೂಹದ ಸಮೀಪಕ್ಕೆ ಬಂದು ದುರ್ಯೋಧನನ ಸೈನ್ಯವನ್ನು ತಾಗಿದನು. ೧೩೫. ಹೊಸದಾಗಿ ಮಸೆದಿರುವ ಬಾಣಗಳು ಕಾರ್ಗಾಲದ ಮಳೆಯ ಹಾಗೆ ಸುರಿಯುತ್ತಿರಲು ಅರ್ಜುನನು ಅಷ್ಟನ್ನೂ ತನ್ನ ಬಾಣಗಳ ತುದಿಯಿಂದ ಕತ್ತರಿಸಿ, ಸೀಳಿ, ಮುರಿದು, ತುಂಡಿಸಿ, ರಾಶಿಮಾಡಿ ಸುಟ್ಟು ತನ್ನ ಬಾಣಗಳ ಸಮೂಹದಿಂದ ಚತುರಂಗಸೈನ್ಯವೂ ಹೆದರುವ ಹಾಗೆ ಸೆಳೆದು ಹೊಡೆದು ಚೆನ್ನಾಗಿ ನಾಟಿಸಲು ಸೈನ್ಯವು ಚಿತ್ರದಲ್ಲಿ ಬರೆದ ಸೈನ್ಯದಂತೆ ಆಯಿತು. ೧೩೬. ಪಾದ, ತೊಡೆ, ಹೊಕ್ಕಳು, ಹೆಗ್ಗತ್ತು, ಕೈ, ಕಾಲಿನ ಕೆಳಭಾಗ, ಕೊರಳು ಎಂಬುವುಗಳನ್ನೂ ಬೆರಳು, ನಡು, ಎದೆ, ಬೆನ್ನು, ಹೊಟ್ಟೆ, ತೊಳಕುಸ(?) ಕರ್ಚರೆ, ಹೆಗಲು, ಮೂತಿ, ಹೆರೊಡೆ, ಸೊಂಟ, ಕಾಲ ಹರಡಿನ ಹಿಂಭಾಗ ಮತ್ತು ಮುಂಭಾಗ, ಕಾಲಿನ ಹರಡು, ಕೀಲು, ಹಣೆ, ಕಣ್ಣು, ಕೆನ್ನೆ- ಈ ಎಲ್ಲಾ ಸ್ಥಳಗಳನ್ನೂ ಅರ್ಜುನನ ಬಾಣಗಳು ನಾಟಿದುವು, ಸೀಳಿದವು ಮತ್ತು ಹೊಳು ಮಾಡಿದುವು. ವ|| ಎದುರಿಸಿದ ಪ್ರತಿ ಸೈನ್ಯವೆಲ್ಲವನ್ನೂ ಯಮನ ಒಕ್ಕಲವರನ್ನಾಗಿ ಮಾಡಿದನು. ಹೋಗದೆ ತನ್ನಲ್ಲಿಯೆ ಹೆಣೆದುಕೊಂಡ ಬಾಘೀಕ ಸೋಮದತ್ತ ಭೂರಿಶ್ರವರನ್ನು ಆನೆಯು ತುಳಿದ ಕುಂಟೆಯ ನೀರಿನಂತೆ ದಿಕ್ಕು ದಿಕ್ಕಿಗೂ ಚೆಲ್ಲುವವರೆಗೆ ಎಬ್ಬಿಸಿದನು. ಕಾಂಭೋಜ, ಸುದಕ್ಷಿಣ, ಜಯನರೆಂಬುವರು ಮೂರು ಅಕ್ಟೋಹಿಣೀಪತಿಗಳನ್ನೂ
Page #555
--------------------------------------------------------------------------
________________
೫೫೦ | ಪಂಪಭಾರತಂ ಕೃಪರಂ ವಿರಥರ್ಮಾಡಿ ನಡುವಗಲಿಟಿವಿನಂ ಕಾದಿ ಬುಲ್ಲು ಕುದುರೆಗಳಂ ನೀರೊಳಿಕ್ಕಲೆಂದು ದೇವಖಾತವೆಂಬ ಮಡುವಿಂಗೆ ಬರ್ಪುದುಮಿ ದುರ್ಯೋಧನಂ ದ್ರೋಣರಲ್ಲಿಗೆ ವಂದುಚಂil ಅಟಿದುದು ಚಾತುರಂಗ ಬಲಮಳ್ಳುಜದಾಂತ ಮಹಾರಥರ್ಕಳುಂ
ಕಲಕುಮಾದುದೊಡ್ಡಣಮಣಂ ತಲೆದೋಲೆ ಗಂಡರಿಲ್ಲ ತೊ | ತಂದು ದಪ್ಪನಿನ್ನಿನಿಸು ಬೇಗನೆ ಸೈಂಧವನಂ ನೆಗಟಿಯಂ ಗಟೆಯಿಸಿಕೊಳ್ಳೋಡನ್ನಿನಿಸು ನಿಂದಿಕೆಯಿಂ ತಳೆಸಂದು ಪಾರ್ಥನೊಳ್ || ೧೩೭
ವ|| ಎಂಬುದುಂ ದ್ರೋಣಾಚಾರಂ ಮುಗುಳಗೆ ನಕ್ಕು ವಿಕ್ರಮಾರ್ಜುನನನಿಳಿಸಿ - ನುಡಿವ ನಿನ್ನೆಣಗೋಣಂಗಳುಮೆಕ್ಕಸಕ್ಕತನಂಗಳುಮೆತ್ತವೋದುವುಚoll ನಿನಗರಸಾಳನಂ ನುಡಿವ ಬೀರರ ಬೀರದಳುರ್ಕೆ ವಿಕ್ರಮಾ
ರ್ಜುನನೊಳದೇಕೆ ಸಲ್ಲದೆನಗಾತನಸಾಧ್ಯನವಧ್ಯನಾನುಮೀ || ಮೊನೆಯೋಳೆ ನಿಂದು ಕಾದಿದಪೆನನ್ನೆಗಮೆನ್ನ ವರೂಥ ಸೂತ ಕೇ ತನ ಕವಚಂಗಳಿಂ ನೆರೆದು ತಳಿ ನೀಂ ಜಗದೇಕಮಲ್ಲನೊಳ್ || ೧೩೮
ವ|| ಎಂಬುದುಂ ಸುಯೋಧನನೇನಾದೊಡೇನಾದುದೆನ್ನ ಹಗೆಯ ನಾನೇ ಕೊಲ್ವೆನೆಂದ ಭೇದ ಕವಚಮಂ ತೊಟು ದಿವಶರಾಸನ ಶರಂಗಳಂ ಕೊಂಡು ಕಳಶ ಕೇತನ ವರೂಥನಾಗಿ ಪೊಗಿ
ಕೂಡಿಕೊಂಡು ಬರಲು ನಾಲ್ಕು ಸಾವಿರ ರಾಜರನ್ನು ಕೊಂದು ಶಲ್ಯನ ಎದೆಯನ್ನು ಬಿರಿಯುವ ಹಾಗೆ ಹೊಡೆದು ಕೃಪರನ್ನು ರಥವಿಲ್ಲದವರಂತೆ ಮಾಡಿ ನಡುಹಗಲು ಇಳಿಯುವವರೆಗೂ ಕಾದಿ ಬಳಲಿ ಕುದುರೆಯನ್ನು ನೀರಿಗೆ ಬಿಡಬೇಕೆಂದು ದೇವಖಾತವೆಂಬ ಮಡುವಿಗೆ ಬಂದನು. ದುರ್ಯೋಧನನು ದ್ರೋಣ ನಲ್ಲಿಗೆ ಬಂದನು. ೧೩೭. ಚತುರಂಗ ಬಲವೂ ನಾಶವಾಯಿತು. ಹೆದರದೆ, ಪ್ರತಿಭಟಿಸಿದ ಮಹಾರಥರುಗಳೂ ಚೆಲ್ಲಾಪಿಲ್ಲಿಯಾದರು. ಸೈನ್ಯವು ಸ್ವಲ್ಪವಾದರೂ ಕಾಣಿಸಿಕೊಳ್ಳಲು ಶೂರರಾದವರಾರೂ ಇಲ್ಲ. ಸ್ವಲ್ಪ ಕಾಲದಲ್ಲಿಯೇ ಸೈಂಧವನನ್ನು ತುಳಿದುಹಾಕುತ್ತಾನೆ. ಪ್ರಸಿದ್ದಿಯನ್ನು ಪಡೆಯಬೇಕಾದರೆ ಸ್ವಲ್ಪ ಸ್ಥಿರವಾಗಿ ನಿಂತುಕೊಂಡು ಅರ್ಜುನನೊಡನೆ ಯುದ್ದಮಾಡಿ ಎಂದನು. ವ|ದ್ರೋಣಾಚಾರ್ಯನು ಮುಗುಳಗೆ ನಕ್ಕು ವಿಕ್ರಮಾರ್ಜುನನನ್ನು ತಿರಸ್ಕರಿಸಿ ಮಾತನಾಡುವ ವಕ್ರವಾದ ಅಹಂಕಾರದ ಮಾತುಗಳೂ ನಿಂದೆ ಮತ್ತು ಪರಿಹಾಸದ ಮಾತುಗಳೂ ಈಗೆಲ್ಲಿಗೆ ಹೋದುವು -೧೩೮. ನಿನಗೆ ಚಕ್ರವರ್ತಿತ್ವವನ್ನು ಘೋಷಿಸುವ ವೀರರ ಶೌರ್ಯದ ಆಧಿಕ್ಯವು ವಿಕ್ರಮಾರ್ಜುನನಲ್ಲಿ ಅದೇಕೆ ಸಲ್ಲುವುದಿಲ್ಲ. ನನಗೆ ಅವನು ಗೆಲ್ಲುವುದಕ್ಕೆ ಅಸಾಧ್ಯನಾದವನು. ಕೊಲ್ಲಲಾಗ ದವನು. ನಾನೂ ಈ ಯುದ್ಧಮುಖದಲ್ಲಿಯೇ ನಿಂತು ಕಾದುತ್ತೇನೆ. ಅಲ್ಲಿಯವರೆಗೆ ನೀನೂ ನನ್ನ ತೇರು, ಸಾರಥಿ, ಧ್ವಜ ಕವಚಗಳಿಂದ ಕೂಡಿಕೊಂಡು ಜಗದೇಕಮಲ್ಲನಲ್ಲಿ ಸಂಧಿಸಿ ಯುದ್ಧಮಾಡು. ವ|| ಎನ್ನಲು ದುರ್ಯೋಧನನು ಏನಾದರೇನಾಯಿತು. ನನ್ನ ಶತ್ರುವನ್ನು ನಾನೇ ಕೊಲ್ಲುತ್ತೇನೆ ಎಂದು ಒಡೆಯಲಾಗದ ಕವಚವನ್ನು ತೊಟ್ಟು ಶ್ರೇಷ್ಠವಾದ ಬಿಲ್ಲುಬಾಣಗಳನ್ನು ತೆಗೆದುಕೊಂಡು ಕಳಶಧ್ವಜರಥದಿಂದ ಕೂಡಿಕೊಂಡು
Page #556
--------------------------------------------------------------------------
________________
ಏಕಾದಶಾಶ್ವಾಸಂ | ೫೫೧ ಚಂ| ತಡೆಯದೆ ರಾಜರಾಜನಿದಿರಂ ಬರೆ ಭೋರ್ಗರೆದೆಚೊಡಂಬುಗಳ
ನಡದೆ ಸಿಡಿಲುದುಂ ಕರತಳದ್ವಯಮಂ ಬಿರಿಯಚ್ಚು ಕೆಯ್ಯುವಂ | ಪಿಡಿವದಟೆಲ್ಲಮಂ ಕಿಡಿಸಿ ತಾಂ ಕೊಲಲೋಲ್ಲನೆ ಭೀಮನಾತನಂ
ಮಡಿಪುವೆನೆಂದ ಪೂಕ್ಕೆ ಪುಸಿಯಾದಪುದೆಂದಮರೇಂದ್ರನಂದನಂ || ೧ರ್೩
ವ|| ಅನ್ನೆಗಮಿತ್ತ ಧರ್ಮಪುತ್ರನಮೋಘಾಸ್ತ ಧನಂಜಯನಂ ಕೆಯೊಳಲಟ್ಟಿದೊಡೆ ಕೌರವಬಳ ಜಳನಿಧಿಯ ನಡುವನುತ್ತರಿಸಿ ಬರ್ಪ ಸಾತ್ಯಕಿಯಂ ಭೂರಿಶ್ರವನೆಡೆಗೊಂಡಾಂತು* ಉll , ಪೋಗದಿರೆಂದು ಮೂದಲಿಸೆ ಸಾತ್ಯಕಿ ತೀವ್ರ ಶರಾಳಿಯಿಂದಗು
ರ್ವಾಗೆ ವರೂಥಮಂ ಕಡಿದೊಡುರ್ಚಿದ ಬಾಳ್ವರಸಾತನೆಯ್ದವಂ | ದಾಗಳಿದಿರ್ಚೆ ತಾನುಮಸಿಯಂ ಸೆರಗಿಲ್ಲದೆ ಕಿಚ್ಚು ಹಾಯ್ದು ಭೂ
ಭಾಗ ನಭೋವಿಭಾಗವರಮಳ್ಳು ಜತೆ ತಲೆದರ್ ವಿರೋಧಿಗಳ್ || ೧೪೦
ವl ಅಂತಿರ್ವರುಮೋರೊರ್ವರೋಲ್ ಬೀರಮುಮಂ ಬಿಂಕಮುಮಂ ಮೆಳೆದು ದಾಸವಣದಂಡೆಯಂ ತೋರದಿಂಡೆಯಾಡಿದಂತೆ ದೆಸೆ ದೆಸೆಗೆ ಕೆದಳದ ಕಂಡದಿಂಡೆಗಳುಂ ನಾರಂಗ ಸಕಳವಟ್ಟೆಯ ಪಬಯಿಗೆಗಳಂತೆ ನಭಕ್ಕೆ ಮಿಳಿರ್ದು ಮಿಲ್ಲಿಸಿ ಪಾಟುವ ನೆತ್ತರ ಸುಟ್ಟುರೆಗಳುಮತಿ ಭಯಂಕರಾಕಾರಮಾಗೆ ಕಾದಿ ಬಸವಳಿದ ಸಾತ್ಯಕಿಯಂ ಭೂರಿಶ್ರವನಶ್ರಮದೊಳ್ ನೆಲಕಿಕ್ಕಿ ಗಂಟಲಂ ಮೆಟ್ಟಿ ತಲೆಯನರಿವಾಗಳ್ ಸಾತ್ಯಕಿ ಭೂಮಿಯುದ್ಧ ಪ್ರವೀಣನಪ್ಪುದಳೆಂದಾತನ
ಹೋದನು. ೧೩೯. ದುರ್ಯೋಧನನು ತಡೆಯದೆ ಎದುರಾಗಿ ಬಂದು ಭೋರ್ಗರೆದು ಬಾಣಪ್ರಯೋಗ ಮಾಡಲು ಬಾಣಗಳು ನಾಟಿಕೊಳ್ಳದೆ ಸಿಡಿದುವು. ಅರ್ಜುನನು ಅವನ ಎರಡು ಕೈಗಳನ್ನೂ ಬಿರಿದುಹೋಗುವ ಹಾಗೆ ಹೊಡೆದು ಆಯುಧವನ್ನು ಹಿಡಿಯುವ ಶಕ್ತಿಯನ್ನೂ ಕೆಡಿಸಿದನು. ಭೀಮನು ಆತನನ್ನು ಕೊಲ್ಲುವೆನೆಂದು ಮಾಡಿದ ಪ್ರತಿಜ್ಞೆಯು ಹುಸಿಯಾಗುವುದೆಂದು ಅವನನ್ನು ಕೊಲ್ಲಲಾರದೆ ಹೋದನು. ವ|| ಅಷ್ಟರಲ್ಲಿ ಈ ಕಡೆ ಧರ್ಮರಾಯನು ಅರ್ಜುನನ ರಕ್ಷಣೆಗಾಗಿ ಸಾತ್ಯಕಿಯನ್ನು ಕಳುಹಿಸಲು ಕೌರವಸೇನಾಸಮುದ್ರದ ಮಧ್ಯಭಾಗವನ್ನು ದಾಟಿ ಬರುತ್ತಿದ್ದ ಸಾತ್ಯಕಿಯನ್ನು ಭೂರಿಶ್ರವನು ಅಡ್ಡಗಟ್ಟಿ ಎದುರಿಸಿದನು. ೧೪೦. ಹೋಗಬೇಡ ಎಂದು ಮೂದಲಿಸಲು ಸಾತ್ಯಕಿಯು ಹರಿತವಾದ ಬಾಣ ಸಮೂಹದಿಂದ ಭಯಂಕರವಾಗಿ ಅವನ ತೇರನ್ನು ಕತ್ತರಿಸಲು ಹಿರಿದ ಕತ್ತಿಯೊಡನೆ ಆತನು ಸಮೀಪಕ್ಕೆ ಬಂದು ಎದುರಿಸಿದನು. ಆಗ ತಾನೂ ಭಯವಿಲ್ಲದೆ ಕತ್ತಿಯನ್ನು ಹೊರಸೆಳೆದು ನುಗ್ಗಿ ಭೂಮ್ಯಾಕಾಶಗಳವರೆಗೆ ಭಯಂಕರವಾಗಿ ವಿರೋಧಿಗಳು ಸಂಧಿಸಿ ಯುದ್ದಮಾಡಿದರು. ವ|| ಹಾಗೆ ಇಬ್ಬರೂ ಒಬ್ಬೊಬ್ಬರಲ್ಲಿ ವೀರವನ್ನೂ ಗರ್ವವನ್ನೂ ಪ್ರಕಾಶಿಸಲು ದಾಸವಾಳದ ಹೂವಿನ ಹಾರವನ್ನು ದೊಡ್ಡದಾಗಿ ರಾಶಿಮಾಡಿದಂತೆ ದಿಕ್ಕು ದಿಕ್ಕಿಗೆ ಚೆದುರಿ ಮಾಂಸದ ಉಂಡೆಗಳೂ ಕಿತ್ತಳೆಯ ಮತ್ತು ಬಣ್ಣ ಬಣ್ಣದ ಬಟ್ಟೆಯ ಬಾವುಟಗಳಂತೆ ಗಗನಕ್ಕೆ ಅತ್ತಿತ್ತ ಚಲಿಸುವ ಮತ್ತು ಚಿಮ್ಮಿ ಹಾರುವ ರಕ್ತದ ಸುಂಟುರುಗಾಳಿಗಳೂ ಅತಿ ಭಯಂಕರಾಕಾರವಾದುವು. ಹಾಗೆ ಕಾದಿ ಶಕ್ತಿಗುಂದಿದ ಸಾತ್ಯಕಿಯನ್ನು ಭೂರಿಶ್ರವನು ಶ್ರಮವಿಲ್ಲದೆಯೇ ನೆಲಕ್ಕೆ ಬಡಿದು ಗಂಟಲನ್ನು ಮೆಟ್ಟಿ ತಲೆಯನ್ನು ಕತ್ತರಿಸುವಾಗ ಸಾತ್ಯಕಿಯು ಭೂಮಿಯುದ್ದದಲ್ಲಿ ಪ್ರವೀಣನಾಗಿದ್ದುದರಿಂದ ಆತನ ಕತ್ತಿಯ ಬಾಯಲ್ಲಿ
Page #557
--------------------------------------------------------------------------
________________
೫೫೨) ಪಂಪಭಾರತಂ ಬಾಳ ಬಾಯೊಳ್ ಚಕ್ರಾಕೃತಿಯೊಳ್ ತಲೆಯಂ ತಿರುಪುತ್ತುಮಿರ್ದಾಗಳದಂ ಮುರಾಂತಕಂ ಕಂಡು ವಿದ್ವಿಷ್ಟ ವಿದ್ರಾವಣಂಗೆ ತೋಜಿದೊಡೆಕoll ನರನೆಯೊಡೆ ಪಡೆದು, ಕರಂ
ಕರವಾಳೊಡನಮರೆ ಕಾಸಿ ಬೆಚ್ಚಂತ ವಸುಂ | ಧರೆಯೊಳ್ ಬಿತ್ತಿರ್ದುದಂ ತಿರವೋ ಪೂಣಿಸಿದ ಮುಷ್ಟಿ ಭೂರಿಶ್ರವನಾ |
| ဂဂ
ವl ಆಗಲ್ ಸಾತ್ಯಕಿ ಮುಳಿಸಿನೊಳ್ ಕಣ್ಣಾಣದ ಭೂರಿಶ್ರವನ ತಲೆಯನರಿದು ತನ್ನೇಳಂಗೆ ತಾನೆ ಸಿಗ್ಗಾಗಿ ಪೋದನನ್ನೆಗಂ ಯಮನಂದನನ ಬೆಸದೊಳ್ ಫಲ್ಗುಣನಂ ಕಯ್ಯೋಳಲ್ ಬರ್ಪ ಮರುನ್ನಂದನಂಗಾ ದ್ರೋಣರಡ್ಡಂ ಬಂದೊಡೆ ಗುರುಗೆ ಗುರುದಕ್ಷಿಣೆಗುಡುವಂತವರ ರಥಮಂ ಶತಚೂರ್ಣ ಮಾಡಿ ಕಳಿಂಗರಾಜ ಗಜಘಟೆಗಳನೌಂಕಿ ಸೊರ್ಕುತ್ತುಂ ಬರೆ ದುಶ್ಯಾಸನಾದಿಗಳದಿರದಿದಿರ ಬಂದಾಂತೊಡೆ
ಚಂ11 ನಿಡುವಗೆ ಸೈಪಿನಿಂದ ದೊರೆಕೊಂಡುದಿವರ್ ಗಜೆಗೊಂಡನಪ್ರೊಡೀ
ಗಡೆ ಪರೆದಪ್ಪರೆಚ್ಚು ತಲೆ ಕೊಲೊನಿವಂದಿರನೆಂದು ನಚ್ಚಿನ | ಚುಡಿವಿನಮೆಟ್ರೊಡೆಯಿನೆಚ್ಚರುಣಾಂಬು ಕಲಂಕಿ ಪಾಯ ಮು ನ್ನಡಿಯೊಳುರುಳರಂಧನೃಪನಂದನರಂದು ಮರುತ್ತನೂಜನಾ ||
೧೪೨
ಚಕ್ರಾಕೃತಿಯಿಂದ ತಲೆಯನ್ನು ತಿರುಗಿಸುತ್ತಿದ್ದಾಗ ಅದನ್ನು ಕೃಷ್ಣನು ನೋಡಿ ವಿದ್ವಿಷ್ಟ ವಿದ್ರಾವಣನಾದ ಅರ್ಜುನನಿಗೆ ತೋರಿಸಿದನು. ೧೪೧. ಅರ್ಜುನನು (ಭೂರಿಶ್ರವನನ್ನು ಹೊಡೆಯಲು ಅವನ ಕೈ ಕತ್ತರಿಸಿಹೋಗಿ ಕತ್ತಿಯೊಡನೆ ಕಾಯಿಸಿ ಬೆಸೆದ ಹಾಗೆ ಅಂಟಿಕೊಂಡಿದ್ದು ಭೂಮಿಯಲ್ಲಿ ಬಿದ್ದಿತು. ಭೂರಿಶ್ರವನು ಪ್ರತಿಜ್ಞೆಮಾಡಿ ಹಿಡಿದ ಮುಷ್ಟಿಯು ಎಷ್ಟು ಸ್ಥಿರವಾದುದೊ! ವ|| ಆಗ ಸಾತ್ಯಕಿಯು ಕೋಪದಿಂದ ಕುರುಡನಾಗಿ ಭೂರಿಶ್ರವನ ತಲೆಯನ್ನು ಕತ್ತರಿಸಿದನು. ತನ್ನ ಯುದ್ಧಕಾರ್ಯಕ್ಕೆ ತಾನೆ ನಾಚಿಕೊಂಡು ಹೋದನು. ಅಷ್ಟರಲ್ಲಿ ಧರ್ಮರಾಜನ ಆಜ್ಞೆಯ ಪ್ರಕಾರ ಅರ್ಜುನನಿಗೆ ಸಹಾಯಕನಾಗಿ ಬರುತ್ತಿದ್ದ ಭೀಮನಿಗೆ ದ್ರೋಣಾಚಾರ್ಯರು ಅಡ್ಡಲಾಗಿ ಬರಲು ಭೀಮನು ಗುರುವಿಗೆ ಗುರುದಕ್ಷಿಣೆಯನ್ನು ಕೊಡುವಂತೆ ಅವರ ತೇರನ್ನು ನೂರು ಚೂರುಗಳನ್ನಾಗಿ ಮಾಡಿ ಕಳಿಂಗರಾಜನ ಆನೆಯ ಸಮೂಹವನ್ನು ಒತ್ತಿ ಸೋಕುತ್ತ ಬರಲು ದುಶ್ಯಾಸನನೇ ಮೊದಲಾದವರು ಹೆದರದೆ ಎದುರಾಗಿ ಬಂದು ಪ್ರತಿಭಟಿಸಿದರು. ೧೪೨. ದೀರ್ಘಕಾಲದ ಶತ್ರುಗಳಾದ ಇವರು ಅದೃಷ್ಟದಿಂದ ದೊರೆಕೊಂಡಿದ್ದಾರೆ. ಗದೆಯನ್ನು ತೆಗೆದುಕೊಂಡರೆ ಇವರು ಈಗಲೇ ಚದುರಿ ಓಡಿಹೋಗುತ್ತಾರೆ. ಇವರನ್ನು ಬಿಲ್ಲಿನಿಂದಲೇ ಪೂರ್ಣವಾಗಿ ಹೊಡೆದು ಕೊಂದುಹಾಕುತ್ತೇನೆ ಎಂದು ತನ್ನ ಆತ್ಮವಿಶ್ವಾಸಕ್ಕೆ ಪಾತ್ರವಾದ ಮುದ್ರೆಯನ್ನು ಒಡೆಯುವ ಹಾಗೆ ಹೊಡೆಯಲು ಆ ಹೊಡೆದ ಕಡೆಯ ಗಾಯದಿಂದ ಹೊರಟ ರಕ್ತವು ಕದಡಿ ಹಾಯಲು
Page #558
--------------------------------------------------------------------------
________________
ಏಕಾದಶಾಶ್ವಾಸಂ | ೫೫೩ ವ|| ಅಂತು ದುರ್ಮುಖ ದುರ್ಮದ ದುರ್ಧಷ್ರಣ ಮೊದಲಾಗೆ ಮೂವತ್ತು ಮೂವರಂ ಕೊಂದು ದುಶಾಸನನಂ ವಿರಥನಂ ಮಾಡಿ ದುರ್ಯೋಧನನನೋಂದೆ ನಿಶಿತ ವಿಶಿಖ ಹತಿಯಿಂ ಸುರುಳುರುಳ್ಳಿನಮೆಚ್ಚು ಮೂರ್ಛಾಗತನಂ ಮಾಡಿ ಸಿಂಹನಾದದಿನಾರ್ದು ಮುಟ್ಟೆವರ್ಪಾಗಳಾಳನ ಸಾವು ನೋಡಲಾಜದಮll ಎಡೆಗೊಂಡಂಕದ ಕರ್ಣನೆಯ್ದವರೆ ದಿವ್ಯಾಸಂಗಳಿಂದಂ ಸಿಡಿಲ್
ಪೊಡೆವಂತಪ್ಪಿನಮೆಚ್ಚುದಗ್ರರಥಮಂ ಮುಯೇಟು ಸೂಯ್ ಕೋಪದಿಂ | ಕಡಿಯಲ್ ಸಾರ್ದೊಡಬಲ್ಕು ಸೂತಸುತನೊಂದುಗ್ರೀಷುವಿಂ ತಿಣ್ಣಮೆ ಚೂಡನಾರ್ದಂ ನಸುಮೂರ್ಛವೋಗಿ ರಥದೊಳ್ ಭೀಮಂ ನರಬ್ಬನ್ನೆಗಂ II೧೪೩
ವ|| ಅಂತು ಮೂರ್ಛಾಗತನಾದ ಭೀಮನ ಕೊರಲೊಳ್ ಬಿಲ್ಲಂ ಕೋದು ಮೇಗಿಲ್ಲದೆ ತೆಗೆದುಕಂ| ತಾಂ ಗಡಮನ್ನಾಳನ ತೊಡೆ
ಯಂ ಗಡಮಿನ್ನುಡಿವನೆನ್ನೊಳಂ ಕಾದುವನಂ | ದಂಗಪತಿ ನುಡಿದು ಕೊಲ್ಲದೆ
ತಾಂಗಿದನಂಬಿಕೆಗೆ ನುಡಿದ ನುಡಿ ನಿಲೆ ಮನದೊಳ್ || ဂပူပူ ವ|ಅನ್ನೆಗಮಿತ್ತ ಚಾಣೂರಾರಿ ಜರಾಸಂಧಾರಿಯ ಮುನ್ನೆಗೆದು ಬಟಕ್ಕಡಂಗಿದ ಸಿಂಹನಾದಕ್ಕೆ ಮನಃಕ್ಷತಂಬಟ್ಟು ಸಾತ್ಯಕಿಯನಾರಯಲಟ್ಟಿದೊಡಾತಂ ಬಂದಚೇತನನಾಗಿ ಬಿಟ್ಟಿರ್ದ
ಕುರುಡುದೊರೆಯಾದ ಧೃತರಾಷ್ಟ್ರನ ಮಕ್ಕಳು ಆ ವಾಯುಪುತ್ರನಾದ ಭೀಮನ ಕಾಲಿನ ಮುಂಭಾಗದಲ್ಲಿ ಉರುಳಿದರು. ವll ಹಾಗೆ ದುರ್ಮುಖ, ದುರ್ಮದ, ದುರ್ಧಷ್ರಣರೇ ಮೊದಲಾದ ಮೂವತ್ತು ಮೂರು ಮಂದಿಯನ್ನೂ ಕೊಂದು ದುಶ್ಯಾಸನನನ್ನು ರಥವಿಲ್ಲದವನನ್ನಾಗಿ ಮಾಡಿ (ತೇರಿನಿಂದ ಉರುಳಿಸಿ) ದುರ್ಯೊಧನ ನನ್ನು ಒಂದೇ ಹರಿತವಾದ ಬಾಣದ ಪೆಟ್ಟಿನಿಂದ ಮುರಿದುಕೊಂಡು ಉರುಳಿ ಬೀಳುವ ಹಾಗೆ ಹೊಡೆದು ಮೂರ್ಛಿತನನ್ನಾಗಿ ಮಾಡಿ ಸಿಂಹಧ್ವನಿಯಿಂದ ಗರ್ಜಿಸಿ ಹತ್ತಿರಕ್ಕೆ ಬಂದಾಗ ತನ್ನನ್ನಾಳಿದ ಯಜಮಾನನ ಸಾವನ್ನು ನೋಡಲಾರದೆ -೧೪೩. ಪ್ರಸಿದ್ಧನಾದ ಕರ್ಣನು ದುರ್ಯೋಧನ ಮತ್ತು ಭೀಮರ ಮಧ್ಯೆ ಪ್ರವೇಶಿಸಿ ಹತ್ತಿರ ಬರಲು (ಭೀಮನು ತನ್ನು ಶ್ರೇಷ್ಠವಾದ ಬಾಣಗಳಿಂದ ಸಿಡಿಲು ಹೊಡೆಯುವ ಹಾಗೆ ಹೊಡೆದು (ಕರ್ಣನ) ಎತ್ತರವಾದ (ಶ್ರೇಷ್ಠವಾದ) ತೇರನ್ನು ಇಪ್ಪತ್ತೊಂದುಸಲ ಕೋಪದಿಂದ ಕಡಿದು ಹಾಕಿದನು. ಕರ್ಣನು ವ್ಯಥೆಪಟ್ಟು ತನ್ನ ಶ್ರೇಷ್ಠವಾದ ಬಾಣದಿಂದ ತೀಕ್ಷ ವಾಗಿ ಹೊಡೆದು ಭೀಮನು ರಥದಲ್ಲಿಯೇ ಸ್ವಲ್ಪ ಮೂರ್ಛಹೋಗಿ ನರಳುವ ಹಾಗೆ ಹೊಡೆದು ಆರ್ಭಟಮಾಡಿದನು. ವ|| ಹಾಗೆ ಮೂರ್ಛ ಹೋದ ಭೀಮನ ಕತ್ತಿಗೆ ಬಿಲ್ಲಿನ ಹಗ್ಗವನ್ನು ಸುತ್ತಿ ಅಸಮಾನವಾದ ರೀತಿಯಲ್ಲಿ ಸೆಳೆದು ೧೪೪, ಇವನೇ ಅಲ್ಲವೇ ನನ್ನ ಯಜಮಾನನ ತೊಡೆಯನ್ನು ಒಡೆಯುವವನು; ಇನ್ನು ನನ್ನಲ್ಲಿಯೂ ಕಾದುವವನು ಎಂದು ಹೇಳಿ ಕರ್ಣನು ತಾಯಿಗೆ ಕೊಟ್ಟ ಮಾತು (ಭಾಷೆ) ಮನಸ್ಸಿನಲ್ಲಿ ನಿಂತಿರಲಾಗಿ ಭೀಮನನ್ನು ಕೊಲ್ಲದೆ ತಡೆದನು. ವ|| ಅಷ್ಟರಲ್ಲಿ ಈ ಕಡೆ ಕೃಷ್ಣನು ಭೀಮನ ಮುಂದಕ್ಕೆ ಹಾರಿ ಬಳಿಕ ಕುಗ್ಗಿದ ಸಿಂಹಧ್ವನಿಗೆ ಮನಸ್ಸಿನಲ್ಲಿಯೇ ವ್ಯಥೆಪಟ್ಟು ಸಾತ್ಯಕಿಯನ್ನು
Page #559
--------------------------------------------------------------------------
________________
೫೫೪ | ಪಂಪಭಾರತಂ ವೃಕೋದರನಂ ತನ್ನ ರಥಮನೇಲಿಸಿಕೊಂಡು ಕೂಡ ವಂದನನ್ನೆಗಂ ದುರ್ಯೊಧನಂ ಕರ್ಣಂ ಬೆರಸು ಸೈಂಧವನ ಮೊನೆಯೊಳಾತನಂ ಪೆಜಿಗಿಕ್ಕಿ ಮುಂದೆ ನಿಂದಾಗಳ್
ಚಂ|| ದಿನಕರನಸ್ತಮಸ್ತಕಮನಾಸೆವಡಲ್ ಬಗೆದಪ್ಪನೇಕೆ ಕೆ
ಮನೆ ತಡೆವೆ ಜಯದ್ರಥನನಿಕುಣಿದಾರೊಳಮಿಂ ತೊಡಂಕವೇ || ಡೆನುತುಮಜಂ ಮರುಜವದೆ ಚೋದಿಸೆ ಪಾರ್ಥನ ದೇವದತ್ತ ನಿ ಸ್ವನದೊಳೆ ತೀವಿ ಪೊಟ್ಟನೊಡೆವಂತವೊಲಾದುದಜಾಂಡಮಂಡಳಂ || ೧೪೫
ಚಂ||
ಚಟುಳಿತ ಚಕ್ರನೇಮಿ ಪರಿವರ್ತನ ಘಟ್ಟನ ಘಾತ ನಿರ್ಭರ ಸುಟಿತ ಧರಾತಳಂ ವಿಜಯನುಗ್ರರಥಂ ಪರಿದತ್ತು ದಲ್ ಘಟಾ | ಘಟಿತ ಹಟದ್ವಿರೋಧಿ ರುಧಿರಪ್ತವಲಂಪಟ ಸಂಕಟೋತ್ಕಟಂ ಕಟಕಟ ಘಾತ ನಾಕತಟ ಸಂಕಟ ಸಂಗರ ರಂಗಭೂಮಿಯೊಳ್ || ೧೪೬
ವ|| ಆಗಳ್ ಕುರುಧ್ವಜಿನಿಗೆ ಭಯಜ್ವರಮುಂ ಮಹೇಶ್ವರಜ್ವರಮುಂ ಬರೆ ಬರ್ಪುದಾರ ಮಹೇಶ್ವರನ ರಥದ ಬರವಂ ಕಂಡು ಕರ್ಣ ಶಲ್ಯ ಶಕುನಿ ಶಾರದ್ವತ ಕೃತವರ್ಮ ದುರ್ಯೋಧನ ದುಶ್ಯಾಸನರ್ ಮೊದಲಾದತಿರಥ ಸಮರಥ ಮಹಾರಥಾರ್ಧರಥರೊಂದೆವಿಂದೆಯಲ್ಲ ದೋಂದೊರ್ವರೊಳ್ ಸಂಧಿಸಿ ಗೋಂದಣಿಸಿ ನಿಂದಾಗಳ್
ನೋಡಿಕೊಂಡು ಬರಲು ಕಳುಹಿಸಿದನು. ಆತನು ಬಂದು ಶಕ್ತಿಗುಂದಿ ಬಿದ್ದಿದ್ದ ಭೀಮನನ್ನು ತನ್ನ ರಥದಲ್ಲಿ ಏರಿಸಿಕೊಂಡು ಜೊತೆಯಲ್ಲಿಯೇ ಬಂದನು. ಅಷ್ಟರಲ್ಲಿ ಕರ್ಣನೊಡಗೂಡಿ ದುರ್ಯೋಧನನು ಸೈಂಧವನ ಯುದ್ಧಭೂಮಿಗೆ ಬಂದು ಆತನನ್ನು ಹಿಂದೆ ಹಾಕಿ ತಾನು ನಿಂತನು. ೧೪೫. ಸೂರ್ಯನು ಅಸ್ತಪರ್ವತದ ನೆತ್ತಿಯನ್ನು ಸೇರಲು (ಮುಳುಗಲು) ಯೋಚಿಸುತ್ತಿದ್ದಾನೆ, ಏಕೆ ಸುಮ್ಮನೆ ಸಾವಕಾಶ ಮಾಡುತ್ತಿದ್ದೀಯೇ? ಜಯದ್ರಥನನ್ನು ಹೊಡೆ; ಮಿಕ್ಕವರಾರಲ್ಲಿಯೂ ತೊಡಕಿಕೊಳ್ಳ ಬೇಡ ಎನ್ನುತ್ತ ಕೃಷ್ಣನು ವಾಯುವೇಗದಿಂದ ರಥವನ್ನು ಚೋದಿಸಿದನು. ಅರ್ಜುನನ ದೇವದತ್ತವೆಂಬ ಶಂಖದ ಧ್ವನಿಯಿಂದ ತುಂಬಿ ಬ್ರಹ್ಮಾಂಡಮಂಡಲವು ಒಡೆಯು ವಂತಾಯಿತು. ೧೪೬. ವೇಗವಾಗಿ ಚಲಿಸುತ್ತಿರುವ ತೇರಿನ ಚಕ್ರದ ಬಳೆಯ ಸುತ್ತುವುದರ ಪೆಟ್ಟಿನ ಹೊಡೆತದಿಂದ ಭರಿಸಲಸಾಧ್ಯವಾಗಿ ಭೂಪ್ರದೇಶವು ಸೀಳಿತು. ಅರ್ಜುನನ ಭಯಂಕರವಾದ ರಥವು ಆನೆಗಳ ಗುಂಪಿನಿಂದ ಕೂಡಿದ ಶತ್ರುಗಳ ಪ್ರಕಾಶಮಾನವಾದ ರಕ್ತಪ್ರವಾಹದಲ್ಲಿ ಆಸಕ್ತಿಯುಳ್ಳ ತಮ್ಮ ಕಟಕಟವೆಂಬ ಹೊಡೆತದಿಂದ ಸ್ವರ್ಗಕ್ಕೂ ಹಿಂಸೆಯನ್ನುಂಟುಮಾಡುತ್ತ ಯುದ್ಧಭೂಮಿಯಲ್ಲಿ ಹರಿಯಿತು. ವ|| ಆಗ ಕೌರವಸೈನ್ಯಕ್ಕೆ ಭಯವೆಂಬ ಜ್ವರವೂ ಈಶ್ವರನ ಹಣೆಗಣ್ಣಿನ ಜ್ವರವೂ ಬರುವ ಹಾಗೆ ಬರುತ್ತಿರುವ ಉದಾರಮಹೇಶ್ವರನಾದ ಅರ್ಜುನನ ರಥದ ಬರುವಿಕೆಯನ್ನು ಕಂಡು ಕರ್ಣ, ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುರ್ಯೊಧನ, ದುಶ್ಯಾಸನನೇ ಮೊದಲಾದ ಅತಿರಥ, ಸಮರಥ, ಮಹಾರಥ, ಅರ್ಧರಥರು ಗುಂಪಾಗಿರದೆ ಬೇರೆ
Page #560
--------------------------------------------------------------------------
________________
ಏಕಾದಶಾಶ್ವಾಸಂ | ೫೫೫ ಚಂil ಶರದೊಳಗುರ್ಚಿಪೋಪ ಪೊಳಪಿಂಗೊಳಗಾಗಿ ತಗುಳ್ಳುದೊಂದು ಚೆ
ಕೃರಿಗೆಣೆಯಾದುದೀಯೇಜಗುವಂಬಿನ ಬಲ್ಬರಿಯಂಬಿನಂ ನಿರಂ || ತರದೊಳೆ ಪಾಯ ಕೂರ್ಗಣೆಗಳಂ ತಳೆದೊಟ್ಟಿ ತೆರಳ್ಳಿ ತೂಳಿಕೊಂ
ಡರೆದು ಮುಗುಟ್ಟಿ ಸಣ್ಣಿಸಿದನಾಂತ ಚತುರ್ವಲಮಂ ಗುಣಾರ್ಣವಂ |l೧೪೭ ಮ! ಸll ಕಲಿಗಂ ಬಲ್ಲಾಳಮಂಬೆತ್ತಿದೆನಿದುವೆ ಪದಂ ಮಾರ್ಕೊಳಲ್ ಸಿಂಧುರಾಜಂ
ಗೆಲಲೆಂದಾಂ ಬಂದೆನಿಂ ಕೊಂದಪನೆ ನೆರದು ನಿಂದಾನಿಮಂದಾಂತರಂ | ದಲಿಸುತ್ತೇಚಂ ಪ್ರಚಂಡ ಪ್ರಳಯ ಘನ ಘಟಾರಾವದಿಂದಾರ್ದು ಬಾಣಾ ವಲಿಯಿಂದಂ ಪೂಜತೆ ರೋಬೋವಿವರಮನೊದವಿತ್ತೊಂದು
ಘೋರಾಂಧಕಾರಂ || ೧೪೮ ವ|| ಅಂತಮೋಘಾಸ್ತಧನಂಜಯನೆಚ್ಚ ಶರಸಂಘಾತದಿನೊಗೆದ ರಣಗಲೆಯ ಮೊಲಗತ್ತಲೆಯಂ ಮಾಡೆ ನೇಸಬ್ ಪಟ್ಟತ್ತು ವಿಜಯಂ ಸೋಲ್ಕನೆಂದು ಕೌರವಬಲಮಾರ್ದೊಡೆಚಂil ಜ್ವಳದನಳಾಸದಿಂದಮಿಸೆ ಕತ್ತಲೆ ತೊಟ್ಟು ತೆರಳುದಾಗಳು
ಮಳಿಸಿ ಮಹಾರಥರ್ ಪಳಜಿತ ಸೈಂಧವನನ್ನಳವಿಂಗಮೆನ್ನ ದೋ | ರ್ವಳದಳವಿಂಗಮಿ೦ ಸೆಡೆದಿರಲ್ ದೊರೆಯಲೆನಗೆಂದು ಬಂದಸುಂ ಗೊಳೆ ಪೊಣರ್ದ೦ ಸುರರ್ ಪೊಗಚಿ ತನ್ನಳವಂ ಜಗದೇಕಮಲ್ಲನೊಳ್ ll೧೪೯
ಬೇರೆಯಾಗಿ ಒಬ್ಬೊಬ್ಬರಲ್ಲಿ ಸೇರಿಕೊಂಡು ನಿಂತರು. ೧೪೭. ನಿರಂತರವಾಗಿ ಬೀಳುವ ಬಾಣಗಳ ಮಳೆಯ ನಡುವೆ ನುಸುಳಿಕೊಂಡು ಬಂದು ಪ್ರಕಾಶಿಸುವ ಸೂರ್ಯಕಿರಣವು ಬಾಣದ ಮಳೆಯ ಮಧ್ಯೆ ಸುರಿಯುವ ಬಿಳಿಯ ಕಿರಣಗಳ ಮಳೆಯೆಂಬಂತಾಯಿತು ಎನ್ನುವ ಹಾಗೆ ಎಡಬಿಡದೆ ಹಾದು ಬರುತ್ತಿರುವ ಬಾಣಗಳಿಂದ ಪ್ರತಿಭಟಿಸಿದ ಚತುರಂಗಸೈನ್ಯವನ್ನು ಅರ್ಜುನನು ಕತ್ತರಿಸಿ, ಓಡಿಸಿ ರಾಶಿಮಾಡಿಕೊಂಡು ಅರೆದು ಪುಡಿಮಾಡಿದನು. ೧೪೮. 'ಶೂರರಿಗೂ ಬಲಿಷ್ಠರಾದ ವೀರರಿಗೂ ಸವಾಲು ಮಾಡುತ್ತಿದ್ದೇನೆ. (ಬಾಣಗಳನ್ನು ಎತ್ತಿದ್ದೇನೆ), ಪ್ರತಿಭಟಿಸುವುದಕ್ಕೆ ಇದೇ ಹದವಾದ ಕಾಲ. ಸೈಂಧವನನ್ನು ಗೆಲ್ಲುವುದಕ್ಕಾಗಿ ನಾನು ಬಂದಿದ್ದೇನೆ. ಕೊಲ್ಲುತ್ತೇನೆ. ಗುಂಪಾಗಿ ನಿಂತು ಎದುರಿಸಿ ಎಂದು ಪ್ರತಿಭಟಿಸಿದವರನ್ನು ಮೂದಲಿಸಿದನು (ಅಣಕವಾಡಿದನು). ಪ್ರಚಂಡವಾದ ಪ್ರಳಯಕಾಲದ ಗುಡುಗಿನ ಶಬ್ದದಿಂದ ಆರ್ಭಟಮಾಡಿ ಹೊಡೆದು ಬಾಣಗಳ ಸಮೂಹದಿಂದ ಆಕಾಶಪ್ರದೇಶವನ್ನು ಹೂಳಿದನು. ಅದರಿಂದ ಭಯಂಕರವಾದ ಕತ್ತಲೆಯು ಆವರಿಸಿತು. ವ|| ಹಾಗೆ ಅಮೋಘಾಸ್ತಧನಂಜಯನಾದ ಅರ್ಜುನನು ಹೊಡೆದ ಬಾಣಗಳ ಸಮೂಹದಿಂದುಂಟಾದ ಯುದ್ಧಗತ್ತಲೆಯೇ ಮೊಲಗತ್ತಲೆಯನ್ನು (ಚಂದ್ರನಲ್ಲಿರುವ ಮೊಲಗತ್ತಲೆಯನ್ನು - ರಾತ್ರಿಯ ಭ್ರಮೆಯನ್ನು) ಉಂಟುಮಾಡಲು “ಸೂರ್ಯನು ಮುಳುಗಿದನು-ಅರ್ಜುನನು ಸೋತನು” ಎಂದು ಕೌರವ ಸೈನ್ಯವು ಕೂಗಿಕೊಂಡಿತು. ೧೪೯. ತಕ್ಷಣವೇ ಅರ್ಜುನನು ಪ್ರಕಾಶಮಾನವಾದ ಆಸ್ಟ್ರೇಯಾಸ್ತ್ರವನ್ನು ಪ್ರಯೋಗಿಸಲು ಕತ್ತಲೆ ಹರಿದು ಓಡಿಹೋಯಿತು. ಆಗ ಮಹಾರಥರು ವ್ಯಥೆಪಟ್ಟು ಹೆದರಿದರು. ಸೈಂಧವನು ತನ್ನ ಶಕ್ತಿಗೂ ತನ್ನ ಬಾಹುಬಲದ
3G
Page #561
--------------------------------------------------------------------------
________________
೫೫೬ | ಪಂಪಭಾರತಂ
ವll ಅಂತತಿರಥ ಮಥನನ ರಥಕ್ಕದಿರದಿದಿರಂ ತನ್ನ ರಥಮಂ ಪರಿಯಿಸಿ ಜಯದ್ರಥಂ ಮುಟ್ಟೆವಂದುಉli ನಿನ್ನೆ ಪೊರಳ್ಳಿ ನಿನ್ನ ಮಗನಂ ಸೆರಗಿಲ್ಲದೆ ಕೊಂದನಿಂದುಮಿಂ
ತಿನ್ನೆಗಮಿರ್ಪುದಂ ಭಯದಿನಿರ್ದೆನೆ ನಿನ್ನನೆ ಪಾರುತಿರ್ದೆನಂ | ದುನ್ನತ ಶೌರ್ಯದಿಂದಜಿತನಂ ನರನಂ ಮುನಿದೆಚ್ಚನೇಲುಮೆಂ
ಟುನ್ನಿಶಿತಾಸ್ತದಿಂದದಟದೇಂ ದೊರೆವೆತ್ತುದೊ ಸಿಂಧುರಾಜನಾ || ೧೫೦
ವ|| ಅಂತೆಚ್ಚು ಕಿಚ್ಚುಂ ಕಿಡಿಯುಮಾಗಿ ಪರ್ಚಿದುಮ್ಮಚ್ಚರದಿಂದಚ್ಚರಿಯಾಗಿ ಕಾದೆ5 II ಎಂತಸತ್ತುತ್ರನಂ ಸಂಗರದೊಳಟೆದೆಯಿನ್ನಂತೆ ನಿಲ್ ಶಕ್ತಿ ಚಾತು
ರ್ದಂತಂಗಳ್ ನಿನ್ನನಾಂ ಕೊಲ್ವೆಡೆಯೊಳಲಿ ಪೇಮ್ ಕಾವುವೇ ಕಾಯವಣೆಂ | ದಂತಾಂತೆಚ್ಚೆಚ್ಚು ಸೂತ ಧ್ವಜ ಹಯ ರಥ ಸಂಘಾತಮಂ ನುರ್ಗೆ ಲೋಕ
ಕಂತಂ ಮಾಂತಕಂಟ್ರೋಲ್ ಗದೆವಿಡಿದುಜದೆಯರ್ಪನಂ ಕಂಡನಂತಂ ||೧೫೧ ಕ೦ll ತುಡು ಪಾಶುಪತಮನೆನೆ ನರ
ನಡೆಮಡಗದೆ ತುಡೆ ದಿಶಾಳಿ ನಡುಗಿದುದು ಸುರು | Yುಡುಗಿದುದು ವಿಯತ್ತಳಮಳೆ ಪಿಡುಗಿದುದು ಕಲಂಕಿ ಕದಡಿದುದು ಶಿವನ ಮನಂ ||
ಶಕ್ತಿಗೂ ಇನ್ನು ಭಯದಿಂದ ನಾನು ಕುಗ್ಗಿರುವುದು ಯೋಗ್ಯವಲ್ಲ ಎಂದು ಹೊರಗೆ ಬಂದು ಪ್ರಾಣಾಪಹಾರಮಾಡುವ ಹಾಗೆ ತನ್ನ ಪರಾಕ್ರಮವನ್ನು ದೇವತೆಗಳೂ ಹೊಗಳುತ್ತಿರಲು ಜಗದೇಕಮಲ್ಲನಾದ ಅರ್ಜುನನಲ್ಲಿ ಹೋರಾಡಿದನು-ವ|| ಅತಿರಥಮಥನನಾದ ಅರ್ಜುನನ ರಥಕ್ಕಿದಿರಾಗಿ ಹೆದರದೆ ತನ್ನ ರಥವನ್ನು ಹಾಯಿಸಿ ಸೈಂಧವನು ಸಮೀಪಕ್ಕೆ ಬಂದು ೧೫೦. “ನಿನ್ನೆಯ ದಿನ ಭಯವಿಲ್ಲದೆ ನಿನ್ನ ಮಗನಾದ ಅಭಿಮನ್ಯುವನ್ನು ಹೊರಳಿಸಿ ಕೊಂದೆ. ಇಂದು ಇಲ್ಲಿಯವರೆಗೆ ಭಯದಿಂದ ಮರೆಯಾಗಿದ್ದೆನೆ ? ನಿನ್ನನ್ನೇ ನಿರೀಕ್ಷಿಸುತ್ತಿದ್ದೆ” ಎಂದು ಕೋಪದಿಂದಲೂ ಅತಿಶಯವಾದ ಪರಾಕ್ರಮದಿಂದಲೂ ಕೃಷ್ಣನನ್ನೂ ಅರ್ಜುನನ್ನೂ ಬಹಳಹರಿತವಾದ ಏಳೆಂಟು ಬಾಣಗಳಿಂದ ಹೊಡೆದನು. ಸೈಂಧವನ ಪರಾಕ್ರಮವು ಅದ್ಭುತವಾಯಿತು! ವll ಕೋಪಗೊಂಡು ಹೆಚ್ಚಿದ ಮತ್ಸರದಿಂದ ಆಶ್ಚರ್ಯವಾಗವ ಹಾಗೆ ಕಾದಿದನು. ೧೫೧. “ನನ್ನ ಮಗನನ್ನು ಹೇಗೆ ಕೊಂದೆಯೊ ಇದು ಹಾಗೆಯೇ; ನಿಲ್ಲು, ಶಕ್ತಿಯುಕ್ತವಾದ ಚತುರಂಗಸೈನ್ಯಗಳು ನಾನು ನಿನ್ನನ್ನು ಕೊಲ್ಲುವ ಸಂದರ್ಭದಲ್ಲಿ ರಕ್ಷಿಸಲಾರವು. ಸಾಯಿ” ಎಂದು ಪ್ರತಿಭಟಿಸಿ ಸಾರಥಿ, ಬಾವುಟ, ಕುದುರೆ ಮತ್ತು ತೇರಿನ ಸಮೂಹಗಳನ್ನು ನುಚ್ಚುನೂರಾಗಿ ಪುಡಿಯಾಗುವ ಹಾಗೆ ಹೊಡೆದನು. ಸೈಂಧವನು ರೋಷಾವೇಶದಿಂದ ಪ್ರಪಂಚಕ್ಕೆ ಅಂತ್ಯವನ್ನುಂಟುಮಾಡುವ ಯಮನಂತೆ ಗದೆಯನ್ನು ಹಿಡಿದು ವೇಗವಾಗಿ ಬರುತ್ತಿದ್ದುದ್ದನ್ನು ಕೃಷ್ಣನು ನೋಡಿ ಅರ್ಜುನನಿಗೆ ೧೫೨. 'ಪಾಶುಪತಾಸ್ತವನ್ನು ಪ್ರಯೋಗಿಸು' ಎಂದು (ಕೃಷ್ಣನು) ಹೇಳಿದನು. ಅರ್ಜುನನು ಸಾವಕಾಶಮಾಡದೆ ಅದನ್ನು ಪ್ರಯೋಗಿಸಲು ದಿಕ್ಕುಗಳ ಸಮೂಹವು ನಡುಗಿತು.
Page #562
--------------------------------------------------------------------------
________________
ಏಕಾದಶಾಶ್ವಾಸಂ | ೫೫೭ ಚಂ|| ಸುಟೆಯೊಳಗಿರ್ದು ಬೆಟ್ಟು ಪೋಪೊಣುವಿನಂ ಲವಣಾಂಬುರಾಶಿ ಕು
ಕುಲಗುವಿನಲ್ಲಿ ಕುದಿಯ ಮೇಲೆ ಸಿಡಿಗುಳಂತೆ ಕೂಡ ತ | ತಲಗುದಿಯುತ್ತುಮಿರ್ಪ ಕುದಿಯೊಳ್ ಸಿಡಿದಲ್ಲಿಯ ಮುತ್ತುಗಳ್ ಛಟಿಲ್ ಛಟಿಲೆನೆ ಕೊಂಡುವೊರ್ಮೊದಲೆ ರುದ್ರ ಸುರೇಂದ್ರ ವಿಮಾನಪಳ್ಮೆಯಂ Il೧೫೩
ವ|| ಅಂತು ಸಮುದ್ರಕ್ಟೋಭಮುಂ ತ್ಯಲೋಕಕ್ಟೋಭಮುಮೊಡನೊಡನಾಗೆ
ಚಂ|| ತೆಗೆನೆದೂಳಕೊಂಡಿಪೆ ಶಿರಂ ಪರಿದತ್ತ ವಿಯತ್ತಳಂಬರಂ
ನೆಗೆದೊಡೆ ರಾಹು ಬಾಯ್ಸಳದು ನುಂಗಲೆ ಬಂದಪುದೆಂಬ ಶಂಕೆಯಿಂ | ದಗಿದು ದಿನೇಶನಸ್ತಗಿರಿಯಂ ಮತಿಗೊಂಡನಮೋಘಮಂಬ ಮಾ ತುಗಳ ನೆಗಟಿಯಂ ಪಡೆದನಾಹವದೊಳ್ ಪರಸೈನ್ಯಭೈರವಂ || ೧೫೪
ಚoll.
ಬಿರಿದಲರೋಳಿ ಸಗ್ಗದ ಮದಾಳಿಗಳಂ ಗಡಗೊಂಡು ದೇವಸುಂ ದರಿಯರ ಕೆಯ್ಸಳಿಂದಮುಗೆ ತುಂಬುರು ನಾರದರೊಂದು ಗೇಯದಿಂ | ಚರಮೆರ್ದೆಯಂ ಪಳಂಚಲೆಯೆ ವೀರಲತಾಂಗಿಯ ಸೋಂಕು ಮೆಯೊಳಂ ಕುರಿಸೆ ನಿರಾಕುಳಂ ಕಳೆದನಾಜಿ ಪರಿಶ್ರಮಮಂ ಗುಣಾರ್ಣವಂ || ೧೫೫
ಆಕಾಶಪ್ರದೇಶವು ಸುರುಳಿಯಾಗಿ ಸುಕ್ಕಿಹೋಯಿತು. ಭೂಮಿಯು ಒಡೆಯಿತು. ಈಶ್ವರನ ಮನಸ್ಸು ಕದಡಿಹೋಯಿತು. ೧೫೩. ಸಮುದ್ರದ ಸುಳಿಯಲ್ಲಿದ್ದ ಪರ್ವತಗಳು ಹೊರಹೊಮ್ಮುತ್ತಿರಲು ಉಪ್ಪುನೀರಿನ ಸಮುದ್ರವು ಅನ್ನವು ಕುದಿಯುವಂತೆ ಕುದಿಯುವಾಗ ಮೇಲಕ್ಕೆ ಸಿಡಿದ ಅನ್ನದ ಅಗುಳಂತೆ ಕೂಡಲೆ ತಳತಳವೆಂದು ಕುದಿಯುತ್ತಿರುವ ಕುದಿತದಲ್ಲಿ ಆ ಸಮುದ್ರದ ಮುತ್ತುಗಳು ಛಟಿಲ್ ಛಟಿಲ್ ಎಂದು ಆಕಾಶಕ್ಕೆ ಹಾರಿ ಶಿವನ ಮತ್ತು ದೇವೇಂದ್ರನ ವಿಮಾನಗಳ ಸಾಲುಗಳನ್ನು ಒಂದೇಸಲ ಆಕ್ರಮಿಸಿದುವು. ವ|| ಹಾಗೆ ಸಮುದ್ರದ ಕ್ಲೋಭವೂ (ಕಲಕುವಿಕೆಯೂ) ಮೂರು ಲೋಕಗಳ ಕ್ಲೋಭವೂ (ಭಯಕಂಪನಾದಿಗಳೂ) ಜೊತೆಜೊತೆಯಲ್ಲಿಯೇ ಉಂಟಾದವು. ೧೫೨. ಅರ್ಜುನನು ಬಾಣವನ್ನು ದೀರ್ಘವಾಗಿ ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು ಸೈಂಧವನ ತಲೆಯು ಕತ್ತರಿಸಿ ಆಕಾಶದೆಡೆ ಹಾರಲು ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು. (ಮರೆಯಾದನು), ಪರಸೈನ್ಯಭೈರವನಾದ ಅರ್ಜುನನು ಇದರಿಂದ ಯುದ್ದದಲ್ಲಿ ಬೆಲೆಯಿಲ್ಲದ ಶಕ್ತಿಯುಳ್ಳವನು ಎಂಬ ಕೀರ್ತಿಯನ್ನು ಪಡೆದನು. ೧೫೫. ಅರಳಿದ ಪುಷ್ಪಗಳ ಸಮೂಹವು ಸ್ವರ್ಗದ ಮದಾಳಿ (ಮದಿಸಿದ ದುಂಬಿ)ಗಳಿಂದ ಕೂಡಿ ದೇವಸುಂದರಿಯರ ಕೈಗಳಿಂದ ಸುರಿಯುತ್ತಿರಲು (ಪುಷ್ಪವೃಷ್ಟಿಯಾಗುತ್ತಿರಲು). ತುಂಬುರು ನಾರದರ ಗೀತದ ಒಂದು ಇಂಪಾದ ಸ್ವರವು ಎದೆಯನ್ನು ತಾಗಿ,
Page #563
--------------------------------------------------------------------------
________________
೫೫೮ / ಪಂಪಭಾರತಂ
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಏಕಾದಶಾಶ್ವಾಸಂ
ಅಲೆಯುತ್ತಿರಲು ವಿಜಯಲಕ್ಷ್ಮಿಯ ಸ್ಪರ್ಶವು ಶರೀರದಲ್ಲಿ ರೋಮಾಂಚನವಾಗುತ್ತಿರಲು ಅರ್ಜುನನು ಯುದ್ಧದ ಆಯಾಸವನ್ನು ಶ್ರಮವಿಲ್ಲದೆಯೇ ಕಳೆದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹನ್ನೊಂದನೆಯ ಆಶ್ವಾಸ.
Page #564
--------------------------------------------------------------------------
________________
C
ದ್ವಾದಶಾಶ್ವಾಸಂ ಕಂil ಶ್ರೀ ಶ್ರೀಕಾಂತಾಕಾಂತನಿಳಾ
ಲೋಕೈಕಲಲಾಮನಾ ಮಹೋಗ್ರಾರಿ ನೃಪಾ | ನೀಕಮನನೇಕಮಂ ಗೆ ಲ್ಲಾ ಕಲಹದೊಳರಿಗನುಜದ ನಿಲ್ಲುದುಮಾಗಳ್ || ನಂಬಿ ನೃಪನೆನಗೆ ಸೈಂಧವ ನಂ ಬಂದಪ್ಪಸ ಪೂಣ್ಣೆನಾದುದನಾಗ | ಆ್ಯಂಬಟಿದನುವರದೊಳವಂ ಮುಂಬಯಣಂಬೋದನೆನಗೆ ಮಾಣ್ಣುದು ದೊರೆಯೇ || ಬವರದೂಳೇಂ ಬಲಂ ಕರ ಮೊವಜುಗೆಯಲ್ ಪರ್ಗೆ ಕಂಡು ತನಗಣಿಯನಂ | ತುವೂ ನುಡಿ ತಪ್ಪದು ಕಮ್ಮಟೆ ಯೊವಜಂ ಬಿಲ್ಗೊವಜನೆಂಬುದಂ ಮಾಡುವೆನೇ || ಒಪ್ಪ ಜಯದ್ರಥನಾದುದ ನಪ್ಟೆಂ ಪೋಗೆಂದು ಮುನ್ನೆ ನುಡಿದುದನೀಗಲ್ | ತಪ್ಪುವೆನೆ ಧರೆಯೊಳೆಂತುಂ ತಪ್ಪದು ವಲಮನ್ನ ನುಡಿಯುಮನ್ನೆಚ್ಚಂಬುಂ ||
೨
೧. ಜಯಲಕ್ಷಿಯೆಂಬ ಸ್ತ್ರೀಗೆ ಒಡೆಯನಾದವನೂ ಭೂಮಂಡಲದಲ್ಲೆಲ್ಲ ಏಕಮಾತ್ರ ಶ್ರೇಷ್ಠನಾದವನೂ ವಿಶೇಷಭಯಂಕರವಾದ ಅನೇಕ ಶತ್ರುರಾಜರುಗಳ ಸಮೂಹವನ್ನು ಗೆದ್ದಿರುವವನೂ ಆದ ಅರ್ಜುನನು ಆ ಯುದ್ಧದಲ್ಲಿ ವೇಗವಾಗಿ ಬಂದು ನಿಂತನು..೨. ರಾಜನಾದ ದುರ್ಯೋಧನನು ನನ್ನನ್ನು ನಂಬಿ ಸೈಂಧವನನ್ನು ತಂದು ನನಗೆ ಒಪ್ಪಿಸಿದನು. ಅವನಾದುದನ್ನಾಗುತ್ತೇನೆಂದು ನಾನು ಪ್ರತಿಜ್ಞೆ ಮಾಡಿದನು. ಆಶ್ರಯವಿಲ್ಲದೆ (ಕ್ರಮ ತಪ್ಪಿ) ಅವನು ಯುದ್ಧದಲ್ಲಿ ಮೊದಲು ಮಡಿದನು. ನಾನು ತಡೆದಿರುವುದು (ಹಾಗಾಗದಿರುವುದು) ಉಚಿತವೇ ?-೩. ಇತರರಿಗೆ ಉಪದೇಶ ಮಾಡುವುದಕ್ಕೆ ಬಲ್ಲನೇ ವಿನಾ ಯುದ್ದದಲ್ಲಿ ತಾನು ಏನು ಮಾಡಬಲ್ಲ ? (ಯುದ್ದದಲ್ಲಿ ತಾನು ಏನು ಮಾಡಬೇಕೆಂಬುದು ಅವನಿಗೇನು ಗೊತ್ತು?) ಎಂತಹುದೋ ಈ ಮಾತು. ಈ ಅಪಪ್ರಥೆ ನನಗೆ ತಪ್ಪುವುದಿಲ್ಲ. ಚಾಪಾಚಾರ್ಯನಾದ ನಾನು (ಸಾಮಾನ್ಯ ವಾದ ಮರಗೆಲಸದ ಓಜಿಯಂತೆ) ಆಡಿದಂತೆ ಮಾಡುವವನಲ್ಲ ಎಂಬ ಲೋಕಾಪ ವಾದಕ್ಕೆ ಗುರಿಯಾಗಲೆ! ೪. ಎಲ್ಲರಿಗೂ ಗೊತ್ತಿರುವ ಹಾಗೆ ಜಯದ್ರಥನಾದುದನ್ನು ನಾನು ಆಗುತ್ತೇನೆ ಹೋಗು ಎಂದು ಮೊದಲಾಡಿದ ಮಾತನ್ನು ಈಗ ತಪ್ಪುತ್ತೇನೆಯೇ? ಭೂಮಿಯಲ್ಲಿ ನಿಶ್ಚಯವಾಗಿಯೂ ನನ್ನ ಮಾತೂ ನಾನು ಪ್ರಯೋಗಿಸಿದ ಬಾಣವೂ
Page #565
--------------------------------------------------------------------------
________________
೫೬೦ | ಪಂಪಭಾರತಂ
ವ|| ಎಂದು ಕುಂಭಸಂಭವಂ ಜಳನಿಧಿಯಂ ಕುಡಿದ ಕುಂಭಸಂಭವನಂತ ಪಾಂಡವ ಬಳ ಜಳನಿಧಿಯನಳುರಲ್ ಬಗೆದು ನೇಸಮ್ ಪಟೊಡಂ ಪೋಗದ ಪಗಲಿನನುವರ ದೊಳಿಎಳ್ಳೆಯಾದ ಪಾಂಡವರನಿರುಳೊಳೆ ಗೆಲ್ವೆನೆಂದು ಚತುರ್ಬಲಂಗಳನೊಂದುಮಾಡಿ
ತಕ್ಕಿನ ವಿಕ್ರಮಾರ್ಜುನನ ಕೋಪದ ದಳ್ಳುರಿಗಳ ವಿರೋಧಿಯಂ | ಮುಕ್ಕಲೆ ಮುತ್ತಿದಂತೆ ಕರಿಗಂಟು ರಥಕ್ಕನುವಾಗೆ ನಾಲ್ಕು ವಾ | ಹಕ್ಕೆರಡಲ್ಲಿ ಪಾದಚರರ್ಗೊಂದನೆ ದೀವಿಗೆಗಳ ಜಲಕ್ಕನೆ ಕೈಕೊಯಿನಿಟ್ಟಳಂ ಬೆಳಗುತಿರ್ದುವರಚಿಸಯೊಡ್ಡಣಂಗಳೊಳ್ |
ವll ಅಂತು ಪಗಲಿಳಿದು ತಣಿಯದಿರುಳಂ ಪಗಲಾಡಿ ಕಾದುವರಟ್ಟಡೆಗಳೇರ್ವಸನಂ ಕಣ್ಣಾರೆ ನೋಡಲೆಂದು ವೈಮಾನಿಕ ದೇವರಂಬರತಳದೊಳಿರ್ದು ಕಿರ್ಚಲ್ಲಿ ಲಂಕೆಯಂ ನೋಟ್ಟಂತೆ ನೋಡೆ ಧರ್ಮಪುತ್ರನನಧೋಕ್ಷಜನಿಂತೆಂದಂ
ಚಂ|| ಇರುಳೊಳುಮಿಂತು ಪೋಗದಿಯಲ್ ಘಟಸಂಭವನಿರ್ದನೆಂತು ನಿ
ತರಿಸುವಮೀ ಮಹಾಹವಮನೆಂಬುದುಮಿನ್ನಿರುಳೊಳ್ ಬಲಂ ನಿಶಾ | ಚರ ಬಲಕುಂಟು ಮಾಣದೆ ಘಟೋತ್ಕಚನಂ ಬೆಸವೇಚ್ಚುದೆಂದೂಡಾ ದರದೊಳೆ ಭೀಮನಂದನನನಾ ಪದದೊಳ್ ಯಮರಾಜನಂದನಂ || ೬
ಹೇಗೂ ವ್ಯರ್ಥವಾಗುವುದಿಲ್ಲವಲ್ಲವೇ ? ವll ಎಂದು ದ್ರೋಣಾಚಾರ್ಯನು ಸಮುದ್ರಪಾನಮಾಡಿದ ಅಗಸ್ಯರಂತೆ ಪಾಂಡವ ಸೇನಾಸಮುದ್ರವನ್ನು ಸುಟ್ಟು ಹಾಕಲು ಯೋಚಿಸಿ ಸೂರ್ಯಾಸ್ತಮಾನವಾದರೂ ಪಾಳೆಯಕ್ಕೆ ಹೋಗದೆ ಹಗಲಿನ ಯುದ್ದದಲ್ಲಿ ಅತ್ಯಾಯಾಸಗೊಂಡಿರುವ ಪಾಂಡವರನ್ನು ರಾತ್ರಿಯಲ್ಲಿ ಗೆಲ್ಲುತ್ತೇನೆ ಎಂದು ಚತುರಂಗಸೈನ್ಯವನ್ನು ಒಟ್ಟುಗೂಡಿಸಿದನು. ೫. ಯೋಗ್ಯನಾದ ವಿಕ್ರಮಾರ್ಜುನನ ಕೋಪದ ಮಹಾಜ್ವಾಲೆಗಳು ಶತ್ರುವನ್ನು ಮುತ್ತುವುದಕ್ಕಾಗಿಯೇ ಮುತ್ತಿದೆಯೋ ಎನ್ನುವಂತೆ ಒಂದು ಆನೆಗೆ ಎಂಟು, ರಥಕ್ಕೆ ನಾಲ್ಕು, ಕುದುರೆಗೆ ಎರಡು, ಪಾದಚರರಿಗೆ ಒಂದು ಎನ್ನುವ ಕ್ರಮದಲ್ಲಿ ದೀವಿಟಿಗೆಗಳು ಜಲಕ್ಕನೆ ಪಕ್ಕಪಕ್ಕದಲ್ಲಿಯೇ ಎರಡುಸೈನ್ಯಗಳಲ್ಲಿಯೂ ಮನೋಹರವಾಗಿ ಬೆಳಗುತ್ತಿದ್ದುವು. ವli ಹಾಗೆ ಹಗಲು ಯುದ್ದಮಾಡಿ ತೃಪ್ತಿಯಾಗದೆ ರಾತ್ರಿಯನ್ನೇ ಹಗಲುಮಾಡಿಕೊಂಡು ಕಾದುವ ಎರಡೂ ಸೈನ್ಯಗಳ ಯುದ್ಧಕಾರ್ಯವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ವೈಮಾನಿಕ ದೇವರುಗಳು ಆಕಾಶ ಪ್ರದೇಶದಲ್ಲಿದ್ದುಕೊಂಡು ಉರಿಯುತ್ತಿದ್ದ ಲಂಕಾಪಟ್ಟಣವನ್ನು ನೋಡುವಂತೆ ನೋಡಲು ಧರ್ಮರಾಯನು ಕೃಷ್ಣನನ್ನು ಕುರಿತು ಹೀಗೆಂದನು. ೬. ದ್ರೋಣನು ರಾತ್ರಿಯಲ್ಲಿಯೂ ಹಿಂತಿರುಗದೆ ಯುದ್ಧಮಾಡಲಿದ್ದಾನೆ. ಈ ಮಹಾಯುದ್ಧವನ್ನು ನಾವು ಹೇಗೆ ನಿರ್ವಹಿಸೋಣ ಎನ್ನಲು ರಾಕ್ಷಸರು ರಾತ್ರಿಯಲ್ಲಿ ಶಕ್ತಿಯುಕ್ತರು, ಸಾವಕಾಶ ಮಾಡದೆ ಘಟೋತ್ಕಚನಿಗೆ ಆಜ್ಞೆ ಮಾಡು ಎಂದು ಕೃಷ್ಣನು ಹೇಳಿದನು. ಅದರಂತೆ
Page #566
--------------------------------------------------------------------------
________________
ದ್ವಾದಶಾಶ್ವಾಸಂ / ೫೬೧ ವll ಕರೆದು ಮಗನೆ ನೀನಿಂದಿರುಳಿನನುವರಮನೆನಗೆ ಗೆಲ್ಲೀಯಲ್ವೇಚ್ಚುಮೆಂದೊಡಿ ದಾವುದರಿದುಂ ಪಿರಿದುಮಾಗಿ ಬೆಸಸಿದಿರಂತೆಗೆಯ್ದನೆನ್ನ ತೋಟ್ಟುವೆಸನನೀ ವಿಶಸನರಂಗದೊಳ್ ತೋರ್ಪನೆಂದುಚಂll ಪರೆದುರಿಗೇಸಮವ್ವಳಿಪ ನಾಲಗೆ ಮಿಂಚುವ ದಾಟೆ ಬಿಟ್ಟ ಕಣ್
ತಿರುಪಿದ ಮೀಸೆ ಕೊಂಕಿದ ಸಟಂ ಕಳದಪ್ಪ ಕದಂಪು ನೀು ತಾ | ಬರದವೊಲಪ್ರೊಡಲ್ ಕಹ ಕಹ ಧ್ವನಿ ಕೌಳಿಕ ನಾದಮಾದಮಾ
ಸುರತರಮಾಗೆ ಬಂದು ಕವಿದತ್ತು ಘಟೋತ್ಕಚ ರೌದ್ರ ಸಾಧನಂ | . ೭
ವ|| ಅಂತು ನಿಶಾಚರ ಬಲಮಜವಳಗಾದ ಕಾಡನಳುರ್ವ ಬೇಗೆಯ ದಳ್ಳುರಿಯಂತೆ ದಳಿಸಿ ಕೊಳ್ಳೆಂದರಾತಿ ಬಲಮನಳುರೆ ಕರಡಿಯ ತೊವಲೋಳ್ ಪುದಿದ ಕರ್ಬೊನ್ನ ರಥಮುಮಾ ರಥದೊಳೊಡಂಬಡೆ ಪೂಡಿದ ನಾಲ್ಕೂಟು ಗೊಂಕುಲುಗಚಿಯಮಂಬರಸ್ಥಲಮನಡರ್ವ ಗಧಧ್ವಜ ಮುಮಂಜನ ಪುಂಜದಂತಾಗಿ ಬ್ರಹ್ಮಾಂಡಮಂ ತಾಗಿದ ವಿಕಟಾಂಗಮುಮಳವಳಿಯನಡಸಿದಂತಪ್ಪ ದಾಡಯುಮಗುರ್ವಾಗೆ ಬಂದು ತಾಗಿದಾಗಳ್ಚಂi ಕುದುರೆಯ ಬಿಲ್ಲ ಬಲ್ಲಣಿಯ ಕೇಣಿಯನಲ್ಲಿ ಕೆಲರ್ ನಿಶಾಟರು
ಣಿದ ಬಿಸುನೆತ್ತರೊಳ್ ಮಿಡಿದು ನುಣ್ಣನೆ ನುಂಗಿದರೆಲ್ಲಿಯುಂ ಕೆಲರ್ | ಕುದುಗುಳಿ ರಕ್ಕಸರ್ ಬಿಸುಕೆಗಳೊರಸುಗ್ರ ಮಹಾಗಜಂಗಳಂ ಚದುರ್ಗಿಡ ನುಂಗಿ ಬಿಕ್ಕಿ ಕುಡಿದ ಬಿಸುನೆತ್ತರ ಕಾಲ್ಪುರಂಗಳಂ || ೮
ಧರ್ಮರಾಯನು ಘಟೋತ್ಕಚನನ್ನು ವ|ಕರೆದು, ಮಗನೆ ನೀನು ಈ ದಿನ ರಾತ್ರಿಯುದ್ದವನ್ನು ನನಗೆ ಗೆದ್ದುಕೊಡಬೇಕು ಎಂದನು. ಅದಕ್ಕೆ ಘಟೋತ್ಕಚನು ಇದೇನಸಾಧ್ಯವೂ ಹಿರಿದೂ ಎನ್ನುವ ಹಾಗೆ ಅಪ್ಪಣೆಕೊಡುತ್ತೀರಿ; ಹಾಗೆಯೇ ಮಾಡುತ್ತೇನೆ; ನನ್ನ ಸೇವಾಕಾರ್ಯವನ್ನು ಯುದ್ಧರಂಗದಲ್ಲಿ ತೋರಿಸುತ್ತೇನೆ ಎಂದನು. ೭. ಉರಿಯಂತೆ ಕೆಂಪಗಿರುವ ಕೆದರಿದ ಕೂದಲು ಮುಂದಕ್ಕೆ ಚಾಚಿಕೊಂಡಿರುವ ನಾಲಿಗೆ, ಮಿಂಚುವ ಕೋರೆಹಲ್ಲು, ತೆರೆದ ಕಣ್ಣು, ಹುರಿಮಾಡಿರುವ ಮೀಸೆ, ವಕ್ರವಾದ ಕೇಸರಗಳು, ಕರಗಿರುವ ಕೆನ್ನೆ, ಉದ್ದವಾದ ತಾಳೆಯ ಮರದಂತಿರುವ ಶರೀರ, ಕಹಕಹವೆಂಬ ಧ್ವನಿ, ಭಯಂಕರವಾದ ಶಬ್ದ-ಇವೆಲ್ಲ ಅತ್ಯಂತ ಭಯಂಕರವಾಗಿರಲು ಘಟೋತ್ಕಚನ ಭಯಂಕರವಾದ ಸೈನ್ಯವು ಬಂದು ಮುತ್ತಿಕೊಂಡಿತು. ವ|| ರಾಕ್ಷಸ ಪಡೆಯು ಚೆನ್ನಾಗಿ ಒಣಗಿರುವ ಕಾಡನ್ನು ಸುಡುವ ಬೇಸಿಗೆಯ ಮಹಾಜ್ವಾಲೆಯಂತೆ ಪ್ರಜ್ವಲಿಸಿ 'ತೆಕೊ' ಎಂದು ಶತ್ರುಸೈನ್ಯವನ್ನು ಸುಡುತ್ತಿರಲು ಕರಡಿಯ ಚರ್ಮದಿಂದ ಆವರಿಸಲ್ಪಟ್ಟ ಕಬ್ಬಿಣದ ತೇರು, ಆ ರಥಕ್ಕೆ ಒಪ್ಪುವ ಹಾಗೆ ಹೂಡಿದ್ದ ಹೇಸರಗತ್ತೆ, ಆಕಾಶ ಪ್ರದೇಶವನ್ನು ಹತ್ತುವ ಹದ್ದಿನ ಬಾವುಟಗಳು, ಕಾಡಿಗೆಯ ರಾಶಿಯಂತಾಗಿ ಬ್ರಹ್ಮಾಂಡವನ್ನೂ ತಾಗಿದ ವಿಕಾರವಾದ ದೇಹ, ಬಾಲಚಂದ್ರನನ್ನು ಜೋಡಿಸಿದ ಹಾಗಿದ್ದ ದಾಡೆ ಇವುಗಳಿಂದ ಭಯಂಕರವಾಗಿ ಬಂದು ತಾಗಿತು. ೮. ಕುದುರೆಗಳನ್ನು ಬಿಲ್ದಾರರನ್ನು ಬಲಿಷ್ಠರಾದ ಕಾಲಾಳುಗಳ ಸಾಲುಗಳನ್ನು ಅಲ್ಲಿ ಕೆಲವು ರಾಕ್ಷಸರು ಚಿಮ್ಮಿದ ಬಿಸಿರಕ್ತದಲ್ಲಿ ಮರ್ದನ ಮಾಡಿ (ಕುಟ್ಟಿ ನವಾಗಿ
Page #567
--------------------------------------------------------------------------
________________
ಬೆಅಗಾದ ಸುಯೋಧನನ
೫೬೨) ಪಂಪಭಾರತಂ - ವl ಅಂತು ರಕ್ಕಸವಡ ತನ್ನ ಪಡೆಯೆಲ್ಲಮಂ ತರಳ್ಳಿ ತೇರಯಿಸಿ ನುಂಗಿದೊಡೆ
ಧನನಂ ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಪ ಹಲಾಯುಧ ಮುಸಲಾಯುಧ ಕಾಳ ನೀಳ ರೂಕ್ಷರಾಕ್ಷಸರ್ ಮುನ್ನ ತಮ್ಮಣ್ಣನ ತಂದೆಯ ಪಗೆಯಂ , ನೆಂಪಲೆಂದು ಬೆಸನಂ ಬೇಡಿದಾಗಳ್ಚಂಗಿ ಪ್ರತಿವಿಷಮಗ್ರಿಗಗಿ ವಿಷಕಂ ವಿಷಮಂಬವೊಲಾ ನಿಶಾಚರಂ
ಗತಿ ಬಲರೀ ನಿಶಾಟರಿವರಕ್ಕೆನುತುಂ ಬೆಸವೇ ತಾಗಿದಾ | ದಿತಿಸುತರಂ ಘಟೋತ್ಕಚನಸುಂಗೊಳೆ ಕಾದಿ ನಿಶಾಟಕೋಟ ಸಂ ತತಿಗಳನಿಕ್ಕಿ ಪಾಂಡವಬಲಕ್ಕನುರಾಗಮನುಂಟುಮಾಡಿದಂ ||
ವ|| ಅಂತು ಕುರುಬಲಮೆಲ್ಲಮಂ ಜೀರಗೆಯೊಕ್ಕಲ್ಮಾಡಿ ತುಟಿದು ಕೊಲೆ ರಾಜರಾಜನ ಬೆಸದೋಳಂಗರಾಜಂ ಬಂದು ತಾಗ
ಮlು ಸಮದೇಭೇಂದ್ರ ಸಮೂಹದಿಂದಮಿಡುತುಂ ಕಂಠೀರವಧಾನದಿಂ
ದಮಗುರ್ವವಿನಮಾರುತುಂ ಪೆಣಗಳಂ ನುಂಗುತ್ತುಮಾಕಾಶದಂ | ತಮನೆಯುತ್ತುಮಿದಿರ್ಚಿ ಕಾದುವೆಡೆಯೊಳ್ ಕಾಣುತ್ತೆ ದೇವರ್ಕಳಿ ನ್ನುಮೊಳಂ ರಾವಣನೆಂಬಿನಂ ನೆಗಟ್ಟುದಾ ಹೈಡಿಂಬನಾಡಂಬರಂ || ೧೦
ನುಂಗಿದರು. ಮತ್ತೆ ಕೆಲವು ಬಹಳ ಉತ್ಸಾಹಶಾಲಿಗಳಾದ (ಕುಡಿಯುವ ಸ್ವಭಾವವುಳ್ಳ ?) ರಾಕ್ಷಸರು ಅಂಬಾರಿ ಸಹಿತವಾಗಿ ಭಯಂಕರವಾದ ಆನೆಗಳನ್ನು ವಿಕಾರವಾದ ರೀತಿ ಯಲ್ಲಿ ನುಂಗಿ ಬಿಸಿರಕ್ತದ ಪ್ರವಾಹಗಳನ್ನು ಹೀರಿ ಕುಡಿದರು. ವ|| ರಾಕ್ಷಸಸೈನ್ಯವು ತನ್ನ ಸೈನ್ಯವನ್ನೆಲ್ಲ ಉಂಡೆಮಾಡಿ ಆತುರದಿಂದ ನುಂಗಲು ಆಶ್ಚರ್ಯಪಡುತ್ತಿದ್ದ ದುರ್ಯೋಧನನನ್ನು ಬಕಾಸುರ ಮತ್ತು ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳ ನೀಳರೆಂಬ ರೂಕ್ಷ ರಾಕ್ಷಸರು ತಮ್ಮಣ್ಣನ ಮತ್ತು ತಂದೆಯ ಹಿಂದಿನ ದ್ವೇಷವನ್ನು ತೀರಿಸಿಕೊಳ್ಳುವುದಕ್ಕಾಗಿ ತಮಗೆ ಆ ಕಾರ್ಯದಲ್ಲಿ ಭಾಗವಹಿಸಲು ಅಪ್ಪಣೆಯಾಗಬೇಕೆಂದು ಕೇಳಿಕೊಂಡರು. ೯. ವಿಷಕ್ಕೆ ವಿಷವೂ ಅಗ್ನಿಗೆ ಅಗ್ನಿಯೂ ಪ್ರತಿವಿಷವೆನ್ನುವ ಹಾಗೆ ಆ ಘಟೋತ್ಕಚನೆಂಬ ರಾಕ್ಷಸನಿಗೆ ಅತಿ ಬಲಿಷ್ಠರಾದ ಈ ರಾಕ್ಷಸರು ಪ್ರತಿಶಕ್ತಿಯಾಗಲಿ ಎನ್ನುತ್ತ ದುರ್ಯೋಧನನು ಆಗಬಹುದೆಂದು ಅವರಿಗೆ ಆಜ್ಞೆಮಾಡಿದನು. ಬಂದು ತಗುಲಿದ ಆ ರಾಕ್ಷಸರನ್ನು ಘಟೋತ್ಕಚನು ಪ್ರಾಣಾಪಹಾರ ಮಾಡುವ ಹಾಗೆ ಕಾದಿ ಆ ರಾಕ್ಷಸಸಮೂಹವನ್ನು ಸಂಹರಿಸಿ ಪಾಂಡವಸೈನ್ಯಕ್ಕೆ ಪ್ರೀತಿಯನ್ನುಂಟುಮಾಡಿದನು. ವ|| ಕೌರವಸೈನ್ಯವನ್ನೆಲ್ಲ ಜೀರಿಗೆಯನ್ನು ಒಕ್ಕಣೆಮಾಡುವಂತೆ ಮಾಡಿ ತುಳಿದು ಕೊಲ್ಲಲು ದುರ್ಯೊಧನನ ಆಜ್ಞೆಯ ಪ್ರಕಾರ ಕರ್ಣನು ಬಂದು ತಾಗಿದನು. ೧೦. ಶ್ರೇಷ್ಠವಾದ ಮದ್ದಾನೆಗಳ ಸಮೂಹದಿಂದ ಹೊಡೆಯುತ್ತಲೂ ಸಿಂಹದ ಧ್ವನಿಯಿಂದ ಭಯವುಂಟಾಗುವ ಹಾಗೆ ಆರ್ಭಟಿಸುತ್ತಲೂ ಹೆಣಗಳನ್ನು ನುಂಗುತ್ತಲೂ ಆಕಾಶದ ಕೊನೆಗೂ ಹೋಗಿ ಎದುರಿಸಿ ಕಾದುವ ಸನ್ನಿವೇಶವನ್ನು ನೋಡಿ ದೇವತೆಗಳು ರಾವಣನೆಂಬುವನು ಇನ್ನೂ ಇದ್ದಾನೆ ಎನ್ನುವಷ್ಟು ಆ ಘಟೋತ್ಕಚನ ಆಡಂಬರವು ಪ್ರಸಿದ್ಧವಾಯಿತು.
Page #568
--------------------------------------------------------------------------
________________
ದ್ವಾದಶಾಶ್ವಾಸಂ | ೫೬೩ ಕಂ11 ಸರಿದಧಿಪತಿ ಮೊಳಕಾಲ್ವರ
ಮುರಂಬರಂ ಮೇರು ಮುಯ್ಯುವರೆಗಮಜಾಂಡಂ | ಬರ ತಲೆಯ ನೆಲೆಗೆ ಲೋಕಾಂ ತರಮಡೆಯಿನಿಸೆ ಪರ್ಚಿದಂ ದನುತನಯಂ || ಬೆಳ್ಳಾಳೆ ಪೊಳೆವುದೋಜುವು ದೊಳ್ಳಾಳ ಪೊಡರ್ಪುದೋರ್ಪುದಿರದಣಣೆಂ | ದೂಳ್ಳಲಗಿನ ಶರತತಿಯಿಂ
ಕೊಳ್ಳ ಕೊಳೆಂದಂಗರಾಜನಸುರನನೆಚ್ಚಂ | ಉತ್ಸಾಹ || ಎಳ್ಕೊಡಸುರನಿಟ್ಟ ಬೆಟ್ಟಿನೊಂದು ವಜಶರದಿನಾ
ರ್ದಚ್ಚು ದಿತಿಜನಚ್ಚ ಸಿಡಿಲ ಶರಮನುದಕಬಾಣದಿಂ | ದಚ್ಚು ದನುತನೂಜನೆಚ್ಚ ವಾರ್ಧಿಗನಲಬಾಣದಿಂ
ದಚ್ಚು ನಚ್ಚುಗಿಡಿಸಿ ಕೊಂಡು ಶೂಲಮಂ ಘಟೋತ್ಕಚಂ || - ಕಂll ನೆಲನದಿರ್ವಿನಮಿದಿರಂ ಬರ
ಕುಲಿಶಾಯುಧನಿತ್ತ ಶಕ್ತಿಯಿಂದಾತನುರ | ಸ್ಥಲಮನಡ ವಜ್ರಹತಿಯಿಂ ಕುಲಗಿರಿ ಕಡೆವಂತೆ ಕೆಡೆದನಾ ದನುತನಯಂ |
೧೧. ಸಮುದ್ರವು ಮೊಣಕಾಲಿನವರೆಗೂ ಮೇರುಪರ್ವತವು ಎದೆಯವರೆಗೂ ಬ್ರಹ್ಮಾಂಡವು ಭುಜದವರೆಗೂ ಬರಲು ತಲೆಯವರೆಗೆ ಲೋಕಾಂತರದಲ್ಲಿಯೂ ಸ್ಥಳವಿಲ್ಲವೆನ್ನುವಷ್ಟು ದೀರ್ಘವಾಗಿ ರಾಕ್ಷಸನಾದ ಘಟೋತ್ಕಚನು ಬೆಳೆದನು. ೧೨. ಅಂಜುಪುರಕನಿಗೆ ಆಯುಧದ ಹೊಳಪನ್ನು ತೋರಿಸತಕ್ಕದ್ದು, ಸುಪ್ರಸಿದ್ಧ ವೀರಭಟನಿಗೆ ಪರಾಕ್ರಮವನ್ನು ತೋರಿಸತಕ್ಕದ್ದು; ಆದುದರಿಂದ ಈಗ ನೀನು ನನಗೆ ಸಾವಕಾಶಮಾಡದೆ ನಿನ್ನ ಪರಾಕ್ರಮವನ್ನು ತೋರು, ತೋರು, ತೆಕೊ ತೆಕೊ ಎಂದು ಕರ್ಣನು ಒಳ್ಳೆಯ ಅಲಗಿನಿಂದ ಕೂಡಿದ ಬಾಣಗಳ ಸಮೂಹದಿಂದ ರಾಕ್ಷಸನನ್ನು ಹೊಡೆದನು. ೧೩. ರಾಕ್ಷಸನು ಎಸೆದ ಒಂದು ಬೆಟ್ಟವನ್ನು ವಾಸ್ತದಿಂದಲೂ ಅವನಿಟ್ಟ ಸಿಡಿಲ ಬಾಣವನ್ನು ಉದಕಾಸ್ತ್ರದಿಂದಲೂ ಅವನು ಇಟ್ಟ ಸಮುದ್ರಾಸ್ತ್ರವನ್ನು ಆಸ್ಟ್ರೇಯಾಸ್ತದಿಂದಲೂ ಕರ್ಣನು ಹೊಡೆದು ಅವನ ಆತ್ಮಪ್ರತ್ಯಯವನ್ನು ಹಾಳುಮಾಡಲಾಗಿ ಘಟೋತ್ಕಚನು ಶೂಲಾಯಧವನ್ನು ತೆಗೆದುಕೊಂಡು-೧೪ ನೆಲವು ನಡುಗುವಂತೆ ಎದುರಾಗಿ ಬರಲು ಕರ್ಣನು ಇಂದ್ರನು ಕೊಟ್ಟಿದ್ದ ಶಕ್ಕಾಯುಧದಿಂದ ಆತನ ಹೃದಯಸ್ಥಳವನ್ನು ಹೊಡೆದನು. ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳುರುಳುವಂತೆ ಆ ರಾಕ್ಷಸಕುಮಾರನು ಕೆಳಗುರುಳಿದನು. ೧೫. ಇವನ ಶರೀರವು (ಮುಂಡ) ಕೆಳಗೆ ಬಿದ್ದುದರಿಂದ ಒಂದಕ್ಕೋಹಿಣಿ ಸೈನ್ಯವು ಪುಡಿಪುಡಿಯಾಯಿತು. ತಾನು ಸತ್ತೂ ಇವನು ಇಷ್ಟನ್ನು ಕೊಂದನು. ಇಂತಹವನನ್ನು ಭಯವುಂಟಾಗುವ ಹಾಗೆ ಕೊಂದ ಪರಾಕ್ರಮವು ಕರ್ಣನಲ್ಲದವನಿಗೆ ಒಪ್ಪುತ್ತದೆಯೇ?
Page #569
--------------------------------------------------------------------------
________________
೫೬೪ / ಪಂಪಭಾರತಂ
ಒಂದಕ್ಕೋಹಿಣಿ ನುರ್ಗಿದು ದಿಂದಿವನ ಕಬಂಧಘಾತದಿಂ ಸನಿತಂ | ಕೊಂದನಿವನಿವನನಳ್ಳುತಿ
ಕೊಂದಳವಿನತನಯನಲ್ಲದಂಗೋಪುಗುಮೇ ||
ವ|| ಎಂದೆರಡುಂ ಪಡೆಗಳುಂ ದೇವರ ಪಡೆಗಳು ಕರ್ಣನನೆ ಪೊಗ ಕಾದಲ್ವೇಡೆಂಬಂತುಭಯಸೈನ್ಯಂಗಳಡ್ಡವಾಗಿ ಕುಲಗಿರಿ ಕೆಡೆವಂತಯ್ಯಾವುದು ನೆಲನೊಡಲಳವಿ ಯಾಗೆ ಬಿಟ್ಟೆರ್ದ ಘಟೋತ್ಕಚನ ಸಾವಿಂಗೆ ಕರಮದಲ್ಲು ಕಣ್ಣ ನೀರಂ ಸಿಡಿವಂತಕಾತ್ಮಜನನನಂತ ನಿಂತೆಂದಂ
ಮ||
೧೫
ದಿವಿಜಾಧೀಶನ ಕೊಟ್ಟ ಶಕ್ತಿಯನದಂ ಕರ್ಣಂ ನರ೦ಗೆಂದು ಬ ಯವನಿಂದಿಂದವೆಯೇ ವಂದೊಡದಂದಿಂದಾತನಂ ಕೊಂದನಿ | ವನಂ ಕೊಲ್ವುದು ಮೊಗ್ಗದರ್ಕಲವೇಡೆಂಬನ್ನಮತ್ತೇಳೆದಂ ರವಿ ಪೂರ್ವಾಚಲಮಂ ನಿಜಾತ್ಮಜನ ಗೆಲ್ಲುಗ್ರಾಜಿಯಂ ನೋವೋಲ್ || ೧೬
ವ|| ಆಗಳ್ ಕುಂಭಸಂಭವಂ ಶೋಣಾಶ್ವಂಗಳೊಳ್ ಪೂಡಿದ ಕನಕ ಕಳಶಧ್ವಜ ವಿರಾಜಿತಮಪ್ಪ ತನ್ನ ರಥಮನೇ ಘಟೋತ್ಕಚನ ಕಳೇಬರ ಗಿರಿ ದುರ್ಗಮಲ್ಲದ ಸಮಭೂಮಿಯೊಳ್ ಚತುರ್ಬಲಂಗಳನೊಂದುಮಾಡಿ ಶೃಂಗಾಟಕವ್ಯೂಹಮನೊಡ್ಡಿ ನಿಂದಾಗಳ್ ಧೃಷ್ಟದ್ಯುಮ್ನನಂ ಪಾಂಡವ ಪತಾಕಿನಿಯುಮಂ ವಜ್ರವ್ಯೂಹಮನೊಡ್ಡಿ ನಿಲೆ ಧರ್ಮಪುತ್ರನುಂ ಸುಯೋಧನನುಮೊಡನೊಡನೆ ಕೆಯ್ದಿಸಿದಾಗಳ್
ವ|| ಎಂದು ಎರಡು ಸೈನ್ಯಗಳೂ ದೇವಸಮೂಹವೂ ಕರ್ಣನನ್ನೇ ಹೊಗಳಿದವು. ಇನ್ನು ಕಾದಬೇಡಿ ಎನ್ನುವ ಹಾಗೆ ಎರಡು ಸೈನ್ಯಗಳಿಗೆ ಅಡ್ಡಲಾಗಿ ಕುಲಗಿರಿ ಕೆಡೆಯುವಂತೆ ಅಯ್ದುಗಾವುದ ಭೂಮಿಯನ್ನು ಆಕ್ರಮಿಸುವ ಶರೀರದ ಅಳತೆಯನ್ನುಳ್ಳವನಾಗಿ ಬಿದ್ದಿದ್ದ ಘಟೋತ್ಕಚನ ಸಾವಿಗೆ ವಿಶೇಷವಾಗಿ ಧರ್ಮರಾಯನು ದುಃಖಪಟ್ಟು ಕಣ್ಣೀರನ್ನು ಚಿಮ್ಮಿಸಿದನು. ಅವನನ್ನು ಕೃಷ್ಣನು ಹೀಗೆ ಸಮಾಧಾನಪಡಿಸಿದನು. ೧೬. ಇಂದ್ರನು ವರವಾಗಿ ಕೊಟ್ಟ ಶಕ್ತಾಯುಧವನ್ನು ಕರ್ಣನು ಅರ್ಜುನನಿಗೆಂದು ಮುಚ್ಚಿಟ್ಟಿದ್ದನು. ಈ ದಿನ (ತನಗೆ) ಸಾವು ಸಮೀಪಿಸಿದ್ದರಿಂದ ಆ ಶಕ್ತಾಯುಧದಿಂದ ಘಟೋತ್ಕಚನನ್ನು ಕೊಂದನು. ಇನ್ನು ಈ ಕರ್ಣನನ್ನು ಗೆಲ್ಲುವುದು ಸುಲಭ ಸಾಧ್ಯ; ಅದಕ್ಕಾಗಿ ನೀನು ದುಃಖಪಡಬೇಡ” ಎನ್ನುವಷ್ಟರಲ್ಲಿ ಆ ಕಡೆ ಸೂರ್ಯನು ತನ್ನ ಮಗನು ಗೆದ್ದ ಭಯಂಕರವಾದ ಯುದ್ಧವನ್ನು ನೋಡುವ ಹಾಗೆ ಉದಯಪರ್ವತವನ್ನೇರಿದನು. (ಸೂರ್ಯೋದಯವಾಯಿತು). ವ|| ಆಗ ದ್ರೋಣಾಚಾರ್ಯನು ಕೆಂಪುಕುದುರೆಗಳನ್ನು ಹೂಡಿದ್ದ ಚಿನ್ನದ ಕಳಶಧ್ವಜದಿಂದ ವಿರಾಜಿತವಾಗಿರುವ ತನ್ನ ರಥವನ್ನು ಹತ್ತಿ ಘಟೋತ್ಕಚನ ಶರೀರವೆಂಬ ಬೆಟ್ಟದುರ್ಗವಿಲ್ಲದ ಸಮಭೂಮಿಯಲ್ಲಿ ಚತುರಂಗಸೈನ್ಯವನ್ನು ಒಟ್ಟುಗೂಡಿಸಿ (ನಾಲ್ಕು ಬೀದಿಗಳು ಕೂಡುವ ಸ್ಥಳದಂತಿರುವ ಒಂದು ಸೇನಾರಚನೆಯನ್ನು, ಶೃಂಗಾಟಕವ್ಯೂಹವನ್ನು) ಒಡ್ಡಿ ನಿಂತನು. ದೃಷ್ಟದ್ಯುಮ್ನನು ಪಾಂಡವಸೈನ್ಯವನ್ನು ವಜ್ರವ್ಯೂಹವನ್ನಾಗಿ ಒಡ್ಡಿನಿಂತನು. ಧರ್ಮರಾಜನೂ ದುರ್ಯೋಧನನೂ (ಯುದ್ಧಪ್ರಾರಂಭಸೂಚಕವಾಗಿ) ಕೈ ಬೀಸಿದಾಗ ಪುನಃ ಯುದ್ಧ
Page #570
--------------------------------------------------------------------------
________________
ದ್ವಾದಶಾಶ್ವಾಸಂ | ೫೬೫ ಮ|| ಸ || ಎಳೆಯುಂ ಬ್ರಹ್ಮಾಂಡಮುಂ ತಾಗುವವೊಲುಭಯಸೈನ್ಯಾಬ್ರಿಗಳ
ತಾಗಿ ಬಿಲ್ ಬಿ ಲೊಳುದದ್ವಾಶ್ವಂಗಳೊಳಣಿಯಣಿಯೊಳ್ ಸ್ಕಂದನಂ ಸ್ಕಂದನೆಘಂ 1 ಗಳೊಳುಿಭಂ ಮದೇಭಂಗಳೊಳಿಟಿಯ ತೆರಳರ್ಪ ಕೆನ್ನೆತ್ತರಿಂದೋ ಕುಳಿಯಂ ಖಂಡಂಗಳೋಂದಿಂಡೆಯೊಳ ಜವನಡುರ್ತಾಡಿದಂತಾದುದಾಗಳ್ || ೧೭
ವ|| ಅಂತು ವೀರರಸದ ತೋಯುಂ ನೆತ್ತರ ತೊಳೆಯುಮೊಡನೊಡನೆ ಬೆಳ್ಳಂಗೆಡೆದು ಪರಿಯ ಚತುರ್ಬಲಂಗಳ್ ಕಾದಿ ಬಸವಳದು ಪಂಪಿಂಗಿ ನಿಂದಾಗಳ್ ವಿರಾಟಂ ತನ್ನ ಚತುರ್ಬಲಂಗಳನೊಂದುಮಾಡಿಕೊಂಡು ಪಾಂಡವರ್ ತನ್ನ ಮಾನಸಿಕೆಯಂ ನಚ್ಚಿ ತನ್ನ ಪೋಲಲೋಳಜ್ಞಾತವಾಸಂ ಮಾಡಿದುದುಮಂ ದಕ್ಷಿಣೋತ್ತರ ಗೋಗ್ರಹಣದೊಳ್ ತನಗಾಗಿ ಕಾದಿ ತುಣುವಂ ಮಗುಟ್ಟಿದುದುಮಂ ನೆನೆದುಮll ಸ ! ಮಗಳಂ ಪಾರ್ಥಾತ್ಮಜಂಗಂ ತಲೆ ಬತಿವೆಯೆಂದಿತ್ತುದಂ ತನ್ನ ಮಕ್ಕಳೇ
ನೆಗಚ್ಚಾ ಸಂಗ್ರಾಮದೊಳ್ ಸತ್ತುದುಮನೆ ಮನದೋಳ್ ತಾಲ್ಲಿ ತಾಪಾಗಳಾ ಜೆ | ಟೈಗನಂ ಕುಂಭೋದ್ಭವಂ ಬಂದದಿರದಿದಿರನಾಂತೊಂದೆ ಕೆಲ್ಲಂಬಿನಿಂ ಮೆ ಗೆ ಪಾರ್ದಾರ್ದೆಚನೇಸಿಂ ತಲೆಪಳೆದು ಸಿಡಿಲತ್ತ ಬೀಳ್ವನ್ನಮಾಗಳ್ || ೧೮
ವll ಅಂತು ವಿರಾಟನನಿಕ್ಕಿ ಮನದೊಳಳ್ಳಾಟಮಿಲ್ಲದರಿತೃಪಕೋಟಿಯನಾಟರಲೆಂದಾ ಸ್ಫೋಟಿಸಿ ನಿಶಿತ ಶರಕೋಟಿಯೊಳ್ ತಳಿಗೋಂಟೆಯನಿಕ್ಕಿ ವೀರರಸನಿಕೇತನನಾಗಿರ್ದ ಕಳಶಕೇತನನಂ ನೋಡಿ ದ್ರುಪದಂ ಸೈರಿಸದೆಪ್ರಾರಂಭವಾಯಿತು. ೧೭. ಭೂಮಿಯೂ ಬ್ರಹ್ಮಾಂಡವೂ ತಾಗುವ ಹಾಗೆ ಎರಡು ಸೇನಾಸಮುದ್ರಗಳೂ ತಾಗಿದುವು. ಬಿಲ್ದಾರರು ಬಿಲ್ದಾರರಲ್ಲಿಯೂ ಅತ್ಯುತ್ತಮವಾದ ಅಶ್ವಾರೋಹಕರು ಅಶ್ವಾರೋಹಕರಲ್ಲಿಯೂ ಕಾಲುಬಲದವರು ಕಾಲುಬಲ ದವರಲ್ಲಿಯೂ ತೇರು ತೇರುಗಳ ಸಮೂಹದಲ್ಲಿಯೂ ಶ್ರೇಷ್ಠವಾದ ಆನೆಗಳು ಮದ್ದಾನೆಗಳಲ್ಲಿಯೂ ಸೇರಿಕೊಂಡು ಯುದ್ಧಮಾಡಿದುವು. ಅಲ್ಲಿ ಹರಿದು ಬರುತ್ತಿರುವ ರಕ್ತದಿಂದಲೂ ಮಾಂಸಖಂಡಗಳ ರಾಶಿಯಿಂದಲೂ ಯಮನು ಮೇಲೆಬಿದ್ದು ಓಕುಳಿಯಾಟವನ್ನಾಡಿದಂತಾಯಿತು. ವ|| ವೀರರಸದ ಪ್ರವಾಹವೂ ರಕ್ತಪ್ರವಾಹವೂ ಜೊತೆ ಜೊತೆಯಲ್ಲಿಯೇ ಹುಚ್ಚುಹೊಳೆಯಾಗಿ ಹರಿದುವು. ಚತುರಂಗಸೈನ್ಯವೂ ಕಾದಿ ಶಕ್ತಿಗುಂದಿ ಹಿಂದಕ್ಕೆ ಹೋಗಿ ನಿಂತವು. ವಿರಾಟನು ತನ್ನ ನಾಲ್ಕು ತೆರನಾದ ಸೈನ್ಯವನ್ನೂ ಒಟ್ಟುಗೂಡಿಸಿ ಪಾಂಡವರು ತನ್ನ ಪೌರುಷವನ್ನು ನಂಬಿ ತನ್ನ ಪಟ್ಟಣದಲ್ಲಿ ಅಜ್ಞಾತವಾಸಮಾಡಿದುದನ್ನೂ ದಕ್ಷಿಣೋತ್ತರ ಗೋಗ್ರಹಣದಲ್ಲಿ ತನಗಾಗಿ ಯುದ್ದಮಾಡಿ ಗೋವುಗಳನ್ನು ಹಿಂತಿರುಗಿಸಿದುದನ್ನೂ ಜ್ಞಾಪಿಸಿಕೊಂಡು ೧೮. ತನ್ನ ಮಗಳಾದ ಉತ್ತರೆಯನ್ನು ಅರ್ಜುನನ ಮಗನಾದ ಅಭಿಮನ್ಯುವಿಗೆ ಬಳುವಳಿಯಾಗಿ ಕೊಟ್ಟುದನ್ನೂ ಆ ಪ್ರಸಿದ್ಧವಾದ ಯುದ್ದದಲ್ಲಿ ತನ್ನ ಮಕ್ಕಳು ಸತ್ತುದನ್ನೂ ಮನಸ್ಸಿನಲ್ಲಿ ಜ್ಞಾಪಿಸಿಕೊಂಡು ತಾಗಿದನು. ದ್ರೋಣನು ಹೆದರದೆ ಬಂದು ಪ್ರತಿಭಟಿಸಿ ಒಂದೆ ಕೆಲ್ಲಂಬಿ (?) ನಿಂದ ಮೆಲ್ಲಗೆ ಗುರಿಯಿಟ್ಟು ಆರ್ಭಟಮಾಡಿ ತಲೆಹರಿದು ಸಿಡಿದು ಅತ್ತ ಕಡೆ ಬೀಳುವ ಹಾಗೆ ಹೊಡೆದನು. ವll ಹಾಗೆ ವಿರಾಟನನ್ನು ಹೊಡೆದು ಮನಸ್ಸಿನಲ್ಲಿ ಸಂಶಯವೇ ಇಲ್ಲದೇ ಶತ್ರುರಾಜಸಮೂಹದ ಮೇಲೆ ಬೀಳಬೇಕೆಂದು ತೋಳನ್ನು ತಟ್ಟಿ ಶಬ್ದಮಾಡಿ
Page #571
--------------------------------------------------------------------------
________________
೫೬೬ | ಪಂಪಭಾರತಂ ಹರಿಣೀಪುತಂ |ಗುರುಗಳೆನಗಂ ಭಾರದ್ವಾಜಂಗಮೊರ್ವರ ವಿದ್ದೆಯೊಳ್
ಪುರುಡ ಪಿರಿದುಂಟೆನ್ನಂ ಬಿಲ್ಕಲೆಯೊಳ್ ಮಿಗಲೆಯ ಬೇ || ರ್ವರಿದ ಪಗೆಯುಂ ಬನ್ನಂಬಟ್ಟೆನ್ನ ಮುನ್ನಿನ ಬನ್ನಮುಂ ಪಿರಿದದೆ ನೆವಂಗೊಂಡಾನಿಂದಿಲ್ಲಿ ನೀಗದ ಮಾಸ್ಟನೇ ||
೧೯ ವ|| ಎಂದೊಂದಕ್ಕೋಹಿಣೀ ಬಲಂಬೆರಸು ಪ್ರಳಯದ ಮಾರಿಯುಮಾಕಾಶದ ಕವಿಯುಂ ನೆಲದ ಕಲ್ಲಯುಂ ಮುನ್ನವೆ ಮೇರೆದಪ್ಪುವುದುಮಂ ತನ್ನೊಳಳವಡಿಸಿಕೊಂಡು ತಾಗಿದಾಗ ಶಲ್ಯನೊಳ್ ಸಾತ್ಯಕಿ ಶಾರದ್ವತನೊಳ್ ಕೃತಾಂತನಂದನಂ ಕೃತವರ್ಮನೊಳ್ ನಕುಳಂ ಶಕುನಿಯೊಳ್ ಸಹದೇವಂ ಕರ್ಣನೊಳ್ ಭೀಮಸೇನನಶ್ವತ್ಥಾಮನೊಳಕಳಂಕ ರಾಮಂ ದ್ವಂದ್ವಯುದ್ಧದೊಳ್ ತಾಗಿದಾಗ
ಮ|| ಸ ದೆಸೆಯೆಲ್ಲಂ ತೀವ್ರ ಬಾಗಾಳಿಯೋಳೆ ಮಡದಂತಂಬರಂ ಬಾಣದಿಂದಂ
ಮುಸುಕಿಟ್ಟಂತಾಗ ಬೇಗಂ ತುಡುವ ಬಿಡುವ ಸೂಳಯ್ಯ ಬೇಗಂಗಳಂ ನಿ | ಟ್ವಿಸಲಾರ್ಗ೦ ಬಾರದಂತಾಗಸದಳವಿಸೆ ತದ್ರಾಜಚಕ್ರ ಪೊದಟ್ಟ ರ್ಬಿಸಿದತ್ತುದ್ದಾಮ ಮೌರ್ವಿ ರವ ಮುಖರ ಮಹಾಚಾಪ ಚಕ್ರಾಂಧಕಾರಂ ೨೦
ವlt ಅನ್ನೆಗಂ ಕಪ್ಪಂಗವಿಯಾಗಿ ಕವಿದ ದ್ರುಪದ ವಿಳಯಾನಳನಂ, ದೊಣಂ ಮಹಾದ್ರೋಣ ಪುಷ್ಕಳಾವರ್ತಕಂಗಳೆಂಬ ವಿಳಯ ಕಾಳ ನೀಳ ಜಳಧರವರ್ಷಂಗಳಿಂ ನಂದಿಸೆಯುಂ
ಹರಿತವಾದ ಬಾಣರಾಶಿಯಿಂದ ಬೇಲಿಯನ್ನು ಹಾಕಿ ವೀರರಸಕ್ಕೆ ಆವಾಸಸ್ಥಾನವಾಗಿದ್ದ ದ್ರೋಣಾಚಾರ್ಯನನ್ನು ದ್ರುಪದನು ನೋಡಿ ಸೈರಿಸಲಾರದೆ ಮುಂದೆ ಬಂದು ೧೯. ನನಗೂ ದ್ರೋಣನಿಗೂ ವಿದ್ಯಾಭ್ಯಾಸದಲ್ಲಿ ಒಬ್ಬರೇ ಗುರು. ನನ್ನನ್ನು ಧನುರ್ವಿದ್ಯೆ ಯಲ್ಲಿ ಮೀರಿಸಬೇಕೆಂಬ ಸ್ಪರ್ಧೆಯೂ ಅವನಲ್ಲಿ ಉಂಟು. ನನಗೆ ರೂಢಮೂಲವಾದ ಶತ್ರುತ್ವವೂ ತಿರಸ್ಕೃತವಾದ ಮೊದಲಿನ ಅವಮಾನವೂ ಹಿರಿದಾಗಿಯೇ ಇದೆ. ಅದನ್ನೇ ಕಾರಣವನ್ನಾಗಿ ಮಾಡಿಕೊಂಡು ಇಂದು ಇಲ್ಲಿ ಅವುಗಳನ್ನು ಪರಿಹರಿಸದೆ ಬಿಡುತ್ತೇನೆಯೇ? ವ| ಎಂದು ಒಂದಕ್ಟೋಹಿಣಿ ಸೈನ್ಯದಿಂದ ಕೂಡಿ ಪ್ರಳಯಕಾಲದ ಮಾರಿದೇವತೆಯೂ ಆಕಾಶದ ಮುಚ್ಚಳವೂ ನೆಲದ ಮೇರೆಯಾದ ಸಮುದ್ರವೂ ಮೊದಲೇ ತಮ್ಮ ಎಲ್ಲೆಯನ್ನು ಮೀರುವಂತೆ ತಾಗಿದನು. ಶಲ್ಯನೊಡನೆ ಸಾತ್ಯಕಿಯೂ ಕೃಪನೊಡನೆ ಧರ್ಮರಾಯನೂ ಕೃತವರ್ಮನೊಡನೆ ನಕುಳನೂ ಶಕುನಿಯೊಡನೆ ಸಹದೇವನೂ ಕರ್ಣನೊಡನೆ ಭೀಮನೂ ಅಶ್ವತ್ಥಾಮನೊಡನೆ ಅಕಳಂಕರಾಮನಾದ ಅರ್ಜುನನೂ ದ್ವಂದ್ವಯುದ್ಧದಲ್ಲಿ (ಇಬ್ಬರು ಜೊತೆಜೊತೆಯಾಗಿ ಮಾಡುವ ಯುದ್ದ ಸಂಧಿಸಿದರು. ೨೦. ದಿಕ್ಕುಗಳೆಲ್ಲವೂ ತೀಕ್ಷವಾದ ಬಾಣಸಮೂಹದಿಂದ ಹೆಣೆದ ಹಾಗಾದುವು. ಆಕಾಶವು ಬಾಣದಿಂದ ಮುಸುಕಿಕ್ಕಿದಂತಾಯಿತು. ಬಾಣಗಳನ್ನು ಬಿಲ್ಲಿಗೆ ಹೂಡುವ ಮತ್ತು ಅದನ್ನು ಪ್ರಯೋಗಿಸುವ ಸರದಿಯ ಕೈಗಳ ವೇಗವನ್ನು ನೋಡುವುದಕ್ಕೆ ಯಾರಿಗೂ ಸಾಧ್ಯವಿಲ್ಲದ ಹಾಗಾಯಿತು. ಆ ರಾಜಸಮೂಹವು ವಿಶೇಷವಾಗಿ ಬಾಣಪ್ರಯೋಗ ಮಾಡುವುದಕ್ಕಾಗಿ (ಮೊದಲು) ಮಾಡಿದ ಹೆದೆಯ ಟಂಕಾರ ಶಬ್ದದಿಂದ ಶಬ್ದಾಯಮಾನವಾಗಿರುವ ಬಿಲ್ಲುಗಳ ಸಮೂಹದ ಕತ್ತಲೆಯು ವ್ಯಾಪಿಸಿ
Page #572
--------------------------------------------------------------------------
________________
ದ್ವಾದಶಾಶ್ವಾಸಂ | ೫೬೭ ನಂದದೆ ಮುಟ್ಟಿವರೆ ದುರ್ಯೋಧನನನೇಕಾಯುಧ ಶರಭರಿತಂಗಳಪ್ಪ ರಥಂಗಳಂ ದ್ರೋಣಾಚಾರ್ಯರ ಪೆಜಗೆ ನಿವಿಸಿಯಾಯುಧಾಧ್ಯಕ್ಷರು ಪೇಟ್ಟು ಚಕ್ರರಕ್ಷೆಗೆ ದುಶ್ಯಾಸನಾದಿಗಳೊರಸು ತಾನೆ ಬಂದಿರ್ದಾಗಲ್
ಚಂtು ದ್ರುಪದ ಬಳಾಂಬುರಾಶಿಯನಗುರ್ವಿಸೆ ಪರ್ವಿಪ ಬಾಡಬಾಗ್ನಿಯಾ
ಯುಪಚಯಮಪ್ಪ ಬಿಲ್ಲೊವಜನಂಬಿನ ಬೆಳ್ಳರಿಯಾದಮಾ ರಥ | ದ್ವಿಪಘಟೆಯೆಂಬಿವನಂಬಿನೊಳೆ ಪೂಟ್ಟು ಪಡಲ್ವಡೆ ತಿಣ್ಣಮೆಚ್ಚನಾ
ತ್ರಿಪುರಮನೆಚ್ಚ ರುದ್ರನ ನೆಗಟ್ಯುಮಂ ಗೆಲೆ ಕುಂಭಸಂಭವಂ || ೨೧
ವ|| ಅಂತು ತನ್ನ ಬಲಮೆಲ್ಲಮಂ ಜವನಂತೊಕ್ಕಲಿಕ್ಕೆ ಕೊಲ್ಯ ಕಳಶಕೇತನಂ ಯಜ್ಞಸೇನ ನೇನುಂ ಮಾಣದಾತನ ಮೇಲೆ ಬಟ್ಟನಂಬಿನ ಬೆಳ್ಳರಿಯುಮಂ ಕೆಲ್ಲಂಬಿನ ತಂದಲುಮಂ ಪಾರಯಂಬಿನ ಸೋನೆಯುಮಂ ಸುರಿಯೆ ಕಳಶಯೋನಿ ಮುಳಿದುಮll ಪದಿನೆಂಟಂಬಿನೊಳೆಚೊಡೆಚ್ಚು ಪದಿನೆಂಟಸ್ತಂಗಳಿಂ ಸೀಳು ಕೋ
ಹದಿನೆಂಬತ್ತು ಸರಂಗಳಿಂ ಗುರು ಭರಂಗೆಯ್ಕೆಚೊಡೆಂಬತ್ತು ಬಾ | ಣದಿನಾಗಳ್ ಕಡಿದುಗ್ರ ಸೂತ ಹಯ ಸಂಘಾತಂಗಳಂ ತಿಣ್ಣಮೆ ಚಿದಿರೊಳ್ ನಿಲ್ಲದಿರೋಡು ಸತ್ತೆಯೆನುತುಂ ಪಾಂಚಾಳರಾಜಾಧಿಪಂ 11 ೨೨
ಹೆದರಿಸಿತು. ವ|ಅಷ್ಟರಲ್ಲಿ ಆನೆಯನ್ನು ಹಿಡಿಯುವ ಗುಳಿಯ ಮುಚ್ಚಳದಂತೆ ಸಾಂದ್ರವಾಗಿ ಮುತ್ತಿಕೊಳ್ಳುತ್ತಿರುವ ದ್ರುಪದನೆಂಬ ಪ್ರಳಯಾಗ್ನಿಯನ್ನು ದ್ರೋಣನು ಮಹಾದ್ರೋಣ ಮತ್ತು ಪುಷ್ಕಳಾವರ್ತಕಗಳೆಂಬ ಪ್ರಳಯಕಾಲದ ಕರಿಯ ಮೋಡಗಳ ಮಳೆಯಿಂದ ಆರಿಸಿದರೂ ಆರದೆ ಮುಟ್ಟುವ ಹಾಗೆ ಹತ್ತಿರಕ್ಕೆ ಬರಲು ದುರ್ಯೊಧನನು ಅನೇಕ ಆಯುಧ ಮತ್ತು ಬಾಣಗಳಿಂದ ತುಂಬಿರುವ ತೇರುಗಳನ್ನು ದ್ರೋಣಾಚಾರ್ಯರ ಹಿಂದೆ ಸ್ಥಾಪಿಸಿ ಆಯುಧಾಧ್ಯಕ್ಷರನ್ನು ನೇಮಿಸಿ ಚಕ್ರವ್ಯೂಹದ ರಕ್ಷೆಗೆ ದುಶ್ಯಾಸನಾದಿ ಗಳೊಡನೆ ತಾನೆ ಬಂದು ನಿಂತನು. ೨೧. ಅಭಿವೃದ್ದಿಯಾಗುತ್ತಿರುವ ದ್ರೋಣಾ ಚಾರ್ಯರ ಬಾಣಗಳ ಬಿಳಿಯ ಸೋನೆಯ ಮಳೆಯು ದ್ರುಪದನ ಸೈನ್ಯಸಾಗರವನ್ನು ಹೆದರಿಸುವ ಮತ್ತು ಬೆದರಿಸುವ ಬಡಬಾಗ್ನಿಯಾಯಿತು. ಆ ರಥಗಳೂ ಆನೆಯ ಸಮೂಹವೂ ಬಾಣಗಳಲ್ಲಿ ಹೂತುಹೋಗಿ ಚೆದುರಿಹೋಗುತ್ತಿರಲು ದ್ರೋಣನು ಆ ತ್ರಿಪುರವನ್ನು ಹೊಡೆದ ಈಶ್ವರನ ಕಾರ್ಯವನ್ನೂ ಮೀರಿಸಿ ತೀಕ್ಷವಾಗಿ ಹೊಡೆದನು. ವ|| ಹಾಗೆ ತನ್ನ ಸೈನ್ಯವೆಲ್ಲವನ್ನೂ ಯಮನಂತೆ ಒಕ್ಕಣೆಮಾಡಿ ಕೊಲ್ಲುತ್ತಿರುವ ದ್ರೋಣನನ್ನು ದ್ರುಪದನು ಹೇಗೂ ತಡೆಯಲಾರದೆ ಅವನ ಮೇಲೆ ಗುಂಡಾದ ಅಲಗುಳ್ಳ ಬಾಣಗಳ ಬಲವಾದ ಸೋನೆಮಳೆಯನ್ನೂ ಕಲ್ಲಂಬುಬಾಣಗಳ ತುಂತುರು ಮಳೆಯನ್ನೂ ಹಾರೆಯಾಕಾರದ ಬಾಣಗಳ ಜಡಿಮಳೆಯನ್ನೂ ಸುರಿಯಲು ದ್ರೋಣನು ಕೋಪಗೊಂಡನು. ೨೨. ಹದಿನೆಂಟು ಬಾಣಗಳಿಂದ ಹೊಡೆದರೆ ಹದಿನೆಂಟಸ್ತಗಳಿಂದ ಅವನ್ನು ಸೀಳಿದನು. ದ್ರೋಣನು ಕೋಪದಿಂದ ಎಂಬತ್ತು ಬಾಣಗಳಿಂದ ಆರ್ಭಟ ಮಾಡಿ ಹೊಡೆದರೆ ದ್ರುಪದನು ಎಂಬತ್ತು ಬಾಣಗಳಿಂದ ಆಗಲೇ ಕತ್ತರಿಸಿ ಹಾಕಿದನು. ದ್ರೋಣನ ಸಾರಥಿ ಮತ್ತು ಭಯಂಕರವಾದ ಕುದುರೆಗಳ ಸಮೂಹಗಳನ್ನು ತೀಕ್ಷವಾಗಿ
Page #573
--------------------------------------------------------------------------
________________
೫೬೮ | ಪಂಪಭಾರತಂ
ವll ಮೆಯ್ಯರ್ಚಿ ಪೆರ್ಚದುಮ್ಮಚರದೊಳಚ್ಚರಿಯಾಗಚೂಡ ಪೂಣ್ಮರ್ತುಉll ಎನ್ನೊಳೆ ಮುನ್ನ ಮಚ್ಚರಿಪನೇ ಒಡನೋದಿದನೆಂಬ ಮೇಳದಿಂ
ದೆನ್ನನೆ ಮೆಚ್ಚನನ್ನೊಳಮಿವಂ ಸಮನೆಚ್ಚಪನಕುಮಾದೊಡೇ | ನಿನ್ನವನಂ ಪಡಲ್ವಡಿಹೆನೆಂದಿರದಾಗಳೆ ಭಾರ್ಗವಾಸ್ತದಿಂ
ದನ್ನೆದೆಚ್ಚನಾ ದ್ರುಪದರಾಜಶಿರೋಂಬುಜಮಂ ಘಟೋದ್ಭವಂ | ೨೩
ವ|| ಅಂತು ದ್ರುಪದನವಂ ಕಂಡಾತನ ತಮ್ಮಂದಿರಪ್ಪ ಶತಾನೀಕ ಶತಚಂದ್ರರ್ ಮೊದಲಾಗೆ ಪನ್ನೊರ್ವರುಮಯ್ಯರ್ ಕೈಕಯರುಂ ಕುಂತಿಯ ಮಾವನಪ್ಪ ಕುಂತಿಭೋಜನುಂಬೆರಸು ಹದಿನಾಲ್ಕಾಸಿರ ರಥಂಬೆರಸು ಬಂದು ತಾಗಿದೊಡೆಮll ಶಕಟಂಗಳ್ ಪದಿನೆಂಟು ಕೋಟಿವರೆಗಂ ತೀವಿರ್ದನೇಕೊಗ್ರ ಸಾ
ಯಕದಿಂದಂ ಚತುರಂಗ ಸಾಧನದ ಮಯ್ಯೊಳ್ ಜಿಗಿಲ್ಲಾಂತ ನಾ || ಯಕರಂ ಸುಂಟಗೆಯಾದಂತೆ ರಥದೊಳ್ ಜೋಲ್ಡನ್ನೆಗಂ ಕೋದು ಚಾ
ಪ ಕಲಾಕೌಶಳಮಂ ಜಗಕ್ಕೆ ಮದಂ ಮಯ್ಯರ್ಚಿ ಕುಂಭೋದ್ಭವಂ ||೨೪ - ವ|| ಅಂತು ದ್ರುಪದ ದ್ರುಪದಾನುಜ ವಿರಾಟ ವಿರಾಟಾನುಜ ಕೈಕಯ ಕುಂತಿ ಭೋಜದಿಗಳಪ್ಪ ನಾಯಕರೆಲ್ಲರುಮಂ ಪೇಟೆ ಪಸರಿಲ್ಲದಂತೆ ಕೊಂದು ಮುಂದಾಂಪರಾರುಮಿಲ್ಲದಿಕ್ಕಿ ಗೆಲ್ಲ ಮಲ್ಲನಿರ್ದಂತಿರ್ದಾಗಳ
ಹೊಡೆದು ಎದುರಿಗೆ ನಿಲ್ಲಬೇಡ ಓಡು ಸತ್ತೆ ಎನ್ನುತ್ತ ಪಾಂಚಾಳರಾಜಾಧೀಶ್ವರನಾದ ದ್ರುಪದನು ವ|| ಕೊಬ್ಬಿ ಹೆಚ್ಚಿದ ಕೋಪದಲ್ಲಿ ಆಶ್ಚರ್ಯವಾಗುವಂತೆ ಹೊಡೆಯಲು ದ್ರೋಣನು ಗಾಯಗೊಂಡು ೨೩. ಇವನು ಮೊದಲಿನಿಂದಲೂ ನನ್ನಲ್ಲಿ ಮತ್ಸರಿಸುತ್ತಾನೆ. ಜೊತೆಯಲ್ಲಿ ಓದಿದೆನು ಎಂಬ ಸಲಿಗೆಯಿಂದ ನನ್ನನ್ನು ಮೆಚ್ಚಲಾರ; ನನ್ನ ಸಮಾನನಾಗಿಯೇ ಯುದ್ದಮಾಡುವ ಶಕ್ತಿಯುಳ್ಳವನೇನೋ ಹೌದು; ಆದರೇನು ? ಇನ್ನಿವನನ್ನು ಕೆಳಗುರುಳಿಸುತ್ತೇನೆಂದು ಸಾವಕಾಶಮಾಡದೆ ಭಾರ್ಗವಾಸದಿಂದ ಕೂಡಿಕೊಂಡು ದ್ರುಪದ ರಾಜನ ತಲೆಯೆಂಬ ಕಮಲವನ್ನು ದ್ರೋಣನು ಕತ್ತರಿಸಿದನು. ವ| ಹಾಗೆ ದ್ರುಪದನ ಸಾವನ್ನು ನೋಡಿದ ಆತನ ತಮ್ಮಂದಿರಾದ ಶತಾನೀಕ ಶತಚಂದ್ರರೇ ಮೊದಲಾದ ಹನ್ನೊಂದು ಜನವೂ ಅಯ್ತು ಮಂದಿ ಕೈಕೆಯರೂ ಕುಂತಿಯ ಮಾವನಾದ ಕುಂತಿಭೋಜನೂ ಕೂಡಿ ಹದಿನಾಲ್ಕು ಸಾವಿರರಥದೊಡನೆ ಬಂದು ತಾಗಿದರು. ೨೪. ಹದಿನೆಂಟು ಕೋಟಿಯವರೆಗೂ ತುಂಬಿದ ಗಾಡಿಗಳ ಅತಿಭಯಂಕರವಾದ ಬಾಣಗಳಿಂದ ಒಂದೊಂದು ಮೆಯ್ಯಲ್ಲಿಯೂ ಅಂಟಿಕೊಂಡು, ಪ್ರತಿಭಟಿಸಿದ ನಾಯಕರ, ಸೇನಾಪತಿಗಳ ಸುಟ್ಟಮಾಂಸವನ್ನು ಆರಲಿಟ್ಟಿರುವ ಹಾಗೆ ಜೋತು ಬೀಳುತ್ತಿರುವಂತೆ ರಥದಲ್ಲಿ ಪೋಣಿಸಿ (ನೇತುಹಾಕಿ-ಜೋಲುಬಿಟ್ಟು) ದ್ರೋಣನು ಮಯ್ಯುಬ್ಬಿ ತನ್ನ ವಿದ್ಯಾಕೌಶಲವನ್ನು ಪ್ರದರ್ಶಿಸಿದನು. ವl1 ಹೀಗೆ ದ್ರುಪದ,. ದ್ರುಪದನ ತಮ್ಮ, ವಿರಾಟ, ವಿರಾಟನ ತಮ್ಮ ಕೈಕಯ, ಕುಂತೀಭೋಜನೇ ಮೊದಲಾದ ನಾಯಕರೆಲ್ಲರನ್ನೂ ಹೇಳುವುದಕ್ಕೂ ಒಂದು ಹೆಸರಿಲ್ಲದಂತೆ ಕೊಂದು
Page #574
--------------------------------------------------------------------------
________________
ದ್ವಾದಶಾಶ್ವಾಸಂ | ೫೬೯ ಮll ಸಕಲಾರಾತಿ ನರೇಂದ್ರಮೌಳಿಗಳುರುಳ್ಳಾ ದೀಪ್ತ ರತ್ನಾಂಶು ಮಾ
ಆಕೆಯಿಂದಾ ರಣರಂಗಮಂ ಬೆಳಗೆ ಕಾರ್ಚೆಂದು ಭೂತಾಂಗನಾ | ನಿಕರಂ ಶೋಣಿತವಾರಿಯಂ ಕುಡಿದಗುರ್ವಪನ್ನೆಗಂ ಸೂಸೆ ನೋ
ಡ ಕವಿಲಿರ್ದುದು ಕೂಡ ಸಂಜೆಗವಿದಂತಾ ದ್ರೋಣನಿಂ ಕೊಳ್ಳುಳಂ | ೨೫
ವ|| ಆಗಳ್ ಯುಧಿಷ್ಠಿರಂ ನಾರಾಯಣಂ ಪೇಟ್ಟಿ ಕಪಟೋಪದೇಶದಿಂ ದ್ರೋಣನಂ ಕೆಯ್ಕೆ ಮಾಡಲೆಂದು ಪಾಂಡ್ಯ ಗಜಘಟೆಗಳನಿದಿರೊಳ್ ತಂದೊಡ್ಡಿದಾಗಕಂಗ ನಿಶಿತ ವಿಶಿಖಂಗಳಿಂದೂಂ
ದಶನಿಯ ಗಿರಿಕುಲಮನಳಚುವಂತೆ ಮದೇಭ | ಪ್ರಸರ ಸಹಸ್ರಂ ಕೆಡುವು ಎಸಸನದೊಳ್ ದೊಣನಿದಿರ್ಗೆ ಮಾರ್ವಲಮೋಳವೇ ||
ವಗ ಅಂತು ತನಗೆ ಮಾಜಾಂತ ಮದಾಂಧಸಿಂಧುರಂಗಳಂ ಸಿಂಧುರಂಗಳಂ ಸಿಂಧುರಾರಾತಿಯೆ ಕೊಲ್ವಂತೆ ಕೊಲೆಕಂl ಸಾಮಜಮಶ್ವತ್ಥಾಮಂ
ನಾಮದಿ ನೊಂದಣಿದೊಡಲ್ಲಿ ಕಂಡು ಹತೋಶ್ವ | ತಾಮಾ ಎನೆ ನೃಪನಶ್ವ ತ್ಥಾಮನೆ ಗೆತ್ತೊಣರ್ದನೊವಜನೊರ್ವೆಸರಿಭಮಂ 11
ಪ್ರತಿಭಟಿಸುವವರಾರೂ ಇಲ್ಲದಂತೆ ಸಂಹರಿಸಿ ಗೆದ್ದ ಜಟ್ಟಿಯಿದ್ದಂತೆ ಇದ್ದನು. ೨೫. ಸಮಸ್ತ ಶತ್ರುರಾಜರ ಕಿರೀಟಗಳುರುಳಿ ಆ ರತ್ನಕಿರಣಗಳ ಸಮೂಹದಿಂದ ಆ ರಣರಂಗವು ಕೆಂಪಗೆ ಪ್ರಕಾಶಮಾನವಾಯಿತು. ಅದು ಕಾಡಿಚ್ಚೆಂದು ಪಿಶಾಚಸ್ತ್ರೀಯರ ಸಮೂಹವು ಬಂದು ರಕ್ತಜಲವನ್ನು ಕುಡಿದು ಭಯಂಕರವಾಗುವ ಹಾಗೆ ಚೆಲ್ಲಾಡಿತು. ಆ ದ್ರೋಣನಿಂದ ಆ ಯುದ್ಧಭೂಮಿಯು ಸಂಜೆಕವಿದಂತೆ ಮಾಸಲು ಕೆಂಪುಬಣ್ಣದಿಂದ ಕೂಡಿದ್ದಿತು. ವ| ಆಗ ಧರ್ಮರಾಜನು ಕೃಷ್ಣನು ಹೇಳಿದ ಕಪಟೋಪದೇಶದಿಂದ ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು ಪಾಂಡ್ಯರ ಆನೆಗಳ ಸಮೂಹವನ್ನು ಎದು ರಾಗಿ ತಂದೊಡ್ಡಿದನು. ೨೬. ಹರಿತವಾದ ಬಾಣಗಳಿಂದ ಒಂದು ವಜ್ರಾಯುಧವೇ ಪರ್ವತಗಳ ಸಮೂಹವನ್ನು ನಾಶಮಾಡುವ ಹಾಗೆ ಸಾವಿರ ಮದ್ದಾನೆಯ ಗುಂಪು ಯುದ್ಧರಂಗದಲ್ಲಿ ಕೆಡೆದುಬಿದ್ದುವು. ದ್ರೋಣನಿಗಿದಿರಾಗುವ ಪ್ರತಿಬಲವುಂಟೇ? ವll ಹಾಗೆ ತನಗೆ ಪ್ರತಿಭಟಿಸಿದ ಮದ್ದಾನೆಗಳನ್ನು ಸಿಂಹವು ಕೊಲ್ಲುವ ಹಾಗೆ ಕೊಂದನು. ೨೭. ಅಶ್ವತ್ಥಾಮನೆಂಬ ಹೆಸರಿನ ಆನೆಯೊಂದು ಯುದ್ಧರಂಗದಲ್ಲಿ ಸಾಯಲು ಧರ್ಮರಾಯನು ನೋಡಿ 'ಹತೋಶ್ವತ್ಥಾಮ' (ಅಶ್ವತ್ಥಾಮ ಹತನಾದನು) ಎಂದು ಘೋಷಿಸಿದನು. ಗುರುವಾದ ದ್ರೋಣನು ಒಂದೇ ಹೆಸರಿನ ಆನೆಯನ್ನು
Page #575
--------------------------------------------------------------------------
________________
೨೮
೫೭೦) ಪಂಪಭಾರತಂ
ಒಗದ ಸುತಶೋಕದಿಂದಾ ವಗೆಯಂತೂಳಗುರಿಯ ಭೋಂಕನೆರ್ದೆ ತಯಲ್ ಹಾ | ಮಗನೇ ಎಂದಶ್ರುಜಲಾ
ರ್ದಗಂಡನಾ ಗಂಡಿನೊಡನೆ ಬಿಸುಟಂ ಬಿಲ್ಲಂ ವ|| ಅಂತು ಬಿಸುಟು ವಿಚ್ಚಿನ್ನ ವೀರರಸನುಮುತ್ತನ್ನ ಶೋಕರಸನುಮಾಗಿ ನಿಜ ವರೂಥಮಂ ಧರ್ಮಪುತ್ರನ ಸಮೀಪಕ್ಕುಯ್ದು ಮಗನ ಮಾತಂಚ೦ll ಬೆಸಗೊಳೆ ಕುಂಜರಂ ಮಡಿದುದೆಂದು ಮಹೀಭುಜನುಳ್ಳ ಮಾಚಿಯಿಂ
ಪುಸಿಯದ ಪೇಡಂ ಕಿಟೆದು ನಂಬದೆಯುಂ ರಣದಲ್ಲಿ ಮುನ್ನ ಬಿ | ಲೈಸುಟೆನಿದೆಂತು ಪೇಯ್ ಪಿಡಿವನಿನ್ನಿದನೆಂದಿರದಾತ್ರಯೋಗಿ ತ
ಸುವನುದಾತ್ತಯೋಗದೊಳೆ ಬಿಲ್ಲೊವಜಂ ಕಳೆದಂ ರಣಾಗ್ರದೊಳ್ || ೨೯ ವ ಅಂತು ಭಾವಿತಾತನಧ್ಯಾತ್ಮ ವಿಶಾರದನಾಗಿ ಪರಮಾತ್ಮನೋಳ್ ಕೂಡಿದನಾಗಳ್ ಹೆಣನನಿದು ಪಗೆಗೊಂಡರೆಂಬ ನಾಣ್ಣುಡಿಯಂ ನನ್ನಿ ಮಾಡಿ ತಮ್ಮಯ್ಯಂ ಸತ್ತ ಮುಳಿಸಿಕೊಳ್ ಕಣ್ಣಾಣದೆ ಧೃಷ್ಟದ್ಯುಮ್ಮಂ ಧರ್ಮತನೂಜಂ ಬಾರಿಸೆ ವಾರಿಸೆಕoll ಕರವಾಳಂ ಘರವಟ್ಟಿಸಿ
ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂ | ತಿರ ಪಿರಿದು ಪೊಯ್ಯನೆಂತ ಪ್ಲರೊಳಂ ಮುಳಿಸಳವನಾಗಲೇನಿತ್ತಪುದೇ ||
(ನಾಮಸಾದೃಶ್ಯದಿಂದ) ಮಗನಾದ ಅಶ್ವತ್ಥಾಮನೆಂದೇ ಭಾವಿಸಿ ದುಃಖಿಸಿದನು. ೨೮. ಉಂಟಾದ ಪುತ್ರಶೋಕದಿಂದ ಕುಂಬಾರರ ಆವುಗೆಯ ಒಲೆಯಂತೆ ಮನಸ್ಸು ಉರಿಯಲು ಇದ್ದಕ್ಕಿದ್ದ ಹಾಗೆ ಎದೆಯು ಬಿರಿಯಲು “ಅಯ್ಯೋ ಮಗನೆ' ಎಂದು ಕಣ್ಣೀರಿನಿಂದ ತೊಯ್ದು ಕೆನ್ನೆಯುಳ್ಳವನಾಗಿ ತನ್ನ ಪೌರುಷದೊಡನೆ ಬಿಲ್ಲನ್ನೂ ಬಿಸಾಡಿದನು. ವ! ಕತ್ತಿಯನ್ನೆಸೆದು ವೀರರಸವಿರಹಿತನಾಗಿ ದುಃಖರಸದಿಂದ ಕೂಡಿ ತನ್ನ ತೇರನ್ನು ಧರ್ಮರಾಯನ ಸಮೀಪಕ್ಕೆ ತೆಗೆದುಕೊಂಡುಹೋಗಿ ಮಗನ ಮಾತನ್ನು ೨೯. (ವಾಸ್ತವಾಂಶವೇನೆಂದು) ಪ್ರಶ್ನೆಮಾಡಲು ಆನೆಯು ಸತ್ತಿತೆಂದು ರಾಜನು. (ಸತ್ಯವಾಗಿ) ಇರುವ ರೀತಿಯಲ್ಲಿಯೇ ಹುಸಿಯದೆ ಹೇಳಿದರೂ ಸ್ವಲ್ಪವೂ ನಂಬದೆ “ಯುದ್ದದಲ್ಲಿ ಈ ಮೊದಲು ಬಿಲ್ಲನ್ನು ಬಿಸಾಡಿದ್ದೇನೆ. ಪುನಃ ಅದನ್ನು ಹೇಗೆ ಹಿಡಿಯಲಿ ಹೇಳು” ಎಂದು ಆತ್ಮಯೋಗಿಯಾದ ದ್ರೋಣನು ಸಾವಕಾಶಮಾಡದೆ ತನ್ನ ಪ್ರಾಣವನ್ನು ಉದಾತ್ತವಾದ ಯೋಗಮಾರ್ಗದಲ್ಲಿ ಯುದ್ಧಮುಖದಲ್ಲಿ ನೀಗಿದನು. ವ|| ಹಾಗೆ ಆತ್ಯಧ್ಯಾನಪರನಾದ ದ್ರೋಣನು ಅಧ್ಯಾತಪರಾಯಣನಾಗಿ ಪರಮಾತ್ಮನಲ್ಲಿ ಕೂಡಿದನು. ಆಗ 'ಹೆಣವನ್ನು ಕತ್ತರಿಸಿ ಹಗೆಯನ್ನು ತೀರಿಸಿಕೊಂಡರು' ಎಂಬ ಗಾದೆಯ ಮಾತನ್ನು ಸತ್ಯವನ್ನಾಗಿ ಮಾಡಿ ತಮ್ಮಯ್ಯನಾದ ದ್ರುಪದನು ಸತ್ತ ಕೋಪದಿಂದ ಬುದ್ಧಿಶೂನ್ಯನಾಗಿ ಧೃಷ್ಟದ್ಯುಮ್ಮನು ಧರ್ಮರಾಜನು ಬೇಡವೆಂದು ತಡೆದರೂ-೩೦. ಕತ್ತಿಯನ್ನು ಬೀಸಿ ಕೂದಲನ್ನು ಹಿಡಿದೆಳೆದು ಗುರುವನ್ನು ಎರಡುಭಾಗ ಮಾಡಿದ ಹಾಗೆ ಘಟ್ಟಿಯಾಗಿ
Page #576
--------------------------------------------------------------------------
________________
ದ್ವಾದಶಾಶ್ವಾಸಂ | ೫೭೧ ವಗ ಅಂತು ದ್ರೋಣನೆಳೆಗೋಣ ಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮನೊಂದು ತಲೆಯಾಗೊಡುವ ಕೌರವಧ್ವಜಿನಿಯುಮಂ ಚೇತೋಂದು ಮೊನೆಯೊಳ್ ಕಾದುತಿರ್ದಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ ಶೋಣಾಕ್ಕೋಪಲಕ್ಷಿತ ನಿಜ ಪಿತೃ ಸೂತ ಕೇತನ ಕಥಿತಮಾಗಿರ್ದ ರಥಮನುಪಲಕ್ಷಿಸಿ ನೋಡಿ ತಮ್ಮಯ್ಯನತೀತನಾದುದನಳೆದುಚಂll ಒಳಿತುಗುತರ್ಪ ಕಣ್ಣನಿಗಳಂ ಬರಲೀಯದೆ ಕೋಪ ಪಾವಕಂ
ನಿಸಿ ಕನಲು ರೋಷದಿನಪಾಂಡವಮಾಗಿರೆ ಮಾಡದಂದು ಬಿ | ಛತೆಯನ ಪುತ್ರನನೆನುತುಂ ಗುರುಪುತ್ರನಿದಿರ್ಚೆ ಭೀತಿಯಿಂ
ಮುಗಿ ತೆರಳು ತೂಲ್ಲಿ ಸುಟೆಗೊಂಡುದು ಪಾಂಡವ ಸೈನ್ಯಸಾಗರಂ || ೩೧
ವ|| ಆಗಳುರಿಯುರುಳಿಯಂತಪ್ಪ ತನ್ನ ನೊಸಲ ಕಣ್ಣಂ ತೋಟಿ ತನ್ನ ಸಾಹಸಮಂ ತೋಜಲೆಂದು ನಾರಾಯಣಾಸ್ತಮಂ ತೊಟ್ಟೆಚ್ಚಾಗಳ- ಚಂದೆಸೆ ಮಸುಳ್ಳು ವಾರ್ಧಿ ತಳರ್ದತ್ತು ನೆಲಂ ಪಿಡುಗಿತ್ತು ತೊಟ್ಟನಾ
ಗಸರೊಡೆದತ್ತಜಾಂಡಮಳಕಿನುತಿರ್ದೆಡೆಯಲ್ಲಿ ಲೋಕಮಂ | ಬಸಿನೊಳಗಿಟ್ಟು ಕಾದಳವನಾರಳವೊಡ್ಡಿಸೆ ಕಾದನಾಗಳ ರ್ವಿಸೆ ತೆಗೆದಚ್ಚ ವೈಷ್ಣವಮನೊಡ್ಡಿಸಿ ವೈಷ್ಣವದಿಂ ಮುರಾಂತಕಂ || ೩೨ |
ಹೊಡೆದನು. ಕೋಪವು ಎಂತಹವರಲ್ಲಿಯೂ ವಿವೇಕವುಂಟಾಗಲು ಅವಕಾಶ ಕೊಡುತ್ತದೆಯೇ ಏನು? ವll ಹಾಗೆ ದ್ರೋಣನು ಎಳೆದು ತಂದ ಕೋಣನ ಸಾವಿನ ಮಾದರಿಯ ಸಾವನ್ನು (ಎಳಗೋಣಸಾವು) ಸಾಯಲಾಗಿ ಶಬ್ದಮಾಡಿ ಆರ್ಭಟ ಮಾಡುವ ಪಾಂಡವಸೈನ್ಯವನ್ನೂ ಒಂದೇದಿಕ್ಕಿಗೆ ತಲೆತಿರುಗಿಸಿಕೊಂಡು ಓಡುವ ಕೌರವ ಸೈನ್ಯವನ್ನೂ ಯುದ್ಧಭೂಮಿಯ ಮತ್ತೊಂದೆಡೆಯಲ್ಲಿ ಕಾದುತ್ತಿದ್ದ ಅಶ್ವತ್ಥಾಮನು ನೋಡಿದನು. ಹತ್ತಿರ ಬರುವಷ್ಟರಲ್ಲಿ ಕೆಂಪುಕುದುರೆಗಳಿಂದ ಗುರುತಿಸಲ್ಪಟ್ಟ ತನ್ನ ತಂದೆ, ಸಾರಥಿ, ಧ್ವಜಗಳಿಂದ ಕೂಡಿದ್ದ ತೇರನ್ನು ದೃಷ್ಟಿಸಿ ನೋಡಿ ತಮ್ಮ ತಂದೆಯು ಸತ್ತು ಹೋಗಿದ್ದುದನ್ನು ತಿಳಿದನು. ೩೧. ಜಿನುಗಿ ಸೋರುತ್ತಿದ್ದ ಕಣ್ಣೀರಿನ ಹನಿಗಳನ್ನು ತಡೆದುಕೊಂಡು ಕೋಪಾಗ್ನಿಯು ಉಜ್ವಲವಾಗುತ್ತಿರಲು ರೇಗಿ ಕೋಪದಿಂದ 'ಪ್ರಪಂಚ ವನ್ನು ಪಾಂಡವರಿಲ್ಲದಂತೆ ಮಾಡದಿರುವಾಗ ನಾನು ಚಾಪಾಚಾರ್ಯನ ಮಗನೇ ಅಲ್ಲ' ಎನ್ನುತ್ತ ಅಶ್ವತ್ಥಾಮನು ಎದುರಿಸಲು ಪಾಂಡವಸೇನಾಸಮುದ್ರವು ಭಯದಿಂದ ದುಃಖಪಟ್ಟು ಚಲಿಸಿ ತಳ್ಳಲ್ಪಟ್ಟು ಸುಳಿಸುಳಿಯಾಗಿ ತಿರುಗಿತು. ವ|| ಆಗ ಉರಿಯ ಉಂಡೆಯ ಹಾಗಿದ್ದ ತನ್ನ ಹಣೆಗಣ್ಣನ್ನು ತೋರಿ ತನ್ನ ಸಾಹಸವನ್ನು ಪ್ರದರ್ಶಿಸಬೇಕೆಂದು ನಾರಾಯಾಣಾಸ್ತವನ್ನು ಪ್ರಯೋಗಿಸಿದನು. ೩೨. ದಿಕ್ಕುಗಳು ಮಾಸಲಾದುವು, ಸಮುದ್ರಗಳು ಚಲಿಸಿದುವು, ಭೂಮಿಯು ಸಿಡಿಯಿತು, ಇದ್ದಕ್ಕಿದ್ದ ಹಾಗೆ ಆಕಾಶವು ಒಡೆದುಹೋಯಿತು ಎನ್ನುತ್ತಿದ್ದ ಸಮಯದಲ್ಲಿ ಇರುವ ಸ್ಥಳದಲ್ಲಿಯೇ ಲೋಕವನ್ನು ತನ್ನ ಹೊಟ್ಟೆಯೊಳಗಿಟ್ಟು ಯಾವ ಶಕ್ತಿಯನ್ನಾದರೂ ಪ್ರತಿಭಟಿಸಿ ರಕ್ಷಿಸುವ ಶಕ್ತಿಯುಳ್ಳ ಶ್ರೀಕೃಷ್ಣನು, ಭಯಂಕರವಾಗಿ ಸೆಳೆದು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು
Page #577
--------------------------------------------------------------------------
________________
:
೫೭೨) ಪಂಪಭಾರತಂ
ವll ಅಂತಶ್ವತ್ಥಾಮನೆಚ್ಚ ನಾರಾಯಣಾಸ್ತಮಂ ನಾರಾಯಣನುಪಾಯದೊಳೆ ಗೆಲ್ಲನನ್ನೆಗಂಚಂ|| ಕವಿದೆರಡುಂ ಪತಾಕಿನಿಗಳಾಗಡುಮನ್ನನೆ ಸಕ್ಕಿ ಮಾಡಿ ಕಾ
ದುವುದನಿಲ್ಲಿ ಸತ್ತರಸುಮಕ್ಕಳ ಪಾಪಮಿದಲ್ಲಮನ್ನನೆ ! ಯುವುದುಪವಾಸದಿಂ ಜಪದಿನಾನದನೊಡಿಸಿ ಶುದ್ದನಪ್ಪೆನೆಂ ಬವೊಲಪರಾಂಬುರಾಶಿಗಿಳಿದಂ ನಳಿನೀವರಜೀವಿತೇಶ್ವರಂ || ೩೩
ವ|| ಅಂತೆರಡುಂ ಪಡೆಗಳೊಂದಿರುಳುಮೆರಡುಂ ಪಗಲುಮೋರಂತೆ ಕಾದಿ ಚಳಿತಪಹಾರ ತೂರ್ಯಂಗಳಂ ಬಾಜಿಸೆ ತಂತಮ್ಮ ಬೀಡುಗಳ ಪೊದರಾಗಲ್ಚಂ|| ಗುರುವಿನ ಶೋಕದಿಂದ ರಥಮಧ್ಯದೊಳೊಯ್ಯನೆ ಜೋಲ್ಲು ಬಿದ್ದನಂ
ಗುರುಸುತನಂ ಕೃಪಂ ಕೃಪೆಯಿನಾತವಿಳಾಸದೊಳಾಳಸುತ್ತುಮಂ | ತಿರೆ ಗುರುಶೋಕಮಗಳಿಗೆ ತಾತವಿಯೋಗಮುಮಕ್ಕುಮಾಗಡುಂ ಗುರುವೆನೆ ಪೇಟಿಮಾ ಗುರುವಿಯೋಗಭರಂ ಗುರುವಾಗದಿರ್ಕುಮೇll ೩೪
ವ| ಅನ್ನೆಗಂ ಪನ್ನಗಕೇತನಂ ಶೋಕಮನಾಸಲೆಂದು ಕರ್ಣ ಶಲ್ಕ ಸೌಬಲ ಸಮೇತಂ ಬಂದಶ್ವತ್ಥಾಮನನಿಂತೆಂದಂಮll ಪುದಿದೌರ್ವಾನಳನಬ್ಬಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರ ಕೋ
ಪದಿನುದ್ವತ್ ಬಳಾಬ್ಬಿಯಂ ಸುಡ ಕರಂ ಬೆಂಬಿಟ್ಟು ದುರ್ಯುಕ್ತಿಯಿಂ | ದಯಂ ಧರ್ಮಜನಿಕ್ಕಿದಂ ಗುರುವನಿನಾತನಂ ಬೇಗಮಿ
ಕದೆ ಕಣ್ಣೀರ್ಗಳನಕ್ಕೆ ಚಂದ್ರಧವಳಂ ನಿನ್ನನ್ವಯಂ ಮಾಸದೇ || ೩೫ ವೈಷ್ಣವಾಸ್ತದಿಂದ ಎದುರಿಸಿ ಲೋಕವನ್ನು ರಕ್ಷಿಸಿದನು- ವll ಹಾಗೆ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತವನ್ನು ನಾರಾಯಣನಾದ ಕೃಷ್ಣನು ಉಪಾಯದಿಂದಲೇ ಗೆದ್ದನು. ಅಷ್ಟರಲ್ಲಿ ೩೩. ಎರಡು ಸೈನ್ಯಗಳೂ ಮೇಲೆಬಿದ್ದು ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿಮಾಡಿ ಯುದ್ದಮಾಡುವುದರಿಂದ ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ದನಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು. ವ! ಒಂದು ರಾತ್ರಿ ಮತ್ತು ಎರಡು ಹಗಲು ಒಂದೇ ಸಮನಾಗಿ ಕಾದಿ ಬಲಗುಂದಿದ್ದ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾಜಿಸಲು ತಮ್ಮ ತಮ್ಮ ನಿವಾಸಗಳಿಗೆ (ಬೀಡುಗಳಿಗೆ) ಹೋದುವು; ಆಗ ೩೪. ತಂದೆಯು ಸತ್ತ ದುಃಖದಿಂದ ರಥದ ಮಧ್ಯಭಾಗದಲ್ಲಿಯೇ ನಿಧಾನವಾಗಿ ಜೋತು ಬಿದ್ದಿದ್ದ ಅಶ್ವತ್ಥಾಮನನ್ನು ಕೃಪನು ಮೃದುವಾದ ಮಾತುಗಳಿಂದಲೂ; ತನ್ನ ಸಮಾಧಾನೋಕ್ತಿಯಿಂದಲೂ ಬೀಡಿಗೆ ಕರೆದು ತಂದನು. ತಂದೆಯ ಸಾವೇ' (ಅಗಲಿಕೆಯೇ) ಹೆಚ್ಚಿನ ದುಃಖಕ್ಕೆ ಕಾರಣವಾಗಿರುವಾಗ ಆ ತಂದೆಯು ಗುರುವೂ ಆಗಿದ್ದಾಗ ಆ ಗುರುವಿಯೋಗದುಃಖವು ಗುರುತರವಾಗಿರುವುದಿಲ್ಲವೇ ? ವ! ಅಷ್ಟರಲ್ಲಿ ದುರ್ಯೋಧನನು ಅಶ್ವತ್ಥಾಮನ ದುಃಖವನ್ನು ಆರಿಸಬೇಕೆಂದು ಕರ್ಣ, ಶಲ್ಯ, ಶಕುನಿಯರೊಡನೆ ಬಂದು ಅವನಿಗೆ ಹೀಗೆ ಹೇಳಿದನು. ೩೫. ಆಚಾರ್ಯರು ಆವರಿಸಿ
Page #578
--------------------------------------------------------------------------
________________
ದ್ವಾದಶಾಶ್ವಾಸಂ / ೫೭೩ ದುತವಿಲಂಬಿತಂ | ಎನಗೆ ಕೂರ್ಪುದನಾ ಘಟಸಂಭವಂ
ನಿನಗೆ ಕೂರನಬಲ್ ನಿನತಲ್ಲು ಕೇ || ಆನತುಮಾಜದ ಶೋಕಮನಿರ್ವರುಂ. ಮುನಿವರಂ ತವ ಕೊಂದೊಡನೀಗುವಂ |
ವ|| ಎಂಬುದುಮಶ್ವತ್ಥಾಮನಿಂತೆಂದಂತರಳಂ || ಗುರು ಮದೀಯ ವಿಮೋಹದಿಂ ಕೃಪೆಯಂ ಜವಂ ಬಿಸುಟಂತೆ ಕೊ :
ಕರಿಸಿ ಬಿಸುಟಿರ್ದೊಡಾ ಪದದೊಳ್ ಗಡಂ ದ್ರುಪದಾತ್ಮಜಂ | ಗುರುವ ಕೇಶಕಳಾಪಮಂ ತೆಗೆದಂತೆ ಗಂಡನುಮಾದನೀ
ಪರಿಭವಕ್ಕನುರೂಪಮಿಂ ಪೆಜತೊಂದುಮಿಹಿಕೇತನಾ || ೩೭ ಶಾll ರಾಯೆಂಬೀ ಪೆಸರಿಲ್ಲದಂತು ಮುಟಿಸಂ ಮುಯ್ಯಲು ಸೂಂತು ಕ
ಟೈಾಯಂ ಪೊಂಪುಟವೊಗೆ ತಂದೆಯಟಿವಿಂಗಾ ಭಾರ್ಗವಂ ಕೊಂದನಂ | ತೀಯಮ್ಮಯ್ಯನಿನಾದುದೊಂದು ಪಗೆಯಿಂ ಸೀಳುಗ್ರಪಾಂಚಾಳರಾ
ಜಾಯುಃಪಾರಮನಸ್ಕಭೂಪಬಲಮಂ ಪರ್ದಿಗೆ ಬಿರ್ದಿಕ್ಕುವೆಂ 1 ೩೮ ಕೊಂಡಿರುವ ಬಡಬಾಗ್ನಿಯು ಕಡಲನ್ನು ಸುಡುವಂತೆ ಶಸ್ತ್ರಾಗ್ನಿಯಿಂದಲೂ ತೀಕ್ಷವಾದ ಕೋಪಾಗ್ನಿಯಿಂದಲೂ ಕೊಬ್ಬಿದ ಶತ್ರು ಸೈನ್ಯಸಾಗರವನ್ನು ಸುಡುತ್ತಿರಲು ವಿಶೇಷವಾದ ಉಪಸರ್ಪಣೆಯಿಂದಲೂ ಹೀನೋಪಾಯಗಳಿಂದಲೂ ದಯಾಹೀನನಾದ ಧರ್ಮರಾಯನು ಗುರುವನ್ನು ಕೊಂದನು. ಇನ್ನು ನೀನು ಅವನನ್ನು ಬೇಗನೆ ಕೊಲ್ಲದೆ ಕಣ್ಣೀರನ್ನು ಸುರಿಸುತ್ತಿದ್ದರೆ ಚಂದ್ರನಷ್ಟು ಬೆಳ್ಳಗಿರುವ ನಿನ್ನ ವಂಶವು ಮಲಿನವಾಗದೆ ಇರುತ್ತದೆಯೇ? ೩೬. ದ್ರೋಣಾಚಾರ್ಯನು ನನ್ನನ್ನು ಪ್ರೀತಿಸುತ್ತಿದಷ್ಟು ನಿನ್ನನ್ನು ಪ್ರೀತಿಸುತ್ತಿರಲಿಲ್ಲ. ಈ ದುಃಖವು ನಿನ್ನದು ಮಾತ್ರವಲ್ಲ; ಕೇಳು, ನನ್ನದೂ ಅಹುದು. ಕಡಿಮೆಯಾಗದ ಈ ದುಃಖವನ್ನು, ನಾವಿಬ್ಬರೂ ನಮಗೆ ಸಮಾನ ಶತ್ರುಗಳಾದ ಪಾಂಡವರನ್ನು ಪೂರ್ಣವಾಗಿ ಕೊಂದು, ಜೊತೆಯಲ್ಲಿಯೇ ಪರಿಹಾರ ಮಾಡಿ ಕೊಳ್ಳೋಣ. ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೩೭. ಆಚಾರ್ಯ ನಾದ ನನ್ನ ತಂದೆಯು ನನ್ನ ಮೇಲಿನ ಪ್ರೀತಿಯಿಂದ ಯಮನು ಕರುಣವನ್ನು ಬಿಸಾಡುವ ಹಾಗೆ ಅಸಹ್ಯಪಟ್ಟು ಬಿಲ್ಲನ್ನು ಬಿಸುಟಿದ್ದ ಆ ಸಮಯದಲ್ಲಿಯೇ ಅಲ್ಲವೇ ಧೃಷ್ಟದ್ಯುಮ್ಮನು ಗುರುವಿನ ಕೂದಲ ಗಂಟನ್ನು ಎಳೆದು ಮಹಾಶೂರನಾದುದು. ದುರ್ಯೋಧನಾ! ಈ ಅವಮಾನಕ್ಕೆ ಸಮಾನವಾದುದು ಬೇರೊಂದಿಲ್ಲ. ೩೮. ಪರಶುರಾಮನು ತಂದೆಯ ಸಾವಿಗಾಗಿ ಕೋಪದಿಂದ 'ರಾಜ' ಎಂಬ ಹೆಸರೇ ಇಲ್ಲದಿರುವ ಹಾಗೆ ಇಪ್ಪತ್ತೊಂದು ಸಲ ತನ್ನ ಪೌರುಷವು ಅತ್ಯಂತ ಅಧಿಕವಾಗುತ್ತಿರಲು (ರಾಜಕುಲವನ್ನ) ಹೇಗೆ ಕೊಂದನೋ ಹಾಗೆಯೇ ಈಗ ನಮ್ಮ ತಂದೆಯ ಕಾರಣದಿಂದಾದ ದ್ವೇಷದಿಂದ ಭಯಂಕರವಾದ ಪಾಂಚಾಲರಾಜರ ಆಯಸ್ಸಿನ ದಡವನ್ನು ಸೀಳಿ ಶತ್ರುರಾಜರ ಸೈನ್ಯವನ್ನು ಹದ್ದುಗಳಿಗೆ ಔತಣಮಾಡಿಸುತ್ತೇನೆ.
Page #579
--------------------------------------------------------------------------
________________
೫೭೪ | ಪಂಪಭಾರತಂ ಕoll ಪಗೆಯಂದಮುಮಾ ರಾಮರ
ಪಗೆಯೊಳ್ ಸಮಮವರ ಪಿಡಿವ ಬಿಲ್ ಬಲ್ಲಮ್ಮ | ಬುಗಳುಮವರಿತ್ತ ನಲ್ಲಂ ಬುಗಳೆನೆ ಬಳೆಗಾಯದಂತು ಚಲಮನೆ ಕಾವೆಂ 1
೩೯ ವ|| ಎಂಬುದುಂ ತನ್ನಳಿಯನ ನುಡಿಗೆ ಶಾರದ್ವತಂ ಸಂತೋಷಂಬಟ್ಟು ಕೌರವೇಶ್ವರನ ನಿಂತೆಂದಂ ನೀನೀತಂಗೆ ವೀರವಟ್ಟಮಂ ಕಟ್ಟ ರಿಪುನೃಪಬಲಕ್ಕೆ ತೋಳೆ ಬಿಡುವುದೆನೆ ಕಳಶಜನಿಂ ಬಟೆಕ್ಕೆ ಕರ್ಣಂಗೆಂದು ನುಡಿದ ಬೀರವಟ್ಟಮನೆಂತು ಕಟ್ಟುವೆನೆಂದೊಡಶ್ವತ್ಥಾಮ ನಿಂತೆಂದಂ
ಚಂಗಿ ನಿಜದೊಳೆ ಭೂಪರೆಂಬರವಿವೇಕಿಗಳಪ್ಪರದಕ್ಕೆ ನೀಂ ಫಣಿ
ಧ್ವಜ ಕಡುಕೆಯ್ದು ಕರ್ಣನನೆ ನಚ್ಚುವೆಯಪ್ರೊಡೆ ಯುದ್ದದೊಳ್ ವೃಷ | ಧ್ವಜನುಮನಿಕ್ಕಿ ಗೆಲ್ಲರಿಗನೊಳ್ ತಲೆವಟ್ಟಿದಿರಾಗಿ ನಿಂದು ಸೂ ತಜನಿಳವು ಗಡಂ ಪಗೆಯನೇಂ ಗಳ ಪಟ್ಟಮ ಪಾಟಿ ತಿಂಬುದೇ || ೪೦
ವ|| ಎಂಬುದುಮಂಗರಾಜಂ ಗುರುತನೂಜನನಿಂತೆಂದಂಚಂ|| ಎನಿತಳವುಳ್ಕೊಡಂ ದ್ವಿಜನ ಗಂಡಗುಣಕಗಿವರಾರೊ ನೆ |
ಟ್ಟನೆ ವಿಷಮೊಳ್ಳೆಗುಳೊಡಮದೊಳ್ಳೆಯ ಕಾಳಿಯ ನಾಗನಾಗದ | ಜೈನ ಪಡೆಮಾತದೊಂದೆ ನೆವಮಾಗಿರೆ ಕೆಯ್ಯುವನಿಕ್ಕಿ ಸತ್ತ ಸಾ ವಿನ ಪಡಿಚಂದಮಾಗಿಯುಮಿದೇಂ ನಿಮಗಯೊ ಗಂಡುವಾತುಗಳ್|| ೪೧
೩೯. 'ನಮ್ಮಶತ್ರುತ್ವದ ರೀತಿಯೂ ರಾಮರ ಶತ್ರುತ್ವಕ್ಕೆ ಸಮಾನವಾದುದು. ಅವರು ಹಿಡಿಯುತ್ತಿದ್ದ ಬಿಲ್ಲೇ ನನ್ನ ಬಿಲ್ಲು ನಮ್ಮ ಬಾಣಗಳೂ ಅವರು ಕೊಟ್ಟ ಒಳ್ಳೆಯ ಬಾಣಗಳೇ ಆಗಿರಲು ವಂಶವನ್ನು (ಕ್ಷತ್ರಿಯ ವಂಶವನ್ನು ರಕ್ಷಿಸದೆ (ಹಾಗೆಯೇ) ಹಟವನ್ನೇ ಸಾಧಿಸುತ್ತೇನೆ' ವ|| ಎಂದ ತನ್ನಳಿಯನ ಮಾತಿಗೆ ಕೃಪನು ಸಂತೋಷಪಟ್ಟು ದುರ್ಯೊಧನನಿಗೆ ಹೀಗೆ ಹೇಳಿದನು- 'ನೀನು ಇವನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಸೈನ್ಯದ ಕಡೆಗೆ ತೋರಿಸಿ ಬಿಡತಕ್ಕದ್ದು' ಎನ್ನಲು 'ದ್ರೋಣನ ಬಳಿಕ ಕರ್ಣನಿಗೆ' ಎಂದು ಹೇಳಿದ ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೪೦. ರಾಜರೆನ್ನುವವರು ವಾಸ್ತವವಾಗಿಯೂ ಬುದ್ದಿಯಿಲ್ಲದವ ರೆಂಬುದು ಸತ್ಯ. ಅದು ಹಾಗಿರಲಿ; ಎಲೈ ದುರ್ಯೋಧನನೇ, ಬಹಳವಾಗಿ ಪ್ರೀತಿಸಿ ಕರ್ಣನನ್ನೇ ನಂಬುವೆಯಾದರೆ ಯುದ್ಧದಲ್ಲಿ ಈಶ್ವರನನ್ನೇ ಇಕ್ಕಿ ಗೆದ್ದ ಅರ್ಜುನನಿಗೆ ಅಭಿಮುಖವಾಗಿ ನಿಂತು ಕರ್ಣನು ಯುದ್ದಮಾಡುತ್ತಾನಲ್ಲವೇ? ಕಟ್ಟುವ ವೀರಪಟ್ಟವೇ ಹಾರಿ ಮೇಲೆ ಬಿದ್ದು ಶತ್ರುವನ್ನು ತಿನ್ನುವುದೇ ಏನು? ವll ಎನ್ನಲು ಕರ್ಣನು ಅಶ್ವತ್ಥಾಮನನ್ನು ಕುರಿತು ಹೀಗೆಂದನು ೪೧. 'ಎಷ್ಟು ಶಕ್ತಿಯಿದ್ದರೂ ಬ್ರಾಹ್ಮಣನ ಪೌರುಷಕ್ಕೆ ಹೆದರುವವರಾರಿದ್ದಾರೋ? ಕೇರೆ ಹಾವಿಗೆ ನೇರವಾಗಿ ವಿಷವಿದ್ದರೂ, ಅದು ಒಳ್ಳೆಯೇ (ಕೇರೆಯ ಹಾವೇ); ಕೃಷ್ಣಸರ್ಪವಾಗಲಾರದು. ಪೌರುಷದ ಸುದ್ದಿಯೊಂದಿದೆ! ಯಾವುದೋ ಒಂದು ನೆಪದಿಂದ ಆಯುಧವನ್ನು ಬಿಸಾಡಿ ಸತ್ತ
Page #580
--------------------------------------------------------------------------
________________
ದ್ವಾದಶಾಶ್ವಾಸಂ | ೫೭೫ ವ|| ಎಂಬುದುಂ ತೈಲೋಕ್ಯ ಧನುರ್ಧರನಪ್ಪಯ್ಯಯ್ಯನ ಗಂಡನಾತನೀ ಮೀಂಗುಲಿಗಂ ಮೆಚ್ಚನಿವನಂ ಮುಂ ಕೊಂದು ಬಲೆಯಂ ಪಾಂಡವರಂ ಕೊಲ್ವೆನೆಂದು ಬಾಳಂ ಕಿಟ್ಟು ಕರ್ಣನ ಮೇಲವಾಯ್ತುದುಂ ಕೃಪನೆಡೆವೊಕ್ಕಿದಾಗದೆಂದು ಬಾರಿಸಿ
ಕ೦ll ಅಸದಳವಾಗಿಯುಮೀ ನ - ಮ್ಮ ಸೈನಮಿಂತೊರ್ವರೊರ್ವರೊಳ್ ಸೆಣಸಿ ಖಳ |
ವ್ಯಸನದೊಳೆ ಕೆಟ್ಟುದಲ್ಲದೆ
ಡ ಸುಯೋಧನ ನಿನಗೆ ಮಲೆವ ಮಾರ್ವಲಮೋಳವೇ || ಈ ವll ಎಂಬುದುಮಶ್ವತ್ಥಾಮಂ ಕರ್ಣನೊಳಾದ ಮುಳಿಸನವಧಾರಿಸಲಾದೆ ಸುಯೋಧನನ ನಿಂತೆಂದಂಖಚರಫ್ತುತಂ | ಬೀರವಟ್ಟಮನಾನಿರೆ ನೀನೀ ಸೂತಸುತಂಗಡೆಗೊಂಡು ಕೈ
ವಾರದಿಂದೊಸೆದಿತ್ತೊಡಮೇನಾಯ್ತಿ ಖಳನಿಲ್ಲಿ ಧನಂಜಯ | ಕ್ರೂರಬಾಣಗಹಾವಳಿಯಿಂದಾಡಿದೊಡಲ್ಲದೆ ವೈರಿ ಸಂ
ಹಾರ ಕಾರಣ ಚಾಪಮನಾನೀ ಸಂಗರದೊಳ್ ಪಿಡಿಯಂ ಗಡಾ || ೪೩ . ವ|| ಎಂಬುದುಂ ಮುಳಿಸುವರಸಿದ ಮುಗುಳಗೆಯಿಂ ಕರ್ಣನಿಂತೆಂದಂಮll ಭುವನಂಗಳ್ ಪದಿನಾಲ್ಕುಮಂ ನಡುಗಿಸಲ್ ಸಾಮರ್ಥ್ಯಮುಳ್ಳನ್ನ ಕೆ
ಯುವಿನೊಳ ತೀರದುದಾವ ಕೆಯ್ಯುವಿನೊಳಂ ತೀರ್ದಪುದೇ ನಿನ್ನ ಕೆ || ಯುವನೆಂತುಂ ಬಿಸುಟಿರ್ದ ಲೆಕ್ಕಮೆ ವಲಂ ನಿಷ್ಕಾರಣಂ ಕೆಯ್ಯುವಿ ,
ಕುವ ಕಣ್ಣೀರ್ಗಳನಿಕ್ಕುವೀಯೆರಡುಮಂ ನಿಮ್ಮಯ್ಯನೊಳ್ ಕರೇ || - ೪೪ ಸಾವಿನ ಪ್ರತಿಬಿಂಬ ಕಣ್ಣಮುಂದಿದ್ದರೂ ನಿಮಗೆ ಪೌರುಷದ ಮಾತುಗಳಲ್ಲಿ ಇನ್ನೂ ಪ್ರೀತಿಯಿದೆಯೇನು ?' (ಎಷ್ಟು ಪ್ರೀತಿಯೋ) ವ|| ಎನ್ನಲು 'ಮೂರುಲೋಕಗಳಲ್ಲಿಯೂ ಬಿಲ್ವಿದ್ಯೆಯಲ್ಲಿ ಪ್ರಸಿದ್ಧನಾದ ನನ್ನ ತಂದೆಯನ್ನು ಈ ಬೆಸ್ತರವನು (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು) ಮೆಚ್ಚುವುದಿಲ್ಲ. ಇವನನ್ನು ಮೊದಲು ಕೊಂದು ಬಳಿಕ ಪಾಂಡವರನ್ನು ಕೊಲ್ಲುತ್ತೇನೆ' ಎಂದು ಕತ್ತಿಯನ್ನು ಒರೆಯಿಂದ ಹೊರಕ್ಕೆ ಸೆಳೆದು ಕರ್ಣನ ಮೇಲೆ ಹಾಯ್ದನು. ಕೃಪನು ಮಧ್ಯೆ ಪ್ರವೇಶಿಸಿ ಹೀಗೆ ಮಾಡಬಾರದು ಎಂದು ತಡೆದನು - ೪೨. `ದುರ್ಯೊಧನಾ, ಈ ನಮ್ಮ ಸೈನ್ಯವು ಅಸದೃಶವಾಗಿದ್ದರೂ ಹೀಗೆ ಒಬ್ಬೊಬ್ಬರಲ್ಲಿಯೂ ಜಗಳವಾಡಿ (ಮತ್ಸರಿಸಿ) ಒಳಜಗಳದಿಂದಲೇ ಕೆಟ್ಟುಹೋಯಿತು. ಹಾಗಲ್ಲದಿದ್ದರೆ ನಿನಗೆ ಪ್ರತಿಭಟಿಸುವ ಪ್ರತಿಸೈನ್ಯವಿರುತ್ತಿದ್ದಿತೆ ?' ವಎನ್ನಲು ಅಶ್ವತ್ಥಾಮನು ಕರ್ಣನಲ್ಲುಂಟಾದ ಕೋಪವನ್ನು ತಡೆಯಲಾರದೆ ದುರ್ಯೋಧನನಿಗೆ ಹೀಗೆ ಹೇಳಿದನು - ೪೩. 'ನಾನಿರುವಾಗ ನೀನು ಸ್ನೇಹದಿಂದ ವೀರಪಟ್ಟವನ್ನು ಈ ಸೂತನ ಮಗನಿಗೆ ಮೋಸದಿಂದ ಕೊಟ್ಟರೆ ತಾನೇ ಏನಾಯ್ತು? ಈ ದುಷ್ಟನು ಅರ್ಜುನನ ಕ್ರೂರವಾದ ಬಾಣಗಳ ಸಮೂಹದಿಂದ ನಾಶವಾಗದ ಹೊರತು ನಾನು ಶತ್ರುನಾಶಕ್ಕೆ ಕಾರಣವಾದ ಈ ಬಿಲ್ಲನ್ನು ಯುದ್ಧರಂಗದಲ್ಲಿ ಹಿಡಿಯುವುದೇ ಇಲ್ಲ. ವ|| ಎನ್ನಲು ಕರ್ಣನು ಕೋಪಮಿಶ್ರಿತವಾದ ಹುಸಿನಗೆಯಿಂದ ಹೀಗೆ ಹೇಳಿದನು-೪೪, 'ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಸಾಮರ್ಥ್ಯವುಳ್ಳ ನನ್ನ
Page #581
--------------------------------------------------------------------------
________________
೫೭೬ | ಪಂಪಭಾರತಂ
. ವ|| ಎಂಬುದುಮಶ್ವತ್ಥಾಮಂ ಕರ್ಣನ ನುಡಿಗೆ ಸಿಗಾಗಿಮ|| ಸll ಮುನಿಸಂ ಮುಂದಿಟ್ಟು ಬಿಲ್ಲಂ ಬಿಸುಡದೆ ಬಗೆದಂ ಮುನ್ಸಮಿನ್ನುರ್ಕಿನಿಂ ನಿ
ನನೆ ಪೀನಂ ನಚ್ಚಿ ನಿನ್ನಾಳನ ನುಡಿಯಿಸೆ ನೀನಾಡಿದ ಮಾತನಾಡ | ಲೈನಗೀ ಸೂಬಲ್ಕು ಸೇನಾಧಿಪ ಪದವಿಯೊಳಿಂ ನೀನೆ ನಿಲ್ ನಾಳೆ ದುರ್ಯೋ ಧನನಂ ಸಕ್ಕಿಟ್ಟು ಮಾಜಾಂತದಟರೊಳಳವಂ ತೋಜುವಂ ನೀನುಮಾನುಂ || ೪೫ - ಕಂti ಸಾರಂಗಳ್ ನಿನ್ನ ಶರಾ
ಸಾರಂಗಳಸಾರಮುಟದ ಕೆಯ್ಯುಗಳೆಂತುಂ | ಸಾರಾಸಾರತೆಯಂ ನಾ
ಮಾರಯ್ಯಮಿದಿರ್ಚಿದರಿಕೃಷಧ್ವಜಿನಿಗಳೊಳ್ || - ವ|| ಎಂಬುದುಂ ದುರ್ಯೋಧನ ಕರ್ಣನುಮನಶ್ವತ್ಥಾಮನುಮಂ ನಿಮ್ಮೊಳಗೆ ನೀಂ ಮುಳಿಯಡ ನಿಮ್ಮ ಪುರುಷಕಾರಮನೆ ಬಗೆದು ನೆಗಟ್ಟುದಾನುಮತಿ ಕೊಂಡ ಕಜ್ರಮಂ ನಗಲ್ಲದಿರನೆಂದಾಯೆಡೆಯಿನೆಟ್ಟು ನಾಯಕರು ಬೀಡಿಂಗೆ ಪೋಗಲ್ವೇರಮನೆಯಂ ಪೊಕ್ಕು ಮಜ್ಜನ ಭೋಜನ ತಾಂಬೂಲಾನುಲೇಪನಂಗಳೆಂ ಸಂಗರ ಪರಿಶ್ರಮಮನಾಳಿಸಿ ಮಂತ್ರಶಾಲೆಗೆ ವಂದು ಶಲ್ಯ ಶಕುನಿ ಶಾರದ್ವತ ಕೃತವರ್ಮ ದುಶ್ಯಾಸನಾದಿಗಳು ಬರಿಸಿ ಯಥೋಚಿತ ಪ್ರತಿಪತ್ತಿಗಳಿಂದಿರಿಸಿಆಯುಧಗಳಿಂದ ಸಾಧ್ಯವಾಗದೇ ಇರುವುದು ಮತ್ತಾವ ಆಯುಧದಿಂದಾಗಲಿ ಸಾಧ್ಯವಾಗುತ್ತದೆಯೇ ? ನಿನ್ನ ಆಯುಧಗಳು ಯಾವಾಗಲೂ ಬಿಸಾಡಿರುವ ಲೆಕ್ಕವೇ (ಅಪ್ರಯೋಜಕವೇ). ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ ಮತ್ತು ಕಣ್ಣೀರನ್ನು ಸುರಿಸುವ ಈ ಎರಡನ್ನೂ ನಿಮ್ಮಯ್ಯನಿಂದ ಕಲಿತಿದ್ದೀರಾ?' ವll ಎನ್ನಲು ಅಶ್ವತ್ಥಾಮನು ಕರ್ಣನ ಮಾತಿಗೆ ಲಜ್ಜಿತನಾಗಿ ೪೫. ನಾನು ಮೊದಲು ಕೋಪವನ್ನು ಮುಂದಿಟ್ಟು ಬಿಲ್ಲನ್ನು ಬಿಸುಡಲು ನಿರ್ಧರಿಸಿದೆನು. ಇನ್ನು ನಿನ್ನನ್ನು ನಿನ್ನ ಯಜಮಾನನು ಪೂರ್ಣವಾಗಿ ನಂಬಿ ಮಾತನಾಡಿಸಲು ನೀನು ಗರ್ವದಿಂದ ಮಾತನಾಡಿದೆ. ನಾನು ಮಾತನಾಡುವುದಕ್ಕೆ ಇದು ನನಗೆ ಸಮಯವಲ್ಲ, ಸೇನಾಧಿಪತಿಯ ಸ್ಥಾನದಲ್ಲಿ ನೀನೇ ನಿಲ್ಲು: ನಾಳೆ ದುರ್ಯೊಧನನನ್ನೇ ಸಾಕ್ಷಿಯಾಗಿಟ್ಟುಕೊಂಡು ಪ್ರತಿಭಟಿಸಿದ ಶೂರರಲ್ಲಿ ನೀನೂ ನಾನೂ ನಮ್ಮ ಪರಾಕ್ರಮವನ್ನು ತೋರಿಸೋಣ. ೪೬. ನಿನ್ನ ಬಾಣದ ಮಳೆಯು ಶಕ್ತಿಯುಕ್ತವಾದುದು ಉಳಿದ ಆಯುಧಗಳು ಹೇಗೂ ಅಸಾರವಾದುವು. (ಶಕ್ತಿಯಿಲ್ಲದುವು) ಈ ಸಾರಾಸಾರತೆಯನ್ನು ನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ ವಿಚಾರ ಮಾಡೋಣ'. ವll ಎನ್ನಲು ದುರ್ಯೋಧನನು ಕರ್ಣನನ್ನೂ ಅಶ್ವತ್ಥಾಮನನ್ನೂ ಕುರಿತು 'ನೀವು ನಿಮ್ಮನಿಮ್ಮಲ್ಲಿ ಕೋಪಿಸಬೇಡಿ; ನಿಮ್ಮ ಪೌರುಷವನ್ನು ಯೋಚಿಸಿ ಕೆಲಸಮಾಡುವುದು. ನಾನೂ ಅಂಗೀಕಾರಮಾಡಿದ ಕೆಲಸವನ್ನು ಮಾಡದೇ ಇರುವುದಿಲ್ಲ ಎಂದು ಆ ಸ್ಥಳದಿಂದೆದ್ದು ನಾಯಕರನ್ನು ಬೀಡಿಗೆ ಹೋಗಲು ಹೇಳಿ ತಾನು ಅರಮನೆಯನ್ನು ಪ್ರವೇಶಿಸಿ ಸ್ನಾನ ಭೋಜನ ತಾಂಬೂಲ ಅನುಲೇಪನಗಳಿಂದ ಯುದ್ಧಾಯಾಸವನ್ನು ಹೋಗಲಾಡಿಸಿಕೊಂಡು ಮಂತ್ರಶಾಲೆಗೆ ಬಂದು ಶಲ್ಯ, ಶಕುನಿ,
Page #582
--------------------------------------------------------------------------
________________
ದ್ವಾದಶಾಶ್ವಾಸಂ |೫೭೭ ಅಂತರ್ಭದದೊಳಂತು ಛಿದ್ರಿಸಿದರಾ ಗಾಂಗೇಯರಂ ಕೊಂದರಿಂ ದಿಂತೀಗಳ ಪುಸಿದೀ ಘಟೋದ್ಧವನನಾ ಕೌಂತೇಯರಾಯಕ್ಕೆ ಗೆಂ | ಟೆಂತೆಂತಕುಮದಂ ಮದುದ್ಯಮ ಪೇಟ್ಟಾ ವೈರಿಗಳೊಲ್ವೆನಾ ನೆಂತೊಳಂ ತಳೆವಂತು ತೇಜಮೆನಗಿನ್ನೆಂತಕ್ಕುಮಿಂ ಪೇಟೆರೇ || ವ|| ಎನೆ ಶಾರದ್ವತನಿಂತೆಂದಂ
ಚಂll
ಶಾ||
42
ಚಲಮನೆ ಪೇಡಯ್ಯರುಮನಯ್ದಟೆಯೂರೊಳೆ ಬಾಟೆಸೆಂದು ಮುಂ ಬಲಿಬಲದನಂ ನುಡಿಯೆಯುಂ ಕುಡದಿರ್ದುದ ಪೇಟ್ಟುಮೆಯೆ ಮ 1 ಯಲಿತನಮಂ ಸರಿತ್ಸುತ ಘಟೋದ್ಧವರಂ ಪೊಣರ್ದಿಕ್ಕಿ ಗೆಲ್ಲರೊಳ್ ಕಲಹಮೆ ಪೇಟ್ಯುಮಿಂ ಪೆಂತು ಪೇಳ್ವೆಡೆಯಾವುದೊ ಕೌರವೇಶ್ವರಾ ||೪೮
ವ! ಅದಂದಮಂ ಪೆತು ಮಂತಣಕ್ಕೆಡೆಯಿಲ್ಲ ಮುನ್ನ ಚಕ್ಷುವನೆಂಬ ಮನುವಾದ ಕಾಲದೊಳ್ ಧರಾತಳಮನೊಲ್ಲಣಿಗೆಯಿಂ ಪಿಡೆವಂತೆ ತಳಮೆಯ್ದೆ ಸುರುಟ್ಟಿನಂ ಮುಖ್ಯಮ್ ಸೂ ಪಿಟಿದ ಸಾಹಸಮುಮನಿಂದ್ರಂಗೆ ತನ್ನ ಸಹಜ ಕವಚಮಂ ತಿದಿಯುಗಿದು ಕೊಟ್ಟ ಚಾಗದ ಪೆಂಪುಮಂ ದಿಗ್ವಿಜಯಂಗೆಯ್ದು ಮಿಡಿದನಿತು ಬೇಗದಿಂ ಜರಾಸಂಧನಂ ನೆಲಕ್ಕಿಕ್ಕಿ ಪುಡಿಯೊಳ್ ಪೊರಳ್ಳಿ ಮಲ್ಲಯುದ್ಧದೊಳ್ ಪಿಡಿದಡಿಗೊತ್ತಿದ ಭುಜಬಲಭೀಮನಂ ಗೆಲ್ಲ ಸಾಹಸಮುಮಂ ನಮ್ಮ ಪಡೆಯೆಲ್ಲಮಂ ತೊತ್ತದುಡಿದು ಕೊಲ್ವ ಘಟೋತ್ಕಚನೆಂಬ ರೂಕ್ಷ ರಾಕ್ಷಸನಂ ಕೊಂದ ಬೀರಮುಮನಾಲೋಕಾಂತರಂ ನೆಗ
ಶಾರದ್ವತ, ಕೃತವರ್ಮ, ದುಶ್ಯಾಸನನೇ ಮೊದಲಾದವರನ್ನು ಬರಮಾಡಿ ಯೋಗ್ಯವಾದ ಸತ್ಕಾರಗಳಿಂದ ಕುಳ್ಳಿರಿಸಿ ೪೭. ರಹಸ್ಯವಾದ ಭೇದೋಪಾಯದಿಂದ ಹಾಗೆ ಆ ಭೀಷ್ಮರನ್ನು ಒಡೆದು ಹಾಕಿದರು. ಈ ದಿನ ಹೀಗೆ ಸುಳ್ಳು ಹೇಳಿ ದ್ರೋಣಾಚಾರ್ಯರನ್ನು ಕೊಂದರು. ಈಗ ಆ ಪಾಂಡವರಿಗೆ ಜಯವಾಗದಿರುವ ರೀತಿ ಯಾವುದು ಎಂಬುದನ್ನು ತಿಳಿಸಿ. ಆ ಶತ್ರುಗಳಲ್ಲಿ ನನಗೆ ಹೇಗೆ ಸ್ನೇಹವುಂಟಾದೀತು. ಪಾಂಡವರ ವಿಷಯದಲ್ಲಿ ಒಳ್ಳೆಯ ಭಾವವು ಬರುವುದು ಹೇಗೆ ಸಾಧ್ಯ? ನೀವೇ ಹೇಳಿರಿ. ವ|| ಎನ್ನಲು ಕೃಪನು ಹೀಗೆಂದನು- ೪೮. ನಿನ್ನ ಬಲವನ್ನು ಹೇಳುವುದಾದರೆ ಮೊದಲು ಕೃಷ್ಣನು ಬಂದು ಪಾಂಡವರೈವರನ್ನು ಅಯ್ದು ಕುಗ್ರಾಮಗಳಲ್ಲಿ ಬಾಳುವ ಹಾಗೆ ಮಾಡು ಎಂದು ಹೇಳಿದರೂ ಕೊಡದಿರುವುದೇ ಹೇಳುವುದು. ಭೀಷ್ಮ ದ್ರೋಣರನ್ನು ಪ್ರತಿಭಟಿಸಿ ಯುದ್ಧದಲ್ಲಿ ಸಂಹರಿಸಿ ಅವರನ್ನು ಗೆದ್ದ ಪಾಂಡವರಲ್ಲಿ ಯುದ್ಧಕ್ಕೆ ತೊಡಗಿರುವುದೇ ನಿನ್ನ ಪರಾಕ್ರಮವನ್ನು ಹೇಳುತ್ತದೆ. ದುರ್ಯೋಧನ! ಹೇಳುವುದು ಮತ್ತೇನಿದೆ? ವll ಆದುದರಿಂದ ಬೇರೆ ಮಂತ್ರಾಲೋಚನೆಗೆ ಅವಕಾಶವೇ ಇಲ್ಲ. ಹಿಂದೆ ಚಕ್ಷುಷ್ಯನೆಂಬ ಮನುವಾದ ಕಾಲದಲ್ಲಿ ಭೂಮಂಡಲವನ್ನು ಒದ್ದೆ ಬಟ್ಟೆಯನ್ನು ಹಿಂಡುವಂತೆ ಅಂಗೈಯಲ್ಲಿ ಸುರುಟಿಕೊಂಡು ಇಪ್ಪತ್ತೊಂದು ಸಲ ಹಿಂಡಿದ ಸಾಹಸವೂ ಇಂದ್ರನಿಗೆ ತನ್ನ ಸಹಜಕವಚವನ್ನು ತಿದಿಯ ಚರ್ಮವನ್ನು ಸುಲಿಯುವ ಹಾಗೆ ಅನಾಯಾಸವಾಗಿ ಸುಲಿದುಕೊಟ್ಟ ತ್ಯಾಗದ ಆಧಿಕ್ಯವೂ ದಿಗ್ವಿಜಯವನ್ನು ಮಾಡಿ ಚಿಟಿಕೆ ಹಾಕುವಷ್ಟು ಅಲ್ಪ ಕಾಲದಲ್ಲಿ ಜರಾಸಂಧನನ್ನು ನೆಲಕ್ಕೆ ಅಪ್ಪಳಿಸಿ ಹುಡಿಯಲ್ಲಿ ಹೊರಳಿಸಿ
Page #583
--------------------------------------------------------------------------
________________
೫೭೮ / ಪಂಪಭಾರತಂ
ಕಂ
ನೋಡಿ
ನೆಗಟ್ಟಿ ಕಲಿತನದ ಜಾಗದ ಬಗೆ ತನ್ನೊಳ್ ನೆಗಟಿವತ್ತು ನೆಗಟ್ಟಿರೆ ಸಂದಂ | ಗಗಣಿತ ಗುಣಂಗೆ ಕರ್ಣಂ
ಗೊಗಸುಗುಮೇ ಕಟ್ಟು ಬೀರವಟ್ಟಮನರಸಾ ||
ಚಂ।।
೪೯
ರಥ ಯಾನಪಾತ್ರದಿಂ ಪರ
ರಥಿನೀ ಜಳನಿಧಿಯ ಪಾರಮಂ ಸಲ್ವ ಜಗ | ತಥಿತ ಭುಜದರ್ಪದಿಂದತಿ
ರಥಮಥನಂ ಕರ್ಣಧಾರನಲ್ಲನೆ ಕರ್ಣಂ ||
ವ|| ಎಂದು ನುಡಿದ ಕೃಪನ ಮಾತಂ ನೃಪಂ ಮನದಗೊಂಡು ಕರ್ಣನ ಮೊಗಮಂ
೫೦
ನಡುಗುವುದುಂತೆ ಪಾಂಡವ ಬಲಂ ನಿನಗರ್ಜುನನೆಂಬನೆಂದುಮು ಕುಡುಗಿ ಸುರುಳನೀಯೆಡೆಗೆ ಪೇ ಪೆರಾರ್ ದೊರೆ ವೀರಪಟ್ಟಮಂ | ತಡೆಯದೆ ಕಟ್ಟಿ ವೈರಿಗಳ ಪಟ್ಟನೆ ಪಾಕಿಸಿ ಕಾವುದನ್ನ ಬೆ
ಳೊಡೆಯುಮನೆನ್ನ ಪಟ್ಟಮುಮನನ್ನುಮನಂಗಮಹೀತಳಾಧಿಪಾ || ೫೧
ವ|| ಎಂಬುದುಮಂಗಾಧಿರಾಜಂ ನಿನ್ನಾಳಳೊಳಾನಾರ ದೊರೆಯೆನಗೆ ಕಾರುಣ್ಯಂ ಗೆಯ್ದೆಯಾಗಿ ಬೆಸಸಿದ ನಿನ್ನ ದಯೆಗೆಯ್ದ ವೀರವಟ್ಟಮೆಂಬುದನಗೆರಲ ಪಟ್ಟಮೆಂಬುದುಂ ಬದ್ದವಣಂ ಬಾಜಿಸಿ ಕರ್ಣನಂ ಕನಕಪೀಠದೊಳ್ ಕುಳ್ಳಿರಿಸಿ
ಮಲ್ಲಯುದ್ಧದಲ್ಲಿ ಹಿಡಿದು ಕಾಲಿನ ಕೆಳಕ್ಕೆ ಅಮುಕಿದ ಭುಜಬಲವನ್ನುಳ್ಳ ಭೀಮನನ್ನು ಗೆದ್ದ ಸಾಹಸವೂ ನಮ್ಮ ಸೈನ್ಯವನ್ನೆಲ್ಲ ತುಳಿದು ತುಳಿದು ಕೊಲ್ಲುತ್ತಿದ್ದ ಘಟೋತ್ಕಚನೆಂಬ ಕ್ರೂರರಾಕ್ಷಸನನ್ನು ಕೊಂದ ವೀರ್ಯವೂ ಲೋಕದ ಒಳಗೂ ಹೊರಗೂ ಪ್ರಸಿದ್ಧವಾಗಿವೆ. ೪೯. 'ಪ್ರಸಿದ್ಧವಾದ ಶೌರ್ಯದ ತ್ಯಾಗದ ರೀತಿಗಳೆರಡೂ ಅವನಲ್ಲಿ ಖ್ಯಾತಿಗೊಂಡಿವೆ. ಅಸಂಖ್ಯಾತಗುಣಗಳಿಂದ ಕೂಡಿದ ಕರ್ಣನಿಗೆ ಇದು ಅತಿಶಯವೇ ? ರಾಜನೇ ಅವನಿಗೆ ವೀರಪಟ್ಟವನ್ನು ಕಟ್ಟು. ೫೦. ರಥವೆಂಬ ನಾವೆಯಿಂದ ಶತ್ರುಸೇನಾಸಮುದ್ರದ ಆಚೆಯ ದಡವನ್ನು ತನ್ನ ಭುಜಬಲದಿಂದ ದಾಟಿಸಬಲ್ಲ ಶೂರನಾದ ಕರ್ಣಧಾರನಲ್ಲವೇ ಕರ್ಣ! ವ|| ಎಂದು ಹೇಳಿದ ಕೃಪನ ಮಾತನ್ನು ರಾಜನು ಒಪ್ಪಿ ಕರ್ಣನ ಮುಖವನ್ನು ನೋಡಿ-೫೧ 'ಕರ್ಣಾ! ಪಾಂಡವಸೈನ್ಯವು ಸುಮ್ಮನೆ ನಿನಗೆ ನಡುಗುತ್ತದೆ. ಅರ್ಜುನನೆಂಬುವನು ಯಾವಾಗಲೂ ಉತ್ಸಾಹಶೂನ್ಯನಾಗಿ ಮುದುರಿಕೊಳ್ಳುತ್ತಾನೆ. ಈ ಸ್ಥಾನಕ್ಕೆ ಮತ್ತಾರು ಅರ್ಹರು ? ಹೇಳು. ವೀರಪಟ್ಟವನ್ನು ತಡಮಾಡದೆ ಕಟ್ಟಿಕೊಂಡು ವೈರಿಗಳನ್ನು ಪಟ್ಟನೆ ಹಾರಿಹೋಗುವಂತೆ ಮಾಡಿ ನನ್ನ ಶ್ವೇತಚ್ಛತ್ರವನ್ನೂ ನನ್ನ ರಾಜಪಟ್ಟವನ್ನೂ ನನ್ನನ್ನೂ ಕಾಪಾಡಬೇಕು.' ವ|| ಎನ್ನಲು ಕರ್ಣನು ದುರ್ಯೋಧನಾ! ನಿನ್ನ ಸೇವಕರಲ್ಲಿ ನಾನು ಯಾರಿಗೆ ಸಮಾನ ? ನೀನು ಕರುಣೆಯಿಂದ ದಯಮಾಡಿ ಆಜ್ಞೆಮಾಡಿಕೊಟ್ಟ ಈ ವೀರಪಟ್ಟವೆಂಬುದು ನನ್ನ ಎಂಟುಬೆರಳಿನಗಲವಿರುವ ನನ್ನ ಹಣೆಗೆ ಕಟ್ಟುವ ಪಟ್ಟ ಎಂದನು. ಮಂಗಳವಾದ್ಯವನ್ನು ಬಾಜಿಸಿ ಕರ್ಣನನ್ನು ಚಿನ್ನದ
Page #584
--------------------------------------------------------------------------
________________
೫೨
ದ್ವಾದಶಾಶ್ವಾಸಂ | ೫೭೯ ಹರಿಣಿ |ಮೋರೆಯ ಪಣಿಗಳ ಭೋರೆಂದೂರಂತ ಮಂಗಳಗೀತಿಗಳ
ನೆರೆಯ ಗಣಿಕಾನೀಕಂ ಬಂದಾಡ ಪುಣ್ಯಫಲಂಗಳಿಂ | ತರಿಸಿ ಮಿಸಿಸುತ್ತಾಗಲ್ ತಾಂ ತನ್ನ ಕೆಯ್ಯೋಳೆ ಕಟ್ಟಿದಂ ಕುರುಪರಿವೃಢಂ ಕರ್ಣಂಗಾ ವೀರವಟ್ಟದ ಪಟ್ಟಮಂ ||
ವಗ ಅಂತು ವೀರವಟ್ಟಮಾ ವೀರನ ನೊಸಲೋಳಸದಳಮಸದುಪಾಶ್ರಯಂಬಡೆಯೆ ಕಟ್ಟಿ ನಿಜಾಂತಃಪುರ ಪರಿವಾರಂಬೆರಸು ಸೇಸೆಯಿಕ್ಕಿ ತನ್ನ ತುಡುವ ತುಡಿಗೆಗಳೆಲ್ಲಮಂ ನೆಯ ತುಡಿಸಿ ದೇವಸಬಳದ ಪದಿನೆಂಟು ಕೋಟಿ ಪೊನ್ನುಮಂ ತರಿಸಿಕೊಟ್ಟು ಮಣಿಮಯ ಮಂಡನಾಯೋಗದೊಳ್ ನಟಿಯ ಪಣ್ಯದ ಮದಾಂಧಸಿಂಧುರಮನೇಜಲ್ ತರಿಸಿಕೊಟ್ಟು ಬೀಡಿಂಗೆ ಪೊಗನ ಪೋಗೆ ಹಸಿಯ ಬೆಂಗವಂದು ಸುತ್ತಿದು ಪಗಲ೦ ತಡವಿಕಿದಂತೆ ಬೆಳಗುವ ಕೆಯೀವಿಗೆಗಳ ಬೆಳಗೆ ಬೆಳಗಾಗೆ ತಲೆಯೊಳ್ ನಾಲಗೆಯುಳ್ಳ ಬೂತುಗಳೆಲ್ಲ ಮಿಲ್ಲೆನ್ನದೀಯುತ್ತುಂ ನಿಜನಿವಾಸಕ್ಕೆ ತಂದು ನಿತ್ಯದಾನಕ್ಕೆಂದು ನಿಯೋಗಿಗಳ ತಂದು ಪುಂಜಿಸಿದ ಪಂಚರತ್ನದ ಪೊನ್ನರಾಶಿಗಳನರ್ಥಿ ಜನಕ್ಕೆ ಗೋಸನೆಯಿಟ್ಟು ಕುಡುವೆಟ್ಟು ನಾಯಕರ್ಗೆಲ್ಲಮುಡಲು ತುಡಲುಂ ಕೊಟ್ಟು ನೇಸಮ್ ಮೂಡುವಾಗ ತಮ್ಮ ಪಡೆಯನೀ ಮಾಯೆಯೊಳೊಡ್ಡಿಯೆಂದು ಪಡವಳರ್ಗ ಬೆಸಸಿ ನಿಜವಿಜಯತುರಗರಥಂಗಳನರ್ಚಿಸಿ ಪೊಡೆವಟ್ಟು ದರ್ಭಾಸರಣ ದೂಳಾಯಿರುಳಂ ಕಳೆದಾಗ
ಪೀಠದಲ್ಲಿ ಕುಳ್ಳಿರಿಸಿ ೫೨. ತಮಟೆಗಳು ಭೋರೆಂದು ಒಂದೇ ಸಮನಾಗಿ ಶಬ್ದಮಾಡುತ್ತಿರಲು ಮಂಗಳಗೀತೆಗಳು ಕೂಡಿರಲು ವೇಶೈಯರ ಸಮೂಹವು ಬಂದು ನೃತ್ಯಮಾಡುತ್ತಿರಲು ಕೌರವಶ್ರೇಷ್ಠನಾದ ದುರ್ಯೋಧನನು ಪುಣ್ಯತೀರ್ಥಗಳನ್ನು ತರಿಸಿ ಕರ್ಣನಿಗೆ ಸ್ನಾನಮಾಡಿಸಿ ಆಗ ತಾನೆ ತನ್ನ ಕಮ್ಮಿಂದಲೆ ವೀರಪಟ್ಟವನ್ನು ಹಣೆಗೆ ಕಟ್ಟಿದನು. ವ|| ಹಾಗೆ ಆ ವೀರಪಟ್ಟವು ಆ ವೀರನ ಹಣೆಯಲ್ಲಿ ಅತಿಶಯವಾಗಿ ಪ್ರಕಾಶಿಸಿ ವಿಶೇಷಾಶ್ರಯವನ್ನು ಪಡೆಯುವಂತೆ ಕಟ್ಟಿ ತನ್ನ ಅಂತಃಪುರ ಪರಿವಾರದೊಡನೆ ಕೂಡಿ ಅಕ್ಷತೆಯಿಂದ ಹರಸಿ ತಾನು ತೊಡುವ ಆಭರಣಗಳನ್ನೆಲ್ಲವನ್ನೂ ಅವನಿಗೆ ತುಂಬ ತೊಡಿಸಿದನು. ದೇವತೆಗಳ ಅಳತೆಯಲ್ಲಿ ಹದಿನೆಂಟುಕೋಟಿ ಸುವರ್ಣವನ್ನು ತರಿಸಿಕೊಟ್ಟನು. ರತ್ನಖಚಿತವಾದ ಅಲಂಕಾರಗಳಿಂದ ಪೂರ್ಣವಾಗಿ ಸಿದ್ಧಪಡಿಸಿದ ಮದ್ದಾನೆಯನ್ನು ಏರುವುದಕ್ಕೆ ತರಿಸಿಕೊಟ್ಟು ಬೀಡಿಗೆ ಹೋಗು ಎಂದು ಕಳುಹಿಸಿ ಕೊಟ್ಟನು. ಕರ್ಣನು ಆನೆಯ ಬೆನ್ನಿಗೆ ಸುತ್ತಲೂ ವ್ಯಾಪಿಸಿ ಹಗಲನ್ನು ದೊಡ್ಡದು ಮಾಡಿದ ಹಾಗೆ ಬೆಳಗುತ್ತಿರುವ ಕೈದೀವಟಿಗೆಗಳ ಬೆಳಕೇ ಬೆಳಕಾಗಿರಲು ತಲೆಯಲ್ಲಿ ನಾಲಗೆಯಿರುವ ಎಲ್ಲ ಪ್ರಾಣಿಗಳಿಗೂ ಇಲ್ಲ ಎನ್ನದೆ ದಾನಮಾಡುತ್ತ ತನ್ನ ಮನೆಗೆ ಬಂದನು. ನಿಯೋಗಿಗಳು ತಂದು ರಾಸಿ ಹಾಕಿಸಿದ ಪಂಚರತ್ನದ ಮತ್ತು ಚಿನ್ನದ ರಾಶಿಗಳನ್ನು ಬೇಡುವವರಿಗೆ ಕೂಗಿ ಕರೆದು ದಾನಮಾಡಹೇಳಿ ನಾಯಕರುಗಳಿಗೆಲ್ಲ ಉಡುವುದಕ್ಕೂ ತೊಡುವುದಕ್ಕೂ ಕೊಟ್ಟು ಸೂರ್ಯೊದಯವಾದಾಗ ನಮ್ಮ ಸೈನ್ಯವನ್ನು ಈ ರೀತಿಯಲ್ಲಿ ರಚಿಸಿ ಎಂದು ನಾಯಕರಿಗೆ ಆಜ್ಞೆ ಮಾಡಿ ತನ್ನ ವಿಜಯಶಾಲಿಯಾದ ಕುದುರೆ ಮತ್ತು ತೇರುಗಳನ್ನು ಪೂಜೆ ಮಾಡಿ ನಮಸ್ಕರಿಸಿ ದರ್ಭಾಸನದಲ್ಲಿ ಆ
Page #585
--------------------------------------------------------------------------
________________
೫೮೦ | ಪಂಪಭಾರತಂ ಕ೦ll ಉದಯಗಿರಿ ತಟದೊಳುದಯಿಸು
ವದಿತಿಪ್ರಿಯಪುತ್ರನಲ್ಲದಿತ್ತೊರ್ವಂ ಭಾ | ನು ದಿಗ್ದನೆನಿಪ ತೇಜದ
ಪೊದಚೆಯಿಂ ಜನದ ಮನಮನಲೆದಂ ಕರ್ಣಂ || ೫೩ ವ|| ಆಗಳಾ ಚತುರ್ವೇದ ಪಾರಗರಪ್ಪ ಧರಾಮರರ್ಗೆ ನಿತ್ಯದಾನಮಂ ಕೊಟ್ಟು ಸಿಡಿಲ ಬಳಗಮನೊಳಕೊಂಡಂತೆ ತಟತಟಿಸಿ ಪೊಳೆವ ಕೆಯ್ತುಗಳ ತೀವಿದ ನಾರುವದ ಚೋರಗುದುರೆಗಳೊಳ್ ಪೂಡಿದ ಹಸುರ್ವೊನ್ನ ರಥಮನೇಲೆ ಮುನ್ನೊರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿಟೆದು ಮೂಟು ಬಲವಂದು ತದೀಯ ಪಾದಪದ್ಮಂಗಳಂ ತಲೆಯೊಳಿಟ್ಟುಕೊಂಡು ಕಂn. ಆಮಾತಡೆಯದೆ ಮುಳಿದುಂ
ನಿಮಡಿಯಂ ನೋಯ ನುಡಿದನುಜದೇಳಿಸಲೇ | ನೆಮ್ಮಳವೆ ಮಜವುದಾ ಮನ ದುಮ್ಮಚ್ಚರಮಜ್ಜ ನಿಮ್ಮನೆರೆಯಲೆ ಬಂದಂ || ಧುರದೊಳ್ ನಿಮಡಿಯುಂ ಗೆಲ ಲರಿಯವುಮಾಪಾಂಡುಸುತರನೆಮಂದಿಗರ | ಚರಿಯಲ್ಲಿ ಗೆಲ್ವರೆಂಬುದು ಹರಿಗನೊಳಿದೆಂತುಮನ್ನ ಚಲಮನೆ ಮೆರೆವೆಂ || ೫೫
ರಾತ್ರಿಯನ್ನು ಕಳೆದನು. ೫೩. ಉದಯಪರ್ವತದ ದಡದಲ್ಲಿ ಹುಟ್ಟುವ ಅದಿತಿದೇವಿಯ ಪ್ರಿಯಪುತ್ರನಾದವನೇ ಅಲ್ಲದೆ ಈ ಕಡೆ ಬೇರೊಬ್ಬ ಸೂರ್ಯನು ಹುಟ್ಟಿದ್ದಾನಲ್ಲವೇ ಎನ್ನುವಂತಿರುವ ತೇಜಸ್ಸಿನ ವ್ಯಾಪ್ತಿಯಿಂದ ಜನರ ಮನಸ್ಸನ್ನು ಕರ್ಣನು ಆಕರ್ಷಿಸಿದನು. ವll ಆಗ ನಾಲ್ಕು ವೇದಗಳಲ್ಲಿ ಪಂಡಿತರಾಗಿರುವ ಬ್ರಾಹ್ಮಣರಿಗೆ ನಿತ್ಯದಾನವನ್ನು ಕೊಟ್ಟು ಸಿಡಿಲರಾಶಿಯನ್ನು ಒಳಗೊಂಡಿರುವ ಹಾಗೆ ಥಳಥಳಿಸಿ ಹೊಳೆಯುವ ಆಯುಧಗಳು ತುಂಬಿರುವ, ವಿವಿಧಜಾತಿಯ ಕುದುರೆಗಳನ್ನು ಹೂಡಿರುವ ಹಸುರು ಚಿನ್ನದ ರಥವನ್ನು ಏರಿ ಮೊದಲು ಒಬ್ಬನೇ (ಏಕಾಕಿಯಾಗಿ) ಬಾಣದ ಹಾಸಿಗೆಯಲ್ಲಿ ಮಲಗಿದ್ದ ಭೀಷ್ಮನ ಹತ್ತಿರಕ್ಕೆ ಬಂದು ತೇರಿನಿಂದಿಳಿದು ಮೂರುಸಲ ಪ್ರದಕ್ಷಿಣೆ ಮಾಡಿ ಅವನ ಪಾದಕಮಲಗಳನ್ನು ತನ್ನ ತಲೆಯಲ್ಲಿಟ್ಟು ಹೇಳಿದನು. ೫೪. 'ನಾನು ಮಾತನಾಡುವ ರೀತಿಯನ್ನು ತಿಳಿಯದೆ ಕೋಪಿಸಿಕೊಂಡು ನಿಮ್ಮ ಮನಸ್ಸು ನೋಯುವ ಹಾಗೆ ಮಾತನಾಡಿದೆ. ಸುಮ್ಮನೆ ನಿಮ್ಮನ್ನು ತಿರಸ್ಕಾರಮಾಡಲು ಸಾಧ್ಯವೇನು ? ಅಜ್ಜ, ಮನಸ್ಸಿನ ಆ ಹೆಚ್ಚಾದ ಕೋಪವನ್ನು ಮರೆತುಬಿಡುವುದು. ನಿಮ್ಮನ್ನು ಪ್ರಾರ್ಥಿಸುವುದಕ್ಕಾಗಿಯೇ ಬಂದಿದ್ದೇನೆ' ೫೫. ಯುದ್ದದಲ್ಲಿ (ನಿಮ್ಮ ಪಾದಗಳೂ) ನೀವೂ ಗೆಲ್ಲುವುದಕ್ಕೆ ಅಸಾಧ್ಯರಾದ ಆ ಪಾಂಡವರನ್ನು ನಮ್ಮಂತಹವರು ಗೆಲ್ಲುವರೆಂಬುದು ಆಶ್ಚರ್ಯವಲ್ಲವೇ? ಆದರೂ ಅರ್ಜುನನೊಡನೆ ಯುದ್ಧ ಮಾಡಿ
Page #586
--------------------------------------------------------------------------
________________
ದ್ವಾದಶಾಶ್ವಾಸಂ | ೫೮೧
ವ|| ಎಂಬುದುಂ ಕುರುಪಿತಾಮಹನಹರ್ಪತಿಸುತನನಿಂತೆಂದಂ
ಅನವದ್ಯಂ || ನುಡಿವುದಂ ಪತಿಭಕ್ತಿಯ ಪಂಪಿಂ ನೀಂ ನುಡಿದ ಪೆಜತಂದದಿಂ ನುಡಿದೆಯ ಮದಾಯಮಮೋಘಂ ಸೂಳ್ಕೊಡೆಯನಗಕ್ಕುಮಿ | ನ್ನೆಡೆಯೊಳೆಂದಮದೆಂದುದದೇಂ ತಪ್ಪಾದುದೆ ನಮ್ಮೋವಜ ಜಸಂ ಬಡದ ಭಾರ್ಗವರಪುದಂದಂ ನಂಟರುಮಂಗಮಹೀಪತೀ ||
ವ|| ಅದಲ್ಲದೆಯುಂ ನೀನೆಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮನಿನ್ನನ ನಚ್ಚಿದಂ ಕುರುಮಹೀಪತಿ ನಿನ್ನ ಶರಾವಳಿಗಳ ಮು
ಉ||
ನನ್ನಡುಗುತ್ತುಮಿರ್ಪುದರಿಸಾಧನಸಂಪದಮಂತೆ ಶಸ್ತ್ರ ಸಂ | ಪನ್ನನೆ ಆಗಿ ಶಲ್ಯನನ ಸಾರಥಿಯಾಗಿರೆ ಮಾಡಿ ಕಾದು ನೀಂ
ನಿನ್ನಯ ಬಲ್ಲ ಮಾಯೊಳಿದಂ ನುಡಿದಂ ನಿನಗಂಗವಲ್ಲಭಾ || 982
ಕಂ
ಎನೆ ನೆಗಟ್ಟಿ ಕುಲದ ಚಲದೊ
ಜೈನ ಭೂಪನನನಗೆ ತೇರನೆಸಗೆಂದೊಡೆ ಸ |
ದ್ವಿನಯಮುಟ್ಟಿದುರ್ಕಿ ಕುಲಹೀ
ನನೆಂಬ ಪರಿವಾದಮಿಗಳೆನಗಾಗಿರದೇ II
ಆಯದ ಕಟ್ಟಾಳ್ ನೀಂ ಮೊದ
ಲೀ ಯುಗದೊಳ್ ಪರುಳರ ಸಾವಕ್ಕೆ ಜಯ | ಶ್ರೀಯಕ್ಕೆ ಧಾತ್ರನಿಂ ಕ
ಟ್ಯಾಯದ ಬಡೆಸಂದು ನಿಮ್ಮನಾಂ ಮೆಚ್ಚಿಸುವಂ
と
Res
೫೯
ನನ್ನ ಛಲವನ್ನೇ ಪ್ರಕಾಶಪಡಿಸುತ್ತೇನೆ. ವ|| ಎನ್ನಲು ಕುರುಪಿತಾಮಹನಾದ ಭೀಷ್ಮನು ಸೂರ್ಯಪುತ್ರನಾದ ಕರ್ಣನಿಗೆ ಹೀಗೆಂದನು. ೫೬. ಹೇಳುವುದನ್ನು ನೀನು ಸ್ವಾಮಿ ಭಕ್ತಿಯ ಆಧಿಕ್ಯದಿಂದ ಹೇಳಿದ್ದೀಯೆ, ಬೇರೆ ರೀತಿಯಿಂದ ನುಡಿಯಲಿಲ್ಲ: 'ನನ್ನ ಶಕ್ತಿಯು ಬೆಲೆಯಿಲ್ಲದ್ದು, ಸರದಿಯನ್ನು ಪಡೆಯುವುದಕ್ಕೆ ಈ ಸನ್ನಿವೇಶದಲ್ಲಿ ನನಗೂ ಅವಕಾಶವುಂಟು' ಎಂದು ಹೇಳುವುದು ತಪ್ಪಾದುದೇನು? ನಮ್ಮಿಬ್ಬರ ಉಪಾಧ್ಯಾಯರಾಗಿದ್ದವರು ಯಶಶಾಲಿಗಳಾದ ಪರಶುರಾಮರಾದುದರಿಂದ ಕರ್ಣ, ನಾವು ನಂಟರೂ ಆಗಿದ್ದೇವೆ. ವ|| ಅಷ್ಟೇ ಅಲ್ಲದೆ ನೀನು ನಮಗೆ ಕುಂತಿ ಮತ್ತು ಗಾಂಧಾರಿಯರ ಮಕ್ಕಳಾದ ಪಾಂಡವ ಕೌರವರ ಹಾಗೆಯೇ ಮೊಮ್ಮಗನಪ್ಪ. ೫೭. ಕೌರವ ಮಹಾರಾಜನು ನಿನ್ನನ್ನೇ ನಂಬಿದ್ದಾನೆ. ನಿನ್ನ ಈ ಬಾಣಗಳ ಸಮೂಹಕ್ಕೆ ಶತ್ರುಸಾಧನಸಂಪತ್ತೆಲ್ಲ ಮೊದಲೇ ನಡುಗುತ್ತಿದೆ. ಹಾಗೆಯೇ ಆಯುಧಸಂಪತ್ತುಳ್ಳವನಾಗಿ ಶಲ್ಯನನ್ನೇ ಸಾರಥಿಯನ್ನಾಗಿರುವಂತೆ ಮಾಡಿಕೊಂಡು ನಿನಗೆ ತಿಳಿದ ರೀತಿಯಲ್ಲಿ ಯುದ್ಧಮಾಡು ಕರ್ಣ, ಇದು ನನ್ನ ಸೂಚನೆ, ಅಷ್ಟೆ, ೫೮. ಎನ್ನಲು ಒಳ್ಳೆಯ ಕುಲವನ್ನೂ ಚಲವನ್ನೂ ಉಳ್ಳ ರಾಜನಾದ ಶಲ್ಯನನ್ನು ನನಗೆ ಸಾರಥಿಯಾಗಿರು ಎಂದು ಹೇಳಿದರೆ ಉಚಿತವಾದ ವಿನಯವನ್ನು ಬಿಟ್ಟು ಗರ್ವಿಸಿ ನುಡಿದ ಹೀನಕುಲದವನೆಂಬ ಅಪವಾದವು ಈಗ ನನಗೆ ತಟ್ಟುವುದಿಲ್ಲವೆ? ೫೯. ಈ ಯುಗದ ಶಕ್ತಿಯುತರಾದವರಲ್ಲಿ ನೀವು ಮೊದಲಿಗರು. ಬೇರೆಯವರಿದ್ದಾರೆಯೇ? ಸಾವಾಗಲಿ
Page #587
--------------------------------------------------------------------------
________________
೫೮೨ | ಪಂಪಭಾರತ
ವ|| ಎಂಬುದು ಸಿಂಧುತನೂಜನಂಗಾಧಿರಾಜನ ನಯದ ವಿನಯದ ಪಾಳೆಯ ಪಸುಗೆಯ ನುಡಿಗಳೆ ಮನಗೊಂಡೀತಂ ಕುಲಹೀನನಲ್ಲನುಭಯಕುಲ ಶುದ್ಧನಾಗಲೆ ವೇಚ್ಚುಮೆಂದು ನಿಶ್ಚಿಸಿ ನೀನಮಗಿಂಬು ಕೆಯೊಡಂ ಸುಯೋಧನನ ರಾಜ್ಯಮನೊಲ್ಗೊಡಂ ಶಲ್ಯನನ ಸಾರಥಿ ಮಾಡಿ ಕಾದುವುದೆಂದು ಪರಸಿ ಪೋಗೆಂಬುದುಂ ಮಹಾ ಪ್ರಸಾದವೆಂದು ಪೊಡೆವಟ್ಟು ಸಂಗ್ರಾಮಭೂಮಿಗ ವಂದು ಹಸ್ತಶ್ವರಥ ಪದಾತಿಬಲಂಗಳನೊಂದುಮಾಡಿ ಮಕರವೂಹಮನೊಡ್ಡಿದಂ ಪಾಂಡವ ಪತಾಕಿನಿಯುಮರ್ಧಚಂದ್ರವೂಹಮನೊಡ್ಡಿ ನಿಂದುದಿತ್ತ ಪರಸೈನ್ಯಭೈರವಂ ಪುರುಷೋತ್ತಮನನಿಂತೆಂದಂಮಗ ಸll ಪಿರಿದುಂ ಕಾಯ್ಕಿಂದಮನ್ನೊಳ್ ನೆರೆದಿಯಲೆ ಪೂಣ್ಮತ್ತ ಸಂಸಪ್ತಕರ್ಕಲ್
ಕರೆವರ್ ಮತ್ತಿತ್ತ ಕರ್ಣಂ ಚಲ ಚಲದಿಜಿಯಲ್ ನಿಂದನೆಗೆಯುದೆಂದಾಂ | ನರನಂ ಮುನ್ನಂ ತ್ರಿಗರ್ತಾಧಿಪ ಬಲಮನದಂ ನುರ್ಗು ನೀನೆಂದು ತೇರಂ ಹರಿ ಕೊಂಡುಯ್ಯನಿತ್ತೊರ್ಮೊದಲುಭಯಬಲಂ ತಾಗಿ ಕಾದಿತ್ತು ಬೇಗಂ || ೬೦
ವ|| ಅಂತು ಚತುರ್ವಲಂಗಳೊಂದೊಂದಳ್ ಕಾದ ನಟ್ಟ ಸರಲ್ಕಿಡಿದು ಕರಗದ ಧಾರಯಂತೆ ಸುರಿವ ನೆತ್ತರ ಧಾರೆಗಳಂಬಿರಿವಿಡುವಿನಮಮಿತ್ತಮುರ್ಚಿವೋಪ ಕಿತ್ತಂಬುಗಳಿಂ
ಜಯಸಂಪದವಾಗಲಿ ವಿಧಾತ್ರನಿಂದ (ವಿಧಿವಶದಿಂದ) ಹೆಚ್ಚಿನ ಶೌರ್ಯದ ದಾರಿಯನ್ನೇ ಹಿಡಿದು ನಿಮ್ಮನ್ನು ಮೆಚ್ಚಿಸುತ್ತೇನೆ. ವ|| ಎನ್ನಲು ಭೀಷ್ಮನು ಕರ್ಣನ ನೀತಿಯಿಂದಲೂ ನಮ್ರತೆಯಿಂದಲೂ ಧರ್ಮದಿಂದಲೂ (ಸಂಪ್ರದಾಯಬದ್ದವಾದ) ಕೂಡಿದ ವಿವೇಕದ ಮಾತುಗಳಿಗೆ ಮನಸ್ಸಿನಲ್ಲಿ ಸಂತೋಷಸಿ (ಒಪ್ಪಿ) ಇವನು ಹೀನಕುಲದವನಲ್ಲ: (ತಾಯಿ ತಂದೆಗಳ) ಎರಡು ವಂಶಗಳ ಕಡೆಯಿಂದಲೂ ಶುದ್ಧನೇ ಆಗಿರಬೇಕು ಎಂದು ನಿಶ್ಚಿಸಿ ನೀನು ನನಗೆ ಹಿತವಾದುದನ್ನು ಮಾಡುವುದಾದರೆ ದುರ್ಯೊಧನನ ರಾಜ್ಯವನ್ನು ಪ್ರೀತಿಸುವುದಾದರೆ ಶಲ್ಯನನ್ನೇ ಸಾರಥಿಯನ್ನಾಗಿ ಮಾಡಿ ಕಾದುವುದು ಎಂದು ಹರಸಿ ಬೀಳ್ಕೊಟ್ಟನು. ಕರ್ಣನು 'ಇದು ಪರಮಾನುಗ್ರಹ' ಎಂದು ನಮಸ್ಕಾರ ಮಾಡಿ ಯುದ್ಧರಂಗಕ್ಕೆ ಬಂದು ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಒಟ್ಟಿಗೆ ಸೇರಿಸಿ ಮೊಸಳೆಯ ಆಕಾರದ ಸೇನಾರಚನೆಯನ್ನು ಮಾಡಿ ಚಾಚಿದನು. ಪಾಂಡವಸೈನ್ಯವೂ ಅರ್ಧಚಂದ್ರಾಕಾರದ ರಚನೆಯನ್ನು ರಚಿಸಿ ಚಾಚಿ ನಿಂತಿತು. ಈ ಕಡೆ ಪರಸೈನ್ಯಭೈರವನಾದ ಅರ್ಜುನನು ಪುರುಷೋತ್ತಮನಾದ ಕೃಷ್ಣನನ್ನು ಕುರಿತು ಹೀಗೆಂದನು. ೬೦, ಸಂಸಪಕರುಗಳು ವಿಶೇಷಕೋಪದಿಂದ ಕೂಡಿ ನನ್ನಲ್ಲಿ ಯುದ್ದಮಾಡಲು ಪ್ರತಿಜ್ಞೆ ಮಾಡಿ ಆ ಕಡೆಗೆ ಕರೆಯುತ್ತಿದ್ದಾರೆ. ಮತ್ತು ಈ ಕಡೆ ಕರ್ಣನು ವಿಶೇಷಛಲದಿಂದ ಯುದ್ಧಮಾಡಲು ನಿಂತಿದ್ದಾನೆ. ಏನು ಮಾಡುವುದು ಎಂದು ಕೇಳಿದನು. 'ಮೊದಲು ತ್ರಿಗರ್ತದೇಶದ ರಾಜನ ಸೈನ್ಯವನ್ನು ಪುಡಿಮಾಡು' ಎಂದು ಹೇಳಿ ತೇರನ್ನು ಕೃಷ್ಣನು ಆ ಕಡೆಗೆ ನಡೆಸಿಕೊಂಡು ಹೋದನು. ಈ ಕಡೆ ತಕ್ಷಣವೇ ಎರಡು ಸೈನ್ಯಗಳೂ ಸಂಘಟಿಸಿ ವೇಗವಾಗಿ ಯುದ್ಧಮಾಡಿದವು. ವ|| ಹಾಗೆ ನಾಲ್ಕು ಸೈನ್ಯಗಳೂ ಒಂದರೊಡನೊಂದು ಸೇರಿ ಯುದ್ಧಮಾಡಲು ನಾಟಿದ ಬಾಣವನ್ನೇ ಅನುಸರಿಸಿ ಗಿಂಡಿ(ಕರಗ)ಯಿಂದ ಸುರಿಯುವ ಧಾರೆಯಂತೆ
Page #588
--------------------------------------------------------------------------
________________
ದ್ವಾದಶಾಶ್ವಾಸಂ /೫೮೩ ಸುರುಳುರುಳ ಧನುರ್ಧರರುಮಂ ಧನುರ್ಧರರೆಚ್ಚ ಶರನಿಕರಂಗಳಿಂ ನೆಟ್ ಪೇಲುವಂತಂಬನೆ ಪೇಟೆ ಪೆಡೆಗೆಡೆದ ತುರುಷ್ಕ ತುರಂಗಂಗಳುಮಂ ಕೆದಟ ಬೆದಲೆ ಬೆಂಕೊಂಡು ತೊತ್ತದುಟಿವ ಮದೇಭಂಗಳುಮಂ ಮದೇಭಂಗಳನಾರ್ದು ಬಿಟ್ಟಿಕ್ಕುವ ನಿಷಾದಿಗಳಟೆಯ ಪೊರಜೆವಿಡಿದು ಕೊರಲ ಬಳಿಗಳೊಳೆ ಕಾಲ್ಲೋದು ಪರಿಯಿಸುವ ರಸತ್ತಾರುಗರುಮಂ ಆ ರಸತ್ತಾರುಗರಿಡುವಿಟ್ಟಿಯ ಪಿಡಿಕುತ್ತಿನ ಕಕ್ಕಡೆಯ ಕೋಳೆ ಮರಪಟಲಂ ನಾಯ್ಡು ಕೆಡೆದನಾರೂಢದಿಂ ಪೇಸೇ ತುಳಿದು ಕೊಲ್ವ ಕರಿಗಳ ಕರ ವದನ ಗಾತ್ರ ಲಾಂಗೂಲ ಘಾತದಿಂದಮುಡಿದು ಕೆಡೆದ ರಥಂಗಳಂ ರಥಂಗಳಿನ್ನೆಡೆಯೊಳ್ ಕಿಂಕೊಯಾಗಿ ಪತ್ತ ಕೆನ್ನೆತ್ತರೊಳ್ ಮೆತ್ತಿ ರೂಪಡೆಯಲಾಗದಂತಿರ್ದ ವೀರಭಟರಗುರ್ವ೦ ಪಡೆಯೆ ಕರ್ಣನನೇಕ ವಿಕರ್ಣಕೋಟಿಗಳಿಂ ಪಾಂಡವ ಬಲಮನಸುಂಗೊಳ ಕಾದುವಲ್ಲಿ ಪಾಂಡವ ಬಲದೊಳೆ ಸರಟಿಕೆಯ ನಾಯಕಂ ಕೃತವರ್ಮಂ ಕೌರವಬಲದ ನಾಯಕಂ ಚಿತ್ರಸೇನನನಗುರ್ವಾಗೆ ತಾಗಿ
ಕಂ ಚಿತ್ರ ಪತತ್ರಿಯೊಳೆಯಪ ಪ
ತತ್ರಿಗಳಂ ಕಡಿದು ಚಿತ್ರಸೇನನಾಗಳ್ |
ಚಿತ್ರವಧಮಾಗ ಕೊಂದೊಡ
ಧಾತ್ರಿಗೆ ತಾಂ ಚಿತ್ರಮಾಯ್ತು ಭುಜಬಲಮವನಾ ||
೬೧
ಸುರಿಯುತ್ತಿರುವ ರಕ್ತಧಾರೆಗಳು ಪ್ರವಾಹವಾಗಿ ಹರಿದುವು. ಆ ಕಡೆ ಈ ಕಡೆ ಭೇದಿಸಿ ಹೋಗುವ ಸಣ್ಣ ಬಾಣಗಳಿಂದ ಸುರುಳಿಗೊಂಡು ಉರುಳಿಬಿದ್ದಿರುವ ಬಿಲ್ದಾರ ರಿಂದಲೂ ಬಿಲ್ದಾರರು ಹೊಡೆದ ಬಾಣಗಳ ಸಮೂಹದಿಂದ ಮುಳ್ಳುಹಂದಿಗಳನ್ನು ಹೇರುವಂತೆ ಬಾಣವನ್ನು ಹೇರಿ ಹಿಂದೆಬಿದ್ದ ತುರುಕದೇಶದ ಕುದುರೆಗಳಿಂದಲೂ ಚೆಲ್ಲಾಪಿಲ್ಲಿಯಾಗಿ ಹೆದರಿ ಹಿಂಬಾಲಿಸಿ ಅಜ್ಜುಗುಜ್ಜಾಗಿ ತುಳಿದು ಹಾಕುವ ಮದ್ದಾನೆಗಳಿಂದಲೂ ಮದ್ದಾನೆಗಳನ್ನು ಕೂಗಿಕೊಂಡು ಭೂಬಿಡುವ ಮಾವಟಿಗರು ನಾಶವಾಗಲು ಹಗ್ಗವನ್ನೇ ಹಿಡಿದುಕೊಂಡು ಕತ್ತಿನ ಪಕ್ಕದಲ್ಲಿಯೇ ತಮ್ಮ ಕಾಲನ್ನು ಪೋಣಿಸಿ ಹರಿಯಿಸುವ ಹೊಸ ಮಾವಟಿಗರಿಂದಲೂ ಆನೆಯ ಮೇಲೆಯೇ ಕುಳಿತು ಯುದ್ಧಮಾಡುವವರಿಂದಲೂ ಆ ಗಜಾರೋಹಕರು ಎಸೆಯುತ್ತಿರುವ ಈಟಿಯ ಹೊಡೆತಕ್ಕೆ ಚಿಮ್ಮಿ ಕೆಳಗೆ ಬಿದ್ದವರನ್ನು ತುಳಿಯುತ್ತಿರುವ ಆನೆಗಳಿಂದಲೂ ಆನೆಗಳ ಸೊಂಡಿಲು, ಮುಖ, ಶರೀರ ಮತ್ತು ಬಾಲಗಳ ಪೆಟ್ಟಿನಿಂದ ಒಡೆದು ಕೆಳಗೆ ಬಿದ್ದ ತೇರುಗಳಿಂದಲೂ ತೇರಿನ ಇಕ್ಕಟ್ಟುಗಳಲ್ಲಿ ಕೆಸರಿನ ಹಳ್ಳವಾಗಿ ಹೆತ್ತು ಹೆಪ್ಪುಗೊಂಡಿರುವ ಕೆಂಪುರಕ್ತದಲ್ಲಿ ಅಂಟಿಕೊಂಡು ಆಕಾರವನ್ನು (ರೂಪನ್ನು) ತಿಳಿಯುವುದಕ್ಕಾಗದಂತೆ ವಿರೂಪವಾಗಿದ್ದರಿಂದಲೂ ಭಯವನ್ನು ಉಂಟುಮಾಡುವಂತೆ ಕರ್ಣನು ಅನೇಕ ಬಾಣಸಮೂಹಗಳಿಂದ ಪಾಂಡವಸೈನ್ಯದೊಡನೆ ಪ್ರಾಣಾಪಹಾರಮಾಡುವ ರೀತಿಯಲ್ಲಿ ಯುದ್ಧಮಾಡುತ್ತಿರಲು ಪಾಂಡವಸೈನ್ಯದ ಪ್ರಖ್ಯಾತನಾದ ಕೃತವರ್ಮನೂ ಕೌರವಬಲ ನಾಯಕನಾದ ಚಿತ್ರಸೇನನೂ ಭಯಂಕರವಾದ ರೀತಿಯಲ್ಲಿ ಕಾದಲು ತೊಡಗಿದರು. ೬೧. ವಿವಿಧರೀತಿಯಲ್ಲಿ ಮೇಲೆಬೀಳುವ ಬಾಣಗಳನ್ನು ಅಂತಹ ಬಾಣಗಳಿಂದಲೇ ಕಡಿದು ಚಿತ್ರಸೇನನನ್ನು ವಿಚಿತ್ರವಾದ ರೀತಿಯಲ್ಲಿ ಕೊಲ್ಲಲು ಅವನ ಭುಜಬಲವು
Page #589
--------------------------------------------------------------------------
________________
೫೮೪) ಪಂಪಭಾರತಂ
ವll ಅಂತು ಕೌರವಬಲಪ್ರಧಾನನಾಯಕನಷ್ಟ ಚಿತ್ರನಂ ಕೃತವರ್ಮನ ಕಮ್ಮೊಳತೀತ ನಾದದುರ್ಕೇವೈಸಿಕಂil ಅತಿ ಚಿತ್ರಂ ಚಿತ್ರನವಿ
ಶ್ರುತ ಶೌರಮಿದೆನಿಸಿ ತಾಪ ಚಿತ್ರನನಂತಾ | ಪ್ರತಿವಿಂಧ್ಯಂ ವಿಂಧ್ಯಾಚಲ . ಪತಿಯವೊಲವಿಚಲಿತನಾತನಂ ಬಂದಾಂತಂ || ಆಂತನ ಮೇಲೆ ಶಿತ ಶರ ಸಂತತಿಯಂ ಸುರಿಯೆ ನೋಡಿ ಶರಪರಿಣತಿಯಂ | ತಾಂ ತೋರ್ಪನನಗೆನುತಿರ ದಂತನಿತುಮನೊಡನೆ ಕಡಿದನೆಡೆಯೋಳೆ ಚಿತ್ರಂ | ೬೩ ಕಡಿದೋಡ ಕಡುಪಿಂದಂ ಕಿಡಿ ಕಿಡಿಯಾಗಿ ಶಿತಾಸ್ತನಿಕರಮಂ ಪ್ರತಿವಿಂಧ್ಯಂ | ಕಡಿದವನ ರಥಮನೂರ್ಮಯ
ಕಡಿದಂ ತಲೆಯುಮನದೊಂದು ದಾರುಣಶರಧಿಂ || ವ|| ಅಂತು ಚಿತ್ರನಂ ಕೊಂದು ಕುರುಕ್ಷೇತ್ರದೊಳ್ ತನ್ನ ಮಾತ ಮಾತಾಗೆ ಕೌರವ ಬಲಮಲ್ಲಮಂ ಪ್ರತಿವಿಂಧ್ಯನವಂದ್ಯ ಕೋಪೋದ್ರೇಕದಿಂದಾಸ್ಪೋಟಿಸಿ ಕೊಲ್ದಾಗಳ್ಮll ಕುರುಸೈನ್ಯಾಂಭೋಧಿ ತೊಳೆಯುಗಿದಪುದಿದನಾರಿಲ್ಲಿ ಕೆಯೊಲ್ವರೀ ಸಂ
ಗರದೊಳ್ ನಿಲ್ಯನ್ನರಾರೆಂಬೆಡೆಯೊಳಿದಿರೊಳಾನಕ್ಕೆ ಬಂದಿರ್ದನಂದ | ಇರುಮಂ ಸಂತೈಸಿ ಕಣ್ಣಲ್ ಕಣಿ ಪೆಜ್ ನೊಸಲೊಳ್ ಚಂಡ
ದೋರ್ದಂಡದೊಳ್ ಕಂ ಧರದೊಳ್ ತನನುತ್ತಮಾಂಗಾಂತರದೊಳೆಸೆಯ ನಿಂದಾಂತನಾಚಾರಪುತ್ರಂ || ೬೫
ಭೂಮಿಗೇ ವಿಚಿತ್ರವಾಯಿತು. ವll ಹಾಗೆ ಕೌರವಸೈನ್ಯದ ಮುಖ್ಯ ಸೇನಾಧಿಪತಿಯಾದ ಚಿತ್ರಸೇನನು ಕೃತವರ್ಮನ ಕಯ್ಯಲ್ಲಿ ಸತ್ತುದಕ್ಕೆ ದುಃಖಪಟ್ಟು ೬೨. ಈ ಹಿಂದೆಂದೂ ಕೇಳದೆಯೇ ಇದ್ದ ಈ ಚಿತ್ರನ ಶೌರ್ಯವು ಬಹಳ ಆಶ್ಚರ್ಯಕರವಾದುದು ಎನ್ನಿಸಿಕೊಂಡು ಮೇಲೆಬೀಳುವ ಚಿತ್ರನನ್ನು ಶ್ರೇಷ್ಠವಾದ ವಿಂಧ್ಯಾಚಲ ಪರ್ವತದಂತೆ ಸ್ಥಿರವಾಗಿರುವ ಪ್ರತಿವಿಂಧ್ಯನು ಬಂದು ಎದುರಿಸಿದನು. ೬೩. ಅವನ ಮೇಲೆ ಹರಿತವಾದ ಬಾಣಗಳ ಸಮೂಹವನ್ನು ಸುರಿಯಲು ನೋಡಿ ತಾನು ತನ್ನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನನ್ನ ಮೇಲೆ ತೋರಿಸುತ್ತಾನೆಯಲ್ಲವೇ ಎನ್ನುತ್ತ ಸಾವಕಾಶ ಮಾಡದೆ ಆ ಅಷ್ಟನ್ನೂ ತಕ್ಷಣವೇ ಚಿತ್ರನು ಮಧ್ಯದಲ್ಲಿಯೇ ಕಡಿದುಹಾಕಿದನು. ೬೪. ವೇಗದಿಂದ . ಕಿಡಿಕಿಡಿಯಾಗಿ ಬರುತ್ತಿರುವ ಹರಿತವಾದ ಬಾಣಗಳ ಸಮೂಹವನ್ನು ಪ್ರತಿವಿಂಧ್ಯನು ಕತ್ತರಿಸಿ ಅವನ ತೇರನ್ನೂ ತಲೆಯನ್ನೂ ಒಂದು ಭಯಂಕರವಾದ ಬಾಣದಿಂದ ಒಂದೇ ಸಲ ಕತ್ತರಿಸಿ ಹಾಕಿದನು. ವ|| ಚಿತ್ರನನ್ನು ಕೊಂದ ಕುರುಕ್ಷೇತ್ರದಲ್ಲಿ ತನ್ನ ಮಾತೇ ಮಾತಾಗಿರಲು ಪ್ರತಿವಿಂಧ್ಯನು ಕೌರವಸೈನ್ಯವನ್ನೆಲ್ಲ ವ್ಯರ್ಥವಾಗದ ಕೋಪೋದ್ರೇಕದಿಂದ ಶಬ್ದಮಾಡಿ (ತೋಳನ್ನು ತಟ್ಟಿ)-೬೫. ಕೌರವಸೇನಾಸಮುದ್ರವು ನೂಕಲ್ಪಟ್ಟು
Page #590
--------------------------------------------------------------------------
________________
ದ್ವಾದಶಾಶ್ವಾಸಂ | ೫೮೫ ವ|| ಆಗಳ್ ಪ್ರತಿವಿಂಧ್ಯನಂ ವಿಂಧ್ಯಾಚಲಮನ್ನೆಡಗಲಿಸಿದಗಸ್ತನಂತ ಭೀಮಸೇನಂ ತಡೆಯದಡಗಲಿಸಿ ರುದ್ರಾವತಾರನ ರಥಕ್ಕದಿರದೆ ತನ್ನ ರಥಮಂ ಪರಿಯಿಸಿಚಂtು ನಿನಗುಂದೇನುಮಲದಲಿಗಂಡರಿದಿರ್ಚುವರಲ್ಲರನ್ನನಾಂ
ಪವಿತಳವುಳ್ಳೂಡಿತ್ತ ಮಗುಂದು ಶರಾವಳಿಯಿಂದ ಪೂಆಡಂ | ಬಿನ ಸರಿ ಸೋನ ತಂದಲಿದು ದಲ್ ಪೊಸತಾಯ್ತನ ಕಂಡರೆಲ್ಲಮಂ ಬಿನ ಮಳಗಾಲವಾಯ್ತು ಕುರುಭೂಮಿಗೆ ಭೀಮನಂ ಪ್ರತಾಪಿಯೋ || ೬೬
ಚಂ|| ಗದೆಯೊಳ ಜಟ್ಟಿಗಂ ಪವನನಂದನನೆಂಬರ ಮಾತು ಮಾತದ
ಅದು ಸುರಸಿಂಧುಪುತ್ರ ಗುರು ಕರ್ಣ ಕೃಪ ಪ್ರಮುಖರ್ಕಳಿಂತು ತೇ | ರಿದರೆ ಶರಾಸನಾಗಮದೊಳಂಬಿನಮಂಬರದೊಳ್ ಸುರರ್ಕಣೀಂ ಪುದಿದನೊ ಬಾಣಜಾಲದ ಗುರುಪ್ರಿಯನಂದನನಂ ಮರುತ್ತುತಂ || ೬೭
ವ|| ಆಗಳಶ್ವತ್ಥಾಮಂ ಭೀಮೋದ್ಧಾಮ ಶ್ಯಾಮ ಜಳಧರ ವಿಮುಕ್ತ ಶರಾವಳಿಯ ಬಳಸಂ ಕಂಡು ಮುಗುಳಗೆ ನಕ್ಕುಮೀತನುಮಮ್ಮಂ ಬಳಸಿದಪ್ಪನೆಂದು
ವಿಶೇಷವಾಗಿ ಸೆಳೆಯಲ್ಪಡುತ್ತಿದೆ. ಇದನ್ನು ಕಾಯುವವರಾರು, ಯುದ್ದದಲ್ಲಿ ನಿಲ್ಲುವಂತಹವರು ಯಾರು ಎನ್ನುವ ಸಮಯಕ್ಕೆ ಸರಿಯಾಗಿ ಆಚಾರ್ಯಪುತ್ರನಾದ ಅಶ್ವತ್ಥಾಮನು ಆ ಕಾರ್ಯಕ್ಕೆ ಇದೋ ನಾನು ಬಂದಿದ್ದೇನೆ ಎಂದು ಎಲ್ಲರನ್ನೂ ಸಮಾಧಾನಮಾಡಿ ಬಂದು ಮುಖದಲ್ಲಿ ಕಣ್ಣೂ, ಪ್ರಚಂಡವಾದ ದೋರ್ದಂಡದಲ್ಲಿ ಬಿಲ್ಲೂ ಕತ್ತಿನಲ್ಲಿ ಕರೆಯೂ (ವಿಷದ ಗುರುತು) ತಲೆಯಲ್ಲಿ ಚಂದ್ರನೂ ಪ್ರಕಾಶಿಸುತ್ತಿರಲು ನಿಂತು ಎದುರಿಸಿದನು. ವ|| ಆಗ ವಿಂಧ್ಯಪರ್ವತವನ್ನು ದಾಟಿದ ಅಗಸ್ಯಋಷಿಯ ಹಾಗೆ ಭೀಮನು ಸಾವಕಾಶಮಾಡದೆ ದಾಟಿ (ಅವರಿಬ್ಬರ ಮಧ್ಯೆ ಹಾರಿ ಬಂದು) ಅಶ್ವತ್ಥಾಮನ ತೇರಿಗೆ (ಎದುರಾಗಿ) ಹೆದರದೆ ತನ್ನ ರಥವನ್ನು ಹರಿಯಿಸಿದನು. ೬೬. ಶಕ್ತಿಯಿಲ್ಲದ ಸಾಮಾನ್ಯ ಶಕ್ತಿಹೀನರನ್ನು ನೀನು ಎದುರಿಸಬಲ್ಲೆ. ನನ್ನನ್ನು ಪ್ರತಿಭಟಿಸುವಷ್ಟು ನಿನಗೆ ಸಾಮರ್ಥ್ಯವಿದ್ದರೆ ಈ ಕಡೆ ತಿರುಗು ಎಂದು ಭೀಮನು ಬಾಣಗಳ ಸಮೂಹದಿಂದ ಅವನನ್ನು ಹೂಳಲು ಬಾಣದ ಮಳೆ, ಜಡಿಮಳೆ, ತುಂತುರುಮಳೆಗಳು ಹೊಸತಾಯಿತು ಎಂದು ಕಂಡವರೆಲ್ಲರೂ ಹೇಳುವ ಹಾಗೆ ಕುರುಭೂಮಿಗೆ ಹೊಸ ಮಳೆಗಾಲವನ್ನು ಭೀಮನು ಉಂಟುಮಾಡಿದನು. ಭೀಮನು ಅದೆಂತಹ ಪ್ರತಾಪಶಾಲಿಯೋ! ೬೭, ಭೀಮನು ಗದಾಪ್ರಯೋಗದಲ್ಲಿ ಮಾತ್ರ ಗಟ್ಟಿಗ ಎನ್ನುವವರ ಮಾತು ಮಾತಲ್ಲ; ಭೀಷ್ಮ ದ್ರೋಣ, ಕರ್ಣ, ಕೃಪನೇ ಮೊದಲಾದ ಪ್ರಮುಖರು ಹೀಗೆ ಬಿಲ್ವಿದ್ಯೆಯಲ್ಲಿ ಪಂಡಿತರಾಗಿರಲಾರರು ಎಂದು ದೇವತೆಗಳು ಆಕಾಶದಲ್ಲಿ ಹೊಗಳುವ ಹಾಗೆ ಭೀಮನು ಅಶ್ವತ್ಥಾಮನನ್ನು ಬಾಣಗಳ ಸಮೂಹದಿಂದ ಪೂರ್ಣವಾಗಿ ಮುಚ್ಚಿಬಿಟ್ಟನು. ವ|| ಆಗ ಅಶ್ವತ್ಥಾಮನು ಭೀಮನೆಂಬ ವಿಸ್ತಾರವಾದ ನೀಲಮೇಘದಿಂದ ಬಿಡಲ್ಪಟ್ಟ ಬಾಣಸಮೂಹದ ವಿಸ್ತಾರವನ್ನು ಕಂಡು ಹುಸಿನಗೆ
Page #591
--------------------------------------------------------------------------
________________
೫೮೬ | ಪಂಪಭಾರತಂ ಚಂ|| ಅನಲಶಿಖಾಕಳಾಪವನೆ ಭೋರ್ಗರೆದಾರ್ದುಗುಟ್ಟನ್ನಮಪ್ಪಗು
ರ್ವಿನ ಶರಸಂಕುಳಂಗಳೊಳೆ ಭೋರ್ಗರೆದಾರ್ದಿಸ ಭೀಮನಚ್ಚ ನ | ಚಿನ ಘನ ಬಾಣಜಾಳಮದು ಭೋಂಕನೆ ನೋಡುವೊಡಾಳಜಾಳವಾ
ಮೈನೆ ಕಡಿದೊಟ್ಟ ಸುಟ್ಟುವು ಪತಿಗಳು ಗುರುಪುತ್ರನಂಬುಗಳ್ || ೬೮
ವ|| ಅಂತು ಗುರುನಂದನಂ ಮರುನಂದನವಿರಚಿತ ನಿಶಾತ ವಿಶಿಖ ಪಂಜರಮನದು ಕಲಕುಲಂಮಾಡಿಯುಮನಿತಳ್ ಮಾಣದೆ
ಕಂtರ ತೇರಂ ಕುದುರೆಯನೆಸಗುವ
ಸಾರಥಿಯ ಪೂಡರ್ಪನಯು ಬಾಣದೊಳುಪಸಂ | ಹಾರಿಸಿ ತಟತಟ ತೋಳಗುವ ನಾರಾಚದಿನೆಚ್ಚನೂ ಭೀಮನ ನೊಸಲಂ || ಮಿಸುಗುವ ನೊಸಲಂ ನಟ್ಟ ರ್ವಿಸುವಿನೆಗಂ ತೂಗಿ ತೊನೆವ ನಾರಾಚಮದೇ | ನೆಸೆದುದೂ ತದ್ವದನಾಂಭೋ ಜ ಸೌರಭಾಕೃಷ್ಟ ಮಧುಪ ಮಾಲಾಕೃತಿಯಿಂ || ನಡೆ ನಾರಾಚದ ನೋವಿನ ನಡುಕಂ ಪಿರಿದಾಯ್ತು ಸರ್ಪಯೋನಿಯ ಸೆರೆಯಂ | ಬಿಡಿಸಿದವೊಲೆಚ್ಚು ಪಾಯ್ದ ತೊಡನೊಡನೆ ಕದು ಕೃಷ್ಣ ರುಧಿರ ಜಿಘಂ ||
ನಕ್ಕು ಇವನೂ ನಮ್ಮನ್ನು ಬಳಸುತ್ತಾನಲ್ಲವೆ ಎಂದು-೬೮. ಅಗ್ನಿಜ್ವಾಲೆಯ ಸಮೂಹವನ್ನೇ ಭೋರೆಂದು ಶಬ್ದಮಾಡಿ ಉಗುಳುವಂತಹ ಭಯಂಕರವಾದ ಬಾಣಸಮೂಹದಿಂದಲೇ ಆರ್ಭಟಿಸಿ ಶಬ್ದಮಾಡಿ ಅಶ್ವತ್ಥಾಮನನ್ನು ಹೊಡೆದನು. ಅವುಗಳಿಂದ ಭೀಮನು ಹೊಡೆದ (ಸಾರವತ್ತಾದ) ಆ ಬಾಣಸಮೂಹವು ನೋಡುತ್ತಿರುವ ಹಾಗೆಯೇ ನಿಸ್ಸಾರವಾದ ಹಂದರವಾಯ್ತು ಎನ್ನುವ ಹಾಗೆ ಅಶ್ವತ್ಥಾಮನ ಬಾಣಗಳು ಭೀಮನ ಬಾಣಗಳನ್ನು ಕಡಿದು ರಾಶಿ ಮಾಡಿ ಸುಟ್ಟು ಹಾಕಿದವು. ವ|| ಹಾಗೆ ಅಶ್ವತ್ಥಾಮನು ಭೀಮನಿಂದ ರಚಿತವಾದ ಹರಿತವಾದ ಬಾಣಜಾಲವನ್ನು ನಾಶಪಡಿಸಿ ಚದುರಿಸಿ ಅಷ್ಟಕ್ಕೇ ಬಿಡದೆ ೬೯. ಅವನ ತೇರನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯ ಶಕ್ತಿಯನ್ನೂ - ಅಯ್ದುಬಾಣಗಳಿಂದ ನಾಶಮಾಡಿ ತಳತಳನೆ ಹೊಳೆಯುವ ಬಾಣದಿಂದ ಭೀಮನ ಮುಖವನ್ನು ನಾಟುವ ಹಾಗೆ ಹೊಡೆದನು. ೭೦, ಹೊಳೆಯುವ ಹಣೆಯಲ್ಲಿ ನಾಟಿಕೊಂಡು ವ್ಯಾಪಿಸುತ್ತ ಆ ಕಡೆಗೂ ಈ ಕಡೆಗೂ ತೂಗಾಡುತ್ತಿರುವ ಆ ಬಾಣವು ಭೀಮನ ಮುಖಕಮಲದ ವಾಸನೆಯಿಂದ ಆಕರ್ಷಿತವಾದ ದುಂಬಿಗಳ ಸಮೂಹದ ಆಕಾರದಿಂದ ವಿಶೇಷ ಸುಂದರವಾಗಿದ್ದಿತು. ೭೧. ಬಾಣದ ನೋವಿನ ತುಡಿತವು ಹೆಚ್ಚಾಯಿತು. ವಿಸರ್ಪಿಣಿಯೆಂಬ ರೋಗವುಳ್ಳವನ ರಕ್ತನಾಳವನ್ನು ಕತ್ತರಿಸಿದಂತೆ ಸ್ವಲ್ಪ ಬೆಚ್ಚಗಿರುವ ಕಪ್ಪಾದ ರಕ್ತಸಮೂಹವು ಒಡನೆಯೇ ಸೂಸಿ ಹರಿಯಿತು.
Page #592
--------------------------------------------------------------------------
________________
38
ಕಂll
ದ್ವಾದಶಾಶ್ವಾಸಂ /೫೮೭
ನಡುಗಲೆರ್ದ ಬೆಮರಲ್ ತನು
ತೊಡರಲ್ ನಾಲಗೆ ತಗುಳುದಾ ಮಾರ್ಗಣದಿಂ | ಗಡ ಮತ್ತುಟೆದರನೆಂತುಂ
ಮಡಿಪದ ಗುರುತನಯನೆಚ್ಚ ಶಿತ ನಾರಾಚಂ ||
ವ|| ಅಂತು ಭೀಮಸೇನಂ ನಾರಾಚಘಾತದಿಂ ಪುರ್ತು ಬಸವದುಸಿರಲಡ ಮಾಡದೆ ಬಿಲ್ಲ ಕೊಪ್ಪಂ ಪಿಡಿದಾಗಿ ಕಿಟದಾನುಂ ಬೇಗಮಿರ್ದು ನೊಸಲೊಳ್ ನಟ್ಟ ನಾರಾಚಮನಂತಾನುಂ ಕಿಟ್ಟು ತನ್ನಂ ತಾನೆ ಚೇತರಿಸಿ ಸಿಂಹನಾದದಿನಾರ್ದು
ಚoll
29
ಪೆಜವುಟದ ಮೂಲ ಮಿರಮಿ
ಮಿರುವ ಶಿತಾಸ್ತ್ರಂಗಳಿಂ ದ್ವಿಜನ್ಮನ ನೊಸಲಂ | ನೆಗೊಳ್ಳಿನಮೆಸ್ಕೊಡೆ ಕ
ಖರಕರಬಂಬದಿಂ ಕಿರಣಸಂತತಿಗಳ್ ಪೋಪೊಣಿದಪ್ಪುವೆಂ
ಬರ ನುಡಿ ಪೋಲ್ವೆವೆತ್ತುದೆನೆ ಬಾಣಧಿಯಿಂದಿರದುಚಿಕೊಂಡು ವಿ| ಸುರಿತ ಶರಂಗಳೆಂಟನವರೊಳ್ ಪೊಳವನ್ನು ಶರಂಗಳಿಂ ಸುರು ಳುರುಳಿನಮೆಚ್ಚನಾ ದ್ವಿಜನ ಸೂತ ವರೂಥ ತುರಂಗಮಂಗಳಂ || 20
ಸ್ಥದವೊಲಾಯ್ತದಟುಮಳವುಮಾ ಮಾರುತಿಯಾ |
ವ|| ಆಗಳಶ್ವತ್ಥಾಮಂ ಹೇಮಪುಂಖಾಂಕಿತ ಭೀಮಸಾಯಕನಿರ್ಘಾತದಿಂದಲೆಯೆ ನೊಂದು ಭೋರೆಂದು ಕವಿವ ಬಸುನೆತ್ತರ್ ಕಣ್ಣಂ ಕವಿಯ ಸೀಂಟಿಕಳೆದು ನಡುಕೋಲ್ವರಂ ನಟ್ಟ ಕೂರ್ಗಣೆಗಳಂ ಗಳವೆರಸು ತೊರೆದು ಕಳೆದು
24
೭೨. ಆ ಬಾಣದಿಂದ (ಭೀಮನ) ಎದೆ ನಡುಗುವುದಕ್ಕೂ ಮೈ ಬೆವರುವುದಕ್ಕೂ ನಾಲಗೆ ತೊಡರುವುದಕ್ಕೂ ಪ್ರಾರಂಭವಾಯಿತು. (ಎಂದ ಮೇಲೆ) ಅಶ್ವತ್ಥಾಮನು ಪ್ರಯೋಗಿಸಿದ ಹರಿತವಾದ ಬಾಣವು ಇನ್ನುಳಿದವರನ್ನು ಕೊಲ್ಲದಿರುತ್ತದೆಯೇ? ವ|| ಭೀಮಸೇನನು ಬಾಣದ ಪೆಟ್ಟಿನಿಂದ ಗಾಯಗೊಂಡು ಶಕ್ತಿಗುಂದಿ ಉಸಿರಾಡು ವುದಕ್ಕೂ ಆಗದೆ ಬಿಲ್ಲಿನ ತುದಿಯನ್ನು ಹಿಡಿದು ಊರಿಕೊಂಡು ಸ್ವಲ್ಪ ಕಾಲವಿದ್ದು ಹಣೆಯಲ್ಲಿ ನಾಟಿದ್ದ ಬಾಣವನ್ನು ಹೇಗೋ ಕಿತ್ತು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸಿಂಹಧ್ವನಿಯಿಂದ ಆರ್ಭಟಿಸಿದನು. ೭೩. ಸೂರ್ಯಬಿಂಬದಿಂದ ಕಿರಣಗಳು ಹೊರಕ್ಕೆ ಹೊರಟು ಬರುತ್ತಿರುವ ಹಾಗೆ ಬತ್ತಳಿಕೆಯಿಂದ ಪ್ರಕಾಶಮಾನವಾದ ಎಂಟುಬಾಣಗಳನ್ನು ಸೆಳೆದುಕೊಂಡು ಅವುಗಳಲ್ಲಿ ಹೊಳೆಯುತ್ತಿರುವ ಅಯ್ದುಬಾಣಗಳಿಂದ ಆ ಬ್ರಾಹ್ಮಣನಾದ ಅಶ್ವತ್ಥಾಮನ ಸಾರಥಿ, ತೇರು ಮತ್ತು ಕುದುರೆಗಳು ಸುರುಳಿಕೊಂಡು ಉರುಳುವ ಹಾಗೆ ಹೊಡೆದನು. ೭೪. ಇನ್ನುಳಿದ ಮೂರು ಮಿರುಮಿರುಗುವ ಹರಿತವಾದ ಬಾಣಗಳಿಂದ ಬ್ರಾಹ್ಮಣನ ಹಣೆಗೆ ಮರ್ಮವನ್ನು ಭೇದಿಸುವಂತೆ ಹೊಡೆಯಲು ಆ ಭೀಮಸೇನನ ಪರಾಕ್ರಮವೂ ಶಕ್ತಿಯೂ ಕಣ್ಣು ಬಿಟ್ಟಂತಾಯಿತು. ವ|| ಆಗ ಅಶ್ವತ್ಥಾಮನು ಚಿನ್ನದ ಗರಿಗಳಿಂದ ಗುರುತುಮಾಡಲ್ಪಟ್ಟ ಹಿಂಭಾಗವನ್ನುಳ್ಳ ಭೀಮನ ಬಾಣಗಳ ಪೆಟ್ಟಿನಿಂದ ಸಾಯುವಷ್ಟು ವ್ಯಥೆಪಟ್ಟು ಭೋರೆಂದು ಸುರಿಯುತ್ತಿರುವ
Page #593
--------------------------------------------------------------------------
________________
೫೮೮ / ಪಂಪಭಾರತಂ ಕಂ।।
ಅಳವೆನಿತು ಚಾಪವಿದ್ಯಾ
ಬಳವೆನಿತುಂಟನಿತುಮೆಯವಂದಿಲ್ಲಿ ಪುದುಂ | ಗೊಳಿಳಿದುದೆನೆ ಕಾನಲ
ವಿಳಯಾಂತಕರೂಪನಾದನಶ್ವತ್ಥಾಮಂ ||
2.9%
ವ|| ಆಗಳ್ ಸವ್ಯಾಪಸವ್ಯ ಭ್ರಾಂತೋದ್ಧಾಂತಂಗಳೆಂಬ ರಥಕಲ್ಪ ವಿಶೇಷ ವಿನ್ಯಾಸಂಗಳ ನಡೆದು ಸಾರಥಿಗಳ ಚೋದಿಸುವಾಗಳಿರ್ವರ ರಥಂಗಳು ಸುಟ್ಟುರೆಯೊಳಗಣ ತಗೆಲೆಯಂತ ತಿನ ತಿರಿಯ
ಚoll
ಮುಳಿಸಳುರ್ದೆಯ ಕಣ್ಣಳೊಳೆ ಪೀರ್ವವೊಲುಗ್ರಶರಾನಲಾರ್ಚಿಯಿಂ ದಳುರ್ವವೊಲೆಯ ಚೋದಿಸಿ ವರೂಥಮನಿಂ ಬರ್ದುಕಾಡೆಯೆಂದಸುಂ | ಗೊಳೆ ಮೊನೆಯಂಬುಗಳ ತನುವನಳಳಿವೋಪಿನಮೆಚ್ಚು ನೆತ್ತರು ಚಳಿಸಿ ರಥಂಗಳೊಳ್ ಕೊಳಗೊಳುತ್ತಿರೆ ಕಾದಿದರೋರ್ವರೋರ್ವರೊಳ್ || 22 ವ|| ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚುವಣಿಗೆಯಂಕಕಾರಕ್ಕತುಳ ಕೈಕೆಯಿಂ ಸೂವಂತೊರ್ವರೋರ್ವರೊಳ್ ಕಾದೆ
6211
ಸೂತರುರುನಂ ರಥ ತುರಂಗಮರಾಜ ಸುರುಳಿನಂ ಚಳ ತೇತುಗಳೆತ್ತಮವ್ವಳಿಸಿ ಬೀಟ್ಟಿನಮಳ್ಳು ಕಾದಿ ಬಾಣ ಸಂ | ಘಾತದ ಕೋಳೊಳುಚ್ಚಳಿದ ನೆತ್ತರೊಳಿಚ್ಚೆಯೆ ಕೆಟ್ಟೋಡಾತನ ತನುಮಿತ್ತ ಜೋಲ್ದ ರಣಮಂ ಪೊಗಲುತ್ತಿರೆ ದೇವಕೋಟಿಗಳ
೭೭
ಬಿಸಿರಕ್ತವು ಕಣ್ಣನ್ನು ಆವರಿಸಲು ಅದನ್ನು (ಬೆರಳಿನಿಂದ) ಸೀಂಟಿ ಕಳೆದು ಬಾಣದ ಮಧ್ಯದವರೆಗೂ ನಾಟಿಕೊಂಡಿದ್ದ ಹರಿತವಾದ ಬಾಣಗಳನ್ನು ಗರಿಗಳೊಡನೆ ಕಿತ್ತು ಬಿಸಾಡಿದನು. ೭೫. ತನ್ನ ಶಕ್ತಿಯೆಷ್ಟಿದೆ, ಬಿಲ್ವಿದ್ಯೆಯ ಬಲವೆಷ್ಟಿದೆ ಅಷ್ಟನ್ನೂ ಇಲ್ಲಿ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಹಾಗೆ ಸೇರಿಸಿದೆ ಎನ್ನುವ ಹಾಗೆ ಅಶ್ವತ್ಥಾಮನು ಪ್ರಳಯಾಗ್ನಿಯ ಮತ್ತು ಪ್ರಳಯಕಾಲದ ಯಮನ ರೂಪವುಳ್ಳವನಾದನು. ವ|| ಆಗ ಸವ್ಯ, ಅಪಸವ್ಯ, ಭ್ರಾಂತ ಮತ್ತು ಉದ್ಧಾಂತಗಳೆಂಬ ರಥವಿದ್ಯೆಯ ನಾನಾರೀತಿಗಳನ್ನು ತಿಳಿದು ಸಾರಥಿಗಳು ನಡೆಸುತ್ತಿರಲು ಇಬ್ಬರ ತೇರುಗಳೂ ಸುಂಟರುಗಾಳಿಯ ಮಧ್ಯದಲ್ಲಿರುವ ತರಗೆಲೆಯ ಹಾಗೆ ತಿರನೆ ಸುತ್ತುತ್ತಿದ್ದುವು. ೭೬. ಕೋಪವು ಹರಡಿ ಕಣ್ಣುಗಳಿಂದಲೇ ಕುಡಿಯುವ ಹಾಗೆ ಭಯಂಕರವಾದ ಬಾಣಾಗ್ನಿಯ ಜ್ವಾಲೆಯಿಂದ ಸುಡುವ ಹಾಗೆ ರಥವನ್ನು ಹತ್ತಿರಕ್ಕೆ ನಡೆಸಿ 'ಇನ್ನು ನೀನು ಬದುಕಲಾರೆ' ಎಂದು ಮೊನಚಾದ ಬಾಣಗಳು ಪ್ರಾಣಾಪಹಾರಮಾಡುವಂತೆ ಶರೀರವನ್ನು ನಾಟಿ ನಾಶವಾಗುತ್ತಿರಲು ಬಾಣ ಪ್ರಯೋಗಮಾಡಿ ರಕ್ತವು ಚಿಮ್ಮಿ ರಥದಲ್ಲಿಯೇ ಕೊಳವಾಗುತ್ತಿರಲು ಒಬ್ಬರೊಡನೊಬ್ಬರು ಕಾದಿದರು. ವ|| ಹಾಗೆ ಕೋಪದ, ಆಸಕ್ತಿಯ, ಪೌರುಷದ, ಮಾತ್ಸರ್ಯದ, ಪರಸ್ಪರ ಮೆಚ್ಚಿಗೆಯುಳ್ಳ ಜಟ್ಟಿಗಳು ಮಲ್ಲಯುದ್ಧಕ್ಕೆ ಅಂಕಕಾರರು ಮೇಲಿಂದ ಮೇಲಕ್ಕೆ ಸರದಿಯ ಪ್ರಕಾರ ಹತ್ತಿ ಇಳಿದು ಯುದ್ಧಮಾಡುವ ಹಾಗೆ ಒಬ್ಬರೊಡನೊಬ್ಬರು ಕಾದಿದರು ೭೭. ಸಾರಥಿಗಳು ಉರುಳಿ ಬೀಳುವ ಹಾಗೆಯೂ ರಥಕುದುರೆಗಳ ಗುಂಪು
Page #594
--------------------------------------------------------------------------
________________
ದ್ವಾದಶಾಶ್ವಾಸಂ | ೫೮೯ ವಗ ಆಗಳ್ ಧರ್ಮರಾಜನುಮಿತ್ತ ರಾಜರಾಜನುಮೊಂದೂರ್ವರಂ ಕೆಯೋಂಡು ತಂತಮ್ಮ ರಥಂಗಳನೇನೆಸಿಕೊಂಡುಯರಿತ್ತ ಕರ್ಣನುಂ ಪಾಂಡವಬಳ ಜಳನಿಧಿಯಂ ಬಡಬಾನಳನಳುರ್ವಂತಳುರ್ದು ತನ್ನೊಳ್ ಪೋಗದೆ ಪಣದ ಪ್ರಭದ್ರಕ ಬಲಮಲ್ಲಮಂ ಕೊಂದನನ್ನೆಗಮಿತ್ತ ಭೀಮಾಶ್ವತ್ಥಾಮರಿರ್ವರುಂ ಚೇತರಿಸಿ ಸೂತ ಪತಾಕಾ ತುರಂಗಮೋಪೇತ ರಥಂಗಳನೇಟಿಕೊಂಡು ಮತ್ತಮೊರ್ವರೋರ್ವರನುಸುತ್ತುಂ ಸಂಗ್ರಾಮಭೂಮಿಯೊಳಗನೆ ಬರೆ ಜರಾಸಂಧನ ಮಗಂ ಕ್ಷೇಮಧೂರ್ತಿ ತಮ್ಮಯ್ಯನಂ ಕೊಂದ ಪಗೆಯಂ ನೆನೆದು ತನ್ನೇಳಿದ ಮತ್ತಹಸ್ತಿಯಂ ಭೀಮಸೇನಂಗೆ ತೋಟಿ ಕೊಟ್ಟಾಗಲ್
ಕಂ||
ಬಡಿಗೊಂಡು ಮಸಗಿ ಚೈತ್ರಮ ನೋಡವ ಮಹಾ ಮಕರದಂತ ಕರಿಘಟೆಗಳನಾ | ರ್ದುಡಿಯ ಬಡಿದಾನವರಸಾ ಗಡೆ ಕೊಂದಂ ಕ್ಷೇಮಧೂರ್ತಿಯಂ ಪವನಸುತಂ ||
೭೮
ವ|| ಅಂತು ಕ್ಷೇಮಧೂರ್ತಿಯಂ ಕ್ಷೇಮದಿಂ ಕೊಂದನನ್ನೆಗಮತ್ತ ಮರುನ್ನಂದನನ ನುಸುತ್ತುಂ ಬರ್ಪಶ್ವತ್ಥಾಮನಂ ಪಾಂಡ್ಯನೆಡೆಗೊಂಡು ಬಂದು ಮಾರ್ಕೊಂಡು
ಸುರುಳಿಕೊಳ್ಳುವ ಹಾಗೆಯೂ ಚಲಿಸುತ್ತಿರುವ ಧ್ವಜಗಳು ಎಲ್ಲ ಕಡೆಗೂ ಹಾರಿ ಬೀಳುತ್ತಿರುವಂತೆಯೂ ಉಗ್ರವಾಗಿ ಕಾದಿ ಬಾಣಸಮೂಹದ ತಿವಿತದಿಂದ ಚಿಮ್ಮಿದ ರಕ್ತದಲ್ಲಿ ಇಚ್ಛಾಶಕ್ತಿಯೇ ನಷ್ಟವಾಗಲು ಆ ಭೀಮನು ಆ ಕಡೆ, ಈ ಅಶ್ವತ್ಥಾಮನು ಈ ಕಡೆ ಜೋತುಬಿದ್ದ ಯುದ್ದವನ್ನು ದೇವತೆಗಳ ಸಮೂಹವು ಹೊಗಳುತ್ತಿದ್ದಿತು. ವ| ಆ ಕಡೆ ಧರ್ಮರಾಜನೂ ಈ ಕಡೆ ಕೌರವನೂ ಒಬ್ಬೊಬ್ಬರನ್ನೂ ಕರೆದುಕೊಂಡು ತಮ್ಮ ರಥವನ್ನು ಹತ್ತಿಸಿಕೊಂಡು ಹೋದರು. ಕರ್ಣನು ಪಾಂಡವಸಮುದ್ರವನ್ನು ಬಡಬಾಗ್ನಿಯು ಸುಡುವಂತೆ ಸುಟ್ಟು ತನ್ನನ್ನು ಬಿಟ್ಟುಹೋಗದೆ ತನ್ನಲ್ಲಿಯೇ ಹೆಣೆದುಕೊಂಡಿದ್ದ ಪ್ರಭದ್ರಕಬಲವೆಲ್ಲವನ್ನೂ ಕೊಂದನು. ಅಷ್ಟರಲ್ಲಿ ಈ ಕಡೆ ಭೀಮಾಶ್ವತ್ಥಾಮರು ಚೇತರಿಸಿ ಸಾರಥಿ ಧ್ವಜ ಮತ್ತು ಕುದುರೆಗಳಿಂದ ಕೂಡಿದ ರಥಗಳನ್ನು ಹತ್ತಿಕೊಂಡು ಪುನಃ ಒಬ್ಬರು ಮತ್ತೊಬ್ಬರನ್ನು ಹುಡುಕುತ್ತ ಯುದ್ಧಭೂಮಿಯಲ್ಲಿ ಬರುತ್ತಿರಲು ಜರಾಸಂಧನ ಮಗನಾದ ಕ್ಷೇಮಧೂರ್ತಿಯು ತಮ್ಮ ತಂದೆಯನ್ನು ಕೊಂದ ಶತ್ರುತ್ವವನ್ನು ಜ್ಞಾಪಿಸಿಕೊಂಡು ತಾನು ಹತ್ತಿದ್ದ ಮದ್ದಾನೆಯನ್ನು ಭೀಮನ ಕಡೆ ಛಬಿಟ್ಟನು. ೭೮, ಪೆಟ್ಟು ತಿಂದು ರೇಗಿ ಹಡಗನ್ನು ಮುರಿಯುವ ದೊಡ್ಡ ಮೊಸಳೆಯ ಹಾಗೆ ಭೀಮಸೇನನು ಆನೆಯ ಸಮೂಹವನ್ನು ನಾಶಮಾಡುವಂತೆ ಹೊಡೆದು, ಆರ್ಭಟಮಾಡಿ, ಕ್ಷೇಮಧೂರ್ತಿ ಯನ್ನು ಆಗಲೇ ಕೊಂದು ಹಾಕಿದನು. ವ|| ಅಷ್ಟರಲ್ಲಿ ಆ ಕಡೆ ಭೀಮನನ್ನು ಹುಡುಕುತ್ತ ಬರುತ್ತಿದ್ದ ಅಶ್ವತ್ಥಾಮನನ್ನು ಪಾಂಡ್ಯನು ಮಧ್ಯೆ ಬಂದು ಎದುರಿಸಿ
Page #595
--------------------------------------------------------------------------
________________
೫೯೦ | ಪಂಪಭಾರತಂ ಕಂ
ನೀನಲ್ಲದೆನ್ನ ಶರಸಂ ಧನಮನಾನ ನೆವರಿಲ್ಲೀ ಪಡೆಯೊಳ್ | ನೀನಿನಿಸನಾಂಪುದೆಂಬುದು ಮಾನಲ್ಲದೆ ನಿನ್ನನಾಂಪ ಗಂಡರುಮೊಳರೇ ||
ಎನೆ ಬೆಳಸೆಯಂಬಿನ ಸರಿ
ಮೊನೆಯಂಬಿನ ಸೋನೆ ಪಾಯಂಬಿನ ತಂದಲ್ | ಘನವಾದುದಲ್ಲಿ ಕಿತ್ತಂ
ಬಿನ ಬಡಪಮಿದೆನಿಸಿ ಪಾಂಡ್ಯನಂಬಂ ಕದಂ ||
ಕದೊಡವನಿತುಮನಂತಂ
ತುಳಿದೆಚ್ಚು ಕಡಂಗಿ ತಡೆದು ಶರವರ್ಷದಿನಂ | ದಣಿಯ ಕಡಿಕೆಯ್ದು ಬಿಡದೆಡೆ
ವನಂ ಮಾಡಿದುವು ಗುರುತನೂಜನ ಕಣೆಗಳ್ ||
ಎಡೆವ ದೊಳೆಗಿ ಬಳಿಸಿಡಿ
ಲಿಡುಮುಡುಕನೆ ಪೊಡೆದುದೆನಿಸಿ ಪಾಂಡ್ಯನ ರಥದ | ಚುಡಿದ ತಟ್ಟ ಕೊಂಡುವು
ಕಡುಗೂರಿದುವೆನಿಪ ಗುರುತನೂಜನ ಕಣೆಗಳ ||
ವಿರಥಂ ಪಾಂಡ್ಯಂ ಕೋಪ
ಸುರಿತಾಧರನುಡಿದು ಕಡೆಯ ಪಯಿಗೆಯುಂ ಬಿ । ಬರ ಬಿರಿಯೆ ಗುರುತನೂಭವ ನುರಮಂ ಬರಿಯೆಚ್ಚು ಬೆಂಗೆವಂದಂ ಗಜದಾ
26
90
63
೮೨
೮೩
೭೯. ನನ್ನ ಬಾಣಪ್ರಯೋಗವನ್ನು ಎದುರಿಸುವುದಕ್ಕೆ ನಿನ್ನನ್ನು ಬಿಟ್ಟು ಈ ಸೈನ್ಯದಲ್ಲಿ ಸಮರ್ಥರಾದವರು ಬೇರೆ ಯಾರೂ ಇಲ್ಲ, ನೀನೇ ಒಂದಿಷ್ಟು ತಾಳುವುದು ಎನ್ನಲು ನಾನಲ್ಲದೇ ನಿನ್ನನ್ನು ಪ್ರತಿಭಟಿ ತಕ್ಕ ಶೂರರೂ ಇದ್ದಾರೆಯೇ ? ೮೦. ಎನ್ನಲು ಬೆಳ್ಳಗೆ ಮಸೆದಿರುವ ಬಾಣದ ಮಳೆ, ಮೊನಚಾದ ಬಾಣಗಳ ತುಂತುರುಮಳೆ- ಇವು ಅತಿಶಯವಾದವು. ಅಲ್ಲಿಯ ಕಿರಿಯಬಾಣಗಳ ನಿರಂತರವಾದ ಮಳೆ ಇದು ಎನಿಸಿ ಪಾಂಡ್ಯನು ಬಾಣಗಳನ್ನು ಕರೆದನು. ೮೧. ಅವಷ್ಟನ್ನೂ ಹಾಗೆ ಹಾಗೆಯೇ ಉತ್ಸಾಹಗೊಂಡು ಜಾಗ್ರತೆಯಾಗಿ ಕತ್ತರಿಸಿ ಬಾಣದ ಮಳೆಯಿಂದ (ಶರವರ್ಷ) ಸಂಪೂರ್ಣವಾಗಿ ತುಂಡರಿಸಿ, ನಿಲ್ಲದೆ ಅಶ್ವತ್ಥಾಮನ ಬಾಣಗಳು ನಡುವೆ ಬರಗಾಲವನ್ನು ಉಂಟುಮಾಡಿದುವು. ೮೨. ಬರಗಾಲದ ಮಧ್ಯದಲ್ಲಿ ಬರಸಿಡಿಲು ಇಡುಕುಮುಡುಕುಗಳಲ್ಲಿಯೇ ಶಬ್ದಮಾಡಿ ಹೋಯಿತು ಎನ್ನಿಸಿ ಅಶ್ವತ್ಥಾಮನ ಬಹಳ ಹರಿತವಾದ ಬಾಣಗಳು ಪಾಂಡ್ಯನ ರಥದ ಅಚ್ಚುಮುರಿದು ನಾಶವಾಗಿ ಕುಸಿಯುವಂತೆ ಹೊಡೆದುವು. ೮೩. ರಥವಿಲ್ಲದ ಕೋಪದಿಂದ ನಡುಗುತ್ತಿರುವ ತುಟಿಯಳ್ಳ ಪಾಂಡ್ಯನು ಮುರಿದು ಬೀಳಲು ಬಾವುಟವೂ ಪೂರ್ಣವಾಗಿ ಬಿರಿಯಲು (ಪಾಂಡ್ಯನು) ಅಶ್ವತ್ಥಾಮನ ಎದೆಯನ್ನೂ ಬಿರಿದುಹೋಗುವಂತೆ ಹೊಡೆದು ಆನೆಯ ಬೆನ್ನಿಗೆ ಬಂದನು.
Page #596
--------------------------------------------------------------------------
________________
ದ್ವಾದಶಾಶ್ವಾಸಂ | ೫೯೧ ವll ಅಂತು ತನ್ನ ನಚ್ಚುವ ಕೆಯ್ತುಗಳನಿತು ಪೊಳೆಯೆ ಮಸೆದೊಟ್ಟಿ ಮತ್ತಹಸ್ತಿಯನಣೆದು ತೋಟಿಕೊಟ್ಟಾಗಳ್ಉlt ಈ ಮದದಂತಿಯಬ್ರರವುಮೀತನ ಶೌರ್ಯಮುಮೀ ಮಹೋಗ್ರ ಸಂ
ಗ್ರಾಮದೊಳೆನ್ನುಮಂ ಚಳಿಯಿಸಲ್ ಬಗದಪುದು ಪಾಂಡ್ಯನನ್ನನಿ | ನೀ ಮಹಿಯೊಳ್ ಪಳಂ ಕಲಿಯೆ ನೆಟ್ಟನಿದಿರ್ಚುವ ನಿಚ್ಚಟಕ್ಕೆಯೊಳ್ ಭೀಮನುಮಿನ್ನನನನೆ ಪೋಲೈಗಿವಂಗಣ ಗಂಡರೆಂಬರಾರ್ || ವ|| ಎಂಬನ್ನೆಗಂ ಪಾಂಡ್ಯನಶ್ವತ್ಥಾಮನ ರಥಮಂ ಮುಟ್ಟೆವಂದುಕಂ ವಿಳಯಾನಳ ವಿಳಸನ ವಿ
ಸುಳಿಂಗ ಸಂಘಾತದಿಂ ತಗುಳಡರ್ವನಿತೂಂ | ದಳವಿಯ ತೋಮರದಿಂದಿಡ ಪೊಳೆವಸ್ತದ ಗುರುತನೂಜನೆಡೆಯೊಳ ಕಡಿದಂ ||
೮೫ ವll ಅಂತದಂ ಕಡಿದು ಕೂರಿದುವುಂ ನೇರಿದುವುಮಪ್ಪಯ್ಯಮೋಘಾಸ್ತ್ರಂಗಳಂ ಬಾಣಧಿ ಯಿಂದುರ್ಚಿಕೊಂಡು ತನ್ನ ಮನದೊಳೆ ಸಮಕಟ್ಟಿಕೊಂಡೆಚ್ಚಾಗಳ್ಕoll ಕರಿಕರಮುಂ ಮಾವಂತನ
ಕರಮುಂ ತತ್ಸಾಂಡ್ಯರಮುಮೊಡನುರುಳ ಭಯಂ | ಕರಮುಮನುರ್ವಿಗಗುರ್ವುಮ
ನೆರಡುಂ ಪಡೆಗಳೆ ತೋಚಿದಂ ಗುರುತನಯಂ || ವl! ತಾನು ನಂಬಿದ್ದ ಆಯುಧಗಳೆಲ್ಲ ಹೊಸತಾಗಿ ಮಸೆಯಲ್ಪಟ್ಟು ರಾಶಿಯಾಗಿ ಹೊಳೆಯುತ್ತಿರಲು ಮದ್ದಾನೆಯನ್ನು ಅಂಕುಶದಿಂದ ತಿವಿದು ಪಾಂಡ್ಯನು ಅಶ್ವತ್ಥಾಮನ ಮೇಲೆ ಭೂಬಿಟ್ಟನು. ೮೪, ಈ ಮದ್ದಾನೆಯ ಬರುವಿಕೆಯೂ ಈತನ ಪರಾಕ್ರಮವೂ ಈ ಘೋರಯುದ್ದದಲ್ಲಿ ನನ್ನನ್ನು ಶಕ್ತಿಹೀನನನ್ನಾಗಿಮಾಡಲು ಯೋಚನೆ ಮಾಡುತ್ತಿದೆಯಲ್ಲವೇ ? ಪಾಂಡ್ಯನಂತಹವನೂ ಈ ಭೂಮಿಯಲ್ಲಿ ಇನ್ನೊಬ್ಬ ಶೂರನಿರುವನೇ? ನೇರವಾಗಿ ವೈರಿಯನ್ನು ಎದುರಿಸುವ ಸೈರ್ಯದಲ್ಲಿ ಭೀಮನು ಕೂಡ ಇಂತಹ ಶಕ್ತಿಯುಳ್ಳವನಲ್ಲ, ಎನ್ನುವಾಗ ಹೋಲಿಕೆಮಾಡಲು ಇವನಿಗೆ ಸಮಾನರಾದವರು ಯಾರು ಇದ್ದಾರೆ ? ವll ಎನ್ನುವಷ್ಟರಲ್ಲಿ ಪಾಂಡ್ಯನು ಅಶ್ವತ್ಥಾಮನ ತೇರಿನ ಸಮೀಪಕ್ಕೆ ಬಂದು ೮೫. ಪ್ರಳಯಾಗ್ನಿಯ ಪ್ರಕಾಶಮಾನವಾದ ಕಿಡಿಗಳ ಸಮೂಹದಿಂದ ಹಿಂಬಾಲಿಸಿ ಮೇಲೇರುವಷ್ಟು ಶಕ್ತಿಯುಳ್ಳ ತೋಮರವೆಂಬ ಆಯುಧ (ದೊಡ್ಡಗದೆ) ಹೊಡೆಯಲು ಅಶ್ವತ್ಥಾಮನು ಮಧ್ಯಮಾರ್ಗದಲ್ಲಿಯೇ ಅದನ್ನು ಕತ್ತರಿಸಿದನು. ವ|| ಹಾಗೆ ಅದನ್ನು ಕತ್ತರಿಸಿ ಹರಿತವೂ ಸರಳವೂ ಆದ ಬೆಲೆಯೇ ಇಲ್ಲದ ಅಯ್ದು ಬಾಣಗಳನ್ನು ಬತ್ತಳಿಕೆಯಿಂದ ಸೆಳೆದುಕೊಂಡು ತನ್ನ ಮನಸ್ಸಿನಲ್ಲಿಯೇ ಹೇಗೆ ಪ್ರಯೋಗಮಾಡಬೇಕೆಂದು ಸಿದ್ದಾಂತಮಾಡಿಕೊಂಡು ಹೊಡೆದನು. ೮೬, ಆನೆಯ ಸೊಂಡಿಲೂ ಮಾವಟಿಗನ ಕೈಯೂ ಆ ಪಾಂಡ್ಯನ ತಲೆಯೂ ಜೊತೆಯಾಗಿಯೇ ಉರುಳಲು ಅಶ್ವತ್ಥಾಮನು ಲೋಕಕ್ಕೆ ಭಯಂಕರತ್ವವನ್ನೂ
೮೬
Page #597
--------------------------------------------------------------------------
________________
೫೯೨/ ಪಂಪಭಾರತಂ
ವರ ಅನ್ನೆಗಂ ಸಂಸಪಕನಿಕಾಯಮನತಿ ನಿಶಿತ ಸಾಯಕನಿಕಾಯದಿಂ ನಿಶ್ಯಪಮಾಗೆ ಮಾಲ್ಪ ಸಾಮಂತಚೂಡಾಮಣಿ ಕೌರವಬಲದ ಕಳಕಳಮಂ ಕೇಳು ಮನಃಪವನವೇಗದಿಂ ಜವನೆ ಬರ್ಪಂತೆ ಬಂದು ತಾಗಿದಾಗಳಕ್ಕೋಹಿಣೀ ನಾಯಕಂ ದಂಡಧಾರಂ ಗಂಡಗುಣಕ್ಕಾಧಾರ ಮಾಗಿ ಮದಗಳಿತ ಗಂಡ ಪ್ರಚಂಡ ಮದವೇತಂಡಮನಗದು ಬಿಟ್ಟಿಕ್ಕಿದಾಗಉll ಕಾದಲಿದಿರ್ಚಿ ಬಂದ ಪಗೆ ಸಂಪಗೆಯಂತ ಶಿಳೀಮುಖಕ್ಕೆ ಗಂ
ಟಾದುದಿದಂದ ಸಿಂಧುರದೊಳಿಂತಿವನೊರ್ವನ ತಳನಾದೊಡೇ | ನಾದುದೋ ಬಲ್ಲೆನೆಂದು ಮುಳಿದೆಚೊಡ ಸೌಳನೆ ಸೀಳು ಪಚ್ಚವೋ
ಲಾದುದು ದಂಡಧಾರ ಗಜಮಾತನೊಡಲ್ವರಸಂದು ಪಾರ್ಥನಂ || ೮೭ ವll ಅಂತಾತಂ ಕೃತಾಂತನಿವಾಸಮನೆಯುವುದುಕಂil : ಇನ್ನಿನಿಸನಿರ್ದೋಡಾಜಿಯೊ
ಳನ್ನ ತನೂಜನುಮನ ಪಂ ನರನದನಿ | ಸ್ಟಾನ್ಲೋಡಲಾನೆಂಬವೊ ಲನ್ನೆಗಮಸ್ತಾಚಳಸ್ಥನಾದಂ ದಿನಪಂ |
eses ವ|| ಅಂತು ಪತಂಗಮಂಡಲಮಪರಗಿರಿತಟಮನೆಯುವುದುಮೆರಡುಂ ಪಡೆಗಳಪಹಾರ ತೋರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳ ಪೊದುವಾಗಳ ರಾಜರಾಜನಲ್ಲಿಗಂಗರಾಜಂ ಬಂದು ಹಯೋಪಾಯಕುಶಲರಪ್ಪ ಗಾಂಗೇಯರಳಿಸಿದ ಮಾತನೇಕಾಂತದೊಳಚಿಪುವುದುಂ
ಅದ್ಭುತವನ್ನೂ ಜೊತೆಯಲ್ಲಿಯೇ ತೋರಿದನು. ವ|| ಅಷ್ಟರಲ್ಲಿ ಸಂಸಪ್ತಕಸಮೂಹವನ್ನು ಬಹಳ ಹರಿತವಾದ ಬಾಣಗಳ ಸಮೂಹದಿಂದ ಸ್ವಲ್ಪವೂ ಉಳಿಯದ ಹಾಗೆ ಮಾಡುವ ಸಾಮಂತಚೂಡಾಮಣಿಯಾದ ಅರ್ಜುನನು, ಕೌರವಸೈನ್ಯದ ಕಳಕಳಶಬ್ದವನ್ನು ಕೇಳಿ ಮನೋವೇಗ ವಾಯುವೇಗದಿಂದ ಯಮನೇ ಬರುವ ಹಾಗೆ ಬಂದು ತಾಗಿದನು. ಅಕ್ಟೋಹಿಣೀಸೈನ್ಯದ ಒಡೆಯನಾದ ದಂಡಧಾರನು ಪೌರುಷಗುಣಕ್ಕೆ ಆಶ್ರಯವಾಗಿ ಮದೋದಕವು ಸುರಿಯುತ್ತಿರುವ ಕಪೋಲವುಳ್ಳ ಮದ್ದಾನೆಯನ್ನು ತಿವಿದು ಭೂಬಿಟ್ಟನು. ೮೭. ಅರ್ಜುನನೊಡನೆ ಕಾದಲು ಎದುರಿಸಿ ಬಂದ ಶತ್ರುವು ದುಂಬಿಗೆ ಎದುರಾದ ಸಂಪಗೆಯ ಹೂವಿನಂತೆ ದೂರವಾಯಿತು. ಇದೊಂದೇ ಆನೆಯೊಡನೆ ಇವನೊಬ್ಬನೆ ಪ್ರತಿಭಟಿಸಿದರೇನಾಯಿತು. ಇದಕ್ಕೆ ಪರಿಹಾರವನ್ನು ನಾನು ತಿಳಿದಿದ್ದೇನೆ ಎಂದು ಕೋಪಿಸಿ ಹೊಡೆಯಲು ಅರ್ಜುನನಿಂದ ದಂಡಧಾರನ ಶರೀರದೊಡನೆ ಆ ಆನೆಯು ಸೌಳೆಂದು ಸೀಳಿ ವಿಭಾಗಿಸಿದ ಹಾಗಾಯಿತು. ವll ಹಾಗೆ ಅವನು ಯಮನ ಮನೆಯನ್ನು ಸೇರಲಾಗಿ ೮೮. ಇನ್ನು ಸ್ವಲ್ಪ ಕಾಲವಿದ್ದರೆ ಯುದ್ಧದಲ್ಲಿ ಅರ್ಜುನನು ನನ್ನ ಮಗನಾದ ಕರ್ಣನನ್ನೂ ಸಾಯಿಸುತ್ತಾನೆ. ಇದನ್ನು ನಾನು ನೋಡಲಾರೆ ಎನ್ನುವ ಹಾಗೆ ಅಷ್ಟರಲ್ಲಿ ಸೂರ್ಯನು ಮುಳುಗಿದನು. ವರ ಯುದ್ಧವನ್ನು ನಿಲ್ಲಿಸಲು ಸೂಚನೆಕೊಡುವ ವಾದ್ಯವನ್ನು ಬಾಜಿಸಲು ಎರಡು ಸೈನ್ಯಗಳೂ ತಮ್ಮತಮ್ಮಬೀಡುಗಳಿಗೆ ತೆರಳಿದುವು. ಆಗ ದುರ್ಯೊಧನನಲ್ಲಿಗೆ ಕರ್ಣನು ಬಂದು ಅಶ್ವಶಾಸ್ತ್ರವನ್ನು ಚೆನ್ನಾಗಿ ತಿಳಿದ ಭೀಷ್ಕರು ತಿಳಿಸಿದ ಮಾತನ್ನು ರಹಸ್ಯವಾಗಿ ತಿಳಿಸಿದನು. ಮುಕ್ಕಣ್ಣನಾದ ಈಶ್ವರನಲ್ಲಿ ಕಲಿತ
Page #598
--------------------------------------------------------------------------
________________
* ದ್ವಾದಶಾಶ್ವಾಸಂ | ೫೯೩ ತ್ರಿಣೇತ್ರನೊಳ್ ಕಲಶೃಹೃದಯದೊಳಂ ರಥಕಲ್ಪದೊಳಂ ಶಲ್ಯಂ ಮುರಾಂತಕಂಗಂ ಪ್ರವೀಣನಪ್ಪುದದೆಂದಾತನನೆಂತಾನುಮೊಡಂಬಡೆ ನುಡಿದು ನಿನಗೆ ಸಾರಥಿ ಮಾಡುವೆನೆಂದು ದಿನಕರತನೂಜನಂ ಬೀಡಿಂಗೆ ಪೋಗಲ್ವಟ್ಟು ಪೊನ್ನ ಹಣ್ಣುಗೆಯ ಪಿಡಿಯನೇಟಿ ದಿನಕರನ ಬಣಿದಪ್ಪಿದ ಕಿರಣಂಗಳ್ ಕುಲೆಯಂ ಕಂಡಳ್ಳಿ ತನ್ನ ಮತಯಂ ಪೊಕ್ಕಂತೆ ಕೆಯೀವಿಗೆಗಳ ಬೆಳಗೆ ಕಿಚಿದಾನುಂ ಮಾನಸರ್ವೆರಸು ರಾಜರಾಜಂ ಮದ್ರರಾಜನ ಮನೆಗೆ ಬರ್ಪುದುಮಾತನತ್ಯಂತ ಸಂಭ್ರಮಾಕ್ರಾಂತಹೃದಯನಾಗಿ ಬೇಗಮಿದಿರೇಟಿಮಲ್ಲಿಕಾಮಾಲೆ | ಅಂತೆ ಕುಳ್ಳಿರಿರಪೊಡಿಂ ನಿಮಗಾಣೆಯಂದಿರವೇನ್ಗಳಾ
ಕಾಂತನುಂ ತೊಡೆಗೊಂಕಿ ಕುಳ್ಳಿರೆ ಬಾಚಿಯುಳೋದೆ ನೀನೆ ಬ ರ್ಪಂತುಳಾದುದೆ ಪೇಟ ನೀಂ ಬಚಿಯಟ್ಟಲಾಗದೆ ಕೆಮ್ಮನಿ
ನ್ನೆಂತುಮೇಂ ಮನೆವಾಚಿಯಂ ಬೆಸಸಿ ಬಂದೆಯಿಳಾಧಿಪಾ || ಕಂll ಬೆಸಸೆನೆಯುಂ ನುಡಿಯಲ್ ಶಂ
ಕಿಸಿದವೆ ನಾನೆಂದೊಡೇಕೆ ಶಂಕಿಸುವೆ ನೀಂ | ಬೆಸವೇನೆ ಜಯವಧು ಕೂ
ರ್ತೊಸೆದಿರ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ || ೯೦ ಕ೦ll , ಪುಸಿಯನೆ ರಥಮಂ ಹರಿ ಚೋ
ದಿಸುವಂತವೊಲಿರ್ದದಂತು ನರನಂ ಗೆಲಿಪಂ | ವಿಸಸನದೊಳಂತೆ ನೀಮುಂ |
ಪೆಸರಂ ಕರ್ಣಂಗೆ ಮಾಡಿ ಗೆಲ್ಲಂಗೊಳ್ಳಿಂ || ಅಶ್ವಹೃದಯದಲ್ಲಿಯೂ ರಥಕಲ್ಪದಲ್ಲಿಯೂ ಶಲ್ಯನು ಶ್ರೀಕೃಷ್ಣನಿಗಿಂತಲೂ ಹೆಚ್ಚು ತಿಳಿದವನಾದುದರಿಂದ ಅವನನ್ನು ಹೇಗಾದರೂ ಮಾಡಿ ಒಪ್ಪುವ ಹಾಗೆ ಮಾಡಿ ನಿನಗೆ ಸಾರಥಿಯನ್ನಾಗಿ ಮಾಡುತ್ತೇನೆ ಎಂದು ಕರ್ಣನನ್ನು ಬೀಡಿಗೆ ಹೋಗಹೇಳಿದನು. ಚಿನ್ನದಿಂದ ಅಲಂಕಾರಮಾಡಿದ ಹೆಣ್ಣಾನೆಯನ್ನು ಹತ್ತಿಕೊಂಡು ಸೂರ್ಯನ ದಾರಿಯನ್ನು ತಪ್ಪಿದ ಕಿರಣಗಳು ಕತ್ತಲೆಯನ್ನು ಕಂಡು ಹೆದರಿ ತನ್ನ ಆಶ್ರಯವನ್ನು ಪ್ರವೇಶಿಸಿದ ಹಾಗೆ ಕೈದೀವಟಿಗೆಗಳು ಪ್ರಕಾಶಿಸಲು ಕೆಲವೇ ಪರಿಜನರೊಡನೆ ದುರ್ಯೋಧನನು ಮದ್ರರಾಜನಾದ ಶಲ್ಯನ ಮನೆಗೆ ಬಂದನು. ಅವನು ಅತ್ಯಂತ ಸಂಭ್ರಮದಿಂದ ಕೂಡಿದ ಮನಸ್ಸುಳ್ಳವನಾಗಿ ವೇಗದಿಂದ ಇದಿರಾಗಿ ಎದ್ದು ಬಂದನು- ೮೯. ಹಾಗೆಯೇ ಕುಳಿತುಕೊಳ್ಳಿ; ಇರದಿದ್ದರೆ ನಿಮ್ಮಮೇಲಾಣೆಯೆಂದು ಕುಳಿತುಕೊಂಡೇ ಇರಬೇಕೆಂದು ಹೇಳಿ ರಾಜನ ತೊಡೆಸೋಂಕಿನಷ್ಟು ಹತ್ತಿರ ಕುಳಿತುಕೊಂಡನು. “ಕಾರ್ಯವಿದ್ದರೆ ನೀನೇ ಬರುವ ಹಾಗಾಯಿತೇ ಹೇಳು, ನೀನು ದೂತರ ಮೂಲಕ ಹೇಳಿ ಕಳುಹಿಸ ಬಾರದಾಗಿತ್ತೇ? ಸುಮ್ಮನೆ ಇನ್ನು ನೀನೇ ಬಂದಮೇಲೆ ಹೇಗೆ? ರಾಜನೇ ಯಾವ ಗೃಹಕೃತ್ಯದ ಮಾತನ್ನು ತಿಳಿಸುವುದಕ್ಕೆ, ಆಜ್ಞೆ ಮಾಡುವುದಕ್ಕೆ ಬಂದಿರುವೆ”, ೯೦. ಹೇಳು, ಎಂದರೂ 'ನುಡಿಯುವುದಕ್ಕೆ ನಾನು ಸಂದೇಹಪಡುತ್ತೇನೆ' ಎನ್ನಲು ಏಕೆ ಶಂಕಿಸುತ್ತೀಯೆ. ಆಜ್ಞೆ ಮಾಡು' ಎನ್ನಲು, 'ಮಾವ, ಜಯಲಕ್ಷ್ಮಿಯು ನಿಮ್ಮದಯೆಯಿಂದ ನಮ್ಮನ್ನು ಪ್ರೀತಿಸಿ ಅನುರಾಗದಿಂದಿರುತ್ತಾಳೆ' ೯೧. ಕೃಷ್ಣನು ಅರ್ಜುನನ ತೇರನ್ನು
Page #599
--------------------------------------------------------------------------
________________
೫೯೪ | ಪಂಪಭಾರತಂ
ವೋಗಿ
ವ|| ಎಂಬುದುಂ ಮದ್ರರಾಜನುಮಚ್ಚರದೊಳುಮ್ಮನೆ ಬೆಮರ್ತು ಕಿನಿಸಿ ಕಿಂತಿದೆ
ಚoll
ಕಲಿಯನೆ ಪಂದೆ ಮಾಲ್ಪ ಕಡುವಂದೆಯನೊಳಲಿ ಮಾಳಿ ತಕ್ಕನಂ ಪೊಲೆಯನೆ ಮಾಲ್ಪ ಮುಂ ಪೊಲೆಯನಂ ನೆ ತಕ್ಕನೆ ಮಾಲ್ಪ ತಮ್ಮೊಳ | ಗ್ಗಲಿಸಿ ಪೊದಟ್ಟ ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂ ಚಲಮದಚೆಂದಮೋಲಗಿಸಿ ಬಾಳ್ವುದೆ ಕಷ್ಟಮಿಳಾಧಿನಾಥರಂ ||
೯೨
ಅನುಪಮ ವಿಕ್ರಮಕ್ರಮಮುದಾರಗುಣಂ ಋತವಾಕ್ಯವೆಂಬ ಪೆಂ ಪೆನಲಿವು ಮೂಜಿ ನಾಲೆ ಗುಣಮತ್ತ ಮದಾನ್ವಿತರಾಜಬೀಜಸಂ | ಜನಿತಗುಣಂ ಮದಂ ಮದಮನಾಳವಿವೇಕತೆಯಿಂದಮಲೆ ತೊ ಅನ ಮೊಲೆವಾಲನುಂಡ ಗುಣಮಿಂತಿವನಾರ್ ಕಿಡಿಪರ್ ನರೇಂದ್ರರೊಳ್ || ೯ ೩
ell ಪಿಂದೆ ಕಡಂಗಿ ತೇರನೆಸಗೆಂಬವನಂಬಿಗನಾಜಿ ರಂಗದೊಳ್
ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಲುಕಾಳನಾಗ ಮ | ತಂದನಚೋದನಕ್ರಮಮದುಂ ಪೊಲೆಯಂಗಮರ್ದಿಕರ್ುಮಂತುಟಂ ನೀಂ ದಯೆಗೆಯ್ದು ಪೇಟೆಯಿದನಾರ್ ಪಡೆವರ್ ಫಣಿರಾಜಕೇತನಾ | ೯೪
ನಡೆಸುವವನಂತೆ ನಟಿಸಿಕೊಂಡಿದ್ದು ಅರ್ಜುನನು ಗೆಲ್ಲುವಂತೆ ಹೇಗೆ ಮಾಡುವನೋ ಹಾಗೆಯೆ ಯುದ್ಧರಂಗದಲ್ಲಿ ನೀವೂ ಕೂಡ ಕರ್ಣನಿಗೆ ಹೆಸರನ್ನುಂಟುಮಾಡಿ ಗೆಲುವನ್ನು ಸಂಪಾದಿಸಿ ಕೊಡಬೇಕು' ವ| ಎನ್ನಲು ಶಲ್ಯನು ಕೋಪದಿಂದ ಬಿಸಿಬಿಸಿಯಾಗಿ ಬೆವರಿ ಕೆರಳಿ ಕಿಡಿ ಕಿಡಿಯಾದನು. ೯೨. ಶೂರನನ್ನು ಹೇಡಿಯಾಗಿ ಮಾಡುವ, ಪೂರ್ಣಹೇಡಿಯನ್ನು ಉತ್ತಮಶ್ವರನನ್ನಾಗಿ ಮಾಡುವ, ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ, ಮೊದಲು ಹೊಲೆಯನಾಗಿದ್ದವನನ್ನು ಪೂರ್ಣಯೋಗ್ಯನನ್ನಾಗಿ ಮಾಡುವ, ತಮ್ಮಲ್ಲಿ ಅತ್ಯಧಿಕವಾಗಿ ಹಬ್ಬಿರುವ ಅವಿವೇಕತೆಯಿಂದ ರಾಜರ ಮನಸ್ಸಿನ ಸ್ಥಿತಿ ಬಹಳ ಚಂಚಲವಾದುದು. ಆದುದರಿಂದ ರಾಜರನ್ನು ಸೇವೆ ಮಾಡಿ ಬಾಳುವುದೇ ಕಷ್ಟ. ೯೩. ಅಸಮಾನವಾದ ಪರಾಕ್ರಮದ ರೀತಿ, ಔದಾರ್ಯಗುಣ, ನೇರವಾದ ಸತ್ಯವಾಕ್ಕು, ಇವು ಮೂರು ನಾಲ್ವೇ ಗುಣಗಳು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ರಾಜವಂಶದಲ್ಲಿ ಹುಟ್ಟಿದ ಗುಣ (ವಂಶಮದ) ಅಹಂಕಾರ, ಅಹಂಕಾರದಿಂದ ಕೂಡಿದ ಅವಿವೇಕತೆ, ಇದರೊಡನೆ ಕೂಡಿದ ದಾದಿಯ ಮೊಲೆಹಾಲನ್ನು ಕುಡಿದ ಗುಣ ಇವುಗಳಲ್ಲವೇ? ೯೪. ಹಿಂದುಗಡೆ ಉತ್ಸಾಹದಿಂದ ಕೂಡಿ ತೇರನ್ನು ನಡೆಸು ಎನ್ನುವವನು ಅಂಬಿಗ, ಯುದ್ಧದಲ್ಲಿ ಮುಂಭಾಗದಲ್ಲಿ ನನಗೆ ಸಮಾನನಾಗಿ (ಸಾರಥಿಯಾಗಿ) ಕೆಲಸದಲ್ಲಿರುವವನು ದನಕಾಯುವವನು (ಗೋವಳಿಗ), ರಥವನ್ನು ನಡೆಸುವ ನನ್ನ ರೀತಿಯದು ಹೊಲೆಯನಿಗೆ ಸರಿಯಾದುದಾಗಿ ಒಪ್ಪಿರಲು ಅಷ್ಟನ್ನು ನೀನು ದಯಮಾಡಿ ಹೇಳಿದೆಯಲ್ಲ ದುರ್ಯೋಧನ ಇಂತಹ ಅದೃಷ್ಟವನ್ನು ಯಾರು ತಾನೆ ಪಡೆಯುತ್ತಾರೆ?
Page #600
--------------------------------------------------------------------------
________________
೯೫
ದ್ವಾದಶಾಶ್ವಾಸಂ | ೫೯೫ ಕಂ|| ಎನಿಲ್ಲದಿರ್ದೊಡು ಸ
* ಜೈನರುಂ ಪತಿಹಿತರುಮಳೆಯವೇಲ್ಕುಂ ನೀನಿ | ನೈನಿತಂ ಕೂರದೊಡಂ ನಿ
ಇ ನುಡಿಯನಾನಾಜಿರಂಗದೊಳ್ ಮಿಜುವನೇ || ವಗ ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜಕೇತನನಿಂತೆಂದಂಕಂ| ನೀಮೆನಗಿನಿತಂ ಕೆಮ್ಮನೆ
ಮಾಮ ಮನಂ ನೊಂದು ಬೆಸಸಿದಿರ್ ಬಿನ್ನಪಮಂ | ನೀಮವಧಾರಿಸಿಮೆಂತನೆ ಸಾಮಾನ್ಯದ ಮನುಜನಲ್ಲನಂಗಮಹೀಶಂ || ಕುಲಹೀನನೆ ಅಪೊಡೆ ಕೇ ವಲಬೋಧಂ ಪರಶುರಾಮನೇನೀಗುವೆ ನಿ | ರ್ಮಲಿನಕುಲಂಗಲ್ಲದೆ ಪಿಡಿ ಯಲಲ್ಲದಂತಪ್ಪ ದಿವಬಾಣಾವಳಿಯಂ | ಮಣಿಕುಂಡಲಮುಂ ಕವಚಂ ಮಣಿಯದ ಚಾರಿತ್ರಮುಗ್ರತೇಜಮುಮೀಯೊ | ಲೈುಣಮುಂ ಕಲಿತನಮುಮಂ ಪ್ರಣತಾರೀ ಸೂತಸುತನೊಳೊಡವುಟ್ಟುಗುಮೆ ಕಲಿತನದ ನೆಗದ್ದಿ ಕಸವರ ಗಲಿತನದ ಪೊದು ಪರಮಕೋಟಿಗೆ ಪರಾರ್ | ಸಲೆ ಕರ್ಣನಲ್ಲದೆನಿಸುವ ಕಲಿತನಮಂ ಹರಿಗೆ ಕವಚಮಿತ್ತುದೆ ಪೇಯ್ಡುಂ ||
೯೫. ಎಷ್ಟು ಮನಸ್ಸಿಗೆ ಒಪ್ಪದಿದ್ದರೂ ಸತ್ಪುರುಷರೂ ಪತಿಗೆ ಹಿತರಾದವರೂ ಒಪ್ಪಬೇಕು ತಾನೇ ? ನೀನು ಇನ್ನೆಷ್ಟು ಪ್ರೀತಿಸದಿದ್ದರೂ ನಿನ್ನ ಮಾತನ್ನು ನಾನು ಯುದ್ಧರಂಗದಲ್ಲಿ ಮೀರುತ್ತೇನೆಯೇ? ವ|| ಎಂದು ವ್ಯಥೆಯಿಂದ ಆಡಿದ ಶಲ್ಯನ ಮಾತಿಗೆ ದುರ್ಯೊಧನನು ಹೀಗೆಂದನು. ೯೬. ಮಾವ ನೀವು ನನಗೆ ಇಷ್ಟನ್ನು ಮನಸ್ಸಿನಲ್ಲಿ ವೃಥಾ ವ್ಯಥೆಪಟ್ಟು ಹೇಳಿದಿರಿ, ನನ್ನ ವಿಜ್ಞಾಪನೆಯನ್ನು ನೀವು ಲಾಲಿಸಿ. ಹೇಗೆಂದರೆ ಕರ್ಣನು ಸಾಮಾನ್ಯ ಮನುಷ್ಯನಲ್ಲ. ೯೭. ಕುಲಹೀನನೇ ಆಗಿದ್ದರೆ ಅಧ್ಯಾತ್ಮಜ್ಞಾನಿಯಾದ ಪರಶುರಾಮನು ಪರಿಶುದ್ಧವಾದ ಕುಲದವರಲ್ಲದವರು ಹಿಡಿಯಲಾಗದ ದಿವ್ಯಾಸ್ತಸಮೂಹವನ್ನು ಅವನಿಗೆ ಕೊಡುತ್ತಿದ್ದನೇ? ೯೮. ವಿಧೇಯರಾದ ಶತ್ರುಗಳನ್ನುಳ್ಳ ಎಲೈ ಶಲ್ಯನೇ ಮಣಿಕುಂಡಲವೂ ಕವಚವೂ ಬಗ್ಗದ ನಡತೆಯೂ ಉಗ್ರವಾದ ತೇಜಸ್ಪೂ - ಈ ಒಳ್ಳೆಯ ಗುಣ ಮತ್ತು ತೇಜಸ್ಸು ಇವು ಸೂತಪುತ್ರನಲ್ಲಿ ಜೊತೆಯಾಗಿ ಹುಟ್ಟುತ್ತವೆಯೇ? ೯೯.ಶೌರ್ಯದ ಮತ್ತು ಪ್ರಸಿದ್ದವಾದ ಔದಾರ್ಯದ ಪರಾಕಾಷ್ಠತೆಗೆ ಸಲ್ಲಲು ಕರ್ಣನಲ್ಲದೆ ಮತ್ತಾರಿದ್ದಾರೆ ಎನ್ನಿಸುವ ಶೌರ್ಯವನ್ನು ಇಂದ್ರನಿಗೆ ಕವಚವನ್ನು
Page #601
--------------------------------------------------------------------------
________________
೫೯೬ | ಪಂಪಭಾರತಂ
ವ|| ಎಂದು ಕುರುಕುಲಚೂಡಾಮಣಿ ಶಲ್ಯನ ಹೃಚ್ಛಲಮೆಲ್ಲಮುಂ ಕಲೆ ನುಡಿದೊಡಾತ ನಿಂತೆಂದಂ
ಚoll ಅತಿಯದೆಯುಂ ವಿಚಾರಿಸದೆಯುಂ ನೃಪ ನೀಂ ನೆಗಟ್ಟನ್ನೆಯಲ್ಲಿಯಾ
ನಟಿವೆನದಂತೆ ಕರ್ಣನಣೆಗಂ ತೊಣೆಗಂ ನೃಪರಾರುಮಿಲ್ಲ ಚ | ಳ್ಳು ರಿಪುಸೇನ ತೇರನೂಸದಾನೆಸಗುತ್ತಿರೆ ಕರ್ಣನಂ ಗೆಲಲ್ | ನೆವರೆ ನಾಳೆ ಫಲ್ಗುಣನುಮಚ್ಯುತನುಂ ರಣರಂಗಭೂಮಿಯೊಳ್ || ೧೦೦
ಕ೦ll ಒಂದೆ ಗಡ ಹರಿಯ ಪೇಲೊಂ
ದಂದದೆ ನರನೆಸಗುವಂತ ಕರ್ಣನುಮನ್ನಂ | ದೊಂದೂಜೆಯೋಳೆಸರದೊಡಾಂ ಸ್ಕಂದನದಿಂದಿಳಿದು ಪೋಪೆನಸಗಂ ತೇರಂ ||
-
DOD
೧೦೧
ಎಂಬುದುಮಂಗಮಹೀಪತಿ ಯಂ ಬರಿಸಿ ಮಹಾಜಿಯಲ್ಲಿ ಮಾವು ತಾನೇ | ನೆಂಬನದನಂತ ಮೀಜದೂ ಡಂಬಡು ನೀನೆಂದು ಭೂಭುಜಂ ಪ್ರಾರ್ಥಿಸಿದಂ |
೧೦೨ ವ|| ಅಂತಿರ್ವರುಮನೊರ್ವರೊರ್ವರೊಳೊಡಂಬಡಿಸಿ ತನ್ನೊಡನೆಟ್ಟು ನಿಂದಿರ್ದ ಮದ್ರರಾಜನನಿರಟ್ಟು ಕರ್ಣನುಂ ತಾನುಂ ನಿಜನಿವಾಸಂಗಕ್ಕೆ ಪೋದರಾಗಳಾ ಪಡೆಮಾತನಜಾತಶತ್ರು ಕೇಳು ಮುರಾಂತಕಂಗೆ ಬಲಿಯನಟ್ಟಿ ಬರಿಸಿ
ಕೊಟ್ಟಿದ್ದೇ ಹೇಳುತ್ತದೆ. ವ|| ಎಂದು ಕುರುಕುಲಚೂಡಾಮಣಿಯಾದ ದುರ್ಯೊಧನನು ಶಲ್ಯನ ಹೃದಯದ ನೋವೆಲ್ಲವೂ ಸಡಿಲವಾಗುವಂತೆ ಹೇಳಲು ಅವನು ಹೀಗೆಂದನು. ೧೦೦. ರಾಜನೇ ನೀನು ತಿಳಿಯದೆಯೂ ವಿಚಾರಮಾಡದೆಯೂ ಕಾರ್ಯ ಮಾಡುವಂಥವನಲ್ಲ, ಅದನ್ನು ನಾನು ಬಲ್ಲೆ.ಕರ್ಣನಿಗೆ ಸಮಾನರಾದ ರಾಜರಾರೂ ಇಲ್ಲ. ಶತ್ರುಸೈನ್ಯಕ್ಕೆ ಭಯವಾಗುವ ರೀತಿಯಲ್ಲಿ ನಾನು ಪ್ರೀತಿಯಿಂದ (ಮನಃಪೂರ್ವಕವಾಗಿ) ತೇರನ್ನು ನಡೆಸುತ್ತಿದ್ದರೆ ನಾಳೆ ಕೃಷ್ಣನೂ ಅರ್ಜುನನೂ ಯುದ್ಧಭೂಮಿಯಲ್ಲಿ ಕರ್ಣನನ್ನು ಗೆಲ್ಲಲು ಸಮರ್ಥರಾಗುತ್ತಾರೆಯೇ? ೧೦೧. ಆದರೆ ಒಂದು ವಿಷಯ, ಕೃಷ್ಣನು ಹೇಳಿದ ರೀತಿಯಲ್ಲಿ ಅರ್ಜುನನು ಮಾಡುವಂತೆ ಕರ್ಣನೂ ನಾನು ಹೇಳಿದ ಕ್ರಮದಲ್ಲಿ ಮಾಡದೇ ಹೋದರೆ ತೇರನ್ನು ಇಳಿದು ಹೋಗುತ್ತೇನೆ. ತೇರನ್ನು ನಡೆಸುವುದಿಲ್ಲ. ೧೦೨. ಎನ್ನಲು ಕರ್ಣನನ್ನು ಬರಮಾಡಿ ಈ ಮಹಾಯುದ್ದದಲ್ಲಿ ಮಾವನು ತಾನೇನು ಹೇಳುತ್ತಾನೆಯೋ ನೀನು ಅದನ್ನು ಹಾಗೆಯೇ ಮೀರದೆ ಒಪ್ಪಿಕೊ ಎಂದು ಮಹಾರಾಜನು ಪ್ರಾರ್ಥಿಸಿದನು. ವನ ಹಾಗೆ ಇಬ್ಬರನ್ನೂ ಒಬ್ಬರನ್ನೊಬ್ಬರು ಒಪ್ಪುವ ಹಾಗೆ ಮಾಡಿ ತನ್ನೊಡನೆ ಎದ್ದು ನಿಂತಿದ್ದ ಶಲ್ಯನನ್ನು ಅಲ್ಲಿಯೇ ಇರಲು ಹೇಳಿ ಕರ್ಣನೂ ತಾನೂ ತಮ್ಮ ಮನೆಗಳಿಗೆ ಹೋದರು. ಈ ಸಮಾಚಾರವನ್ನು ಧರ್ಮರಾಯನು ಕೇಳಿ ಕೃಷ್ಣನಲ್ಲಿಗೆ ದೂತರನ್ನು ಕಳುಹಿಸಿ ಬರಮಾಡಿ
Page #602
--------------------------------------------------------------------------
________________
ದ್ವಾದಶಾಶ್ವಾಸಂ | ೫೯೭
ಗಲಲರಿದುಂತ ಸೂತಸುತನಂ ರಣರಂಗದೊಳೆಂಬುದೊಂದು ಪಂ ಬಲೆ ಪಿರಿದಂತವರಿಗೊಸೆದು ತರೆಸಮಂ ಗಡ ನಾಳೆ ಶಲ್ಯನೀ | ಕಲಹಮಿದೆಂತು ದಲ್ ಬಿದಿರ ಗಂಟುಗಳಂ ಕಳೆವಂತೆ ಮನ್ಮನಃ ಸಲನೆಯನುಂಟುಮಾಡಿದಪುದಿಲ್ಲಿಗೆ ಕಜ್ಜಮದಾವುದಚ್ಯುತಾ || 309
ವ|| ಎಂಬುದುಂ ನೀನೆಂದಂತೆ ರಥಕಲ್ಪವೆಂಬುದು ಶಲ್ಯಂಗೊಡವುಟ್ಟಿದುದಾದೊಡ ಮವರಿವರ್ಗಮೊರ್ವರೋರ್ವರೊಳ್ ಮೂಗುದುಪಿಸಲಾಗದ ಕಡ್ಡಮವರ್ಗಂತುಮೊಡಂಬಡಾಗದ ದಲ್ಲದೆಯುಂ
Z11
ಚoll
ಕರ್ಣಂಗಂಡ ಕಲ್ಲರ್ ನುಡಿವ ಪಸುಗೆಯಂ ಗಂಡರಾ ಗಂಡವಾತುಂ ಕರ್ಣಂ ಮುಂ ಪುಟ್ಟೆ ಪುಟ್ಟಿತ್ತಳವಮರ್ದೊಡವುಟ್ಟಿತ್ತು ಪೂಣೀವ ಚಾಗಂ | *ಕರ್ಣಂಗೊಡ್ಡಿತ್ತು ದಲ್ ಭಾರತಮನೆ ಜಗದೊಳ್ ಸಂದನೇಂ ಸಂದೊಡಾಂತಾ ಕರ್ಣಾಂತಾಕೃಷ್ಟ ಬಾಣಾವಳಿಯೊಳೆ ಹರಿಗಂ ಕರ್ಣನಂ ನಾಳೆ ಕೋಲ್ಕುಂ | ೧೦೪
ಕಂ||
ಎಂಬನಗಮಾಗಳಾ ಏಕ
ಚಾಂಬುಜಸೌರಭಮನೊಸೆದು ಸೇವಿಸುವಾ ಪ ಣ್ಣುಂಬಿಗಳ ಸರಮನತ್ತಿ ತ
ಅಂಬುತ್ತು ಬಂದುದಾ ಪ್ರಭಾತಸಮೀರಂ ||
008
೧೦೩. ಯುದ್ಧರಂಗದಲ್ಲಿ ಕರ್ಣನನ್ನು ಸುಮ್ಮನೆ (ಯಾರ ಸಹಾಯವಿಲ್ಲದೆ ಏಕಾಕಿಯಾಗಿರುವಾಗಲೇ) ಗೆಲ್ಲಲು ಸಾಧ್ಯವಿಲ್ಲವೆಂಬ ಚಿಂತೆಯೇ ಹಿರಿದಾಗಿದೆ. ಅಂತಹ ಅವನಿಗೆ ನಾಳೆ ಪ್ರೀತಿಯಿಂದ ಶಲ್ಯನು ತೇರನ್ನು ನಡೆಸುತ್ತಾನಂತೆ. ಈ ಯುದ್ಧದಲ್ಲಿ ನಾವು ಹೇಗೆ ಗೆಲ್ಲುವುದು ? ಬಿದಿರಿನ ಗಿಣ್ಣುಗಳನ್ನು ಒಡೆಯುವಂತೆ ನನ್ನ ಮನಸ್ಥೆರ್ಯವನ್ನು ಕದಲಿಸುತ್ತಿದೆ. ಕೃಷ್ಣ, ಈ ಸಮಯದಲ್ಲಿ ಮಾಡಬೇಕಾದ ಕಾರ್ಯವಾವುದು ? ವ| ಎನ್ನಲು ನೀನು ಹೇಳಿದಂತೆ ರಥವಿದ್ಯೆಯೆಂಬುದು ಶಲ್ಯನ ಜೊತೆಯಲ್ಲಿ ಹುಟ್ಟಿದುದಾದರೂ ಅವರಿಬ್ಬರಿಗೂ ಒಬ್ಬೊಬ್ಬರಲ್ಲಿ ಮೂಗುತುರಿಸಿ ಕೊಳ್ಳುವುದಕ್ಕಾಗದ ದ್ವೇಷಾಸೂಯೆಗಳಿವೆ. ಅವರಿಗೆ ಯಾವತ್ತೂ ಒಪ್ಪಿಗೆ ಯೆಂಬುವುದಾಗುವುದಿಲ್ಲ. ಅಲ್ಲದೆಯೂ ೧೦೪, ಶೂರರಾದವರು ಕರ್ಣನನ್ನು ನೋಡಿಯಲ್ಲವೇ ಮಾತನಾಡುವ ವಿವೇಕವನ್ನು ಕಲಿತರು. ಆ ಪೌರುಷಯುಕ್ತವಾದ ಮಾತುಗಳು ಕರ್ಣನು ಹುಟ್ಟಿದ ಮೇಲೆಯೇ ಹುಟ್ಟಿದುವು. ಪ್ರತಾಪಸಹಿತವಾದ ತ್ಯಾಗವೂ ಅವನೊಡನೆಯೇ ಸೇರಿಕೊಂಡು ಹುಟ್ಟಿದುವು. ಭಾರತಯುದ್ಧವೂ ಕರ್ಣನಿಗಾಗಿಯೇ ಒಡ್ಡಿದೆ ಎಂಬ ಜಗತ್ಪಸಿದ್ಧಿಯನ್ನು ಪಡೆದಿದ್ದಾನೆ. ಏನು ಪಡೆದಿದ್ದರೇನು ? ಹರಿಗನಾದ ಅರ್ಜುನನು ನಾಳೆ ಕಿವಿಯವರೆಗೆ ಸೆಳೆದ ತನ್ನ ಬಾಣಸಮೂಹದಿಂದಲೇ ಕರ್ಣನನ್ನು ಕೊಲ್ಲುವನು. ೧೦೫, ಎನ್ನುವಷ್ಟರಲ್ಲಿ ಆ ಅರಳಿದ ಕಮಲದ ಸುವಾಸನೆಯನ್ನು ಸಂತೋಷದಿಂದ ಸೇವಿಸುವ (ಆಘ್ರಾಣಿಸುವ) ಪೆಣ್ಣುಂಬಿಗಳ ಸ್ವರವನ್ನು ಎಬ್ಬಿಸಿ ಅಟ್ಟುತ್ತಾ ಪ್ರಾತಃಕಾಲದ ಮಾರುತವು ಬೀಸಿತು.
Page #603
--------------------------------------------------------------------------
________________
೫೯೮) ಪಂಪಭಾರತಂ
ಸೂತ ನಟ ವಂದಿ ಮಾಗಧ ವೈತಾಳಿಕ ಕಥಕ ಪುಣ್ಯಪಾಠಕ ವಿಪೋ || ದೂತರವಮೆಸೆಯೆ ಜಯ ಜಯ ಗೀತಿಗಳೊರ್ವ್ವದಲೆ ತಡೆಯದೆರಡುಂ ಪಡೆಯೋಳ್ ||
೧೦೬
ಎರಡುಂಪಕ್ಕಮನೆಗಿದ ಕರಿಗಳ ಪಾರ್ದಯ್ ವೇ ಕೊರಲ ಸರಂಭ | ತಿರೆ ಮುರಿವಿಟೀಹಷಾ ಸ್ವರಮಂ ತೋಳದಪುವಲ್ಲಿ ನೃಪ ತುರಗಂಗಳ್ ||
೧೦೭ ಇಂದೆನ್ನ ಮಗನನರ್ಜುನ ನೊಂದುಂ ತಳ್ಳಿಲ್ಲದವನವನಂ ನೀಂ ಕಾ || ಯೆಂದು ಸುರಪತಿಯ ಕಾಲ್ವಡಿ ವಂದಮನಿಸಿದುವು ಪಸರಿಪಿನಕಿರಣಂಗಳ 11
೧೦೮ ವ|| ಆಗಳಂಗರಾಜಂ ತನ್ನಂ ಪರಿಚ್ಛೇದಿಸಿ ನೇಪ ಮೂಡೆಯಾಜ್ಞಾವೇಕ್ಷಣಂಗೆಯ್ದು ಸವತ್ಸ ಸುರಭಿಯನಭಿವಂದಿಸಿ ನಿಜ ರಥ ತುರಗ ದಿವ್ಯಾಸ್ತಂಗಳುಳೆಯ ಪಸುರ್ಮಣಿಯನಿಡ ಮುಟಿಯದಂತು ಚಾಗಂಗೆಯು ಚಾಗ ಬೀರದ ಪಯಿಗೆಯನೆತ್ತಿಸಿ ಪಂಚರತ್ನಗರ್ಭಂಗಳಪ್ಪ ಮಂಗಳಜಳಂಗಳಂ ಮಿಂದು ಮೆಯ್ಯನಾಜೆಸಿ ದುಕೂಲಾಂಬರವನುಟ್ಟು ಪೊಸಮಾವುಗೆಯಂ
೧೦೬. ಪೌರಾಣಿಕರು, ನಟುವರು, ಹೊಗಳುಭಟರು, ಸ್ತುತಿಪಾಠಕರು, ಹಾಡುವವರು, ಕತೆಹೇಳುವವರು, ಮಂಗಳಪಾಠಕರು, ಬ್ರಾಹ್ಮಣರು ಮೊದಲಾದವ ರಿಂದ ಎದ್ದ ಜಯಜಯಮಿಶ್ರವಾದ ಗೀತೆಗಳು ಎರಡುಸೈನ್ಯದಲ್ಲಿಯೂ ಸಾವಕಾಶಮಾಡದೆ ಒಟ್ಟಿಗೆ ಪ್ರಕಾಶಿಸಿದುವು. ೧೦೭. ಎರಡು ಪಕ್ಷದಲ್ಲಿಯೂ ಮೇಲೆಬಿದ್ದ (ಮುತ್ತಿದ) ಆನೆಗಳು ನಿಟ್ಟಿಸಿ ಕುಗ್ಗಿದ ಕೊರಳಸ್ವರದಿಂದ ಕೂಡಿರಲು ರಾಜಾಶ್ವಗಳು ಆಹಾರವನ್ನು ಬಿಟ್ಟು ಕೆನೆಯುತ್ತಿರುವುವು. (ಇವು ಅಪಶಕುನದ ಸೂಚನೆಗಳು). ೧೦೮. ಈ ದಿನ ನನ್ನ ಮಗನಾದ ಕರ್ಣನನ್ನು ಅರ್ಜುನನು ಸ್ವಲ್ಪವೂ ಸಾವಕಾಶವಿಲ್ಲದೆ ನಾಶಮಾಡುವನು. ಅವನನ್ನು ನೀನು ಕಾಪಾಡು ಎಂದು ಇಂದ್ರನ ಕಾಲನ್ನು ಹಿಡಿಯುವ ರೀತಿಯನ್ನು ಪ್ರಸರಿಸುತ್ತಿರುವ ಸೂರ್ಯನ ಕಿರಣಗಳು ಕೀಳ್ಯಾಡಿದುವು. ವ|| ಆಗ ಕರ್ಣನು ತಾನು ನಿಶ್ಮಿಸಿಕೊಂಡು ಸೂರ್ಯೊದಯವಾಗಲು ತುಪ್ಪದಲ್ಲಿ ತನ್ನ ಮುಖಬಿಂಬವನ್ನು ನೋಡಿ ಕರುವಿನಿಂದ ಕೂಡಿದ ಗೋವನ್ನು ಪೂಜಿಸಿ ದನು. ತನ್ನ ತೇರು, ಕುದುರೆ, ದಿವ್ಯಾಸ್ತಗಳನ್ನು ಬಿಟ್ಟು ಒಂದು ಹಸಿರು ಮಣಿಯೂ ಉಳಿಯದಂತೆ ದಾನಮಾಡಿ ತ್ಯಾಗವೀರದ ಧ್ವಜವನ್ನು ಎತ್ತಿ ಕಟ್ಟಿದನು. ಪಂಚರತ್ನಗಳಿಂದ ಕೂಡಿದ ಮಂಗಳತೀರ್ಥಗಳಲ್ಲಿ ಸ್ನಾನಮಾಡಿ ಶರೀರವನ್ನು ಒಣಗಿಸಿಕೊಂಡು ರೇಷ್ಮೆಯಂಥ ಬಟ್ಟೆಯನ್ನುಟ್ಟು ಹೊಸಪಾದುಕೆಗಳನ್ನು ಮೆಟ್ಟಿ ಚಿನ್ನದ ಉತ್ತರೀಯವನ್ನೂ ಕಟಿಸೂತ್ರವನ್ನೂ ಧರಿಸಿದನು. ಆಚಮನಮಾಡಿ ಚಿನ್ನದ ಕಮಲಗಳಿಂದ ಸೂರ್ಯನಿಗೆ ಅರ್ಥ್ಯವನ್ನೆತ್ತಿ ಕ್ಷೀರಸಮುದ್ರದ ಅಲೆಯ ನೊರೆಗೆ ಸಮಾನವಾದ
Page #604
--------------------------------------------------------------------------
________________
ದ್ವಾದಶಾಶ್ವಾಸಂ | ೫೯೯ ಮೆಟ್ಟಿ ಕನಕಸಂವ್ಯಾನಸೂತ್ರನಾಚಮಿಸಿ ಕನಕಕಮಳಂಗಳಿಂ ಕಮಳಾಕರಬಾಂಧವಂಗರ್ಥ್ಯಮ ಪಾಲ್ಗಡಲ ತೆರೆಯ ನೊರೆಯ ದೊರೆಯ ದುಕೂಲಾಂಬರದೊಳಿಂಬಾಗಿ ಚಲ್ಲಣಮನುಟ್ಟು ಪುಡಿಗತ್ತುರಿಯಂ ತಲೆಯೊಳ್ ತೀವೆ ಪೊಯ್ದು ಪಸಿಯ ನೇತ್ರದಸಿಯ ಪಾಳೆಯೊಳ್ ತಲೆನವಿರಂ ಪಚ್ಚುಗಂಟಿಕ್ಕಿ ಮಣಿಮಯಮಕುಟಮಂ ಕವಿದು ತೋರ ನೆಲ್ಲಿಯ ಕಾಯಂ ಪಿರಿಯವಪ್ಪ ಮುತ್ತಿನ ಬ್ರಹ್ಮಸೂತ್ರಮನೇಲಲಿಕ್ಕಿ ಪಸದನಮನೆನಗಿಂದಿನಿತೆ ಎಂಬಂತೆ ನೆಯ ಕೆಯ್ಯು ಬಂದು ಮದ್ರರಾಜಂಗೆ ಪೊಡೆವಟ್ಟು ಸನ್ನಣಂಗಳನೆಲ್ಲಮನಾತಂಗೆ ನೆಯ ತುಡಿಸಿಕಂ| ತಿದಿಯುಗಿದು ಕೊಟ್ಟೆನೊಡವು
ಟೈದ ಕವಚಮನಮರಪತಿಗೆ ಮುನ್ನಿನ್ನೆನಗೊ | , ಹೃದು ಮಜಯನಾಸೆವಡಲೆಂ.
ದದಟನಣಂ ತುಡನೆ ಕವಚಮಂ ರಾಧೇಯಂ || ವ|| ಆಗಳ್ ಮದಗಜ ಕಕ್ಷಧ್ವಜ ವಿರಾಜಿತಮಪ್ಪ ತನ್ನ ಪೊನ್ನ ರಥಮಂ ಮದ್ರರಾಜನ ನೇಅಲ್ಬಟ್ಟು ಮೂಜು ಸೂಯ್ ಬಲವಂದು ಪೊಡೆವಟ್ಟು ತನ್ನ ಸಗಮನೇಲುವುದನನು ಕರಿಸುವಂತೇಟಿ ನೆಲನಂಬರದೆಡೆಗೆ ಬರ್ಪಂತೆ ರಣರಂಗಭೂಮಿಗೆ ವಂದು ಕುರುರಾಜಧ್ವಜಿನಿಯಂ ಪದವೂಹಮನೊಡ್ಡಿದೊಡೆಕoll ಕಂಸಾರಿಸಖಂ ಪರಿವಿ
ಧ್ವಂಸಿತ ರಿಪುನೃಪಸಮೂಹನೊಡ್ಡಿದನಾಗಳ್ || ಹಂಸವೂಹಮನುತುಂ ಗಾಂಸಂ ತಾಂ ವಿಬುಧವನಜವನಕಳಹಂಸಂ ||
೧೧೦
ರೇಷ್ಮೆಯ ಬಟ್ಟೆಯಲ್ಲಿ ಮನೋಹರವಾಗಿ ಕಚ್ಚೆಯನ್ನುಟ್ಟನು. ಕಸ್ತೂರಿಯ ಹುಡಿ ತಲೆಯ ಮೇಲೆ ತುಂಬ ಚೆಲ್ಲಿಕೊಂಡು ಹಸಿರು ಬಣ್ಣದ ನವುರಾದ ಪಟ್ಟಿಯಲ್ಲಿ ತಲೆಗೂದಲನ್ನು ಭಾಗಮಾಡಿ ಗಂಟಿಕ್ಕಿಕೊಂಡನು. ರತ್ನಮಯಕಿರೀಟವನ್ನು ತಲೆಗೆ ಧರಿಸಿಕೊಂಡನು. ದಪ್ಪವಾದ ನೆಲ್ಲಿಯ ಕಾಯಿಗಿಂತಲೂ ದಪ್ಪವಾದ ಮುತ್ತಿನ ಯಜ್ಯೋಪವೀತವನ್ನು ಜೋಲುಬಿಟ್ಟು ಈ ಅಲಂಕಾರ ಈ ದಿನಕ್ಕೆ ಮಾತ್ರ ಎನ್ನುವ ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡನು. ಶಲ್ಯನಿಗೆ ನಮಸ್ಕಾರಮಾಡಿ ಕವಚಗಳನ್ನೆಲ್ಲ ಆತನಿಗೆ ಪೂರ್ಣವಾಗಿ ತೊಡಿಸಿದನು. ೧೦೯. ಜೊತೆಯಲ್ಲಿ ಹುಟ್ಟಿದ ಕವಚವನ್ನು ಚರ್ಮವನ್ನು ಸುಲಿಯುವ ಹಾಗೆ ಮೊದಲು ಇಂದ್ರನಿಗೆ ಸುಲಿದು ಕೊಟ್ಟೆನು. ಇನ್ನು ನನಗೆ ದೇಹಕ್ಕೆ ಮರೆಯಾದ ಕವಚಾದಿಗಳನ್ನು ಅಪೇಕ್ಷೆಪಡುವುದು ಒಪ್ಪುವುದಿಲ್ಲ ಎಂದು ಪರಾಕ್ರಮಶಾಲಿಯಾದ ಕರ್ಣನು ಕವಚವನ್ನು ತೊಡಲಿಲ್ಲವಲ್ಲ! ವll ಆಗ ಮದ್ದಾನೆಯ ಪಾರ್ಶ್ವದಲ್ಲಿ ವಿರಾಜಮಾನವಾಗಿರುವ ತನ್ನ ಸುವರ್ಣರಥವನ್ನು ಶಲ್ಯನನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತಾನು ಸ್ವರ್ಗವನ್ನು ಹತ್ತುವುದನ್ನು ಅನುಕರಿಸುವಂತೆ ಹತ್ತಿದನು. ಭೂಮಿಯು ಆಕಾಶದೆಡೆಗೆ ಬರುವ ಹಾಗೆ ಯುದ್ಧಭೂಮಿಗೆ ಬಂದು ಕೌರವಸೈನ್ಯವನ್ನು ಪದ್ಮವ್ಯೂಹದಾಕಾರದಲ್ಲಿ ರಚಿಸಿ ಮುಂದಕ್ಕೆ ಚಾಚಿದನು. ೧೧೦. ಶತ್ರುರಾಜರ ಸಮೂಹವನ್ನು ಪೂರ್ಣವಾಗಿ
Page #605
--------------------------------------------------------------------------
________________
೬೦೦/ಪಂಪಭಾರತಂ
ವ|| ಅಂತೊಡ್ಡಿದೊಡ್ಡನೆರಡುಂ ಬಲದ ನಾಯಕರುಂ ತಮ್ಮ ಕೋಪಾಗ್ನಿಗಳನೆ ಬೀಸುವಂತೆ ಕೆಯ್ದಿಸಿದಾಗಳ್
ಚಂ।।
ಕರದಸಿಗಳ್ ಪಳಂಚೆ ಕಿಡಿವಿಗೆದೊಟ್ಟಿಡಿ ತಾರಕಾಳಿಯಂ ತಿರೆ ರಜಮೊಡ್ಡಿನಿಂದ ಮುಗಿಲಂತಿರೆ ಬಾಳುಡಿ ಪಾಲವುಳ್ಳದಂ | ತಿರೆ ತಡವಾದುದಂಬರದೊಳಂಬರಮಂಬಿನೆಗಂ ಜಗತ್ರಯಂ ಬರಮೆಸೆವಂತು ತಳಿಯೆದುವಂದೆರಡುಂ ಬಲಮುಗ್ರಕೋಪದಿಂ ||
000
ವll ಅನ್ನೆಗಂ ದುರ್ಯೊಧನಂಗಾಪರಪ್ಪ ಸಂಸಕರತಿರಥಮಥನನ ರಥಮಂ ತಮ್ಮತ ತೆಗೆಯಲೊಡಮವರ ರಥಕ್ಕೆ ಮದಾಂಧ ಗಂಧಸಿಂಧುರದಂತಮ್ಮನ ಗಂಧವಾರಣಂ ಪರಿದು
ಚಂ|| ಪತಿಪಡದಾಯ್ತು ಭಾರತಮಿವಂದಿರ ಕಾರಣದಿಂದಿವಂದಿರಂ
ಪತಿಪಡೆ ಕೊಂದು ಕರ್ಣನೂಳೆ ಕಾದಲೆವೇದ್ಯಮಮೋಘವೆಂದು ಕಂ | ಗಳಗಳ ಪಾರೆಯಂಬುಗಳೊಳೂ ಕುತ್ತಿಗೆ ಬಿಟ್ಟರೆಯ ಪ ರ್ದೆಡೆಗೆ ಸುರುಳು ಬೀಟ್ಟ ಕಿರುವವೊಲುಗ್ರ ವಿರೋಧಿನಾಯಕರ್ || ೧೧೨
ಧ್ವಂಸಮಾಡಿದವನೂ ಕೃಷ್ಣನ ಸ್ನೇಹಿತನೂ ಎತ್ತರವಾದ ಹೆಗಲನ್ನುಳ್ಳವನೂ ವಿದ್ವಾಂಸರೆಂಬ ಸರೋವರಕ್ಕೆ ರಾಜಹಂಸದಂತಿರುವವನೂ ಆದ ಅರ್ಜುನನು ಹಂಸವ್ಯೂಹವನ್ನು ಒಡ್ಡಿದನು. ವ|| ಹಾಗೆ ಒಡ್ಡಿರುವ ಸೈನ್ಯಗಳ ಎರಡು ಪಕ್ಷದ ನಾಯಕರೂ ತಮ್ಮ ತಮ್ಮ ಕೋಪಾಗ್ನಿಗಳನ್ನೇ ಬೀಸುವಂತೆ (ಯುದ್ಧ ಪ್ರಾರಂಭಸೂಚಕವಾಗಿ) ಕೈಗಳನ್ನು ಬೀಸಿದರು. ೧೧೧. ಕಯ್ಯಲ್ಲಿರುವ ಕತ್ತಿಗಳು ಒಂದಕ್ಕೊಂದು ತಗಲಲು ಕಿಡಿಗಳನ್ನು ಹಾರಿಸಿ ಹುಟ್ಟಿದ ಒಳ್ಳೆಯ ಕಿಡಿಗಳು ನಕ್ಷತ್ರಮಂಡಲದಂತೆ ಕಾಣಿಸಿದುವು. ಧೂಳು ಹರಡಿನಿಂತಿರುವ ಮೋಡದಂತಿದ್ದುವು. ಕತ್ತಿಯ ಚೂರುಗಳು ಹಾರುವ ಉಳ್ಳದ ಹಾಗಿತ್ತು. ಆಕಾಶವು ಆಕಾಶಕ್ಕೆ ತಗುಲಿತು ಎನ್ನುವ ಹಾಗೆ ಮೂರುಲೋಕದವರೆಗೆ ಪ್ರಕಾಶಮಾನವಾಗುವ ಹಾಗೆ ಎರಡು ಸೈನ್ಯಗಳೂ ಉಗ್ರವಾದ ಕೋಪದಿಂದ ತಾಗಿ ಯುದ್ಧಮಾಡಿದುವು. ವ|| ಅಷ್ಟರಲ್ಲಿ ದುರ್ಯೋಧನನಿಗಾಪ್ತರಾದ ಸಂಸಪ್ತಕರು ಅತಿರಥಮಥನನಾದ ಅರ್ಜುನನ ತೇರನ್ನು ತಮ್ಮ ಕಡೆ ತೆಗೆಯಿಸಿಕೊಂಡು ಹೋಗಲು ಅಮ್ಮನ ಗಂಧವಾರಣನಾದ ಅರ್ಜುನನು ಅವರ ರಥಕ್ಕೆ ಅಭಿಮುಖವಾಗಿ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಯಂತೆ ನುಗ್ಗಿದನು. ೧೧೨. ಈ ಸಂಸಪ್ತಕರಿಂದ ಈ ಭಾರತಯುದ್ಧವು ನಿಷ್ಕರ್ಷೆಯಾಗದೆ (ಮುಗಿಯದೇ) ಇದೆ. ಇವರನ್ನು ಕತ್ತರಿಸಿ ಬೀಳುವಂತೆ ಕೊಂದು ಆಮೇಲೆ ಬೆಲೆಯೇ ಇಲ್ಲದ ರೀತಿಯಲ್ಲಿ ಅದ್ಭುತವಾಗಿ) ಕರ್ಣನಲ್ಲಿ ಕಾದಲೇಬೇಕು ಎಂದು ಕೆಂಪಾದ ಗರಿಗಳನ್ನುಳ್ಳ ಹಾರೆಯಂತಿರುವ ಬಾಣಗಳನ್ನು ನಾಟಿ ಗುರಿಯಿಟ್ಟು ಹೊಡೆಯಲು ಶತ್ರುನಾಯಕರು ರಭಸದಿಂದ ಹದ್ದು ಮೇಲೆರಗಲು ಸಣ್ಣ ಹಕ್ಕಿಗಳು ಸುರುಳಿಕೊಂಡು
Page #606
--------------------------------------------------------------------------
________________
ಕಂ ಕಲಕುಮಾದ ರಥಂಗಳಿ
ನಡೆದರಿಭಟರಿಂ ಸುರುಳ ಮದಗಜಘಟೆಯಿಂ ।
ದ್ವಾದಶಾಶ್ವಾಸಂ | ೬೦೧
ಸು ಸುಳದೊಡವರಿದುದು ಕ
ಊಟಿಯೊಳ್ ಭೋರ್ಗರೆವ ತೊಯವೋಲ್ ರುಧಿರಜಳಂ || ೧೧೩
ಪಿರಿದು ಪೊಗಟೆಸಿದ ಪಾಡಿಸಿ
ದರಿಯರನಾನ ಪಿರಿಯರಂ ಪೂಣಿಗರಂ | ಬಿರುದರನದಟಿನೊಳುಬರ
ಮುರಿವರನಾಯ್ಕರಿಸಿ ಕೊಂಡುವರಿಗನ ಕಣೆಗಳ್ ||
ಕಡ ಕೊಳೆ ಪಟದರಿ ನರಪರ
ಕಣೆಕಾಲ್ಗಳ್ ಬೆರಲ ರತ್ನಮುದ್ರಿಕೆಗಳ ಸಂ 1 ದಣಿಯ ಬೆಳಗುಗಳಿನೆಸೆದುವು ರಣರಂಗದೊಳಯುಪಡೆಯ ನಾಗಂಗಳವೋಲ್ ||
ಆಗ ವಿಜಯನ ವೀರ
ಶ್ರೀಗೆ ಕರಂ ಕಿನಿಸಿ ಕಲಿ ಸುಶರ್ಮಂ ಮೆಯ್ಯೋಳ್ | ತಾಗೆ ಪಗೆ ನೀಗೆ ತಲೆಯಂ
ಪೋಗೆಚ್ಚನದೊಂದು ಪರಶು ದಾರುಣಶರದಿಂ ||
004
हैं
೧೧೫
೧೧೬
ವ| ಅಂತು ಸಂಸಪ್ತಕಬಲಕ್ಕಾಳನಾಗಿರ್ದ ಸುಶರ್ಮನಂ ರಾವಣನಂ ರಾಘವಂ ಕೊಲ್ವಂತ ವಿದ್ವಿಷ್ಟವಿದ್ರಾವಣಂ ಕೊಂದೊಡುಟಿದ ನಾಯಕರೆಲ್ಲರ್ ತಮ್ಮಾಳನ ಸಾವು ಕಂಡು ರಿಪುಕುರಂಗ
ಬೀಳುವ ಹಾಗೆ ಬಿದ್ದರು. ೧೧೩. ಅಸ್ತವ್ಯಸ್ತವಾದ ತೇರುಗಳಿಂದಲೂ ಸತ್ತ ಶತ್ರುವೀರರಿಂದಲೂ ಸುರುಳಿಗೊಂಡು ಬಿದ್ದ ಮದ್ದಾನೆಗಳಿಂದಲೂ ರಕ್ತಪ್ರವಾಹವು ಭೋರೆಂದು ಶಬ್ದ ಮಾಡುತ್ತ ಕಲ್ಲುಗಳಿಂದ ಕೂಡಿರುವ ಪಾತ್ರದಲ್ಲಿ ಹರಿಯುವ ನದಿಯಂತೆ ಸುಳಿಸುಳಿಯಾಗಿ ಜೊತೆಯಲ್ಲಿಯೇ ಹರಿಯಿತು. ೧೧೪, ಹಿರಿದಾಗಿ ಹೊಗಳಿಸಿಕೊಂಡವರು ಹಾಡಿಸಿಕೊಂಡವರು ಎದುರಿಸಲು ಅಸಾಧ್ಯರಾದವರು ಪ್ರತಿಜ್ಞೆ ಮಾಡಿದವರು ಬಿರುದುಳ್ಳವರು ಪರಾಕ್ರಮದಿಂದ ವಿಶೇಷವಾಗಿ ಉರಿಯುತ್ತಿರುವವರು ಮೊದಲಾದವರನ್ನೆಲ್ಲ ಅರ್ಜುನನ ಬಾಣಗಳು ಹುಡುಕಿಕೊಂಡು ಬಂದು ನಾಟಿದುವು. ೧೧೫, ತಗಲಲು ಕತ್ತರಿಸಿಬಿದ್ದಿದ್ದ ಶತ್ರುರಾಜರ ಅಡಿಯ ಕಾಲುಗಳ ಬೆರಳಿನ ರತ್ನದುಂಗುರಗಳ ಬೆಳಗಿನ ಸಮೂಹದಿಂದ ಯುದ್ಧರಂಗದಲ್ಲಿ ಅಯ್ದು ಹೆಡೆಯ ಹಾವುಗಳ ಹಾಗೆ ಪ್ರಕಾಶಿಸಿದುವು. ೧೧೬. ಆಗ ಅರ್ಜುನನ ಶೌರ್ಯದ ಮಹತ್ವಕ್ಕೆ (ವಿಜಯಲಕ್ಷ್ಮಿಗೆ) ವಿಶೇಷವಾಗಿ ಕೋಪಿಸಿಕೊಂಡು ಶೂರನಾದ ಸುಶರ್ಮನು ಶರೀರವನ್ನು ತಾಗಲು (ಮೇಲೆ ಬೀಳಲು) (ಅರ್ಜುನನು) ದ್ವೇಷವು ತೀರುವಂತೆ ಒಂದು ಕೊಡಲಿಯಂತಿರುವ ಕ್ರೂರವಾದ ಬಾಣದಿಂದ ತಲೆಯು ಕತ್ತರಿಸಿ ಹೋಗುವ ಹಾಗೆ ಹೊಡೆದನು. ವ|| ಹಾಗೆ ಸಂಸಪ್ತಕರ ಸೈನ್ಯಕ್ಕೆ ಯಜಮಾನನಾಗಿದ್ದ (ಒಡೆಯನಾಗಿದ್ದ ಸುಶರ್ಮನನ್ನು, ರಾವಣನನ್ನು ರಾಮನು
Page #607
--------------------------------------------------------------------------
________________
೬೦೨) ಪಂಪಭಾರತಂ ಕಂಠೀರವನಂ ಮಾರ್ಕೊಂಡು ಕಾದುತ್ತಿರ್ದರನ್ನೆಗಮಿತ್ತ ಕರ್ಣನುವುದೀರ್ಣವೀರ ರಸಾಸ್ವಾದನಲಂಪಟನಾಗಿ ನೀಮೆಲ್ಲಮಿಂದನ್ನ ಕಾಳಗಮಂ ಸುರಿಗೆಗಾಳೆಗಮಂ ನೋಟ್ಟಂತೆ ನೋಟ್ಟುದೆಂದು ಕೌರವಬಲದ ನಾಯಕರೆಲ್ಲರುಮನೊಡ್ಡಿ ಪಾಂಡವಬಲಕ್ಕೆ ಮೀು ಬರ್ಪಂತ ಬಂದು ತಾಗಿದಾಗಳ್ ತನಗಿದಿರೊಳದಿರದಾಂತ ಸೋಮಕ ಶ್ರೀಜಯ ಪ್ರಮುಖ ಕೋಸಲಾಧೀಶ ಸೈನಂಗಳನಲ್ಲಕಲ್ಲೋಲ ಮಾಡಿ ಪಸರಣಿಕೆಯ ನಾಯಕರನಲುವತ್ತು ಸಾಸಿರ್ವರನೊರ್ವನಂ ಕೊಲ್ವಂತೆ ಕೊಂದು ನಿಟ್ಟಾಲಿಗೊಂಡು ಯುಧಿಷ್ಠಿರನಂ ಮುಟ್ಟೆವಂದಾಗಳ್ಚಂಗಿ ಯಮಸುತನ ಸತ್ತೆಯನುತುಂ ನಿಶಿತಾಸ್ತಮನುರ್ಚಿಕೊಂಡು ವ |
ಕ್ಷಮನಿರದೆಚ್ಚಡಚ್ಚ ಶರಮಂ ಕಲಿ ಚಕ್ಕನೆ ಕಿತ್ತುರಪ್ರದೇ || ಶಮನಿಸಿ ನೆತ್ತರೊಕ್ಕು ಪತಿ ಮುಚ್ಚೆಯೊಳಿಚ್ಚಿಯೆಗೆಟ್ಟು ಜೋಲ್ಗೊಡಾ
ದಮೆ ನಸುನೊಂದು ನಂದಿಸದೆ ತನ್ನನೆ ನಿಂದಿಸಿದಂ ದಿನೇಶಂ || ೧೧೭
ವ|| ಅಂತು ಕೊಂತಿಗೆ ನಾಲ್ವರೊಳಾರುಮಂ ಕೊಲ್ಲೆನೆಂದು ನುಡಿದ ತನ್ನ ನನ್ನಿಗೆ ಬನಂ ಬಂದಪದಂದು ಕರ್ಣಂ ಚಿಂತಿಸುತಿರ್ದನಿತಲರಸನಂ ಪಃಗಿ ನಕುಳಸಹದೇವರಿರ್ವರುಂ ಬಂದಾಂತೊಡಿವರನೇಗೆಯ್ದುದೆಂದು ಕರುಣಿಸಿ ಶಲ್ಯನ ಮನಮಂ ನೋಡಲೆಂದು ಬೆಸಗೊಂಡೊಡ ತನ್ನಳಿಯಂದಿರ ಸಾವಿಂಗಾಜದ ಶಲ್ಯನಿಂತೆಂದಂ
ಕೊಂದಹಾಗೆ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಕೊಲ್ಲಲು ಉಳಿದ ನಾಯಕರೆಲ್ಲ ತಮ್ಮಯಜಮಾನನ ಸಾವನ್ನು ನೋಡಿ ಶತ್ರುಗಳೆಂಬ ಜಿಂಕೆಗಳಿಗೆ ಸಿಂಹದ ಹಾಗಿರುವ ಅರ್ಜುನನನ್ನು ಎದುರಿಸಿ ಯುದ್ದಮಾಡುತ್ತಿದ್ದರು. ಅಷ್ಟರಲ್ಲಿ ಈ ಕಡೆ ಕರ್ಣನು ಹೆಚ್ಚುತ್ತಿರುವ ವೀರರಸವನ್ನು ರುಚಿನೋಡುವುದರಲ್ಲಿ ಆಸಕ್ತನಾಗಿ ನೀವೆಲ್ಲರೂ ಈ ದಿವಸ ನನ್ನ ಯುದ್ಧವನ್ನು ಸಣ್ಣ ಕತ್ತಿಯ ದ್ವಂದ್ವಯುದ್ದವನ್ನು ನೋಡುವ ಹಾಗೆ ನೋಡುವುದು ಎಂದು ಕೌರವಸೈನ್ಯದ ನಾಯಕರೆಲ್ಲರನ್ನೂ ಒಟ್ಟುಗೂಡಿಸಿ ಪಾಂಡವ ಸೈನ್ಯದ ಮೃತ್ಯು ಬರುವ ಹಾಗೆ ಬಂದು ತಾಗಿದನು. ತನ್ನ ಎದುರಿಗೆ ಭಯಪಡದೆ ಪ್ರತಿಭಟಿಸಿದ ಸೋಮಕ ಶ್ರೀಜಯರೇ ಮುಖ್ಯರಾದ ಕೋಸಲದೇಶದ ರಾಜರುಗಳ ಸೈನ್ಯವನ್ನೆಲ್ಲ ಕಲಕಿಹಾಕಿದನು. ಹೆಸರಿನಿಂದಲೇ ಪ್ರಸಿದ್ದರಾದ ಅರವತ್ತುಸಾವಿರ ನಾಯಕರನ್ನು ಒಬ್ಬನನ್ನು ಕೊಲ್ಲುವ ಹಾಗೆ (ಅಶ್ರಮವಾಗಿ) ಕೊಂದು ದೀರ್ಘವಾಗಿ ದಿಟ್ಟಿಸಿನೋಡಿ ಧರ್ಮರಾಯನನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದನು. ೧೧೭. ಧರ್ಮರಾಜನು (ಕರ್ಣನನ್ನು ಕುರಿತು) ನೀನು ಸತ್ತೆ ಎನ್ನುತ್ತ ಹರಿತವಾದ ಬಾಣವನ್ನು ಸೆಳೆದುಕೊಂಡು ತಡೆಯದೆ ಎದೆಗೆ ಹೊಡೆದನು. ಹೊಡೆದ ಆ ಬಾಣವನ್ನು ಶೂರನಾದ ಕರ್ಣನು ಚಕ್ಕನೆ ಕಿತ್ತುಹಾಕಿ ಧರ್ಮರಾಜನ ಹೃದಯ ಪ್ರವೇಶವನ್ನು ಹೊಡೆಯಲಾಗಿ ರಕ್ತವು ಸುರಿದು ಧರ್ಮರಾಜನು ಮೂರ್ಛಯಲ್ಲಿ ಮರೆತು ಜ್ಞಾನಶೂನ್ಯನಾಗಿ ಜೋತುಬೀಳಲು ಕರ್ಣನು ಸ್ವಲ್ಪ ವ್ಯಥೆಪಟ್ಟು ಪೂರ್ಣವಾಗಿ ಕೊಲ್ಲದೆ ತನ್ನನ್ನೇ ತಾನು ನಿಂದಿಸಿಕೊಂಡನು -ವಗ ಕುಂತೀದೇವಿಗೆ ನಾಲ್ಕು ಜನರಲ್ಲಿ ಯಾರನ್ನೂ ಕೊಲ್ಲುವುದಿಲ್ಲವೆಂದು ಮಾತು ಕೊಟ್ಟಿದ್ದ ತನ್ನ ಸತ್ಯವಾಕ್ಕಿಗೆ ಭಂಗವುಂಟಾಗುತ್ತೆಂದು ಕರ್ಣನು ಯೋಚಿಸುತ್ತಿದ್ದನು. ಈ ಕಡೆ ಧರ್ಮರಾಜನನ್ನು ಹಿಂದಕ್ಕೆ ಹಾಕಿ
Page #608
--------------------------------------------------------------------------
________________
ದ್ವಾದಶಾಶ್ವಾಸಂ | ೬೦೩ ಚಂll ಎರೆದನ ಪೆಂಪುಮಾಂತಧಿಕನಪ್ಪನ ಹೆಂಪುಮನೀವ ಕಾವ ನಿ
ನೈರಡುಗುಣಂಗಳುಂ ಬಯಸುತಿರ್ಪುವು ನಿನ್ನೊಳಿವಂದಿರೇತಾಳ್ | ದೊರೆ ದೊರೆವತ್ತ ಕಾಳೆಗದ ಗೆಲ್ಲದ ಸೋಲದ ಮಾತು ನಿನ್ನೊಳಂ
ನರನೊಳಮಿರ್ದುದುಯ್ದ ಸಿಸುಗಳ ಸಿಬಿರಕ್ಕೆ ಬಬಲ್ಲ ಭೂಪನಂ || ೧೧೮
ವ! ಅದಲ್ಲದೆಯುವತ್ತ ದುರ್ಯೋಧನಂಗಂ ಭೀಮಂಗಮನುವರಂ ಪೂಣರ್ದಿದರ್ುದರಸನಂ ಬೇಗಂ ಪೋಗಿ ಕೆಯೊಲ್ವಮಂದು ಬರೆವರೆ ಯುಧಿಷ್ಠಿರನಟಿಯೆನೊಂದ ನೋವು ಕಂಡು ಪಾಂಡವಬಲದ ನಾಯಕರುತ್ತಾಯಕರಾಗಿ ತಂತಮ್ಮ ಚತುರ್ವಲಂಗಳನೊಂದು ಮಾಡಿಕೊಂಡು ಕಾಲಾಗ್ನಿಯಂ ಕಿಡಿ ಸುತ್ತುವಂತೆ ಕರ್ಣನಂ ಸುತ್ತಿ ಮುತ್ತಿಕೊಂಡು ಕಣಯ ಕಂಪಣ ಮುಸಲ ಮುಸುಂಡಿ ಭಂಡಿವಾಳ ತೋಮರ ಮುದ್ಧರ ಮಹಾ ವಿವಿಧಾಯುಧಂ ಗಳೊಳಿಟ್ಟುಮೆಚ್ಚುಮಿದುಮಗುರ್ವುಮದ್ಭುತಮುಮಾಗೆ ಕಾದುವಾಗಳ್ಚoll ಎನಗಮರಾತಿ ಸಾಧನಮಿದಿರ್ಚುಗುಮಳದಿದಿರ್ಚಿ ಬಾಲ್ಕುಮಿ
ನೈನ ಪತುಂಟಿ ದೋಷಮನಗಂತದ ದೋಷಮದಾಗಲಾಗದಂ | ದಿನ ತನಯಂ ತಗುಳಿಗೆ ನಿಶಾತ ಶರಾಳಿಗಳಿಯೆ ಚಕ್ಕು ಚ
ಕನೆ ಕೊಳೆ ಮೊಕ್ಕುಮೊಕ್ಕನೆ ಶಿರಂಗಳುರುಳುವು ವೈರಿಭೂಪರಾ || ೧೧೯ ನಕುಲಸಹದೇವರಿಬ್ಬರೂ ಬಂದು ಎದುರಿಸಲು ಇವರನ್ನು ಏನುಮಾಡುವುದು (ತನಗೆ ಸಮಾನರಲ್ಲದ ಇವರೊಡನೆ ಏನು ಯುದ್ಧಮಾಡುವುದು) ಎಂದು ದಯೆತೋರಿ ಶಲ್ಯನ ಮನಸ್ಸನ್ನು ಪರೀಕ್ಷಿಸೋಣವೆಂದು ಪ್ರಶ್ನೆಮಾಡಲು, ಶಲ್ಯನು ತನ್ನಳಿಯಂದಿರಾದ ನಕುಲಸಹದೇವರ ಸಾವಿಗೆ ಸೈರಿಸಲಾರದೆ ಹೀಗೆಂದನು -೧೧೮. ನಿನ್ನ ದಾನಮಾಡುವ (ಔದಾರ್ಯ), ರಕ್ಷಿಸುವ (ಪರಾಕ್ರಮ) ಗುಣಗಳು ಬೇಡುವವನ ಆಧಿಕ್ಯವನ್ನೂ ಪ್ರತಿಭಟಿಸಿದ ಪರಾಕ್ರಮಿಯ ಆಧಿಕ್ಯವನ್ನೂ ಬಯಸುವುವು. ನಿನ್ನಲ್ಲಿ ಈ ನಕುಲಸಹದೇವರು ಯಾವಗುಣಗಳಲ್ಲಿ ಸಮಾನರು. ಯುದ್ಧದ ಜಯಾಪಜಯಗಳ ಮಾತು ನಿನಗೆ ಸಮಾನತೆಯನ್ನು ಪಡೆದಿರುವ ಅರ್ಜುನನಲ್ಲಿಯೂ ನಿನ್ನಲ್ಲಿಯೂ ಇದೆ. ಈ ಶಿಶುಗಳು ಬಳಲಿರುವ ಧರ್ಮರಾಯನನ್ನು ಬೀಡಿಗೆ ಕರೆದುಕೊಂಡು ಹೋಗಲಿ. ವ|| ಅದಲ್ಲದೆಯೂ ಆ ಕಡೆ ದುರ್ಯೊಧನನಿಗೂ ಭೀಮನಿಗೂ ಯುದ್ಧವು ಹೆಣೆದುಕೊಂಡಿದೆ. ಬೇಗಹೋಗಿ ರಾಜನನ್ನು ರಕ್ಷಿಸೋಣ ಎಂದು ತೇರನ್ನು ಬೇರೆಕಡೆಗೆ ತಿರುಗಿಸಿದನು. ಧರ್ಮರಾಜನು ಸಾಯುವಷ್ಟು ಬಲವಾಗಿ ನೊಂದನೋವನ್ನು ಪಾಂಡವಬಲದ ನಾಯಕರು ನೋಡಿ ಪ್ರತಿಭಟಿಸಿದವರಾಗಿ ತಮ್ಮತಮ್ಮ ಚತುರಂಗ ಬಲವನ್ನು ಒಟ್ಟಾಗಿ ಸೇರಿಸಿಕೊಂಡು ಕಾಲಾಗ್ನಿಯನ್ನು ಬೆಂಕಿಯ ಕಿಡಿಗಳು ಬಳಸಿ ಕೊಳ್ಳುವ ಹಾಗೆ ಕರ್ಣನನ್ನು ಮುತ್ತಿ ಆವರಿಸಿಕೊಂಡರು. ಕಣಯ, ಕಂಪಣ, ಮುಸಲ, ಮುಸುಂಡಿ, ಭಿಂಡಿವಾಳ, ತೋಮರ, ಮುದ್ಧರ ಎಂಬ ದೊಡ್ಡದಾದ ಬೇರೆಬೇರೆಯ ನಾನಾವಿಧವಾದ ಆಯುಧ ವಿಶೇಷಗಳಿಂದ ಎಸೆದೂ ಹೊಡೆದೂ ಕತ್ತರಿಸಿಯೂ ಭಯಂಕರವೂ ಆಶ್ಚರ್ಯಕರವೂ ಆಗುವ ಹಾಗೆ ಯುದ್ಧಮಾಡಿದರು. ೧೧೯. 'ನನ್ನನ್ನು ಶತ್ರುಸೈನ್ಯವು ಎದುರಿಸುತ್ತಿದೆ; ಹೆದರದೆ ಪ್ರತಿಭಟಿಸಿ ಇನ್ನೂ ಬದುಕಿದೆ ಎಂದರೆ ನನಗೆ
39
Page #609
--------------------------------------------------------------------------
________________
೬೦೪] ಪಂಪಭಾರತಂ
ವ|| ಆ ಪ್ರಸ್ತಾವದೊಳ್ಉll ಮಂತ್ರ ಪದಪ್ರವೀಣ ಬಹು ಸಾಧನ ಹೂಂಕರಣಾದಿ ಮಂತ್ರಮಾ
ಮಂತ್ರಿತ ಡಾಕಿನೀ ದಶನ ಘಟ್ಟನ ಜಾತ ವಿಭೀಷಣಂ ಮದೇ | ಭಾಂತ್ರ ನಿಯಂತ್ರಿತಾಶ್ವ ಶವ ಮಾಂಸ ರಸಾಸವ ಮತ್ತಯೋಗಿನೀ ತಂತ್ರವಿದೇನಗುರ್ವನೊಳಕೊಂಡುದೊ ಕರ್ಣನ ಗೆಲ್ಲ ಕೊಳ್ಳುಳಂ || ೧೨೦
ವ|| ಅನ್ನೆಗಮಿತ್ತ ಸಂಸಪ್ತಕ ನಿಕುರುಂಬದೊಳಗೊರ್ವರುಮಂ ಕಿಟಿವೀಲಲೀಯದೆ ರಸಮಂ ಕೊಲ್ವಂತಂತಾನುಂ ಕೊಂದು ಕರ್ಣನೊಳ್ ಪೊಣರಲ್ ಬರ್ಪ ವಿಕ್ರಾಂತ ತುಂಗಂ ನಿಜ ಪತಾಕಿನಿಯ ನಡುವೆ ಮಳವ ಪತಾಕಾ ವಿರಾಜಮಾನುಮಪ್ಪ ತಮ್ಮಣನ ರಥಮಂ ಕಾಣದೆ ಕೌರವಬಳಜಳನಿಧಿಯೊಳ್ ಬಳ್ಳಳ ಬಳದೊಗದ ಕೇಸುರಿಯಂತೆ ತಟತಟಿಸಿ ಮಿಳಿರ್ವ ಪವನತನೂಜನ ಕೇಸರಿಕೇತನಮಪ್ಪ ಪಬಯಿಗೆಯಂ ಕಂಡು ಮುಟ್ಟಿ ವರ್ಷಗಮರಸನಂ ಬೀಡಿಂಗೆ ಕಳಿಪಿ ಮಗುಟ್ಟು ಬಂದ ನಕುಳ ಸಹದೇವರಿಂದರವಿಂದಬಾಂಧವತನೂಜನ ಮಹಾ ಪ್ರಹರಣಹತಿಯೊಳ್ ಯಮನಂದನನ ನೋವುಮನಾತ್ಮೀಯಬಲದ ನಾಯಕರ ಸಾವುಮನಳದುಚಂ|| ಪವನಸುತಂಗೆ ಪಾಸಟಿಗಳೊರ್ವರುಮಿದಳೆಂದಮಾಂತ ಕಾ
ರವಬಲದುರ್ಕನೊಂದಿನಿಸು ಮಾಣಿಸಿ ಪೋಪಮಿಳೇಶನಲ್ಲಿಗಂ || ದವನತ ವೈರಿ ವೈರಿಬಲ ವಾರಿಧಿಯಂ ವಿಶಿಖರ್ವವಹಿಯಿಂ ತವಿಸಿ ಮರುತ್ತನೂಭವನಲ್ಲಿಗೆ ಪೇಟ್ಟಿರದೆ ಭೂಪನಂ ||
ಇದಕ್ಕಿಂತ ಬೇರೆ ಕಳಂಕವುಂಟೇ ? ನನಗೆ ಆ ದೋಷವು ಆಗಬಾರದು' ಎಂದು ಸೂರ್ಯಪುತ್ರನಾದ ಕರ್ಣನು ರಭಸದಿಂದ ಹೊಡೆಯಲು ಹರಿತವಾದ ಬಾಣಗಳು ಪೂರ್ಣವಾಗಿ ಚಕ್ ಚಕ್ ಎಂದು ಕತ್ತರಿಸಲು ಶತ್ರುರಾಜರ ತಲೆಗಳು ಮೊಕ್ಮೊಕ್ ಎಂದು ಉರುಳಿದುವು. ವಗ ಆ ಸಮಯದಲ್ಲಿ ೧೨೦. ರಣಮಂತ್ರ ಪಠನದಲ್ಲಿ ಪ್ರವೀಣರಾದ ಅನೇಕ ಸೈನಿಕರ ಹುಂಕಾರವೇ ಮೊದಲಾದ ಮಂತ್ರವನ್ನುಳ್ಳುದೂ ಆಹ್ವಾನಿತರಾದ ಪಿಶಾಚಿಗಳ ಹಲ್ಲುಕಡಿಯುವುದರಿಂದ ಹುಟ್ಟಿ ವಿಕಾರವೂ ಭಯಂಕರವೂ ಆದ ಶಬ್ದವನ್ನುಳ್ಳುದೂ ಮದ್ದಾನೆಯ ಕರುಳುಗಳಿಂದ ಕಟ್ಟಲ್ಪಟ್ಟ ಕುದುರೆಯ ಹೆಣದ ಮಾಂಸದಲ್ಲಿ ಆಸಕ್ತವಾದ ಮದಿಸಿರುವ ಮರುಳುಗಳ ಸಮೂಹ ವನ್ನುಳ್ಳದ್ದೂ ಆಗಿ ಕರ್ಣನು ಗೆದ್ದ ಯುದ್ಧರಂಗವು ವಿಶೇಷ ಭಯಂಕರವಾಗಿತ್ತು. ವ|| ಅಷ್ಟರಲ್ಲಿ ಈ ಕಡೆ ಸಂಸಪ್ತಕರ ಸಮೂಹದಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲು ಅವಕಾಶ ಕೊಡದಂತೆ ಪಾದರಸವನ್ನು ಮರ್ದಿಸುವ ಹಾಗೆ ಹೇಗೋ ಕೊಂದು ಕರ್ಣನಲ್ಲಿ ಯುದ್ದಮಾಡಲು ಬರುತ್ತಿರುವ ಉತ್ತಮ ಪೌರುಷಶಾಲಿಯಾದ ಅರ್ಜುನನು ತನ್ನ ಸೈನ್ಯಮಧ್ಯದಲ್ಲಿ ಧ್ವಜದಿಂದ ವಿರಾಜಮಾನವಾಗಿ ಮೆರೆಯುವ ತಮ್ಮಣ್ಣನ ರಥವನ್ನು ಕಾಣದೆ ಕೌರವಸೇನಾಸಮುದ್ರದಲ್ಲಿ ವಿಶೇಷವಾಗಿ ಬೆಳೆದು ಹಚ್ಚಿದ ಕೆಂಪುಬಣ್ಣದ ಉರಿಯಂತೆ ತಳತಳಿಸಿ ಅಲುಗಾಡುವ ಸಿಂಹದ ಗುರುತಿನ ಬಾವುಟವನ್ನು ನೋಡಿ ಹತ್ತಿರಕ್ಕೆ ಬರುವಷ್ಟರಲ್ಲಿ ಧರ್ಮರಾಯನನ್ನು ಬೀಡಿಗೆ ಕಳುಹಿಸಿ ಹಿಂತಿರುಗಿ ಬಂದ ನಕುಲಸಹದೇವರಿಂದ ಕರ್ಣನ ಬಲವಾದ ಪೆಟ್ಟಿನಿಂದುಂಟಾದ ಧರ್ಮರಾಯನ ವ್ಯಥೆಯನ್ನೂ ತಮ್ಮ ಸೈನ್ಯದ ನಾಯಕರ ಸಾವನ್ನೂ ತಿಳಿದನು. ೧೨೧. ಭೀಮನಿಗೆ
Page #610
--------------------------------------------------------------------------
________________
ಕಂ।।
ತಾನುಂ ಹರಿಯುಂ ಭೂಪತಿ
ಗಾನತರಾಗಲೊಡಮೊಸೆದು ಪತಿ ಪರಸಿ ಯಮ |
ಸ್ಥಾನಮನೆಂತೆಯ್ದಿಸಿದಿರೋ
ಕಾನೀನನ ದೊರೆಯ ಕಲಿಯನುಗ್ರಾಹವದೊಳ್ ||
ದ್ವಾದಶಾಶ್ವಾಸಂ | ೬೦೫
ನರ ನಾರಾಯಣರೆಂಬಿ
ರ್ವರುಮೊಡಗೂಡಿದೊಡೆ ಗೆಲ್ವರಾರುರ್ವರೆಯೊಳ್ | ನಿರುತಮನ ನೆಗಟ್ಟಿ ನಿಮ್ಮ
ವರ ದೊರೆಗಂ ಬಗೆವೊಡಗಳಂ ನರರೊಳರೇ ||
ಎಂತನೆ ಮುಖ್ಯ ಸೂಳೆ
ಯಂ ತಳದೊಳೆ ಒಂದನಾತನಂಬುದನಾಂ ಮು |
ನ್ನೆಂತುಂ ನಂಬೆನೆ ನಂಬಿದೆ
ನಿಂತಿ೦ದಿನ ಗಂಡವಾತಿನೊಳ್ ಸೂತಜನಂ ||
ಪಳ್ ಕೊಂತಿಯ ಮಕ್ಕ
ರೈತರೊಳೆಂಬವರೆ ಕೊಂತಿ ಮಾದೇವಿಗಂ | ದುತ್ತರವಾದ ಕರ್ಣಂ
ಬೆತ್ತಕ್ಕನೆ ಎಂದು ಪೊಗಟ್ಟುವೆರಡುಂ ಪಡೆಗಳ 11
GGO
೧೨೩.
೧೨೪
೧೨೫
ಸರಿಸಮಾನರಾದ ಬಲಶಾಲಿಗಳಾರೂ ಇಲ್ಲ; ಆದುದರಿಂದ ಎದುರಿಸಿದ ಕೌರವಸೈನ್ಯದ ಅಹಂಕಾರವನ್ನು ಸ್ವಲ್ಪ ಕಡಿಮೆ ಮಾಡಿ ರಾಜನಲ್ಲಿಗೆ ಹೋಗೋಣ ಎಂದು ಶತ್ರುಸೈನ್ಯವನ್ನು ಬಗ್ಗಿಸಿದವನಾದ ಅರ್ಜುನನು ಶತ್ರುಸೈನ್ಯಸಾಗರವನ್ನು ಬಾಣಗಳೆಂಬ ಬಡಬಾನಲನಿಂದ ನಾಶಮಾಡಿ ಅಲ್ಲಿಯ ಯುದ್ಧಕ್ಕೆ ಭೀಮನನ್ನು ಇರಹೇಳಿ ಸಾವಕಾಶಮಾಡದೆ ಧರ್ಮರಾಜನನ್ನು ಸೇರಿದನು. ೧೨೨. ತಾನೂ ಕೃಷ್ಣನೂ ಧರ್ಮರಾಯನಿಗೆ ನಮಸ್ಕಾರಮಾಡಲು ಧರ್ಮರಾಯನು ಹರಸಿ ಈ ಭಯಂಕರವಾದ ಯುದ್ಧದಲ್ಲಿ ಕರ್ಣನಂತಹ ಸಾಮರ್ಥ್ಯವುಳ್ಳ ಶೂರನನ್ನು ಯಮಪಟ್ಟಣಕ್ಕೆ ಹೇಗೆ ಸೇರಿಸಿದಿರೋ ? ೧೨೩. ನರನಾರಾಯಣರೆಂಬ ಇಬ್ಬರೂ ಒಟ್ಟುಗೂಡಿದರೆ ಈ ಭೂಮಿಯಲ್ಲಿ ನಿಮ್ಮನ್ನು ನಿಶ್ಚಯವಾಗಿ ಗೆಲ್ಲುವರಾರೂ ಇಲ್ಲ. ವಿಚಾರಮಾಡುವುದಾದರೆ ನಿಮ್ಮಿಬ್ಬರನ್ನು ಮೀರಿದ ಮನುಷ್ಯರು ಇಲ್ಲವೇ ಇಲ್ಲ. ೧೨೪. ಹಿಂದೆ ಕರ್ಣನು ಮೂರು ಏಳುಸಲ (ಇಪ್ಪತ್ತೊಂದು ಸಲ) ಭೂಮಿಯನ್ನು ಅಂಗೈಯಲ್ಲಿಯೇ ಹಿಂಡಿದವನು ಎಂಬುದನ್ನು ನಾನು ಮೊದಲು ಹೇಗೂ ನಂಬಿರಲಿಲ್ಲ. ೧೨೫. ಮಕ್ಕಳನ್ನು ಹೆತ್ತವರಲ್ಲಿ ಪಾಂಡವರನ್ನು ಹೆತ್ತ ಕುಂತೀದೇವಿಯೇ ಮಕ್ಕಳನ್ನು ಹೆತ್ತವಳು (ಉತ್ತಮಳಾದವಳು) ಎಂದು ಹೇಳುತ್ತಿದ್ದ ಎರಡು ಸೈನ್ಯಗಳೂ ಇಂದು ಕರ್ಣನನ್ನು ಹೆತ್ತವಳು ಕುಂತೀದೇವಿಗಿಂತ
Page #611
--------------------------------------------------------------------------
________________
೬೦೬/ ಪಂಪಭಾರತಂ
ಕಂ।।
ಇನ್ನು ಕರ್ಣನ ರೂಪ ದ
ಲೆನ್ನೆರ್ದೆಯೊಳಮೆನ್ನ ಕಣೋಳಂ ಸುದಪುದಾಂ | ತೆನ್ನೆಚ್ಚ ಶರಮುಮಂ ಗ ಲೆನ್ನುಮನಂಜಿಸಿದನೆಂದೊಡಿನ್ನೇನೆಂಬೆಂ ||
ಅಂತಪ್ಪದಟನನಾಜಿಯೊ
ಅಂತಂತಿದಿರಾಂತು ಗೆಲ್ಲಿರನ ನೃಪನಂ ಕಂ |
ಸಾಂತಕನೆಂದಂ ಕರ್ಣನು
ಮಾಂತಿರೆ ನೀಮಿಂದು ನೊಂದುದಂ ಕೇಳೀಗಳ್ ||
ಆರಯ್ಯಲೆಂದು ಬಂದವ
ಪಾರ ಗುಣಾ ಕೊಂದೆವಿಲ್ಲವಿನ್ನು ಬಳವ | ತೂ ರಾರಾತಿಯನುಪಸಂ
ಹಾರಿಪವೇವಿರಿಯನಾದನೆಂಬುದುಮಾಗಳ್ ||
ನರಕಾಂತಕನಂ ನುಡಿದಂ
ನರೇಂದ್ರನಾನರಸುಗೆಯ ಪಲುವಗೆಯನದಂ | ಪರಿಹರಿಸಿದನಾತನನೀ
ಕಿರೀಟಿ ಗೆಲ್ಲೆನಗೆ ಪಟ್ಟವಂ ಮಾಡುವನೇ || ಏಮೊಗ್ಗೆ ಕರ್ಣನಿಂತೀ ನಿಮ್ಮಂದಿಗರಿಕೆಯ ಸಾವನೇ ಸುಖಮಿರಿಮಿ | ನಮ್ಮ ಸುಯೋಧನನೋಳ್ ಪಗ ಯಮ್ಮದಾನುಂ ತಪೋನಿಯೋಗದೊಳಿರ್ಪೆಂ
೧೨೬
영웅을
೧೨೭
೧೨೮
೧೨೯
080
ಉತ್ತಮಳಾದವಳು ಎಂದು ಹೊಗಳಿದುವು. ೧೨೬. ಇನ್ನೂ ನನ್ನ ಎದೆಯಲ್ಲಿಯೂ ಕಣ್ಣಿನಲ್ಲಿಯೂ ಕರ್ಣನ ಆಕಾರವೇ ಸುಳಿದಾಡುತ್ತಿದೆಯಲ್ಲ. ಎದುರಿಸಿ ನಾನು ಪ್ರಯೋಗಿಸಿದ ಬಾಣಗಳನ್ನು ಗೆದ್ದು ನನ್ನನ್ನೂ ಭಯಪಡಿಸಿದನೆಂದಾಗ ಇನ್ನೇನನ್ನು ಹೇಳಲಿ. ೧೨೭. ಅಂತಹ ಪರಾಕ್ರಮಶಾಲಿಯನ್ನು ಯುದ್ಧದಲ್ಲಿ ಹೇಗೆ ಎದುರಿಸಿ ಗೆದ್ದಿರಿ' ಎನ್ನಲು ಧರ್ಮರಾಯನನ್ನು ಕುರಿತು ಕೃಷ್ಣನು ಹೇಳಿದನು. ನೀವು ಇಂದು ಕರ್ಣನನ್ನು ಎದುರಿಸಿ ನೋವುಪಟ್ಟುದನ್ನು ಕೇಳಿ ಈಗ ೧೨೮. ವಿಚಾರಿಸುವುದಕ್ಕೆ ಬಂದೆವು; ಎಲ್ಲೆಯಿಲ್ಲದ ಗುಣಶಾಲಿಯಾದ ಧರ್ಮರಾಯನೇ ಬಲಿಷ್ಠನೂ ಕ್ರೂರನೂ ಆದ ಶತ್ರುವನ್ನು ನಾವು ಇನ್ನೂ ಕೊಂದಿಲ್ಲ; ನಾಶಪಡಿಸುತ್ತೇವೆ. ಅವನೇನು ಮಹಾದೊಡ್ಡವನು ಎನ್ನಲು ಆಗ ೧೨೬. ಕೃಷ್ಣನನ್ನು ಕುರಿತು ಧರ್ಮರಾಜನು ಹೇಳಿದನು- ಇನ್ನು ಮೇಲೆ ನಾನು ರಾಜ್ಯವಾಳುವ ವ್ಯರ್ಥವಾದ ಆಸೆಯನ್ನು ಬಿಟ್ಟಿದ್ದೇನೆ. ಅವನನ್ನು ಗೆದ್ದು ನಿಜವಾಗಿಯೂ ಅರ್ಜುನನು ನನಗೆ ಪಟ್ಟವನ್ನು ಕಟ್ಟುತ್ತಾನೆಯೇ ? ೧೩೦. ಇಂತಹ ನಿಮ್ಮಂತಹವರು ಕರ್ಣನನ್ನು ಗೆಲ್ಲುವುದು ಸಾಧ್ಯವೇ ? ಅಮ್ಮಗಳಿರಾ ಇನ್ನು ದುರ್ಯೋಧನನಲ್ಲಿ ಹಗೆತನವನ್ನು ಮರೆತು ಸುಖವಾಗಿರಿ. ನಾನೂ ತಪಸ್ಸಿನ
Page #612
--------------------------------------------------------------------------
________________
೧೩೧
ದ್ವಾದಶಾಶ್ವಾಸಂ | ೬೦೭ ವll ಎಂದು ತನ್ನ ನೋಯ ನುಡಿದ ನಿಜಾಗ್ರಜನ ನುಡಿಗೆ ಮನದೊಳೇವೈಸಿಯುಮೇಷ್ಟೆ ಸದೆ ವಿನಯಮನೆ ಮುಂದಿಟ್ಟು ವಿನಯವಿಭೂಷಣನಿಂತೆಂದಂ
ಮುಳಿದಿಂತು ಬೆಸಸೆ ನಿಮ್ಮಡಿ ಮೊಳೆ ಮಾರ್ಕೊಂಡೆಂತು ನುಡಿವೆನುಸಿರೆಂ ನಿಮ್ಮ | ಮುಳಿಯಿಸಿದ ಸುರಾಸುರರುಮ ನೊಳರೆನಿಸಂ ಕರ್ಣನೆಂಬನನಗೇಎರಿಯಂ || ನರಸಿಂಗಂಗ ಜಾಕ ಬೃರಸಿಗಮಳವೊದವೆ ಪುಟ್ಟ ಪುಟ್ಟಿಯುಮರಿಕೇ | ಸರಿಯೆನೆ ನೆಗಟ್ಟುಮರಾತಿಯ ಸರಿದೊರೆಗಂ ಬಂದೆನಪೊಡಾಗಳ ನಗಿರೇ || ಪುಟ್ಟೆ ಮುಳಿಹೊಸಗೆಗಳೆ ಕಡು . ಗಟ್ಟಂ ಮುಳಿಹೊಸಗೆಯೆಂಬ ನೃಪತನಯನವಂ | ಮುಳ್ಳುಗಿಡ ಪಾರದರದೊಳ್ ಪುಟ್ಟದನರಸಂಗಮರಸಿಗಂ ಪುಟ್ಟಿದನೇ || ಎಂದರಸ ನೇಸಂದೊಳ ಗಾಂ ದಿನಕರಸುತನನಿಕ್ಕಿ ಬಂದಲ್ಲದೆ ಕಾ | ಸಂ ದಲ್ ಭವತ್ವದಾದ್ಯಮ ನೆಂದನುದಶ್ರುಜಳಲವಾದ್ರ್ರಕಪೋಳಂ |
೧೩೪
೧೩೨
೧೩೩
ನಿಯಮದಲ್ಲಿ ಇರುತ್ತೇನೆ. ವlt ಎಂದು ತನಗೆ ನೋವಾಗುವ ಹಾಗೆ ನುಡಿದ ತನ್ನ ಅಣ್ಣನ ಮಾತಿಗೆ ಮನಸ್ಸಿನಲ್ಲಿ ಕೋಪಬಂದರೂ (ಹೊರಗೆ) ಕೋಪಿಸಿಕೊಳ್ಳದೆ ನಮ್ರತೆಯನ್ನೇ ಪ್ರದರ್ಶಿಸಿ ವಿನಯಭೂಷಣನಾದ ಅರ್ಜುನನು ಹೀಗೆಂದನು. ೧೩೧. ಕೋಪಿಸಿಕೊಂಡು ಹೀಗೆ ಹೇಳಿದ ನಿಮ್ಮ ಪಾದದಲ್ಲಿ ಪ್ರತಿಭಟಿಸಿ ಹೇಗೆ ನುಡಿಯಲಿ ? ಮಾತಾನಾಡುವುದಿಲ್ಲ: ನಿಮಗೆ ಕೋಪವನ್ನುಂಟುಮಾಡಿದ ದೇವದಾನವರಿನ್ನೂ ಜೀವದಿಂದಿದ್ದಾರೆ ಎನ್ನಿಸುವುದಿಲ್ಲ (ಹಾಗಿರುವಾಗ) ಕರ್ಣನೆಂಬುವನು ನನಗೆಷ್ಟು ದೊಡ್ಡವನು? ೧೩೨. ನರಸಿಂಹನೆಂಬ ರಾಜನಿಗೂ ಜಾಕಬ್ಬೆಯೆಂಬ ರಾಣಿಗೂ ಪರಾಕ್ರಮವೇ ಹುಟ್ಟಿದೆಯೆಂಬ ರೀತಿಯಲ್ಲಿ ಹುಟ್ಟಿ ಹುಟ್ಟಿಯೂ ಕೂಡ ಅರಿಕೇಸರಿಯೆಂದು ಪ್ರಸಿದ್ಧನಾಗಿಯೂ ಶತ್ರುವಿನ ಸರಿಸಮಾನತೆಗೆ ಬಂದೆನಾದರೆ ನೀವೇ ತಿರಸ್ಕಾರದಿಂದ ಪರಿಹಾಸಮಾಡುವುದಿಲ್ಲವೇ? ೧೩೩. ಕೋಪಸಂತೋಷಗಳು ಹುಟ್ಟಲು ಅದು ನಿಜವಾಗಿಯೂ ಕಷ್ಟವೇ! ಆದರೆ ಆ ಕೋಪಪ್ರಸಾದಗಳನ್ನು ಪರಿಹರಿಸಲಾರದ ರಾಜಕುಮಾರನು ರಾಜ ರಾಣಿಯರಿಗೆ ಹುಟ್ಟಿದವನಲ್ಲ: ಹಾದರಕ್ಕೆ ಹುಟ್ಟಿದವನು. ೧೩೪, ಎಂಬುದಾಗಿ ಹೇಳಿ ರಾಜನೇ ಸೂರ್ಯಾಸ್ತಮಾನದೊಳಗೆ ನಾನು ಕರ್ಣನನ್ನು ಸಂಹರಿಸಿ ಬಂದಲ್ಲದೆ ನಿಮ್ಮ ಪಾದಕಮಲವನ್ನು ಕಾಣುವುದಿಲ್ಲವಲ್ಲ ಎಂದು ಚಿಮ್ಮುತ್ತಿರುವ ಕಣ್ಣೀರಿನ ಕಣಗಳಿಂದ ಒದ್ದೆಯಾದ ಕೆನ್ನೆಯನ್ನುಳ್ಳ ಅರ್ಜುನನು
Page #613
--------------------------------------------------------------------------
________________
೬೦೮) ಪಂಪಭಾರತಂ
ವ|| ಅಂತು ಭೂನಾಥಂ ತನ್ನಳವನಳೆದುಮರೆಯದ ಕಡೆನುಡಿದು ತಪೋವನದೊಳಲ್ಲದೆ ನೀಗೆನೆಂದೆಟ್ಟು ನಿಂದಿರ್ದನನಸುರಾಂತಕನು ತಾನುಮಂತಾನುಂ ಪ್ರಾರ್ಥಿಸಿದೊಡಂಬಟ್ಟಜಾತ ಶತ್ರುಗೆ ಪೊಡೆವಟ್ಟು ರಥಮನೇ ಕೌರವಧ್ವಜಿನಿಗೆ ಭಯಜ್ವರಂ ಬರ್ಪಂತ ಬಂದು ಪವನ ತನಯಂಗಂತಕತನಯನಸಮಾವಸ್ಥೆಯಂ ಪೇಜ್ಜಿಂದಿನನುವರಮೆಲ್ಲಮಂ ನಿಮ್ಮೋರ್ವರ ಮೇಲಿಕ್ಕಿ ಪಿರಿದುಂ ಪೊಲ್ಕು ತಡೆದಿರ್ಪವೆನೆ ಹಿಡಿಂಬಾಂತಕನಿಂತೆಂದಂಮll ನರ ಮಾತಂಗ ತುರಂಗ ಸೈನಮಿದಿರಾಂತೀರೆಂಟು ಲಕ್ಕಂಬರಂ
ಕರಗಿತನ ನಿಶಾತ ಹೇತಿ ಹತಿಯಿಂ ಮತಂತುಮಿ ತೂಳ ತೀನ್ | ಕರಗಲಾರ್ತಪುದಿಲ್ಲದಕರಿಗ ಪೇಮ್ ನೀಂ ಬೇಟ್ಟುದೇ ಸಂಗರಾ |
ಜರದೊಳ್ ಕೌರವರೆಂಬ ಕಾಕಕುಳಕೆಯೊಂದ ಬಿಲ್ ಸಾಲದೇ || ೧೩೫
ವಗ ಎಂದ ಭೀಮನನಕಲಂಕರಾಮಂ ನಿಮ್ಮ ಭುಜಬಲಕ್ಕದೇವಿರಿದೆಂದು ನೀಮನ್ನ ಕಾಳೆಗಮಂ ಸುರಿಗೆಗಾಳೆಗಮಂ ನೋಟ್ಟಂತೆ ತೊಡೆಯಂ ಪೊಯಾರ್ದು ನೋಡುತ್ತುಮಿರಿಮೆಂದು ಪವನಜನನೊಡಗೊಂಡು ಪವನಜವದಿಂ ಕರ್ಣನ ರಥಮಲ್ಲಿತತ್ರ ಪೋದುದನುತುಂ ಬರ್ಪತಿರಥ ಮಥನನ ರಥದ ಬರಮ ಕಂಡು ಕೌರವಬಲಮೆಲ್ಲಮೆಲ್ಲನುಲಿದೋಡಿ ವೈಕರ್ತನನ ಮಜಯಂ ಪುಗುವುದುಂ ಮದೀಯ ಮನೋರಥಮಿಂದು ದೊರೆಕೊಂಡುದೆಂದು ದಿನಕರತನೂಜನೆರಡು ಮುಯ್ಯುಮಂ ನೋಡಿ ಸಮರಾನಂದಂಬೆರಸು ಶಲ್ಯನಂ ರಥವನೆಸಗು ದಿವ್ಯಾಸ್ತಂಗಳ
ಎದ್ದನು. ವ|| ಹೀಗೆ ರಾಜನಾದ ಧರ್ಮರಾಯನು ತನ್ನ ಪರಾಕ್ರಮವನ್ನು ಅರಿತೂ ಅರಿಯದೆ ಕೆಟ್ಟಮಾತುಗಳನ್ನಾಡಿ ತಪೋವನದಲ್ಲಲ್ಲದೆ (ತನ್ನ ಜೀವನವನ್ನು ಬೇರೆ ಕಡೆಯಲ್ಲಿ ಕಳೆಯುವುದಿಲ್ಲವೆಂದು ಎದ್ದು ನಿಂತಿದ್ದವನನ್ನು ಕೃಷ್ಣನೂ ಅರ್ಜುನನೂ ಹೇಗೋ ಬೇಡಿಕೊಳ್ಳಲಾಗಿ ಒಪ್ಪಿಕೊಂಡ ಧರ್ಮರಾಜನಿಗೆ ನಮಸ್ಕಾರಮಾಡಿ ತೇರನ್ನು ಹತ್ತಿಕೊಂಡು ಕೌರವಸೈನ್ಯಕ್ಕೆ ಭಯಜ್ವರ ಬರುವ ಹಾಗೆ ಬಂದು ಭೀಮನಿಗೆ ಧರ್ಮರಾಯನ ಮನಃಸ್ಥಿತಿಯನ್ನು ಹೇಳಿ ಈ ದಿನದ ಯುದ್ದಭಾರವೆಲ್ಲವನ್ನೂ ನಿಮ್ಮೊಬ್ಬರ ಮೇಲೆಯೇ ಹೇರಿ ಬಹಳ ಹೊತ್ತು ತಡೆದಿದ್ದೆವು ಎನ್ನಲು ಭೀಮನು ಹೀಗೆಂದನು - ೧೩೫. ನನ್ನನ್ನು ಎದುರಿಸಿದ ಸುಮಾರು ಹದಿನಾರುಲಕ್ಷದವರೆಗಿನ ಆನೆ ಕುದುರೆ ಪದಾತಿಗಳು ನನ್ನ ಹೊಡೆತಕ್ಕೆ ಸಿಕ್ಕಿ ಕರಗಿದುವು. ಅಷ್ಟಾದರೂ ಈ ನನ್ನ ತೋಳಿನ ನವೆಯು ಮಾತ್ರ ಕರಗುವುದಕ್ಕೆ ಸಮರ್ಥವಾಗಿಲ್ಲ. (ಆ ಸೈನ್ಯಕ್ಕೆ ನೀನು ಹೇಳಬೇಕೇ - ನಾನೊಬ್ಬನೇ ಸಾಕು) ಅರ್ಜುನ, ಅದಕ್ಕೆ ನೀನೂ ಬರಬೇಕೆ? ಯುದ್ಧದಲ್ಲಿ ಕೌರವರೆಂಬ ಕಾಗೆಯ ಗುಂಪಿಗೆ ನನ್ನ ಈ ಒಂದೇ ಬಿಲ್ಲು ಸಾಲದೇ? ವ|| ಎಂದು ಹೇಳಿದ ಭೀಮನನ್ನು ಕುರಿತು ಅರ್ಜುನನು ನಿಮ್ಮ ತೋಳಬಲಕ್ಕೆ ಅದೇನು ದೊಡ್ಡದು ಎಂದು ಹೇಳಿ ನೀವು ಕಾಳಗವನ್ನು ನೋಡುವಂತೆ ತೊಡೆಯನ್ನು ತಟ್ಟಿ ಆರ್ಭಟಮಾಡಿ ನೋಡುತ್ತಿರಿ ಎಂದನು. ಭೀಮನೊಡಗೂಡಿ ವಾಯುವೇಗದಿಂದ ಕರ್ಣನ ತೇರೆಲ್ಲಿದೆ ಯಾವಕಡೆ ಹೋಯಿತು ಎನ್ನುತ್ತ ಬರುತ್ತಿರುವ ಅತಿರಥಮಥನನಾದ ಅರ್ಜುನನ ಬರವನ್ನು ಕಂಡು ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಓಡಿಹೋಗಿ ಕರ್ಣನ
Page #614
--------------------------------------------------------------------------
________________
ದ್ವಾದಶಾಶ್ವಾಸಂ | ೬೦೯ ದೊಣೆಗಳನೆರಡುಂ ದೆಸೆಯೊಳಂ ಬಿಗಿದು ತಾಳವಟ್ಟದ ಬಿಲ್ಲಂ ಕೆಂದಳದೊಳಮರೆ ನೀವಿ ಜೇವೂಡೆದಾಗಳಸೃದ್ಧಿ | ಮಹಾ ಪ್ರಳಯ ಭೈರವ ಕ್ಷುಭಿತ ಪುಷ್ಕಳಾವರ್ತಮಾ
ಮಹೋಗ್ರ ರಿಪು ಭೂಭುಜ ಶ್ರವಣ ಭೈರವಾಡಂಬರಂ || ಗುಹಾ ಗಹನ ಗಹ್ವರೋದರ ವಿಶೀರ್ಣಮಾದಂದದೇಂ |
ಮುಹುಃ ಪ್ರಕಟವಾದುದಾ ರವಿತನೂಭವ ಜ್ಯಾರವಂ | ೧೩೬
ವ|| ಅಂತು ಯುಗಾಂತ ವಾತಾಹತ ಕುಲಗಿರಿಯ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜವಂಬರತಳದೊಳ್ ಮಿಳಿರೆ ತನಗಿದಿರಂ ಬರ್ಪ ಕರ್ಣನ ರಥಕ್ಕೆ ತನ್ನ ರಥಮನಾಸನಮಾಗೆ ಪರಿಯಿಸಿ ವಿಂಧ್ಯ ಮಳಯ ಮಹೀಧರಂಗಳೊಂದೊಂದಳೊಳ್ ತಾಗುವಂತೆ ತಾಗಿ ದೇವದತ್ತ ಶಂಖಮಂ ಪೂರೈಸಿ ಗಾಂಡೀವಮನೇಚಿಸಿ ನೀವಿ ಜೇವೊಡೆದಾಗಳ್ಮll ಸll ಎನಿತಾ ಬ್ರಹ್ಮಾಂಡದಿಂದಿತ್ತುದಧಿ ಕುಲ ನಗ ದ್ವೀಪ ಸಂಘಾತಮಂತಂ
ತನಿತುಂ ಬತ್ತಿತ್ತು ತೂಳತುಡುಗಿದುದೆನೆ ದಿಕ್ಕಾಲರಾ ದೇವದತ್ತ | ಧನಿ ಸಂಮಿಶ್ರ ಸಮುದದ್ರಜತಗಿರಿತಟ ಸಷ ಸಂಶಿಷ, ಮಾರ್ವಿ "ನಿನದು ಪರ್ವಿಕಾಂಡ ಪ್ರಳಯ ಘನ ಘಟಾಟೋಪ ಗಂಭೀರನಾದಂ | ೧೩೭
ಮರೆಯನ್ನು ಪ್ರವೇಶಿಸಿದುವು. ನನ್ನ ಇಷ್ಟಾರ್ಥವು ಈ ದಿನ ಪೂರ್ಣವಾಯಿತು ಎಂದು ಕರ್ಣನು ತನ್ನ ಎರಡು ಭುಜಗಳನ್ನೂ ನೋಡಿ ಯುದ್ದಾನಂದದಿಂದ ಕೂಡಿ ಶಲ್ಯನನ್ನು ತೇರನ್ನು ನಡೆಸುವಂತೆ ಹೇಳಿ ದಿವ್ಯಾಸ್ತಗಳ ಬತ್ತಳಿಕೆಯನ್ನು ಎರಡು ಪಕ್ಕದಲ್ಲಿಯೂ ಬಿಗಿದುಕೊಂಡು ತಾಳವಟ್ಟವೆಂಬ ಬಿಲ್ಲು ಕೆಂಪಗಿರುವ ತನ್ನ ಅಂಗೈಯನ್ನು ಸೇರಿಕೊಂಡಿರಲು ಬಿಲ್ಲಿನ ಹದೆಯನ್ನು ಎಳೆದು ಮೀಟಿ (ಜೇವೊಡೆ)ದನು. ೧೩೬. ಪ್ರಳಯಕಾಲದ ಕಾಲಭೈರವನಿಂದ ಕಲಕಲ್ಪಟ್ಟ ಪುಷ್ಪಲಾವರ್ತ ಮೋಡದಂತೆ ಆ ಅತಿಭಯಂಕರವಾದ ಶತ್ರುರಾಜರ ಕಿವಿಗೆ ಭೈರವಾಡಂಬರವಾಗಿ ಗುಹೆಗಳ ಆಳವಾದ ಕಣಿವೆಗಳ ಒಳಭಾಗವನ್ನು ಭೇದಿಸಿದ ಕರ್ಣನ ಬಿಲ್ಲಿನ ಹೆದೆಯ ಶಬ್ದವು ಆ ದಿನ ಪುನಃ ಪುನಃ ಪ್ರಕಟವಾಯಿತು. ವ|| ಪ್ರಳಯಕಾಲದ ಗಾಳಿಯಿಂದ ಹೊಡೆಯಲ್ಪಟ್ಟ ಕುಲಪರ್ವತಗಳು (ತಾವಿರುವ) ನೆಲೆಯಿಂದ ಚಲಿಸುವಂತೆ ಕರ್ಣನು ಚಲಿಸಿದನು. ಕಾಗೆಯ ಬಾವುಟವು ಆಕಾಶಪ್ರದೇಶದಲ್ಲಿ ಅಲುಗಾಡುತ್ತಿರಲು ತನಗೆ ಎದುರಾಗಿ ಬರುತ್ತಿರುವ ಕರ್ಣನ ತೇರಿಗೆ ತನ್ನ ತೇರನ್ನು ಸಮೀಪವಾಗುವ ಹಾಗೆ ಹರಿಯಿಸಿ ವಿಂಧ್ಯ ಮಲಯಪರ್ವತಗಳು ಒಂದರೊಡನೊಂದು ತಾಗುವಂತೆ ತಾಗಿ ಅರ್ಜುನನು ದೇವದತ್ತಶಂಖವನ್ನು ಊದಿ ಗಾಂಡೀವಕ್ಕೆ ಹೆದೆಯನ್ನೇರಿಸಿ ಚೆನ್ನಾಗಿ ಸೆಳೆದು ಶಬ್ದಮಾಡಿದನು. ೧೩೭. ಬ್ರಹ್ಮಾಂಡದಿಂದೀಕಡೆ ಎಷ್ಟು ಸಮುದ್ರ, ಕುಲಪರ್ವತದ್ವೀಪ ಸಮೂಹವಿದ್ದಿತೋ ಅವನ್ನೂ ಕ್ರಮವಾಗಿ ಬತ್ತಿತು, ತಳ್ಳಲ್ಪಟ್ಟಿತು ಮತ್ತು ಸುಕ್ಕಿಹೋಯಿತು ಎಂದು ದಿಕ್ಷಾಲಕರು ಹೇಳುತ್ತಿರಲು ದೇವದತ್ತವೆಂಬ ಶಂಖಧ್ವನಿಯಿಂದ ಕೂಡಿಕೊಂಡಿರುವುದೂ ಪ್ರಳಯಕಾಲದ ಮೋಡಗಳ ಸಮೂಹದ ಆಡಂಬರವುಳ್ಳದೂ ಆದ ಆ ಹೆದೆಯ ಟಂಕಾರಶಬ್ದವು ಎತ್ತರವಾದ ಕೈಲಾಸಪರ್ವತದ
Page #615
--------------------------------------------------------------------------
________________
೬೧೦ | ಪಂಪಭಾರತಂ
ವ|| ಆಗಳಾ ಧ್ವನಿಯಂ ಕೇಳು ದೇವೇಂದ್ರನಿಂದ್ರಲೋಕದೊಳ್ ಮಿಟ್ಟೆಂದು ಮಿಡುಕಲಪೊಡು ದೇವರಿಲ್ಲದಂತು ದೇವನಿಕಾಯಂಬೆರಸು ತನ್ನ ಮಗನ ಕಾಳೆಗಮಂ ನೋಡಲೆಂದು ಚಿತ್ರಪಟಮಂ ಕೆದಟ ಗಗನತಳಮನಳಂಕರಿಸಿದಂತೆ ಷೋಡಶ ರಾಜರ್ವರಸು ಬಂದಿರ್ದನಾಗಳಕಂ।। ದೇವ ಬ್ರಹ್ಮ ಮುನೀಂದ್ರಾ
ಸೇವಿತನುತ್ತಪ್ತ ಕನಕವರ್ಣಂ ಹಂಸ | ಗ್ರೀವ ನಿಹಿತೈಕವಾದನಿ ಳಾವಂದನನಿಂದನಬ್ಬಗರ್ಭಂ ಬಂದಂ ||
ವ|| ಆಗಳ್
ಕಂ
ಕಂll
ಏಳಯ ನಂದಿಯನಾ ಪಜ
ಗೇಟದ ಗಿರಿಸುತೆಯ ಮೊಲೆಗಳಲ್ಲೇಟಿಂ ನೀ |
ರೀತಿಸುತಿರೆ ಕರ್ಣಾರ್ಜುನ
ರೇಂ ನೋಡ ಭೂತನಾಥಂ ಬಂದಂ ||
ಆರನುವರದೊಳಮನಗಣ
ಮಾರದ ಕಣಲರ್ಗಳಾರ್ಗುಮರಿಗನೆನುತುಂ | ನೀರದಪಥದೊಳ್ ಮುತ್ತಿನ
ಹಾರದ ಬೆಳಗೆಸೆಯ ನಾರದಂ ಬಂದಿರ್ದಂ ||
ರಸೆಯಿಂದಮೊಗದು ಪಡೆಗಳ
ಪೊಸ ಮಾಣಿಕದಳವಿಸಿಲ್ಗಳೊಳ್ ಪೊಸದಳಿರೊಳ್ | ಮುಸುಕಿದ ತಲದಿಂದಸದಿರ
ಪೊಸತನ ನಡೆ ನೋಡಲುರಗರಾಜಂ ಬಂದಂ ||
೧೬೩೮
ORE
೧೪೦
೧೪೧
ದಡದಲ್ಲಿಯೂ ಸ್ಪಷ್ಟವಾಗಿ ಸೇರಿಕೊಂಡು ಪ್ರಕಟವಾಯಿತು. ವ! ಆಗ ಆ ಧ್ವನಿಯನ್ನು ಕೇಳಿ ದೇವೇಂದ್ರನು ಇಂದ್ರಲೋಕದಲ್ಲಿ ಮಿಟ್ಟೆಂದು ಅಲುಗಾಡುವುದಕ್ಕೂ ದೇವತೆಯಿಲ್ಲದ ಹಾಗೆ ಎಲ್ಲ ದೇವತೆಗಳ ಸಮೂಹದೊಡನೆ ಕೂಡಿ ತನ್ನ ಮಗನ ಕಾಳಗವನ್ನು ನೋಡಬೇಕೆಂದು ಚಿತ್ರಪಟವನ್ನು ಹರಡಿ ಆಕಾಶಪ್ರದೇಶವನ್ನು ಅಲಂಕರಿಸುವ ಹಾಗೆ ಹದಿನಾರುರಾಜರುಗಳೊಡನೆ ಬಂದಿದ್ದನು. ೧೩೮. ಆಗ ದೇವತೆಗಳು, ಬ್ರಾಹ್ಮಣರು ಮತ್ತು ಋಷಿಶ್ರೇಷ್ಠರುಗಳಿಂದ ಸೇವಿಸಲ್ಪಟ್ಟವನೂ ಚೆನ್ನಾಗಿ ಕಾಸಿದ ಚಿನ್ನದ ಬಣ್ಣವುಳ್ಳವನೂ ಹಂಸದ ಕತ್ತಿನ ಮೇಲೆ ಇಡಲ್ಪಟ್ಟ ಒಂದು ಪಾದವುಳ್ಳವನೂ ಲೋಕಪೂಜ್ಯನೂ ಯಾರಿಂದಲೂ ನಿಂದಿಸಲ್ಪಡದವನೂ ಆದ ಬ್ರಹ್ಮನು ಬಂದನು. ವ|| ಆಗ ೧೩೯. ನಂದಿಯನ್ನೇರಿಕೊಂಡು ಹಿಂದೆ ಹತ್ತಿ ಕುಳಿತಿರುವ ಪಾರ್ವತಿಯ ಮೊಲೆಗಳ ನಯವಾದ ತಿವಿತದಿಂದ ರಸವೇರುತ್ತಿರಲು ಕರ್ಣಾರ್ಜುನರ ಕಾಳಗವನ್ನು ನೋಡಲು ಈಶ್ವರನೂ ಬಂದನು. ೧೪೦. ಯಾರ ಯುದ್ಧದಲ್ಲಿಯೂ ಸ್ವಲ್ಪವೂ ತೃಪ್ತಿಯಾಗದ ನನ್ನ ನೇತ್ರಪುಷ್ಪಗಳು ಅರ್ಜುನನಿಂದ ತೃಪ್ತಿಹೊಂದುತ್ತವೆ ಎಂದು ಹೇಳುತ್ತಾ ಆಕಾಶಮಾರ್ಗದಲ್ಲಿ ಮುತ್ತಿನ ಹಾರದ ಕಾಂತಿಯು ಪ್ರಕಾಶಿಸುತ್ತಿರಲು ನಾರದನು ಬಂದಿದ್ದನು. ೧೪೧. ಪಾತಾಳಲೋಕದಿಂದ ಹುಟ್ಟಿ ಹೆಡೆಗಳ
Page #616
--------------------------------------------------------------------------
________________
ದ್ವಾದಶಾಶ್ವಾಸಂ | ೬೧೧ ದಿನಕರನುಮಿಂದ್ರನುಂ ನಿಜ ತನಯರ ದೆಸೆಗಣಗಿದಂಕದಿಂ ಗೆಲವಿನ ಮಾ | ತನೆ ನುಡಿಯ ನುಡಿದ ಜಗಳಮ ದಿನಿಹಾನುಂ ತಿಪುರಹರನ ಕಿಎಗೆಯುವುದುಂ ||
೧೪೨ ವ|| ಆಗಳ್ ದೇವೇಂದ್ರಂಗಂ ದಿವಸೇಂದ್ರಂಗು ಬಳೆಯನಟ್ಟ ಬರಿಸಿಕಂil ಜಗಳದೇಂ ದಿನಕರ ಪೊಣ
ರ್ದು ಗೆಲ್ಬನೇ ನಿಜತನೂಭವಂ ಹರಿಗನೊಳೇಂ | ಬಗೆಗೆಟ್ಟೆಯೊ ಧುರದೊಳವಂ ಮಿಗಿಲೆನಗೆನೆ ನಿನಗೆ ಪಗಲೊಳೇಂ ಕತ್ತಲೆಯೇ ||
೧೪೩ ವಗಿ ಎಂದು ದಿನಕರನ ಪುರಂದರನ ಜಗಳಮಂ ಪತ್ತುವಿಡೆ ನುಡಿದುಕoll ಅಳವಿನೋಳೆನ್ನುಮನಿನಿಸ
ಗಳಿಸಿದ ಹರಿಗನೂಳಿದಿರ್ಚಿ ಕರ್ಣಂ ಗೆಲಲು | ಮೃಳಿಪಂ ಗಡಮಂದೋಪಳ ತಳಮಂ ಪೊಯೇಶ್ವರಂ ಮುಗುಳಗೆ ನಕ್ಕಂ |
೧೪೪ ವ|| ಅಂತು ಮುಗಿಲೂಳಿದ ಮೂರುಲೋಕವುಂ ಕರ್ಣಾರ್ಜುನರ ಯುದಮಂ ನೋಡಲ್ ನೆರೆದಲ್ಲಿ ನೆರವಿವಡದನ್ನ ಪ್ರತಿಜ್ಞೆಯಂ ನೆಂಪಲಿಂದವಸರಂಬಡೆದನೆಂದು ಕೌರವ ಕುಲಹಿಮಕರಾನಿಲಪಚಯವರ್ಷವಾರಿದನಪ್ಪ ಪವನತನಯಂ ಬದ್ಧವಪುವಾಗಿ ದುರ್ಯೋಧನಾ ಹೊಸಮಾಣಿಕ್ಯಗಳು ಎಳೆಬಿಸಿಲಿನಲ್ಲಿ ಹೊಸಚಿಗುರುಗಳಿಂದ ಮುಚ್ಚಿಕೊಂಡಿರುವ ರೀತಿಯಿಂದ ಪ್ರಕಾಶಿಸುತ್ತಿರಲು ಸರ್ಪರಾಜನಾದ ವಾಸುಕಿಯೂ ಬಂದನು. ೧೪೨. ಸೂರ್ಯನೂ ಇಂದ್ರನೂ ತಮ್ಮ ಮಕ್ಕಳ ಕಡೆಗೆ ಉಂಟಾದ ಪಕ್ಷಪಾತದಿಂದ ಜಯದ ಮಾತನ್ನೇ ಆಡುತ್ತಿರಲು ಆಡಿದ ಜಗಳವು ಒಂದಿಷ್ಟು ಈಶ್ವರನ ಕಿವಿಗಳಿಗೂ ಮುಟ್ಟಿತು. ವಆಗ ಇಂದ್ರನಿಗೂ ಸೂರ್ಯನಿಗೂ ದೂತರನ್ನು ಕಳುಹಿಸಿ ಬರಮಾಡಿ ೧೪೩. ಸೂರ್ಯನೇ ಇದೇನು ಜಗಳ, ನಿನ್ನ ಮಗನಾದ ಕರ್ಣನು ಹರಿಗನಲ್ಲಿ ಹೆಣಗಾಡಿ ಗೆಲ್ಲುತ್ತಾನೆಯೇ, ಬುದ್ಧಿಗೆಟ್ಟಿದ್ದೀಯೇನು? ಯುದ್ದದಲ್ಲಿ ಅವನು ನನಗಿಂತಲೂ ಮೇಲಾದವನು ಎನ್ನುವಾಗ ನಿನಗೆ ಹಗಲಿನಲ್ಲಿಯೇ ಕತ್ತಲೆಯೇ ? ವll ಸೂರ್ಯ ಮತ್ತು ಇಂದ್ರರ ಜಗಳವನ್ನು ಕೊನೆಗಾಣುವಂತೆ ತೀರ್ಮಾನಿಸಿ - ೧೪೪, ಪರಾಕ್ರಮ ದಲ್ಲಿ ನನ್ನನ್ನೂ ಒಂದಿಷ್ಟು ಮೀರಿರುವ ಹರಿಗನನ್ನು ಎದುರಿಸಿ ಗೆಲ್ಲುವುದಕ್ಕೆ ಕರ್ಣನು ಕಾತರನಾಗಿದ್ದಾನೆಯಲ್ಲವೇ ಎಂದು ಈಶ್ವರನು ತನ್ನ ಪ್ರಿಯೆಯಾದ ಪಾರ್ವತಿಯ ಅಂಗೈಯನ್ನು ತಟ್ಟಿ ಹುಸಿನಗೆಯನ್ನು ನಕ್ಕನು. ವ|ಹಾಗೆ ಆಕಾಶದಲ್ಲಿ ನೆರೆದಿರುವ ಮೂರುಲೋಕವೂ ಕರ್ಣಾರ್ಜುನರ ಯುದ್ಧವನ್ನು ನೋಡಲು ನೆರೆದಿರುವಾಗಲೇ ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಲು ಅವಕಾಶಪಡೆದೆನೆಂದು ಕೌರವವಂಶವೆಂಬ ಚಂದ್ರನ ಕೊಳೆಯ ರಾಶಿಗೆ ಮಳೆಗಾಲದ ಮೋಡವಾಗಿರುವ ಭೀಮಸೇನನು ಉಬ್ಬಿ ಸಂತೋಷಪಟ್ಟನು. ದುರ್ಯೊಧನನ ತಮ್ಮಂದಿರೊಬ್ಬ
Page #617
--------------------------------------------------------------------------
________________
೬೧೨ / ಪಂಪಭಾರತಂ
ನುಜರಂ ಹೆಸರ್ವೆಸರೊಳೆ ಕರೆದು ಮೂದಲಿಸಿದೊಡೆ ಮುನ್ನೆ ತಮ್ಮೊಡವುಟ್ಟಿದರ್ ಸತ್ತಲೊಳ ನಿಬರುಮೊಂದಾಗಿ ಬಂದು ತಾಗಿದಾಗಳ್
ಮ||
ಮಸಕಂಗುಂದದೆ ಪಾಯ್ಕರಾತಿ ಶರಸಂಘಾತಂಗಳು ಕೂಡ ಖಂ ಡಿಸಿ ಬಿಲ್ಲಂ ಮುಳಯೆಚೊಡಂತನಿಬರುಂ ಬಾಳಿಟ್ಟು ಮೇಲ್ವಾಯೊಡ | ರ್ಬಿಸೆ ತಿಣ್ಣಂ ತೆಗೆದರ್ಧಚಂದ್ರಶರದಿಂ ಸೂಮ್ ಸೂಳೆಚ್ಚಾಗಳ ರ್ಚಿಸಿದಂತಿರ್ದುದುರುಳ ಕೌರವರಃಪದಂಗಳಿಂ ಕೊಳ್ಳುಳಂ || ೧೪೫ ವ|| ಅಂತು ದುರ್ಯೋಧನ ದುಶ್ಯಾಸನರಿರ್ವರುಮುಟಿಯುದ ಕೌರವರೆಲ್ಲರುಮಂ ಜೀರಗೆಯೊಕ್ಕಲ್ಯಾಡಿ ಕೆಡೆದ ಪೆಣಂಗಳನೆಡಗಲಿಸಿ ನಿಂದು
ಮ|| ಚಲದಿಂ ಕೃಷ್ಣಯ ಕೇಶಮಂ ಪಿಡಿದ ನಿನ್ನಿಂದಾದಲ್ ನಿನ್ನುರ ಸ್ಥಲಮಂ ಪೋಲದೆ ಪೋಪುದನಗದೇಕಳ್ಳಿರ್ದ ಬಾಳ್ವೆ ಪಂ ಬಲದೇನಿಂ ನಿನಗುಂಟೆ ನಿನ್ನನುಜರು ಕಂಡಂತುಮನನ್ನ ತೋ
ಜ್ವಲೆಯೊಳ್ ಸಿಲ್ಕಿದೆಯೆಂದು ಮೂದಲಿಪುದುಂ ದುಶ್ಯಾಸನಂ ತಾಗಿದಂ || ೧೪೬
ವ|| ಅಂತು ತಾಗಿದಾಗಳ್
ಕಂ || ಕಲಪಟ್ಟ ಪಗೆಯ ಬೇರ್ವರಿ
ದುಮಿಕೆಯ ಪೊದ ಗಂಡಮಚ್ಚರದೊದವಿಂ ನನನ ಮೂದಲಿಸುತ್ತುಂ
ನೆನನೆ ತೆಗೆದೆಚ್ಚರೊರ್ವರೋರ್ವರನಾಗಳ್ ||
042
ಸೆಳೆದು
ರೊಬ್ಬರನ್ನೂ ಅವರ ಹೆಸರನ್ನು ಹಿಡಿದು ಮೂದಲಿಸಿ ಕರೆದನು. ಈಗಾಗಲೇ ತಮ್ಮ ಸಹೋದರರು ಸತ್ತ ದುಃಖದಿಂದ ದುಃಖಿತರಾದ ಆ ಅಷ್ಟು ಜನವೂ ಒಂದಾಗಿ ಸೇರಿ ತಾಗಿದರು. ೧೪೫, ಕಡಿಮೆಯಾಗದ ವೇಗದಿಂದ ಹಾದುಬರುತ್ತಿರುವ ಬಾಣಸಮೂಹಗಳನ್ನು ತಕ್ಷಣವೇ ಕತ್ತರಿಸಿ ಬಿಲ್ಲನ್ನೂ ಮುರಿದುಹೋಗುವ ಹಾಗೆ ಹೊಡೆದನು. ಅಷ್ಟು ಜನವೂ ಕತ್ತಿಯನ್ನು ಒರೆಯಿಂದ ಹೊರತೆಗೆದು ಮೇಲೆ ನುಗ್ಗಿ ಬಂದರು. ಭೀಮನು ರಭಸದಿಂದ ಅರ್ಧಚಂದ್ರಾಕಾರದ ಬಾಣವನ್ನು ತೆಗೆದು ಸಲಸಲಕ್ಕೂ ಹೊಡೆದಾಗ ಯುದ್ಧಭೂಮಿಯು ಉರುಳಿರುವ ಕೌರವರ ತಲೆಯೆಂಬ ಕಮಲಗಳಿಂದ ಪೂಜಿಸಲ್ಪಟ್ಟಂತೆ ಇದ್ದಿತು. ವ|| ಹಾಗೆ ದುರ್ಯೋಧನ ದುಶ್ಯಾಸನರಿಬ್ಬರನ್ನು ಬಿಟ್ಟು ಉಳಿದ ಕೌರವರೆಲ್ಲರನ್ನೂ ಜೀರಿಗೆಯನ್ನು ಒಕ್ಕುವಂತೆ ಒಕ್ಕಿ ಕೆಡೆದಿರುವ ಹೆಣಗಳನ್ನು ದಾಟಿ ನಿಂತನು. ೧೪೬. 'ಛಲದಿಂದ ದೌಪದಿಯ ಕೂದಲನ್ನು ಹಿಡಿದೆಳೆದ ನಿನ್ನಿಂದಾಗಿರುವ ದುಃಖವು ನಿನ್ನ ಹೃದಯಪ್ರದೇಶವನ್ನು ಸೀಳದೇ ಹೋಗುವುದಿಲ್ಲ. ನನಗೆ ಏತಕ್ಕಾಗಿ ಹೆದರಿದ್ದೀಯೆ ? ನಿನ್ನ ತಮ್ಮಂದಿರಾದುದನ್ನು ನೋಡಿಯೂ ಬದುಕಬೇಕೆಂಬ ಹಂಬಲ ನಿನಗೆ ಇನ್ನೂ ಇದೆಯೇ ? ಹೇಗಾದರೇನು ? ನನ್ನ ತೋಳಿನ ಬಲೆಯಲ್ಲಿ ಸಿಕ್ಕಿದ್ದೀಯೇ' ಎಂದು ಮೂದಲಿಸಲು ದುಶ್ಯಾಸನನು ತಾಗಿದನು. ವ|| ಹಾಗೆ ತಾಗಿದಾಗ ೧೪೭. ಕೆರಳಿರುವ ಅಧಿಕವಾದ ದ್ವೇಷದಿಂದಲೂ ಬೇರುಬಿಟ್ಟಿರುವ ಗರ್ಜನೆಯಿಂದಲೂ, ವ್ಯಾಪ್ತವಾದ ಪೌರುಷ ಮತ್ತು ಮತ್ಸರದ
-
Page #618
--------------------------------------------------------------------------
________________
"
ಮ||
ಸುರಿಗಿಳವ ತಲದಿನೂರೂ
ರ್ವರನಿಖೆ ನಡೆ ನಟ್ಟ ಕೋಲ ಬಲೆವಿಡಿದತ್ತಂ | ಸುರಿದುವವಂದಿರ ಮುಳಿಸಿನ
ದ್ವಾದಶಾಶ್ವಾಸಂ | ೬೧೩
ತರಳ ದಳ್ಳುರಿಯನಿಟೆಸಿ ನವರುಧಿರಂಗಳ್ ||
೧೪೮
ವ|| ಅಂತು ನಿಜನಿಶಿತಮಾರ್ಗಣಂಗಳಿಂದಮಂಬು ತಪ್ಪ ಜಟ್ಟಿಗ ಬಿಲ್ಲಾಳಂತೆಚ್ಚು ಪಾಲ್ವರಾತಿಯ ಮೆಯ್ಕ ನೆತ್ತರಂ ಕಂಡು ಸೂಸಿನೊಳಿವನ ನೆತ್ತರೊಡಂ ತನಗೆ ಬಸಿಯಾ ಕುಡಿಯಲುಂ ದೌಪದಿಯ ಕೇಶಪಾಶಮಂ ತೊಯ್ದು ಮುಡಿಯಲುಂ ನೆನೆಯದೆಂದು
ಕಂ
ಅವನಂ ಬಂಚಿಸಿ ಗದೆಗೊಂ
ಡವನ ವರೂಥಮನೆ ತಿಣ್ಣಮಿಳ್ಕೊಡ ಗದಗೊಂ | ಡವನೆಯರ ರಥದಿಂದಿತೆ ದವನಿಯೊಳವನುಮನುರುಳಿದಂ ಪವನಸುತಂ ||
೧೪೯
ಬಳೆ ನುರ್ಗುತ್ತಿರ ಮೆಟ್ಟಿ ಗಂಟಲನಿಂ ದುಶ್ಯಾಸನಂ ಭೀಮನಿಂ ಬಳ ಸಂಪನ್ನನವುಂಕಿ ಕೊಂದಪನಿದಂ ಮಾರ್ಕೊಳ್ಳ ಬಲ್ಲಾಳಸುಂ | ಗೊಳೆ ಬಾಳೆತ್ತಿದನೇಕ ಕಣ್ಣ ಮಿಡುಕೊ ಪಿಂಗಾಕ್ಷ ನೀನೇಕೆ ಮಿ ಆಳ ನೋಡುತ್ತುಳನಿರ್ದೆಯೆಂದದಟರಂ ಭೀಮಂ ಪಳಂಚಲ್ವಿದಂ || ೧೫೦ ಸೇರುವಿಕೆಯಿಂದಲೂ ಮರ್ಮವನ್ನೇ ರಹಸ್ಯವಾದುದನ್ನೇ ಮೂದಲಿಸುತ್ತ ಒಬ್ಬೊಬ್ಬರೂ ಮರ್ಮಸ್ಥಳವನ್ನೇ ಗುರಿಮಾಡಿ ಹೊಡೆದರು. ೧೪೮. ಕೈಗತ್ತಿಯಿಂದ ಹೊಡೆದಾಡುವಂತೆ ಒಬ್ಬನು ಮತ್ತೊಬ್ಬನನ್ನು ಹೊಡೆಯಲು ಚೆನ್ನಾಗಿ ನಾಟಿಕೊಂಡ ಭಾಣದ ದಾರಿಯನ್ನೇ ಅನುಸರಿಸಿ ಹೊಸರಕ್ತವು ಅವರುಗಳ ಕೋಪದ ಒಟ್ಟುಗೂಡಿಸಿದ ದಳ್ಳುರಿಯನ್ನೂ ತಿರಸ್ಕರಿಸುತ್ತ ಎಲ್ಲಕಡೆಯಲ್ಲಿಯೂ ಸುರಿಯಿತು. ವ|| ಭೀಮನು ಹರಿತವಾದ ಬಾಣಗಳಿಂದ ಆ ಬಾಣಗಳು ಮುಗಿದು ಹೋಗುವವರೆಗೂ ಶೂರನಾದ ಬಿಲ್ಲಾಳಿನಂತೆ ಹೊಡೆದು ದುಶ್ಯಾಸನನ ಮೆಯಿಂದ ಹರಿದುಬರುತ್ತಿರುವ ರಕ್ತವನ್ನು ನೋಡಿ ಈ ಸರದಿಯ ಪೆಟ್ಟಿನಿಂದಲೇ ಇವನ ರಕ್ತವು ಸುರಿದುಹೋದರೆ ಮುಂದೆ ಅದು ತನ್ನ ಹೊಟ್ಟೆಯು ತೃಪ್ತಿಯಾಗುವ ಹಾಗೆ ಕುಡಿಯುವುದಕ್ಕೂ ದೌಪದಿಯ ಕೂದಲಿನರಾಶಿಯನ್ನು ಒದ್ದೆಮಾಡಿ ಮುಡಿಸುವುದಕ್ಕೂ ಸಾಲದೇ ಹೋಗಬಹುದು ಎಂದು ೧೪೯. ಅವನನ್ನು ವಂಚಿಸಿ ಗದೆಯನ್ನು ತೆಗೆದುಕೊಂಡು ಅವನ ತೇರನ್ನು ತೀಕ್ಷವಾಗಿ ಹೊಡೆದನು. ಅವನು ಗದೆಯನ್ನು ತೆಗೆದುಕೊಂಡು ಬರಲು ಭೀಮನು ರಥದಿಂದಿಳಿದು ಅವನನ್ನು ಭೂಮಿಯಲ್ಲಿ ಉರುಳಿಸಿದನು. ೧೫೦. ಗಂಟಲಬಳೆಗಳು ಜಜ್ಜಿಹೋಗುವ ಹಾಗೆ ಕಾಲಿನಿಂದ ಮೆಟ್ಟಿ ತುಳಿದು ಇವನು ದುಶ್ಯಾಸನ, ಭೀಮನಿಗಿಂತ ಬಲಶಾಲಿಯಾದವನು, ಇವನನ್ನು ಅಮುಕಿ ಕೊಂದು ಹಾಕುತ್ತೇನೆ, ಇದನ್ನು ಪ್ರತಿಭಟಿಸುವ ಶೂರರ ಪ್ರಾಣಾಪಹಾರಮಾಡಲು ಕತ್ತಿಯನ್ನೆತ್ತಿದ್ದೇನೆ, ದುರ್ಯೋಧನ! ಯಾತಕ್ಕೋಸ್ಕರ ನೀನು ಕಣ್ಣನ್ನು ಮಿಟುಕಿಸುವುದಿಲ್ಲ? ಏತಕ್ಕೆ ಮಿಳಮಿಳನೆ ನೋಡುತ್ತ ಒಳಗೇ ಇದ್ದೀಯೆ ಎಂದು ಭೀಮನು ಶೂರರನ್ನು ಪ್ರತಿಭಟಿಸಿ ಆರ್ಭಟಿಸಿದನು.
Page #619
--------------------------------------------------------------------------
________________
೬೧೪) ಪಂಪಭಾರತಂ
ವಗ ಅಂತು ಮುಳಿದ ಪವನಜನ ಕೊಪಾಟೋಪಮಂ ಕಂಡು ಕೌರವಬಲದ ನಾಯಕರೊಳೊರ್ವರಪೊಡಂ ಮಿಟ್ಟೆಂದು ಮಿಡುಕಲಣದಿರೆ ಪವನಾತ್ಮಜಂ ದ್ರುಪದಾತ್ಮಜೆಗೆ ಬಟೆಯನಟ್ಟುವುದುಮಾ ವನಿತೆ ಜಯವನಿತೆ ಬರ್ಪಂತೆ ಬಂದುಮll. ಉಸಿರೊಪ್ರಿಂ ತಿದಿಯಂತಿರೊತ್ತಿದ ಬಸಿಮ್ ಪೋತಂದ ಕಣ್ ಬಿಟ್ಟ ಬಾಯ್
ಮಸಕಂಗುಂದಿದ ಮಯ್ ವಲಂ ಬಡಿವ ಕಾಲ್ ಭೂಭಾಗದೊಳ್ ತಂದು ತಾ| ಟಿಸುತುಂ ಕೋಟಲೆಗೊಳ್ ರತ್ನಮಕುಟದ್ಯೋತೋತ್ತಮಾಂಗಂ ವಿರಾ ಜಿಸುವನ್ನಂ ಪುಡಿಯೊಳ್ ಪೊರಳ್ ಪಗೆಯಂ ಕಾರ್ವಿನಂ ನೋಡಿದಳ lin೫೧ ಕಂ|| ಆಸತ್ತು ತಿರಿದರಾ
ವಾಸದ ಪರಿಭವದ ಕುದಿಪಮಂ ನೀಗಿ ಸುಖಾ | ವಾಸಮನೆಬ್ಬಿಸಿದುದು ದು
ಶ್ಯಾಸನನಿರ್ದಿರವು ಮನದೊಳಾ ದೌಪದಿಯಾ || ವ|| ಆಗಳ್ ವೃಕೋದರಂ ತನ್ನ ತಳೋದರಿಯ ಮುಖಮಂ ನೋಡಿ ನಿನ್ನನ್ನ ಪ್ರತಿಜ್ಞೆಯಂ ನೆಪುವಂ ಬಾಯೆಂದು ಕೆಲದೊಳ್ ಕುಳ್ಳಿರಿಸಿ ದೃಢ ಕಠಿನಹೃದಯನಪ್ಪ ಹಿರಣ್ಯಾಕ್ಷನುರಮಂ ಪೋಲ್ವ ನಾರಸಿಂಗನಂತೆಕಂ|| ಡೊಳ್ಳನೆ ಸುರಿಗೆಯೊಳುರಮಂ
ಬಿಕ್ಕನೆ ಬಿರಿಯಿಳಿದು ಬರಿಯನಗಲೂ ಮನಂ | ಕೊಕ್ಕರಿಸದೆ ಬಗಸಿರೆಯಿನ ಕುರ್ಕ್ಕೆಯ ಮೊಗೆಮೊಗೆದು ನೆತ್ತರಂ ಪವನಸುತಂ ||
೧೫೩
ವ|ಹಾಗೆ ಕೋಪಿಸಿಕೊಂಡ ಭೀಮನ ಕೋಪಾಟೋಪವನ್ನು ಕಂಡು ಕೌರವಸೈನ್ಯದ ನಾಯಕರಲ್ಲಿ ಒಬ್ಬರಾದರೂ ಮಿಟ್ಟೆಂದು ಮಿಡುಕಲಾರದವರಾಗಿರಲು ಭೀಮನು ಬ್ರೌಪದಿಗೆ ದೂತರ ಮೂಲಕ ಹೇಳಿಕಳುಹಿಸಲು ಆ ಸ್ತ್ರೀಯು ಜಯಲಕ್ಷ್ಮಿಯು ಬರುವಂತೆ ಬಂದು ೧೫೧. ಉಸಿರಿನ ಒತ್ತಡದಿಂದ ತಿದಿಯ ಹಾಗೆ ಅಮುಕಿದ ಹೊಟ್ಟೆ, ಹೊರಕ್ಕೆ ಹೊರಟಿರುವ ಕಣ್ಣು ಬಿಟ್ಟಿರುವ ಬಾಯಿ, ಕುಂದಿದ ದೇಹ, ಚೆನ್ನಾಗಿ ಬಡಿಯುತ್ತಿರುವ ಕಾಲು, ನೆಲದಮೇಲೆ ಬಡಿಯುತ್ತ ಹಿಂಸೆ ಪಡುತ್ತಿರುವ, ರತ್ನಖಚಿತವಾದ ಕಿರೀಟದಿಂದ ಪ್ರಕಾಶಮಾನವಾಗಿರುವ ತಲೆ ಇವೆಲ್ಲವೂ ವಿರಾಜಿಸುತ್ತಿರಲು ಧೂಳಿನಲ್ಲಿ ಹೊರಳಾಡುತ್ತಿರುವ ಹಗೆಯನ್ನು ಕಣ್ಣುತೃಪ್ತಿ ಪಡುವವರೆಗೂ ಬ್ರೌಪದಿಯು ನೋಡಿದಳು. ೧೫೨. ದುಶ್ಯಾಸನನಿದ್ದ ಸ್ಥಿತಿಯು ಅವಳು ಕಾಡಿನಲ್ಲಿ ಬಳಲಿ ಅಲೆದಾಡಿದ, ವನವಾಸದ ಅವಮಾನವನ್ನೂ ಸಂಕಟವನ್ನೂ ಹೋಗಲಾಡಿಸಿ ಅವಳಿಗೆ ಸುಖದ ನೆಲೆಯನ್ನುಂಟುಮಾಡಿತು. ವl! ಆಗ ಭೀಮನು ತನ್ನ ಪತ್ನಿಯ (ತಳೋದರಿಯ) ಮುಖವನ್ನು ನೋಡಿ ನಿನ್ನ ಮತ್ತು ನನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡೋಣ ಬಾ ಎಂದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ದೃಢವೂ ಕಠಿಣವೂ ಆದ ಹಿರಣ್ಯಾಕ್ಷನ ಎದೆಯನ್ನು ಸೀಳುವ ನರಸಿಂಹನಂತೆ ೧೫೩. ಕೈಗತ್ತಿಯಿಂದ ಎದೆಯನ್ನು ಡೊಕ್ಕೆಂದು ಬಿರುಬಿರನೆ ಬಿರಿಯುವಂತೆ ತಿವಿದು ಪಕ್ಕವನ್ನು ಅಗಲವಾಗಿ
Page #620
--------------------------------------------------------------------------
________________
ಕಂ
ದ್ವಾದಶಾಶ್ವಾಸಂ | ೬೧೫
ನೆತ್ತಿಯೊಳೆಯದೆಂದಿನಿಸ
ಯೊತ್ತಿ ಬಟೆಕ್ಕಿದೆಯೆ ಪೊಸೆದು ಜಡೆಗೊಂಡಿರ್ದು |
ದ್ವತ ಕುಚಯುಗೆಯ ಕೇಶಮ
ನೆತ್ತಂ ಪಸರಿಸಿದನೆಯೇ ಪಸರಿಸಿದದಟಂ ||
ಪಸರಿಸಿ ಪಂದಲೆಯಂ ಮ
ಟ್ಟಿಸಿ ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ ಪೊದ ಒಸಗೆಯನವನ ಕರುಳಳೆ
ಪೊಸವಾಸಿಗಮಾಗೆ ಕೃಷ್ಣಯಂ ಮುಡಿಯಿಸಿದಂ ||
೧೫೪
೧೫೫
ವ|| ಅಂತು ತನ್ನ ಪಗೆಯುಂ ಬಗೆಯುಮೊಡನೊಡನೆ ಮುಡಿಯೆ ರಿಪು ವಿಪುಳ ರುಧಿರ ಜಲಂಗಳೊಳಂ ರುಚಿರ ತದೀಯಾಂತ್ರಮಾಲೆಯನೆ ಮಾಲೆಮಾಡಿ ಮುಡಿಯಿಸಿ ಕೃಷ್ಣಯ ಮೊಗಮಂ ನೋಡಿ ಮುಗುಳಗೆ ನಕ್ಕು ಕೌರವಕುಳವಿಳಯಕೇತುವಿಂತೆಂದಂ
ವ|| || ಇದರೊಳ್ ಶ್ವೇತಾತಪತಸ್ಥಗಿತ ದಶ ದಿಶಾಮಂಡಲಂ ರಾಜಚಕ್ರಂ ಪುದಿದಾಡಿತ್ತಡಂಗಿತ್ತಿದಳೆ ಕುರುರಾಜಾನ್ವಯಂ ಮತತಾಪ | ಕ್ಕಿದಳೆಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತ ಬದಳಾಕ್ಷೀ ಪೇಟೆ ಸಾಮಾನ್ಯಮ ಬಗೆಯ ಭವತೇಶಪಾಶಪ್ರಪಂಚಂ || ೧೫೬
ತಳ್ಳಿ ಮನಸ್ಸಿನಲ್ಲಿ ಅಸಹ್ಯಪಟ್ಟುಕೊಳ್ಳದೆ ಬೊಗಸೆಯಿಂದ ಭೀಮನು ರಕ್ತವನ್ನು ವಿಶೇಷವಾಗಿ ಮೊಗೆಮೊಗೆದು ೧೫೪, ದೌಪದಿಯ ತಲೆಯಮೇಲೆ ಸುರಿದನು. ಒಂದಿಷ್ಟು ತಲೆಗಿಳಿಯುವಂತೆ ತಟ್ಟಿದನು. ಬಳಿಕ ಕೆಳಕ್ಕೆ ಇಳಿಯಲು ಹೊಸೆದು ಜಡೆಯಾಗಿದ್ದ - ನಿಗರಿನಿಂತಿದ್ದ ಎರಡು ಮೊಳಗಳನ್ನುಳ್ಳ ದೌಪದಿಯ ಕೂದಲನ್ನು ಭೀಮನು ರಕ್ತದಿಂದ ನೆನೆಸಿ ತನ್ನ ಪರಾಕ್ರಮದಿಂದ ಬಿಡಿಸಿದನು. ೧೫೫. ದುಶ್ಯಾಸನನ ರಕ್ತದಿಂದ ತೊಯ್ದಿದ್ದ ಅವಳ ತಲೆಯ ಸಿಕ್ಕನ್ನು ಬಿಡಿಸಿ ಅವಳ ಕಾಲಿನಿಂದ ಅವನನ್ನು ತುಳಿಯಿಸಿ ವೈರಿಯ ಹಲ್ಲೆಂಬ ಬಾಚಣಿಗೆಯಿಂದ ಬಾಚಿ ಹೆಚ್ಚಿನ ಸಂತೋಷದಿಂದ ಅವನ ಹೊಸಕರುಳುಗಳೇ ಹೊಸ ಹೂವಿನ ದಂಡೆಯಾಗಲು ಬ್ರೌಪದಿಗೆ ತಾನೆ ಮುಡಿಸಿದನು. ವ|| ಹಾಗೆ ತನ್ನ ಶತ್ರುವೂ ಇಷ್ಟಾರ್ಥವೂ ಜೊತೆಯಾಗಿ (ಒಟ್ಟಿಗೆ) ತೀರಲು ವೈರಿಯ ವಿಶೇಷವಾದ ರಕ್ತದಿಂದಲೂ ಅವನ ಮನೋಹರವಾದ ಕರುಳ ದಂಡೆಯಿಂದಲೂ ದಂಡೆಯನ್ನೇ ಮಾಡಿ ದೌಪದಿಗೆ ಮುಡಿಯಿಸಿ ಅವಳ ಮುಖವನ್ನು ನೋಡಿ ಮುಗುಳಗೆ ನಕ್ಕು ಕೌರವಕುಲವಿಳಯಕೇತುವಾದ ಭೀಮನು ಹೀಗೆಂದನು. ೧೫೬. “ಈ ಮುಡಿಯಲ್ಲಿಯೇ ಹತ್ತು ದಿಕ್ಕುಗಳಲ್ಲಿಯೂ ಬೆಳುಗೊಡೆಗಳನ್ನೆತ್ತಿಸಿದ ರಾಜಸಮೂಹವು ಪ್ರವೇಶಮಾಡಿ ನಾಶವಾಯಿತು, ಕುರುರಾಜವಂಶವು ಇದರಲ್ಲಿ ಅಡಗಿಹೋಯಿತು, ನನ್ನ ಶೌರ್ಯಕ್ಕೆ ಇದರಿಂದ ಗೌರವವು (ಭಯವು ಹೆಚ್ಚಾಯಿತು. ಇದೇ ಮಹಾಭಾರತಕ್ಕೆ ಆದಿಯಾಯ್ತು. ಕಮಲದಳದಂತೆ ವಿಸ್ತಾರವಾದ ಕಣ್ಣುಳ್ಳ ದೌಪದಿಯೇ ವಿಚಾರಮಾಡಿದರೆ ನಿನ್ನ ತಲೆಯ ಕುರುಳೋಳಿಯು ಸಾಮಾನ್ಯವಾದುದೇ
Page #621
--------------------------------------------------------------------------
________________
ಕಂ
೬೧೬ | ಪಂಪಭಾರತಂ
ವ|| ಎಂದು ನುಡಿದು ನೀನುಂ ನಿನ್ನ ಪ್ರತಿಜ್ಞೆಯಂ ನೆಪಿದೆಯಾನುಮನ್ನ ಪ್ರತಿಜ್ಞೆಯಂ ನೆಪುವೆನೆಂದು ಬ್ರೌಪದಿಯಂ ಒಡಿಯನೇಳಸಿ ಬೀಡಿಂಗೆ ಕಳಿಸಿ ರಾಕ್ಷಸಕ್ರೀಡೆಯನಾಡಲ್ ಬಗದು ಹಿಡಿಂಬೆಯಂ ನೆನೆದು ಬರಿಸಿ
ಒಸರ್ವ ಬಿಸುನೆತ್ತರಂ ರ ಕಸನಂದದೆ ಕುಡಿದು ಕುಡಿದು ಕಂಡಂಗಳನ | ರ್ವಿಸೆ ಮಲ್ಲು ಮಲ್ಲು ಕರ್ಬಿನ ರಸಕ್ಕಮಿನಿಸಿಂಪುಗಾಣೆನೆಂದನಿಲಸುತಂ || ಸವಿ ಸವಿದು ಬಿಕ್ಕ ಬಿಕ್ಕನೆ ಸವಿ ನೋಡನ್ನಾಣೆಯಂದು ರಕ್ಕಸಿಗಮದಂ | ಸವಿ ನೆತ್ತರೆಲ್ಲಂ ತವ ಮುಳಿಸಿಂದವನ ಕರುಳ ಹಿಣಿಲಂ ನೋಡದಂ ||
೧೫೮
೧೫೭
ವll ಅಂತು ಕುಡಿದು ನಿಜವಿರೋಧಿ ರುಧಿರಾಸವದೊಳಳವಿಗಳಿಯ ಸೊಕ್ಕಿ ತಾನುಂ ಹಿಡಿಂಬೆಯುವವನ ಬರಿಯ ನರವಿನಡುಗಿನಿಡುವಿನಡೆಯ ಕೆನ್ನೆತ್ತರೋರ್ವರೋರ್ವರಂ * ತಿಳದುಂ ಬೊಬ್ಬಳೆದುಂ ತ್ರಿಪುಂಡ್ರಮಿಟ್ಟುಂ ಕೂಕಿಳದುಂ ತೇಗಿಯುಂ ಪಸಿಗೆವರಿದುಂ ಬವಳಿಮರಿದುಂ ಬಾಸಂಗುಟಿಗೆವುದುಂ ಸೊಲ್ವರಿದುಮಾಡುವಾಗಳುಭಯಬಲಂಗಳ ಬೆಕ್ಕಸಬಟ್ಟು ನೋಡಿಕಂ|| ಆದ ಮುಳಿಸಿಂದಮಲ್ಪಂ
ತೇದುಂ ಕುಡಿಯಕ್ಕೆ ತಕ್ಕ ಪಗೆವನ ರುಧಿರಾ | ಜ್ಯೋದಮನೆ ಕುಡಿದು ಮಾಣ್ಣ ವ್ಯ ಕೋದರನೇನಾವ ತೆಂದೂಳಂ ದೋಷಿಗನೇ ||
೧೫೯ ಹೇಳು.” ವ|| ಎಂದು ಹೇಳಿ ನೀನು ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಿದೆ. ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡುತ್ತೇನೆ ಎಂದು ಬ್ರೌಪದಿಯನ್ನು ಹೆಣ್ಣಾನೆಯ ಮೇಲೆ ಕುಳ್ಳಿರಿಸಿ ಮನೆಗೆ ಕಳುಹಿಸಿ ರಾಕ್ಷಸಕ್ರೀಡೆಯನ್ನು ಆಡಲು ಯೋಚಿಸಿ ಹಿಡಿಂಬೆಯನ್ನು ಜ್ಞಾಪಿಸಿಕೊಂಡು ಬರಮಾಡಿ ೧೫೭. ಸ್ರವಿಸುತ್ತಿರುವ ಬಿಸಿರಕ್ತವನ್ನು ರಾಕ್ಷಸನ ಹಾಗೆ ಕುಡಿದು ಮಾಂಸಖಂಡಗಳನ್ನು ವಿಶೇಷವಾಗಿ ಅಗಿದು ಅಗಿದು ಕಬ್ಬಿನ ರಸದಲ್ಲಿಯೂ ಇಷ್ಟು ರುಚಿಯನ್ನು ಕಾಣೆನೆ ಎಂದು ಭೀಮನು ೧೫೮. ರುಚಿ ನೋಡಿ ನೋಡಿ ಬಿಕ್ಕಬಿಕ್ಕನೆ ರುಚಿನೋಡು ಎನ್ನಾಣೆ ಎಂದು ರಾಕ್ಷಸಿಗೂ ಅದರ ರುಚಿಯನ್ನು ತೋರಿಸಿ ರಕ್ತವೆಲ್ಲವೂ ಮುಗಿದು ಹೋಗಲು ಅವನ ಕರುಳುಗಳ ಕುಚ್ಚನ್ನು ಕೋಪದಿಂದ ಚಪ್ಪರಿಸಿದನು. ವ|| ಹಾಗೆ ಕುಡಿದು ತನ್ನ ಶತ್ರುವಿನ ರಕ್ತವೆಂಬ ಹೆಂಡದಲ್ಲಿ ಅಳತೆಮೀರಿ ಸೊಕ್ಕಿ ಹೋಗಿ ತಾನೂ ಹಿಡಿಂಬೆಯೂ ಅವನ ಪಕ್ಕಗಳ ನರಗಳ ಮಾಂಸಗಳ ಸಂದಿಗಳಲ್ಲಿದ್ದ ಕೆಂಪಾದ ರಕ್ತವನ್ನು ಮೈಗೆ ಬಳಿದುಕೊಂಡು ಹಣೆಯಲ್ಲಿ ಮೂರು ಎಳೆಗಳನ್ನು ಧರಿಸಿ ಘಟ್ಟಿಯಾಗಿ ತೇಗಿ ನೇರವಾಗಿ ಓಡಿ ಸುತ್ತಲೂ ತಿರುಗಿ ನಕ್ಷತ್ರಮಂಡಲಕ್ಕೆ ನೆಗೆದು ಸರದಿಯ ಮೇಲೆ ಆಡುವಾಗ ಎರಡು ಸೈನ್ಯಗಳೂ ಆಶ್ಚರ್ಯಪಟ್ಟು ನೋಡಿದವು. ೧೫೯. ವಿಶೇಷವಾಗಿ ಇವನಿಗೆ ಉಂಟಾದ
Page #622
--------------------------------------------------------------------------
________________
ದ್ವಾದಶಾಶ್ವಾಸಂ | ೬೧೭ ಮll ಮುನಿಸಂ ಮಾಡಿದರಾತಿನಾಥರಡಗಂ ಸುಪ್ಪಕ್ಕೆ ಕೆನ್ನೆತ್ತರಂ ಕೆನೆಗೊಂಡಾಜೆದ ಪಾಲ್ ದೊಂಡೆಗರುಳು ಕರ್ಬಿಂಗೆ ಲೆಕ್ಕಕ್ಕೆ ತಂ | ದಿನಿಸುಂ ಮಾಣದೆ ಪೀರ್ದು ಪೀರ್ದು ನೊಣದಂತೀ ಮಾಣಿಯಿಂ ಭೀಮಸೇ ನನವೋಲ್ ಪೂಣ್ಣುದನೆಯ ಪೂಣ್ಣ ಪಗೆಯಂ ಕೊಂಡಾಡದ ಗಂಡನೇ 11 . ೧೬೦
ವಗ ಎಂದು ಜರಾಸಂಧಾರಿಯ ಗಂಡವಾತಂ ಕೊಂಡಾಡುತ್ತಿದೆ ಭೀಮಸೇನನಾ ನೆರೆದ ನೆರವಿಗಿಂತೆಂದಂಉll ಪೊಲ್ಲದು ಪೂಣ್ಣು ಪುಚ್ಚಟೆಯದುರ್ಕಿದ ಕೌರವರಂ ಪೊರಳ್ಳಿ ಕೊಂ
ದಿಲ್ಲಿಯೆ ವೈರಿ ಶೋಣಿತಮನೀಂಟಿ ತದಂತ್ರದೆ ಕೃಷೆಗಿಂದು ಧ || ಮಿಲವನಿಂಬಿನಿಂ ಮುಡಿಸಿ ಕೌರವ ನಾಯಕನೂರುಭಂಗಮೋಂ
ದಲ್ಲದುದೆಲ್ಲಮಂ ನೆಬಿಪಿದೆಂ ಗಡಮೋಳಿಯ ಕೇಳಿಮಲ್ಲರುಂ || ೧೬೧
ವ|| ಎಂದು ನುಡಿದು ಗಜ ಗರ್ಜಿಸಿ ಕಾಲದಂಡಮಂ ಪೋಲ್ವ ತನ್ನ ಗದಾದಂಡಮಂ ಕೊಂಡು ತಿರಿಪಿ ಬೀಸುತ್ತುಂ ಬರ್ಪ ಭೀಮಸೇನನಂ ಕರ್ಣನ ಮಗಂ ವೃಷಸೇನಂ ಕಂಡು~ ಚಂil ದಡಿಗನ ಮಿಬ್ರುವಂ ಮಿದಿದೊಡಲ್ಲದೆ ಮಾಣೆನಮೊಘಮೆಂದು ಕೂ
ರ್ಪುಡುಗದೆ ಬಂದು ತಾಗೆ ಯಮಳರ್ ತಡೆಗೊಂಡೊಡ ತಾವುಮಮ್ರಳಂ ತೊಡರ್ದಪರೆಂದವಂದಿರ ರಥಂಗಳನಚುಡಿಯಚ್ಚು ಭೀಮನಂ ತಡೆಯದೆ ಮುಟ್ಟಿ ಪರ್ಚೆ ನುಡಿದಂ ಕಪಿಕೇತನನಂ ಮುರಾಂತಕಂ ||೧೬೨
ಕೋಪದಿಂದ ಎಲುಬನ್ನೂ ತೇದು ಕುಡಿಯಬಹುದಾಗಿತ್ತು. ಆದರೆ ಶತ್ರುವಿನ ರಕ್ತವೆಂಬ ತಿಳಿನೀರನ್ನೇ ಕುಡಿದು ತೃಪ್ತನಾಗಿದ್ದಾನೆ. ಭೀಮನು ಯಾವರೀತಿಯಿಂದಲೂ ದೋಷಿಯಲ್ಲ. ೧೬೦. ಕೋಪವನ್ನುಂಟುಮಾಡಿದ ಶತ್ರುರಾಜರ ಮಾಂಸವನ್ನು ಉಪ್ಪುಹಾಕಿದ ಭಕ್ಷವಿಶೇಷಕ್ಕೂ ಕೆಂಪುರಕ್ತವನ್ನು ಕೆನೆಗಟ್ಟಿ ಆರಿದ ಹಾಲಿಗೂ ದೊಂಡೆಗರುಳನ್ನು ಕಬ್ಬಿನ ಗಣನೆಗೂ ಸಮನಾಗಿ ಭಾವಿಸಿ ಸ್ವಲ್ಪವನ್ನೂ ಬಿಡದೆ ಕುಡಿದು ಚಪ್ಪರಿಸಿದ ಈ ಭೀಮಸೇನನ ಹಾಗೆ ಪ್ರತಿಜ್ಞೆ ಮಾಡಿದುದನ್ನು ಪೂರ್ಣಮಾಡಿದ ಶತ್ರುವನ್ನು ಹೊಗಳದಿರುವವನು ಶೂರನೇ? ವll ಎಂದು ಭೀಮನ ಪೌರುಷದ ಮಾತನ್ನು ಕೊಂಡಾಡುತ್ತಿರಲು ಭೀಮಸೇನನು ಅಲ್ಲಿ ನೆರೆದಿದ್ದ ಗುಂಪಿಗೆ ಹೀಗೆಂದನು-೧೬೧. ಕೆಟ್ಟ ಪ್ರತಿಜ್ಞೆಯನ್ನು ಮಾಡಿ ಅದು ವ್ಯರ್ಥವಾಗದಂತೆ ಗರ್ವಿಷ್ಠರಾದ ಕೌರವರನ್ನು ಹೊರಳಿಸಿ ಕೊಂದು ಇಲ್ಲಿಯ ವೈರಿಯ ರಕ್ತವನ್ನು ಕುಡಿದು ಅವನ ಕರುಳಿನಿಂದ ದೌಪದಿಗೆ ತುರುಬನ್ನು ಮನೋಹರವಾಗಿರುವಂತೆ ಮುಡಿಸಿ ಕೌರವನಾಯಕನಾದ ದುರ್ಯೋಧನನ ತೊಡೆಯನ್ನು ಮುರಿಯುವುದೊಂದನ್ನುಳಿದು ಮತ್ತೆಲ್ಲವನ್ನೂ ಕ್ರಮವಾಗಿ ಪೂರ್ಣಮಾಡಿದೆನಲ್ಲವೇ ಎಲ್ಲರೂ ಕೇಳಿ! ವ|| ಎಂದು ಹೇಳಿ ಆರ್ಭಟಮಾಡಿ ಯಮನ ದಂಡವನ್ನು ಹೋಲುವ ತನ್ನ ಗದಾದಂಡವನ್ನು ತೆಗೆದುಕೊಂಡು ತಿರುಗಿಸುತ್ತ ಬರುತ್ತಿರುವ ಭೀಮಸೇನನನ್ನು ಕರ್ಣನ ಮಗನಾದ ವೃಷಸೇನನು ನೋಡಿದನು. ೧೬೨. 'ದಾಂಡಿಗನಾದ ಭೀಮನೆಂಬ ಈ ಮೃತ್ಯುವನ್ನು 'ತುಳಿದುದಲ್ಲದೆ ಬಿಡುವುದಿಲ್ಲ' ಎಂದು ವೃಷಸೇನನು ತನ್ನ ಕ್ರೌರ್ಯವನ್ನು
Page #623
--------------------------------------------------------------------------
________________
೧೬೩
೬೧೮ ) ಪಂಪಭಾರತಂ ಕull ಇವನ ಶರಕಲ್ಪವನದ
ಟಿವನಳನಿವನು ನಿನಗಮಗ್ಗಳಮಿವನಂ | ಪವನಸುತಂ ಗೆಲ್ಲಂ ನೀ ನಿವನೊಳ್ ಪೊಣರೆಂದೂಡವನೊಳರಿಗಂ ಪೊಣರ್ದ೦ || ಪೊಣರ್ದೊಡಮನುವರಮಿವನೊಲ್ ತೊಣವಪುದೆನಗೆ ನರನೊಳಂದಳಿಕೆಯ ಕೂ | ರ್ಗಣೆಗಳೊಳೆ ಪೂಟ್ಟು ತನ್ನಳ ವಣಿಯರಮನೆ ನಾಲ್ಕು ಶರದ ಪಾರ್ಥನನೆಚ್ಚಂ || ಇಸೆ ಮುತ್ತಿ ಮುಸು ಪರಿ ಬಂ ಧಿಸಿದುವು ನರರಥತುರಂಗಮಂಗಳನಂತಾ | ರ್ದಸಗಲ್ ಪೊಣರಲ್ ಮಿಡುಕಲ್
ಮಿಸುಕಲ್ಯಣಮೀಯದಾದುವವನ ಸರಳ | - ವ|| ಆಗಳದಂ ಕಂಡು ಪರಸೈನ್ಯಭೈರವಂ ಮುಕುಂದನನಿಂತೆಂದಂಕ೦ll ಸ್ಕಂದನಬಂಧನವೆಂಬುದ
ನಿಂದೀ ವೃಷಸೇನನಿಂದಮದನಿದಂ ಮು | ನೋಂದುಂ ಕಂಡಳಿಯನಿದ ರ್ಕಾ೦ ದಲ್ ಬೆಂಗಾದನೆನಗೆ ಬೆಸಸು ಮುಕುಂದಾ||
, ೧೬೬
ಕಡಮೆಮಾಡದೆ ಬಂದು ತಾಗಿದನು. ನಕುಲಸಹದೇವರು ಬಂದು ಅವನನ್ನು ಅಡ್ಡಗಟ್ಟಿದರು. ಇವರೂ ನಮ್ಮಲ್ಲಿ ಯುದ್ಧಮಾಡುತ್ತಾರೆಯೇ ಎಂದು ಅವರ ತೇರುಗಳನ್ನು ಅಚ್ಚು. ಮುರಿದುಹೋಗುವ ಹಾಗೆ ಹೊಡೆದು ತಡಮಾಡದೆ ಭೀಮನ ಹತ್ತಿರಕ್ಕೆ ಬಂದು ವಿಜೃಂಭಿಸಿದನು. ಆಗ ಕೃಷ್ಣನು ಅರ್ಜುನನಿಗೆ ಹೇಳಿದನು. ೧೬೩. ಇವನ ಬಾಣವಿದ್ಯೆ, ಇವನ ಪರಾಕ್ರಮ, ಇವನ ಪೌರುಷ, ಇವನ ಶಕ್ತಿ ಇವು ನಿನಗಿಂತಲೂ ಹೆಚ್ಚಿನವು. ಇವನನ್ನು ಭೀಮನು ಗೆಲ್ಲಲಾರ. ನೀನು ಇವನಲ್ಲಿ ಯುದ್ಧಮಾಡು ಎನ್ನಲು ಅರಿಗನು ಅವನಲ್ಲಿ ಕಾಧಿದನು. ೧೬೪. ವೃಷಸೇನನು ಇವನೊಡನೆ ಕಾದಿದರೆ ನನಗೆ ಯುದ್ಧವು ಅನುರೂಪವಾಗುತ್ತದೆ (ಸರಿಸಮಾನವಾಗುತ್ತದೆ) ಎಂದು ಹೇಳಿ ಪ್ರಸಿದ್ಧವೂ ಹರಿತವೂ ಆದ ಬಾಣಗಳಿಂದಲೇ ಹೂಳಿ ತನ್ನ ಶಕ್ತಿಯು ಅತಿಶಯವಾದುದು ಎನ್ನುವ ಹಾಗೆ ನಾಲ್ಕುಬಾಣಗಳಿಂದ ಅರ್ಜುನನನ್ನು ಹೊಡೆದನು. ೧೬೫. ಆ ಬಾಣಗಳು ಅರ್ಜುನನ ತೇರು ಕುದುರೆಗಳನ್ನು ಮುತ್ತಿ ಆವರಿಸಿಕೊಂಡು ಕಟ್ಟಿ ಹಾಕಿದುವು. ಹಾಗೆಯೇ ಆ ಬಾಣಗಳು ಆರ್ಭಟಿಸಿ ಕಾರ್ಯಮಾಡುವುದಕ್ಕೂ ರಥವನ್ನು ನಡೆಸುವುದಕ್ಕೂ ಜಗಳವಾಡುವುದಕ್ಕೂ ಅಳ್ಳಾಡುವುದಕ್ಕೂ (ಚಲಿಸುವುದಕ್ಕೂ ಸ್ವಲ್ಪವೂ ಅವಕಾಶ ಕೊಡದಂತಹುವಾದುವು. ವ!! ಅದನ್ನು ನೋಡಿ ಪರಸೈನ್ಯಭೈರವನಾದ ಅರ್ಜುನನು ಕೃಷ್ಣನಿಗೆ ಹೀಗೆ ಹೇಳಿದನು. ೧೬೬. ತೇರನ್ನು ಕಟ್ಟಿಹಾಕುವುದೆಂಬುದನ್ನು ಈ ದಿನ ವೃಷಸೇನನಿಂದ ತಿಳಿದೆನು. ಇದಕ್ಕೆ ಮೊದಲು ಎಂದೂ ತಿಳಿದಿರಲಿಲ್ಲ. ಇದಕ್ಕೆ ನಾನು
Page #624
--------------------------------------------------------------------------
________________
ದ್ವಾದಶಾಶ್ವಾಸಂ | ೬೧೯ ಎನೆ ಪರಶುರಾಮನಿಂ ಕ ರ್ಣನೆ ಬಲ್ಲಂ ಚಾಪವಿದೆಯಂ ಕರ್ಣನಿನೀ | ತನೆ ಬಲನಿವನ ಸರಿನಿ
ತನಿತುಮನೆಡೆವಿಡದ ತಳೆದು ತಲೆಯಂ ತಳೆಯಾ . ೧೬೭ ವ|| ಎಂಬುದುಮಳವಿಗತಿಯ ಬಳೆದು ಪುದುಂಗೊಳಿಸಿದ ಬಿದಿರ ಸಿಡುಂಬನೆಡೆಗೂಳೆ ಕಡಿವ ಪೊಡುಂಗಾಜನಂತ ಪರಶು ಚಕ್ರಾಸಿಧೇನುಗಳಿಂದ ತನ್ನ ತೋಡು ಬೀಡಿಂಗಂ ರಥಮನಸಗುವ ಮುರಾಂತಕನ ಕೆಯ್ದಮೆಡೆಮಾಡಿಚಂತನಗೆ ವಿನಾಯಕಂ ದಯೆಯಿನಿತ್ತ ಜಯಾಸ್ತಮನುರ್ಚಿಕೊಂಡು ಭೋಂ
ಕೆನೆ ದೊಣೆಯಿಂ ಶರಾಸನದೊಳಂತದನಾಗಡೆ ಪೂಡಿ ಧಾತ್ರಿ ತಿ | ಆನೆ ತಿರಿವನ್ನೆಗಂ ತೆಗೆದು ಕಂಧರಸಂಧಿಯನೆಮ್ಮೆ ನೋಡಿ ತೊ
ಟ್ಟನೆ ನರನೆಚೂಡುಚ್ಚಳಿಸಿ ಬಿಟ್ಟುದು ವೈರಿಶಿರಸ್ಸರೋರುಹಂ || ೧೬೮ ಕಂt ಅಂತ ಪರಿದ ತಲೆಯನ
ದಂ ತಂದಟ್ಟೆಯೊಳಮರ್ಚಿ ಸುರ ಗಣಿಕೆಯರ | ಭ್ರಾಂತರದೊಳೆ ತಮ್ಮ ವಿಮಾ
ನಾಂತರದೊಳಗಿಟ್ಟು ಕರ್ಣತನಯನನುಯ್ದರ್ || , ೧೬೯ ವ|| ಅಂತು ನೋಡಿ ನೋಡಿ ತನ್ನ ಹಿರಿಯ ಮಗನಪ್ಪ ವೃಷಸೇನನನಂತಕನಣಲೊಳಡಸಿ ತನ್ನುಮನಣಲೊಳಡಸಲೆಂದಿರ್ದ ವಿಕ್ರಮಾರ್ಜುನನಂ ನೋಡಿ
ಬೆರಗಾಗಿದ್ದೇನೆ. ಮುಂದೇನು ಮಾಡಬೇಕೆಂಬುದನ್ನು ತಿಳಿಸು ಕೃಷ್ಣಾ, ೧೬೭. ಎನ್ನಲು ಬಿಲ್ವಿದ್ಯೆಯಲ್ಲಿ ಕರ್ಣನು ಪರಶುರಾಮನಿಗಿಂತ ಸಮರ್ಥನಾದವನು. ಇವನು ಕರ್ಣನಿಗಿಂತ ಸಮರ್ಥನು. ಇವನ ಬಾಣಗಳಷ್ಟನ್ನೂ ಒಂದೇಸಮನಾಗಿ ಕತ್ತರಿಸಿ ತಲೆಯನ್ನು ಕತ್ತರಿಸಯ್ಯ. ವ|| ಎನ್ನಲು ಅಳತೆಮೀರಿ ಸೊಂಪಾಗಿಯೂ ದಟ್ಟವಾಗಿಯೂ ಬೆಳೆದಿರುವ ಬಿದುರಿನ ಮಳೆಯನ್ನು ದಾರಿಮಾಡುವುದಕ್ಕಾಗಿ (ಬಿಡಿಸುವ) ಕತ್ತರಿಸುವ ಕಾಡನ್ನು ತರಿಯುವವನ ಹಾಗೆ ಕೊಡಲಿಕತ್ತಿಗಳಿಂದ ತನ್ನ ಬಾಣಸಂಧಾನ ಮತ್ತು ಮೋಚನಗಳಿಗೆ ಹೊಂದಿಕೊಳ್ಳುವುದಕ್ಕೂ ರಥವನ್ನು ನಡೆಸುವ ಕೃಷ್ಣನ ಕೈಗಳನ್ನಾಡಿಸುವುದಕ್ಕೂ ಅನುಮಾಡಿಕೊಂಡು ೧೬೮, ವಿನಾಯಕನು ತನಗೆ ಕೃಪೆಯಿಂದ ಕೊಟ್ಟ ಜಯಾಸ್ತ್ರವನ್ನು ರಭಸದಿಂದ ಬತ್ತಳಿಕೆಯಿಂದ ಸೆಳೆದುಕೊಂಡು ಅದನ್ನು ಆಗಲೇ ಬಿಲ್ಲಿನಲ್ಲಿ ಹೂಡಿ ಭೂಮಿಯು ತಿರೊಂದು ತಿರುಗುವ ಹಾಗೆ ಹೆದೆಯನ್ನು ಸೆಳೆದು ಕತ್ತಿನ ಸಂಧಿಭಾಗವನ್ನೇ ಚೆನ್ನಾಗಿ ನೋಡಿ ಗುರಿಯಿಟ್ಟು ಬೇಗನೆ ಅರ್ಜುನನು ಹೊಡೆಯಲಾಗಿ ವೈರಿಯಾದ ವೃಷಸೇನನ ತಲೆಯೆಂಬ ಕಮಲವು ಮೇಲಕ್ಕೆ ಹಾರಿ ಬಿದ್ದಿತು. ೧೬೯. ಆ ಕಡೆ ಹಾರಿದ ತಲೆಯನ್ನು ತಂದು ಶರೀರದೊಡನೆ ಕೂಡಿಸಿ ಅಪ್ಸರೆಯರು ಮೋಡಗಳ ಮಧ್ಯದಲ್ಲಿ ತಮ್ಮ ವಿಮಾನದೊಳಗಡೆ ಇಟ್ಟು ಕರ್ಣನ ಮಗನನ್ನು ತೆಗೆದುಕೊಂಡು ಹೋದರು. ವ|| ಹಾಗೆ ನೋಡಿ ನೋಡಿ ತನ್ನ ಹಿರಿಯಮಗನಾದ ವೃಷಸೇನನನ್ನು ಯಮನ ಗಂಟಲಿನಲ್ಲಿ ತುರುಕಿ ತನ್ನನ್ನು ಗಂಟಲಿನಲ್ಲಿ
Page #625
--------------------------------------------------------------------------
________________
೧೭೧
.
೬೨೦ / ಪಂಪಭಾರತಂ ಚoll ಮಗನಬಿಂದು ಭೂಪತಿಯ ತಮ್ಮನೂಳಾದಬಿಂದು ನೊಂದು ಬಿ
ನಗೆ ಮೊಗದಿಂದ ಕುಂದಿ ಫಣಿಕೇತನನಿರ್ದಬಿಂದು ತನ್ನನಾ | ವಗೆಯುರಿಯಬ್ಬವೋಲಳುರೆ ತನ್ನ ನೆಗಳಿಗೆ ಮುಯ್ಯನಾಂತು ಮುಂ ಪೊಗಟೆಸಿ ಬಟ್ಟುದು ನೆನೆದು ಕರ್ಣನಸಂಗೊಳೆ ಬಂದು ತಾಗಿದಂ II೧೭೦ ವ|| ಅಂತು ಬಂದು ತಾಗಿದಾಗಳುಭಯಸೈನ್ಯಸಾಗರಂಗಳೊಳ್ಕಂ|| ಬಧಿರಿತ ಸಮಸ್ತದಿಕ್ತಟ
ಮಧರಿತ ಸರ್ವಭಗರ್ವಿತಂ ಕ್ಷುಭಿತಾಂಭೋ | ನಿಧಿ ಸಲಿಲಂ ಪರೆದುದು ಧುರ ವಿಧಾನ ಪಟು ಪಟಹ ಕಹಳ ಭೇರೀ ರಭಸಂ || ೧೭೧ ಆದಿತ್ಯನ ಸಾರಥಿ ಬೆಲ್ಲ ಗಾದಂ ಮಾತಾಳಿ ಮಾತುಗೆಟ್ಟಂ ಧುರದೊಳ್ || ಚೋದಿಸೆ ಹರಿಯುಂ ಶಲ್ಯನು ಮಾದರದಿಂ ನರನ ದಿನಪತನಯನ ರಥಮಂ ||
೧೭೨ ವll ಅಂತಿರ್ವರುಮೊರ್ವರೊರ್ವರಂ ಮುಟ್ಟೆವಂದಲ್ಲಿ ವಿಕ್ರಾಂತತುಂಗನಂಗಾಧಿರಾಜನ ನಿಂತೆಂದಂಹರಿಣೀಪುತಂ || ಪಿರಿದು ಪೊರೆದಂ ನಿನ್ನಂ ದುರ್ಯೋಧನಂ ನಿನಗನ್ನೊಳಂ
ಪಿರಿದು ಕಲುಷಂ ಕರ್ಣಂಗೊಡ್ಡಿತ್ತು ಭಾರತವೇಂ ಬೆಸಂ |
ಪಿರಿದು ನಿನಗಂ ರಾಗಂ ಮಿಕ್ಕಿರ್ದಗುರ್ವಿನ ಸೂನು ನಿ * ರ್ನರಮಣಿಯೆಯುಂ ನೋಡುತ್ತಿಂತಿರ್ದಯಿರ್ಪುದು ಪಾತಿಯೇ || ೧೭೩ ತುರುಕಬೇಕೆಂದಿದ್ದ ವಿಕ್ರಮಾರ್ಜುನನನ್ನು ನೋಡಿ ೧೭೦. ಮಗನ ದುಃಖವೊಂದು, ರಾಜನ ತಮ್ಮನಾದ ದುಶ್ಯಾಸನನ ದುಃಖವೊಂದು, ಚಿಂತಾಸಕ್ತನಾಗಿ ದೀನಮುಖದಿಂದ ಕುಂದಿಹೋಗಿರುವ ದುರ್ಯೊಧನನಿರುವ ಸ್ಥಿತಿಯೊಂದು ಈ ಮೂರೂ ತನ್ನನ್ನು ಕುಂಬಾರರ ಆವಗೆಯ ಬೆಂಕಿಯ ಹಾಗೆ ಸುಡುತ್ತಿರಲು ಪೌರುಷಕ್ಕೆ ಆಶ್ರಯವಿತ್ತು ಮೊದಲು ಹೊಗಳಿಸಿಕೊಂಡು ತಾನು ಬಾಳಿದುದನ್ನು ಜ್ಞಾಪಿಸಿಕೊಂಡ ಕರ್ಣನು ಅರ್ಜುನನ ಪ್ರಾಣವನ್ನು ಸೆಳೆಯುವಂತೆ ಬಂದು ತಾಗಿದನು. ವ|| ಹಾಗೆ ಬಂದು ತಾಗಿದಾಗ ಎರಡು ಸೇನಾಸಮುದ್ರದಲ್ಲಿಯೂ ೧೭೧. ಎಲ್ಲ ದಿಕ್ಷದೇಶಗಳೂ ಕಿವುಡಾಗುವಂತೆ ಆನೆಗಳ ಫೀಂಕಾರವನ್ನೂ ತಿರಸ್ಕರಿಸುವಂತೆ, ಕಲಕಿದ ಸಮುದ್ರದ ನೀರಿನಂತೆ, ಯುದ್ಧಕಾರ್ಯದಲ್ಲಿ ಸಮರ್ಥವಾದ ತಮಟೆ, ಕೊಂಬು ಮತ್ತು ನಗಾರಿಯ ಶಬ್ದಗಳ ರಭಸವು ಹರಡಿತು. ೧೭೨. ಯುದ್ಧದಲ್ಲಿ ಕೃಷ್ಣನೂ ಶಲ್ಯನೂ ಅರ್ಜುನ ಮತ್ತು ಕರ್ಣನ ತೇರುಗಳನ್ನು ಆದರದಿಂದ ನಡೆಸುತ್ತಿರಲು ಸೂರ್ಯನ ಸಾರಥಿಯಾದ ಅರುಣನು ಆಶ್ಚರ್ಯಚಕಿತನಾದನು. ಇಂದ್ರನ ಸಾರಥಿ ಮಾತಲಿಯೂ ಮೂಕನಾದನು. ವ|| ಹಾಗೆ ಇಬ್ಬರೂ ಒಬ್ಬೊಬ್ಬರನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ ವಿಕ್ರಾಂತತುಂಗನಾದ ಅರ್ಜುನನು ಕರ್ಣನಿಗೆ ಹೀಗೆ ಹೇಳಿದನು. ೧೭೩. ನಿನ್ನನ್ನು ದುರ್ಯೋಧನನು ವಿಶೇಷಗೌರವದಿಂದ ಸಾಕಿದನು. ನಿನಗೆ ನನ್ನಲ್ಲಿಯೂ ವಿಶೇಷವಾದ
Page #626
--------------------------------------------------------------------------
________________
ದ್ವಾದಶಾಶ್ವಾಸಂ / ೬೨೧ ಕಂtt ಎನ್ನ ಪಸರ್ಗಳು ಸೈರಿಸ
ದನ್ನಯದಿಂತೀಗಳೆನ್ನ ರೂಪಂ ಕಂಡುಂ | ನಿನ್ನರಸನಣುಗದಮ್ಮನ ತನೊಬವನ ನಾವಗಂಡುಂ ಮಾಡ್ತಾ ||
೧೭೪ ಮಭಯಮೇಕಕುಮದಂತುಟೆಂದದಟುಮಂ ಪರ್ಮಾತುಮಂ ಭೂತ ಧಾ| ತ್ರಿಯೊಳೋರಂತೆ ನೆಗಟ್ಟಿ ಮುನ್ನೆ ಬಲಿಯಂ ಕಾನೀನ ನೀನೀ ಮಹಾ ! ಜಿಯೊಳಿಂತೇನನಗಂಜಿ ಮಾಡ್ಡ ಪೆಜತೇಂ ಪೋ ಮಾತು ಲೇಸಣ್ಣ ಸ ಟ್ವಿಯ ಬಳ್ಳಂ ಕಿದಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದೆ || ೧೭೫ ಕಂ! ಪಸರಸೆಯ ಬೀರಮಂ ಪಾ
ಡಿಸಿಯುಂ ಪೊಗಟಿಸಿಯುಮುರ್ಕಿ ಬಾಹವದೊಳ್ | ಕುಸಿದು ಪಂಪಿಂಗಿ ಪೇಟ್ ಮಾ ನಸರೇನಿನ್ನೂರು ವರ್ಷಮಂ ಬಲ್ಡಪರೇ ||
೧೭೬ ವ|| ಎಂದು ನೃಪ ಪರಮಾತ್ಮನ ಪಾಳೆಯ ಪಸುಗೆಯ ನುಡಿಗೆ ಪರಮಾರ್ತನಾಗಿ ತನ್ನನುದ್ಘಾಟಿಸಿ ನುಡಿದೂಡುಮ್ಮಚದೊಳ್ ಮೆಚ್ಚದೆ ದರಹಸಿತವದನಾರವಿಂದನಾಗಿ ದಶಶತಕರ ತನೂಜನಿಂತೆಂದಂ
ದ್ವೇಷ, ಕರ್ಣನಿಗಾಗಿಯೇ ಭಾರತಯುದ್ಧವು ಪ್ರಾಪ್ತವಾದುದು. ಯುದ್ಧಕಾರ್ಯವು ನಿನಗೇನು ಮಹತಾದುದು ? ನಿನಗೆ ವಿಶೇಷಪ್ರೀತಿಪಾತ್ರನೂ ಪ್ರಚಂಡನೂ ಆದ ಮಗನು ನಿಷ್ಕಾರಣವಾಗಿ ಸತ್ತರೂ ನೋಡುತ್ತ ಹೀಗೆ ಇದ್ದೀಯೇ ? ಇರುವುದು ಕ್ರಮವೇ - ೧೭೪. ನನ್ನ ಹೆಸರನ್ನೂ ಕೇಳಿ ಅನ್ಯಾಯವಾಗಿ ಸೈರಿಸದ ನೀನು ಈಗ ನನ್ನ ರೂಪನ್ನು ಕಂಡೂ ನಿನ್ನ ರಾಜರ ಪ್ರೀತಿಯ ತಮ್ಮನ, ನಿನ್ನ ಮಗನ ಸಾವನ್ನು ನೋಡಿಯೂ ತಡಮಾಡುತ್ತೀಯಾ? ೧೭೫. ಭಯವೇಕಾಗುತ್ತದೆ, ಅದು ಎಂತಹುದು ಎಂದು `ಪರಾಕ್ರಮವನ್ನೂ ದೊಡ್ಡ ಮಾತುಗಳನ್ನೂ ಮೊದಲು ಲೋಕದಲ್ಲೆಲ್ಲ ಆಡಿ ಜಂಭ ಕೊಚ್ಚಿದ ಕಾನೀನ, ಈಗ ಈ ಮಹದ್ಯುದ್ದದಲ್ಲಿ ಹೀಗೆ ನನಗೆ ಹೆದರಿ ತಡಮಾಡುತ್ತಿದ್ದೀಯೆ. ಮತ್ತೇನು ಹೋಗಯ್ಯ ಮಾತನಾಡುವುದು ಸುಲಭ! 'ಸೆಟ್ಟಿಯ ಬಳ್ಳ ಕಿರಿದು' ಎಂಬ ಗಾದೆಯ ಮಾತನ್ನು ನೀನು ನಿಜವೆನಿಸಿಬಿಟ್ಟೆ. ೧೭೬. ಹೆಸರು ಪ್ರಖ್ಯಾತವಾಗುವಂತೆ ಶೌರ್ಯವನ್ನು ಹಾಡಿಸಿಯೂ ಹೊಗಳಿಸಿಯೂ ಉಬ್ಬಿ ಯುದ್ಧದಲ್ಲಿ ಸೋತು ಕುಸಿದು ಹಿಂಜರಿಯುವುದಕ್ಕೆ ಮನುಷ್ಯರು ಇನ್ನೂರು ವರ್ಷ ಬದುಕುತ್ತಾರೇನು ? ವll ಎಂಬುದಾಗಿ ಹೇಳಿದ ನೃಪಪರಮಾತ್ಮನಾದ ಅರ್ಜುನನ ಕ್ರಮಬದ್ಧವೂ ವಿವೇಕಯುತವೂ ಆದ ಮಾತಿಗೆ ಬಹಳ ದುಃಖಪಟ್ಟು ತನ್ನನ್ನು ಮರ್ಮಭೇದಕವಾದ ರೀತಿಯಲ್ಲಿ ಮಾತನಾಡಿಸಿದರೂ ಕೋಪಿಸಿಕೊಳ್ಳದೆ ಮುಗುಳಗೆಯಿಂದ ಕೂಡಿದ ಮುಖಕಮಲವುಳ್ಳವನಾಗಿ ಕರ್ಣನು ಹೀಗೆಂದನು
Page #627
--------------------------------------------------------------------------
________________
೧೭೭
೬೨೨) ಪಂಪಭಾರತ ಕಂ|| “ಎಳೆಯಂ ಕೊಟ್ಟುಂ ಮುಂ
ಬಳೆದೊಟ್ಟುಂ ಮುಟ್ಟುಗೆಟ್ಟುಮಿರ್ದಿಗಳ ಬ | ಊಳನೆ ನುಡಿದುದ ನುಡಿವಂ
ತಳವುಂ ಪೆರ್ಮಾತುಮಾಯಮುಂ ನಿನಗಾಯೇ || ಕull
ವಿಕ್ಕಟ್ಟಿನೆದು ನಿಮ್ಮ ನಾಲ್ಕಡಿಗಳಿದೊಡೆ ಮದೀಯ ನಾಥಂ ಬೇರಂ | ಬಿಯನೆ ತಿಂದ ದೆವಸದೊ ಇಾಡಿದ ಬೀರಮೀಗಳೇಂ ಪೊಸತಾಯೇ || ಮತ್ತನಯನರಸನನುಜನ ಸತ್ತವಿಲಂ ನಿನ್ನೊಳಸಲೆಂದಿರ್ದಂ ಚ | ಳ್ಳುತ್ತಿರ್ದೆನಿಡೇದ ಇತ್ತಣ ದಿನನಾಥನಿತ್ತ ಮೂಡುಗುಮ | ಕಸವರದ ಸವಿಯುಮಂ ಭಯ ರಸಕದ ಸವಿಯುಮನದೆಂತುಮಾನಳೆಯದುದಂ || ವಸುಮತಿಯಳೆವುದು ನೀಂ ಪುರು ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಲುಗುಮೇ |
೧೭೮
osso
ಒಡಲುಂ ಪ್ರಾಣಮುಮೆಂಬಿವು ಕಿಡಲಾದುವು ಜಸಮದೊಂದೆ ಕಿಡದದನಾಂ ಬ | ಲೈಡಿವಿಡಿದು ನೆಗಳೆನುಡಿದಡೆ ವಡೆಮಾತಂ ಮಾಡಿ ನೀನೆ ಕೆಮ್ಮನೆ ನುಡಿವೆ ||
೧೮೧
೧೭೭. ರಾಜ್ಯವನ್ನು ಮೊದಲು ಪರಾಧೀನಮಾಡಿಯೂ ಬಳೆದೊಟ್ಟೂ ಆಯುಧ ರಹಿತವಾಗಿದ್ದೂ ಈಗ ಬಡಬಡನೆ ಮಾತನಾಡುವುದೇ? ಹಾಗೆ ಮಾತನಾಡುವ ನಿನಗೆ ಶಕ್ತಿಯೂ ಪ್ರೌಢಿಮೆಯೂ ಪರಾಕ್ರಮವೂ ಉಂಟೇ? ೧೭೮. ನನ್ನ ಸ್ವಾಮಿಯಾದ ದುರ್ಯೊಧನನು ವರ್ಷಗಳ ಅವಧಿಯ ಕಟ್ಟುಪಾಡಿನಿಂದ ನಿಮ್ಮನ್ನು ನಾಡಗಡಿಯಿಂದ ಹೊರದೂಡಿದಾಗ ಬೇರನ್ನೂ ಬಿಕ್ಷೆಯನ್ನೂ ತಿಂದ ದಿವಸಗಳಲ್ಲಿ ನಾಶವಾದ ಪೌರುಷವು ಈಗ ಹೊಸದಾಯಿತೇನು? ೧೭೯. ನನ್ನ ಮಗನೂ ರಾಜನ ತಮ್ಮನಾದ ದುಶ್ಯಾಸನನೂ ಸತ್ತೆ ದುಃಖವನ್ನು ನಿನ್ನಲ್ಲಿ ಹುಡುಕಬೇಕೆಂದಿದ್ದೆ. ಹೆದರಿದ್ದೇನೆ ಎಂದರೆ ಅದೆಂತಹ ಸುಳ್ಳು ಮಾತು! ಆ ಕಡೆಯ ಸೂರ್ಯ ಈ ಕಡೆಯೇ ಹುಟ್ಟುತ್ತಾನಲ್ಲವೇ ? ೧೮೦. ಚಿನ್ನದ ರುಚಿಯನ್ನೂ ಭಯರಸದ ರುಚಿಯನ್ನೂ ನಾನು ಎಂದೂ ಅರಿಯದುದನ್ನು ಈ ಭೂಮಂಡಲವೇ ತಿಳಿದಿದೆ. ನೀನು ಸ್ಪರ್ಧಿಸಿ ನುಡಿದರೆ, ನೀನು ಆಡಿದ ಮಾತು ಪುಷ್ಟಿಯಾಗುತ್ತದೆಯೇ ? ೧೮೧. ಶರೀರ ಪ್ರಾಣ ಎಂಬವು ನಾಶವಾಗತಕ್ಕವು. ಯಶಸ್ತೂಂದೆ ಕೆಡದೆ ಇರತಕ್ಕದ್ದು; ಅದನ್ನು ನಾನು ಬಿಗಿಯಾಗಿ ಆಶ್ರಯಿಸಿ ಪ್ರಸಿದ್ಧನಾಗಿದ್ದೇನೆ. ಉಳಿದ ಹೀನವಾದ ಮಾತನ್ನಾಡಿ ನೀನು ನಿಷ್ಟ್ರಯೋಜಕವಾಗಿ
Page #628
--------------------------------------------------------------------------
________________
ದ್ವಾದಶಾಶ್ವಾಸಂ | ೬೨೩ ಚಂ|| ಬಿದಿ ವಸದಿಂದ ಹುಟ್ಟುವುದು ಪುಟ್ಟಸುವಂ ಬಿದಿ ಪುಟ್ಟಿದಂದಿವಂ
ಗಿದು ಬಿಯಮೊಳ್ಳಿವಂಗಿದು ವಿನೋದಮಿವಂಗಿದು ಸಾವ ಪಾಂಗಿವಂ | ಗಿದು ಪಡೆಮಾತಿವಂಗಿದು ಪರಾಕ್ರಮವೆಂಬುದನೆಲ್ಲ ಮಾಳಿಯಿಂ ಬಿದಿ ಸಮಕಟ್ಟಿ ಕೊಟ್ಟೂಡೆಡೆಯೊಳ್ ಕಿಡಿಸಲ್ ಕುಡಿಸಲ ಸಮರ್ಥರಾರ್|| ೧೮೨ ಕ೦ll | ಎಂದೀ ಬಾಯ್ತಾತಿನೊಳೇ
ವಂದಪುದಮ್ಮಣ್ಣಿ ಕಾದುಕೊಳೆನುತುಂ ಭೋಂ | ರಂದಿಸಿ ಪೊಸ ಮಸೆಯಂಬಿನ ತಂದಲ ಬೆಳ್ಳರಿಗಳಿರದೆ ಕವಿದುವು ನರನಂ |
೧೮೩ ದೊಣೆಗಳಿನುರ್ಚುವ ತಿರುವಾ ದ್ರೋಣರ್ಚಿ ತೆಗೆನೆವ ಬೇಗಮಂ ಕಾಣದೆ ಕೂ | ರ್ಗಹಗಳ ಪಂದರನ ನಭೋಂ ಗಣದೊಳ್ ಕಂಡು ದೇವಗಣಮಿನಸುತನಾ 10 ಪಾತಂ ಲಕ್ಷಂ ಶೀಘಂ ಫಾತಂ ಬಹುವೇಗಮೆಂಬಿವಯೇಸಿನೊಳಂ | ತೀತನ ದೊರೆಯಿಲ್ಲೆನಿಸಿದು * ದಾತನ ಬಿಲ್ಟಲೆ ಸುರರಿನಂಬರತಲದೊಳ್ ||
೧೮೫ ವ|| ಆಗಳ ಪರಸೈನ್ಯಭೈರವಂ ಪ್ರಳಯಭೈರವಾಕಾರಮಂ ಕೆಯೊಂಡು ಕಾದ- .
.೧೮೪
ನುಡಿಯುತ್ತಿದ್ದೀಯೆ. ೧೮೨. (ಮನುಷ್ಯನು) ಹುಟ್ಟುವುದು ವಿಧಿಯ ವಶದಿಂದ; ಹುಟ್ಟಿಸುವವನೂ ವಿಧಿಯೇ; ಹುಟ್ಟಿದಾಗ ಇವನಿಗಿದು ಸಂಪತ್ತು, ಇವನಿಗೆ ಒಳ್ಳೆಯದಿದು, ಇವನಿಗೆ ಇದು ವಿನೋದ, ಇವನಿಗೆ ಇದು ಸಾಯುವ ರೀತಿ, ಇವನಿಗಿದು ಪ್ರಸಿದ್ದಿ, ಇವನಿಗಿದು ಪರಾಕ್ರಮ ಎಂಬುದನ್ನು ಎಲ್ಲ ರೀತಿಯಲ್ಲಿಯೂ ವಿಧಿ ನಿಷ್ಕರ್ಷಿಸಿಕೊಟ್ಟಿರುವಾಗ ಮಧ್ಯದಲ್ಲಿ ಅದನ್ನು ಕೆಡಿಸುವುದಕ್ಕಾಗಲಿ ಕೊಡಿಸುವುದಕ್ಕಾಗಲಿ ಯಾರು ಸಮರ್ಥರು? ೧೮೩. ಅಪ್ಪಾ ಈ ಬಾಯಿ ಮಾತಿನಲ್ಲಿ ಏನು ಪ್ರಯೋಜನವಾಗುತ್ತದೆ? ಪೌರುಷಪ್ರದರ್ಶನಮಾಡಿ ನಿನ್ನನ್ನು ನೀನು ರಕ್ಷಿಸಿಕೊ ಎನ್ನುತ್ತ ರಭಸದಿಂದ ಹೊಡೆದನು. ಹೊಸದಾಗಿ ಮಸೆದ ಬಾಣಗಳ ತುಂತುರು ಮಳೆಯೂ ಜಡಿಮಳೆಯೂ ಅರ್ಜುನನನ್ನು ಮುಚ್ಚಿದುವು. ೧೮೪. ಬತ್ತಳಿಕೆಯಿಂದ ಬಾಣಗಳನ್ನು ಸೆಳೆದುಕೊಳ್ಳುವ, ಬಿಲ್ಲಿನ ಬಾಯಿಗೆ ಸೇರಿಸಿ ಕಿವಿಯವರೆಗೂ ಸೆಳೆಯುವ ವೇಗವನ್ನು ಕಾಣದೆ ಕರ್ಣನ ಹರಿತವಾದ ಬಾಣಗಳ ಚಪ್ಪರವನ್ನೇ ಆಕಾಶಪ್ರದೇಶದಲ್ಲಿ ದೇವತೆಗಳ ಸಮೂಹವು ನೋಡಿತು. ೧೮೫. ಪಾತ (ಬೀಳಿಸುವುದು) ಲಕ್ಷ್ಯ (ಗುರಿಯಿಡುವುದು) ಶೀಘ್ರ (ವೇಗದಿಂದ ಹೊಡೆಯುವುದು) ಘಾತ (ಘಟ್ಟಿಸುವುದು) ಬಹುವೇಗ (ಅತ್ಯಂತವೇಗ) ಎಂಬ ಈ ಅಯ್ಡು ರೀತಿಯ ಬಾಣಪ್ರಯೋಗಗಳಲ್ಲಿಯೂ ಈತನಿಗೆ ಸಮಾನರಿಲ್ಲ ಎನ್ನಿಸಿತು ಆತನ ಬಿಲ್ವಿದ್ಯೆಯ ಶ್ರೇಷ್ಠತೆ, ಆಕಾಶದಲ್ಲಿರುವ ದೇವತೆಗಳಿಂದ ವll ಆಗ ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ
Page #629
--------------------------------------------------------------------------
________________
೬೨೪ | ಪಂಪಭಾರತಂ ಕಂ|| ಶರಸಂಧಾನಾಕರ್ಷಣ
ಹರಣಾದಿ ವಿಶೇಷ ವಿವಿಧ ಸಂಕಲ್ಪ ಕಳಾ | ಪರಿಣತಿಯಂ ಮಣಿದುದು ತರ ತರದೂಳೆ ಮುಳಿದರಿಗನಿಸುವ ಶರನಿಕರಂಗಳ್ ||
೧೪೬
ಮುನಿದಿಸುವಿನಜನ ಸರಲಂ ಮೊನೆಯಿಂ ಗಳವರೆಗಮಯ ಸೀಳುವು ಕಣಗಳ | ಘನ ಪಥವನಳುರ್ದು ಸುಟ್ಟಪು ವೆನೆ ನೆಗೆದುವು ಕೋಲ ಪೊಗೆಯುಮಂಬನ ಕಿಡಿಯುಂ 10 ೧೮೭ ಕೂಡ ಕಡಿವಂಬನಂಬೇಡ ಮಾಡದೆ ಬಿಡದೂರಸೆ ಪುಟ್ಟದುರಿಗಳಗುರ್ವಂ | ಮಾಡ ಕವಿದಳುರ್ವ ಬೆಂಕೆಯೊ ಳಾಡಿಸಿದರ್ ಮೊಗಮನಮರಸುಂದರಿಯರ್ಕಲ್ ||
೧೮೮ ಮೊನೆಯಂಬಿನ ತಂದಲೋಳ ರ್ಜುನನಂ ಕರ್ಣನುಮನಿನಿಸು ಕಾಣದಣಂ ಮ | ಲನೆ ಬಗಿದು ನೋಡಿ ಕುಡುಮಿಂ
ಚಿನಂತ ಮಗೂಗದು ನಾರದಂ ನರ್ತಿಸಿದಂ || ಚಂ|| ಕವಿವ ಶರಾಳಿಯಂ ನಿಜ ಶರಾಳಿಗಳಟ್ಟಿ ತೆರಳಿ ತೂಲ್ಲಿ ಮಾ
ರ್ಕವಿದು ಪಳಂಚಿ ಮಾಯೊರಸ ಪುಟದ ಕಿರ್ಚಳುರ್ದಬಿಜಾಂಡದಂ | ತುವರಮಗುರ್ವು ಪರ್ವಿ ಕರಮರ್ವಿಕ ದಳ್ಳುರಿ ಪರ್ಚಿ ಕಂಡು ಖಾಂ ಡವವನದಾಹಮಂ ನೆನೆಯಿಸಿತ್ತು ಗುಣಾರ್ಣವನಸ್ತಕೌಶಲಂ || ೧೯೦
ಆಕಾರವನ್ನು ಅಂಗೀಕರಿಸಿ ಕಾದಿದನು. ೧೮೬. ಅರಿಗನು ಕೋಪದಿಂದ ಹೊಡೆಯುವ ಬಾಣಸಮೂಹಗಳು ಶರಸಂಧಾನ (ಬಾಣವನ್ನು ತೊಡುವುದು) ಆಕರ್ಷಣ (ಎಳೆಯುವುದು) ಹರಣ (ಸೆಳೆದುಕೊಳ್ಳುವುದು)ವೇ ಮೊದಲಾದ ನಾನಾ ರೀತಿಯ ಕಲಾಪ್ರೌಢಿಮೆಯನ್ನು ಕ್ರಮಕ್ರಮವಾಗಿ ಮೆರೆದುವು. ೧೮೭. ಕೋಪಿಸಿಕೊಂಡು ಕರ್ಣನು ಪ್ರಯೋಗಿಸುವ ಬಾಣವನ್ನು ಅರ್ಜುನನ ಬಾಣಗಳು ತುದಿಯಿಂದ ಗರಿಯವರೆಗೆ ಸೀಳಿದುವು. ಆಕಾಶಮಾರ್ಗವನ್ನೂ ವ್ಯಾಪಿಸಿ ಸುಡುತ್ತವೆ ಎನ್ನುವ ಹಾಗೆ ಬಾಣಗಳ ಹೊಗೆಯೂ ಕಿಡಿಯೂ ಮೇಲಕ್ಕೆ ನೆಗೆದುವು. ೧೮೮. ಕೂಡಲೆ ಕತ್ತರಿಸುವ ಬಾಣಗಳನ್ನು ಬಾಣಗಳು ಅವಕಾಶಕೊಡದೆ ತಪ್ಪದೆ ಉಜ್ಜಲು ಹುಟ್ಟಿದ ಉರಿಯ ಜ್ವಾಲೆಗಳು ಭಯವನ್ನುಂಟುಮಾಡಲು ಆವರಿಸಿ ಸುಡುವ ಉರಿಯಲ್ಲಿ ದೇವಸುಂದರಿಯರು ತಮ್ಮ ಮುಖವನ್ನು ಅತ್ತ ಇತ್ತ ಅಲುಗಾಡಿಸಿದರು. ೧೮೯. ಮೊನಚಾದ ಬಾಣದ ತುಂತುರುಮಳೆಯಲ್ಲಿ ಅರ್ಜುನನೂ ಕರ್ಣನೂ ಸ್ವಲ್ಪವೂ ಕಾಣದಿರಲು ನಾರದನು ಸ್ವಲ್ಪವೂ ಸದ್ದಿಲ್ಲದೆ (ನಿಧಾನವಾಗಿ) ಭಾಗಮಾಡಿ ನೋಡಿ ಕುಡುಮಿಂಚಿನಂತೆ ಮೇಲಕ್ಕೆ ಹಾರಿ ಕುಣಿದಾಡಿದನು. ೧೯೦. ಕವಿಯುತ್ತಿರುವ ಬಾಣ ಸಮೂಹವನ್ನು ತನ್ನ ಬಾಣಸಮೂಹಗಳು ಆಕ್ರಮಿಸಿ ಓಡಿಸಿ ತಳ್ಳಿ ಪ್ರತಿಯಾಗಿ ಮುಚ್ಚಿ
Page #630
--------------------------------------------------------------------------
________________
೧೯೧
ದ್ವಾದಶಾಶ್ವಾಸಂ | ೬೨೫ ವ|| ಆಗಳ್ ಮದ್ರರಾಜನಂಗಾಧಿರಾಜನನಿಂತೆಂದನೀಯಂಬುಗಳೊಳೇಂ ತೀರ್ದಪುದು * ದಿವ್ಯಾರ್ಸ್ತಗಳಿಂದೆಚ್ಚು ಪಗೆಯಂ ಸಾಧ್ಯಂ ಮಾಡೆಂಬುದುಂ ಕೊಂತಿಗೆ ತನ್ನ ನುಡಿದ ನುಡಿವಳಿಯಂ ನೆನೆದು ಪರಿಗಣೆಯ ದೊಳಗೆ ಕೆಯ್ಯಂ ನೀಡದೆ ರೌದ್ರಶರದ ದೊಣಗೆ ಕೆಯ್ಯಂ ನೀಡಿದಾಗಳ್ಕಂ|| ಮುಳಿಸಂ ನೆಪರ್ಧಾ
ವಳೀಕ ಶರರೂಪದಿಂದಸುಂಗೊಳೆ ದೊಣೆಯಿಂ | ಪೊಳೆದು ಬರೆ ಕೆಯ್ಯ ತಾಂ ವಿ ಸುಳಿಂಗ ಪಿಂಗಳಿತ ಭುವನ ಭವನಾಭೋಗಂil ತಿರಿಪಿದೊಡದನಳೆ ತಿನೆ ತಿರಿದುದು ತಿರುವಾಯೊಳಿದೆ ಸುರರ್ ಮೊಯಿಟ್ಟರ್ | ಭರದೆ ತೆಗೆನೆಯ ಮಯ್ದೆಗೆ
ದರವಿಂದೋದವನಿನೊಗೆದುದಾ ಬ್ರಹ್ಮಾಂಡಂ || ಕಂth ತುಡೆ ಕರ್ಣನದಂ ನಡನಡ
ನಡುಗಿ ಸುಯೋಧನನ ಸಕಲ ರಾಜ್ಯಶ್ರೀಯುಂ | ಸಡಿಲಿಸಿದ ತೋಳನಾಗಳ್ ಸಡಿಲಿಸಲಣ' ದಲದಗುರ್ವಂ ಪಿರಿದೊ ||
೧೨
೧೩
ತಗುಲಿ ನುಗ್ಗಿ ಉಜ್ಜಲು ಅಲ್ಲಿ ಹುಟ್ಟಿದ ಬೆಂಕಿಯು ಎದ್ದು ಮೇಲಕ್ಕೆ ನೆಗೆದು ಬ್ರಹ್ಮಾಂಡದ ಕೊನೆಯವರೆಗೆ ಭಯವು ಹಬ್ಬುವ ಹಾಗೆ ವಿಶೇಷವಾಗಿ ವ್ಯಾಪಿಸಿ ಹೆಚ್ಚಾಗಿ ಸುಡಲು ಆ ದಳ್ಳುರಿಯನ್ನು ನೋಡಿ ಅರ್ಜುನನ ಅಸ್ತಕೌಶಲವು ಖಾಂಡವವನವನ್ನು ಸುಟ್ಟುದನ್ನು ಜ್ಞಾಪಕಮಾಡಿತು. ವ|| ಆಗ ಶಲ್ಯನು ಕರ್ಣನಿಗೆ ಹೀಗೆಂದನು - ಈ ಬಾಣಗಳಿಂದ ಏನು ತೀರುತ್ತದೆ? ದಿವ್ಯಾಸಗಳನ್ನು ಪ್ರಯೋಗಿಸಿ ಹಗೆಯನ್ನು ಅಧೀನಮಾಡು ಎನ್ನಲು ಕುಂತೀದೇವಿಗೆ ತಾನು ಕೊಟ್ಟ ವಾಗ್ದಾನವನ್ನು ನೆನೆದು ದಿವ್ಯಾಸ್ತಗಳ ಬತ್ತಳಿಕೆಗೆ ಕೈಯನ್ನು ಚಾಚದೆ ರೌದ್ರಬಾಣಗಳ ಬತ್ತಳಿಕೆಗೆ ಕೈಯನ್ನು ನೀಡಿದಾಗ ೧೯೧. ಹಿಂದಿನ ಕೋಪವನ್ನು ತೀರಿಸಿಕೊಳ್ಳುವುದಕ್ಕಾಗಿ ಕಿಡಿಗಳಿಂದಲೂ ಹಳದಿ ಕಪ್ಪು ಮತ್ತು ಕೆಂಪುಮಿಶ್ರವಾದ ಕಾಂತಿಯಿಂದಲೂ ಕೂಡಿದ ಪ್ರಪಂಚವೆಂಬ ಮನೆಯಷ್ಟು ವಿಸ್ತಾರವಾದ ಅರ್ಧಾವಲೀಕವೆಂಬ ಅರ್ಧ ಉಳಿದಿದ್ದ ಸರ್ಪವು ಬಾಣದ ಆಕಾರದಲ್ಲಿ ಬತ್ತಳಿಕೆಯಿಂದ ಹೊಳೆಯುತ್ತ ಪ್ರಾಣಾಪಹಾರಮಾಡಲು ಕೈಗೆ ಬಂದಿತು. ೧೯೨. ಅದನ್ನು ತಿರುಗಿಸಲು ಭೂಮಿಯು ತಿರೊಂದು ತಿರುಗಿತು. ಬಿಲ್ಲಿನ ಹೆದೆಗೇರಿಸಲು ದೇವತೆಗಳು ಗಟ್ಟಿಯಾಗಿ ಕೂಗಿಕೊಂಡರು. ವೇಗದಿಂದ ಹೆದೆಯನ್ನು ಕಿವಿಯವರೆಗೆ ಸೆಳೆಯಲು ಮೈಯಿಳಿದ (ಗರ್ಭಾಸ್ರಾವವಾದ) ಬ್ರಹ್ಮನಿಂದ ಬ್ರಹ್ಮಾಂಡವು ಹುಟ್ಟಿತು. ೧೯೩. ಅದನ್ನು ಕರ್ಣನು ಪ್ರಯೋಗಮಾಡಲು ದುರ್ಯೋಧನನ ಸಮಸ್ತ ರಾಜ್ಯಶ್ರೀಯು ಗಡಗಡನೆ ನಡುಗಿ ಸಡಿಲಿಸಿದ್ದ ತನ್ನ ತೋಳನ್ನು ಸಡಿಲಿಸಲು ಆಗ ಶಕ್ತಳಾಗಲಿಲ್ಲವಲ್ಲವೇ? ಅದರ ಭಯಂಕರತೆ ಅತ್ಯದ್ಭುತವಾಗಿತ್ತು.
Page #631
--------------------------------------------------------------------------
________________
೬೨೬ | ಪಂಪಭಾರತಂ
ಆಕರ್ಣಾಂತಂ ತಗೆನೆ ದಾ ಕರ್ಣನಿಸಿ ಬಗೆದೊಡುಡುಗುಡುಗಿಸಲೀ | ಭೀಕರ ಬಾಣಮನಾದವಿ ವೇಕದಿನುರದೆಡೆಗೆ ತುಡದೆ ತಲೆಗೆಯ ತುಡುವಾ || ೧೯೪ ಉರದೆಡೆಗೆ ತುಡೆ ಜಯಶ್ರೀ ಗಿರಲೆಡ ನಿನಗಪುದಾ ಸುಯೋಧನನೂ ಶ್ರೀ ಗಿರಲೆಡೆಯಪುದು ಮೇಣ್ ದಿನ
ಕರಸುತ ತೊದಳುಂಟೆ ಬಗೆಯ ಸಂದೆಯಮುಂಟೇ ॥ ೧೯೫ ವ|| ಎಂಬುದುಂ ಶಲ್ಯನ ನುಡಿದ ನುಡಿಯನವಧಾರಿಸಿ ತನ್ನ ಮನದೊಳೆ ಕರ್ಣನಿಂತೆಂದಂಮll ಎನಿತುಂ ಶಲ್ಯನ ಪೇಟ್ಟ ಪಾಂಗೆ ತೂದಳಿಲ್ಲಿಂತಾದೊಡಾ ಶಕ್ರಪು
ತ್ರನನಾಂ ಕೊಂದೊಡ ಧರ್ಮಪುತ್ರನಟಿಗುಂ ತಾಯಂದೆ ಮುಂ ಕೊಂತಿ ಬಂ | ದಿನಿಸಂ ಪ್ರಾರ್ಥಿಸಿ ಪೋದಳೆನ್ನನದನಾಂ ಮಾಣ್ಣರ್ದನಿರ್ದಾಗಳೂ ಛಿನ ಪರ್ಮಾತಿನ ನನ್ನಿ ಬನ್ನದೊಳೊಡಂಬಟ್ಟಿರ್ಪುದಂ ಮಾನೇ || ೧೯೬ ಚಂ ತನಗುಳುವಂತುಟಾಗೆ ಕಡು ನನ್ನಿಯ ಪಂಪುಮನಾಂತು ಭೂಭುಜರ್
ತನಗಿನಿತೂನಮಾಗ ಮದಾ ಭುಜವೀರ್ಯಮನಾಂತು ಮಾಣುದೇಂ | ತನಗುಜುವೊಂದು ನನ್ನಿಯನೆ ಪೂಣ್ಣು ಕರಂ ಪಿರಿದುಂ ಬಲಸ್ಯನ ಪ್ರನನೆ ಕುತ್ತು ಕಾದಿ ನೆಗಾತನೆ ನನ್ನಿಯ ಬೀರದಾಗರಂ || ೧೯೭
೧೯೪, ಕಿವಿಯವರೆಗೂ ಪೂರ್ಣವಾಗಿ ಸೆಳೆದು ಕರ್ಣನು ಹೊಡೆಯಲು ಮನಸ್ಸು ಮಾಡುತ್ತಿದ್ದ ಹಾಗೆಯೇ ಹಿಂದಕ್ಕೆ ತೆಗೆ, ಹಿಂದಕ್ಕೆ ತೆಗೆ; ಹೊಡೆಯಬೇಡ; ಈ ಭಯಂಕರವಾದ ಬಾಣವನ್ನು ವಿವೇಕದಿಂದ ಎದೆಯ ಪ್ರದೇಶಕ್ಕೆ ಗುರಿಯಿಡದೆ ತಲೆಗೆ ಗುರಿಯಿಡುತ್ತೀಯಾ? ೧೯೫. ಎದೆಯ ಪ್ರದೇಶಕ್ಕೆ ಗುರಿಯಿಟ್ಟು ತೊಟ್ಟರೆ ಜಯಲಕ್ಷ್ಮಿಯು ನಿನ್ನಲ್ಲಿರಲು ಅವಕಾಶವಾಗುತ್ತದೆ. ಆ ದುರ್ಯೋಧನನಲ್ಲಿ ಜಯಲಕ್ಷ್ಮಿಯಿರಲೂ ಅವಕಾಶವಾಗುತ್ತದೆ. ಕರ್ಣಾ ಈ ಮಾತು ಸುಳ್ಳಲ್ಲ ಸಂಶಯಪಡಬೇಡ ವಎನ್ನಲು, ಶಲ್ಯನು ನುಡಿದ ಮಾತನ್ನು ಕೇಳಿ ತನ್ನ ಮನಸ್ಸಿನಲ್ಲಿಯೇ ಕರ್ಣನು ಹೀಗೆಂದುಕೊಂಡನು. ೧೯೬. ಹೇಗೂ ಶಲ್ಯನು ಹೇಳಿದ ಹಾಗೆಯೇ (ಸರಿ) ಸುಳ್ಳಿಲ್ಲ. ಆದರೆ ಆ ಇಂದ್ರಪುತ್ರನಾದ ಅರ್ಜುನನನ್ನು ನಾನು ಕೊಂದರೆ ಧರ್ಮರಾಜನು ಸಾಯುತ್ತಾನೆ. ನನ್ನ ತಾಯಿಯೆಂದೇ ಕುಂತಿ ಬಂದು ನನ್ನಲ್ಲಿ ಇದನ್ನೇ ಬೇಡಿಹೋದಳು. ಅದನ್ನು ನಾನು ತಪ್ಪಿ ನಡೆಯುವುದಾದರೆ ಆ ಒಳ್ಳೆಯ ಸತ್ಯವಾಕ್ಕಿನ ಭಂಗವಾದುದನ್ನು ನಾನು ಮಾಡುವೆನೇ ? (ಮಾಡಲೇ) ೧೯೭. ಸಾಮಾನ್ಯರಾಜರಾದವರು ತಮಗೆ ಸಾಧ್ಯವಾದಷ್ಟು ಸತ್ಯವನ್ನೂ ಪರಾಕ್ರಮವನ್ನೂ ತಾವು ಪ್ರದರ್ಶಿಸಬಹುದು. ಆದರೆ ಪೂರ್ಣವಾದ ಭುಜಶಕ್ತಿಯನ್ನು ಪಡೆದಿದ್ದೂ ಅದನ್ನು ತಪ್ಪುವುದೆಂದರೇನು? ತನಗೆ ಸಾಧ್ಯವಾದಷ್ಟು ಸತ್ಯಪ್ರತಿಜ್ಞೆಮಾಡಿ,
Page #632
--------------------------------------------------------------------------
________________
ದ್ವಾದಶಾಶ್ವಾಸಂ | ೬೨೭ ಮ|| ಅಳಿಯ ಪಾಂಡವರನ್ನನಿನ್ನುಮಪಲ್ ನೀಮಂದದಂ ಚಕಿಗಾ
ನಳಪಿರ್ದಂ ಪೃಥೆಯುಂ ಮದೀಯ ಸುತರೊಳ್ ವೈಕರ್ತನಂ ನನ್ನಿಯಂ ನಿಜಸಲ್ಮಾರ್ಕುಮಮೋಘಮಂದು ಮನದೊಳ್ ನಂಬಿರ್ದಳಿಲ್ಲಿ ಪಂ ಪೆಕಂಬೆರೆ ಕಾವನನ್ನ ನುಡಿಯಂ ಕಲ್ಗೊಂಡ ಕಟ್ಟಾಯಮಂ || ೧೯೮
ಕoll ಎಂಬುದನೆ ಬಗೆದು ಪಣತನ
ಣಂ ಬಗೆಯದೆ ಮದ್ರಪತಿಯನೆಂದಂ ಮುಂ ತೊ । ಟ್ರಂಬನದನುಗಿದು ಕುಂದಿಸಿ ದಂ ಭಯದಿಂ ಕರ್ಣನೆಂದು ಲೋಕಂ ನಗದೇ ||
೧೯೯
ಕಂ|
ಉಡುಗುಡುಗುಡುಗಂದಿಸ ಬಜ ಸಿಡಿಲೆಜಪಂತಜಪ ಸರಲ ಬರವಂ ಕಂಡಾ | ಗಡ ಚಕ್ತಿ ನೆಲನೊಳಕ್ಟರ ಲಡಂಗ ನರರಥಮನೊತ್ತಿದಂ ನಿಪುಣತೆಯಿಂ ||
೨೦೦
ಒತ್ತುವುದುಂ ಶರಮಿರದ ಯುತ್ತ ಕಿರೀಟಿಯ ಕಿರೀಟಮಂ ಕೊಆದೊಡೆ ಪ | ರ್ವಿತ್ತು ಭಯಮಿಂದ್ರನಂ ಮು ತಿತ್ತಬಲೀಶ್ವರನನಾಗಳಾ ಸಂಕಟದೊಳ್ ||
೨೦೧
ವಿಶೇಷ ಶೌರ್ಯಶಾಲಿಯಾದವನನ್ನೆ ಗುರಿಯಿಟ್ಟು ಕಾದಿ ಪ್ರಸಿದ್ಧಿಪಡೆದವನೇ ಸತ್ಯ ಮತ್ತು ಪರಾಕ್ರಮದ ಆವಾಸಸ್ಥಾನನಾಗುವನು. ೧೯೮. ಪಾಂಡವರು ನನ್ನನ್ನು ಇನ್ನೂ (ಯಾರೆಂದು ತಿಳಿಯರು. ನೀವು ತಿಳಿಸಬೇಡಿ ಎಂದು ನಾನು ಕೃಷ್ಣನನ್ನು ಪ್ರಾರ್ಥಿಸಿದ್ದೆ. ಕುಂತಿಯೂ ನನ್ನ ಮಕ್ಕಳಲ್ಲಿ ಕರ್ಣನು ಸತ್ಯವನ್ನು ಸ್ಥಾಪಿಸುವುದಕ್ಕೆ ಪೂರ್ಣವಾಗಿ ಸಮರ್ಥನೆಂದು ಮನಸ್ಸಿನಲ್ಲಿ ನಂಬಿದ್ದಾಳೆ. ಇಂತಹ ವೈಭವವು ನನ್ನಲ್ಲಿ ಎರಕ ಹೊಯ್ದಿರಲು ನನ್ನ ಭಾಷೆಯನ್ನೂ ನಾನು ಅಂಗೀಕರಿಸಿರುವ ನನ್ನ ತೀವ್ರವಾದ ಶೌರ್ಯವನ್ನೂ ರಕ್ಷಿಸುತ್ತೇನೆ. ೧೯೯. ಎಂಬುದಾಗಿಯೇ ಯೋಚಿಸಿ ಬೇರೆ ಯಾವ ರೀತಿಯನ್ನೂ ಯಾವ ರೀತಿಯಲ್ಲಿಯೂ ಯೋಚಿಸದೆ ಶಲ್ಯನಿಗೆ ಹೇಳಿದನು. 'ಕರ್ಣನು ಮೊದಲು ಪ್ರಯೋಗಿಸಿದ ಬಾಣವನ್ನು ಭಯದಿಂದ ಹಿಂದಕ್ಕೆ ಸೆಳೆದು ಕುಗ್ಗಿಸಿದನು ಎಂದು ಮುಂದೆ ಲೋಕವು ನಗುವುದಿಲ್ಲವೇ? ೨೦೦. ಎನ್ನುತ್ತ ಕುಗ್ಗಿಸು,ಕುಗ್ಗಿಸು, ಕುಗ್ಗಿಸು ಎಂದು ಹೊಡೆಯಲು ಬರಸಿಡಿಲೆರಗುವಂತೆ ಎರಗುವ ಬಾಣದ ಬರುವಿಕೆಯನ್ನು ಕಂಡು ಆಗಲೆ ಕೃಷ್ಣನು ಅರ್ಜುನನ ತೇರನ್ನು ಭೂಮಿಯಲ್ಲಿ ಎಂಟುಬೆರಳು ಆಳಕ್ಕೆ ಅಡಗುವ ಹಾಗೆ ಕೌಶಲದಿಂದ ಒತ್ತಿದನು. ೨೦೧. ಒತ್ತಟ್ಟಾಗಿ ಬಾಣವು ಸುಮ್ಮನಿರದೆ ಬರುತ್ತ ಅರ್ಜುನನ ಕಿರೀಟವನ್ನು ಕತ್ತರಿಸಲು ಆಗ ಇಂದ್ರನನ್ನು ಭಯವಾವರಿಸಿತು. ಆ ಸಂಕಟದಲ್ಲಿ ದುಃಖವು ಈಶ್ವರನನ್ನು ಆವರಿಸಿಕೊಂಡಿತು.
Page #633
--------------------------------------------------------------------------
________________
೬೨೮ | ಪಂಪಭಾರತ
ಒಳಗಳಿಯದೆ ಕೌರವಬಳ ಜಳನಿಧಿ ಬೊಬ್ಬಿಟಿದು ಮೇಲುದಂ ಬೀಸಿದೊಡು | ಚಳಿಸಿದ ಮಕುಟದ ಮಣಿಗಳ
ಪೊಳಪುಗಳಿಂದುಳಮೆಟ್ಟುವೆಂಟುಂ ದೆಸೆಯೊಳ್ || ವ|| ಅಂತು ರುಂದ್ರನೀಳಾಧೀಂದ್ರ ರತ್ನಕೂಟಾಗ್ರಮುದಗ್ರ ವಜಘಾತದಿಂದುರುಳ್ಳಂತ ರತ್ನಮಕುಟಮರಾತಿಶಾತಶರದಿನುರುಳ್ಳುದುಮಳಿನೀಳೊಜ್ಜಳ ಸಹಸ್ರಕುಂತಳಂಗಲ್ ಪರಕಲಿಸಿ ಬಂದು ಪೊಆಮುಯ್ಯನಳ್ಳಿಯ ಪಚ್ಚುಗಂಟಿಕ್ಕಿ ಗಾಂಡೀವಧನ್ವಂ ಸನ್ನದ್ಧನಾಗಿರ್ಪನ್ನಗಂಚಂti ಪುರಿಗಣೆಯ ಕಾರಣದಿನಂತದು ತಪ್ಪಿದೆನೆಂದು ನೊಂದು ಪ .
ತೊರೆದಹಿ ರೂಪದಿಂ ಮಗುಟ್ಟು ಬಂದಿನನಂದನನಲ್ಲಿಗೆನ್ನನಂ | ತರಿಸದೆ ತೊಟ್ಟು ಬೇಗಮಿಸು ವೈರಿಯನೀಗಳೆ ಕೊಂದಪಂ ರಸಾಂ
ಬರ ಧರಣೀವಿಭಾಗದೊಳಗಾವಡೆವೊಕ್ಕೊಡಮಂಗನಾಯಕಾ || ೨೦೩
ವ|| ಎಂಬುದುಂ ನೀನಾರ್ಗನೆಂಬೆಯದಾವುದು ಕಾರಣದಿಂದಮನ್ನ ದೊಣೆಯ ಪೊಕಿರ್ದಯೆಂದೊಡಾನಶ್ವಸೇನನೆಂಬ ಪನ್ನಗನನೆಂದು ತನ್ನ ವೈರ ಕಾರಣನಟಿಯ ಬೇಡ ದರಹಸಿತವದನಾರವಿಂದನಾಗಿ- , ಕಂ|| ಶರರೂಪದೊಳಿರೆ ನಿನ್ನಂ
ಶರಮಂದಾಂ ತೊಟ್ಟಿನಳೆದು ತುಡುವೆನೆ ನಿನ್ನಂ | ನೆರದೊಳೆ ಕೊಲ್ವಂತನಗೇ
ನರಿಯನೆ ಗಾಂಡೀವಧನ್ವನೆಂಬುದುಮಾಗಳ್ || ೨೦೨. ಇದರ ರಹಸ್ಯವನ್ನರಿಯದೆ ಕೌರವಸೇನಾಸಮುದ್ರವು ಆರ್ಭಟಮಾಡಿ (ಸಂತೋಷದಿಂದ) ಉತ್ತರೀಯವನ್ನು ಬೀಸಲು ಚಿಮ್ಮಿದ ಕಿರೀಟದ ರತ್ನಗಳ ಹೊಳಪಿನಿಂದ ಎಂಟುದಿಕ್ಕುಗಳಲ್ಲಿಯೂ ಉಲ್ಕಾಪಾತಗಳು ಎದ್ದುವು. ವ! ಹಾಗೆ ವಿಸ್ತಾರವೂ ರತ್ನಮಯವೂ ಆದ ನೀಲಪರ್ವತದ ಶಿಖರಗಳ ತುದಿಯ ಭಾಗವು ಬಲವಾದ ವಜ್ರಾಯುಧದ ಪೆಟ್ಟಿನಿಂದ ಉರುಳುವ ಹಾಗೆ ರತ್ನಕಿರೀಟವು ಶತ್ರುವಿನ ಹರಿತವಾದ ಬಾಣದಿಂದ ಉರುಳಲು ದುಂಬಿಗಳ ಕಪ್ಪುಬಣ್ಣದಂತೆ ಪ್ರಕಾಶಮಾನ ವಾಗಿರುವ ಕೂದಲುಗಳು ಕೆದರಿ ಬಂದು ಹೆಗಲಿನ ಹೊರಭಾಗವನ್ನು ಮುಟ್ಟಲು ಅದನ್ನು ಎರಡು ಭಾಗವಾಗಿ ಗಂಟಿಕ್ಕಿ ಅರ್ಜುನನು ಸಿದ್ದವಾಗುವಷ್ಟರಲ್ಲಿ ೨೦೩.ದಿವ್ಯಾಸ್ತವಾದ (ಪುರಿಗಣೆಯಾದ) ಕಾರಣದಿಂದ ಹಾಗೆ ತಪ್ಪುಮಾಡಿದೆನೆಂದು ವ್ಯಥೆಪಟ್ಟು ಹಲ್ಲುಕಡಿದು ಶಬ್ದಮಾಡಿ ಹಾವಿನ ರೂಪದಿಂದ ಪುನಃ ಕರ್ಣನ ಹತ್ತಿರಕ್ಕೆ ಬಂದು 'ಕರ್ಣಾ, ನನ್ನನ್ನು ಸಾವಕಾಶಮಾಡದೆ ಬಿಲ್ಲಿನಲ್ಲಿ ತೊಡಿಸಿ ಬೇಗ ಹೂಡು; ಸ್ವರ್ಗಮರ್ತ್ಯಪಾತಾಳವಿಭಾಗದಲ್ಲಿ ಯಾವಸ್ಥಳದಲ್ಲಿ ಪ್ರವೇಶಮಾಡಿದ್ದರೂ ಶತ್ರುವನ್ನು ಈಗಲೇ ಕೊಲ್ಲುತ್ತೇನೆ' ಎಂದಿತು. ವ|| 'ನೀನು ಯಾರು? ನಿನ್ನ ಹೆಸರೇನು? ಯಾವ ಕಾರಣದಿಂದ ನನ್ನ ಬತ್ತಳಿಕೆಯನ್ನು ಪ್ರವೇಶಿಸಿದ್ದೆ' ಎನ್ನಲು 'ನಾವು ಅಶ್ವಸೇನನೆಂಬ ಹಾವು' ಎಂದು ತಿಳಿಸಿ ತನ್ನ ವೈರಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಮುಗುಳುನಗೆಯಿಂದ ಕೂಡಿದ ಮುಖವುಳ್ಳವನಾಗಿ ೨೦೪. 'ಬಾಣಾಕಾರದಿಂದಿರಲು ನಿನ್ನನ್ನು ಬಾಣವೆಂದು
Page #634
--------------------------------------------------------------------------
________________
ದ್ವಾದಶಾಶ್ವಾಸಂ | ೬೨೯ ನೀಂ ನಿನ್ನ ನಗೆಯನಾರ್ಪೊಡ ದಂ ನೆಂಪನೆ ನೆಗೆದು ಬರ್ಪ ವಿಷಪನ್ನಗನಂ | ಪನ್ನತನೆಡೆಯೊಳರಿಗಂ :ತನ್ನಯ ಗರುಡಾಸ್ತ್ರದಿಂದ ಕುಣಿದಣಿದಣಿದಂ ||
១១ន ವ|| ಆಗಳಂಗರಾಜಂಗ ಶಲ್ಯಂ ಕಿನಿಸಿ ಮುಳಿಸಿಕೊಳೆ ಕಣ್ಣಾಣದಿಂತಪ್ರೇಕಗ್ರಾಹಿಗ ಮೊರಂಟಂಗಂ ರಥಮನೆಸಗೆನೆಂದು ವರೂಥದಿಂದಿಚೆದು ಪೋಗೆಚಂti ಆರಿಗನ ಬಟ್ಟನಂಬುಗಳ ಬಲ್ಬರಿ ಸೋಂಕುಗುಮೇಟಿಮೆನ್ನ ತೋ
qರಮೆನಗನ್ನ ಬಿಲ್ಲ ನರಮಂದು ವರೂಥತುರಂಗಮಂಗಳಂ | ತುರಿಪದೆ ತಾನೆ ಚೋದಿಸುತುಮಾರ್ದಿಸುತುಂ ಕಡಿಕೆಯು ಕಾದೆ ನೀ ಕರ ರಥಚಕ್ರಮಂ ಪಿಡಿದು ನುಂಗಿದಳೊರ್ಮೆಯ ಧಾತ್ರಿ ಕೋಪದಿಂ || ೨೦೬
ವ|| ಅಂತು ತನ್ನಂ ಮುನ್ನೆ ಮುಯ್ಯ್ ಸೂರಮೊಲಣಿಗೆಯಂ ಪಿಟಿವಂತೆ ಪಿಂಡಿ ಏಟದ ಪಗೆಗೆ ರಥಚಕ್ರಮಂ ನುಂಗುವುದುಂ ರಥದಿಂದಿಳದು ಗಾಲಿಯನೆತ್ತುವಾಗಳಿವನನೀ ಪದದೊಳ್ ಕಡಿದೊಟ್ಟಿದಾಗಳ್ ಗೆಲಲಾಜಿತೆಯೆಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನಿಂತೆಂದಂ
ಬಿಲ್ಲಿಗೆ ತೊಡಿಸಿದೆ. (ನೀನು ಯಾರೆಂದು) ತಿಳಿದೂ ನಿನ್ನ ಸಹಾಯದಿಂದ ಕೊಲ್ಲುವಷ್ಟು , ಅರ್ಜುನನು ನನಗೆ ಅಸಾಧ್ಯವೆ?” ಎಂದನು -೨೦೫. ಸರ್ಪವು 'ಹಾಗಾದರೆ ಶತ್ರುತ್ವವನ್ನು ಸಮರ್ಥನಾದರೆ ನೀನು ಪೂರ್ಣಮಾಡು' ಎಂದು ಹೇಳಿ ಅರ್ಜುನನ ಕಡೆಗೆ ಹಾರಿ ಬರುತ್ತಿದ್ದ ವಿಷಸರ್ಪವನ್ನೂ ಶೂರನಾದ ಅರಿಗನು ಮಧ್ಯಮಾರ್ಗದಲ್ಲಿಯೇ ಗರುಡಬಾಣದಿಂದ ಕುರಿಯನ್ನು ಕತ್ತರಿಸುವಂತೆ ಕತ್ತರಿಸಿದನು. ವ.ಆಗ ಕರ್ಣನಿಗೆ ಶಲ್ಯನು ಕೋಪಿಸಿಕೊಂಡು ಕೋಪದಿಂದ ಕಣ್ಣಾಣದೆ, ಇಂತಹ ಹಟಮಾರಿಗೂ ಒರಟನಿಗೂ ನಾನು ತೇರನ್ನು ನಡೆಸುವುದಿಲ್ಲವೆಂದು ತೇರಿನಿಂದ ಇಳಿದು ಹೋದನು. ೨೦೬, “ಅರ್ಜುನನ ದುಂಡಾದ ಬಾಣಗಳ ದೊಡ್ಡ ಮಳೆಯು ತಗುಲುತ್ತಿದೆ ಏಳಿ, ನನ್ನ ತೋಳುಗಳು ನನಗೆ ಸಹಾಯ, ನನ್ನ ಬಿಲ್ಲೇ ಸಹಾಯ' ಎಂದು ರಥದ ಕುದುರೆಗಳನ್ನು ವೇಗವಾಗಿ ತಾನೇ ನಡೆಸುತ್ತ ಆರ್ಭಟಮಾಡಿ ಬಹಳವೇಗದಿಂದ ಯುದ್ಧಮಾಡಲು ಭಯಂಕರವಾದ ತೇರಿನ ಚಕ್ರವನ್ನು ಭೂಮಿಯು ಹಿಡಿದು ಇದ್ದಕ್ಕಿದ್ದ ಹಾಗೆ ನುಂಗಿದಳು (ಕರ್ಣನ ತೇರಿನ ಗಾಲಿಗಳು ಇದ್ದಕ್ಕಿದ್ದ ಹಾಗೆ ಭೂಮಿಯಲ್ಲಿ ಹೂತುಹೋದುವು) ವ|| ಹಾಗೆ ತನ್ನನ್ನು ಮೊದಲು ಇಪ್ಪತ್ತೊಂದು ಸಲ ಒದ್ದೆಯ ಬಟ್ಟೆಯನ್ನು ಹಿಂಡುವಂತೆ ಹಿಂಡಿದ ದ್ವೇಷಕ್ಕೆ ರಥಚಕ್ರವನ್ನು ಭೂಮಿಯು ನುಂಗಲು ರಥದಿಂದಿಳಿದು ಕರ್ಣನು ಗಾಲಿಯನ್ನು ಎತ್ತುತ್ತಿದ್ದನು. ಇವನನ್ನು ಈ ಸ್ಥಿತಿಯಲ್ಲಿ (ಸನ್ನಿವೇಶದಲ್ಲಿ ಕತ್ತರಿಸಿ ರಾಶಿಮಾಡದಿದ್ದರೆ ಗೆಲ್ಲಲಾರೆ ಎಂದು ಹೇಳಿದ ಕೃಷ್ಣನ
Page #635
--------------------------------------------------------------------------
________________
೬೩೦ | ಪಂಪಭಾರತಂ ಮಗ ಬಲುವು ಸಾರಥಿಯಿಲ್ಲ ಮೆಯ್ಕೆ ಮಣಿಯುಂ ತಾನಿಲ್ಲದಂತೀಗಳಾ
ನಿಜವೆಂ ನೋಡಿರೆ ಮತ್ತಮೊಂದನಿಸಲುಂ ಕೆಯ್ಯೋದೇಕೆಂದುಮಾ | ನಟಿಯೆಂ ಕೂರ್ಮಯೆ ಮಿಕ್ಕು ಬಂದಪುದಿದರ್ಕೆಗಯ್ಯನೇನೆಂಬೆನಾಂ | ಮದೆಂ ಮುನ್ನಿನದೊಂದು ವೈರಮನಿದಿಂತ್ಕಾರಣಂ ಭೂಧರಾ 11 ೨೦೭
ವll ಎಂಬುದುಮನಿತಳೆಯದಿರ್ದೊಡು ಸೋದರಿಕೆಯೆ ಮಿಕ್ಕು ಬರ್ಕುಮಾಗದೆಯೆಂದು ತನ್ನಂತರ್ಗತದೊಳ್ ಬಗೆದಸುರಾಂತಕನಿಂತೆಂದಂಚಂ|| ನೆಗಟ್ಟಿಭಿಮನ್ಯುವಂ ಚಲದಿನಂದಿಳದಿಂದು ನಿಜಾಗ್ರಜಾತನಂ
ಸುಗಿವಿನಮೆಚ್ಚು ಬೀರದೊಳೆ ಬೀಗುವ ಸೂತಸುತಂಗೆ ನೀನುಮಾ || ಜಿಗೆ ಸೆಡೆದಿರ್ದಯಿಡಿರು ಚಕ್ರವಿಘಾತದಿನಿಕ್ಕಿ ಬೀರಮು ರ್ವಿಗೆ ಪಡಿಚಂದಮಾಗೆ ತಳೆದೊಟ್ಟಿ ಜಯಾಂಗನೆಗಾಣನಾದಪಂ || ೨೦೮
ವ|| ಎಂಬನ್ನೆಗಂ ಧರಾತಳಮಳ ರಥದ ಗಾಲಿಯಂ ಕಿಟ್ಟು ಮತ್ತು ರಥವನಪ್ರತಿರಥ ನೇ ನಿಟ್ಟಾಲಿಯಾಗೆ ಮುಟ್ಟೆವಂದು ಕಿಡಿಗುಟ್ಟೆ ಮರ್ಮೋದ್ಘಾಟನಂಗೆಯ್ದು ಕಾದುವಾಗಳ್ ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷಧ್ವಜಮನುಡಿದು ಕೆಡವಿನಮೆಚ್ಚಾಗಳಕoll ಪಲಯಿಗೆ ಬಿಟಿಡೆ ಬೀರದ
ಪಲವಿಗೆಯಂ ನಿಲಿಸಲೆಂದೆ ಹರಿ ವಕ್ಷಮನ ಅಟೆವೊಗೆಯಚ್ಚು ಮುಳಿಸವ | ಗಟೆಯಿಸುತಿರೆ ನರನ ಬಿಲ್ಲ ಗೊಣೆಯುಮನೆಚ್ಚಂ 11 : ೨೦೯
ಮಾತಿಗೆ ಅಸಹ್ಯಪಟ್ಟು ಅರ್ಜುನನು ಹೀಗೆ ಹೇಳಿದನು-೨೦೭. ಬರಿದಾದವನು (ನಿಸ್ಸಹಾಯಕನು), ಸಾರಥಿಯೂ ಇಲ್ಲ: ಶರೀರಕ್ಕೆ ಮರೆಯಾದ ಕವಚವೂ ಇಲ್ಲ: ಅದು ಹೇಗೆ ಈಗ ನಾನು ಹೊಡೆಯಲಿ; ಪುನಃ ಒಂದು ಬಾಣವನ್ನು ಹೊಡೆಯುವುದಕ್ಕೂ ಕೈಗಳು ಏಳುವುದಿಲ್ಲ: ಏತಕ್ಕೆಂದು ನಾನು ತಿಳಿಯಲಾರೆ; ಪ್ರೀತಿಯ ಮೀರಿ ಬರುತ್ತಿದೆ. ಇದಕ್ಕೆ ಏನು ಮಾಡಲಿ, ಏನೆಂದು ಹೇಳಲಿ; ನಾನು ಹಿಂದಿನ ದ್ವೇಷವನ್ನು ಮರೆತೆನು; ಕೃಷ್ಣಾ ಇದಕ್ಕೇನು ಕಾರಣ? ವli ಎನ್ನಲು ವಾಸ್ತವಾಂಶವು ತಿಳಿಯದಿದ್ದರೂ ಭ್ರಾತೃಭಾವವೇ ಮೀರಿ ಬರುತ್ತದೆಯಲ್ಲವೇ ಎಂದು ತನ್ನ ಮನಸ್ಸಿನಲ್ಲಿ ತಿಳಿದು ಕೃಷ್ಣನು ಹೀಗೆ ಹೇಳಿದನು-೨೦೮. ಅಂದು ಪ್ರಸಿದ್ಧನಾದ ಅಭಿಮನ್ಯುವನ್ನು ಹಟದಿಂದ ಕತ್ತರಿಸಿ ಇಂದು ನಿಮ್ಮಣ್ಣನಾದ ಧರ್ಮರಾಯನನ್ನು ಹೆದರುವಂತೆ ಹೊಡೆದು ವೀರ್ಯದಿಂದ ಅಹಂಕಾರಪಡುವ ಸೂತನ ಮಗನಿಗೆ ನೀನು ಯುದ್ದದಲ್ಲಿ ಹೆದರು ವುದಾದರೆ ಇರು ನಾನೇ ಚಕ್ರಾಯುಧದ ಪೆಟ್ಟಿನಿಂದ ಹೊಡೆದು ಪರಾಕ್ರಮವು ಲೋಕಕ್ಕೆ ಮಾದರಿಯಾಗುವ ಹಾಗೆ ಕತ್ತರಿಸಿ ರಾಶಿ ಮಾಡಿ ಜಯಲಕ್ಷ್ಮಿಗೆ ಒಡೆಯನಾಗುತ್ತೇನೆ. ವ|| ಎನ್ನುವಷ್ಟರಲ್ಲಿ ಭೂಮಿಯು ನಡುಗುವ ಹಾಗೆ ತೇರಿನ ಚಕ್ರವನ್ನು ಕಿತ್ತು ಪುನಃ ಪ್ರತಿರಥನಿಲ್ಲದ ಕರ್ಣನು ರಥವನ್ನು ಹತ್ತಿ ದೀರ್ಘದೃಷ್ಟಿಯಿಂದ ಸಮೀಪಕ್ಕೆ ಬಂದು ಕಿಡಿಗಳನ್ನು ಸುರಿಸಿ ಮರ್ಮಭೇದಕವಾದ ಮಾತುಗಳನ್ನಾಡಿ ಯುದ್ಧಮಾಡುವಾಗ ಕಪಿಧ್ವಜನಾದ ಅರ್ಜುನನು ಕಾಡಾನೆಯಂತೆ ಕಾಗೆಯ ಬಾವುಟವನ್ನು ಕತ್ತರಿಸಿ ಕೆಡೆಯುವ ಹಾಗೆ ಹೊಡೆದನು. ೨೦೯. ಬಾವುಟವು ಬೀಳಲು ಶೌರ್ಯದ ಧ್ವಜವನ್ನು
Page #636
--------------------------------------------------------------------------
________________
ದ್ವಾದಶಾಶ್ವಾಸಂ | ೬೩೧ ಬೆಳಗುವ ಕೊಡರ್ಗಳ ಬೆಳಗ ಗಳಿಸುವವೋಲ್ ಪೋಪ ಪೊಕ್ಕಳೊಳ್ ತೇಜಂ ಪ | ಇಳಿ; ತಟತಟಿಸಿ ತೋಳ ತೋಳ
ತೋಳಗಿದನಸಮಯ ಸಮಯದೋಳ್ ದಿನಪಸುತಂ | ೨೧೦ ವ|| ಅಂತು ಕರ್ಣ ನಿಶಿತ ವಿಕರ್ಣಹತಿಯಿಂದಮಸುರಾಂತಕಂ ಕಟಿಯ ನೊಂದುಕಂ ಕಸೆಯಂ ಬಿಟ್ಟುಜದಭಿಮಂ
ತ್ರಿಸಿ ಚಕ್ರಮನಸುರವೈರಿಯಿಡುವಾಗಳ್ ಬಾ | ರಿಸಿ ಪಂತು ಗೊಣೆಯದಿಂದೇ ಆಸಿ ಬಿಲ್ಲಂ ತ್ರಿಭುವನಂಗಳಳ್ಳಾಡುವಿನಂ ||
೨X ವ|| ಮುನ್ನಮಿಂದ್ರಕೀಲನಗೇಂದ್ರದೋಳ್ ಪಶುಪತಿಯನಾರಾಧಿಸಿ ಪಾಶುಪತಾಸ್ತಂ ಬದಂದು ತೆಲ್ಲಟಿಯೆಂದು ಚಂ|| ಗಿರಿಜೆಯ ಮೆಟ್ಟಿ ಕೊಟ್ಟ ನಿಶಿತಾಸ್ತಮನಂಜಲಿಕಾಸ್ತಮಂ ಭಯಂ
ಕರತರಮಾಗೆ ಕೊಂಡು ವಿಧಿಯಿಂದಭಿಮಂತ್ರಿಸಿ ಪೂಡೆ ಬಿಲ್ಗೊಳು | ರ್ವರೆ ನಡುಗಿತ್ತಜಾಂಡಮೊಡೆದತ್ತು ತೆಲಂ ಪಿಡುಗಿತ್ತು ಸಪ್ತಸಾ |
ಗರಮುಡುಗಿತ್ತು ಸಾಹಸಮಂ ಪಿರಿದೋ ಕದನತ್ರಿಣೇತ್ರನಾ || ೨೧೨ ನಿಲ್ಲಿಸಬೇಕೆಂದೇ ಕೃಷ್ಣನ ಎದೆಯನ್ನು ಸೀಳಿಹೋಗುವ ಹಾಗೆ ಹೊಡೆದು ಕೋಪವು ಅಧಿಕವಾಗುತ್ತಿರಲು ಅರ್ಜುನನ ಬಿಲ್ಲಿನ ಹೆದೆಯನ್ನು ಕತ್ತರಿಸಿದನು. ೨೧೦. ಪ್ರಕಾಶಮಾನವಾದ ದೀಪಗಳ ಕಾಂತಿಯು ಆರಿಹೋಗುವ ಕಾಲದಲ್ಲಿ ಹೆಚ್ಚಾಗಿ ಜ್ವಲಿಸುವ ಹಾಗೆ ಸೂರ್ಯಪುತ್ರನಾದ ಕರ್ಣನು ಮುಳುಗುವ (ಸಾಯುವ) ಕಾಲದಲ್ಲಿ ತೇಜಸ್ಸು ಪ್ರಜ್ವಲಿಸಲು ತಳತಳನೆ ಪ್ರಕಾಶಿಸಿದನು. ವ|| ಹಾಗೆ ಕರ್ಣನ ಹರಿತವಾದ ಬಾಣದ ಪೆಟ್ಟಿನಿಂದ ಕೃಷ್ಣನು ಸಾಯುವಷ್ಟು ನೊಂದು ೨೧೧. ಚಾವುಟಿಯನ್ನೆಸೆದು ಚಕ್ರಾಯುಧವನ್ನಭಿಮಂತ್ರಿಸಿ ಕೃಷ್ಣನು ಎಸೆಯುವಾಗ ಅರ್ಜುನನು ಅದನ್ನು ತಡೆದು ಬೇರೊಂದು ಹೆದೆಯಿಂದ ಬಿಲ್ಲನ್ನು ಕಟ್ಟಿ ಮೂರುಲೋಕಗಳು ನಡುಗುವ ಹಾಗೆ ವ|| ಮೊದಲು ಇಂದ್ರಕೀಲಪರ್ವತದಲ್ಲಿ ಈಶ್ವರನನ್ನು ಪೂಜಿಸಿ ಪಾಶುಪತಾಸ್ತ್ರವನ್ನು ಪಡೆದ ದಿನ ಬಳುವಳಿಯೆಂದು ೨೧೨. ಪಾರ್ವತಿಯು ಪ್ರೀತಿಯಿಂದ ಕೊಟ್ಟ ಪರಿತವಾದ ಅಂಜಲಿಕಾಸ್ತವನ್ನು ಭಯವುಂಟಾಗುವ ಹಾಗೆ ಕೈಗೆ ತೆಗೆದುಕೊಂಡು ಶಾಸ್ತರೀತಿಯಿಂದ ಅಭಿಮಂತ್ರಣ ಮಾಡಿ (ಮಂತ್ರಾಧಿ ದೇವತೆಯನ್ನು ಆಹ್ವಾನಿಸಿ) ಬಿಲ್ಲಿನಲ್ಲಿ ಹೂಡಲು ಭೂಮಿಯು ಕಂಪಿಸಿತು, ಬ್ರಹ್ಮಾಂಡವು ಒಡೆಯಿತು, ನೆಲವು ಸಂಕೋಚವಾಯಿತು, ಏಳು ಸಮುದ್ರಗಳು ಬತ್ತಿಹೋದುವು. ಕದನತ್ರಿಣೇತ್ರನಾದ ಅರ್ಜುನನ ಸಾಹಸವು ಅತಿಮಹತ್ತರ ವಾದುದು. ವ|| ಆಗ ಸಮಸ್ತಲೋಕವೆಂಬ ಮನೆಯನ್ನು ನಾಶಮಾಡುವ ಅಂಜಲಿಕಾಸ್ತವನ್ನು ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಕರ್ಣನನ್ನು ಕೊಲ್ಲಲು ಯೋಚಿಸಿ ಕಿವಿಯವರೆಗೂ ಸೆಳೆದು ಕತ್ತಿನ ಸಂದಿಯನ್ನು ನಿರೀಕ್ಷಿಸಿ
Page #637
--------------------------------------------------------------------------
________________
೬೩೨ಪಂಪಭಾರತಂ
ವ|| ಆಗಳಖಿಳಭುವನಭವನಸಂಹಾರಕಮಷಂಜಲಿಕಾಸ್ತಮನಮೋಘಾಸ್ತ್ರ ಧನಂಜಯನಾ ಕರ್ಣಾಂತಂಬರಂ ತೆಗೆದಾಕರ್ಣಾಂತಂ ಮಾಡಲ್ ಬಗೆದು ಕಂಧರಸಂಧಿಯಂ ನಿಟ್ಟಿಸಿ
ಮII ಸll ಮುಳಿದೆಚ್ಚಾಗಳ ಮಹೋಗ್ರಪ್ರಳಯಶಿಖಿ ಶಿಖಾನೀಕಮಂ ವಿಸ್ಕುಲಿಂಗಂ
ಗಳುಮಂ ಬೀಳುತ್ತುಮೌರ್ವಜ್ಜಳನರುಚಿಯುಮಂ ತಾನೆ ತೋಜುತ್ತುಮಾಟಂ | ದಳುರುತ್ತುಂ ಬಂದು ಕೊಂಡಾಗಳೆ ಗಗನತಳಂ ಪಾಯ್ದ ಕೆನ್ನೆತ್ತರಿಂದು ಚಳಿಸುತ್ತಿರ್ಪನ್ನೆಗಂ ಬಿಟ್ಟುದು ಭರದ ಸಿಡಿಲ್ಲ ಕರ್ಣೋತ್ತಮಾಂಗಂ || ೨೧೩
ವlt ಅಂತು ತಲೆ ನೆಲದೊಳುರುಳೊಡೆ ಲೋಕಕ್ಕೆಲ್ಲಮಗುಂದಲೆಯಾದ ಬೀರಮೆಸೆಯ ಪ್ರಾಣದೊಡಲಿಂದಂ ತೊಲಗೆಯುಂ ತೊಲಗದ ನನ್ನಿಯನುದಾಹರಿಸುವಂತೆ ಪತ್ತೆಂಟು ಕೋಲ ನೆಚ್ಚಟ್ಟೆಯುಂ ನೆಲದೊಳಾಚಂದ್ರಸ್ಥಾಯಿಯಾಗೆ ಚತುರ್ದಶಭುವನಂಗಳಂ ಪಸರಿಸಿ ನಿಂದೊಡನೆ ದುದಾಹರಣಯೊಳಿನುದಾಹರಣಮುಮಾಗೆ ಗುಣಾರ್ಣವನ ಶರಪರಿಣತಿಯಿಂದ ಕುಲಶೈಲಂ ಬೀಟ್ಟಂತೆ ನೆಲನದಿರೆ ಬಿಲ್ಲಾಗಳ
ಕಂ11
ಚಾಗದ ನನ್ನಿಯ ಕಲಿತನ ದಾಗರಮನೆ ನಗಲ್ಲ ಕರ್ಣನೊಡಲಿಂದೆಂತುಂ | ಪೊಗಲ್ಯತೆಯದೆ ಸಿರಿ ಕರ ಮಾಗಳ್ ಕರಿಕರ್ಣತಾಳ ಸಂಚಳೆಯಾದಳ್ ||
* ೨೧೪
೨೧೩. ಕೋಪದಿಂದ ಹೊಡೆಯಲು ಮಹಾಭಯಂಕರವಾದ ಪ್ರಳಯಕಾಲದ ಅಗ್ನಿಯ ಜ್ವಾಲಾಸಮೂಹವನ್ನೂ ಕಿಡಿಗಳನ್ನೂ ಕೆದರುತ್ತ ಬಡಬಾಗ್ನಿಯ ಕಾಂತಿಯನ್ನು ತಾನೇ ಪ್ರದರ್ಶಿಸುತ್ತ ಮೇಲೆ ಬಿದ್ದು ಹರಡುತ್ತ ಬಂದು ತಗಲಿದಾಗ ಚಿಮ್ಮಿದ ಕೆಂಪುರಕ್ತವು ಆಕಾಶಪ್ರದೇಶವನ್ನೂ ದಾಟಿ ಮೇಲಕ್ಕೆ ಹಾರುತ್ತಿರಲು ಕರ್ಣನ ತಲೆಯು ರಭಸದಿಂದ ಸಿಡಿದು ಆ ಕಡೆ ಬಿದ್ದಿತು. ವll ಹಾಗೆ ತಲೆಯು ಭೂಮಿಯಲ್ಲಿ ಉರುಳಲು ಲೋಕಕ್ಕೆಲ್ಲ ವೀರ್ಯವು ಪ್ರಕಾಶಿಸಲು ಪ್ರಾಣವು ಶರೀರದಿಂದ ಹೋದರೂ ಸತ್ಯವು ಮಾತ್ರ ಹೋಗದಿರುವುದನ್ನು ಉದಹರಿಸುವಂತೆ ಅವನ ಕೀರ್ತಿಯು ಹದಿನಾಲ್ಕು ಲೋಕಗಳನ್ನೂ ಆವರಿಸಿ ಚಂದ್ರನಿರುವವರೆಗೂ ನಿಲ್ಲುವಂತೆ ಅವನ ಮುಂಡವು ಪತ್ತೆಂಟು ಬಾಣಗಳನ್ನು ಹೊಡೆದು ದೃಢವಾಗಿ ನಿಂತಿತು. ಪ್ರಕಾಶಮಾನವಾಗಿ ನಿಂತಿತು. ಪ್ರಕಾಶಮಾನವಾದ ಆ ತಲೆಯನ್ನು ಅಪಹರಣಮಾಡಿದುದು ಒಳ್ಳೆಯತನದ ಮಾರ್ಗದರ್ಶನವಾಗಲು ಅರ್ಜುನನ ಬಾಣಕೌಶಲ್ಯದಿಂದ ಮುಂಡವೂ ಕುಲಪರ್ವತವು ಬೀಳುವ ಹಾಗೆ ಭೂಮಿಯು ಕಂಪಿಸುವ ಹಾಗೆ ಬಿದ್ದಿತು. ೨೧೪. ತ್ಯಾಗ ಸತ್ಯ ಪರಾಕ್ರಮಗಳಿಗೆ ಆವಾಸಸ್ಥಾನವೆಂದು ಪ್ರಸಿದ್ಧವಾಗಿದ್ದ ಕರ್ಣನ ಶರೀರದಿಂದ ಹೇಗೂ ಬಿಟ್ಟು ಹೋಗುವುದಕ್ಕೆ ತಿಳಿಯದೆ ಲಕ್ಷ್ಮಿಯು ಆಗ ಆನೆಯ ಚಲಿಸುತ್ತಿರುವ ಕಿವಿಗಳಂತೆ
Page #638
--------------------------------------------------------------------------
________________
ದ್ವಾದಶಾಶ್ವಾಸಂ | ೬೩೩ ಕುಡುಮಿಂಚಿನ ಸಿಡಿಲುರುಳಿಯೋ ಟೊಡಂಬಡಂ ಪಡೆಯ ಕರ್ಣನೊಡಲಿಂದಾಗಳ್ | ನಡೆ ನೋಡೆ ನೋಡೆ ದಿನಪನೊ ಳೊಡಗೂಡಿದುದೊಂದು ಮೂರ್ತಿ ತೇಜೋರೂಪಂ |
೨೧.
೨೧೬
ಪಿಡಿದರೆ ಪುರಿಗನಯನರ ಸ್ಟುಡಿದನೆ ಬದನೆ ತಾನೆ ತನ್ನನೆ ಚಲಮಂ | ಪಿಡಿದಟಿದನೆಂದು ದೇವರ
ಪಡೆ ಗಡಣದ ಪೂಗುದಿನತನೂಜನ ಗಂಡಂ | ೨೧೬ ಚಂti ನೆನೆಯದಿರಣ ಭಾರತದೊಳಿಂ ಪರಾರುಮನೊಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ ಕರ್ಣನೋಳಾ ದೊರೆ ಕರ್ಣನೇಟು ಕ || ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮಂದು ಕ ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ಲೆ ಭಾರತಂ || ೨೧೭
ವ|| ಅಂತು ರಿಪುಕುರಂಗಕಂಠೀರವನ ಕೆಯ್ಯೋಳ್ ವೈಕರ್ತನಂ ಸಾಯಲೊಡು ಮೇಲುದು ಬೀಸಿ ಬೊಬ್ಬಿಟಿದಾರ್ವ ಪಾಂಡವಪತಾಕಿನಿಯೊಲ್ಕಂ|| ಬದ್ದವಣದ ಪಣಿಗಳ ಕಿವಿ
ಸದಂಗಿಡ ಮೋದಿಗೆ ದೇವದುಂದುಭಿರವದೂಂ | ದುದ್ಧಾನಿ ನೆಗತಿ ಮುಗುಳಲ * ರೊದ್ದ ಕರಂ ಸಿದ್ದಮಾದುದಂಬರತಲದೊಳ್
១og
ಚಂಚಲೆಯಾದಳು, ೨೧೫. ಕುಡಿಮಿಂಚಿನಿಂದ ಕೂಡಿದ ಸಿಡಿಲಿನ ಉಂಡೆಯ ತೇಜಸ್ಸಿನ ರೂಪವನ್ನು ಹೋಲುವ ಆಕಾರವೊಂದು ನೋಡುತ್ತಿರುವ ಹಾಗೆಯೇ ಕರ್ಣನ ಶರೀರದಿಂದ (ಹೊರಟು) ಸೂರ್ಯನಲ್ಲಿ ಐಕ್ಯವಾಯಿತು. ೨೧೬. “ದಿವ್ಯಾಸವನ್ನು ಹಿಡಿದನೆ? ಎರಡು ಮಾತನ್ನಾಡಿದನೇ ? ಭಯಪಟ್ಟನೆ? ತಾನೆ ತನ್ನ ಹಟವನ್ನು ಬಿಗಿಯಾಗಿ ಹಿಡಿದು ಸತ್ತನು' ಎಂದು ದೇವತೆಗಳ ಸಮೂಹವು ಕರ್ಣನ ಪೌರುಷವನ್ನು ಹೊಗಳಿತು. ೨೧೭. ಅಣ್ಣಾ ಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡ; ಒಂದೇ ಮನಸ್ಸಿನಿಂದ ನೆನೆಯುವುದಾದರೆ ಕರ್ಣನನ್ನು ಜ್ಞಾಪಿಸಿಕೊಳ್ಳಪ್ಪ; ಕರ್ಣನಿಗೆ ಯಾರು ಸಮಾನ? ಕರ್ಣನ ಪರಾಕ್ರಮ, (ಯುದ್ದ, ಕರ್ಣನ ವಿಶೇಷವಾದ ಸತ್ಯ, ಕರ್ಣನ ಪೌರುಷ, ಪ್ರಸಿದ್ದವಾದ ಕರ್ಣನ ತ್ಯಾಗ ಎಂದು ಕರ್ಣನ ಮಾತಿನಿಂದಲೇ ತುಂಬಿ ಭಾರತವು ಕರ್ಣರಸಾಯನವಾಗಿದೆಯಲ್ಲವೇ? ವ|ಹಾಗೆ ರಿಪುಕುರಂಗಕಂಠೀರವನಾದ ಅರ್ಜುನನ ಕಯ್ಯಲ್ಲಿ ಕರ್ಣನು ಸಾಯಲು ಉತ್ತರೀಯವನ್ನು ಬೀಸಿ (ಸಂತೋಷಸೂಚಕವಾಗಿ) ಆರ್ಭಟಮಾಡಿ ಪಾಂಡವಸೈನ್ಯವು ಜಯಶಬ್ದಮಾಡಿತು. ೨೧೮. ಮಂಗಳವಾದ್ಯಗಳು ಭೋರ್ಗರೆದುವು. ಕಿಪಿ ಕಿವುಡಾಗುವಂತೆ ಜಯಭೇರಿಗಳು ಮೊಳಗಿದುವು. ದೇವದುಂದುಭಿಯೊಡನೆ
Page #639
--------------------------------------------------------------------------
________________
೬೩೪ (ಪಂಪಭಾರತಂ ಚಂಗ ಒದವಿದಲಂಪು ಕಣ್ಣೆವೆ ಕರುಳ ತನಗೆಂಬುದನುಂಟುಮಾಡೆ ನೋ
ಡಿದುದ ಕಳಮೆವಡುತ್ತಿರೆ ಪೋ ಪಸವೋಡಿತಂದು ನೀ | ರದಪಥದೊಳ್ ತಗುಳರಿಗನಂ ಪೊಗಾಡಿದನಂದು ದಂಡಕಾ ಪ್ರದ ತುದಿಯೊಳ್ ಪಳಂಚಲೆಯೆ ಕೇವಣವಂ ಗುಡಿಗಟ್ಟ ನಾರದಂ | ೨೧೯
ವ || ಆಗಳ್ಕಂ| ಪಬಯಿಗೆಯನುಡುಗಿ ರಥಮಂ
ಪಂವನನೆಸಗಿವೇಚ್ಚು ಸುತಶೋಕದ ಪೊಂ | ಪುಟಿಯೊಳ್ ಮಯ್ಯಲಿಯದೆ ನೀ ರಿತಿವಂತವೊಲಿಟಿದನಪರಜಳಧಿಗೆ ದಿನಪು !
೨೨೦ ವ|| ಆಗಳ್ ಕರ್ಣನ ಬಳೆವಣಿಯನೆ ತನ್ನ ಪೋಪುದನಭಿನಯಿಸುವಂತ ಶೋಕೊದ್ರೇಕದೊಳ್ ಮಯ್ಯಲಿಯದ ಕನಕರಥದೊಳ್ ಮಯ್ಯನೀಡಾಡಿ ನಾಡಾಡಿಯಲ್ಲದೆ ಮೂರ್ಛವೋದ ದುರ್ಯೋಧನನನಶ್ವತ್ಥಾಮ ಕೃಪ ಕೃತವರ್ಮ ಶಕುನಿಯರ್ ನಿಜ ನಿವಾಸಕೊಡಗೊಂಡು ಪೋದರಾಗಲ್
ಚಂ
ಸುರಿವಜರಪ್ರಸೂನರಜದಿಂ ಕವಿಲಾದ ಶಿರೋರುಹಂ ರಜಂ ಬೋರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರೋ | ಇರಕೆಯನಾಂತು ಕರ್ಣಹತಿಯೋಳ್ ತನಗಣನೀಯ ಬಂದನಂ ದರಮನೆಗಚ್ಚುತಂಬೆರಸಳುರ್ಕೆಯಿನಮ್ಮನ ಗಂಧವಾರಣಂ |
ಪುಷ್ಪವೃಷ್ಟಿಗೆ ಹೂವಿನ ಮೊಗ್ಗುಗಳು ಸಿದ್ದವಾದವು. ೨೧೯. ಕರ್ಣಾರ್ಜುನರ ಕಾಳಗವನ್ನು ನೋಡುವುದರಿಂದ ನನಗೆ ಕಣ್ಣೂ ಕರುಳೂ ಇದೆ ಎಂಬ ಭಾವವನ್ನುಂಟುಮಾಡಿ ಬಹಳ ಕಾಲದಿಂದ ನೋಡಬೇಕೆಂದಿದ್ದ ನನ್ನ ಕ್ಷಾಮವೂ ತೊಲಗಿತು, ಕರುಳಿಗೆ ಆನಂದವೂ ಉಂಟಾಯಿತು ಎಂದು ಆಕಾಶದಲ್ಲಿ ಅರ್ಜುನನನ್ನು ಹೊಗಳುತ್ತ ತನ್ನ ದಂಡದಂತಿರುವ ಕೋಲಿನ ತುದಿಗೆ ಕೋಪೀನವನ್ನು ಸೇರಿಸಿಕೊಂಡು ಬಾವುಟದಂತೆ ಅಲುಗಿಸುತ್ತ ನಾರದನು ಕುಣಿದಾಡಿದನು. ವ|| ಆಗ ೨೨೦. ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ ಪುತ್ರಶೋಕದ ಆಧಿಕ್ಯದಲ್ಲಿ ಸೂರ್ಯನು ಜ್ಞಾನಶೂನ್ಯನಾಗಿ (ಸತ್ತವರಿಗೆ) ಸ್ನಾನಮಾಡುವ ಹಾಗೆ ಪಶ್ಚಿಮಸಮುದ್ರಕ್ಕೆ ಇಳಿದನು. (ಆಸ್ತಮಯವಾದನು) ವ|| ಆಗ ಕರ್ಣನ ದಾರಿಯಲ್ಲಿಯೇ ತಾನೂ ಹೋಗುವುದನ್ನು ಅಭಿನಯಿಸುವಂತೆ ದುಃಖದ ಆಧಿಕ್ಯದಿಂದ ಜ್ಞಾನಶೂನ್ಯನಾಗಿ ಚಿನ್ನದ ತೇರಿನಲ್ಲಿಯೇ ಶರೀರವನ್ನು ಚಾಚಿ ಅಸಾಧಾರಣ ರೀತಿಯಲ್ಲಿ ಮೂರ್ಛ ಹೋಗಿದ್ದ ದುರ್ಯೋಧನನನ್ನು ಅಶ್ವತ್ಥಾಮ, ಕೃಪ, ಕೃತವರ್ಮ, ಶಕುನಿಯರು ತಮ್ಮ ವಾಸಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋದರು. ಆಗ ೨೨೧. ದೇವತೆಗಳು ಸುರಿಯುತ್ತಿರುವ ಹೂವುಗಳ ಪರಾಗದಿಂದ ಕಪಿಲಬಣ್ಣವಾದ ಕೂದಲು, ಪರಾಗದಿಂದ ಮುಚ್ಚಲ್ಪಟ್ಟ
Page #640
--------------------------------------------------------------------------
________________
ಟ
ದ್ವಾದಶಾಶ್ವಾಸಂ |೬೩೫
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ದ್ವಾದಶಾಶ್ವಾಸಂ
ದುಂಬಿಗಳ ಸಮೂಹದಿಂದ ಕೂಡಿದ ಹೂವಿನ ಮಾಲೆಯನ್ನೇ ಹೋಲುತ್ತಿರಲು, ಬ್ರಹ್ಮಮತ್ತು ರುದ್ರರ ಒಳ್ಳೆಯ ಆಶೀರ್ವಾದವನ್ನು ಪಡೆದು ಕರ್ಣನ ನಾಶವು ತನಗೆ ಆನಂದವನ್ನುಂಟುಮಾಡುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು ಕೃಷ್ಣನೊಡಗೂಡಿ ಆ ದಿನ ಅತಿಶಯದಿಂದ ಅರಮನೆಗೆ ಬಂದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹನ್ನೆರಡನೆಯ ಆಶ್ವಾಸ.
Page #641
--------------------------------------------------------------------------
________________
ಕ೦ll
ತ್ರಯೋದಶಾಶ್ವಾಸಂ .. ಶ್ರೀ ದಯಿತನ ಹರಿಗನ ಸಂ ಪಾದಿತ ಭುಜವೀರ್ಯಮಹಂ ತನಗೆರ್ದಯೊಳ್ | ಚೋದಿಸೆ ಪರಸಿದನಾಶೀ ರ್ವಾದಪರಂಪರೆಯಿನಾಗಳಂತಕತನಯಂ ||
ಪರಸಿ ಸಕಳಾವನೀತಳ ಭರಮಿನಸುತನದಿಯ ಹರಿಗನಿಂದನಗೀಗಲ್ | ದೊರೆಕೊಂಡುದೆಂದೂಡೇ ಬಿ.
ತರಿಸಿದನೋ ರಿಪುಕುರಂಗಕಂಠೀರವನಂ | ವ|| ಅನ್ನೆಗಮ ದುರ್ಯೋಧನನ ಸಂಭ್ರಮಾಕುಳಿತ ಪರೀತ ಪರಿವಾರಜನೋಪವೀತ ಚಂದನಕರ್ಪೂರಮಿಶ್ರಿತ ಹಿಮಶಿಶಿರಧಾರಾಪರಿಷೇಕದಿಂದೆಂತಾನುಂ ಮೂರ್ಛಯಿಂದತ್ತು ಕರ್ಣನಂ ನೆನೆದು ಸ್ಮರಣಮಾತ್ರದೊಳೆ ಶೋಕಸಾಗರಂ ಕರೆಗಣ್ಮ ಸೈರಿಸಲಾಗಿದೆ~ ಉ|| ನೀನುಮಗಲ್ಲೆಯಿನ್ನನಗೆ ಪೇಯ್ ಪೆರಾರೆನಗಾಸೆ ನಿನ್ನನಿ
ನಾನುಮಗನೇ ಕಳೆಯ ಬೆನ್ನನೆ ಬಂದಪೆನಾಂತರಂ ಯಮ | ಸ್ಥಾನಮನೆಬ್ಬಿಸುತ್ತಿದುವೆ ದಂದುಗಮಂತರ್ದಮುಟ್ಟಿ ಕೂರ್ತು ಪೇಯ್ ಮಾನಸವಾಲನಂಗವಿಷಯಾಧಿಪ ನೀಂ ಪೊಅಗಾಗೆ ಬಾಳ್ವನೇ || ೩
೧. ಜಯಲಕ್ಷ್ಮೀಪತಿಯಾದ ಅರ್ಜುನನು ಸಂಪಾದಿಸಿದ ಭುಜವೀರ್ಯವು ತನ್ನ ಹೃದಯದಲ್ಲಿ ಸಂತೋಷವನ್ನು ಹೆಚ್ಚಿಸುತ್ತಿರಲು ಧರ್ಮರಾಯನು ಆಗ ಅವನನ್ನು ಹರಕೆಯ ಪರಂಪರೆಯಿಂದ ಆಶೀರ್ವದಿಸಿದನು. ೨. ಅರ್ಜುನನಿಂದ ಕರ್ಣನು ಸಾಯಲು ಸಮಸ್ತ ಭೂಮಂಡಲದ ಆಧಿಪತ್ಯವು ತನಗೆ ಈಗ ದೊರೆಕೊಂಡಿತಂದು ಹೇಳಿ ಧರ್ಮರಾಯನು ಅರ್ಜುನನನ್ನು ವಿಶೇಷವಾಗಿ ಹೊಗಳಿದನು! ವ|ಅಷ್ಟರಲ್ಲಿ ಆ ಕಡೆ ದುರ್ಯೊಧನನು ತನ್ನನ್ನು ಸುತ್ತುವರಿದಿದ್ದು ಅತ್ಯಂತ ಸಂಭ್ರಮದಿಂದ ವ್ಯಾಕುಳಿತರಾದ ಸೇವಕಜನರಿಂದ ತರಲ್ಪಟ್ಟ ಶ್ರೀಗಂಧ ಮತ್ತು ಪಚ್ಚಕರ್ಪೂರ ಮಿಶ್ರಿತವಾದ ಮಂಜಿನಷ್ಟು ತಣ್ಣಗಿರುವ ನೀರಿನಿಂದ ಸಿಂಪಿಸಲ್ಪಟ್ಟು ಹೇಗೋ ಮೂರ್ಛಿಯಿಂದ ಎಚ್ಚೆತ್ತನು. ಕರ್ಣನನ್ನು ಜ್ಞಾಪಿಸಿಕೊಂಡು ನೆನೆಸಿದ ಮಾತ್ರಕ್ಕೆ ದುಃಖಸಮುದ್ರವು ದಡವನ್ನು ಮೀರಿ ಉಕ್ಕಲು ಸೈರಿಸಲಾರದೆ ೩. ನೀನು ಕೂಡ ನನ್ನನ್ನು ಅಗಲಿ ಹೋದೆ. ನನಗೆ ಆಸೆಯಾಗಿರುವವರು ಬೇರೆ ಯಾರು? ನಿನ್ನನ್ನು ಬಿಟ್ಟು ನಾನು ಇರಬಲ್ಲೆನೆ ? ಸ್ನೇಹಿತನೇ ಪ್ರತಿಭಟಿಸಿದವರನ್ನು ಯಮನ ಮನೆಗೆ ಸೇರಿಸುತ್ತ ನಿನ್ನ ಬೆನ್ನಿನ ಹಿಂದೆಯೇ ಬರುತ್ತೇನೆ, ಇದೇ ನನಗಿರುವ ಕರ್ತವ್ಯ. ಹೃದಯದಂತರಾಳದಿಂದ ಪ್ರೀತಿಸಿದ ನೀನು ಅಗಲಿದ ಮೇಲೆ ಕರ್ಣ, ನಾನು ಮನುಷ್ಯ
Page #642
--------------------------------------------------------------------------
________________
ತ್ರಯೋದಶಾಶ್ವಾಸಂ | ೬೩೭ ಚಂth ಒಡಲೆರಡೊಂದೆ ಜೀವಮಿವರ್ಗಂಬುದನೆಂಬುದು ಲೋಕಮೀಗಳಾ
ನುಡಿ ಪುಸಿಯಾಯ್ತು ನಿನ್ನಸು ಕಿರೀಟಿಯ ಶಾತಶರಂಗಳಿಂದ ಪೋ | ಪೊಡಮನಗಿನ್ನುಮಿಯೊಡಲೊಳಿರ್ದುದು ನಾಣಿಲಿ ಜೀವಮಂದೂಡಾ
ವೆಡೆಯೊಳೆ ನಿನ್ನೊಳನ್ನ ಕಡುಗೂರ್ಮೆಯುಮಟ್ಕಲುಮಂಗವಲ್ಲಭಾ || ೪ ಮll ಅಡಿಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನಾ
ನವಂ ಮುನ್ನಡೆದಿರ್ದುಮೆನ್ನರಸನಾನೇಕಿತ್ತೆನಿಲ್ಲೇಕೆ ಪೇ ಬಲಿಪಿಲೆನುಮಿಲ ಕಾರ್ಯವಶದಿಂ ಕೂರ್ಪಂತವೂಲ್ ನಿನನಾಂ
ನೆತ ಕೊಂದಂ ಮುಳಿಸಿಂದಮಂಗನೃಪತೀ ಕೌಂತೇಯರೇಂ ಕೊಂದರೇ ೫ ಚಂ! ಉದಧಿತರಂಗತಾಟತಧರಾತಳಮಂ ನಿನಗಿತ್ತು ನಿನ್ನ ಕೊ
ಟ್ಟುದನೆ ಪಸಾದವೆಂದು ಪೊಡೆವಟ್ಟು ಮನೋಮುದದಿಂದ ಕೊಂಡು ಬಾ | ಊದುವ ಬಯಕ್ಕೆ ಮುಂ ನಿನಗದರ ಕಿಡಿಪಂದಲೆ ಕರ್ಣ ಕೇತುವಾ ದುದು ನಿನಗಾ ವೃಕೋದರನ ಕಾಯ್ಕನೆ ಪೊತ್ತಿಸಿದನ್ನ ಕಾಳಗಂ ೬
ವ|| ಎಂದು ಕರ್ಣನೊಳಾದ ಶೋಕಾನಲನೊಳ್ ಬಾಯಟಿದು ಮಣಿದು ಪಳಯಿಸುವ ನಿಜತನೂಜನ ಶೋಕಮನಾಳಸಲೆಂದು ಧೃತರಾಷ್ಟ್ರನುಂ ಗಾಂಧಾರಿಯುಂ ಬರವರೆ ಬರವಂ ಗಂಟಲೊಳ್ ಕಂಡು ದುಶ್ಯಾಸನನ ಸಾವು ನೆನೆದು ತಾಯ್ತಂದೆಯ ಮೊಗಮಂ ನೋಡಲ್ ನಾಣ್ಯ
ಜೀವನವನ್ನು ಬಾಳಬಲ್ಲೆನೆ ? ೪. ದುರ್ಯೊಧನ ಕರ್ಣರಲ್ಲಿ ಎರಡು ಶರೀರ ಒಂದು ಪ್ರಾಣ ಎಂದು ಲೋಕವು ಹೇಳುತ್ತಿದ್ದಿತು. ಈಗ ಆ ಮಾತು ಸುಳ್ಳಾಯಿತು, ನಿನ್ನ ಪ್ರಾಣವು ಅರ್ಜುನನ ಹರಿತವಾದ ಬಾಣಗಳಿಂದ ಹೋದರೂ ನನ್ನ ನಾಚಿಕೆಯಿಲ್ಲದ ಜೀವವು ಇನ್ನೂ ಶರೀರದಲ್ಲಿದೆ ಎಂದರೆ ಕರ್ಣ ನಿನ್ನ ನನ್ನ ಅತಿಶಯವಾದ ಪ್ರೀತಿಯೂ ಸ್ನೇಹವೂ ಆವೆಡೆಯಲ್ಲಿದೆ? ೫. ಧರ್ಮರಾಯನು ನೀನು ಅವನ ಜೊತೆಯಲ್ಲಿ ಹುಟ್ಟಿದವನೆಂಬುದನ್ನು ತಿಳಿಯನು. ಸಹಜವಾಗಿಯೇ ನೀನು ಯಾರೆಂಬುದನ್ನು ನಾನು ಬಲ್ಲೆ: ಮೊದಲು ತಿಳಿದಿದ್ದರೂ ನನ್ನ ದೊರೆತನವನ್ನು ನಾನು ನಿನಗೇಕೆ ಕೊಡಲಿಲ್ಲ ? ನಿನಗೆ ತಿಳಿಯಪಡಿಸುವುದಕ್ಕೂ ಇಷ್ಟಪಡಲಿಲ್ಲ? ಸ್ವಕಾರ್ಯಸಾಧನೆಗಾಗಿ ಪ್ರೀತಿಸುವ ಹಾಗೆ (ನಟಿಸಿ) ಪಾಂಡವರ ಮೇಲಿನ ಕೋಪದಿಂದ ನಿನ್ನನ್ನು ನಾನೇ ಕೊಂದೆನು. ಪಾಂಡವರು ನಿನ್ನನ್ನು ಕೊಂದರೇನು ? ೬. ಸಮುದ್ರದ ಅಲೆಗಳ ಹೊಡೆತವುಳ್ಳ ಈ ಭೂಮಂಡಲವನ್ನು ನಿನಗೆ ಕೊಟ್ಟು ನೀನು ಕೊಟ್ಟುದನ್ನೇ ಪ್ರಸಾದವೆಂದು ನಮಸ್ಕರಿಸಿ ಮನಸ್ಸಂತೋಷದಿಂದ ಸ್ವೀಕರಿಸಿ ಬಾಳಬೇಕೆಂಬುದೇ ನನ್ನ ಮೊದಲಿನ ಆಸೆ. ನನಗೆ ಅದನ್ನು ಕೆಡಿಸಬೇಕೆಂದೇ ಭೀಮನ ಕೋಪವನ್ನು ಹೆಚ್ಚಿಸಿದ ನನ್ನ ಯುದ್ಧವು ನಿನಗೆ (ನಾಶಮಾಡುವ) ಧೂಮಕೇತುವಾಯಿತು. ವ|| ಹೀಗೆ ದುಃಖ ಪಡುತ್ತಿದ್ದ ಮಗನ ದುಃಖವನ್ನು ಸಮಾಧಾನಪಡಿಸಬೇಕೆಂಬದು ಧೃತರಾಷ್ಟ್ರನೂ ಗಾಂಧಾರಿಯೂ ಬರುತ್ತಿರುವುದನ್ನು ದೂರದಿಂದಲೇ ತಿಳಿದು ದುಶ್ಯಾಸನನ ಸಾವನ್ನು ನೆನೆದು ತಾಯಿತಂದೆಗಳ ಬರವನ್ನು ನೋಡಲು ನಾಚಿ
Page #643
--------------------------------------------------------------------------
________________
೬೩೮ / ಪಂಪಭಾರತಂ ಕಂ|| ಆನುಂ ದುಶ್ಯಾಸನನುಂ
ಕಾನೀನನುಮೊಡನೆ ಪೋಗಿ ಬೀಳೊಂಡು ರಣ | ಸ್ಥಾನಕ್ಕೆ ಪೋದೆವಿಗು
ಬಂದಾಂ ನಾದಿವರ ಮೊಗಮಂ ನೋಟಿಂ || ಚಂ|| ಪವನಜನಂತು ಪೂಣ್ಣು ಯುವರಾಜನ ನೆತ್ತರನಾರ್ದು ಪೀರ್ದನಿಂ
ತವಗಡದಿಂ ದಿನೇಶಜನನಂಕದ ಗಾಂಡೀವಿ ಕೊಂದನೆಂತು ಪಾಂ | ಡವರನಿದಿರ್ಚಿ ಸಾಧಿಸುವೆ ಸಂಧಿಯನೊಲ್ವುದ ಕಜ್ಜಮೀಗಳೆಂ ಬವರ್ಗಳ ಮಾತುಗೇಳ್ವನಿತನಿನ್ನೆನಗಂ ಬಿದಿ ಮಾಡಿತಾಗದೇ 11 ಆ
ವಗ ಎಂಬೆನ್ನಗಮೆಮ್ಮೆ ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ ನಾದನನಿರ್ವರುಂ ಪರಸಿ ತಡವರಿಸಿಯುಂ ತೆಬರಿಸಿಯುಮಂಜಳಪಿಕೊಂಡಮತವರ್ಷಿ ಕರ ಪರಿಷೇಕದಿಂದ ಪುಷ್ಟರ್ಶನಮಾಪ್ಯಾಯನಕೋಟಿಯಾಗೆ ಪುಳಕಿತಗಾತ್ರರುಮಾನಂದ ಬಾಷ್ಪವಾರಿ ಧಾರಾಪರಿಕಲಿತನೇತ್ರರುಮಾಗಿ ಕಳೆದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ ಕೇಳಲೆಂದು ಮಹೀಭುಜನಿಂತೆಂದಂಮಗ ಎನಗಂ ಪಾಂಡುಗಮಿಲ್ಲ ಭೇದಮಳೆಯಂ ಪಚ್ಚಾಶ್ವಮಾ ಪಾಂಡುನಂ
ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತಂದೊಡಿಂ | ಮುನಿವೆ ಗಂಗೆಯ ಪರ್ಮಗಂಗೆ ಘಟಸಂಭೂತಂಗೆ ಕರ್ಣಂಗಸಾ
ಧ್ವನೊಳಾ ಗಾಂಡೀವಿಯೊಳ ಕಟುತ್ತಿದೆವರಾರಿಂ ಮಾಡುವ ಸಂಧಿಯಂ II೯ ೭. ನಾನೂ ದುಶ್ಯಾಸನನೂ ಕರ್ಣನೂ ಜೊತೆಯಲ್ಲಿ ಹೋಗಿ ಅಪ್ಪಣೆ ಪಡೆದು ಯುದ್ಧರಂಗಕ್ಕೆ ಹೋದೆವು. ಈಗ ನಾನು ಇನ್ನೇನೆಂದು ಹೇಳಿ ನಾಚದೆ ಇವರ ಮುಖವನ್ನು ನೋಡಲಿ ? ೮, ಭೀಮನು ಹಾಗೆ ಪ್ರತಿಜ್ಞೆ ಮಾಡಿ ಯುವರಾಜನ ರಕ್ತವನ್ನು ಆರ್ಭಟಮಾಡಿ ಕುಡಿದನು. ಹೀಗೆ ಸಾಹಸದಿಂದ ಕರ್ಣನನ್ನು ಶೂರನಾದ ಅರ್ಜುನನು ಕೊಂದನು. ಪಾಂಡವರನ್ನು ಹೇಗೆ ಎದುರಿಸಿ ಗೆಲ್ಲುತ್ತೀಯೇ? ಈಗ ಸಂಧಿಗೆ ಒಪ್ಪುವುದೇ (ಸರಿಯಾದ) ಕಾರ್ಯವೆಂದು ಹೇಳುವವರ ಮಾತನ್ನು ಕೇಳುವಷ್ಟನ್ನು ಇನ್ನು ನನಗೆ ವಿಧಿ ಮಾಡಿದೆಯಲ್ಲವೇ? ವ|| ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಾಯಿ ತಂದೆಗಳ ಪಾದಕ್ಕೆ ವಿನಯದಿಂದ ತಲೆಬಗ್ಗಿಸಿ ನಮಸ್ಕಾರಮಾಡಿದವನನ್ನು ಇಬ್ಬರೂ ಹರಸಿದರು. ಮೈಯನ್ನು ಮುಟ್ಟಿನೋಡಿಯೂ ಸಮಾಧಾನಮಾಡಿಯೂ ಪ್ರೀತಿಯಿಂದ ಆಲಿಂಗನಮಾಡಿಕೊಂಡರು. ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಶವು ಹೆಚ್ಚಿನ ಸಂತೋಷವನ್ನುಂಟುಮಾಡಿತು. ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ ಕಣ್ಣೀರಿನ ಪ್ರವಾಹದಿಂದ ತುಂಬಿದ ಕಣ್ಣುಳ್ಳವರೂ ಆದರೂ ಸ್ವಲ್ಪ ಕಾಲವಿದ್ದು ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ಧೃತರಾಷ್ಟ್ರನು ಹೀಗೆಂದನು. ೯. ನನಗೂ ಪಾಂಡುವಿಗೂ ಭೇದವಿಲ್ಲ: ರಾಜ್ಯವನ್ನು ಭಾಗಮಾಡಿಕೊಂಡು ಆಳೋಣ. ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿ ನಡೆದುಕೊಳ್ಳುವವರೇ ಆಗಿದ್ದಾರೆ. ಈ ಜಗಳವೂ ನಿನ್ನಿಂದ ಆಯಿತು ಎಂದರೆ ಇನ್ನು ನೀನು ಕೋಪಿಸಿಕೊಳ್ಳುತ್ತೀಯೆ. ಭೀಷ್ಮದ್ರೋಣ
Page #644
--------------------------------------------------------------------------
________________
ತ್ರಯೋದಶಾಶ್ವಾಸಂ | ೬೩೯ ಹರಿಣಿ | ಪಗೆಗೆ ಕಣಿಯೊಂದುಂಟೇ ನಣ್ಣಂಗಮಾಗರಮುಂಟೆ ನೀರಿ
ಬಗೆಯ ಪಗೆಯುಂ ನಣ್ಣುಂ ಕೆಯ್ಯೋಂಡ ಕಜ್ಯದಿನ ಪು | ಟ್ಟುಗುಮರಸುಗಳೆಂದೀ ಸಂದರ್ಥಶಾಸ್ತ್ರದೊಳೇಕೆ ಪೇಯ್ ಮಗನೆ ನೆಗ ಕಾರ್ಯಂ ಮಿತ್ರಾದಿ ಕಾರಕಮೆಂಬುದಂ || ೧೦ ಕಂ! ನೀನುಳೊಡಲ್ಲರೊಳರೆಮ
ಗೇನುಮಲ್ ಮನದೊಳಿಲ್ಲದಂತೆನೆ ಮಗನೇ || ಭಾನುವೆ ಸಾಲದೆ ಪಗಲೆನಿ ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ 11
. ?
ವಗ ಅದಲ್ಲದೆಯುಂ ಪಾಂಡವರಪೊಡೆನಗೆ ಪಾಂಡುರಾಜಂಗೆ ಬೆಸಕೆಯ್ಯದುದನೆ ಬೆಸಕೆಯ್ಯರೆಂದುದಂ ಮೀಜುವರಲ್ಲರವರನಾನೆಂತುಮೊಡಂಬಡಿಸಿ ನೀನೆಂದುದನೆನಿಸುವನಿದರ್ಕೆ ಮಾರ್ಕೊಳ್ಳದೊಡಂಬಡು ನಿನ್ನ ಕೆಯ್ಯನೊಡ್ಡಿ ಬೇಡಿದಪ್ಪೆನೆಂದ ಧೃತರಾಷ್ಟ್ರನ ನುಡಿಗನುಬಲವಾಗಿ ಗಾಂಧಾರಿಯಂತೆಂದಳಚಂll ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ
ಧುರಮೆ ಕುತ್ತು ಪಾಯ ಪಡಲಿಟ್ಟಿಲಾದುದು ಪುಣ್ಯದೊಂದು ಪ | ರ್ಮರನುಟಿವಂತ ನೀನುಟಿದೆಯನ್ನಿವರುಮಿಲ್ಲ ಮುತ್ತರುಂ .
ಕುರುಡರುಮನ್ನದಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್ ll೧೨ ಕರ್ಣರಿಗೆ ಅಸಾಧ್ಯವಾದ ಆ ಅರ್ಜುನನನ್ನು ಕೋಪದಿಂದ ಎದುರಿಸಿ ಯುದ್ದ ಮಾಡುವವರಾರಿದ್ದಾರೆ? ಇನ್ನು ಸಂಧಿಯನ್ನು ಅವರೊಂದಿಗೆ ಮಾಡಿಕೊಳ್ಳೋಣ. ೧೦. ಹಗೆತನಕ್ಕೆ ಒಂದು ಗಣಿಯಿದೆಯೇನು ? ಸ್ನೇಹಕ್ಕೆ ಒಂದು ಮನೆಯಿದೆಯೇನು? ನೀನು ಯೋಚಿಸಪ್ಪ; ರಾಗದ್ವೇಷಗಳೆರಡೂ ಅವರು ಅಂಗೀಕರಿಸುವ ಕಾರ್ಯ ದಿಂದಲ್ಲವೇ ಹುಟ್ಟುವುದು ? ರಾಜರಿಗೆ ವಿಶೇಷ ಸತ್ಯವಾಗಿರುವ ಅರ್ಥಶಾಸ್ತ್ರದಲ್ಲಿ ಹೇಳಿರುವ 'ಕಾರ್ಯವೇ ಸ್ನೇಹದ್ವೇಷಗಳಿಗೆ ಕಾರಣವಾದುದು' ಎಂಬ ಈ ನೀತಿವಾಕ್ಯದಂತೇಕೆ ಮಾಡುವುದಿಲ್ಲ? ೧೧. ಮಗನೆ ನಮಗೆ ನೀನಿದ್ದರೆ ಎಲ್ಲರೂ ಇದ್ದಂತೆಯೇ, ಮಗನೆ ನಮಗೆ ಮನಸ್ಸಿನಲ್ಲಿ ಯಾವ ದುಃಖವೂ ಇಲ್ಲ; ಹೇಗೆಂದರೆ ಹಗಲಿನಲ್ಲಿ ಒಬ್ಬ ಸೂರ್ಯನಿದ್ದರೆ ಸಾಲದೇ ? ಎಷ್ಟೋ ದೀವಿಗೆಗಳು ಉರಿದರೇನು, ಆರಿಹೋದರೇನು? ವl ಹಾಗಲ್ಲದೆಯೂ ಪಾಂಡವರಾದರೆ ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಮೀರುವವರಲ್ಲ. ಅವರನ್ನು ನಾನು ಹೇಗೆ ಒಪ್ಪಿಸಿ ನೀನು ಹೇಳಿದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುತ್ತೇನೆ. ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ; ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ ಧೃತರಾಷ್ಟ್ರನ ಮಾತಿಗೆ ಸಹಾಯಕವಾಗಿ (ಬೆಂಬಲವಾಗಿ) ಗಾಂಧಾರಿ ಹೀಗೆಂದಳು. ೧೨. ಕುರುಕುಲವೆಂಬ ನಂದನವನವು ಭೀಮನೆಂಬ ಮದ್ದಾನೆಯು ಕೋಪದಿಂದ ನುಗ್ಗಲು ಧ್ವಂಸವಾಯಿತು. ನಮ್ಮ ಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವ ಹಾಗೆ ನೀನು ಉಳಿದಿದ್ದೀಯೆ. ಇನ್ನು ಯುದ್ದಮಾಡುವವರಾರೂ ಇಲ್ಲ. ಮುದುಕರು ಕುರುಡರು ಎನ್ನದೆ ನಮ್ಮ ಮಾತನ್ನು
Page #645
--------------------------------------------------------------------------
________________
೬೪೦] ಪಂಪಭಾರತಂ ಕಂ|| ಪೂಕಿನಿತಳಸವಸದಿಂ
ದೀ ಕಲಹಂ ಧರ್ಮಸುತನನಾಂ ನಿನಗೆ ನಿರಾ | ಪೇಕಮೊಡಂಬಡಿಸುವೆನಿಂ
ತೀ ಕಜ್ಜಂ ಕೂರ್ಪೊಡೆನಗೆ ಕೆಯೊಳ್ ಮಗನೇ ||
ವ|| ಎಂದನುಬಂಧಿಸಿದ ಮೋಹಪಾಶದೊಳ್ ತಾಯ್ತಂದೆಯ ನುಡಿದ ನುಡಿಯಂ ಕೇಳಭಿಮಾನಧನಂ ಸುಯೋಧನನಿಂತೆಂದಂಉll ದೋಷಮೆ ನಿಮ್ಮ ಪೇಜ್ಜುದೆನಗೆಂತುಮೊಡಂಬಡಲಪ್ಪುದೊಂದೆ ದು
ಶ್ಯಾಸನ ರಕ್ತಪಾನದೊಳೆ ಸೊರ್ಕಿದ ಪಾತಕನಂ ಪೊರಳ್ಳಿ ಕೋಂ || ದೀ ಸಮರಾವನೀತಳದೊಳಿಂ ಬಲಿಗೆನಮೊಲೈನಲ್ಲ ನಿ ರ್ದೋಷಿಗಳೊಳ್ ಪೃಥಾಸುತರೊಳಿಂ ಮಗುಟ್ಟುಂ ಪುದುವಾಳನೆಂಬೆನೇ || ೧೪ ವ|| ಎಂಬುದುಮಂಧಮಹೀಪತಿ ನೀನಿದಾವುದು ಮಾತಾಗಿ ನುಡಿವೈಕಂil ಅನುಜರ್ ನಾಲ್ವರುಮಂ ಧ
ರ್ಮನಂದನಂ ವೇಳೆಗೊಂಡು ಕಾವಂ ಪೂಣರ್ದಾ | ವನುವರದೊಳಮನೆ ಪೇಯ್ ಪವ ನನಂದನಂಗಳವು ಪೊಣರೆ ತಾಂ ಬಪನೇ | ಎನೆ ನೃಪನೆಂದಂ ಧರ್ಮಜ ನನುಜರ್ಕಳೊಳೊರ್ವನದೂಡೊಡನಟಿವ ಸುಯೋ | ಧನನಲ್ಲಿ ನೂರ್ವರುಂ ತ ಸ್ವನುಜರ್ಕಳ್ ಸಾಯ ಬಾಜ್ವುದಂ ನಂಬಿದಿರೇ ||
೧೬
ಕೇಳು; ಯೋಚಿಸು; ತಂದೆಯು ಹೇಳುವುದಕ್ಕೆ ಒಪ್ಪು. ೧೩. ಈ ಜಗಳವು ಇಷ್ಟಕ್ಕೇ ಬೇಗ ನಿಲ್ಲಲಿ. ಧರ್ಮರಾಜನನ್ನು ಆಕ್ಷೇಪಣೆಯೇ ಇಲ್ಲದೆ ಒಡಂಬಡುವ ಹಾಗೆ ಮಾಡುತ್ತೇನೆ. ನನ್ನನ್ನು ನೀನು ಪ್ರೀತಿಸುವುದಾದರೆ ಈ ಕಾರ್ಯವನ್ನು ನೀನು ಅಂಗೀಕಾರಮಾಡು ವ|ಎಂದು ಮೋಹಪಾಶದಿಂದ ಬಂಧಿತರಾದ ತಾಯಿತಂದೆಯರು ನುಡಿದ ನುಡಿಯನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಹೀಗೆಂದನು-೧೪, ನೀವು ಹೇಳಿದುದು ನನಗೆ ದೋಷವೇನಲ್ಲ ಹೇಗೂ ಒಡಂಬಡತಕ್ಕುದೇ ಆದರೆ ಒಂದು ವಿಚಾರ ಮಾತ್ರ. ದುಶ್ಯಾಸನ ರಕ್ತಪಾನದಿಂದ ಸೊಕ್ಕಿರುವ ಪಾಪಿಯಾದ ಭೀಮನನ್ನು ಹೊರಳಿಸಿ ಕೊಂದು ಈ ಯುದ್ಧರಂಗದಲ್ಲಿ ಬಲಿಯಿಕ್ಕುವವರೆಗೆ ಒಪ್ಪಲಾರೆ. ನಿರ್ದೋಷಿಗಳಾದ ಪೃಥೆಯ ಮಕ್ಕಳಲ್ಲಿ ಪುನಃ ಕೂಡಿ ಬದುಕುವುದಿಲ್ಲವೆನ್ನುತ್ತೇನೆಯೇ ವಎನ್ನಲು ಕುರುಡುರಾಜನಾದ ಧೃತರಾಷ್ಟ್ರನು (ದುರ್ಯೋಧನನನ್ನು ಕುರಿತು) ಇದು ಯಾವ ಮಾತೆಂದು ನುಡಿಯುತ್ತಿದ್ದೀಯ? ೧೫. ಧರ್ಮರಾಜನು ತನ್ನ ನಾಲ್ಕು ಜನ ತಮ್ಮಂದಿರಲ್ಲಿ ಯಾವ ಯುದ್ದದಲ್ಲಾದರೂ ಯಾರೊಬ್ಬರು ಸತ್ತರೂ ತಾನೂ ಸಾಯುತ್ತೇನೆಂದು ಪ್ರತಿಜ್ಞೆಮಾಡಿ ರಕ್ಷಿಸುತ್ತಿರುವಾಗ ಭೀಮನಿಗೆ ನಾಶವುಂಟಾದರೆ ತಾನು ಬದುಕುತ್ತಾನೆಯೇ? ೧೬. ಎನ್ನಲು ದುರ್ಯೋಧನನೆಂದನು. ತಮ್ಮಂದಿರು ನಾಲ್ವರಲ್ಲಿ ಒಬ್ಬನು ಸತ್ತರೂ ಜೊತೆಯಲ್ಲಿಯೇ
Page #646
--------------------------------------------------------------------------
________________
ತ್ರಯೋದಶಾಶ್ವಾಸಂ / ೬೪೧ ವ|| ಎಂದು ಮತ್ತಂ ಸುಯೋಧನನಿಂತೆಂದಂಮll. ತಲೆದೋಜಿಣಮಳ್ಳಿ ವೈರಿ ನೆಲನಂ ಪೋ ಪೊಕ್ಕನೆಂಬನ್ನೆಗಂ -
ಚಲದಿಂದಯ್ಯುವ ಕರ್ಣನುಗ್ರರಥಮಂ ಮುಂ ನುಂಗಿದೀ ದ್ರೋಹಿಯೋಳ್ | ನೆಲದೊಳ್ ಪರಿಬಲೆ ಮತ್ತಮನ್ನ ಮುಳಿಸಿಂಗಾಂ ಕಾದುವಂ ಪೇಸಿದಂ ನೆಲೆಗಂಡಂತೆ ನೆಲಕ್ಕೆ ಗೆಲ್ಗೊಡಮದಂ ಚಿಃ ಮತ್ತಮಾನಾಳ್ವನೇ || ೧೭
ವ|| ಅಂತುಮಲ್ಲದೆಯುಂಚಂt ತೊಡರದೆ ನೀಮುಮಾ ನಗು ಪಾಂಡುವುಮೊಂದಿಯ ಬಟ್ಟೆಯಿಂದೊಡಂ
ಬಡು ನಿಮಗಿಲ್ಲ ಜೂದ ನವಮಾಗಿರೆ ಮಲಿಗನಾದನಾನ ಪೂ | ಇಡುವಗೆಗೆನ್ನೊಳಾದ ಕಿಸುರೆನ್ನೊಡವೋಪುದಿದೊಳ್ಳಿತೆನ್ನ ಪಿಂ
ಬಡಿನೊಳೆ ನಿನಯ ನಿಮಗಂ ಮಗನನೆ ಧರ್ಮನಂದನಂ || ೧೮ eroll
ತಪ್ಪದು ಕರ್ಣನಿಂ ಬಣಿಕ ಸಂಧಿಯ ಮಾತನಗಾತನಿಲ್ಲದೆ ತಪ್ಪುದೂ ರಾಜ್ಯಮಿ ಗದೆಯುಮೀ ಭುಜದಂಡಮುಮುಳ್ಳಿನಂ ಕೊನ | ರ್ತಶದ ಪೇಟಿಮನ, ಪಗೆ ನೋವಳದಂಜುವುದೇಕೆ ನಿಂದರೇಂ ತಪ್ಪುದೊ ಪೇಟಿಮಯ್ಯ ನೊಸಲೊಳ್ ಬರೆದಕ್ಕರಮಾ ವಿಧಾತ್ರನಾ || ೧೯
ಧರ್ಮರಾಯನು ಸಾಯುತ್ತಾನೆ. ದುರ್ಯೋಧನನು ಮಾತ್ರ ತನ್ನ ತಮ್ಮಂದಿರು ನೂರುಜನವೂ ಸತ್ತಿರುವಾಗ ಅವನು ಬದುಕುತ್ತಾನೆಂದು ನಂಬಿದಿರೇನು? ವll ಎಂದು ಪುನಃ ದುರ್ಯೋಧನನು ಹೀಗೆಂದನು - ೧೭. ವೈರಿಯು ಕಾಣಿಸಿಕೊಂಡು ಎದುರಾಗುವುದಕ್ಕೆ ಹೆದರಿ ತನ್ನ ನೆಲವನ್ನು, ಛೀ ಹೋಗಿ ಹೊಕ್ಕನು ಎಂದು ಹೇಳುವಷ್ಟರಲ್ಲಿಯೇ ಛಲದಿಂದ ಬರುತ್ತಿದ್ದ ಕರ್ಣನ ಭಯಂಕರವಾದ ತೇರನ್ನು ಮೊದಲೇ ನುಂಗಿದ ಈ ದ್ರೋಹಿಯಾದ ಭೂಮಿಯಲ್ಲಿ ಪುನಃ ಹಂಬಲೇ? ನನ್ನ ಕೋಪಕ್ಕಾಗಿ ನಾನು ಕಾದುತ್ತಿದ್ದೇನೆ. (ಇದು ಅಶಾಶ್ವತ ಎಂಬ ವಾಸ್ತವಾಂಶವನ್ನು ತಿಳಿದೇ ಈ ನೆಲಕ್ಕೆ ಹೇಸಿದ್ದೇನೆ. ಗೆದ್ದರೂ ಛಃ ಪುನಃ ನಾನು ಅದನ್ನು ಆಳುತ್ತೇನೆಯೇ? - ವ|| ಹಾಗಲ್ಲದೆಯೂ ೧೮, ನೀವೂ ಆ ಪಾಂಡವರೂ ಯಾವ ವೈಮನಸ್ಯವೂ ಇಲ್ಲದೆ ಹೊಂದಿಕೊಂಡೆ ಬಾಳಿದಿರಿ. ನಿಮಗೆ ಒಂದು ಅಸಮಾಧಾನವೂ ಇಲ್ಲ. ಜೂಜೆ ಕಾರಣವಾಗಲು ಈ ಪ್ರತಿಜ್ಞೆಮಾಡಿದ ಬದ್ಧದ್ವೇಷಕ್ಕೆ ನಾ:- ಮೊದಲಿಗನಾದೆ. ನನ್ನಲ್ಲಿ ಹುಟ್ಟಿದ ಈ ಜಗಳವು ನನ್ನ ಜೊತೆಯಲ್ಲಿಯೇ ಹೋಗುವುದು ಒಳ್ಳೆಯದು. ನನ್ನ ಹಿಂದುಗಡೆ (ನಾನು ಸತ್ತ ಬಳಿಕ) ಅಪ್ಪಾ ಧರ್ಮರಾಯನೂ ನಿಮಗೆ ಮಗನಲ್ಲವೇ? (ನೀವು ಅವನೊಡನೆ ಸುಖವಾಗಿ ಬಾಳಬಹುದು) ೧೯. ಕರ್ಣನಾಗಿ ಹೋದಮೇಲೆ ಸಂಧಿಯ ಮಾತು ತಪ್ಪು (ನನಗೆ ದೋಷಯುಕ್ತವಾದುದು). ಅವನಿಲ್ಲದೆ ನನಗೆ ರಾಜ್ಯವು ಹೇಗಾಗುತ್ತದೆ ? ಈ ಗದೆಯೂ ಬಾಹುದಂಡವೂ ಇರುವವರೆಗೆ ನನ್ನ ಶತ್ರುವು ಚಿಗುರಿಕೊಳ್ಳುತ್ತಾನೆಯೇ, ದುಃಖವನ್ನು ಅನುಭವಿಸಿಯಾದ ಮೇಲೆಯೂ ಹೆದರುವುದೇಕೆ? ಅಪ್ಪಾ ಯುದ್ಧವನ್ನು ನಿಲ್ಲಿಸಿದರೂ ಬ್ರಹ್ಮನು ಹಣೆಯಲ್ಲಿ ಬರೆದ
Page #647
--------------------------------------------------------------------------
________________
೬೪೨ / ಪಂಪಭಾರತಂ
ಮ|| ಸ || ನರನಂ ಮುಂ ಕೊಲ್ವೆನಾಂ ಕರ್ಣನನಡೆದುದಂ ಕೊಲ್ವೆನಾ ಭೀಮನಂ ಸಂ ಗರದೊಳ್ ಸೀಳ್ಕೊಟ್ಟ ದುಶ್ಚಾಸನನುಲನದಂ ನೀಗುವಂ ಪೋಕುಮಂತಿ | ರ್ವರುಮಂ ಕೊಂದಂದು ಮಣಾನವರಿದಿರಿದಿರೊಳ್ ಕಾದಿ ಸತ್ತಂದು ಮೇಣ್ ವಿ ಸುರಿತಂ ಮಪಮುಂ ನಿಮ್ಮಡಿಯುಮನಿದ ಬೀಳ್ಕೊಂಡೆನಿಂ ಪೋಗಿ
ಮಟೆಂ || ೨೦
ವ|| ಎಂದು ತಾಯ್ತಂ ತಂದೆಗಮೆಗಿ ಪೊಡವಟ್ಟು ಪೋಗಲ್ವೇಟ್ಟು ಸಂಸಾರಾಸಾರತೆಯ ನಡೆದನುಂ ಮಹಾಸನುಮಪುದಂ ತನ್ನಂ ತಾನೆ ಸಂತೈಸಿಯುಂ ಚೇತರಿಸಿಯುಂ ಮಜ್ಜನ ಭೋಜನಾನುಲೇಪನ ತಾಂಬೂಲಾದಿಗಳೊಳ್ ಮಹಾಹವ ಖೇದಮುಮಂ ಮನಃಖೇದಮುಮ ನಾಟಿಸಿ ಮಂತ್ರಶಾಲಾಂತಸ್ಥಿತ ಕನಕವಿಷ್ಟರಾರೂಢನಾಗಿ ಶಲ್ಕ ಶಕುನಿ ಕೃಪ ಕೃತವರ್ಮಾಶ್ವತ್ಥಾಮ ಪ್ರಧಾನ ವೀರಪುರುಷರಂ ಬರಿಸಿ ಯಥೋಚಿತಪ್ರತಿಪತ್ತಿಗಳೊಳಿರಿಸಿ ಪೇಟೆಮಿನ್ನೆಮಗೆಯ್ಯ ನಿಯೋಗಮೇನೆನೆ ಶಾರಸ್ವತನಿಂತೆಂದಂ
eroll ಸಂಗತ ನೀತಿಶಾಸ್ತ್ರವಿದರಪ್ಪರವಂದಿರ ತಮ್ಮ ತಮ್ಮ ಕ
ಜ್ವಂಗಳ ಮಕ್ಕಳೊಳ್ ಪುಸಿದದಂ ಕಡುನನ್ನಿಯ ಮಾಡಿ ತೋರ್ಪರು | ತುಂಗ ಸುಸೂಕ್ಷ ಪಾರ್ಶ್ವಕೃಶ ಕೋಮಳ ನಿಮ್ಮ ಘನೋನ್ನತ ಪ್ರದೇ ಶಂಗಳನಾ ಸಮಾನತಳದಲ್ಲಿಯೇ ಚಿತ್ರಕನೆಯ ತೋರ್ಪವೋಲ್ ||
೨೧
ಅಕ್ಷರ ತಪ್ಪುತ್ತದೆಯೇ ಏನು ? ೨೦. ಕರ್ಣನನ್ನು ಸಾಯಿಸಿದುದರಿಂದ ಅರ್ಜುನನನ್ನು ಮೊದಲು ಕೊಲ್ಲುತ್ತೇನೆ. ಆ ಭೀಮನನ್ನು ಯುದ್ಧದಲ್ಲಿ ಸೀಳಿ ರಾಶಿ ಹಾಕಿ ದುಶ್ಯಾಸನನ ದುಃಖವನ್ನು ಪರಿಹಾರಮಾಡಿಕೊಳ್ಳುತ್ತೇನೆ. ಹಾಗೆ ಅವರಿಬ್ಬರನ್ನು ಕೊಂದ ದಿನ ಅಥವಾ ನಾನು ಅವರೆದುರಿಗೆ ಕಾದಿ ಸತ್ತ ದಿನ ನನ್ನ ಉರಿಯುತ್ತಿರುವ ಕೋಪವು ಶಮನವಾಗುತ್ತದೆ. ನಿಮ್ಮ ಪಾದಗಳನ್ನು ಬೀಳ್ಕೊಂಡೆನು (ದಯಮಾಡಿ) ಇನ್ನು ನೀವು ಹೋಗಿ ಏಳಿ. ವ! ಎಂದು ತಾಯಿಗೂ ತಂದೆಗೂ ನಮಸ್ಕಾರ ಮಾಡಿ ಹೋಗಹೇಳಿ ಸಂಸಾರದ ಅಸಾರತೆಯನ್ನು ತಿಳಿದವನೂ ಮಹಾಸತ್ವನೂ ಆದುದರಿಂದ ತಾನೇ ತನ್ನನ್ನು ಸಮಾಧಾನಮಾಡಿಕೊಂಡೂ ಚೇತರಿಸಿಕೊಂಡು, ಸ್ನಾನ, ಊಟ, ಗಂಧ, ತಾಂಬೂಲ ಮೊದಲಾದವುಗಳಿಂದ ಮಹಾಯುದ್ಧದ ಆಯಾಸವನ್ನೂ ಮನಸ್ಸಿನ ದುಃಖವನ್ನೂ ಹೋಗಲಾಡಿಸಿಕೊಂಡನು. ಮಂತ್ರಶಾಲೆಯ ಒಳಗಿರುವ ಚಿನ್ನದ ಪೀಠದ ಮೇಲೆ ಕುಳಿತು ಶಲ್ಯ, ಶಕುನಿ, ಕೃಪ, ಕೃತವರ್ಮ, ಅಶ್ವತ್ಥಾಮರೇ ಮೊದಲಾದ ಮುಖ್ಯ ವೀರಪುರುಷರನ್ನು ಬರಮಾಡಿ ಯಥೋಚಿತವಾದ ಸತ್ಕಾರಗಳನ್ನು ಮಾಡಿ 'ನಾವು ಇನ್ನು ಮಾಡಬೇಕಾದ ಕಾರ್ಯವೇನೆಂದು ಹೇಳಿ' ಎನ್ನಲು ಕೃಪನು ಹೀಗೆಂದು ಹೇಳಿದನು. ೨೧. ಚಿತ್ರವನ್ನು ಬರೆಯುವವನು ಅತಿ ಎತ್ತರವಾದ, ಅತಿಸೂಕ್ಷ್ಮವಾದ, ಪಕ್ಕದಲ್ಲಿರುವ ತೆಳ್ಳಗಿರುವ, ಕೋಮಲವಾಗಿರುವ, ತಗ್ಗಾಗಿರುವ, ದಪ್ಪವಾಗಿರುವ, ಉನ್ನತವಾಗಿರುವ ಪ್ರದೇಶಗಳನ್ನು (ತಾವು ಬರೆಯುವ) ಪಟದ (ಚಿತ್ರದ) ಸಮ ಪ್ರದೇಶದಲ್ಲಿಯೇ ತೋರಿಸುವ ಹಾಗೆ ಚೆನ್ನಾಗಿ ನೀತಿಶಾಸ್ತ್ರವನ್ನು ತಿಳಿದವರು ತಮ್ಮ ತಮ್ಮ ಕಾರ್ಯಗಳ ವಿಷಯದಲ್ಲಿ ಸುಳ್ಳಾದುದನ್ನೂ ಪೂರ್ಣ ಸತ್ಯವನ್ನಾಗಿಯೇ ಮಾಡಿ
Page #648
--------------------------------------------------------------------------
________________
ತ್ರಯೋದಶಾಶ್ವಾಸಂ | ೬೪೩ ವlt ಅದನೆಂತಪ್ಪ ಬುದ್ದಿಯೊಡೆಯರ ಪೇಲ್ವಸಾಮಾನ್ಯಮಪ್ಪುಪಾಯಂಗಳುಂ ನಿನಗೆ ದೈವಂ ವಿಮುಖಮಪ್ಪುವಂದಪಾಯ ಬಹುಳವಾಗಿ ಬಂದುದಾಜುಂ ಗುಣಂಗಳನೆ ತಂದುವು ಮೌಲ ನೃತ್ಯ ಸುಹೃತ್ ಶ್ರೇಣಿ ಮಿತ್ರಾಟವಿಕತಂತ್ರಂಗಳ್ ಪಣಿದ ಜಂತ್ರಂಗಳಂತ ಕಲಕುಲಿ ಮಾದುವಾರ್ಗಮಭೇದ್ಯರುಮಸಾದ್ಧರುಮಪ್ಪಯೋನಿಸಂಭವರ ಹೇಳಾಸಾಧ್ಯರಾದರದು ಕಾರಣದಿಂಹರಿಣಿಅಟಿದರಧಿಕರ್ ಭೀಷ್ಮದ್ರೋಣಾಂಗನಾಯಕರೀಗಳಿ
ನುಡಿದರವರಿಂ ಮೇಲೆಂಬರ್ ಮಹಾರಥರಲ್ಲಿ ಮುಂ | ಕಳೆದುದಳೊಳೇಂ ನಷ್ಟಂ ನಷ್ಟಂ ಮೃತಂ ಮೃತಮಂಬುದಿ
(ಬಲದಿರಿದೇಕಿಲ್ಲಿಂ ಮೇಲಪ್ಪುದಂ ಬಗೆ ಭೂಪತೀ | ಕಂ|| ನಳವೊಡೆ ನೆರವೂಳೆಮಿನಿಬರು
ಮಿತಿ ಕಲಹಮಪಾಯ ಬಹುಳಮಿನ್ನುಂ ನಯದ | ತೆಲಗುವೊಡೆ ಸಂಧಿ ಹರಿಗನೂ
ಭುಜುಗುಂ ನಿನಗಿಂತಿವೆರಡ ಕಜ್ಜಂ ನೃಪತೀ || ವ|| ಎಂಬುದುಂ ಬಡೆಕ್ಕಿನ ನುಡಿಗೆ ಸೈರಿಸಲಾಗಿದೆ ಫಣಿಕೇತನನಿಂತೆಂದಂಮll ಪವಾಡಯ್ಯನೆ ಬೇಡಯುಂ ಕುಡದ ನಾನೇನೆಂದು ಸಂಧಾನಮಂ.
ಗಟೆಯಿಪ್ಪಂ ಗಳಯಿಪ್ಪನಂಗನ್ನಪನಂ ನೀನೆ ತಂದನ್ನ ಮುಂ | ದಿಟಿಪಲ್ಕಾರ್ಪೊಡಮಾವುದಾಗಿ ಕೃಪ ನೀಂ ಪೇಷ್ಟೆಯಾ ಮಾತನಿ ನ್ನು ದುರ್ಯೋಧನನಲ್ಲನೇ ಕಳದೊಳಂ ಕಾಂತು ಕೌಂತೇಯರಂ ೧೨೪
ತೋರಿಸುವರು. ವ|| ಆದುದರಿಂದ ಎಂತಹ ಬುದ್ದಿವಂತರಾದವರೂ ಹೇಳುವ ಸಾಮಾನ್ಯವಾದ ಉಪಾಯಗಳೂ ನಿನಗೆ ದೈವ ವ್ಯತ್ಯಾಸವಾಗಿರುವುದರಿಂದ ವಿಶೇಷ ಅಪಾಯಕಾರಿಯಾದ ರಾಜ ಸಂಧಿ ವಿಗ್ರಹಯಾನ, ಆಸನ, ಸಂಶಯ, ದೈಧೀಭಾವ ಎಂಬ ಆರು ಗುಣಗಳನ್ನೇ ಉಂಟುಮಾಡಿದುವು. ಮೌಲ, ನೃತ್ಯ, ಸಹೃತ್, ಶ್ರೇಣಿ, ಮಿತ್ರ, ಆಟವಿಕ ತಂತ್ರಗಳು ಸಿದ್ಧಪಡಿಸಿದ ಕೃತಕಯಂತ್ರಗಳಂತೆ ಚೆಲ್ಲಾಪಿಲ್ಲಿಯಾದವು. ಯಾರೂ ಭೇದಿಸುವುದಕ್ಕಾಗದವರೂ, ಅಸಾಧ್ಯರೂ ಅಯೋನಿಜರೂ ಆದ ದ್ರೋಣಾಚಾರ್ಯರೇ ಆಟದಲ್ಲಿ ಗೆಲ್ಲುವಂತೆ ಸುಲಭವಾಗಿ ಜಯಿಸಲ್ಪಟ್ಟರು. ಆ ಕಾರಣದಿಂದ ೨೨. ಅಧಿಕರಾದ ಭೀಷ್ಮದ್ರೋಣ ಕರ್ಣರು ಸತ್ತರು. ಇನ್ನುಳಿದವರು ಮಹಾರಥರು ಅವರಿಗಿಂತ ಮೇಲೆನ್ನುವರಲ್ಲವೇ? ಮೊದಲು ಕಳೆದುಹೋದುದನ್ನು ಚಿಂತಿಸುವುದರಲ್ಲಿ ಏನು ಪ್ರಯೋಜನ? ನಷ್ಟವಾದುದು ನಷ್ಟವಾಯಿತು, ಸತ್ತದ್ದು ಸತ್ತುಹೋಯಿತು ಎಂದುಕೊಳ್ಳುವುದು. ಇನ್ನು ದುಃಖಿಸಬೇಡ, ಮಹಾರಾಜನೇ ಇಲ್ಲಿಂದ ಮುಂದಾಗಬೇಕಾದುದನ್ನು ಯೋಚಿಸು. ೨೩. ಯುದ್ಧಮಾಡುವುದಾದರೆ 'ನಾವಿಷ್ಟು ಜನವೂ ಸಹಾಯಕ್ಕೆ ಇದ್ದೇವೆ. ಯುದ್ಧಮಾಡು. ಯುದ್ಧವು ಹೆಚ್ಚಿನ ಅಪಾಯವುಳ್ಳದ್ದು ಎಂದು ಸಂಧಿಯ ಕಡೆ ಒಲಿಯುವ ಪಕ್ಷದಲ್ಲಿ ಅರ್ಜುನನಲ್ಲಿ ಸಂಧಿಯಾಗುತ್ತದೆ. ರಾಜನೇ ನಿನಗಿವೆರಡೇ (ಮಾಡಬೇಕಾದ ಕಾರ್ಯಗಳು. ವಗಿ ಎನ್ನಲು ಆಮೇಲೆ (ಎರಡನೆಯ ಸಲ) ಹೇಳಿದ ಮಾತಿಗೆ ಸೈರಿಸಲಾರದೆ ದುರ್ಯೋಧನನು ಹೀಗೆಂದನು. ೨೪. ಹಳೆಯ ಗ್ರಾಮಗಳೊದನ್ನು ಬೇಡಿದರೂ ಕೊಡದ
Page #649
--------------------------------------------------------------------------
________________
೬೪೪ | ಪಂಪಭಾರತಂ
ವ|| ಎಂಬುದುಂ ಜಳಧರಧ್ವನಿಯಿನಶ್ವತ್ಥಾಮನಿಂತೆಂದಂಚoll ಕುಳಬಳಶೌರ್ಯಧೈರ್ಯಯುತರೆಲ್ಲರುಮಂ ಪಂಗಿಕ್ಕಿ ಕರ್ಣನಂ
ಪಳಯಿಸುತಿರ್ಪಯೇನೂ ಗಳ ನಿನ್ನಯ ತಮ್ಮನ ನೆತ್ತರಂ ಭಯಂ | ಗೋಳೆ ಪವಮಾನಸೂನು ತವ ಪೀರ್ದಡೆಯೊಳ್ ಕಲಿ ಕರ್ಣನೇಕೆ ಪೇಯ್
ಮಿಳ ಮಿಳ ನೋಡುತಿರ್ದನವನುರ್ಕನಿಳಾಧಿಪರುಂಟೆ ನಿನ್ನವೋಲ್ || ೨೫ ಕoil ಅಂಬಿಗಳಾದುದಿದು ಋಣ
ಸಂಬಂಧಂ ನಿನಗಮೋಘಮಿದನುಟಿದವರಾ | ರ್ಗ೦ ಬಿಸುಡಂ ಬರ್ಕುಮ ನೀಂ ಬೆಸಸುವುದನ್ನನಾಂತರಂ ತವ ಕೊಲ್ವಂ ||
೨೬ ವl ಎಂದಶ್ವತ್ಥಾಮಂ ಕರ್ಣನ ಪಡೆದು ನುಡಿದೊಡಾ ನುಡಿಗೆ ಮುನಿದು ಕೂಲ್ವನಿತು ವರಂ ಬಗೆದು ದುರ್ಯೋಧನನಿಂತೆಂದಂಕಂ|| ನಿನ್ನಿಂದಂ ತ್ರಿಭುವನ ರಾ
ಜ್ಯೋನ್ನತಿ ಬಂದೆನಗೆ ಸಾರ್ಗುಮವೊಡಮೊಲ್ಲಂ | ನೀನ್ನುಡಿದು ಬರ್ದುಕಿ ಪಜ ರೆದಿರೊಳ್ ನುಡಿದು ಕರ್ಣನಂ ಬರ್ದುಕುವರೇ || ೨೭
ನಾನು ಏನೆಂಬುದಾಗಿ ಸಂಧಿಯನ್ನುಂಟುಮಾಡಲಿ ? ಕರ್ಣನನ್ನು ನನ್ನ ಮುಂದೆ ತಂದು ಇಳಿಸುವುದಕ್ಕೆ ಸಮರ್ಥನಾದರೆ (ಆಗ ಸಂಧಿಯನ್ನು ಗಳಿಯಿಸುತ್ತೇನೆ. ಕೃಪನೇ ನೀನು ಈ ಮಾತನ್ನು ಏನೆಂದು ಹೇಳುತ್ತೀಯೆ. ಇನ್ನು ಮಾತನ್ನು ಬಿಡು. ಯುದ್ಧಭೂಮಿಯಲ್ಲಿ ಪಾಂಡವರನ್ನು ಕಾಣುವ ದುರ್ಯೊಧನನೆಂಬ (ಆಶ್ಚರ್ಯವಾದ) ಹೆಸರುಳ್ಳವನಲ್ಲವೇ ನಾನು? ವ| ಎನ್ನಲು ಗುಡುಗಿನ ಶಬ್ದದಿಂದ ಅಶ್ವತ್ಥಾಮನು ಹೀಗೆಂದನು-೨೫. ಕುಲ, ಬಲ, ಶೌರ್ಯ ಧೈರ್ಯದಿಂದ ಕೂಡಿದವರೆಲ್ಲರನ್ನೂ ಬಿಟ್ಟು ಕರ್ಣನನ್ನು ಕುರಿತು ಪ್ರಲಾಪಮಾಡುತ್ತಿದ್ದೀಯೆ, ನಿಜ. ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಭಯವನ್ನುಟುಮಾಡುತ್ತಿರುವ ಹಾಗೆ ಭೀಮನು ಪೂರ್ಣವಾಗಿ ಕುಡಿದ ಸಂದರ್ಭದಲ್ಲಿ ಶೂರನಾದ ಕರ್ಣನೇಕೆ ಹೇಳು ಮಿಟಮಿಟನೆ ನೋಡುತ್ತಿದ್ದ? ನಿನ್ನ ಹಾಗಿರುವ ರಾಜರೂ ಉಂಟೇ ? ೨೬. ನಿನಗೆ ಅಂಬಿಗರವನಲ್ಲಿ ವಿಶೇಷ ಋಣಸಂಬಂಧವಾಯಿತು. ಇದನ್ನು ಬಿಡಿಸಲು ಉಳಿದವರಿಗೆ ಸಾಧ್ಯವೇ ? ನೀನು ಅಪ್ಪಣೆ ಕೊಡು; ಪ್ರತಿಭಟಿಸಿದವರನ್ನು ಪೂರ್ಣವಾಗಿ ಕೊಲ್ಲುತ್ತೇನೆ. ವ|| ಎಂದು ಅಶ್ವತ್ಥಾಮನು ಕರ್ಣನನ್ನು ನಿಂದಿಸಿ ಮಾತನಾಡಲು ಆ ಮಾತಿಗೆ ಕೋಪಿಸಿಕೊಂಡು ಅವನನ್ನು ಕೊಂದು ಹಾಕುವವರೆಗೂ ಯೋಚಿಸಿ ದುರ್ಯೋಧನನು ಹೀಗೆಂದನು. ೨೭. ನಿನ್ನಿಂದ ಮೂರುಲೋಕದ ರಾಜ್ಯಾಧಿಪತ್ಯದ ವೈಭವವು ಬಂದು ನನಗೆ ಸೇರುವುದಾದರೂ ನನಗೆ ಬೇಡ. ಕರ್ಣನ ವಿಷಯವಾಗಿ (ಕೆಟ್ಟುದನ್ನು) ಆಡಿ ನೀನಾಗುವ ಹೊತ್ತಿಗೆ ಬದುಕಿದ್ದೀಯೆ. ಇತರರು
Page #650
--------------------------------------------------------------------------
________________
ತ್ರಯೋದಶಾಶ್ವಾಸಂ | ೬೪೫ ಚoll ನುಡಿ ನಿನಗಂ ದಿನೇಶತನಯಂಗಮದೆನ್ನಯ ಪಕ್ಕದಾದೊಡಂ
ಮಿಡುಕದ ಕೇಳೋನಲ್ಲಿ ಸಮನಿರ್ವರುಮಾತನತೀತನಾದ ಓಂ | ಬಡಿನೊಳದೆಂತು ಪೇಯ್ ಪಟಿಯ ಕೇಳ್ವನೂ ಕೇಳೊಡ ಚಿಃ ಪಣಂ ಪರಿಂ ನುಡಿದೊಡೆ ಕೇಳನೆಂದೆನಗೆ ನೋಯನೆ ಸಗ್ಗದೂಳಿರ್ದಿನಾತ್ಮಜಂ || ೨೮
ವt ಎಂಬುದುಮೀ ನುಡಿಯ ನಿನ್ನ ಕೂರ್ಮಗಂ ತಕ್ಕೂರ್ಮೆಗಂ ದೊರೆಯಪ್ಪು ದಾದೊಡಮರಾತಿನಮಂ ತವ ಕೊಂದಲ್ಲದೆ ನಿನ್ನ ಮೊಗಮಂ ನೋಡೆನೆಂದಶ್ವತ್ಥಾಮ ನಾಸ್ಥಾನದಿಂದಟ್ಟು ಪೋದನಾಗಳ್ ಭೂನಾಥಂ ಮದ್ರರಾಜನನಿಂತೆಂದಂ
ಚಂ|
ಇನತನಯಂಗೆ ಸಾವುಮೆನಗಿಂತಿನಿತೂಂದಬಲುಂ ದಿನೇಶ ಪು ತನೆ ನಿಮಗಿಂಬುಕಯ್ಯದುದಂ ದೊರಕೊಂಡುದು ವೀರ ಲಕ್ಷ್ಮಿ ನಿ | ಮನುಬಲದಿಂದಮಲ್ಲನಗಾಗದು ದಲ್ ಸಲೆ ಪಟ್ಟಮಂ ಸಮಂ ತನಗೆಯೆ ಮಾಡಿಕೊಡೇ ತೂದಳೊ ನೀಮ ದಲಾಂಪುದು ಬೀರವಟ್ಟಮಂ ||೨೯
ವ|| ಎಂಬುದುಂ ಶಲ್ಯನಿಂತಿರ್ದಿನಿಬರೊಳಮಾನಾವಾಳ ದೊರೆಯಂ ಬೆಸನಂ ನೀಮನಗೆ ದಯೆಗೆಯ್ದಿರೆಂಬುದೆಲ್ಲಮೆನಗೆ ಸೈಪುಂ ಸ್ವಾಮಿ ಸಂಪತ್ತುಮಂತಗೆಯ್ದನೆಂದು ಷೋಡಶ ರಾಜಭರಮಂ ತಾಳ್ಳುವಂತೆ ಸೇನಾಧಿಪತ್ಯಭಾರಮಂ ಮದ್ರರಾಜು ತಾಳಿ
ನನ್ನೆದುರಿನಲ್ಲಿ ಕರ್ಣನನ್ನು ನಿಂದಿಸಿ ಬದುಕುತ್ತಿದ್ದರೆ? ೨೮. ನಿನಗೂ ಕರ್ಣನಿಗೂ ನನ್ನ ಸಮಕ್ಷಮದಲ್ಲಿ ವಾಗ್ವಾದವಾದರೆ ಚಲಿಸದೆ ಕೇಳುತ್ತೇನೆ. ಅಲ್ಲಿ ಇಬ್ಬರೂ ಸಮ. ಅವನು ಸತ್ತುಹೋದ ಬಳಿಕ ಅದು ಹೇಗೆ ಅವನ ವಿಷಯವಾದ ನಿಂದೆಯನ್ನು ಕೇಳುವೆನು ಹೇಳು. ಹಾಗೆ ಕೇಳಿದರೆ ಸ್ವರ್ಗದಲ್ಲಿರುವ ಕರ್ಣನು ಚಿಃ, ಇತರರು ನನ್ನನ್ನು ಬಯ್ದರೆ (ದುರ್ಯೊಧನನು) ಇದನ್ನು ಕೇಳಿದನು ಎಂದು ನನ್ನ ವಿಷಯದಲ್ಲಿ ನೊಂದುಕೊಳ್ಳುವುದಿಲ್ಲವೇ? ವ| ಎನ್ನಲು ಈ ಮಾತೇ ನಿನ್ನ ಸ್ನೇಹಕ್ಕೂ ಯೋಗ್ಯವಾದ ನಡತೆಗೂ ಸಮಾನವಾಗಿದೆ (ಯೋಗ್ಯವಾಗಿದೆ. ಆದರೂ ಶತ್ರುಸೈನ್ಯವನ್ನು ಪೂರ್ಣವಾಗಿ ಕೊಂದಲ್ಲದೆ ನಿನ್ನ ಮುಖವನ್ನು ನೋಡುವುದಿಲ್ಲ ಎಂದು ಅಶ್ವತ್ಥಾಮನು ಅಲ್ಲಿಂದ ಎದ್ದುಹೋದನು. ಆಗ ರಾಜನಾದ ದುರ್ಯೋಧನನು ಶಲ್ಯನನ್ನು ಕುರಿತು ಹೀಗೆಂದನು - ೨೯. ಕರ್ಣನಿಗೆ ಸಾವೂ ನನಗೆ ಇಷ್ಟೊಂದು ದುಃಖವೂ ಕರ್ಣನು ನೀವು ಹೇಳಿದ ಹಾಗೆ ಕೇಳದುದರಿಂದುಂಟಾಯಿತು. ವೀರಲಕ್ಷಿಯೂ ನಿಮ್ಮ ಸಹಾಯವಿಲ್ಲದೆ ನನಗೆ ಆಗುವುದಿಲ್ಲ ಅಲ್ಲವೇ? ನಿಜವಾಗಿಯೂ ನನಗೆ ರಾಜ್ಯಾಭಿಷೇಕಮಾಡಬೇಕಾದರೆ (ನಾನು ಗೆಲ್ಲಬೇಕಾದರೆ) ನೀವೇ ವೀರಪಟ್ಟವನ್ನು ಸ್ವೀಕರಿಸಬೇಕು. ಇದು ಸುಳ್ಳೇ? ವ|| ಎನ್ನಲಾಗಿ ಇಲ್ಲಿರುವ ಇಷ್ಟು ಜನರಲ್ಲಿ (ಲೆಕ್ಕದವನು) ನಾನು ಯಾವ ವೀರಪುರುಷನಿಗೆ ಸಮಾನಾಗುತ್ತೇನೆ. ನೀವು ನನಗೆ ಕಾರ್ಯವನ್ನು ದಯೆಗೈದಿರುವದೆಲ್ಲ ನನ್ನ ಅದೃಷ್ಟವೂ ಸ್ವಾಮಿಸಂಪತ್ತೂ ಆಗಿರುತ್ತದೆ. ನೀವು ಹೇಳಿದ ಹಾಗೆಯೇ ಮಾಡುತ್ತೇನೆ' ಎಂದು ಹದಿನಾರು ರಾಜರ ಭಾರವನ್ನೂ ತಾಳುವಂತೆ ಶಲ್ಯನು ಸೇನಾಧಿಪತ್ಯ ಭಾರವನ್ನು
Page #651
--------------------------------------------------------------------------
________________
೬೪೬ | ಪಂಪಭಾರತಂ ಕಂ|| ಮುಳ್ಳುಗಿಡ ತಾನೆ ತನ್ನಂ
ಕಟ್ಟಿಸಿಕೊಳ್ವಂತ ಬೀರವಟ್ಟಮನಾಗಳ್ | ಕಟ್ಟಿಸಿಕೊಂಡಂ ಶಲ್ಯಂ |
ಕಟ್ಟಿದುದಂ ಕಳೆಯಲಾರ್ಗಮೇ ತೀರ್ದಪುದೇ || ವ|| ಅನ್ನೆಗಮಿತ್ತ ತದ್ಧತ್ತಾಂತಮಂ ಸಂಚಳಿತ ಚಾರ ಚಕ್ಕುಗಳಿಂದಂ ಧರ್ಮಪುತ್ರನಳದು ನರಕಾಂತಕಂಗೆ ಬತಿಯನಟ್ಟಿ ಬರಿಸಿ ಪೇಡ ನಿಶಾಟ ರಾಜ ಕಿರೀಟ ಕೋಟಿ ತಾಟಿತ ಭುಜಂ ಚತುರ್ಭುಜನಿಂತೆಂದಂಮI ಅದಟುಂ ಕಾರ್ಮುಕವಿಯುಂ ಭುಜಬಳಾವಷ್ಟಂಭಮುಂ ಸಂದು ನಿಂ
ದುದು ಶಲ್ಯಂಗವನೊರ್ವನ ನಮಗಂ ಹೃಚ್ಚನಾತಂಗ ಕ || ಟ್ನದಿರೊಳ್ ನಿಲ್ಲೊಡ ನೀನೆ ನಿಲ್ವೆಯದಳಂ ನಿಶ್ಚಲಮಪ್ಪಂತು ನಿ ನೋದವಿಂ ಮಾಟ್ಟುದಗಾಧಸಾಗರಪರೀತಾಶೇಷ ಭೂಭಾಗಮಂ || ೩೧
ವ|| ಅದಲ್ಲದೆಯುಂ ಸಿದ್ದಿತ್ರಯಂಗಳ್ ನಿನಗಾಯಾಯತ್ತ ಸಿದ್ಧಿಯಾಗಿ ನಿಂದುದಂ ನೀನೆ ಬೀರವಟ್ಟಮಂ ತಾಳಿ ನಿಲ್ಲುದನ
ಆಂ ದಿಟವಾಗಿ ಶಲ್ಯನಳವಂ ನಟಿ ಮುನ್ನಡೆದಿರ್ದುಮನ್ನ ತ ಮ್ಮಂದಿರನೇಕೆ ಕಾದಿಸುವೆನಾನೆ ಮಹಾಜಿಯೊಳಾಂಪೆನಂತೆಗೆ | ಯ್ಯಂದು ಮುಕುಂದ ಕಟ್ಟಿನಗೆ ಪಟ್ಟಮನೆಂದು ಮುಕುಂದವೃಂದಮೋಂ ದೊಂದಳೊಂದಿ ಮಿಕ್ಕೆಸೆಯ ತಾಳಿದನಾ ವಿಭು ಬೀರವಟ್ಟಮಂ || ೩೨
ಧರಿಸಿದನು. ೩೦. ಇತರ ಸಲಕರಣಗಳೆಲ್ಲ ನಾಶವಾಗಿರಲು ತನಗೆ ತಾನೇ ಕಟ್ಟಿಸಿಕೊಳ್ಳುವ ಹಾಗೆ ಶಲ್ಯನು ವೀರಪಟ್ಟವನ್ನು ಕಟ್ಟಿಸಿಕೊಂಡನು. ವಿಧಿಯ ನಿಯಮವನ್ನು ಕಳೆಯಲು ಯಾರಿಗಾದರೂ ಸಾಧ್ಯವಾಗುತ್ತದೆ ವ! ಅಷ್ಟರಲ್ಲಿ ಆ ಸಮಾಚಾರವನ್ನು ಸಂಚಾರಮಾಡುತ್ತಿರುವ ಗೂಢಚಾರರಿಂದ ಧರ್ಮರಾಯನು ತಿಳಿದು ಕೃಷ್ಣನಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು ಹೇಳಲು ರಾಕ್ಷಸರಾಜರ ಅನೇಕ ಕಿರೀಟಗ್ರಾದಿಂದ ಹೊಡೆಯಲ್ಪಟ್ಟ ತೋಳನ್ನುಳ್ಳ ಚತುರ್ಭುಜನಾದ ಕೃಷ್ಣನು ಹೀಗೆಂದನು. ೩೧, ಪರಾಕ್ರಮವೂ ಚಾಪವಿದ್ಯೆಯೂ ಬಾಹುಬಲದ ಅಹಂಕಾರವೂ ಶಲ್ಯನಲ್ಲಿ ಸೇರಿ ನಿಂತಿವೆ. ನಮಗೂ ಅವನೊಬ್ಬನೇ ಎದೆಗೆ ನಾಟಿದ ಈಟಿಯಂತಿರುವವಲ್ಲವೇ? ಅವನಿಗೆ ಸರಿಸಮನಾಗಿ ನಿಲ್ಲುವುದಾದರೆ ನೀನೊಬ್ಬನೇ ನಿಲ್ಲುವೆ. ಆದುದರಿಂದ ನೀನು ಆಳವಾದ ಸಾಗರಗಳಿಂದ ಸುತ್ತುವರಿಯಲ್ಪಟ್ಟ ಸಮಸ್ತಭೂಮಂಡಲವನ್ನೂ ನಿನ್ನ ಸಹಾಯದಿಂದ ಕಂಟಕವಿಲ್ಲದಂತೆ ಮಾಡುವುದು. ವ| ಅಷ್ಟೇ ಅಲ್ಲದೆ ಸಿದ್ದತ್ರಯಗಳಾದ ಪ್ರಭುಸಿದ್ದಿ ಮಂತ್ರಸಿದ್ದಿ ಮತ್ತು ಉತ್ಸಾಹ ಸಿದ್ದಿಗಳು ನಿನಗೆ ಅಧೀನವಾದ ಸಿದ್ದಿಯಾಗಿ ನಿಂತಿರುವುದರಿಂದ ನೀನೇ ಪಟ್ಟವನ್ನು ಧರಿಸಿ ನಿಲ್ಲುವುದು ಎನ್ನಲು ೩೨. ನಾನು ನಿಶ್ಚಯವಾಗಿಯೂ ಶಲ್ಯನ ಪರಾಕ್ರಮವನ್ನು ಸಂಪೂರ್ಣವಾಗಿ ಮೊದಲೇ ತಿಳಿದಿದ್ದ ನನ್ನ ತಮ್ಮಂದಿರನ್ನೇಕೆ ಕಾದಿಸಲಿ; ಮಹಾಯುದ್ಧದಲ್ಲಿ ನಾನೆ ಎದುರಿಸುತ್ತೇನೆ. ಕೃಷ್ಣನೇ ಹಾಗೆ ಮಾಡೆಂದು ನನಗೆ ಪಟ್ಟವನ್ನು
Page #652
--------------------------------------------------------------------------
________________
ತ್ರಯೋದಶಾಶ್ವಾಸಂ |೬೪೭ ವ|| ಅಂತು ಯುಧಿಷ್ಠಿರ ನಿಮಿತಾಹವವ್ಯಾಪಾರನಾಗಿ ಮಧುಕೈಟಭಾರಾತಿಯಂ ಬೀಡಿಂಗ ಪೋಗಬ್ದಗ್ನಿಹೋತ್ರಶಾಲೆಗೆ ವಂದು ದರ್ಭಶಯನತಳದೊಳೊಅಗಿ ಬೆಳಗಪ್ಪ ಜಾವದೊಳ್
ಚಂll ಕಡಲುರಿಯಂತಕಾಲ ಘನ ಗರ್ಜನೆಯಂತೆ ಸಮಸ್ತ ದಿಕ್ತಟಂ
ಪಿಡುಗುವಿನಂ ರಣಾನಕರವಂಗಳಸುಂಗೊಳೆ ಪರ್ವಿ ಬೇಗದಿಂ | ಸಡಗರದೇಆಯುಂ ಕಳಕಳಧನಿಯುಂಬೆರಸಾಡುವಂತರ ದೃಡೆಯೊಳಮಾರ್ಗ ದಲೆ ಪಲ್ಲಣಮಿಕಿಪುದಲ್ಲಕಲ್ಲೋಳಂ ||
೩೩
ವ|| ಆಗಳಂತಕತನಯನುಂ ಧೃತರಾಷ್ಟತನಯನುಮಾರೂಢಮದಗಜರುಮುಪಾರೂಢ ವಿಶೇಷಕರುಮಾಗಿ ತಂತಮ್ಮ ಶಿಬಿರಗಳಿಂ ಚತುರ್ಬಲಂಗಳ್ ಪೊಣಮಟ್ಟು ಸಂಗ್ರಾಮರಂಗಕ್ಕವತರಿಸಿ ಕುರುಬಲಮಂ ಮದ್ರರಾಜನಭಿನವವೂಹಮನೊಡುವುದುಂ ವಿಬುಧವನಜವನಕಳಹಂಸನುಂ ಹಂಸವೂಹಮನೊಡಿ ಮಾರ್ವಲಕ್ಕೆ ಯಮಪಾಶಮಂ ಬೀಸುವಂತ ಕೆಯಿಸಿದಾಗ
ಕull ಚಯ್ ಚಡ್ಮಿಂಬಾಗಳ್ ಮಯ್
ಮೆಯ್ ಚಲದಿಂ ಮುಟ್ಟಿ ಪೊಣರ್ದು ತಳಿವುರ್ಕಿ೦ || ಕೆಯ್ ಚಚ್ಚರಿಕೆಯ ಚಲದಿಂ ಕೆಯ್ ಚಳಿವಿನಮಿಳಿದರೆರಡು ಬಲದೊಳಮದಟರ್ ||
೩೪
ಕಟ್ಟು ಎಂದು ಮುಕುಂದವೆಂಬ ಮಂಗಳವಾದ್ಯ ಸಮೂಹವು ಒಂದರಲ್ಲೊಂದು ಸಮನ್ವಯವಾಗಿ ಕೂಡಿಕೊಂಡು ವಿಶೇಷವಾಗಿ ಪ್ರಕಾಶಿಸಲು ಆ ದೊರೆಯು ವೀರಪಟ್ಟವನ್ನು ತಾಳಿದನು. ವ|| ಹಾಗೆ ಧರ್ಮರಾಯನು ನಿಶ್ಚಿತವಾದ ಯುದ್ಧ ವ್ಯಾಪಾರೋದ್ಯೋಗವುಳ್ಳವನಾಗಿ ಕೃಷ್ಣನನ್ನು ಬೀಡಿಗೆ ಹೋಗ ಹೇಳಿ ತಾನು ಅಗ್ನಿಹೋತ್ರಶಾಲೆಗೆ (ಯಾಗಶಾಲೆಗೆ) ಬಂದು ದರ್ಭೆಯಿಂದ ಮಾಡಲ್ಪಟ್ಟ ಹಾಸಿಗೆಯಲ್ಲಿ ಮಲಗಿ ಬೆಳಗಾಗುವ ಜಾವದಲ್ಲಿ ೩೩. ಬಡಬಾನಲದಂತೆ ಅಕಾಲದ ಗುಡುಗಿನಂತೆ ಸಮಸ್ತ ದಿಕ್ಕುಗಳ ದಡಗಳೂ ಸಿಡಿಯುವಂತೆ ಯುದ್ಧವಾದ್ಯಗಳು ಭೋರ್ಗರೆಯುತ್ತಿರಲು ವೇಗದ ಸಂಭ್ರಮಾತಿಶಯವೂ ಕಳಕಳಧನಿಯೂ ಬೆರಸಿ ಆಡುವಂತೆ ಎರಡು ಸೈನ್ಯಗಳಲ್ಲಿಯೂ ಒಟ್ಟಿಗೆ ಅಲ್ಲಕಲ್ಲೋಲವಾಗಲು ಕುದುರೆಗಳಿಗೆ ಜೀನನ್ನು ಹಾಕಿದರು. ವll ಆಗ ಧರ್ಮರಾಯನೂ ದುರ್ಯೊಧನನೂ ಮದ್ದಾನೆಗಳನ್ನು ಹತ್ತಿ ಪಾಳೆಯಗಳಿಂದ ಹೊರಟು ಚತುರಂಗಸೇನಾಸಮೇತರಾಗಿ ಯುದ್ಧರಂಗದಲ್ಲಿ ಬಂದಿಳಿದರು. ಶಲ್ಯನು ಕೌರವಸೈನ್ಯವನ್ನು ಹೊಸದಾದ ರಚನಾವಿಧಾನದಿಂದ ಮುಂದೊಡ್ಡಲು ವಿದ್ವಾಂಸರೆಂಬ ಕಮಲದ ತೋಟಕ್ಕೆ ರಾಜಹಂಸದಂತಿರುವ ಧರ್ಮರಾಯನೂ ಹಂಸವ್ಯೂಹವನ್ನು ಚಾಚಿ ಪ್ರತಿ ಸೈನ್ಯಕ್ಕೆ ಯಮಪಾಶವನ್ನು ಬೀಸುವಂತೆ ಕೈಬೀಸಿದನು. ೩೪. ಶರೀರ ಶರೀರಗಳ ಚಯ್ಚಯ್ ಎಂದು ಘರ್ಷಣೆಮಾಡುತ್ತ ಸ್ಪರ್ಧೆಯಿಂದ ಹತ್ತಿರಕ್ಕೆ ಬಂದು ರಣೋತ್ಸಾಹದ ಕೈಚಟುವಟಿಕೆಯ ರಭಸದಿಂದ ಜೊತೆಜೊತೆಯಾಗಿ ಹೆಣಗಾಡಿ ಕೈಸೋತುಹೋಗುವವರೆಗೂ ಉಭಯ
Page #653
--------------------------------------------------------------------------
________________
೬೪೮) ಪಂಪಭಾರತಂ
ಕರಿ ಮಕರಾಹತಹತಿಯಿಂ ಬರಿದಳಜುವ ಭೈತ್ರದಂತೆ ವಿವಿಧಾಯುಧ ದಂ | ತುರಿತಂಗಳಚಿದುವಾ ಸಂ ಗರ ಜಳನಿಧಿಯೊಳ್ ವರೂಥಕರಿನಿಕರಂಗಳ 1 ಒಂದಕ್ಕೂಹಿಣಿಬಲಮರ ಡುಂ ದೆಸೆಯೊಳಮುಂದುವನಿತೆ ಭಾರತಮಮ || ಗಿನ್ನಿಂದುಜ್ರವಣೆ ದಲೆಂದದ ಟೊಂದುತ್ತರಮಾಗೆ ಕಾದಿದರ್ ಕಟ್ಟಾಳ್ || ಸುರಿತಶರನಿಕರಪಾತಿತ ನರೋತ್ತಮಾಂಗಂ ಕಬಂಧ ನಾಟಕರಂಗಂ | ಸುರಿತನವರುಧಿರರಂಗ
ತರಂಗವೊಪ್ಪಿದುದು ವೀರಭಟರಣರಂಗಂ || ವ|| ಅಂತು ಮುಂಬಗಲ್ಬರಂ ತುಮು ಕಾದುವ ಸಮರಭರಂ ಮನೋರಾಗಮಂ ಮಾಡೆಯುಂ ಮುಮ್ಮಟಿಸಿ ಪಾಂಡವ ಕೌರವ ಬಲದ ಕಲಿಕೆಯ ಪ್ರಧಾನನಾಯಕರ್ಕಳಮIು ಸll ಕಡಿಕೆಯೊಂದೂರ್ವರೊಳ್ ತವ ಬಯಕೆಯಿಂ ದಿವ್ಯ ಬಾಣಾದಿಗಳಂ
ಪೊಡೆವಟ್ಟುಂ ಸೂತರಂ ಚೋದಿಸಿಮೆನುತುಮಗುರ್ವುರ್ವೆ ಕೆಯಿಕ್ಕು ಕಾದಲ್ | ನಡತರ್ಪಾವೇಗದೂಳ್ ಮುಮ್ಮಣಿಸಿದ ಪಲವುಂ ರಾಜಚಿಹ್ನಂಗಳಂ ಚ ಲೊಡೆಗಳ ತಳ್ಕೊಯ್ದದೇಂ ಕಸ್ತೂಳಿಸಿದುದೂ ಏನಕ್ಷತ್ರಕಚತ್ರಪಿಂಡಂ || ೩೮
೩೭
ಸೈನ್ಯದ ಶೂರರೂ ಪರಸ್ಪರ ಕತ್ತರಿಸಿದರು. ೩೫. ನೀರಾನೆ ಮತ್ತು ಮೊಸಳೆಗಳ ಹೊಡೆತದಿಂದ ಬಿರಿದು ನಾಶವಾಗುವ ಹಡಗಿನಂತೆ ನಾನಾ ಆಯುಧಗಳು ವಿಶೇಷವಾಗಿ ನಾಟಿಕೊಂಡಿರುವ ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ ನಾಶವಾದವು. ೩೬. ಉಭಯಪಕ್ಷದಲ್ಲಿಯೂ ಒಂದಕ್ಟೋಹಿಣಿ ಸೈನ್ಯವು ಉಳಿಯಿತು. ಭಾರತಯುದವು ಇದಿಷ್ಟೇ ಸಂಖ್ಯೆಯುಳ್ಳದು; ಈ ದಿನ ನಮಗೆ ಉದ್ಯಾಪನೆ (ಮುಗಿಯುವುದೇ)ಯಿಲ್ಲವೇ ಎಂದು ಹೇಳುತ್ತ ಅಪಾರ ಪರಾಕ್ರಮದಿಂದ ವೀರಪುರುಷರು ಕಾದಾಡಿದರು. ೩೭. ಹೊಳೆಯುತ್ತಿರುವ ಬಾಣಗಳ ಸಮೂಹಕ್ಕೆ ಸಿಕ್ಕಿಬೀಳುತ್ತಿರುವ ಮನುಷ್ಯರ ತೆಲಗಳನ್ನುಳ್ಳದೂ, ಮುಂಡಗಳು ಕುಣಿದಾಡುವ ರಂಗಸ್ಥಳವಾದುದೂ ಹೊಸ, ರಕ್ತದ ಚಂಚಲವಾದ ಅಲೆಗಳನ್ನುಳ್ಳುದೂ ಆದ ವೀರಭಟರ ರಣರಂಗವು ಪ್ರಕಾಶಮಾನವಾಯಿತು. ವ|| ಹಾಗೆ ಮುಂಬಗಲವರೆಗೆ (ಮದ್ಯಾಹ್ನದವರೆಗೆ) ತುಮುಲಯುದ್ಧವನ್ನು ಮಾಡುವ ಯುದ್ಧಕಾರ್ಯವು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿರಲು ಪಾಂಡವಕೌರವಬಲಪ್ರವೀಣರಾದ ಮುಖ್ಯ ನಾಯಕರುಗಳು ಕಾದಿದರು. ೩೮. ಬಹುವೇಗದಿಂದ ಕೂಡಿ ಪರಸ್ಪರ ತಗುಲಿ ಯುದ್ಧಮಾಡುವ ಅಪೇಕ್ಷೆಯಿಂದ ದಿವ್ಯಾಸ್ತಗಳಿಗೆ ನಮಸ್ಕಾರಮಾಡಿ ಸಾರಥಿಗಳಿಗೆ ರಥವನ್ನು ನಡೆಸಿ ಎಂದು ಹೇಳಿ ಭಯವು ಹೆಚ್ಚುತ್ತಿರಲು ಶಕ್ತಿಮೀರಿ ಯುದ್ಧಮಾಡಲು
Page #654
--------------------------------------------------------------------------
________________
ತ್ರಯೋದಶಾಶ್ವಾಸಂ /೬೪೯
ವ|| ಅಂತು ಮುಟ್ಟೆವಂದೋರೋರ್ವರ ರಥದ ಕುದುರೆಯ ಪಲವಿಗೆಯ ಕುಡುಪುಗಳಿನಿವರವರೆಂದಡೆದು ಸಾತ್ಯಕಿ ಕೃತವರ್ಮನೊಳ್ ನಕುಳಂ ಶತಬಿಂದುವಿನ ಮಕ್ಕಳಯ್ಯರೊಳ್ ಸಹದೇವ ಶಕುನಿಯೊಳ್ ಯುಧಾಮನ್ನೂತ್ತಮೌಜಸ ಕೃಪನೊಳ್ ಭೀಮಸೇನಂ ಪರ್ವತರಾಜರೊಳ್ ವಿಕ್ರಮಾರ್ಜುನನಶ್ವತ್ಥಾಮನೊಳ್ ಪಣೆದು ಮಂಡಳ ಭ್ರಾಂತೋದ್ಧಾಂತಸ್ಥಿತಚಕ್ರವೆಂಬ ರಥಯುದ್ಧದೊಳಮಾಲೀಢ ಪ್ರತ್ಯಾಲೀಢ ಸಮಪಾದಂ ಗಳೆಂಬಾಸನಂಗಳೊಳಂ ಪಲವುಂ ಶರಾಸನವಿದ್ಯೆಗಳೊಳತಿ ಪ್ರವೀಣರುಂ ಜಾಣರುಮಾಗಿ
ಅಕ್ಕರ || ನದು ನಿರ್ವಾಯಂ ನರುವಾಯಂ ಮುಂ ಮೊನೆ ನೆರಕೆ ನಾರಾಚಂ
ತಗರ್ತಲೆಯಂ ನೆನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವ ಕಣ್ಣಂ | ಪೆಯ ಮುಳಗಂ ಕಣಕೆನೆ ವೋಪಂಬು ಕವಲಂಬುವೆಂಬಂಕದಂಬೆತ್ತಲುಂ ತುಲುಗಿ ನಡುವಿನಂ ಸಾರ್ದು ಸಾರ್ದಚ್ಚೆಚ್ಚು ಕಾದಿದರತಿರಥರೊಂದುಜಾವಂ ||
&E
ವ|| ಅಂತು ಕಾದುವಾಗಳೇಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನು ಮಪ್ಪಶ್ವತ್ಥಾಮನೇವದೊಳ್ ಕಣ್ಣಾಣದೆ ಮಾರ್ಕೊಂಡು ವಿಕ್ರಮಾರ್ಜುನನಂ ದಿವ್ಯಾಸ್ತ್ರಂಗಳಿಂದ ಮೆಚ್ಚು ಕಾದಿ ಗೆಲಲಾವಿದ
ಬರುತ್ತಿರುವ ವೇಗದಲ್ಲಿ ಮುಂದಕ್ಕೆ ಚಾಚಿದ ಹಲವು ರಾಜಚಿಹ್ನೆಗಳನ್ನು ಶ್ವೇತಚ್ಛತ್ರಗಳು ಸಂಘಟ್ಟಿಸಿ ಚಂಚಲವಾದ ನವಿಲುಗಳನ್ನುಳ್ಳ ಛತ್ರಿಗಳ ಸಮೂಹದಂತೆ ವಿಶೇಷ ಆಕರ್ಷಣೀಯವಾಗಿದ್ದುವು. ವ|| ಹಾಗೆ ಸಮೀಪಕ್ಕೆ ಬಂದು ಒಬ್ಬೊಬ್ಬರ ರಥದ ಕುದುರೆಯ ಬಾವುಟದ ಗುರುತುಗಳಿಂದ ಇವರು ಅವರು ಎಂದು ಗುರುತಿಸಿ ಸಾತ್ಯಕಿ ಕೃತವರ್ಮನಲ್ಲಿಯೂ ನಕುಳನು ಶತಬಿಂದುವಿನ ಅಯ್ದು ಮಕ್ಕಳಲ್ಲಿಯೂ ಸಹದೇವನು ಶಕುನಿಯಲ್ಲಿಯೂ ಯುಧಾಮನ್ನೂತ್ತಮೌಜಸರು ಕೃಪನಲ್ಲಿಯೂ ಭೀಮಸೇನನು ಪರ್ವತರಾಜರಲ್ಲಿಯೂ ವಿಕ್ರಮಾರ್ಜುನನು ಅಶ್ವತ್ಥಾಮನಲ್ಲಿಯೂ ಹೆಣೆದುಕೊಂಡು ಭ್ರಾಂತ, ಉದ್ಘಾಂತ, ಸ್ಥಿತ, ಚಕ್ರ ಎಂಬ ರಥಯುದ್ಧದಲ್ಲಿಯೂ ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬ ಆಸನಗಳಲ್ಲಿಯೂ ಇತರ ಅನೇಕ ಬಿಲ್ವಿದ್ಯೆಗಳಲ್ಲಿಯೂ ಅತಿ ಪ್ರವೀಣರೂ ಜಾಣರೂ ಆಗಿ ೩೯, ಕೂಡಿಕೊಂಡು ನಿರ್ವಾಯ, ನರುವಾಯ, ಮುಮೊನೆ, ನೆರಕೆ, ನಾರಾಚ, ತಗರ್ತಲೆ, ಮರ್ಮಸ್ಥಾನವನ್ನು ಭೇದಿಸುವ ಕಣೆಗೆಲೆಯಂಬು, ಕಕ್ಕಂಬು, ಕೆಲ್ಲಂಬು, ಮೊನೆಯಂಬು, ಇವುಗಳು ಕಣ್ಣನ್ನು ತುಂಬಿಕೊಳ್ಳಲು, ಪೇಯಮುಟೆಗಂ, ಕಣಕೆನೆ, ಪೋಪಂಬು, ಕವಲಂಬು ಎಂಬ ಪ್ರಸಿದ್ಧವಾದ ಬಾಣಗಳು ಎಲ್ಲಕಡೆಯಲ್ಲಿಯೂ ನುಗ್ಗಿ ಹೋಗಿ ನಾಟಿಕೊಳ್ಳುವ ಹಾಗೆ ನೋಡಿನೋಡಿ ಹೊಡೆದು ಹೊಡೆದು ಅತಿರಥರು ಒಂದು ಜಾವದ ಕಾಲ ಕಾದಿದರು. ವ ಹಾಗೆ ಯುದ್ಧ ಮಾಡುವಾಗ ಹನ್ನೊಂದು ಜನ ರುದ್ರರೊಳಗೆ ಕಟ್ಟಕಡೆಯವನೂ ಭಯಂಕರನೂ ಆದ ಅಶ್ವತ್ಥಾಮನು ಕೋಪದಿಂದ ಕುರುಡನಾಗಿ ಪ್ರತಿಭಟಿಸಿ
Page #655
--------------------------------------------------------------------------
________________
೬೫೦ | ಪಂಪಭಾರತಂ ಕಂತನ್ನ ದೊಣೆಯಂಬುಗಳ್ ತವು
ವನ್ನೆಗಮೆಚ್ಚಂಬು ತಪ್ಪೋಡಭಿವಾದಯನ | ನೆನಗೆ ಪದನಿದಂದು ಕ ರಂ ನಗೆ ಸುರರರಿಗನಿದಿರ್ಗ ತೊಲಗಿದನಾಗಳ್ || ದಾವಶಿಖಿ ಶಿಖೆಯನಿಚಿಪುದಿ ದಾವ ಸರಳ್ ಪೇಟಿಮೆನಿಪ ಸರಲಿಂ ತಂದಂ | ದೇವರ ಪಡೆ ರಾಗಿಸೆ ಮನ ದೇವದಿನವಯವದ ಶಕುನಿಯಂ ಸಹದೇವ |
ವ|| ಅಂತು ಶಕುನಿಯಂ ತಳೆವುದುಮಿತ್ತತಿರಭುಕ್ತಿ ವಿಷಯಾಧೀಶರಪ್ಪ ಶತಬಿಂದುವಿನ ಮಕ್ಕಳಪ್ಪಯ್ರಂ ಗಾಳಿಗೊಡ್ಡಿದ ಪುಲ್ಲ ಬಿಂದುಗಳಂತ ನಕುಲಂ ನೆಲಕ್ಕೆ ಸೋವತಂ ಮಾಡಿದನಿತ್ತ ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ ಭೀಮಸೇನನಂತಕಾನನಮನೆಯ್ದಿಸಿದಂ ಯುಧಾಮನ್ನೂತ್ತಮೌಜಸರ್ ಗೆಲೆ ಕಾದಿ ಕೃಪನನುಪಗತಪರಿಶ್ರಮನವಿ ಮಾಡಿದರಾಗಳ ಮೆಯ್ಕೆರ್ಚಿ ಬಂದು ಪಣದ ಭೀಮ ನಕುಲ ಸಹದೇವರುಮಂ ಶಂ ವಿರಥರ್ಮಾಡಿ ಹಿಡಿದು ಕೊಂಡು ಫುಲ್ಲ ಸೂಡನಿಡಾಡುವಂತೆ ತನ್ನಳಿಯಂದಿರಿರ್ವರುಮನೀಡಾಡಿ ಭೀಮನಂ ಪೂಣರ್ದು ನೆಲಕ್ಕಿಕ್ಕಿ ಬೆನ್ನಂ ಮಟ್ಟ ದಾಂಟುವ ಮದಗಜದಂತೆ ಕೊಲಲೊಲ್ಲದ ದಾಂಟಿದಾಗ ದುರ್ಯೋಧನನಲಲ್ಲು ಕಾಣದೆಯ್ವಂದಶ್ವತ್ಥಾಮ ಮದ್ರರಾಜ ಕೃಪಕೃತವರ್ಮರನಿಂತೆಂದಂ
ವಿಕ್ರಮಾರ್ಜುನನನ್ನು ದಿವ್ಯಾಸ್ತಗಳಿಂದ ಹೊಡೆದು ಕಾದಿ ಗೆಲ್ಲಲಾರದೆ -೪೦. ತನ್ನ ಬತ್ತಳಿಕೆಯ ಬಾಣಗಳು ಮುಗಿಯುವವರೆಗೂ ಹೊಡೆದು ತೀರಿಹೋಗಲು ಇನ್ನು ಅಭಿವಾದಯೆ (ನಮಸ್ಕರಿಸುತ್ತೇನೆ) ಎನ್ನಲು ಇದು ಸಮಯವೆಂದು - ದೇವತೆಗಳೆಲ್ಲ ನಗುತ್ತಿರಲು ಅರ್ಜುನನೆದುರಿಗೆ ಆಗ ಹೊರಟು ಹೋದನು. ೪೧. ದಾವಾಗ್ನಿಯನ್ನೂ ಕೀಳುಮಾಡುತ್ತಿರುವ ಈ ಬಾಣವು ಯಾವುದು ಹೇಳಿ ಎನ್ನುವ ಬಾಣದಿಂದ ದೇವರ ಸಮೂಹವು ಸಂತೋಷಪಡುತ್ತಿರಲು ಮನಸ್ಸಿನ ಕೋಪದಿಂದ ಸಹದೇವನು ಶಕುನಿಯನ್ನು ಕತ್ತರಿಸಿದನು. ವ! ಈ ಕಡೆ ಅತಿರಭುಕ್ತಿಯೆಂಬ ದೇಶದ ರಾಜರಾದ ಶತಬಿಂದುವಿನ ಅಯ್ತುಮಕ್ಕಳನ್ನೂ ನಕುಲನು ಗಾಳಿಗೆ ಒಡ್ಡಿದ ಹುಲ್ಲಿನ ಮೇಲಿನ ಜಲಬಿಂದುಗಳಂತೆ ಭೂಮಿಗೆ ಬಲಿಕೊಟ್ಟನು. ಈ ಕಡೆ ವಿಂಧ್ಯ, ಮಳಯ, ಹಿಮವತ್ಪರ್ವತನಿವಾಸಿಗಳಾದ ಪರ್ವತರಾಜರುಗಳನ್ನು ಭೀಮನು ಯಮನ ಬಾಯನ್ನು ಸೇರಿಸಿದನು. ಯುಧಾಮನ್ಯೂತ್ತಮೌಜಸರು ಗೆಲ್ಲುವ ಹಾಗೆ ಯುದ್ಧಮಾಡಿ ಕೃಪನನ್ನು ನಷ್ಟಪರಾಕ್ರಮವನ್ನಾಗಿ ಮಾಡಿದರು. ಆಗ ಮೆಯ್ಯುಬ್ಬಿ ಹೆಣೆದುಕೊಂಡು ಒಟ್ಟಾಗಿ ಬಂದ ಭೀಮನಕುಳಸಹದೇವರನ್ನು ಶಲ್ಯನು ರಥವಿಲ್ಲದವರನ್ನಾಗಿ ಮಾಡಿ ಹಿಡಿದುಕೊಂಡು ಹುಲ್ಲಿನ ಕಂತೆಯನ್ನು ಎಸೆಯುವಂತೆ ತನ್ನಳಿಯಂದಿರನ್ನು ಎಸೆದು ಭೀಮನೊಡನೆ ಹೆಣಗಿ ಅವನನ್ನು ನೆಲಕ್ಕಿಕ್ಕಿ ಬೆನ್ನನ್ನು ತುಳಿದು ದಾಟುವ ಮದ್ದಾನೆಯಂತೆ ಕೊಲ್ಲಲು ಇಷ್ಟಪಡದೆ ದಾಟಿದನು. ಆಗ ದುರ್ಯೋಧನನು ದುಃಖಪಟ್ಟು ಕಣ್ಣಾಣದೆ ಸಮೀಪಕ್ಕೆ ಬಂದ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕುರಿತು ಹೀಗೆಂದನು.
Page #656
--------------------------------------------------------------------------
________________
ತ್ರಯೋದಶಾಶ್ವಾಸಂ | ೬೫೧ ತರಳ | ನಿಜಕುಲೋಚಿತವೃತ್ತಿಯಂ ಬಗೆಯಿಂ ಮಹಾರಥರಿ ಮಹೀ
ಭುಜರ ಮಕ್ಕಳಿರೆಂದು ನಂಬಿದನಿಂತು ನಣ್ಣನೆ ವೈರಿ ಭೂ || ಭುಜರೊಳುಂಟೊಡತಾಗಿ ಮಾಲ್ಕುದನೀಗಳಾನಂದಂ ಫಣಿ
ಧ್ವಜನನಪ್ಪನೆ ನಿಮ್ಮನ್ನೆಗೆಂದೊಡೀ ರಣರಂಗದೊಳ್ || ಉll ಕಾದುವ ಮಾಲಿಯಲ್ಲವಿದು ಕೆಮ್ಮನೆ ನನೆ ಮೇಳಗಾಳೆಗಂ
ಗಾದುವ ಮಾಲ್ ಸಿಂಧು ಘಟ ಸೂತ ಸುತರ್ಕಳಿನಾಗದೊಂದು ರಾ | ಜ್ಯೋದಯವಮ್ಮ ನಿಮ್ಮ ಬಲದಿಂದೆನಗುದೆ ಮದ್ವಿರೋಧಿಯಂ
ಛೇದಿಸಲಾನೆ ಸಾಲ್ವೆನಿರಿಮನ್ನೆಗಮಿಾ ರಣರಂಗಭೂಮಿಯೊಳ್ | ೪೩
ವll ಎಂದು ದುರ್ಯೋಧನನವರ ಕಾಳೆಗಮಂ ಮಾತಿನೊಳ್ ಕಳೆದು ವರೂಥದಿಂ ಬೀಡಿಂಗೆ ಪೋದನಾಗಳ್ ಶಲ್ಯಂ ರಾಜರಾಜಂ ತನ್ನಂ ಮೂದಲಿಸಿ ನುಡಿದುದರ್ಕೆ ಮನದೊಳೇವಯಿಸಿಚಂ|| ಇನಿತುವರಂ ಪರಾಭವಮಿಳೇಶನಿನಿನ್ನನಗಾದುದಿಂ ಸಿಡಿ
ಲೈನ ರಿಪುಸೇನೆಯ ತುಟಿದು ತೊಟ್ಟುಮಾಡುವನೆಂದಗುರ್ವಿನು | ರ್ವಿನ ಶರಸಂಕುಲಂಗಳೊಳೆ ಪೂಳ್ಳೂಡ ಪಾಂಡವಸೈನ್ಯಮಾತನಂ ಬಿನ ಮೊನೆಯೊಳ್ ಸುರುಳುರುಳಿಗೊಂಡುದು ಶಲ್ಯನಿದೇಂ ಪ್ರತಾಪಿಯೋ ೪೪
ವ|| ಅಂತು ಮದ್ರರಾಜಂ ಪಾಂಡವಪತಾಕಿನಿಯೊಂದಕ್ಕೂಹಿಣಿಬಲಮಂ ಕೊಂದು ದ್ರುಪದನ ಮಕ್ಕಳಯ್ಯರುಮನಾತನ ತಮ್ಮಂದಿರಿರ್ಪತ್ಯಯ್ಯರುಮಂ ಶಕಟ ವಿಕಟರ್ ಮೊದಲಾಗೆ ೪೨. ನಿಮ್ಮ ಕುಲಕ್ಕೆ ಯೋಗ್ಯವಾದ ವರ್ತನೆಯನ್ನು ಯೋಚಿಸಿ ಮಹಾರಥರಾಗಿದ್ದೀರಿ ರಾಜರ ಮಕ್ಕಳಾಗಿದ್ದೀರಿ ಎಂದು ನಿಮ್ಮನ್ನು ನಂಬಿದೆನು ಶತ್ರುರಾಜರುಗಳಲ್ಲಿ ಸ್ನೇಹವುಳ್ಳವರಾಗಿ ನಡೆದುಕೊಳ್ಳುವುದನ್ನು ಈಗ ನಾನು ತಿಳಿದೆನು. ಇನ್ನು ಮೇಲೆ ಯುದ್ಧರಂಗದಲ್ಲಿ ನಿಮ್ಮನ್ನು ನನ್ನವರೆಂದು ಭಾವಿಸಿದರೆ ಫಣಿ (ಸರ್ಪ)ಧ್ವಜನೇ ಅಲ್ಲ. (ದುರ್ಯೋಧನನೆನಿಸಿಕೊಳ್ಳುತ್ತೇನೆಯೇ?) ೪೩. ಇದು ಯುದ್ದಮಾಡುವ ರೀತಿಯಲ್ಲ; ಇದು ಸ್ನೇಹದಿಂದ ಪ್ರೇಮಕಲಹವಾಡುವ ರೀತಿ, ಭೀಷ್ಮ ದ್ರೋಣ ಕರ್ಣರಿಂದ ಆಗದ ಒಂದು ರಾಜ್ಯಲಾಭ ನಿಮ್ಮ ಬಲದಿಂದ ನನಗಾಗುತ್ತದೆಯೇ. ನನ್ನ ವಿರೋಧಿಯನ್ನು ಮುರಿಯಲು ನಾನೇ ಶಕ್ತನಾಗಿದ್ದೇನೆ. ಅಲ್ಲಿಯವರೆಗೆ ಈ ಯುದ್ಧಭೂಮಿಯಲ್ಲಿ ಇರಿ, ವರ ಎಂದು ದುರ್ಯೋಧನನು ಅವರ ಕಾಳಗವನ್ನು ಮಾತಿನಿಂದಲೇ ಜರೆದು ತೇರಿನಲ್ಲಿ ಬೀಡಿಗೆ ಹೋದನು. ಆಗ ಶಲ್ಯನು ಚಕ್ರವರ್ತಿಯಾದ ದುರ್ಯೋಧನನು ತನ್ನನ್ನು ಮೂದಲಿಸಿ ನುಡಿದುದಕ್ಕೆ ಮನಸ್ಸಿನಲ್ಲಿ ದುಃಖಪಟ್ಟು-೪೪. ರಾಜನಾದ ದುರ್ಯೋಧನನಿಂದ ಇಷ್ಟರ ಮಟ್ಟಿಗೆ ಅವಮಾನವು ನನಗಾಯಿತು. ಇನ್ನು ಸಿಡಿದುಹೋಗುತ್ತೇನೆ, ಶತ್ರುಸೈನ್ಯವನ್ನು ತುಳಿದು ಅಜ್ಜಿಗುಜ್ಜಿಮಾಡುತ್ತೇನೆ ಎಂದು ಅತ್ಯಂತ ಭಯಂಕರವಾದ ಬಾಣಸಮೂಹದಿಂದಲೇ ಅವರನ್ನು ಹೂಳಲು ಪಾಂಡವಸೈನ್ಯವು ಆತನ ಬಾಣಗಳ ತುದಿಯಲ್ಲಿ ಸುರುಟಿಕೊಂಡು ರಾಶಿಯಾಗಿ ಹೋಯಿತು. ಶಲ್ಯನು ಇನ್ನಷ್ಟು ಪ್ರತಾಪಶಾಲಿಯೋ! ವll ಹಾಗೆ ಶಲ್ಯನು
Page #657
--------------------------------------------------------------------------
________________
೬೫೨) ಪಂಪಭಾರತಂ * ಪರ್ಛಾಸಿರ ಮಕುಟಬದ್ಧರಂ ಕೊಂದು ಮುಂದಾಂಪರಾರುಮಂ ಕಾಣದ ಮೇಗಿಲ್ಲದೆ ನಿಂದಾಗಳ್ ಧರ್ಮಪುತ್ರ ತ್ರಿಭುವನಂಗಳಾಕಂಪಂಗೊಳೆ ಮುರಜಕೇತನವಿರಾಜಿತಮಪ್ಪ ತನ್ನ ರಥಮನದಿರದಿದಿರು ಪರಿಯಿಸಿಮಲ್ಲಿಕಾಮಾಲೆ 1 ಬೀರವಟ್ಟಮನಾಂತ ಬೀರರುಮಿರ್ವರುಂ ಸುರ ರಾಜಿ ಕೈ
ವಾರದಿಂ ಬಟಿವಿಟ್ಟು ನಮ್ಮನೆ ನೋಡ ನೋಡುವರೀಗಳೀ | ಭಾರತಂ ಸಮೆದಪ್ಪುದಳದ ನಿಂದು ಕಾದೆನುತುಂ ಶರಾ
ಸಾರಮಂ ಸುರಿದಂತಕಾತ್ಮಜನಂತಸುಂಗೊಳೆ ಕಾದಿದಂ || ಕಂth ಕಾದೆ ರಥ ತುರಗ ಕೇತನ
ಕೋದಂಡಂಗಳುಮನುಜದೆ ಖಂಡಿಸಿ ವಿಳಯಾಂ | ಭೋದನಿನಾದದ ಮದ್ರ ಮ ಹೀದಯಿತಂ ತೊಟ್ಟನಾರ್ವುದುಂ ಧರ್ಮಸುತಂ || ಮುಳಿದು ತಳಮಳಿಸಿ ತಳರದ ತೊಳಗುವ ಕರವಾಳನುರ್ಚಿ ಮೆಯ್ಕೆರ್ಚಿ ಪೊದ | ಆಳವಮರೆ ಹಿಡಿದು ರಥದಿಂ
ದಿಳೆಗಿಳಿದವನವನಿಪತಿಯನಣುಗಿದೆವೋಯ್ತಂ || ವll ಪೊಯೊಡೆ ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ ನೆಲನದಿರೆ ಕೆಡೆದ ತನ್ನಳಿಯನಂ ಮದ್ರರಾಜಂ ಕಂಡು ಕರುಣಿಸಿ
ಪಾಂಡವಸೈನ್ಯದಲ್ಲಿ ಒಂದಕ್ಟೋಹಿಣಿ ಸೈನ್ಯವನ್ನು ಕೊಂದು ದ್ರುಪದನ ಅಯ್ದುಜನ ಮಕ್ಕಳನ್ನೂ ಅವನ ಇಪ್ಪತೈದು ತಮ್ಮಂದಿರನ್ನೂ ಶಕಟವಿಕಟರೇ ಮೊದಲಾದ ಹನ್ನೆರಡುಸಾವಿರ ರಾಜರನ್ನೂ ಕೊಂದು ಮುಂದೆ ಪ್ರತಿಭಟಿಸುವವರಾರನ್ನೂ ಕಾಣದೆ ತನಗಿಂತ ಉತ್ತಮರಾದವರಾರೂ ಇಲ್ಲದೆ ನಿಂತನು. ಧರ್ಮರಾಜನು ಮೂರುಲೋಕಗಳೂ ಪೂರ್ಣವಾಗಿ ನಡುಗಿಸುವಂತೆ ಮದ್ದಲೆಯ ಗುರುತಿನ ಬಾವುಟದಿಂದ ಮೆರೆಯುತ್ತಿರುವ ತನ್ನ ತೇರನ್ನು ಹೆದರದೆ ಎದುರಾಗಿ ಹರಿಯಿಸಿದನು. ೪೫. ನಾವಿಬ್ಬರೂ ಸೇನಾಧಿಪತ್ಯವನ್ನು ವಹಿಸಿರುವ ವೀರರೇ ಆಗಿದ್ದೇವೆ. ದೇವತೆಗಳ ಸಮೂಹವು ಹೊಗಳುತ್ತಾ ದಾರಿಮಾಡಿಕೊಂಡು ನಮ್ಮನ್ನೇ ನೋಡುತ್ತಿದ್ದಾರೆ. ನೋಡು ಈಗ ಈ ಭಾರತಯುದ್ಧ ಪರಿಸಮಾಪ್ತಿಯಾಗುತ್ತಿದೆ. ಹೆದರದೆ ನಿಂತು ಯದ್ಧಮಾಡು ಎನ್ನುತ್ತ ಬಾಣದ ಮಳೆಯನ್ನು ಸುರಿದು ಧರ್ಮರಾಯನು ಪ್ರಾಣವನ್ನು ಸೆಳೆದುಕೊಳ್ಳುವಂತೆ ಕಾದಿದನು. ೪೬. ತೇರು, ಕುದುರೆ, ಬಾವುಟ, ಬಿಲ್ಲುಗಳನ್ನು ವೇಗವಾಗಿ ಖಂಡಿಸಿ ಪ್ರಳಯಕಾಲದ ಗುಡುಗಿನ ಶಬ್ದದಿಂದ ಶಲ್ಯಮಹಾರಾಜನು ಗರ್ಜಿಸಿದನು. ಧರ್ಮರಾಯನು ೪೭. ಕೋಪದಿಂದ ತಲ್ಲಣಗೊಂಡು ಹೊಳೆಯುವ ಕತ್ತಿಯನ್ನು ಒರೆಯಿಂದ ಸೆಳೆದು ರಥದಿಂದ ಇಳಿದು ಉಬ್ಬಿ ಆವರಿಸಿದ ಶಕ್ತಿಯಿಂದ ಹೊಡೆಯಲು ಶಲ್ಯನ ಸಮೀಪಕ್ಕೆ ಬರಲು ಶಲ್ಯನೂ ತೇರಿನಿಂದ ಇಳಿದು ಧರ್ಮರಾಜನನ್ನು ಸಮೀಪಿಸಿ ಹೊಡೆದನು. ವ|| ಮದ್ದಾನೆಯು ಅಪ್ಪಳಿಸಿದ ದೊಡ್ಡ ಮರದಂತೆ ನೆಲವು ಅಳ್ಳಾಡುವ ಹಾಗೆ ಕೆಳಗೆ ಬಿದ್ದ ತನ್ನಳಿಯನಾದ ಧರ್ಮರಾಜನನ್ನು
Page #658
--------------------------------------------------------------------------
________________
- ತ್ರಯೋದಶಾಶ್ವಾಸಂ | ೬೫೩ ಚಂ|| ಮುಳಿಯಿಸದನ್ನಮಾ ನೃಪನಿನಾಗದು ಸಾವನಗೆಂತುಮಿಾತನಂ
ಮುಳಿಯಿಪಿನಂದುರಃಸ್ಥಳಮನಂತೂದದಾಗಡೆ ಕಂತುಗೀಶ್ವರಂ || ಮುಳಿದವೊಲಾ ನೃಪಂ ಮುಳಿದು ನೋಡ ವಿಲೋಚನಪಾವಕಂ ತಗು' ಆಳುರ್ದೊಡೆ ಬೂದಿಯಾದುದೊಡಲಾಗಳೆ ಮದ್ರ ಮಹಾಮಹೀಶನಾ || - ೪೮
ವ|| ಅಂತಜಾತಶತ್ರು ನೇತ್ರೋದ್ದಾತಾನಳಂ ತ್ರಿಣೇತಲಲಾಟಾನಳನಂತಳವಲ್ಲದಳು ಮದ್ರನಾಥಂ ಭಸ್ಮಿಭೂತನಾದ ಮಾತನಹಿಕೇತನಂ ಕೇಳುಉ! ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರ ರಾ
ಜಾದಿ ಮಹೀಭುಜರ್ ಧುರದೊಳೆನ್ನಯ ದೂಸಟಿನಲ್ಲಿ ಮಚ್ಚೆದಂ | ತಾದರಿಂದ ಮಯುಟಿದುದಿನೆನಗಾವುದೊ ಮೆಳಡೆಯ ಮುಂ
ದಾದ ವಿರೋಧಿಸಾಧನಮನನ್ನ ಗದಾಶನಿಯಿಂದುರುಳುವೆಂ 1 ೪೯
ವ| ಎಂದು ನಿಜಭುಜ ವಿಕ್ರಮೃಕಸಾಹಯನಾಗಿ ಗದೆಯಂ ಕೊಂಡು ಸಂಗ್ರಾಮ ರಂಗಕ್ಕೆ ನಡೆಯಲೆಂದಿರ್ದ ಕುರುಕುಳಚೂಡಾಮಣಿಯ ದಕ್ಷಿಣಕರಾಗ್ರಮಂ ಪಿಡಿದು ಸಂಜಯನಿಂತೆಂದಂ* ಮll ಬೆವಸಾಯಂಗೆಯನ್ನುಮುಂಟೆಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂ
ಡವರಂ ಗೆಲ್ಗುದಸಾಧ್ಯಮಾಯ್ಕೆ ನಿಜ ದೋರ್ದಂಡಂಬರಂ ಗಂಡರಾ | ಹವರಂಗಕ್ಕೊಳಗೇ ಸಮಂತು ಪಗೆಯಂ ಕೊಲ್ವಂತು ಗೆಲ್ವಂತು ಕಾ ,
ದುವುದೇಕಾಕಿಯ ಆಗಿ ದೇವರಿಪುಭೂಪಾಳರ್ಕಳೊಳ್ ಕಾದುವೆ || ೫೦ ಶಲ್ಯನು ನೋಡಿ (ಕರುಣದಿಂದ ನೋಡಿ) ಕರುಣಿಸಿ, ೪೮. ಕೋಪವನ್ನುಂಟು ಮಾಡುವವರೆಗೂ ಈ ರಾಜನಿಂದ ಸಾವು ಹೇಗೂ ನನಗಾಗುವುದಿಲ್ಲ. ಹೇಗೂ ಈತನನ್ನು ರೇಗಿಸುತ್ತೇನೆ ಎಂದು ಎದೆಯನ್ನು ಒದ್ದನು. ತಕ್ಷಣವೇ ಮನ್ಮಥನಿಗೆ ಈಶ್ವರನು ಕೋಪಿಸಿಕೊಂಡ ಹಾಗೆ ಆ ರಾಜನು ಕೋಪಿಸಿ ನೋಡಿದನು. ಕಣ್ಣಿನ ಬೆಂಕಿಯು ಅಟ್ಟಿಕೊಂಡು ಬಂದು ಆಗಲೆ ಸುಡಲು ಶಲ್ಯಮಹಾರಾಜನ ಶರೀರವು ಬೂದಿಯಾಯಿತು. ವ|| ಹಾಗೆ ಧರ್ಮರಾಯನ ಕಣ್ಣಿನಲ್ಲಿ ಹುಟ್ಟಿದ ಬೆಂಕಿಯು ಮುಕ್ಕಣ್ಣನ ಹಣೆಗಣ್ಣಿನ ಬೆಂಕಿಯಂತೆ ಅಳತೆಯಿಲ್ಲದಷ್ಟು ಸುಡಲು ಶಲ್ಯನು ಬೂದಿಯಾದ ಮಾತನ್ನು ದುರ್ಯೋಧನನು ಕೇಳಿದನು. ೪೯. ಅಂತಹ ಅದ್ಭುತಶಕ್ತಿಯುಳ್ಳ ಭೀಷ್ಮ ದ್ರೋಣ, ಕರ್ಣ, ಮದ್ರರಾಜನೇ ಮೊದಲಾದ ರಾಜರುಗಳು ಯುದ್ಧದಲ್ಲಿ ನನ್ನ ಕಾರಣದಿಂದ ಸತ್ತು ನಿರ್ನಾಮವಾದರು. ಈ ನನ್ನದೊಂದೆ ಶರೀರ ಉಳಿದಿದೆ. ಇನ್ನು ನನಗೆ ಮಾಡುವ ಕಾರ್ಯವಾವುದು? ಸಂಪೂರ್ಣವಾಗಿ ನನ್ನನ್ನು ಎದುರಿಸುವ ಶತ್ರುಸೈನ್ಯವನ್ನು ನನ್ನ ಗದೆಯೆಂಬ ಸಿಡಿಲಿನಿಂದ ಉರುಳಿಸುವೆನು ವll ಎಂದು ತನ್ನ ಬಾಹುಬಲವೊಂದನ್ನೇ ಸಹಾಯವನ್ನಾಗಿ ಹೊಂದಿ ಗದೆಯನ್ನು ತೆಗೆದುಕೊಂಡು ಯುದ್ಧರಂಗಕ್ಕೆ ಹೋಗಬೇಕೆಂದಿದ್ದ ಕುರುಕುಲಚೂಡಾಮಣಿಯಾದ ದುರ್ಯೋಧನನ ಬಲಗೈಯ್ಯ ತುದಿಯನ್ನು ಹಿಡಿದುಕೊಂಡು ಸಂಜಯನು ಹೀಗೆಂದನು.-೫೦. ಕೃಪಾಶ್ವತ್ಥಾಮರಿರಲು ಕಾರ್ಯಭಾರಮಾಡುವುದಕ್ಕೆ ಇನ್ನೂ ಅವಕಾಶವುಂಟು. ಪಾಂಡವರನ್ನು ಗೆಲ್ಲುವುದು
Page #659
--------------------------------------------------------------------------
________________
೬೫೪ | ಪಂಪಭಾರತಂ
ವ|| ಎಂಬುದುಮೆನ್ನುಮನೇಕಾಕಿಯೆಂದೇಳಿಸಿ ನುಡಿದೆಯೆಂದು ಸಂಜಯನ ಮೊಗಮಂ ಮುನಿದು ನೋಡಿಚoll ವನ ಕರಿ ಕುಂಭ ಪಾಟನ ಪಟಪ್ಪ ಕಠೋರ ನಖ ಪ್ರಹಾರ ಭೇ |
ದನ ಗಳಿತಾಸ್ಕ ರಕ್ತ ನವ ಮೌಕ್ತಿಕ ಪವಿಳಾಸ ಭಾಸುರಾ | ನನನೆನೆ ಸಂದುದಗ್ರ ಮೃಗರಾಜನುಮಂ ಮದವದ್ವಿರೋಧಿ ಭೇ
ದನಕರನಪ್ಪ ಶೌರ್ಯಮದದೆನ್ನುಮನೊಂದೊಡಲೆಂಬ ಸಂಜಯಾ ೧ ೫೧
ವ| ಎಂಬುದುಂ ದೇವರ ಬಾಹುಬಳಮಜೇಯಮುಮಸಹಾಯಮುಮಪ್ಪುದಾದ ದೊಡಂ ದೇಶ ಕಾಲ ವಿಭಾಗಮುಮನಾಪತೀಕಾರಮುಮನಯದ ವಿವೇಕಿಗಳಂತೆ ದೇವರ್ ನೆಗಲಾಗದೇನಂ ನೆಗಡಂ ಕುರುಪಿತಾಮಹನೊಳಾಳೋಚಿಸಿ ನೆಗಟ್ಟುದೆಂದು ಮುಟಿಸಾಜಿತೆ ನುಡಿದು ಕಾಲವಂಚನೆಗೆಯ್ಯಲ್ ಬಗೆದು ಸಂಗ್ರಾಮರಂಗದೊಳಗನೆ ಮುಂದಿಟ್ಯೂಡಗೊಂಡನೇಕ ನೃಪಶಿರಃ ಕಪಾಳಶಕಳಜರ್ಜರಿತಮುಂ ಪರಸ್ಪರ ಸಮರರಭಸ ಸಮುತ್ಕಾರಿತಮುಂ ಸಕಲ ಸಾಮಂತಮಕುಟಬದ್ರಮೌಳಿಮಾಳಾವಿಗಳಿತಮಕುಟಕೋಟಿ ಸಂಘಟನೋಚ್ಚಳಿತ ಮಣಿಶಲಾಕಾ ಸಂಕುಳಮುಂ ಸಮರಭರ ನಿರ್ಭರ ಭೀಮಸೇನ ಘನಗದಾಪ್ರಹರಣನಿಸ್ಸಹಮದವದನೇಕ ಮತ್ತ
ಸಾಧ್ಯವಾಗಿದೆಯೆ? ನಿನ್ನ ಬಾಹುದಂಡದವರೆವಿಗೂ - ಅದಕ್ಕೆ ಸಮಾನರಾದ ಪೌರುಷಶಾಲಿಗಳು ಯುದ್ಧರಂಗದಲ್ಲಿದ್ದಾರೆಯೇ? ಶತ್ರುವನ್ನು ಕೊಲ್ಲುವ ಹಾಗೂ ಗೆಲ್ಲುವ ಹಾಗೆ ಕಾದಬೇಕು. ಸ್ವಾಮಿ; ಶತ್ರುರಾಜರುಗಳಲ್ಲಿ ಒಬ್ಬಂಟಿಗನೇ ಆಗಿ ಕಾದುತ್ತೀಯಾ? ವ|| ಎನ್ನಲು ನನ್ನನ್ನು ಏಕಾಕಿಯೆಂದು ಅಪಹಾಸ್ಯಮಾಡಿ ನುಡಿದೆಯಾ ಎಂದು ಸಂಜಯನ ಮುಖವನ್ನು ನೋಡಿ ಕೋಪಿಸಿಕೊಂಡು ೫೧. ಕಾಡಾನೆಯ ಕುಂಭಸ್ಥಳವನ್ನು ಭೇದಿಸುವುದರಲ್ಲಿ ಸಮರ್ಥವೂ ಕಠಿಣವೂ ಆದ ಉಗುರುಗಳ ಪೆಟ್ಟಿನಿಂದ ಬಿರಿದು ಅಲ್ಲಿಂದ ಸುರಿಯುತ್ತಿರುವ ಕೆಂಪಾದ ಹೊಸಮುತ್ತುಗಳ ಸಾಲುಗಳ ಶೋಭೆಯಿಂದ ಪ್ರಕಾಶಮಾನವಾದ ಮುಖವುಳ್ಳ ಮೃಗರಾಜನಾದ ಸಿಂಹವನ್ನೂ ಮದಿಸಿರುವ ಶತ್ರುಗಳನ್ನು ಸೀಳುವ ಪ್ರತಾಪದ ಸೊಕ್ಕಿನಿಂದ ಕೂಡಿದ ನನ್ನನ್ನು ಸಂಜಯಾ, ಏಕಾಕಿ ಎನ್ನುವೆಯಾ? ವರ ಸ್ವಾಮಿಯವರ ತೋಳಿನ ಬಲವು ಜಯಿಸುವುದಕ್ಕೆ ಆಗದುದೂ ಸಹಾಯವನ್ನಪೇಕ್ಷಿಸದುದೂ ಆಗಿದೆ. ಆದರೂ ದೇಶಕಾಲವಿಭಾಗವನ್ನು ಆಪತ್ತಿಗೆ ತಿಳಿಯದಿರುವ ವಿವೇಕಶೂನ್ಯರಾದವರ ಹಾಗೆ ಸ್ವಾಮಿಯವರು ಮಾಡಕೂಡದು. ಏನು ಮಾಡಬೇಕಾದರೂ ಕುರುಪಿತಾಮಹನಾದ ಭೀಷ್ಕರಲ್ಲಿ ಆಲೋಚಿಸಿ ಮಾಡತಕ್ಕದ್ದು ಎಂದು (ದುರ್ಯೊಧನನ) ಕೋಪವು ಕಡಿಮೆಯಾಗುವ ಹಾಗೆ ಮಾತನಾಡಿ ಸಮಾಧಾನಪಡಿಸಿದನು. ಕಾಲವಂಚನೆಮಾಡಲು ಯೋಚಿಸಿ ಯುದ್ಧರಂಗದಲ್ಲಿ ಒಳಭಾಗದಲ್ಲಿಯೇ ದುರ್ಯೊಧನನನ್ನು ಮುಂದಿಟ್ಟು ಕೊಂಡು ಅವನೊಡನೆ ಅನೇಕರಾಜರ ತಲೆ ಮತ್ತು ಕಪಾಲಗಳ ತಲೆಯೋಡು ಗಳಿಂದ ಕಿಕ್ಕಿರಿದಿದ್ದು ಒಬ್ಬೊಬ್ಬರ ಯುದ್ದರಭಸದಿಂದ ಹೊರಡಿಸಲ್ಪಟ್ಟುದೂ ಸಕಲ ಸಾಮಂತರಾಜರ ತಲೆಗಳ ಸಾಲುಗಳಿಂದ ಜಾರಿದ ಕಿರೀಟಗಳ ತುದಿಯ ತಗುಲುವಿಕೆ ಯಿಂದ ಮೇಲೆದ್ದ ರತ್ನಸಲಾಕಿಗಳ ಸಮೂಹವನ್ನುಳ್ಳುದೂ ಯುದ್ದಭಾರವನ್ನು
Page #660
--------------------------------------------------------------------------
________________
ತ್ರಯೋದಶಾಶ್ವಾಸಂ / ೬೫೫
ಮಾತಂಗ ಪದನಖಖರ್ವತೋರ್ವತಳಮುಂ ಪ್ರಚಂಡಮಾರ್ತಂಡಮರೀಚಿತೀವ್ರಜ್ಜಳನಾಸ್ಕಾರ
ಕರಾಳಕರವಾಳಭಾಮಂಡಳಪರೀತೋದತದೋರ್ದಂಡಚಂಡಪ್ರಚಂಡಸುಭಟಾರೂಢತುರಂಗಮ
ವೇಗಬಲಪತಿತಖರಖುರಟಂಕಪರಿಸ್ಕಲನಕಳಿತವಿಷಮಸಮರಭೇರೀ ನಿನಮುಮಾಕರ್ಣಕೃಷ್ಣ ವಿಕ್ರಮಾರ್ಜುನಕಾರ್ಮುಕವಿಮುಕ್ತನಿಶಿತಸಾಯಕಸಂಕುಳಶನಿಪತಿ ತಾನೇಕಕಳಕಳಾಕಳಿತಮುಂ ಪ್ರಕುಪಿಸೂತಹೂಂಕಾರ ಕಾತರಿತತರಳತರತುರಂಗದ್ರುತವೇಗಾಕೃಷ್ಣ ಧನಂಜಯರಥಚಟುಳ ಚಕ್ರನೇಮಿಧಾರಾಪರಿವೃತಸಂಘಟ್ಟನಸಮುಚ್ಚಳಿತ ಪಾಂಸು ಪಟಳಾಂಧಕಾರದುರ್ಲಕ್ಷಾಂತರಿಕ್ಷ ಕ್ಷಿತಿ ದಿಗಂತರಾಳಾಂತರಮುಮನವರತನಿಹತನರಕರಿತುರಗನಿಕುರುಂಬಕೀಲಾಲಕಲ್ಲೋಲಪ್ರವರ್ತನಾನೇಕ ನದನದೀಪ್ರವಾಹಬಾಹುಳ್ಯದುಸ್ತರಾವತರಣಮಾರ್ಗಮುಂನಿಶಿತಾಸಿಪತ್ರಪತಿತ ಪ್ರಚಂಡ ಸುಭಟಮಸ್ತಕೋಚ್ಚಳಿತಚಟಾಚ್ಛಾಟನದುರ್ನಿರೀಕ್ಷ ನರ್ತಿತಾನೇಕಕಬಂಧಬಂಧುರಮುಮಪ್ಪ ವಿಷಮ ಪ್ರದೇಶಂಗಳೊಳ್ ತೊಲಗಿ ತೊಲಗಿ ಪೋಗೆ ಸಂಜಯಂ ದುರ್ಯೋಧನನ ಮೊಗಮಂ ನೋಡಿ
ವಹಿಸಿರುವ ಭೀಮಸೇನನ ದೊಡ್ಡದಾದ ಗದೆಯ ಪೆಟ್ಟನ್ನು ಸಹಿಸಲಾಗದ ಮದ್ದಾನೆಗಳ ಕಾಲಿನುಗುರಿನಿಂದ ತೋಡಿದ ಭೂಭಾಗವನ್ನುಳ್ಳದೂ ಬಹಳ ಕಾಂತಿಯಿಂದ ಕೂಡಿದ ಸೂರ್ಯನ ತೀವ್ರವಾದ ಕಿರಣಗಳಂತೆಯೂ ತೀವ್ರಾಗ್ನಿಯಂತೆಯೂ ಹೊಳೆಯುವ ಭಯಂಕರವಾದ ಕತ್ತಿಗಳ ಕಾಂತಿಯ ಪರಿವೇಷದಿಂದ ಸುತ್ತುವರಿಯಲ್ಪಟ್ಟು ಎತ್ತರವಾದ ಬಾಹುಗಳಿಂದ ಪ್ರಚಂಡವಾದ ಸುಭಟರು ಹತ್ತಿರುವ ಕುದುರೆಗಳ ಸೈನ್ಯದ ವೇಗದಿಂದ ಬೀಳಿಸಲ್ಪಟ್ಟ ಹೇಸರಗತ್ತೆಗಳ ತೀಕ್ಷ್ಮವಾದ ಗೊರಸಿನ ಲಾಳಗಳ ಜಾರುವಿಕೆಯಿಂದ ಉಂಟಾದ ಶಬ್ದವುಳ್ಳದ್ದೂ ಕಿವಿಯವರೆಗೂ ಸೆಳೆಯಲ್ಪಟ್ಟ ಅರ್ಜುನನ ಬಾಣದಿಂದ ಬಿಡಲ್ಪಟ್ಟ ಹರಿತವಾದ ಬಾಣಗಳ ಶಲ್ಯದಿಂದ (ಚೂರು) ಬೀಳಿಸಲ್ಪಟ್ಟ ಅನೇಕ ಕಳಕಳಶಬ್ದಗಳಿಂದ (ಕೂಡಿದುದೂ) ತುಂಬಿದುದೂ ಕೋಪಗೊಂಡ ಸಾರಥಿಗಳ ಗರ್ಜನೆಗಳಿಂದ ಸಂಭ್ರಮಗೊಂಡ ಚಂಚಲವಾದ ಕುದುರೆಯ ಓಟದ ವೇಗದಿಂದ ಸೆಳೆಯಲ್ಪಟ್ಟ ಅರ್ಜುನನ ಬಲಿಷ್ಠವಾದ ಚಕ್ರಗಳ ಸುತ್ತಲಿರುವ ಕಬ್ಬಿಣದ ಪಟ್ಟಿಗಳು ಹೊರಳಿದ ಹೊಡೆತದಿಂದ ಮೇಲಕ್ಕೆದ್ದ ಧೂಳುಗಳ ಪದರದಿಂದ ಕಾಣಲಾಗದ ಭೂಮ್ಯಾಕಾಶ ದಿಗ್ಗಾಗಗಳ ಒಳಭಾಗವನ್ನುಳ್ಳುದೂ ಯಾವಾಗಲೂ ಹೊಡೆಯಲ್ಪಟ್ಟ ಮನುಷ್ಯ, ಆನೆ, ಕುದುರೆಗಳ ಸಮೂಹದ ರಕ್ತಗಳ ಅಲೆಗಳ ಹೊರಳುವಿಕೆಯಿಂದ ಆದ ಅನೇಕ ನದನದೀ ಪ್ರವಾಹಗಳನ್ನು ದಾಟಲಸಾಧ್ಯವಾದ ದಾರಿಗಳನ್ನುಳ್ಳುದೂ, ಹರಿತವಾದ ಕತ್ತಿಯಿಂದ ಬೀಳಿಸಲ್ಪಟ್ಟ ಭಯಂಕರವಾದ ಸುಭಟರ ತಲೆಯಿಂದ ಮೇಲಕ್ಕೆದ್ದ ಜುಟ್ಟುಗಳ ಚಲನೆಯಿಂದ ಮರೆಯಾಗಿರುವ ಅನೇಕ ಅಟ್ಟೆಗಳ ನೃತ್ಯದಿಂದ ಮನೋಹರವಾಗಿರುವುದೂ ಆಗಿರುವ ಹಳ್ಳಕೊಳ್ಳಗಳ ಪ್ರದೇಶದಲ್ಲಿ ನಡೆದು ಹೋಗುತ್ತಿರುವ ದುರ್ಯೋಧನನ ಮುಖವನ್ನು ಸಂಜಯನು ನೋಡಿ
Page #661
--------------------------------------------------------------------------
________________
೬೫೬ | ಪಂಪಭಾರತಂ ಚಂ|| ಎಗುವನೇಕ ವಂಶ ನರಪಾಲಕರತ್ನಕಿರೀಟಕೋಟಿಯೊಳ್
ಮಿಣುಗುವ ಪದರಾಗದ ಬಿಸಿಗಿವೀ ನಿಜ ತಾದಪದಮಾ | ಯಿದು ಸಿಡಿಲ್ಲ ಬಾಳ ಮೊನೆಯಂದಿನ ತಿಂತಿಣಿಯೊಳ್ ತಗುಳು ಕಿ ಕಿಚಿಗಿಳಿದಿರ್ದ ಕೊಳ್ಳುಳದೊಳಂ ನಡೆವೀ ನಡೆಗೆಂತು ನೋಂತೆಯೋ ೫೨
ವ|| ಎನುತುಂ ಕಿತದಂತರಮಂ ಬಂದುಚಂ|| ಇವು ಪವನಾತ್ಮಜಂ ಗದೆಯಿನೆಲ್ವಡಗಾಗಿರೆ ಮೋದ ಮೊಟ್ಟೆ ಬಿ.
ಇವು ಮದವಾರಣಂಗಳಿವು' ನೋಡ ಗುಣಾರ್ಣವನಂದಿನಿಂದುರು | ಳ್ಳುವು ಮನುಜೇಂದ್ರ ರುಂದ್ರ ಮಕುಟಾಳಿಗಳಿಗಳಿಂತಿವ ಗಾಂ ಡಿವಿಯ ವರೂಥಘಾತದೊಳೆ ನುರ್ಗಿದ ತುಂಗುರಂಗಕೋಟಿಗಳ್ || ೫೩
ವ|| ಎಂದು ನೆಣದ ಪಳ್ಳಂಗಳಂ ಪಾರುಂ ನೆತ್ತರ ತೊಳಿತಿಗಳಂ ಬಂಜಿಸಿಯುಮಡಗಿನಿಡುವುಗಳಂ ದಾಂಟಿಯುಂ ಪೆಣದ ತಿಂತಿಣಿಯಂ ನೂಂಕಿಯುಂ ರಥದ ಘಟ್ಟಣೆಗಳನೇಳೆ ಪಾಯುಂ ತೇರ ಪಲಗೆಯಂ ಮಟ್ಟಿಯುಂ ಪೋಗಿವೋಗಿ ಭೂತ ಪ್ರೇತ ಪಿಶಾಚ ನಿಶಾಚರನಿಚಯನಿಚಿತಭೂಭಾಗಮನೆಯೇ ವಂದಾಗಳ್ಉ: ಬೇಡ ವಿರೋಧಮೆಂತುಮರಿಕೇಸರಿಯೊಳ್ ಸಮಸಂದು ಸಂಧಿಯಂ
ಮಾಡೆನೆ ಮಾಡಲೊಲ್ಲದೆ ಸುಹೃದ್ದಲಮೆಲ್ಲಮನಿಕ್ಕಿ ಯುದ್ಧಮಂ | ಮಾಡಿದ ಜಾತಿಬೆಟ್ ನಿನಗದೇವಿರಿದೀಯೆಡಜತೆಂದು ಮುಂದೆ ಬಂ ದೇಡಿಸುವಂತಿರಾಡಿದುದದೋಂದು ಮರುಳ್ ಫಣಿರಾಜಕೇತುವಂ || ೫೪
೫೨. ನಮಸ್ಕಾರಮಾಡುವ ಅನೇಕ ಮನೆತನಗಳ ರಾಜರ ಕಿರೀಟದ ತುದಿಯಲ್ಲಿ ಪ್ರಕಾಶಿಸುತ್ತಿರುವ ಪದ್ಮರಾಗದ ಕಾಂತಿಗೂ ರತ್ನಗಳ ಪ್ರಕಾಶಕ್ಕೂ ಅಂಜುತ್ತಿದ್ದ ಈ ನಿನ್ನ ಪಾದಕಮಲಗಳು ಈಗತಾನೇ ಕತ್ತಲಿಸಲ್ಪಟ್ಟು ಸಿಡಿದು ಬಿದ್ದಿರುವ ಮೊನಚಾದ ಬಾಣಗಳ ಸಮೂಹದಲ್ಲಿ ಸೇರಿಕೊಂಡು ಒತ್ತಾಗಿ ಸೇರಿರುವ ಯುದ್ಧರಂಗದಲ್ಲಿಯೂ ನಡೆಯುವ ಈ ನಡೆಗೆ ಎಷ್ಟು ವ್ರತಮಾಡಿದ್ದೆಯೋ?- ವll ಎನ್ನುತ್ತ ಸ್ವಲ್ಪದೂರ ಬಂದು ೫೩. ಇವು ಭೀಮನು ಗದೆಯಿಂದ ಮೂಳೆ ಮಾಂಸಗಳಾಗುವಂತೆ ಹೊಡೆಯಲು ಕುಸಿದು ಬಿದ್ದ ಮದ್ದಾನೆಗಳು. ಇವು ನೋಡಪ್ಪ, ಅರ್ಜುನನ ಬಾಣದಿಂದ ಉರುಳಿಬಿದ್ದ ರಾಜರ ರಾಶಿಯಾದ ಕಿರೀಟಗಳ ಸಮೂಹಗಳು. ಇವು ಅರ್ಜುನನ ತೇರಿನ ಪೆಟ್ಟಿನಿಂದ ಜಜ್ಜಿಹೋದ ಎತ್ತರವಾದ ಕುದುರೆಗಳ ಸಮೂಹಗಳು ವl ಎಂಬುದಾಗಿ ಕೊಬ್ಬುಗಳ ಹಳ್ಳವನ್ನು ಹಾಯೂ ರಕ್ತಪ್ರವಾಹಗಳನ್ನು ತಪ್ಪಿಸಿಯೂ ಮಾಂಸದ ರಾಶಿಗಳನ್ನು ದಾಟಿಯೂ ನರಗಳ ಸಮೂಹವನ್ನು ತಳ್ಳಿಯೂ ತೇರಿನ ಸಂಘಟಣೆಗಳಿಂದಾದ ದಿಣ್ಣೆಹಳ್ಳಗಳನ್ನು ಹತ್ತಿ ಇಳಿದೂ ತೇರಿನ ಹಲಗೆಗಳನ್ನು ತುಳಿದೂ ನಡೆದು ಹೋಗಿ ಭೂತಪ್ರೇತಪಿಶಾಚರಾಕ್ಷಸಸಮೂಹದಿಂದ ತುಂಬಿದ ಪ್ರದೇಶವನ್ನು ಸೇರಿದರು. ೫೪. ಅರಿಕೇಸರಿಯಲ್ಲಿ ಹೇಗೂ ವಿರೋಧವು ಬೇಡ, ಸಮಾನವಾಗಿ ಕೂಡಿ ಸಂಧಿಯನ್ನು ಮಾಡು ಎಂದರೂ ಒಪ್ಪದೆ ಸ್ನೇಹಿತರನ್ನು ನಾಶಮಾಡಿ ಯುದ್ಧವನ್ನು ಮಾಡಿದ ಜಾತಿಮರುಳಾದ ನಿನಗೆ ಈ ಕಷ್ಟಗಳು ಏನು ದೊಡ್ಡದು ಎಂದು ಮುಂದೆ
Page #662
--------------------------------------------------------------------------
________________
ಚoll
ತ್ರಯೋದಶಾಶ್ವಾಸಂ /೬೫೭ ಮರುಳೆನೆ ಲೋಕದೊಳ್ ನೆಗಟ್ಟು ಕೊಳ್ಳುಳದೊಳ್ ಮರುಳಾಟವಾಡುವಾಂ ಮರುಳೆನೊ ವಿಕ್ರಮಾರ್ಜುನನೊಳೊಲ್ಲದೆ ಸಂಧಿಯನುರ್ಕಿ ಕೆಟ್ಟ ನೀಂ | ಮರುಳಯೊ ಪೇಟೆ ಪೇಳಿದೊಡೆ ಪೋಗದಿರೀಶ್ವರನಾಣೆಯೆಂದು ಪು ಲರುಳಿನಿಸಾನುಮಂ ತೆಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ ||
99.9%
ವ|| ಆಗಳಾ ಮರುಳ ಕೆಯಕ್ಕೆ ದುರ್ಯೋಧನಂ ಮುಗುಳಗೆ ನಕ್ಕೆನ್ನಂ ವಿಧಾತ್ರ ಮರುಳಾಡಿದ ಕಾರಣದಿಂದೀ ಮರುಳ ಕಣ್ಣಾಂ ಮರುಳಾಗಿ ತೋಡೆದೆನೆಂದಲ್ಲಿಂ ತಳರ್ದು ಕಿಳದಂತರಮಂ ನಡೆದೊಂದೆಡೆಯೊಳನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಮುಭಯ ಪಕ್ಷಸ್ಥಿತೋಭಯಕುಲಶುನೃಪತಿಮಣಿಮಕುಟಮರೀಚಿಮೇಚಕಿತಮುಮಪ್ಪ ಸಂಗ್ರಾಮಭೂಮಿಯ ನಡುವೆ ದೃಷ್ಟದ್ಯುಮ್ನಕಚಗ್ರಹವಿಲುಳಿತವಳಿಯುಂ ತದೀಯ ಕೌಕ್ಷೇಯಕಧಾರಾವಿದಾರಿತ ಶರೀರನುವಾಗಿ ಬಿಟ್ಟೆರ್ದ ಶರಾಚಾರ್ಯರು ಕಂಡು
ಚಂ|| ನೆಗಟ್ಟುದು ಬಿಲ್ಲ ಬಿನ್ನಣಮಿಳಾವಳಯಕ್ಕೆ ಸಮಸ್ತ ಧಾತ್ರಿ ಕೆ
ಯುಗಿವುದು ನಿಮ್ಮದೊಂದೆ ಪೆಸರ್ಗಳೊಡ ನಿಮ್ಮ ಸರಲ್ಲಿ ದೇವರುಂ | ಸುಗಿವರಯೋನಿಸಂಭವರಿರೆನ್ನಯ ದೂಸಳನನ್ನ ಕರ್ಮದಿಂ ಪಗೆವರಿನಕ್ಕಟಾ ನಿಮಗಾಯಿರವಾದುದೆ ಕುಂಭಸಂಭವಾ |
೫೬
ಬಂದು ದುರ್ಯೋಧನನನ್ನು ಅಪಹಾಸ್ಯಮಾಡುವಂತೆ ಒಂದು ಮರುಳು ಮಾತನಾಡಿತು. ೫೫, ಲೋಕದಲ್ಲಿ ಮರುಳುಗಳು ಎನ್ನಿಸಿಕೊಂಡು ಪ್ರಸಿದ್ಧರಾಗಿ ಯುದ್ಧರಂಗದಲ್ಲಿ ಮರುಳುಗಳ ಆಟವನ್ನಾಡುವ ನಾವುಗಳು ಮರುಳುಗ (ಬುದ್ದಿಗೇಡಿಗಳೊ) ವಿಕ್ರಮಾರ್ಜುನನಲ್ಲಿ ಸಂಧಿಯನ್ನೊಲ್ಲದೆ ಉಬ್ಬಿ ಕೆಟ್ಟ ನೀನು ದಡ್ಡನೋ ಹೇಳು, ಹೇಳದಿದ್ದರೆ ಹೋಗಬೇಡ; ಈಶ್ವರನಾಣೆ ಎಂದು ಹುಲ್ಲಿನಂತೆ ಬಹು ಲಘುವಾದ ಒಂದು ಮರುಳು ಒಂದಿಷ್ಟು ತಡೆದು ದುರ್ಯೋಧನನನ್ನು ಹಿಂಸೆ ಮಾಡಿತು. ವll ಆಗ ಆ ಪಿಶಾಚಿಯ ಕೆಲಸಕ್ಕೆ ದುರ್ಯೋಧನನು ಮುಗುಳಗೆ ನಕ್ಕು ನನ್ನನ್ನು ಬ್ರಹ್ಮನು ಮರುಳುಮಾಡಿದ ಕಾರಣದಿಂದ ಈ ಪಿಶಾಚದ ಕಣ್ಣಿಗೆ ನಾನು ಹುಚ್ಚನಾಗಿ ತೋರಿದೆನು ಎಂದು ಅಲ್ಲಿಂದ ಹೊರಟು ಸ್ವಲ್ಪ ದೂರ ನಡೆದು ಒಂದು - ಕಡೆಯಲ್ಲಿ ಅನೇಕ ಆನೆ, ಕುದುರೆ ಮನುಷ್ಯರ ದೇಹಗಳಿಂದ ತುಂಬಿದುದೂ ಎರಡು ವಂಶದ ಪಕ್ಷಗಳಲ್ಲಿಯೂ (ತಂದೆತಾಯಿಗಳ ಎರಡು ಕುಲದಲ್ಲಿಯೂ) ಶುದ್ಧರಾದವರ ರತ್ನಕಿರೀಟಗಳ ಕಾಂತಿಯಿಂದ ಕೂಡಿಕೊಂಡಿರುವ ಆ ಯುದ್ಧಭೂಮಿಯ ಮಧ್ಯಭಾಗದಲ್ಲಿ ಧೃಷ್ಟದ್ಯುಮ್ನನು ಜುಟ್ಟನ್ನು ಹಿಡಿದುದರಿಂದ ತಿರುಗಿಕೊಂಡಿರುವ ತಲೆಯುಳ್ಳವನೂ ಅವನ ಕತ್ತಿಯ ಅಲಗುಗಳಿಂದ ಸೀಳಲ್ಪಟ್ಟ ಶರೀರವುಳ್ಳವನೂ ಆಗಿ ಬಿದ್ದಿದ್ದ ದ್ರೋಣಾಚಾರ್ಯನನ್ನು ನೋಡಿದನು. ೫೬. ನಿಮ್ಮಚಾಪವಿದ್ಯಾಕೌಶಲವು ಭೂಮಂಡಲದಲ್ಲೆಲ್ಲ ಪ್ರಸಿದ್ಧವಾದುದು. ನಿಮ್ಮ ಒಂದು ಹೆಸರನ್ನು ಕೇಳಿದರೆ ಸಮಸ್ತ ಲೋಕವೂ ಕೈಮುಗಿಯುವುದು. ನಿಮ್ಮ ಬಾಣಗಳಿಗೆ ದೇವತೆಗಳೂ ಭಯಪಡುವರು. ನೀವು ಅಯೋನಿಜರಾಗಿದ್ದೀರಿ; ನನ್ನ ಕಾರಣದಿಂದ ನನ್ನ ದುಷ್ಕರ್ಮದಿಂದ ಅಯ್ಯೋ ದ್ರೋಣಾಚಾರ್ಯರೇ ಶತ್ರುಗಳಿಂದ ನಿಮಗೂ ಈ ದುಃಸ್ಥಿತಿಯುಂಟಾಯಿತೇ?
Page #663
--------------------------------------------------------------------------
________________
೬೫೮ / ಪಂಪಭಾರತಂ
ವ|| ಎಂದು ಗುರುವಿನ ಪಾದಕಮಲಂಗಳಂ ತಲೆಯ ಮೇಲಿಟ್ಟು ಪೊಡೆವಟ್ಟಂತ ನಡೆತಂದು ವೃಕೋದರನಿಂ ನಿಶ್ಲೇಷ ಪೀತರುಧಿರನಪ್ಪ ದುಶ್ಯಾಸನನಂ ಕಂಡಾತನಂ ಮುತ್ತಿ ಸುತ್ತಿಗೆದ ಮುದುವರ್ದುಗಳುಮನಗಲ ಮೆಟ್ಟಿ ಪೋಟ್ಟು ಭೀಮಸೇನ ಮುನ್ನಂ ಕುಡಿದುದುಂ ನೆತ್ತರಂ ಪಡೆಯದಾಕಾಶಕ್ಕೆ ಬಾಯಂ ತಳದೂಲ್ವ ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು ಪೆಡಸಾರ್ವ ನರಿಗಳುಮಂ ತಾನೆ ಸೋದು ಸೋದರನಲಲೊಳ್ ಕಣ್ಣ ನೀರ್ಗಳಂ ಸುರಿದು
೫೭
ಕಂ ನಿನ್ನಂ ಕೊಂದನ ಬಸಿಲಿಂ
ನಿನ್ನಂ ತೆಗೆಯದೆಯುಮವನ ಕರುಳಂ ಪರ್ದಿ೦ || ಮುನ್ನುಂಗಿಸಿ ನೋಡದೆಯುಂ
ಮುನ್ನಮೆ ಯುವರಾಜ ನಿನ್ನನಾಗಿ ನೋಡಿದೆನೇ | ವ|| ಎಂಬುದುಂ ಸಂಜಯನಿಂತಪ್ಪ ವಿಪಳಾಪಂಗಳ ಶೌರ್ಯಶಾಲಿಗಳನುಚಿತ ಮತ್ತಮರ್ಪುದೆಂದು ತಳರ್ದು ಬಂದಮೋಘಾ ಧನಂಜಯ ಕರಪರಿಚ್ಚುತವಿಕರ್ಣ ವಿಶೀರ್ಣನಾಗಿರ್ದ ಕರ್ಣಸೂನುವಂ ವೃಷಸೇನನಂ ಕಂಡು ಕರ್ಣನಂ ನೆನೆದರ್ದದೆದು ದುರ್ಯೋಧನನ ಕೆಳೆಯನಪ್ಪ ನಿಮ್ಮಮ್ಮ ಕರ್ಣನಲ್ಲಿದನೆಂದು ತೆಕ್ಕನೆ ತೀವಿದ ಕಣ್ಣ ನೀರೊಳ ದೆಸೆಗಾಣದ ನಿಂದಿರ್ದ ಸುಯೋಧನನಂ ಸಂಜಯನಿಂತೆಂದಂ
ವ|| ಎಂದು ಗುರುವಿನ ಪಾದಕಮಲಗಳನ್ನು ತಲೆಯ ಮೇಲಿಟ್ಟು ನಮಸ್ಕಾರಮಾಡಿ ಹಾಗೆಯೇ ಮುಂದೆ ನಡೆದು ಬಂದು ಭೀಮಸೇನನಿಂದ ಸ್ವಲ್ಪವೂ ಉಳಿಯದಂತೆ ಕುಡಿಯಲ್ಪಟ್ಟ ರಕ್ತವನ್ನುಳ್ಳ ದುಶ್ಯಾಸನನನ್ನು ನೋಡಿ ಮುತ್ತಿ ಬಳಸಿಕೊಂಡಿದ್ದ ಮುದಿಹದ್ದುಗಳನ್ನು ಬಿಟ್ಟು ದೂರಹೋಗುವಂತೆ ಕಾಲಿನಿಂದ ಶಬ್ದಮಾಡಿ ಸೀಳಿ ಭೀಮನು ಮೊದಲೇ ಕುಡಿದುಬಿಟ್ಟಿದ್ದುದರಿಂದ ರಕ್ತವನ್ನು ಪಡೆಯದೆ ಆಕಾಶದ ಕಡೆ ಬಾಯಿಬಿಟ್ಟು ಕೂಗುತ್ತಿರುವ ಗುಳ್ಳೆನರಿಗಳನ್ನೂ ನರಗಳನ್ನೂ ಪಕ್ಕಗಳನ್ನೂ ಕಿತ್ತಳೆದು ಹಿಂದಕ್ಕೆ ಹೋಗುವ ನರಿಗಳನ್ನೂ ತಾನೇ ಅಟ್ಟಿ ತಮನ ದುಃಖದಿಂದ ಕಣ್ಣೀರನ್ನು ಸುರಿಸಿದನು. ೫೭. ನಿನ್ನನ್ನು ಕೊಂದವನ ಹೊಟ್ಟೆಯಿಂದ ನಿನ್ನನ್ನು ತೆಗೆಯದೆಯೂ ಅವನ ಕರುಳನ್ನು ಹದ್ದಿಗೆ ಮೊದಲು ನುಂಗಿಸಿ ನೋಡದೆಯೂ ಅದಕ್ಕೆ ಮುಂಚೆಯೇ ಯುವರಾಜನಾದ ದುಶ್ಯಾಸನನೇ ನಿನ್ನನ್ನು ನಾನು ನೋಡಿದೆನೇ? ವ|| ಸಂಜಯನು ಇಂತಹ ವಿಶೇಷವಾದ ಅಳುವಿಕೆಯು ಶೌರ್ಯಶಾಲಿಗಳಿಗೆ ಯೋಗ್ಯವಲ್ಲ, ಆ ಕಡೆ ಬರಬೇಕು ಎಂದು ಹೇಳಲು ಅಲ್ಲಿಂದ ಹೊರಟುಬಂದು ಅಮೋಘಾಸ್ತಧನಂಜಯ ನಾದ ಅರ್ಜುನನ ಕಯ್ಯಂದ ಬಿಡಲ್ಪಟ್ಟ ಬಾಣದಿಂದ ಸೀಳಲ್ಪಟ್ಟಿದ ಕರ್ಣನ ಮಗನಾದ ವೃಷಸೇನನನ್ನು ನೋಡಿ ಕರ್ಣನನ್ನು ಜ್ಞಾಪಿಸಿಕೊಂಡು ಎದೆಬಿರಿದು 'ದುರ್ಯೊಧನನ ಸ್ನೇಹಿತನಾದ ನಿಮ್ಮ ತಂದೆ ಕರ್ಣನಲ್ಲಿದ್ದಾನೆ ಎಂದು ಥಟಕ್ಕನೆ ತುಂಬಿದ ಕಣ್ಣೀರಿನಿಂದ ದಿಕ್ಕು ಕಾಣದೆ ನಿಂತಿದ್ದ ದುರ್ಯೋಧನನನ್ನು ಕುರಿತು ಸಂಜಯನು ಹೀಗೆಂದನು
Page #664
--------------------------------------------------------------------------
________________
ತ್ರಯೋದಶಾಶ್ವಾಸಂ | ೬೫೯ ಚoll ನರಶರಘಾತದಿಂ ಪಳೆದು ಪತ್ತಿಸಿದಂತೆವೊಲಿರ್ದ ಮಯ್ ಭಯಂ
ಕರತರಮಾಗೆ ಮುಯ್ಯುವರೆಗಂ ತೆಗೆದಂಬಿನ ಮುಷ್ಟಿ ಬಿನ್ನಣಂ | ಚಿರಸಿರೆ ಪೊದ ಪಂದಲೆಯೋಳಾದ ಮುಗುಳ್ಳಗೆ ಭೀತರಾದರೆ ಇರುಮನಳುರ್ಕೆಯಿಂ ನಗುವವೋಲ್ ರವಿನಂದನನಿತ್ತಲಿರ್ದಪಂ || ೫೮
ವ|| ಎಂಬುದುಮಾಗಳ್ ತಪ್ಪತ್ತುಮಲ್ಲಿದನೆತ್ತಣನೆಂದು ಕರ್ಣನ ಕಳೇವರಮಂ ನೋಡಿ ನೋಡಲಾಳದ ಕಣ್ಣಳಂ ಮುಟ್ಟಿ ಮೂರ್ಛವೊಗಲ್ ಬಗೆದನಂ ಸಂಜಯ ತಬ್ಬಿಸಿಕೊಂಡಾಗ ಚೇತರಿಸಿ ಕೂರ್ಮ ಕೆಯಿಕ್ಕು ಬರೆ ಸೈರಿಸಲಾಗಿದೆಚಂ ಬೆಸನಡೆಗಳ ತೊಟ್ಟುಬೆಸನಂಗಳವುಂಕಿದೊಡಾಗದೆಂದು ಬ.
ಗ್ಲಿಸುವೆಡೆಗಾಳನಿಂತು ನೆಗಳಿಂಬೆಡೆಯೊಳ್ ಗುರು ಪೆರ್ಚದೊಂದು ಬೇ | ವಸದೆಡೆಗಾಶ್ರಯಂ ಮನಮನೊಪ್ಪಿಸುವೀಯೆಡೆಯೊಳ್ ಮನಂ ವಿಚಾ.
ರಿಸುವೊಡೆ ಕರ್ಣನಲ್ಲದನಗಾವಡೆಗಂ ಪಜನೊರ್ವನಾವನೋ | ೫೯ ಮ! ನೆಲನಂ ಕೊಟ್ಟನಿನಾತ್ಮಜಾತನನಗಾಂ ತಕ್ಕೂರ್ಮೆಯಿಂದಂ ಜಳಾಂ
ಜಲಿಯಂ ಕೊಟ್ಟೆನುಮಿಲ್ಲ ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷ | ದೃಲಮಂ ಸುಟ್ಟನುದಾತ್ತಪುಣ್ಯನವನಂ ಚೈತಾಗ್ನಿಯಿಂ ಸುಟ್ಟೆನಿ ಶ್ಲೋಲವಿಂದಿಂತರ್ದಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೊಧನಂ || ೬೦
೫೮. ಅರ್ಜುನನ ಬಾಣದ ಪೆಟ್ಟಿನಿಂದ ಹರಿದು ಹಂಚಿದ ಹಾಗಿರುವ ಶರೀರ, ಅತ್ಯಂತ ಭಯಂಕರವಾಗಿರಲು ಹೆಗಲ ತುದಿಯವರೆಗೂ ಸೆಳೆದ ಬಾಣ ಹಿಡಿದ ಮುಷ್ಟಿ, ಕೌಶಲದಿಂದ ಕೂಡಿರಲು ಕತ್ತರಿಸಿಹೋದ ಹಸಿಯ ತಲೆಯಲ್ಲಿ ಕಾಣಿಸುತ್ತಿರುವ ಮುಗುಳಗೆ, ಇವುಗಳಿಂದ ಕೂಡಿ ಹೆದರಿ ಕೊಂಡಿರುವವರನ್ನೆಲ್ಲ ಅತಿಶಯವಾದ ರೀತಿಯಲ್ಲಿ ನಗುತ್ತಿರುವ ಹಾಗೆ ಸೂರ್ಯಪುತ್ರನಾದ ಕರ್ಣನು ಈ ಕಡೆ ಇದ್ದಾನೆ. ವ|| ಎನ್ನಲು ಆಗಲೆ ಚೇತರಿಸಿಕೊಂಡು ಎಲ್ಲಿದ್ದಾನೆ ಯಾವ ಕಡೆ ಎಂದು ಕರ್ಣನ ಶರೀರವನ್ನು ನೋಡಿ ನೋಡಲಾರದೆ ಕಣ್ಣುಗಳನ್ನು ಮುಚ್ಚಿಕೊಂಡು ಮೂರ್ಛಿತನಾದವನನ್ನು ಸಂಜಯನು ತಬ್ಬಿಕೊಳ್ಳಲು ಚೇತರಿಸಿಕೊಂಡು ಪ್ರೀತಿಯು (ಸ್ನೇಹವು) ಕೈಮೀರಿ ಬರುತ್ತಿರಲು ಅದನ್ನು ಸೈರಿಸಲಾರದವನಾದನು. ೫೯. ಕಾರ್ಯಮಾಡುವ ಸಂದರ್ಭದಲ್ಲಿ ಸೇವಕನಂತೆಯೂ ವ್ಯಸನಗಳು ಮೇಲೆ ಮೇಲೆ ಒತ್ತಿ ಬರುತ್ತಿರಲು ಇದಾಗುವುದಿಲ್ಲ ಎಂದು ಬೆದರಿಸುವ ಸಮಯದಲ್ಲಿ ಯಜಮಾನನಂತೆಯೂ (ಸ್ವಾಮಿ-ಒಡೆಯ) ಹೀಗೆ ಮಾಡು ಎನ್ನುವ ಸಮಯದಲ್ಲಿ ಗುರುವಿನಂತೆಯೂ; ಅಧಿಕವಾದ ವ್ಯಥೆಯುಂಟಾದಾಗ ಅವಲಂಬನದಂತೆಯೂ ಮನಸ್ಸನ್ನೊಪ್ಪಿಸುವ ಸಂದರ್ಭದಲ್ಲಿ ಮನಸ್ಸೇ ಆಗಿಯೂ ಇದ್ದಂಥ ಕರ್ಣನನ್ನು ಬಿಟ್ಟು ನನಗೆ ಎಲ್ಲ ಸಮಯಕ್ಕೂ ಸಹಾಯಕನಾಗುವ ಮತ್ತೊಬ್ಬನಾವನಿದ್ದಾನೆ? ೬೦. ಕರ್ಣನು ನನಗೆ (ಭೂಮಿಯನ್ನು) ರಾಜ್ಯವನ್ನೇ ಸಂಪಾದಿಸಿ ಕೊಟ್ಟನು. ನಾನು ಅದಕ್ಕನುಗುಣವಾಗಿ ಪ್ರೀತಿಯಿಂದ ಅವನಿಗೆ ತರ್ಪಣವನ್ನು ಕೊಟ್ಟಿಲ್ಲ. ಸೂರ್ಯನ ಮಗನಾದ ಕರ್ಣನು ತನ್ನ ತೇಜಸ್ಸೆಂಬ ಅಗ್ನಿಯಿಂದ ವೈರಿಸೈನ್ಯವನ್ನು ಸುಟ್ಟನು. ಬಹಳ ಪುಣ್ಯಶಾಲಿಯಾದ
Page #665
--------------------------------------------------------------------------
________________
೬೬೦) ಪಂಪಭಾರತಂ
ವಗ ಎಂದು ನೊಂದು ನುಡಿದ ದುರ್ಯೋಧನನಂ ಸಂಜಯನಿಂತೆಂದಂಶಾll ಕೊಟ್ಟೆ ಕಿರ್ಚನುದಗ್ರಶೋಕಶಿಖಿಯಿಂ ಕಣ್ಣೀರ್ಗಳಿಂದಯ್ದೆ ನೀ
ರ್ಗೋಟೆ. ಸೂರ್ಯಸುತಂಗೆ ಲೌಕಿಕಮನೇನಿಂ ದಾಂಟಿದೆ ಪೋಜು ನೀ || ಟ್ವೆಟ್ಟಿಂ ವೈರಿಯನೊಡ್ಡಿ ತತ್ತಿಶಿತದಿಂದಾತಂಗೆ ನೀಂ ಕೂರ್ಪೊಡೇ
ಗೆಟ್ಟನ್ನಡೆ ಮಾಡು ತದ್ದಿಜಗಣಕ್ಕಾಹಾರಮಂ ಭೂಪತೀ || ೬೧
ವ|| ಎಂದು ಪೆರ್ಚದ ಶೋಕರಸಮಂ ಕೋಪರಸದ ಮೇಲಿಕ್ಕಿ ಭೀಷಂ ಶರಶಯನ ತಳವಿಗತನಾಗಿರ್ದಲ್ಲಿವರಮೆಂತಾನುಮೊಡಗೊಂಡು ಬಂದಾಗಳ್ಚಂ!! ಇಡಿದಿರೆ ರೋಮ ಕೂಪದೊಳಗುರ್ಚಿದ ಸಾಲ ಸರಳುಂ ತೇಜಂ
ಬಡಿದರೆ ಬೆಟ್ಟುವೊರ್ಗುಡಿಸಿದಂತೆ ನೆರೆ ಸುಯ್ಯ ಪುಳಿಂ | ಬಡನಡುವಂ ಶರಾಳಿಭಯದಿಂ ನಡುಪಂತಿರೆ ಚಿತ್ತದೊಳ್ ಮೃಡಂ ತೊಡರ್ದಿರೆ ಬಿದ್ದಿದೇನೆಸೆದನೋ ಶರಶಯ್ಕೆಯೊಳಂದು ಸಿಂಧುಜಂ || ೬೨ ಹರನೊಳೆ ಪತಿ ತೆತ್ತಿಸಿದ ಚಿತ್ತಮನಿರ್ಬಗಿಯಾಗೆ ಮೋಹವೂ ತರಿಸಿ ಸುಯೋಧನಂಗೆ ರಣಭೂಮಿಯೊಳೆಂತುಟವಸ್ಥೆಯೋ ಕನ || ಲ್ಕುರಿದಪುದೆನ್ನ ಮೆಯ್ಕೆನುತುಮತ್ತಣ ಪಂಬಲ ಬಂಬಲೊಳ್ ತೆಂ
ದಿರಿದುದು ಚಿತ್ರಮಾ ದೊರೆಯ ಯೋಗಿಗಮಿಂತುಂಟೆ ಮೋಹಮಾಗದೇ l೬೩ ಅವನನ್ನು ಚಿತೆಯ ಬೆಂಕಿಯಿಂದ ಸುಟ್ಟಿಲ್ಲ: ಹೀಗೆ ಕರ್ಣನಲ್ಲಿ ಎದೆಸೋಂಕಿ ಪ್ರೀತಿಯಿಂದ ಇರುವವನು ದುರ್ಯೊಧನನ ಹಾಗೆ ಬೇರೆಯಾದವನು ಉಂಟೆ ? ವರ ಎಂದು ದುಃಖಿಸಿ ಆಡಿದ ದುರ್ಯೋಧನನಿಗೆ ಸಂಜಯನು ಹೀಗೆ ಹೇಳಿದನು - ೬೧. ತೀವ್ರವಾದ ಶೋಕಾಗ್ನಿಯಿಂದ ಚಿತಾಗ್ನಿಯನ್ನು ಕೊಟ್ಟಿದ್ದೀಯೆ. ಕಣ್ಣೀರುಗಳಿಂದ ಸಂಪೂರ್ಣವಾಗಿ ತರ್ಪಣವನ್ನು ಕೊಟ್ಟಿದ್ದೀಯೆ. ಲೋಕವ್ಯವಹಾರದಲ್ಲಿ ಏನನ್ನು ದಾಟಿದ್ದೀಯೆ ? ಶತ್ರುವನ್ನು ಹೋಳುಮಾಡಿ ಸೀಳಿ ರಾಶಿಹಾಕಿ ಆ ಮಾಂಸದಿಂದಕರ್ಣನನ್ನು ನೀನು ಪ್ರೀತಿಸುವುದಾದರೆ ಆ ಪಕ್ಷಿಸಮೂಹಕ್ಕೆ (ಹದ್ದುಗಳಿಗೆ) ಆಹಾರವನ್ನು ಮಾಡು. ನಷ್ಟವಾದುದೇನು ? ಇನ್ನು ಮುಂದೆ ನಡೆ, ವ! ಎಂದು ಹೇಳಿ ಹೆಚ್ಚಾದ ಶೋಕರಸವನ್ನೂ ಮೀರಿ ಕೋಪರಸವು ಹೆಚ್ಚುತ್ತಿರಲು ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿದ್ದ ಸ್ಥಳದವರೆಗೆ ಹೇಗೋ ಜೊತೆಯಲ್ಲಿ ಕರೆದುಕೊಂಡು ಹೋದನು. ೬೨. ಕೂದಲಿನ ಒಂದೊಂದು ಹಳ್ಳ(ಕುಳಿ)ಗಳಲ್ಲಿಯೂ ಸಾಲವೃಕ್ಷದಿಂದ ಮಾಡಿದ ಬಾಣಗಳು ನಾಟಿಕೊಂಡು ದಟ್ಟವಾಗಿ ತುಂಬಿರಲು ನಾನಾರೀತಿಯಾಗಿ ಪರ್ವತಗಳುರುಳಿದಂತೆ ಬಿದ್ದು ನಿಶ್ಲೇಷ್ಟನಾಗಿ ಸ್ಪಂದನವಾಗುತ್ತಿರುವ (ದುಡಿಯುತ್ತಿರುವ) ಹುಣ್ಣುಗಳಿಂದಲೂ ಬಾಣಗಳ ನೋವಿನಿಂದಲೂ ಬಡವಾಗಿರುವ ಸೊಂಟವನ್ನು ನಡುಗಿಸುತ್ತ ಮನಸ್ಸಿನಲ್ಲಿ ಶಿವನನ್ನು ಧ್ಯಾನಿಸುತ್ತ ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿ ಅತ್ಯಂತ ಶೋಭಾಯಮಾನನಾಗಿದ್ದನು. ೬೩. ಈಶ್ವರನಲ್ಲಿ ಸೇರಿಕೊಂಡಂತಿದ್ದ ಮನಸ್ಸನ್ನು ಮೋಹವು ಎರಡು ಭಾಗವಾಗಿ ಮಾಡಲು ದುರ್ಯೋಧನನಿಗೆ ಯುದ್ಧ ರಂಗದಲ್ಲಿ ಇಂತಹ ಅವಸ್ಥೆಯಾಯಿತೇ! ನನ್ನ ಶರೀರವು ಕೆಂಡದಂತೆ ಹೊಳೆದು
Page #666
--------------------------------------------------------------------------
________________
ತ್ರಯೋದಶಾಶ್ವಾಸಂ | ೬೬೧ ವಗ ಎಂಬನ್ನೆಗಮವರಿರ್ವರ ಕಾಲ ಸೊಪ್ಪುಳನಾಲಿಸಿ ಸುರನದೀನಂದನಂ ಪೇಟೆಮಾ ಬಂದರಾರೆಂದನೇಕ ವ್ರಣವೇದನಾಪರವಶಶರೀರಂ ಬೆಸಗೊಳುದುಂ ಸಂಜಯಂ ಕುರುಪಿತಾ ಮಹನ ಕರ್ಣಪಾಂತಮಂ ಸಾರ್ದು ಕುರುಕುಳಗಗನಮೃಗಧರಂ ಬಂದನೆಂದು ಬಿನ್ನಪಂ ಗೆಲ್ಲುದುಂ ಯೋಗಾಭ್ಯಾಸದೊಳರೆಮುಗುಳ ರಕ್ತಾಂಭೋಜದಳ ವಿಳಾಸೋಪಹಾಸಿಗಳಪ್ಪ ಕಣ್ಣಳನೊತ್ತಂಬದಿಂ ತೆನೆದುಚಂti ಎಣಗಿದ ಕೌರವೇಶ್ವರನೊಳಾದಮಿದಿರ್ಚಿದಲಂಪಲರ್ಚಿದ
ಬೈಜಿನೊಳಕೊಬ್ಬಿನಂ ಪರಸಿ ಮೆಯ್ಯೋಳೆ ಬಂದ ತೆಕ್ಕೆ ಮಯ್ ಕರಂ || ಮುಗಿಪುದಿಂತು ಪೇಮ್ ಮಗನೆ ಬೆಳೊಡೆಯೆಲ್ಲಿದುದತ್ತ ಪೋಯ್ತು ಸು ತಿಳಿದ ಚತುರ್ಬಲಂ ನಿನಗಮಾಯಿರವಾದುದೆ ವೈರಿಭೂಪರಿಂ || ೬೪
ವ|| ಎಂದು ಕಣ್ಣ ನೀರಂ ನೆಗಪಿ ನಿನ್ನ ಬಂದ ಬರವೇ ಸಮರವೃತ್ತಾಂತವನಜೆಪಿ ದಪ್ಪುದಿಂ ನಿನ್ನ ಗೆದ್ದ ನಿಯೋಗಮಾವುದೇಗೆಯ್ಯಲ್ ಬಗೆದಷೆಯೆನೆಚಂ|| ಬಗೆ ಪತುಂಟೆ ವೈರಿನೃಪರಂ ತಲೆದೂಟ್ಟುವುದಲ್ಲದೆಂತುಮಿ |
ಲಿಗೆ ಬರವಂ ಭವತ್ವದಸರೋಜವನಾಂ ಬಲಗೊಂಡು ಮತ್ತಮಾ || ಜಿಗೆ ನಡೆಯಲೆ ಬಂದೆನೆನೆ ದೇವನದೀಸುತನಾತ್ಮಚಿತ್ತದೊಳ್ || ಬಗೆದನಿದೇನಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ || ೬೫
ಉರಿಯುತ್ತಿದೆಯಲ್ಲಾ ಎಂದು ಹೇಳುತ್ತ ಆ ಕಡೆಯ ಹಂಬಲದ ಆಧಿಕ್ಯದಿಂದ ಮನಸ್ಸು ನಾನಾ ರೀತಿಯಾಗಿ ಅಲೆದಾಡಿತು. ಅಂತಹ ಯೋಗ್ಯತೆಯನ್ನುಳ್ಳ ಯೋಗಿಗೂ ಹೀಗೆಯೇ ಮಮತೆ ಉಂಟಾಗುವುದಿಲ್ಲವೇ ? ವರ ಎನ್ನುವಷ್ಟರಲ್ಲಿ ಇಬ್ಬರ ಹೆಜ್ಜೆಯ ಶಬ್ದವನ್ನು ಕೇಳಿ ಅನೇಕ ಗಾಯಗಳ ನೋವಿನಿಂದ ಪರವಶವಾಗಿದ್ದ ಶರೀರವನ್ನುಳ್ಳ ಭೀಷ್ಮನು 'ಈಗ ಬಂದವರು ಯಾರು ಹೇಳಿ' ಎಂದು ಕೇಳಿದನು. ಸಂಜಯನು ಕುರುಪಿತಾಮಹನಾದ ಭೀಷ್ಮನ ಕಿವಿಯ ಹತ್ತಿರಕ್ಕೆ ಹೋಗಿ 'ಕುರುವಂಶವೆಂಬ ಆಕಾಶದ ಚಂದ್ರನಾದ ದುರ್ಯೋಧನನು ಬಂದಿದ್ದಾನೆ' ಎಂದು ವಿಜ್ಞಾಪನೆ ಮಾಡಿದನು. ಭೀಷ್ಕನು ಯೋಗಾಭ್ಯಾಸದಲ್ಲಿ ಅರ್ಧಮುಚ್ಚಿಕೊಂಡಿದ್ದ ಕನೈದಿಲೆಯ ದಳದ ಕಾಂತಿಯನ್ನು ಹಾಸ್ಯಮಾಡುವ ಹಾಗಿದ್ದ ತನ್ನ ಕಣ್ಣುಗಳನ್ನು ಬಲಾತ್ಕಾರದಿಂದ ತೆಗೆದು-೬೪. ತನಗೆ ನಮಸ್ಕಾರ ಮಾಡಿದ ಕೌರವೇಶ್ವರನನ್ನು ಎದುರಿನಲ್ಲಿ ಕಂಡ ಸಂತೋಷವು ಪ್ರೀತಿಯನ್ನು ಅಧಿಕಗೊಳಿಸಲು ಆಶೀರ್ವಾದಮಾಡಿ ನೀನು ಏಕಾಕಿಯಾಗಿ ಬಂದ ಸ್ಥಿತಿಯನ್ನು ನೋಡಿ ನನ್ನ ಮನಸ್ಸು ವಿಶೇಷದುಃಖಪಡುತ್ತಿದೆ. ಮಗು, ಶ್ವೇತಚ್ಛತ್ರಿ ಎಲ್ಲಿ? ಸುತ್ತಲೂ ಬಳಸಿ ಬರುತ್ತಿದ್ದ ಚತುರಂಗಸೈನ್ಯವೆಲ್ಲಿ? ಯಾವ ಕಡೆಗೆ ಹೋಯಿತು. ಶತ್ರುರಾಜರಿಂದ ನಿನಗೂ ಈ ಸ್ಥಿತಿಯುಂಟಾಯಿತೆ? ವll ಎಂದು ಕಣ್ಣೀರನ್ನು ತುಂಬಿಕೊಂಡು ನೀನು ಬಂದಿರುವ ಬರುವಿಕೆಯೇ ಯುದ್ದ ಸಮಾಚಾರವನ್ನು ತಿಳಿಸುತ್ತದೆ. ಇನ್ನು ಮುಂದೇನು ಮಾಡುತ್ತೀಯೆ ? ಹೇಗೆ ಯೋಚಿಸಿದ್ದೀಯೆ ಎಂದು ಕೇಳಿದರು. ೬೫. ದುರ್ಯೋಧನನು ಮತ್ತೇನಜ್ಜ ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆಯುಂಟೇ? ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನಃ ಯುದ್ಧಕ್ಕೆ ಹೋಗೋಣವೆಂದು
Page #667
--------------------------------------------------------------------------
________________
೬೭
೬೬೨/ ಪಂಪಭಾರತ
ವ|| ಎಂದಾದಿ ಮಧ್ಯಾವಸಾನದೂಳಯುಮಬಿಲದ ಕಲಿತನದಳವಿಂಗೆ ಮನಂಗೊಂಡು ಮಗನೆ ನಿನಗಪ್ರೊಡೆ ದೆಯ್ಯಂ ಪ್ರತಿಕೂಲಮಂತುಂ ಕಾದಿ ಗೆಲಲಾರ್ಪೆಯಲ್ಲಿ ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ ನಿನ್ನೊಂದ ಮೆಯೊಳಾದ ಕೂರ್ಪು ಪಗೆವರ ದರ್ಪಮನದಿರ್ಪದಲ್ಲಿ ನಿನಗಂ ಮೃತೇಯರ್ ಕೊಟ್ಟೂರುಭಂಗಶಾಪಮನಿವಾರಿತಮೆ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮುಮನದು ಬಲೆಯಂ ನಿನ್ನ ನೆಗಟ್ಟುದಂ ನೆಗಟ್ಟುದೆಂದುಚಂ ಪರಿಕಿಪುದೊಂದಲೆಂದೆರಡನೋತೊಳಕೊಳ್ಳುದು ಮೂಅಂದೆ ನಾ
ಅರಿದಣಿದಯಳಂದ ನೆಜ್ ಕಲ್ವುದು ನಿರ್ಣಯಮಾಗಿರಾಲಿಯೊಳ್ || ಪರಿಣತನಪ್ಪುದೇಬಿಳಮೊಂದದೆ ನಿಲ್ವುದು ದುರ್ವಿಮಂತ್ರಮಂ
ಪರೆಪ ಟಮಾಳಮಂ ಪಿರಿದನೋದಿದೊಡಪ್ಪ ಪದಾರ್ಥಮಾವುದೋ || ೬೬ ಕಂ! ಪರ್ಚುಗೆ ಭರತಕುಲಂ ನೆಲೆ
ವರ್ಚುಗೆ ನಿಮ್ಮೆರಡು ತಂಡಮೊದವಿದ ನಳೊಂ | ಕರ್ಚುಗ ಕಲುಷಂ ನೀಂ ತಲೆ
ಯುರ್ಚದಿರೆನ್ನಂದ ನುಡಿಗೆ ಕುರುಕುಳತಿಳಕಾ || . ಬಂದೆ ಎಂದನು. ಭೀಷ್ಮನು ಚಕ್ರವರ್ತಿಯಾದ ದುರ್ಯೊಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು. ವ ಮೊದಲಿಂದ ಕೊನೆಯವರೆಗೆ ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ ಸಂತೋಷಪಟ್ಟು (ದುರ್ಯೊಧನನನ್ನು ಕುರಿತು) 'ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ; ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ ಶತ್ರುಗಳ ದರ್ಪವನ್ನು ನಡುಗಿಸಲಾರದು. ನಿನಗೂ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು. ನನ್ನ ಪ್ರಾಣವು ಇರುವಾಗಲೇ ಸಂಧಿಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ ಮುಂದೆ ಕಾಲವನ್ನೂ ಕಾರ್ಯವನ್ನೂ ತಿಳಿದು ಬಳಿಕ ನೀನು ಮಾಡುವುದನ್ನು ಮಾಡು ಎಂದರು. ೬೬. ಒಂದಾದ ಬುದ್ದಿಯಿಂದ ಎರಡಾದ ಕಾರ್ಯಾಕಾರ್ಯಗಳನ್ನು ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು. ಶತ್ರುಮಿತ್ರಬಾಂಧವ (ಉದಾಸೀನರೆಂಬ ಮೂವರನ್ನು ಒಲಿಸಿ ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು. ರಾಜಯೋಗ್ಯವಾದ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದೈಧೀಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು. ದೂತಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು. ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು ? ೬೭. ಭರತಕುಲ (ವಂಶ) ಅಭಿವೃದ್ದಿಯಾಗಲಿ; ನಿಮ್ಮ ಎರಡು ಗುಂಪಿನ ಸ್ನೇಹವು ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ, ನಿಮ್ಮ ದ್ವೇಷವು ತೊಳೆದುಹೋಗಲಿ;
Page #668
--------------------------------------------------------------------------
________________
ತ್ರಯೋದಶಾಶ್ವಾಸಂ | ೬೬೩ ಉll ದೋಷಮುಮೇವಮುಂ ಶಕುನಿಯಿಂ ಯುವರಾಜನಿನಾಯ್ತು 'ಪೋಯ್ತು ನಿ
ರ್ದೋಷಿಗಳಷ್ಟ ನಿಮ್ಮೆರಡು ತಂಡಮುಮಿಂ ಪುದುವಾಳ್ಳುದಂತದೇಂ || ದೋಷಮೊ ಮೇಣ್ ವೃಕೋದರನಿನಾ ರಣರಂಗದೊಳಾದ ದುಷ್ಟ ದು
ಶ್ಯಾಸನರಕ್ತಮೋಕ್ಷದೊಳೆ ದೋಷವಿಮೋಕ್ಷಮದೇಕೆ ಕೊಂಡಷ್ಯ || ೬೮
ವ|| ಎಂದು ನುಡಿದ ಪಿತಾಮಹನ ನುಡಿಗಳೆ ಕುರುರಾಜನಿಂತೆಂದಂಮlu
ಶರಶಯಾಗ್ರದೊಳಿಂತು ನೀಮಿರೆ ಘಟಪೋದೂತನಂತಾಗೆ ವಾ ಸರನಾಥಾತ್ಮಜನಂತು ಸಾಯೆ ರಣದೊಳ್ ದುಶ್ಯಾಸನಂ ತದ್ಧ ಕೋ | ದರನಿಂದಂತಚಿದ ಸೈರಿಸಿಯುಮಾಂ ಸಂಧಾನಮಂ ವೈರಿ ಭೂಪ ರೊಳಿ೦ ಸಂಧಿಸಿ ಪೇಟೆಮಾರ್ಗ ಮಜವೆಂ ಸಂಪತ್ತುಮಂ ಶ್ರೀಯುಮಂll ೬೯ ಕಂ11 ಬಿಡಿಮೆನ್ನ ನುಡಿಗೆ ಬೀಳ್ಕೊಳೆ
ನುಡಿಯದಿರಿಂ ಪೆಜತನಜ್ಜ ಮುಂ ನುಡಿದೆರಡಂ | ನುಡಿವನೆ ಚಲಮಂ ಬಲ್ಕಿಡಿ ವಿಡಿದೆಂ ತನ್ನವುದಕ್ಕೆ ಸಂಗರ ಧರೆಯೊಳ್ ||
೭೦ * ವ|| ಎಂಬುದುಂ ನೀನುಮಂತುಂ ಕಾದಿಯಲ್ಲದಿರೆಯವೊಡಿಂದಿನೊಂದಿವಸಮನನ್ನ ಪೇಟ್ಟಿ ಜಳಮಂತ್ರೋಪದೇಶಮಂ ಕೆಯೊಂಡು ಕುರುಕ್ಷೇತ್ರದುತ್ತರದಿಣ್ಣಾಗದ ವೈಶಂಪಾಯನ
ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ತಲೆಯಾಡಿಸಬೇಡ. ! ೮. ನಿಮ್ಮ ತಪ್ಪೋ ಕೋಪವೂ ಶಕುನಿಯಿಂದಲೂ ದುಶ್ಯಾಸನನಿಂದಲೂ ಪ್ರಾರಂಭವಾಯಿತು, ಹೋಯಿತು; ನಿರ್ದೋಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ; ಹಾಗೆ ಮಾಡುವುದು ದೋಷವೇನಲ್ಲ. ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನಃ ಏಕೆ ಅಂಗೀಕರಿಸುತ್ತೀಯೆ? ವ|| ಎಂದು ಹೇಳಿದ ಭೀಷ್ಮನ ಮಾತುಗಳಿಗೆ ದುರ್ಯೋಧನನು ಹೀಗೆಂದನು-೬೯. ಬಾಣದ ಹಾಸಿಗೆಯ ತುದಿಯಲ್ಲಿ ನೀವು ಹೀಗಿರುವಾಗ ದ್ರೋಣಾಚಾರ್ಯರು ಹಾಗಿರುವಾಗ, ಕರ್ಣನು ಸತ್ತು ಯುದ್ಧದಲ್ಲಿ ದುಶ್ಯಾಸನನು ಭೀಮನಿಂದ ಹಾಗೆ ಸತ್ತು ನಾಶವಾಗಿರುವಾಗ (ಇವೆಲ್ಲವನ್ನೂ ನಾನು ಸಹಿಸಿಕೊಂಡು ಶತ್ರುರಾಜರಲ್ಲಿ ಸಂಧಿಯನ್ನುಂಟುಮಾಡಿಕೊಂಡು ಯಾರಿಗೆ ನನ್ನ ಐಶ್ವರ್ಯವನ್ನೂ ವೈಭವವನ್ನೂ ಪ್ರದರ್ಶಿಸಬೇಕು. ೭೦. ನನ್ನ ಮಾತಿಗೆ (ಸಿದ್ಧಾಂತಕ್ಕೆ) ನನ್ನನ್ನು ಬಿಡಿ, ಅಜ್ಜ, ತಮ್ಮ ಅಪ್ಪಣೆಯನ್ನು ಪಡೆದು ಹೋಗುವುದಕ್ಕಾಗಿ ಬಂದ ನನಗೆ ಬೇರೆ ಯಾವುದನ್ನೂ ಹೇಳಬೇಡಿ. ಮೊದಲು ಒಂದು ರೀತಿ ಪುನಃ ಬೇರೆ ರೀತಿಯಲ್ಲಿ ಹೇಳುತ್ತೇನೆಯೇ? ಛಲವನ್ನು ಬಿಗಿಯಾಗಿ ಹಿಡಿದಿದ್ದೇನೆ. ಯುದ್ದದಲ್ಲಿ ತಾನಾದುದಾಗಲಿ' ಎಂದನು. ವ| “ನೀನು ಹೇಗೂ ಯುದ್ಧ ಮಾಡದೇ ಇರುವುದಿಲ್ಲವಾದರೆ ಈ ಒಂದು ದಿವಸವನ್ನು ನಾನು ಹೇಳುವ ಜಲಮಂತ್ರೋಪದೇಶವನ್ನು ಅಂಗೀಕರಿಸಿ ಕುರುಕ್ಷೇತ್ರದ ಉತ್ತರ
Page #669
--------------------------------------------------------------------------
________________
೬೬೪) ಪಂಪಭಾರತಂ ಸರೋವರದೊಳ್ ಮುಲುಗಿ ಕಾಲಾಗ್ನಿ ರುದ್ರ ರಸಾತಳದೊಳಡಂಗಿರ್ಪಂತಿರ್ದು ನಿನ್ನವಸರಕ್ಕೆ ಬಂದು ಕೂಡುವ ಬಲದೇವನುಮಂ ನಿನ್ನಿರ್ದೆಡೆಯನಳೆಯದಜಸುವಶ್ವತ್ಥಾಮ ಕೃಪ ಕೃತವರ್ಮರುಮಂ ಕೂಡಿಕೊಂಡು ಪಗೆವರಂ ನಾಳೆ ಕಾದಿ ಗೆಲ್ಲುದೆಂದು ಹಿತೋಪದೇಶಂಬೆರಸು ಜಳಮಂತ್ರೋಪದೇಶಮಂ ಕಿವಿಯೊಳ್ ಪರ್ಚಿ ಪೇಟ್ಟು ಕುರುಪಿತಾಮಹಂ ಸಂಜಯನಂ ಧೃತರಾಷ್ಟ್ರನಲ್ಲಿಗೆ ಸಂಧಾನವಾರ್ತೆಯಂ ಸಮಗೊಳಿಸುವತಾನಾಗತಬಾಧಾಪ್ರತಿಷೇಧ ಮಾಡುವಂತಟ್ಟಿ ಸಕಳ ಕುರುಕುಳಾವಲಂಬನಕಲ್ಪವೃಕ್ಷಮಂ ಪರಸಿ ಪೋಗಲ್ವೇಚಿ ದೇವನದೀಪ್ರಿಯಪುತ್ರನಂ ಧೃತರಾಷ್ಟ್ರಪುತ್ರಂ ಬೀಳ್ಕೊಂಡು ಕನಕಪತ್ರಲತಾಲಾಂಛಿತಗದಾದಂಡಮಂ ಕೊಂಡೊರ್ವನೆ ವೈಶಂಪಾಯನಸರೋವರದ ಬಟ್ಟೆಯಂ ನಡೆಗೊಂಡು - ಶಾ|||
ಕ್ರಂದತ್ನಂದನಜಾತನಿರ್ಗತಶಿಖಿಚ್ಚಾಳಾಸಹಸಂಗಳಾ ಟಂದೆತ್ತ ಕವಿದುಬೇವ ಶವಸಂಘಾತಂಗಳಂ ಚಕ್ರಮೊ | ಕೆಂದಾಗ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ ಬಂದು ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ || ೭೧
ವll ನೋಡಿ ಕನ ಕೆಂಡದ ಮೇಲೆ ಪಲ್ಯ ಬೇವಿನೆಣ್ಣೆಯೊಳ್ ತೊಯ್ದಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುಟಿದು ಬೇವ
ದಿಗ್ಯಾಗದಲ್ಲಿರುವ ವೈಶಂಪಾಯನಸರೋವರದಲ್ಲಿ ಮುಳುಗಿದ್ದು ಕಾಲಾಗ್ನಿರುದ್ರನು ಪಾತಾಳಲೋಕದಲ್ಲಡಗಿರುವ ಹಾಗೆ ಇರು. ನಿನ್ನ ಸಹಾಯಕ್ಕೆ ಬಂದು ಸೇರುವ ಬಲರಾಮನನ್ನೂ ನೀನು ಇರುವ ಸ್ಥಳವನ್ನು ತಿಳಿಯದೇ ಹುಡುಕುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕೂಡಿಕೊಂಡು ಶತ್ರುಗಳನ್ನು ನಾಳೆ ಜಯಿಸು” ಎಂದು ಭೀಷ್ಮನು ಹಿತೋಪದೇಶದಿಂದ ಕೂಡಿದ ಜಳಮಂತ್ರೋದೇಶವನ್ನು ದುರ್ಯೊಧನನ ಕಿವಿಯಲ್ಲಿ ರಹಸ್ಯವಾಗಿ ಉಪದೇಶಿಸಿದನು. ಸಂಜಯನನ್ನು ಧೃತರಾಷ್ಟ್ರನ ಬಳಿಗೆ ಸಂಧಾನದ . ಮಾತನ್ನು ಸಿದ್ಧಗೊಳಿಸುವುದಕ್ಕಾಗಿ ಕಳುಹಿಸಿದನು. ಮುಂದೆ ಬರುವ ತೊಂದರೆಗೆ ಪ್ರತೀಕಾರವನ್ನು ಮಾಡುವಂತೆ ಹೇಳಿ ಸಕಲ ಕುರುವಂಶದ ಆಶ್ರಯಕ್ಕೆ ಕಲ್ಪವೃಕ್ಷದ ಹಾಗಿರುವ ದುರ್ಯೋಧನನನ್ನು ಆಶೀರ್ವದಿಸಿ ಬೀಳ್ಕೊಟ್ಟನು. ದುರ್ಯೋಧನನು ಭೀಷ್ಮನ ಅಪ್ಪಣೆಯನ್ನು ಪಡೆದು ಹೊರಟು ಕನಕಪತ್ರಲತೆಯಿಂದ ಗುರುತುಮಾಡಲ್ಪಟ್ಟ ಗದಾದಂಡವನ್ನು ತೆಗೆದುಕೊಂಡು ಏಕಾಕಿಯಾಗಿ ವೈಶಂಪಾಯನಸರೋವರದ ಮಾರ್ಗವನ್ನು ನಡೆದುಹೋದನು. ೭೧. ಶಬ್ದಮಾಡುತ್ತಿರುವ ರಥದಿಂದ ಹುಟ್ಟಿ ಹೊರಹೊರಟ ಸಾವಿರಾರು ಅಗ್ನಿಜ್ವಾಲೆಗಳು ಮೇಲೆ ಹಾಯ್ದು ಎಲ್ಲಕಡೆಯೂ ಸುಡುತ್ತಿರಲು ಬೇಯುತ್ತಿರುವ ಹೆಣಗಳ ರಾಶಿಗಳನ್ನು ಆಗ ಭಯಂಕರವಾದ ಪಿಶಾಚಿಗಳ ಸಮೂಹಗಳು ಚಕ್ಕುಮೊಕ್ಕೆಂದು ಕತ್ತರಿಸಿ ಕೈಬಾಯಿಗಳು ಬೇಯುತ್ತಿರುವಂತೆಯೇ ತಿನ್ನುವುದನ್ನು ನೋಡಿದಾಗ ದುರ್ಯೊಧನನ ಮನಸ್ಸಿಗೆ ವಿಶೇಷ ಭಯವುಂಟಾಯಿತು. ವll ಹೊಳೆಯುತ್ತಿರುವ ಕೆಂಡದ ಮೇಲೆ ಹಳೆಯ ಬೇವಿನೆಣ್ಣೆಯಲ್ಲಿ ನೆನೆಯಿಕ್ಕಿದ ಬೆಳ್ಳುಳ್ಳಿಯ ವಾಸನೆಯ ಹಾಗೆ ಗುಳ್ಳೆನರಿಯ ಬಾಯಲ್ಲಿ ಸುಡುತ್ತ ಕಾಣಿಸಿಕೊಂಡು
Page #670
--------------------------------------------------------------------------
________________
ತ್ರಯೋದಶಾಶ್ವಾಸಂ | ೬೬೫ ಪಣಂಗಳ ಕಂಪು ನಾಟುವುದರ್ಕೆ ಸೈರಿಸಲಾಗಿದೆ ಕೋಳ್ವಾಂಟಿನೊಳ್ ಕೊಳುಗುಳವಂ ಕಳೆದು ಪೋಗಿ ವಿಳಯಕಾಳವಿಘಟ್ಟಿತಾಷ್ಟದಿಗ್ಯಾಗಸಂಧಿಬಂಧನಗಗನತಳಮೆ ಧರಾತಳಕ್ಕೆ ಪಡೆದು ಬಿಟ್ಟಂತಾನುಮಾದಿವರಾಹಂ ಸಮುದ್ರಮುದ್ರಿತಧರಾಮಂಡಳಮಂ ರಸಾತಳದಿಂದೆತ್ತಿ ಬಂದಂದು ನಭೋಮಂಡಳಸ್ಥಾನಮೆ ಸಲಿಲಪರಿಪೂರಿತಮಾದಂತಾನುಮಾಗಿ
ಮll , ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪತದುಗ್ರಲಯಕಾಳಾಂಭೋಧರಚ್ಛಾಯ ತಾ | ನೆ ದಲೆಂಬಂತಿರೆ ಕಾಚ ಮೇಚಕಚಯಚ್ಚಾಯಾಂಬುವಿಂ ಗುಣಿನಿಂ ಪುದಿದಿರ್ದು ಸರೋವರಂ ಬಕ ಬಳಾಕಾನೀಕ ರಾವಾಕುಳಂ 1
೭೨
ಚಂll ಅದಟನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದಟ್ಟಿ ಕೊಳ್ಳದಿರದಿಲ್ಲಿಯುಮಮುಮನಿಲ್ಲಿ ಬಾಲ್ವರಂ | ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದತ್ತಮು ಇದಕಳಹಂಸಕೋಕನಿಕರಧ್ವನಿರುಂದ್ರಫಣೀಂದ್ರಕೇತುವಂ ||
೭೩
ಬೇಯುತ್ತಿರುವ ಹೆಣಗಳ ದುರ್ವಾಸನೆಯನ್ನು ಸಹಿಸಲಾರದೆ ದೂರದೂರ ಹೆಜ್ಜೆಯಿಟ್ಟು (ದಾಟುಹೆಜ್ಜೆಯಿಟ್ಟು) ದಾಟುತ್ತ ಯುದ್ಧಭೂಮಿಯನ್ನು ಕಳೆದುಹೋದನು. ಪ್ರಳಯಕಾಲದಲ್ಲಿ ಅಪ್ಪಳಿಸಲ್ಪಟ್ಟ ಪೆಟ್ಟಿನಿಂದ ಎಂಟು ದಿಕ್ಷದೇಶಗಳ ಕೀಲುಗಳೂ ಕಳಚಿಹೋಗಲು ಆಕಾಶಪ್ರದೇಶವೇ ನೆಲಕ್ಕೆ ಬಿದ್ದುಹೋಗಿದೆಯೊ ಎಂಬಂತೆಯೂ ಆದಿವರಾಹನಾದ ವಿಷ್ಣುವು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಳವನ್ನು ಪಾತಾಳಲೋಕದಿಂದ ಎತ್ತಿಕೊಂಡು ಬಂದ ದಿನ ಆಕಾಶಪ್ರದೇಶವೇ ನೀರಿನಿಂದ ತುಂಬಿಹೋಯಿತೋ ಎಂಬಂತೆಯೂ ಇರುವ ಸರೋವರವನ್ನು ಕಂಡನು-೭೨. ಇದು ಪಾತಾಳವೆಂಬ ಬಿಲದ ಬಾಗಿಲು; ನಿಜವಾಗಿಯೂ ಇದು ಭಯಂಕರವಾದ ಕತ್ತಲೆಯಿಂದ ತುಂಬಿದ ಬಾವಿ, ಬೇರೆಯಲ್ಲ. ಇದು ಉಗ್ರವಾಗಿರುವ ಪ್ರಳಯಕಾಲದ ಮೋಡದ ನೆರಳೇ ಸರಿ ಎನ್ನುವ ಹಾಗಿರುವ ಕಾಚದಂತೆ ಕಪ್ಪುನೀಲಿ ಬಣ್ಣ ಮಿಶ್ರಿತವಾದ ಬಣ್ಣದ ನೀರಿನಿಂದ ತುಂಬಿ (ಆಳವಾಗಿ) ಬಕಬಲಾಕಾಪಕ್ಷಿಗಳ ಶಬ್ದದಿಂದ ಮೊರೆಯುತ್ತಿರುವ ವೈಶಂಪಾಯನ ಸರೋವರವು ಆಳದಿಂದಲೂ - ಗಾಂಭೀರ್ಯ ದಿಂದಲೂ - ಭಯಂಕರತೆಯಿಂದಲೂ ಕೂಡಿದ್ದಿತು. ೭೩. ಪರಾಕ್ರಮ ಶಾಲಿಯಾದ ಅರ್ಜುನನ ಮತ್ತು ಸಾಹಸಭೀಮನ ಕೋಪಾಗ್ನಿಯು ಇಲ್ಲಿಗೂ ಕೂಡ ಪ್ರವೇಶಿಸಿ ವ್ಯಾಪಿಸಿ ಸುಟ್ಟು ನಾಶಮಾಡಿ ಕೊಲ್ಲದೆ ಬಿಡುವುದಿಲ್ಲ: ಇಲ್ಲಿ ಬಾಳುತ್ತಿರುವ ನಮ್ಮನ್ನು ಕದಡಬೇಡ; ಈ ಕಡೆ ಬರಬೇಡ; ಹತ್ತಿರ ಬರಬೇಡ ಎನ್ನುವ ಹಾಗೆ ಎಲ್ಲ ಕಡೆಗೂ ವಿಸ್ತಾರವಾಗಿ ಹರಡಿರುವ ಹಾವಿನ ಹಳವಿಗೆಯನ್ನುಳ್ಳ ದುರ್ಯೋಧನನನ್ನು - ಮದಿಸಿದ ರಾಜಹಂಸ ಕೋಕಸಮೂಹಗಳ ಧ್ವನಿಯು ಸಾರುವಂತಿದ್ದಿತು.
Page #671
--------------------------------------------------------------------------
________________
೬೬೬ | ಪಂಪಭಾರತಂ
ವ|| ಅಂತೆಸೆವ ಪುಂಡರೀಕಷಂಡೋಪಾಂತಮನೆಯೆವಂದನೇಕವ್ರಣಗಳಿತನವರುಧಿರ ಮಾಗಿರ್ದ ತನ್ನ ಮಯ್ಯನೋರಸಿ ಕರ್ಚಿ ಮುಕ್ಕುಳಿಸಿಯುಗುಬಾಚಮಿಸಿ ಜಳದೇವತೆಗಳ ಪೊಡೆವಟ್ಟು ಜಳಮಂತ್ರಾಕ್ಷರಂಗಳಿಂ ಸರೋವರಮನಭಿಮಂತ್ರಿಸಿಚಂ|| ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ಲಿ ಬಬಲಪರಾಂಬುರಾಶಿಯೊಳ್ | ಮುಲುಗುವ ತೀವ್ರದೀಧಿತಿವೊಲಾ ಕೊಳದೊಳ್ ಫಣಿರಾಜಕೇತನಂ ಮುಲುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲೆ ತೀರ್ಗುಮೇ || ೭೪
ವ|| ಅಂತು ವಜ್ರಯ ವಜ್ರಹತಿಗಳ್ಳಿ ಕುಲಗಿರಿಜಳಧಿಯಂ ಪುಗುವಂತ ದುರ್ಯೋಧನ ಕೋಳನಂ ಪೊಕಿರ್ದನನೆಗಮಿತ ಧರ್ಮಪುತ್ರ ಶಲವಡೆಯಿಂ ಬಲಿಯಂ ರಾಜರಾಜನಂ ಕೊಳುಗುಳದೊಳುಸಿಯುಂ ಕಾಣದೆ ನಮ್ಮ ಮಾಡುವ ಕರ್ತವ್ಯಮಾವುದೇಗೆಯ್ಯಂ ಪೇಮೆಂದು ನಾರಾಯಣನಂ ಬೆಸಗೂಳೆ ಮಧುವನಿತಾವದನಕಮಳಹಿಮಕರನಿಂತೆಂದಂ -
ಉll ಇಂದಿನ ನೇಸಳೆಂದೂಳಗರಾತಿಯನಿಕದ ಮಾಷ್ಟಮಫೊಡಿ
ನೈಂದುಮಸಾಧ್ಯನಿಂದೆ ಹಳಿಯುಂ ಗಡ ಕೂಡುವನಾತನಂ ಗೆಲಲ್ | ಬಂದಪುದೇ ಬಚಿಕ್ಕದುವೆ ಕಾರಣವಾಗುಳಿದಿರ್ದನಂಧರಾ ಇಂದನನಲ್ಲದುಂತು ತಲೆಯುರ್ಚುಗುವೇ ರಣರಂಗಭೂಮಿಯೊಳ್ || ೭೫
ವಹಾಗೆ ಪ್ರಕಾಶಮಾನವಾಗಿರುವ ಸರೋವರದ ಸಮೀಪಕ್ಕೆ ಬಂದು ಅನೇಕ ಗಾಯಗಳಿಂದ ಜಿನುಗಿದ ಹೊಸ ರಕ್ತದಿಂದ ಕೂಡಿದ್ದ ತನ್ನ ಶರೀರವನ್ನು ಉಜ್ಜಿ ತೊಳೆದು ಮುಕ್ಕುಳಿಸಿ ಉಗುಳಿ ಆಚಮನಮಾಡಿ ಜಲದೇವತೆಗಳಿಗೆ ನಮಸ್ಕರಿಸಿ ಜಲಮಂತ್ರಾಕ್ಷರಗಳಿಂದ ಸರೋವರವನ್ನು ಮುಟ್ಟಿ ಅಭಿಮಂತ್ರಿಸಿದನು. ೭೪. ಸಮಸ್ತ ಭೂಮಂಡಲವನ್ನೂ ತನ್ನ ತೇಜಸ್ಸಿನಿಂದ ಪ್ರಕಾಶಗೊಳಿಸಿ ತನಗೆ ಪ್ರತಿಭಟಿಸಿದ ರಾಕ್ಷಸರನ್ನು ತಲೆಕೀಳಾಗುವಂತೆ ಮಾಡಿ (ಕೊನೆಗೆ ತಾನು) ಕಾಂತಿಹೀನನಾಗಿ ಪೂರ್ಣವಾಗಿ ಬಳಲಿ ಪಶ್ಚಿಮಸಮುದ್ರದಲ್ಲಿ ಮುಳುಗುವ ಸೂರ್ಯನ ಹಾಗೆ ದುರ್ಯೋಧನನು ಆ ಸರೋವರದಲ್ಲಿ ಮುಳುಗಿದನು. ಎಂದ ಮೇಲೆ ಯಾರಿಗಾದರೇನು? ವಿಧಿಯು ಕಟ್ಟಿಟ್ಟಿರುವುದನ್ನು ಕಳೆಯುವುದಕ್ಕೆ ತೀರುತ್ತದೆಯೇ (ಸಾಧ್ಯವೇ) ? ವ! ಹಾಗೆ ಇಂದ್ರನ ವಜ್ರಾಯುಧಕ್ಕೆ ಹೆದರಿ ಕುಲಪರ್ವತಗಳು ಸಮುದ್ರವನ್ನು ಪ್ರವೇಶಿಸುವ ಹಾಗೆ ದುರ್ಯೋಧನನು ಕೊಳವನ್ನು ಪ್ರವೇಶಿಸಿದನು. ಅಷ್ಟರಲ್ಲಿ ಈ ಕಡೆ ಧರ್ಮರಾಯನು ಶಲ್ಯವಧೆಯಾದ ಮೇಲೆ ಚಕ್ರವರ್ತಿಯಾದ ದುರ್ಯೋಧನನನ್ನು ಯುದ್ಧಭೂಮಿಯಲ್ಲಿ ಹುಡುಕಿಯೂ ಕಾಣದೆ ನಾವು ಮಾಡಬೇಕಾದ ಕರ್ತವ್ಯವಾವುದು ? ಏನು ಮಾಡೋಣ ಹೇಳಿ ಎಂದು ಕೃಷ್ಣನನ್ನು (ಮಧುವೆಂಬ ರಾಕ್ಷಸನ ಸ್ತ್ರೀಯರ ಮುಖವೆಂಬ ಕಮಳಕ್ಕೆ ಚಂದ್ರನ ಹಾಗಿರುವ ಕೇಳಲು ಅವನು ಹೀಗೆಂದನು. ೭೫. ಇಂದಿನ ಸಾಯಂಕಾಲದೊಳಗೆ ಶತ್ರುವನ್ನು ಕೊಲ್ಲದೆ ತಪ್ಪಿದೆವಾದರೆ ಇನ್ನಾವಾಗಲೂ ಅವನು ಅಸಾಧ್ಯನಾಗುತ್ತಾನೆ. ಈ ದಿನವೇ ಬಲರಾಮನೂ ಅವನನ್ನು ಕೂಡಿಕೊಳ್ಳುತ್ತಾನೆ. ಬಳಿಕ ಆತನನ್ನು ಕೊಲ್ಲುವುದಕ್ಕೆ
Page #672
--------------------------------------------------------------------------
________________
ತ್ರಯೋದಶಾಶ್ವಾಸಂ | ೬೬೭ ವll ಎಂಬುದುಂ ಜಳಧರಸಮಯನಿಶಾಸ೦ಚಲಿತವಿದ್ಯುತಿಂಗಳಾಕ್ಷಪಾತಗಳಿಂ ದೆಸೆಗಳು ನುಂಗುವಂತ ಮುಳಿದು ನೋಡಿ ಜರಾಸಂಧಸಂಧಿಬಂಧವಿಘಟನನಿಂತೆಂದಂ
ಮll ಕಡಲಂ ಪೊಕೊಡ ಪೀರ್ದಪಂ ಕಡಲನಾ ಪಾತಾಳಮಂ ಪೊಕ್ಕನ
ಪೊಡೆ ಶೇಷಾಹಿಯ ಪಲ್ಗಳಂ ಮುಳದಪಂ ಬ್ರಹ್ಮಾಂಡಮಂ ಪೊಕ್ಕನ | ಪೊಡಮಾ ಬ್ರಹ್ಮನ ಗಂಟಲಂ ಮುಳದಪಂ ದುರ್ಯೋಧನಂಗಿಂ ಪುಗ ಲೈಡ –ಭೂಭುವನಂಗಳಿಂ ಪೊಂಗೆ ಮತ್ತಲ್ಲಿತ್ತೊ ಬಾಣಾಂತಕಾ | ೭೬
ವ|| ಎಂಬನ್ನೆಗಂ ವೃಕೋದರನಟ್ಟಿದ ಕಿರಾತು ವಿಂಧ್ಯಕನೆಂಬಂ ಬಂದು ದುರ್ಯೋಧನನ ನೆಲ್ಲಿಯುಮಳಿಸಿ ಕಾಣದೆ ವೈಶಂಪಾಯನಸರೋವರಕ್ಕೆ ನೀರ್ಗುಡಿಯಲೆಂದು ಪೋಗಿ ಕೊಳದ ತಡಿಯೊಳ್ ಹಳಕುಳಿಶಶಂಖಚಕ್ರಲಾಂಛಿತಮಪ್ಪಡಿವಜ್ಜೆಯಂ ಕಂಡು ಬಂದನೆಂದು ಪೇಳ್ವುದುಮಂಬುಜನಾಭನವನ ಮಾತಿನೊಳ್ ಯುಕ್ತಿಯುಂಟೆಂತೆಂದೊಡಮರನದೀ ನಂದನೋಪದೇಶದಿಂದಾತಂ ಕೊಳನಂ ಪೊಕ್ಕು ಕಾಲವಂಚನೆಗೆಯ್ಯಲಿರ್ದನಕ್ಕುಮೆಂದಾ ಕೊಳನಂ ಮುಟ್ಟೆವಂದದಲ ತಡಿಯೋ ಶಂಖಚಕ್ರಹಳಕುಳಿಶಲಾಂಛಿತಮಾಗಿರ್ದಡಿವಜ್ಜೆಯಂ ನೋಡಿ ದುರ್ಯೋಧನನ ಪಜ್ಜೆಯಪ್ಪುದೇನುಂ ತಪ್ಪಿಲ್ಲೆಂದು ಕಳಕಳನಿನಾದಂಗಳಿಂದಾರ್ದು ಶಂಖಂಗಳಂ
ಸಾಧ್ಯವಾಗುವುದಿಲ್ಲ. ಆ ಕಾರಣದಿಂದಲೇ ಧೃತರಾಷ್ಟ್ರನ ಮಗನಾದ ದುರ್ಯೋಧನನು ಮರೆಯಾಗಿ ಉಳಿದಿದ್ದಾನೆ. ಅಲ್ಲದಿದ್ದರೆ ಹಾಗೆ ರಣರಂಗದಲ್ಲಿ ತಲೆಯನ್ನು ಮರೆಸಿಕೊಳ್ಳುತ್ತಿದ್ದನೆ? ವ|| ಎನ್ನಲು ವರ್ಷಾಕಾಲದ ರಾತ್ರಿಯಲ್ಲಿ ನಡುಗಿಸುತ್ತಿರುವ ಮಿಂಚಿನಂತೆ ಹೊಂಬಣ್ಣದಂತಿರುವ ತನ್ನ ಕಣ್ಣುಗಳ ನೋಟದಿಂದ ದಿಕ್ಕುಗಳನ್ನೆಲ್ಲ ನುಂಗುವಂತೆ ಕೋಪಿಸಿಕೊಂಡು ಜರಾಸಂಧನ ಕೀಲುಕಟ್ಟುಗಳನ್ನು ಸಡಿಲಿಸಿದವನಾದ ಭೀಮಸೇನನು ೭೬. ದುರ್ಯೋಧನನು ಸಮುದ್ರವನ್ನು ಪ್ರವೇಶಮಾಡಿದರೆ ಆ ಸಮುದ್ರವನ್ನೇ ಕುಡಿದು ಹಾಕುತ್ತೇನೆ. ಆ ಪಾತಾಳವನ್ನು ಹೊಕ್ಕನಾದರೆ ಆದಿಶೇಷನ ಹಲ್ಲುಗಳನ್ನು ಮುರಿಯುತ್ತೇನೆ. ಬ್ರಹ್ಮಾಂಡವನ್ನು ಹೊಕ್ಕನಾದರೂ ಆ ಬ್ರಹ್ಮನ ಗಂಟಲನ್ನೂ ಮುರಿಯುತ್ತೇನೆ. ಕೃಷ್ಣಾ, ದುರ್ಯೊಧನನಿಗೆ ಇನ್ನು ಪ್ರವೇಶಮಾಡುವುದಕ್ಕೆ ಮೂರುಲೋಕಗಳಿಂದ ಹೊರಗೆ ಸ್ಥಳವೆಲ್ಲಿದೆ? ವ|| ಎನ್ನುವಷ್ಟರಲ್ಲಿ ಭೀಮನು ಕಳುಹಿಸಿದ ಬೇಡನಾದ ವಿಂಧ್ಯಕನೆಂಬುವನು ಬಂದು ದುರ್ಯೋಧನನನ್ನು ಎಲ್ಲಿ ಹುಡುಕಿದರೂ ಕಾಣದೆ ವೈಶಂಪಾಯನಸರೋವರಕ್ಕೆ ನೀರು ಕುಡಿಯಬೇಕೆಂದು ಹೋದೆವು. ಕೊಳದ ದಡದಲ್ಲಿ ನೇಗಿಲು, ವಜ್ರ, ಶಂಖ, ಚಕ್ರ ಇವುಗಳ ಗುರುತನ್ನುಳ್ಳ ಹೆಜ್ಜೆಯನ್ನು ಕಂಡುಬಂದೆನೆಂದು ಹೇಳಿದನು. ಕೃಷ್ಣನು ಅವನ ಮಾತಿನಲ್ಲಿ ಯುಕ್ತಿಯುಂಟು, ಹೀಗಂದರೆ ಭೀಷ್ಮನ ಉಪದೇಶದಿಂದವನು ಸರೋವರವನ್ನು ಪ್ರವೇಶಿಸಿ ಕಾಲವಂಚನೆಯನ್ನು ಮಾಡಬೇಕೆಂದಿರಬಹುದು ಎಂದನು. ಕೊಳದ ಸಮೀಪಕ್ಕೆ ಬಂದು ಅದರ ದಡದಲ್ಲಿ ಶಂಖ ಚಕ್ರ ನೇಗಿಲು ವಜ್ರ ಇವುಗಳ ಗುರುತಿನಿಂದ ಕೂಡಿದ್ದ ಕಾಲಿನ ಹೆಜ್ಜೆಯನ್ನು ನೋಡಿ ದುರ್ಯೊಧನನ ಹೆಜ್ಜೆಯೇ ಆಗಿದೆ.
* 43
Page #673
--------------------------------------------------------------------------
________________
೬೬೮) ಪಂಪಭಾರತಂ ಪೂರಿಸಿಯುಂ ಭೇರಿಯಂ ತಾಡಿಸಿಯುಮೇಗೆಯುಂ ಪೊಜಿಮಡದಿರೆ ಭೀಮಸೇನನನ್ನ ಸರಂಗಳಲ್ಲದೀ ಬೂತು ಪೊಜೆಮಡುವನಲ್ಲನೀತಂಗಾನ ಬಲ್ಲೆನುಸಿರದಿರಿಮೆಂದು ಸಕಳ ದಿಗ್ವಳಯ ಭರಿತ ಮಹಾಸಿಂಹನಾದದಿಂದಲ್ಲಿಯ ಜಳಚರಂಗಳೆರ್ದೆ ಪೌವನ ಪಾಜುವನ್ನೆಗಮಾರ್ದು
ಮಗ ಸl ಕಿತೆಯಂದಿಂದಿತ್ತ ದುರ್ಯೋಧನನೆನಿಸಿದ ವಿಕ್ರಾಂತಮೇನಾದುದಕ್ಕಿಂ
ದಿವುರ್ಕೆಲ್ಲಿತ್ತೊ ಪಾಂಚಾಳಿಯನೆವದಟೇನಾದುದೋ ಗಂಡ ಪೇಮ್ ಪೊ | ಚಳಿನಂತಾಮಾತುಮಿಂತೀಯಿರವನೆ ನಗೆಯಂ ಮಾಡಿದ್ದೆ ಬಂದನೀತಂ ಪಂನಲ್ಲಂ ದುರ್ಜಯಂ ಕೌರವಕುಳನಳಿನೀಕುಂಜರಂ ಭೀಮಸೇನಂ || ೭೭
ಕುಡಿದಂ ದುಶ್ಯಾಸನೋರಸ್ಥಳ ಎಗಳದಸ್ಯನ್ದಾರಿಯಂ ಕಂಡದಂ ಮು ನಡೆ ನೋಡುತ್ತಳ್ಳಿ ಮಾಸ್ಕೃ ನಿನಗಿಆವದಟಂ ಕೊಟ್ಟರಾರಿಂದು ಮಾಣ | ಲೈಡೆಯುಂಟೇ ಸಿಲ್ವಿದ್ಯೆ ಪೋ ಪೊಮಡು ಕೊಳದಿಂ ಸತ್ತೊಡಂ ಪುಟ್ಟ ನೀನೀ ಗಡೆ ದಲ್ ಕೊಂದಪ್ಪನೆನ್ನಂ ಮುಳಿಯಿಸಿ ನಿನಗಿಂ ದ್ರೋಹ ಬಾಬಾಸೆಯುಂಟೇ || ೭೮
ಅದರಲ್ಲೇನೂ ತಪ್ಪಿಲ್ಲ ಎಂದು ಕಳಕಳಶಬ್ದದಿಂದ ಆರ್ಭಟಮಾಡಿದರು. ಶಂಖಗಳನ್ನು ಪೂರೈಸಿದರು. ನಗಾರಿಗಳನ್ನೂ ಹೊಡೆಯಿಸಿದರು. ಏನೂ ಮಾಡಿದರೂ ಹೊರಗೆ ಹೊರಡದಿರಲು ಭೀಮಸೇನನು ಈ ಭೂತವು ನನ್ನ ಧ್ವನಿ ಕೇಳಿದಲ್ಲದೆ ಹೊರಟುಬರುವವನಲ್ಲ; ಇವನಿಗೇನು ಮಾಡಬೇಕೆಂಬದನ್ನು ನಾನು ಬಲ್ಲೆ. ನೀವು ಮಾತನಾಡಬೇಡಿ ಎಂದು ಸಕಲದಿಕ್ಕುಗಳ ಸಮೂಹದಲ್ಲಿ ವ್ಯಾಪಿಸಿರುವ ಮಹಾಸಿಂಹನಾದದಿಂದ ಅಲ್ಲಿಯ ಜಲಚರಗಳ ಎದೆಯು ಪವ್ವನೆ ಹಾರಿಹೋಗುವ ಹಾಗೆ ಆರ್ಭಟಮಾಡಿದನು. ೭೭. ಬಾಲ್ಯದಿಂದಲೂ ದುರ್ಯೊಧನನೆನಿಸಿಕೊಂಡ ನಿನ್ನ ಪೌರುಷವೇನಾಯಿತು? ಮೇಲೆ ಬಿದ್ದು ಯುದ್ದಮಾಡುವ ಗರ್ವವು ಎಲ್ಲಿ ಹೋಯಿತು ? ಬ್ರೌಪದಿಯನ್ನು ಎಳೆಯುವ ಶೌರ್ಯವೇನಾಯಿತು ? ಪೌರುಷಶಾಲಿಯೇ ಹೇಳು. ಆಗ ಆ ಗರ್ವದ ಮಾತನ್ನಾಡಿ ಈಗ ಈ ದುಃಸ್ಥಿತಿಯಲ್ಲಿದ್ದು ನಗುವನ್ನುಂಟುಮಾಡಿದೆಯಲ್ಲ; ಈಗ ಬಂದಿರುವವನು ಬೇರೆ ಯಾರೂ ಅಲ್ಲ: ಜಯಿಸುವುದಕ್ಕೆ ಅಸಾಧ್ಯನಾದ ಕೌರವಕುಲವೆಂಬ ಕಮಲಕ್ಕೆ ಆನೆಯಂತಿರುವ ಭೀಮಸೇನ. ೭೮, ದುಶ್ಯಾಸನನ ಹೃದಯಪ್ರದೇಶದಿಂದ ಹರಿಯುತ್ತಿದ್ದ ರಕ್ತವನ್ನು ಕುಡಿದೆನು. ಅದನ್ನು ಮೊದಲು ನೋಡಿ ಹೆದರಿ ನಿಂತೆಯಾ? ನನಗೆ ಯುದ್ಧ ಮಾಡುವ ಪರಾಕ್ರಮವನ್ನು ಕೊಟ್ಟವರಾರು? ಈ ದಿನ ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಅವಕಾಶವುಂಟೆ ? ಸಿಕ್ಕಿದೆ, ಚಿಃ ಕೊಳದಿಂದ ಹೊರಡು; ಸತ್ತರೂ ಹುಟ್ಟದೇ ಹೋಗುತ್ತೀಯಾ? ಈಗ ಕೊಂದುಹಾಕು ತೇನಲ್ಲವೇ, ನನ್ನನ್ನು ರೇಗಿಸಿಯೂ ದ್ರೋಹ, ನಿನಗೆ ಬಾಳುವಾಸೆಯುಂಟೆ!
Page #674
--------------------------------------------------------------------------
________________
ತ್ರಯೋದಶಾಶ್ವಾಸಂ | ೬೬೯ ಕoll ಮಾನಸಿಕೆಯ ದೊರೆಗಿಡ ನೀಂ
ಮಾನಸನೆಗೆ ನೀರೊಳೆಲಿ ನೀನುಂ ಮಾನಂ | ಬೀ ನೆವದಿರ್ದೆಯಿದೇನಭಿ
ಮಾನದ ಕಲಿತನದ ಪರಮಪದಮೆಯಿದೆಯೋ || ೭೯ ಚoil ಅದಟನಳುರ್ಕೆಯಂ ನಿಳಿಸಿ ನಿನ್ನ ನಿಸೇಕದ ಪೊಟ್ಟು ತಪ್ಪಲೀ
ಯದೆ ಪೊಳವಟ್ಟು ಬಾ ತಡೆಯದೀಗ ನೀನಿನಿಸಿರ್ದೆಯಪೊಡೇ | ತೊದಳೊ ಸರೋವರಾಂಬುವನಿತಂ ತವ ತುಳ್ಳಿ ರಸಾತಳಂಬರಂ.
ಬೆದಕಿಯುಮೆಂತುಮಪ್ಪಳಿಸಿ ಕೊಂದವನೇಟ್ಟುದಿದೇಂ ಸುಯೋಧನಾ || ೮೦
ವ|| ಎಂದು ಎಳಯಕಾಳಜಳಧರನಿನಾದದಿಂ ಗಜಟೆ ಗರ್ಜಿಸಿದ ಜಟಾಸುರಾರಾತಿಯ ಗಳಗರ್ಜನೆಗೆ ಕರಿಕಳಭಗರ್ಜನೆಗೇಳ್ವ ಮೃಗರಾಜನಂತೆ ರಾಜರಾಜಂ ಸೈರಿಸದೆ ಚಿತ್ತಸ್ಥಲನೆಯಾಗೆ ಜಳಸ್ತಂಭಮಂತ್ರಮೆಲ್ಲಂ ಮಾಯಾಮಂತ್ರಮಾಗೆ
ಪಗೆವಂ ಬಂದುದಿಂತು ಮೂದಲಿಸೆಯುಂ ಮಾತಂ ಕಿವುಚೇಳು ಕೆ ಮಗೆ ನೀರೊಳ್ ಮುಲುಗಿರ್ದೊಡಟ್ಟು ಕಿಡುಗುಂ ಮಚ್ಚಾರ್ಯ ನೆಗೆದಾಗಳ್ ವಿಲಸತ್ಕರೀಟತಟರಾಂಶುಪ್ರಭಾರಾಜಿ ತೂ
ಟ್ರಗೆ ಕೆಯ್ದ ಸುರೇಂದ್ರಚಾಪರುಚಿಯಂ ಕೆಯ್ಯೋಂಡುದಾ ಪೂಗೊಳಂ || ೮೧ ಚಂ| ನಗೆಯೆ ಪೊದು ಬೊಬ್ಬುಳಿಕೆಗಳ ನೆಗೆದಂತೆರಡುಂ ಕೆಲಕ್ಕೆ ನೀ
ರುಗಿಯ ಗದಾಭಿಘಾತಪರಿಪೂರಿತತೋಯಜ ಪಂಡಮಲ್ಲಿಗ |
ಗೆ ಕದಡೇ ಭೀಮಭುಜಮಂದರಘಟ್ಟನೆಯಿಂದಮಲ್ಲಿ ತೊ ಟ್ಟಗೆ ಕೊಳೆ ಕಾಳಕೂಟಮೊಗೆವಂತೊಗೆದಂ ಫಣಿರಾಜಕೇತನಂ || ೮೨
೭೯. ಮನುಷ್ಯತ್ವದ ಯೋಗ್ಯತೆಯನ್ನು ಕಳೆದುಕೊಂಡ ಮೇಲೆ ನೀನು ಮನುಷ್ಯನೇ? ನೀನು ಮೀನಿನ ನೆವದಿಂದ ನೀರಿನಲ್ಲಿದ್ದೀಯೆ; ಆಹಾ! ಎಂತಹ ಆತ್ಮಗೌರವದ ಪರಾಕ್ರಮದ ಪರಮೋಚ್ಚ ಸ್ಥಾನವನ್ನು ಏರಿದ್ದೀಯೆ! ೮೦. ನಿನ್ನ ಪರಾಕ್ರಮಾತಿಶಯವನ್ನು ಸ್ಥಾಪಿಸಿ ನಿನ್ನ ಶಾಸ್ತ್ರೀಯ ಹೊತ್ತು ತಪ್ಪಿಹೋಗುವುದಕ್ಕೆ ಬಿಡದೆ ಸಾವಕಾಶಮಾಡದೇ ಈಗಲೇ ಹೊರಟು ಬಾ. ನೀನು ಸ್ವಲ್ಪ ತಡಮಾಡಿದರೆ ಸರೋವರದ ನೀರನ್ನೆಲ್ಲ ತುಳುಕಿ ಪಾತಾಳದವರೆಗೂ ಹುಡುಕಿ ಹೇಗೂ ಅಪ್ಪಳಿಸಿ ಕೊಂದುಹಾಕುತ್ತೇನೆ. ಏಳು ಸುಯೋಧನ ಇದೇನಿದು ? ವl ಎಂದು ಪ್ರಳಯಕಾಲದ ಗುಡುಗಿನ ಶಬ್ದದಿಂದ ಕೂಗಿ ಗರ್ಜನೆ ಮಾಡಿದ ಭೀಮನ ಆರ್ಭಟಕ್ಕೆ ಆನೆಯ ಮರಿಯ ಗರ್ಜನೆಯನ್ನು ಕೇಳಿದ ಸಿಂಹದ ಹಾಗೆ ಚಕ್ರವರ್ತಿಯಾದ ದುರ್ಯೋಧನನಿಗೆ ಮನಸ್ಸರ್ಯವು ಜಾರಿತು. ಜಲಸ್ಥಂಭ ಮಂತ್ರವೆಲ್ಲ ಮಾಯಾಮಂತ್ರವಾಯಿತು. ೮೧. ಶತ್ರುವು ಸುಮ್ಮನೆ ಹೀಗೆ ಹಿಯ್ಯಾಳಿಸಿದರೂ ಆ ಮಾತನ್ನು ಕಿವುಡರಂತೆ ಕಿವಿಗೆ ಹಾಕಿಕೊಳ್ಳದೆ ಸುಮ್ಮನೆ ನೀರಿನಲ್ಲಿ ಮುಳುಗಿದ್ದರೆ ನನ್ನ ಶೌರ್ಯವು ಮುಳುಗಿ ಹಾಳಾಗುತ್ತದೆ ಎಂದು (ಆತ್ಮಾಭಿಮಾನಿಯಾದ) ದುರ್ಯೋಧನನು ನೀರಿನಿಂದ ಮೇಲಕ್ಕೆ ನೆಗೆಯಲು ಪ್ರಕಾಶಮಾನವಾದ ಕಿರೀಟ ಪ್ರದೇಶದಲ್ಲಿರುವ ರತ್ನಗಳ ಕಾಂತಿಸಮೂಹವು ಇದ್ದಕ್ಕಿದ್ದ ಹಾಗೆ ಅಧಿಕವಾಗಲು ಆ ಸರೋವರವು ಕಾಮನ ಬಿಲ್ಲಿನ ಕಾಂತಿಯನ್ನು ಹೊಂದಿತು. ೮೨. ವ್ಯಾಪಿಸಿದ ನೀರು ಗುಳ್ಳೆಗಳು ಮೇಲಕ್ಕೆದ್ದವು. ಅವು ಬಂದ ಹಾಗೆ ಎರಡು
Page #675
--------------------------------------------------------------------------
________________
೬೭೦ | ಪಂಪಭಾರತಂ |
ವಗೆ ಅಂತೊಗೆದು ದಿಕ್ಕರಿಕರಾನುಕಾರಿ ಕರಪರಿಶೋತ್ತಂಸಿತ ತೋರಣೀಕೃತ ರೌದ್ರಗದಾದಂಡನುಂ ಪ್ರಚಂಡನುಮಾಗಿ ಸೆರಗಿಲ್ಲದೆ ಕೊಳದಿಂ ಪೊಆಮಟ್ಟು ಬರ್ಪ ದುರ್ಯೋಧನನಂ ಧರ್ಮಪುತ್ರ ನೋಡಿ
ಚoll ನಡಪಿದ ನಂಟರೆಯ ಪೂರದಾಳ್ ರಣರಂಗದೊಳುಳ್ಳರೆಲ್ಲರುಂ
ಮಡಿದೋಡಮುರ್ಕುಗುಂದದುಗುರಂತೆರಡುಂ ಕಡೆ ತಪ್ಪ ಕೂರ್ಪನೋ | ಗಡಿಸದೆ ತಾಳಿ ಮೆಯೊಳೆ ವೃಕೋದರನೊಂದ ಸರಕ್ಕೆ ಕಾಯೊಡಂ ಬಡ ಸಿಡಿಲೇಳೆಯಿಂ ಮಸಗಿ ಬಂದನಿದೇಂ ಕಲಿಯೋ ಸುಯೋಧನಂ || ೮೩ ವ|| ಎಂಬನ್ನೆಗಮೆಯ್ದವಂದು ದುರ್ಯೋಧನಂ ಪಾಂಡುತನೂಜರನಿಂತೆಂದಂಮllಎಳೆ ಮುಂ ದೈತ್ಯನ ಕೆಯ್ದೆ ಪೋಗೆ ತರಲೆಂದೀ ಚಕ್ರಿ ಮುನ್ನಂ ರಸಾ
ತಳಮಂ ಪೊಕ್ಕುದಮಿಾ ಮಹೋಗ್ರ ರಣದೊಳ್ ನಿಮ್ಮೊಂದು ಕೆಯ್ದಿದ್ದ ಭೂ | ತಳಮಂ ಮತ್ತೆ ತರಲ್ ವಿಶುದ್ಧ ನಿಯಮ ಪ್ರಾರಂಭದಿಂದಾನುಮಾ ಕೊಳನಂ ಪೊಕ್ಕುದುಮಾವ ದೋಷಮೆನಗಿಂ ಮಾಜಾಂಪರಾರ್ ತೋಡಿರೇ || ೮೪
ವರು ಎಂಬುದುಂ ಧರ್ಮಪುತ್ರನಿಂತೆಂದಂ
ಪಕ್ಕಗಳಿಗೂ ನೀರು ವಿಭಾಗವಾಯಿತು. ಗದೆಯ ಹೊಡೆತದಿಂದ ತುಳುಕಿದ ಸರೋವರವು ಅಲ್ಲಲ್ಲಿ ಬಗ್ಗಡವಾಯಿತು. ಭೀಮನ ಮಂದರಪರ್ವತದಂತಿರುವ ಬಾಹುಗಳ ಹೊಡೆತದಿಂದ ಬೇಗನೆ ಆಕ್ರಮಿಸಲು ಕಾಳಕೂಟವಿಷವು ಹುಟ್ಟುವಂತೆ ದುರ್ಯೋಧನನು ಹುಟ್ಟಿದನು. ವll ಹಾಗೆ ಹುಟ್ಟಿ ದಿಗ್ಗಜದ ಸೊಂಡಿಲನ್ನು ಹೋಲುವ ಪರಿಘದಂತಿರುವ ಕೈಗೆ ಆಭರಣಪ್ರಾಯವಾಗಿ ತೋರಣವಾಗಿ ಮಾಡಲ್ಪಟ್ಟ ಭಯಂಕರವಾದ ಗದಾ ದಂಡವನ್ನುಳ್ಳವನೂ ಬಹಳ ಕಾಂತಿಯುಕ್ತನೂ ಆಗಿ ಭಯವಿಲ್ಲದೆ ಕೊಳದಿಂದ ಹೊರಗೆ ಹೊರಟು ಬರುತ್ತಿರುವ ದುರ್ಯೋಧನನನ್ನು ಧರ್ಮರಾಜನು ನೋಡಿ ಹೀಗೆಂದನು. ೮೩. ತನ್ನನ್ನು ಸಾಕಿ ಸಲಹಿದ ಬಂಧುಗಳೂ ತಾನು ಚೆನ್ನಾಗಿ ಸಾಕಿದ ಆಳುಗಳೂ ಉಳಿದವರೆಲ್ಲರೂ ರಣರಂಗದಲ್ಲಿ ಸತ್ತರೂ ಉತ್ಸಾಹಶೂನ್ಯನಾಗದೆ ಉಗುರಿನ ಹಾಗೆ ಎರಡು ಕಡೆಯೂ ನಾಶಮಾಡುವ ತೀಕ್ಷ ತೆಯನ್ನೂ ಹೋಗಲಾಡಿಸಿಕೊಳ್ಳದೆ ತನ್ನ ಮೆಯ್ಯಲ್ಲಿ ಧರಿಸಿ ಭೀಮನ ಒಂದೇ ಗರ್ಜನೆಗೆ ಕೋಪವುಂಟಾಗಲು ಸಿಡಿಲಿನಂತೆ ರೇಗಿ ಬಂದಿದ್ದಾನೆ. ದುರ್ಯೋಧನನು ಎಂತಹ ಶೂರನೋ! ವ|| ಎನ್ನುವಷ್ಟರಲ್ಲಿ ದುರ್ಯೋಧನನು ಸಮೀಪಕ್ಕೆ ಬಂದು ಪಾಂಡವರಿಗೆ ಹೀಗೆಂದನು - ೮೪, ಹಿಂದೆ ಭೂಮಿಯು ರಾಕ್ಷಸನಾದ ಹಿರಣ್ಯಾಕ್ಷನ ಕೈಸೇರಲು ಈ ಕೃಷ್ಣನೇ ಮೊದಲು ಪಾತಾಳಲೋಕವನ್ನು ಪ್ರವೇಶ ಮಾಡಿದುದೂ ಈ ಮಹಾಭಯಂಕರವಾದ ಯುದ್ದದಲ್ಲಿ ನಿಮ್ಮ ಕೈಗೆ ಬಿದ್ದ ಭೂಮಂಡಲವನ್ನು ಪುನಃ ತರಲು ಶಾಸೋಕ್ತವಾಗಿ ನಾನು ಈ ಕೊಳವನ್ನು ಪ್ರವೇಶಿಸಿದುದೂ ಯಾವ ತಪ್ಪು? ಇನ್ನು ನನಗೆದುರಾಗುವವರು ಯಾರು ತೋರಿಕೊಡಿ ಎಂದನು. ವ|| ಧರ್ಮರಾಯನು ಹೀಗೆಂದನು :
Page #676
--------------------------------------------------------------------------
________________
ತ್ರಯೋದಶಾಶ್ವಾಸಂ | ೬೭೧ ಮll ಬಿಸುಡಿನ್ನಪೊಡಮೇವಮಂ ಧರಣಿಯಂ ಪಚ್ಚಾಶ್ವಮೇನಪ್ಪುದೀ
ಕಿಸುರೊಳ್ ಕೆಮ್ಮನೆ ಪಾಪಕರ್ಮ ಚಲಮಂ ಕೊಂಡಾಡದೆಮ್ಮಯ್ಯರುಂ | ಬೆಸಕೆಯ್ಯುತ್ತಿರೆ ನೀನೆ ಮೇಣರಸುಗೆಮ್ ಸೋದರ್ಯದಿಂದೊಳ್ಳಿತೇ ವಸುಧಾಮಂಡಳವಿಂಬುಕೆಯ್ಯುದಿದನಾರಿ ಕೆಯೊಡ್ಡಿದೆಂ ಬೇಡಿದಂ || ೮೫
ವ|| ಎಂಬುದುಮಂಬುಜೋದರನಿಂತೆಂದಂ
ಅನವದ್ಯ 11 ಅಝಟವಾಡದೂಳಯ್ಯರುಮಂ ನೀಂ ಕೂರ್ತಿರಿಸೆಂದೊಡಮೆಂತುಮೇ
ಗೆಯುಮದೊಲ್ಲದ ಕಾರಣದಿಂದ ನೋಡಿನಿತಾದುದು ನಿನ್ನೊಳೇಂ | ಸಯ್ಡವನಲ್ಲನೆ ಧರ್ಮತನೂಜಂ ಪೇಟ್ಟುದನಿನ್ನಮಗಿಂಬುಕೆಯ್ ಸಯ್ಯನೆ ಆಗುಣಿದಾರೊಳಮೇವಂಗೊಳ್ಳದಿರಿಂ ಫಣಿಕೇತನಾ | , ೮೬
ವ|| ಎಂಬುದುಮಾ ಮಾತಂ ಕೆಳಗಿವಿಗೆಯು ತನ್ನ ಗದಾದಂಡಮಂ ಭುಜಾ ದಂಡದೊಳಳವಡಿಸಿ ನೋಡಿ ದುರ್ಯೋಧನನಿಂತೆಂದಂ
ಕಂ|| ಮುನ್ನಿಮ್ಮ ಪೇಟ್ಟು ಗೆಯ್ಯದ
ನಿನ್ನೀ ಪದದಲ್ಲಿ ಪೇಟ್ಟು ಗೆಲ್ವಂತುಂತೇಂ | ಪನ್ನಗಪತಾಕನನೆ | ಬಿನ್ನಣವಡೆಮಾತನನ್ನೊಳಿಂ ನುಡಿಯದಿರಿಂ ||
೮೫. ದುರ್ಯೊಧನ ಇನ್ನು ಮೇಲಾದರೂ ಕೋಪವನ್ನು ಬಿಸಾಡು, ಭೂಮಿಯನ್ನು ಭಾಗಮಾಡಿ ಆಳೋಣ. ಈ ದ್ವೇಷದಿಂದ ಏನು ಪ್ರಯೋಜನ? ನಿಷ್ಟ್ರಯೋಜನವಾಗಿ ಪಾಪಕರ್ಮವಾದ ಹಟವನ್ನು ಆಶ್ರಯಿಸದೆ ನಾವು ಅಯ್ದು ಜನವೂ ನಿನಗೆ ಸೇವೆ ಮಾಡುವ ಹಾಗೆ ನೀನೇ ರಾಜ್ಯಭಾರಮಾಡು, ಸಹೋದರಬಾಂಧವ್ಯಕ್ಕಿಂತ ಈ ಭೂಮಂಡಲ ಮೇಲಾದುದೇ? ಇದನ್ನು ಅಂಗೀಕರಿಸು. ನಾನು ಕೈಯೊಡ್ಡಿ ಬೇಡಿದ್ದೇನೆ”. ವ|| ಕಮಲನಾಭನಾದ ಕೃಷ್ಣನು ಹೀಗೆಂದನು - ೮೬. ಅಯ್ತು (ಸಾಮಾನ್ಯವಾದ) ಹಳ್ಳಿಗಳಲ್ಲಿ ಅಯ್ದು ಜನವನ್ನು ನೀನು ಪ್ರೀತಿಯಿಂದ ಇರಿಸು ಎಂದು ಹೇಳಿದರೂ ಹೇಗೊ ಏನು ಮಾಡಿಯೂ ಅದಕ್ಕೆ ಒಪ್ಪದ ಕಾರಣದಿಂದ ಇಷ್ಟಾಯಿತು ನೋಡು. ನಿನ್ನಲ್ಲಿ ಧರ್ಮರಾಜನು ನೇರವಾಗಿ ಸ್ನೇಹದಿಂದ ನಡೆದುಕೊಂಡಿದ್ದಾನೆ. ಧರ್ಮರಾಯನು ಹೇಳಿದುದನ್ನು ಇನ್ನು ನಮಗಾಗಿ ಅಂಗೀಕಾರ ಮಾಡು; ದುರ್ಯೋಧನ, ಸ್ನೇಹಿತನಾದವನಾಗಿಯೇ ಉಳಿ; ಯಾರಲ್ಲಿಯೂ ಕೋಪಿಸಿಕೊಳ್ಳಬೇಡ. ವ|| ಎನ್ನಲು ಆ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತನ್ನ ಗದಾದಂಡವನ್ನು ಭುಜಾದಂಡದಲ್ಲಿ ಸೇರಿಸಿಕೊಂಡು ನೋಡಿ ದುರ್ಯೋಧನನು ಹೀಗೆ ಹೇಳಿದನು. ೮೭. ಮೊದಲು ನೀವು ಹೇಳಿದ್ದನ್ನು ಮಾಡದವನು ಇನ್ನು ಈ ಸಂದರ್ಭದಲ್ಲಿ ನೀವು ಹೇಳಿದುದನ್ನು ಮಾಡುವುದಕ್ಕೆ ನಾನು (ಅಭಿಮಾನಧನನಾದ) ದುರ್ಯೊಧನನಲ್ಲವೆ? ವೃಥಾ ಬಿನ್ನಣದ
Page #677
--------------------------------------------------------------------------
________________
೬೭೨ / ಪಂಪಭಾರತಂ
ಶಾ|| ಆ ದುಶ್ಯಾಸನನಂ ಪೊರಳ್ಳಿ ರಣದೊಳ್ ಕೊಂದೀ ಮರುತ್ತು ನಿಂ ತಾದಂ ದಳ್ಳಿಸೆ ನೋಡಿ ನೋಡಿ ಪುದುವಾಂತಕ್ಕುಮಿಂತೀಗಳಾ | ನಾದಂ ಮೇಣಿವನಾದನೇಕೆ ತಡೆವಿರ್ ಕೆಲ್ಲೊಯೆವಿಂ ಕರಂ ಸೋದರ್ಯಕ್ಕೆ ಕನಲ್ಲೊಡೆಂತಿನಿಬರುಂ ಕಾದಿಂ ಭರಂಗೆಯಸೆಂ || ೮೮
ವ|| ಎಂಬನ್ನೆಗಂ ತೀರ್ಥಯಾತ್ರೆಯೊಳ್ ತೊಡರ್ದು ತಡೆದ ಬಲದೇವಂ ದುರ್ಯೋಧನಂಗಾಯು ಬರ್ಪಂತೆ ಹೆಗಲೊಳ್ ಹಲಾಯುಧಮನಿಕ್ಕಿಕೊಂಡು ಜಂಗಮಪರ್ವತಮ ಬರ್ಪಂತೆ ಬಂದು ತನಗೆ ಪೊಡೆವಟ್ಟ ದುರ್ಯೋಧನನಂ ಪರಸಿ ಪಿರಿದುಮಂದಪ್ಪ ಕೊಂಡಾತಂಗಾದವಸ್ಥೆಯಂ ಕಂಡು ಮನುಗದ್ಗದಕಂಠವಾಗಿ ತನಗೆರಗಿದ ಮುರಾಂತಕನುಮಂ ಪಾಂಡುವರುಮಂ ಪರಸಲೊಲ್ಲದಿದೇನಂ ಮಾಡಿದಿರೆಂದೊಡೆ ಮಧುಮಥನನಣ್ಣನ ಮುನಿದ ಮೊಗಮನದಿಂತೆಂದಂ
ಚಂ।।
ಮುಳಿವೊಡಮೆಯೇ ಕೇಳು ಮುಳಿ ಪಾಂಡುತನೂಜರ ಮುಖ್ಯನಾಳ ಭೂ ತಳಮನದೆಂತುಮಾಯದ ಸುಯೋಧನನುದ್ಧತನ ವೃತ್ತಿಯಿಂ ಸುಹೃ | ದಳಮಯದಲ್ಲಿ ಕಾದಿ ಪುದುವಾಗೊಡಂಬಡಲೊಲ್ಲದಿನ್ನುಮ ಊಳಿಸುವನೀಗಳಾತನನೆ ನೀಂ ಬೆಸಗೊಳ್ ಪುಸಿಯಂ ಸುಯೋಧನಂ || ೮೯
ವ|| ಎನೆ ನೀಂ ಮರುಳನಮನೇಕೆ ಮಾಡಿದೆಯೆಂದು ತನ್ನ ಮೊಗಮಂ ನೋಡಿದ ಹಲಾಯುಧಂಗೆ ದುರ್ಯೋಧನನಿಂತೆಂದಂ
ಲೋಕೋಕ್ತಿಯನ್ನು ನನ್ನಲ್ಲಿ ಇನ್ನು ಮೇಲೆ ಆಡಬೇಡಿ. ೮೮. ದುಶ್ಯಾಸನನನ್ನು ಯುದ್ಧದಲ್ಲಿ ಹೊರಳಿಸಿ ಕೊಂದು ಈ ಭೀಮನೂ ಹೀಗೆ ವಿಶೇಷವಾಗಿ ಉರಿಯುತ್ತಿರುವುದನ್ನು ನೋಡಿ ನೋಡಿಯೂ ಜೊತೆಯಲ್ಲಿ ಕೂಡಿ ಬಾಳುವುದು ಹೇಗೆ ಸಾಧ್ಯವಾಗುತ್ತದೆ? ಈಗ ನಾನಾದೆನು ಮತ್ತು ಇವನಾದನು, ಏಕೆ ತಡೆಯುತ್ತಿದ್ದೀರಿ; ಕೈತಟ್ಟಿದ್ದೇನೆ. ಇನ್ನು ನೀವು ಸೋದರತನಕ್ಕೆ ಕೋಪಿಸಿಕೊಳ್ಳುವುದಾದರೆ ನೀವಿಷ್ಟು ಜನವೂ ಯುದ್ಧಮಾಡಿ; ನಾನು ಎದುರಿಸುತ್ತೇನೆ. ವll ಎನ್ನುವಷ್ಟರಲ್ಲಿ ತೀರ್ಥಯಾತ್ರೆಯಲ್ಲಿ ಸಿಕ್ಕಿ ತಡ ಮಾಡಿದ ಬಲರಾಮನು ದುರ್ಯೋಧನನಿಗೆ ಆಯಸ್ಸು ಬರುವಂತೆ ಹೆಗಲಲ್ಲಿ ನೇಗಿಲನ್ನು ಧರಿಸಿ ಚಲಿಸುವ ಬೆಟ್ಟವೇ ಬರುವ ಹಾಗೆ ಬಂದನು. ತನಗೆ ನಮಸ್ಕಾರಮಾಡಿದ ದುರ್ಯೋಧನನನ್ನು ಆಶೀರ್ವದಿಸಿ ಹಿರಿದಾಗಿ ಆಲಂಗಿಸಿಕೊಂಡು ಆತನಿಗಾದ ಅವಸ್ಥೆಯನ್ನು ಕಂಡು ದುಃಖದಿಂದ ಗದಗದಿಕೆಯಿಂದ ಧ್ವನಿ ಹೊರಡದ ಕಂಠವುಳ್ಳವನಾದನು. ತನಗೆ ನಮಸ್ಕಾರ ಮಾಡಿದ ಕೃಷ್ಣನಿಗೂ ಪಾಂಡವರಿಗೂ ಹರಸಲು ಇಷ್ಟ ಪಡದೆ ಇದೇನನ್ನು ಮಾಡಿದಿರಿ ಎಂದನು. ಕೃಷ್ಣನು ಅಣ್ಣನ ಕೋಪದಿಂದ ಕೂಡಿದ ಮುಖವನ್ನು ಅರ್ಥಮಾಡಿಕೊಂಡು ಹೀಗೆಂದನು. ೮೯. ಕೋಪಿಸಿ ಕೊಳ್ಳುವುದಾದರೆ ಚೆನ್ನಾಗಿ ಕೇಳಿ ವಿಚಾರ ಮಾಡಿ ಕೋಪಿಸಿಕೊ. ಪಾಂಡವರು ಮೊದಲು ಆಳಿದ ಭೂಮಿಯನ್ನು ಏನುಮಾಡಿದರೂ ಕೊಡದೆ ದುರ್ಯೋಧನನು ಗರ್ವದಿಂದ ಮಿತ್ರಸೈನ್ಯಗಳೆಲ್ಲ ಸತ್ತು ನಾಶವಾಗುವ ಹಾಗೆ ಕಾದಿ ಕೂಡಿ ಬಾಳುವುದಕ್ಕೆ ಒಪ್ಪಿಕೊಳ್ಳದೆ ಇನ್ನೂ ಮೇಲೆ ಬೀಳುತ್ತಿದ್ದಾನೆ. ಈಗ ಅವನನ್ನೇ ನೀನು ಕೇಳು; ದುರ್ಯೋಧನನು ಹುಸಿಯಾಡುವುದಿಲ್ಲ. ವ|| ಎನ್ನಲು ನೀನು ದಡ್ಡತನವನ್ನೇಕೆ ಮಾಡಿದೆ ಎಂದು ತನ್ನ
Page #678
--------------------------------------------------------------------------
________________
ತ್ರಯೋದಶಾಶ್ವಾಸಂ / ೬೭೩ ಮ|ಹರಿಯೆಂದಂದಮದಂತೆ ಪಾಂಡುತನಯ ನಿರ್ದೋಷಿಗಳ ತಥಮಿಂ
ತು ರಣಸ್ಥಾನದೊಳಿನ್ನೆರಲ್ಕುಡಿವೆನೇ ಮದ್ದಂಧು ಶೋಕಾಗ್ನಿಯಿಂ | ದುರಿದಪ್ಟೆಂ ತೊಡರ್ದನ್ನನಿಂ ಬಿಡು ವಿರೋಧಿಕ್ಷಾಪರೆ ಗದಾ
ಪರಿಘಾಘಾತದಿನಟ್ಟಿ ತಟ್ಟೆ ಮಡಿದಿನ್ನಬಾಡದೇಂ ಪೋಪರೇ | ೯೦ |
ವ|| ಎಂಬುದುಂ ಸಂಕರ್ಷಣನಾತನ ಮನದುತ್ಕರ್ಷತೆಯನದು ಪೆಜತನಿನ್ನೆನಗೆ ನುಡಿಯಲೆಡೆಯಿಲ್ಲ ಧರ್ಮಯುದ್ಧಮಂ ನೋಡಲ್ವುಮೆಂದು ಧರ್ಮಪುತ್ರನನಿಂತೆಂದಂ ನಿಮ್ಮಯ್ಯರೊಳೊರ್ವನೀತನೊಳ್ ಕಾದುವುದು ಕಾದಿ ಸೋಂ ಬಳೆಯಂ ದುರ್ಯೋಧನಂ ನೆಲನನಾಳ್ವನುಟಿದ ನಾಲ್ವರುಮಾತಂಗೆ ಬೆಸಕೆಯ್ತುದಾರ್ ಕಾದಿದಪಿರನೆ ಭೀಮಸೇನನಿಂತೆಂದಂಚಂ|| ತೊಡರ್ದು ಬಿಡಿಂ ಸುಯೋಧನನನೆನ್ನುಮನಾನಿರೆ ಕೌರವಾಧಿಪಂ
ಗಿಡುವಗೆ ಪೇಟಿಮಿಂ ಪುರೊಳಂ ಮುಳಿಸುಂಟೆ ಮಹಾ ಪ್ರತಿಜ್ಞೆಯೊಳ್ || ತೊಡರ್ದನುಮಾನ ಭೂತಮಳಮದಿರ್ಕೆಡೆಗೆಯ್ ಗೆಲಲಾರ್ತರಾರ್ಗರ ೧ುಡಿಯದಿರೆಂದೂಡಂಬಡಿಸಿದಂ ಹಳಿಯಂ ನಯದಿಂ ವೃಕೋದರಂ 11೯೧
ಮುಖವನ್ನು ನೋಡಿದ ಬಲರಾಮನಿಗೆ ದುರ್ಯೊಧನನು ಹೀಗೆಂದನು. ೯೦. ಕೃಷ್ಣನು ಹೇಳಿದ ರೀತಿ ಹೇಗೋ ಹಾಗೆಯೇ, (ಅವನೆಂದುದು ನಿಜ) ಪಾಂಡುಪುತ್ರರು ನಿರ್ದೋಷಿಗಳು, ಅದು ನಿಜ. ಯುದ್ಧರಂಗದಲ್ಲಿ ಇನ್ನು ಮೇಲೆ ಎರಡು ಮಾತನ್ನಾಡುತ್ತೇನೆಯೇ? ನನ್ನ ಬಾಂಧವರ ಮರಣದಿಂದುಂಟಾದ ದುಃಖದ ಬೆಂಕಿಯಿಂದ ಉರಿಯುತ್ತಿದ್ದೇನೆ. ಸಿಕ್ಕಿಕೊಂಡಿರುವ ನನ್ನನ್ನು ನೀನು ಬಿಟ್ಟುಬಿಡು. ವೈರಿರಾಜರು ಪರಿಘದಂತಿರುವ ಈ ಗದೆಯ ಪೆಟ್ಟಿನಿಂದ ನಾಶವಾಗಿ ತಗ್ಗಿ ಹಾಳಾಗದೆ ಇರುತ್ತಾರೆಯೆ ಎಂದನು. ವ|| ಬಲರಾಮನು ಆತನ ಮನಸ್ಸಿನ ಉದಾತ್ತತೆಯನ್ನು ತಿಳಿದು ಇನ್ನು ಬೇರೆಯದನ್ನು ನುಡಿಯಲು ಅವಕಾಶವಿಲ್ಲ. ಧರ್ಮಯುದ್ಧವನ್ನು ನೋಡಬೇಕೆಂದು ಧರ್ಮಪುತ್ರನನ್ನು ಕುರಿತು ಹೀಗೆಂದನು, ನಿಮ್ಮಅಯ್ದು ಜನರಲ್ಲಿ ಒಬ್ಬನು ಈತನೊಡನೆ ಕಾದುವುದು; ಕಾದಿ ಸೋತ ಬಳಿಕ ದುರ್ಯೋಧನನು ಭೂಮಿಯನ್ನು ಆಳುವನು, ಉಳಿದ ನಾಲ್ಕು ಜನವೂ ಆತನಿಗೆ ಸೇವೆಮಾಡತಕ್ಕದ್ದು, ಯಾರು ಕಾದುತ್ತೀರಿ ಎನ್ನಲು ಭೀಮಸೇನನು ೯೧. ನನ್ನನ್ನೂ ದುರ್ಯೋಧನನನ್ನೂ ಒಟ್ಟುಗೂಡಿಸಿ ಬಿಡಿ. ಕೌರವೇಶ್ವರನಿಗೆ ಬದ್ಧದ್ವೇಷಿಯಾಗಿ ನಾನಿರುವಾಗ ಇನ್ನಿತರರಲ್ಲಿ ಕೋಪವುಂಟೆ? ಮಹಾ ಪ್ರತಿಜ್ಞಾರೂಢನಾಗಿರುವವನೂ ನಾನೇ! ಭೂಮಿಯ ವಿಷಯ ಅದು ಹಾಗಿರಲಿ, ಕಾಳಗಮಾಡುವುದಕ್ಕೆ ಸ್ಥಳವನ್ನು ಸಿದ್ದಪಡಿಸು, ಗೆಲ್ಲಲು ಸಮರ್ಥ ರಾದವರು ಯಾರು ? ಎರಡು ಮಾತನ್ನಾಡಬೇಡ ಎಂದು ಭೀಮನು ಬಲರಾಮನನ್ನು ನಯದಿಂದ ಒಪ್ಪಿಸಿದನು. ವll ಯುದ್ಧರಂಗಕ್ಕೆ ಎಲ್ಲರನ್ನು ಕೂಡಿಕೊಂಡು ಬಂದರು.
Page #679
--------------------------------------------------------------------------
________________
೬೭೪) ಪಂಪಭಾರತಂ
ವ|| ಅಂತೂಡಂಬಡಿಸಿ ಸಂಗ್ರಾಮರಂಗಕ್ಕನಿಬರುಮನೊಡಗೊಂಡು ಬಂದುಕ೦il ಕರಿ ತುರಗ ನರ ಕಳೇವರ
ಪರಿಚಿತ ರಣದಲ್ಲಿ ಮಹೀತಳಂ ಕಾದಂ | ತರಿದಪ್ಪುದಂತಿದೆಂದಣ
ಮಿರದೆ ಮರುತ್ತೂನು ಸಮದಂ ಕೂಳುಗುಳಮಂtl. ವ|| ಅಂತು ಸಮಚಿದ ಸಂಗ್ರಾಮರಂಗದೊಳ ಪರಸ್ಪರ ವಿರೋಧ ಕ್ರೋಧವಿಕ್ಷೇಪ ಹರ್ಷಿತ ಮಾರ್ಗ ಪ್ರಹಸ್ತ ಪ್ರಸಾಧಿತ ಘೋರ ಸಂಗ್ರಾಮರುಮತ್ಯುಗ್ರ ಗದಾ ಪರಿಘ ಭಾಸುರ ಭುಜಪರಿಘರುಮಪ್ಪ ಭೀಮ ದುರ್ಯೋಧನರಿರ್ವರುಮೊರ್ವರೊರ್ವರು ಮೂದಲಿಸಿ ಸವ್ಯಾಪಸವ ಭ್ರಾಂತೋದ್ಧಾಂತ ಕರ್ಷಣ ಮಂಡಳವರ್ತನಾದಿಗಳಪ್ಪ ಮೂವತ್ತೆರಡು ಗದಾ ವಿಕ್ಷೇಪದೊಳಮತಿ ಪರಿಚಿತರಾಗಿ ಕಾದುವಾಗ- ಮ! ಮೊದಲಿಂ ಕಿಟ್ಟು ಕುಳಾಚಳಪತತಿಗಳ್ ಪೋದ್ಯದಾಘಾತವಾ
ತದಿನಾಕಾಶಮನೆಯ ತೂಲ್ಲಿ ಕವಿತಂದಂಭೋಧಿಯೊಳ್ ಸೂಟು ಬೂ | ಅದ ಬೀುಂದುವು ಬತ್ತಲಾಟಿಸಿದುವಾ ವಾರಾಶಿಗಳ ಗುರ್ಕಿ ಬಿ ಕಿದ ಬಾಯಂತೆ ಸುರುಳುದಂಬರಮಿದೇಂ ಪಂಪೋ ಗದಾಯುದ್ಧದಾ ||೯೩ ಗದೆಯೊಳ್ ಘಟ್ಟಗೆ ಪುಟ್ಟದುಳ್ಳತತಿ ನೀಳಾಕಾಶಮಂ ತಾಪಿನಂ ಪುದಿದಾ ದೇವರ ಕಣ್ಣೂಳುಳ್ಳಿ ವಿಳಯೋಳ್ಳಾಶಂಕೆಯಂ ಮಾಡ ಮ | ಟ್ಟಿದ ಸೂಚಿಟ್ಟುಗಳಿಂದ ಬೆಟ್ಟು ಕಲಳ್ಳಾಡ ಭೂಭಾಗಮಾ ದುದು ದುರ್ಯೊಧನ ಭೀಮಸೇನರ ಗದಾಯುದ್ಧಂ ಮಹಾಭೈರವಂ || ೯೪
೯೨. ಆನೆ ಕುದುರೆ ಕಾಲಾಳಿನ ಶರೀರಗಳಿಂದ ಕಿಕ್ಕಿರಿದ ಯುದ್ಧಭೂಮಿಯಲ್ಲಿ ನೆಲವು ಕಾದುವುದಕ್ಕೆ ಕಷ್ಟವಾಗುತ್ತದೆ ಎಂದು ಸ್ವಲ್ಪವೂ ಸಾವಕಾಶ ಮಾಡದೆ ಭೀಮನು ಯುದ್ಧಭೂಮಿಯನ್ನು ಗುಡಿಸಿದನು, ವ! ಹಾಗೆ ಗುಡಿಸಿದ ಯುದ್ಧರಂಗದಲ್ಲಿ ಒಬ್ಬರಿಗೊಬ್ಬರು ವಿರೋಧ, ಕ್ರೋಧ, ವಿಕ್ಷೇಪ, ಹರ್ಷಿತ, ಮಾರ್ಗ, ಪ್ರಹಸ್ತ, ಪ್ರಸಾದಿತಗಳೆಂಬ ಗದಾಯುದ್ಧದ ಪರಿಕರಗಳಿಂದ ಕೂಡಿದ ಭಯಂಕರವಾದ ಯುದ್ಧವುಳ್ಳವರೂ ಅತಿ ಭಯಂಕರವಾದ ಪರಿಘದಂತಿರುವ ಗದೆಯಿಂದ ಪ್ರಕಾಶಿತವಾದ ಭುಜಾದಂಡವುಳ್ಳವರೂ ಆದ ಭೀಮದುರ್ಯೊಧನರಿಬ್ಬರೂ ಒಬ್ಬರನ್ನೊಬ್ಬರು ಹಿಯ್ಯಾಳಿಸಿ, ಸವ್ಯ, ಅಪಸವ್ಯ, ಭ್ರಾಂತ, ಉದ್ಯಾಂತ, ಕರ್ಷಣ, ಮಂಡಳಾವರ್ತನ - ಇವೇ ಮೊದಲಾದ ಮೂವತ್ತೆರಡು ಗದಾಪ್ರಯೋಗದಲ್ಲಿಯೂ ವಿಶೇಷ ಪರಿಣತರಾಗಿ ಕಾದಿದರು. ೯೩. ಮೇಲೆತ್ತಿದ ಗದೆಯ ಪೆಟ್ಟಿನಿಂದ ಹುಟ್ಟಿದ ಗಾಳಿಯಿಂದ ಕುಲಪರ್ವತಗಳ ಸಮೂಹಗಳು ಮೂಲದಿಂದ ಕಿತ್ತು ಆಕಾಶವನ್ನು ಪೂರ್ಣವಾಗಿ ಮುಚ್ಚಿ ಬಂದು ಕ್ರಮವಾಗಿ ಸಮುದ್ರದಲ್ಲಿ ಬೀಳಲಾರಂಭಿಸಿದುವು. ಆ ಸಮುದ್ರಗಳೂ ಒಣಗಿ ಹೋಗಲು ಆಶಿಸಿದುವು. ಆಕಾಶವು ಸುಕ್ಕಿ ಬಿಕ್ಕಿದ ಬಾಯಂತೆ ಸುರುಳಿಯಾಯಿತು. ಗದಾಯುದ್ದದ ವೈಭವವು ಅದ್ಭುತವಾಗಿತ್ತು. ೯೪, ಇಬ್ಬರೂ ಗದೆಗಳಲ್ಲಿ ಪರಸ್ಪರ ಘಟ್ಟಿಸಲು ಹುಟ್ಟಿದ ಉಿಗಳ ಸಮೂಹವು ವಿಸ್ತರಿಸಿ ಆಕಾಶವನ್ನು
Page #680
--------------------------------------------------------------------------
________________
ತ್ರಯೋದಶಾಶ್ವಾಸಂ | ೬೭೫ ವ|| ಅಂತಿರ್ವರುಮೊರ್ವರೋರ್ವರೊಳ್ ಬೀರಮಂ ಬಿನ್ನಣಮುಮಂ ಮದು ಕಾದ ದುರ್ಯೋಧನಂ ವಿದ್ಯಾಧರ ರಣದೊಳತಿಪರಿಚಿತನಪುದಂದಾಕಾಶಕ್ಕೆ ನೆಗೆದು
ಕoll
ಸಿಡಿಲೆಗುವಂತ ಭೋರೆಂ
ದೊಡನೆಆಗಿ ಮಹೋಗ್ರ ಘನ ಗದಾಪರಿಘದಿನಾ | ರ್ದಡಗಿಡ ಪೊಯೊಡ ಭೀಮಂ
ಕೆಡದಂ ಧರೆ ನಡುಗ ನೀಳ ಕುಳಂಬೂಲ್ ||
EX
ವ|| ಅಂತು ದುರ್ಯೋಧನ ಗದಾಪ್ರಹರಣದಿಂದಚೇತನನಾಗಿರ್ದೊಡೆ ಬಿಲ್ಡನನಿಯ ನೆಂದು ಪವಮಾನಮಾರ್ಗದೊಳಲ್ಲಾಂತರದೊಳ್ ಗದೆಯಂ ಬೀಸುವಾಗಳ್ ಸುಯೋಧನನ ಗದೆಯ ಗಾಳಿಯೊಳ್ ಮೂರ್ಛಯಿಂದತ್ತು ಧರಾತಳದೊಳ್ ಸೂಸಿದ ತನ್ನ ಗದಾದಂಡಮಂ ಭುಜದಂಡದೊಳಳವಡಿಸಿಕೊಂಡ ವೃಕೋದರನನಂಬುಜೋದರಂ ಬಿಚ್ಚಟೆಸುವ ನವದೊಳಮ್ಮಮ್ಮಂಗಕ್ಕುಮಂದು ತೊಡೆಯಂ ಪೊಯ್ಯಾರ್ವುದುಂ ದುರ್ಯೋಧನನ ನನದಂದಓದು
ಮ|| ಸ || ನೆನೀತಂಗೂರುಯುಗಂ ನೆನನಟಿಯದಾನಿನ್ನೆಗಂ ಮಾನಿಂ ಪೋ
ತಪಂ ಪಾರ್ದಿಪೆ್ರನೆಂದೊಯ್ಯನ ಗದೆಯನಣಂ ಪಾಡುಗೆಯ್ದಿರ್ದು ಭೋರಂ | ದಪುಗ್ರಾರಾತಿಯೂರುದ್ವಯಮನಿಡ ಗದಾಘಾತದಿಂದೂರುಯುಗ ಮುಳದತ್ತಂ ನುಚ್ಚುನೂರಾಗಿರೆ ಕೆಡೆದನಿಳಾಭಾಗದೊಳ್ ಧಾರ್ತರಾಷ್ಟ್ರಂ || ೯೬
ವ್ಯಾಪಿಸಿ ದೇವತೆಗಳ ಕಣ್ಣಲ್ಲಿ ತುಂಬಿ ತೊಳಗಲು ಅವರಿಗೆ ಅವು ಪ್ರಳಯಕಾಲದ ಉಲ್ಕಾಪಾತದ ಸಂದೇಹವನ್ನುಂಟುಮಾಡಿದವು. ಅವರ ಕ್ರಮ ಕ್ರಮವಾದ ತುಳಿತದಿಂದ ಬೆಟ್ಟಗಳು ಸಡಿಲವಾಗಿ ಕಳಚಿ ಬಿದ್ದವು. ಭೂಭಾಗವು ಅಳ್ಳಾಡಿದುವು. ಭೀಮ, ದುರ್ಯೋಧನರ ಗದಾಯುದ್ಧವು ಮಹಾಭಯಂಕರವಾಯಿತು. ವ! ಇಬ್ಬರೂ ಒಬ್ಬೊಬ್ಬರಲ್ಲಿ ವೀರ್ಯವನ್ನು ಕೌಶಲವನ್ನೂ ಪ್ರದರ್ಶಿಸಿ ಕಾದಲು ದುರ್ಯೋಧನನು ವಿದ್ಯಾಧರಕರಣದಲ್ಲಿ (ಮೇಲಕ್ಕೆ ಹಾರುವ ಒಂದು ವರಸೆ ಅಥವಾ ಪಟ್ಟು) ವಿಶೇಷ ಪರಿಚಿತನಾದುದರಿಂದ ಆಕಾಶಕ್ಕೆ ನೆಗೆದು -೯೫. ಸಿಡಿಲು ಬೀಳುವಂತೆ ಭೋರೆಂದು ತಕ್ಷಣವೇ ಎರಗಿ ಮಹಾಭಯಂಕರವಾದ ದಪ್ಪನಾದ ಪರಿಘದಂತಿರುವ ಗದೆಯಿಂದ ಘರ್ಜನೆಮಾಡಿ ಇದ್ದ ಸ್ಥಳದಿಂದ ಕದಲುವಂತೆ ಹೊಡೆಯಲು ಭೂಮಿ ನಡುಗಿತು, ಭೀಮನು ನೀಲಪರ್ವತದಂತೆ ಕೆಳಗೆ ಬಿದ್ದನು; ವ|| ಹಾಗೆ ದುರ್ಯೋಧನನ ಗದೆಯ ಹೊಡೆತದಿಂದ ಮೂರ್ಛಿತನಾಗಿರಲು ದುರ್ಯೋಧನನು 'ಬಿದ್ದವನನ್ನು ಹೊಡೆಯುವುದಿಲ್ಲ' ಎಂದು ವಾಯುಮಾರ್ಗದಲ್ಲಿ ಸ್ವಲ್ಪದೂರದಲ್ಲಿಯೇ ಗದೆಯನ್ನು ಬೀಸಿದನು. ಭೀಮನು ಆ ಗದೆಯ ಗಾಳಿಯಿಂದ ಮೂರ್ಛಿಯಿಂದೆಚ್ಚತ್ತು ಭೂಮಿಯ ಮೇಲೆ ಬಿದ್ದಿದ್ದ ತನ್ನ ಗದೆಯನ್ನು ಭುಜಾದಂಡದಲ್ಲಿ ಅಳವಡಿಸಿಕೊಂಡನು. ಭೀಮನನ್ನು ಕೃಷ್ಣನು ಹೊಗಳುವ ನೆಪದಿಂದ ನಮ್ಮಪ್ಪನಿಗೆ ಜಯವಾಗುತ್ತದೆ ಎಂದು ತೊಡೆಯನ್ನು ತಟ್ಟಿ ಆರ್ಭಟಿಸಿದನು, ಭೀಮನು ಅದೇ (ಆ ತೊಡೆಯೇ) ದುರ್ಯೋಧನನ ಮರ್ಮಸ್ಥಳವೆಂದು ತಿಳಿದನು. ೯೬. ಈ ಎರಡು ತೊಡೆಗಳು ಈತನಿಗೆ ಮರ್ಮಸ್ಥಾನ.
Page #681
--------------------------------------------------------------------------
________________
೬೭೬ / ಪಂಪಭಾರತಂ ಚಂ|| ನುಡಿದುದನೆಯ ತುತ್ತ ತುದಿಯೆಯ್ಯುವಿನಂ ನುಡಿದಂ ವಲಂ ಚಲಂ
ಬಡಿದುದನೆಯೇ ಮುಂ ಪಿಡಿದುದಂ ಪಿಡಿದಂ ಸಲೆ ಪೂಣ್ಣ ಪೂಣ್ಯ ನೇ | ರ್ಪಡೆ ನಡೆವನ್ನೆಗಂ ನಡೆದನಳದೆ ಬಳ್ಳದೆ ತನ್ನೊಡಲ್ ಪಡ ಊಡುವಿನಮಣುಗುಂದನೆ ದಲೇನಭಿಮಾನಧನಂ ಸುಯೋಧನಂ | ೯೭
ವ|| ಅಂತು ಸತ್ತುಂ ನೆಲನಂ ಪತ್ತುವಿಡೆನೆಂಬಂತೆ ನೆಲನಂ ಪ ಮೂರ್ಛಾಗತನಾಗಿರ್ದ ಕುರುಕುಳಚೂಡಾಮಣಿಯನೇನುಂ ಮಾಣದ ಕಿಮಾರವೈರಿ ಮುಟ್ಟೆವಂದಾಗಳೇಕಾದಶಾ ಕೋಹಿಣೀಪತಿಯಪ್ಪ ರಾಜಾಧಿರಾಜನಂ ಪರಾಭವಂಬಡಿಸದಿರೆಂದು ಬಲದೇವಂ ಬಾರಿಸೆವಾರಿಸೆಮll ಸ ಇದಾಳ್ ಮೂರ್ಧಾಭಿಷೇಕಂ ತನಗೆ ಗಡ ಸಮಂತಾಯ್ತು ಪಿಂಛಾತಪತ್ರಂ
ಪುದಿದತ್ತಂ ತಣ್ಣೆಳಲಾಡುವುದು ಗಡಮಿದೆಂತೆಂದುಮಾರ್ಗಪೊಡಂ ಪ | ರ್ವಿದ ಗರ್ವೊದ್ರೇಕದಿಂ ಬಾಗದು ಗಡಮನುತುಂ ಮಾಣಿಕಂ ಸೂಸೆ ಬಲ್ಲಿಂ ದೊದೆದಂ ಸಾರ್ತಂದು ದುರ್ಯೋಧನನ ಮಕುಟಮಂ ಕೋಪದಿಂ
. : ಭೀಮಸೇನಂ || ೯೮ ವll ಒದವುದುಂ ದುರ್ಯೋಧನಂಗಾದವಸ್ಥೆಯಂ ನೋಡಲಾಗಿದೆಯುಂ ತನ್ನ ತಮ್ಮನ ಮನಮಂ ನೋಯಿಸಲಾದೆಯುಂ ಬಲದೇವಂ ಭಗ್ನಮನೋರಥನಾಗಿ ದ್ವಾರಾವತಿಗೆ ಮರ್ಮವನ್ನು ತಿಳಿಯದೆ ನಾನು ಇಲ್ಲಿಯವರೆಗೆ ತಪ್ಪಿದೆನು. ಇನ್ನು ಬಿಡು, ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ-ಎಂದು ನಿಧಾನವಾಗಿ ಹಗೆಯನ್ನು ಹೊಂಚುಹಾಕುತ್ತಿದ್ದು (ಗದೆಯನ್ನು ಸ್ವಲ್ಪ ಸರಿಮಾಡಿಕೊಂಡು) ಭೋರೆಂದು ಮೇಲೆ ಬೀಳುವ ಶತ್ರುವಿನ ಎರಡು ತೊಡೆಗಳನ್ನು ಹೊಡೆಯಲು ಗದೆಯ ಪೆಟ್ಟಿನಿಂದ ಆ ಎರಡು ತೊಡೆಗಳೂ ಮುರಿದು ಎಲ್ಲ ಕಡೆಯಲ್ಲಿಯೂ ಪುಡಿಪುಡಿಯಾಗಿರಲು ದುರ್ಯೋಧನನು ನೆಲದ ಮೇಲೆ ಬಿದ್ದನು. ೯೭. ಆಡಿದ ಮಾತನ್ನು ತುತ್ತತುದಿ ಮುಟ್ಟುವವರೆಗೂ ಆಡಿದನು. ಮೊದಲು ಹಿಡಿದ ಹಟವನ್ನು ಕೊನೆಯವರೆಗೂ ಸಾಧಿಸಿದನು. ಮಾಡಿದ ಪ್ರತಿಜ್ಞೆಯು ನೇರವಾಗಿ ನಡೆಯುವವರೆಗೂ ನಡೆದು ಹೆದರದೆ ಅಳ್ಳಾಡದೆ ತನ್ನ ಶರೀರವು ಕೆಳಗೆ ಬೀಳುವವರೆಗೂ ತನ್ನ ಪರಾಕ್ರಮವನ್ನು ಕಡಿಮೆಮಾಡಿಕೊಳ್ಳಲಿಲ್ಲವಲ್ಲಾ, ದುರ್ಯೋಧನನು ಎಷ್ಟು ಆತ್ಮಗೌರವನ್ನುಳ್ಳವನು! ವರ ಹಾಗೆ ಸತ್ತೂ ನೆಲವನ್ನು (ಅಂಟಿಕೊಂಡಿರುವುದನ್ನು ಬಿಡುವುದಿಲ್ಲ ಎನ್ನುವ ಹಾಗೆ ನೆಲವನ್ನು ತಬ್ಬಿಕೊಂಡು ಮೂರ್ಛಾಗತನಾಗಿದ್ದ ಕುರುಕುಲಚೂಡಾಮಣಿಯಾದ ದುರ್ಯೊಧನನನ್ನು ಭೀಮನು ಸ್ವಲ್ಪವೂ ಬಿಡದೆ ಸಮೀಪಕ್ಕೆ ಬಂದಾಗ ಬಲರಾಮನು, ಹನ್ನೊಂದಕ್ಟೋಹಿಣೀ ಪತಿಯಾದ ಚಕ್ರವರ್ತಿಯನ್ನು ಅವಮಾನಪಡಿಸಬೇಡವೆಂದು ತಡೆದನು. ೯೮. 'ಇದರಿಂದಲ್ಲವೇ ಇವನಿಗೆ ಪಟ್ಟಾಭಿಷೇಕವು ಪೂರ್ಣವಾಗುವುದು. ನವಿಲುಗರಿಯ ಕೊಡೆಯು ಎಲ್ಲ ಕಡೆಯೂ ಪ್ರಸರಿಸಿ ಇದಕ್ಕಲ್ಲವೇ ತಂಪಾದ ನೆರಳನ್ನುಂಟು ಮಾಡುವುದು. ಇದು ಎಂದೂ ಯಾರಿಗೂ ಹೆಚ್ಚಾದ ಗರ್ವದಿಂದ ಬಾಗುವುದಿಲ್ಲ ವಲ್ಲವೇ' ಎನ್ನುತ್ತ ಮಾಣಿಕ್ಯರತ್ನಗಳು ಚೆಲ್ಲುತ್ತಿರಲು ಭೀಮಸೇನನು ಹತ್ತಿರಬಂದು ಕೋಪದಿಂದ ದುರ್ಯೋಧನನ ಕಿರೀಟವನ್ನು ಬಲವಾಗಿ ಒದೆದನು. ವ|| ಬಲರಾಮನು ದುರ್ಯೋಧನನಿಗಾದ ಅವಸ್ಥೆಯನ್ನು ನೋಡಲಾರದೆಯೂ ತನ್ನ
Page #682
--------------------------------------------------------------------------
________________
ತ್ರಯೋದಶಾಶ್ವಾಸಂ / ೬೭೭ ಪೋದನನ್ನೆಗಂ ವೇಣೀಸಂಹಾರೋರುಭಂಗ ಮಕುಟಭಂಗಂಗಳೆಂಬ ತನ್ನ ಮಹಾ ಪ್ರತಿಜ್ಞೆಯಂ ನೆಪಿದ ಭೀಮಸೇನನಳವನಳವಲ್ಲದ ಪೊಗಟ್ಟು ಚಕ್ರಿ ಕಾಲ ಕುಶಲನಪುದಣಿನಶ್ವತ್ಥಾಮನಿನಪ್ಪನಾಗತ ಬಾಧಾವಿಘಾತಮಂ ಮಾಡಲೆಂದರುಮಂ ನೀಲಗಿರಿಗೊಡಗೊಂಡು ಪೋಗುತ್ತುಮಲ್ಲಿರ್ದ ಬೀಡುಮನಾ ಬೀಡಿಂಗ ಕಾಪಾಗಿ ಧೃಷ್ಟದ್ಯುಮ್ಮ ಶಿಖಂಡಿ ಚೇಕಿತಾನ ಯುಧಾಮನ್ನೂತ್ರ ಮೌಜಸರುಮಂ ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರುಮಂ ಪೇಟ್ಟು ಹಸ್ತಿನಪುರಕ್ಕೆ ಕಳಿಸಿದನ್ನೆಗಮಿತ್ರ ಕೃಪ ಕೃತವರ್ಮ ಸಮೇತನಶ್ವತ್ಥಾಮಂ ದುರ್ಯೊಧನನಿರ್ದಡೆಯಳೆಯದ ಗಾಂಗೇಯರಿಂದಮಿರ್ದಡೆಯನಳೆದು ಕೊಳವದಲ್ಲಿಯುಂ ಕಾಣದ ಕೊಳುಗುಳದೊಳುಸುತ್ತುಂ ಬರ್ಪಂ ತೊಟ್ಟನೆ ಕಟ್ಟದಿರೊಲ್ಚಂ ಪಿಡಿದಡಗೆಯ ಚಾಮರದ ದಕ್ಷಿಣಹಸ್ತದ ಪದದೊಳೊಡಂ
ಬಡ ನಸು ಮಾಸಿ ಪಾಡದ ರೂಪಿನೊಳುಣುವ ಗಾಡಿ ನಾಡ ಕ | ಶೌಡ ತೊಡಂಕಿ ಪೀಳಿದ ಕುರುಳೆ ಚಿತ್ತದೊಳಾದ ಬೇಸಜಂ |
ನುಡಿವವೊಲಾಗೆ ಬರ್ಪ ಕಮಳಾಯತನೇಯನಿಂದುವಯಂ | ೯೯ ವ|| ಕಂಡು ನೀನಾರ್ಗೆನೆಂಬೆಯಲ್ಲಿ ಪೋದಷೆಯೆನೆ
ತಮ್ಮನಾದ ಕೃಷ್ಣನ ಮನಸ್ಸನ್ನು ನೋಯಿಸಲಾರದೆಯೂ ಭಗ್ನಮನೋರಥನಾಗಿ ದ್ವಾರಾವತಿಗೆ ಹೋದನು. ಅಷ್ಟರಲ್ಲಿ ವೇಣೀಸಂಹಾರ (ಮುಡಿಯನ್ನು ಕಟ್ಟುವುದು) ಊರುಭಂಗ (ತೊಡೆಯನ್ನು ಮುರಿಯುವುದು) ಮಕುಟಭಂಗ (ಕಿರೀಟವನ್ನು ಒಡೆಯುವುದು) ಎಂಬ ತನ್ನ ಮಹಾಪ್ರತಿಜ್ಞೆಗಳನ್ನು ಪೂರ್ಣಮಾಡಿದ ಭೀಮಸೇನನ ಶಕ್ತಿಯನ್ನು ಅಳತೆಮೀರಿ ಕೃಷ್ಣನು ಹೊಗಳಿದನು. ಕಾಲಕುಶಲನಾದುದರಿಂದ ಅಶ್ವತ್ಥಾಮನಿಂದ ಮುಂದೆ ಬರುವ ವಿಪತ್ತಿಗೆ ಪರಿಹಾರಮಾಡುವುದಕ್ಕೆಂದು ಅಯ್ದು ಜನ ಪಾಂಡವರನ್ನು ನೀಲಗಿರಿಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋದನು. ಆ ಬೀಡಿಗೆ ರಕ್ಷಕರಾಗಿ ಧೃಷ್ಟದ್ಯುಮ್ಮ, ಶಿಖಂಡಿ, ಚೇಕಿತಾನ, ಯುಧಾಮನ್ನೂತ್ತಮೌಜಸ ರನ್ನೂ ಶ್ರುತಸೋಮಕರೇ ಮುಖ್ಯರಾದ ಪಂಚಪಾಂಡವರನ್ನೂ ಗೊತ್ತು ಮಾಡಿ (ಇರಹೇಳಿ) ಪಾಂಡವರನ್ನು ಹಸ್ತಿನಾಪಟ್ಟಣಕ್ಕೆ ಕಳುಹಿಸಿದನು. ಅಷ್ಟರಲ್ಲಿ ಈ ಕಡೆ ಕೃಪಕೃತವರ್ಮರೊಡಗೂಡಿದ ಅಶ್ವತ್ಥಾಮನು ದುರ್ಯೊಧನನಿದ್ದ ಸ್ಥಳವನ್ನು ತಿಳಿಯದೆ ಭೀಷ್ಕರಿಂದ ದುರ್ಯೊಧನನಿದ್ದ ಸ್ಥಳವನ್ನು ತಿಳಿದು ಕೊಳಕ್ಕೆ ಬಂದು ಅಲ್ಲಿಯೂ ಕಾಣದೆ ಯುದ್ಧಭೂಮಿಯಲ್ಲಿ ಹುಡುಕುತ್ತ ಬರುತ್ತಿದ್ದವನು ಥಟಕ್ಕನೆ ಎದುರುಗಡೆಯಲ್ಲಿ ೯೯. ಎಡಗೈಯಲ್ಲಿ ಚಾಮರವೂ ಬಲಗೈಯಲ್ಲಿ ಕಮಲದ ಹೂವೂ ಮನೋಹರವಾಗಿರಲು ಸ್ವಲ್ಪ ತೇಜೋಹೀನವಾಗಿ ಸ್ವಭಾವಸ್ಥಿತಿ ಕೆಟ್ಟು ಆಕಾರವನ್ನು ಹೊರಹೊಮ್ಮುತ್ತಿರುವ ಸೌಂದರ್ಯವು ವಿಶೇಷವಾಗಿ ಕಣ್ಣನ್ನು ಆಕರ್ಷಿಸಲು ಸಿಕ್ಕಾಗಿ ಕೆದರಿರುವ ಕುರುಳುಗಳು ಮನಸ್ಸಿನ ಬೇಸರನ್ನು ನುಡಿಯುವ ಹಾಗಿರಲು (ಎದುರಿಗೆ) ಬರುತ್ತಿದ್ದ ಕಮಳದಂತೆ ವಿಸ್ತಾರವಾದ ಕಣ್ಣುಳ್ಳ ಚಂದ್ರಮುಖಿಯನ್ನು ನೋಡಿದನು. ವ ನೀನಾರು? ನಿನ್ನ ಹೆಸರೇನು? ಎಲ್ಲಿಗೆ ಹೋಗುತ್ತಿದ್ದೀಯೆ ಎನ್ನಲು
Page #683
--------------------------------------------------------------------------
________________
೬೭೮ / ಪಂಪಭಾರತಂ
ಮ||
ಹೆಸರೊಳ್ ಲಕ್ಷ್ಮಿ ಯೆನಿನ್ನೆಗಂ ನೆಲಸಿ ತಾಂ ದುರ್ಯೋಧನೋರಸ್ಥಳಾ ವಸಥಂ ದ್ರೋಣ ನದೀಜ ಕರ್ಣ ಭುಜವೀರ್ಯಾವೇಷ್ಟಿತಂ ಮಾಡೆ ಸಂ | ತಸದಿರ್ದ೦ ಬಿಸುಟಾ ಧರಾಧಿಪತಿಯಂ ನಾರಾಯಣಾದೇಶ ಡಿಸೆ ಪಾಂಡುಪ್ರಿಯಪುತ್ರರೊಳ್ ನೆರೆಯಲೆಂದಿಂತೀಗಳಾಂ ಪೋದಂ ವ|| ಎಂಬುದುಮಶ್ವತ್ಥಾಮನಿಂತೆಂದಂ
ಚoll
ಮ||
300
ಪೊಸತಲರ್ದಂಬುಜಂಗಳೆಸಳ್ ನಡೆಪಾಡುವಳೇಂ ಪಯೋಧಿಯಂ ಪೊಸದೊಡೆ ಪುಟ್ಟ ಮುರವಿರೋಧಿಯ ಪತ್ನಿಯ ಮಿಂಚುತಿರ್ಪ ಕೂ | ರಸಿಗಳ ಮೇಲೆ ಸಂಚರಿಗೆ ವೈರಿನರಾಧಿಪಸೈನ್ಯವಾರ್ಧಿಯಂ
ಪೊಸೆದೊಡೆ ಪುಟ್ಟದೀ ನಿನಗೆ ವಹಿಸಲೆನ್ನನದೆಂತು ತೀರ್ಗುಮೋ || ೧೦೧
ಕುರುವಂಶಾಂಬರಭಾನುವಂ ಬಿಸುಡಿಸಲ್ಮಾನುಳ್ಳಿನಂ ತೀರದಾ ನಿರೆ ನಾರಾಯಣನೆಂಬನುಂ ಪ್ರಭುವ ಪೇಮ್ ನೀನೀ ಮರುಳಾತನಂ | ಬುರುಹಾಕ್ಷಿ ಬಿಸುಡಂಜದಿರ್ ನಡೆ ಕುರುಕ್ಷಾಪಾಳನಿರ್ದಲ್ಲಿಗೆಂ ದರವಿಂದಾಲಯೆಯಂ ಮಗುಟ್ಟಿದನದೇನಾ ದೌಣಿ ಶೌರ್ಯಾರ್ಥಿಯೋ || ೧೦೨
ಮ|| ಅಂತು ವಿಕಸಿತಕಮಳದಳನಯನೆಯಂ ಕಮಳೆಯನಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬಘಟಚೇಟಿಕೆಯಂ ತರ್ಪಂತ ತಂದು ವೃಕೋದರ ಗದಾಸಂಚೂರ್ಣಿತೋರು ಯುಗಳನುಂ ಭೀಮಸೇನಚರಣಪ್ರಹರಣಗಳಿತಶೋಣಿತಾರ್ದಮೌಳಿಯುವಾಗಿ ಕೋಟಲೆಗೊಳ್ಳ ಕೌರವೇಶ್ವರನನೆಯ ಪೋಗಿ ಹಸ್ತಪ್ರಹಸ್ತಮಂಡಲಾಗನುಂ ಶೋಕವಗ್ರನುಮಾಗಿ
೧೦೦. ನನ್ನ ಹೆಸರು ಲಕ್ಷ್ಮಿಯೆಂದು. ದ್ರೋಣ ಭೀಷ್ಮಕರ್ಣರ ಬಾಹುಬಲದಿಂದ ರಕ್ಷಿತನಾದ ದುರ್ಯೋಧನನ ಎದೆಯು ಮನೆಯಾಗಿರಲು ಇಲ್ಲಿಯವರೆಗೆ ಅಲ್ಲಿ ಸಂತೋಷದಿಂದಿದ್ದೆನು. ಕೃಷ್ಣನ ಅಪ್ಪಣೆಯ ಪ್ರಕಾರ ಆ ರಾಜನನ್ನು ಬಿಸುಟು ಪಾಂಡುಪ್ರಿಯಪುತ್ರರಲ್ಲಿ ಸೇರಬೇಕೆಂದು ಈಗ ನಾನು ಹೋಗುತ್ತಿದ್ದೇನೆ. ವ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೧೦೧. ಹೊಸದಾಗಿ ಅರಳಿರುವ ಕಮಲದಳಗಳ ಮೇಲೆ ಓಡಾಡುವವಳು ಸಮುದ್ರವನ್ನು ಕಡೆಯಲು ಹುಟ್ಟಿದವಳೆ, ವಿಷ್ಣುವಿನ ಹೆಂಡತಿಯೇ, ಮಿಂಚಿನಂತಿರುವ ಹರಿತವಾದ ಕತ್ತಿಗಳ ಮೇಲೆ ಸಂಚರಿಸುತ್ತೀಯೆ; ಶತ್ರುರಾಜಸೇನಾಸಮುದ್ರವನ್ನು ತಡೆಯಲು ಹುಟ್ಟಿದ ಈ ನಿನಗೆ ನನ್ನನ್ನು ಪ್ರತಿಭಟಿಸಲು ಸಾಧ್ಯವೇ, ೧೦೨. ಕುರುವಂಶವೆಂಬ ಆಕಾಶಕ್ಕೆ ಸೂರ್ಯನಾದ ದುರ್ಯೋಧನನನ್ನು ನಾನಿರುವಾಗ ನೀನು ಬಿಸಾಡಲು ಸಾಧ್ಯವಿಲ್ಲ: ನಾನಿರುವಾಗ ನಾರಾಯಣನೆಂಬುವನು ನಿನಗೆ ಯಜಮಾನನೇ ಹೇಳು, ಹೇ ಕಮಲಮುಖಿ ಈ ಹುಚ್ಚುಮಾತನ್ನು ಬಿಸಾಡು; ಹೆದರಬೇಡ; ನಡೆ, ಕೌರವಚಕ್ರವರ್ತಿಯಿರುವ ಸ್ಥಳಕ್ಕೆ ಎಂದು ಲಕ್ಷ್ಮಿಯನ್ನು ಹಿಂತಿರುಗಿಸಿದನು. ಅಶ್ವತ್ಥಾಮನ ಅಹಂಕಾರವೆಷ್ಟು? ವ| ಅರಳಿದ ಕಮಲದಳದಂತೆ ಕಣ್ಣುಳ್ಳ ಲಕ್ಷ್ಮಿಯನ್ನು ಅಶ್ವತ್ಥಾಮನು ಮುಂದಿಟ್ಟುಕೊಂಡು ಕೌರವಕುಟುಂಬ ಘಟಚೇಟಿಕೆಯನ್ನು ಕರೆದುತರುವಂತೆ ತಂದನು. ಭೀಮನ ಗದೆಯಿಂದ ಪುಡಿಮಾಡಲ್ಪಟ್ಟ ಎರಡು ತೊಡೆಯುಳ್ಳವನೂ ಭೀಮಸೇನನ ಪಾದಗಳ ಒದೆತದಿಂದ ಸುರಿದ ರಕ್ತದಿಂದ ಒದ್ದೆಯಾಗಿರುವ ತಲೆಯುಳ್ಳವನೂ ಆಗಿ ವ್ಯಥೆಪಡುತ್ತಿರುವ ದುರ್ಯೋಧನನ
Page #684
--------------------------------------------------------------------------
________________
ತ್ರಯೋದಶಾಶ್ವಾಸಂ | ೬೭೯
ಚಂ|| ನೆಗಲ್ಲಿ ನೆಗಗಾವಡೆಯೊಳಂ ಪಡೆಯಿಲ್ಲದೆ ಪೂಣ್ಣು ಸಂದ ವೈ ರಿಗಳನ ಕೊಂದು ವಾರಿಧಿಪರೀತಮಹೀತಳಮಂ ನಿಮಿರ್ಚಿ ಜೆ | ಟ್ಟಿಗರನಯೋನಿಸಂಭವರನಾಳರಿವರ್ಗದೊಳಾಂತು ಕಾದೆಯುಂ
ಬಗೆ ದೊರೆಕೊಂಡುದಿಲ್ಲಿದು ವಿಧಾತನ ದೋಷಮೋ ನಿನ್ನ ದೋಷಮೋ ||೧೦೩
ಕಂ
ಆದೊಡಮೆನ್ನಂ ಬಂಚಿಸಿ
ಪೋದುದಳ್ ನಿನಗೆ ಪಗೆವರಿಂದಿನಿತಡಾ ಯಾದಿತ್ಯತೇಜ ಬೆಸಸಿದಿ
ರಾದ ಪೃಥಾಸುತರನುಟೆಯಲೀಯದೆ ಕೊಲೈಂ ||
704
ವ|| ಎಂಬುದುಂ ಫಣಿಕೇತನಂ ನೆತ್ತಿಯಿಂದೂದುಗುವ ನೆತ್ತರ ಧಾರೆಯಿಂ ಮೆತ್ತಿದ ಕಣ್ಣಳನೊತ್ತಂಬದಿಂ ತದಶ್ವತ್ಥಾಮನ ಮೊಗಮಂ ನೋಡಿ
ಚoll
ಎನಗಿನಿತೊಂದವಸ್ಥೆ ವಿಧಿಯೋಗದಿನಾದುದಿದರ್ಕೆ ನೀನು
ನಿತು ಮನಃಕ್ಷತಂಬಡದಿರಾಗದು ಪಾಂಡವರಂ ಗೆಲಲ್ ಪುರಾ | ತನಪುರುಷಂ ಮುರಾರಿ ಕೆಲದೊಳ್ ನಿಲೆ ನೀಂ ಕೊಲಲಾರ್ಪೊಡಾಗದೆಂ ಬೆನೆ ತಲೆದೊಟ್ಟಿ ವೈರಿಗಳನೆನ್ನಸುವುಳ್ಳಿನಮೆಯೆವಾ ಗಡಾ ||
೧೦೫
'ವ|| ಎಂಬುದುಂ ಪಾಂಡವರನಿಕ್ಕಿದೊಸಗೆವಾತನೀಗಳೆ ಕೇಳಿಸುವನೆಂದು ಸರೋಜ ನಿಳಯೆಯನನ್ನ ಬರ್ಪನ್ನಮರಸನನಗಲದೆ ವಿಕಸಿತಶತಪತ್ರಾತಪತ್ರದ ತಣ್ಣೆಲುಮಂ ಕುಂದಲೀಯದಿರೆಂದು ನಿಯಮಿಸಿ ರುದ್ರಾವತಾರಂ ಕೃಪ ಕೃತವರ್ಮ ಸಮೇತನರಸನ ಬೀಳ್ಕೊಂಡು ಪೋದನಾಗಳ್
ಹತ್ತಿರಕ್ಕೆ ಬಂದು ನೋಡಿದನು. ಕೈಯಿಂದ ಕತ್ತಿಯು ಕಳಚಿಕೊಂಡಿತು, ದುಃಖದಿಂದ ವಿಶೇಷಖಿನ್ನನಾದನು. ೧೦೩. ದುರ್ಯೋಧನ ಮಾಡಿದ ಕಾರ್ಯದಲ್ಲಿ ಎಲ್ಲಿಯೂ ನಿಂದೆಯಿಲ್ಲದೆ ನಿರ್ವಹಿಸಿ, ಪ್ರಸಿದ್ಧರಾದ ಶತ್ರುಗಳನ್ನು ಕೊಂದು, ಸಮುದ್ರದಿಂದ ಸುತ್ತುವರಿಯಲ್ಪಟ್ಟು ಭೂಮಿಯನ್ನು ವಿಸ್ತರಿಸಿ, ಶೂರರಾದ ಅಯೋನಿಜರಾದವರಿಗೆ ಸ್ವಾಮಿ (ಒಡೆಯ)ಯಾಗಿದ್ದು, ಶತ್ರುವರ್ಗವನ್ನು ಎದುರಿಸಿ ಯುದ್ಧಮಾಡಿದರೂ ನಿನಗೆ ಇಷ್ಟಾರ್ಥವು ಲಭಿಸಲಿಲ್ಲವಲ್ಲಾ. ಇದು ವಿಧಿಯ ದೋಷವೋ ನಿನ್ನ ದೋಷವೋ ? ೧೦೪, ನನ್ನನ್ನು ವಂಚಿಸಿ ಹೋದುದರಿಂದ ನಿನಗೆ ಶತ್ರುಗಳಿಂದ ಇಷ್ಟು ಅವಮಾನವಾಯಿತು. ಸೂರ್ಯತೇಜಸ್ಸುಳ್ಳವನೇ ಆಜ್ಞೆಮಾಡು, ಪ್ರತಿಭಟಿಸಿದ ಪಾಂಡವರನ್ನು ಉಳಿಯುವುದಕ್ಕೆ ಅವಕಾಶವಿಲ್ಲದಂತೆ ಕೊಲ್ಲುತ್ತೇನೆ ಎಂದನು. ವ|| ಸರ್ಪಧ್ವಜನಾದ ದುರ್ಯೋಧನನು ತಲೆಯಿಂದ ಜಿನುಗಿ ಹರಿಯುತ್ತಿರುವ ರಕ್ತಪ್ರವಾಹದಿಂದ ಅಂಟಿಕೊಂಡಿದ್ದ ಕಣ್ಣುಗಳನ್ನು ಬಲಾತ್ಕಾರದಿಂದ ತೆರೆದು ಅಶ್ವತ್ಥಾಮನ ಮುಖವನ್ನು ನೋಡಿ ಹೇಳಿದನು ೧೦೫. ನನಗೆ ಇಷ್ಟೊಂದು ಕಷ್ಟದ ಸ್ಥಿತಿ ವಿಧಿಯ ಕಟ್ಟಳೆಯಿಂದ ಆಯಿತು. ಇದಕ್ಕೆ ನೀನು ದುಃಖಪಟ್ಟು ಮನಸ್ಸಿನಲ್ಲಿ ನೋಯಬೇಡ. ಆದಿಪುರುಷನಾದ ಕೃಷ್ಣನು ಅವರ ಪಕ್ಕದಲ್ಲಿರುವಾಗ ನೀನು ಪಾಂಡವರನ್ನು ಗೆಲ್ಲಲಾಗುವುದಿಲ್ಲ. ಹಾಗೆ ನೀನು ಅವರನ್ನು ಕೊಲ್ಲಲು ಸಮರ್ಥನಾದರೆ ನಾನು ಬೇಡವೆನ್ನುತ್ತೇನೆಯೇ? ನನ್ನ ಪ್ರಾಣಗಳಿರುವಾಗಲೇ ಶತ್ರುಗಳನ್ನು
Page #685
--------------------------------------------------------------------------
________________
೬೮೦ / ಪಂಪಭಾರತಂ
ಚoll ಮಗನಯಲೊಳ್ ಕರಂ ಮಲುಗುತಿರ್ಪಿನಮೆನ್ನ ತನೂಜನಾಳ್ವ ಸಾ ಮಿಗಮಟೆವಾಗ ಶೋಕರಸಮಿರ್ಮಡಿಸಿತ್ತು ಜಳಪ್ರವೇಶಮಿ | ಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನನಾಥನಾಗಿ ತೊ
ಮೃಗೆ ಮುಲಪಂತೆವೋಲ್ ಮುಲುಗಿದಂ ಕಡುಕೆಯ್ದಪರಾಂಬುರಾಶಿಯೊಳ್ || ೧೦೬
ವ|| ಆ ಪ್ರಸ್ತಾವದೊಳಶ್ವತ್ಥಾಮಂ ಕೃಪ ಕೃತವರ್ಮರುಂಬೆರಸು ಹಸ್ತಿನಪುರದೊಳ್ ಪಾಂಡವರಿರ್ದರೆಗೆತ್ತುಮಲ್ಲಿಗೆ ನಿಟ್ಟಾಲಿಯಾಗಿ ದಾಡೆಯನಿಟ್ಟು ಮುಟ್ಟೆವಂದು ಬಾಯಾಡಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ನೂತ್ತಮೌಜಸರಂ ಕೊಂದು ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರಂ ಪಾಂಡವರೆಗೆತ್ತು ಕೊಂದು ತದುತ್ತಮಾಂಗಂಗಳಂ ಕೊಂಡು ತಲತಲನೆ ನೇಸಡುವಾಗಳೆಯೇ ಎಂದು ದುರ್ಯೋಧನನಂ ಕಂಡು ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳನೆಂದು ಮುಂದಿಕ್ಕಿದಾಗಳ್ ದುರ್ಯೋಧನಂ ನೋಡಿ
ಕಂ ಬಾಲಕಮಳಂಗಳಂ ಕಮ
ಛಾಲಯದಿಂ ತಿಳದು ತರ್ಪ್ಪವೋಲ್ ತಂದೆ ನೀಂ | ಬಾಲಕರ ತಲೆಗಳಕ್ಕಟ ಬಾಲಕವಧದೋಷಮೆಂತು ನೀಂ ನೀಗಿದಪಮ್ ||
002
ತರಿದು ರಾಶಿಹಾಕಿ ಬರುತ್ತಿಯಾ? ಏನು. ವ|| ಎನ್ನಲು 'ಪಾಂಡವರನ್ನು ಇಕ್ಕಿ ಕೊಂದ ಶುಭವಾರ್ತೆಯನ್ನು ಈಗಲೇ ಕೇಳಿಸುತ್ತೇನೆ' ಎಂದು ಕಮಲಾಸನೆಯಾದ ಲಕ್ಷ್ಮಿಯನ್ನು ನಾನು ಬರುವವರೆಗೂ ರಾಜನನ್ನು ಅಗಲದೆ ಅರಳಿದ ಕಮಲದ ಕೊಡೆಯ ತಂಪಾದ ನೆರಳನ್ನು ಕಡಿಮೆಮಾಡಬೇಡವೆಂದು ಕಟ್ಟಳೆಯಿಟ್ಟು ರುದ್ರಾವತಾರನಾದ ಅಶ್ವತ್ಥಾಮನು ಕೃಪಕೃತವರ್ಮರೊಡನೆ ರಾಜನನ್ನು ಬೀಳ್ಕೊಂಡು ಹೋದನು-ಆಗ ೧೦೬. ನಾನು ನನ್ನ ಮಗನ ಮರಣದುಃಖದಿಂದಲೇ ವಿಶೇಷ ದುಃಖಪಡುತ್ತಿರಲು ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸವಿಮ್ಮಡಿಯಾಗಿದೆ. ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು ಎಂದು ನಿಶ್ಚಯಿಸಿ ಸೂರ್ಯನು ಅನಾಥನಾಗಿ (ದಿಕ್ಕಿಲ್ಲದವನಾಗಿ ತೊಟ್ಟನೆ ಮುಳುಗುವ ಹಾಗೆ ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು. (ಸೂರ್ಯಾಸ್ತಮಾನವಾಯಿತು) ವ। ಆ ಸಮಯದಲ್ಲಿ ಅಶ್ವತ್ಥಾಮನು ಕೃಪಕೃತವರ್ಮರೊಡಗೂಡಿ ಹಸ್ತಿನಾಪಟ್ಟಣದಲ್ಲಿ ಪಾಂಡವರಿರುವರೆಂದು ಭ್ರಾಂತಿಸಿ ಅಲ್ಲಿಗೆ ಎಚ್ಚರದಿಂದ ದಾಳಿಯಿಟ್ಟು (ಮುತ್ತಿಗೆ ಹಾಕಿ) ಸಮೀಪಕ್ಕೆ ಬಂದು ಕೂಗಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ನೂತ್ತಮೌಜಸರನ್ನು ಕೊಂದು ಶ್ರುತಸೋಮಕರೇ ಮೊದಲಾದ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿಕೊಂಡು ಅವರ ತಲೆಗಳನ್ನು ತೆಗೆದುಕೊಂಡು ಪ್ರಕಾಶಮಾನವಾಗಿ ಸೂರ್ಯನು ಹುಟ್ಟುವ ಹೊತ್ತಿಗೆ ಸರಿಯಾಗಿ ಸಮೀಪಕ್ಕೆ ಬಂದು, ದುರ್ಯೋಧನನನ್ನು ಕುರಿತು ತೆಗೆದುಕೊ ನಿನಗೆ ಪ್ರಿಯರಾದ ಪಾಂಡವರ ತಲೆಗಳನ್ನು ಎಂದು ಮುಂದಿಟ್ಟನು. ಅದನ್ನು ದುರ್ಯೋಧನನು ನೋಡಿ ೧೦೭. ಸರೋವರದಿಂದ ಎಳೆಯ ಕಮಲಗಳನ್ನು ಕಿತ್ತು ತರುವ ಹಾಗೆ ಅಯ್ಯೋ! ನೀನು ಬಾಲಕರ ತಲೆಗಳನ್ನು ತಂದಿರುವೆ, ಬಾಲವಧಾದೋಷವನ್ನು ನೀನು ಹೇಗೆ ಕಳೆಯುತ್ತೀಯೇ ? ಎಂದನು.
Page #686
--------------------------------------------------------------------------
________________
ತ್ರಯೋದಶಾಶ್ವಾಸಂ | ೬೮೧ ವ|| ಎಂಬುದುಮಶ್ವತ್ಥಾಮನಂತೆಂಬುದೇನನೆ ದುರ್ಯೋಧನನೆಂದಂ ಪಾಂಡವರ ತಲೆಗಳಲಮಿವು ಪಾಂಡವರ ಸೂನುಗಳಪ್ಪ ಪಂಚಪಾಂಡವರ ತಲೆಗಳೆಂಬುದುಮಿದರ್ಕೆ ಕರ್ತವ್ಯವಾವುದೆಂದೊಡೆ ಹಿಮವತ್ಸರ್ವತದೊಳ್ ತಪಶ್ಚರಣಪರಾಯಣರಾಗಿ ಮನಗಮಂತ್ಯಕಾಲವೆಂದು ದುರ್ಯೋಧನಂ ಪ್ರಾಣಪರಿತ್ಯಾಗಂಗೆಯನಾಗಳಶ್ವತ್ಥಾಮನುಂ ಕೃಪನುಂ ಸಿಗ್ಗಾಗಿ ಹಿಮವತ್ಪರ್ವತಕ್ಕೆ ನಡೆಗೊಂಡರಿತ್ತ ಕೃತವರ್ಮನುಂ ದ್ವಾರಾವತಿಗೆ ಪೋದನಾಗಳ್ಪಿರಿಯಕ್ಕರ |ಬಿಳಿಯ ತಾವರೆಯಸಲೊಳ್ ಮಾಡಿದ ಬೆಳ್ಳೂಡ ರಯ್ಯಮಾಗಡದ
ಕೆಯ್ಯೋಳ್ * ಪೊಳೆವ ಚೆಂಬೊನ್ನ ಕಾವಿನ ಚಾಮರಮಮರ್ದಿರೆ ಭೇರಿ ಸಿಂಹಾಸನಮುಂ ಬಚಿಯೊಳ ಜವಂ ಮಿಳಿರೆ ರಾಜಚಿಹ್ನಂಗಳೊರಸಿಂತು ನಡೆತಂದು ರಾಜ್ಯಲಕ್ಷ್ಮಿ ಬಳದ ಸಂತೋಷದಂತಮನೆಯ ಹತ್ತಿದಳ ಸಹಜಮನೋಜನಂ
ನಾಡೋಜನಂ | ೧೦೮ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತನ್ನ ಪ್ರಸನ್ನಗಂಭೀರವಚನರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್
ತ್ರಯೋದಶಾಶ್ವಾಸಂ
ವ|| ಅಶ್ವತ್ಥಾಮನು ಹಾಗೆಂದರೇನು? ಎನ್ನಲು ದುರ್ಯೋಧನನು ಹೀಗೆ ಹೇಳಿದನು. “ಇವು ಪಾಂಡವರ ತಲೆಗಳಲ್ಲ, ಪಾಂಡವರ ಮಕ್ಕಳಾದ ಪಂಚಪಾಂಡವರ ತಲೆಗಳು ಎನ್ನಲು ಇದರ ಪರಿಹಾರಕ್ಕೆ ಮಾಡಬೇಕಾದ ಕರ್ತವ್ಯವೇನು ಎಂದನು ಅಶ್ವತ್ಥಾಮ; ಹಿಮವತ್ಪರ್ವತದಲ್ಲಿ ತಪಸ್ಸು ಮಾಡುವುದರಲ್ಲಿ ಆಸಕ್ತರಾಗಿ', ನನಗೂ ಅಂತ್ಯಕಾಲವು ಬಂದಿದೆ' ಎಂದು ದುರ್ಯೋಧನನು ಪ್ರಾಣವನ್ನು ನೀಗಿದನು. ಆಗ ಅಶ್ವತ್ಥಾಮನೂ ಕೃಪನೂ ಅವಮಾನಿತರಾಗಿ ಹಿಮವತ್ಪರ್ವತಕ್ಕೆ ನಡೆದರು. ಈ ಕಡೆ ಕೃತವರ್ಮನೂ ದ್ವಾರಾವತಿಗೆ ಹೋದನು. ೧೦೮. ಬಿಳಿಯ ತಾವರೆಯ ದಳದಲ್ಲಿ ಮಾಡಿದ ಬಿಳಿಯ ಕೊಡೆಯು ಬಲದ ಕಯ್ಯಲ್ಲಿ ರಮ್ಯವಾಗಿರಲು ಹೊಳೆದ ಹೊಂಬಣ್ಣದ ಚಿನ್ನದ ಕಾವುಳ್ಳ ಚಾಮರವು ಎಡಗಯ್ಯಲ್ಲಿ ಸೇರಿಕೊಂಡಿರಲು, ಭೇರಿ ಸಿಂಹಾಸನಾದಿಗಳು ಪಕ್ಕದಲ್ಲಿ ವೇಗವಾಗಿ ಚಲಿಸುತ್ತಿರಲು ರಾಜ್ಯಚಿಹ್ನೆಗಳೊಡಗೂಡಿ ಅಬಿವೃದ್ದಿಯಾಗುತ್ತಿದ್ದ ಸಂತೋಷವು ಸಂಪೂರ್ಣವಾಗಲು ರಾಜ್ಯಲಕ್ಷ್ಮಿಯು ಸಹಜಮನೋಜನೂ ನಾಡೋಜನೂ ಆದ ಅರ್ಜುನನನ್ನು ಸೇರಿದಳು. ವ! ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹದಿಮೂರನೆಯ ಆಶ್ವಾಸವು.
Page #687
--------------------------------------------------------------------------
________________
ಚತುರ್ದಶಾಶ್ವಾಸಂ
ಕಂ|| ಶ್ರೀ ರಾಮಾಲಿಂಗಿತ ವಿಪು
ಘೋರಸ್ಕಂ ಭಾಸ್ಕರಪ್ರತಾಪಂ ನಿಜ ದೋ | ರ್ಮರು ಮಥಿತಾರಿ ಬಳ ಕೂ ಪಾರಂ ಸಂಹಾರಿತಾರಿ ಶೌರ್ಯಂ ಹರಿಗಂ || ತನ್ನಿಳಿದು ಗಲ್ಲ ಕೊಳುಗುಳ ವನ್ನೋಡಲ್ ಚಕ್ರಪಾಣಿಯು ತನ್ನ ಸಹೋ | ತನ್ನರುಮೊಡವರೆ ಬಂದು ವಿ
ಪನ್ಫೋಗ್ರಾರಾತಿವರ್ಗನಾಹವಧರೆಯಂ | ವಗ ಎಯ್ತಿ ತನ್ನಿಂದಮಂತಕಾನನಮನೆಯಿದ ಮಹಾ ಪ್ರಚಂಡಮಂಡಳಿಕಮಕುಟ ಬದ್ದಸಾಮಂತಮಹಾಸಾಮಂತಸಂಹತಿಯುಮನಣಿಕೆಗಟಿದ ಕರಿತುರಗವರೂಥ ಪದಾತಿಗಳುಮಂ ನೋಡಿ ಮುರಾರಿಯ ಮೊಗಮಂ ನೋಡಯಧೋಕ್ಷಜನಜಾತಶತ್ರುವನಿಂತೆಂದಂಉl ಶಾತ ಶರಾಗಿ ಭಗ್ನ ಭಟ ಕೋಟಿ ವಿಭೀಷಣಮುಗ್ರವೈರಿಸಂ
ಘಾತಕರೀಂದ್ರರುಂದ್ರಕಟಕೂಟಪರಿಚ್ಚುತಭಂಗಮಾಳಿಕಾ | ಪೀತಮದಾಂಬುಕಂ ಪ್ರಕೃತಿರಕ್ತಜಳಾಸವಮತ್ತಯೋಗಿನೀ ವಾತಪರೀತಭೂತಸದನಂ ಕದನಂ ಕದನತ್ರಿಣೇತ್ರನಾ |
೧. ಸಂಪಲ್ಲಕ್ಕಿಯಿಂದ ಆಲಿಂಗಿಸಲ್ಪಟ್ಟ ವಿಸ್ತಾರವಾದ ಎದೆಯುಳ್ಳವನೂ ಸೂರ್ಯನ ತೇಜಸ್ಸುಳ್ಳವನೂ ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾಸಮುದ್ರವುಳ್ಳವನೂ ಶತ್ರುಗಳನ್ನು ಕೊಂದ ಶೌರ್ಯವುಳ್ಳವನೂ ಆದ ಅರಿಕೇಸರಿಯು (ಅರ್ಜುನನು) ೨. ತಾನು ಯುದ್ಧಮಾಡಿ ಗೆದ್ದ ಯುದ್ಧಭೂಮಿಯನ್ನು ನೋಡಲು ಕೃಷ್ಣನೂ ತನ್ನ ಸಹೋದರರೂ ಜೊತೆಯಲ್ಲಿ ಬರಲು ನಾಶಮಾಡಲ್ಪಟ್ಟ ಭಯಂಕರವಾದ ಶತ್ರುಗಳನ್ನು ಧರ್ಮರಾಯನೂ ಯುದ್ಧಭೂಮಿಯನ್ನು ಬಂದು ಸೇರಿದನು. ವ|| ತನ್ನಿಂದ ಯಮನ ಬಾಯನ್ನು ಸೇರಿದ ಮಹಾಶೂರರಾದ ಮಂಡಳಿಕ, ಮಕುಟಬದ್ದ ಸಾಮಂತಮಹಾಸಾಮಂತಸಮೂಹವನ್ನು ಎಣಿಕೆಯನ್ನು ಮೀರಿದ ಅಸಂಖ್ಯಾತವಾದ ಆನೆ, ಕುದುರೆ, ತೇರು, ಕಾಲಾಳು ಸೈನ್ಯವನ್ನು ನೋಡಿ ಕೃಷ್ಣನ ಮುಖವನ್ನು ನೋಡಲು ಕೃಷ್ಣನು ಧರ್ಮರಾಯನನ್ನು ಕುರಿತು ಹೀಗೆಂದನು. ೩. ಹರಿತವಾದ ಬಾಣಗಳ ಬೆಂಕಿಯಿಂದ ಹಾಳಾದ ಅನೇಕ ಯೋಧರಿಂದ ಭಯಂಕರವಾದುದೂ ಭಯಂಕರವಾದ ಶತ್ರುಗಳ ಸಮೂಹಗಳಿಂದಲೂ ಆನೆಗಳ ವಿಸ್ತಾರವಾದ ಕಪೋಲದ ಕಡೆಯಿಂದ ಹರಿಯುತ್ತಿರುವ ಮದೋದಕವನ್ನು ಕುಡಿಯುತ್ತಿರುವ ದುಂಬಿಗಳ ಸಮೂಹಗಳಿಂದಲೂ, ಸಹಜವಾಗಿ ರಕ್ತಜಲವೆಂಬ ಮದ್ಯದಿಂದ ಸೊಕ್ಕಿರುವ ಯೋಗಿನೀಜನಗಳ ಗುಂಪಿನಿಂದಲೂ ಸುತ್ತುವರಿಯಲ್ಪಟ್ಟು
Page #688
--------------------------------------------------------------------------
________________
ಚತುರ್ದಶಾಶ್ವಾಸಂ | ೬೮೩ ಚಂl ಸುರಿತ ವರೂಥ ಚಕ್ರ ಹತಿಯಿಂ ಧರಣೀತಳಮಮಿತ್ತಮ
ಇರಿಯ ವಿಯತ್ತಳಂ ಬಗೆದು ನೋಡ ನಾಡೆ ಪತತ್ಸತಿ ಜ || ರ್ಝರಿತಮೆ ದಿಕ್ತಟಂ ರಿವು ನರಾಧಿಪ ರಕ್ತ ಧುನೀ ಪ್ರವಾಹ ಪಿಂ
ಜರಿತಮೆ ಬೀರಮಂ ಪೋಗಬ್ಬನೇವೊಗಲ್ವಂ ಕದನತ್ರಿಣೇತ್ರನಾ || ೪
ವ|| ಎಂಬನ್ನೆಗಂ ಧೃತರಾಷ್ಟ್ರನುಂ ಗಾಂಧಾರಿಯುಮೊಂದಾಗಿ ಬರೆ ದುರ್ಯೋಧನನ ಪಂಡಿರಪ್ಪ ಭಾನುಮತಿಯುಂ ಚಂದ್ರಮತಿಯುಂ ಮೊದಲಾಗೆ ಸಮಸ್ತಾಂತಃಪುರಮುಂ ದುಶ್ಯಾಸನ ಲಕಣ ಭೂರಿಶ್ರವಸ್ಟೋಮದತ್ತ ಭಗದತ್ತ ಬಾಹೀಕ ಶಲ್ಯ ಶಕುನಿ ಸೈಂಧವ ಕರ್ಣ ಪ್ರಮುಖರಪ್ಪ ನಾಯಕರ ಪೆಂಡಿರು ತಮ್ಮ ಗಂಡರ ಕೊಳುಗುಳದೊಳುಸಿ ಕಾಣದೆ ಬಾಯಟಿದು ಪಳಯಿಸುತ್ತುಂ ಯೂಧಪತಿ ಕಡೆಯ ದೆಸೆದಪ್ಪಿದ ವನಕರಿಕರೇಣುಗಳುಮನಡರ್ಪಿಲ್ಲದೆ ಕಲ್ಪವೃಕ್ಷಮುಡಿದು ಕಡೆಯ ಬಂಬಲ ಬಾಡಿದ ವನಲತೆಗಳುಮಂ ಪೋಲುಚಂil ಇಳಿವ ಪಿಯಲ್ ತೆರಳೊಳೆವ ಕಣ್ಣನಿ ಮಾಣದೆ ಮೋದೆ ಶೋಕದ
ಚಿಳೆದವೂರಿರ್ದ ಬಾಸುವಿನೊಳಟ್ಟು ಕನು ಬಬಿಲ್ಲು ಜೋಲ್ಲ ಮೆಯ್ | ಮಲಗುವ ಬೇಗದೊಳೊಗಮಣಂ ದೆಸೆಗಾಣದ ನೋಟಮಾರುಮಂ
ಮುಗಿಸಿ ಬಂದುದಂದು ಕರುಣಂ ಬರೆ ವೈರಿನೃಪಾಂಗನಾಜನಂ | ೫ ವ|| ಆಗಳ್ ಧರ್ಮಪುತ್ರಂ ಧೃತರಾಷ್ಟ್ರಂಗಂ ಗಾಂಧಾರಿಗಮೆಅಗಿ ಪೊಡೆವಟ್ಟು
ಅರ್ಜುನನ ಯುದ್ಧರಂಗವು ಪಿಶಾಚಿಗಳ ಆವಾಸಸ್ಥಾನವಾಗಿದೆ. ೪. ಪ್ರಕಾಶಮಾನವಾದ ತೇರಿನ ಗಾಲಿಗಳ ಹೊಡೆತದಿಂದ ಭೂಪ್ರದೇಶವು ಅಲ್ಲಲ್ಲಿ ಹಳ್ಳತಗ್ಗುಗಳಿಂದ ಕೂಡಿದೆ. ಆಕಾಶಪ್ರದೇಶವು ಬೀಳುತ್ತಿರುವ ಬಾಣಗಳ ಚೂರುಗಳಿಂದ ಜರ್ಝರಿತವಾಗಿ ಹೋಗಿದೆ. ದಿಗ್ಯಾಗಗಳು ಶತ್ರುರಾಜರ ರಕ್ತದ ನದಿಯ ಪ್ರವಾಹದಿಂದ ಕೆಂಪು ಹಳದಿ ಮಿಶ್ರವಾದ ಬಣ್ಣದಿಂದ ಕೂಡಿದೆ. ಅರ್ಜುನನ ಪ್ರತಾಪವನ್ನು ವರ್ಣಿಸುವುದು ಹೇಗೆ ? ಸಾಧ್ಯ. ವ|| ಎನ್ನುವಷ್ಟರಲ್ಲಿ ಧೃತರಾಷ್ಟ್ರನೂ ಗಾಂಧಾರಿಯೂ ಒಟ್ಟುಗೂಡಿ ಬಂದರು. ದುರ್ಯೋಧನನ ಹೆಂಡತಿಯರಾದ ಭಾನುಮತಿಯೂ ಚಂದ್ರಮತಿಯೂ ಸಮಸ್ತ ರಾಣಿವಾಸವೂ ಲಕ್ಷಣ ಭೂರಿಶ್ರವ ಸೋಮದತ್ತ ಭಗದತ್ತ ಬಾಹಿಕ ಶಲ್ಯಶಕುನಿ ಸೈಂಧವ ಕರ್ಣನೇ ಮೊದಲಾದ ಪ್ರಮುಖನಾಯಕರ ಹೆಂಡತಿಯರೂ ಗಟ್ಟಿಯಾಗಿ ಅಳುತ್ತಾ ಸಲಗನು ಕೆಡೆಯಲು ದಿಕ್ಕುಕಾಣದ ಕಾಡಿನ ಹೆಣ್ಣಾನೆಗಳನ್ನೂ ಕಲ್ಪವೃಕ್ಷವು ಮುರಿದು ಬೀಳಲು ಅವಲಂಬನವಿಲ್ಲದೆ ಸುಟ್ಟು ಬಾಡಿದ ಕಾಡುಬಳ್ಳಿಗಳನ್ನೂ ಹೋಲುತ್ತಾ ೫. ಸಡಿಲವಾಗಿರುವ ಜಡೆ, ಪ್ರವಾಹವಾಗಿ ಸುರಿಯುವ ಕಣ್ಣೀರು, ಬಿಡದೆ ಹೊಡೆದುಕೊಳ್ಳುತ್ತಿರಲು ದುಃಖದ ಅಚ್ಚಿಟ್ಟಹಾಗೆ ಇದ್ದ ಬಾಸುಂಡೆಗಳಲ್ಲಿ ತಗ್ಗಾಗಿ ಕೆರಳಿ ಆಯಾಸಗೊಂಡು ಜೋಲುತ್ತಿರುವ ಮೈ, ವ್ಯಥೆಪಡುವ ಹೊತ್ತಿನಲ್ಲಿ ದಿಕ್ಕುಕಾಣದೆ (ಕಣ್ಣುಗಳಲ್ಲಿ ನೀರು ತುಂಬಿಕೊಂಡಿರುವುದರಿಂದ) ನೋಟ ಇವು ಯಾರನ್ನಾದರೂ ದುಃಖಿಸುವಂತೆ ಮಾಡಲು ಶತ್ರುರಾಜರ ರಾಣಿಯರು ಕರುಣೆಯೇ ಮೂರ್ತಿಮತ್ತಾಗಿ ಬಂದಂತೆ ಅಲ್ಲಿಗೆ ಬಂದರು. ವ|| ಆಗ ಧರ್ಮರಾಜನು
44
Page #689
--------------------------------------------------------------------------
________________
೬೮೪ / ಪಂಪಭಾರತಂ ಕಂ
ಏಗೆಯುಮೆನ್ನ ಧರೆಯೊ
ರ್ವಾಗಮುಮಂ ನೀಮೆ ಬೆಸಸೆಯುಂ ಕುಡದಿನಿತಂ | ಮೇಗಿಲ್ಲದೆ ನೆಗಟ್ಟದಂ ನಾಗಧ್ವಜನಯ್ಯ ನೀಮದರ್ಕಬಲದಿರಿಂ ||
ಆತನೊಡವೋಯ್ತು ಪಗೆ ನಿಮ
ಗಾತನಿನಗ್ಗಳದ ಮಗನನಾಂ ನಖ ಮಾಂಸ | ಪ್ರೀತಿಯೊಳೆ ನಗನಿಂ ಪಡೆ ಮಾತೇಂ ಪಂಬಲಿಸದನ್ನ ಪೆಟ್ಟುದುಗೆಂ
ವ|| ಎಂಬುದುಂ ಧೃತರಾಷ್ಟ್ರನಿಂತೆಂದಂ
ಕಂ
ತನಯಶತಮಾದುದನ
ಗನಿವಾರಿತ ದುಃಖಶತಮೆ ತಾನಾದುದವಂ | ನೆನೆಯಂ ಸಂಸ್ಕಾರಿಸಲೀ
ವನಿತೆಯರ್ಗವರವರ ಪುರುಷರಂ ಕುಡವೇಂ ||
ల
ವ|| ಎಂಬುದುಮದಾವುದು ದೋಷಮವರ್ಗೆಲ್ಲಂ ಸಂಸ್ಕಾರವಿಧಿಯಂ ನಾನೆ ಪಕ್ಕದೊಳಿರ್ದು ಮಾಡಿಸುವೆನೆಂಬನ್ನೆಗಂ ಕೊಂತಿ ಬಂದು ಕರ್ಣನ ಕಳೇವರಮಂ ತಟ್ಟಿಸಿ ಕೊಂಡು ಪಾಂಡವರಯ್ಯರುಮನಲ್ಲಿಗೆ ಬರಿಸಿ
ಕಂ|| ನಿಮ್ಮಣ್ಣನನ್ನ ಪಿರಿಯ ಮ
2
ಗಮಾತೇಂ ಕರ್ಣನಾಂ ಮಹಾಪಾತಕಿಯೆಂ । ನಿಮ್ಮಯ ಮೋಹದಿನೀತಂ ಗಾಮಾಡಿದೆನಿನಿತನೆಂದು ಶೋಕಂಗೆಯ್ದಳ್ ||
ಧೃತರಾಷ್ಟ್ರನಿಗೂ ಗಾಂಧಾರಿಗೂ ಬಗ್ಗಿ ನಮಸ್ಕಾರಮಾಡಿ ೬. ಏನು ಮಾಡಿದರೂ ನನ್ನ ರಾಜ್ಯದ ಒಂದು ಭಾಗವನ್ನು ನೀವೆ ಹೇಳಿದರೂ ಕೊಡದೆ ಸ್ವಲ್ಪವೂ ಉತ್ತಮ ವಾಗಿಲ್ಲದ ರೀತಿಯಲ್ಲಿ ಇಷ್ಟನ್ನೂ ಮಾಡಿ ಸರ್ಪಧ್ವಜನಾದ ದುರ್ಯೋಧನನು ಸತ್ತನು. ನೀವು ಅದಕ್ಕಾಗಿ ದುಃಖಪಡಬೇಡಿ. ೭.ದ್ವೇಷವು ಆತನೊಡನೆಯೇ ಹೋಯಿತು. ನಾನು ಆತನಿಗಿಂತ ಉತ್ತಮನಾದ ಮಗನಾಗಿದ್ದೇನೆ. ಉಗುರುಮಾಂಸಗಳಿಗಿರುವಷ್ಟು ಬಹು ಅನ್ನೋನ್ಯವಾದ ಪ್ರೀತಿಯಿಂದಲೇ ನಡೆದುಕೊಳ್ಳುತ್ತೇನೆ. ಬೇರೆ ಮಾತೇನು? ಹಂಬಲಿಸದೆ ನಾನು ಹೇಳಿದುದನ್ನು ಮಾಡಿ ವ|| ಎನ್ನಲು ಧೃತರಾಷ್ಟ್ರನು ಹೀಗೆಂದನು. ೮. ನನಗೆ ನೂರುಮಕ್ಕಳಾಗಲಿಲ್ಲ. ತಡೆಯಲಾಗದ ನೂರು ದುಃಖಗಳೇ ತಾನಾದುವು. ಅವುಗಳನ್ನು ನೆನೆಯುವುದಿಲ್ಲ; ಈ ಸ್ತ್ರೀಯರು ಅವರವರ ಪತಿದೇಹಗಳನ್ನು ಶವಸಂಸ್ಕಾರ ಮಾಡಲು ಅವರಿಗೆ ಕೊಡಬೇಕು. ವll ಎನ್ನುವಷ್ಟರಲ್ಲಿ ದೋಷವೇನಿದೆ? ಅವರುಗಳ ಸಂಸ್ಕಾರವಿಧಿಯನ್ನೆಲ್ಲ ನಾನೇ ಪಕ್ಕದಲ್ಲಿದ್ದು ಮಾಡಿಸುತ್ತೇನೆ ಎನ್ನುವಷ್ಟರಲ್ಲಿ ಕುಂತೀದೇವಿಯು ಬಂದು ಕರ್ಣನ ಹೆಣವನ್ನು ತಬ್ಬಿಕೊಂಡು ಪಾಂಡವರೆದುಜನವನ್ನೂ ಅಲ್ಲಿಗೆ ಬರಮಾಡಿದಳು. ೯. ಕರ್ಣನು ನಿಮ್ಮಣ್ಣ, ನನ್ನ ಹಿರಿಯ ಮಗ, ಹೇಳುವುದೇನು ? ನಾನು ಮಹಾಪಾತಕಿ, ನಿಮ್ಮ ಮೇಲಿನ (ಮೋಹದಿಂದ) ಈತನಿಗೆ ಇಷ್ಟನ್ನೂ ನಾನೇ ಮಾಡಿದೆನು ಎಂದು ದುಃಖಿಸಿದಳು
Page #690
--------------------------------------------------------------------------
________________
ಚತುರ್ದಶಾಶ್ವಾಸಂ | ೬೮೫ ವ|| ಆಗಳಯ್ಯರುಮಾ ಮಾತಂ ಕೇಳು ಭೋಂಕನೆರ್ದೆದೆಯ ಸಹೋದರ ಶೋಕದೊಳ್ ಮನ್ಯುಮಿಕ್ಕು ಸೈರಿಸಲಾಗಿದೆಚಂt. ಅಜೆಪಿದರಾರುಮಿಮಗೆ ನೀನೆಮಗಣ್ಣನೆಯೆಂದು ಮುನ್ನಮಾ
ಮಜಿದೊಡೆ ಪಟಮಂ ನೆಲನುಮಂ ನಿನಗಿತ್ತು ಕುರುಪ್ರಧಾನನೋಳ | ಕುಪನೆ ನಿಚ್ಚಟಂ ಬಿಸುಟು ನಿನ್ನಯ ಪೇದುಗೆಯ್ಯು ಪಾಳೆಯಂ | ಮೆಜಿಯೆವೆ ಬಾಯ ತಂಬುಲದೊಳಂ ಮಡುಗೂಳೊಳಮಂಗವಲ್ಲಭಾ || ೧೦
ವ|| ಎಂದು ಶೋಕಾಕ್ರಾಂತರಾದರಂ ನಾರಾಯಣಂ ಸಂತೈಸಿ ಕೊಂದರ್ ಕೊಲೆ ಸಾವರೆಂಬುದು ಜಗದ್ಧಾ ಪಾರಮಾಶ್ಚರನಿಚ್ಛೆಯಿಂದ ನೆಗಟ್ಟುಮೆಂದು ದುಃಖೋಪಶಮನಂ ಮಾಡಿದೊಡೆ ಸಮಾಹಿತಚಿತ್ತರಾಗಿ ಕೊಳುಗುಳನಂ ವಿಧಿವಿಧಾನದಿಂ ಬಳಸಿ ದುರ್ಯೋಧನಂ ಮೊದಲಾಗೆ ಕುರುಕ್ಷೇತ್ರದೊಳ್ ಸತ್ತರಸುಮಕ್ಕಳೆಲ್ಲರುಮನೊಂದಾಗಿ ತಂದು ಬೆಟ್ಟಾಗೊಟ್ಟಿ ಕರ್ಣನ ಕಳೇವರಮನನಿಬರಿಂ ಮಿಗೆ ಮಹಾಬ್ರಾಹ್ಮಣರಿಂದ ಮಂತ್ರವಿಧಿಯಿಂದಿರಿಸಿ ಹರಿಚಂದನ ಕರ್ಪೂರ ಕಾಳಾಗರುಕಾಷಗಳಿಂದಂ ಯಥೋಕ ವಿಧಿಯಿಂ ಸಂಸಾರಿಸಿ ಕರ್ಣಂಗೆ ಕರ್ಣಗಳಿಯೆಂಬ ತೀರ್ಥಮಂ ಮಾಡಿ ಜಳದಾನಾದಿ ಕ್ರಿಯೆಗಳು ನಿರ್ವತಿ್ರಸೆ ತದನಂತರದೋಳ್ ಧೃತರಾಷನುಂ ಗಾಂಧಾರಿಯುಂ ಪುತ್ರವಿಯೋಗದುಃಖದಿಂ ಮುನಿವನಮನಾಶ್ರಯಿಸಿದರ್ ಕೊಂತಿಯುಂ ಕರ್ಣನ ಶೋಕದೊಳ್ ಧರ್ಮಪುತ್ರನಂ ಬೀಳೊಂಡವರೊಡನೆ ತಪಶ್ಚರಣಪರಾಯಣೆಯಾದಳಿತ್ತ ಧರ್ಮನಂದನಂ ದೇವಕೀನಂದನನನಿಂತೆಂದಂ
ವ|| ಆಗ ಅಯ್ಯರು ಸಹೋದರರು ಆ ಮಾತನ್ನು ಕೇಳಿ ವಿಶೇಷವಾಗಿ ದುಃಖಿಸಿ ಸಹಿಸಲಾರದೆ - ೧೦. “ನೀನು ನಮಗಣ್ಣನೆಂದು ನಮಗೆ ಯಾರೂ ತಿಳಿಸಲಿಲ್ಲ. ಮೊದಲು ತಿಳಿದಿದ್ದರೆ ಪಟ್ಟವನ್ನೂ ರಾಜ್ಯವನ್ನೂ ನಿನಗೆ ಕೊಟ್ಟು ಕೌರವಮುಖ್ಯಸ್ಥನಾದ ದುರ್ಯೋಧನನಲ್ಲಿ ದ್ವೇಷವನ್ನು ಶಾಶ್ವತವಾಗಿ ಬಿಸಾಡಿ ನೀನು ಹೇಳಿದುದನ್ನು ಮಾಡಿಕೊಂಡು ನಿನ್ನ ಬಾಯಿದಂಬುಲದಲ್ಲಿಯೂ ಇಟ್ಟ ತಂಗಳು ಅನ್ನದಲ್ಲಿಯೂ ಸಂಪ್ರದಾಯವನ್ನು ಪಾಲಿಸುತ್ತಿರುತ್ತಿದ್ದೆವಲ್ಲವೆ ? ವ ಎಂದು ದುಃಖದಿಂದ ಕೂಡಿದ್ದವರನ್ನು ಕೃಷ್ಣನು ಸಮಾಧಾನಪಡಿಸಿ ಕೊಂದವರು ಕೊಲೆಗೆ ಈಡಾಗಿ ಸಾಯುತ್ತಾರೆ ಎಂಬುದು ಲೋಕೋಕ್ತಿ, ಈಶ್ವರನ ಇಚ್ಛೆಯಿಂದಲೇ ನಡೆಯುತ್ತದೆ ಎಂದು ದುಃಖವನ್ನು ಹೋಗಲಾಡಿಸಿದನು. ಯುದ್ಧರಂಗವನ್ನು ಶಾಸ್ತರೀತಿಯಲ್ಲಿ ಸುತ್ತಿನೋಡಿ ದುರ್ಯೋಧನನೇ ಮೊದಲಾಗಿ ಕುರುಕ್ಷೇತ್ರದಲ್ಲಿ ಸತ್ತ ಎಲ್ಲ ರಾಜಕುಮಾರರನ್ನೂ ತಂದು ಒಟ್ಟಿಗೆ ಬೆಟ್ಟದಂತೆ ರಾಶಿಮಾಡಿದರು. ಕರ್ಣನ ಶರೀರವನ್ನು ಅಷ್ಟು ಜನವನ್ನೂ ಮೀರುವ ರೀತಿಯಲ್ಲಿ ಬ್ರಾಹ್ಮಣರಿಂದ ವಿಧಿಪೂರ್ವಕವಾಗಿ ಇರಿಸಿ ಶ್ರೀಗಂಧ, ಕರ್ಪೂರ, ಕರಿಯ ಅಗರು ಸೌದೆಯಿಂದ ಶಾಸ್ತ್ರದಲ್ಲಿ ಹೇಳಿರುವಂತೆ ಸಂಸ್ಕಾರಮಾಡಿದರು. ಕರ್ಣನ ಜ್ಞಾಪಕಾರ್ಥವಾಗಿ ಕರ್ಣಸ್ಥಳಿ ಯೆಂಬ ಕ್ಷೇತ್ರವನ್ನು ನಿರ್ಮಿಸಿದರು. ತರ್ಪಣವೇ ಮೊದಲಾದ ಕ್ರಿಯೆಗಳನ್ನು ಮಾಡಿ ಮುಗಿಸಿದರು: ಧೃತರಾಷ್ಟನೂ ಗಾಂಧಾರಿಯೂ ಮಕ್ಕಳನ್ನು ಅಗಲಿದ ದುಃಖದಿಂದ ಋಷಿಗಳ ತಪೋವನವನ್ನು ಆಶ್ರಯಿಸಿದರು. ಕುಂತೀದೇವಿಯೂ ಕರ್ಣನ ದುಃಖದಿಂದ ಧರ್ಮರಾಯನ ಅಪ್ಪಣೆಯನ್ನು ಪಡೆದು ಹೊರಟು ತಪಸ್ಸಿನಲ್ಲಿ ನಿರತಳಾದಳು. ಈ
Page #691
--------------------------------------------------------------------------
________________
೬೮೬ | ಪಂಪಭಾರತಂ ಮII ಇನಿತೊಂದುಗ್ರರಣಪ್ರಘಟ್ಟಕದೂಳೀ ಭಾರಾವತಾರಂ ಧರಾಂ
ಗನೆಗೀಯಿರ್ವರಿನಾದುದಾಯ್ತನಗೆ ನಿರ್ದಾಯಾದ್ಯಮಿಾ ಪಂಪ ಸಾ | ಲೈನಗಿಂ ರಾಜ್ಯಮ ಬಾಯಲ್ಕು ಹರಿಗಂಗುತ್ಸಾಹದಿಂ ಪಟ್ಟ ಬಂ
ಧನಮಂ ಮಾಡುವಮಿಂದ ಹಸ್ತಿನಪುರಪ್ರಸ್ಥಾನಮಂ ಮಾಡುವಂ || ೧೧
ವಗ ಎಂಬುದುಮಶೇಷ ಧರಾಭಾರಮಂ ಶೇಷಂ ತಾಳುವಂತ ವಿಕ್ರಮಾರ್ಜುನಂಗಲ್ಲದೆ ಪಣಂಗೆ ತಾಳಲರಿದಿದರ್ಕಾನುಮೂಡಂಬಡುವೆನೆಂದು ಮುಕುಂದನನೇಕ ಮುಕುಂದಬ್ಬಂದಂಗಳ ಮೊಲಗೆ ಶುಭಮೂಹೂರ್ತದೊಳರಿಕೇಸರಿಯಂ ಮುಂದಿಟ್ಟು ಹಸ್ತಿನಪುರೋಪವನಮನೆಯ ವಂದಾಗ, ಚಂt ಮೃದುಮಧುರಶ್ಚನಂ ನೆಗಟಿ ಬಂದೆಳಮಾವಿನೊಳಿರ್ದು ಕೂಡ ಪಾ
ಡಿದುದು ಮದಾಳಿಮಾಲೆ ಪುಗಲೆನ್ನದೆ ದಲ್ ಪುಗಿಯೆಂದು ಮಲುಗುಂ | ದದ ದನಿಯಿಂ ತಳಿರ್ತಸುಗೆಯೋಳ್ ನಲಸಿರ್ದ ಏಕಾಳಿ ಮೆಲ್ಲನೂ
ಚೌುದು ಮನಮಾಜ್ ತೀಡಿದುದು ತೆಂಕಣ ತಂಬೆಲರಪ್ಪಿಕೊಳ್ಳವೋಲ್ || ೧೨ ಚoll ಪಸರಿಸಿ ಬಂದ ಮಾಮರನೆ ಬೆಳ್ಳೂಡ ರಾಗದ ಪುಂಜದನ್ನವ
ಪ್ರಸುಗೆಯ ನೀಳ ಕೆಂದಳಿರೆ ಪಾಳಿಮಹಾಧ್ವಜಮೆತ್ತಮಿಂಪನಾ | ಲೈಸೆವಳಿಗೀತಿ ತಾನೆ ಜಯಗೀತಿಗಳಾಗಿರೆ ವಿಕ್ರಮಾರ್ಜುನಂ | ಗೊಸೆದಿದಿರ್ವಪ್ರವೋಲ್ ಬನವದೊಪ್ಪಿದುದಿಂತು ಬಸಂತರಾಜನಾ | ೧೩'
ಕಡೆ ಧರ್ಮರಾಯನು ಕೃಷ್ಣನಿಗೆ ಹೀಗೆಂದನು-೧೧. ಇಷ್ಟು ಭಯಂಕರವಾದ ಈ ಯುದ್ಧಸಮಾರಂಭದಲ್ಲಿ ಈ ಭೀಮಾರ್ಜುನರಿಬ್ಬರಿಂದ ಭೂದೇವಿಗೆ ಈ ಭಾರದ ಇಳಿಯುವಿಕೆ ಆಯಿತು. ನನಗೆ ದಾಯಾದಿಗಳಿಲ್ಲದಿರುವುದೂ ಆಯಿತು. ಈ ವೈಭವವೇ ನನಗೆ ಸಾಕು. ನನಗೆ ಇನ್ನು ರಾಜ್ಯದಿಂದ ಪ್ರಯೋಜನವಿಲ್ಲ. ಹರಿಗನಾದ ಅರ್ಜುನನಿಗೆ ಇಂದೇ ಪಟ್ಟಾಭಿಷೇಕವನ್ನು ಮಾಡೋಣ, ಈ ದಿನವೇ ಹಸ್ತಿನಾಪುರಕ್ಕೆ ಪ್ರಯಾಣ ಮಾಡೋಣ. ವ|| ಎನ್ನಲು “ಸಮಸ್ತಭೂಭಾರವನ್ನೂ ಆದಿಶೇಷನು ಧರಿಸುವ ಹಾಗೆ ವಿಕ್ರಮಾರ್ಜುನನಲ್ಲದೆ ಬೇರೆಯವರಿಗೆ ಧರಿಸಲಸಾಧ್ಯ; ಇದಕ್ಕೆ ನಾನೂ ಒಪ್ಪುತ್ತೇನೆ”. ಎಂದು ಕೃಷ್ಣನು ಅನೇಕ ಮಂಗಳವಾದ್ಯಗಳ ಸಮೂಹವು ಭೋರ್ಗರೆಯುತ್ತಿರಲು ಶುಭಮುಹೂರ್ತದಲ್ಲಿ ಅರಿಕೇಸರಿಯನ್ನು ಮುಂದಿಟ್ಟು ಹಸ್ತಿನಾಪಟ್ಟಣದ ಸಮೀಪದಲ್ಲಿರುವ ತೋಟವನ್ನು ಸಮೀಪಿಸಿದನು. ೧೨. ಮೃದುಮಧುರವಾದ ಧ್ವನಿಯಿಂದ ಫಲಿತ ಎಳಮಾವಿನ ಮರದಲ್ಲಿದ್ದುಕೊಂಡು ಮದಿಸಿದ ದುಂಬಿಯ ಸಮೂಹವು ಕೂಡಲೆ ಹಾಡಿತು. ಪ್ರವೇಶಮಾಡಬೇಡ ಎನ್ನದೆ ಪ್ರವೇಶಮಾಡಿ ಎಂದು ಕಡಿಮೆಯಾಗದ ಧ್ವನಿಯಿಂದ ಚಿಗುರಿದ ಅಶೋಕಮರದಲ್ಲಿ ನೆಲಸಿದ್ದ ಕೋಗಿಲೆಗಳ ಗುಂಪು ನಿಧಾನವಾಗಿ ಕೂಗಿತು. ಮನಸ್ಸಿಗೆ ತೃಪ್ತಿಯಾಗುವಂತೆ ಆಲಿಂಗನ ಮಾಡಿಕೊಳ್ಳುವ ಹಾಗೆ ದಕ್ಷಿಣದಿಕ್ಕಿನ ತಂಗಾಳಿಯು ಬೀಸಿತು. ೧೩. ಚಿಗುರಿ ಹೂವಾದ ಮಾವಿನಮರವೇ ಶ್ವೇತಚ್ಛತ್ರಿ; ಕೆಂಪುಬಣ್ಣದ ರಾಶಿಯಂತಿರುವ ಅಶೋಕವೃಕ್ಷದ ಕೆಂಪುಚಿಗುರೇ ಪಾಳಿಧ್ವಜಗಳು. ಎಲ್ಲ ಕಡೆಯಲ್ಲಿಯೂ ಸೌಂದರ್ಯದಿಂದ ಕೂಡಿ ಪ್ರಕಾಶಿಸುವ
Page #692
--------------------------------------------------------------------------
________________
'ಚತುರ್ದಶಾಶ್ವಾಸಂ | ೬೮೭ ವಆಗಳ್ ನಗರಪ್ರವೇಶಂಗೆಯ್ಯಲೆಂದು ಕಿಳದಾನುಂ ಬೇಗಮಾ ಪುರೋಪವನದೊಳ್ ವಿಶ್ರಮಿಸಿ ಪಂಚರತ್ನಮಯ ಮಂಡನಾಯೋಗಮಂಡಿತವಿಜಯಗಜಾರೂಢನಾದ ವಿಜಯನಂ ಮುಂದಿಟ್ಟು ಮಹಾವಿಭೂತಿಯಿಂದಯ್ಯರುಂ ನಿಜಾನ್ವಯ ರಾಜದ್ರಾಜಧಾನಿಯಂ ಪುಗೆಮ|| ನವಕಾಳಾಗರುಢಪಧೂಮವತಿಸೌಗಂಧಂಗಳಿಂ ಸಯ್ತು ನೀ
qು ವಿಯಚ್ಚಕ್ರದೊಳಲ್ಲಿ ಮಂದಮರುತವ್ಯಾಘಾತದಿಂದೆಯೇ ತೋ | ರ್ಪವೊಲಾಗಿರ್ದುದು ಕಣೆ ವಂದುದು ಪುರ ಪಾಂಡುಪುತ್ರಂಗವು
ತೃವದಿಂ ಮುನ್ನರಿದಿರ್ದ ತನ್ನ ಪಿಣಿಲಂ ಕೂರ್ತಂದು ಬಿಟ್ಟಂತವೋಲ್ ೧೪ ಮಲ್ಲಿಕಮಾಲೆ 1 ಓಳಿದೋರಣವಾಯ್ತು ಹಾರದ ಪಟ್ಟೆಸಾರದ ಮಾಲೆ ಸೌ
ಧಾಳಿಯೊಳುಡಿಯಾಯು ಚೀನದ ಸುಯತಾಣದ ಪಟೆ, ಹ | ರ್ಮ್ಯಾಳಿದಪ್ಪದೆ ರಯ್ಯಮಾಯೆಸೆವಾಟ ಪಾಟದ ಗೀತಿ ಕ
ಕ್ಯೋಳಿವಟ್ಟುದದೊಂದು ಚೆಲ್ಲು ದಲಾಯ್ತು ತತ್ತುರಮಧ್ಯದೊಳ್ || ೧೫ ಮಾಲಿನಿ || ಪ್ರವರತರ ಪುರಂಧೀನೂಪುರಾರಾವಮೆತ್ತಂ
ಕಿವಿಗೆ ವರ ವಿಳಾಸಂ ಕಕ್ಕೆ ಶೇಪಾಕ್ಷತ್ಘ | ದ್ರವಮ ತಮಗಮಿತ್ತತ್ತಿಂಬನೆಂಬನ್ನೆಗಂ ಪಾಂ ಡವರೆ ಪುಗೆ ಪೋಲಿಲ್ಲಂದೊಟ್ಟಿ ಚಿಟ್ಟಾಯ್ತು ರಾಗಂ ||
ದುಂಬಿಯ ಹಾಡೇ ಜಯಗೀತೆಗಳಾಗಿರಲು ವಿಕ್ರಮಾರ್ಜುನನನ್ನು ಪ್ರೀತಿಯಿಂದ ಸ್ವಾಗತಿಸುವ ಹಾಗೆ ವಸಂತರಾಜನ ವನವು ಪ್ರಕಾಶಮಾನವಾಗಿತ್ತು. ವn ಆಗ ನಗರಪ್ರವೇಶಮಾಡಬೇಕೆಂದು ಸ್ವಲ್ಪ ಕಾಲ ಆ ಪಟ್ಟಣದ ಸಮೀಪದ ತೋಟದಲ್ಲಿದ್ದು ವಿಶ್ರಾಂತಿ ಹೊಂದಿ ಪಂಚರತ್ನದಿಂದ ಕೂಡಿದ ಆಭರಣಗಳ ಸಮೂಹದಿಂದ ಅಲಂಕರಿಸಲ್ಪಟ್ಟ ವಿಜಯಗಜವನ್ನು ಹತ್ತಿರುವ ಅರ್ಜುನನನ್ನು ಮುಂದುಮಾಡಿಕೊಂಡು ಮಹಾವೈಭವದಿಂದ ಅಯ್ದುಜನವೂ ತಮ್ಮ ವಂಶಪಾರಂಪರ್ಯವಾಗಿ ಬಂದು ಪ್ರಕಾಶಿಸುತ್ತಿರುವ ರಾಜಧಾನಿಯನ್ನು ಪ್ರವೇಶಿಸಿದರು. ೧೪. ಹೊಸದಾದ ಕರಿಯ ಅಗರುಧೂಪದ ಹೊಗೆಯ ಸಮೂಹವು ಸುವಾಸನೆಗಳಿಂದ ಕೂಡಿ ನೇರವಾಗಿ ಆಕಾಶದಲ್ಲಿ ಉದ್ದವಾಗಿ ಹರಡಿ ಅಲ್ಲಿ ನಿಧಾನವಾಗಿ ಬೀಸುವ ಗಾಳಿಯಿಂದ ಹೊಡೆಯಲ್ಪಟ್ಟು ಆಕರ್ಷಕವಾಗುವ ಹಾಗೆ ಆಯಿತು. ಪಟ್ಟಣವೆಂಬ ಹೆಂಗಸು ಪಾಂಡುಪುತ್ರನಾದ ಅರ್ಜುನನಿಗಾಗಿ ಸಂತೋಷದಿಂದ ಮೊದಲು ಕತ್ತರಿಸಿದ್ದ ತನ್ನ ಜಡೆಯನ್ನು ಈಗ ಪ್ರೀತಿಯಿಂದ ಇಳಿಯಬಿಟ್ಟ ಹಾಗೆ ಕಣ್ಣಿಗೆ ಮನೋಹರವಾಗಿ ಕಂಡಿತು. ೧೫. ಆ ಪಟ್ಟಣದ ಮಧ್ಯದಲ್ಲಿ ಹಾರವಾಗಿ ಮಾಡಿರುವ ಹಸಿರುವಾಣಿಯ ಸಾರವತ್ತಾದ ತೋರಣಗಳು ಸಾಲಾಗಿ ರಂಜಿಸಿದುವು. ಉಪ್ಪರಿಗೆಗಳ ಸಾಲಿನಲ್ಲಿ ರೇಷ್ಮೆಯ ಕಸೂತಿ ಕೆಲಸಮಾಡಿದ ನವುರಾದ ಬಟ್ಟೆಗಳಿಂದ ಕೂಡಿದ ಒಳ್ಳೆಯ ಬಾವುಟಗಳು ಎಲ್ಲ ಉಪ್ಪರಿಗೆಗಳಲ್ಲಿಯೂ ಪ್ರಕಾಶಿಸಿದುವು. ನೃತ್ಯ ಸಂಗೀತ ಹಾಡುಗಳು ಮನೋಹರವಾದುವು. ಅದು ಕಣ್ಣಿಗೆ ಸೌಂದರ್ಯರಾಶಿಯಾಗಿ ಕಂಡಿತು. ೧೬. ಅತಿಶ್ರೇಷ್ಠರಾದ ಅಂತಃಪುರಸ್ತ್ರೀಯರ ಕಾಲಂದಿಗೆಯ ಧ್ವನಿಯು ಎಲ್ಲ
Page #693
--------------------------------------------------------------------------
________________
೬೮೮) ಪಂಪಭಾರತಂ
. ವ|| ಅಂತು ಪುರಜನಜನಿತಾಶೀರ್ವಾದಸಹಸಂಗಳೊಡನೆ ಸೂಸುವ ಶೇಷಾಕ್ಷತಂಗಳ ನಾನುತ್ತುಂ ಬಂದು ತತ್ತುರಾಂಗನೆಯ ಮುಖಸರಸಿಜಮಲರ್ದಂತೆಸೆದೂಪುವ ರಾಜಮಂದಿರಮಂ ಪೊಕ್ಕು ಧರ್ಮನಂದನಂ ದೇವಕೀನಂದನನೋಳ್ ಪರಮಾನಂದಂ ಬೆರಸು ಸಾಮಂತ ಚೂಡಾಮಣಿಯ ಪಟ್ಟಬಂಧನ ಮಹೋತ್ಸವಮಂ ಸಮಗೊಳಿಸಿ ವಿಕ್ರಮಾರ್ಜುನನನಿಂತೆಂದಂಉll ಪ್ರಾಯದ ಪಂಪ ಪಂಪಮಗೆ ಮಾದರಂ ತವ ಕೊಂದ ಪಂಪು ಕ..
ಟ್ರಾಯದ ಪಂಪು ಶಕ್ರನೊಡನೇಳಿದ ಪೆಂಪಿವು ಪೆಂಪುವತ್ತು ನಿ | ಟಾಯುಗಳಾಗಿ ನಿನೋಳಮರ್ದಿದರ್ುವು ನೀಂ ತಲೆವೀಸದುರ್ವರಾ ಶ್ರೀಯನಿದಾಗದೆನ್ನದೊಳಕೊಳ್ ಪರಮೋತ್ಸವದಿಂ ಗುಣಾರ್ಣವಾ || ೧೭
ವಗಿ ಎಂದು ಧರ್ಮಪುತ್ರನುಂ ದೇವಕೀಪುತ್ರನುಂ ಮರುತ್ತುತ್ರನುಮಮರೇಂದ್ರ ಪುತ್ರನನೆಂತಾನುಮೊಡಂಬಡಿಸಿ ನಾಳೆ ಪಟ್ಟಬದ್ಯೋತ್ಸವವೆಂದು ಮುನ್ನಿನ ದಿವಸಂ ಮಯನಿಂ ಪಂಚರತ್ನಮಯವಾದ ಸಭಾಮಂಟಪಮಂ ತರಿಸಿ ವಸಿಷ್ಠ ಕಶ್ಯಪ ವ್ಯಾಸ ವಿಶ್ವಾಮಿತ್ರ ಭರದ್ವಾಜಾದಿ ಮುನಿಪತಿಗಳಂ ಬರಿಸಿ ಮಾತಳಿಯ ಕೆಯೊಳ್ ದೇವೇಂದ್ರನಟ್ಟಿದ ಕಲ್ಪವೃಕ್ಷದ ತಳಿರ್ಗಳನ್ನರಾವತದ ಹರವೃಷಭದ ಕೊಡ ಮಣ್ಣುಮನಾಕಾಶಗಂಗೆಯ ನೀರುಮಂ ಮಂದಾರಪಾರಿಜಾತದ
ಕಡೆಯಲ್ಲಿಯೂ ಕೇಳಿಸುತ್ತಿರಲು ಕಣ್ಣುಗಳಿಗೆ ವೈಭವವು ತೋರಿ ಬರಲು, ಆಶೀರ್ವಾದದ ಅಕ್ಷತೆಗಳ ಸಮೂಹವು ತಮಗೂ ಸಂತೋಷವನ್ನು ಕೊಟ್ಟಿತು ಎನ್ನುತ್ತಿರಲು ಪಾಂಡವರು ಪುರಪ್ರವೇಶಮಾಡುವ ಸಂತೋಷವು ಅತ್ಯತಿಶಯವಾಯಿತು. ವಹಾಗೆ ಪಟ್ಟಣದ ಜನಗಳಿಂದ ಉದ್ಭವವಾದ ಆಶೀರ್ವಾದ ಸಹಸ್ರಗಳನ್ನೂ ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಧರಿಸುತ್ತ ಬಂದು ಆ ಪುರಸ್ತೀಯ ಮುಖಕಮಲವು ಅರಳಿದಂತೆ ಪ್ರಕಾಶಿಸುತ್ತಿರುವ ಅರಮನೆಯನ್ನು ಪ್ರವೇಶಿಸಿದರು. ಧರ್ಮರಾಜನು ಕೃಷ್ಣನೊಡನೆ ವಿಶೇಷ ಸಂತೋಷದಿಂದ ಕೂಡಿ ಸಾಮಂತಚೂಡಾಮಣಿಯಾದ ಅರ್ಜುನನ ಪಟ್ಟಾಭಿಷೇಕಮಹೋತ್ಸವವನ್ನೇರ್ಪಡಿಸಿ ಅರ್ಜುನನನ್ನು ಕುರಿತು ಹೀಗೆಂದನು-೧೭. ಗುಣಾರ್ಣವಾ ಪ್ರಾಯದ ವೈಭವ; ನಮ್ಮನ್ನು ಅತಿಕ್ರಮಿಸಿದವರನ್ನು ನಾಶವಾಗುವಂತೆ ಕೊಂದ ವೈಭವ; ಅತ್ಯಧಿಕವಾದ ಪರಾಕ್ರಮದ ವೈಭವ; ಇಂದ್ರನೊಡನೆ ಅವನ ಅರ್ಧಾಸನವನ್ನು ಹತ್ತಿದ ವೈಭವ ಇವು ಆಧಿಕ್ಯವನ್ನು ಹೊಂದಿ ದೀರ್ಘಾಯುವಾಗಿ ನಿನ್ನಲ್ಲಿ ಸೇರಿಕೊಂಡು ಪ್ರಕಾಶವಾಗಿವೆ. ಅರ್ಜುನ, ನೀನು ತಲೆಬೀಸದೆ (ಅಸಮ್ಮತಿಯನ್ನು ಪ್ರದರ್ಶಿಸದೆ) ಇದು ನನ್ನಿಂದಾಗುವುದಿಲ್ಲ ಎನ್ನದೆ ಈ ರಾಜ್ಯಸಂಪತ್ತನ್ನು ಅತ್ಯಂತ ಸಂತೋಷದಿಂದ ನೀನು ಅಂಗೀಕರಾಮಾಡು. ವ|ಎಂದು ಧರ್ಮರಾಯನೂ ಕೃಷ್ಣನೂ ಭೀಮನೂ ಅರ್ಜುನನನ್ನು ಹೇಗೂ ಒಪ್ಪಿಸಿದರು. ನಾಳೆಯೇ ಪಟ್ಟವನ್ನು ಕಟ್ಟುವ ದಿವಸವೆಂದು ದೇವಲೋಕದ ಶಿಲ್ಪಿಯಾದ ಮಯನೆಂಬುವನಿಂದ ಪಂಚರತ್ನಮಯವಾದ ಸಭಾಮಂಟಪವನ್ನು ತರಿಸಿದರು. ವಸಿಷ್ಠ, ಕಶ್ಯಪ, ವ್ಯಾಸ, ವಿಶ್ವಾಮಿತ್ರ, ಭಾರದ್ವಾಜರೇ ಮೊದಲಾದ ಋಷಿಶ್ರೇಷ್ಠರನ್ನು ಬರಮಾಡಿದರು. ಮಾತಲಿಯ ಕಯ್ಯಲ್ಲಿ ದೇವೇಂದ್ರನು ಕಲ್ಪವೃಕ್ಷದ ಚಿಗುರುಗಳನ್ನೂ ಐರಾವತವೆಂಬಾನೆಯೂ ಈಶ್ವರನ ನಂದಿಯೂ ಕೊಂಬಿನಿಂದ ಎಬ್ಬಿಸಿದ ಮಣ್ಣನ್ನೂ
Page #694
--------------------------------------------------------------------------
________________
ಚತುರ್ದಶಾಶ್ವಾಸಂ | ೬೮೯ ಪೂಮಾಲೆಗಳುಮಂ ವರುಣದೇವನಟ್ಟಿದ ಕ್ಯಾರಕ್ಟೋರೇಕ್ಕುದಧಿಮಧುಪ್ರತಸ್ವಾದಕಂಗಳೆಂಬೇಬುಂ ಸಮುದ್ರಂಗಳ ಚತುರ್ದಶ ಮಹಾನದಿಗಳ ನೀರುಮಂ ತಂತು ತೋಳಗುವ ಕಳಭೌತ ಕಳಶಂಗಳೊಳ್ ತಕ್ಕನೆ ತೀವಿ ತಂದ ವಾರವನಿತಾಜನಕ್ಕಂ ಸಾಮಂತಚಕ್ರಕ್ಕಮುಡಲಿಕ್ಕಿ ಧವಳಚ್ಚತ್ರ ಚಾಮರಸಿಂಹಾಸನ ಪಟ್ಟವರ್ಧನಕುಲಧನಾದಿ ರಾಜ್ಯಚಿಹ್ನಂಗಳಂ ವಿವಿಧ ವಿಧಾನದಿಂದಮಧಿವಾಸಿಸಿ ಗಂಗಾಜಳಪವಿತ್ರೀಕೃತಗಾತ್ರನುಂ ಕೌಶೇಯ ಪರಿಧಾನನುಮಾಗಿರ್ದ ಮಾನನಿಧಾನನಂ ತಂದು ಪೊಡವಡಿಸಿ ಮಂಗಳಪಟಹಂಗಳುಂ ಮಂಗಳಗೀತಿಗಳುಮಸೆಯ ಕಳಕಳಾವರ್ತಮಾಗೆ ಜಾಗರಮಿರ್ದು ಮುದಿವಸಂ ಪ್ರಶಸ್ತ ಹೂರ್ತಿಕ ನಿರೂಪಿತ ಶುಭ ಲಗೋದಯ ದಿಂದಷ್ಟೋತ್ತರಶತ ಪೂರ್ಣಕುಂಭಂಗಳಂ ಚತುರ್ವೆದ ಪಾರಗರಷ್ಟ ಧರಾಮ ರರೆತ್ತಿಕೊಂಡು ಮಂತ್ರಪೂತ ಜಲಂಗಳಿಂ ಮಾಯಿಸಿಮll ಸ ವನಧಿಪ್ರಧಾನದಿಂ ಮಂಗಳಪಟಹರವಂ ಪರ್ಚೆ ಮಾಂಗಲಗೇಯ
ಧ್ವನಿಯಿಂದಾಶಾಂತರಂ ಪೂರ್ಣಿಸಿ ಸೊಗಯಿಸಿ ಕೆಯ್ದೆಯು ಸಾಮಂತ ಸೀಮಂ | ತಿನಿಯರ್ ಮುಂದಾಡೆ ಭೋರೆಂದೆಸೆಯೆ ಜಯಜಯಧ್ಯಾನಮೋರಂತೆ ವಾರಾಂ ಗನೆಯರ್ ವಂದಾಡೆ ಸಂದೀ ವಿಭವದೊಳರಿಗಂಗಾಯ್ತು ರಾಜ್ಯಾಭಿಷೇಕಂ || ೧೮
ಆಕಾಶಗಂಗೆಯ ನೀರನ್ನೂ ನಮೇರು ಮಂದಾರ ಪಾರಿಜಾತಗಳೆಂಬ ದೇವಲೋಕದ ಮರಗಳ ಹೂವುಗಳಿಂದ ಕೂಡಿದ ನೀರುಗಳನ್ನೂ ಕಳುಹಿಸಿಕೊಟ್ಟನು. ವರುಣದೇವನು ಉಪ್ಪು, ಹಾಲು,ಕಬ್ಬಿನ ರಸ, ಮೊಸರು, ಜೇನು, ತುಪ್ಪ, ಸಿಹಿನೀರುಗಳ ಏಳು ಸಮುದ್ರಗಳ ಮತ್ತು ಹದಿನಾಲ್ಕು ಮಹಾನದಿಗಳ ಪುಣ್ಯತೀರ್ಥವನ್ನು ಕಳುಹಿಸಿಕೊಟ್ಟನು. ಅವನ್ನು ಥಳಥಳನೆ ಹೊಳೆಯುವ ಸ್ವಚ್ಛವಾದ ಬಿಳಿಯ ಕೊಡಗಳಲ್ಲಿ ತುಂಬಿ ತಂದಿರುವ ವೇಶ್ಯಾಸ್ತ್ರೀಯರಿಗೂ ಸಾಮಂತರಾಜಸಮೂಹಕ್ಕೂ ಉಡುಗೊರೆಯನ್ನು ಕೊಟ್ಟನು. ಶ್ವೇತಚ್ಛತ್ರ (ಬಿಳಿಯ ಕೊಡೆ) ಚಾಮರ, ಸಿಂಹಾಸನ, ಪಟ್ಟದಾನೆ, ಕುಲಧನವೇ ಮೊದಲಾದ ರಾಜ್ಯಚಿಹ್ನೆಗಳನ್ನು ಬೇರೆ ಬೇರೆ ರೀತಿಯಿಂದ ಪ್ರತಿಷ್ಠೆ ಮಾಡಿಸಿದನು. ಗಂಗಾಜಲದಿಂದ ಪವಿತ್ರವನ್ನಾಗಿ ಮಾಡಲ್ಪಟ್ಟ ಶರೀರವುಳ್ಳವನೂ ರೇಷ್ಮೆಯ ವಸ್ತದ ಹೊದಿಕೆಯುಳ್ಳವನೂ ಆದ ಅರ್ಜುನನನ್ನು ನಮಸ್ಕಾರಮಾಡಿಸಿ ಮಂಗಳವಾದ್ಯಗಳೂ ಮಂಗಳಗೀತೆಗಳೂ ಪ್ರಕಾಶಿಸುತ್ತಿರಲು ಕಳಕಳಧ್ವನಿಯಿಂದ ಆವರಿಸಲ್ಪಟ್ಟು ಜಾಗರಣೆಯಿರಿಸಿದನು. ಮಾರನೆಯ ದಿವಸ ಪ್ರಶಸ್ತವಾದ ಜೋಯಿಸರಿಂದ ನಿಷ್ಕರ್ಷಿಸಲ್ಪಟ್ಟ ಶುಭಮುಹೂರ್ತದಲ್ಲಿ ನೂರೆಂಟು ಪೂರ್ಣಕುಂಭಗಳನ್ನು ನಾಲ್ಕು ವೇದಗಳಲ್ಲಿಯೂ ಪಂಡಿತರಾದ ಬ್ರಾಹ್ಮಣರು ಎತ್ತಿಕೊಂಡು ಮಂತ್ರಪೂತವಾದ ನೀರಿನಿಂದ ಸ್ನಾನಮಾಡಿಸಿದರು. ೧೮. ಸಮುದ್ರಘೋಷದಂತೆ ಮಂಗಳವಾದ್ಯಧ್ವನಿಯು ಹೆಚ್ಚಿದುವು. ಮಂಗಳಗೀತೆಗಳ ಧ್ವನಿಯಿಂದ ದಿಕ್ಕುಗಳ ಒಳಭಾಗವೆಲ್ಲ ಶಬ್ದಮಾಡಿ ಸೊಗಯಿಸಿದುವು, ಅಲಂಕಾರಮಾಡಿಕೊಂಡಿರುವ ಸಾಮಂತರಾಜರ ಸ್ತ್ರೀಯರು ಮುಂಭಾಗದಲ್ಲಿ ನೃತ್ಯವಾಡಿದರು. ಜಯಜಯಧ್ವನಿಯು ಒಂದೇ ಸಮನಾಗಿ ಭೋರೆಂದು ಧ್ವನಿಮಾಡುತ್ತಿರಲು ವೇಶ್ಯಾಸ್ತ್ರೀಯರು ಬಂದು ನೃತ್ಯವಾಡಿದರು. ಇಂದು ಈ ವೈಭವದಲ್ಲಿ ಅರಿಗನಿಗೆ (ಅರ್ಜುನನಿಗೆ) ರಾಜ್ಯಾಭಿಷೇಕವಾಯಿತು.
Page #695
--------------------------------------------------------------------------
________________
೬೯೦ / ಪಂಪಭಾರತಂ
ವ|| ಆಗಳ್ ರಾಜ್ಯಾಭಿಷೇಕದ ನಂತರದೊಳ್ ಧರ್ಮನಂದನಂ ವಾಯುನಂದನಂ ದೇವಕೀನಂದನನಶ್ವಿನೀನಂದನರಯ್ಯರುಮನೇಕ ಮಂಗಳಾಭರಣಾಳಂಕೃತಶರೀರರರಿಕೇಸರಿಯಂ ಕೇಸರಿವಿಷ್ಟರದೊಳ್ ಕುಳ್ಳಿರಿಸಿ ಪಂಚರತ್ನಶಿಖಾವಿರಾಜಮಾನಮಪ್ಪ ಪಟ್ಟಮನೆ ಯಾದವ ವಂಶಸಂಭೂತೆಯುಮನೇಕಲಕ್ಷಣೋಪೇತೆಯುಮಪ್ಪ ಸುಭದ್ರೆಗೆ ಮಹಾದೇವಿವಟ್ಟಮಂ
ಕಟ್ಟಿದಾಗಳ್
ಚಂ। ನೆಗಟ್ಟುದು ದೇವದುಂದುಭಿರವಂ ಸುರನಂದನದಿಂ ಪೊದಲ್ಲಿ ಬ ಲುಗುಳಳ ತಂದಲಂದು ಕವಿತಂದುದದಂ ತನಿಸೋಂಕು ಸೋಂಕಿ ಮ | ಲ್ಲಗೆ ಮಲಯಾನಿಳಂ ಸುಟೆದೊಡಂದು ಜಗಂ ಪೊಸತಾದುದೆಂದೊಡೇ ಮೊಗುದೂ ಪಟ್ಟಬಂಧನಮಹೋತ್ಸವಮಂ ಜಗದೇಕಮಲ್ಲನಾ || ೧೯ ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇಟೆಯೊಳೊಂದಿ ಸಾಂದಿನೊಳ್ ಕತ್ತುರಿಯೊಂದು ಕೋಳೆಸಲೋಕುಳಿ ಚಂದನಗಂಧವಾರಿಯೊಳ್ | ಸುತ್ತಲುಮಂ ಪಡವ ಗೇಯದ ಪಂಪಿನಲಂಪನಾರ್ಗಮಾ ರ್ತಿತ್ತುದು ಪಟ್ಟಬಂಧನಮಹೋತ್ಸವಮಾ ಪಡೆಮಚ್ಚಿ ಗಂಡನಾ || ೨೦ ವ|| ಮತ್ತಮೈರಾವಣಾನ್ವಯನುಂ ಸುರಭಿನಿಶ್ವಾಸನುಂ ಸೂಕ್ಷ್ಮಬಿಂದುರುಚಿರನುಂ ಕಾಳಿಂಗ ವನಸಂಭೂತನುಮನೇಕಲಕ್ಷಣೋಪೇತನುಮಪ್ಪ ತ್ರಿಭುವನಾಭರಣಮೆಂಬಾನೆಗಮುಭಯಕುಲ
ವll ರಾಜ್ಯಾಭಿಷೇಕವಾದ ಮೇಲೆ ಧರ್ಮರಾಯನೂ ಭೀಮ ಕೃಷ್ಣ ನಕುಲಸಹದೇವರೇ ಮೊದಲಾದ ಅಯ್ದುಜನರೂ ಅನೇಕ ಒಡವೆಗಳಿಂದ ಅಲಂಕಾರಮಾಡಲ್ಪಟ್ಟ ಶರೀರರಾಗಿ ಅರಿಕೇಸರಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಅಯ್ತು ರತ್ನಗಳಿಂದ ಖಚಿತವಾದ ತಲೆಯ ಪಟ್ಟ (ಶಿರಪೇಷ್)ದಿಂದ ಪ್ರಕಾಶಮಾನವಾದ ಪಟ್ಟವಸ್ತ್ರವನ್ನು ಕಟ್ಟಿ ಯಾದವವಂಶದಲ್ಲಿ ಹುಟ್ಟಿದವಳೂ ಅನೇಕ ಲಕ್ಷಣಗಳಿಂದ ಕೂಡಿದವಳೂ ಆದ ಸುಭದ್ರೆಗೆ ಮಹಾರಾಣಿಯ ಪಟ್ಟವನ್ನು ಕಟ್ಟಿದರು. ೧೯. ದೇವದುಂದುಭಿ ಯಾಯ್ತು. ದೇವತೆಗಳ ತೋಟದಿಂದ ವ್ಯಾಪಿಸಿದ ದೊಡ್ಡ ಹೂಗಳ ತುಂತುರುಮಳೆಯಾಯಿತು. (ಪುಷ್ಪವೃಷ್ಟಿಯಾಯಿತು) ಅದರ ಇಂಪಾದ ಸ್ಪರ್ಶದಿಂದ ನಿಧಾನವಾಗಿ ಮಲಯಮಾರುತವು ಸುಳಿದಾಡಿತು. ಆ ದಿನ ಲೋಕವೇ ಹೊಸತಾಯಿತು ಎಂದರೆ ಜಗದೇಕಮಲ್ಲನಾದ ಅರ್ಜುನನ ಪಟ್ಟಬಂಧ ಮಹೋತ್ಸವವನ್ನು ಏನೆಂದು ಹೊಗಳುವುದು ೨೦. ಮುತ್ತು ಪಚ್ಚೆ ರತ್ನ ಮತ್ತು ವಜ್ರಗಳ ಸಾಲುಗಳಲ್ಲಿ ಸೇರಿ ಶ್ರೀಗಂಧ ಕಸ್ತೂರಿ ಮೊದಲಾದುವುಗಳ ಒಳ್ಳೆಯ ಕೆಸರಿನಲ್ಲಿಯೂ ಶ್ರೀಗಂಧದ ಪರಿಮಳಯುಕ್ತವಾದ ನೀರಿನಲ್ಲಿಯೂ ಓಕುಳಿಯಾಡಿಸುತ್ತ ಎಲ್ಲೆಡೆಯಲ್ಲಿಯೂ ಪ್ರೀತಿಯನ್ನುಂಟುಮಾಡುವ ಸಂಗೀತದ ವೈಭವದಿಂದ ಕೂಡಿದ ಅರ್ಜುನನ ಪಟ್ಟಬಂಧನಮಹೋತ್ಸವವು ಎಂತಹವರಿಗೂ ಸಾಕಷ್ಟು ಸಂತೋಷವನ್ನು ಕೊಟ್ಟಿತು. ವ|| ಮತ್ತು ಐರಾವತದ ವಂಶದಲ್ಲಿ ಹುಟ್ಟಿದುದೂ ಸುಗಂಧಯುಕ್ತವಾದ ಉಸಿರುಳ್ಳುದೂ ಸೂಕ್ಷ್ಮವಾದುದೂ ಸಣ್ಣ ಸಣ್ಣ ಬಿಳಿಯ ಮಚ್ಚೆಗಳಿಂದ ರಮ್ಯವಾದುದೂ ಕಳಿಂಗದೇಶದ ಅರಣ್ಯದಲ್ಲಿ ಹುಟ್ಟಿದುದೂ ಅನೇಕ ಲಕ್ಷಣಗಳಿಂದ ಕೂಡಿದುದೂ
Page #696
--------------------------------------------------------------------------
________________
ಚತುರ್ದಶಾಶ್ವಾಸಂ | ೬೯೧ ಶುದ್ಧನುಂ ಗುಣಶುದ್ಧನುಂ ಗುಣಸಮುದ್ರನುಮಪ್ಪ ಮಹಾಮಂತ್ರಿಯಭವನುಮುಚ್ಚಿತ್ಯವಾನ್ವಯ ಸಂಭವನುಂ ಪ್ರಶಸ್ತ ಲಕ್ಷಣ ಲಕ್ಷಿತನುಮಪ್ಪ ತ್ರಿಭುವನತಿಲಕಮೆಂಬ ಕುದುರೆಗಂ ಪಟ್ಟಂಗಟ್ಟಿ ಪುರುಷೋತ್ತಮನ ತಂಗೆಯುಂ ತಾನುಂ ತುಳಾಪುರುಷಮನಿರ್ದು ಲೋಕಕ್ಕೆಲ್ಲಂ ಬಿಯಮಂ ಮದುಚಂಗ ತೊರೆದುದು ಕಾಮಧೇನು ತುಜುಗಲ್ಗೊನೆವುದು ಕಲ್ಪವೃಕ್ಷಮಾ
ಶರನ ವರಪ್ರಸಾದಮಿದಿರ್ಗೊಂಡುದು ಸುತ್ತಿ ದೂಂದು ಮುತ್ತಿನಾ | ಗರಮ ತೆರಳುಗೆಯ ರಸ ಸಿದ್ದಿಯುಮಾಯ್ತನೆ ತನ್ನನಾಸವ
ಟೆರೆದವರ್ಗಿತ್ತು ಪೊಮ್ಮಯದ ಮಾಡಿದ ನೆಲನಂ ಗುಣಾರ್ಣವಂ || ೨೧
ವ|| ಅಂತು ಚಾಗಂಗೆಯ್ದು ಸಿಂಹಾಸನಮಸ್ತಕಸ್ಥಿತನುಂ ವಿರಾಜಮಾನ ಧವಳಚ್ಛತ್ರಚಾಮರ ಸಹಸ್ರಪಂಛಾದಿತನುಮಾಗಿ ವಿಕ್ರಾಂತತುಂಗನೊಡೋಲಗಂಗೊಟ್ಟರೆಕಂ|| ಎಡೆಗೊಂಡಿರಿಮುಂಚಂ
ನುಡಿಯದಿರಿಂ ನೃಪತಿ ನುಡಿಯಿಂ ನೀಮಿ | ರ್ಪಡೆಯೊಳಿರಿಂ ನೀವಟಿವಿ ಮಿಡುಕಿದೊಡನೆ ಚಿತ್ರವೇತದಂಡಧರರ್ಕಲ್ ನ
ಆಗಿರುವ ತ್ರಿಭುವನಾಭರಣವೆಂಬ ಆನೆಗೂ ಉಭಯಕುಲಶುದ್ದನೂ ಗುಣಸಮುದ್ರನೂ ಆಗಿರುವ ಮಹಾಮಂತ್ರಿಯ ಮನೆಯಲ್ಲಿಯೇ ಬೆಳೆದ (?) ಉಚ್ಚೆಶ್ರವದ ವಂಶದಲ್ಲಿಯೇ ಜನಿಸಿರುವ ಪ್ರಶಸ್ತವಾದ ಲಕ್ಷಣಗಳಿಂದ ಗುರುತುಮಾಡಲ್ಪಟ್ಟ ತ್ರಿಭುವನತಿಲಕವೆಂಬ ಕುದುರೆಗೂ ಪಟ್ಟವನ್ನು ಕಟ್ಟಿದರು. ಕೃಷ್ಣನ ತಂಗಿಯಾದ ಸುಭದ್ರೆಯೂ ಅರ್ಜುನನೂ ತುಲಾಪುರುಷಭಾರವಿದ್ದು (ತನ್ನ ತೂಕದಷ್ಟು ಚಿನ್ನವನ್ನು ತೂಕಮಾಡಿ ದಾನಮಾಡುವುದು) ಲೋಕಕ್ಕೆಲ್ಲ ತಮ್ಮ ದಾನದ ವೈಭವವನ್ನು ಮೆರೆದರು. ೨೧. ಕಾಮಧೇನುವೆಂಬ ದೇವಲೋಕದ ಹಸುವು ಹಾಲನ್ನು ಸುರಿಸಿತು. ಕಲ್ಪವೃಕ್ಷವು ಕಿಕ್ಕಿರಿದು ತುಂಬಿದ ಹಣ್ಣುಗಳಿಂದ ಕೂಡಿದ ಗೊನೆಯನ್ನುಳ್ಳುದಾಯಿತು. ಈಶ್ವರನ ವರಪ್ರಸಾದವು ಎದಿರುಗೊಂಡಿತು. ಸುತ್ತಲೂ ಒಂದು ಮುತ್ತಿನ ಭಂಡಾರವೇ ಆವರಿಸಿಕೊಂಡು ಚಲಿಸಿತು. ಸಂಪೂರ್ಣವಾಗಿ ರಸಸಿದ್ದಿ ಆಯಿತು ಎನ್ನುವ ಹಾಗೆ ತನ್ನಲ್ಲಿ ಆಸೆಯಿಂದ ಬಂದು ಬೇಡಿದವರಿಗೆ ಅವರ ತೃಪ್ತನುಸಾರವಾಗಿ ದಾನಮಾಡಿ ಲೋಕವನ್ನೆಲ್ಲ ಸುವರ್ಣಮಯವನ್ನಾಗಿ ಮಾಡಿದನು. ವ|| ಹಾಗೆ ದಾನಮಾಡಿ ಸಿಂಹಾಸನದ ಮೇಲುಭಾಗದಲ್ಲಿ ಕುಳಿತವನೂ ಹೊಳೆಯುತ್ತಿರುವ ಸಾವಿರಾರು ಬೆಳುಗೊಡೆ ಮತ್ತು ಚಾಮರಗಳಿಂದ ಮುಸುಕಲ್ಪಟ್ಟವನೂ ವಿಶೇಷ ಪರಾಕ್ರಮಿಯೂ ಆದ ಅರ್ಜುನನು ಸಭಾಮಧ್ಯದಲ್ಲಿ ಓಲಗಗೊಟ್ಟನು. ೨೨. ನಿಮ್ಮನಿಮ್ಮ ಸ್ಥಳದಲ್ಲಿರಿ; ಗಟ್ಟಿಯಾಗಿ ಮಾತನಾಡಬೇಡಿ; ರಾಜನು ಮಾತನಾಡಿದ ಮೇಲೆ ನೀವು ಮಾತನಾಡಿ; ನೀವು ಇರುವ ಸ್ಥಳದಲ್ಲಿಯೇ ಇರಿ; ಅಲುಗಾಡಿದರೆ ತಕ್ಷಣವೇ ಬಗೆಬಗೆಯಾದ ಬೆತ್ತವನ್ನು ಹಿಡಿದಿರುವ ಕಟ್ಟಿಗೆಕಾರರ ಅನುಭವವು ನಿಮಗಾಗುತ್ತದೆ. (ಅವರ ದಂಡದ
Page #697
--------------------------------------------------------------------------
________________
೬೯೨ / ಪಂಪಭಾರತಂ
ಕಂ
ಓಳಿಕೊಳೆ ಪೊಳೆವ ಕಣ್ಣಳ್ ನೀಳಿಮವನಜಂಗಳೊಳಿ ಕೊಳ್ಳದುವು ತಾ | ಮೋಳಿಕೊಳಲಂತ ಗಣಿಕೆಯ
ರೋಳಿಯೊಳೆ ಮಡ ಲತೆಗಳಿರ್ಪಂತಿರ್ದರ್ |
ಸಾರ್ಚಿದ ಲೋಹಾಸನದೊಳ
ಮರ್ಚಿದ ಬೊಂದರಿಗೆ ಪಟೆಯ ಬಿತ್ತರಿಗೆ ಕರಂ | ಪೆರ್ಚುವ ಮಹಿಮೆಯನೆಯೇ ನಿ
ಮಿರ್ಚೆ ಮಹಾಮಕುಟಬದ್ಧರೋಳಿಯೊಳಿರ್ದರ್ ||
ಮಗ ಮಗ ಮಗಿಸುವ ಮೃಗಮದ
ದಗರುವ ಕಪುರದ ಕಂಪುಮಂ ಸೂಡಿದ ಬಾ | ಸಿಗದ ಪೊಸಗಂಪನಿಂಬಾ
ಗೊಗೆದಿರೆ ಮಾಡಿದುದು ಚಾಮರರುಹಗಂಧವಹಂ ||
ಪಸರಿಸಿದ ತಾರಹಾರದ
ಪೊಸವೆಟ್ಟಿಂಗಳುಮನಮರ್ದ ಪರ್ದುಡುಗೆಗಳೊಳ್ | ಮಿಸುಗುವ ಪೊಸ ಮಾಣಿಕದಳ ವಿಸಿಲುಮನೊಡಗಾಣಲಾದುದರಿಗಳ ಸಭೆಯೊಳ್ ||
೨೩
೨೪
೨೫
೨೬
ವ|| ಅಂತು ದೇವೇಂದ್ರನಾಸ್ಥಾನಮನೆ ಪೋಲು ಸೊಗಯಿಸುವ ಸಂಸಾರಸಾರೋದಯ ನಾಸ್ಥಾನದೊಳೊರ್ವ ವೈತಾಳಿಕಂ ನಿಂದಿರ್ದು ಮೃದುಮಧುರಗಂಭೀರಧ್ವನಿಯಿನಿಂತೆಂದಂ
ಏಟುಗಳ ರುಚಿ ನಿಮಗೆ ಅನುಭವವಾಗುತ್ತದೆ ಎಂದಭಿಪ್ರಾಯ). ೨೩. ಎಂದು ಹೇಳುತ್ತಿರುವ ಕಾವಲವರ ಹೊಳೆಯುವ ಕಣ್ಣುಗಳು ಸಾಲಾಗಿರಲು ಕನ್ನೈದಿಲೆಯ ತೋಟದಲ್ಲಿ ಒಪ್ಪುವ ಕನ್ನೈದಿಲೆಯ ಹೂವುಗಳು ಕ್ರಮಬದ್ಧವಾಗಿ ಸಾಲಾಗಿರುವಂತೆ ವೇಶ್ಯಾಸ್ತ್ರೀಯರು ಸಾಲಾಗಿ ಚಿಗುರಿದ ಬಳ್ಳಿಗಳಂತೆ ಕಂಡರು. ೨೪. ಹತ್ತಿರವಿಟ್ಟಿರುವ ಲೋಹಾಸನಗಳಲ್ಲಿ (ಚಿನ್ನ, ಬೆಳ್ಳಿ ಮೊದಲಾದ ಲೋಹಗಳಿಂದ ಕೂಡಿದ ಕುರ್ಚಿಗಳಲ್ಲಿ) ಸೇರಿರುವ ಮೆತ್ತೆಗಳು (ಪಟೆಯ ?) ಸಣ್ಣ ಪೀಠಗಳೂ ವಿಶೇಷ ವೈಭವವನ್ನತಿಶಯವಾಗಿ ಉಂಟು ಮಾಡಲು ಮಹಾರಾಜರುಗಳು ಸಾಲಾಗಿದ್ದರು. ೨೫. ಸುಗಂಧವನ್ನು ಬೀರುತ್ತಿರುವ ಕಸ್ತೂರಿ ಅಗರು ಮತ್ತು ಪಚ್ಚಕರ್ಪೂರದ ವಾಸನೆಯನ್ನು ಅಲ್ಲಿ ನೆರೆದವರು ಮುಡಿದು ಕೊಂಡಿರುವ ಬಾಸಿಗದ ಹೊಸ ವಾಸನೆಯನ್ನು ಚಾಮರ ಬೀಸುವುದರಿಂದ ಎದ್ದ ಗಾಳಿಯು ಎಬ್ಬಿಸುತ್ತಿರಲು ಅದು ಸಂತೋಷದಾಯಕವೇ ಆಯಿತು. ೨೬. ಪ್ರಸರಿಸಿ ರುವ ಮುತ್ತಿನ ಹಾರಗಳ ಹೊಸಬೆಟ್ಟಿಂಗಳುಗಳನ್ನು ಧರಿಸಿರುವ ಬೆಲೆಯುಳ್ಳ ಆಭರಣಗಳಲ್ಲಿ ಪ್ರಕಾಶಿಸುವ ಹೊಸ ಮಾಣಿಕ್ಯಗಳ ಎಳೆಯ ಬಿಸಿಲನ್ನೂ, ಅರಿಕೇಸರಿಯ ಆಸ್ಥಾನದಲ್ಲಿ ಒಟ್ಟಿಗೆ ಕಾಣಲು ಸಾಧ್ಯವಾಯಿತು. ವ|| ಹಾಗೆ ದೇವೇಂದ್ರನ ಸಭೆಯನ್ನೇ ಹೋಲುತ್ತ ಸೊಗಯಿಸುವ ಸಂಸಾರಸಾರೋದಯನಾದ ಅರ್ಜುನನ ಆಸ್ಥಾನದಲ್ಲಿದ್ದ ವಿವಿಧತಾಳಗಳನ್ನು ಉಪಯೋಗಿಸಿ ಹಾಡುವ ಗಾಯಕನಾದ ವೈತಾಳಿಕನು ಎದ್ದು
Page #698
--------------------------------------------------------------------------
________________
ಚತುರ್ದಶಾಶ್ವಾಸಂ / ೬೯೩
೨೭
ಸ || ಆಸೇತೋ ರಾಮ ಚಾಪಾಟನಿ ತಟಯುಗ ಟಂಕಾಂಕಿತಾಖಂಡ ಖಂಡಾ ದಾ ಪೀಯೂಷಾಬ್ ದುಗ್ಗಪ್ತವ ಧವಳ ಕನತ್ಯಂದರಾನಂದರಾದ್ರಃ | ಆಚಂದ್ರಾರ್ಕ ಪ್ರತೀತೋಭಯ ಗಿರಿಶಿಖರಾತ್ ಸ್ಪೋದಯಕ ಹೇತೋಃ ಶೈಲೇಳಾಕಲಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗಃ | ಶೌರ್ಯಂ ಯಸ್ಯ ಗುಣಾರ್ಣವ ಕ್ಷಿತಿಪತೇಸ್ತವ್ಯಾಪಸವ್ಯಕ್ರಮಾತ್ ಗರ್ವಾಕೃಷ್ಟವಿಕರ್ಣಟಂಕನಿಕರೋತ್ಕರ್ಣಪ್ರಭಾವಾಕ್ಷರ: 1 ಮತ್ತಾರಿದ್ವಿಪಮಸ್ತಕಸ್ಥಿತಶಿಲಾಪಟ್ಟಂ ಸದಾಖ್ಯಾಯತೇ ತಸ್ಮಾಯಂ ಪುನರುಕ್ತ ಏವ ಸಮರ ಶ್ಲಾಘಪ್ರಶಸ್ತಿಕ್ರಮಃ || ಏತತ್ಕಂಪಿತ ಪರ್ವತಾಸ್ಸು ಚಕಿತಾ ಏತುಂ ಸಮುದ್ರಂ ಪುನಃ ಸಪ್ತದ್ವೀಪ ಜಿಗೀಷಯಾ ವಿಜಯನಾ ಕೇನಾಪಿ ಪುಂಜೀಕೃತಂ | ಯಜ್ಞಾತಂ ಶರ ಶಂಕು ಶಲ್ಯ ಶತಸ್ಸಂತಾಪ ಶತ್ರುದ್ವಿಪಾನ್ ನಿಶ್ಚಾಸೋಪರತಾನ್ ಗುಣಾರ್ಣವಮಹೀಪಾಲೇನ ಯುದ್ಧಾವನ ||
1182
ಪೃಥ್ವಿ || ಪರಸ್ಪರ ವಿರುದ್ಧಯೋರ್ವಿನಯ ಯೌವನಾರಂಭಯೋ
ಪ್ರಭೂತ ಸಹಜೇರ್ಷ್ಠಯೋರಪಿ ಸರಸ್ವತೀ ಶ್ರೀಸ್ತಿಯೋಃ || ತಥಾಚ ಪರಿಹಾರಿಸೋರಪಿ ಮಹಾ ಕ್ಷಮಾ ಶೌರ್ಯಯೋ ಚಿರಂ ಪ್ರಥಮ ಸಂಗಮೋ ಹರಿಗ ಭೂಪತೇ ದೃಶ್ಯತೇ |
೨೮
೨೯
20
ನಿಂತು ಮೃದುಮಧುರಗಂಭೀರಧ್ವನಿಯಿಂದ ಹಾಡಿದನು. ೨೭. ಶ್ರೀರಾಮನ ಬಿಲ್ಲಿನ ಕೊಪ್ಪಿನ ಎರಡು ಕಡೆಗಳೆಂಬ ಉಳಿಯಿಂದ ಗುರುತು ಮಾಡಲ್ಪಟ್ಟ ಸಮಗ್ರವಾದ ಭರತಖಂಡದಲ್ಲಿ ರಾಮಸೇತುವಿನವರೆಗೂ ಹಾಲಿನ ಪ್ರವಾಹದಂತೆ ಬೆಳ್ಳಗೆ ಪ್ರಕಾಶಿಸುತ್ತಿರುವ ಕ್ಷೀರಸಾಗರದಂತೆ ಮಂದರಪರ್ವತಕಣಿವೆಯವರೆಗೂ ತನ್ನ ಅಭಿವೃದ್ಧಿಗೆ ಒಂದೇ ಕಾರಣವಾಗಿರುವ ಚಂದ್ರ ಸೂರ್ಯರ ಪರ್ಯಂತ ಪ್ರಸಿದ್ಧರಾಗಿರುವ ಪೂರ್ವ ಪಶ್ಚಿಮ ಪರ್ವತಗಳ ಪರ್ವತಭೂಮಿಗಳಿರುವ ಶಿಖರಗಳವರೆಗೂ ಕಾಲದವರೆಗೂ ವಿಕ್ರಾಂತತುಂಗನಾದ ಅರ್ಜುನನು ಈ ಭೂಮಂಡಲವನ್ನು ರಕ್ಷಿಸಲಿ, ೨೮. ಯಾವ ಗುಣಾರ್ಣವನೆಂಬ ಬಿರುದುಳ್ಳ ಅರಿಕೇಸರಿರಾಜನ (ಅರ್ಜುನನ) ಪರಾಕ್ರಮವು ಬಲ ಮತ್ತು ಎಡಗೈಗಳಿಂದ ಪ್ರಯೋಗಮಾಡುವ ಕ್ರಮವಾದ ಗರ್ವದಿಂದ ಕೂಡಿ ಕಿವಿಯವರೆಗೂ ಸೆಳೆಯುವ ಬಾಣಗಳೆಂಬ ಶತ್ರುರಾಜರ ಮದ್ದಾನೆಗಳ ಕುಂಭಸ್ಥಳದಲ್ಲಿ ಶಕ್ತಿಯುತವಾದ ಉಳಿಗಳ ಸಮೂಹದಿಂದ ಅಕ್ಷರಗಳಿಂದ ಕೊರೆಯಲ್ಪಟ್ಟಿರುವ ಶಾಸನಫಲಕಗಳು ಪ್ರಕಾಶ ಪಡಿಸುತ್ತಿರುವ ಆ ಅರಿಕೇಸರಿಯ ಯುದ್ಧಪ್ರಶಸ್ತಿಯು ಪುನರುಕ್ತವಾಗುತ್ತಿರಲಿ. ೨೯. ಗುಣಾರ್ಣವಮಹೀಪಾಲನ ಯುದ್ಧಭೂಮಿಯಲ್ಲಿ ಅವನ ಹರಿತವಾದ ನೂರಾರು ಬಾಣಗಳಿಂದ ಹತವಾದ ಶತ್ರುರಾಜರ ಆನೆಗಳು ಸಪ್ತ ದ್ವೀಪಗಳನ್ನೂ ಗೆಲ್ಲಬೇಕೆಂಬ ಆಶೆಯುಳ್ಳ ಇಂದ್ರನಿಗೆ ಹೆದರಿ ನಡುಗುತ್ತ ಸಮುದ್ರಪ್ರವೇಶಮಾಡುತ್ತಿರುವ ಕುಲಪರ್ವತಗಳ ರಾಜಿಯ ಹಾಗಿವೆ. ೩೦. ಪರಸ್ಪರ ವಿರೋಧಿಗಳಾದ ವಿನಯ ಮತ್ತು ಯವ್ವನಗಳನ್ನೂ ಸಹಜವಾಗಿಯೇ ಹುಟ್ಟಿರುವ ಅಸೂಯೆಯಿಂದ ಕೂಡಿದ
Page #699
--------------------------------------------------------------------------
________________
೬೯೪) ಪಂಪಭಾರತಂ
ವli ಅಂತಾತಂ ಪೊಗಟ್ಟು ಮಾಣ್ಣ ನಂತರದೊಳೆತ್ತಿಕೊಂಡ ಶ್ರುತಿಯಂ ಪಲ್ಲಟಿಸದೆಯುಂ ಮತ್ತು ಪರಿಚ್ಛೇದಂಗಳನಳದುಮೊಟ್ಟಜೆಯ ರಾಜಿಯಿಂ ಕಣ್ಣಳಿಂಚರದೊಳಂ ಪೊಂಪುಟವೊಗೆ ಮಂಗಳಪಾಠಕರಿರ್ವರೋಂದೆ ಕೂರಲೊಳಿಂತಂದು ಮಂಗಳವೃತ್ತಂಗಳನೋದಿದರ್
ಶಾll |
ರಂಗತ್ತುಂಗತರಂಗಭಂಗುರಲಸದ್ದಂಗಾಜಳಂ ನರ್ಮದಾ ಸಂಗ ಸ್ವಚ್ಛವನಂ ಪ್ರಸಿದ್ಧ ವರದಾ ಪುಣ್ಯಾಂಬು ಗೋದಾವರೀ | ಸಂಗತೂರ್ಜಿತವಾರಿಸಾರ ಯುಮುನಾ ನೀಳೂರ್ಮಿ ನೀರಂ ಭುಜೋ ತುಂಗಂಗೀಗರಿಗಂಗ ಮಂಗಳಮಹಾಶ್ರೀಯಂ ಜಯಶ್ರೀಯುಮಂ || ೩೧
ಮll
ಶ್ರುತದೇವೀವಚನಾಮೃತಂ ಶ್ರುತಕಥಾಳಾಪಂ ಶ್ರುತಸ್ಕಂಧ ಸಂ ತತಿ ಶಶ್ವಯ್ಸು ತಪಾರಗ ಶ್ರುತಿ ಮಹೋರ್ಮ್ಯುಲ್ಲಾಸಿವಾರಾಶಿವಾ | ರಿತಧಾತಳಗೀತಿ ನಿರ್ಮಳಯಶಂಗಾರೂಢಸರ್ವಜ್ಞ ಭೂ ಪತಿಗೊಲ್ದಾಗಳುಮಾಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ || ೩೨
ಸರಸ್ವತಿ ಮತ್ತು ಲಕ್ಷಿಗಳನ್ನೂ ಹಾಗೆಯೇ ಪರಸ್ಪರ ನಾಶಕಾರಿಗಳಾದ ದಯೆ ಮತ್ತು ಶೌರ್ಯಗಳನ್ನೂ ಬಹುಕಾಲವಾದ ಮೇಲೆ ಮೊತ್ತ ಮೊದಲನೆಯ ಸಲ ಅರಿಕೇಸರಿ ರಾಜನಲ್ಲಿ ಮಾತ್ರ ಒಟ್ಟಿಗೆ ನೋಡಬಹುದಾಗಿದೆ. ವ|| ಹಾಗೆ ಅವನು ಹೊಗಳಿ ನಿಲ್ಲಿಸಿಯಾದ ಮೇಲೆ ಶಾಸ್ತ್ರವನ್ನು (ವೇದಾಕ್ಷರಗಳನ್ನು ವ್ಯತ್ಯಾಸಮಾಡದೆಯೂ (ಸುಸ್ವರವಾಗಿ) ನಿಲ್ಲಿಸಬೇಕಾದ ಸ್ಥಳಗಳನ್ನೂ ತಿಳಿದೂ ಸಂಪೂರ್ಣಾರ್ಥ ದ್ಯೋತಕವಾಗುವ ಹಾಗೂ ಕಂಡಂತೆ ಇನಿದಾದ ಸ್ವರಗಳಿಂದ ಕೂಡಿ ರೋಮಾಂಚ ವಾಗುವ ಹಾಗೂ ಇಬ್ಬರು ಮಂಗಳಪಾಠಕರು ಒಕ್ಕೊರಲಿನಿಂದ ಮಂಗಳಸ್ತೋತ್ರವನ್ನು ಪಠಿಸಿದರು. ೩೧. ನರ್ತನ ಮಾಡುತ್ತಿರುವ ಅಲೆಗಳಿಂದ ವಿಭಾಗವಾಗುತ್ತಿರುವ (ಘರ್ಷಣೆಯನ್ನು ಹೊಂದುತ್ತಿರುವ) ಪ್ರಕಾಶಮಾನವಾದ ಗಂಗಾಜಲವೂ, ಸ್ವಚ್ಛವಾಗಿರುವ ನರ್ಮದಾನದಿಯ ನೀರೂ ಪ್ರಸಿದ್ಧವೂ ಪವಿತ್ರವೂ ಆದ ವರದಾನದಿಯ ನೀರೂ ಶ್ರೇಷ್ಠವಾದ ಗೋದಾವರಿಯ ನೀರೂ ಸಾರವತ್ತಾದ ಯಮುನಾನದಿಯ ನೀಲಿಯ ಬಣ್ಣದ ಅಲೆಗಳಿಂದ ಕೂಡಿದ ನೀರೂ ಇವೆಲ್ಲವೂ ಎತ್ತರವಾದ ಭುಜಗಳುಳ್ಳ ಅರಿಗನಿಗೆ (ಅರ್ಜುನನಿಗೆ) ಮಂಗಳಕರವಾದ ಸಂಪತ್ತನ್ನೂ ಜಯಲಕ್ಷ್ಮಿಯನ್ನೂ ಕೊಡಲಿ. ೩೨. ಸರಸ್ವತಿ ವಚನಗಳೆಂಬ ಅಮೃತವೂ ಪುರಾಣಸಿದ್ಧವೂ ಆದ ಕಥಾಸಮೂಹಗಳೂ ಜಿನಾಗಮಗಳೂ ಜಪ ವೇದ ಸಮೂಹಗಳೂ ಅನಂತವಾದ ವೇದಗಳಲ್ಲಿ ಪಂಡಿತರಾದವರ ಜ್ಞಾನಗಳೆಂಬ ದೊಡ್ಡ ಅಲೆಗಳಿಂದ ಸಮುದ್ರದಿಂದ ಪರಿವೃತರಾದ ಭೂಮಿಯ ಸಮುದ್ರಗೀತೆಗಳೂ ಇವೆಲ್ಲವೂ ನಿರ್ಮಲ ಕೀರ್ತಿಯುಳ್ಳ ಆರೂಢಸರ್ವಜ್ಞನೆಂಬ ಬಿರುದುಳ್ಳ ಅರಿಕೇಸರಿ ರಾಜನಿಗೆ (ಅರ್ಜುನನಿಗೆ) ಪ್ರೀತಿಯಿಂದ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ
Page #700
--------------------------------------------------------------------------
________________
ಚತುರ್ದಶಾಶ್ವಾಸಂ / ೬೯೫ ಶಾll ಕೈಲಾಸಂ ನಿಷಧಾಧಿಪಾಂಗ ನಿಕಟಕ್ಕೊಣೀಧರಂ ನೀಳ ಕು
ಳಂ ಕಂದಮಹೀಧರಂ ಶಿಖರನಾಮೋದ್ಯನ್ಮಗಂ ಪ್ರಸ್ತುರ || ತಾಳೇಯಾಚಲಮಿಾತನೆಮ್ಮವೊಲಿಳಾಧ್ರನ್ನಾಥನೆಂದಿ೦ತಿಳಾ
ಪಾಳಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ || ೩೩ ಮಃ | ಜಳಧಿ ದ್ವೀಪ ರಸಾತಳಾಂಬರ ಕುಲಾಧೀಂದ್ರಂಗಳೊರಂತೆ ತ
ಳಮುದ್ರತಟಕಂಗಳಾವಹ ಮಹಾದ್ರವಂಗಳೂರಂತ ಮಂ | ಗಳಕಾರ್ಯಂಗಳನಿತ್ತು ಮತ್ತೆ ಮಣಿಭೂಷಾತುಂಗರತ್ನಾಂಶು ಪಾ ಟಳಿತಂಗೀಗರಿಗಂಗೆ ಮಂಗಳ ಮಹಾಶ್ರೀಯಂ ಜಯಶ್ರೀಯುಮಂ || ೩೪ ನಯನಾನಂದ ಮೃಗಾಂಕಬಿಂಬಮುದಯಂಗೆಯ್ಯರ್ಕಬಿಂಬಂ ಮನಃ ಪ್ರಯಲಕ್ಷ್ಮಿ ವದನೇಂದು ಬಿಂಬಮಖಿಲ ಕ್ಷಾ ದವೀಪವಾರ್ಧಿಪ್ರಮೋ | ದ ಯಶೋಬಿಂಬಮುದಗ್ರದಿಕ್ಕರಿಕರಾಕಾರೋಲ್ಲಸಾಹುಗೀ ಪ್ರಿಯಗಳ್ಳಂಗೊಸದೀಗ ಮಂಗಳಮಹಾಶ್ರೀಯಂ ಜಯಶ್ರೀಯುಮಂ || ೩೫
ವ| ಎಂದು ಪೊಗಟ್ಟು ಮಾಣ್ಣ ನಂತರದೊಳ್ ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜಾದಿ ಮಹಾಮುನಿಪತತಿಗಳ್ ಬಂದು ನಿಜಕಮಂಡಲುಜಲಂಗಳೊಳ್ ಬೆರಸಿದ ಧವಳಾಕ್ಷತಂಗಳಂ ತಳಿದು
ಸರ್ವದಾ ಕೊಡಲಿ-೩೩. ಕೈಲಾಸ ಪರ್ವತ, ನಿಷಧಪರ್ವತ ಮತ್ತು ಅಂಗದೇಶಕ್ಕೆ ಸಮೀಪವಾದ ಪರ್ವತ, ನೀಲಗಿರಿಯೆಂಬ ಪರ್ವತ, ಕಂದವೆಂಬ ಪರ್ವತ, ಶಿಖರವೆಂಬ ಪರ್ವತ ಎತರವೂ ಪ್ರಕಾಶವೂ ಆದ ಹಿಮವತ್ಸರ್ವತ ಇವೆಲ್ಲ ಅರಿಕೇಸರಿಯೂ ನಮ್ಮ ಹಾಗೆಯೇ ರಾಜಾಧಿರಾಜ, ಚಕ್ರವರ್ತಿ (ಇಳೆಯನ್ನು ಧರಿಸಿರುವವನು) ಎಂದು ಭೂಪಾಲನಾದ ಅರಿಕೇಸರಿಗೆ (ಅರ್ಜುನನಿಗೆ) ಮಂಗಳ ಮಹಾಶ್ರೀಯನ್ನೂ ಜಯಶ್ರೀಯನ್ನೂ ಅನುಗ್ರಹಿಸಲಿ. ೩೪. ಸಮುದ್ರ, ದ್ವೀಪ, ಪಾತಾಳ, ಆಕಾಶ ಮತ್ತು ಕುಲಪರ್ವತಗಳು ತಮ್ಮಲ್ಲಿರುವ ಅಮೂಲ್ಯವಾದ ವಸ್ತುಗಳನ್ನು ಒಂದೇ ಸಮನಾದ ಮಂಗಳಕಾರ್ಯಗಳನ್ನು ಪಾಟಳಕಾಂತಿಯಿಂದ ಪ್ರಕಾಶಮಾನವಾದ ಅರಿಗಂಗೆ ಕೊಟ್ಟು ಮಂಗಳಕಾರ್ಯಗಳನ್ನೂ ಜಯಶ್ರೀಯನ್ನೂ ದಯಪಾಲಿಸಲಿ. ೩೫. ಕಣ್ಣುಗಳಿಗಾನಂದವನ್ನುಂಟುಮಾಡುವ ಚಂದ್ರಬಿಂಬವೂ ಬಾಲಸೂರ್ಯನ ಬಿಂಬವೂ ಮನಸ್ಸಿಗೆ ಪ್ರಿಯಳಾದ ಲಕ್ಷ್ಮೀದೇವಿಯ ಮುಖಚಂದ್ರಬಿಂಬವೂ ಸಮಸ್ತವಾದ ಭೂಮಿ, ದ್ವೀಪ, ಮತ್ತು ಸಮುದ್ರಗಳಿಗೆ ಸಂತೋಷವನ್ನುಂಟುಮಾಡುವ ಯಶೋಬಿಂಬವೂ (ಕೀರ್ತಿಸಮೂಹವೂ) ದೀರ್ಘವಾದ ದಿಗ್ಗಜಗಳ ಸೊಂಡಿಲುಗಳ ಆಕಾರವನ್ನು ಪ್ರಕಾಶಮಾನವಾದ ಬಾಹುಗಳನ್ನು ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಅರಿಕೇಸರಿಗೆ (ಅರ್ಜುನನಿಗೆ) ಸಂತೋಷಿಸಿ ಮಂಗಳಮಹಾಶ್ರೀ ಯನ್ನೂ ಜಯಶ್ರೀಯನ್ನೂ ಕೊಡಲಿ ವ|| ಎಂದು ಹೊಗಳಿ ನಿಲ್ಲಿಸಿಯಾದಮೇಲೆ ವ್ಯಾಸ ಕಶ್ಯಪ ವಿಶ್ವಾಮಿತ್ರ ಭಾರದ್ವಾಜರೇ ಮೊದಲಾದ ಮಹಾಮುನಿಗಳ ಸಮೂಹಗಳು ಬಂದು ತಮ್ಮ ಕಮಂಡಲುಗಳ ನೀರಿನಿಂದ ಬೆರಸಿದ ಬಿಳಿಯ
Page #701
--------------------------------------------------------------------------
________________
೬೯೬ | ಪಂಪಭಾರತಂ ಮll ಅರಿ ಭೂಪಾಳ ದವಾನಳಂ ಹರಿ ನಿನ್ನುಗ್ಯಾಸಿ ಧಾರಾಂಬು ಶೀ
ಕರದಿಂ ಮುಗೆ ದಾನವರ್ಷ ಸಲಿಲಂ ಕೊಳರ್ಥಿ ಸಸ್ಯಕ್ಕೆ ಕಿ | qರಿಯರ್ ಪಾಡುಗೆ ನಿನ್ನದೊಂದು ಪಲವುಂ ಬಣ್ಣಂಗಳಂ ಮೇರು ಮಂ
ದರ ಕೈಳಾಸ ಮಹೇಂದ್ರ ನೀಳ ನಿಷಧಾದೀಂದ್ರೂಪಕಂಠಂಗಳೊಳ್ || ೩೬
ವ|| ಎಂದು ಪರಸಿ ತಮ್ಮ ನಿವಾಸಂಗಕ್ಕೆ ಪೋದರಾಗಳ್ ಧರ್ಮನಂದನನೆನಗೆ ನಿನ್ನ ರಾಜ್ಯಾಭಿವೃದ್ಧಿಯಂ ನೋಡುತಿರ್ಪುದುಂ ಮುಮುಕ್ಷು ವೃತ್ತಿಯೊಳಿರ್ಪುದುಮಲ್ಲದೆ ಪೆಜತೇನುಂ ಬಾವಿಯಲ್ಲೊಂದು ಭೀಮ ನಕುಳ, ಸಹದೇವರ್ಕಳೆ ದುರ್ಯೋಧನನ ತಮ್ಮನ ಯುಯುತ್ಸುಗಮವ ಬೇಡಿದ ನಾಡುಗಳನೆ ಕುಡಿಸಿ ಸಂತಸಂಬಡಿಕೆ ಪುರುಷೋತ್ತಮನಂ ವಿಬುಧವನಜವನಕಳಹಂಸನುಮಿಂತೆಂದಂಕಂ|| ನಿನ್ನ ದಯೆಯಿಂದಮರಿ ನೃಪ
ರನ್ನೇ ಕೊಂದೆಮಗೆ ಸಕಳ ರಾಜ್ಯಶ್ರೀಯುಂ | ನಿನ್ನ ಬಲದಿಂದ ಸಾರ್ದುದು
ನಿನ್ನುಪಕಾರಮನದೇತಳ್ ನೀಗುವೆನೋ || ವ| ಎಂದು ಮುಕುಂದನನನುನಯ ವಚನ ರಚನಾ ಪರಂಪರೆಗಳಿಂ ಸಂತಸಂ ಬಡೆ ನುಡಿದು ಸಾತ್ಯಕಿವೆರಸನರ್ವ್ಯವಸ್ತುವಾಹನ ಸಹಿತಂ ದ್ವಾರಾವತಿಗೆ ಕಳಿಸಿ ಸಕಳಭುವನತಳ ಭಾರಮನವಯವದಿಂ ತಾಳಿರ್ದುದಾತ್ತವೃತ್ತಿಯೊಳುದಾತ್ತನಾರಾಯಣನುಂ ಭುವನ
೩೭
ಅಕ್ಷತೆಗಳನ್ನು ಚೆಲ್ಲಿ (ಆಶೀರ್ವಾದಪೂರ್ವಕ ತಲೆಯ ಮೇಲೆ ಎರಚಿ) ಹರಸಿದರು. ೩೬. ಎಲೈ ಅರ್ಜುನನೇ ಶತ್ರುರಾಜರೆಂಬ ಕಾಡುಕಿಚ್ಚು ನಿನ್ನ ಭಯಂಕರವಾದ ಕತ್ತಿಯ ಅಲಗೆಂಬ ನೀರಿನ ಹನಿಗಳಿಂದ (ಅಸಿಧಾರೆಯ ಹನಿಗಳಿಂದ) ಅಳಿದುಹೋಗಲಿ. ಯಾಚಕರೆಂಬ ವೃಕ್ಷಕ್ಕೆ ನಿನ್ನ ದಾನವೆಂಬ ಮಳೆಯು ಸುರಿಯಲಿ. ನಿನ್ನ ಸ್ತುತಿರೂಪವಾದ ಅನೇಕ ಹಾಡುಗಳನ್ನು ಕಿನ್ನರಿಯರು ಮೇರು, ಮಂದರ, ಕೈಲಾಸ, ಮಹೇಂದ್ರ, ನಿಷಧ ಪರ್ವತಗಳ ಸಮೀಪ ಪ್ರದೇಶಗಳಲ್ಲಿ (ತಪ್ಪಲಿನಲ್ಲಿ ಹಾಡಲಿ. ವ|| ಎಂಬುದಾಗಿ ಆಶೀರ್ವಾದಮಾಡಿ ತಮ್ಮ ಮನೆಗಳಿಗೆ ಹೋದರು. ಆಗ ಧರ್ಮರಾಯನು ಅರ್ಜುನ! ನಿನ್ನ ರಾಜ್ಯಾಭಿವೃದ್ಧಿಯನ್ನು ನೋಡುತ್ತಿರುವುದೂ ಮೋಕ್ಷೇಚ್ಚುಗಳಾದ ತಪಸ್ವಿಗಳ ವೃತ್ತಿಯಲ್ಲಿರುವುದೂ ಅಲ್ಲದೆ ನನಗೆ ಬೇರೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿ ಹಾಗೆಯೇ ಭೀಮ ನಕುಲ ಸಹದೇವರುಗಳಿಗೂ ದುರ್ಯೊಧನನ ತಮ್ಮನಾದ ಯುಯುತ್ಸುವಿಗೂ ಅವರು ಕೇಳಿದ ನಾಡುಗಳನ್ನು ಕೊಡಿಸಿ ಸಂತೋಷಪಡಿಸಿದನು. ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು, ೩೭. ನನ್ನ ಕೃಪೆಯಿಂದ ಶತ್ರುರಾಜರನ್ನು ಸಂಪೂರ್ಣವಾಗಿ ಕೊಂದ ನಮಗೆ ಸಕಳ ರಾಜ್ಯಸಂಪತ್ತೂ ನಿನ್ನ ಶಕ್ತಿಯಿಂದಲೇ ಕೈಸೇರಿತು. ನಿನ್ನ ಸಹಾಯವನ್ನು ಯಾವುದರಲ್ಲಿ ತೀರಿಸಲಿ ವ|| ಎಂದು ಕೃಷ್ಣನನ್ನು ಪ್ರೀತಿಯುಕ್ತವಾದ ಮಾತುಗಳ ಸಮೂಹದಿಂದ ಸಂತೋಷಪಡುವ ಹಾಗೆ ಮಾತನಾಡಿ ಸಾತ್ಯಕಿಯೊಡನೆ ಬೆಲೆಯೇ ಇಲ್ಲದ ಅನೇಕ ವಸ್ತುವಾಹನಗಳ ಸಹಿತವಾಗಿ ದ್ವಾರಾವತಿಗೆ ಕಳುಹಿಸಿದನು. ಸಮಸ್ತವಾದ ಭೂಮಂಡಲದ ಭಾರವನ್ನೂ ಸುಲಭವಾಗಿ ಧರಿಸಿ
Page #702
--------------------------------------------------------------------------
________________
ಚತುರ್ದಶಾಶ್ವಾಸಂ | ೬೯೭ ಭವನೋದರದೊಳ್ ಪಸರಿಸಿದ ತೇಜದೋಳ್ ಪ್ರಚಂಡ ಮಾರ್ತಂಡನುಂ ಆವೆಡೆಯೋಳಮಸ ಮಾನಮನಿಸಿದ ಮಹಾಮಹಿಮೆಯೋಳುದಾರಮಹೇಶ್ವರನುಂ ನಳ ನಹುಷ ಮಾಂಧಾತರಂ ಮಸುಳೆವಂದ ನೆಗಟಿಯೊಳ್ ಮನುಜಮಾಂಧಾತನುಂ ತ್ರಿಣೇತ್ರನುಮನಸುಂಗೊಳಿಸಿದ ಸಾಹಸದೊಳ್ ಕದನತ್ರಿಣೇತ್ರನುಂ ಅಚಳಿತ ಪ್ರತಿಜ್ಞೆಯೋಳ್ ಪ್ರತಿಜ್ಞಾ ಗಾಂಗೇಯನುಂ ರಾಮನುಮುನೇಟಿಸಿದ ಸಾಹಸದೊಳಕಳಂಕರಾಮನುಂ ಬೇಡಿದರ ಬೇಡಿದುದಂ ಮಾರ್ಕೊಳ್ಳವುದುಂ ಪ್ರತ್ಯಕ್ಷಜೀಮೂತವಾಹನನುಂ ಚತುರ್ದಶ ಭುವನಂಗಳೊಳ್ ತನಗೆ ಮಾರ್ಮಲೆವರಿಲ್ಲಪುದಂ ಜಗದೇಕಮಲ್ಲನುಂ ಉರ್ಕಿ ಬಂದು ಮೇಲ್ತಾಯ ಮಾರ್ವಲಂಗಳಂ ತನ್ನ ಬಾಳ ಬಾಯೊಳಾಡಿದುದಂ ಪರಸೈನ್ಯಭೈರವನುಂ ಅರಾತಿ ಗಜಘಟೆಗಳೆನಿತು ಬಂದೊಡ್ಡಯುಂ ತನ್ನೊಂದಮಂದಧ್ವನಿಗೂಡೂಡ ದೋಡುವುದಣಿಂ ವೈರಿಗಜಘಟಾವಿಘಟನನುಂ ತನಗಿದಿರನದಿರದೊಡ್ಡಿದ ವಿದ್ವಿಷ್ಟ ಬಲಂ ನೋಡೆ ನೋಡೆ ಕರಗುವುದಣಿಂ ವಿದ್ವಿಷ್ಟ ವಿದ್ರಾವಣನುಂ ಅರಾತಿ ವನ ಗಹನಮನಳುರ್ದು ಕೊಳ್ಳುದಳೆಂದಮರಾತ ಕಾಳಾನಳನುಂ ಪಗೆವರೆಂಬ ಕುರಂಗಂಗಳನೊಂದೊಂದeಳೊಂದಲೀ ಯದಬ್ಬಟ್ಟುವುದಳೆಂ ರಿಪುಕುರಂಗಕಂಠೀರವನುಂ ವಿಕ್ರಾಂತದೊಳ್ ತರ್ದಲ್ಲಿ ತಾನೆ ಪಿರಿಯನಪ್ಪುದಂ ವಿಕ್ರಾಂತ ತುಂಗನುಂ ಆವೆಡೆಯೊಳಂ ವಿಕ್ರಮಂ ಕಮ್ಮೆನಿಸಿದುದಳೆಂ ಪರಾಕ್ರಮಧವಳನುಂ ಎಂತಪ್ಪ ಸಂಗ್ರಾಮದೊಳಂ ಪೋಗದೆ
ಉದಾತ್ತ ವೃತ್ತಿಯಲ್ಲಿದ್ದು ಉದಾತ್ತನಾರಾಯಣನೂ ಭುವನೋದರದಲ್ಲಿ (ಪ್ರಪಂಚವೆಂಬ ಮನೆಯ ಒಳಭಾಗದಲ್ಲಿ ಪ್ರಸರಿಸಿದ ತೇಜಸ್ಸಿನಿಂದ ಪ್ರಚಂಡಮಾರ್ತಂಡನೂ (ಅತ್ಯಂತ ಕಾಂತಿಯುಕ್ತವಾದ ಸೂರ್ಯ) ಯಾವ ಕಡೆಯಲ್ಲಿಯೂ ಸಮಾನವೇ ಇಲ್ಲದವನು ಎಂಬ ಮಹಿಮೆಯಿಂದ ಉದಾರಮಹೇಶ್ವರನೂ ನಳನಹುಷಮಾಂಧಾತರನ್ನು ಕಾಂತಿಹೀನಮಾಡಿದ ಪ್ರಸಿದ್ದಿಯಿಂದ ಮನುಜಮಾಂಧಾತನೂ ಮುಕ್ಕಣ್ಣನನ್ನೂ ಆಶ್ಚರ್ಯಪಡಿಸಿದ ಸಾಹಸದಿಂದ ಕದನತ್ರಿಣೇತ್ರನೂ ಚಲಿಸದೇ ಇದ್ದ ಪ್ರತಿಜ್ಞೆಯಿಂದ ಪ್ರತಿಜ್ಞಾಗಾಂಗೇಯನೂ ರಾಮನನ್ನೂ ಹಿಯ್ಯಾಳಿಸಿದ ಸಾಹಸದಿಂದ ಅಕಳಂಕ .ರಾಮನೂ ಬೇಡಿದವರಿಗೆ ಅವರು ಬೇಡಿದುದನ್ನು ಪ್ರತಿಮಾತನಾಡದೆ ಕೊಡುವುದರಿಂದ ಪ್ರತ್ಯಕ್ಷ ಜೀಮೂತವಾಹನನೂ ಹದಿನಾಲ್ಕು ಲೋಕಗಳಲ್ಲಿಯೂ ತನಗೆ ಪ್ರತಿಭಟಿಸುವವರಿಲ್ಲದುದರಿಂದ ಜಗದೇಕಮಲ್ಲನೂ ಕೊಬ್ಬಿ ಬಂದು ಮೇಲೆ ಬೀಳುವ ಪ್ರತಿಸೈನ್ಯವನ್ನು ತನ್ನ ಕತ್ತಿಯ ಮೊನೆಯಿಂದ ನಾಶಪಡಿಸಿದುದರಿಂದ ಪರಸೈನ್ಯ ಭೈರವನೂ ಶತ್ರುಪಕ್ಷಗಳ ಆನೆಯ ಸಮೂಹವು ಎಷ್ಟು ಬಂದು ಚಾಚಿದರೂ ತನ್ನ ಒಂದು ಗರ್ಜನೆಗೆ ಗುಂಪು ಚೆದುರಿ ಓಡುವುದರಿಂದ ವೈರಿಗಜಘಟಾವಿಘಟನನೂ ತನಗೆ ಇದಿರಾಗಿ ಹೆದರದೆ ಬಂದು ಒಡ್ಡಿದ ಶತ್ರುಸೈನ್ಯವು ನೋಡುನೋಡುತ್ತಿರುವಾಗಲೇ ಕರಗುವುದರಿಂದ ವಿದ್ವಿಷ್ಟ ವಿದ್ರಾವಣನೂ ಶತ್ರುಗಳೆಂಬ ಕಾಡಿನ ಒಳಭಾಗವನ್ನು ವ್ಯಾಪಿಸಿ ಸುಡುವುದರಿಂದ ಅರಾತಿ ಕಾಳಾನಳನೂ ಹಗೆಗಳೆಂಬ ಜಿಂಕೆಗಳನ್ನು ಒಂದೂ ಬಿಡದಂತೆ ಬೆನ್ನಟ್ಟಿ ಕೊಲ್ಲುವುದರಿಂದ ಅವಕಾಶವಿಲ್ಲದೆ ಓಡಿಸುವುದರಿಂದ ರಿಪು ಕುರಂಗಕಂಠೀರವನೂ ಪರಾಕ್ರಮದಲ್ಲಿ ತಾನಿದ್ದ ಜಾಗದಲ್ಲಿಯೇ ಹಿರಿಯನಾದುದರಿಂದ ವಿಕ್ರಾಂತತುಂಗನೂ, ಎಲ್ಲ ಕಡೆಯಲ್ಲಿಯೂ ಪರಾಕ್ರಮವೇ ತನಗೆ ಯೋಗ್ಯವಾದುದೆಂದು
Page #703
--------------------------------------------------------------------------
________________
೬೯೮ / ಪಂಪಭಾರತಂ ನಟ್ಟು ನಿಲ್ಕುದಲಿಂ ಸಮರೈಕಮೇರುವುಂ ಗೊಜ್ಜಿಗನೆಂಬ ಸಕಳ ಚಕ್ರವರ್ತಿ ಮುಳಿಯ ತನಗೆ ಶರಣಾಗತನಾದ ವಿಜಯಾದಿತನಂ ಕಾದ ಬಾಳನದೋಳ್ ಶರಣಾಗತ ಜಳನಿಧಿಯುಂ ವಿನಯಮೇ ತನಗೆ ಭೂಷಣಮಾಗೆ ಮಾಡುವುದಂ ವಿನಯ ಭೂಷಣನುಂ ಲೋಕಕ್ಕೆಲ್ಲಮಸಾಧಾರಣಮಪ್ಪ ದಾನಗುಣದೊಳ ಲೋಕೈಕಕಲ್ಪದ್ರುಮನುಂ ಎನಿತಾನುಂ ಗಜಗಮನಂಗಳಂ ತಾನೆ ಸಮದನಪ್ಪುದಂ ಗಜಗಮನರಾಜಪುತ್ರನುಂ ಎಂತಪ್ಪ ಗರ್ವವ್ಯಾಳಿಯುಮನತಿವರ್ತಿಗಳುಮನಾರೂಢದೊಳ್ ತನಗಳವಡುವುದಲಿಂದಾರೂಢ ಸರ್ವಜ್ಞನುಂ ಪರಮಾತ್ಮನಂತೆ ಲೋಕಾಲೋಕದ ವಸ್ತುಗಳುಮಂ ಕರತಳಾಮಳಕವಾಗುವುದರಿಂ ನೃಪ ಪರಮಾತ್ಮನುಂ ಎಂತಪ್ಪ ಪಂಡಿತರ ಗೋಷ್ಠಿಯೊಳಂ ತಾನೆ ಸೊಗಯಿಸುವುದು ವಿಬುದ ವನಜವನಕಳಹಸನುಂ ಕೆಯಯದೆ ಸೊಗಯಿಸುವನಪದ ಸಹಜಮನೋಜನುಂ ಎಂತಪ್ಪ ಬರ್ದೆಯರುಮಂ ಬಗೆಗೆ ವರಿಸುವ ತಕ್ಕಿಲ್ ಸುರತಮಕರಧ್ವಜನುಂ ಕೂರ್ಪ ಕೂರದರ ಪಡೆಗಳೆರಡುಂ ತನ್ನನೆ ಮೆಚ್ಚುವುದುಂ ಪಡೆಮಚ್ಚೆಗಂಡನುಂ ಎಂತಪ್ಪ ಮಾರ್ವಲಂಗಳುಮಂ ನೋಡುತ್ತ ಗೆಲ್ಲುದಂ ನೋಡುತ್ತೆ ಗೆಲ್ಯನುಂ ಮಹಾ ಭಾರಾವತಾರದೊಳತಿರಥ ಮಹಾರಥ ಸಮರರ್ಥಾರ್ಧರಥರ್ಕಳಂ ಪಡಲ್ವಡಿಸುವುದeಂ ಸಾಹಸಾರ್ಜುನನುಮಮರೇಂದ್ರನೊಳರ್ಧಾಸನಮತದ ಮಹಾ ಮಹಿಮೆಯೊಳ್ ಮಹಿಮಾರ್ಣವನುಮರಿಕರಿಗಳಂ ಪಡಲ್ವಡಿಸುವ ಬೀರದೊಳರಿ ಕೇಸರಿಯುಮಾಗಿ
ಅಂಗೀಕರಿಸುವುದರಿಂದ ಪರಾಕ್ರಮಧವಳನೂ ಎಂತಹ ಯುದ್ದದಲ್ಲಿಯೂ ಬಿಟ್ಟುಹೋಗದೆ ಸ್ಥಿರವಾಗಿ ನಿಲ್ಲುವುದರಿಂದ ಸಮರೈಕಮೇರುವೂ ಗೊಜ್ಜಿಗನೆಂಬ ಸಕಳಚಕ್ರವರ್ತಿಯ ಕೋಪಕ್ಕೆ ಪಾತ್ರನಾದ ವಿಜಯಾದಿತ್ಯನನ್ನು ರಕ್ಷಿಸಿದ ಪರಾಕ್ರಮದಿಂದ (ರಕ್ಷಿಸಿದುದರಿಂದ) ಶರಣಾಗತಜಳನಿಧಿಯೂ ವಿನಯವನ್ನೇ ತನಗೆ ಒಡವೆಯನ್ನಾಗಿ ಮಾಡಿಕೊಂಡಿರುವುದರಿಂದ ವಿನಯಭೂಷಣನೂ ಲೋಕಕ್ಕೆಲ್ಲ ಅಸಾಧಾರಣ ರೀತಿಯದಾಗಿರುವ ದಾನಗುಣದಿಂದ ಲೋಕೈಕ ಕಲ್ಪದ್ರುಮನೂ ಎಷ್ಟೋ ಗಜಶಾಸ್ತ್ರಗಳನ್ನು ತಾನೆ ರಚಿಸಿರುವುದರಿಂದ ಗಜಾಗಮ ರಾಜಪುತ್ರನೂ ಎಂತಹ ಮದ್ದಾನೆಯನ್ನೂ ವಶಕ್ಕೆ ಬರದೇ ಇರುವ ತುಂಟಾನೆಗಳನ್ನೂ ಹತ್ತುವುದರಲ್ಲಿ ಸಮರ್ಥನಾಗಿರುವುದರಿಂದ ಆರೂಢಸರ್ವಜ್ಞನೂ ಪರಮಾತ್ಮನ ಹಾಗೆ ಲೋಕಾಲೋಕ ವಸ್ತುಗಳನ್ನು ಕಯ್ಯಲ್ಲಿರುವ ನೆಲ್ಲಿಯಕಾಯಿನಂತೆ ತಿಳಿದಿರುವುದರಿಂದ ನೃಪಪರಮಾತ್ಮನೂ ಎಂತಹ ವಿದ್ವಾಂಸರ ಸಮೂಹದಲ್ಲಿಯೂ ತಾನೇ ಪ್ರಕಾಶಮಾನವಾಗಿರುವುದರಿಂದ ವಿಬುಧವನಜವನಕಳಹಂಸನೂ ಅಲಂಕಾರಮಾಡಿಕೊಳ್ಳದೆಯೇ ಸುಂದರ ನಾಗಿರುವುದರಿಂದ ಸಹಜಮನೋಜನೂ ಎಂತಹ ಪ್ರೌಢಸ್ತ್ರೀಯರನ್ನೂ ತನ್ನಲ್ಲಿ ಪ್ರೀತಿಮಾಡುವ ಹಾಗೆ ಮಾಡುವ ಯೋಗ್ಯತೆಯಿಂದ ಸುರತಮಕರಧ್ವಜನೂ ಪ್ರೀತಿಸುವ ಮತ್ತು ಪ್ರೀತಿಸದಿರುವ ಎರಡುಸೆನ್ಯಗಳೂ ತನ್ನನ್ನು ಮೆಚ್ಚುವುದರಿಂದ ಪಡೆಮೆಚ್ಚೆಗಂಡನೂ ಎಂತಹ ಪ್ರತಿಸೈನ್ಯವನ್ನೂ ನೋಡುವುದರಿಂದಲೇ ಗೆಲ್ಲುವುದರಿಂದ ನೋಡುತ್ತೆ ಗೆಲ್ಬನೂ ಮಹಾಭಾರತ ಯುದ್ಧದಲ್ಲಿ ಅತಿರಥ ಸಮರಥ ಅರ್ಧರಥರುಗಳನ್ನೂ ಕೆಳಗೆ ಬೀಳುವ ಹಾಗೆ ಮಾಡುವುದರಿಂದ ಸಾಹಸಾರ್ಜುನನೂ ದೇವೇಂದ್ರನೊಡನೆ ಅರ್ಧಾಸನವನ್ನು ಹತ್ತಿದ ಮಹಾಮಹಿಮೆಯಿಂದ ಮಹಿಮಾರ್ಣವನೂ ಶತ್ರುಗಳ ಆನೆಗಳನ್ನು
Page #704
--------------------------------------------------------------------------
________________
ಚಂ|
ಚತುರ್ದಶಾಶ್ವಾಸಂ | ೬೯೯ ಪಸದನವಾವುದಾವ ಋತುವಿಂಗಮರ್ದೋಪುಗುಮಾವ ಪೊದಾ ವಸಕದೊಳೊಂದುಗುಂ ವಿನಯಮಾವಡಗಾವುದು ಚೆಲ್ಲುವತ್ತು ರಂ | ಜಿಸುಗುಮದರ್ಕದಂ ಸಮತಿ ನಿಚ್ಚಲುಮಾ ಬಿಯಮಾ ವಿನೋದಮಾ ಪಸದನಮಾ ವಿಳಾಸದೊಳೊಡಂಬಡೆ ಭೋಗಿಸಿದಂ ಗುಣಾರ್ಣವಂ || ೩೮
ಪಸರಿಸಿ ನೀಳ ತನ್ನ ಜಸದೊಳ್ ಪನೊರ್ವನ ಕೀರ್ತಿ ತಳು ರಂ ಜಿಗೆ ನಗಬಾತನೇಂ ನೆಗಲ್ಲನೆಂಬ ಚಲಂ ಮಿಗೆ ತನ್ನ ಹೆಂಪು ತ | ನೈಸಕಮ ತನ್ನ ವಿಕ್ರಮಮ ತನ್ನ ನೆಗಟಿಯ ತನ್ನ ಮಾತ ತಾ ನೆಸೆವ ಜಗತ್ರಯಕೈನಿಸಿ ಪಾಲಿಸಿದಂ ನೆಲನಂ ಗುಣಾರ್ಣವಂ ||
ಕಂ|| ಆ ಮಳಯಾಚಳ ಹಿಮಗಿರಿ
ಸೀಮಾವನಿತಳಕೆ ಚೆಂಗಿಮಂಡಳದೊಳ್ ಚ | ಊಾವಗಮ ತನಗದೊಂದೂರ್ ನಾಮದೊಳಂ ವೆಂಗಿಪಟು ಕರಂ ಹೊಗಯಿಸುಗುಂ ||
ಅದುವ ವಸಂತಂ ಕೂಟ್ಯೂ ರೊದವಿದ ನಿಡುಗುಂದಿ ಮಿಕ್ಕ ವಿಕ್ರಮ ಪುರವಂ | ಬುದುಮಗ್ರಹಾರ ಸಂಪ ಸ್ಪದವಿಗಳೊಳಮಗ್ರಗಣ್ಯನೂರ್ಜಿತಪುಣ್ಯಂ ||
ಕೆಳಗುರುಳಿಸುವುದರಿಂದ ಅರಿಕೇಸರಿಯೂ ಆಗಿ ೩೯. ಯಾವ ಋತುವಿಗೆ ಯಾವ ಅಲಂಕಾರವೊಪ್ಪುವುದು, ಯಾವ ಹೊತ್ತು ಯಾವ ಕಾರ್ಯಕ್ಕೆ ಒಪ್ಪುತ್ತದೆ ಯಾವ ಸ್ಥಳಕ್ಕೆ ಯಾವ ವಿನಯ (ನೀತಿ) ಸೊಗಸಾಗಿದೆ ಅದಕ್ಕೆ ಅದನ್ನು ಸರಿಯಾಗಿ ಸೇರಿಸಿ (ಹೊಂದಿಸಿಕೊಂಡು) ಪ್ರತಿದಿನವೂ ಆ ವೆಚ್ಚ, ಆ ಸಂತೋಷ, ಆ ಅಲಂಕಾರ, ಆ ವಿಲಾಸಗಳಲ್ಲಿ ಸೇರಿ ಮನೋಹರವಾಗುವ ರೀತಿಯಲ್ಲಿ (ಅರಿಕೇಸರಿಯು) ಗುಣಾರ್ಣವನು ಸುಖವಾಗಿದ್ದನು. ೩೯. ಪ್ರಸರಿಸಿ ಬೆಳೆದ ತನ್ನ ಯಶಸ್ಸಿನೊಡನೆ ಇನ್ನೊಬ್ಬನ ಕೀರ್ತಿ ಸಮಾನವಾಗಿ ಸೇರಿ ಪ್ರಕಾಶಿಸಿದರೆ ಅವನು ಪ್ರಸಿದ್ದನೆ ಎಂಬ ಛಲವು ಹೆಚ್ಚಾಗಿರಲು ತನ್ನ ವೈಭವ, ತನ್ನ ಪರಾಕ್ರಮ, ತನ್ನ ಪ್ರಸಿದ್ದಿ, ತನ್ನ ಮಾತು - ಇವುಗಳೇ ಪ್ರಸಿದ್ದವಾಗಿರುವ ಮೂರು ಲೋಕಗಳಿಗೂ ತಾನೇ ಎನಿಸಿ ಗುಣಾರ್ಣವನು ರಾಜ್ಯವನ್ನು ಪಾಲಿಸಿದನು. ೪೦. ಮಲಯಪರ್ವತದಿಂದ ಹಿಡಿದು ಹಿಮವತ್ಪರ್ವತ ವನ್ನು ಮೇರೆಯಾಗಿ ಉಳ್ಳ ಭೂಭಾಗದಲ್ಲಿ ವೆಂಗಿದೇಶವೇ ಯಾವಾಗಲೂ ಸುಂದರವಾಗಿರುವುದು. ಅದರಲ್ಲಿ ವೆಂಗಿಪಳು ಎಂಬುದು ವಿಶೇಷವಾಗಿ ಶೋಭಿಸುವುದು. ೪೧. ಆ ವೆಂಗಿಪಳುವಿನಲ್ಲಿ ವಸಂತ ಕೊಟ್ಟೂರು ನಿಡುಗುಂದಿ ಅತ್ಯತಿಶಯವಾದ ವಿಕ್ರಮಪುರ ಎಂಬುವ ಅಗ್ರಹಾರಗಳು ಶೋಭಾಯಮಾನವಾಗಿವೆ. ಅಲ್ಲಿಯ ಸಂಪತ್ಪದವಿಗಳಲ್ಲಿ ಅಗ್ರಗಣ್ಯನಾದವನೂ ಅಭಿವೃದ್ದಿಯಾಗುತ್ತಿರುವ
45
Page #705
--------------------------------------------------------------------------
________________
೪೪.
೪
.
೭೦೦) ಪಂಪಭಾರತಂ
ನಯಶಾಲಿ ವತ್ಸ ಗೋತ್ರ ಶ್ರಯಣೀಯನನೇಕ ಸಕಳ ಶಾಸ್ತ್ರಾರ್ಥ ವಿನಿ | : ಶೃಯ ಮತಿ ಕೃತಿ ಮಾಧವ ಸೋ
ಮಯಾಜಿ ಸಲೆ ನೆಗಟ್ಟಿನಾಸಮುದ್ರಂಬರೆಗಂ || ಉ|| ಶಕ ಶಶಾಂಕ ಸೂರ್ಯ ಪವಮಾನರುಮಾತನ ಹೋಮ ಮಂತ್ರ ಚ
ಕ ಕ್ರಮಕಕ್ಕಣಂ ಮಿಡುಕಲಾಗಡ ಶಾಪಮನೀಗುಮಂದ ದಿ| ಕಕ್ರಮುಮಂಜಿ ಬೆರ್ಚಿ ಬೆಸಕೆಯ್ಯುದದಲ್ಲದಗುರ್ವು ಪರ್ವ ಸ ರ್ವತುಯಾಜಿಯಾದನಳವಿಂತುಲು ಮಾಧವಸೋಮಯಾಜಿಯಾ | ೪೩ ಕಂ| ವರ ದಿಗ್ವನಿತೆಗೆ ಮಾಟದ
ಕುರುಳಾ ಭುವನಕಾಂಗಂ ದಲ್ ಕಂಠಾ | ಭರಣಮನೆ ಪರೆದ ತನ್ನ ಧರ ಧೂಮದ ಕರಿದು ಮಾಡಿದಂ ನಿಜಯಶಮಂ || ತತ್ತನಯನಖಿಳ ಕರಿ ತುರ ಗೋತ್ತಮ ಮಣಿ ಕನಕ ಸಾರ ವಸ್ತುವನೆರೆದ | ರ್ಗಿತ್ತು ಸಲ ನಗುನತಿ ಪುರು ಷೋತ್ತಮನಭಿಮಾನಚಂದ್ರನೆನಿಪಂ ಪಸರಿಂ || ಆತಂಗೆ ಭುವನ ಭವನ - ಖ್ಯಾತಂಗೆ ಸಮಸ್ತ ವೇದ ವೇದಾಂಗ ಸಮು | ಜ್ಯೋತಿತ ಮತಿಯುತನುಚಿತ ಪು ರಾತನ ಚರಿತಂ ತನೂಭವ ಕೊಮರಯ್ಯಂ |
೪೬ ಪುಣ್ಯವುಳ್ಳವನೂ ಆದ ೪೨. ವಿನಯಶಾಲಿಯೂ ವತ್ವಗೋತ್ರವನ್ನು ಆಶ್ರಯಿಸಿದವನೂ ಸಕಲ ಶಾಸ್ತ್ರಾರ್ಥಗಳಲ್ಲಿ ಸ್ಥಿರವಾದ ಪಾಂಡಿತ್ಯವುಳ್ಳವನೂ ಆದ ಮಾಧವ ಸೋಮಯಾಜಿಯೆಂಬುವನು ಸಮುದ್ರ ಕಡೆಯವರೆಗೂ ಬಹುಪ್ರಸಿದ್ಧನಾಗಿದ್ದನು. ೪೩. ಇಂದ್ರಚಂದ್ರ ಸೂರ್ಯವಾಯುದೇವತೆಗಳೂ ಆತನ ಹೋಮ ಮಂತ್ರ ಸಮೂಹಕ್ಕೆ ಸ್ವಲ್ಪವೂ ಅಡ್ಡಿ ಮಾಡುತ್ತಿರಲಿಲ್ಲ. ಮಾಡಿದರೆ ಶಾಪವನ್ನು ಕೊಡುತ್ತಾನೆಂದೇ ದಿಂಡಲಗಳೂ ಹೆದರಿ ಸೇವೆ ಮಾಡುತ್ತವೆ. ಅಲ್ಲದೆ ಅವನು ಸರ್ವಕ್ರತುಯೆಂಬ ಯಜ್ಞವನ್ನು ಮಾಡಿದವನು. ಮಾಧವ ಸೋಮಯಾಜಿಯ ಶಕ್ತಿಯಂತಹುದು. ೪೪. ಶ್ರೇಷ್ಠವಾದ ದಿಕ್ಕೆಂಬ ಸೀಗೆ ಕತ್ತಿನ ಆಭರಣವು ಎನ್ನುವ ಹಾಗೆ ವ್ಯಾಪಿಸಿರುವ ತನ್ನ ಯಜ್ಞಧೂಮದಿಂದ (ಹೊಗೆಯಿಂದ) ತನ್ನ ಯಶಸ್ಸನ್ನೂ ಕಪ್ಪಾಗಿ ಮಾಡಿಕೊಂಡನು. ೪೫. ಪುರುಷರಲ್ಲಿ ಅತಿಶ್ರೇಷ್ಠನಾದ ಅವನ ಮಗನಾದ ಅಭಿಮಾನಚಂದ್ರನೆಂಬ ಹೆಸರುಳ್ಳವನು ಬೇಡಿದವರಿಗೆ ತನ್ನ ಸಮಸ್ತ ಆನೆ ಕುದುರೆ ಉತ್ತಮ ರತ್ನ ಚಿನ್ನ ಮೊದಲಾದ ಉತ್ತಮ ವಸ್ತುಗಳನ್ನು ದಾನಮಾಡಿ ವಿಶೇಷ ಪ್ರಸಿದ್ಧನಾದನು. ೪೬. ಭೂಮಂಡಲದಲ್ಲಿ ಪ್ರಸಿದ್ಧನಾದ ಆತನಿಗೆ ಸಕಲ ವೇದಶಾಸ್ತ್ರಗಳಿಂದ ಪ್ರಕಾಶಿಸಲ್ಪಟ್ಟ ಬುದ್ದಿಯುಳ್ಳವನೂ ಉಚಿತವಾದ ಪ್ರಾಚೀನ ಆಚಾರಸಂಪನ್ನನಾದವನೂ
Page #706
--------------------------------------------------------------------------
________________
Coll
ಆ ಕೋಮರಯ್ಯಂಗವನಿತ ಳಾಕಾಶ ವ್ಯಾಪ್ತ ನಿಜ ಗುಣ ಮಣಿ ರ | ತ್ನಾಕರನಜ್ಞಾನತಮೋ
ನೀಕರನಭಿರಾಮ ದೇವರಾಯಂ ತನಯಂ ||
ಚoll
ಕಂ | ಪಂಪಂ ಧಾತ್ರೀವಳಯ ನಿ
ಚತುರ್ದಶಾಶ್ವಾಸಂ | ೭೦೧
ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ
ಮಾತೂ ಜಿನೇಂದ್ರ ಧರ್ಮಮ ವಲಂ ದೊರೆ ಧರ್ಮದೊಳೆಂದು ನಂಬಿ ತ | ಜ್ಞಾತಿಯನುತ್ತರೋತ್ತರಮೆ ಮಾಡಿ ನೆಗಟ್ಟಿದನಿಂತಿರಾತ್ಮ ವಿ ಖ್ಯಾತಿಯನಾತನಾತನ ಮಗಂ ನೆಗಟ್ಟಂ ಕವಿತಾಗುಣಾರ್ಣವಂ || ೪೮
42
೪ಂಪಂ ಚತುರಂಗ ಬಳ ಭಯಂಕರಣಂ ನಿ | ಪಂಪಂ ಲಲಿತಾಲಂಕರ
ಣಂ ಪಂಚಶರೈಕರೂಪನಪಗತಪಾಪಂ
೪೯
ಕವಿತೆ ನೆಗಟಿಯಂ ನಿಳಸ ಜೋಳದ ಪಾಚಿ ನಿಜಾಧಿನಾಥನಾ ಹವದೊಳರಾತಿನಾಯಕರ ಪಟ್ಟನೆ ಪಾಕಿಗೆ ಸಂದ ಪೆಂಪು ಭೂ | ಭುವನದೊಳಾಗಳುಂ ಬೆಳಗೆ ಮಿಕ್ಕಭಿಮಾನದ ಮಾತು ಕೀರ್ತಿಯಂ ವಿವರಿಸೆ ಸಂದನೇಂ ಕಲಿಯೊ ಸತ್ಕವಿಯೋ ಕವಿತಾಗುಣಾರ್ಣವಂ || 980
ಆದ ಮಗನು ಕೊಮರಯ್ಯನೆಂಬುವನು. ಆ ಕೊಮರಯ್ಯನಿಗೆ ಭೂಮ್ಯಾಕಾಶಗಳಲ್ಲಿ ಹರಡಿರುವ ತನ್ನ ಗುಣವೆಂಬ ಮಣಿಗಳಿಗೆ ಸಮುದ್ರದಂತಿರುವವನೂ ಅಜ್ಞಾನವೆಂಬ ಕತ್ತಲನ್ನು ಪರಿಹರಿಸುವವನೂ ಆದ ಅಭಿರಾಮದೇವರಾಯನೆಂಬುವನು ಮಗನು. ೪೮. ಜಾತಿಯಲ್ಲೆಲ್ಲ ಉತ್ತಮ ಜಾತಿಯ ಬ್ರಾಹ್ಮಣಕುಲದವನಿಗೆ ಧರ್ಮದಲ್ಲೆಲ್ಲ ಜೈನಧರ್ಮವೇ ಉತ್ತಮವಾದುದೆಂದು (ಯೋಗ್ಯವಾದುದು) ಆ ಜಾತಿಯನ್ನು ಅಭಿವೃದ್ಧಿಮಾಡಿ ತನ್ನ ಖ್ಯಾತಿಯನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಂಡನು. ಅವನ ಮಗನೇ ಪ್ರಸಿದ್ಧನಾದ ಕವಿತಾಗುಣಾರ್ಣವ ಎಂಬ ಬಿರುದಿನ ಪಂಪ. ೩೯. ಪಂಪನು ಭೂಮಂಡಲದ ಶ್ರೇಷ್ಠದೇವತೆ. ಚತುರಂಗಸೈನ್ಯಗಳಿಗೆ ಭಯವನ್ನುಂಟುಮಾಡುವವನು. ಧೈರ್ಯಶಾಲಿ (ನಡುಗದವನು) ಸುಂದರವಾದ ಅಲಂಕಾರವುಳ್ಳವನು. ಮನ್ಮಥನ ಹಾಗೆಯೇ ಇರುವ ರೂಪವುಳ್ಳವನು, ಪಾಪರಹಿತನಾದವನು ೫೦. ತನ್ನ ಕವಿತ್ವವು ಖ್ಯಾತಿಯನ್ನು ಸ್ಥಾಪಿಸಿತು. ಅನ್ನದಾತನಲ್ಲಿದ್ದ ಉಪ್ಪಿನ ಋಣವು ತನ್ನ ರಾಜನ ಯುದ್ಧದಲ್ಲಿ ಶತ್ರುನಾಯಕರ ವೀರಪಟ್ಟಗಳನ್ನು ಹಾರಿಸುವಂತಹ ಹಿರಿಮೆಯನ್ನೂ ತನ್ನ ಯಶಸನ್ನೂ ವಿವರಿಸಿತು. ಕವಿತಾಗುಣಾರ್ಣವನು ಬಹು ಪ್ರಸಿದ್ಧನಾದನು. ಪಂಪಕವಿ ಎಂತಹ ಶೂರನೋ
Page #707
--------------------------------------------------------------------------
________________
೭೦೨ / ಪಂಪಭಾರತಂ 'ಕಂ
ಆತಂಗರಿಕೇಸರಿ ಸಂ
ಪ್ರೀತಿಯ ಬಟ್ಟೆಯಟ್ಟಿ ಪಿರಿದನಿತ್ತು ನಿಜಾಭಿ | ಖ್ಯಾತಿಯನಿಳೆಯೊಳ್ ನಿಸ
ಶ್ರೀ ತಂದಿತಿಹಾಸ ಕಥೆಯನೊಪ್ಪಿಸ ಕುಣಿತಂ ||
ಶೌತಮಿದು ತನಗೆ ಗಂಗಾ
ಸೋತದವೊಲಳುಂಬಮಾಗಿ ಗೆಡೆಗೊಳ್ಳದೆ ವಿ | ಖ್ಯಾತ ಕವಿ ವೃಷಭ ವಂಶೋ
ದೂತಮೆನಲ್ ಬರಿಸದೊಳಗೆ ಸಮವಿನೆಗಮಿದಂ ||
೫೧
೫೨
ವ|| ಅದೆಂತೆನೆ ಆದಿವಂಶಾವತಾರಸಂಭವಂ ರಂಗಪ್ರವೇಶಂ ಜತುಗೃಹದಾಹಂ ಹಿಡಿಂಬ ವಧೆಬಕಾಸುರವಧೆ ದೌಪದೀಸ್ವಯಂವರಂ ವೈವಾಹಂ ಯುಧಿಷ್ಠಿರಪಟ್ಟಬಂಧನಂ ಇಂದ್ರಪ್ರಸ್ಥ ಪ್ರವೇಶಂ ಅರ್ಜುನದಿಗ್ವಿಜಯಂ ದ್ವಾರಾವತೀಪ್ರವೇಶಂ ಸುಭದ್ರಾಹರಣಂ ಸುಭದ್ರಾ ವಿವಾಹಂ ಖಾಂಡವವನ ದಹನಂ ಮಯ ದರ್ಶನಂ ನಾರದಾಗಮನಂ ಜರಾಸಂಧ ವಧ ರಾಜಸೂಯಂ ಶಿಶುಪಾಲವಧೆ ದೂತವೃತಿಕರಂ ವನ ಪ್ರವೇಶಂ ಕಿತ್ಕಾರ ವಧೆ ಕಾಮಕವನದರ್ಶನಂ ದೈತವನ ಪ್ರವೇಶಂ ಸೈಂಧವಬಂಧನಂ ಚಿತ್ರಾಂಗದಯುದ್ಧಂ ಕಿರಾತದೂತಾಗಮನಂ ದೌಪದೀ ವಾಕ್ಯಂ ಪಾರಾಶರ ವೀಕ್ಷಣಂ ಇಂದ್ರಕೀಲಾಭಿಗಮನಂ ಈಶ್ವರಾರ್ಜುನ ಯುದ್ಧಂ ದಿವ್ಯಾಸ್ತ್ರ ಲಾಭಂ ಇಂದ್ರಲೋಕಾಲೋಕನಂ ನಿವಾತಕವಚಾಸುರವಧೆ ಕಾಳಕೇಯ ಪೌಲೋಮವಧ ಸೌಗಂಧಿಕಕಮಲಾಹರಣಂ ಜಟಾಸುರವಧೆ ಮಾಯಾಮತ್ತಹಸ್ತಿ ವ್ಯಾಜಂ ವಿರಾಟಪುರ
ಎಂತಹ ಸತ್ಕವಿಯೋ? ೫೧. ಆತನಿಗೆ (ಆ ಪಂಪನಿಗೆ) ಅರಿಕೇಸರಿರಾಜನು ಅತ್ಯಂತ ಪ್ರೀತಿಯಿಂದ ಹೇಳಿಕಳುಹಿಸಿ ವಿಶೇಷವಾಗಿ ದಾನಮಾಡಿ ತನ್ನ ಕೀರ್ತಿಯನ್ನು ಭೂಮಿಯಲ್ಲಿ ಸ್ಥಾಪಿಸೆಂದು ಹೇಳಲು ಈ ರೀತಿಯಾದ ಇತಿಹಾಸ ಕಥೆಯನ್ನು ರಚಿಸಿ ಒಪ್ಪಿಸಲು ನಿಶ್ಚಯಿಸಿದನು. ೫೨. ವೇದಸದೃಶವಾದ ಈ ಕೃತಿಯು ತನಗೆ ಗಂಗಾಪ್ರವಾಹದಂತೆ ಅತ್ಯತಿಶಯವಾಗಿ ಪರರ ಸಹಾಯವನ್ನಪೇಕ್ಷಿಸದೆ ಪ್ರಸಿದ್ಧರಾದ ಕವಿಶ್ರೇಷ್ಠರ ಪರಂಪರೆಯಲ್ಲಿಯೇ ಹುಟ್ಟಿತು ಎನ್ನುವ ಹಾಗೆ ಒಂದು ವರ್ಷದಲ್ಲಿ ರಚಿತವಾಯಿತು. ವ!! ಅದು ಹೇಗೆಂದರೆ ಆದಿವಂಶಾವತಾರಸಂಭವ, ರಂಗಪ್ರವೇಶ, ಅರಗಿನಮನೆಯ ದಾಹ, ಹಿಡಿಂಬವಧೆ, ಬಕಾಸುರವಧೆ, ದೌಪದೀಸ್ವಯಂವರ, ವಿವಾಹ, ಧರ್ಮರಾಯಪಟ್ಟಾಭಿಷೇಕ, ಇಂದ್ರಪ್ರಸ್ಥಪ್ರವೇಶ, ಅರ್ಜುನ ದಿಗ್ವಿಜಯ, ದ್ವಾರಾವತೀ ಪ್ರವೇಶ, ಸುಭದ್ರಾಹರಣ, ಸುಭದ್ರಾವಿವಾಹ, ಖಾಂಡವವನ ದಹನ, ಮಯದರ್ಶನ, ನಾರದಾಗಮನ, ಜರಾಸಂಧವಧೆ, ರಾಜಸೂಯ, ಶಿಶುಪಾಲವಧೆ, ದೂತವ್ರತಿಕರ, ವನಪ್ರವೇಶ, ಕೀಚಕವಧೆ, ಕಾಮ್ಯಕವನದರ್ಶನ, ದೈತವನಪ್ರವೇಶ, ಸೈಂಧವಬಂಧನ, ಚಿತ್ರಾಂಗದಯುದ್ಧ, ಕಿರಾತದೂತಾಗಮನ, ದೌಪದೀವಾಕ್ಯ, ವ್ಯಾಸರ ದರ್ಶನ, ಇಂದ್ರಕೀಲಾಭಿಗಮನ, ಈಶ್ವರಾರ್ಜುನಯುದ್ಧ, ದಿವ್ಯಾಸ್ತ್ರಲಾಭ, ಇಂದ್ರಾಲೋಕಾಲೋಕನ, ನಿವಾತಕವಚಾಸುರವಧೆ, ಕಾಳಕೇಯಪೌಲೋಮವಧೆ, ಸೌಗಂಧಿಕಕಮಲಾಹರಣ, ಜಟಾಸುರವಧೆ, ಮತ್ತಗಜದ ವೃತ್ತಾಂತ,
Page #708
--------------------------------------------------------------------------
________________
ಚತುರ್ದಶಾಶ್ವಾಸಂ | ೭೦೩ ಪ್ರವೇಶಂ ಕೀಚಕವಧೆ ದಕ್ಷಿಣೋತ್ತರ ಗೋಗ್ರಹಣಂ ಅಭಿಮನ್ನು ವಿವಾಹಂ ಮಂತ್ರಾಲೋಚನಂ ದೂತಕಾರ್ಯo ಕುರುಕ್ಷೇತ್ರಪ್ರಯಾಣಂ ಭೀಷ್ಮ ಕರ್ಣ ವಿವಾದಂ ಯುದ್ಯೋದ್ಯೋಗಂ ಶ್ವೇತ ವಧೆ ಭೀಷ್ಮಶರ ಶಯನಂ ದ್ರೋಣಾಭಿಷೇಕಂ ಅಭಿಮನ್ನು ವಧೆ ಸೈಂಧವ ವಧೆ ಘಟೋತ್ಕಚ ವಧ ದ್ರೋಣಚಾಪ ಮೋಕ್ಷಂ ದ್ರೋಣ ವಧೆ ಅಶ್ವತ್ಥಾಮ ಕರ್ಣ ವಿವಾದ ಕರ್ಣಾಭಿಷೇಕಂ ಸಂಸಪ್ತಕ ವಧ ದುಶ್ಯಾಸನ ವಧೆ ವೇಣೀಸಂಹನನಂ ಕರ್ಣಾರ್ಜುನ ಯುದ್ಧಂ ಕರ್ಣ ಸೂರ್ಯಲೋಕಪ್ರಾಪ್ತಿ ಶಲ್ಯಾಭಿಷೇಕಂ ಶಲ್ಯನಿಪಾತನಂ ಭೀಮ ದುರ್ಯೊಧನ ಗದಾಯುದ್ಧಂ ದುರ್ಯೋಧನ ವಧೆ ಪಂಚಪಾಂಡವಹರಣಂ ಪರ್ವ೦ ಅರ್ಜುನಾಭಿಷೇಕಂ ಪಳವುಮುಪಾ ಖ್ಯಾನ ಕಥೆಗಳೊಳಮೊಂದುಂ ಕುಂದಲೀಯದೆ ಪೇಟಿಂ
ಚoll
ಎಸೆಯ ಸಮಸ್ತ ಭಾರತಮನಾವ ನರೇಂದ್ರರುಮಾರ್ತು ಕೂರ್ತು ಪೇ ಆಸರೆ ಕವೀಂದ್ರರುಂ ನೆಯ ಪೇಪರೆ ಪೇಟಿಪೊಡೆಯ್ದೆ ನೀನೆ ಪೇ | ಟಿಸುವೆಯುದಾತ್ತ ಕೀರ್ತಿ ನಿಲೆ ಪೇಳ್ಕೊಡೆ ಪಂಪನೆ ಪೇಟ್ಟುಮಿಂತು ಪೇ, ಟಿಸಿದ ನರೇಂದ್ರರುಂ ನೆಯ ಪೇಟ್ಟಿ ಕವೀಂದ್ರರುಮಾರ್ ಧರಿತ್ರಿಯೊಳ್ ||೫೩
ಎನೆ ಸಕಲಾವನೀತಳ ಜನಂ ಪಿರಿದುಂ ದಯೆಗೆಯ್ದು ಸಾರ್ಚಿ ಮ ಲನೆ ಪಿರಿದಪ್ಪ ಗೌರವದ ಮೈಮೆಯ ಮನ್ನಣೆಯೋಳಿಗಳ್ ಕರಂ | ಮನಮನಲರ್ಚೆ ಕೀರ್ತಿ ಜಗದೊಳ್ ನಿಲೆ ಪೇಚಿಸಿದಂ ಜಗಕ್ಕೆ ನ. ಚಿನ ಕವಿತಾ ಗುಣಾರ್ಣವನಿನೀ ಕೃತಿ ಬಂಧನಮಂ ಗುಣಾರ್ಣವಂ || ೫೪
ವಿರಾಟಪುರಪ್ರವೇಶ, ಕೀಚಕವಧೆ, ದಕ್ಷಿಣೋತ್ತರ ಗೋಗ್ರಹಣ, ಅಭಿಮನ್ಯುವಿವಾಹ, ಮಂತ್ರಾಲೋಚನೆ, ದೂತಕಾರ್ಯ, ಕುರುಕ್ಷೇತ್ರ ಪ್ರಯಾಣ, ಭೀಷ್ಮಕರ್ಣವಿವಾದ, ಯುದ್ಯೋಗ, ಶ್ವೇತವಧೆ, ಭೀಷ್ಮಶರಶಯನ, ದ್ರೋಣಾಭಿಷೇಕ, ಅಭಿಮನ್ಯುವಧೆ, ಸೈಂಧವವಧೆ, ಘಟೋತ್ಕಚವಧೆ, ದ್ರೋಣಚಾಪಮೋಕ್ಷ, ದ್ರೋಣವಧೆ, ಅಶ್ವತ್ಥಾಮಕರ್ಣ ವಿವಾದ, ಕರ್ಣಾಭಿಷೇಕ, ಸಂಸಪ್ತಕವಧೆ, ದುಶ್ಯಾಸನವಧೆ, ಮುಡಿಯನ್ನು ಕಟ್ಟುವುದು, ಕರ್ಣಾರ್ಜುನರ ಯುದ್ದ, ಕರ್ಣನ ಸೂರ್ಯಲೋಕಪ್ರಾಪ್ತಿ, ಶಲ್ಯಾಭಿಷೇಕ, ಶಲ್ಯನಿಪಾತನ, ಭೀಮದುರ್ಯೊಧನ 'ಗದಾಯುದ್ಧ, ದುರ್ಯೋಧನವಧೆ, ಪಂಚಪಾಂಡವಹರಣ, ಸ್ತ್ರೀಪರ್ವ, ಅರ್ಜುನಾಭಿಷೇಕ ಮೊದಲಾದ ಇತರ ಅನೇಕ ಉಪಾಖ್ಯಾನ ಕತೆಗಳಲ್ಲಿ ಒಂದೂ ತಪ್ಪದೆ ಹೇಳಿದನು. ೫೩. ಇದುವರೆಗೆ ಯಾವ ರಾಜರೂ ಸಮರ್ಥರಾಗಿ ಪ್ರೀತಿಯಿಂದ ಪ್ರಸಿದ್ಧವಾದ ಸಮಗ್ರಭಾರತವನ್ನು ಹೇಳಿಸಿಲ್ಲ. ಕವಿಶ್ರೇಷ್ಠರೂ ಪೂರ್ಣವಾಗಿ ಹೇಳಿಲ್ಲ. ಹೇಳಿಸುವುದಾದರೆ ನೀನೆ ಚೆನ್ನಾಗಿ ಹೇಳಿಸುತ್ತೀಯೆ; ಉನ್ನತವಾದ ಕೀರ್ತಿ ನಿಲ್ಲುವ ಹಾಗೆ ಹೇಳುವ ಪಕ್ಷದಲ್ಲಿ ಪಂಪನೆ ಹೇಳುತ್ತಾನೆ. ಹೀಗೆ ಹೇಳಿಸಿದ ರಾಜರೂ ಪೂರ್ಣವಾಗಿ ಹೇಳಿದ ಕವಿಶ್ರೇಷ್ಠರೂ ಲೋಕದಲ್ಲಿ ಯಾರಿದ್ದಾರೆ? ೫೪, ಎಂದು ಸಮಸ್ತ ಭೂಮಂಡಲದ ಜನವೂ ಹೇಳಲು ಗುಣಾರ್ಣವನಾದ ಅರಿಕೇಸರಿಯು ವಿಶೇಷವಾದ ಕೃಪೆಮಾಡಿ ಹಿರಿದಾದ ಮಹಿಮೆಯ ಸತ್ಕಾರಸಮೂಹಗಳನ್ನು ಸದ್ದಿಲ್ಲದೆ ಮಾಡಿ. ವಿಶೇಷವಾಗಿ ಮನಸ್ಸನ್ನು ಅರಳಿಸಲು (ತೃಪ್ತಿಪಡಿಸಲು) ಅವನ ಕೀರ್ತಿ
Page #709
--------------------------------------------------------------------------
________________
೭೦೪) ಪಂಪಭಾರತಂ ಪಿರಿಯಕ್ಕರ || ತುಡುಗೆ ನಿಚ್ಚಲುಂ ಪಂಚರತ್ನಂಗಳುಂ ಪೊಮಡ ತನ್ನುಡುವುಪ್ಪಟಂಗಳ್
'ಮಡಿಯೊಳಾಗೆಯುಮಂ ಕಂಡಾಗಳ ಪಿರಿಯ ಬಿತ್ತರಿಗೆಯಂ ಕೆಲದೊಳಿಕ್ಕಿ | ಕೊಡುವ ಬಾಡಕ್ಕಂ ಜೀವಧನಂಗಳಂ ಬಿಡುವಣ್ಣಂ ಲೆಕ್ಕಮಿಲ್ಲೆನಿಸಿ ರಾಗಂ ಗಿಡದ ಕೊಂಡಾಡಿದಂ ಬಲ್ಲಹನತಿಯ ಗುಣಾರ್ಣವಂ ಕವಿತಾಗುಣಾರ್ಣವನಂಗೆ
೫೫
ಬೀರದಳವಿಯ ನನ್ನಿಯ ಚಾಗದ ಶಾಸನಂ ಚಂದ್ರಾರ್ಕತಾರಂಬರಂ ಮೇರು ನಿಲ್ಕಿನಂ ನಿಲವೇಚ್ಯುಂ ಕಾವ್ಯಕ್ಕೆ ತಾನಿತ್ತ ಶಾಸನದಗ್ರಹಾರಂ | ಸಾರಮೆಂಬಿನಂ ಹೆಸರಿಟ್ಟು ತಾನೀಯ ಹರಿಗನ ಧರ್ಮ ಭಂಡಾರದಂತ
ಸಾರಮಾದುದು ಬಿಟ್ಟಗ್ರಹಾರಮಾ ಬಚ್ಚಸಾಸಿರದೊಳು ಧರ್ಮವುರಂ 11೫೬ ಚಂ| ದಸ ಮಖಧೂಮದಿಂ ದ್ವಿಜರ ಹೋಮದಿನೊಟ್ಟೆಯ ಹಂಸ ಕೊಕ ಸಾ
ರಸ ಕಳ ನಾದದಿಂದೊಳಗೆ ವೇದನಿನಾದದಿನತ್ತಮೆಯ ಶೋ | ಭಿಸಿ ಸುರಮಥ್ಯಮಾನ ವನಧಿ ಕ್ಷುಭಿತಾರ್ಣ ಘೋಪದಂತ ಘೋ ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ || ೫೭
ನಿಲ್ಲುವಂತೆ ಲೋಕದಲ್ಲಿ ಪ್ರಸಿದ್ಧನಾದ ಕವಿತಾಗುಣಾರ್ಣವನಾದ ಪಂಪನಿಂದ ಈ ಕಾವ್ಯಪ್ರಬಂಧವನ್ನು ಗುಣಾರ್ಣವನು ಹೇಳಿಸಿದನು. ೫೫. ಪ್ರತಿನಿತ್ಯವೂ ಆಭರಣಗಳನ್ನೂ ಪಂಚರತ್ನಗಳನ್ನೂ ಹೊರಗೆ ಹೊರಡಬೇಕಾದರೆ ತಾನು ಸ್ವಂತವಾಗಿ ಧರಿಸುವ ಶ್ರೇಷ್ಠವಾದ ವಸ್ತ್ರಗಳನ್ನೂ ಒಳ್ಳೆಯ ಮಡಿಯಾಗಿರುವ ಸ್ಥಿತಿಯಲ್ಲಿ ಪ್ರೀತಿಯಿಂದ ಕೊಡುವನು. ಉನ್ನತವಾದ ಆಸನಗಳನ್ನೂ ತನ್ನ ಪಕ್ಕದಲ್ಲಿಯೇ ಹಾಸಿ ಕುಳ್ಳಿರಿಸಿಕೊಂಡು ಗೌರವಿಸುವನು. ಅವನು ದಾನಮಾಡುವ ಹಳ್ಳಿಗಳಿಗೂ ಗೋವುಗಳೇ ಮೊದಲಾದ ಪ್ರಾಣಿಗಳಿಗೂ ದಾಸಿಯರಿಗೂ ಲೆಕ್ಕವೇ ಇಲ್ಲ. ಪ್ರೀತಿಯು ಕಡಿಮೆಯಾಗದಂತೆ ರಾಷ್ಟ್ರಕೂಟರ ರಾಜನಾದ ವಲ್ಲಭದೇವನಾದ ಮೂರನೆಯ ಕೃಷ್ಣನು ತಿಳಿಯುವಂತೆ ಕವಿತಾಗುಣಾರ್ಣವನಾದ ಪಂಪಕವಿಯನ್ನು ಸತ್ಕರಿಸಿದನು. ೫೬. ತನ್ನ ವೀರ್ಯದ ಪರಾಕ್ರಮದ ಶಕ್ತಿಯ ಸತ್ಯದ ದಾನದ (ಪ್ರತೀಕಾರವಾಗಿರುವ) ಶಾಸನವು ಚಂದ್ರಸೂರ್ಯ ನಕ್ಷತ್ರಗಳಿರುವವರೆಗೆ ಮೇರುಪರ್ವತ ನಿಲ್ಲುವಂತೆ ಕಾವ್ಯಕ್ಕೆ ಬಹುಮಾನವಾಗಿ (ಸಂಭಾವನೆಯಾಗಿ) ತಾನು ಕೊಟ್ಟ ಶಾಸನದಗ್ರಹಾರವು ಸಾರವತ್ತಾಗಿ ನಿಲ್ಲಬೇಕು ಎಂದು ಹೊಸದಾಗಿ ನಾಮಕರಣಮಾಡಿ ಕೊಡಲು ಆ ಬಚ್ಚೆಸಾಸಿರವೆಂಬ ನಾಡಿನಲ್ಲಿ ಧರ್ಮಪುರವೆಂಬ ಅಗ್ರಹಾರವು ಅರಿಕೇಸರಿಯ ಧರ್ಮಭಂಡಾರದಂತೆ (ಧರ್ಮವು ಕೂಡಿಟ್ಟಿರುವ ಉಗ್ರಾಣದಂತೆ) ಸಾರವತ್ತಾದುದು ಆಯಿತು. ೫೭. ದಿಕ್ಕುಗಳು ಯಜ್ಞಯಾಗಗಳ ಹೊರೆಯಿಂದಲೂ ಬ್ರಾಹ್ಮಣರು ಮಾಡುವ ಹೋಮದಿಂದಲೂ ಒಳ್ಳೆಯ ಕೆರೆಗಳು ಹಂಸ ಚಕ್ರವಾಕ ಸಾರಸಪಕ್ಷಿಗಳ ಮಧುರವಾದ ಧ್ವನಿಯಿಂದಲೂ ಊರಿನ ಒಳಭಾಗವು ವೇದಘೋಷದಿಂದಲೂ ತುಂಬಿರಲು ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದ ಘೋಷದಂತೆ ಅರಿಕೇಸರಿಯು ಧರ್ಮವಾಗಿ ಕೊಟ್ಟ ಧರ್ಮಪುರವು ಶಬ್ದಮಾಡುತ್ತ ಯಾವಾಗಲೂ ಬಹು ರಮಣೀಯವಾಗಿತ್ತು.
Page #710
--------------------------------------------------------------------------
________________
ಚoll
ಕಂ
ಚತುರ್ದಶಾಶ್ವಾಸಂ |೭೦೫
ರಾಜದ್ರಾಜಕಮನಿಸಿದ
ಸಾಜದ ಪುಲಿಗೆಯ ತಿರುಳ ಕನ್ನಡದೊಳ್ ನಿ | ರ್ವ್ಯಾಜದೆಸಕದೊಳ ಪುದಿದೊಂ
ದೋಜೆಯ ಬಲದಿನಿಯ ಕವಿತ ಪಂಪನ ಕವಿತೇ
ಪುದಿದ ಜಸಂ ಪೊದಲ್ಲಿ ಚಳವೊಂದಿದಳಂಕೃತಿ ಕೃತ ದೇಸಿಯಂ ಬುದನನ ವಸ್ತು ವಿದ್ಯೆಯೆನೆ ಕಬ್ಬಮೆ ಮುನ್ನಮವಂತಿವಲ್ಲದ | ಲ್ಲದೆ ಪಡೆವಿಲ್ಲ ಕಬ್ಬಮನೆ ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮ ಮೃದುವು ಸಮಸ್ತಭಾರತಮುಮಾದಿಪುರಾಣಮಹಾಪ್ರಬಂಧಮುಂ ||
೫೮
RE
ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂ ತಳಕೆ ಸಮಸ್ತ ಭಾರತಮುಮಾದಿಪುರಾಣಮುಮೆಂದು ಮೆಯ್ಯಸುಂ | ಗೊಳುತಿರೆ ಪೂಣ್ಣು ಪೂಣ್ಣ ತೆಂಬೊಂದಲದಿಂಗಳೊಳೊಂದು ಮೂರು ತಿಂ ಗಳೊಳೆ ಸಮಾಪ್ತಿಯಾದುದನೆ ಬಣ್ಣಿಸಿದಂ ಕವಿತಾಗುಣಾರ್ಣವಂ ||
20
ಕೃತಿಗೆ ಸಮಸ್ತ ಭಾರತಮುವಾದಿಪುರಾಣಮುಮಗಳೊಂದಳಂ ಕೃತಿಯವೊಲಿರ್ದುವೇಕಳೆಯ ಪೋದವರಾದವರೊಳ್ ಸರಸ್ವತೀ | ಮತಿ ಕವಿತಾಗುಣಕ್ಕೆ ಪದೆದೆಯವರ ಕವೀಂದ್ರರಾರ್ ಸರ ಸ್ವತಿಗೆ ವಿಳಾಸಮಂ ಪೊಸತು ಮಾಡುವ ಪಂಪನ ವಾಗ್ವಿಲಾಸಮಂ || ೬೧
೫೮. ಪಂಪನ ಕವಿತ್ವವು ಪ್ರಕಾಶಮಾನವಾದ ರಾಜನುಳ್ಳದ್ದು ಎಂದೆನಿಸಿದ ಪುಲಿಗೆರೆಯ ಸಹಜವಾದ ತಿರುಳುಕನ್ನಡದಲ್ಲಿ ಋಜುವಾದ ಕಾವ್ಯಮಾರ್ಗದಲ್ಲಿ ಶಕ್ತಿಯುಕ್ತವಾಗಿಯೂ ಇಂಪಾಗಿಯೂ ಇರುವಂತೆ ರಚಿತವಾಗಿದೆ. ೫೯, ಕೂಡಿಕೊಂಡಿರುವ ಯಶಸ್ಸು ವ್ಯಾಪ್ತವಾದ ಓಜಸ್ಸು ಅಥವಾ ಕಾಂತಿ, ಸೇರಿಕೊಂಡಿರುವ ಅಲಂಕಾರ, ದೇಸಿ ರಚನೆಯೆಂಬುದನ್ನೇ ಪ್ರಧಾನವಸ್ತುಗಳನ್ನಾಗಿ ಉಳ್ಳ ಕಾವ್ಯಗಳು ವಿದ್ಯೆಗಿಂತ ಮಾನ್ಯವಾದುವು. ಅವಲ್ಲದವು ಕಾವ್ಯವೇ ಅಲ್ಲ. ಈ ಭಾರತವೂ ಆದಿಪುರಾಣವೂ ಅವುಗಳ ಹಾಗಿರದೆ ಮೇಲೆ ಹೇಳಿದ ಗುಣಗಳಲ್ಲದೆ ಬೇರೆಯಲ್ಲ ಎಂದೆನಿಸಿಕೊಂಡು ಪ್ರಾಚೀನಕಾವ್ಯಗಳನ್ನೆಲ್ಲ ಪರಾಜಿತವನ್ನಾಗಿ (ಹೊಡೆದು ಹಾಕಿದುವು ಮಾಡಿದುವು. ೬೦. ಇಲ್ಲಿ ವಿಕ್ರಮಾರ್ಜುನವಿಜಯ ಅಥವಾ ಭಾರತದಲ್ಲಿ ಸಮಸ್ತಭೂಮಂಡಲಕ್ಕೆ ಲೋಕವ್ಯವಹಾರವನ್ನೂ ಅಲ್ಲಿ ಆ ಆದಿಪುರಾಣದಲ್ಲಿ ಜಿನಾಗಮವನ್ನೂ ಪ್ರಕಾಶಪಡಿಸುತ್ತೇನೆ. ಸಮಸ್ತಭಾರತವೂ ಆದಿಪುರಾಣವೂ ನನ್ನ ಶರೀರವನ್ನೂ ಪ್ರಾಣವನ್ನೂ ಆಕ್ರಮಿಸಿಕೊಂಡಿರಲು ಪ್ರತಿಜ್ಞೆಮಾಡಿ ಆ ಪ್ರತಿಜ್ಞೆ ಮಾಡಿದ ರೀತಿಯಲ್ಲಿಯೇ ಒಂದು (ಭಾರತವು ಆರು ತಿಂಗಳಲ್ಲಿಯೂ ಮತ್ತೊಂದು (ಆದಿಪುರಾಣವು) ಮೂರುತಿಂಗಳಲ್ಲಿಯೂ ಪೂರ್ಣವಾಯಿತು ಎನ್ನುವ ಹಾಗೆ ಕವಿತಾಗುಣಾರ್ಣವನಾದ ಪಂಪನು ವರ್ಣಿಸಿದನು. ೬೧. ಸಮಸ್ತ ಭಾರತವೂ ಆದಿಪುರಾಣವೂ ಲೋಕಕ್ಕೆ ಈಗ ಒಂದು ಅಲಂಕಾರದಂತಿದೆ. ಏಕೆ ಗೊತ್ತಿದೆಯೇ? ಹಿಂದೆ ಆಗಿಹೋದವರಲ್ಲಿಯೂ ಈಗ ಆಗಿರುವವರಲ್ಲಿಯೂ ಸರಸ್ವತೀಮತಿಯಾಗಿ
Page #711
--------------------------------------------------------------------------
________________
೭೦೬ | ಪಂಪಭಾರತ ಉll ವ್ಯಾಸಮುನಿ ಪ್ರಣತ ಕೃತಿಯಂ ಸಲೆ ಪೇಟ್ಟು ಸತ್ಕವಿ
ವ್ಯಾಸ ಸಮಾಗಮಾನ್ವಿತಮನಾದಿಪುರಾಣಮನೆಯ ಪೇಟ್ಟು ವಾ | * ಸುಭಗಂ ಪುರಾಣಕವಿಯುಂ ಧರೆಗಾಗಿರೆಯು ಪೊಣುವೀ
ದೇಸಿಗಳುಂತೆ ನಾಡೊವಜನಾದನೊ ಪೇಮ್ ಕವಿತಾಗುಣಾರ್ಣವಂ || ೬೨ ಚoll ಪುದಿದಿರ ರಾಗಮುರ್ಕ ಪೊಸಪೇಟದಲಂಪುಗಳೆಲ್ಲಮೋದಿದ
ರ್ಗಿದಅನುಯಾಯಿಗಳೆಸೆವುದಾರ ಗುಣಂ ಸಕಳಾವನೀಶ್ವರ | ರ್ಗದಟನಳುರ್ಕೆ ನೃತ್ಯನಿವಹಕ್ಕೆ ಚದುರ್ ಗಣಿಕಾಜನಕ್ಕೆ ಕುಂ
ದದ ನೆಲಸಿರ್ಕೆಯಾ ಮಹಿತಳಕ್ಕೆ ಮದೀಯ ಕೃತಿಪ್ರಬಂಧದಿಂ || ೬೩ ಮll 4 || ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್
ಭೀಮಸೇನಂ ಬಲದೊಳ್ ಮದ್ರಶನತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ | ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ
ಧರ್ಮದೊಳ್ ನಿ ರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ
|| ೬೪
ಪಂಪನ ಕವಿತಾಗುಣಕ್ಕೆ ಆಸೆಪಟ್ಟು ಅವನ ಮೇಲೆಯ ಹತ್ತಿರಕ್ಕೆ ಬರುವವರೂ ಸರಸ್ವತಿಗೆ ವಿಳಾಸವನ್ನು ಹೊಸದುಮಾಡುವ ಅವನ ಮಾತಿನ ವೈಭವವನ್ನು ಮೀರುವವರೂ ಯಾರೂ ಇಲ್ಲ, ೬೨. ವ್ಯಾಸಮಹರ್ಷಿಗಳಿಂದ ಹೊಗಳಲ್ಪಟ್ಟ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿಯೂ ಪ್ರಸಿದ್ಧರಾದ ಸತ್ಕವಿಗಳ ವ್ಯಾಖ್ಯಾನ ಮತ್ತು ಸಹವಾಸಗಳಿಂದ ಕೂಡಿರುವ ಆದಿಪುರಾಣವನ್ನು ಚೆನ್ನಾಗಿ ಹೇಳಿಯೂ ಪಂಪನು ವಾಕ್ಷಂಪತ್ತಿನ ಸೌಂದರ್ಯವುಳ್ಳವನೂ ಪುರಾಣರಚನೆ ಮಾಡಿದ ಕವಿಯೂ ಭೂಮಿಗೆ ಆಗಿರಲು ಹಾಗೆಯೆ; ದೇಸಿಗುಣಗಳೂ ಉನ್ನತವಾಗಿ ಅಭಿವೃದ್ದಿ ಯಾಗುತ್ತಿರಲು ಕವಿತಾಗುಣಾರ್ಣವನು 'ನಾಡ ಒವಜ' - ನಾಡಿನ ಓಜ ಎಂದರೆ ನಾಡಿಗೇ ಆಚಾರ್ಯನೂ ಆದನು. ೬೩. ಭೂಮಂಡಲದಲ್ಲಿ ಈ ನನ್ನ ಕೃತಿಬಂಧವನ್ನು ಓದಿದವರಿಗೆ ವ್ಯಾಪ್ತವಾದ ಸಂತೋಷವೂ ಇದರಂತೆ ನಡೆದುಕೊಂಡವರಿಗೆ ಅಭಿವೃದ್ಧಿಯಾಗುತ್ತಿರುವ ಪ್ರಣಯ ವೈಭವವೂ ಸಮಸ್ತರಾಜಮಂಡಲಕ್ಕೆ ಪ್ರಕಾಶವಾದ ಔದಾರ್ಯಗುಣವೂ ಸೇವಕವರ್ಗಕ್ಕೆ ಪರಾಕ್ರಮಾತಿಶಯವೂ ವೇಶ್ಯಾಜನಕ್ಕೆ ಚಾತುರ್ಯವೂ ಕಡಿಮೆಯಾಗದೆ ನೆಲಸಿರಲಿ. ೬೪. ಚಲದಲ್ಲಿ ದುರ್ಯೋಧನನೂ ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ ಬಲದಲ್ಲಿ ಶಲ್ಯನೂ ಗುಡೌನ್ನತಿಯಲ್ಲಿ ಭೀಷ್ಮನೂ ಚಾಪವಿದ್ಯಾಕೌಶಲದಲ್ಲಿ ದ್ರೋಣಾಚಾರ್ಯನೂ ಸಾಹಸದ ಮಹಿಮೆಯಲ್ಲಿ ಅರ್ಜುನನೂ ಧರ್ಮದಲ್ಲಿ ಪರಿಶುದ್ಧಮನಸ್ಸುಳ್ಳ ಧರ್ಮರಾಯನೂ ಶ್ರೇಷ್ಠರಾದವರು. ಇವರಿಂದ ಭಾರತವು ಲೋಕಪೂಜ್ಯವಾಗಿದೆ.
Page #712
--------------------------------------------------------------------------
________________
ಮ|
ಚತುರ್ದಶಾಶ್ವಾಸಂ |೭೦೭
ಕರಮರ್ತು ಸಮಸ್ತ ಭಾರತ ಕಥಾ ಸಂಬಂಧಮಂ ಬಾಜಿಸಲ್ ಬರೆಯಲ್ ಕೇಳಲೊಡರ್ಚುವಂಗಮಿದಳ್ ತನ್ನಿಷ್ಟವಪ್ಪನ್ನವು 1 ತರಮಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಮಿಷ್ಟಾಂಗನಾ ಸುರತಂ ಕಾಂತಿಯಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ || ೫
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ಚತುರ್ದಶಾಶ್ವಾಸಂ
೬೫. ಸಮಸ್ತಭಾರತಕಥಾಪ್ರಬಂಧವನ್ನು ಪ್ರೀತಿಸಿ ವಾಚಿಸಲು (ಓದಲು) ಕೇಳಲು ಬರೆಯಲು ಪ್ರಾರಂಭಮಾಡುವವನಿಗೆ ಬೇಕಾದಷ್ಟು ಅಭಿವೃದ್ಧಿಯಾಗುತ್ತದೆ. ಧೈರ್ಯ, ತೃಪ್ತಿ, ಬಲ, ವೈಭವ, ಸೌಭಾಗ್ಯ, ತನ್ನ ಇಷ್ಟಳಾದ ಸ್ತ್ರೀಯ ಸಂಭೋಗ, ಶಾಂತಿ, ವೃದ್ಧಿ, ವೈಭವ, ಭದ್ರ, ಶುಭ, ಮಂಗಳ ಇವೆಲ್ಲವೂ ಆಗುತ್ತವೆ. ವ! ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳವನೂ ಆದ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹದಿನಾಲ್ಕನೆಯ ಆಶ್ವಾಸವು.
Page #713
--------------------------------------------------------------------------
________________
ಅನುಬಂಧ-೧ ಪಂಪನು ತನ್ನ ಭಾರತದ ಪ್ರಾರಂಭದಲ್ಲಿ ತನ್ನ ಪೋಷಕನಾದ ಅರಿಕೇಸರಿಯ ವಂಶವೃಕ್ಷವನ್ನು ವಿಸ್ತಾರವಾಗಿ ಕೊಟ್ಟಿದ್ದಾನೆ. ಇದು ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತವಾಗಿದೆ. ಅದರ ವಿವರ ಈ ರೀತಿ ಇದೆ.
ಶ್ರೀಮಚ್ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನೆಂಬಂತೆ ಕಾಂತಿಯಿಂದ ಕೂಡಿ ಈ ಭೂಮಿಯಲ್ಲಿ ತನ್ನ ಕುಲಕ್ಕೆ ಶಿಖಾಮಣಿಯಾದ ಯುದ್ಧಮಲ್ಲನು ಪ್ರಸಿದ್ಧನಾದನು... ಪ್ರಬಲನಾದ ಆತನು ತೋಳಬಲದ ಖ್ಯಾತಿಯನ್ನು ಪಡೆದು ಅನೇಕ ರಾಜರ ರತ್ನಕಿರೀಟಗಳ ಕಾಂತಿಯಿಂದ ತನ್ನ ಪಾದಗಳು ಬೆಳಗುವಂತೆ ಮಾಡಿ ಸಪಾದ ಲಕ್ಷ ಕ್ಷಿತಿಯನ್ನು ಆಳಿದನು. ಇವನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಪ್ರತಿದಿನವೂ ಬಾವಿಗಳಲ್ಲಿ ಎಣ್ಣೆಯನ್ನು ತುಂಬಿ ಐನೂರು ಆನೆಗಳನ್ನು ಸ್ನಾನಮಾಡಿಸುವನು. ಈ ಯುದ್ಧಮಲ್ಲ ಮಹೀಪತಿಗೆ ಸುಂದರಾಂಗನಾದ ಅರಿಕೇಸರಿಯು ರಾಜನಿಗೆ ಕೀರ್ತಿ ಹುಟ್ಟುವಂತೆ ಹುಟ್ಟಿ ಮಂತ್ರಿಗಳಿಂದ ಕೂಡಿ ತನ್ನ ಕಿತ್ತ ಕತ್ತಿಯಿಂದ ವಿರೋಧಿರಾಜರ ಅಮೂಲ್ಯವಾದ ವಸ್ತುಗಳನ್ನೂ ಆನೆ ಕುದುರೆಗಳನ್ನೂ ಗೆದ್ದು ನಿರುಪಮನೆಂಬ ರಾಜನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳೊಡನೆ ವೆಂಗಿಮಂಡಲವನ್ನೂ ಗೆದ್ದು ದಿಕ್ಸಿತ್ತಿಗಳಲ್ಲಿ ಗರ್ವದಿಂದ ತನ್ನ ಹೆಸರನ್ನು ಬರೆಯಿಸಿದನು. ಕ್ಷತ್ರಿಯ ಗುಣಗಳು ಆ ಕುಲದಲ್ಲಿ ಈತನಿಂದಲೇ ನೆಲಸಿ ನಿಂದುವು, ಅಲ್ಲದೆ ಅರಿಕೇಸರಿಯು ಮಾಡಿದ ಕಾರ್ಯಗಳು ಮೂರು ಲೋಕದಲ್ಲಿಯೂ ಪ್ರಖ್ಯಾತರಾದ ಆದಿ ಕ್ಷತ್ರಿಯರಲ್ಲಿಯೂ ಇಲ್ಲವೆನ್ನುವಷ್ಟು ಪ್ರಸಿದ್ದಿಯಾದುವು. ಅರಿಕೇಸರಿಗೆ ನರಸಿಂಹ, ಭದ್ರದೇವ ಎಂಬಿಬ್ಬರು ಮಕ್ಕಳಾದರು. ಶತ್ರುರಾಜರ ತಲೆಗಳನ್ನು ಸೀಳುವಷ್ಟು ಭಯಂಕರವಾದ ಕತ್ತಿಗಳನ್ನುಳ್ಳ ಬಾಹುಬಲವುಳ್ಳವರವರು. ಅವರಲ್ಲಿ ಹಿರಿಯನಾದ ನರಸಿಂಹನಿಗೆ ಯುದ್ಧಮಲ್ಲನೆಂಬುವನು ಹಿರಿಯ ಮಗ, ಭುವನಪ್ರದೀಪನೂ ಅವಾರ್ಯವೀರ್ಯನೂ ಆದ ಯುದ್ಧಮಲ್ಲನಿಗೆ ಬದ್ದೆಗನು ಹಿರಿಯ ಮಗ. ಇವನು ಹುಟ್ಟಿದೊಡನೆಯೇ ಜ್ಞಾನವೂ ಜ್ಞಾನದೊಡನೆ ಐಶ್ವರ್ಯವೂ ಅದರೊಡನೆ ಅತ್ಯತಿಶಯವಾದ ಪರಾಕ್ರಮವೂ ಹುಟ್ಟಿದುವು. ತನ್ನ ವಿಶೇಷ ಶಕ್ತಿಯಿಂದ ಶತ್ರುರಾಜರನ್ನು ಚದುರಿಸಿ ರಣರಂಗದಲ್ಲಿ ತನ್ನ ಪರಾಕ್ರಮವನ್ನು ಕೊಂಡಾಡುವ ಹಾಗೆ ನಲವತ್ತೆರಡು ಕಾಳಗಗಳಲ್ಲಿ ಜಯವನ್ನು ಸಂಪಾದಿಸಿದನು. ಸಮುದ್ರ ಮುದ್ರಿತವಾದ ಈ ಭೂಮಂಡಲದಲ್ಲಿ ಯಾರಿಗೂ ಸೋಲದವನು ಇವನೇ ಎಂಬ ಖ್ಯಾತಿಯನ್ನು ಸಂಪಾದಿಸಿದುದಲ್ಲದೆ ಬದ್ದೆಗನು ಭೀಮನೆಂಬ ರಾಜನನ್ನು ಬಹಳ ಗರ್ವದಿಂದ ನೀರಿನಲ್ಲಿ ಮೊಸಳೆಯನ್ನು ಹಿಡಿಯುವಂತೆ ಒತ್ತಿ ಹಿಡಿದನು, ಮುಗಿಲನ್ನು ಮುಟ್ಟಿದ ಪೆಂಪು, ಪೆಂಪನ್ನು ಒಳಕೊಂಡ ಉದ್ಯೋಗ, ಉದ್ಯೋಗದ ಫಲವಾದ ಆಜ್ಞಾಫಲ, ಆಜ್ಞೆಯಿಂದ ಭಯಪಟ್ಟು ಬಾಗಿ ನಿಂತ ಶತ್ರುರಾಜರ ಸಮೂಹ ಇವು ತನ್ನ ಕೀರ್ತಿ ಯಶಸ್ಸಿಗೆ ಆಶ್ರಯವಾಗಿರಲು ಬದ್ದೆಗನು ತನ್ನ ಹುಬ್ಬನ್ನು ಹಾರಿಸುವುದರಿಂದಲೇ ಕೋಟ್ಯಂತರ ಜನವನ್ನು ಅಧೀನಮಾಡಿಕೊಳ್ಳುವನು. ಅವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವಿದೆ. ಕಲ್ಪವೃಕ್ಷಗಳ ತೋಟವಿದೆ, ಸಿದ್ದರಸದ ಒರತೆಯಿದೆ, ಸ್ಪರ್ಶಶಿಲೆಯ ಗಣಿಯಿದೆ, ತಡೆಯಿಲ್ಲದೆ ದಾನಮಾಡುವವರಲ್ಲಿ ಬದ್ದೆಗನನ್ನು ಹೋಲುವವರಾರಿದ್ದಾರೆ ! ಆ ಭದ್ರದೇವನ ತ್ಯಾಗಕ್ಕೆ ಹೊರಗಾದುದಾವುದೂ ಇರಲಿಲ್ಲ.
Page #714
--------------------------------------------------------------------------
________________
ಅನುಬಂಧ - ೧
೭೦೯ ಆ ಬದ್ದೆಗನಿಗೆ ವೈರಿಗಳೆಂಬ ಕತ್ತಲೆಗೆ ಸೂರ್ಯನೂ ಭೂಮಿಯನ್ನು ಗೆಲ್ಲಲು ಸಮರ್ಥವಾದ ವಿಜಯ ಭುಜಬಲವುಳ್ಳವನೂ ಆದ ಯುದ್ಧಮಲ್ಲನು ಮಗ. ಇವನ ಮಗ ನರಸಿಂಹನು ನಹುಷ, ಪೃಥು, ಭಗೀರಥ, ನಳರೆಂಬ ಮಹಾಪುರುಷರನ್ನು ಕಡೆಗಾಣಿಸಿದ ಮಹಿಮೆಯುಳ್ಳವನೂ ಜ್ಞಾನದಲ್ಲಿ ಪರಮಾತ್ಮನಂತಿದ್ದವನೂ ಆಗಿ ಹಿರಿಯರ ಆಜ್ಞೆಯನ್ನು ಉಲ್ಲಂಘನೆ ಮಾಡದೆ ಶತ್ರುಸೈನ್ಯವನ್ನು ಅಡಗಿಸಿಕೊಳ್ಳುವುದರಲ್ಲಿ ಅವನ ಕೋಪವು ತಡೆಯಿಲ್ಲದುದಾಗಿದ್ದಿತು. ನರಸಿಂಹನು ಲಾಟದೇಶದ ಮೇಲೆ ನುಗ್ಗಿ ಯುದ್ದಮಾಡಿದ ವಿಷಯವನ್ನು ಕೇಳಿ ಆ ದೇಶದವರು ಆಗ ಸತ್ತವರಿಗೆ ಈಗಲೂ ತರ್ಪಣವನ್ನು ಕೊಡುತ್ತಿರುವರು. ಸಿಂಹದಂತೆ ಕೆರಳಿ ನರಸಿಂಹನು ಯುದ್ದಮಾಡಿದಾಗ ಚಿಮ್ಮಿದ ರಕ್ತವು ಈಗಲೂ ಆಕಾಶದಲ್ಲಿ ಕೆಂಗುಡಿಯು ಮುಸುಕಿದಂತಿದೆ, ಸಪ್ತ ಮಾಲವಗಳನ್ನು ಸುಟ್ಟು ಕರಿಕೇರಿಸಿದ ಜ್ವಾಲೆಗಳು ಅವನ ತೇಜಸ್ಸಿನ ಬಿಳಲುಗಳನ್ನು ಅನುಕರಿಸಿದವು. ವಿಜಯಗಜಗಳೊಡನೆ ಭೂರ್ಜರ ರಾಜ್ಯವನ್ನು ಮುತ್ತಿ ಅದನ್ನು ಗೆದ್ದು ವಿಜಯನನ್ನು ತಿರಸ್ಕರಿಸಿದ್ದಾನೆ. ಸಿಡಿಲೆರಗುವಂತೆ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಉಂಡೆಡೆಯಲ್ಲಿ ಉಣ್ಣದೆ ಕೆಡೆದೆಡೆಯಲ್ಲಿ ಕೆಡೆಯದೆ ಓಡಿಹೋದನು. ಅಲ್ಲದೆ ನರಸಿಂಹನು ತನ್ನ ಕುದುರೆಯನ್ನು ಗಂಗಾನದಿಯಲ್ಲಿ ಮೀಯಿಸಿ ಕಾಳಪ್ರಿಯದಲ್ಲಿ ತನ್ನ ಭುಜವಿಜಯಗರ್ವದಿಂದ ವಿಜಯಸ್ತಂಭವನ್ನು ಸ್ಥಾಪಿಸಿದನು.
ಈ ನರಸಿಂಹ ಮನೋನಯನಪ್ರಿಯೆ ಜಾಕವ್ವ, ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳವಳೂ ಆದ ಇವಳು ಕುಲದಲ್ಲಿಯೂ ಶೀಲದಲ್ಲಿಯೂ ಸೀತಾದೇವಿಗಿಂತ ಅಗ್ಗಳವಾದವಳು. ಹೊಸದಾಗಿ ಅರಳಿದ ತಾವರೆಯೆಸಳ ಮೇಲಿರುವ ಲಕ್ಷ್ಮಿಯೂ ಈ ಜಾಕವ್ವಯ ಪಕ್ಕದಲ್ಲಿ ಕಾಂತಿಹೀನಳಾಗುತ್ತಾಳೆ ಎಂದ ಮೇಲೆ ಉಳಿದ ಸಾಮಾನ್ಯಸ್ತ್ರೀಯರು ಈಕೆಗೆ ಸಮನಾಗುತ್ತಾರೆಯೇ.
ಆ ಜಾಕವ್ವಗೂ ಆ ಭೂವಲ್ಲಭ ನರಸಿಂಹನಿಗೂ ಅತಿವಿಶದ ಯಶೋಮಿತಾನನಾದ ಅರಿಕೇಸರಿ ತನ್ನ ತೇಜೋಗ್ನಿಯಲ್ಲಿ ಮಗ್ನರಾದ ರಿಪುಶಲಭವನ್ನುಳ್ಳವನಾಗಿ ಮಗನಾಗಿ ಹುಟ್ಟಿದನು. ಅವನು ಹುಟ್ಟಿದಾಗ ಆನೆಯ ಮದೋದಕವನ್ನೇ ಬೆಚ್ಚುನೀರಾಗಿ ತಳಿದರು. ಆನೆಯ ಅಂಕುಶದಿಂದ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದರು, ಆನೆಯ ದಂತದ ತೊಟ್ಟಿಲಿನಲ್ಲಿಟ್ಟು ತೂಗಿದರು. ಆದುದರಿಂದ ಈ ಬಾಲ್ಯದಿಂದಲೇ ಅರಿಕೇಸರಿಯು ಗಜಪ್ರಿಯನೆಂಬುದನ್ನು ತೋರಿಸಿದನು. ತಾನೇ ಪ್ರತ್ಯಕ್ಷ ಇಂದ್ರನೆಂಬಂತೆ ಪ್ರಕಾಶಿಸಿದ ಇಂದ್ರನ ತೋಳೇ ತೊಟ್ಟಿಲಾಗಿ ಬೆಳೆದನು, ಅಮೇಯ ಬಲಶಾಲಿಯೂ ಮನುಜಮಾರ್ತಾಂಡನೂ ಆದ ಇವನಿಗೆ ಬುದ್ಧಿಶಕ್ತಿಯಿಂದಲೂ ಪೌರುಷ ಶಕ್ತಿಯಿಂದಲೂ ಶಾಸ್ತ್ರಪಾರವೂ ಶತ್ರುಸೈನ್ಯಪಾರವೂ ಜೊತೆಯಲ್ಲಿಯೇ ಸಿದ್ಧಿಸಿದುವು. (ನಡುವಿನ) ಉಡುವಣಿ ಹರಿಯುವುದಕ್ಕೆ ಮುಂಚೆಯೇ ಛಲದಿಂದ ಶತ್ರುಸೈನ್ಯವನ್ನು ಚದುರಿಸಿ ಶತ್ರುಸೈನ್ಯದ ರಕ್ತ ಸಮುದ್ರದಲ್ಲಿ ಜಿಗುಳೆ ಬೆಳೆಯುವ ತೆರದಲ್ಲಿ ಬೆಳೆದನು. ಪ್ರತಿಭಟಿಸಿದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿರಲು ಪರಸ್ತ್ರೀಯು ಊರ್ವಶಿಗಿಂತ ಮೇಲಾಗಿದ್ದರೂ ಎಂದೂ ಅವನ ಕಣ್ಣು ಸೋಲುವುದಿಲ್ಲ. ಯುದ್ಧದಲ್ಲಿ ಮೂರುಲೋಕವು ನಿಂತಿದ್ದರೂ ದಾನಮಾಡುವಾಗ
Page #715
--------------------------------------------------------------------------
________________
ಪಂಪಭಾರತಂ
ಮೇರುಪರ್ವತವೇ ಎದುರಿಗಿದ್ದರೂ ತನ್ನ ಶೌರ್ಯಕ್ಕೂ ಔದಾರ್ಯಕ್ಕೂ ಇದು ಸಾಲದೆಂದು ಪ್ರಿಯಗಳ್ಳನು ಚಿಂತಿಸುವನು. ಇತರ ಮಹಾಸಾಮಂತರು ಸ್ವಸ್ವಾದಿ ಬಿರುದುಗಳನ್ನು ಹೊಗಳಿಸಿಕೊಳ್ಳುವುದರಲ್ಲಿ ಸಮಾನರಾಗುತ್ತಾರೆಯೇ ವಿನಾ ಗುಣದಲ್ಲಿ ಸಮಾನರಾಗಲಾರರು.
200
ಈ ಗುಣಾರ್ಣವನು ತ್ಯಾಗದ ಕಂಭವನ್ನು ನಿಲ್ಲಿಸಿ ವೀರದ ಶಾಸನವನ್ನು ಸ್ಥಾಪಿಸಿ ಅಧೀನರಾಗದ ರಾಜರನ್ನು ವಶಪಡಿಸಿಕೊಂಡು ಮೂರು ಲೋಕಗಳಲ್ಲಿ ಯಶಸ್ಸಿಗೆ ಆಕರರಾಗಿದ್ದ ಬದ್ದೆಗದೇವ ಮತ್ತು ನರಸಿಂಹರಿಗಿಂತ ತ್ಯಾಗದಲ್ಲಿಯೂ ವೀರದಲ್ಲಿಯೂ ನಾಲ್ಕು ಬೆರಳಷ್ಟು ಉನ್ನತನಾಗಿದ್ದಾನೆ. ಪಂಪನ ಪ್ರಕಾರ ಚಾಳುಕ್ಯ ವಂಶವೃಕ್ಷವನ್ನು ಈ
ರೀತಿ ಗುರುತಿಸಬಹುದು.
೧. ಯುದ್ಧಮಲ್ಲ-ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು, ಪ್ರತಿದಿನವೂ ಐನೂರು ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
೨. ಅರಿಕೇಸರಿ, ವೆಂಗಿಯ ಪ್ರಧಾನನೊಡನೆ ನಿರುಪಮರಾಜ್ಯವನ್ನು ಮುತ್ತಿದನು.
೪. ಭದ್ರದೇವ
೩. ನರಸಿಂಹ
೫. ದುಗ್ಧಮಲ್ಲ - ಯುದ್ಧಮಲ್ಲ ೬. ಬದ್ದೆಗ-ಭದ್ರದೇವ
೧. ೪೨ ಕಾಳಗಗಳನ್ನು ಜಯಿಸಿದನು. ೨. ಸೋಲದ ಗಂಡನೆಂಬ ಬಿರುದನ್ನುಳ್ಳವನು. ೩. ಭೀಮನನ್ನು ನೀರಿನಲ್ಲಿ ನುಗ್ಗಿ ಹಿಡಿದನು.
೭. ದುಗ್ಧಮಲ್ಲ (ಯುದ್ಧಮಲ್ಲ.)
೮. ನರಸಿಂಹ-ಕಲಿನರಸಿಂಹ-ನರಸಿಂಹ-ನರಗ.
೧. ಸುಭದ್ರ ಮುನಿಯ ಪ್ರತಿಬಿಂಬ ೨. ಲಾಳನನ್ನು ಅಡಿಗೆರಗಿಸಿದನು
೩. ಸಪ್ತಮಾಲವ ಮುಖ್ಯರನ್ನು ಸೋಲಿಸಿದನು ೪. ಪೂರ್ಜರ ರಾಜ ಸೈನ್ಯವನ್ನು ಸೋಲಿಸಿ ಗಂಗಾ ಜಲದಲ್ಲಿ ಕುದುರೆಯನ್ನು ಮೀಯಿಸಿದನು.
೫. ಮಹೀಪಾಲನನ್ನು ಓಡಿಸಿದನು
೬. ಇವನ ಮಿತ್ರನಾದ ಸಂಗನನ್ನು ನಾಶಪಡಿಸಿದನು. ೭. ಇವನ ಹೆಂಡತಿ ಜಾಕವ್ವ
೯. ಅರಿಕೇಸರಿ-ಅರಿಗ-ಗೊಜ್ಜಿಗನಿಂದ ವಿಜಯಾದಿತ್ಯನನ್ನು ರಕ್ಷಿಸಿದ
Page #716
--------------------------------------------------------------------------
________________
೭೧೧.
ಅನುಬಂಧ - ೧
೧೦. ಬದ್ದೆಗ-ಅರಿಕೇಸರಿಯ ಹಿರಿಯ ಮಗ, ರಾಜಧಾನಿ ಗಂಗಾಧಾರಾ (ಯಶಸ್ತಿಲಕದಿಂದ) ಫೀಟರು ಇದರಲ್ಲಿ ಉಕ್ತವಾಗಿರುವ ಕೆಲವು ಸಂಗತಿಗಳಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಸೂಚಿಸಿದ್ದಾರೆ. (Dynasties of the Canarese Districts) ಎಂಬ ಗ್ರಂಥದಲ್ಲಿ, ಅವುಗಳನ್ನು ಹೀಗೆ ಸಂಗ್ರಹಿಸಬಹುದು : ನರಸಿಂಹ ಭದ್ರದೇವರು ಏಕವ್ಯಕ್ತಿಗಳು - (ಮುಂದಿನ ಸಂಶೋಧನೆಯಿಂದ ಇದು ಸರಿಯಲ್ಲವೆಂದು ಸಿದ್ಧಾಂತವಾಗಿದೆ) ವಂಶವೃಕ್ಷದಲ್ಲಿ ಬರುವ ನರಸಿಂಹನು ಲಾಳನನ್ನು ಸೋಲಿಸಿದುದನ್ನು ಅವರು ಹೇಳಿಲ್ಲ. ಸಂಗನನ್ನು ಸೋಲಿಸಿದುದೂ ಅವರಿಂದ ಉಕ್ತವಾಗಿಲ್ಲ. ಆದರೆ ರೈಸರು ತಮ್ಮ ಪಂಪಭಾರತದ ಪೀಠಿಕೆಯ ನಾಲ್ಕನೆಯ ಪುಟದ ಅಡಿಟಿಪ್ಪಣಿಯಲ್ಲಿ ಇದನ್ನು ನಮೂದಿಸಿದ್ದಾರೆ. ಫೀಟರು ಇವನ ಹೆಂಡತಿಯು 'ಚಂದ್ರಾನನೆ' ಎಂದು ಹೇಳುತ್ತಾರೆ. ರೈಸರು 'ಜಾತವೆ' ಎಂದಿದ್ದಾರೆ (ಪಂ.ಭಾ.ಪೀಠಿಕೆ). ರಾ. ನರಸಿಂಹಾಚಾರ್ಯರು ಜಾಕವ್ವ ಎಂದೇ ಹೇಳಿದ್ದಾರೆ. ಮೂಲದಲ್ಲಿ ಆ ಭಾಗವು ಉಕ್ತವಾಗಿದೆ. ಚಂದ್ರಾನನಾ ಎಂಬುದು ವಿಶೇಷಣವಿರಬಹುದು. ಅರಿಕೇಸರಿಯ ತಂದೆಯ ಹೆಸರು ಯುದ್ಧಮಲ್ಲನೆಂದು ಫೀಟರು ಹೇಳುತ್ತಾರೆ. ಇದು ಸರಿಯಲ್ಲ. ಏಕೆಂದರೆ ಪಂಪಭಾರತ, ಪರಭಣಿ ತಾಮ್ರಶಾಸನ ವೇಮಲುವಾಡಶಾಸನಗಳಲ್ಲಿ 'ನರಸಿಂಹ' ಎಂದೇ ಹೇಳಿದೆ - ಬದ್ದೆಗನು ಅರಿಕೇಸರಿಯ ಮೊದಲನೆಯ ಮಗನೆಂದು ಸೋಮದೇವನು ತನ್ನ 'ಯಶಸ್ತಿಲಕಚಂಪುವಿನಲ್ಲಿ ತಿಳಿಸಿದ್ದಾನೆ. ಆದುದರಿಂದ ಇವನಿಗೆ ಇನ್ನೂ ಇತರ ಮಕ್ಕಳಿದ್ದಿರಬಹುದೆಂದು ಊಹಿಸಲು ಅವಕಾಶವಿದೆ. ಆದರೆ ಪರಭಣಿಯ ತಾಮ್ರ ಶಾಸನದಲ್ಲಿ ಭದ್ರದೇವನು ಅರಿಕೇಸರಿಯ ಒಬ್ಬನೇ ಮಗನೆಂದು ಉಕ್ತವಾಗಿದೆ.
ಪಂಪಭಾರತದಲ್ಲಿ ಬರುವ ಚಾಳುಕ್ಯವಂಶವೃಕ್ಷಕ್ಕೆ ಒಂದನೇ ಅರಿಕೇಸರಿಯ ಕೋಲೇಪಾರಾ ದಾನಪತ್ರವೂ ಎರಡನೆಯ ಅರಿಕೇಸರಿಯ ವೇಮಲವಾಡ ಶಿಲಾ ಲೇಖನವೂ ಮೂರನೆಯ ಅರಿಕೇಸರಿಯ ಪರಭಣಿ ತಾಮ್ರಶಾಸನವೂ ಉಪಷ್ಟಂಭಕವಾಗಿವೆ. ಇವುಗಳಲ್ಲಿರುವ ಈ ಭಾಗವನ್ನು ಮುಂದಿನ ರೀತಿಯಲ್ಲಿ ಚಿತ್ರಿಸಬಹುದು.
ಪರಭಣಿಯ ತಾಮ್ರಶಾಸನ
ಚಾಳುಕ್ಯವಂಶ (ಆದಿತ್ಯಭವ) ೧. ಯುದ್ಧಮಲ್ಲ ೧. ಸಪಾದಲಕ್ಷ ರಾಜ್ಯವನ್ನು ಆಳುತ್ತಿದ್ದನು..
೨. ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
೩. ಕಲಿಂಗತ್ರಯದೊಡನೆ ವೆಂಗಿಯನ್ನು ಸಂರಕ್ಷಿಸಿದನು. ಅರಿಕೇಸರಿ
ನರಸಿಂಹ
೪. ಭದ್ರದೇವ
Page #717
--------------------------------------------------------------------------
________________
೭೧೨
ಪಂಪಭಾರತಂ
೫. ಯುದ್ಧಮಲ್ಲ
j,
ಬದ್ದೆಗೆ
೧. ಸಂಗಮನಿಗೆ ತೊಂದರೆ ಕೊಟ್ಟನು ೨. ಭೀಮನನ್ನು ಜಲಯುದ್ಧದಲ್ಲಿ ಸೋಲಿಸಿದನು
* ೭. ಯುದ್ಧಮಲ್ಲ
೮.
ನರಸಿಂಗ
೯. ಅರಿಕೇಸರಿ-ಇವನ ಹೆಂಡತಿ ಪ್ರಖ್ಯಾತ ರಾಷ್ಟ್ರಕೂಟರ ಲೋಕಾಂಬಿಕೆ
೧೦. ಭದ್ರದೇವ-ಬದ್ದೆಗ-ಶುಭದಾಮ ಜಿನಾಲಯವನ್ನು ಕಟ್ಟಿಸಿದನು
೧೧. ಅರಿಕೇಸರಿ
೧. ರಾಜಧಾನಿ ಲೆಂಬುಳಪಾಟಕ ೨. ಸೋಮದೇವಸೂರಿಗೆ ದಾನ ಕೊಟ್ಟನು
ವೇಮಲವಾಡ ಶಿಲಾಶಾಸನ
ಚಾಲುಕ್ಯಕುಲ ೧. ವಿನಯಾದಿತ್ಯ ಅಥವಾ ಯುದ್ಧಮಲ್ಲ
೧. ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು. ೨. ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
೩. ಚಿತ್ರಕೂಟವನ್ನು ವಶಮಾಡಿಕೊಂಡನು. ಅರಿಕೇಸರೀಶ-ಬಲದಿಂದ ವೆಂಗಿ ದೇಶವನ್ನು ತೆಗೆದುಕೊಂಡನು ನರಸಿಂಹವರ್ಮ-ಅಥವಾ ರಾಜಾದಿತ್ಯ (?) ಯುದ್ಧಮಲ್ಲ ನರಸಿಂಹ ದೇವ-ಗುರ್ಜರಾಜ ಸೈನ್ಯವನ್ನು ಜಯಿಸಿದನು, ಏಳು ರಾಜರನ್ನು ಜಯಿಸಿದನು ಅರಿಕೇಸರಿ-ಗೋವಿಂದ (ಗೊಜ್ಜಿಗ) ನಿಂದ ಬಿಜ್ಜನನ್ನು ರಕ್ಷಿಸಿದನು. ಹೆಂಡತಿ ರೇವಕ್ಕ (?)
...
Page #718
--------------------------------------------------------------------------
________________
ಅನುಬಂಧ – ೧
202
ಕೊಲ್ಲೇಪಾರಾ ದಾನಪತ್ರ
ಚಾಳುಕ್ಯ ವಂಶ
I
ರಣವಿಕ್ರಮಸತ್ಯಾಶ್ರಯ ಪೃಥ್ವಿಪತಿ ಮಹಾರಾಜ ವಿನಯಾದಿತ್ಯ ಯುದ್ಧಮಲ್ಲ
T
ಅರಿಕೇಸರಿ
ಮಧ್ಯಯುಗದ ಇತಿಹಾಸದಲ್ಲಿ ನಾಲ್ಕು ಚಾಲುಕ್ಯ ಕುಲಗಳಿದ್ದವು. ಒಂದನೆಯದು ಬಾದಾಮಿಯದು. ಎರಡನೆಯದು ಕಲ್ಯಾಣಿಯದು. ಮೂರನೆಯದು ವೆಂಗಿಯದು. ನಾಲ್ಕನೆಯದು ಪಂಪ ಮತ್ತು ಸೋಮದೇವರಿಂದ ಉಕ್ತವಾದುದು. ಇವುಗಳಲ್ಲಿ ಬಾದಾಮಿಯ ಚಾಳುಕ್ಯಕುಲದಿಂದ ವೆಂಗಿಯ ಚಾಳುಕ್ಯಕುಲವು ಉತ್ಪನ್ನವಾಯಿತು. ಕಲ್ಯಾಣಿಯ ಚಾಲುಕ್ಯರು ಬಾದಾಮಿಯ ಚಾಲುಕ್ಯರ ವಂಶಜರೆಂದು ತಾವೇ ಹೇಳಿಕೊಂಡಿದ್ದಾರೆ. ಬಾದಾಮಿಯ ಚಾಲುಕ್ಯರ ಕಾಲ ಮತ್ತು ಕಲ್ಯಾಣಿಯ ಚಾಲುಕ್ಯರ ಕಾಲಗಳಿಗೆ ಮಧ್ಯೆ ರಾಷ್ಟ್ರಕೂಟರು ಆಳಿದರು. ಈ ಎರಡು ಕುಲಗಳನ್ನು ಜೋಡಿಸಿದವನು ಯಾರು ಎಂಬುದು ನಿಶ್ಚಿತವಾಗಿ ತಿಳಿಯದಿದ್ದರೂ ಈ ಎರಡು ಕುಲಗಳಿಗೂ ಸಂಬಂಧವಿತ್ತೆಂದು ಹೇಳುವುದಕ್ಕೆ ಆಧಾರ ಸಿಗುತ್ತದೆ. ವೆಂಗಿಯೂ ಇವುಗಳ ಶಾಖೆಗೇ ಸೇರಿರಬಹುದು. ಇವರ ಸ್ಥಳವೂ ಲಕ್ಷ್ಮೀಶ್ವರಕ್ಕೆ ಅಕ್ಕಪಕ್ಕದಲ್ಲಿದ್ದಿರಬಹುದು.
Page #719
--------------------------------------------------------------------------
________________
ಅನುಬಂಧ-೨ ಪಂಪಭಾರತದ ಅಧ್ಯಯನಕ್ಕೆ ಸಹಾಯಕವಾಗಿರುವ ಗ್ರಂಥಗಳು ಹಾಗೂ
ಲೇಖನಗಳು* ೧. ಆದಿಪುರಾಣ ಸಂಗ್ರಹ (ಉಪೋದ್ಘಾತ) - ಸಂ. ಎಲ್. ಗುಂಡಪ್ಪ (೧೯೫೫)
ಕರ್ಣನ ಮೂರು ಚಿತ್ರಗಳು-ಶಂ.ಬಾ.ಜೋಶಿ (೧೯೪೯) ಕನ್ನಡ ಕಾವ್ಯಗಳಲ್ಲಿ ಕಿರಾತರ್ಜುನ ಪ್ರಸಂಗ-ದೇವೇಂದ್ರಕುಮಾರ ಹಕಾರಿ (೧೯೬೩) ಕನ್ನಡ ರತ್ನತ್ರಯ-ಎನ್. ಅನಂತರಂಗಾಚಾರ್ (೧೯೫೯) ನಾಡೋಜ ಪಂಪ- ಮುಳಿಯ ತಿಮ್ಮಪ್ಪಯ್ಯ (೧೯೩೮) ಪಂಪ-ತೀ.ನಂ.ಶ್ರೀಕಂಠಯ್ಯ (೧೯೪೨) ಪಂಪ-ಒಂದು ಅಧ್ಯಯನ - ಬೆಂಗಳೂರು ವಿಶ್ವವಿದ್ಯಾಲಯ ಪಂಪಕವಿ ವಿರಚಿತ ಆದಿಪುರಾಣಂ (ಪಂಪಕವಿವಿರಚಿತಂ) - ಸಂ. ಎಸ್.ಜಿ.
ನರಸಿಂಹಾಚಾರ್ (೧೯೮೦) ೯. ಪಂಪನ ಕರ್ಣರಸಾಯನ - ಸಂಕ್ಷಿಪ್ತ ಸರಳಗದ್ಯಾನುವಾದ - ಶ್ರೀಧರ (೧೯೫೯) ೧೦. ಪಂಪನ ಕಲಿಕರ್ಣ - ಜಿ. ಬ್ರಹಪ್ಪ (೧೯೫೨) ೧೧. ಪಂಪ-ನನ್ನಯ - ಒಂದು ಸಮೀಕ್ಷೆ - ಕೆ. ವೆಂಕಟರಾಮಪ್ಪ ೧೨. ಪಂಪಭಾರತ- ಉಪೋದ್ಘಾತ ಸಂ.ಬಿ. ವೆಂಕಟನಾರಣಪ್ಪ (೧೯೩೦) ೧೩. ಪಂಪನ ಭರತ-ಬಾಹುಬಲಿ - ಜಿ. ಬ್ರಹಪ್ಪ, ಕೃಷ್ಣರಾವ್, ಕೆ.ಎಂ. (೧೯೫೨) ೧೪. ಪಂಪ ಭಾರತ ದೀಪಿಕೆ - ಡಾ. ಡಿ.ಎಲ್. ನರಸಿಂಹಾಚಾರ್ (೧೯೭೨) ೧೫, ಪಂಪ ಮಹಾಕವಿ - ಸಂ.ರಂ. ಶ್ರೀ. ಮುಗಳಿ (೧೯೭೦) ೧೬. ಪಂಪಮಹಾಕವಿ ವಿರಚಿತಂ ಆದಿಪುರಾಣಂ ಉಪೋದ್ಘಾತ ಸಂ : ಕೆ.ಜಿ.
ಕುಂದಣಗಾರ, ಎ.ಪಿ. ಚೌಗುಲೆ (೧೯೫೩) ೧೭. ಭರತೇಶನ ನಾಲ್ಕು ಚಿತ್ರಗಳು - ಮಿರ್ಜಿ ಅಣ್ಣಾರಾಯ (೧೯೫೪) ೧೮. ಮಹಾಕವಿ ಪಂಪ ಹಾಗೂ ಅವನ ಕೃತಿಗಳು (ಕ.ವಿ.ವಿ.) (೧೯೬೬) ೧೯. ಯುಗಾಂತ - ಇರಾವತಿ ಕರ್ವೆ ೨೦. ವಚನಭಾರತ- ಎ.ಆರ್. ಕೃಷ್ಣಶಾಸ್ತ್ರಿ ೨೧. ವ್ಯಾಸ, ಪಂಪ, ನಾರಣಪ್ಪ - ಇವರ ಮಹಾಭಾರತಗಳು (ಒಂದು ತೌಲನಿಕ
ವಿಮರ್ಶೆ) ನ. ಸುಬ್ರಹ್ಮಣ್ಯಂ (ಮೈಸೂರು ವಿಶ್ವವಿದ್ಯಾಲಯದ ಮಹಾಪ್ರಬಂಧ) (೧೯೫೧)
* ಡಾ. ಮುಗಳಿಯವರ 'ಕನ್ನಡ ಸಾಹಿತ್ಯ ಚರಿತ್ರೆ'ಯನ್ನು ಈ ಸಂದರ್ಭದಲ್ಲಿ ಉಪಯೋಗಿಸಿ ಕೊಳ್ಳಲಾಗಿದೆ.
Page #720
--------------------------------------------------------------------------
________________
೭೧
ಅನುಬಂಧ - ೨ ೨೨. ಶ್ರೀ ಕವಿ ಪಂಪ-ಜಿ.ಪಿ. ರಾಜರತ್ನಂ (೧೯೫೧) ೨೩. ತಪೋನಂದನ - ಕುವೆಂಪು ೨೪, ಪರಿಶೀಲನ - ಜಿ.ಎಸ್. ಶಿವರುದ್ರಪ್ಪ 98. Discriptive Grammer pf Pampa Bharata-(Osmania- University
Doctorate Thesis) - B. Ramachandra Rao ೨೬. Mahakavi Pampa - V. Sitaramaiah - ೧೯೬೭ ೨೭. ಪಂಪಭಾರತ ಕಥಾಲೋಕ - ಆರ್.ಎಲ್. ಅನಂತರಾಮಯ್ಯ ೨೮. ಕನ್ನಡ ಸಾಹಿತ್ಯ ಚರಿತ್ರೆ - ಬಿ.ಎಂ. ಶ್ರೀಕಂಠಯ್ಯ, ಕನ್ನಡ ಕೈಪಿಡಿ ಭಾಗ-೨ ೨೯. ಕನ್ನಡ ಕವಿ ಚರಿತೆ - ಆರ್.ನರಸಿಂಹಾಚಾರ್ಯ. ೩೦. ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ - ಮರಿಯಪ್ಪ ಭಟ್ಟ, ಎಂ. ೩೧. ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ - ಶ್ರೀ ಟಿ.ಎಸ್. ಶಾಮರಾವ್ ಮತ್ತು ಡಾ.
ಮೇ. ರಾಜೇಶ್ವರಯ್ಯ ೩೨. ಕನ್ನಡ ಸಾಹಿತ್ಯ ಚರಿತ್ರೆ - ಎನ್.ಕೆ. ಕುಲಕರ್ಣಿ ೩೩. ಕನ್ನಡ ಸಾಹಿತ್ಯ ಚರಿತ್ರೆ - ಕೆ. ವೆಂಕಟರಾಮಪ್ಪ, ಪ್ರಚಾರ ಪುಸ್ತಕಮಾಲೆ ಮೈಸೂರು
ವಿಶ್ವವಿದ್ಯಾನಿಲಯ | 29. History of Kannada Literature - R. Narasimhacharya 28. History of Kannada Literature E.P. Rice (Heritage of India Series) ೩೬. History of Kannada Literature - Dr. R.S. Mugali
ಲೇಖನಗಳು ೧. ಅಕ್ಷಯವಸ್ತ - ಜಿ.ಎಸ್. ಶಿವರುದ್ರಪ್ಪ (ಪ್ರ.ಕ. ೪೨.-೨,೩) ೨. ಅಬ್ಬಣಬ್ಬೆ - ಮಗಳಲ್ಲ, ಮೊಮ್ಮಗಳು- ಎಂ.ಎಂ. ಕಲಬುರ್ಗಿ (ಕ.ನು. ೩೨-೨)
ಅರಿಕೇಸರಿ ಪಂಪರು - ದೇ. ಪಾಂಡುರಂಗರಾಯರು (ಪ್ರಾಚೀನ ಕರ್ನಾಟಕ ೨-೧) ಅರಿಕೇಸರಿಯೂ ಪಂಪನ ಯುಗವೂ - ರಾ.ಸ್ವಾ. ಪಂಚಮುಖಿ (ಕ.ಸಾ.ಪ. ೩೧-೨) ಅಸಗ, ಪೊನ್ನ, ಪಂಪ-ಚಂದ್ರಕಾಂತ ನಿಂಗರಾಜ ಪಾಟೀಲ (ಕ.ಸಾ.ಪ. ೧೭-೩) ಆದಿಕವಿ ಪಂಪ - ಕೆ.ಜಿ. ಕುಂದಣಗಾರ (ಸರ್ವಧರ್ಮ ಸಮ್ಮೇಳನ ರಜತ ಮಹೋತ್ಸವ ಸಂಚಿಕೆ) ಆದಿಕವಿಯನ್ನು ಕುರಿತು - ಜೈ (ಕನ್ನಡ ನುಡಿ ೨-೯)
46
Page #721
--------------------------------------------------------------------------
________________
202
es.
ಪಂಪಭಾರತಂ
ಆದಿಕವಿ ಪಂಪನ ಜೀವನ ಚರಿತ್ರೆಯಲ್ಲಿಯ ಕೆಲವು ಅಂಶಗಳು-ವಿ.ಜಿ. ಕುಲಕರ್ಣಿ (J.K.U. XI-VI)
ಆದಿಪಂಪನ ಜೀವನವಿಚಾರ
6.
oo. ಆದಿಪಂಪನ ವಿಕ್ರಮಾರ್ಜುನ ವಿಜಯ
n0-0)
೪-೧೨) .
00. ಆದಿಪಂಪನು - ಅಚ್ಚಗನ್ನಡಿಗನೇ - ಪಾಂ. ಭೀ. ದೇಸಾಯಿ, (ಜ.ಕ. ೧೧-೧೨) ಆದಿಪಂಪನೂ ಸಮುದಾಯದ ಮಾಘಣಂದಿಯೂ – ಕೆ.ಜಿ.ಕುಂದಣಗಾರ (ಜ.ಕ.
೧೨.
9-9)
-
ವಿ.ಜಿ. ಕುಲಕರ್ಣಿ (ಕರ್ಮವೀರ ೪೧-೫೧)
ಬಸವಲಿಂಗಯ್ಯ ಇಟಗಿ (ತಾವರೆ
02. ಆದಿಪಂಪ ಮಹಾಕವಿಯ ವಿಷಯವು - ಎಸ್. ತಿಮ್ಮಪ್ಪಯ್ಯಶಾಸ್ತ್ರೀ (ಕ.ಸಾ.ಪ.
-
೧೪. ಆದಿಪುರಾಣ -ಎಚ್ ಶೇಷಯ್ಯಂಗಾರ್ (ಜನವಾಣಿ ೧೪-೩).
೧೫. ಆದಿಪುರಾಣದ ನಾಯಕನು – ಕೆ. ಭುಜಬಲಿಶಾಸ್ತ್ರಿ (ಶ.ಸಾ. ೫-೧೦) ೧೬. ಆದಿಪುರಾಣದ ರಚನಾಕೌಶಲವನ್ನು ಕುರಿತೊಂದು ಅಪಪಾಠ - ಎಂ. ಗೋವಿಂದ ಪೈ (ವಾಗ್ಯೂಷಣ ೧-೧)
೧೭. ಆದಿಪುರಾಣದ ರಮ್ಯತೆ - ಶೇಷ, ಭೀ. ಪಾರಿಶವಾಡ (ಕ.ಸಾ.ಪ. ೮-೩) ೧೮. ಆದಿಪುರಾಣದಲ್ಲಿ ಧರ್ಮ - ಕಾವ್ಯಧರ್ಮಗಳ ಸಮನ್ವಯ - ವಿ. ಅಮೃತಾ (ಸವಿನೆನಪು. ಪು. ೨೪೬)
-
-
೧೯. ಆದಿಪುರಾಣದಲ್ಲಿ ವೈರಾಗ್ಯ ನಿರೂಪಣೆ - ಸಿ.ಪಿ.ಕೆ. (ಕನ್ನಡ ಚತುರ್ಮುಖ ಪು.೧) ೨೦. ಆದಿಪುರಾಣವು - ಶೇಷ. ಭೀ. ಪಾರಿಶವಾಡ (ಪ್ರಬೋಧ ೨-೫, ೬) ೨೧. 'ಈ ಸಭೆಯೊಳ್ ಅಗ್ರಪೂಜೆಗಾರ್ ತಕ್ಕರ್' - ಪಂಪಭಾರತದ ಒಂದು ಪ್ರಸಂಗ - ಎಂ. ಎಸ್. ಸ್ವಾಮಿ (ಕ.ನು. ೩೧-೧೦)
99. ಒಂದು ವಿವೇಚನೆ : ರಕ್ಕಸಿಯರು (ರು?) ಕಂಡ ಕುಂಬಳ
(5.3. 2.9-2)
೨೩. ಒಂದೆ ಗರಡಿಯೊಳೋದಿದ ಮಾನಸರ್ - ಸಿ.ಪಿ.ಕೆ. (ಕಾವ್ಯಾರಾಧನ ಪು.೧೦) ೨೪. ಕರ್ಣನ ಒಂದು ಚಿತ್ರ - (ಕಾವ್ಯಪಾತ್ರಪರಿಚಯ)- ಎಂ.ವಿ. ಸೀತಾರಾಮಯ್ಯ (ಬಾಳಿನ ಬುತ್ತಿ ಪು. ೧೦೫)
೨೫. ಕರ್ಣನ ನಾಮಾಂತರಗಳು
-
'ಕುಶಲಾನುಜ'
ಕೆ. ವೆಂಕಟರಾಯಾಚಾರ್ಯ (ಪ್ರ.ಕ. ೪೪-೧)
೨೬. ಕರ್ಣನ ವಿನಯಶ್ರೀ - ಪ್ರಭುಶಂಕರ (ಪ್ರ.ಕ. ೩೦-೨)
೨೭.
ಕರ್ಣನ ಸ್ವಾಮಿನಿಷ್ಠೆ - ಪುಟ್ಟಬಸವೇಗೌಡ (ಕ.ನು. ೩೨-೧) ೨೮. ಕರ್ಣಪಾತ್ರದ ತೊಡಕು ಎಸ್.ವಿ.ರಂಗಣ್ಣ (ಹೊನ್ನ ಶೂಲ - ಪು. ೬೪)
Page #722
--------------------------------------------------------------------------
________________
* ಅನುಬಂಧ - ೨
೭೧೭ ೨೯. ಕರ್ಣಾಟಕ ಕವಿಕುಲಾಗ್ರಣಿಯಾದ ಪಂಪಮಹಾಕವಿ -ಎನ್. ಅನಂತರಂಗಾಚಾರ್
- (ಕ.ಸಾ.ಪ. ೧೫-೪) ೩೦. ಕನಕನ ಬೇಳ್ವ - ಒಂದು ಸಮಾಲೋಚನೆ - ನ. ಸುಬ್ರಹ್ಮಣ್ಯಂ (ಪ್ರ.ಕ.೪೪-೪) ೩೧. ಕನ್ನಡ ಸಾಹಿತ್ಯದಲ್ಲಿ ಬಾಹುಬಲಿಯ ಕಲ್ಪನೆ - 'ಶಮನ' (ಪ್ರ.ಕ. ೩೦-೪) ೩೨. ಕವಿ ಕಂಡು ನಾಡು - ಬಿ.ಎಂ. ಶ್ರೀಕಂಠಯ್ಯ (ಕ.ನು. ೧-೫) ೩೩. ಕಳಶಜನಿಂ ಬಳಿಕ ಕರ್ಣಂಗೆ - ಕೆ. ವೆಂಕಟರಾಮಪ್ಪ (ಪ್ರ.ಕ. ೪೯-೨) ೩೪. “ಕಾವ್ಯಧರ್ಮಮಂ - ಧರ್ಮಮುಮಂ" - ಎಂ. ರಾಮಕೃಷ್ಣ (ಪ್ರ.ಕ. ೫೧-೩) ೩೫. ಕುಲವೆಂಬುದುಂಟೆ ಬೀರಮೆ ಕುಲಮಲ್ಲದೆ - ತಿ.ತಾ. ಶರ್ಮ (ಕ.ನು. ೧೧-೪) ೩೬. ಕೆಲವು ನುಡಿಮುತ್ತುಗಳು - ಕೆ. ವೆಂಕಟರಾಯಾಚಾರ್ಯ (ಸಾಹಿತ್ಯದ ಹಿನ್ನೆಲೆ
ಪು. ೮೫) ೩೭. ಗದಾಯುದ್ದದಲ್ಲಿ ಪಂಪನು ಚಿತ್ರಿಸಿರುವ ದುರ್ಯೋಧನ - ಯು. ಕೆ.
ಸುಬ್ಬರಾಯಾಚಾರ್ (ಪ್ರ.ಕ. ೧೨೯-೪) ೩೮. ಗಂಗಾಧರ ಶಾಸನ - ಒಂದು ಉತ್ತರ- ಎಂ.ಎಂ. ಕಲಬುರ್ಗಿ (ಕನು. ೩೨-೬,೭) ೩೯. ಗಂಗಾಧರ ಶಾಸನ - ಕೈಗೆ ಕನ್ನಡಿ - ಪಾಂ. ಭೀ. ದೇಸಾಯಿ (ಕ.ನು. ೩೨-೪,೫) ೪೦. ಗಂಗಾಧರಂ ಶಾಸನ - ಕೆಲವು ಹೊಸ ವಿಚಾರಗಳು - ಎಂ.ಎಂ. ಕಲಬುರ್ಗಿ
(ಕ.ನು. ೩೨-೧೧). ೪೧. ಚಿತ್ರಗಾರ ಪಂಪ-ಶಾಂತಿ (ಪ್ರ.ಕ. ೩೪-೧) ೪೨. ಚಿತ್ರಗಾರ ಪಂಪ - ಎಸ್.ಜಿ. ಪ್ರಭಾಚಂದ್ರ (ಗುರುದೇವ ೨-೫, ೬-೭) ೪೩. ಜಿನವಲ್ಲಭನ ಗಂಗಾಧರದ ಶಿಲಾಶಾಸನ - ಅನು: ಸೀತಾರಾಮ ಜಾಗೀರದಾರ್
(ಪ್ರ.ಕ. ೫೦-೩) ೪೪. ಜಿನವಲ್ಲಭನ ಗಂಗಾಧರ ಶಾಸನವನ್ನು ಕುರಿತು ಓದುಗನೊಬ್ಬನ ಪ್ರಶ್ನೆಗಳು
ಸೀತಾರಾಮ ಜಾಗೀರದಾರ್ - ಕ.ನು. (೩೨-೪,೫) ೪೫. ಜಿನವಲ್ಲಭನ ಗಿರಿಶಾಸನ - ಪಾಂ. ಭೀ.ದೇಸಾಯಿ (ಕ.ನು. ೩೧-೩, ೪, ೫) ೪೬. ಜೈನ ಮನ್ವಂತರಗಳಲ್ಲಿ ಸಮಾಜವಿಕಾಸದ ಚಿತ್ರ (ಆದಿಪುರಾಣದಲ್ಲಿ ರೇಖಿಸಿದಂತೆ)
- ದ.ರಾ. ಬೇಂದ್ರೆ (ಜೀವನ - ೧-೧) ೪೭. ತಿದ್ದುಪಡಿಯ ಗಡಿಬಿಡಿ - ಗಂಗಾಧರಂ ಶಾಸನ - ಪಾಂ.ಭೀ.ದೇಸಾಯಿ (ಕ.ನು.
೩೧-೮)
ದೂತಪ್ರಸಂಗ - ಬಸವಲಿಂಗಯ್ಯ ಮಲ್ಲಾಪುರ (ಪ್ರ.ಕ. ೪೪-೪) ೪೯. ಬ್ರೌಪದಿಯ ಶ್ರೀಮುಡಿ - ಕುವೆಂಪು (ಬ್ರೌಪದಿಯ ಶ್ರೀಮುಡಿ ಪು.೧) ೫೦. ನನ್ನ ಮೆಚ್ಚಿನ ಮಹಾಕವಿ ಪಂಪ - ತ.ಸು. ಶಾಮರಾಯ (ಮಧುರ ಕರ್ಣಾಟಕ
ವಿಶೇಷ ಸಂಚಿಕೆ - ಸಂ: ನಂಜುಂಡಶಾಸ್ತಿ)
Page #723
--------------------------------------------------------------------------
________________
೭೧೮
ಪಂಪಭಾರತಂ ೫೧. ನಮ್ಮ ರತ್ನತ್ರಯರ ವಿನಯ - ಜಿ.ಪಿ.ರಾಜರತ್ನಂ (ಕ.ಸಾ.ಪ. ೨೯-೧) ೫೨. ನೀಲಾಂಜನೆ - ಪಾ.ಶ. ಶ್ರೀನಿವಾಸ (ಉತ್ಥಾನ ೪-೧) ೫೩. ನೀಲಾಂಜನೆಯ ನೃತ್ಯದಿಂದ ಪುರುದೇವನ ವೈರಾಗ್ಯ- (ಪಂಪನ ಆದಿಪುರಾಣದಿಂದ)
- ತಿರುಮಲರಾವ್ ದೇಸಾಯಿ ( ತಾವರೆ ೧೦-೧) ೫೪. (ನೆತ್ತಮನಾಡಿ....) ಶೇಷ. ಭೀ. ಪಾರಿಶವಾಡ (ಜಿನವಾಣಿ Before ೧೯೩೬) ೫೫. ನೆತ್ತಮನಾಡಿದರಾರು (ಉತ್ತರಕ್ಕೆ ತಮಿಳು ಭಾರತದ ನೆರವು) - ಕ.ವೆಂ.
ರಾಘವಾಚಾರ್ (ಕ.ನು. ೨-೪) ೫೬. ನೆತ್ತವನ್ನಾಡಿದವನಾರು - ಮು. ತಿಮ್ಮಪ್ಪಯ್ಯ (ಜ.ಕ. ೧೪-೧) ೫೭. ನೆತ್ತವನ್ನಾಡಿದವರಾರು - ಡಿ. ರೇಣುಕಾಚಾರ್ಯ (ಜ.ಕ. ೧೪-೬) ೫೮. ನೆತ್ತವನ್ನಾಡಿದುದು ಯಾರೊಡನೆ - ಮುಳಿಯ ತಿಮ್ಮಪ್ಪಯ್ಯ (ಜ.ಕ. ೧೪-೫) ೫೯. ಪರಭಣಿಯ ತಾಮ್ರಶಾಸನ ಮತ್ತು ಪಂಪಭಾರತ - ಸಂಗ್ರಾ: ಎ.ಆರ್. ಕೃಷ್ಣಶಾಸ್ತ್ರೀ
ಬಿ.ವೆಂ. (ಪ್ರ.ಕ. ೧೫-೧) ೬೦. ಪಂಪ - ದೊ.ಲ. ನರಸಿಂಹಾಚಾರ್ (ಕ.ನು. ೧೦-೩೪) ೬೧. ಪಂಪಕವಿ ಮತ್ತು ಮೌಲ್ಯ ಪ್ರಸಾರ - ಡಾ. ಎಂ. ಚಿದಾನಂದಮೂರ್ತಿ (ಪ್ರ.ಕ.
೪೨-೧) ೬೨. ಪಂಪಕವಿಯ ಇತಿವೃತ್ತದ ವಿಚಾರ - ಸೀತಾರಾಮ ಜಾಗೀರ್ದಾರ್ (ಕ.ಸಾ.ಪ.
೫೪-೧)
ಪಂಪಕವಿಯ ಎರಡು ಪದ್ಯಗಳು - ಹಂಪ ನಾಗರಾಜಯ್ಯ (ಪ್ರ.ಕ. ೪೬-೧) ೬೪, ಪಂಪಕವಿಯೂ ಚಾಳುಕ್ಯರೂ - ಕೆ. ವೆಂಕಟರಾಯಾಚಾರ್ಯ (ಸುಬೋಧ
೨೮-೬) ೬೫. ಪಂಪ ಕುಮಾರವ್ಯಾಸರಲ್ಲಿ ಕೃಷ್ಣ ಬ್ರೌಪದಿಯರ ಚಿತ್ರ - ಜಿ. ವೆಂಕಟಸುಬ್ಬಯ್ಯ
(ಶ್ರದ್ದಾಂಜಲಿ ಪು. ೧೧೮) ೬೬. ಪಂಪ-ಕುಮಾರವ್ಯಾಸರಲ್ಲಿ ಸುಪ್ರತೀಕ ಪ್ರಸಂಗ - ಸಿ.ಪಿ.ಕೆ. (ಸವಿನೆನಪು ಪು.
೩೭೦) ೬೭. ಪಂಪನ ಅರಿಕೇಸರಿ - ಕೆ. ವೆಂಕಟರಾಮಪ್ಪ (ಪ್ರ.ಕ. ೪೮-೧) ೬೮. ಪಂಪನ ಆದಿಪುರಾಣ - ಓ.ಎನ್. ಲಿಂಗಣ್ಣಯ್ಯ (.ಸಾ. ೨-೧೦) ೬೯. ಪಂಪನ ಆದಿಪುರಾಣ - ಎಸ್. ಆರ್. ಮಳಗಿ (ಪ್ರದೀಪ ೧-೩) ೭೦. ಪಂಪನ ಆದಿಪುರಾಣ ರಚನಾಕಾಲ - ಎಂ. ಗೋವಿಂದ ಪೈ (ಶ.ಸಾ.೩-೭) ೭೧. ಪಂಪನ ಆಶ್ರಯದಾತನಾದ ಅರಿಕೇಸರಿ (೩)ಯ ಕಾಲದ ಶಾಸನಗಳು (ಸಾರಾಂಶ)
ಮೂಲ: J.A.H.R.S.VI - ೩, ೪, (ಕ.ಸಾ.ಪ. ೧೮-೪)
Page #724
--------------------------------------------------------------------------
________________
೭೧೯
ಅನುಬಂಧ - ೨ - ೭೨: ಪಂಪನ ಆಶ್ರಯದಾತನಾದ ಅರಿಕೇಸರಿಯ ವಂಶ - ಎನ್. ಲಕ್ಷ್ಮೀನಾರಾಯಣ
ರಾವ್ (ಅಭಿವಂದನೆ ಪು. ೪೬೫) ೭೩. ಪಂಪನ ಆಶ್ರಯದಾತ ಯಾರು ? - ಕೆ. ವೆಂಕಟಾಚಾರ್ಯ (ಜಯಂತಿ ೧೬-೪) ೭೪, ಪಂಪನ ಎರಡು ಪದಗಳು - ಹಂಪನಾ (ಮುಕ್ತಿ ಶ್ರೀ ಪು. ೬೦) (೧೯೬೪) ೭೫. ಪಂಪನ ಕರ್ಣ - ವಿ. ಶ್ರೀರಂಗಾಚಾರ್ (ಪ್ರ.ಕ. ೨೩-೪) ೭೬. ಪಂಪನ ಕರ್ಣ - ಕೆ.ವಿ. ಪುಟ್ಟಪ್ಪ (ಅಭಿವಂದನೆ ಪು. ೩೫೫) | ೭೭. ಪೆಂಜನ ಕರ್ಣ - ಮ. ಮಲ್ಲಪ್ಪ (ಜಿ.ಕ. ೩೨-೧೧) ೭೮. ಪಂಪನ ಕಾಲ, ದೇಶ ಹಾಗೂ ವ್ಯಕ್ತಿತ್ವ - ಬಿ.ಎಸ್. ಕುಲಕರ್ಣಿ (ಮಹಾಕವಿ
ಪಂಪ ಹಾಗೂ ಅವನ ಕೃತಿಗಳು - ಪು ೧)
ಪಂಪನ ಕಾವ್ಯಗಳ ಮಹಿಮೆ - ಪಾರಿಶವಾಡ ಶೇಷಗಿರಿರಾಯ (ಜ.ಕ. ೮-೧) ೮೦. ಪಂಪನ ಕೆಚ್ಚು - ಕೆ. ವೆಂಕಟರಾಮಪ್ಪ (ಸವಿನೆನಪು ಪು. ೩೫೬) ೮೧. ಪಂಪನ ಕೆಲವು ಉಪಮೆಗಳು - ಕೆ. ವೆಂಕಟರಾಯಾಚಾರ್ಯ (ಜೀವನ ೨೯-೭) ೮೨. ಪಂಪನ ಜ್ವಾಲಾಮುಖಿ - ಜಿ. ಬ್ರಹಪ್ಪ (ಶ್ರದ್ದಾಂಜಲಿ ಪು. ೮೭) ೮೩. ಪಂಪನ ತಮ್ಮಜಿನವಲ್ಲಭನ ಶಿಲಾಶಾಸನ - ಜಿ.ಎಸ್. ಗಾಯಿ (ಪ್ರ.ಕ. ೫೦-೪) ೮೪. ಪಂಪನ ದುರ್ಯೊಧನ - ರಾ. ಲಕ್ಷ್ಮೀನಾರಾಯಣ (ಜೀವನ ೩೦-೯) | ೮೫. ಪಂಪನ ದುರ್ಯೊಧನ - ಸಂಗಮನಾಥ ಜಿ. ಹಂಡಿ (ಸಹೃದಯ ಸ್ಪುರಣ ಪು.
೩೨) ೮೬. ಪಂಪನ ದೃಷ್ಟಿಯಲ್ಲಿ ಕರ್ಣ - ಕಮಲಾ ಹಂಪನಾ (ದೇವಗಂಗೆ ಪು.೧) ೮೭. ಪಂಪನ ದೃಷ್ಟಿಯಲ್ಲಿ ಭರತ ಬಾಹುಬಲಿ - ರಂ.ಶ್ರೀ. ಮುಗಳಿ (ವಿಮರ್ಶೆಯ
ವ್ರತ ಪು. ೧೦೪) - ೮೮. ಪಂಪನ ದೃಷ್ಟಿಯಲ್ಲಿ ಸೂರ್ಯೋದಯ ಸೂರ್ಯಾಸ್ತ - ಬಸವರಾಜ ಶಿರೂರ
- - (ಜ.ಕ. ೪೪-೧). ೮೯. ಪಂಪನ ದೇಶಕಾಲಗಳ ವಿಚಾರ - ಎಂ. ಗೋವಿಂದ ಪೈ (ಭಾರತಿ ಅಕ್ಟೋ.
* ನವರ. ೧೯೩೩) ೯೦. : ಪಂಪನ ದೇಶಾಭಿಮಾನ - ಮ. ಮಲ್ಲಪ್ಪ (ಜ.ಕ. ೩೭-೧೨) ೯೧. ಪಂಪನ ದೇಸಿ - ಡಾ. ರಂ.ಶ್ರೀ. ಮುಗಳಿ (ಕ.ಸಾ.ಪ. ೩೦-೨) ೯೨. ಪಂಪನ ನಾಡಾವುದು - ಪಾಂ. ಭೀ. ದೇಸಾಯಿ (ಜ. ಕ. ೧೨-೫) ೯೩. ಪಂಪನ ನಾಲ್ಕು ಪದ್ಯಗಳು - ಹಂಪನಾ (ಗುರುದೇವ ೯-೧) ೯೪. ಪಂಪನನ್ನು ಕುರಿತ ಒಂದು ಅಪೂರ್ವ ಶಾಸನ - ಆರ್.ಸಿ. ಹಿರೇಮಠ J.K.U
XI-II,
Page #725
--------------------------------------------------------------------------
________________
ܘܦܐ
ಪಂಪಭಾರತಂ ೯೫. ಪಂಪನನ್ನು ಕುರಿತ ಗಂಗಾಧರಂ ಶಾಸನ - ಒಂದು ತಿದ್ದುಪಡಿ, ಎಂ.ಎಂ.
ಕಲಬುರ್ಗಿ (ಕ.ನು. ೩೧-೪, ೫) | ೯೬. ಪಂಪನ ಪುಟ್ಟೋದ್ಯಾನ - ಜಿ.ಎಸ್. ಶಿವರುದ್ರಪ್ಪ (ಪರಿಶೀಲನ ಪು.೧) ೯೭. ಪಂಪನ ಬನಸಿರಿಯಲ್ಲಿ ಬೆಡಗು - ಜಿ. ಬ್ರಹಪ್ಪ (ಗುರುದೇವ - ೪-೯) ೯೮. ಪಂಪನ ಇಲ್ಲಿ ಮತ್ತು ಅಲ್ಲಿ (ಜೀವನ ೩೦ - ೨, ೩, ೬, ೭ ರಿಂದ ೧೧) ೯೯. ಪಂಪನ ಬಾಹುಬಲಿ - ಸಾ.ಶಿ. ಮರುಳಯ್ಯ (ಅಭಿಷೇಕ ಪು. ೫೭) ೧೦೦. ಪಂಪನಲ್ಲಿ ದರ್ಶನ ವಿಚಾರ - ಬಿ.ಎಸ್. ಕುಲಕರ್ಣಿ (J.K.U.V - II) ೧೦೧. ಪಂಪನಲ್ಲಿ ಭಗವದ್ಗೀತೆ - ಜಿ.ಎಸ್. ಶಿವರುದ್ರಪ್ಪ - (ಪ್ರ.ಕ. ೪೬-೩) ೧೦೨. ಪಂಪನಲ್ಲಿ ಭವ್ಯತೆ - ಕೆ.ವಿ. ಪುಟ್ಟಪ್ಪ (ಪಂಪಮಹಾಕವಿ. ಪು. ೧೫೪) | ೧೦೩. ಪಂಪನ 'ಶಫರೋಚ್ಚಳಿತ ತರತ್ತರಂಗೆ' - ಎ.ಎಸ್. ಜಯರಾಂ (ಪ್ರಸಾದ
೧೦೪. ಪಂಪನ ಶೈಲಿ - ಎಸ್.ವಿ. ರಂಗಣ್ಣ (ಶೈಲಿ ಭಾಗ -೧) ೧೦೫. ಪಂಪನ ಸಮರಸದೃಷ್ಟಿ - ಜಿ.ಎಸ್. ಶಿವರುದ್ರಪ್ಪ (ಪ್ರ.ಕ. ೩೮-೧) ೧೦೬. ಪಂಪನ ಹಿನ್ನೆಲೆ - ಕೆ.ಜಿ. ಕುಂದಣಗಾರ (ಕುಂದಣ, ಪು. ೭೦) ೧೦೭. ಪಂಪ ನಾಗವರ್ಮರ ಮೂಲದೇಶ - ಹ. ನಾರಾಯಣರಾವ್ (ವಾಗ್ಯೂಷಣ
. ೨೪-೧) ೧೦೮. ಪಂಪನು ಜಿನಸೇನಾಚಾರ್ಯರನ್ನು ಅನುಸರಿಸಿದ್ದಾನೆ. - ಕೆ.ಜಿ. ಕುಂದಣಗಾರ
(ವಿವೇಕಾಭ್ಯುದಯ ೧೬-೪) ೧೦೯. ಪಂಪನು ಬೆಳಗಿರುವ ಲೌಕಿಕದ ಒಂದು ಚಿತ್ರ - ಎಸ್. ವಿ. ಪರಮೇಶ್ವರ ಭಟ್ಟ
(ಸೀಳುನೋಟ, ಪು. ೧). ೧೧೦. ಪಂಪನು ಹೇಳಿದ ಭಗವದ್ಗೀತೆ - ಕೆ. ವೆಂಕಟರಾಯಾಚಾರ್ಯ (ಗುರುದೇವ
೧೦-೨) ೧೧೧. ಪಂಪನೂ ಡಂಬಳವೂ - ಕೆ. ವೆಂಕಟರಾಯಾಚಾರ್ಯ (ಶ.ಸಾ. ೧೫-೧೨) ೧೧೨. ಪಂಪನೂ ಸ್ತ್ರೀಶಿಕ್ಷಣವೂ - ಕೆ. ಭುಜಬಲಿಶಾಸ್ತ್ರಿ (ಕ.ಸಾ.ಪ. ೧೪-೩) ೧೧೩. ಪಂಪ ಪೊನ್ನ ನಾಗವರ್ಮರ ಅರಸರು - ಹ. ನಾರಾಯಣರಾಯರು (ಕ.ಸಾ.ಪ.
೩ - ೧,೨) ೧೧೪. ಪಂಪಭಾರತ - ಎಸ್.ವಿ. ರಂಗಣ್ಣ (ಕ.ಸಾ.ಪ. ೧೫-೩)
ಈ ಸಾ.ಪ. ೧೫-೩)
, ೧೧೫. ಪಂಪಭಾರತ - ತಿ.ಶ್ರೀ. ಶ್ರೀನಿವಾಸಾಚಾರ್ಯ (ಜ.ಕ. ೫-೧, ೨) ೧೧೬. ಪಂಪಭಾರತ - ತ.ಸು. ವೆಂಕಣ್ಣಯ್ಯ (ಪ್ರ.ಕ. ೧೫-೪) | ೧೧೭. ಪಂಪಭಾರತ (ಹೊಸ ಪ್ರತಿ) (ಕ.ಸಾ.ಪ. ೯-೨)
Page #726
--------------------------------------------------------------------------
________________
-
೭೨೧
ಅನುಬಂಧ - ೨ ೧೧೮. ಪಂಪಭಾರತ ಅಥವಾ ವಿಕ್ರಮಾರ್ಜುನ ವಿಜಯ - ರಂ.ಶ್ರೀ. ಮುಗಳಿ (ಜೀವನ,
೧-೬, ೮) ೧೧೯. ಪಂಪಭಾರತ (ಕರ್ಣನ ಪಾತ್ರ) - ಡಿ. ವಿ. ಶೇಷಗಿರಿರಾವ್ (ಜ.ಕ. ೧೩-೯,
೧೧) ೧೨೦. ಪಂಪಭಾರತ (ದುರ್ಯೊಧನನ ಪಾತ್ರ), ಡಿ.ವಿ.ಎಸ್. (ಜ.ಕ. ೧೩-೮) ೧೨೧. ಪಂಪಭಾರತ - ಗದಾಯುದ್ದಗಳ ತುಲನೆ - ಶೇಷ, ಭೀ. ಪಾರಿಶವಾಡ (ಕ.ಸಾ.ಪ.
೧೦-೪) ೧೨೨. ಪಂಪಭಾರತ ಎರಡು ರಸಮಯ ಸನ್ನಿವೇಶಗಳು - ನ. ಸುಬ್ರಹ್ಮಣ್ಯಂ (ಸವಿನೆನಪು,
ಪು. ೩೪೦) ೧೨೩. ಪಂಪಭಾರತದ ಒಂದು ಪದ್ಯದ ಸಮಸ್ಯೆ - ಆರ್. ರಾಜಪ್ಪ (ಸಿದ್ದಗಂಗಾ
ಜಾತ್ರಾ ವಿಶೇಷಾಂಕ, ಪು. ೯೫, ೧೯೭೦) ೧೨೪. ಪಂಪಭಾರತದ ಕರ್ಣ : ಒಂದೂಹ - ಕೆ. ವೆಂಕಟರಾಯಾಚಾರ್ (ಜಯಂತಿ.
೧೫-೬) ೧೨೫. ಪಂಪಭಾರತದ ಕೃಷ್ಣ : ಒಂದು ಚಿಕ್ಕ ಟಿಪ್ಪಣಿ - ತೀ.ನಂ. ಶ್ರೀಕಂಠಯ್ಯ
(ಸಮಾಲೋಕನ, ಪು. ೯೬) ೧೨೬. ಪಂಪಭಾರತದ ಕೆಲವು ಪದಪಾಠಗಳು - ಟಿ.ವಿ. ವೆಂಕಟಾಚಲಶಾಸ್ತ್ರೀ (ಪ್ರ.ಕ.
೫೦-೨) ೧೨೭. ಪಂಪಭಾರತದ ಕೆಲವು ಪಾಠಾಂತರಗಳು - ಹಂಪ ನಾಗರಾಜಯ್ಯ (ಕ.ನು.
೨೭-೮) ೧೨೮. ಪಂಪಭಾರತದ ಚಾಲುಕ್ಯರು ಯಾರು? - ಕೆ. ವೆಂಕಟರಾಯಾಚಾರ್ಯ (ಸಾಹಿತ್ಯದ
ಹಿನ್ನೆಲೆ-ಪು. ೧) ೧೨೯.ಪಂಪಭಾರತದ ದೌಪದೀವಿಚಾರ - ಕೆ. ವೆಂಕಟರಾಯಾಚಾರ್ (ಕ.ನು. ೧-೨) ೧೩೦. ಪಂಪಭಾರತದ ನಿರ್ಮಾಣ ಕಾಲ - ಕೆ. ವೆಂಕಟರಾಯಾಚಾರ್ (ಕ.ನು. ೧-೨) ೧೩೧. ಪಂಪಭಾರತದ ಮಂಗಲಪದ್ಯ - ಎಂ.ಎಂ. ಕಲಬುರ್ಗಿ (ಕ.ಭಾ. ೩-೨) ೧೩೨. ಪಂಪಭಾರತದ ಯುದ್ದ ಚಮತ್ಕಾರ - ಶೇಷ. ಭೀ. ಪಾರಿಶವಾಡ (ವಾಗ್ಯೂಷಣ
೩೦-೫) ೧೩೩. ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ - ಎನ್. ತಿರುಮಲೇಶ್ವರಭಟ್ (ಪ್ರದೀಪ
೧೧-೧೨). ೧೩೪. ಪಂಪಭಾರತದಲ್ಲಿ ಬ್ರೌಪದಿಯ ಸ್ವಯಂವರ - ಡಿ.ಕೆ. ಭೀಮಸೇನರಾವ್ (ತಾವರೆ
ಉಸ್ಮಾನಿಯಾ ವಿ.ವಿ. ಪತ್ರಿಕೆ) ೧೩೫. ಪಂಪಭಾರತದಲ್ಲಿ ಬಂದ ನಾಣ್ಣುಡಿಗಳು - ಶಂ.ಭಾ. ಜೋಶಿ (ಜ.ಕ. ೮-೨) ೧೩೬. ಪಂಪಭಾರತದಲ್ಲಿಯ ಕೆಲವು ಸಮಸ್ಯೆಗಳು - ವೆಂ.ಭೀ. ಲೋಕಾಪುರ (ಜಯಂತಿ
೨೦-೫)
Page #727
--------------------------------------------------------------------------
________________
೭೨೨
ಪಂಪಭಾರತ ೧೩೭. ಪಂಪಭಾರತದಲ್ಲಿಯ ಸೂರ್ಯೊದಯ ಸೂರ್ಯಾಸ್ತಗಳು - ಸಂಗಮನಾಥ
ಜಿ. ಹಂಡಿ (ಸಹೃದಯ ಸ್ಪುರಣ ಪು-೧) ೧೩೮. ಪಂಪಭಾರತದಲ್ಲಿ ಯುಗಧರ್ಮ - ಒಂದು ನಿದರ್ಶನ - ಸಿ.ಪಿ.ಕೆ. (ಕಾವ್ಯಾರಾಧನ
೧೩೯. ಪಂಪಭಾರತದ ಶ್ರೀಕೃಷ್ಣ - ಬಿ.ಎ. ಶ್ರೀಕಂಠೇಗೌಡ (ಪ್ರ.ಕ. ೪೩-೨) ೧೪೦. ಪಂಪಭಾರತದೊಳಗಿನ ಉಪಮೆಗಳು - ಹೆಚ್.ಜಿ, ಬೆಂಗೇರಿ (ವಾಗ್ಯೂಷಣ
೪-೭) ೧೪೧. ಪಂಪಭಾರತ ಪ್ರಶಂಸೆ - ಶೇಷ. ಭೀ. ಪಾರಿಶವಾಡ (ಜ.ಕ. ೨-೪) ೧೪೨. ಪಂಪ - ಭಾರವಿ - ಕೆ.ಎಸ್. ಕೃಷ್ಣಮೂರ್ತಿ (ಅಭಿವಂದನೆ, ಪು. ೧೨೭) ೧೪೩. ಪಂಪ ಮತ್ತು ರತ್ನಾಕರ ಪರಿಣಯ ಪ್ರಪಂಚ - ಜಿ. ಬ್ರಹಪ್ಪ (ಗುರುದೇವ
೫-೩) ೧೪೪. ಪಂಪ ಮಹಾಕವಿ - ಮುಳಿಯ ತಿಮ್ಮಪ್ಪಯ್ಯ (ಕನ್ನಡ ಸಾಹಿತ್ಯ ಮತ್ತು ಇತರ
ಉಪನ್ಯಾಸಗಳು) ಪು. ೨೭ ೧೪೫. ಪಂಪ ಮಹಾಕವಿ - ಮಲ್ಲಪ್ಪ (ಜ.ಕ. ೩೫ - ೧೨) ೧೪೬. ಪಂಪ ಮಹಾಕವಿಯ ಕೆಲವು ಪದಗಳು - ಹಂ.ಪ.ನಾ. (ಕ.ನು. ೨೭-೭). ೧೪೭. ಪಂಪ ಮಹಾಕವಿಯ ಬಾಹುಬಲಿ - ಟಿ.ಎನ್. ಮಹದೇವಯ್ಯ (ಕ.ನು. ೩೨-೪,
೧೪೮. ಪಂಪ ಮಹಾಕವಿ ವಿರಚಿತ ಆದಿಪುರಾಣಂ (ಕಾ.ಲೋ.) ಎನ್. ಅನಂತ
ರಂಗಾಚಾರ್ (ಪ್ರ.ಕ. ೩೪-೪) ೧೪೯. ಪಂಪ-ರನ್ನರ ದುರ್ಯೊಧನರು - ಶೇಷ. ಭೀ. ಪಾರಿಶವಾಡ (ಜ.ಕ. ೧-೩) ೧೫೦. ಪಂಪ-ರನ್ನರ ಶ್ರೀಕೃಷ್ಣನು - ಶೇಷ. ಭೀ. ಪಾರಿಶವಾಡ (ಜ.ಕ. ೩-೬) ೧೫೧. ಪಂಪ ವೀರನಾದರೆ ರತ್ನಾಕರ ಭಕ್ತ - ಜಿ. ಬ್ರಹ್ಮಪ್ಪ (ಗುರುದೇವ ೫-೪) ೧೫೨. ಪಂಪಾದಿ ಕರ್ಣಾಟಕ ಪ್ರಾಚೀನ ಮಹಾಕವಿಗಳ ಕಾವ್ಯಗಳಲ್ಲಿ ಕಂಡುಬರುವ
ಕೆಲವು ವಿಶೇಷ ಪದಾರ್ಥಗಳ ಸ್ವರೂಪನಿರ್ಣಯ ವಿಚಾರ - ಎಚ್.
ಶೇಷಯ್ಯಂಗಾರ್ (A.O.R Vol. ೧-೨) ೧೫೩. ಪುರಾಣ ಕವಿಪುಂಗವ ಪಂಪ - ಎಲ್.ಆರ್. ಹೆಗಡೆ - (ಕಾವ್ಯವ್ಯಾಸಂಗ,
ಪು-೩೪) ೧೫೪. ಪೊಸ ಪೊಟೊಳಾದ ಕರ್ಚು - ವೆಂಕಟರಾಮಪ್ಪ (ಪ್ರ.ಕ. ೪೯-೪) ೧೫. ಬಾಹುಬಲಿ - ಬಿ.ಎಸ್. ಕುಲಕರ್ಣಿ - ಸನ್ಮತಿ, (ಫೆಬ್ರ, ಮಾರ್ಚಿ, ೧೯೬೭) ೧೫೬. ಬಾಹುಬಲಿಯ ನಾಲ್ಕು ಚಿತ್ರಗಳು - ಬಿ.ಎಸ್. ಕುಲಕರ್ಣಿ (ಅಭಿಷೇಕ
ಪು. ೨೫) . ೧೫೭. ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ - ನ. ಸುಬ್ರಹ್ಮಣ್ಯಂ (ಶ್ರದ್ದಾಂಜಲಿ
ಪು. ೧೧೧)
Page #728
--------------------------------------------------------------------------
________________
ಶಬ್ದಕೋಶ*
ಅಗಿ-ಹೆದರು, ೨-೨೭, ೧೦-೭೫, ಅಂಕ-ಗುರುತು, ಪ್ರಸಿದ್ಧ೧-೭೪ ೨ ೩೯ವ ಅಂಕಕಾಲಿ-ಶೂರ ೧೨-೭೩ವ |
ಅಗುಂತಿ-ಆಧಿಕ್ಯ, ಅತಿಶಯ ೧-೧೯. - ಅಂಕದಂಬು-ಪ್ರಸಿದ್ದವಾದ ಬಾಣ ೧೩-೩೬ ಅಗುಂದಲೆ-ಹೆಚ್ಚಳ, ಅಧಿಕ ಗೌರವ ೯-೩೩ ಅಂಕವಣಿ-ಕುದುರೆಯ ಮೇಲಿನ ತಡಿ
- ಅತಿಶಯ ೯-೨ - ೮-೧೩೭
ಅಗುರ್ಬು-ಭಯಂಕರ ೧-೧೩೧ ವ ಅಂಕುರ-ಮೊಳಕೆ, ಚಿಗುರು, ೧-೧೩೦, - ೧-೨೬, ೪-೮೭ ೫-೧೧
ಆಗುರ್ವಿಸು ೧-೬, ೧೦೦, ೭-೨೬,. ಅಕ್ಕರ ವಿದ್ಯೆ ೪-೨೯,
೯-೯೯ ಅಕ್ಕರಗೊಟ್ಟಿ-ಮಿತ್ರಮೇಳ, ಕಲಾವಿಷಯಕ ಅಗುರ್ವು-ಭಯಂಕರ ೧-೨೬, ೭-೨೬,
ವಾದ ಚರ್ಚೆ ನಡೆಯುವ ಸ್ಥಳ ೪-೨೯ ಅಗುಳ್-ಅನ್ನದ ಅಗಳು, ೧೧-೧೫೩ ಅಕ್ಷಕ್ರೀಡೆ-ಪಗಡೆಯಾಟ ೬-೬೯
ಅಗುಮ್-ಅಗೆ, ೯-೯೫ವ ಅಕ್ಷಮಾಲಿಕೆ-ಜಪಸರ ೬-೮ -
ಅಗ್ನಿಧ್ರ-ಯಾಗದ ಬೆಂಕಿಯನ್ನು ಉರಿಯುವ ಅಕ್ಟೋಣ-ಕಡಿಮೆಯಿಲ್ಲದ, ೧-೧೩೪
ಹಾಗೆ ಮಾಡುವುದು ೬-೩೩ವ. ಅಖಂಡಿತ-ಕತ್ತರಿಸಿಲ್ಲದುದು, ಪೂರ್ಣ, ಅಘಮರ್ಷಣ-ಪಾಪವನ್ನು ತೊಳೆಯುವುದು ವಾದುದು ೧೩-೬೫
ಸ್ನಾನಮಾಡುವಾಗ ಪಠಿಸುವ ಮಂತ್ರ, ಅಗಪಡು-ಸೆರೆಸಿಕ್ಕು, ಕೈವಶವಾಗು ೧೨-೯೮, ೯-೭೨ವ | (ಅಗಂ-ಒಳಗು)
ರ್ಅ-ಕೈತೊಳೆದುಕೊಳ್ಳುವುದಕ್ಕಾಗಿ ಕೊಡುವ ಅಗರು-ಅಗಿಲು, ಸುಗಂಧದ ಮರ ೫-೩೦ ನೀರು, ಪೂಜಾದ್ರವ್ಯ ೧-೭೭, ೨-೪ ಅಗಮ್-ಕಂದಕ ೩-೨೨, ೪-೧೦
ವ ಶ್ರೇಷ್ಠ, ಬೆಲೆಯುಳ್ಳ, ೬-೧೧ ವ ಅಗ್ಗಲಿಸು-ಹಚ್ಚು, ಅಧಿಕವಾಗು ೯-೩೦. ಅಚಲ-ಪರ್ವತ, ೪-೧೪, - ೧೦-೨೦
ಅಚ್ಚರಸೆ-ಅಪ್ಪರಸ್ತ್ರೀ ೧-೧೪೮, ೨-೩ವ, ಅಗ್ಗಳ-ಅಧಿಕ, ಶ್ರೇಷ್ಠ, ಅತಿಶಯ, ೧-೧೦, - ೪-೨೦ವ ೬-೬೬
ಅಚ್ಚಿಗ-ದುಃಖ, ವ್ಯಥೆ ೪-೯೯, ೭-೯೪ವ, ಅಗ್ಗಳಿಕೆ ೬-೧೯, ೪೬
. ಅಚ್ಚಿಗಂಗೊಳ್-ದುಃಖಪಡು, ೭-೬೪ವ ಅಗ್ಗಳಿಕ್ಕೆ ೬-೬೬
ಅಚ್ಚಟೆ-ಅಚ್ಚೆತ್ತು, ಮುದ್ರೆಹಾಕು, ೪-೫೦, ಅಗ್ಗಳಿಸು-ಅಧಿಕವಾಗು, ಹೆಚ್ಚು ೫-೩೦ . ೫-೧೭, ೭-೫೭, ೧೪-೫ *:
. ೧೨-೧೦, ೨೦, ೧೨,-೨೧೦ ಅರ್ಚ-ಜ್ವಾಲೆ, ೫-೮೬, ೯೮ ಅಂಗಣ-ಅಂಗಳ ೪-೧೦
ಅಚ್ಚು-ರಥದ ಅಚ್ಚು ೧೧-೩೮ : ಅಂಗರಾಗ-ಅನುಲೇಪನ, ಮೈಗೆ ಹಚ್ಚಿಕೊಳ್ಳುವ ಅಚ್ಚೆತ್ತು-ಮುದ್ರಿಸು, ೫-೧೭, ೬-೪೧ವ ಸುಗಂಧದ್ರವ್ಯ ೮-೭೩.
ಅಂಚೆ-ವಸ್ತ೮-೬೬ - ಹಂಸಪಕ್ಷಿ (೪-೮೨) * ಈ ಕೋಶವನ್ನು ಸಿದ್ಧಪಡಿಸುವುದರಲ್ಲಿ ನಾನು ಪರಿಷತ್ ಮುದ್ರಣದ ಪಂಪಭಾರತ ಕೋಶಕ್ಕೆ ಬಹುಮಟ್ಟಿಗೆ ಋಣಿಯಾಗಿದ್ದೇನೆ.
Page #729
--------------------------------------------------------------------------
________________
ಅನುಬಂಧ - ೨
೭೨೩ ೧೫೮. ಭಗವತಿಯೇಲುವೇ ತೆಜದಿಂ ಕಥೆಯಾಯ್ತಿವರೇಜು - (ವಸ್ತುಕೋಶ)
ಡಿ.ಎಲ್.ಎನ್. (ಪ್ರ.ಕ.೪೪-೨) ೧೫೯. ಭಾನುಮತಿಯೊಡನೆ ನೆತ್ತವನ್ನಾಡಿದವರಾರು? - ಎ.ಆರ್.ಕೃಷ್ಣಶಾಸ್ತ್ರಿ (ಜ.ಕ.
೧೪-೩) ೧೬೦. ಭಾರತಗಳ ಶ್ರೀಕೃಷ್ಣ - ವಿ.ಸೀ. (ಕವಿಕಾವ್ಯ ದೃಷ್ಟಿ, ಪು. ೮೯) ೧೬೧. ಭಾರತದ ಶಿಶುಪಾಲವಧೆ - ತ.ಸು. ಶಾಮರಾಯ (ಕ.ಸಾ.ಪ. ೨೫-೨) ೧೬೨. ಮದನ ಮದಭಂಗ - ಜಿ.ಪಿ.ರಾಜರತ್ನಂ (ಕ.ನು. ೩-೩೮) | ೧೬೩. ಮಹಾಕವಿ ಪಂಪನ ಆದಿಪುರಾಣ - ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೀವನ -
- ೨೫-೭) ೧೬೪. ಮಹಾಕವಿ ಪಂಪನ ಶ್ರೀಕೃಷ್ಣ - ಕಮಲಾಹಂಪನಾ (ಜೀವನ ೨೯-೯) (೧೬೫. ಮಹಾಕವಿ ಪಂಪನು ಅಧ್ವರ ದ್ವೇಷಿಯೇ - ಕುಶಲಾನುಜ (ಜೀವನ ೨೯-೯) ೧೬೬. ಮಹಾಕವಿ ಶ್ರೀ ಪಂಪನು - ಮ.ಪ್ರ. ಪೂಜಾರ (ವಾಗ್ಯೂ ೧೯-೨, ೩) ೧೬೭. ವಿಕ್ರಮಾರ್ಜುನನ ರಾಣಿಯರು - ಕೆ. ವೆಂಕಟರಾಯಾಚಾರ್ಯ (ಸಾಹಿತ್ಯದ
ಹಿನ್ನೆಲೆ) ೧೬೮. ವಿಕ್ರಮಾರ್ಜುನ ವಿಜಯ - ದ.ರಾ. ಬೇಂದ್ರೆ (ಮಹಾಕವಿ ಪಂಪ ಹಾಗೂ
ಅವನ ಕೃತಿಗಳು ಪು. ೨೯) ೧೬೯. ವಿಕ್ರಮಾರ್ಜುನ ವಿಜಯ (ಪಂಪ ಭಾರತ) ರಂ.ಶ್ರೀ. ಮುಗಳಿ (ವಿಮರ್ಶೆಯ
ವ್ರತ, ಪು. ೯೯) ೧೭೦. ಶಫರೋಚ್ಚಳಿತ ತರತ್ತರಂಗೆಯೇ ಉಚ್ಚಸ್ತನಿ (ಒಂದು ವಿವರಣೆ) - ಎ.ಎಸ್.
ಜಯರಾಂ (ಪ್ರಸಾದ ೧-೪) ೧೭೧. ಶಾಸನದಲ್ಲಿ ಪಂಪನ ಆದಿಪುರಾಣದ ಒಂದು ಪದ್ಯ. - ಎಂ.ಎಂ. ಕಲುಬುರ್ಗಿ
(ಕ.ನು. ೩೨-೧) ೧೭೨. ಸಂಧಾನದ ಸಂವಿಧಾನ (ಪೂರ್ವಭಾಗ)- ಶ್ರೀ ಪಂಚ
A Kannada Poet's sense of value - V. Sitaramaiah (Karnataka Darshana p. 167) On Pampa's Work-H. Sheshayyangar. (A.O.R. VI.-I, II) Pampa - the morning star of Karnataka Literature - K. Krishnayyangar (The Literary Half Yearly III-I P. 96)
Pampa's influence in Telugu Literature - M.M. Bhat, (A.O.I.C. * Proceedings 1951)
The Family of Arikesarin, the patron of Pampa - N. Lakshminarayana Rao (MYT XL V, No. 4)
Page #730
--------------------------------------------------------------------------
________________
ಶಬ್ದಕೋಶ
೭೨೫ ಅಚೋದ-ತಿಳಿನೀರು ೧೨-೧೫೯ ಅಂಡುಗೊಳ್-ಸಮೀಪಕ್ಕೆ ಹೋಗು ೯-೩೬ವ ಅಜನಿಸು-ತಿರಸ್ಕರಿಸು ೯-೨೧
ಅಡವೊತ್ತು-ಅರ್ಧಹತ್ತಿಕೊಳ್ಳು ೩-೫ ಅಜರ-(ಮುಪ್ಪಿಲ್ಲದ ದೇವತೆಗಳು) ಕೃಷ್ಣ . ಅಣಂ-ಸ್ವಲ್ಪವೂ ೧-೩೨, ೨-೧೩ ೧೧-೭೭
ಅಣಕ-ಹಿಂಸೆ, ಕಾಟ,ಹಾಸ್ಯ ೯-೯೯ ಅಂಜನ-ಕಾಡಿಗೆ ೮-೪೨ವ , ಅಣಮೆ-ಕೊಂಚವೂ ೩-೫೯ ಅಜಾತ-ಹುಟ್ಟಿಲ್ಲದವನು, ಕೃಷ್ಣ ೯-೨೧ ಅರ್ಣಃ-ನೀರು ೧೪-೫೭ ಅಜಾನೇಯ-ಶ್ರೇಷ್ಟವಂಶದ ಕುದುರ ಅಣಲ್-ಗಂಟಲು, ದವಡ, ೧೨-೧೬೯ವ ೨-೬೩ವ
ಅಣಿ-ಪದಾತಿಸೈನ್ಯ ೩-೬೭, ೮-೯೯, ಅಜಿತ-ಜಯಿಸಲಾಗದವನು. ಕೃಷ್ಣ೯-೨೬ವ ೧೦-೫೧, ೧೦-೫೭ವ, ೧೨-೧೭ ಅಜಿರ-(ಅಂಗಳ) ರಂಗ೧೨-೧೩೫ ಅಣಿಯರಂ-ಅತಿಶಯವಾಗಿ ೨-೬೧, ಅರ್ಜುನ-ಮತ್ತಿಯ ಗಿಡ ೫-೮೦
೭-೯೫. ಅಟನ-ಬಿಲ್ಲಿನ ತುದಿ ೧೪-೭೨
ಅಣುಗದಮ್ಮ೧೨-೧೭೪ ಅಟಳ-(ಅತಲ-ಸಂ) ಪಾತಾಳ ೧೦-೬೭ ಅಣುಗಾಳ್ ೬-೭೨ವ ಅಟ್ಟಟ್ಟಿ-ದೌತ್ಯ, ದೂತ, ೭-೨೭ವ; ೯-೮೯, ಅಣುಗಿಲೆಯ್-ಹತ್ತಿರಹೋಗಿ ಹೂಡ ೯ವ
೧೩-೪೭ ಅಟ್ಟವಣಿಕೋಲ್-ಪುಸ್ತಕವನ್ನಿಡುವ ಪೀಠ - ಅಣುಗು-ಪ್ರೀತಿ, ೨-೬೧. ವ್ಯಾಸಪೀಠ, ೧೧-೪೬
ಅಣುವ-ಹನುಮಾನ್ ೮-೩೩ . ಅಟ್ಟುಮುಟ್ಟು-ಅಟ್ಟಿಸಿಕೊಂಡುಹೋಗು ಅಣು-ಸಾಹಸ, ಪರಾಕ್ರಮ, ಪೌರುಷ ೨-೨೬ ೧-೯೯
ವ, ೧೧-೧೮೩, ೧೧-೧೬೩ ಅಟ್ಟುಂಬರಿ-ಅಟ್ಟಿ ಓಡಿಸು, ಅಟ್ಟಿಕೊಂಡು ಅಣುಗುಂದು-ಶಕ್ತಿಹೀನವಾಗು ೧೩-೬೭
ಹೋಗು ೬-೯, ೧೧-೪೦೦ ಅಣೆ-ತಿವಿ ೧೨-೮೬ ಅಟ್ಟೆ -ಶರೀರ, ಮುಂಡ, ೬-೧೪, ೧೦-೪೨ ಅತನು-ಮನ್ಮಥ ೧-೭೧ ವ ಅಂಟು-ತಾಕು, ತಗಲು, ಸೋಕು, ೬-೭೭ ಅರ್ತು-ಚರ್ಚೆಮಾಡುವುದಕ್ಕಾಗದ ೧-೮೦ ಅಡಂಗು-ಅವಿತುಕೊಳ್ಳು ೭-೫೦
ಅತ್ತಪರ-ಗುರಾಣಿ ೩-೩೨ ವ, ೮-೧೭, ಅಡಕು-ತುಂಬು, ೯-೧೮ ವ ,
೨೫, ೧೧-೮೮ ಅಡಪ-ಅಡಕೆ ಎಲೆಯ ಚೀಲ, ೩-೪೮ ವ, ಅತ್ತಳಗ-ವ್ಯಥೆ, ಕಳವಳ ೪-೭೯, ೧೦೦ ೪-೬೬ ವ
೭-೨೫ ೧೧-೮೮ | ಅಡರ್ -ಏರು, ಹತ್ತು ೯-೨
ಅತ್ತಿಗೆ-ಪ್ರೀತಿಪಾತ್ರಳಾದವಳು ೧-೩೫ ಅಡರ್ಪು-ಆಶ್ರಯ, ೧-೨೭, ೯-೩೫, ಅತ್ಯಂತ-ಬಹಳ ಹೆಚ್ಚಿನ, ಶ್ರೇಷ್ಠ ೧-೧೯ ೧೪-೪ ವ
ಅಂತರ-ದೂರ, ಅವಧಿ, ವ್ಯತ್ಯಾಸ ೧-೪೮ ಅಡಸು - ತುರುಕು, ತುಂಬು, ೨-೩೨, ೨-೯೫ ವ, ೧೦-೭ .
೩-೧೫, ೪-೮೭, ೬-೩೦ವ, ಅಂತ್ರ-ಕರುಳು ೧೨-೧೨೦ ೧೨-೧೬೯ವ
ಅರ್ಥಿ- ಅಪೇಕ್ಷಿಸುವವನು, ಯಾಚಕ ಅಡ್ಡಣ-ಗುರಾಣಿ ೨-೩೯
೧-೧೧೭, ೨-೪೬ ಅಡುರ್ತು-ಕೂಡಿಸು, ವ್ಯಾಪಿಸು, ೧-೬ ಅದಟಂ-ಪರಾಕ್ರಮಶಾಲಿ, ೫-೨೯
Page #731
--------------------------------------------------------------------------
________________
೭೨೬ ಅದಟರ್ -ಶೂರರು ೬-೪೭ ಅದಟು -ಪರಾಕ್ರಮ ೪-೨೯, ೯೪ ಅದಭ್ರ-ಅತ್ಯಧಿಕವಾದ ೮-೨೫ ವ. ಅದಿತಿಪ್ರಿಯಪುತ್ರ-ಸೂರ್ಯ ೧೨-೫೩ ಅದಿರ್ -ನಡುಗು ೯-೫೨ ಅದಿರ್ಪು-ನಡುಗಿಸು ೬-೨೮, ೧೦-೬೪,
೧೦-೧೧೭ ವ ' ಅದಿರ್ಮುತ್ತೆ-ಇರುವಂತಿಗೆ, ಮಾಧವೀಲತೆ, , ಅತಿಮುಕ್ತ, (ಸಂ) ೨-೧೨, ೫-೫ವ ಅಧರರ್-ಕೀಳಾದವರು ೫-೫೮ ಅಧರಿತ ೧೨-೧೭೧, ಅಧರೀಕೃತ ೩-೭೮ ಅಂಧಕದ್ವಿಷ-ಈಶ್ವರ ೪-೧೩ ಅಂಧರಾಂದನ-ಕುರುಡುದೊರೆಯ ಮಗ
(ದುರ್ಯೊಧನ) ೧೩-೭೫ ಅದ್ವರ-ಯಜ್ಞ೧-೬೪ ಅಧ್ವರ್ಯು-ಯಜ್ಞಕ್ಕೆ ಬೇಕಾದ
ಸಲಕರಣೆಗಳನ್ನು ಮಾಡುವವನು
೬-೩೩ವ ಅಧ್ಯಾತ್ಮ ಪರಲೋಕ ಜ್ಞಾನ, ಬ್ರಹ್ಮಜ್ಞಾನ
೧೨-೨೯ವ ಅಧ್ವನ-ದಾರಿ, ಮಾರ್ಗ ೩-೧೦ ವ ಅರ್ಧಾವಳೀಕ-ಒಂದು ಬಗೆಯ ಬಾಣ
- ೫-೧೦೦ ವ ಅರ್ಧಾವಲೀಕ, ೧೨-೧೯೧ ಅಧಿಷ್ಠಾನ-ತಳಪಾಯ ೧-೭೩ವ ಆನಂಗ-ಮನ್ಮಥ ೧-೪೫ ವ ಅನಂತ-ಕೃಷ್ಣ, ೫-೮೫, ಆದಿಶೇಷ
• ೪-೫೩ ಅನಲ-ಅಗ್ನಿ ೧-೮೦ ವ ಅನ್ನವಾಸ- ಊಟದ ಮನೆ ೩-೮೦,
೫-೩೫ವ ಅಜ್ಞಾತವಾಸ - (ಬೇರೆ ರೀತಿಯ ವಾಸ)
೭-೩ ವ ಅನ್ವಯ-ವಂಶ ೧೨-೩೫
ಪಂಪಭಾರತಂ ಅನಾಕುಳ-ಶ್ರಮವಿಲ್ಲದೆ, ಆಯಾಸವಿಲ್ಲದೆ ( ೨-೫೦, ೪-೧೩ ಅನಾಗತ-(ಬಂದಿಲ್ಲದ)ಮುಂದಾಗುವ
೨-೮೬ ವ, ೧೩-೭೦ ವ ಅನೀಕ-ಸೈನ್ಯ ೮-೨೮ ಅನುನಯ-ಪ್ರೀತಿ, ೧-೫೧ ಅನುಬಲ-ಸಹಾಯ, ಒತ್ತಾಸೆ, ೪-೬೩
೯-೧೭ವ ಅನುವರ-ಯುದ್ಧ ೧೦-೬ ಅನುವಿಸು-ಒತ್ತಾಯಮಾಡು ಅನುಸರಿಸು
೪-೧೦೩ ಅನುಷ್ಟಿಸು-ಮಾಡು ೮-೫೦ ವ ಅನೂನ-ಊನವಿಲ್ಲದ, ಕಡಿಮೆಯಿಲ್ಲದ
೨-೩೯ ಅನೇಕಪ-ಆನೆ ೩-೩೯ ಅನೋಕಹ - ವೃಕ್ಷ ೫-೨೨ವ ಅನ್ನೆಯ-ಅನ್ಯಾಯ ೧-೧೧೨ ಅಪರಗಿರಿ-ಪಶ್ಚಿಮ ಪರ್ವತ ೧೨-೮೮ ವ ಅಪಸತ್ (ಇಲ್ಲದ) ಅಪೂರ್ವವಾದ
೪-೭೭ ಅಪಹತ-ಬಿಡಲ್ಪಟ್ಟ ೧೧- ೧೦೬ ವ ಅಪಹಾರತೂರ್ಯ-ಯುದ್ಧವನ್ನು ನಿಲ್ಲಿಸಲು
ಸೂಚಿಸುವ ಕೊಂಬಿನ ಶಬ್ದ ೧೦
೧೨೪ ವ | ಅಪ್ರತಿಮ-ಹೋಲಿಕೆಯಿಲ್ಲದ ೧-೮೪ ಅಪ್ಪು-ಆಲಿಂಗನ ೩-೮೩ : ಅಪ್ಪೆಸು-ಒಪ್ಪಿಸು ೯-೭೬ ಅಬ್ಬರ-ಆರ್ಭಟ, ೪-೮೭ ವ ಅಬ್ಬೆ-ತಾಯಿ ೧-೭೫ ಅರ್ಬಿ-ಝರಿ ೯-೯೬ ವ ಅಂಬಿಗ-ದೋಣಿಯನ್ನು ನಡೆಸುವವನು, - ಬೆಸ್ತ, ೧೨-೯೪ ಅಂಬಿರಿವಿಡು-ಧಾರೆಯಾಗಿ ಸುರಿ ೯-೭೪,
೧೦-೧೦೦, ೧೦-೭೦ ವ ಅಂಬುದ-ಮೋಡ ೧-೬೯ ?
Page #732
--------------------------------------------------------------------------
________________
೭೨೮
ಪಂಪಭಾರತಂ ಅಲ್ಲಟೆವೋಗು-ಅಬ್ದುಅಲೆವೊಗು ಸೀಳು ಅಶಿವ-ಅಮಂಗಳ ೩-೧೧
ನಾಟಿ ಸುರಿಯುವಂತೆ ಮಾಡು ಅಶಿಶಿರಕರ-ಸೂರ್ಯ ೪-೧೮ ವ ೧೨-೨೦೫,
ಅಂಶು-ಕಿರಣ ೪-೨೨ ಅಲೆ-ಪೀಡಿಸು ೨-೩೯ ವ, ೪-೨೮, ಅಂಶುಕ-ಬಟ್ಟೆ ೭-೭೩ ೪-೬೪
ಅಶ್ರು-ಕಣ್ಣೀರು ೪-೧೨ ಅಲೆಪು-ಅಲೆದಾಟ ೪-೧೦
ಅಷ್ಟಶೋಭೆ-ಅಲಂಕಾರ, ೩-೨ ೫, ೨೨ ವ ಅಲ್ಲು-ಅಳ್ಳಾಡಿಸು ೨-೩೪
ಅಸಗವೊಯ್ದು -ಅಗಸನ ಒಗತ ೩-೩೦ . ಅಲ್ಲೆ-ಅಲ್ಲಯ್ ೧೩-೧೦೦
ಅಸದಳ-ಅಸಾಧ್ಯ ೧-೯೭ ಅವಕರ್ಣಿಸು-ಕೇಳು ೧೦-೧೫ ವ
ಅಸವಸ-ವೇಗ, ತ್ವರೆ, ಕ್ಷಿಪ್ರ, ೧೩-೧೩
ಅಂಸ-ಹೆಗಲು, ಭುಜ, ಶಿರಸ್ಸು ೩-೯, ಅವಗಡ-ಸಾಹಸ ೧೩-೮
೧೨-೧೧೦ ಅವಗಣಿಯಿಸು-ಮೇಲೆಮೇಲೆ ಬರುವುದು
ಅಸ್ತ್ರ-ರಕ್ತ ೧-೧೦೫ _೧೨-೨೦೯
ಅಸಿ-ಕತ್ತಿ ೧-೬, ಸಣ್ಣ, ಸೂಕ್ಷ೧-೧೪೧ ಅವಗಾಹ-ಮುಳುಗುವಿಕೆ ೧-೧೭
ವ ೫-೬ ವ| ಅವತಾರ-ಇಳಿದುಬರುವುದು ೧೪-೩೭
ಅಸಿಧೇನು-ಚೂರಿ,ಕತ್ತಿ ೮-೭೪, ೧೨-೧೬೭ (ವಂಶಾವತಾರ-ವಂಶಾನುಕ್ರಮ ೧-೪೮ ವ) ಅಸಿಪತ್ರ-ಕತ್ತಿ ೧೩-೫೧ ವ ಅವಧಾರಿಸು-ಕೇಳು, ಸಹಿಸು, ೧೨-೪೨ ಅಸಿಯರ್ -ಕೃಶರಾಗಿರುವವರು ಅವನತ-ಬಗ್ಗಿದ, ನಮ್ರವಾದ ೧-೧೧೦ ಅಸಿಯಲ್ -ಕೃಶಾಂಗಿ ೧-೬ ಅವಯವ-ಅಲಕ್ಷ೩-೧೬, ೧೪-೩೭ ವ ಅಸುಹೃತ್ -ಶತ್ರು ೧೦-೧೯
ಅಸುಂಗೋಳ್ -ಪ್ರಾಣಾಪಹಾರಮಾಡು, ಅವಷ್ಟಂಭ-ದರ್ಪ, ಅಹಂಕಾರ ೨-೬೨,
ಶಕ್ತಿಗುಂದಿಸು ೧-೩೮ ೨-೪ ವ,
೪-೪೮ವ, ೬-೩೧, ೧೨-೯, ಅವಸರ-ಅವಕಾಶ ೧-೭೫
೧೨-೧೭೦ . ಅವಸ್ತುಭೂತ-ಅಪ್ರಯೋಜಕ ೯-೧೮ ಅಸ್ತ್ರಕ್ -ರಕ್ತ ೩-೧ ಅವ್ಯವಚಿನ್ನ-ಒಂದೇಸಮನಾದ, ಎಡಬಿಡದೆ ಅಹರ್ಪತಿ-ಸೂರ್ಯ ೯-೬೪ ೧-೭, ೧-೬೦ ವ
ಅಂಹಃ-ಪಾಪ ೪-೧೫ ಅವಳಿಸು-ವ್ಯಾಪಿಸು, ಹರಡು, ಮೇಲೆ ಬೀಳು, ಅಹಿಕಟಕ-ಹಾವನ್ನು ಬಳೆಯಾಗುಳ್ಳವನು,
೩-೫೩, ೬-೫೯, ೧-೮೬ ವ . ಈಶ್ವರ ೧-೪ ಅವಿ-ಝರಿ, ಬೆಟ್ಟದ ಹೊಳೆ ೭-೨೬ .
ಅಹೀಂದ್ರ-ಆದಿಶೇಷ ೬-೭೫
ಅಳಕ-ಆಲೇಖ (ಸಂ) ಬರೆಯುವ ಓಲೆ ಅವಿಕಳ-ಕಡಿಮೆಯಿಲ್ಲದ ೮-೧ ಅವಿನಾಣ-ಅಭಿಜಾನ, ಗುರುತು ೩-೪ ವ
ಅಳು-ನಾಶವಾಗು ೧೦-೬೫, ೧೩-೩೫ ಅರ್ವಿಸು-ವ್ಯಾಪಿಸು ೫-೪೫
ಭಯಪಡು ೧೧-೧೦ ವ ಅವುಂಕು-ಅಮುಕು, ಒತ್ತು, ೧೩-೫೯ - ಅಳವಡು-ಪೇರು, ಕೂಡು, ಸಮನ್ವಯವಾಗು ಅವುಂಡು-ಔಡು-ಕೆಳದುಟಿ ೭-೮೦
೬-೩೦ ಅಶನಿ-ಸಿಡಿಲು ೨-೯೮, ೬-೯೧ ಅಳವಿ-ಪ್ರಮಾಣ ೨-೫೮, ೫-೬೨ ಅಶ್ವತ್ಥಾಮ-ಕುದುರೆಯ ಶಕ್ತಿ ೨-೪೪
೧೨-೧೫೮ ವ
Page #733
--------------------------------------------------------------------------
________________
೭೨೭
ಶಬ್ದಕೋಶ ಅಂಬುವಿಡು-ಬಾಣವನ್ನು ಬಿಡುವುದು
೩-೧೩ ವ ಅಂಬೇಲು-ಬಾಣದ ಪೆಟ್ಟು, ಗಾಯ
೨-೬೨ ಅಭವ-ಹುಟ್ಟಿಲ್ಲದವನು, ಈಶ್ವರ ೮-೧೩ ಅಂಭಃ-ನೀರು ೬-೪೦ ಅಂಕಷ-ಆಕಾಶವನ್ನು ಮುಟ್ಟುವ ೪-೨೨ ಅರ್ಭಕ-ಮಗು ೧-೧೨೦ ಅಭಿಘಾತ-ಭಂಗ, ಅಡ್ಡಿ ೧-೧೦ವ ಅಭಿಚಾರ-ಶೂನ್ಯ, ಮಾಟ ೮-೪೨ ಅಭಿಜಾತ-ಉತ್ತಮಕುಲದವನು ೧೦-೫೫ ಅಭಿಧಾನ-ಹೆಸರು ೩-೩೯ , ಅಭಿಭವಿಸು-ಶಕ್ತಿಗುಂದಿಸು ೧೧-೧೦೬ ಅಭಿರಾಮ-ಮನೋಹರ ೧-೧೪೧ ಅಭಿವಾದಯೇ-ನಮಸ್ಕರಿಸುತ್ತೇನೆ
೧೩-೪೦ ಅಭಿಸಾರಿಕೆ-ಸಂಕೇತಸ್ಥಾನದಲ್ಲಿ ಪ್ರಿಯನನ್ನು
ನಿರೀಕ್ಷಿಸುವವಳು ೪-೮೩ .. ಅಭ್ಯುದಯ-ಅಭಿವೃದ್ಧಿ ೮-೪ ಅಮಂದ-ಗಟ್ಟಿಯಾದ, ಬಲವಾದ
೧೪-೩೭ವ ಅಮರ್, ಅಮರ್ಚು-ಸೇರು, ಒಟ್ಟುಗೂಡು
' ೧-೯೫| ಅಮರಾಪಗಾನಂದನ-ದೇವಗಂಗೆಯ
ಮಗನಾದ ಭೀಷ್ಮ ೧-೮೧ ವ ಅಮಳ-ಯಮಳರು (ಸಂ) ಅವಳಿಗಳು
ನಕುಲಸಹದೇವರು ೨-೩ ಅಮ್ಮ-ತಂದೆ ೯-೬೪, ೧೦-೭೩ ಅಮುಂಕು-ಅಮುಕು, ಅದುಮು, ಒತ್ತು
೫-೫೩ ಅಮೃತಕಿರಣ-ಚಂದ್ರ ೧-೧೫ ಅಮೇಯ-ಅಳೆಯಲಾಗದ ೧-೪೫ ಅಮೋಘ-ವ್ಯರ್ಥವಲ್ಲದ ೧-೧೧೮ ವ ಅಯ-ಶುಭಕರವಾದ ವಿಧಿ ೯-೧೩, ೩೫ ಅಯಸ್ಕಾಂತ-ಸೂಜಿಗಲ್ಲು ೧೧-೨ ವ |
ಅಯ್ದೆ-ಸುಮಂಗಲಿ, ಮುತ್ತೆದೆ ಆಯ್ದೆಮಿನುಗು-ಮಾಂಗಲ್ಯ, ತಾಳಿ
- ೬-೩೨ ವ ಅರಣಿ-ಬೆಂಕಿಯನ್ನು ಕಡೆಯುವ ಮರದ
ಕೋಲು ೮-೩೭ ವ ಅರಬೊಜಂಗ-ರಾಜವಿಟ, ೪-೮೭ ಅರಲ್ -ಹೂವು ೧-೫೮ ಅರವರಿಸು-ವಿಚಾರಮಾಡದೆ ೨-೩೭ ಅರಸು-ರಾಜ್ಯ, ದೊರೆತನ -೯-೮೩ ಅರಸಿಕೆ-ದೊರೆತನ, ರಾಜ್ಯಭಾರ ೧೧-೪೮ ಅರಳೆಲೆ-ಮಕ್ಕಳಿಗೆ ಉಪಯೋಗಿಸುವ
ಒಂದು ತೆರನಾದ ಒಡವೆ ೨-೪ ಅರಾತಿ-ಶತ್ರು ೧-೧ ಅರಿ-ಕತ್ತರಿಸು ೧-೧೦೧ ಅರಿದು-ಅಸಾಧ್ಯ ೧-೫ ಅರಿಯ-ಅಸಾಧ್ಯನಾದವನು ೧೨-೨೦೪ ಅರೆಪೊರಿಕೆ-ಅರ್ಧವ್ಯಾಪಿಸಿದುದು ೧೧-೭೦ ಅಭಿಮಗ-ಧರ್ಮಪುತ್ರ, ೬-೩, ಅವಿವರಗಾದ-ಮಳೆಯಿಲ್ಲದೆ ಒಣಗಿದ
- ೧೨-೭ ಅಜೆಕೆ-ಪ್ರಸಿದ್ದಿ, ಶ್ರೇಷ್ಠ ೧-೨೫, ೧೩೫ ಅಳೆಯಮಿಕೆ-ಅಜ್ಞಾನ ೬-೫೮ ಅಲಕ್ತಕ-ಅರಗು ೪-೫೦ ಅಲಪು-ಹಿಂಸೆ, ತೊಂದರೆ ೪-೧೦ ಅಲಂಪು-ಸಂತೋಷ ೧-೧೦೧, ೨-೫೫,
೪-೨೯, ೧೦೨, ೧೦೯ ಅಲರ್ -ಹೂವು ೮-೩೭ ಅಲ್ಲಕಲ್ಲೋಲ-ಹಿಂದುಮುಂದು; ತಲೆಕೆಳಗು
೧೩-೩೩, ಅಲ್ಲದಲ್ಲಣಿಗೆ -ಹಸಿಶುಂಠಿಯ ಮಿಶ್ರಣ , ವನ್ನುಳ್ಳದ್ದು ೪-೮೭ ಅಲರೊದ್ದೆ-ಹೂಗಳ ರಾಶಿ ೧೨-೨೧೮ ಅಲಜು-ನಾಶಮಾಡು ೧೨-೨೬ ಅಲ್ಲಳಿಗಾಳೆಗ-ವಿನೋದದ ಯುದ್ಧ
೧೧-೪೩ವ
Ch.
Page #734
--------------------------------------------------------------------------
________________
೭೨
ಶಬ್ದಕೋಶ ಅಳವು-ಶಕ್ತಿ ೧-೨೪, ೨-೩೭ ವ ಅ-ಅಡಿಗೆ ೧೧-೬೪ ಅಳಬ್-ಭಯಪಡು ೧೦-೬೨
ಅಬ್ದು-ಅದ್ದು, ಮುಳುಗಿಸು ೭-೮೫ ಅಳಸಗಾಮಿನಿ-ಮಲ್ಲಗೆ ನಡೆಯುವವಳು ಅಟ್ಟು-ಸುಡು ೫-೭೮, ೮-೯ ೮, ೩-೮೫
೧೨-೧೭೦,೧೨-೧೯೦, ೧೩-೭೧ ಅಳ್ಳಜ-ಆಶ್ಚರ್ಯ ಪ್ರೀತಿ, ೪-೬೦ ಅಳ್ಳವಳ್ಳಿಯಾಗು-ಅತ್ಯಾಯಾಸ ಹೊಂದು
ಆಕೃಷ್ಣ-ಸೆಳೆಯಲ್ಪಟ್ಟ ೫-೧೦ ವ - ೧೨-೪
ಆಕ್ರಂದನ-ಅಳುವಿಕೆ ೩-೨೪ ಅಳ್ಳಾಡು-ನಾಶವಾಗು ೫-೮೫ ೧೩-೯೦೦
ಆಂಕೆಗೊಳ್ -ಪ್ರತಿಭಟಿಸು ೧೦-೭೦ ವ ಅಳಿಕ-ಹಣೆ ೪-೧೮
೧೧-೪೪, ೭೬ ಅಳಿನೀ-ಹೆಣ್ಣುದುಂಬಿ ೭-೨೯
ಆಖಂಡಳ-ಇಂದ್ರ ೫-೯೯ ವ ಅಳಿವು -ನಾಶವಾಗು ೫-೧೦೦, ಆಖೇಟ-ಬೇಟೆ ೬-೭೧. ೧೦-೯೧ ವ
ಆಗ-ಆಗದು ೭-೩೭ ಅಳ್ಳಿ-ತಿವಿ, ತುಂಬು, ಚುಚ್ಚು ೧೦-೫೭೦
ಆಗಡುಂ-ಯಾವಾಗಲೂ ೧೨-೩೩ ೮೬
ಆಗಮ-ಶಾಸ್ತ್ರ ೧೦-೮೩ ಅಳುಂಬರಿ-ಅತಿಶಯ, ವಿಶೇಷ
ಆಗರ-ಆಕರ (ಸಂ) ಗಣಿ ೧-೫೭ ಅಳುರ್-ವ್ಯಾಪಿಸು ೫-೮೬, ೮೯
ಆಗ್ರಹ-ಕೋಪ, ಹಟ, ೧-೬೬ ಅಳುರ್ಕೆ ೧-೫೨, ೨-೧೮
ಆಗಾಮಿಕ-ಮುಂದೆ ಬರುವ ೧-೫೯ ಅಳ್ಳು-ಹೆದರು, ಶಕ್ತಿಗುಂದು-ಭಯಪಡು - ೧೧-೫೦
ಆಘಾತ-ಪೆಟ್ಟು ೧-೧೫ ಅಳ್ಳು -ಅಳ್ಳಾಟದ ಏಟು, ೫-೬೨ ವ.
ಆಚಕ್ಷತೇ-ಹೇಳುತ್ತವೆ ೯-೯೭ ಅಮ-ಅಜೀರ್ಣ ೧-೫೬, ೧೨-೨೧೯
ಆಜಾನೇಯ-ಶ್ರೇಷ್ಠವಾದ ಕುದುರೆ ೬-೪೦,
- ೭೨ ವ . ಅಯ್ಯೋಮ್-ಪ್ರೀತಿ ೧-೬೮ (ಎ)
ಆಜಿ-ಯುದ್ಧ ೩-೭೩ ಅಟೆಗಾಳೆಗ-ತುಚ್ಚವಾದ ಯುದ್ದ ೮-೯೪ ವ
ಆಟಂದು-ಮೇಲೆ ಬಿದ್ದು ೪-೧೧, ಅಲೆಪು-ಪ್ರೀತಿಸು ೭-೯೪ ವ
- ೫-೫೦, ೮-೩೫ ಅಲೆಯೂರು-ಕುಗ್ರಾಮ ೨-೪೫
ಆಟರ್-ಮೇಲೆಬೀಳು ೫-೫, ೫-೮೧, ಅಲೆವಾಡ-ಹಾಳುಹಳ್ಳಿ ೧೨-೮೬
೬-೨೯ ವ ಅಲೆವೆಸನ-ತುಚ್ಛವಾದ ಆಸೆ ೮-೫೭
ಆಟವಿಕ-ಕಾಡುಜನರ ಸೈನ್ಯ ೭-೨೭ ವ ಅಲೆಮಿ-ಹಾಳಾಗಿಸು ೮-೮೦
೧೩-೨೧. ಅಚ್ಚೆತಟ್ಟೆ-ನಾಶವಾಗಲು ೫-೧೦೪
ಆಟಸು-ಬಯಸು ಅಪೇಕ್ಷೆಪಡು ೧-೧೨, ಅಚ್ಚೆಮಚ್ಚೆ-ನಾಶವಾಗಲು ೬-೨೪ ವ,
೫-೩೨, ೭-೬೮, ೮-೩೨, ೧೦-೭೫ ವ ಅಚ್ಚು-ನಾಶವಾಗು
೯-೪೯, ೧೧-೧೦೦ ಅತ್ತೆ-ಪ್ರೀತಿ ೧-೧೩, ೫-೨೦
ಆಡು-ಹೇಳು ೪-೮೩ ವ ಅಲ್ಕು-ಹದರು ೫-೧೦೦ವ
ಆಣತಿ-ಆಜ್ಞಪ್ತಿ (ಸಂ) ಅಪ್ಪಣೆ, ೫-೩೫ ಅಬ್ದು-ನಾಶವಾಗು ೩-೭೦, ೧೧-೬೪ . ಆಣ್ಮಒಡೆಯ ೭-೩೯
wa
Page #735
--------------------------------------------------------------------------
________________
೭೩೦ ಆಣೆ-ಆಜ್ಞೆ ೧೩-೩೫ ಆತಪ-ಬಿಸಿಲು (ಬಾಲಾತಪ-ಎಳೆಯಬಿಸಿಲು ೨-೩೯) ಆತಪತ್ರ-ಕೊಡೆ, ಛತ್ರಿ ೧-೧೨೦ ಆತ್ತ-ಪಡೆದ ೩-೮೧ ಆತ್ಮಜನ್ಮ-ಮಗ ೧-೬೮ ಆತ್ಮಭವ-ಮಗ ೧-೩೧ ಆರ್ತ-ಸಮರ್ಥ ೬-೧೨ (ಆರ್ತು-ಪರಾಕ್ರಮದಿಂದ ೧-೮೧) ಆತ್ಮಾನುಗತಾರ್ಥ-ಮನಸ್ಸಿನಲ್ಲಿರುವ ಆಶೆ
೧-೧೧೯ ಆತೋದ್ಯ-ವಾದ್ಯ, ೩-೮೧ ಆದಂ-ಹೆಚ್ಚಾಗಿ, ಮಿಗಿಲಾಗಿ ೧-೯೬,
೨-೭೪ | ಆದಮೆ-ಹೆಚ್ಚಾಗಿ, ವಿಶೇಷವಾಗಿ ೨-೭೪ ಆದಿ-ಅತ್ತಕಡೆ ೫-೬೨ ಆದ್ರ್ರ-ಒದ್ದೆಯಾದ ೧-೧೩೪ ಆದಿಗರ್ಭೇಶ್ವರ-ಆಗರ್ಭಶ್ರೀಮಂತ ೨-೯೭
ಪಂಪಭಾರತಂ ಆಭೋಗ-ವಿಸ್ತಾರ ೧೨-೧೯೧ ಆಮಳಕ-ನೆಲ್ಲಿಕಾಯಿ ೧೦-೩೭ ವ ಆಯ-ಸಾಮರ್ಥ್ಯ ೧-೨೪, ೬೭ ವ ೬-೧ ಆಯತ-ವಿಸ್ತಾರ ೧-೬೮ ಆಯತನ-ಮನೆ, ದೇವಾಲಯ ೨-೯೭ ವ ಆಯತ್ತ-ಅಧೀನ ೪-೧೮ ವ ಆಯತಿ-ಮಹಿಮೆ ೧-೧೧೭, ೮-೮೮ ಆಯೋಗ-ಸೇರುವಿಕೆ ೧೦-೨೬ ವ ಆರ್-ಕೂಗಿಕೊಳ್ಳು ೩-೭೯, ೧೧-೩೮,
೧೨-೬೭, ೧೨-೧೫೦, ೧೩-೮,
೧೩-೬ ಆರ-ಹಾರ, ೨-೧೨ ಆರಮ್-ವಿಚಾರಮಾಡು, ಹುಡುಕು
೧-೭೭, ೨-೬೦, ೬-೩,
೧೦-೫೮, ೧೨-೪೬ ಆರವೆ-ಆರಾಮ (ತೋಟ) ೧-೨೮ ಆರಾವ-ಧ್ವನಿ ೧೧-೩೪ ಆರೂಢ-ಹತ್ತಿರುವ, ಕೈಕೊಂಡ ೨-೫೦ವ ಆರೋಗಿಸು-ಊಟಮಾಡು ೫-೬೭ವ ಆರೋಪಿತ-ಏರಿದ, ೮-೧೨ ಆಜ-ಸಾಮರ್ಥ್ಯ-ಸಮಾಧಾನ ೮-೬೩, - ೯-೨೫ ವ ಆಲಂಬ-ಆಶ್ರಯ ೧-೬೮ ಆಲಾನಸ್ತಂಭ-ಆನೆಯನ್ನು ಕಟ್ಟುವ ಕಂಬ
- ೨-೩೯ ವ ಆಲಿ-ಕಣ್ಣಿನ ಗುಡ್ಡೆ ೨-೧೯, ೪-೭೮ ಆಲಿನೀರು-ಮಂಜಿನ ನೀರು ೫-೮ | ಆಲೀಢ-ಬಿಲ್ದಾರನು ಕುಳಿತುಕೊಳ್ಳುವ ಭಂಗಿ
೧೩-೩೮ ವ | ಆವಗೆ-ಕುಂಬಾರನ ಒಲೆ ೫-೯೬ ವ,
- ೧೨-೨೮, ೧೨-೧೭೦ ಆವರ್ಜಿಸು-ಸಂಪಾದಿಸು, ಸೆಳೆದುಕೊಳ್ಳು
೧-೨೫ * ಆವರ್ತನ-ಸುಳಿ ೨-೩೯ ಆವರ್ತಿಸು-ವ್ಯಾಪಿಸು ೧-೮೭
,
,
ಆದೇಶ-ವಿಧಿ, ನಿಯಮ ೩-೩೨ ವ. ಆಂದೋಳ-ಉಯ್ಯಾಲೆ ೨-೩೯ ವ ಆಧೇಯ-ಆಶ್ರಯ ೮೭ ವ ಆನ್ -ಧರಿಸು ೧-೨೩, ೪-೨೫,
- ೧೨-೩೨, ೧೩-೧೦೩ ಆಪಣ-ಅಂಗಡಿ ೧-೫೮ ಆಂಪ-ಪ್ರತಿಭಟಿಸುವ ೬-೨೫ ಆಪಾಳಿತ-ವ್ಯಾಪ್ತವಾದ ೧-೧೮ ಆರ್ಪು-ಸಾಮರ್ಥ್ಯ ೧೨-೨೦೫ ಆರ್-ಗರ್ಜಿಸು, ಶಬ್ದಮಾಡು ೩-೫೯,
೮-೯೪, ೧೧-೩೮, ೧೨-೬೭,
೧೨-೧೫೧, ೧೩-೮, ೧೩-೪೬ ಆಭ-ಸಮಾನ ೪-೬೯ ಆಭಿಚಾರ-ಶೂನ್ಯ, ಮಾಟ, ೮-೪೨ ವ ಆಫೀಲ-ಭಯಂಕರ ೧-೪೧ ವ
Page #736
--------------------------------------------------------------------------
________________
೭೩೧
ಶಬ್ದಕೋಶ ಆವಲಿಕ-ಒಂದು ಬಗೆಯ ಬಾಣ ೫-೧೦೦ ಆವಳೀಕ ೧೨-೯೧ ಆವಸಥ-ವಾಸಸ್ಥಾನ ೧-೭೫ ಆವ್ಯಾನ-ಮುಚ್ಚಿದ-೮-೨೫ ಆವಿಲ (ಳ)-ಬಗ್ಗಡವಾದ ೪-೨೫ ಕಲ್ಮಷ
೧೨-೧೧೪ವ ಆವುತಿ-ಹವಿಸ್ಸು ೬-೩೪ (ಆವುತಿಧಮ್) (ಆವುತಿಯೆಂಬ ಆಯುಧ ೧೦-೫೦ ೭೬) ಆವೃತ-ಸುತ್ತಲ್ಪಟ್ಟ ೨-೪೫ ಆವೆ-ಆಮೆ ೭-೫೭ ಆಶು-ಜಾಗ್ರತೆಯಾಗಿ ೪-೨೭, ೧-೬೨ ಆಶುಶಿಕ್ಷಣಿ-ಅಗ್ನಿ ೧೧-೯೪ ಆಸತ್ತು-ದಣಿದು ೧೨-೧೫೨ ಆಸನಂದೋಲ-ಉಪೇಕ್ಷೆಯನ್ನು ತೋರು
- ೮-೨೦ ಆಸನ್ನ-ಹತ್ತಿರ ೭-೬೪ ಆಸನ-ಆರು ಗುಣಗಳಲ್ಲಿ ಒಂದು ಆಸವ-ಮಧ್ಯ ೪-೬೫ ಆಸ್ತರಣ-ಚಾಪೆ, ಹಾಸಿಗೆ ೧೨-೫೨ ವ. ಆಸಾರ-ಸುರಿಮಳೆ ೧೦-೮೬ ಆಸ್ಸಾಳನ-ತಟ್ಟುವುದು ೨-೩೯ ವ | ಆಸುಕರ-ತೀವ್ರತೆ ೧-೬೨ ಅತಿಶಯ,
೧೧-೫೭ ಆಸ್ಫೋಟಿಸು-ತೋಳನ್ನು ತಟ್ಟಿ ಶಬ್ದಮಾಡು
- ೯-೯೦ ವ ಆಹತಿ-ಹೊಡೆತ, ಪೆಟ್ಟು ೧-೧೪೬ ಆಹುತಿ-ಹವಿಸ್ಸು ೬-೩೫ ಆಹಾನ-ಕರೆಯುವಿಕೆ ೧-೮೯ ಆಳಂ-ಹೆಚ್ಚಾಗಿ ೫-೩೮ ಆಳಜಾಳ-ಮಿಥ್ಯಾಜಾಲ, ನಿಸ್ಸಾರ, ಸುಳ್ಳು , ಬಲೆ, ೧೨-೬೮ ಆಳವಾಳ-ಗಿಡಗಳ ಪಾತಿ ೨-೧೬ ಆಳಾಪ-ಸಂಭಾಷಣೆ ೯-೬ ವ ಆಲೆಸು-ಮುಳುಗಿಸು ೪-೧೭ ಆಳ್ವಸ-ಸೇವಾವೃತ್ತಿ ೯-೭, ೧೧-೫ ಆಳ್ವಲಿ-ಮನುಷ್ಯರೇ ಬೇಲಿ ೫-೮೧
ಇಕ್ಕು-ಬೀಸು ೪-೮೫ ಬೀಳಿಸು ೮-೨೨ ಇಕ್ಕುಂಗೂಳ್ -ಹಾಕುವ ಅನ್ನ ೮-೭೧ ಇಕ್ಷುಪುಷ್ಟ-ಕಬ್ಬಿನ ಹೂವು, ಸೂಲಂಗಿ
೧-೧೧೭ ಇಂಚರ-ಇನಿದಾದ ಸ್ವರ ೧೪-೩೦ವ ಇಂಚಿ-ಹಿಂಸೆ ೮-೫೧ ಇಟ್ಟಳಮನೋಹರ ೬-೯, ೭-೧೧ ಇಟ್ಟಿ-ಈಟಿ ೧೦-೯೪ ಇಟ್ಟೆಡೆ-ಒತ್ತಾದ ಸ್ಥಳ ೭-೮೬ ಇಡಿ-ತುರುಕು ೨-೩೯ ವ ಇಡುಮುಡುಕು-ವಿಶೇಷ ಶಬ್ದಮಾಡು
೧೨-೮೨ ಇಡುವಗೆ-ಬದ್ಧವೈರ ೧೩-೧೮ ಇಡುವಿಟ್ಟಿ-ಇಡುವ ಈಟಿ ೧೨-೬೦ ವ ಇಡುವು-ರಾಶಿ ೧೨-೧೫೮ ವ, | ೧೩-೫೩ವ ಇಂಡ-ರಾಶಿ ೧೧-೫೮, ೮೯, ೧೨-೧೭ ಇಂದ್ರಗೋಪ-ಮಿಣುಕುಹುಳು ೭-೨೪ ಇಂದ್ರಾಣಿ-ಶಚಿ ೩-೬೯ ಇಂದಿಂದಿರ-ದುಂಬಿ ೯-೯೭ ಇದಿರ್ಚು-ಎದುರಿಸು ೧೦-೬೪,
೧೩-೯೪ ಇಂದೋಳ-ದುಂಬಿ ೫-೧೯ ಇಧ್ಯ-ಸಮಿತ್ತು, ಸೌದೆ ೪-೫೯ ಇನ-ಸೂರ್ಯ ೧-೯೧ ಇನಜ-ಯಮ ೧-೧೨೧ ಇನ್ನವು-ಇಂಥವು ೬-೫೩ ಇನಿಸು-ಇಷ್ಟು ೮-೧೩ ಇನ್ನುಣಿಸು-ರುಚಿಯಾದ ಊಟ ೫-೭೧ ಇಂಬು- ಆಶ್ರಯ ೧೨-೨ ಇಂಬೆಳಸು - ಇಂಪಾದ ಬೆಳೆ ೧-೫೪ ಇಬ್ಬ-ಆನೆಗಳ ಗುಂಪು ೧-೧೭೧ ಇಮ್ಮಾವು-ರುಚಿಯಾದ ಮಾವು ೪-೭೫
42
Page #737
--------------------------------------------------------------------------
________________
ಪಂಪಭಾರತಂ ಉಗ್ಗಡಿಸು-ಗಟ್ಟಿಯಾಗಿ ಕೂಗು ೧೦-೨೧ ಉಗಿ-ಕೀಳು, ೧-೧೦೦, ೧೦೨ ವ,
೯-೬೩ ವ, ೧೨-೪೦ ವ, ೧೦೩ ಉಗಿಬಗಿಮಾಡು-ಭೇದಿಸು, ಛಿದ್ರಿಸು
೧-೬೮ ವ, ೨-೩೯ ವ ಉಗು-ಸುರಿ ೫-೫ ಉಗುರಿಸು-ಉಗುರಿನಿಂದ ಕರೆ ೧-೧೦೪
೭೩೨ ಇಜೆ-ಸಡಿಲವಾಗು ? ೧೪-೫ ಇಜಂಕು-ತೊಡೆಗಳ ಮಧ್ಯೆ ಸೇರಿಸು
೪-೩೫, ೮-೧೦೪ ಇರ್ಕಚ್ಚೆ-ಎರಡು ಕಡೆಯ ಕಚ್ಚೆ ೪-೩೮ ಇರ್ಬಗಿ-ಎರಡಾಗಿ ಸೀಳು, ಭಾಗಮಾಡು
- ೨-೩೩ ಇರ್ಮಡಿಸು-ಎರಡರಷ್ಟು ಮಾಡು
೧೩-೧೦೬ ಇಷ್ಟಿ-ಯಾಗ ೪-೧೧ ಇಸಲ್-ಹೊಡೆಯಲು ೩-೫೭ ವ ಇಸು-ಬಾಣಪ್ರಯೋಗಮಾಡು ೮-೯೩ ಇಳಿ- ತಿರಸ್ಕರಿಸು ೧-೨೭ ಇಳಿಸು-ತಿರಸ್ಕರಿಸು ೨-೯, ೪-೧, ೯-೨೭
ವ, ೯-೫೫, ೧೪-೫ ಇಲೆಕೆವೆಡೆ-ತಿರಸ್ಕಾರ ಹೊಂದು ೧೦-೧೯ ಇಲ್ಮೀಖ್-ಇಕ್ಕಳ ೧೧-೩ ಇಮ್ಮಿಳಿಗೊಳ್ –ಆಕರ್ಷಿಸು, ೨-೮, ೧೧
ವ, ೭-೬೮ ಇಚ್ಚುವರಿ-ಸೆಳೆದುಕೊಂಡು ಹರಿ ೪-೬೮
ಈ ಈಕ್ಷಣ-ಕಣ್ಣು ೪-೧೦೬ ಈಗಡೆ-ಈಗಲೆ ೧೧-೯೭, ೧೩-೭೮ ಈಂಟುಜಳಧಿ-ಕುಡಿಯುವ ನೀರಿಗೆ
ಆಕರವಾಗಿರುವ ಸಮುದ್ರ
೧೦೧-೨೨ ಇದಲೆ-ಇತ್ಯ, ಈಕಡೆ ೫-೬೨ ಈ-ಪ್ರಸವಿಸು, ಹೆರು ೫-೭೬,
: ೧೧-೪೦ ಈಂಬುವು-ಈಯುವುವು, ಮರಿಹಾಕುವುವು
೨-೭೬, ೧೦-೪೦ ಈಸು-ಈಜು ೧-೧೩ ಗಾಡಿಯ
ಇರಚಿಮರ ೧೦-೯೧
ಉಗುಲ್-ಮುಕ್ಕುಳಿಸು- ಹೊರಕ್ಕೆ ಚೆಲ್ಲು
೭-೮೭ ಉಂಗುರವಿಡು-ಮದುವೆಯಾಗು ೧-೨೮ವ ಉಚ್ಚಳಿಸು-ಮೇಲಕ್ಕೆ ಹಾರು, ೧-೬,
- ೧-೩೯, ೧೦-೭೭, ೧೨-೧೬೮ ಉಚ್ಚಾಟಿಸು-ಓಡಿಸು ೩-೧೫ ವ | ಉಜ್ಜವಣಿ-ಉದ್ಯಾಪನಾ (ಸಂ) ವ್ರತವನ್ನು
- ಪೂರ್ಣಮಾಡುವುದು ೧೩-೩೬ ಉಜ್ಜಳ-ಉಜ್ಜಲ (ಸಂ) ಪ್ರಕಾಶಿಸುವ ೧-೨ ಉಜ್ಜಿಗ-ಉದ್ಯೋಗ ೫-೧೦೨ ಉಂಟೋಡತಾಗಿಮಾಡಿ-ಹೌದು ಎಂದು
ನಿಶ್ಚಯವನ್ನಾಗಿ ಮಾಡಿ ೭-೭೫ - ಉಂಡಿಗೆ-ಮುದ್ರೆ ೪-೩೧ ವ ಉಡಮೊಗ-ಬಾಗೆಹೂವಿನಂತಿರುವ ಮುಖ
೪-೭೮ ಉಡಲಿಕ್ಕು-ಉಡುಗೊರೆ ಕೊಡು, ೩-೪೪,
- ೧೪-೧೭ ವ ಉಡಿ-ಮುರಿ, ವಿಚ್ಚಿನ್ನವಾಗು ೨-೨೮, - ೧-೯೨, ೬-೨೬, ೭-೧೩,
೧೧-೮೧, ೯-೫೯, ೧೧-೨ ವ,
- ೩, ೭, ೩೮, ೧೨-೧೦೦ ಉಡು-ಪ್ರಾಣಿವಿಶೇಷ ೧-೩೯ ವ ಉಡುಗು-ಸಂಕೋಚಮಾಡು, ಕುಗ್ಗು
೪-೪೬, ೫-೩೭, ೧೦-೭೦, ೧೨-೧೩೭, ೧೨-೧೯೪, ೨೦೦,
೨೧೨ ಉಡೆವಣಿ-ನಡುವಿನ ಆಭರಣ, ಉಡಿದಾರ
೧-೪೬
ಉಕ್ಕಿವ-ಮೋಸ ೭-೪೦ ಉಗ್ಗಡ-ಉತ್ಕಟ, ಆಧಿಕ್ಯ ೩-೪, ೭-೩ ವ
Page #738
--------------------------------------------------------------------------
________________
ಶಬ್ದಕೋಶ
೭೩೩ ಉಣಿಸು-ಊಟ ೩-೨೬ ವ
ಉದಶ್ರು-ಉಕ್ಕಿಬರುವ ಕಣ್ಣೀರು ಉಣ್ಣು-ಉಬ್ಬು ೨-೧೨
೧೨-೧೩೪ ಉಣುಪೊಣ್ಣುಲ-೧೦೮
ಉದ್ಧ-ಪ್ರಶಸ್ತವಾದ ೪-೭೧ ಉತ್ಕಚ-ಮೇಲಕ್ಕೆದ್ದಿರುವ ಕೂದಲುಳ್ಳ ಉದ್ದಳನ-ಸೀಳುವಿಕೆ ೧-೫೧ - ೧೧-೮
ಉದ್ಧತ-ಶ್ರೇಷ್ಠ ೬-೩೦ ವ, ೧೦-೨೦ ಉತ್ಕಂಠ-ಗಟ್ಟಿಯಾದ ಧ್ವನಿ
- ಉದ್ಯತ್-ಮೇಲಕ್ಕೆ ಎದ್ದಿರುವ ೧-೧೧೫ ಉತ್ಕಂಠಿತ-ಕುತೂಹಲದಿಂದ ಕೂಡಿದ ಉದ್ಯತ-ಪ್ರಯತ್ನಶಾಲಿ ೧೦-೧೦ ೭-೭೧ ವ
ಉದ್ಯಮ-ಪ್ರಯತ್ನ-ಉದ್ಯೋಗ ೧೨-೪೭ ಉತ್ಕರ್ಷತೆ-ಉತ್ಸಾಹ ೧೩-೯೦ ವ ಉದಾತ್ತ-ಶ್ರೇಷ್ಠ ೧-೧,೯ ಉತ-ಬೇರೊಂದು ಕಡೆ ೧-೭೫
ಉದ್ಗಾತೃ-ಸಾಮವೇದವನ್ನು ಗಾನಮಾಡುವ ಉತ್ತಮಾಂಗ-ತಲೆ ೭-೫೯ ವ
ಋತ್ವಿಕ್ ೬-೩೩ ವ ಉತ್ತರ-ಅಭಿವೃದ್ಧಿ ೩-೨ ವ ಉತ್ತರೋತ್ತರ ಉದ್ಘಾಸಿ-ಉತ್ತಮವಾದ ಕತ್ತಿ ೧-೫೧ ೧-೮೬ ೬-೩೮
ಉದ್ಘಾನಿ-ಅತಿಶಯ, ಆಧಿಕ್ಕ ೧-೧೭, ಉತ್ತರಾಪಥ-ಉತ್ತರದೇಶ ೧-೬೦ ವ,
೪-೫೮ ೩-೩೧ ವ
ಉದ್ಧಾಂತ-ತೇರನ್ನು ನಡೆಸುವ ಒಂದು ಉತ್ತರಿಸು-ದಾಟು, ಪೂರ್ಣಮಾಡು
ರೀತಿ ೧೩-೩೦ ವ ೮-೪೭
ಉದಿತೋದಿತ-ಅಭಿವೃದ್ಧಿಯುಳ್ಳವನು ಉತ್ತಂಸಿತ-ಒಡವೆಯಾದ೧೩-೮೨ ವ
೧-೧೪೧, ೨-೯೩ ಉತ್ಪಂಚ-ಗಟ್ಟಿಯಾಗಿ ೧೪-೨೨
ಉದಿರ್ಪು-ನಡುಗಿಸು, ಉದುರಿಸು ೬-೩೨ವ ಉತ್ತಾಯಕನಾಗು-ಪ್ರತಿಭಟಿಸು ೧೧-೪ ವ ಉದ್ದಿತಾಪ್ರತಿಮಹಿತ ಮಾಡಿ- ? ೬-೩೦ವ - ೧೨-೧೧೮ ವ
(ಅಪಪಾಠ) ಉದ್ದತಪ್ರತಿರೋವಿತರ್ ? ಉತ್ಪಾತ-ಅಪಶಕುನ, ಪ್ರಳಯ, ೧-೧೩೨ * ಉತ್ಯಾತ ಪ್ರತಿರೋಪಿತರ್ ? ವ ೧೧-೧೧೭ ವ
ಉದೀರ್ಣ-ಹೆಚ್ಚಾದ ೧೨-೧೧೬ ವ ಉತ್ಪಾದಯತಿ-ಹುಟ್ಟಿಸುತ್ತದೆ ೩-೪ ವ ಉರ್ದು-ಉಜ್ಜು, ತಿಕ್ಕು ೮-೧೫ ಉತ್ತಿತ-ಎದ್ದ ೧-೧೦೫, ೩-೫೭, ಉಪ-ಗರ್ವದಿಂದ ಕೂಡಿದ ೧-೧೪೯ ಉತ್ತುಂಗ-ಎತ್ತರವಾದ, ೩-೧೮ ವ ಉದ್ಭತ್ತ-ದುರುಳ, ತುಂಟ, ೧-೧೪೬, ಉಂತೆ-ನಿಷ್ಟಯೋಜನವಾಗಿ, ವ್ಯರ್ಥವಾಗಿ ೪-೧೮ ಗುಂಡಾಗಿರುವ ೪-೭೪ ೨-೮೬
ಉದ್ದೇದ-ಒಡೆಯುವಿಕೆ ೪-೨೨ ಉತ್ತೇಂಖತ್-ಮೇಲೆ ತೇಲಾಡುತ್ತಿರುವ ಉ ಲಿತ-ಅರಳಿರುವ, ತೆರೆದ ೧-೬೮, ೪-೨೪
೨-೯೩ ವ ಉತ್ತೇಧ-ಎತ್ತರವಾದ ೧೧-೧೧೭ ವ ಉಪಕಂಠ-ಸಮೀಪ, ತಪ್ಪಲು ೧-೧೯೫ವ ಉದಗ್ರ-ಎತ್ತರ, ಶ್ರೇಷ್ಠ ೧-೫೮, ೧೩೧ ಉಪಚಿತ-ಹಚಾದ ೧೧-೬೯ ಉದಧಿ-ಸಮುದ್ರ ೧-೫೧ ವ
ಉಪನೀತ-ತರಲ್ಪಟ್ಟ ೧೩-೨ ವ ಉದಬಿಂದು-ನೀರಿನ ಹನಿ ೧-೧೩೯ ವ ಉಪರೋಧ-ಬಲಾತ್ಕಾರ, ಹಿಂಸೆ ೪-೯೯ ಉದಯ-ಅಭಿವೃದ್ಧಿ ೨-೯೩
ವ, ೮-೬೫ ವ
Page #739
--------------------------------------------------------------------------
________________
೭೩೪
ಪಂಪಭಾರತಂ ಉಪಲಕ್ಷಿತ-ಗುರುತುಮಾಡಲ್ಪಟ್ಟ ೧೨-೩೦ವ ಉರ್ವು-ಉಬ್ಬು ೧೨-೧೫೬ ಉಪ್ಪಟ-ಬಟ್ಟೆ, ವಸ್ತ ೧೪-೫೫
ಉಳಿದೆ-ಲಕ್ಷ್ಯಮಾಡದೆ ೨-೭೮, ೫-೨೧ ಉಪ್ಪವಡಿಸು-ನಿದ್ರೆಯಿಂದ ಏಳು ೯-೧೧ ೬-೩೦, ೧೨-೧ ಉಪಾಂತ-ಸಮೀಪ ೧-೯೮ :
ಉಳಿದವರ್-ಲಕ್ಷವಿಲ್ಲದವರು ೧೦-೧೧ ಉಪಾರೂಢ-ಹತ್ತಿದ ೧೦-೫೨ ವ .
ಉರಿಮಿಕೆ-ಆಧಿಕ್ಯ ೧೨-೧೪೭ ಉಪಾಲಂಭ-ತಿರಸ್ಕಾರ ೩-೭
ಉಡು-ಹೆಚ್ಚಾಗು ೬-೭೧ವ ಉಪಾಂಶುವಧೆ-ರಹಸ್ಯವಾಗಿ ಕೊಲ್ಲುವುದು
ಹೊಂದಿಕೆಯಾಗು ೧೨-೧೯೭,
೧೩-೨೩ . ೨-೯೦ ವ | ಉಪಾಶ್ರಯ-ಅವಲಂಬನ ೯-೩೫
ಉಣುಗು-೬-೭೩
ಉಲ್ಕ-ಕೊಳ್ಳಿ ೭-೧೨ ಉಬ್ಬದಿಗಂ-ಅತಿಶಯ ೫-೧೫
ಉಲಿ-ಶಬ್ದ ೫-೪೭ ವ | ಉಮ್ಮನೆ-ಸುಮ್ಮನೆ ೨-೮೨ ವ, ೭-೫ ವ,
ಉಲ್ಲುಳಿತ-ಚಲಿಸುತ್ತಿರುವ ೧-೫೯ ೪-೩೪ ವ, ೧೨-೯೧ ವ
ಉಷ್ಟ್ರೀಷ-ಪಾಗು, ತಲೆಯ ರುಮಾಲು ಉಮಚ್ಚ-ಕೋಪ ೧೧-೧೫೦ ವ,
- ೧೧-೩೯ ೧೨-೫೪, ೧೨-೯೧ ವ, .
ಉಲ್-ಒಳಗು ೯-೨೪ ೧೨-೧೭೬ ವ
ಉಳ್ಳ ೧-೧೧೧ವ ಉಮ್ಮಳ-ದುಃಖ ೧-೩೭
ಉಳಿ-ಅಡಗಿಕೊಳ್ ೧೩-೭೫ ಉಮ್ಮಳಿಕೆ ೪-೬೪ ವ, ೪-೬೯ ವ
ಉಳಿಸೆಂಡು-ಬಚ್ಚಿಟ್ಟ ಚೆಂಡಿನ ಆಟ ೨-೩೦ ಉಮ್ಮಳಿಸು ೩-೬೪, ೧೦-೬೫,
ಉಳ್ಳಿಮುಳ್ಳು-ಮುಳುಗು ೭-೬೧ - ೧೨-೧೪೨ ವ.
ಉಳ್ಳು-ಪ್ರಕಾಶಿಸು ೬-೫೯ ಉರ್ಮೆ-ಆಧಿಕ್ಯ ೧-೧೦೬
ಉಳ್ಳುಡೆ-ಒಳಉಡುಪು ೨-೪೧ ಉಯ್-ಕರೆದುಕೊಂಡು ಹೋಗು ೭-೬೯
ಉಲಗಿಸು-ಒಲಿಸು ೩-೭೩ ಉಯ್ಯಲ್-ಉಯ್ಯಾಲೆ ೨-೧೨
ಉಟ್ಟು-ಪ್ರೀತಿಮಾಡು, ಸ್ನೇಹಮಾಡು ಉರಸ್ಕಂ-ಎದೆಯುಳ್ಳವನು ೧೪-೧
೪-೪೦ ವ ಉರಿಗೇಸಂ-ಉರಿಯದಾಗಿರುವ ಕೂದಲು
ಉಳ್ಕೊಲ-ಗದ್ದಲ, ಶಬ್ದ ೫-೪೭ ವ ೩-೨೦ ಉರಿವುರಿ-ಉರಿಯ ಹುರಿ ೧-೭೫
ಊಡು-ಊಟಮಾಡಿಸು ೩-೪ ವ, ಉರುಳ - ಉರುಳುವುದು ೯-೫೭
- ೫-೧೬ ವ, ೫-೭೪, ೫-೭೮ ಉರುಳಿ-ಉಂಡೆ ೨-೩೯ ವ, ೫-೩,
ಊನತ್ವ-ನ್ಯೂನತೆ ೬-೧೭ ೫-೭೦, ೬-೩ ವ, ೬, ೮-೪೨,
ಊರು-ತೊಡೆ ೧-೧೦೫ ೧೨-೩೧ ವ, ೧೩-೮೪
ಊರ್ಮಿ-ತೆರೆ, ಅಲೆ, ೪-೨೪ ಉರು-ಉಕ್ಕು, ಉಬ್ಬು ೭-೯,
ಊರ್ಧ್ವಗಾಂಶು-ಮೇಲಕ್ಕೆ ಏಳುವ ಕಿರಣ ೧೨-೧೭೬ ಉರು-ತಿವಿ, ೧-೧೪೨, ೫-೪೪, - ೭-೧೪, ೮-೨, ೧೦-೮೦
ಊಳ್ -ಕೂಗಿಕೊಳ್ಳು, ಶಬ್ದಮಾಡು ೩-೯,
೧೩-೫೬ ವ | ಉರೋದಮ್ಮ-ಎಡೆಮುಳುಗುವುದು ೫-೬೨
Page #740
--------------------------------------------------------------------------
________________
೭೩೫
ಶಬ್ದಕೋಶ ಋ
ಎಡೆಗೊಳ್ -ಮಧ್ಯೆ ಪ್ರವೇಶಿಸು ೧೧-೧೩, ಋಚ-ಮಂತ್ರ, ಋಕ್ಕು, ೫-೩೦ ವ
- ೧೨-೪೩. ಋಚ-೩-೭೬ ವ
ಎಡೆಗೋ-ನಡುವೆ ಪ್ರವೇಶಿಸು ೯-೮೭ ಋತ-ಸತ್ಯ ೧೨-೯೩
ಎಡೆಮಡಗು-ತಡಮಾಡು ೯-೮೧ ಋತ್ವಿಜ-ಯಜ್ಞದಲ್ಲಿ ಯಜಮಾನನಿಗೆ ಎಡೆವಟಿ-ಮಧ್ಯೆ ಶೂನ್ಯವಾಗುವುದು, ಮಧ್ಯೆ ಸಹಾಯ ಮಾಡುವವನು ೬-೩೩ವ
ಒಣಗಿಹೋಗುವುದು ಋದ್ಧ-ವೃದ್ಧಿಹೊಂದಿದ, ದೊಡ್ಡದಾದ
(ಎಡೆವ-ಇದರ ಕ್ರಿಯಾರೂಪ ೪-೮೦ |
೧೨-೮೧, ೮೨)
ಎಡೆವಟೆ-ಮಧ್ಯೆ ಹರಿದುಹೋಗು, ಎಕ್ಕತುಳ-ಸಮಾನತೆ ೧೨-೭೬ ವ
ವಿಚ್ಛಿನ್ನವಾಗು ೧-೮೪ವ
ಎಡೆವೇಲ್ಕಂ-ಅವಕಾಶಬೇಕು, ೩-೫೨ ಎಕ್ಕಭಾಗಾ-ಏಕಭಾಗಾ (ಸಂ) ಒಂದೇ ಸಾಲು ೯-೪೬
ಎಡೆವೋಗು-ಮಧ್ಯೆ ಪ್ರವೇಶಿಸು, ೧೧-೨೩. ಎಳ್ಳಮದ್ದಳೆ-ಒಂದು ಜಾತಿಯ ತಮಟೆ
ಎಣೆ-ಸಮಾನ, ೧೨-೧೦೦ ೪-೮೭
ಎಣ್ಣೆರಲ ಪಟ್ಟ-ಎಂಟು ಬೆರಲಷ್ಟು ಎಕ್ಕವಡ-ಎಕ್ಕಡ, ಪಾದರಕ್ಷೆ ೫-೩೬ರ
ಅಗಲವಾಗಿರುವ ಹಣೆಗೆ ಕಟ್ಟಿದ ಪಟ್ಟ
೧೨-೫೧ವ ಎಕ್ಕಸಕ್ಕತನ-ಅಪಹಾಸ್ಯ ೧೧-೧೩೭ ವ
ಎರ್ದೆಯಿಕ್ಕು-ಉತ್ಸಾಹಶೂನ್ಯವಾಗು, ಎಕ್ಕಸರ-ಒಂದೆಳೆಯ ಹಾರ ೪-೮೬
ಧೈರ್ಯಕುಗ್ಗು ೨-೩೨ ವ ಎಕ್ಕೆ-ಒಟ್ಟಿಗೆ, ಗುಂಪು ೨-೩೭, ೬-೩೨ ವ.
ಎಮ-ರೆಪ್ಪೆ, ಎವೆ ೫-೯, ೪-೪೩ - ೭-೬, ೧೦-೮೦ ವ
ಎಯ್ -ಮುಳ್ಳುಹಂದಿ ೫-೪೮ ವ ಎಕ್ಕಕ್ಕೆ-ಮೇಲೆಮೇಲೆ ೮-೧೦೮ ಎಕೈವಾಡವಾಲೆ-ಒಂದು ಹಾರು ಹಾರಿ
ಎಝರ್-ಬರು ೪-೩೨ - ೧೦-೮೦ವ
ಎಯ್ದ-ಸಂಪೂರ್ಣವಾಗಿ ೧೨-೪೮ ವ
ಸುಮಂಗಲಿ ೧-೧೦೭ ಎಗ್ಗ-ಮೂಢ ೯-೯೪ ವ, ಎಗ್ಗು ೬-೪೬
ಎರಡಳೆಯದ-ಮೋಸವಿಲ್ಲದ- ಕಪಟವನ್ನು ಎಚ್ಚು-ಹೊಡೆದು ೮-೧೦೭
ತಿಳಿಯದ ೫-೧೭ವ ಎಚ್ಚುಪಾಯ್-ಚಿಮ್ಮಿ ಹರಿ ೪-೧೦೮
ಎರಲೆ-ಜಿಂಕೆ ೩-೭ ಎಡಂಬಡ-ಎಡವಟ್ಟಾದ ಮಾತು, ೪-೯೩, ೭-೩೫, ೯-೧೭ ವ
ಎರಟ್ಟುಡಿ-ಎರಡು ಮಾತು, (ಬೇರೆ
ಮಾತು) ೧೩-೯೧ ೧೧-೪೯
ಎರೆ-ಯಾಚಿಸು ಬೇಡು ೨-೪೬, ೭-೯೩, ಎಡಗಲಿಸು-ಮೀರು, ದಾಟು, ೮-೯೪ ವ
- ೫-೨೪ ೧೨-೬೫ ವ, ೧-೪೫ ವ,
ಎ-ಆಧಿಪತ್ಯ ೪-೪೨ (ಎಜ್ಯ ಎಡ -ಬಡತನ ೧-೯೯, ೨-೯೮,
ಒಡೆಯ) ೮-೧೮-ಸುರಿ ೫-೨೫ ೬-೪೦, ೯-೫, ೧೪-೧೦೪ ಎಡೆ-ಸ್ಥಳ ಸಂದರ್ಭ, ೨-೭೩,
ಎನಿಕಂಬತ್ತು-ಎರಕಹೊಂದಿ ೧೨-೧೯೮ ೧೧-೧೫೧
ಎಕ-ಪ್ರೀತಿ, ೭-೭೩ ವ, ೧೨-೧೯೮ ಎಂಕೆ-ರೆಕ್ಕೆ ೧೦-೫೧ ವ
Page #741
--------------------------------------------------------------------------
________________
೭೩೬
ಪಂಪಭಾರತ ಎಲರ್ಚು-ಚೇತನಗೊಳ್ಳು ೫-೧೦ ಏವ-ವ್ಯಥೆ, ದುಃಖ, ೨-೮೨, ೪-೯೨ ಎಲ್ಬಡಗು-ಎಲಬುಮಾಂಸ ೨-೫,
ವ, ೯-೬೯, ೧೩-೩೯ ವ, ೪೧. - ೧೦-೧೦೪, ೧೧-೬೮
- ಮತ್ಸರ ೧೩-೨೯ ವ, ಎಲೆಯಿಕ್ಕು-ಚಿಗುರು ೫-೩೭
(ಏವಯಿಸು ೬-೭೧ ವ, ೭೪, ೮-೧೪, ಎಸಕ-ಕಾರ್ಯ ೧೨೧-೭೮, ೯೮,
೧೩-೪೩ ವ ಪ್ರಭಾವ ೧೧-೮೩
ಏಸು ೧೨-೬೧ ) ಎಸಗು-ಮಾಡು ೧-೭೮
ಏವರ್-ಏನ್ಗೈವರ್, ಏನುಮಾಡುವರು ಎಳಸು-ಆಶೆಪಡು ೧-೧೧೧, ೨-೩೦
೫-೯೪ ಎಲ್-ಜೋತುಬೀಳು ೩-೪೦ ವ ಏವಾಟ್-ಏನುಪ್ರಯೋಜನ ೧-೯೨ ಎರವು-ಬರುವಿಕೆ ೧೨-೮೪
ಏವಿರಿದು-ಎಷ್ಟು ದೊಡ್ಡದು ೭-೩೨ ವ ಎಳೆ-ಇಳಾ(ಸಂ) ಭೂಮಿ ೬-೧೧; ಏವೋದುದು-ಏನು ಹೋಯಿತು ೯-೫೬ ೮-೫೪;
ಏಸಾಡು ೪-೧೮ವ, ೧೧-೫೯ ಎಳೆ(೨)ಗೋಣ-ಬಲಿಗಾಗಿ
ಏಸು-ಬಾಣಪ್ರಯೋಗಮಾಡು, ಹೊಡಿ * ಎಳೆದುಕೊಂಡು ಬರುವ ಕೋಣ,
೧೨-೧೮೫ ೧೨-೩೦
ಏಳಾ-ಏಲಕ್ಕಿ ೪-೨೩ ಎಳೆವಾಣಿ-ಎಳೆಯ ಬಾಳೆ ೫-೬೧ ವಿಳಿದ-ತಿರಸ್ಕಾರ ೧-೮೩, ೧೦-೧೦೧ ಎಲ್ಲೋಗು-ಎದ್ದುಹೋಗು ೯-೫೮ (ಏಳಿದಿಕ್ಕೆ ೭-೩೮ | ಎಬ್ಬಿಟ್ಟು-ಹಿಂದಟ್ಟಿ ಹೋಗು ೮-೧೦ ಏಳಿಪಂತು ೧-೫೮) - ೧೧-೭ ವ.
ಏಟ್ಟು-ವರ್ಷಗಳ ಅವಧಿಯ ಕಟ್ಟುಪಾಡು
- ೧೨-೧೭೮ ಏಕಗ್ರಾಹಿ-ಒಂದೇ ಹಟ ಹಿಡಿಯುವವನು ಏವಾಡಿವ-ಶುದ್ಧ ಪಾಡ್ಯ, ಶುಕ್ಲ ಪ್ರಥಮ ' ೧೨-೨೦೫
೨-೩ವ, ೫-೧೫ ವ ಏಡಿಸು-ಹೀಯಾಳಿಸು ೧೩-೫೪. ಏತೊದಳ್ -ಏನುಸುಳ್ಳು ೧೩-೮೦ ಒಂದು-ಬೆರಸು ೨-೩೮, ೮-೯, ಏದೊರೆ-ಯಾವುದಕ್ಕೆ ಸಮಾನ ೭-೬೫
೧೩-೧೮ - ಉಂಟಾಗು ೪-೬೦ ಏದೊರೆತು-ಯಾವ ಬಗೆಯಾದುದು ಒಂದನಿಂದೆ-ಒಂದೇ ಗುಂಪು ೧೧-೧೪೬
೬-೧೫ ಏಬಂಡಂ-ಏನು ಬೆಲೆ, ಏನು ಲೆಕ್ಕ ೬-೩೩ ಒಂದೊರ್ವರ್-ಒಬ್ಬೊಬ್ಬರೂ ೯-೮ವ ಏಯಿ-ಏಟು, ಪೆಟ್ಟು, ಹೊಡೆತ, ೧-೩೩, ಒಕ್ಕಲ್-ಸಂಸಾರ, ಕುಟುಂಬ ೬-೭೧ ವ ೨-೬೨
೭-೩, ೯-೧೦ -ಆರೋಹಣ, ಹತ್ತುವಿಕೆ ೧೦-೧೬, ಒಕ್ಕಲಿಕ್ಕು-ಬಡಿದುಹಾಕು, ನಾಶಪಡಿಸು - ಗಾಯ.
೮-೭೮, ೧೨-೨೧ ವ ಏರೈಸನ-ಯುದ್ಧಕಾರ್ಯ ೧೧-೪೧ ಒಕ್ಕು-ಹೊರಕ್ಕೆಸದು ೧-೬ ೧೨-೫ ವ
ಒಗಸುಗಂ-ಅತಿಶಯ, ಆಶ್ಚರ್ಯ ೮-೬೭,
- ೧೨-೪೯
Page #742
--------------------------------------------------------------------------
________________
ಶಬ್ದಕೋಶ ಒಗು-ಸುರಿ, ಸ್ರವಿಸು, ೧೨-೧೧೭ ಒಗ-ಹುಟ್ಟು ೧-೬೦, ೨-೬೯, ೧೨-೫೨ವ ಒಗೆತರ್ ೧-೯೪, ೨-೯ಒಟ್ಟಜೆ-ಪರಾಕ್ರಮ ೧-೨೪, ೫-೨೯ ಒಟ್ಟಿ-ಪ್ರತಿಜ್ಞೆಮಾಡಿ ೧-೭೬ ವ ಒಟ್ಟೆ-ಉಷ್ಟ್ರ (ಸಂ) ಒಂಟೆ ೧೦-೪ ಒಡಂಬಡಂ-ಒಪ್ಪಿಗೆ ೧-೧೩೯,
೩-೧೮ವ, ೮-೯೪ (ಒಡಂಬಡು ೧೦-೭೭) ಒಡನಾಡಿ-ಜೊತೆಗಾರ ೨-೪೭ ವ ಒಡನೋಡು-ಜೊತೆಯಲ್ಲಿಯೇ ನೋಡು
೪-೭೮ | ಒಡಮೆ-ಪದಾರ್ಥ, ವಸ್ತು ೨-೪೬,
೪-೧೮ ೧-೯೫, ೩-೫೯ ಒಡರಿಸು-ಪ್ರಯತ್ನಪಡು, ೯-೭೮,
೯-೪೬ ಒಡ್ಡಣ-ಸೈನ್ಯ ೧೦-೫೩ ಯುದ್ಧರಂಗ
- ೧೧-೬ ಒಡ್ಡಳಿ-ಕೆದರಿಹೋಗು ೩-೧೬ ಒಡ್ಡು-ಸೈನ್ಯ, ೨-೬೦, ೬-೩೧ ವ - ೧೦-೭೪, ೧೨-೧೭೩ ಒಡೆಯ-ಯಜಮಾನ ೧೩-೨೧ ಒ ಲಗ-ಸಭೆ ೧೪-೨೧ ವ
ಒಣ-ಭಾವಿಸು ೧೨-೨೭ (ಒಣರ ೬-೫೧) ಒತ್ತಂಬ-ಬಲಾತ್ಕಾರ ೨-೪೭ ವ, ೧೧-೭೯, - ೧೩-೬೩ ವ, ೧೦-೪ವ ಒತ್ತರಿಸು-ತಳ್ಳು, ಮೀರು ೧೦-೨೮ (ಒತ್ತರ-೫-೪೬ವ ೮-೯೯ವ) ಒತ್ತೆ-ಪ್ರಣದ್ರವ್ಯ ೭-೩ವ (ಒತ್ತೆಹೋಗು ೮-೫) | ಒದವು-ಆಧಿಕ್ಯ -೧೧ ಒನಲ್ -ಕೋಪ ೮-೨೧ ಒನಲಿಸು ೪-೬೨, ೬೭ ವ, ೭೪ ವ,
೬-೭೨ವ, ೭-೨೫ ವ, ೪೬
೭೩೭, ಒರ್ಮೊದಲ್-ತಟ್ಟನೆ ೨-೨೪ ಒಯ್ಯಗೆ-ಸಾವಕಾಶವಾಗಿ ೮-೧೬ (ಒಯ್ಯನೆ ೩-೧೮) ಒಯ್ಯನಾಗು-ಕಾಂತಿಹೀನನಾಗು ೪-೧೧೦.. ಒರಂಟು-ಒರಟುತನ ೧-೮೧. (ಒರಂಟಂ ೧೨-೨೦೫ ವ) . ಒಲ್ -ಪ್ರೀತಿಸು ೧-೩, ೧೧೨,
೪-೧೦೧ ಒಲವು-ಒರತೆ, ಸ್ರವಿಸುವಿಕೆ ೧-೨೮ ಒಲೆ-ಸ್ರವಿಸು ೧-೧೦೫, ೨-೨೯ ಕತ್ತಿಯ ಹೊದಿಕೆ-ಲೋಹದ ಚೀಲ ಒಲವರ-ಪ್ರೀತಿ ೫-೪೨, ೬-೪೪, ೪೫ ಒಲ್ಲಣಿಗೆ-ಒದ್ದೆಯ ಬಟ್ಟೆ ೧೨-೪೮ ವ,
೨೪೬ ವ ಒಲಿ-ಪ್ರೀತಿಸು ಆಶೆಪಡು, ೧೨-೪೭, ೫೯ವ ಒವಜ-ಉಪಾಧ್ಯಾಯ (ಸಂ) ೨-೫೩
೧೧-೬೧ (ಒವಜುಗೆಯ್ ೧೨-೩) ಓರ್ವಾಗ-ಒಂದು ಭಾಗ ೧೨-೩ ಒಸಗೆ-ಸಂತೋಷ ೧-೧೩೯ ಒಸಗೆವಾತು-ಶುಭವಾರ್ತೆ ೧೩-೧೦೫ ವ
೧೪-೩೫. ಒಸ-ಸಂತೋಷಪಡು, ೧-೯೬, ೬-೨೬, ಒಳಕೊಳ್-ಸೇರಿಸಿಕೊ ೨-೧೭ ಒಳಗು-ಮನಸ್ಸು ೧೨-೨೮ ಒಳತು-ಅರಚು-ಕಿರಚು, ೫-೯೧, ೯೨,
೧-೧೩೨ ಒಳಸೋರ್ -ಧೈರ್ಯಗುಂದು ೮೦-೯೮ ಒಳ್ಳಿ-ನೀರುಹಾವು ೧೦-೪, ೧೨-೪೧ ಒಳಾಡ ೪-೧೦ `ಒಳುಡಿ-ಒಳ್ಳೆಯ ಬಾವುಟ ೧೪-೧೫ ಒಳೆಸಬ್ ೭-೪೧ ಒಮ್ಮಿ-ಪ್ರವಹಿಸು ೧-೫೨
ಪ್ರವಾಹ ೧-೯೨, ೨-೨೮
Page #743
--------------------------------------------------------------------------
________________
೭೩೮
.
ಓಕುಳಿ-ವಸಂತೋತ್ಸವ ೧೨-೪೭ ಓಗಡಿಸು-ಜುಗುಪ್ಪೆಪಡು ೨-೨೮
ಕಳೆದುಹೋಗು ೭-೬೯, ೧೧-೪೭ ಓಗರ-ಅನ್ನ ೫-೩೦ (ಓಗರಗಂಪು) ಓಗರವೂ-ಮಿಶ್ರಪುಷ್ಪ ೧೧-೮೧ ಓಜ-ಉಪಾಧ್ಯಾಯ ೧-೪, ೨-೩೪ ಓಜೆ-ರೀತಿ, ಕ್ರಮ ೩-೪೮ ವ ೩-೭೫ ವ ಓಪ-ರಕ್ಷಕ, ಒಡೆಯ, ಪತಿ ೨-೨೦,
ಓಪಳ್ -ಪ್ರಿಯ, ಹೆಂಡತಿ, ೪-೩೬, ೭೮ ಓಡ-ದೋಣಿ, ತೆಪ್ಪ, ೧-೬೮ ಓಡು-ಹೋಳು, ಭಾಗ ೧೧-೨ ಓತು-ಪ್ರೀತಿಸಿ ೧-೧೧೨ ಓರಂತೆ-ಏಕಪ್ರಕಾರವಾಗಿ ೧-೬೫, ೯೮ ಓರನ್ನರ್-ಒಬ್ಬೊಬ್ಬರೂ ೯-೧೨
೧೦-೧೨ ಓರೊಂದೆ-ಒಂದೊಂದೆ ೧೧-೬೨ ಓಲಗ-ಸಭೆ ೩-೮೦ ಓಲೆವಾಗ್ಯ-ಓಲೆಯ ಭಾಗ್ಯ, ಮುತೈದೆತನ,
ಸೌಮಂಗಲ್ಯ ೧೦-೪೫ ಓವರಿ-ಕೋಣೆ ೩-೪ ವ ಓವು-ಕಾಪಾಡು ೧-೫೫ ಓಸರಿಸು-ಓರೆಮಾಡು ೨-೧೭ - ಓರೆಯಾಗು ೩-೨೯ ವ ಓಳಿ-ಸಾಲು, ಗುಂಪು ೧-೧೦, ೩-೨೨,
೪೦, ೪೩, ೫-೧೯, ೧೧-೧೫೫ (ಓಳಿಕೊಳ್ ೧೪-೨೩ ಓಳಿವಡು ೧೪-೧೫)
ಪಂಪಭಾರತಂ ಕಕ್ಕಂಬು-ಒಂದು ಬಾಣವಿಶೇಷ ೧೩-೩೯ ಕಕ್ಕರ-ಒಂದು ಜಾತಿಯ ಮದ್ಯ (ಹೆಂಡ)
೪-೮೮ವ ಕಕ್ಕರಸಂಜೆ (ಕಕ್ಕಸರಂಜೆ ?) >
ಕಕ್ಕ-ಅರಸರ್ + ಅಂಜೆ ಕಕ್ಕರ + ಅಂಜೆ = ಕರ್ಕರರಾದವರು (ಕಠಿಣರಾದವರು) ಹೆದರಲು
೧೧-೮೫. ಕಕ್ಕರಗೆಯ-ಕರ್ಕಶಕಾರ್ಯ-ಕಠಿಣವಾದ
ಕೆಲಸ ೪-೮೮ವ ಕರ್ಕಡೆ>ಕಕ್ಕಡೆ-ಮುಳ್ಳುಗೋಲು ೫-೫೧ ಕಕ್ಷ-ಪಕ್ಕ ೧೨-೧೦೯ ವ ಕಂಕಣ-ಬಳ ೨-೧೬ ಕಕುಭ-ಮತ್ತಿಯ ಗಿಡ ೫-೮೦ ಕಕ್ಕುಂಬ-ಬೇಟೆಯ ಸಾಮಗ್ರಿ? ೫-೪, ೪೭ವ ಕರ್ಕೆತನ-ಒಂದು ಜಾತಿಯ ರತ್ನ ೩-೭೪ವ ಕರ್ಗು-ಕಪ್ಪಾಗು ೪-೭೪ ಕಚ-ಕೂದಲು ೧೩-೫೫ವ ಕರ್ಚರ-ದೇಶದ ಒಂದು ಭಾಗ
೧೧-೧೩೬ ಕರ್ಚು-ತೊಳೆ, ಶುದ್ದಿಮಾಡು ೬-೧೧ ವ
- ೭-೭೧, ೧೧-೫೧ ಕಚ್ಚೆಯೊಳಿಡು-ಅಧೀನಮಾಡಿಕೊ ೪-೩೮ ಕಂಜ-ಕಮಲ ೮-೩೮ ಕಟ-ಕಪೋಲ, ಕೆನ್ನೆ ೧-೫೭ ವ, ೯-೯೭ ಕಟಕ-ಬೆಟ್ಟದ ತಪ್ಪಲು ೪-೪೯ವ,
೧೪-೩೪ -ಪಾಳೆಯ ೧೦-೪೯ - ಸೈನ್ಯ ೧೧-೧೦೯ ವ| ಕಟ್ಟಳೆ-ತೂಕದ ಬೊಟ್ಟು ೬-೩೯ ಕಂಟಕ-ಮುಳ್ಳು, ತೊಂದರೆಯನ್ನುಂಟು
ಮಾಡುವವನು ೪-೧೯ ಕಟಾಕ್ಷ-ಕಡೆಗಣ್ಣಿನ ನೋಟ ೭-೮ ವ ಕಟ್ಟಾಯ-ಹೆಚ್ಚಿನ ಪರಾಕ್ರಮ ೧೨-೩೮ ಕಟಿ-ಸೊಂಟ, ನಡು ೨-೩೯ ವ
೩-೩೧ವ
ಔರ್ವಾನಳಂ-ಬಡಬಾಗ್ನಿ ೧೨-೩೫
ಕಕ್ಕಡೆ-ಮುಳ್ಳುಗೋಲು ೧೦-೭೬, ೯೪
೧೧-೨
Page #744
--------------------------------------------------------------------------
________________
೭೩೯
ಶಬ್ದಕೋಶ ಕಟಿಸೂತ್ರ-ಉಡಿದಾರ ೩-೪೫
ಕಣಲೆ-ಮನಸ್ಸಿಗೆ ಹೊಳೆಯುವುದು ಕಟು-ಖಾರ ೪-೮೮
೭-೫೫, ೯-೩೯ ಕಟುಸೀಧು-ಒಂದುಜಾತಿಯ ಮದ್ಯ
ಕರ್ಣಧಾರ-ಹಡಗು ನಡಸುವವನು ೪-೮೮
೧೨-೫೦ ಕಟ್ಟೆಗಟ್ಟು- ಏರಿಯನ್ನು ಹಾಕು ೩-೭೦ ಕಣ್ಣಾಪು-ಕಣ್ಣಿನ ಕಾವಲು, ೯-೪ವ ಕಂಠಿಕಾ-ಹಾರ ೧-೬೮ ವ
ಕಣಿ-ಗಣಿ ೧-೨೮ ಕಡಕು-ಕಲ್ಲಿನ ಚೂರು ೩-೯
ಕಣ್ಣಿಡು-ಭಯಪಡು, ಹೆದರು ೭-೪ ವ : ಕಡವು-ಒಂದು ಜಾತಿಯ ಜಿಂಕೆ ೧-೪೮ವ ಕಣ್ಣಿಡಲ-ಕಣ್ಣಿಗೆ ಅಡ್ಡವಾಗು ೧೩-೯೯
ಕದಂಬ(ಸಂ) ಕಡಹದ ಹೂವು ಕಣ್ಣೆತ್ತು-ಕಣ್ಣಿನಿಂದ ಸನ್ನೆಮಾಡು ೪-೬೧ ವ ೭-೬೯
ಕಣ್ಣೆವರು-ದೃಷ್ಟಿಗೆ ಬೀಳು ೪-೩೭ ಕಡಂಗು-ಉತ್ಸಾಹಪಡು ೬-೩೨, ೮-೩೫ ಕಣೋಟ-ನೋಡುವುದರಿಂದಲೇ ಉಂಟಾದ ೮-೯೦, ೯-೧೬, ೪೯, ೫೪
ಪ್ರೇಮ, ೪-೧೫ ವ, ೫-೨೫ ೧೧-೩೭
ಕತಿಪಯ-ಕೆಲವು ೪-೪ ವ, ೫-೩೨ ವ ಕಡ್ಡ-ಮತ್ಸರ, ದ್ವೇಷ ೧೨-೧೦೩ವ
ಕತ್ತಿಗೆ-ಕರ್ತಿಕಾ (ಸಂ) ಕತ್ತಿ ೮-೪೧ ವ ಕಡ್ಡವಣೆ-ಬರಸೆಳೆದು ? ೪-೧೭
ಕಂತು-ಮನ್ಮಥ ೧-೬೬ ಕಡ್ಡವಾರ ೩-೨೬ ವ
ಕಥಕ-ಕಥೆ ಹೇಳುವವನು ೧೨-೧೦೬ ಕಂಡಪಟ-ಕಾಂಡಪಟ (ಸಂ) ತೆರೆ, ಪರದೆ |
ಕಥಾಭಿತ್ತಿ-ಕಥೆಯ ವಸ್ತು ೧-೫೧ ೫-೪೭ ವ
ಕಥಿತ-ಹೇಳಲ್ಪಟ್ಟ, ಸೂಚಿತವಾದ ಕಂಡರಿಸು-ಕೊರೆ, ಕೆತ್ತನೆಯ ಕೆಲಸ ಮಾಡು
೧೨-೩೦ವ. ೫-೧೬
ಕದಡು-ಕಲಕು, ಕೆಸರು, ಬದಿ, ಬಗ್ಗಡ ಕಡಿತಲೆ-ಕತ್ತಿ ೩-೫೫ ವ ೧೦-೮೦ ವ
೫-೬೦ ವ ಕಡುಕೆಯ್-ತೀವ್ರವಾಗು, ದುಡುಕು,
ಕದಳಿಕೆ-ಬಾವುಟ, ೫-೪೭ ವ ೯-೫೦, ೧೨-೪೦
ಕದಳೀಗರ್ಭ-ಬಾಳೆಯಹೂವಿನ ಮೂತ ಕಡುಪು-ಪರಾಕ್ರಮ, ಶೌರ್ಯ, ೩-೧೮,
- ೩-೩೯ ವ - ೧೦-೧೨೩
ಕದಂಪು-ಕೆನ್ನೆ ೨-೬೨ ವ ಕಡುವತ್ತೆಗ-ಅತಿಶಯವಾದ
ಕದಂಬ-ಕಡಹದ ಮರ ೫-೮೦ ಸಾಮರ್ಥ್ಯವುಳ್ಳವನು ೧೦-೭೩
ಕದಂಬದಂಬುಲ-ಮ ಕಡುವಿಲ್ಲರ್-ಉತ್ತಮ ಬಿಲ್ದಾರರು
(ಉಂಡೆಯಾಗಿ) ಅಗಿದ ತಾಂಬೂಲ ೧೦-೭೨
೪-೧೦೭ ಕಡ್ಲುವಂದ-ಗಡ್ಡಬಂದ, ಉತ್ಸಾಹಗೊಂಡ
ಕದ್ದರಣೆ-ಕದ್ದವಣೆ? ೪-೧೭ ವ ೩-೩೧ ವ, ೩-೬೧
ಕಂದರ-ಗುಹ ೬-೩೨ ಕಡೆಗಣಿಸು-ಅಲಕ್ಷ್ಯಮಾಡು ೭-೩೭
ಕಂದಲ್ -ಮೊಳಕೆ, ಚಿಗುರು, ೧-೭೩ ವ ಕಣಯ-ಆಯುಧವಿಶೇಷ ೧೨-೧೧೮
ಕದುಷ್ಣ-ಸ್ವಲ್ಪ ಬಿಸಿ ೪-೬೮ ಕಣ್ಣಪಾಪ-ಕಣ್ಣಿನ ಬೊಂಬೆ ೪-೬೯ ವ
ಕಂದು-ಮಾಸಲಾಗು, ಕಾಂತಿಹೀನತೆ ೪-೬೯ ಕಣ್ಣದಿಗರ್ -ಮೋಸಗಾರರು ೮-೭೬, ೮೫
ಕಂದುಕ-ಚೆಂಡು ೬-೬೯ ವ
Page #745
--------------------------------------------------------------------------
________________
೭೪೦
ಪಂಪಭಾರತಂ ಕಂಧರ-ಕತ್ತು ೨-೩೯ವ
ಕರಸಾಣೆ- ಹರಿತವಾಗಿ ಮಸೆಯುವಿಕೆ ಕಂಧರಬಂಧ-ಹೆಗಲು ೪-೩೮
೮-೬೬ ಕನಕ-ಚಿನ್ನ ೩-೪೮ ವ
ಕರಾತಳ-ಅಂಗೈ ೭-೪೦ ಕನತ್-ಹೊಳೆಯುವ ೩-೪೮ ವ, ೧೩-೩೮ ಕರಿಂಕು-ಅರ್ಧ ಸುಟ್ಟು ಕಪ್ಪಾದುದು ಕನಲ್ವ-ವಿಶೇಷವಾಗಿ ಹೊಳೆಯುವ
೧-೩೫ - ೧೩-೭೧ ವ
ಕರಿಡುವು-ಕರಿಕಾದುವು ೭-೨೩ ಕನಲಿಸು-ರೇಗಿಸು, ೪-೭೪ ವ ೭-೭೩ ವ. ಕರಿಮುರಿಕ-ಸುಟ್ಟು ಕಪ್ಪಾದ ೫-೯೦ ಕಪೋತಿಕಾ-ಒಂದು ವಿಧವ
ಕರುಮಾಡ-ಉಪ್ಪರಿಗೆ ೪-೧೦ ಜೊಡಣೆ ೨-೩೪ ವ |
ಕರುವಿಡು-ಎರಕಹೊಯ್ ೯-೫೫ ಕಪ್ಪಂಗವಿ-ಆನೆಯನ್ನು ಹಿಡಿಯುವ ಹಳ್ಳದ ಕರೆಗಣ್ಣು ತುಂಬಿ ತುಳುಕು ೧-೯೨, ಮುಚ್ಚಳ ೧೨-೨೦ವ
- ೭-೬೮ | ಕರ್ಪಟ-ಬಟ್ಟೆ ೩-೩೧ವ
ಕರೇಣು-ಹೆಣ್ಣಾನೆ ೪-೪, ೩೩ವ ಕಂಪಣ-ಆಯುಧವಿಶೇಷ ೧೨-೧೧೮ ವ. ಕರ್ಕಡೆಗಾಸಿ-ಕಕ್ಕಡೆಯ ಪೆಟ್ಟು ೫-೫೧ ಕಪಾಳ- (ಚಿಪು) ಕಮಂಡಲ ೧-೬೯ ವ. ಕರ್ಕೆತನ-ಚಿನ್ನ ೩-೭೪ ವ ಕರ್ಪು-ಕರಿಯ ಬಣ್ಣ ? ೧೦-೯೨ ಕರ್ಗು-ಕರಿದಾಗು ೫-೫೩ ವ ೯-೫೫ವ ಕಬಂಧ-ತಲೆಯಿಲ್ಲದ ಶರೀರ, ಮುಂಡ, ಕರ್ಚು-ತೋಳ, ಶುಭ್ರಮಾಡು ೭-೭೧ ೮-೫೫ವ
೭-೯೩, ೧೩-೬೩ ಕಬರಿ ).
ಕರ್ಣತಾಳ-ಕಿವಿಗಳ ಬಡಿತ ೧೧-೩೧ ಕಬರಿಕಾ ) ತುರುಬು ೭-೫ವ, ೪-೮೦ ಕರ್ಬಸು-ಕಪ್ಪಾದ ಹಸು ೮-೧೦೪ ಕಮ್ಮಜೆ(ಕರ್ಮಕಾರ) ಸಂ. ಕಮ್ಮಾರ ೧೨-೩ ಕಲಶಜ-ದ್ರೋಣ ೨-೫೩ ವ ಕಮ್ಮಟೆಯೊವಜ-ಹೇಳಿದಂತೆ
ಕಲ್ಪ-ಪ್ರಳಯ ೯-೪೪ ನಡೆದುಕೊಳ್ಳದಿರುವ ಉಪಾಧ್ಯಾಯ ಕಲ್ಬಚಿ-ಕಲ್ಲಿರುವ ದಾರಿ ೧೧-೩೬ ೧೨-೩
ಕಲಾಪ-ಸಮೂಹ ೨-೪೫ ವ ಕಯ್ದು-ಕಹಿ ೪-೮೮
ಕಲ್ಪಾಂಫ್ರಿಪ-ಕಲ್ಪವೃಕ್ಷ ೧-೨೮ ಕಯ್ದು-ಆಯುಧ ೩-೬೮
ಕಲ್ಪಾವನೀಜ-ಕಲ್ಪವೃಕ್ಷ ೬-೩ ಕಯ್ಸರ-ಕಠಿನಧ್ವನಿ, ಒರಟುಮಾತು
ಕಲ್ಲಾರ-ಸೌಗಂಧಿಕಾಪುಷ್ಟ ೭-೯೩ - ೬-೭೩ ವ, ೮-೨೦
ಕಲಿ-ವಿದ್ಯೆ, ಕುಶಲವಿದ್ಯೆ, ಧನುರ್ವಿದ್ಯೆ ಕರ-ಕೈ, ಸೊಂಡಿಲು, ೪-೧೮ ವ
ಇತ್ಯಾದಿ ೪-೯೫, ೭-೨೧ ಕರಂಕ-ಭರಣಿ, ಪೆಟ್ಟಿಗೆ, ೪-೪೩ ಕಲಿಕೆ-ಚಾತುರ್ಯ ೧೩-೩೭ ವ ಕರಂಗು-ಕರಗು ೧-೭೧ ವ
ಕಲಿಗಂಟು-ವೀರಗಚ್ಚೆ ೮-೭೩ ವ ಕಳಿಂಗು-ಕಪ್ಪಾಗು ೩-೧೮ ವ ೫-೫೩ ವ
ಕಲ್ಲಿಂ-ಕಲಿಯಿರಿ ೧೧-೪೬ ಕರಂಡ-ಪೆಟ್ಟಿಗೆ
ಕಲ್ಬಣಿ-ಕಲ್ಲಿನ ಮಳೆ ೮-೯೬, ಕರತನ-ರೇಗುವಿಕೆ ೧೧-೧೨೪
- ೧೨-೧೧೩ ಕರವಾಳ್ -ಕತ್ತಿ ೧-೧೯ , ಕರವಾಳ- ಕಲ್ಲೋಲ-ಅಲೆ, ತೆರೆ ೪-೧೪
೪-೧೦ ವ
Page #746
--------------------------------------------------------------------------
________________
:
ಶಬ್ದಕೋಶ
೭೪೧ ಕವರ್ -ಅಪಹರಿಸು, ಸೂರೆಗೊಳ್ಳು ೫-೧೩ ಕಲಿಕಲಿ-ಚೆಲ್ಲಾಪಿಲ್ಲಿ ೧೩-೨೧ ವ ೩೫, ೬-೩೨ ವ
ಕಲ್-ಸಡಿಲವಾಗು ೬-೧೮, ಕವರ್ -ರಥದ ಒಂದುಭಾಗ ೧೧-೩೮
೧೨-೯೯ವ ಕವರ್ತೆ ೫-೧೩
ಕಟೆವೂ-ಕಳಿತ ಹೂವು ೨-೧೨ ವ ಕವಲಂಬು-ಕವಲಾಗಿರುವ ಬಾಣ ಕಟ್ಟು-ಕಪ್ಪು, ಕರೆ ೪-೫೧, ೬೮, ೧೦-೯೧ ೧೩-೩೯
ಕವಿ-ಕತ್ತೆ (ಹೇಸರ) ೯-೧೦೩ . ಕವಿ-ಮುಚ್ಚು, ಮುತ್ತು ಧರಿಸು ೧೨-೧೯ವ ಕುಕೊಡೆ ? ೯-೧೦೩ ೨-೧೪,೭-೩೩ವ
ಕ್ರಂದತ್-ಶಬ್ದಮಾಡುತ್ತಿರುವ, ೧೩-೭೧ ಕವಿಲ್ -ಕಪಿಲ-ಮಾಸಲುಗೆಂಪು ೨-೧೪,
ಕ್ರಮ-ಪರಂಪರೆ, ರಾಜ್ಯ ೧-೭೦ವ ೧೨-೨೨೧
ಶೃಣಿತ - ಶಬ್ದ ಮಾಡುತ್ತಿರುವ, ಶಬ್ದ (ಕವಿಲ್ಲು-೧೨-೨೫)
೬-೯, ೮-೩೮ ಕಷಣ-ಉಜ್ಜುವಿಕೆ ೪-೨೨
ಕ್ಷತ-ಗಾಯ ೧-೧೦೫. ಕಷಾಯ-ಮಾಲಿನ್ಯ, (ಕದಡುವಿಕೆ) ಕ್ಷತ್ರಂ-ನೋವಾಗದಂತೆ ಕಾಪಾಡುವ ೧-೨೧ ೮-೩೭ವ
ಕ್ಷಮಾ-ಭೂಮಿ ೨-೩೭ ಕಷಾಯಿತ-ಕಷಾಯದಿಂದ ವ್ಯಾಪ್ತವಾದ
ಕ್ಷರಣೆ-ಸೋರುವಿಕೆ (ವೀರ್ಯ) ೧-೩೮ ವ - ೬-೩೮ವ
೨-೪೨ ವ | ಕಸವರ-ಚಿನ್ನ, ಐಶ್ವರ್ಯ, ೬-೩೦ ವ,
ಕಾಂಚೀಕಳಾಪ-ನಡುವಿನಪಟ್ಟಿ, ಡಾಬು - ೧೨-೯೯, ೧೨-೧೮೦
೧-೧೪೩ ಕಸವು-ಕಸ, ಮಾಲಿನ್ಯ ೧-೪೪
ಕಾಕಳಿ-ಇಂಪಾದ ಮೃದುಧ್ವನಿ ೫-೩೫ ಕಸ-ಚಾವಟಿ ೧೨-೨೦೧
ಕಾಚ-ಗಾಜು ೧೩-೭೨ ಕಳ್ -ಮಧ್ಯ ೨-೪೯, ೪-೮೮ ವ
ಕಾಂಡ-ಬಾಣ, ೧೧-೧೯ ವ ಕಳ-ಯುದ್ಧರಂಗ ೩-೮೧ವ
ಕಾಡಿಗೆ-ಕಪ್ಪು ೪-೩೨ (ಕಳಂಬೇಬ್ ೧-೭೩ ವ)
ಕಾಣ್ಯ-ನೋಟ ೫-೩೫ ಕಳತ್ರ-ಹೆಂಡತಿ ೪-೧೨
ಕಾಂಡಪಟ-ತೆರೆ ೧-೬೮ ವ| ಕಳಭೌತ-ಚಿನ್ನ, ಬೆಳ್ಳಿ ೧೪-೧೭ ವ.
ಕಾತರಿತ-ಹೆದರಿದ ೧೩-೫೧ ವ ಕಳಭ-ಆನೆಯ ಮರಿ ೧-೧೧೪ ವ
ಕಾಂತ-ಮನೋಹರ ೪-೧೮ ಕಳಮ-ಬತ್ತದ ಪೈರು ೩-೨ ವ .
ಕಾಂತಾರ-ಕಾಡು ೮-೯೮ ಕಳಾ-ಕಾಂತಿ, ಕಲೆ, ಚಮತ್ಕಾರ ೧-೯
ಕಾರ್ತಿಕೇಯ-ಷಣ್ಮುಖ ೫-೪೭ ವ ಕಳಾಪ-ಸಮೂಹ ೧-೬೯ವ
ಕಾದಲ-ಪ್ರಿಯ ೩-೭೮ ಕಳಿಕಾ-ಮೊಗ್ಗು ೨-೧೨ ವ
ಕಾದಿಗೆ-ಕಂದಕ ಅಗಳು, ೪-೩೨ ಕಳಿಂಚು-ಮೋಸ ೮-೫೧ವ
ಕಾನೀನ-ಕರ್ಣ (ಕನೈಯಲ್ಲಿ ಹುಟ್ಟಿದವನು) ಕಳಿತ-ಕೂಡಿದ ೪-೧೮ವ
೩-೬೦ ಕಳೇಬರ-ಶರೀರ ೩-೮ವ
ಕಾಪಟ-ಹತ್ತಿಯ ಬಟ್ಟೆ ೩-೪೪ ಕಲಕುಲಿ-ಚದುರಿ ಹೋಗುವಿಕೆ ೧೨-೬೮ ಕಾಪಟೆ-ರಕ್ಷಣೆ ನಾಶವಾಗು ೮-೫೯ ವ
Page #747
--------------------------------------------------------------------------
________________
೭೪೨
ಪಂಪಭಾರತಂ ಕಾಪಿನಾಳ್ -ರಕ್ಷಕ (ಸೇವಕ) ೪-೮೭ ಕಿಂಜಲ್ಯ-ಕೇಸರ ೮-೩೮ ಕಾಪು-ರಕ್ಷಣ, ಕಾವಲು ೮-೯೦,
ಕಿಡಿಸು-ನಾಶಪಡಿಸು ೧೨-೧೮೨ ಕಾಪುರುಷ-ಅಲ್ಪ, ನೀಚ, ೫-೪೮ ವ, ಕಿಡೆ ನುಡಿ-ತಿರಸ್ಕರಿಸಿ ಮಾತನಾಡು ೬-೫೯ ವ
೧೨-೧೩೪ವ ಕಾಮಾಂಗ-ಕಾಮವನ್ನು ಕೆರಳಿಸುವ ಮದ್ಯ ಕಿತ್ತಂ-ಕಿರಿಯವನು ೪-೯೭ ೪-೮೮
ಕಿತ್ತಂಬು-ಸಣ್ಣ ಬಾಣ ೧೧-೪೨ ಕಾಯ್ದು-ಕೋಪ, ಉಷ್ಣ, ೨-೧೫, ಕಿನಿಸು-ಕೋಪಿಸು ೫-೪, ೬-೩ ೮-೩೭, ೮-೭೦ವ, ೯-೯೨
ಕಿಮೀರವೈರಿ-ಭೀಮ ೧೩-೯೭ ವ (ಕಾಯ್ತಾಯಿ-ಕೊಪ ಕಡಿಮೆಯಾಗು
ಕಿರೀಟಿ-ಅರ್ಜುನ ೧-೧ ೧-೧೧೯)
ಕಿಚೆವೀಮ್ -ಕಡಿಮೆಯಾಗು ೧೨-೧೨೦ವ ಕಾರ್-ಮಳೆಗಾಲ ೭-೨೩,೨೪
ಕಿಣುಕುಣಿಕೆ-ಕಿರುಬೆರಳು ೩-೩೫ ವ ಕಾರ್ಮುಕ-ಬಾಣ-೧ ಧನುಸ್ಸು,
ಕಿಲುಗೊಂಕು-ಸಣ್ಣ ಸಣ್ಣ ಡೊಂಕು ೭-೨೫ ೨. ಕಾರಮುಖ-ಮಳೆಗಾಲದ ಪ್ರಾರಂಭ
ಕಿಲುಂಬು-ಮಾಸರಾಗು, ಕಿಲುಬುಹತ್ತು ೭-೨೫
೬-೩೬ ಕಾಲ್ -ಕಾಲುವೆ ೧-೫೨
ಕಿವುಳ್-ಕಿವುಡು ೧೧-೧೦ ವ ಕಾಲ್ದಾಪು-ಪದಾತಿಸೈನ್ಯ ೩-೫೫ ವ,
ಕಿವುಳ್ -ಕೇಳಿಯೂ ಕೇಳದಂತಿರು - ೧೦-೯೩
೮-೪೨ ಕಾಲ್ಲುತ್ತು-ಪರೀಕ್ಷಿಸು ೯-೨೬
ಕಿಶೋರ-ಮರಿ ೧-೧೧೫ವ, ೭-೮೦. ಕಾವಣ-ಚಪ್ಪರ ೧-೫೮, ೩-೩೮
ಕಿಸಲಯ-ಚಿಗುರು ೪-೪೩ ವ ಕಾಸಟ-ಕವಡೆ ೩-೪೪
ಕಿಸುಗಣ್ಣು-ಕೋಪಿಸು ೨-೩೯ ವ ಕಾಳಸೆ-ಗಾಢತ್ವ, ನಿರ್ಭರತೆ ೪-೧೦೫,
ಕಿಸುಗಲ್ -ಕೆಂಪುರತ್ನ ೪-೧೦ ೧-೩೯
ಕಿಸುಗಾಡು-ಕೆಂಪುಮಣ್ಣಿನ ಕಾಡು ೭-೨೫ ವ ಕಾಮ್ -ಕಾಡು, ಕೆಟ್ಟ ೪-೬೧
ಕಿಸುರ್ (ಜರ್)-ದ್ವೇಷ, ಜಗಳ ,ಕಲಹ, ಕಾಳಕೂಟ-ವಿಷ ೨-೩ವ, ೭-೬೬
೨-೯೨ ವ, ೪-೮೮, ೯-೮೩, ೩, ಕಾಳಾಗುರು-ಕರಿಯಆಗಿಲು (ವಾಸನಾ
೧೩-೧೮ ದ್ರವ್ಯ) ೮-೨೩
ಕಿಮ್ -ಕೀಳು ೧೧-೨೩ ಕಾಳಿಯನಾಗ-ಕೃಷ್ಣಸರ್ಪ ೧೨-೪೧
ಕಿಣ್-ಕೆಳಗಣ್ಣು ೩-೫೪ ಕಾಯ್ತಿಯಿ-ಕಾಡಿನ ಹಸು ೧೦-೫೧ ವ
ಕೀಡಿ-ಕೀಟ ೧೨-೧೧೮ ವ ಕಾಟ್ಟುರ-ಕಾಡಿನ ಪ್ರವಾಹ ೧೨-೮ |
ಕೀರ್ತಿಗೆ-ಒಂದು ದೇವತೆ ೮-೪೪ ಕಿಕ್ಕಿದೆ-ಗಾಢವಾಗಿ ಸೇರು ೧೩-೫೨
ಕೀರ್ತಿಮುಖ-ಆನೆಯ ಕೊಂಬಿನ ಗೊಣಸು ಕಿಕ್ಕಿಜೆಗಿರಿ-ಒತ್ತಾಗಿಸೇರು ೧೦-೫೭ ವ
೬-೬೬ ಕಿಂಕಿಣಿವೋಗು-ಕಳವಳಪಡು ೧-೧೨೮ ವ |
ಕೀಟ-ರೇಗು, ಕೂಗಿಕೊಳ್ಳು, ೬-೬೭ 'ವ ೨-೩೧, ೫-೪
ಕೀಲ್ -ಕಡಾಣಿ ೧೧-೩೮, ೬೫ ಕಿಂಕೋಯ್-ಹಿಂಸಿಸು ೧-೩೨,
ಕೀಲಾಲ-ನೀರು, ೧೩-೫೧ ವ ೧೧-೧೦೨ ೧೨-೬೦ ವ
Page #748
--------------------------------------------------------------------------
________________
ಶಬ್ದಕೋಶ
ಕೀಲಿಸು-ತಗುಲಿಕೊಳ್ಳು ೧೦-೯೯ ಕೀ-ಕುದುರೆಯ ಕಡಿವಾಣ ೮-೯೪, ೧೦-೧೧೬ ವ
ಕೀಲ್-ಸೇವಕರಿರುವ ಸ್ಥಳ ೮-೭೧ ಕುಕಿಲ್-ಕೋಗಿಲೆಯ ಶಬ್ದ ೧-೫೮ ಕುಂಚ-ಸಣ್ಣ ಚಾಮರ,ಹುಲ್ಲಿನಿಂದ
ಮಾಡಿದುದು ೩-೪೮ ವ ೪-೬೬ವ
ಕುಜ-ಮರ ೫-೯೧
ಕುಂಟಿಣಿ-ತಲೆಹಿಡುಕಿ ೪-೯೮, ೯೯ವ ಕುಟೀರಕ-ಸಣ್ಣ ಗುಡಿಸಲು ೪-೪೭ ಕುಂಡಲ-ಕಿವಿಯ ಆಭರಣ ೧-೧ ಕುಡಲಾದ ಕೂಸು-ಕನ್ಯ ೩-೨೫ ಕುಡಲಿರ್ದಡಕೂಸು-ಕನ್ಯ ೫-೨೧ ಕುಡು-ದಾನಮಾಡು ೧-೧೧೭ ಕುಡುದಾಡೆ-ಕೋರೆಹಲ್ಲು ೬-೫೯ ಕುಂತಳ-ತಲೆಗೂದಲು ೧-೫೩, ೪-೬೯ ಕುಂತಳಿಕೆ-ಒಂದು ಜಾತಿಯ ಹಕ್ಕಿ ೪-೮೭ವ ಕುಲ-ಪರ್ವತ ೭-೭೬, ೧೩-೯೫ ಕುದಿಪ-ಕುದಿಯುವಿಕೆ, ಮನಸ್ತಾಪ
೧೨-೧೫೨
ಕುದುಗುಳಿ-ಆತುರಗಾರ ೧೨-೮
ಕುನ್ನಗೆಯ್-ಮೋಟುಗೈ ೧೧-೧೦೩ ಕುನುಂಗು-ಕುಗ್ಗು ೧-೧೦೯
ಕುಪ್ಪೆ-ತಿಪ್ಪೆ, ಕಸದ ರಾಶಿ ೨-೫೦
ಕುಂಭಧ್ವಜ-ದ್ರೋಣ ೧೧-೧, ೫೬ ಕುಂಭಸಂಭವ-ದ್ರೋಣ ೨-೪೪
ಕುಮ್ಮರಿಗಡಿ-ಕಾಡನ್ನು ಕತ್ತರಿಸು (ತಾತ್ಕಾಲದ ಬೇಸಾಯಕ್ಕಾಗಿ) ೧೦-೮೮
ಕುಮ್ಮು-ಗುಮ್ಮು೪-೧೦೦
ಕುರಂಗ-ಜಿಂಕ ೩-೧೭
ಕುಣಿತಂ-ಅಪೇಕ್ಷಿಸಿದವನು ೧೪-೫೧
ಕುಜೆಪ-೪-೬೩ ವ
ಕುಣಿದರಿ-ಕುರಿಯನ್ನು ತರಿಯುವಂತೆ ಕತ್ತರಿಸು ೧೨-೨೦೫
ಕುಜೆಪು-ಗುರುತು ೧೦-೮೭ ಕುಟುಂಬ-ಕುರುಬ ೨-೯೦
242
ಕುಲವಡಿ-ಸಣ್ಣಮಡಿಬಟ್ಟೆ ೫-೫೭, ೬೭
ಕುಲಧನ-ಪಿತ್ರಾರ್ಜಿತ ೬-೭೨
ಕುಲಾಲ-ಕುಂಬಾರ ೪-೨೭ ಕುಲಪಾಂಸುಲ-ಕುಲಗೇಡಿ ೭-೫೭
ಕುವಲಯ-ಕನೈದಿಲೆ ೫-೬೩, ೯-೩೭ ಭೂಮಂಡಲ ೯-೩೭
ಕುಶಾಗ್ರ-ದರ್ಭೆಯ ತುದಿ, ಸೂಕ್ಷ್ಮ ೨-೩೪ ಕುಶೇಶಯ-ಕಮಲ ೪-೪೭
ಕುಸುರಿ-ಬೆಡಗು, ಚಾತುರ್ಯ ೪-೭೨ ಕುಹರ-ಬಿಲ, ಗುಹೆ ೪-೪೯ ವ ಕುಳಮಂದಿರ-ತವರುಮನೆ ೨-೩೭ ಕುಳಿಕೆ-ಕುಣಿಕೆ, ಗಂಟು, ೧-೧೪೩ ಕುಳಿರ್-ತಂಪು ೫-೬ ವ
ಕುಳಿ ಕೋಟ್ಟೆ-ತಣ್ಣಗೆ ಕೊರೆಯುತ್ತಿರುವ
೫-೬ ವ ಕುಲೆಗೊಳ್-ಭದ್ರವಾಗು ೭-೨೩ ಕುಳುಂಪೆ-ನೀರು ನಿಂತಿರುವ ಹಳ್ಳ ೧೧-೧೩ ವ, ೧೩೬ ವ ಕ್ಷುಭಿತ-ಕಲಕಿದ ೪-೨೫ ಕೂಕಿಡು-ಮೇಲಕ್ಕೆ ನೆಗೆ ೪-೯೦ ಕೂಕಿಟೆ-ಆರ್ಭಟಿಸು ೮-೯೩, ೧೦-೭೩,
೧೨-೫೮ ವ
ಕೊಂಕು-ತಳ್ಳು ೧-೧೦೫ ವ ಕೂಜತ್-ಧ್ವನಿಮಾಡುತ್ತಿರುವ ೮-೩೭ ವ ಕೂಟ-ಶಿಖರ, ತುದಿ ೪-೧೩, ೧೪-೩
ಕೂಟಕುಳಿ-ಸೋಮಾರಿಗಳ ಗುಂಪು ೩-೬೫
ಕೂಪ-ಬಾವಿ ೨-೫೧
ಕೂಪಾರ-ಸಮುದ್ರ ೮-೯೭, ೧೪-೧ ಕೂರ್ಪು-ಹರಿತ ೨-೨೩ ವ
ಕೂರ್ಮ-ಆಮೆ ೨-೩೯ ವ
ಕೂರ್ಮಸೆ - ಹರಿತವಾಗಿ ಮಸೆ ೨-೪೭ ಕೂರ್ಮ .. ೧೦-೨೮ ವ
1
Page #749
--------------------------------------------------------------------------
________________
೭೪೪ ಕೂರ್-ಪ್ರೀತಿಸು ೧೨-೯೫ ಕೂರದಂ-ಪ್ರೀತಿಯಿಲ್ಲದವನು ೩-೪ ವ. ಕೂರಸಿ-ಹರಿತವಾದ ಕತ್ತಿ ೧-೬ ಕೂರಿದುವು-ಹರಿತವಾದುವು ೩-೨೦ ಕೂರಿಸು-ಪ್ರೀತಿಸುವ ಹಾಗೆ ಮಾಡು
೧-೧೦೪, ೯-೧೯ ಕೋಟಿ-ಅನ್ನ ೯-೫೮ ಕೂಟ್ಟದಿ ೧೧-೧೫೩ ಕೃತಕ-ಕಪಟ ೩-೮ ಕೃತಾಂತ-ಯಮ ೮-೪೨ ವ ಕೃಪಾಣ-ಕತ್ತಿ ೧-೩೦, ೨-೩೪ ವ | ಕೃಶಾನು-ಅಗ್ನಿ ೫-೯೪ ಕೃಷ್ಣ-ಒಂದು ಜಾತಿಯ ಜಿಂಕೆ ೧-೬೯ ವ ಕೃಷ್ಣದೈಪಾಯನ-ವ್ಯಾಸ ೧-೮೪ ವ ಕೃಷ್ಣಾಸುರ-ಒಂದು ಜಾತಿಯ ಮದ್ಯ
- ೪-೮೮ ಕೆಂಕ-ಕೆಂಬಣ್ಣ ೨-೩೯ ವ, ೧೧-೧೦೬ ಕೆಂಗಲೆ-ಕೆಂಪಾದ ಗುರುತು ೬-೧೦ ಕೆಂಗುಡಿ-ಕೆಂಪಾದ ಧ್ವಜ ೧-೩೪ ಕೆಚ್ಚುವಿರ್ದ-ಹೆಣೆದುಕೊಂಡಿರುವ, ಬಲಿತ
೨-೯೬ ಕೆಡೆ-ಬೀಳು ೧-೩೭ ಕೆಡೆನುಡಿ-ದೂಷಿಸು, ಅಲ್ಲಗಳೆ ೬-೬೧,
ಪಂಪಭಾರತಂ ಕೆಯ್ಯೋಳ್ -ಅಂಗೀಕರಿಸು ೬-೩೮ ಕೆಯ್ದಟ್ಟಿ-ಗಂಧದ ಉಂಡೆ ೩-೭೯ ವ,
- ೫-೬೭ ವ ಕೆಯ್ದು -ಮಿತಿಮೀರು, ಅತಿಕ್ರಮಿಸು ೬-೭ ಕೆಯ್ದಲೆ-ಅಧಿಕವಾಗು, ಕೈಮೀರು ೫-೩೨,
- ೭-೧೬ ವ ಕೆಯ್ದ-ಕೆಲಸ, ೩-೬೪, ೪-೮೧ ವ ಕೆಯಾದು-ಸಂರಕ್ಷಿಸಿ ೧೧-೧೮ ವ ಕೆಯ್ದಿಡಿ-ಕನ್ನಡಿ ೮-೫೧ ವ ಕೆನ್ನೀರ್-ಧಾರೆಯ ನೀರು ೩-೭೪ ವ ಕೆಯ್ದಿಸು-ಯುದ್ಧಾರಂಭಕ್ಕೆ ಸನ್ನೆಮಾಡು
೧೧-೬ ವ ೩೪ ಕೆಯೂಡು-ಸ್ವಾಧೀನವಾಗು ೫-೪೦,
೭-೯೧ ಕೆಯ್ದೆಮಾಡು-ಸ್ವಾಧೀನಪಡಿಸಿಕೊ ೬-೬೭
- ವ, ೧೨-೨೫ ವ ಕೆಯ್ಯ್ -ಅಲಂಕರಿಸು ೨-೧೨ ವ
"೩-೪೨ ಕೆಯ್ಯಡೆ-ರಕ್ಷಣೆಗಾಗಿಕೊಟ್ಟ ವಸ್ತು (ನ್ಯಾಸ)
೨-೨೬, ೯-೬೫ ಕೆಯೊಡೆ-ಕೈಚೀಲ, ೧೦-೭೧ ಕೆಯ್ದಲ-ಗದ್ದೆ ೧-೫೨ ಕೆಲ-ಪಕ್ಕ ೩-೮ ಕೆಲಂಜಂಕೆ-ಮಗ್ಗುಲನ್ನು ಹೆದರಿಸುವುದು
- ೧೦-೭೭ ಕಲ್ಲಂಬು-ಒಂದು ಬಗೆಯ ಬಾಣ ೧೦-೧೦೬
ವ, ೧೨-೧೮, ೨೧ ವ ಕಸಕಡಿತ-ಕೆಸರಿನ ಮೇಲೆ ಹರಡಿರುವ
ಕಡತ ೧೦-೫೩ ಕೆಳಗಿವಿಗೆಯ್ -ಉಪೇಕ್ಷ
ಅಲಕ್ಷ್ಯಮಾಡು ೬-೨೯ ವ ಕೆಳ -ಕೋಪಿಸು ೧-೭೯ ಕೆಳೆ-ಸ್ನೇಹ ೨-೫೮ ಕೇಕಿ-ನವಿಲು ೪-೫ ಕೇಡು-ಚೆಲ್ಲುವಿಕೆ ೯-೬೯
ಕೆತ್ತು-ಅದಿರು, ಚಲಿಸು, ಮಿಡುಕು,
೪-೩೩, ೬೬ ವ. ಕೆಂದು-ಅನುರಾಗ, ರತಿ, ೩-೮೩, ೭-೮೯ - ನಿದ್ದೆಮಾಡು ೮-೧೩ ಕೆಂಬೊನ್-ಚಿನ್ನ, ೪-೨೨, ೧೨-೯೬ ಕೆಮ್ಮಗೆ-ಸುಮ್ಮನೆ, ೭-೪೫ ಕೆಮ್ಮನೆ-ವಿಚಾರ ಮಾಡದೆ ೬-೨೪ ೧-೧೪೪, ೨-೫೦, ೩-೩೩, ೮-೬೮,
೮-೯೬, ೧೨-೮೯, ೯೬,
೧೩-೪೩ ಕೆಯ್-ಸೊಂಡಿಲು ೧೧-೭೧ :
Page #750
--------------------------------------------------------------------------
________________
ಶಬ್ದಕೋಶ
೭೪೫ ಕೇಣ-ಮತ್ಸರ, ದ್ವೇಷ, ರೋಷ ೧೦-೭೭, ಕೊಡಗೂಸು-ಕನ್ಯ ೧-೯೨, ೩-೨೫ ವ |
ಕೊಗ್ಗಿ-ಸುಗಂಧದ್ರವ್ಯ ೩-೭೭ ಕೇಣಿಗೊಳ್ ಸಾಲುಗೊಳ್ಳು ೧೦-೫ ಕೊಡಂತಿ-ಕೊಡತಿ, ಆಯುಧ ೧-೧೦೪ವ ಕೇತನ-ಧ್ವಜ, ಮನೆ ೧-೫೮
ಕೊಡಸಾರಿ - ಕೊಡದ ಪಗಡೆಕಾಯಿ ಕೇತು-ಧೂಮಕೇತು, ೧-೧೩೩ ಧ್ವಜ ೬-೭೨ವ
ಕೊಂಡ-ಅಗ್ನಿಕೊಂಡ ೬-೩೨ ವ ಕೇನ-ಏತರಿಂದ ೬-೪೦
ಕೊಂಡು ಕೊನೆ-ಹೊಗಳು ೧-೫ ಕೇರ್ -ಗೋಡೆ ೮-೭೬ ವ
ಕೊನರ್ -ಚಿಗುರು, ಅಭಿವೃದ್ದಿಯಾಗು ಕೇವಲಬೋಧ-ಜ್ಞಾನಿ ೧೨-೯೭
- ೧೩-೧೯ ಕೇಶಬಂಧ-ಕೂದಲಿನ ಗಂಲು ೧-೧ ಕೊಪ್ಪು-ಬಿಲ್ಲಿನ ತುದಿ ೩-೭೨ ವ ಕೇಸರಿ-ಸಿಂಹ ೧೨-೧೨೦ ವ
ಕೊಂಚಾಡು-ಹಿಯ್ಯಾಳಿಸು, ಕೇಸರಿಣಿ-ಹೆಣ್ಣುಸಿಂಹ ೭-೮೦
ಮರ್ಮೊದ್ಘಾಟನಮಾಡು ೪-೯೬ ಕೇಸುರಿ-ಕೆಂಪಾದ ಜ್ವಾಲೆ ೧೨-೧೨೦ ವ ಕೇಟೆ-ಸಾಲು, ಪಂಗ್ತಿ ೧೪-೨೦
ಕೊರೆ-ಗೊರಕೆ ಹೊಡಿ ೪-೧೦೦ ಕೇಳಿಕೆ-ಆಟ ೧-೪
ಕೊಸಗು-ಬೆಟ್ಟದಾವರೆ ೪-೭೫ ವ ಕ್ಷೇತ್ರ-ಹೆಂಡತಿ ೧-೮೪ ವ
ಕೊಸೆ-೧. ನಿಧುವನಕ್ರಿಯೆ, ಕೈಗವು-ಕೈಮೀರಿದುದು ೧೦-೧೦
ರತಿಕ್ರೀಡೆಯಾಡು ೫-೪೩ ವ ೨.
ವಾದಾರೋಹಭೇದ, ಒಂದು ಕೈಟಭಾರಾತಿ-ವಿಷ್ಣು ೧-೫೭ ವ .
ರೀತಿಯ ಕುದುರೆಯ ಸವಾರಿ ಕೈತ-ಮಾಡಿದ, ರಚಿಸಿದ ೧೪-೫೯
೧೦-೭೭ ಕೈದವ-ಕೈತವ, ಮೋಸ ೧೦-೪೫ ವ
ಕೊಳಿಸು-ಕಚ್ಚಿಸು ೨-೩೨, ೩-೪ ವ ಕೈದು-ಆಯುಧ ೧-೭೮
ಕೊಳುಕೆನೆ-ಝಗ್ಗನ್ನಲು ೧೧-೧೧೨ ಕೈಯೆಡೆ-ನ್ಯಾಸ; ಒಪ್ಪಿಸಿದ ವಸ್ತು ೨-೨೬
ಕೊಳುಗುಳ-ಯುದ್ಧ ೧೩-೭೧ ವ ಕೈವಾರ-ಸ್ತೋತ್ರ, ಹೊಗಳಿಕೆ ೯-೧೯,
ಕೊಳ್ಳುಳ ೧೩-೭೪ ವ, ೧೪-೧೦ ವ, - ೧೨-೪೩, ೧೩-೪೪
೯-೯೦ ಕೊಂಕು-ವಕ್ರವಾಗು ೬-೧೯
ಕೋ-ಪೋಣಿಸು ೭-೯೨ ಕೊಂಡಾಡು-ಹೊಗಳು ೧೯೬
ಕೊಕ-ಕೋಗಿಲೆ ೧-೫೮ ಕೊಂಬು-ಸಂಕೇತಸ್ಥಾನ ೪-೨೩, ೫-೪೩ವ
- ತೋಳ೫-೯೩ ವ ಕೊಂಬುಗೊಳ್ -ಸಂಕೇಸ್ಥಾನವನ್ನು
ಕೋಕನದ-ಕೆಂಪುನೈದಿಲೆ ೩-೧೧ ವ, ಮಾಡಿಕೊ ೪-೨೩
೫-೩೪ ಕೊಕ್ಕರಿಕೆ-ಜಿಗುಪ್ಪೆ, ಹೇಸಿಕೆ ೭-೨೧ ವ
ಕೋಟಲೆಗೊಳ್ -ವ್ಯಥೆಪಡು ೧೨-೧೫೧ ಕೊಕ್ಕರಿಸು ೧೨-೧೫೩
ಕೋಟಿ-ಅನೇಕ ೧-೧, ಮೊನೆ ೪-೧೫ವ ಕೊಂಕುಗಟ್-ಹೇಸರಗತ್ತೆ ೧೨-೬ ವ
ಕೋಡಗ-ಕೋತಿ ೬-೭೨ ವ ಕೊಂಚೆ-ಕ್ರೌಂಚ(ಸಂ) ಒಂದು ಜಾತಿಯ
ಕೋಡಗಗಟ್ಟು-ಕಪಿಯನ್ನು ಕಟ್ಟುವ ಕಟ್ಟು ಪಕ್ಷಿ ೪-೮೭ ವ
೫-೨೧, ೯-೫೪
Page #751
--------------------------------------------------------------------------
________________
೭೪೬
ಪಂಪಭಾರತಂ ಕೋಡು -ದಾನ ೧-೯೯, ೫-೭೭ ವ ಖಲೀನ-ಕಡಿವಾಣ ೧೦-೩೧. - ಕೊಂಬು ೨-೧೫, ೮-೧೦೪
ಖರ್ವಿತ-ಅಗೆದ, ತೋಡಿದ ೧೩-೫೧ ವ - ಕೋಂಬೆ ೨-೧೫
ಖರ-ಗೊರಸು ೪-೧೮ ವ, ೧೩-೫೧ವ - ಭಯ ೨-೧೫
ಖೇಚರಿ-ದೇವತಾಸ್ತೀ ೩-೧೪ - ಶೈತ್ಯ ೨-೧೯ ವ, ೩-೩೭
ಖೇಟಕ-ಗುರಾಣಿ ೭-೭೯ ಕೊಲ್ -ಬಾಣ ೧೦-೮೦ ವ ಕೊವಣ-ಕೋಪೀಣ ೬-೮
ಗಗ್ಗರಿಗೊಳ್-ದುಃಖದ ಅಸ್ಪಷ್ಟತೆಯಿಂದ ಕೋಳ -ಹೊಡೆತ, ಏಟು, ೩-೭೦,
- ಕೂಡು ೮-೭೯ ವ ೫-೭೯ ವ ೮-೩೨
ಗಜಲ-ಆರ್ಭಟಮಾಡು ೬-೭೫ ವ - ಕಡೆ, ಪ್ರದೇಶ (ಪಿಂಗೋಳ್) ೯-೯೫ವ
ಗಂಡ-ದವಡೆ, ಗಂಡಭಿತ್ತಿ-ಕೆನ್ನೆ ೪-೨೨ ಕೋಳ್ -ಕೋಡುಗಳು, ಕೊಂಬುಗಳು
ಗಂಡಸ್ಥಳ ೫-೭೭ವ ೧೦-೯೩ ವ, ೯೪
ಗಂಡಗಾಡಿ-ಪೌರುಷದ ಸೌಂದರ್ಯ ಕೋಳಂಟು-ವ್ಯಾಪಿಸುವಷ್ಟು ದೂರ
೪-೧೫ ವ, ೭-೯೧ ವ ೧೩-೭೧ ವ
ಗಂಡವಳ್ಳಿ-ಗಂಡಸಿನಂತೆ ಮೆರೆಯುವ ಕೋಳ್ಳಡು-ಸೂರೆಯಾಗು ೪-೯
ಹೆಂಗಸು ೮-೫೬ ಕೋಳಸಗು-ಸೆರೆಗೆ ಸಿಕ್ಕಿ ಕೆರಳು ೧೦-೫೧ ಗಂಡವಾತು-ಪರಾಕ್ರಮದ, ಮಾತು
೩-೧೬ ಕೋಳಿಕಾಳಿಕಾರ-ಶಾಕ್ಕೇಯಮತದ ವಂಚಕ ಗಂಡು-ಪರಾಕ್ರಮ, ಪೌರುಷ ೯-೯೦, ೫-೪೬ ವ
- ೧೦-೪೯ ಕೋಟೆಗ-ಕ್ರೂರಮೃಗ ೭-೨೧.
ಗಂಡುಗೆಡು-ಶಕ್ತಿಗುಂದು ೮-೧೦೧ ಕೋಳ್ಳುದಿ-ಏಟಿನಿಂದಾದ ದುಃಖ ೬-೭೫ ಗಂಡೂಷ-ಬಾಯಿಮುಕ್ಕಳಿಸುವಿಕೆ ೫-೧೦ವ
೭-೯೧ ವ ಮನೋವ್ಯಥೆ ೫-೧೮ ಗಟ್ಟಿಸು-ಘಟ್ಟಿಯಾಗಿ ಮಿಶ್ರಮಾಡು, ಕೋಳೋಗು-ಸೂರೆಹೋಗು ೧೦-೧೮೨ ದಮ್ಮಸ್ಸುಮಾಡು ೨-೬೬ ಕೋಗ-ಕೊಂಬಿನಿಂದ ಕೂಡಿದ ಗಣಕ-ಜೋಯಿಸ ೧-೧೨೭
ಮುಖ, ಹೆಚ್ಚಿನ ಸಂತೋಷ ೧-೪೨ ಗಣಿಕೆ-ಸೂಳೆ ೨-೪೧ ಕ್ಲೋಭ-ಕಲಕುವಿಕೆ ೨-೮೯ ವ
ಗಣಿದ-ಎಣಿಕೆ, ಲೆಕ್ಕ ೫-೨೬ ಕೌಕ್ಷೇಯಕ-ಕತ್ತಿ ೧೩-೫೫ ವ |
ಗದ್ಯಾಣ-ಒಂದು ಚಿನ್ನದ ನಾಣ್ಯ (೩೨ ಕೌಂಗು-ಅಡಕೆ ೨-೩೯ ವ, ೩-೪೧
ಗುಲಗಂಜಿ ತೂಕ) ೬-೭೧ ವ ಕೌಳಿಕ-ಕುಲಸಂಬಂಧವಾದ,
ಗಂಭೀರ-ಆಳ, ಗಾಂಭೀರ್ಯ ೨-೩೯ ವ ಭಯಂಕರವಾದ ೧೨-೭
ಗರ್ಭೆಶ್ವರ-ಹುಟ್ಟಿದಂದಿನಿಂದಲೂ
ಶ್ರೀಮಂತನಾದವನು - ಖಂಡ-ಗುಂಪು, ಸಮೂಹ ೫-೮೯
:.. ಆಗರ್ಭ ಶ್ರೀಮಂತ ೪-೧೦೪ ವ ಖದ್ಯೋತ-ಮಿಂಚುಹುಳು ೫-೭೬ .. ಗಮಕಿ-ಓದುಗಾರ ೩-೮೦ ಖರ-ತೀಕ್ಷವಾದ ೧-೨೯, ೩-೮೧
ಗರ-ಗ್ರಹ ೧-೧೦೩ (ಖರಕರ, ಖರಕಿರಣ, ಖರಾಂಶು-ಸೂರ್ಯ) ಗರಮುಟ್ಟ-ಗ್ರಹ ಹಿಡಿಯುವುದು)
Page #752
--------------------------------------------------------------------------
________________
ಶಬ್ದಕೋಶ ಗರುತ್ಮ-ಗರುಡ ೧-೧೨೧, ೬-೨೭ ವ ಗರ್ವವ್ಯಾಳಿ-ಮದಿಸಿದ ದುಷ್ಟಗಜ,
ಗರ್ವದಿಂದ ಕೂಡಿದ ದುಷ್ಟ
ಮನುಷ್ಯ ೧೪-೩೭ ವ ಗವಾಕ್ಷ-ಕಿಟಕಿ ೪-೪೯ ವ ಗಹನ-ಪ್ರವೇಶಿಸುವುದಕ್ಕಾಗದ ೪-೯೭ ವ -ಅಸಾಧ್ಯ ೨-೬೧ ವ ಗಹ್ವರ-ಗುಹೆ, ಡೊಗರು ೩-೩೧, -
೧೨-೧೩೬ ಗಳು-ಕತ್ತು ೫-೫೪ ಗವಿಪು-ಹರಟು ೬-೨೪ ಗಟೆಯಿಸು-ಸಂಪಾದನೆ ಮಾಡು ೨-೨೭,
೪-೬೧. ಗವಟೆಯ ಪಾವು-ತೆಕ್ಕೆ
ಹಾಕಿಕೊಂಡಿರುವ ಹಾವು ೧೧-೯೬
ಗ್ಲಪನ-ಬಾಡುವಿಕೆ ೭-೯ ಗಾಡಿ-ಸೌಂದರ್ಯ, ಸೊಬಗು, ವಿಲಾಸ,
೬-೯ ಗಾಡಿಕಾರ್ತಿ ೨-೨೯ ವ ಗಾಡಿವೆಜು
೩-೭೧ ಗಾಣ-ಗಾಯಕರ್ ೧೧-೪ (ಗಾಣ -
ಗಾನ (ಸಂ) ಗಾತ್ರ-ಶರೀರ, ದೇಹ ೯-೬೨ | ಗಾದಿಗೆ-ಅಗಳೆ, ಕಂದಕ ೬-೬೨ ವ | ಗಾಂಪು-ಮೌಢ ೨-೯೭ ವ, ೪-೯೩ ವ ಗಾವರ-ಧ್ವನಿ ೨-೧೨, ೬-೭, ೪-೧೧೦ ಗಾವಿಲ-ಗಾಮೀಣ (ಹಳ್ಳಿಯವ) ೩-೧೭,
೪-೭ ಗಾವುದ-ಗಾವದ ೧೦-೨೫ ಗಾಳುಗೊರವ-ಕಪಟ ಸಂನ್ಯಾಸಿ ೬-೨೪ ಗಾತ್ತೊಯ್ತಿ-ತುಂಟ ದಾಸಿ ೪-೯೫ ಗ್ರಾವ-ಕಲ್ಲು ೨-೩೨ ಗ್ರಾಹ-ಮೊಸಳೆ ೪-೨೦ ವ
೭೪೭ ಗಿಜಿಗಿಜಿಮಾಡು-ಅಜ್ಜುಗುಜ್ಜಿಮಾಡು,
೯-೫೨ ಗೀರ್ವಾಣ-ದೇವತೆ ೧-೧೩೪ ಗುಜ್ಜ-ಕುಳ್ಳ (ಕುಬ್ಬ-ಸಂ) ೪-೪೦ ಗುಜ್ಜರಿಗಚಿ-ಗೂರ್ಜರದೇಶದ ಕತ್ತೆ
* ೪-೮೭ ಗುಂಡಿಗೆ-ಎದೆ ೧೧-೧೨೧ ಗುಂಡಿತ್ತು-ಆಳವಾಗಿ ೫-೬೨ ಗುಡಿ-ಬಾವುಟ ೩-೧೫, ೩-೩೭,
೫-೧೦೫ -ಕುಟಿ (ಸಂ) ಗುಡಾರ, ಡೇರ ಗುಡಿಗಟು-ಬಾವುಟವನ್ನು ಕಟ್ಟು ೨-೧೨
ವ, ೬-೩೮, ೧೨-೨೧೯ - ರೋಮಾಂಚಿತವಾಗು ೪-೧೦೧ ಗುಣ-ಕಾವ್ಯಗುಣ, ಸದ್ಗುಣ ೧-೯ ಗುಣಕುಗೊಳ್ -ಪ್ರೀತಿಮಾಡು, ಮಚ್ಚು
- ೨-೬೧ ಗುಣಣಿ-ನಾಟಕಶಾಲೆ ೧-೫೮, ೫-೪೭
ವ, ೮-೭೩ ವ ಗುಣ್ಣು-ಆಳ ೧-೮೩, ೧೪-೭೨ ಗುಜೆ-ಲಕ್ಷ ೨-೫೮ ಗುಜುಗೆಯರ್ - ? ೩-೪೪ ವ ಗುಲ್ಬ-ಕಾಲಿನ ಹರಡು ೨-೩೯ ವ ಗುಹ-ಷಣ್ಮುಖ ೮-೧೬ ವ ಗುಳ್ಳೆಗೊಟ್ಟಿ-ಗುಳ್ಳೆಗೋಷ್ಠಿ-ಒಂದು ಬಗೆಯ
ಆಟ ೨-೩೦ ಗುಳ್ಳೆಯ-ಗುಂಡಾಗಿರುವ ೮-೭೭ ಗೂಢ-ಗುಪ್ತವಾಗಿರುವ ೨-೩೯ ವ ಗಂಟು-ದೂರ ೩-೧೩, ೫-೪೭ ವ,
೪-೯೮, ೧೨-೪೭ (ಗಂಟಿದಂ
೧೧-೮೭) . ಗೆಡ-ಸ್ನೇಹ ೨-೩೦, ೬-೩೯,
೧೦-೧೮೨ ಗೆಡೆಗೊಳ್ ೯-೩೯, ೧೧-೫೦
48
Page #753
--------------------------------------------------------------------------
________________
೭೪೮
ಗೆಡೆವಚ್ಚು-ಸ್ನೇಹವನ್ನು ಬಿಡು, ೨-೭೩, ೮೭ ಗೆಡೆವೆಚ್ಚು-ಸ್ನೇಹ ಹೆಚ್ಚಿ ೨-೭೩ ಗೆಲ್ಲ-ಜಯ ೫-೧೦೨, ೮-೩೨ ಗೆಲ್ಲಂಗೊಳ್ ೧೨-೯೧
ಗೆಲೆಯಂಬು-ಬಾಣವಿಶೇಷ ? ೧೩-೩೯ ಗೆಲೆವರ್-ಗೆಲ್ಲು ೧-೭
ಗೇಯ-ಸಂಗೀತ ೩-೫೫, ೪-೩೧ ಗೇಹ-ಮನೆ, ೩-೭೪ ವ, ೬-೨೯ ಗೊಂಕುಲಿಗ-ಒಂದು ಜಾತಿಯ ಹೇಸರಕತ್ತೆ ೧೨-೭ ಗೊಜ್ಜಗೆ-ಇರುವಂತಿಗೆ ೫-೩೦ ಗೊಟ್ಟಿ-ಗೋಷ್ಠಿ, ಗುಂಪು ಸಮೂಹ
೪-೨೮, ೩೧, ೯೫ ವ - ಸಹವಾಸ ೨-೫೮
ಗೊಟ್ಟಿಗಾಣ-ಮೇಳಗಾನದವರು ೫-೫೮ ಗೊಡ್ಡ-ತೊಂದರೆ, ಬಾಷೆ, ಕೇಡು ೪-೬೫,
80000
ಗೊಡ್ಡಾಟ ೭-೪ ವ
ಗೊಣೆ-ಬಿಲ್ಲಿನ ಹೆದೆ ೧೨-೨೦೯
ಗೊಣೆಯ-, ೪-೩೬
ಗೊಂದಳ-ಸಮೂಹ ೬-೩೫ ಗೊರವ-ತಪಸ್ವಿ ೮-೧೭
ಗೊಲೆ-ಗೊನೆ, ತೆನೆ, ಗೊಂಚಲು ೧-೫೨, ೫-೧೨ ಕೊಪ್ಪು,೩-೬೨ ಗೋತ್ರ-ಬೆಟ್ಟ, ೧೧-೧೩೩ ಗೋವರ್-ದನಕಾಯುವವರು, ಗೋಪರು
೮-೯೪
ಗೋವಿಕೆ-ದನಕಾಯುವ ಸ್ವಭಾವ ೯-೪೪ ಗೋಸನೆ-ಘೋಷಣೆ-ಕೂಗಿ ಘಟ್ಟಿಯಾಗಿ
ಹೇಳುವುದು ೧೨-೫೨ ವ
ಗೋಳಾಂಗೂಳ-ಕೊಂಡ ಮುಸುವ ಕೋತಿ
೧-೧೯೫ ವ
ಗೋಳುಂಡೆಗೊಳ್ - ಚೆನ್ನಾಗಿ ಅಳು
0-000
ಗೋಲ್ಕರಿಗೊಳ್-ಕತ್ತು ತಿರುಗಿಸುವಿಕೆ
೧೧-೪೦
ಪಂಪಭಾರತಂ
ಘ
ಘಟ-೧. ಗಡಿಗೆ, ೪-೫೧ ೨. ಆನೆ ೩-೬೭, ೩. ಗುಂಪು ೩-೭೦ ಘಟಚೇಟಿಕೆ-ನೀರು ಹೊರುವವಳು ೧೩-೧೦೨ ವ
ಘಟಾ-ಗುಂಪು ೧-೫೧, ೧೨-೧೩೭ ಘಟಾಘಟಿತ-ಆನೆಯ ಸಮೂಹದಿಂದ ಕೂಡಿದ ೧೦-೩೯
ಘಟ್ಟಿವಳಿ-ಗಂಧವನ್ನು ಅರೆಯುವವಳು
೮-೫೬
ಘನ-ಮೇಘ;
ಘನಘಟಾ-ಮೇಘ ಸಮೂಹ ೧೨-೧೩೭ ಘನಪಥ-ಆಕಾಶ ೧-೧೪೬
ಘನರವ-ಗುಡುಗು ೪-೫
ಘನಾಗಮ-ಮಳೆಗಾಲ ೬-೬೯ ಘನಾಘನ-ಮೇಘ ೯-೯೫ ವ
ಘರವಟ್ಟಿಸು-ಬೀಸು, ತಿರುಗಿಸು ೧೨-೩೦ ಘರ್ಮಜಲ-ಬೆವರು ೩-೬೪
ಘಸಣಿ-ಹಿಂಸೆ ತೊಂದರೆ ೬-೨೪ ವ ಗಸಣಿಪೂರ್ಣಿಸು-ಕಲಕಿಹೋಗು ೭-೧೫ ಘೋಳಾಯಿಲ-ಕುದುರೆಯ ಸವಾರ ೧೮-೫೧ ವ
ಚ
ಚಕ್ಕಣಚಾಕಣ, ಮದ್ಯದ
ಅಂಗಡಿಯಲ್ಲಿರುವ ಒಂದು ಜಾತಿಯ
ತಿನಿಸು ೭-೯೦
ಚಕ್ರಿ-ಕೃಷ್ಣ ೧೦-೨೫
ಚಕ್ರಿಕಾವರ್ತಿ-ಮೋಸಗಾರ ೫-೫೯ ವ ಚಚ್ಚರ-ಬೇಗ ೧೧-೫೧ ಚಚ್ಚರಿಕೆ ೫-೨೨, ೩೪
ಚಟ್ಟರ್-(ಛಾತ್ರ-ಸಂ) ಶಿಷ್ಯರು ೨-೩೪, ೫-೫೦, ೬೧, ೬೯
ಚಟುಳಿತ-ಅಳ್ಳಾಡಿಸಲ್ಪಟ್ಟ ೧೦-೩೭ ಚಂಡ-ತೀಕ್ಷ್ಮವಾದ ೧-೩, ೪-೪೮
Page #754
--------------------------------------------------------------------------
________________
ಶಬ್ದಕೋಶ ಚತುರಶ್ರ-ಚಚೌಕ ೬-೨ ವ
ಚತುರಾಂತರ-ಹಸೆಯ ಜಗಲಿ, ೧-೨೭
೭೧ ವ
ಚತುಶಾಲ-ತೊಟ್ಟಿ ೩-೨೨ ವ ಚಂದ್ರಕ-ನವಿಲುಗರಿ ೧೩-೩೮ ಚಂದ್ರಿಕೆ-ಬೆಟ್ಟಿಂಗಳು ೨-೩೯
ಚದುರ್-ಜಾಣತನ ೨-೨೨, ೧೨-೮
ಚಮರರುಹ-ಚಾಮರ ೪-೧೪
ಚಮರೀ-ಚಮರೀಮೃಗ ೪-೧೪ ಚಮ್ಮಟಿಗೆ-(ಚರ್ಮಪಟ್ಟಿಕಾ-ಸಂ) ಚಾವಟಿ
ಬಾರ್ಕೋಲು ೮-೫೪ ವ
ಚಮು-ಸೇನೆ ೯-೯೭
ಚರಣ-ಮಾಡುವಿಕೆ, ೧-೬೫ ವ
ಚರಿತ-ನಡಿಗೆ ೯-೧೦೨
ಚಲತ್-ಚಲಿಸುತ್ತಿರುವ ೧-೫೮ ಚಲಂಬಡು-ಮತ್ಸರಿಸು ೯-೧೦೭
ಚಲ್ಲಣ-ಚಡ್ಡಿ ೧೨-೧೦೮ ವ ಚಲ್ಲವತ್ತರ್-ನಂಬಿಸಿ
ಹೊಟ್ಟೆಹೊರೆಯುವವರು ೯-೪೨
ಚಲ್ಲವಾಡು-ಸರಸವಾಡು ೪-೮೧
ಚಳಣ-ಕಾಲು ೧೦-೬೦
ಚಳವಿನಂ-ದಣಿಯುವವರೆಗೂ ೧೩-೭೪
ಚಳಿತ-ಚಲನಮಾಡಿದ ೪-೧೨ ವ ಚಳಿತು-ಶಕ್ತಿಗುಂದಿ ೧೨-೩೩ ವ ಚಳಿಲ್ಲನೆ-ತಂಪುತಂಪಾಗಿ ೪-೩೪ ಚಾಗ-ತ್ಯಾಗ, ದಾನ, ೧-೨೯, ೯೯ ಚಾತುರ್ದಂತ-ಚತುರಂಗಸೈನ್ಯ ೧೧-೩೬
೫೭ ವ
ಚಾದಗೆ-ಚಾತಕ ೮-೩೬ ವ
ಚಾಪಿನಾಳ್-ಕಾಪಿನಾಳ್' (ಪಾಠಾಂತರ) ಅಂಗರಕ್ಷಕ
ಚಾರಿ-ತಂತ್ರಕೃತ್ರಿಮಸಾಧನ ೧-೫೮
ಚಾರಿಸು-ಕತ್ತಿಗಳನ್ನು ಝಳಪಿಸು ೧೦-೮೩
ಚಾಳಿಸು-ಚಲಿಸುವಂತೆ ಮಾಡು ೭-೨೯ ವ
ಚಿಟ್ಟೆ-ಮಿಡತೆ ೭-೩೮
ಚಿತಾನಳ-ಚಿತೆಯ ಬೆಂಕಿ ೧೧-೧೧೯
ಚಿತ್ತಾರಿ-ಚಿತ್ರಕಾರಿ ೨-೩೯ ವ ಚಿಂತಾಮಣಿ-ಒಂದು ಜಾತಿಯ ಹೆಂಡ
೪-೪೭ ವ
ಚಿತ್ರವೇತ್ತದಂಡಧರರ್-ಬೆತ್ತವನ್ನು ಹಿಡಿದಿರುವ ಕಟ್ಟಿಗೆಯವರು
೧೪-೨೨
೭೪೯
ಚೀನದ ಕಸೂತಿಕೆಲಸದ ೧೪-೧೫ ಚುಂಬಿ-ತಾಗುವ ೨-೯೩
ಚೂಚುಕ-ಮೊಲೆಯ ತೊಟ್ಟು ೧-೧೨೫ ಚೂಡಾಮಣಿ-ತಲೆಯ ಆಭರಣ೭-೯೫ ಚೆಚ್ಚರಂ-ಥಟ್ಟನೆ ೧೧-೫೧ ಚೆಚ್ಚರಿಕೆ-ಚಳಕ ೧೩-೩೪ ಚೆನ್ನಪೊಂಗರ್-ವೀರರು ೮-೧೦೪ ಚೆನ್ನರ್-ಶೂರರು ೬-೧೮
ಚೆನ್ನಿಗರ್-ಸೌಂದರ್ಯಪುರುಷರು ೧-೧೦೫ ಚೆಂಬೊನ್-ಚಿನ್ನ (ಅಪರಂಜಿ) ೨-೬೬ ಚೆಲ್ಲ-ಸರಸ ವಿನೋದ ೭-೯೪ ವ ಚೆಲ್ಲಂಬೆರಸು-ಚೆಲ್ಲಾಟದೊಡನೆ ಕೂಡಿ
೮-೨೭ ವ
ಚೇಟ, ಚೇಟಿಕೆ-ದಾಸಿ ೩-೫೩ವ ೯-೧೦೦ ಚೈತಾಗ್ನಿ-ಚಿತೆಯ ಬೆಂಕಿ ೧೩-೬೦ ಚೊಚ್ಚಲ ಮಗ-ಮೊದಲ ಮಗ ೯-೬೩ ವ ಚೋದ್ಯ-ಆಶ್ಚರ್ಯ ೧-೧೧೫, ೬-೨೬
ವ
ಚೋದಿಸು-ನಡೆಯಿಸು ೫-೬೮ ವ, ೧೧-೧೨, ೧೨-೧೭೨, ೧೩-೧ ಚೌಪಳಿಗೆ-ಹಜಾರ, ತೊಟ್ಟಿ ೨-೬೬, ೬೭, ೩-೪೦, ೪೦ವ, ೩-೫೩, ೫-೪೭ ವ ೧೧-೧೬ ವ
ಛ
ಛನ್ನ-ಆವರಿಸಲ್ಪಟ್ಟ ೨-೨೨ ಛವಿ-ಕಾಂತಿ ೫-೫೪
Page #755
--------------------------------------------------------------------------
________________
೭೫೦ ಛಾಯಾಲಕ್ಷ-ಪ್ರತಿಬಿಂಬದ ಗುರಿ ೨-೬೦ ಛಿದ್ರಿಸು-ಭೇದಿಸು ನಾಶಮಾಡು ೬-೬೭
ವ, ೭-೩೦ ವ
ಜಕ್ಕ-ಯಜ್ಞ ೬-೩೨ವ ಜಕ್ಕವಕ್ಕಿ-ಚಕ್ರವಾಕಪಕ್ಷಿ ೬-೩೮ ಜಂಕೆ-ಹೆದರಿಸುವುದು (ಯುದ್ಧತಂತ್ರ)
- ೧೦-೭೭ ಜಂಗಮ-ಸಂಚರಿಸುವ ೧-೧೧೪,
೪-೩೯ ಜರ್ಜರಿತ-ಕಿಕ್ಕಿರಿದಿರುವುದು ೧೩-೫೧ ವ ಜಟಮಟಿಸು-ಸಡಗರದಿಂದ ಕೂಡು
೯-೨೩ ಜಟಾಜೂಟ-ಜಡೆಯ ಮುಡಿ ೧-೫೩ ವ ಜಟಿಕಾ-ಜಡೆ ೭-೫೯ ಜಡಿ-ಗದರಿಸು ೨-೧೩, ೭-೪ ವ ಜತುಗ್ರಹ-ಅರಗಿನ ಮನೆ ೩-೪ ವ. ಜನ್ಯವಿರ-ಜನಿವಾರ ೨-೯೭ ವ, ೬-೮ | ಜಂಬೂ-ನೇರಿಳೆ ೬-೩೦ ವ ಜರಿ-ಝರಿ-ಗಿರಿ ನದಿ ೩-೨೨ ಜಮದಗ್ನಿ-ಅಗ್ನಿಯನ್ನು ನಿರಂತರವಾಗಿ * ಉರಿಸುವವನು ೬-೩೩ ಜಯಗೀತ-ವಿಜಯದ ಹಾಡು ೧೪-೧೩ ಜಅಚು-ಹರಟು ೯-೯೨ ಜಲಕ್ಕನೆ-ಥಟ್ಟನೆ ೨-೪೯, ೧೯-೪೬ ವ. ಜಲಶಯನ-ವಿಷ್ಣು ೧೦-೫೨ ಜಲಾದ್ರ್ರ-ನೀರಿನಲ್ಲಿ ನೆನೆದ ೨-೯೫ ಜರ್ವು-ಹುಬ್ಬುಹಾರಿಸುವಿಕೆ ೭-೮೧ ಜಸ-ಯಶಸ್ಸು ೧-೨ ಜಳಂ-ಕಾಂತಿ (?) ೧೪-೫೯ ಜಳದಾನ-ತರ್ಪಣ, ೨-೨೯ ವ ೩-೮ ವ ಜಳದ-ಮೇಘ ೨-೭೭ ಜಾಗರ-ಎಚ್ಚರ ೩-೮೩ ವ
ಪಂಪಭಾರತಂ ಜಾಜು-ಧಾತು(ಸಂ) ಕೆಂಪಾದ ಕಲ್ಲು ಮಣ್ಣು
೧೦-೯೬ ವ ಜಾತವೇದ-ಅಗ್ನಿ ೬-೩೭ ಜಾತಿ-ಜಾಜಿಯ ಗಿಡ ೪-೨೮ ಜಾತಿಬೆಳ್ -ಪೂರ್ಣ ದಡ್ಡ ೧೩-೫೪ ಜಾನ-ಧ್ಯಾನ ೧-೧೧೯ ಜಾನುದಪ್ಪ-ಮೊಳಕಾಲುದ್ದ ೫-೬೨ ಜಾಂಬೂನದ-ಚಿನ್ನ ೬-೩೦ ವ | ಜಾಯಿಲ-ಜಾತಿ ಕುದುರೆ ೧೦-೭೬ ಜಾಜಿಲ್ಲದೆ-ಜಾರಿ ಬೀಳದೆ ೧೦-೯೫ ಜಾಲ-ಬಲೆ ೧-೬೮ ವ | ಜಾಲಗಾರ-ಬೆಸ್ತರವನು ಜಾಳರಿಗೆ-ಜಾಲರಿಯಿಂದ ಕೂಡಿದ ಕಿಟಕಿ
೩-೭೪ ವ ಜಿಗಿಟ್ಟು-ಅಂಟಿಕೊಂಡು ೫೬-೭,
೧೦-೯೦, ೧೧-೫೮ ಜಿಂಜಿಣಿ-ತಾಪ (?) ೫-೧೮ ಜಿವುಳಿ-ಚಿಗುಳಿ ೧೧-೭೨ ವ ಜಿವುಳಿದು ಜಿಹ್ಮ-ವಕ್ರ ೬-೬೦ ಜೀಮೂತ-ಮೇಘ ಜೀಯೆನೆ-ಸ್ವಾಮಿ ಎಂದು ೧-೧ ಜೀರಿಗೆಯೊಕ್ಕಲ್-ಜೀರಿಗೆಯನ್ನು ಒಕ್ಕುವಿಕೆ
- ೧೨-೯೮, ೧೪-೫ ವ ಜೀಜಶೇಖ್-ಕಿರಿಚು, ಗಟ್ಟಿಯಾಗಿ ಕೂಗು - ೧೦-೩೧ವ, ೬೫, ೯೫,
೧೦-೮೯, ೧೦೪ ಜೂದು-ಮ್ಯೂತ, ಜೂಜು ೬-೭೪ ಜೆಟ್ಟಿಗ-ಶೂರ, ಪರಾಕ್ರಮಿ ೨-೬೧,
೩-೪೫ ಜೇವೊಡೆ-ಧನುಷ್ಟಂಕಾರಮಾಡು ೧-೯೯,
೭-೩೭ ವ ಜೊತ್ತಿಸು-ಮರುಳುಮಾಡು ೫-೫೯ ಜೋಂಪ-ಗೊಂಚಲು ೨-೯೭ ವ, ೭-೮೧ವ ಜೋಡು-ಸಮಾನ ೯-೨೪ :
Page #756
--------------------------------------------------------------------------
________________
ಶಬ್ದಕೋಶ
ಜೋಡೆ-ಹಾದರಗಿತ್ತಿ, ವ್ಯಭಿಚಾರಿ ೪-೮೧ವ (ಜೋಡೆಗೆಯ)
ಜೋಳ-ಯಜಮಾನನ ಋಣ (ಸಾಲ)
೯-೮೪, ೧೦-೪೨, ೪೩,
೧೧-೧೨
ಜೋಳದ ಪಾಟೆ-ಉಪ್ಪಿನ ಋಣ
೧೦-೪೩, ೧೪-೫೦
ಝ
ಝಲ್ಲರಿ-ಒಂದು ಬಗೆಯ ತಮಟೆ ೧೧-೩೩ವ
ಟ
ಟಂಕ-ಬೆಟ್ಟದ ಇಳಿಜಾರುಪ್ರದೇಶ ೪-೨೨ ಟಕ್ಕುವಗೆ-ಮೋಸದ ಬುದ್ಧಿ೬-೨೨ ಟಮಾಳ-ಠಮಾಳ, ಮೋಸ, ಕಪಟ
೧೩-೬೬
ಟಾಠಡಾಢಣ-ಟವರ್ಗಾಕ್ಷರಗಳಂತೆ ನಿಶ್ಚಿತ
೬-೨೬
ಟೊಣೆ-ಭೇದಿಸು ೧೧-೯೪
ಡ
ಡಕ್ಕೆ-ವಾದ್ಯವಿಶೇಷ ೪-೯೦
ಡಂಗ-ರಾಜ್ಯದ ಎಲ್ಲೆಯಲ್ಲಿರುವ ಸುಂಕದ ಕಟ್ಟೆ ೨-೯೦
ಡಂಬ-ಕಾಪಟ್ಯ, ಮೋಸ ೩-೧೮ ವ ಡವಕ-ಪೀಕದಾನಿ, ತಾಂಬೂಲವನ್ನು
ಅಗಿದು ಉಗುಳುವ ಪಾತ್ರೆ ೩-೪೮ ವ, ೪-೬೬ವ
ಡಾಮರ-ಪೀಡೆ, ಹಿಂಸೆ, ಕೋಭೆ ೫-೬ ವ
ಡಾವರ ೮-೫೧
ಡಾಳಪ್ರಿಯ- ? ೧-೩೮
ಡೊಕ್ಕರಗೊಳ್-ಡೊಕ್ಕರವೆಂಬ ಒಂದು ಪಟ್ಟನ್ನು ಹಾಕಿ ೧೧-೭೪ ವ
ಡೊಣವು-ಗಾಯದ ಡೊಗರು ೧೦-೧೧೬ ಡೊಂಬ-ಡೊಂಬರವನು ೬-೫೭
(ಡೊಂಬವಿದ್ಯೆ-ಯಕ್ಷಿಣಿ) ಡೊಳ್ಳು, ದೊಡ್ಡ-ದಪ್ಪ ಹೊಟ್ಟೆ ೬-೪೩
ತ
ತಕ್ಕು-ಯೋಗ್ಯ ೨-೫೩ ಹೆಚ್ಚಿಗೆ ೧೦-೪೧
280
-ಪರಾಕ್ರಮ ೧೦-೫೨, ೧೦೧ ತಕ್ಯೂರ್ಮೆ-ಯೋಗ್ಯತೆ ೧-೭೧, ೧೩-೨೮ವ ತಗರ್ತಲೆ-ಒಂದು ಜಾತಿಯ ಬಾಣ೧೩-೩೯ ತಗ-ಅಡ್ಡಗಟ್ಟು ೧೧-೧೦
ತಗುಳ್-ಸೇರು ೧-೩, ೧-೧೪, ೧-೮೪ ವ ೭-೮೦, ೯-೭ ತಗುಳು-ತಗುಲಿಸು ೬-೨೪ ತಗೆ-ತಡೆ (ಸ್ತಂಭನೆ) ೧೩-೫೫ ತಟಾಕ ಕೆರೆ ೧೩-೫೫
ತಟ್ಟಿ-ತಡಿಕೆ ೧೦-೫೬ ವ ತಟ್ಟಿಮೆಡಲ-ತಡಿಕೆ ಹೆಣಿ ೩-೫೪ ವ,
೫-೯೬ ವ
ತಡಂಗಾಲ್-ತೊಡರುವ ಕಾಲು ೧೧-೬೮ ತಡಂಬೊಯ್-ಬಿರುಸಾಗಿ ಹೊಡೆ
000004
ತಡಂಮೆಚ್ಚು-ನಿಧಾನವಾಗಿ ನಡೆ ೧೧-೭ ತಡವರಿಸಿ-ಮೆಯ್ಯನ್ನು ಮುಟ್ಟಿ ಮುಟ್ಟಿ
ನೋಡಿ ೧೩-೮ ವ ತಣ್ಣಪ-ತಂಪು ೫-೩೪ ತಣ್ಮಲೆ-ವ್ಯಾಪಿಸು ೩-೨೨ ತಣಿ-ತೃಪ್ತಿಪಡು ೬-೧೯
ತಣ್ಣುಟೆಲ್-ತಂಪಾದ ತೋಪು ೩-೧೯ ತತ್ತಱದಜೆ-ಚೂರು ಚೂರಾಗಿ ತರಿ
೮-೯೭, ೧೧-೯೩
ತತ್ತಱಗುದಿ-ತಳತಳ ಎಂದು ಕುದಿ
೧೨-೧೫೩
ತತ್ತಿ-ಮೊಟ್ಟೆ ೯-೯೪
ತಥ್ಯ-ನಿಶ್ಚಯ ೧೩-೯೦
ತಂದಲ್-ಮಳೆ ೧೧-೯೩, ೯-೯೬, ೧೨-೨೧ವ, ೧೨-೬೬, ೮೮,
002
Page #757
--------------------------------------------------------------------------
________________
೭೫೨ ತನಿಗರ್ವು-ರುಚಿಯಾದ ಕಬ್ಬು ೧-೫೬ ತನಿಸೋಂಕು-ಹಿತವಾಗಿ ಮುಟ್ಟುವುದು
೧೪-೧೯ ತನುಜ, ತನುಜ, ತನೂಭವ-ಮಗ
೨-೪೩ ವ, ೫-೧೦೩ ತನುತ್ರ-ಕವಚ ೮-೧೭ ತಪನ-ಸೂರ್ಯ ೭-೭೯ ವ ತಂಪುಗ-ಒಂದು ಜಾತಿಯ ಹೆಂಡ
೪-೮೭ ವ ತಪ್ಪುದು-ನಾಶವಾಗುವುದು ೧-೧೦೪ ತಪೊಡಂ-ಮುಗಿದಪಕ್ಷದಲ್ಲಿಯೂ ೪-೫೬ ತಪೋಧನಂ-ಋಷಿ ೧-೧೧೫ ವ ತಪೋಪಳಂ-ತಪಸ್ಸೆಂಬ ಕಲ್ಲು (?) ೪-೨೪ ತಂಬುಲ-ತಾಂಬೂಲ ೯-೧೦೪ ತಮ-ಕತ್ತಲೆ ೧-೩, ೩೦, ೧೦-೬೯ ತಮಾಳ-ಹೊಂಗೆ ೫-೫೨, ೫೪ ತಮುತು-ತಮ್ಮ೯-೮ ತಮೋಹರ-ಸೂರ್ಯ ೨-೩೯ ತರತರಂಗ-ಚಲಿಸುತ್ತಿರುವ ಅಲೆ ೧-೯೦, - ೫-೫೮ ವ ತರತ್ತರಳ-ಚಂಚಲವಾದ ೧-೧೩೭ ತಳೆ-ಕತ್ತರಿಸು ೧೧-೨, ೪-೭೦ 'ತಣಿಸಲವು-ನಿಷ್ಕರ್ಷೆ ೧-೩೩, ೧೦-೨ ತುಂಬು-ನಿಲ್ಲಿಸು, ಬೆನ್ನಟ್ಟು ೨-೯೦,
ಪಂಪಭಾರತಂ ತಲೆವೀಸು-ಒಪ್ಪದಿರು ೧೪-೧೭ ತವದೊಣೆ-ಅಕ್ಷಯತೂಣೀರ, ಬರಿದಾಗದ
ಬತ್ತಳಿಕೆ ೫-೭೭ವ, ೭-೩೭ ವ,
೧೧-೬೪ ತವಿಸು-ನಾಶಪಡಿಸು ೨-೪೫ ತವು-ನಾಶವಾಗು ೪-೨೧, ೮-೧೦೦,
೯-೭೦, ೧೩-೪೦, ೮೧, ೮೩,
೧೪-೧೭ ತಳ-ಕೈ, ಅಂಗೈ ೫-೧೨, ೧೨-೧೪೪ ತಳ -ಹೊರಡು ೧-೧೧೪, ೨-೭೦,
- ೮೬ ವ, ೩-೬೭ ವ, ೭-೫೮ ವ, ೮-೯೦, ೧೨-೧೩೬ ವ ತಳರ್ನಡೆ-ನಿಧಾನವಾಗಿ ನಡೆ
(ಮಂದಗಮನ) ೨-೫ ತಳವೆಳಗು-ಬೆರಗು, ಆಶ್ಚರ್ಯ ೫-೩,
೬-೬, ೧೩-೭೪ ತಳಿ-ಚಿಮುಕಿಸು ೫-೨೨ ವ -ಬೇಲಿ (ತಳಿಗೋಂಟೆ) ೧೨-೧೮ವ ತಳ್ಳಿದೆ-ಲೇಪಿಸು ೫-೬ ವ ತಲೆ-ಎದುರಿಸಿ ಹೊಡೆ ೫-೪೯ ತಳ್ಳೋಯ್-ಎದುರಿಸಿ ಹೊಡೆ ೪-೪೧ ವ ತಳ್ಳಂಕಗುಟ್ಟು-ಕ್ಟೋಭೆಗೊಳ್ಳು, ಅಲ್ಲೋಲ
ಕಲ್ಲೋಲವಾಗು ೫-೬೨ ವ,
೧-೬೫ ವ ತಳ್ಳು-ಅನುಲೇಪನ ೫-೫೯ ತಟ್ಟು-ತಗ್ಗು, ಕ್ಷಣವಾಗು ೮-೨೧, - ಅಣ್ಣ-ತಗ್ಗು ೮-೨೧, ೫-೧೦೪,
೧೨-೮೨ ತಟ್ಟು-ತಡೆ ೫-೭೪ ತಳ್ವುದು-ಸೇರುವುದು, ಹೊಂದುವುದು
೧-೮, ೪-೯೧ ತಣಿ-ಕೊಡೆ ಛತ್ರಿ ೫-೫೯, ೧೦-೫೭ ವ ತುಸು-ಆಲಂಗಿಸು ೧-೯೫ ವ,
೨-೨೪ವ ತಳ್ಳೋಯ್-ಒತ್ತಾಗಿ ಸೇರು ೧-೧೨೫ ವ
೫-೫ ವ ೧೩-೩೮
ತರುವಲಿ-ತಬ್ಬಲಿ ೧೧-೪೮ ತಲೆಗರೆ-ತಲೆಮರೆಸಿಕೊಳ್ಳು ೭-೪೩ ತಲೆಗವಿ-ತಲೆಯನ್ನು ಮುಚ್ಚಿಕೊ ೭-೨ ತಲೆಗುತ್ತು-ತಲೆತಗ್ಗಿಸು ೪-೮೨ | ತಲೆದೋಜು-ಕಾಣಿಸಿಕೊ ೪-೧೬ ತಲೆಮಡು-ಎದುರಾಗು ೧೦-೧೧೪ ವ
(ತಲೆಮಟ್ಟು-ಎದುರಿಸಿ) ತಲೆಯುರ್ಚು-ತಲೆ ತಪ್ಪಿಸಿಕೊ ೧೩-೭೫ ತಲೆವರಿ-ಮುಂದೆಹೋಗು ೩-೪೮ವ
Page #758
--------------------------------------------------------------------------
________________
ಶಬ್ದಕೋಶ
೭೫ ತಳೋದರಿ-ಸ್ತ್ರೀ, ಹೆಂಗುಸು, ತೆಳುವಾದ ತಿಳೆದಿಕ್ಕು-ಕತ್ತರಿಸಿ ಇಡು ೧೦-೧೨೩
* ಹೊಟ್ಟೆಯುಳ್ಳವಳು ೮-೧೧ ತಿರು-ಬಿಲ್ಲಿನ ಹಗ್ಗ, ಹೆದೆ ೪-೩೭ ವ ತ್ವಕ್ಚರ್ಮ - ೧-೬೯ ವ
ತಿಮುನೀರ್-ತರ್ಪಣ, ೧-೩೩ ತಾಂಗು-ಧರಿಸು, ತಡೆದುಕೊಳ್ಳು
ತಿರುವಾಯ್-ಹೆದೆಯ ಮಧ್ಯ ೧೨-೧೮೪ * ೧೧-೧೪೪
ತಿರೆಕಾಂ-ಭೂಮಿಯನ್ನು ತಾಟಿಸು-ಹೊಡೆ ೧೨-೧೫೧, ೭-೪೩ ವ ಭೇದಿಸಿಕೊಂಡುಹೋಗುವ ಬಾಣ * ೮-೭೬ ವ
೧೩-೩೯ ತಾಪಸ-ಋಷಿ ೧-೧೨೦ ವ |
ತಿರೋಹಿತ-ಮರೆಯಾದ ೮-೯ ತಾಮರಸ-ಕಮಲ ೪-೫೮
ತಿಸರ-ಿಸರ, ಮೂರೆಳೆಯ ಸರ ೩-೨೨ ತಾವಡಿಗೊಳ್-ಆಯಾಸಪಡು ೭-೪೬ ತಿಸುಳ-ತ್ರಿಶೂಲ ೧-೬ ತಾಯಿ-ಒಣಗು ೧೧-೬೭
ತ್ರಿದಶ-ದೇವತೆ ೧-೮೫ ತಾಳ-ತಾಳೆಯ ಗರಿ ೧೨-೨೧೪ ತ್ರಿಪುಂಡ್ರ-ಹಣೆಯ ಮೇಲೆ ಧರಿಸುವ ತಾಳಧ್ವಜ-ಭೀಷ್ಮ ೧೧-೧೦ ವ
ಮೂರು ಗೆರೆ ೧೨-೧೫೮ ವ ತಾಳವಟ್ಟ-ತಾಳೆಯ ಗರಿಯ ಆಕಾರ ತ್ರಿವಳಿ-ಹೊಟ್ಟೆಯ ಮೇಲಿನ ಮೂರು - ೧೨-೧೫೩ ವ |
ಮಡಿಪು ೪-೭೪ ತಾಳ್-ತಾಳೆಯ ಮರಗಳು ೧೧-೯೫ ತೀಡು-ಬೀಸು ೪-೨೧, ೪-೩೪, ತಾಳುಗೆ-ತಾಲುಕಾ-ನಾಲಗೆ, ದವಡೆ
೮-೧೧೦ - ೧೦-೭೦ ವ
ತೀನ್-ನವೆ, ತಿಮಿರು, ಕಡಿತ ೨-೮೧, ತಿಣ್ಣಂ-ದಟ್ಟವಾಗಿ ೫-೪೭ ವ
- ೧೦-೪೨, ೧೨-೧೩೫ -ಭಾರ ೩-೪೬ - ತಿಣ್ಣು, ೧-೮೩,
ತೀವು-ತುಂಬು ೧-೧೭, ೨-೩೯ ವ - ೧೩೯ ವ, ೧೦-೩೦
ತುಂಗ-ಎತ್ತರವಾದ ೧-೧೧೫, ೫-೯ ತಿಣುಕು-ಕಷ್ಟಪಡು ೨-೮೭, ೭-೧೮, ತುಡಿಸು-ತೊಡಿಸು ೩-೪೬ . * ೯-೯೯
ತುಡು-ಬಾಣ ಪ್ರಯೋಗಮಾಡು ತಿತಿಣಿ-ಸಮೂಹ ೧೧-೪೬, ೯೦,
೧೨-೧೦೯, ೧೨-೧೯೪ ..೧೩-೫೩ ವ
ತುಡುಗೆ-ಆಭರಣ ೩-೫೦, ೨-೧೮, ತಿದಿ-ಚರ್ಮ ೧-೧೦೨ ವ, ೧೨-೧೦೯ , ೬೮, ೧೨-೫೨ ವ -ತಿ ೧೨-೧೫೧
ತುಬ್ಬು-ಸೂಚಿಸು ೧೦-೨೦ ತಿದಿಯುಗಿ-ಚರ್ಮವನ್ನು ಸುಲಿ,೯-೬೩ ವ ತುಂಬುರುಕೊಳ್ಳಿ-ತೂಪರೆ ಕಡ್ಡಿಯ ಕೊಳ್ಳಿ ತಿಂಬು-ತುಂಬು ೧೦-೫೪
- ೩-೧೭ ವ ತಿಮಿರ್ -ಉಜ್ಜು, ನವೆ, ೩-೩೯ ವ ತುಮುಖ್-ವಿಕಾರವಾಗು, ಹೊರಕ್ಕೆ ಬರು, ತಿರ-ಸ್ಥಿರ ೧೧-೧೪೧
೯-೯೯, ೧೩-೩೭ ವ ತಿಜ್ರನೆ - ಸತ್ರನೆ ೧೨-೧೦೮
ತುರಂಗಮ-ಕುದುರೆ ೩-೩೮ ತಿರಿ-ಅಲೆ, ಚಲಿಸು ೫-೯೫
ತುರಿಪ-ತ್ವರಿತ, ಬೇಗನೆ ೫-೮, ೧೨-೨೦೬ ತಿಟೆ-ಹೂ ಕೊಯ್ಕೆ ೩-೪೧
ತು-ಹಸು ೮-೯೫, ತುಮಕಾರ,
೬-೪೬
Page #759
--------------------------------------------------------------------------
________________
೭೫೪
ಪಂಪಭಾರತ (ತುಜುಗಾರ ೮-೯೩)
ತೆರಳ್ -ಚಲಿಸು ೨-೧೪ ತೆರಳ್ಯ ೨-೧೪ * ತುಲುಗಲ್-ಗುಂಪು ೨-೧೨ ವ, ೩-೪೦ವ ತೆರಳು-ಸೇರಿಸು, ಕೂಡಿಸು ೧-೫೮ ವ, ತುಲುಗು-ಒತ್ತಾಗಿ ಸೇರು ೧-೧೧೫ ವ
೨-೧೨ ವ, ೨೯, ೩-೪೧, ೭೫, ತೆಲ್ಲಂಟಿ-ಬಹುಮಾನ, ಕಾಣಿಕೆ ೩-೭೨
೫-೯೬ ವ, ೧೩-೩೯ , (ತೆಲ್ಲಟಿ ೧೨-೨೧೧ ವ). ತುಣಗಮೆ-ಒತ್ತಾಗಿ ಸೇರಿರುವ ಹುಬ್ಬು ತಳ್ಸಿರ್-ತೆಳುವಾದ ಹೊಟ್ಟೆ ೧-೧೦೮ ೧-೧೦೮
ತೆಳು-ತಿಳಿಯಾಗಿರುವಿಕೆ ೧೦-೨೯ ತುಣುಗೋಳ್-ಗೋಗ್ರಹಣ, ದನಗಳನ್ನು
ತೆಳುಗೆಡು-ತಿಳಿಯಾಗಿರುವುದನ್ನು ಕೆಡಿಸು ಹಿಡಿಯುವಿಕೆ ೮-೯೫ ತುಷ್ಟಿ-ಸಂತೋಷ ೧೪-೬೫
ತೆಂಕು-ತೇಲಾಡು ೪-೨೦, ೧೧-೭ ತುಳಾಭಾರ-ತುಲಾಭಾರ, ತನ್ನ ತೂಕಕ್ಕೆ ತೇರೈಸು - ತವಕಪಡು, ಆತುರಪಡು
ಸಮಾನವಾದ ತೂಕವನ್ನು ದಾನ ತೇರಯಿಸು - ಚಪ್ಪರಿಸು ? ೭-೫೮,
ಮಾಡುವುದು ೧೨-೪೦ ವ ತುಟೆಲ್ -ಪೂಜೆ, ಸೇವೆ, ನಮಸ್ಕಾರ, ತೊಂಗಲ್-ಕುಚು, ಗೊಂಚಲು ೨-೪೧ ವ ೬-೩೩ ವ
ತೊಟ್ಟನೆ-ಥಟ್ಟನೆ ೨-೧೮, ೭-೩೧, ತೂಗಿ ತೊನೆ - ತೂಗಾಡು ೪-೯೦ ವ. - ೧೧-೩೨, ೧೩-೪೨. ತೂಂತಿದು-ತೂತುಮಾಡು ೧೦-೫೭ ವ | ತೊಟ್ಟಿಲಿಗ-ತೊಟ್ಟಿಲಿನ ಮಗು ೧-೪೩ ತೂಲ್-ಹಿಮ್ಮೆಟ್ಟು, ಚೆದುರಿಹೋಗು ತೊಡಂಕು-ಸಿಕ್ಕಿಕೊಳ್ಳು ೮-೧೦೪, ೧೦-೨೫, ೧೨-೧೩೭,
೧೧-೧೪೫, ೧೩-೯೯ ೧೧-೩೩, ೧೧-೫೯, ೧೨-೩೧, ತೊಡುಂಬೆ-ಹೂವುಗಳ ಗೊಂಚಲು ೫-೪೭ವ ಓಡಿಸು ೮-೩೭
ತೊಡರ್ಪು-ಸಿಕ್ಕು ೧-೮೨ ತೆಗಲ್-ಹೆಕ್ಕತ್ತು, ಹಗಲು ೧೧-೧೩೬
ತೊಡರ್-ಸುತ್ತಿಕೊಳ್ಳು ೫-೮೯, ೧-೨೭,
೧೩-೯೧ ತೆಗಯ್-ನಿಂದಿಸು, ದೂರು ೨-೯೫ ತೆಗೆನೆಜ-ಸಳೆ ೧೨-೧೮೪
ತೊಡರಿಕ್ಕು-ತೊಡಕಿಸಿ ಇಡು ೨-೩೨ ವ.
ತೊಂಡು-ತುಂಟತನ ೮-೮೨ ತೆತ್ತಿಸು-ಅಂಟಿಸು ೧೩-೬೩
ತೊಡೆಸೋಂಕು-ತೊಡೆ ಮುಟ್ಟುವಷ್ಟು ತಪ್ಪಲು-ಚೇತರಿಸು ೧೩-೫೮ ವ
ಹತ್ತಿರ, ೧೨-೮೯ ತಬ್ಬರಿಸು-ಸಮಾಧಾನಮಾಡು, ೧೩-೮ ವ
ತೊಣ-ಸಮ, ಜೋಡಿ ೧೨-೧೦೦ ತಂಬೆಲರ್, ತಂಬೆರಲ್ -ತೆಂಕಣಗಾಳಿ
ತೊದಲ್ -ಸುಳ್ಳು ೨-೭, ೪-೧೨, ೬೦, ೫-೩೩
೧೦೨, ೧೨-೧೯೫ ತಮ-ತವಳು, ಜಾರು, ೬-೨೬ ವ
ತೊನಪ-ತೂಗಾಡುವಿಕೆ ೪-೯೦ ವ ತೆರವು-ತೆರಿಗೆ, ಶುಲ್ಕ ೩-೭೨
ತೊಂಬೆ-ಕುಚ್ಚು, ಗೊಂಚಲು ೩-೩೮ ತೆಂಪು-ತೆರೆಯುವಿಕೆ, ಅವಕಾಶ, ೫-೬೭, ತೂರ-ಹಾಲು ಸುರಿಸು ೧೪-೨೧ ೧೩-೯೬
ತೊವಲ್-ಚಿಗುರೆಲೆ ೫-೭ ತೆಲಿಂಬೊಳೆ-ಸ್ಪಷ್ಟವಾಗಿ ಹೊಳೆ ೫-೪
ತೂವತ್ತು ೭-೨೫ ವ
Page #760
--------------------------------------------------------------------------
________________
ಶಬ್ದಕೋಶ
ತೊವಲನಿಕ್ಕು-ಚಿಗುರನ್ನು ಹಾಕು ೫-೪೭ವ -ತೊವಲಿಕ್ಕು ೫-೪೧
-ತೊವಲ್ಗೊಳ್ ೯-೫೪ ತೊಳಕು-ದೇಹದ ಒಂದು ಭಾಗ ೧೧-೧೩೬ ತೂಲ್-ಸುತ್ತಾಡು ೧-೬೮, ೬೮ವ
ತೋರಿಲ್ ತರ್ಪ೦ ೧-೭೦ ತೋಯ್ದೆರ್-ತೂತ್ತುಗಳು ೧೦-೪೫ ತೊಟ್ಟು ೭-೫ ತೋಟ್ಟುವಸ-ದಾಸವೃತ್ತಿ,
* ದಾಸಿಗಳ ಕೆಲಸ ೨-೧೨ವ; ೭-೫ ತೋಯ್ದಿಳಿ-ತುಳಿದಾಟ ೮-೧೦೪,
೧೦-೧೧೪, ೧೨-೪೪ ತೊಟ್ಟುಟ್ಟಿ-ತೊತ್ತಿಗೆ ಹುಟ್ಟಿದವನು ೯-೫೮ ತೋರ್ಕೆ-ತೋರಿಕೆ, ಆಕಾರ, ರೂಪು
- ೧೦-೮೭ ತೋಡು-ತೋಡಿದ ಹಳ್ಳ ೫-೪೩ ವ,
ಬಾಣಸಂಧಾನ ೫-೬೯ ವ,
೧೧-೧೯ ವ ೭೩ ವ ತೋಡುಂಬೀಡು-ಬಾಣವನ್ನು ಕೊಡುವುದು
ಬಿಡುವುದು ೫-೯೬ ವ, ೧೧ ೧-೧೯
ವ, ೧೨-೧೬೭ ವ - ತೋಪು-ಮರಗಳ ಗುಂಪು ೧-೧೧೦ ವ|
ತೋಪಿನ ಬೇಂಟೆ-ಮೋಹಿನ
ಬೇಂಟೆ ೧-೧೧೦ ವ ತೋರ್ಪು -ಗಾತ್ರ ೧-೧೨೦ ತೋಮರ-ಆಯುಧವಿಶೇಷ ೨-೩೪ ವ,
- ೧೨-೮೫ ತೋಯಜ ಷಂಡ-ಸರೋವರ ೮-೩೯ ತೋಯಧಿ-ಸಮುದ್ರ ೩-೧ ತೋರ-ದಪ್ಪವಾದ ೪-೯೭, ೭-೮೭,
"೧೧-೧೭ ತೋಳೆಕೊಡು-ಭೂಬಿಡು ೧೧-೬೯ ತೋಲ್ಬುಲ್ಲೆ-ಚರ್ಮದ ಜಿಂಕೆ ೨-೫೧
೭೫೫ ದಕ್ಷಿಣಾವರ್ತ-ಪ್ರದಕ್ಷಿಣವಾಗಿ ಸುತ್ತುವ
ಗಾಳಿ ೯-೯೫ ವ ದಂಡ-ಶಿಕ್ಷೆ, ದಂಡಿಸುವಿಕೆ ೫-೧೩ ದಂಡಿಗೆ-ದಂಡಿಕಾ, ಪಲ್ಲಕ್ಕಿಯ ಕೊಂಬು
೯-೧೦೪ ವ ದಡಿಗ-ದೊಣ್ಣೆಯನ್ನು ಹೊತ್ತಿರುವವನು
(ಬಲ್ಲಡಿಗ ೧೦-೧೦೪) ದಂಡುರುಂಬೆ-ಗಯ್ಯಾಳಿ ೧-೮೦ ವ.
೩-೭೭ ವ | ದಂಡ-ಕುಚ್ಚು ೧೧-೧೪೦ ವ ದಂತುರಿತ-ವ್ಯಾಪ್ತವಾದ ೧೩-೩೫ ದಂದುಗ-ವ್ಯಥೆ ೧೩-೩ ದನುಜ-ರಾಕ್ಷಸ ೫-೭೪ ದರ್ಭಾಸ್ತರಣ-ದರ್ಭಾಸನ ೧೨-೫೨ ವ ದಯಿತ-ಪ್ರಿಯ ೧೩-೧ ದರಹಸಿತ-ಕಿರುನಗೆ ೧-೮೫ ವ ದರೀ-ಬಿಲ ೭-೭೨ ದಶನಘಟನ-ಹಲ್ಲುಕಡಿಯುವಿಕೆ
೧೨-೧೨೦ ದಶಶತಕರ-ಸೂರ್ಯ ೧೨-೧೭೬ವ
ದಶಶತಕಿರಣ ೧-೯೧ ದಂಷ್ಟಾದಾಡೆ ೪-೧೦ ವ| ದಸಿಕು-ತಿವಿಗೋಲು ೮-೧೯ ದಹನ-ಅಗ್ನಿ ೪-೨೬ ವ, ೫-೯೭ ವ ದಹ್ಯಮಾನ-ಸುಡಲ್ಪಡುತ್ತಿರುವ ೧-೮೦ ವ ದಳ-ಅಡಿಕೆ ೪-೮೮ ದಳನ-ಸೀಳುವಿಕೆ ೧-೨೨, ೬-೭೬ ವ ದಳಂಬಡೆ-ವೃದ್ದಿಯಾಗು ೪-೮೭ ವ , ದಳಿತ ೧-೧೨೭, ೪-೭೭ ದಳಿಂಬ-ದಡಿಬ, ಮಡಿಬಟ್ಟೆ ೧-೧೧೮ ವ, - ೧೩೬ ವ (ಶುಭ್ರವಸ್ತ್ರ ದಳಿವ-ದಡಿಬ ೫-೩೬ ದಳ್ಳಿಸು-ಗರ್ವದಿಂದ ಮೆರೆ ೧೩-೮೮ ದಳ್ಳುರಿ-ದೊಡ್ಡಉರಿ ೧-೧೦೯, ೬-೫೯
:
ದಕ್ಷಿಣ-ಬಲಗಡೆ ೪-೧೨ ವ
Page #761
--------------------------------------------------------------------------
________________
೭೫೬
ಪಂಪಭಾರತಂ ದಾಂಗುಡಿ-ದಾಟುವ ಕುಡಿ, (ದೆ ..+ಕುಡಿ) ದ್ವಿರದ-ಆನೆ ೧೦-೩೬
ಹಗ್ಗದಂತಿರುವ ಕುಡಿ, ದ ಕುಡಿ, ದ್ವಿರೇಮ-ದುಂಬಿ ೭-೭೧ ೨-೧೨ ವ, ೫-೧೦:
ದ್ವಿಷದ್ಗಳ-ಶತ್ರುಸೈನ್ಯ ೪-೧ ದಾಡೆಗುಟ್ಟು-ಕೋರೆಹಲ್ಲನ್ನು ಕುದಿ -೧೫
ದೀರ್ಘಕಾ-ಸರೋವರ ೪-೪೯ ವ ದಾತವ್ಯ-ಕೊಡಲರ್ಹವಾದ ೧-೧..
ದೀಧಿತಿ-ಕಿರಣ ೧-೮೩ ದಾನ-೧ ಮದೋದಕ, ೨ ತ್ಯಾಗ, ೧-೭,
ದೀನಾನನ-ಬಾಡಿದ ಮುಖ ೩-೮ ವ ೨-೩೯, ೬-೪೦
ದೀಪಿಕಾ೦ಕುರ-ದೀಪದ ಕುಡಿ ೭-೮೩ ದಾನಾಂಧ ೧೦-೫೭ ವ ದಾನಾಂಭ ೬-೪೦
ದೀವಗಾರ-ಬೇಟೆಗಾಗಿ ಮೃಗಪಕ್ಷಿಗಳನ್ನು ದಾಮ-ಮಾಲೆ ೪-೪೩ ವ
ಸಾಕುವವನು ೪-೮೪ ದಾಯ-ಪಗಡೆಯ ಗರ (ಸಂಖ್ಯೆ) ೬-೭೨ವ
ದೀವದ-ಸಾಕಿ ಪಳಗಿದ ೫-೪೩ ವ -ಪಾರಿತೋಷಕ ೬-೭೬
ದುಗುಲ-ದುಕೂಲ, ರೇಷ್ಮೆ ೧-೧೩೭, ದಾಯಿಗ-ದಾಯಾದಿ ೬-೬೩ವ, ೭-೭೧ ದಾರುಕರ್ಮ-ಮರಗೆಲಸ ೨-೩೪ ವ
ದುರ್ಣಯ-ದುರ್ನಿತಿ ೧-೭೭
ದುರ್ದಿನ-ಮಳೆಹಿಡಿದು ಸೂರ್ಯನು ಕಾಣ ದಾರುಣ-ಕ್ರೂರ-೧೧ ದಾವಶಿಖಿ-ಕಾಡುಗಿಚ್ಚು ೩-೩೩
ದಿರುವ ದಿನ ೩-೮, ೪-೧೮ವ
ದುರಿತ-ಪಾಪ ೫-೭೦ ದಾ-ಬೆಸ್ತರವನು ೧-೬೮ ವ ದಾಸವಣ-ದಾಸವಾಳ ೧೦-೧೪ ವ
ದುರ್ವಾರ-ನಿವಾರಿಸಲಸಾಧ್ಯವಾದ ದಾಹ-ತಾಪ ೫-೮
೧-೧೧೪ ದಾಹೋತ್ತರ-ಉತ್ತರಕ್ರಿಯೆ ? ೨-೨೬ ವ ದುಸ್ತಮ-ಕಗ್ಗತ್ತಲೆ ೩-೭೯ . ದಾಟಿ-ಸೇನೆಯ ಮುತ್ತುವಿಕೆ ೧೩-೧೦೬
ದ್ಯುತಿ-ಕಾಂತಿ ೪-೧೬ ದಿಂಕುಗೊಳ್ -ಹಾರಿಬರು, ಕುಪ್ಪಳಿಸು
ದ್ರುಮ-ಗಿಡ ೪-೨೫ ೧೦-೯೪
ದೂಟಿಂದ ದೂಟಿಂಗೆ- ಹೆಜ್ಜೆ ಹೆಜ್ಜೆಗೂ ದಿಂಡುಮಗುಳ್ -ರಾಶಿಯಾಗಿ ಹೊರಳು
೪-೮೨ ೧೦-೧೧೬ ವ
ದೂದವಿ-ಕುಂಟಣಿ ೪-೧೦೦ ವ ದಿತಿಜ-ರಾಕ್ಷಸ ೫-೭೭ ವ, ೬-೬೩ ದೂದು-ದೌತ್ಯ, ದೂತಿಯ ಕೆಲಸ ದಿನೇಶ-ಸೂರ್ಯ ೧-೯೬
೪-೧೦೦ವ ದಿಬ್ಬ-ಪ್ರಮಾಣಮಾಡುವುದಕ್ಕೆ
ದೂದವರ್ ೪-೭೯ ಹಿಡಿದುಕೊಳ್ಳುವ ಕಾದ ಕಬ್ಬಿಣ ದೂಳಿದ-ತೆಗಳಿದ ೭-೮೮ ಮುಂತಾದುವು ೧-೭೦
ದೂಟೆದಾಟಿದ-ಸಮಾಧಾನಗೊಂಡ ದಿವ-ಆಕಾಶ, ಸ್ವರ್ಗ ೧-೫೮, ೪-೯ ವ
೭-೮೮ ದಿವ್ಯ-ದೈವ ೮-೪೭ ವ
ದೂರ್ವಾಂಕುರ-ಗರಿಕೆಯ ಚಿಗುರು ೨-೭೪ ದಿವಿಜಾಪಗೆ-ದೇವಗಂಗೆ ೬- ೩೬, ೯-೮೭ವ
ದೂಸಮ್ -ನಿಮಿತ್ತ, ಕಾರಣ ೧-೭೨, ದ್ವಿಜನ್ಮ-ಬ್ರಾಹ್ಮಣ ೩-೬೧
೧೩-೪೯
Page #762
--------------------------------------------------------------------------
________________
೭೫೭ ದ್ವಿಷತ್ -ಶತ್ರುಗಳಿಗೆ ವಿರೋಧವಾಗಿರುವವರು
೧೩-೨೧ ವ *
ಶಬ್ದಕೋಶ ದವಸ-ದಿವಸ ೫-೪೧ ದೆಸೆವಲಿ-ದಿಗ್ನಲಿ ೬-೫೭ ದೇಗುಲ-ದೇವಕುಲ, ದೇವಾಲಯ ೮-೯೫ ದೇವಡಿತಿ-ದೇವತಾಸ್ತೀ ೧೦-೪೫ ದೇವಮಾತೃಕ-ಮಳೆಯ ನೀರಿನಿಂದ ತರೀ
ಫಲಸು ಬೆಳೆಯುವ ಪ್ರದೇಶ ದೇವವ್ರತ-ಭೀಷ್ಮ೬-೪೩ ದೇವವಾರಣ-ಐರಾವತ ೧-೨೯ ದೇವಸಬಳ-ದೇವತೆಗಳ ಅಳತೆ ೨-೮೪
ವ, ೧೨-೫೨ ವ ದೇವಾಂಗವಸ್ತ-ರೇಷ್ಮೆಯಬಟ್ಟೆ ೨-೪೧ ವ ದೇಸಿ-ಸೊಗಸು ೧-೮, ೨-೧೭, ೫-೬೪ ದೊಕ್ಕನೆ-ದೊಂದು ೧೧-೯೬ ದೊಂಡೆ-ಗೆಡ್ಡೆಗಟ್ಟಿದ ೧೨-೧೬೦ ದೊಡ್ಡಿದು-ದಪ್ಪವಾದುದು ೪-೭೨ ದೊಡ್ಡಿವೆಸರ್-ದೊಡ್ಡ ಹೆಸರು ೯-೪೭ ದೊಣೆ-ಬತ್ತಳಿಕೆ ೭-೯೨, ೧೦-೬೪ ವ ದೊಂಬ-ಮೋಸ ೬-೭೨ ವ ದೊಮ್ಮಳಿಸು-ಸಂಭ್ರಮದಿಂದ ಸುತ್ತಾಡು
೧೦-೫೧ ವ ದೊರೆ-ಸಮ, ಸಮಾನ, ೧-೧೦, ೨೨
೮-೩ ದೊರೆಯ ೧-೯೧ ದೊರಗಿಡಿಸು-ಆಯೋಗ್ಯವಾಗಿಸು ೬-೪೪ ದೊರೆತು-ಲಕ್ಷಣವುಳ್ಳುದು,
ಸಮಾನವಾದುದು ೫-೮೧, ೬-೧೫ ದೊರೆಯೇ-ಯೋಗ್ಯವೇ ೭-೫೪ * ದೋರ್ದಂಡ-ದಂಡದಂತಿರುವ ತೋಳು.
•. (ಪರಾಕ್ರಮ) ೧೩-೫೦ ದೋಹಳ-ಬಯಕೆ ೧-೧೩೫, ೧೪೨ ದೌಷ್ಯಂತಿ-ದುಷ್ಯಂತನ ಮಗ, ೧-೬೨ ಜ್ಯೋತಿತ-ಪ್ರಕಾಶಿಸಲ್ಪಟ್ಟ ೧-೧೬ ದ್ರೋಣ-ಗಡಿಗೆ ೨-೪೩ ದೋಣಿ-ದ್ರೋಣನ ಮಗ; ಅಶ್ವತ್ಥಾಮ
೧೩-೧೦೨
ಧನದ-ಕುಬೇರ ೧-೫೮ ಧನುರಾಗಮ-ಧನುರ್ವೇದ, ಅಸ್ತವಿದ್ಯೆ
೨-೫೫ ಧನುರ್ಲತಾ-ಬಳ್ಳಿಯಂತಿರುವ ಬಿಲ್ಲು
- ೧-೧೪೨ ಧಮ್ಮಿಲ್ಲ-ತುರುಬು ೭-೫, ೧೨-೧೬೧ ಧರಾಧರ-ಬೆಟ್ಟ೩-೫೩ ಧರಿತ್ರಿ-ಭೂಮಿ ೧-೧. ಧವಳಿತ-ಬೆಳ್ಳಗಾದ ೪-೫೨ವ ಧವಳಾತಪತ್ರ-ಶ್ವೇತಚ್ಛತ್ರ ೧-೧೨೦ ಧ್ವಜಿನಿ-ಸೈನ್ಯ ೧-೩೬, ೮-೧೦೧ : ಧ್ವನತ್-ಶಬ್ದಮಾಡುತ್ತಿರುವ ೮-೫೨ ಧಾತ್ರಿ-ಭೂಮಿ ೧-೧೦೮ ಧಾರಾಗೃಹ-ಧಾರಾಕಾರವಾಗಿ ನೀರು
ಸುರಿಯುತ್ತಿರುವ ಮನೆ ೩-೧೯ ಧ್ವಾಂಕ್ಷ ಧ್ವಜ-ಕಾಗೆಯ ಬಾವುಟವುಳ್ಳವನು
- (ಕರ್ಣ) ೧೨-೧೩೬ ವ ಧುನೀ-ನದಿ ೧೪-೪ ಧುರ-ಯುದ್ಧ ೧-೪೮ | ಧೂರ್ತ-ತುಂಟ ೩-೩೪
ನಃ-ನಮ್ಮನ್ನು ೪-೨೭ ನಕ್ಕರವದ್ದಿ- ? ೧-೧೦೮ ನಕ್ತಂಚರ-ರಾಕ್ಷಸ ೧೦-೨೭ ವ ನಖ, ನಖರ-ಉಗುರು ೧-೧೮, ೬-೭೭,
೧೦-೧೦೯ ನಖಮಾಂಸಪ್ರೀತಿ-ಉಗುರಿಗೂ
ಮಾಂಸಕ್ಕೂ ಇರುವಷ್ಟು
ಅನ್ನೋನ್ಯವಾದ ಪ್ರೀತಿ ೧೪-೭ ನಚ್ಚುವೋದ-ವಿಸ್ವಾಸಾರ್ಹವಾದ ೬-೫೪
Page #763
--------------------------------------------------------------------------
________________
೭೫೮ ನಟ-ಈಶ್ವರ ೧೧-೧೩೧ ನಡಪಾಡು-ಸಂಚರಿಸು ೭-೮೪ ನಡಪು-ಸಾಕು, ಸಲಹು ೧-೬೮ ವ, ೨-೨೫
ವ, ೪-೫ ವ, ೧೦-೧೮ ನಣ್ಣು-ಬಾಂಧವ್ಯ, ನೆಂಟತನ, ೧೩-೧೦,
- ೧೧-೧೫, ೩-೮೪, ೯-೭ ವ. ನಂದನ-ಉದ್ಯಾನ, ತೋಟ ೩-೨೧ ವ | ನಂದಿಸು-ಬೆಂಕಿಯನ್ನು ಆರಿಸು ೧೨-೨೦ ನದಿಪು-ನಂದಿಸು, ಆರಿಸು ೧-೬೮ ವ,
೨-೨೫ ವ, ೧೧-೧೮, ೧೩-೮೩ ನನ್ನಿ-ಸತ್ಯ ೧-೮೧, ೫-೯೯ವ
. (ನನ್ನಿಕಾರ ೭-೪೮) ನನ-ಅರಳುಮೊಗ್ಗು ೧-೫೮ ನಯ-ನ್ಯಾಯ, ನೀತಿ ೧-೭೭, ೫-೨೦ ನರ-ಅರ್ಜುನ ೧೦-೨೫ ನರಕಾಂತಕ-ಕೃಷ್ಣ ೪-೮೫ ನರಪ-ದೊರೆ ೧-೨೨. ನರಲ್ -ನರಳು ೧೧-೧೪೩ ನರುವಾಯಂ-ಒಂದು ಜಾತಿಯ ಬಾಣ
೧-೩೯ ನರೆ-ಬಿಳಿದಾದ ಕೂದಲು, ಮುಪ್ಪು,
೮-೫೪, ನರೆಪ ೪-೧೦೦ ನಲ್ಗಳ್ -ಪ್ರಿಯೆ ೧-೬೮ ವ ನಿ-ಪ್ರೀತಿ, ೬-೨ ವ . ನವಿರ್-ಕೂದಲು ೨-೩೯ ವ ನಸು-ಸ್ವಲ್ಪ ೬-೩೮ ನಳಿ-
ಕೋಮಲವಾದ ೧-೯೫ ವ ನಳಿನ-ಕಮಲ ೫-೧೦ ವ ನಾಗಜಾಲಂ-ಹಾವಿನ ಸಮೂಹ ೪-೧೭ ನಾಗಧ್ವಜ-ದುರ್ಯೊಧನ ೧೪-೬ ನಾಗಬಂಧ-ಒಂದು ರೀತಿಯ ಪಟ್ಟು
೪-೧೭ ನಾಗರ-ಹಸಿ ಶುಂಠಿ ೪-೧೭ - ಸರ್ಪ ೫-೮೯
ಪಂಪಭಾರತಂ ನಾಗರಖಂಡ-ನಾಗರ ಖಂಡವೆಂಬ ಪ್ರದೇಶ
೪-೧೭ ನಾಗರಿಕ-ಚತುರನಾದ ಪೌರ ೪-೭೯ ವ
(ಶೃಂಗಾರ ಸಹಾಯಕ) ನಾಗವಿಮಾನ-ಅಂತಃಪುರಸ್ತ್ರೀಯರಿರುವ
ಉಪ್ಪರಿಗೆ ೪-೧೬ ವ ನಾಗಶಯನ-ಕೃಷ್ಣ ೯-೨೭ ವ ನಾಗಿಣಿ-ನಾಗಲೋಕದ ಸ್ತ್ರೀ ೪-೧೭ ನಾಡಾಡಿ-ಸಾಮಾನ್ಯ ೨-೨೪ ವ, ೪-೩೧ ಈ ವ, ೧೨-೨೨೦ ವ. ನಾಣ್-ನಾಚಿಕೆ ೧-೯೨, ೨-೪೯ ನಾಣಳ್ಳು-ಲಜ್ಜೆಯ ಸುಸ್ತು ೪-೬೩ ನಾಣ್ಣಾಪು-ನಾಚಿಕೆಯಿಲ್ಲದ ೧೩-೪ ನಾಣಿಲಿ-ನಾಚಿಕೆಯಿಲ್ಲದ ೧೩-೪, ನಾಣ್ಣುಡಿ-ಲೋಕೋಕ್ತಿ, ಗಾದೆ ೧೨-೨೯ವ ನಾಣ್ಮಡು-ನಾಚಿಕೆಯಿಂದ ಕೂಡು ೩-೮೩ ನಾಣೋಗು-ಪ್ರಾಣಿಗಳ ಕಾಮಕ್ರೀಡೆ ನಾಂದಿ-ನೆನೆಯಿಸಿ, ಒದ್ದೆಮಾಡಿ ೧-೧೦೫ ನಾನೆ-ನೆನೆಯಲು ೪-೧೦೯ ನಾಂಬಿನಂ-ನೆನೆದು ಹೋಗುವಂತೆ : ೪-೧೦೮ ನಾಭಿ-ಹೊಕ್ಕುಳು ೨-೩೯ ವ (ಕೇಂದ್ರಸ್ಥಳ) ನಾರಂಗ-ಕಿತ್ತಳೆ (ಬಣ್ಣ) ೧೧-೧೪೦ ವ ನಾರಾಚ-ಬಾಣ ೧೧-೭೩ ವ ನಾಲ್ವೆರಲ್ -ನಾಲ್ಕು ಬೆರಳು ೧-೫೦ ನಾಸಾಪುಟ-ಮೂಗಿನ ಹೊಳ್ಳೆ ೭-೬ ನಾಲಿವಾಸಿಗೆ-ಮೋಸದ ದಾಳ ೬-೬೮,
೭೧ವ ನಾಲ್ಕಡಿಗಳೆ-ದೇಶದ ಹೊರಗೆ ಹಾಕು:
೧೨-೧೭೮ ನಿಕಟ-ಸಮೀಪ ೩-೩೧ ವ ನಿಕುಂಜ-ಲತಾಗೃಹ, ಬಳ್ಳಿ ಮನೆ ೧-೫೮ ನಿಕುರುಂಬ-ಸಮೂಹ ೧೩-೫೧ ವ ನಿಕ್ಕುವ-ನಿಶ್ವಯ ೯-೧೯
Page #764
--------------------------------------------------------------------------
________________
ಶಬ್ದಕೋಶ
ನಿಗಳ-ಬೇಡಿ ೪-೧೨
ನಿರ್ಗತ-ಹೊರಗೆ ಹೊರಟ ೧-೧೧೫ ನಿಘಾತ-ಪೆಟ್ಟು, ಹೊಡೆತ ೫-೨೨ ನಿಚಯ-ಸಮೂಹ ೫-೧೦ವ
ನಿಚ್ಚಕ್ಕಂ-ನಿತ್ಯವೂ ೧-೧೧೮ವ ನಿಚ್ಚಟ-ನಿಶ್ಚಲ, ದೃಢ ೧೪-೧೦ (ನಿಚ್ಚಟ ೧೧-೬೫)
(ನಿಚ್ಚಟಿಕೆ ೪-೨೬)
ನಿಚ್ಚಲ್-ನಿತ್ಯ ೧-೧೭ (ನಿಚ್ಚಲಂ ೫-೮೧, ೬-೧೭) ನಿಚಿತ-ವ್ಯಾಪ್ತವಾದ ೪-೪೯ವ ನಿರ್ಝರ-ಗಿರಿನದಿ ೩-೧೦ ನಿಟ್ಟಾಲಿ-ಕಣ್ಣಿನ ನೇರಕ್ಕೆ ೧೩-೧೦೬ ನಿಟ್ಟಿಸು-ದೃಷ್ಟಿಸಿ ನೋಡು ೪-೧೦೩ ನಿಟ್ಟೆ-ನಿಷ್ಠೆ, ನಿಯಮ, ೬-೭೧ ನಿನ್ನೆಲ್ಲು-ಉದ್ದವಾದ ಮೂಳೆ ೧೦-೭೧ ನಿತ್ತರಿಸು-ವಹಿಸು, ನಿರ್ವಹಿಸು, ದಾಟು, 2-20, 8-00, 00-22
ನಿಧಾನ-ನಿಧಿ, ನಿಕ್ಷೇಪ, ೧-೯೫ ವ
೯-೭೨
ನಿಧಾನಿ-ಆಶ್ರಯ ೨-೪೧
ನಿನದ-ಶಬ್ದ ೪-೭೩ (ನಿನಾದ-೧-೧೪೦ವು
ನಿರ್ನೆರ-ಕಾರಣವಿಲ್ಲದೆ ೬-೧೭ ನಿರ್ಭರ-ತುಂಬಿದ ೧-೧೨೬ ವ
ನಿಮ್ಮ-ತಗ್ಗಾದ ೨-೩೯ ವ, ೫-೯ ನಿಮಿರ್ಚು-ವಿಸ್ತರಿಸು ೧-೭, ೨೬ ನಿಯಂತ್ರಿತ-ಬಿಗಿದ ೧೨-೧೨೦
ನಿಯಮನಿಧಾನ-ತಪಸ್ವಿ ೨-೪೧
ನಿಯೋಗ-ಕಾರ್ಯ ೧೨-೧೩೦, ೧೩-೨೦
ನಿರಂಕುಶ-ತಡೆಯಿಲ್ಲದುದು ೧-೩೨ ನಿರ್ವಾಯ-ಅಲಗಿಲ್ಲದ ಬಾಣ ೧೩-೩೯ ನಿಟ್ಟೆ-ನೆರಿಗೆ ೪-೩೫
(ನಿಡೆದಳಿರ್ ೫-೫ವ) (ನಿಜೆನಿಜೆಗೊಳ್ ೨-೩೯ವ) (ನಿಜೆವಿಡಿ ೫-೫೭) ನಿಜೆಗ-ಇಮಾವು ೨-೧೨ವ
ನಿಜೆಸು-ನಿಲ್ಲಿಸು, ಸ್ಥಾಪಿಸು ೧-೫೦,
೩-೧, ೬-೧೮
ನಿಲುಗೆ-ಹೊಂದಿಕೆ ೫-೪೬
ನಿಲ್ಲದಿಕೆ-ನಿಲ್ಲದಿರುವುದು, ತಪ್ಪುವುದು
೯-೮೪
ನಿಲೆನುಡಿ-ನಿರ್ಧರಿಸಿ ಹೇಳು ೬-೧೯ವ ನಿವರ್ತನ-ಹಿಂದಿರುಗುವಿಕೆ ೧೦-೭೭
ನಿವಹ-ಸಮೂಹ, ಗುಂಪು ೧-೧೩೨ ನಿರ್ವಣ-ಗಾಯವಿಲ್ಲದುದು ೧೦-೪೫ ನಿರ್ವಂದ-ನಿರ್ಬಂಧ ೮-೩೭ ವ
ನಿರ್ವ್ಯಾಜ-ಕಾರಣವಿಲ್ಲದ (ತಾನಾಗಿಯೇ)
02-8
ನಿವೇಶಿತ-ಇಡಲ್ಪಟ್ಟ ೫-೧೦ ವ ನಿರ್ವಗ-ವೈರಾಗ್ಯ ೨-೨೯ವ ನಿಶಾಟ-ರಾಕ್ಷಸ ೪-೧೫ ವ
ನಿಶಾತ-ಹರಿತವಾದ ೧೨-೬೮ ವ
2.86
ನಿಶಾಂತ-ರಾತ್ರಿಯ ಕೊನೆ, ಬೆಳಗಿನ ಜಾವ,
0-040
ನಿಶಿತ-ಹರಿತವಾದ ೪-೧೫ ವ
ನಿಷ್ಠ-ಇಡಲ್ಪಟ್ಟ ೭-೫೯ ವ
ನಿಷಾದಿ-ಮಾವಟಿಗ ೧೦-೯೨ ನಿಷ್ಠಿತ-ಕೂಡಿದ ೨-೩೪ ವ
ಗೊತ್ತಾದ, ವ್ಯವಸ್ಥಿತವಾದ ೮-೫೦ ವ ನಿಷೇಕ(ಸುರಿಯುವಿಕೆ) ತಕ್ಕ ಶಿಕ್ಷೆ ೮-೮೦ ನಿಸದ-ನಿಶ್ಚಯ ೫-೪೭ ನಿಸ್ತಪ-ನಾಚಿಕೆಯಿಲ್ಲದ ೩-೬೬ ನಿಸ್ಸಹ-ಸಹಿಸಲಾರದ ೧೩-೫೧ ವ ನಿಷೇಕ, ನಿಷೇಕ-ತಕ್ಕ ಶಿಕ್ಷೆ ೧೩-೮೦ ನಿಳಿಂಪ-ದೇವತೆ ೫-೮೦, ೭-೭೨
Page #765
--------------------------------------------------------------------------
________________
೭೬೦
ಪಂಪಭಾರತಂ ನಿಳ್ಳು-ನೆಟ್ಟಗೆ ನಿಲ್ಲು, ಮೆಟ್ಟಿಗಾಲಿನಲ್ಲಿ ನಿಲ್ಲು ನುಣ್ಣಿತು-ಮೃದುವಾದ, ನಯವಾದ ೬-೭
ಮೃದೂಕ್ತಿ ೬-೭೨ ವ' ನೀಕರ-ನಾಶಮಾಡುವ ೧೪-೪೭ ನುಲಿ-ಹಗ್ಗ ೭-೮೦ ವ ನೀರ್ಗಾದಿಗೆ-ಕಂದಕ, ಅಗಳ್ಳಿ ೬-೨೬ ವ ನುಸುಲ್-ತಪ್ಪಿಸಿಕೊಂಡು ಹೋಗು ೧೦-೮೧ ನೀರ್ಗುಡು-ತರ್ಪಣಮಾಡು ೯-೧೦೪ ವ. ನೂಪುರ-ಕಾಲ್ಕಡಗ ೩-೪೭ ನೀಡ-ಹಕ್ಕಿಗಳ ಗೂಡು ೧-೫೮ | ನೂಲು- ? ೫-೪೩ ನೀಡಿರದೆ-ತಡಮಾಡದೆ ೧-೭೩, ನೂಲ ತೋಡು-ಕತ್ತರಿಸಿದ ದಾರ, . ೯-೧೬, ೮-೧೦೦
ದಾರದೆಳೆಗಳಂತೆ ಮತ್ತೆ ಸೇರುವುದು - ನೀಡಿಲ್ಲದೆ ೪-೧೧
೯-೪೬ ನೀರ್ದಾಣ-ಮೃಗಗಳು ನೀರು ಕುಡಿಯಲು ನೆರವಟ್ಟೆ - ? ೧-೧೦೮ ಬರುವ ಸ್ಥಳ ೫-೪೧
ನೆಗಪು-ಎತ್ತು, ಹರಿಯಿಸು ಸುರಿಸು, ನೀರ್ -ಕಾಂತಿ ೫-೫೩ ವ
೨-೯೪ ವ, ೧೩-೬೪ ವ ನೀರ-ನೀರು ೧೪-೩೧
ನೆಗಮ್-ಮೊಸಳೆ ೨-೬೦ ಕಾಣಿಸಿಕೊ, ನೀರಡಸು-ಬಾಯಾರು ೮-೩೭ ವ
* ನಗೆ ೧-೩೪ ನಿರಬೈ-ಬಾಯಾರಿಕೆ ೮-೩೯ ವ
ನೆಗಡಿ-ಮಾಡು ೪-೧೩' ನೀರದ-ಮೋಡ ೩-೩೧
ನೆಗಟಿ-ಪ್ರಸಿದ್ದಿ ೧-೪೨. ನೀರರುಹ-ಕಮಲ ೪-೫೧.
ನೆಣ-ಕೊಬ್ಬು ೮-೭೭, ೧೧-೫೮ ನೀರಾಕರ-ಸಮುದ್ರ ೪-೨೪
ನೆತ್ತ-ಪಗಡೆಯ ಆಟ ೬-೬೮, ೯-೭೯ ನೀರಾಜಿತ-ಆರತಿ ಮಾಡಿದ ೧೦-೩೭ ನನಸು-ಸರಣೆ ೪-೧೧೦ ವ ನೀರಿಟಿ-ಸತ್ತವರಿಗೆ ಸ್ನಾನಮಾಡು,
ನೆಪ್ಪು-ಮುಲ್ಕಿ ೧೧-೭ ವ ೧೨-೨೨೦
ನೆರ್ಮು -ಆಶ್ರಯ ೫-೮೨ ನೀರೇಜ-ಕಮಲ ೪-೭೫
ನೆರ-ಸಹಾಯ ೩-೧೭, ೫-೮೪ : : ನೀರೇಜಿಸು-ಸಂತೋಷವನ್ನುಂಟುಮಾಡು
ನೆರಂಬಾರೆಂ-ಸಹಾಯವನ್ನು ೧೨-೧೩೯
ಅಪೇಕ್ಷಿಸುವುದಿಲ್ಲ ೮-೯೮ . ನೀರೋಗ-ರೋಗವಿಲ್ಲದವನು ೫-೧೦೪ವ
ನೆ-ಮರ್ಮಸ್ಥಾನ ೧-೧೧೧, ೬-೫೮ ನೀಹಾರ-ಹಿಮ ೭-೭೧ ವ
ನೆರಕೆ-ಕತ್ತರಿಸುವ ಬಾಣ ? ೧೩-೩೯ ನೀಳ-ವಿಸ್ತಾರ ೧-೫೮
ನೆಪು-ನೆರವೇರಿಸು ೨-೨೧, ೧೨-೮ ವ ನೀಳಗಳ-ನವಿಲು ೭-೨೨ .
ನೆಲ್-ನಿಶ್ಲೇಷ್ಟನಾಗಿರುವ ೪-೪೩, ನೀಳ್ಳು-ವಿಸ್ತಾರ ೨-೩೯ ವ, ೩-೨೨,
- ೭-೯೦, ೧೦-೧೯೫ ೩-೪೦ ವ
ನೆರವಿ-ಗುಂಪು ೨-೭೫ ನುರ್ಗು-ಪುಡಿಮಾಡು ೧೧-೧೫೧
ನಲಿವು-ನೆರವೇರುವಿಕೆ ೬-೨೨ ನುಡಿ ನುಡಿ-ಪ್ರತಿಜ್ಞೆಮಾಡು ೭-೧೦ ನುಡಿವಳಿ-ವಾಗ್ದಾನ, ಕೊಟ್ಟ ಮಾತು
ನೆರೆ-ಸೇರು ೧೦-೧೮ - ೧೧-೪೩ ವ, ೧೨-೧೯೦
ನೆ-ಸಂಪೂರ್ಣವಾಗು ೨-೩೯ ವ - ಪ್ರತಿಜ್ಞೆ೧-೭೩ ವ, ೧೧-೨೦ ನೆಲೆ-ಸ್ಥಳ ೨-೯೦, ೮-೨೮ .
.
4
Page #766
--------------------------------------------------------------------------
________________
೭೬೧
:
ಶಬ್ದಕೋಶ ನೇಣ್ -ಹಗ್ಗ ೫-೪೭ ವ ನೇತ್ರ-ವಸ್ತ ೭-೨೫ ವ ನೇತೃ-ಯಜಮಾನ ೬-೩೩ ವ . ನೇರ್ಪಡಿಸು-ಸರಿಮಾಡು,
ಹೊಂದಿಕೆಮಾಡು ೫-೨೦ ನೇಮಿ-ಚಕ್ರದ ಪಟ್ಟೆ ೧೧-೧೪೬ ನೇರ್-ಕತ್ತರಿಸು ೯-೬೩ ನೇರಿದರ್-ಬುದ್ದಿವಂತರು ೧೨-೬೭ ನೇಲ್-ಜೋಲಾಡು ೧-೬, ೧೧-೩೮ ನೇಸಮ್ -ಸೂರ್ಯ ೩-೨೭ ನೊಣೆ-ನುಂಗು ೧೦-೧೩ ನೊಸಲ್-ಹಣೆ ೨-೩೯ ನೋಳ-ನೊಣ ೨-೫೦, ೯-೫೯ ವ ನೋಂಪಿ-ವ್ರತ ೧-೧೩೫ ನೋರ್ಪು-ನೋಡುವ ? ೧೦-೮೧.
ಪಚ್ಚಗಂಟಿಕ್ಕು - ಎರಡು ಭಾಗವಾಗಿ
ತಲೆಯ ಕೂದಲನ್ನು ಗಂಟುಹಾಕು
೧೨-೨೦೨ ವ | ಪಚ್ಚವಡಿಸು-ಹೊಂದಿಸು ೭-೨೫ ವ ಪಂಚಾಸ್ಯ-ಸಿಂಹ ೬-೭೭ ಪಚ್ಚುಕೊಡು-ಹಂಚಿಕೊಡು ೧-೫ ವ - ೬-೨೬ ವ ಪಚ್ಚಪಸಿ-ಬಹಳ ಹಸಿ ೬-೪೬ ಪಚ್ಚುಗಂಟು - ವಿಭಾಗ ಮಾಡಿದ ಗಂಟು
೧೦ - ೧೦೮ ವ ಪಚ್ಚೆಸಾರ-ಸಾರವಾದ ಪಚ್ಚೆಯ ರತ್ನ
೧೪-೧೫ ಪಜ್ಜಳಿಸು-ಪ್ರಜ್ವಲಿಸು ೧೦-೭೬ ವ ಪಜ್ಜೆ - ಹೆಜ್ಜೆ, ಮಾರ್ಗ ೫-೪೫, ೮-೩೯
ಪಕ್ಕರೆ-ಪಕ್ಷರಕ್ಷಾ, ಜೀನು, ಕುದುರೆಯ ಈ ಮೇಲಿನ ತಡಿ ೬-೬೭, ೧೦-೭೬
- ಲೋಹವಕ್ಕರೆ ೧೦-೭೮ : ಪಕ್ಕಾಗು-ಗುರಿಯಾಗು ೪-೩೮ ವ ಪಗೆವಾಡಿ-ಶತ್ರುಸೆನ್ನ ೧೦-೧೬, ೧೧೧ ಪಂಚಗವ್ಯ-ಹಸುವಿನಿಂದ ಬರುವ ಅಯ್ತು
ಪದಾರ್ಥಗಳನ್ನು ಒಟ್ಟುಗೂಡಿಸಿ * ಮಾಡಿದ ಪದಾರ್ಥ ಹಾಲು, ಮೊಸರು, ತುಪ್ಪ, ಗಂಜಳ,
ಸಗಣಿ) ೪-೫ ವ ಪಂಚಜಡೆ-ಅಯ್ಡು ಜಡೆ ಪಂಚಮಹಾಶಬ್ದ-ಕೊಂಬು, ಶಂಖ,
ತಮಟೆ, ಭೇರಿ, ಜಯಘಂಟೆ
ಇವುಗಳ ಶಬ್ದ ೧-೪೯ ಪಂಚರ-ಒಂದು ಆಯುಧವಿಶೇಷ - ೧೦-೭೬, ೭೮
ಪಟ - ಬಟ್ಟೆ ೮-೧೦೯ ವ ಪಟಬಿಜ್ಜೆ - ಪಟವಿದ್ದ (ಚಿತ್ರ .
ಬರೆಯುವುದು) ೪-೮೧ ಪಟಹ - ಭೇರಿ ೨-೬೯ ಪಟಳ - ೧. ಸಮೂಹ ೨. ಛಾವಣಿ
೧೦-೬೭ ಪಟ್ಟಕ - ಪೀಠ, ೭ -೫೯ ವ ಪಟ್ಟನೆ-ಪಟ್ಟೆಂದು ೧೨-೫೧ ಪಟ್ಟಬಂಧನ-ಪಟ್ಟಕಟ್ಟುವಿಕೆ ೧೪-೧೬ ವ ಪಟ್ಟಭಾಕ್-ರಾಜ್ಯಕ್ಕೆ (ಪಟ್ಟಕ್ಕೆ) ಭಾಗಿ : ೧೪-೫೦ ಪಟ್ಟವಣೆ-ಹಸೆಮಣಿ ೩-೭೪ ವ ಪಟ್ಟವರ್ಧನ-ಪಟ್ಟದಾನೆ ೧೪-೧೭ ಪಟ್ಟಿತ್ತು-ಬಿದ್ದಿತು ೧೧-೧೪೮ ವ ಪಟಿಷ್ಠ-ಬಹಳ ಸಮರ್ಥವಾದ ೧೩-೫೧ ಪಟು-ಸಮರ್ಥ ೧-೬೫ ವ ಪಡಣ-ಪತನ ೪-೫೧ ಪಡಲ್ವಡಿಸು-ಚೆಲ್ಲಾಪಿಲ್ಲಿಯಾಗಿ ಕೆಡಹು
೧-೭೪, ೫-೯೧, ೬-೪೭
Page #767
--------------------------------------------------------------------------
________________
وع
ಪಂಪಭಾರತಂ ಪಡಲ್ವಡೆ ೧-೨೫, ೪೭
ಪತ್ರಚ್ಛೇದ-ಎಲೆಗಳ ಚಿತ್ರ ೨-೩೪ ವ | ಪಡಲಿಗೆ-ಪಟಲಿಕಾ, ಬುಟ್ಟಿ ೫-೬೭ ವ, ಪತ್ರಪಟ್ಟ-ಒಂದು ರೀತಿಯ ಕಿರೀಟ ೧-೧ * ೧೨-೧೧೦
ಪತ್ರರೇಖೆ-ಎಲೆಯ ಹಾಗಿರುವ ಚಿತ್ರ ೪-೬೭ ಪಂಡಿತಿಕ್ಕ-ಪಾಂಡಿತ್ಯ ೪-೯೪ ವ ಪತ್ತಯಿ-ಹದಿನಾರು ೧೦-೫೯ ಪಡಿ-ಬಾಗಿಲು ೫-೧೫
ಪಸು - ಅಂಟಿಸು ೫-೫೯ ಪಡಿಗ-ಪೀಕದಾನಿ, ಅಡಿಕೆಯೆಲೆ
ಪತ್ತು-ಅಂಟು೩-೧೩, ೧೩-೬೩, ೧೦೮ ಹಾಕಿಕೊಂಡು ಉಗುಳುವುದಕ್ಕೆ ಪತ್ತುವಿಡು-ತಪ್ಪಿಹೋಗು, ಬೇರೆಯಾಗು ಇಟ್ಟಿರುವ ಪಾತ್ರೆ ೪-೪೩ವ
೩-೩೩ವ, ೫-೧೯ ವ ಪಡಿಗಚ್ಚು-ನಿತ್ಯಾಹಾರದ ತಟ್ಟೆ? ೧೧-೯೪ವ ಪಂದರ್-ಚಪ್ಪರ ೧೦-೭೨, ೧೨-೧೮೪ ಪಡಿಚಂದ-ಪ್ರತಿಸ್ಪಂದ, ಪ್ರತಿಕೃತಿ ಸಮಾನ ಪಂದಲೆ-ಹಸಿಯ ತಲೆ ೧೦-೧೧೬ ವ ೧೨-೪೦
ಪಂದಳಿರ್ -ಹಸಿರಾದ ಚಿಗುರು ೫-೩೨ ಪಡಿಯಲಿ-ಪ್ರತೀಹಾರ, ಬಾಗಿಲು
ಪದ-ಸ್ಥಾನ ೧-೧೪ ಕಾಯುವವನು ೨-೪೬ ವ
ಹೆಜ್ಜೆ ಅಡಿ ೧-೧೨೬ ಪಡಿವಡೆ-ಪ್ರತಿಸೈನ್ಯ ೧-೧೯
(ಪದಗೆಂಪು-೧೦-೭೦ ವ ಪಡುವ-ಪಶ್ಚಿಮ ೧೦-೨೫, ೧೧-೨೦
ಪದವಟ್ಟು ೭-೮೭) ಪಡೆಪು-ಇಷ್ಟಾರ್ಥ ೭-೯೩
ಪದವೆಂಕ-ಹದವಾದ ಉಷ್ಣತೆ ೫-೨೭ ಪಡೆಮಾತು-ಸುದ್ದಿ ಸಮಾಚಾರ ೫-೧೯ ವ, ಪದ್ಮಜ-ಬ್ರಹ್ಮ೪-೭೫ ೩-೩೧ವ, ೪-೩೨ ವ, ೫೬
ಪದರಾಗ-ಒಂದು ಜಾತಿಯ ಕೆಂಪುರತ್ನ ಪಡೆವಳ-ಪಡೆಯಪಾಲಕ ೧೦-೩೪ ವ |
- ೭-೨೫ವ . ಪಣ್ಣಪಣ್ಣನೆ-ಮೆಲ್ಲ ಮೆಲ್ಲಗೆ ೧೦-೫೦ ವ ಪದ್ಮಾಸನ-ಬ್ರಹ್ಮ೫-೨೦ ಪಣಮುಡಿ-ಜೂಜಿನಲ್ಲಿ ಒತ್ತೆ, ಸೋಲು
ಪಂಧಿವೇಂಟೆ-ಹಂದಿಯ ಬೇಟೆ ೫-೪೫ ೫-೪೩ವ
ಪದಿರ ಪಟ್-ವಿವಿಧ ವಾದ್ಯ ೯-೧೦೪ ವ ಪಣವ-ಒಂದು ವಾದ್ಯ ೧೧-೩೩ವ |
ಪಂದ-ಹಡಿ ೨-೮೨ ವ ೬-೫೯ ವ ಪಣ್ಯಾಂಗನಾ-ವೇಶ್ಯ, ಸೂಳೆ ೩-೫೫ವ
ಪದ-ಸಂತೋಷಪಡು ೪-೨೧, ೧೦೦ವ ಪಣಿಗಟ್ಟು-ತಲೆಯಪಾಗು ೧೦-೭೧
ಪದಪು-ಇಷ್ಟಾರ್ಥ ೯-೨೮ ಪಣಿಗೆ-ಬಾಚಣಿಗೆ ೧೨-೧೫೫
ಪನಪನಪನಿ-ಪನಪನ ಎಂದು ತೊಟ್ಟಿಡು ಪಣ್ಣಿಗೆ-ಅಲಂಕಾರ ೯-೧೦೦
- ೧೦-೬೩ ವ ಪಣ್ಣಿಡು-ಸಿದ್ಧಪಡಿಸು ೩-೧೨
ಪನ್ನಗ-ಹಾವು ೫-೫೪ ಪಣ್ಣು-ಸಿದ್ಧಮಾಡು ೭-೪೮ ವ
ಪನ್ನಗರ್-ನಾಗರು ೫-೮೮ವ ಪತಂಗ-ಸೂರ್ಯ ೩-೭೧ ವ, ೧೨-೮೮ | ಪನ್ನತ-ಶೂರ, ವೀರ ೬-೨೬
ವ ಈಚಲಹುಳು, ದೀಪದ ಹುಳು (ಪನ್ನತನಂ ೧೨-೨೦೫) ೩-೩೩ವ, ೧೧-೩೯ವ
(ಪನ್ನತಿಕೆ ೫-೮೮ ವ) ಪತಿ-ಬಾಣ ೧೦-೮೭, ೧೧-೩೦ ಪನಿತ್ತು-ಹಸಿದು ತೊಟ್ಟಿಕ್ಕಿ ೮-೬೭ ಪತ್ತಳೆ-ಪತ್ರಿಕಾ (ಸಂ) ಓಲೆ, ಪ , ಕಾಗದ ಪರ್ಛಾಸಿರ-ಇಪ್ಪತ್ತುಸಾವಿರ ೧೩-೪೪ವ
ಪರ್ಪರಿಕೆ-ಕರ್ಕಶತನ, ದಿಟ್ಟತನ ೮-೫೮
Page #768
--------------------------------------------------------------------------
________________
ಶಬ್ದಕೋಶ
೭೬೩ ಪಂಬಲ್-ಹಂಬಲು ೯-೮೫, ೧೩-೧೭ ಪರಿಚ್ಛೇದ-ನಿಷ್ಕರ್ಷೆ, ನಿಶ್ಚಯ ೨-೨೪ ವ, ಪರಕಲಿಸು-ವ್ಯಾಪಿಸು ೧-೧೩೧ ವ, ೫-೫ ೧೦-೪೪ ವ, ೧೨-೧೦೮ ವ, ಪರ್ಯಾಣ-ಜೀನು, ತಡಿ ೧೦-೫೧ವ
೧೩-೩೦ ವ ಪಯಿಂಛಾಸಿರ-ಹತ್ತುಸಾವಿರ ೧೧-೪೦ವ ಪರಿಜೆ-ದೇಹ, ಮೈ ಆಕಾರ ? ೩-೭೭ ಪರಂಕಲಿಸು-ವಿಸ್ತಾರವಾಗಿ ಹರಡು : ಪರಿಣತ-ಸಮರ್ಥ ಪಂಡಿತ ೧-೨೨, ೧೦-೭೩
- ೧-೮೭ವ ಪರಕೆ-ಹರಕೆ ೧-೧೨೨ವ, ೬-೩೩ ವ & ಪರಿಣತಿ-ಪಾಂಡಿತ್ಯ ೨-೫೯ ವ ೩-೧ ಪರಚಕ್ರ-ಶತ್ರುಸಮೂಹ ೯-೫೨ ವ | ಪರಿಣ-ಬಿಕ್ಕಟ್ಟಾದ ೨-೩೯ ವ ಪರಡು-ಕಾಲಿನ ಹರಡು ೧೧-೧೩೬ ಪರಿಧಾನ-ಉಡುವ ಬಟ್ಟೆ ೧-೬೯ ವ ಪರಂತಪ-ಶತ್ರುಗಳನ್ನು ತಾಪಪಡಿಸುವ - ೧೧-೧೨೯ ವ ೬-೭೭ವ
ಪಳೆಪಡು-ಕತ್ತರಿಸಿಹೋಗು, ತೀರಿಹೋಗು, ಪರದ-ವ್ಯಾಪಾರಿ, ವರ್ತಕ ೩-೨೨
ನಾಶವಾಗು ೨-೧೯ ವ, ೪-೫೬, ಪರಪುಷ್ಟ-ಕೋಗಿಲೆ ೨-೧೩
೯-೪೫, ೧೨-೧೧೨ ಪರಪು-ಹರಡು ೬-೨೦
ಪರಿಭವ-ಅವಮಾನ ೧-೭೬ ವ, ೨-೬೪ವ ಪರಭಾಗ-ಶೋಭಾತಿಶಯ ೧೦-೩೧ ಪರಿಭ್ರಮ-ಸುತ್ತಾಡುವಿಕೆ ೫-೫೩ ವ ಪರಭ್ಯತ-ಕೋಗಿಲೆ ೫-೯೦
ಪಜೆಮಡೆ-ಸಡಗರ ೩-೪೨ ಪರಮಾಣುಮಾರ್ಗ-ಆಕಾಶ ೭-೩೩ ಪರಿಮಿಳತ್ -ಕೂಡಿದ ೮-೩೭ ವ ಪರಮಾತ್ಮ-ಶ್ರೇಷ್ಠ ೧-೩೧
ಪರಿಯಾಣ-ಹರಿವಾಣ, ತಟ್ಟೆ ೭-೨೮ ಪರಶು-ಕೊಡಲಿ ೧-೧೦೪, ೨-೩೪ ವ
ಪರಿವಾದ-ಅಪವಾದ ೧೨-೫೮ ಪರಂತ-ಎಲ್ಲೆ ೪-೧೧ |
ಪರಿವಿಡಿ-ಕ್ರಮ, ಪರಂಪರೆ ೭-೧೬ ಪರಾಗ-ಹೂವಿನ ಧೂಳಿ ೫-೬
ಪರಿವೃಢ-ಒಡೆಯ, ಪ್ರಭು ೧೨-೫೨ ಪರಾಭವ-ಅವಮಾನ ೩-೬೬ ಅಪಜಯ ೯-೫೬
ಪರಿವೇಷ್ಟಿತ-ಸುತ್ತಲ್ಪಟ್ಟ ೧-೧೪೧ ಪರಿ-ಹರಿ, ಪ್ರವಹಿಸು ೬-೩೦ ವ
ಪರಿಷೇಕ-ಸುತ್ತುಕಟ್ಟುವಿಕೆ ೧೩-೮ ವ ಪಟೆ-ಹರಿ, ಕಿತ್ತುಹೋಗು ೧-೪೭,
ಪರಿಸಂಖ್ಯೆ-ಆವೃತ್ತಿ ೨-೪೫ ಕತ್ತರಿಸು ೬-೬೪
ಪರಿಸರ-ಸಮೀಪ ೧-೪೨ ವ, ೪-೧೧೦ವ ಪರಿಕರ-ಸಂಬಂಧಪಟ್ಟ ಸಾಮಗ್ರಿ ೩-೨೫ವ ಪರಿಸ್ಟಲನ-ಹೊಡೆತ, ತಾಗುವಿಕೆ ೧೩-೫೧ವ -ಸಮೀಪ ೪-೪೯ವ
ಪರೀತ-ಸುತ್ತುವರಿಯಲ್ಪಟ್ಟ ೧-೨೬,೬-೨ ಸಮೂಹ ೫-೧೦ ವ
ಪರುಸವೇದಿ-ಸ್ಪರ್ಶವೇದಿ, ಮುಟ್ಟಿದ್ದನ್ನೆಲ್ಲ ಪರಿಕಲಿತ-ಕೂಡಿದ ೧-೬೮ ವ, ೧೩-೮ವ ಚಿನ್ನವನ್ನಾಗಿ ಮಾಡುವ ಶಿಲೆ ೧-೨೮ ಪರಿಕಲಿಸು-ಒಟ್ಟುಗೂಡಿಸು - ” - ಪರೆ-ಹರಡು, ವಿಸ್ತರಿಸು ೧೨-೭ ಪರಿಕಾಲ್-ಹರಿಯುವ ಕಾಲುವೆ ೧-೫೨ ಪತಿ-ಹರೆ, ದಮಟೆ ೧೪೭, ೩-೩೧ ವ ಪರಿಗೊಳ್-ಓಡು ೫-೪೧
ಪರ್ಚು-ರಹಸ್ಯವಾಗಿ ಹೇಳು, ಗುಟ್ಟಾಗಿ ಪರಿಘ-ಲಾಳವಿಂಡಿಗೆ ೧-೫೧, ೩-೩೦,೫೬ ಹೇಳು ೧೩-೭೦ ವ ಪರಿಚ್ಯುತ-ಬಿದ್ದ ೧೪-೩
49
Page #769
--------------------------------------------------------------------------
________________
೭೬೪
ಪಂಪಭಾರತಂ ಪರ್ವು-ಹಬ್ಬು ೧೨-೨೦
ಪಳಂಚು-ತಾಗು, ತಗಲು, ಸಂಘಟಿಸು ಪಲಗೆ-ಆಟ ೬-೭೧ ವ, ೭೨, ೭-೪ . ೫-೯ವ, ೬೪, ೧-೭೦, ೪-೯೦,
ಫಲಕ (ಸಂ) ಹಲಗೆ ೧೧-೩೮ .. ೧೦-೨೩, ೪-೨೮, ೮೦, ೧೦೬ ಪಲಗೆವಾಡಿ-ಗುರಾಣಿಯ ಸೇನೆ ೧೦-೮೦ವ ಪಳಬದ್ಧ-ಫಲಹೊಂದಿರುವಿಕೆ ೯-೯೫ ವ ಪಲರ್ಮೆ-ಅನೇಕಾವರ್ತಿ ೬-೧೧
ಪಟಿಯಿಗೆ-ಧ್ವಜ, ಬಾವುಟ ೨-೬೬, . ಪಲ್ಲಟಿಸು-ವ್ಯತ್ಯಾಸಮಾಡು ೧೪-೩೦ವ : ೧೦-೫೨ ವ | ಪಲ್ಲವ-ಚಿಗುರು ೧-೧೨೫
ಪಲಿಯಿಸು-ಪ್ರಲಾಪಿಸು ೨-೨೨ವ - ಸೆರಗು ೨-೧೪
ಪಲಿವಾಡ-ಹಳ್ಳಿಯ ಹಳ್ಳಿ ೧೩-೨೪ ಪಲ್ಲಂ ಸುಲಿ-ಹಲ್ಲನ್ನು ತೊಳೆ ೨-೧೩ ಪರಿವಿಗೆ-ಧ್ವಜ, ಬಾವುಟ ೩-೪೦, ಪಲ್ಲಿಲ್ಲ-ಹಲ್ಲಿಲ್ಲದ ೪-೧೦೦
೮-೧೦೯ (ಪಲ್ಲಿಲಿವಾಯ್-ಹಲ್ಲಿಲ್ಲದ ಬಾಯಿ)
ಪಲಿವೆ-ಹಳೆಯ ಕುಲ, ಸಂಬಂಧ ಪಲುಂಬು-ಹಲುಬು ೨-೨೭
೯-೯೫ವ ಪಿರೆ-ಹಲ್ಲನ್ನು ಮಸೆದು ಶಬ್ದಮಾಡು
ಪಳಾಳ-ನಿಷ್ಪಲ ೫-೧೮, ೬-೨೪ - ೭-೭೦, ೧೦-೧೦೫, ೧೨-೨೦೨
ಪಟೆ-ವಸ್ತ್ರ, ಬಟ್ಟೆ ೩-೪೦ ವ ಪವಡಿಸು-ಮಲಗು ೯-೧೧
೪-೪೩ವ ದೂಷಣೆ, ನಿಂದೆ ೪-೯೧ ವ, ಪವಣ್ -ಪ್ರಮಾಣ, ಅಳತೆ, ಮಿತಿ,
- ೬-೪೬, ೫೯ ೭-೨೧, ೯-೧೦೩, ೧೦-೩೦
ಪಟೆಗಾಳೆಗ-ನಿಂದಾಸ್ಪದವಾದ ಹುಚ್ಚು ಪಸದನ-ಪ್ರಸಾಧನ (ಸಂ) ಅಲಂಕಾರ,
ಯುದ್ಧ ೫-೧೨ ವ ಒಡವೆ ೧-೧೩೭, ೩-೪೫
ಪಯಿ-ಕಾಡು ೨-೨೨ `ಪಸರ-ಪ್ರಸರ(ಸಂ) ಪ್ರಚುರತೆ ೧-೭೫ವ,
ಪಳುಕು - ಸ್ಪಟಿಕ ೩-೭೪ ವ -ಅಂಗಡಿ ೩-೨೨
ಪಲವಗೆ-ದುರ್ಭಾವ ೫-೧೦೧ ವ -ಹರಡುವಿಕೆ ೫-೨೫
- ೮-೬೩ವ ಉಪಯೋಗವಿಲ್ಲದ ಆಶೆ
೧೨-೧೨೯ ಪಸವು-ಬಯಕೆ, ಆಶೆ ೧೨-೨೧೯
ಪಲವಟಿ-ಅರಣ್ಯಮಾರ್ಗ ೫-೧೦೧ ವ, -ಪ್ರಸಭ (ಸಂ) ರಭಸ, ಕ್ಷಾಮ ೮-೫೧
೮-೧೦೫ ಪಸಿಗೆವರಿ-ಒಂದು ಬಗೆಯಾಗಿ ಹರಿದಾಡು
ಪ್ರಕೀರ್ಣ-ವ್ಯಾಪ್ತವಾದ, ತುಂಬಿದ ೧-೫೮ ೧೨-೧೫೮ ವ ಪಸುಗೆ-ಹಂಚಿಕೆ ೧೦-೭೭, ೧೨-೫೯
ಪ್ರಗಣಿತ-ಕೂಡಿದ ೪-೭೩ ವ, ೧೭೬ ವ
ಪ್ರಗಲ್ಬ-ಪ್ರೌಢ ೨-೬೯ ಪಸುಂಬೆ-ಹಸುಬೆಯ ಚೀಲ ೮-೭೭
ಪ್ರಗೀತ-ಹೊಗಳಲ್ಪಟ್ಟ ೨-೬೭ ಪಸುರ್ವಂದರ್-ಹಸಿರುವಾಣಿಯ ಚಪ್ಪರ
ಪ್ರಘಟ್ಟ-ಸಮಾರಂಭ ೭-೬೫ ವ - ೧-೭೮
ಪ್ರಚಳಿತ-ನಡೆಯುತ್ತಿರುವ ೯-೧೦೪ ವ (ಪಸುರ್ವಂದಲ್ ೧-೧೦೭)
ಪ್ರಣತ-ನಮಸ್ಕರಿಸುವ ೧೨-೯೮ ಪಸೆ-ಹಸೆ ೧-೭೮
ಪ್ರಣಧಿ-ಚಾರ ೮-೮೨ ವ : ಪಳಂಚಲೆ-ತಗಲು ೨-೪
ಪ್ರಣಯ-ಪ್ರೀತಿ ೧-೭೯
Page #770
--------------------------------------------------------------------------
________________
ಶಬ್ದಕೋಶ
೭೬೫ ಪ್ರಣಾದ-ಶಬ್ದ ೪-೫
ಪ್ರಹಸ್ತ-ಬಿಟ್ಟ ಕೈ ೧೩-೯೨ ವ ಪ್ರಣತ-ಪ್ರಸಿದ್ಧವಾದ ೧೪-೬೨ ಪ್ಲವ-(ತೇಲುವಿಕೆ) ಪ್ರವಾಹ ೧-೫೧ ವ, ಪ್ರತತಿ-ಸಮೀಪ ೩-೪೧, ೯-೩೯
೧೪-೨೭ ಪ್ರತಾನ-ಸಮೂಹ ೫-೩೫
ಪಾಗುಡ-ಪಾವುಡ, ಉಡುಗರೆಯ ವಸ್ತ ಪ್ರತ್ಯಾಲೀಢ - ಬಿಲ್ದಾರರು ಕುಳಿತುಕೊಳ್ಳುವ
೯-೯೫ವ ಒಂದು ಭಂಗಿ, ಒಂದು ತೆರನಾದ ಪಾಂಗು-ರೀತಿ ೩-೨೯ವ ಆಸನ ೧೩-೩೮ ವ |
ಪಾಟನ-ಸೀಳುವುದು ೧೩-೫೧ ಪ್ರತಿಪತ್ತಿ-ಗೌರವ ೪-೫ವ ೪-೨೬ವ ಪಾಟಿತ-೧-೧೦೪ ಸತ್ಕಾರ ೪-೬೯ ವ
ಪಾಟಿಸು-ಕೀಳು ೯-೬೭ ಪ್ರತಿಪಾಲಿಸು-ದೊರೆತನಮಾಡು ೪-೧೦ ಪಾಡಿ-ಬೀಡು ೧೦-೧೨೫ ಪ್ರತಿಷೇಧ-ತಡೆ, ನಿವಾರಣೆ ೧೩-೭೦ವ ಪಾಡುಗಾದು-ಕಟ್ಟುಪಾಡನ್ನು ಪ್ರತಿಹಾರ-ಬಾಗಿಲು ಕಾಯುವವನು
ಉಳಿಸಿಕೊಂಡು ೧೧-೧೮ - ೯-೩೦
ಪಾಡುಗೆಯ್ದು-ಸಮಮಾಡಿಕೊಂಡು ಪ್ರದಾರಿತ-ಸೀಳಲ್ಪಟ್ಟ ೧-೫೧ವ
೧೩-೯೬ ಪ್ರಪಂಚ-ವಿಸ್ತಾರ ೫-೨೩ವ, ೬-೧ವ
ಪಾಂಡುರ-ಬಿಳುಪು ೧-೫೮ ವ, ೧೧೦ ಪ್ರಭವ-ಉತ್ಪತ್ತಿಸ್ಥಾನ ೧-೯ ,
ಪಾಣ್ಣ-ವ್ಯಭಿಚಾರಿ ೧-೧೪೮ ವ ಪ್ರಭೂತ-ಹೆಚ್ಚಾದ ೧೪-೩೦
ಪಾಣಿ-ಕೈ ೨-೫೭ ಪ್ರಮದಾ-ಹೆಂಗುಸು ೯-೨೮ವ
ಪಾತ್ರ-ನಟಿ ೨-೫೯ ವ ಪ್ರಯೋಗಾಂತರ-ಬೇರೆಬೇರೆ
ಪಾತು-ರಕ್ಷಿಸಲಿ ೪-೨೭ ಉಪಾಯಗಳು ೭-೨೩
ಪಾರ್-ನೋಡು, ನಿರೀಕ್ಷಿಸು ೭-೩೦ ಪ್ರವರ-ಶ್ರೇಷ್ಠ ೩-೮೦
- ೮-೯೮ ಪ್ರವಾಸ-ಪರದೇಶಗಮನ ೩-೧೦ವ
ಪಾರ-ಕೊನೆ ೧-೪೫ ಪ್ರವಿಭಗ್ನ ಚೆನ್ನಾಗಿ ಮುರಿಯಲ್ಪಟ್ಟ ೩-೧೦ |
ಪಾರಗ-ಪ್ರವೀಣ ೨-೪೬
ಪಾರದರ-ಹಾದರ ೪-೮೧ ಪಾದರ ಪ್ರಶಮಿತ-ಆರಿದ, ಶಾಂತವಾದ
ಪಾರಾವತ-ಪಾರಿವಾಳ ೪-೪೯ ವ ೧೧-೧೧೭ವ
ಪಾಳೆ-ಹಾರಿ ೧೨-೪೦ ಪ್ರಶಸ್ತಿ-ಪ್ರಾಶಸ್ಯ; ಏಳೆ ೧-೪೯
ಪಾರಿವ-ಪಾರಿವಾಳ ೬-೩೮, ೯-೧೦೩ ಪ್ರಸರ-ವಿಸ್ತಾರ ೧-೬೫ವ, ೭-೨೨
ಪಾಚುಂಬಳೆ-ಚಕ್ರ ೧೦-೯೫ ಪ್ರಸಾಧಿತ-ಅಲಂಕರಿಸಲ್ಪಟ್ಟ ೧೩-೯೨ವ
ಪಾಅತೆಯಂಬು-ಬಾಣವಿಶೇಷ ೧೧-೭ ವ.. ಪ್ರಸ್ತಾವ ಸಂದರ್ಭ ೧-೧೦೪ವ
೧೨-೨೧ ವ ಪ್ರಸ್ಥ-ಪ್ರದೇಶ ೫-೨೨ವ
ಪಾಮ್-ಮಿಹೋಗು ೧೧-೩೧ ವ ಪ್ರಸ್ಥಾನ-ಪ್ರಯಾಣ ೯-೯೭, ೧೪-೧೧
೧೦-೪ ಪ್ರಸೂತಿ-ಹೆರಿಗೆ ೩-೨೦ವ
ಪಾಲೆ-ಕಿವಿಯಹಾಲೆ, ಹತ್ತಕಡಕವನ್ನು ಪ್ರಸೂನ-ಹೂವು ೧-೨೭ವ, ೫೮
ಧರಿಸುವ ಭಾಗ ೨-೩೯ ವ ಪ್ರಹರಣ-ಆಯುಧ ೧೨-೧೨೧೦ವ ಪಾವಕ-ಅಗ್ನಿ ೫-೭೮
Page #771
--------------------------------------------------------------------------
________________
೭೬೬
ಪಂಪಭಾರತಂ ಪಾರ್ವ-ಬ್ರಾಹ್ಮಣ ೧-೧೦೫ ವ, ೪-೧೦ : ಪಿಡಿಗು-ಸಿಡಿ, ಕಂಪಿಸು ೬-೫೮ವ, ಪಾರ್ವಂತಿ ೩-೨೭ ವ
೧೧-೧೫೨, ೧೨-೩೨ ಪಾವುಗೆ-ಪಾದುಕಾ (ಸಂ) ಪಾದರಕ್ಷೆ ಪಿಡಿಯೆಚ್ಚು-ಪಡಿಯಚ್ಚು ೨-೮೬ ವ ೧೦-೧೦೮ ವ
ಪಿಂಡು-ಗುಂಪು ೧೦-೫೧ ವ ಪಾರ್ಷ್ಠ-ಹಿಮ್ಮಡಿ ೨-೩೯ ವ
ಪಿಣಿಲ್-ಹರಳು, ಸುರುಳಿ ೭-೧೦, ಪಾಸಗೆ, ಪಾಸಂಗೆ-ಪಗಡೆಯ ದಾಳ
೮-೧೦೧ - ೭-೭೧ ವ, ೭೩
ಪಿಂಬಡು-ಪಿಂಬಿಡು-ಹಿಂದೆ, ತರುವಾಯ ಪಾಸಣೆ-ಹಾಸುಗಲು ೩-೧೮, ೬-೩೦ವ | ೧೩-೨೮, ೪-೪೭ ಪಾಸು-ಹಾಸಿಗೆ ೫-೬, ೭-೨೯
ಪಿಣಿತಿನಿ-ಪಿಶಾಚಿ ೯-೪೩ ಪಾಸುಂಪೊಕ್ಕುಂ-ಹಾಸುಹೊಕ್ಕು ೯-೩೪ ಪಿಶಂಗ-ಹೊಂಬಣ್ಣ ೫-೫೮ ವ ಪಾಂಸು-ಧೂಳಿ ೯-೩೨
ಪಿಶಿತ-ಮಾಂಸ ೧೩-೬೧ ಪಾಂಸುಳ-ಧೂಳಿಯಿಂದ ಕೂಡಿದ ೭-೨೨
ಪೀಟೆ-ಹಿಂಡು ೧೨-೪೮ ವ ಪಾಳಿ-ಧ್ವಜ ೩-೪೭ ವ
ಪಿಳ್ಳೆ-ಮಗು ೬-೨ ಪಾಣಿ-ಧರ್ಮ, ಸಂಪ್ರದಾಯ ೭-೨೧ವ ಪೀಠಮರ್ದಕ-ನಾಯಕನ ಶೃಂಗಾರ ಸ್ನೇಹಿತ ಕ್ರಮ, ನ್ಯಾಯ ೫-೪೧, ೧೧-೧೪
೪-೭೯ವ ಪಾಳಿಕೇತನ ೧೨-೨೭
ಪೀನ-ದಪ್ಪವಾಗಿರುವ ೩-೫೪, ೬-೪೦ ಪಾಳೆ-ತುಂಡು ೧೨-೧೦೮
ಪುಂಖ-ಗರಿಯಿಂದ ಕೂಡಿದ ಬಾಣದ
ಹಿಂಭಾಗ ೧೨-೭೪ ವ ಪ್ರಾಗ-ಪ್ರೌಢಿಮೆ ೩-೩೩
ಪುಂಖಾನುಪುಂಖ-ಒಂದರ ಹಿಂದೆ ಒಂದು ಪ್ರಾಗೇಯ-ಸ್ತೋತ್ರಾರ್ಹವಾದ ೯-೯೭
ಬರುವುದು ೨-೫೨ವ, ೫-೯೬ವ ಪ್ರಾಜ್ಯ-ಹೆಚ್ಚಾದ ೩-೭೪ ವ
ಪುಗಲ್ -ಪ್ರವೇಶಿಸಕೂಡದು ೨-೧೩, ಪಾದುರ್ಭಾವ-ಹುಟ್ಟುವಿಕೆ ೮-೩೦
೫-೩೫ ಪ್ರಾರಂಭ-ಉದ್ಯಮ, ಕಾರ್ಯ ೧-೭೪
ಪುಂಗವ-(ಗೂಳಿ) ಶ್ರೇಷ್ಠ ೬-೭ ಪ್ರಾಂಶು-ಉನ್ನತ, ಎತ್ತರ ೧-೬೮
ಪುಗಿಲ್ -ಪ್ರವೇಶ ೨-೧೨, ೫-೩೫ ಪ್ರಾಸಾದ-ಉಪ್ಪರಿಗೆ ೧-೭೩ ವ..
ಪುಚ್ಚವಣ-ಪರೀಕ್ಷೆ ೧-೯೦ ಪ್ರಾಯ-ಹಿಮ ೧೪-೭೩
ಪುಚ್ಚಲೆ-ನಾಶವಾಗು ೧೨-೧೬೧ ಪಿಕ್ಕು-ಹುಡುಕು ೨-೮೩
ಪುಂಜ-ಗುಂಪು ೧-೫೮ ಪಿಂಗೋಳ್ -ಹಿಂಭಾಗ ೯-೯೫ ವ
ಪುಂಜಿ-ಉಂಡೆ ೩-೮೧. ಪಿಂಛ-ನವಿಲುಗರಿ ೯-೧೦೨, ೧೩-೯೮
ಪುಂಜಿಸು-ಉಂಡೆಮಾಡು ೬-೯೧ ವ ಪಿಂಜರಿತ-ಹೊಂಬಣ್ಣದ೮-೩೮
ಪುಟ-ಭಾಗ ೧-೧೩೯ವ ೩-೪ ವ ಪಿಟ್ಟೆ-ಪೆಟ್ಟೆ, ಹೆಂಟೆ ೩-೯
ಪುಟ್ಟಿ ಜೇನುಗೂಡು ೧೦-೪೦ ಪಿಂಡಚ್ಛೇದ-ಪಿಂಡ ಹಾಕುವುದು
ಹುಟ್ಟಿದವನು ೯-೫೮ * ನಿಂತುಹೋಗುವಿಕೆ ೩-೨೫ ವ ಪುಟ್ಟಿಗೆ-ಸೀರೆ ೩-೪೫, ೪-೧೭ ಪಿಡಿ-ಹೆಣ್ಣಾನೆ ೧೨-೮೮ವ
ಪುಡಪುಡನೆ-ಶಬ್ದಮಾಡಿ ೫-೯೨. ಪಿಡಿಕುತ್ತು-ಹಿಡಿಯುಳ್ಳ ಚುಚ್ಚು ಆಯುಧ ಪುಡಿ-ಮಣ್ಣು, ಧೂಳು ೪-೧೨ ವ ೧೨-೬೦ ವ
೬-೭೧ವ |
Page #772
--------------------------------------------------------------------------
________________
1
ಶಬ್ದಕೋಶ
೭೬೭: ಪುಣ್ಯಪಾಠಕ-ಮಂಗಳವನ್ನು ಹಾಡುವವನು ಪುಟ್ಟು-ಸುಟ್ಟುಹೋಗು ೫-೯೨ ೧೨-೧೦೬
ಪೂಣ್-ಪ್ರತಿಜ್ಞೆಮಾಡು ೩-೫೨ ಪುತ್ತೂರ್ತು-ಗಾಯವು ಹೆಚ್ಚಾಗಿ
(ಪೂಣಿಗರ್-೧-೧೦೯ . ೧೨-೭೨ವ
ಪೂಣಿಪೊಕ್ಕು ೪-೩೮ ವ) ಪುದಿ-ತುಂಬಿ ೧-೬೭ವ, ೧೨-೩೫, ಪೂರ್ಣಕುಂಭ-ತುಂಬಿದ ಕೊಡ ೧-೧೨೦ ೬೭, ೧೫೬, ೨೧೭, ೧೩-೭೩, ಪೂಣ್ ೭-೧೫
ಪೂಣ್ಮರ್ತು ? ೧೨-೨೨ ವ ಪುದುವು-ಜೊತೆ, ಸೇರುವಿಕೆ ೫-೫೬, ಪೂಂದಲ್-ಪುಷ್ಪವೃಷ್ಟಿ ೯-೯೬ ೮-೪೬
ಪೂರ-ಪ್ರವಾಹ ೨-೨೮ ಪುದುಂಗೊಳಿಸು-ಸೇರಿಸು ೧-೨ - ಪೂಮ್-ಹೂಳು ೧೩-೪೪ ಪುನ್ನಾಗ-ಸುರಹೊನ್ನೆ ೪-೧೭
ವೃಷಕ್ಕ-ಬಾಣ ೧೧-೮ ಪುಯ್ಯಲ್-ಗೋಳು, ಕೂಗಿಕೊಳ್ಳುವಿಕೆ ಪೃಷದ್ಗಳ-ತುಂತುರು ನೀರು ೯-೪೮ * - ೩-೪ವ, ೬-೨
ಪಂಕುಳಿಗೊಳ್ -ಹುಚ್ಚುಹಿಡಿ ೧೦-೧೧೩ ಪುರಂದರ-ಇಂದ್ರ ೫-೧೦೧ವ
ಪಂಕುಳಿಗೊಂಡ-ಹುಚ್ಚುಹಿಡಿದ ಪುರಂದ್ರಿ-ಪತಿವ್ರತೆ ೩-೨ವ ೪೪ವ - ೧೧-೪೧ ವ. ಪುರಸ್ಸರ-ಮುಂದಿಟ್ಟುಕೊಳ್ಳುವಿಕೆ ೧-೩೬ . ಪೆರ್ಗಡ-ಹೆಗ್ಗಡೆ ೧-೭೦ ವ, ೨-೯೨ ವ ಪುರಾಣ-ಹಳೆಯದು ೨-೫೧
ಪೆರ್ಚು-ಹೆಚ್ಚು (ಕತ್ತರಿಸು) ೧-೪೩ ಹೆಚ್ಚಿಕೆ ಪುರಿಗಣೆ-ದಿವ್ಯಾಸ್ತ ? ೯-೭೮
*, ಪರಾಕ್ರಮ ಪ್ರದರ್ಶನ ೨-೩೯ ಪುರುಡು-ಹುರುಡು, ಸ್ಪರ್ಧೆ ೬-೭೬, ಪೆಟ್ಟ-ಹೆಂಟೆ ೩-೯ - ೭-೯೪ ವ ,
ಪೆಟ್ಟುವರ್ಚು-ಗರ್ವಿಸು ೪-೬೮ ಪುರುಷ-ಪೌರುಷ ೬-೬೭ ವ . ಪೆಟ್ಟುವೇಳ್ -ಪರಾಕ್ರಮವನ್ನು ತೋರಿಸು ಪುರುಷಕಾರ-ಪುರುಷಪ್ರಯತ್ನ ೭-೭೪,
೪-೬೩ * ೧೨-೪೬
ಪಡೆಗೆಯ್ದಟ್ಟು-ಹಿಂಗಟ್ಟುಮುರಿ ೬-೫೩ ಪುರುಷೋತ್ತಮ-ಕೃಷ್ಣ ೧-೮೮
ಪೆಡಸಾರ್-ಹಿಂದಕ್ಕೆ ಹೋಗು ೧೩-೫೬ ಪುರುಳಿ-ಗಿಳಿ ೩-೩೭ ಪುರೋಡಾಶ-ಯಾಗದಲ್ಲಿ
ಪೆಣ್ಮುರುಳಿ-ಹೆಣ್ಣು ಗಿಳಿ ೩-೩೭ ಉಪಯೋಗಿಸುವ ಹುರಿದ ಹಿಟ್ಟು ಪೆಣೆ-ಹೆಣೆದುಕೊ ೮-೨೧ ೬-೩೮
ಪೆಂಪು-ಹೆಚ್ಚಿಕೆ, ಮೇಲ್ಮ೧-೨೪ ಪುರ್ವು-ಹುಬ್ಬು ೧-೧೦೮, ೨-೩೯ ಪೆರ್ಮರುಳ್-ದೊಡ್ಡ ಪಿಶಾಚಿ, ಹೆಚ್ಚಾದ ಪುಷ್ಪದರ್ಶನ-ಮೈನೆರೆಯುವುದು ೧-೧೧೭ ಹುಚ್ಚು ೬-೩೩ ಪುಳಕ-ರೋಮಾಂಚ ೫-೧೦ವ
ಪೆಂಗಿಡು-ಹಿಮ್ಮೆಟ್ಟು ೩-೭೦ ಪುಳಿಂಚು-ಗುಳ್ಳೆ ೮-೬೭
ಪಂಪೆನಿಗಂ-ಹಿಂದೆ ಹಿಂದೆ ೨-೨೪ :: ಪುಳಿಂದಿ-ಬೇಡಿತಿ ೮-೧೪
ಪೆ-ಚಂದ್ರ ೧೦-೫೭ ಪುಳಿನ-ಮಳಲ ದಿಣ್ಣೆ ೧-೧೪೨ವ, ಪರ್ವ-ದೊಡ್ಡ ವಾದ್ಯ ೪-೮೨ . ೪-೧೧೦ವ
ಪೆರ್ವಿಡಿ-ದೊಡ್ಡ ಹೆಣ್ಣಾನೆ ೯-೧೦೦ ಪಟೆಲ್-ಪುಲಿನ, ಮಳಲುದಿಣೆ ೩-೧೯ ಫೆಸಟಿಗೆ-ಹೆಸರುಕಾಳಿನ ಮೊಳಕೆ ೨-೩೯ ಪುಟ-ಹುಳು-ತುಚ್ಛ ನೀಚ ೫-೭೫
Page #773
--------------------------------------------------------------------------
________________
೭೬೮
ಪಂಪಭಾರತಂ ಪೆಳಟು-ಭಯಪಡು ೯-೮೨, ೧೧-೧೦, ಪೊರ್ದು-ಸೇರು, ಹೊಂದು ೪-೪೬ - ೧೪೯
ಪೊನಲ್ -ಪ್ರವಾಹ ೧-೯೨, ೭-೨೫ ಪೇಟಿವ-ಹೆಳವ ೧೨-೨೨೦
ಪೊನ್ನಾಯೋಗ-ಚಿನ್ನದಿಂದ ಮಾಡಿದ ಪೆಳ್ಳಳಿಸು-ಭಯಪಡು, ನಡುಗು
ಉಪಕರಣ ೯-೧೦೨ ೪-೬೯ವ, ೫-೬೩, ೮-೯೩ ಪೊಂಪುಟೆ ೩-೨೫, ೯-೪, ೯-೮೬, ಪೇಡಿ-ಹೇಡಿ ೧೧-೧೪, ೪೫
೧೨-೩೮, ೧೨-೨೨೦, ಪೇರೊಟ್ಟೆ-ದೊಡ್ಡ ಒಂಟೆ ೧೦-೪
೧೪-೩೦ವ ಪೇಸು-ಜುಗುಪ್ಪೆಪಡು ೯-೯೮
ಪೊಟ್ಟರೆ-ಚಿನ್ನದ ಜಿಂಕೆ ೪-೧೯ ಪೇಳಿಗೆ-ಪೇಟಿಕಾ, ಪೆಟ್ಟಿಗೆ ೮-೫೩ ಪೊಯಲ್ -ಹೊಡೆತ ೮-೭೦ವ ಪ್ರೇತ-ಶರೀರವನ್ನು ಬಿಟ್ಟ ಜೀವ ೨-೨೮ ಪೊರಜಿ-ಹುರಜಿ, ದಪ್ಪವಾದ ಹಗ್ಗ ಪೊಂಕ-ಗರ್ವ, ಉತ್ಸಾಹ ೧-೮೦,
೧೨-೬೦ವ | - ೧೦-೧೧೯, ೧೧-೬೬
ಪೊಲಿಮಾಜು-ಓಡಿಹೋಗು ೫-೧೮, ಪೊಂಗಲೆಗೆ-? ೩-೪೦, ೫-೩೩, ೮-೬೯ ಪೊಗರ್ -ಕಾಂತಿ ೮-೫೯
ಪೊರಸು-ರಕ್ಷಣೋಪಾಯ ೮-೮೫ ಪೊಗಮ್ -ಹೊಗಳು ೧-೧೪೮
ಪೊರೆ-ಪದರ ೬-೨೦ ವ ಪೊಂಗು-ಉಬ್ಬು, ೨-೮೦, ೫-೩೩ ಕೂಡು, ೨-೯೫, ೫-೫ ಪೊಚ್ಚು-ಪ್ರಸಿದ್ಧರಾದ ೫-೨೧, ೨೫ - ಆತ್ಮರಕ್ಷಣೆ ೭-೩೫ ಪೊಚ್ಚಣಿಸು-೩-೫೮, ೮-೯೬
ಪೊರೆವೊರೆ-ಹತ್ತಿರಹತ್ತಿರ ೫-೫ ಪೊಚ್ಚಲು-ಹೆಮ್ಮೆ ೧೩-೭೭
ಪೊವೊರಕ-ಭಾರವನ್ನು ವಹಿಸುವುದು ಪೊಟ್ಟಳಿಸು-ಗರ್ವಿಸು ೧-೧೨, ೧೦-೧೫ವ ೫-೫ ಪೊಡರ್ಪು- ಉಬ್ಬುವಿಕೆ, ಉತ್ಸಾಹ ೩-೫೮, ಪೊರೆವೊರೆ-ಪದರಪದರ ೫-೫, ೩೩, - ೧೦-೩೯ವ
- ೬-೬೫ ಪೊಡರ್-ಸ್ಟುರಿಸು, ಗರ್ವಿಸು, ಉಬ್ಬು ಪೊಲ್ಲಕೆಯ್-ಕೆಟ್ಟುದನ್ನು ಮಾಡು ೧೦-೬೩ ೨-೩೯ವ
ಪೊಲ್ಲದು-ಅಯೋಗ್ಯವಾದುದು, ಕೆಟ್ಟುದು ಪೊಡವಡು-ನಮಸ್ಕರಿಸು ೫-೩೭
೨-೮೦, ೧೦-೬೩ ಪೊಲ್ಲಮೆ ಪೊಡೆಸಂಡು-ಪುಟಚೆಂಟು ೩-೩೦ವ
೯-೨೬ ಪೊಣರ್ಚು-ಕೂಡಿಸು, ಜೊತೆಯಾಗಿ ಕಾದು ಪೊಲಸು-ಹೊಲಸು ೧೧-೫೧ ೧-೭೩ವ
ಪೊಲೆಯ-ಹೊಲೆಯ, ನೀಚ ೧೨-೯೨ ಪೊಣರ್-ಸೇರು, ಕೂಡು ೧೨-೧೮೪, ಪೊಸೆ-ಕಿವುಚು, ಹೊಸಕು ೧-೧೨೯ ೧೩-೫
ಕಡಗೋಲಿನಿಂದ ಕಡೆ ೧೩-೧೦೧ ಪೊಣ್ಮು-ಹೊಮ್ಮು೬-೩೮ |
ಪೊರ್-ಹೊತ್ತು ೧-೪೮ ಪೊತ್ತಗೆ-ಪುಸ್ತಕ ೧೧-೪೬
ಪೋರ್ಕುಳಿ-ಹೋರಾಡುವ ೪-೯೭ವ ಪೊತ್ತು-ಉರಿ, ಬೆಂಕಿಹಸು ೧೧-೧೭ ಪೋಡುಂಗಾರ-ಕತ್ತರಿಸುವವನು ಪೊದಲ್ -ಹೊರಹೊಮ್ಮು, ಪ್ರಕಟವಾಗು - ೧೨-೧೬೭ ವ |
೧-೪, ೫-೧೦, ೮೬, ೧-೪೫, ಪೋತಕ-ಮರಿ ೧-೧೪೨ ೩-೩೮, ೮-೮೬ವ |
ಪೋಟ್ಟು-ಸೀಳಿ, ಹೋಳುಮಾಡಿ ೭-೧೨ ಪೊದ ೧೨-೫೩
ಪೌವ್ವನೆ ಪಾಯಿ-ಇದ್ದಕ್ಕಿದ್ದ ಹಾಗೆ ಹಾರು
೧೩-೭೩ ವ
Page #774
--------------------------------------------------------------------------
________________
೭೬೯
ಶಬ್ದಕೋಶ ಪ್ರೋದ್ಯತ್-ಮೇಲಕ್ಕೆದ್ದಿರುವ ೧-೬೮ ಬಡಿಗೊಳ್-ದೊಣ್ಣೆಯ ಏಟನ್ನು ತಿನ್ನು ಪ್ರೋದ್ಧಾಮ-ಶ್ರೇಷ್ಠವಾಗಿರುವ ೧-೬೧
೧೦-೧೦೩ ಪ್ರೋಚ್ಛೇದ-ಒಡೆಯುವುದು ೪-೨೨ ಬಂಡು-ಮಕರಂದ ೧೧-೮೧ ಪೌರಂದರ-ಇಂದ್ರಸಂಬಂಧವಾದ ೨-೪೬ವ ಬಣ್ಣವುರ-ವರ್ಣಪೂರ, ಬಣ್ಣಸರ ೭-೨೪ ಪೌಷ್ಟಿಕ-ಇಷ್ಟಪ್ರಾಪ್ತಿಗಾಗಿ ಮಾಡುವ ಕರ್ಮ ಬಣಂಬೆ-ಮೆದೆ, ರಾಶಿ ೧೦-೮೨ ೧-೧೩೩ವ
ಬತ್ತು-ಒಣಗು ೧೯-೯೩ ಪೌಲೋಮೀಪತಿ-ಇಂದ್ರ ೪-೯೫ವ
ಬಂದ ಕೋಡು-ಹುಟ್ಟಿದ ಕೊಂಬೆ ೧-೧೫
ಬಂದ ಮಾವು-ಕಾಯಿಬಿಟ್ಟಿರುವ ಮಾವು ಬಗಸೆರೆ-ಬೊಗಸೆ ೧೨-೧೫೩
೫-೩೪, ೧೪-೧೩ ಬಗಿ-ತೋಡು ೧೨-೧೮೯
ಬದ್ದವಣ-ವರ್ಧಮಾನ (ಸಂ) ಮಂಗಳ ಬಗೆ-ಇಷ್ಟ, ಮನಸ್ಸು, ೧-೮, ೩-೪,
ವಾದ್ಯ ೧-೩೩ವ, ೩-೩೧ ವ ೪-೬೫, ೮೧ವ ೭-೬೨, ೬-೭೦,
೨-೧೨ವ೯-೫, ೮-೮೨ ವ ೮-೧೦೨
ಬರ್ದರ್-ಬಾಳಿದವರು, ಪುಣ್ಯವಂತರು - ಬಗ್ಗಿಸು-(ಕೋಗಿಲೆ ಅಥವಾ ಗಿಣಿಯ)
೯-೬೩ ಧ್ವನಿಮಾಡು. ೧-೮, ೧೫೫
ಬಂದಿಕಾಯಿ-ಸೆರೆ ಹಿಡಿಯುವವನು ೬-೭೨ವ ಗದರಿಸು, ಗರ್ಜಿಸು೧-೧೩೦ವ ೪-೭ ವ.
ಬರ್ದುಕು ಸಚೇತನವಾಗಿ
ಬರ್ದುಂಕು | ಹೊರಡು, ೮-೬೪, ಬಚ್ಚ-ವೈಶ್ಯ ೧-೫೮ ಬಂಚಿಸು-ವಂಚಿಸು ೫-೬೪; ೫-೧೮
೪-೩೭ವ ಬಂಜಿಸು-ದಾಟು ೧೩-೫೩ ವ
ಬದ್ದೆ-ಪ್ರೌಢಿಮೆ ೫-೪೫ ಬಟ್ಟನೆ-ಥಟ್ಟನೆ ೬-೯
ಬರ್ದೆ-ಪ್ರೌಢ ೨-೩೯ವ ಬಟ್ಟಿತು-ದುಂಡಾದ ೧-೧೦೮
ಬದ್ದೆದಲ್ಲಣಂ-ಶೂರರನ್ನು ಬಟ್ಟು-ವೃತ್ತ, ದುಂಡಾದ
ತಲ್ಲಣಗೊಳಿಸುವವನು ೩-೮೨ ಬಟ್ಟದೊಡೆ ೬-೯
ಬದ್ಧವಜ್ಜೆ-ಪ್ರೌಢಿಮೆಯಿಂದ ಕೂಡಿದ ಹೆಜ್ಜೆ ಬಟ್ಟಿನಂಬು ೧೨-೨೦೬
೫-೪೫ | ತು-ಒಂದು ಬಗೆಯ ಚೆಂಡಿನಾಟ ಬಂಧುರ-ಸುಂದರ, ಮನೋಹರ ೨-೩೦
೪-೧೮ವ ಬಟ್ಟೆ-ವರ್ತ-ದಾರಿ ೭-೨೧
ಬನ್ನ-ಭಗ್ನ ೧-೮೧, ೭-೩೦ ಬನ್ನವಿನ್ನ, ಬಟ್ಟೆಯರ್-ಮಾರ್ಗಸ್ಥರು ೩-೨೨
- ೬-೫೩ ಬಂಡ-ದ್ರವ್ಯ ವಸ್ತು ೬-೩೩
ಬಂಬಲ್-ಗುಂಪು, ಸಮೂಹ ೧-೧೩೭, ಬಂಡಣ-ಯುದ್ಧ ೧-೭೬
೩-೭ವ, ೬೮ ಬಡಪ-ಪ್ರವಾಹ ೧೨-೮೦
ಬಲಿ-ಕ್ಷಾಮ ೮-೫೧ ಬಡವಡು-ಬಡವಾಗು, ಕೃಶವಾಗು ಬರ-ವರ (ಸಂ) ೧-೮೫ವ ೫-೧೫ವ
ಬರಿ-ಪಕ್ಕೆ ೧-೧೦೦, ೧೧-೫೭ವ ಬಡವು-ಬಡವಾಗಿರುವುದು ೨-೧೦; ಗ ಬಯಿಬಂ-ಬರಿದಾದವನು, ತಿರುಳಿಲ್ಲದವನು ೩-೩೫
೮-೭೦ವ ಸಹಾಯವಿಲ್ಲದವನು ಬಡಿ-ದೊಣ್ಣೆ ೭-೧೯
೧೨-೨೦೭
Page #775
--------------------------------------------------------------------------
________________
೭೭೦
ಪಂಪಭಾರತಂ ಬಲ್ಬಣಿ-ಬಲವಾದ ತೊಡಕುಳ್ಳವನು ೭-೯೫ ಬಳ್ಳುಗೆಡೆ-ಆರ್ಭಟಿಸು ೧೦-೮೦ವ ಬಲ್ಲಡಿಗ-ಬಹಳ ದಪ್ಪನಾಗಿರುವವನು, ಬ್ರಹ್ಮಸೂತ್ರ-ಹಾರ, ೧೨-೧೦೮ವ ಶೂರ ೧೦-೧೦೪
ಬಾರ್ಚು-ತಲೆಬಾಚು, ೧೨-೧೫೫ ಬಲ್ಲಣಿ-ದೊಡ್ಡ ಕಾಲಾಳಿನ ಸೈನ್ಯ ೮-೯೩ ಬಾಡ-ವಾಟ(ಸಂ)ಗ್ರಾಮ, ಹಳ್ಳಿ ೨-೫೩, ಬಲ್ವರಿಕೆ-ಬಲವಾಗಿ ನುಗ್ಗುವಿಕೆ ೧-೨೫
೯-೪೩, ೮೮ ಬಲಾಕ-ಬೆಳ್ಳಕ್ಕಿ ೮-೩೮
ಬಾಣಧಿ-ಬತ್ತಳಿಕೆ ೮-೧೫ವ ಬಲ್ಲಾಳನ-ಪರಾಕ್ರಮ ೫-೨೨, ೬-೬೭ ಬಾಣಸು-ಅಡಿಗೆ ೫-೪೭ವ, ೮-೫೩ವ ಬಲಿಂದಮ-ಕೃಷ್ಣ ೫-೪೮
ಬಾಣಾಸನ-ಬಿಲ್ಲು ೨-೫೭ ಬಲಿಬಂಧನ-ಕೃಷ್ಣ ೯-೧೦ವ
ಬಾರ್ತೆ-ಪ್ರಯೋಜನ ೧-೧೧೮ ಬಿಡಿ-ಬಲಿತ ಕಾಯಿ ೫-೫ವ
ಬಾದು-ವಾದ (ಸಂ) ಮಾತು ೬-೧೩ ಬಲ್ಲಿದಿರೆ-ಶಕ್ತರಾಗಿರುವಿರಾ ೬-೩೩ವ
ಬಾನಂಗುಡೆಗೆ-ಆಕಾಶ ೧೨-೧೫೮ವ ಬವರ-ಯುದ್ದ ೯-೫೬
ಬಾಯಲೆ-ಬಾಯಿಸೋಲು ೨-೨೭, ೬೦ ಬವಳಿವರಿ-ಒಂದು ರೀತಿಯ ಸುತ್ತಾಟ , - ೧೨-೧೫೮
ಬಾಯಾಡು-ಪ್ರತಿಜ್ಞೆಮಾಡು ೧೩-೧೦೬ವ ಬಸವಶ (ಸಂ) ೫-೪
ಬಾಯ್ಕಳಿಸು-ಆಜ್ಞಾಧೀನರನ್ನಾಗಿ ಮಾಡು ಬಸನ-ವ್ಯಸನ (ಸಂ) ಅತ್ಯಾಸಕ್ತಿ ೪-೯೨
೬-೩೨ವ | ಬಸವ -ಶಕ್ತಿಗುಂದು ೧೦-೮೦ವ ಬಾಯ್ದೆ-ತುಟಿ ೧-೧೦೮ ಬಸಿಮ್ -ಹೊಟ್ಟೆ ೧-೧೦೮
ಬಾರ್-ಚಾವಟಿ ೮-೫೪ವ “ಬಳಮರ್ದುಕಾಲಿ-ತುಬಾಕಿಯ ಮದ್ದನ್ನು ಬಾರಿ-ಸರದಿ ೩-೨೫ವ ಮಾಡುವವನು ೪-೮೭ವ
ಬಾರಿಸು-ನಿವಾರಿಸು, ತಪ್ಪಿಸು, ತಡ ಬಳವಳ-ಹೆಚ್ಚಾಗಿ ೬-೪೬
೨-೭೪ವ, ೭-೮ವ ಬಳ್ಳಳ-ಹೆಚ್ಚಾಗಿ ೭-೨೯ವ, ೧೧-೧೪
ಬಾಸಣಿಗೆ-ಮುಚ್ಚಳ ೫-೫ವ ಬಳ್ವಳಿಕೆ-(ಹೆಚ್ಚಿಕೆ) ಬೀಸುವಿಕೆ ೧೧-೭೧
ಬಾಸಣಿಸು-ಮುಚ್ಚು ೧-೬೨ ಬಳ್ಳ-ಧಾನ್ಯವನ್ನು ಅಳೆಯುವ ಸಾಧನ
ಬಾಸಿಗ-ತಲೆಗೆ ಧರಿಸುವ ಹೂಮಾಲೆ ೧೨-೧೭೫ ಬಳ್ಳವಳ್ಳಿ-ಹಬ್ಬಿಕೊಂಡಿರುವಿಕೆ ೧-೫೮
೨-೯೫, ೪-೮೧ ಬಣ್ಣವಾಸಿಗ ಬಳಾಕಾ-ಬೆಳ್ಳಕ್ಕಿ ೧೩-೭೨
ಬಾಸುಮ್-ಬಾಸುಂಡೆ ೧೪-೫ ಬಲೆ-ದೂತ, ಕರೆಯುವವನು ೨-೫೨ವ,
ಬಾಸೆ-ರೋಮರಾಜಿ ೧-೧೪೧ವ ೪-೭೨ ೬-೨೨, ದಾರಿ ೨-೯೫ವ,
ಭಾಷಾ (ಸಂ) ಮಾತು ೪-೯೫ವ ೫-೪೬ವ ವಂಶ ೧೨-೩೯
ಬಾಹಾ-ತೋಳು ೧-೬೮ ಬಳೆವಣಿ-ಹೆಣ್ಣುಮಕ್ಕಳಿಗೆ ಕೊಡುವ ಉಚಿತ ಬಾಹಿಗೆ-ಹೊರಭಾಗ ೭-೨೦ವ ವಸ್ತುಗಳು ೯-೯೫ವ
ಬಾಯ್ -ಜೀವನ ೯-೪೫ ಬಳಿಹರ-ಕೃಷ್ಣ ೯-೧೫
ಬಾಳ್ -ಕತ್ತಿ ೫-೫೩ವ, ೮-೫೪ವ ಬಳ್ಳಿಗಾವಣ-ಬಳ್ಳಿಯ ಚಪ್ಪರ ೨-೯೭ ವ
ಬಾಳನೀರ್ -ಕತ್ತಿಯ ಕಾಂತಿ ೫-೫೩ವ ಬಳ್ಳಿಮಾಡ-ಲತಾಗೃಹ ೧-೫೮
ಬಾಳಬಟ್ಟು- ? ೧೦-೫೭ ವ ಬಳ್ಳು-ಹೆದರು, ಬಾಗು, ನಡುಗು ೧೧-೫೦ ಬಳ -ನರಿ ೧೩-೫೬ವ
ಬಾಳವಣ್ಣ-ಕತ್ತಿಯ ಬಣ್ಣ (ನೀಲಿ) ೨-೪ ಬಾಟ್ಟಲೆ-ಜೀವ ೯-೧೦
Page #776
--------------------------------------------------------------------------
________________
229
ಬೀಡು-ಬೀಡಾರ, ಮನೆ ವಾಸಸ್ಥಾನ ೭-೪ವ, ೩-೩ ಬಿಡುವಿಕೆ
(ತೋಡುಂ ಬೀಡುಂ) ೧೧-೧೯ವ, ೧೨-೧೬೭ವ
ಬೀಣೆ-ವೀಣಾ (ಸಂ) ೭-೮೯ ಬೀತು-ಹಣ್ಣುಬಿಡುವುದು ನಿಂತುಹೋಗಿ
0-88
ಬೀಱಲ್-ಮರದ ಬೀಳಲು ೧-೩೫ ಬೀಂದುವು-ಬಿದ್ದವು ೧೧-೬೬ ಬುದ್ಭುದ-ನೀರಗುಳ್ಳೆ ೧-೫೯ ಬುಂಭುಕ-ಕುಚ್ಚು, ಗೊಂಚಲು, ೩-೪೦ವ
೧೦-೭೬
ಬೂತಾಟ- ಕಪಟದ ಆಟ ೪-೯೦ವ ಬೂತು-ಭೂತ(ಸಂ) ಪ್ರಾಣಿ ೩-೪ ವ, ೮-೧ವ, ೧೨-೫೨ವ ಆವೇಶ (ಬೂತುಗೊಳ) ೯-೫೩
ಬೃಂಹಿತ-ಆನೆಯ ಕೂಗು ೨-೧೫, ೩-೩೮ ಬೆಕ್ಕಸ-ಆಶ್ಚರ್ಯ ೮-೪೫ವ
ಬೆಂಕೆ-ಶಾಖ, ತಾಪ ೪-೬೮, ೫-೮೭ ಬೆಕ್ಕೆ-ಪರಿತಾಪ ೪-೧೦೩
ಬೆರ್ಚಿಸು-ಹೆದರಿಸು ೧-೧೧೬ವ ಬೆರ್ಚು ೭-೨೯ವ
ಬೆಚ್ಚುನೀರ್-ಹೆದರಿಕೆ ಹೋಗುವುದಕ್ಕಾಗಿ ಮಕ್ಕಳ ಮುಖಕ್ಕೆ ಎರಚುವ ನೀರು
0-42
ಬೆಜ್ಜ-ವೈದ್ಯ (ಸಂ) ೧೧-೨ವ ಬೆಟ್ಟನೆ-ಕಠಿಣವಾಗಿ ೧೧-೧೨೭ ಬೆಟ್ಟಿತ್ತು-೪-೬೦
ಬೆಟ್ಟು- (ಸುತ್ತಿಗೆ ಮೊದಲಾದವುಗಳಿಂದ) ಹೊಡೆ ೧-೧೦೪ವ
ಬೆಡಂಗು-ಬೆಡಗು, ಸೊಗಸು ೬-೯
ಬೆಂಡುಮಗುಳ್-ಅಸ್ತವ್ಯಸ್ತವಾಗು ೫-೬೫ ಬೆಂಡುಮರಲ್-ಬಂಡಾಗು,
ಜಡತ್ವಹೊಂದು ೩-೪ವ
ಬೆದಕು-ಹುಡುಕು ೧೩-೮೦
ಬೆದಲು-ಬೆದರಿಸು ೭-೮೦ ಬೆನ್ನೀರ್-ಬಿಸಿನೀರು ೮-೩೪
ಪಂಪಭಾರತಂ
ಬೆರಗು-ಭಯ ೧೧-೧೦೩ವ ಸೆರಗಂ ಬೆರಗಂ) ೧೦-೨೬ವ ಬೆಳಗು-ದಾಕ್ಷಿಣ್ಯ ೨-೫೦ ಬೆಸ-ಕೆಲಸ, ಕರ್ತವ್ಯ, ಅಪ್ಪಣೆ ೧-೭೮,
೩-೪೮
ಬೆಸೆ-ಗರ್ವಿಸು ೪-೯೪ವ
ಬೆಳರ್ವಾಯ್ ತುಟಿ ೪-೮೯, ೫-೯, ೧೨, ೭-೮೧೯ ಬೆಳ್ಳು-ಭಯಪಡು ೬-೨೮, ೧೨-೧೦೦, ೧೭೯ ಬೆಳಳ್-ದಡ್ಡರು, ಮೂಢರು ೧-೧೨ (ಬೆಳ್ಳ, ೯-೫೮, ಬೆಳ್ಳ ೪-೭೬, ೯-೪೬ ಬೆಳ್ಳಾಳ್ ೧೧-೧೦೩ವ, ಬೆಳ್ಳಿಗ ೫-೪೫) ಬೆಳ್ಳಂಗೆಡೆ-ಪ್ರವಾಹದಂತೆ ಬೀಳು ೪-೪೨
೧೨-೧೭ವ
ಬೆಳ್ಳೂಡಿಸು-ಬಿಳಿಯ ಪಾರಿವಾಳ ೭-೨೦ ಬೇಗ-ವೇಗ, ಹೊತ್ತು ೧೩-೮ವ ಬೇಗೆ ಉರಿ, ಜ್ವಾಲೆ ೮-೯೮, ೧೦೫,
೪-೭೩
ಬೇಟ-ವಿರಹ, ಅನುರಾಗ, ಪ್ರೀತಿ ೧-೫೪,
೪-೭೩
ಬೇವಸ-ಆಯಾಸ, ವ್ಯಥೆ ೭-೪೬, ೮-೩೫ ಬೇಳ್-ಹೋಮಮಾಡು ೬-೧೭ವ ೨೬ವ ಬೇಳೆ-ಹೋಮ ೩೩-೭ವ ಬೇನಿತು-ಬೇಕಾದಷ್ಟು ೨-೧೬ ಬೇಳುನುಡಿ-ಮರುಳುಮಾತು ೬-೨೪ ಭೈತ್ರ-ವಹಿತ್ರ (ಸಂ) ಹಡಗು ೧೨-೭೮ ಬೊಜಂಗ-ಭುಜಗ (ಸಂ) ವಿಟ ೪-೮೬ ಬೊಂದರಿನೆ-ಮತ್ತೆ, ತಿಣಸಿ, ಲೋಡು
೪೪-೩೧, ೯-೨೮ವ, ೧೪-೨೪ ಬೊಬ್ಬುಳಿಕೆ-ನೀರಿನ ಗುಳ್ಳೆ ೧೩-೮೨ ಬೋದನ-(ನೀರು ಮೊದಲಾದುವನ್ನು
ತುಂಬುವ ತೊಟ್ಟಿ) ೧-೧೭ ಬೋದನವೆಂಬ ತನ್ನ ರಾಜಧಾನಿ ಬೋನ-ಅನ್ನ ೩-೭೯ವ, ೭-೨೮,
೯-೨೮
ಬೋನಪೇಟೆಗೆ-ಅಡಿಗೆಯ ಸಾಮಾನಿನ ಪೆಟ್ಟಿಗೆ ೮-೫೩ವ
Page #777
--------------------------------------------------------------------------
________________
ಶಬ್ದಕೋಶ
ಬಾಳಾಗಮ-ಶಸ್ತ್ರ ಶಾಸ್ತ್ರ ೧೦-೮೩
ಬಾಳೆ-ಒಂದು ಜಾತಿಯ ಮೀನು -೧-೬೮ ವ, ೫-೬೧
ಬಾ-ಬಾಳುವಿಕೆ ೧-೮೨ ಮನೆವಾ ೧೨-೮೯ ಪ್ರಯೋಜನ ೪-೯೮, ೫-೭೪ ವ ಕೆಲಸ ೧೨-೮೯
ಬಿಗುರ್ತು-ಭಯಪಡಿಸಿ ೬-೨೩ ಭಯಪಟ್ಟು ೮-೧೦೮ ಬಿಚ್ಚತ-ವಿಸ್ತ್ರತ(ಸಂ) ವಿಸ್ತಾರ ೫-೩೧ ಬಿಚ್ಚತಿಕೆ ೮-೭೫ ಬಿಚ್ಚುಸು-ವಿಸ್ತಾರಮಾಡು ೧೦-೧೧೪, ೧-೧೧ ಧ್ವನಿಮಾಡು ೫-೧೧ ಹುರಿದುಂಬಿಸು ೧೩-೯೫
-
ಬಿಜ್ಜ-ವಿಜಯಾದಿತ್ಯನೆಂಬ ರಾಜ ೧೧-೬೧ ಬಿಟ್ಟಿ-ವಿಟ್ಟಿ, ಮೂವಿಟ್ಟಿ-ಉಚಿತ ಸೇವೆ
2-20
ಬಿಟ್ಟಿಕ್ಕು-ತೋರಿಬಿಡು ೧೦-೬೨ ಬಿಟ್ಟುಳಿ- ? ೫-೪೭ ವ ಬಿಡು-ಬಿಚ್ಚು ೮-೧೦೧
ಬಿಡುವೆಣ್-ದಾಸಿಯರು ೧೪-೫೫
ಬಿಡುವೊನ್ನು-ಬಿಡಿಯ ನಾಣ್ಯಗಳು
೧೦-೩೮
ಬಿಣ್ಣಿತ್ತು-ಭಾರವಾದುದು ೧-೧೪೪ ಬಿಣ್ಣು-ಭಾರ ೧-೬೪ವ, ೨೪೬
ಬಿದ್ದೊ ಭಾರವಾದ ಹೊರೆ ೧-೮ ಬಿತ್ತರಿಗೆ-ಸಿಂಹಾಸನ ೧೪-೨೪, ೫೫ ಬಿತ್ತು-ಬೀಜ ೨-೪೫ ಬಿತ್ತೆಗ-ಶೂರ ೧೦-೭೩
ಬಿಂದ-ವೃಂದ (ಸಂ) 'ರಾಶಿ ೧೩-೪೧ ವ ಬಿದಿ-ವಿಧಿ (ಸಂ) ದೈವ ೧೨-೧೮೨ 'ಬಿದಿರ್-ಕೊಡಹು, ಚೆದುರಿಸು ೩-೭ ವ ಬಿರ್ದಿನಂ-ಅತಿಥಿ ೪-೪೪
ಬಿದು-ಆನೆಯ ಕುಂಭಸ್ಥಳ ೧೦-೧೦೩,
೧೦೯
ಬಿಂದು-ಆನೆಯ ಹಣೆಯ ಮೇಲಿನ ಮಚ್ಚೆ ೧೪-೨೦ವ
ಬಿರ್ದು-ಔತಣ, ಆತಿಥ್ಯ ೩-೩೪ವ
೬-೩೩ ವ
ಬಿನದ-ವಿನೋದ(ಸಂ) ೪೨-೯ ಬಿನ್ನಣ-ವಿಜ್ಞಾನ, ಚಮತ್ಕಾರ, ಚಾತುರ್ಯ
೮-೫೪
ಬಿನ್ನನೆ-(ಮೌನದಿಂದ) ವ್ಯಥೆಯಿಂದ ಕೂಡಿ ೨-೨ವ, ೬-೨೫, ೭-೫ವ ಬಿನ್ನಬಿನ್ನನೆ ೧-೧೧೪ವ
ಬಿನ್ನಾಣ ೮-೫೩ ವ
ಬಿಂಬ-ಮಂಡಲ, ಗುಂಡಾಗಿರುವುದು
೫-೬೨ವ ತೊಂಡೆಯ ಹಣ್ಣು, ಬಿಂಬಾಧರ ೨-೩೯ವ
ಬಿಯ-ವ್ಯಯ (ಸಂ) ವೆಚ್ಚ ೨-೬೬ ದಾನ ೧-೪೮, ೨-೯೮, ೯-೯
ಬಿರಯಿ-ವಿರಹಿ(ಸಂ) ಅಗಲಿದವನು
80-6
220
ಬಿತು-ಭಯಪಟ್ಟು ೬-೫೬, ೧೧-೩೩ ಬಿಲ್-ಬಿಲ್ಲಾಳು ೩-೭೦ ಬಿಲ್ವಿದ್ದೆ-ಧನುರ್ವಿದ್ಯೆ ೨-೪೩ವ ಬಿಲ್ಲುಂಬೆಗುಂ-ಅತ್ಯಾಶ್ಚರ್ಯ ೩-೬೦ವ
೪-೨ವ ಬಿಲ್ಲೆಯ-ಧನುರ್ವಿದ್ಯಾಗುರು, ದ್ರೋಣ
೧೨-೩೧
ಬಿಲ್ಲೊವಜ-ಬಿಲ್ಲಿನ ಉಪಾಧ್ಯಾಯ, ದ್ರೋಣ ೧೨-೩, ಬಿಸವಂದ-ಆಶ್ಚರ್ಯ ೬-೩, ೯-೩೩
ಬಿಸಿದು-ತಾಪಕರವಾದುದು ೪-೬೦ ಬಿಸುಗೆ-ಸೇರಿಕೆ ೧೦-೫೦ ಅಂಬಾರಿ
೧೦-೫೧ ವ, ೧೦೬, ೧೨-೮ ಬಿಸುಟ್ಟು-ಬಿಸುಟು, ಎಸೆದು ೭-೩೮ವ ಬಿಸುಪು-ತಾಪ, ಉಷ್ಣ, ೮-೯ ಬಿಸುವಳಿ-ಒಟ್ಟಾಗುವಿಕೆ ೫-೪೬ ಬಿ-ಬಿಕ್ಕೆ-ಒಂದು ಮರದ ಕಾಯಿ
೧೨-೧೭೮
`ಬೀಗು-ಉಬ್ಬು, ಗರ್ವಪಡು ೧-೧೨,
8-€
Page #778
--------------------------------------------------------------------------
________________
೭೭೪
ಪಂಪಭಾರತಂ ಮಡಲ್-ಕೊಂಬೆ ೫-೧೨ ಹಬ್ಬಿ ಮನ್ಯು-ವ್ಯಥೆ ೩-೧೦ ವ, ೭-೫೯ವ * ಹೂಬಿಡು ೫-೫
೧೩-೮೮ವ ಮಂತಣ-ಮಂತ್ರಾಲೋಚನೆ ೬-೬೭ವ ಮನೆವಾಚಿ-ಗೃಹಕೃತ್ಯವಿಚಾರ ೭-೧೬ ವ, ಮತಂಗಜ-ಆನೆ ೪-೭೪ 'ವ
೯-೧೧ವ ಮತ್ತರ್ -ಭೂಮಿಯ ಅಳತೆ ೨-೩೦ ವ ಮಮ್ಮ-ಮೊಮ್ಮಗ ೧೧-೧೮ ಮತ್ತವಾರಣ-ಮನೆಯ ಮುಂದಿನ ಕೈಸಾಲೆ ಮಮ್ಮಲ-ವಿಶೇಷವಾಗಿ ೫-೧೦ವ.. ಮಂತ್ರ-ಆಲೋಚನೆ ೧-೮೪ವ
ಮರ್ಮಜ್ಞ-ರಹಸ್ಯವನ್ನು ತಿಳಿದವನು ೨-೯೦ ಮಂತ್ರಾವಾಸ - ರಾಜ ಕಾರ್ಯವನ್ನು ಮಯೂಖ-ಕಾಂತಿ, ಕಿರಣ, ಜ್ವಾಲೆ ವಿಚಾರಮಾಡುವ ಗುಪ್ತ ಗೃಹ
- ೧-೧೮, ೮-೧೦ . - ೮-೫೯ .
ಮರಕೆಂದು-ಮೈಮರೆತು ನಿದ್ದೆಮಾಡು ೩-೪ ಮಂಥನ-ಕಡೆಯುವುದು ೩-೭
ವ, ೧೧ ಮದ-ಮದೋದಕ ೨-೧೫
ಮರಗೆರಸೆ-ಮರಕೋತಿ ಆಟ ೨-೩೦ ವ ಮದವಟ್ಟೆ-ಕೆನ್ನೆಯ ಮೇಲಿನ ರೇಖೆ , ಮರಪಟಲ -? ೧೨-೬೦ವ ೩-೭೬
ಮರಲ್ಲು-ಹಿಂತಿರುಗಿ ೧-೧೧೧ ಮದವಳಿಗೆ-ಮದುವಣಗಿತ್ತಿ ೩-೪೬ವ
ಮರವಡು-ಸ್ತಬನಾಗು ೪-೫೪ ಮಂದಾಕಿನಿ-ಆಕಾಶಗಂಗೆ ೯-೭೧ವ
ಮುಲುಂದು, ಮಸುಂದು, ಮದಿರಾ-ಮದ್ಯ ೨-೪೬ ವ, ೭-೭೨
ಮಣಿಕಂದು-ಮೈಮರೆತು ನಿದ್ದೆಮಾಡು ಮದಿಲ್-ಗೋಡೆ ೪-೧೦
೭-೪ ವ ೧೬ ವ, ೧೮ ವ ಮಧು-ವಸಂತ ೫-೩೧.
ಮರಸರಿಗೆ-ದೊಡ್ಡಚೊಂಬು ? ೪-೯೦ವ ಮದ್ಯ ೪-೮೭ ವ
೩-೧೫ ವ ಮಧುಕರ-ತುಂಬಿ ೫-೧೦ ವ .
ಮಸೂಂದು-ಮೈಮರೆತು ೨-೧೯ ಮಧುಪ-ತುಂಬಿ ೧-೭೦ ಹೆಂಡ
ಮರೀಚಿ-ಕಿರಣ, ಕಾಂತಿ ೨-೩೯ ವ ಕುಡಿಯುವವನು ೧-೭ .
ಮಲಕಣಿಸು-ಮರಳಿಬರು ೨-೨೯ವ ಮಧುಪರ್ಕ-ಅತಿಥಿಗಳಿಗೆ ಕೊಡಬೇಕಾದ
ಮದುವಕ್ಕ-ಪ್ರತಿಪಕ್ಷ ೧-೧೪೦ ವ - ಜೇನು ಮೊದಲಾದ ಪದಾರ್ಥಗಳ .
ಮರುಳ -ಮೂಢ, ಹುಚ್ಚು ೮-೪೭, ಮಿಶ್ರಣ ೨-೫೨
೧೧-೧೨೪ ಮರುಳಿ ೧-೯೩ . ಮನಕತ-ಮನಸ್ತಾಪ ೯-೩೮ ಮನಕ್ಷತ-ಮನೋವ್ಯಥೆ ೬-೧೬,
- ದೆವ್ವ ಪಿಶಾಚಿ ೧೩-೫೪, ೫೫ - ೧೧-೧೪೪ವ
ಮರುಳು-ಮೋಹಗೊಳಿಸು ೬-೮ ಮನಂಗಾಪು-ಮನಸ್ಸಿನ ರಕ್ಷಣೆ ೨-೨೦
ಮರೆ-ಒಂದು ಜಾತಿಯ ಜಿಂಕೆ ೫-೪೮ವ ಮನದನ್ನ-ಪ್ರೀತಿಪಾತ್ರನಾದವನು ೨-೯೨ವ
ಅವ ಮದ-ಹೊರಗಿನ ಅರಿವಿಲ್ಲದ ೬-೫೬
ಮೇ ಮನದೆ ಕೊಳ್ - ಮೆಚ್ಚು ೮-೫೩ ವ ಮಲ್ಲಂತಿಕೆ-ನಡುಕಟ್ಟು ೩-೧೬ ವ... ಮನಂಬಸದ-ಸಂಶಯವಿಲ್ಲದೆ ೪-೪ ಮಲೆ-ಔದ್ಧತ್ಯ, ದಿಟ್ಟತನ ೯-೩೯ ಮನಮಿಕ್ಕು-ಉತ್ಸಾಹಶೂನ್ಯವಾಗು ೨-೩೨ ಮಲೆಪರ್ ೬-೩೨ ವ
ಮಶಕ-ಸೊಳ್ಳೆ ೫-೯೬ವ
Page #779
--------------------------------------------------------------------------
________________
೭೭೩
ಶಬ್ದಕೋಶ ಬೋರಗುದುರೆ-ಮಾಸಲು ಬಣ್ಣದ ಕುದುರೆ ಭೈರವ-ರುದ್ರ ೫-೧೦೧ವ ೧೨-೫೩ವ
ಭೋಗಿ-ಸರ್ಪ, ಸುಖಿ ೪-೧೬ ಸೂಳೆ
೯-೧೦೨
ಭ್ರಾಜಿತ-ಪ್ರಕಾಶಮಾನವಾದ ೪-೨೫ವ ಭಗವತಿ-ದೇವತೆ ೧೦-೧೬
ಭ್ರುಕುಟಿ-ಹುಬ್ಬು ೭-೬, ೧೧-೧೧೭ ಭಂಗ-ತುಂಡು, ಮುರುಕು ೧-೧೧
ಭೂ-ಹುಬ್ಬು ೧-೬೬ ಭಂಗಿ-ರೀತಿ ೫-೧೨
ಭೂಕೋಟಿ-ಹುಬ್ಬಿನ ತುದಿ ೧-೨೭ ಭಂಗುರ-ಸ್ಥಿರವಲ್ಲದ, ಕಲಕಿದ ೪-೨೫,
ಭೂಭಂಗ-ಹುಬ್ಬುಗಂಟು ೭-೮ - ೬-೨, ೧೪-೩೧.
:
ಮ ಭಂಡಾರ-(ಭಂಡಾಗಾರ) ಸಂ, ಖಜಾನೆ ಭದ್ರ-(ಮೇಲ್ಕಟ್ಟು) ಉಪ್ಪರಿಗೆ ೩-೭೪ ವ | ಮಕರ-ಮೊಸಳೆ ೩-೬೮, ೮-೯೯ ಭರಂಗೆಯ್-ಭಾರವನ್ನು ವಹಿಸು ೬-೨೮ ಮಕುಟ-ಕಿರೀಟ ೧-೧೬
ಮಖ-ಯಜ್ಞ೬-೧ವ ಭವ-ಈಶ್ವರ ೭-೨೪
ಮಂಗಳಗೀತಿ-ಮಂಗಳದ ಹಾಡು ಭಸಿತ-ಭಸ್ಮ, ವಿಭೂತಿ ೧-೨
೧೧-೫೨ ಭಾ-ಕಾಂತಿ ೧-೧೩೭
ಮಂಗಳದೊಸಗೆ-ಶುಭೋತ್ಸವ ೩-೭೮ವ ಭಾರ್ಗವ-ಧನುರ್ಧಾರಿ ೧-೬೮ವ
ಮಂಗಳಪಟಹ-ಮಂಗಳ ವಾದ್ಯ ೧೪-೧೮ ಪರಶುರಾಮ ೧-೬೮ವ ಸೂರ್ಯ, ಮಂಗಳಪಾಠಕ-ಸ್ವಸ್ತಿವಾಚನ ೧-೮೦
ಮಾಡುವವನು ೩-೭೮ವ ಭಾರತ-ಭರತವಂಶೀಯರದು ೧೦-೨೩ ಮಗ್ನ - ಮುಳುಗಿದ ೧-೪೧ ಭಾರದ್ವಾಜಂ-ದ್ರೋಣ ೨-೫೯ವ
ಮಗುಟ್ಟು-ಹಿಂತಿರುಗಿಸು ೧೩-೧೦೨ ಭಾವ-ಚಿತ್ತವಿಕಾರ ೪-೧೭ವ
ಮಗುಳು-ಮತ್ತೆ, ಪುನಃ ೫-೧೦ ಭಾವಕ-ರಸಿಕ ೪-೯೬
ಮಘವ-ಇಂದ್ರ ೧-೧೩೯ ಭಾವಿತಾತ್ಮ-ಆತ್ಮಜ್ಞಾನವುಳ್ಳವನು
ಮಂಜರಿ-ಗೊಂಚಲು ೪-೬೭ - ೧೨-೨೯
ಮಜ್ಜನ-ಸ್ನಾನ ೩-೧೮ವ ಭಾವಿಸು-ಭಾವನೆ ಮಾಡು ೪-೭೫ ವ
ಮಟ್ಟ-ಅಳತೆ, ಪ್ರಮಾಣ ೬-೭೧ವ ಭ್ರಾಂತಿಸು-ತಪ್ಪುತಿಳಿ ೧-೬೬
ಮಂಡನಾಯೋಗ-ಆನೆಯ ಮೇಲೆ ಬಿಂಡಿವಾಳ-ಒಂದು ಬಗೆಯ ಕತಿ
ಹಾಕುವ ಜೂಲು ೩-೪೮ವ, ೨-೩೪ವ
೧೦-೨೬ವ, ೧೨-೫೨ವ ಭಿತ್ತಿ-ಗೋಡೆ ೧-೨೧, ೫೧
ಮಂಡಲ-ರಾಜ್ಯ ೧-೩೩, ೫೦ ಭೀಮ-ಭಯಂಕರ ೪-೪೧.
ಮಂಡಲಾಗ್ರ-ಕತ್ತಿ ೧೦-೪೧ವ, ಭೀಷಣ-ಭಯಂಕರ ೭-೮
೧೩-೧೦೨ವ ಭುಜಂಗ-ಸರ್ಪ ೪-೧೦ವ
ಮಂಡಲಿಗೆ-ಮಂಟಪ ೩-೨, ೪೦ ಭೂಧರ-ಪರ್ವತ ೫-೨೬
ಮಡ-ಕಾಲಿನ ಹರಡು (ಗುಲ) ಮಡಕಾಲ್ ಭೂಭುಜ-ರಾಜ ೨-೪೫
೧೦-೭೧ ತೇರಿನ ಪಾರವರ ಭೂಭೌತ್-ರಾಜ ೨-೧೧೦ವ ಶೃಂಗ-ತುಂಬಿ ೧-೩
೧೦-೯೧ “ತಂ-ಅಧೀನವಾದುದು ೬-೨೬ವ
ಮಡಗೋಮ್ -ತಂಗಳನ್ನ ೧-೧೦
Page #780
--------------------------------------------------------------------------
________________
೭೭೬
- ಪಂಪಭಾರತ ಮುಕ್ಕುಗಟಗಟನೆ ತಿನ್ನು ೧೨-೫ ಮುಸುಜನ್ -ಮುತ್ತು ೧೩-೧೪೬ವ, ಮುಗ್ಗ-ಸುಂದರ ೪-೭೭
- ೫-೬೩, ೭-೩೮, ೯-೯೬ ಮುಗುಳ್-ಅರಳು, ಮೊಗ್ಗು ೧-೫೬, ಮುಹುರ್ಮುಹುಃ-ಮತ್ತೆ ಮತ್ತೆ ೪-೩೩ವ ೫-೫ವ
ಮುಳಿಸು-ಮುಳುಗು ೧-೨ ಮುಂಗೋಳ್ -ಮುಂಭಾಗ ೯-೯೫ ವ ಮುಟ್ಟು-ಮುಳುಗು ೭-೭೧ ಮುಂಚು-ಮುಂದಾಗು೧೦-೩೯
ಮೂಂಕಿಜೆ-ವಾಸನೆ ನೋಡಲು ಮೂಗನ್ನು ಮುಂಜ-ಮೌಂಜಿ, ನೊದೆ ಹುಲ್ಲಿನಲ್ಲಿ :
ಚಾಚು ೭-೨೯ವ * ಮಾಡಿದ ನಡುಕಟ್ಟು ೬-೮
ಮೂಗು-ಹೊರಗೆ ತೋರಿಸಿಕೊಳ್ಳದೆ ಮುಟ್ಟು-ಮುಟ್ಟುವಿಕೆ, ಉಪಯೋಗ
ಮೌನವಾಗಿ ಅಳುವುದು ೮-೮೨ ವ (ಮುಟ್ಟುಗಡೆ ೭-೮೦ ವ, ೧೩-೩೦) ಮೂಗುವಡು-ಮೂಕತೆಯನ್ನು ಪಡೆ ಮುಂಡಾಡು-ಮುದ್ದಾಡು ೧-೧೦೬ ವ ಮುಡಿ-ಮುಗಿ ೧೦-೭೫ ತಲೆಗಂಟು ೭-೪ ಮೂಡಿಗೆ-ಬತ್ತಳಿಕೆ, ೫-೪೧, ೪೭ವ .
ಮೂರ್ಧ-ತಲೆ ೪-೧೪ ಮುಡಿಗಿಕ್ಕು-ತಲೆಗಂಟಿಗೆ ಮುಡಿಸು ೮-೨೨ ಮೂರ್ಧಾಭಿಷೇಕ-ತಲೆಯಮೇಲೆ ಮುದ್ದರ-ಕೊಡತಿಯಂತಹ ಆಯುಧ
ಅಭಿಷೇಕ ಮಾಡುವುದು ೧೩-೯೮ ೨-೩೪ವ, ೧೨-೧೧೮ , ಮೂರಿವಿಡು-ಬಾಯಿವಿಡು, ಮುದ್ರಿತ-ಗುರುತುಮಾಡಲ್ಪಟ್ಟ, ಎಲ್ಲೆಯಾದ ಬಿರಿದುಹೂಗು ೨-೮೬ವ ೧-೧೧೦, ೧೪೯, ೨-೪೫
- ೩-೬೪ವ, ೯-೮೭ವ ಮುದುಗಂಗಳ್-ವೃದ್ದರು ೬-೭
ಮೂಲಿಗ-ಮೂಲಕಾರಣ ೧೩-೧೮ ಮುದುಗಣ್ಣಲ್-ವೃದ್ದರು ೨-೩೧ ವ ಮೂವಿಟ್ಟಿ-ಮೂರು ಉಚಿತ ಕಾರ್ಯ ಮುನ್ನಡಿ-ಅಡಿಯ ಮುಂಭಾಗ ೧೦-೧೦೨ ೬-೩೦ ಮುಂಬಗಲ್-ಹಗಲಿನ ಮುಂಭಾಗ
ಚಾರಿ-ಜಿಂಕೆಯಾಗಿರುವ ೧-೧೧೧ ' ೧-೩೭ವ
ಮೃಗಧರ-ಚಂದ್ರ ೧೩-೬೩ವ ಮುಮ್ಮಣಿಸು-ಮುಂದಕ್ಕೆ ನುಗ್ಗು, ೧೩-೩೭ವ ಮೃಗಭೂ-ಚೌರಿ ೪-೮೦ ಮುಮುಕ್ಷು-ಮೋಕ್ಷಾಪೇಕ್ಷಿ ೧೪-೫೬ ವ ಮೃಗಮದ-ಕಸ್ತೂರಿ ೪-೬೭ ಮುಯ್ಯಾಂತು-ಗರ್ವಿಸು, ಹಿಮ್ಮೆಟ್ಟು, - ಮೃಗಯಾ-ಬೇಟೆ ೧-೭೦ ೨-೮೬, ೪-೯೪ವ
ಮೃಣಾಳ-ತಾವರೆಯ ದಂಟು ೧-೬ ಮುಯ್ದು-ಭುಜದ ಮೇಲುಭಾಗ, ಹೆಗಲು ಮೃತ್ಪಾತ್ರ-ಮಣ್ಣಿನ ಪಾತ್ರೆ ೨-೪೫ವ : ೨-೧೧, ೧೧-೯೮ ವ್ಯ
ಮೃತ್ತಿಕಾ-ಮಣ್ಣು ೩-೭೪ ವ ಮುರಜ-ಮೃದಂಗ, ಮದ್ದಳೆ ೧೩-೪೪ವ ಮೃದುಬಂಧ-ಪದಗಳ ಸರಳವಾದ ಮುಜುಕಂ-ವಕ್ರತ ೨-೪೯
ಜೋಡಣೆ ೧-೮ ಮುಷ್ಟಿ-ಮಂತ್ರ, ಪ್ರಯೋಗಕ್ರಮ
ಮೆಚ್ಚು-ಇಚ್ಚೆ ೧-೭೮, ೫-೧೮ - ೧೧-೧೩೦
ಬಹುಮಾನ ೮-೨೫ವ ಮುಸಲ-ಒನಕೆ ೩-೧೦
ಮಚ್ಚೆ-ಮಚ್ಚುಗೆಯೇ ೧-೩ ಮುಸುಂಡಿ-ಆಯುಧವಿಶೇಷ ೨-೩೪ ವ ಮೆಡಯಿ-ಹಣೆ, ೩-೫೫ ವ ಮುಸುಂಬು-ಮುಸುಡು, ಮೂತಿ ಮೆಯ್ದರೆ-ಮೈಮರೆಸಿಕೊ ೬-೭೧, ೭-೩೦ವ ೧೧-೧೩೬
ಮೆಯ್ದ-ಶೂರ ೬-೨೭
Page #781
--------------------------------------------------------------------------
________________
೭೭೫
ಶಬ್ದಕೋಶ ಮಸಕ-ವಿಜೃಂಭಣೆ, ರೇಗುವಿಕೆ,
ಮಾರುದಿನ-? .೪-೮೭ ವ - ೧೨-೧೫೧, ೧-೧೩೯, ೮-೩೭ ಮಾಸರಂ-ಸವಿಯಾದ ಮಾತು? ೩-೪೪ ಮಸಗು-ರೇಗು ೧-೩೪, ೯-೨೪ ವ ಮಾಸಾದಿ-ಒಳ್ಳೆಯ ಕುದುರೆಯ ಸವಾರ ಮಸ್ತಕ-ತಲೆ ೬-೧೧ವ
೮-೫೪ವ ಮಸುಳ್-ಮಾಸು ೧-೪೦
ಮಾಳಜಿಗೆ-? ೧೦-೭೬ ಮಸಣಿತ-ಕಾಂತಿಯುಕ್ತವಾದ ೯-೮೮ ವ ಮಿಕ್ಕು-ಮೀರಿ, ಹೆಚ್ಚಾಗಿ, ಅತಿಶಯವಾಗಿ ಮಹಿಧರ-ವಿಷ್ಣು ೮-೫೫
೧-೩ ಮಹೀಜ-ಮರ ೩-೧೮
ಮಿಗಿಲ್ -ಅತಿಶಯ ೧೨-೧೪೩
ಮಿಟ್ಟೆ-ಗುಂಡು, ಗೋಲಿ ೫-೧೨ ವ, : ಮಳಯ ಮಹೀಜ-ಶ್ರೀಗಂಧದ ಮರ
೭-೩೮.
ಮಿಡಿ-ಬೆರಲಿನಿಂದ ಹೊಡಿ ೧-೫೬ ... ಮಚ್ಚೆಸು-ಹೋಗಲಾಡಿಸು ೨-೮೧
ಮೀಟು-ಬಾರಿಸು ೭-೮೯ ಮಾಂಕರಿಸು-ಹಿಯಾಳಿಸು, ಅಲ್ಲಗಳ
-ಹೀಚು ೫-೪ವ ೧-೩೨, ೪-೩೪ .
ಮಿಡುಕು-ವ್ಯಥೆಪಡು, ೩-೨೬ ಮಾರ್ಕೊಳ್ -ಪ್ರತಿಭಟಿಸು, ಎದುರಿಸು -ಅಲುಗು ೫-೩೦, ೬-೫೯ವ ೬-೨೭, ೧೦-೧೪
ಮಿಥುನ-ಜೋಡಿ (ಗಂಡು-ಹಣ್ಣು) ಮಾಗಧ-ವಂಶದ ಕೀರ್ತಿಯನ್ನು
೪-೪೯ವ ( ಹೊಗಳುವ ಸ್ತುತಿಪಾಠಕ ೧-೯೯ ಮಿದಿ-ಕುಟ್ಟು ೧-೧೩ - ಮಾಂಗಾಯ್-ಮಾವಿನಕಾಯಿ ೩-೪೦ವ | ಮಿನುಗು-ಹೊಳ, ಮಿಂಚು ೬-೩೨ ಮಾಡ-ಉಪ್ಪರಿಗೆ ೩-೨ ವ, ೪೧ ಮಿಸಿಸು-ಸ್ನಾನಮಾಡಿಸು ೧-೩೮ ಮಾತಂಗ-ಆನೆ ೧೦-೧೯
ಅಭಿಷೇಕಮಾಡಿಸು ೧೦-೧೫
ಮಿಳಿರ್-ಚಲಿಸು ೧-೫೮, ೭-೮೯ ಮಾತಾಳಿ, ಮಾತಲಿ-ಇಂದ್ರನ ಸಾರಥಿ
ಮಿಳ್ಳಿಸು-ಚಲಿಸು ೧೦-೯೭ ವ ೧೨-೧೭೨ ಮಾತುಳುಂಗ-ಮಾದಳದ ಹಣ್ಣು ೩-೨೮
ಮಿತ್ತ-ಮೃತ್ಯು ೨-೧೩, ೩-೨೭
ಮಿಳುಗೊಡ್ಡಂ-ಅಪಾಯಕರವಾದ ಹರಟೆ ಮಾದುರ-ದೊಡ್ಡಯುದ್ಧ ೮-೭೨
೪-೫೩ ಮಾಂದಿಸು-ತಡಮಾಡು ೮-೩೭
ಮೀಂಗುಲಿಗ-ಮೀನನ್ನು ಮಾಧವೀ-ವಾಸಂತಿ, ಮೊಟ್ಟೆ ಇರುವಂತಿಗೆ
ಕೊಲ್ಲುವಂಥವನು-ಬೆಸ್ತ ೯-೬೭, - ೨-೧೨, ೫-೬
೧೨-೪೧ ಮಾನಸ-೧, ಮಾನಸ ಸರೋವರ | ಮೀಯಿಸು-ಸ್ನಾನಮಾಡಿಸು ೧೪-೧೭ ವ ೨. ಮನಸ್ಸು, ೩. ಮನುಷ್ಯ ೨-೩೬ ಮುಕ-ಮುಖ ೭-೫೫ ಮಾನಾಮಿ-ಮಹಾನವಮಿ ೪-೯೩ ಮುಕ್ತ-ಭಿಡಲ್ಪಟ್ಟ ೫-೮೮ ಮಾಮ-ಮಾವ ೧೨-೯೬
ಮುಕುಂದ-ವಾದ್ಯವಿಶೇಷ ೧-೧೦೭, ಮಾಮಸಕ-ವಿಶೇಷಕೋಪ ೯-೪೮
೧೩-೩೨, ೧೪-೧೧ವ ಮಾಲ-ಕ್ರಯಮಾಡು, ಸ್ವಾಧೀನಪಡಿಸಿಕೊ, ಮುಕುಳೀಕೃತ-ಮೊಗ್ಗಾದ, ೯-೧೦೦
ಮುಚ್ಚಿಕೊಂಡಿರುವ ೪-೭೭
Page #782
--------------------------------------------------------------------------
________________
೭೭೮
ಪಂಪಭಾರತ
ರಾಗ-ಕೆಂಪುಬಣ್ಣ ೧-೩, ೪-೫೦ ವ ರಂಗತ್-ಚಲಿಸುತ್ತಿರುವ ೧೪-೩೧. -ಪ್ರೀತಿ ೧-೧೪೦ ರಂಗಭೂಮಿ-ಸಭಾಮಂಟಪ ೩-೪೦ ರಾಗಿ-ಅನುರಾಗವುಳ್ಳವನು ೪-೫೦ವ ರಂಗವಲಿ-ರಂಗೋಲೆ ೩-೨ -
ರಾಗಿಸು-ಪ್ರೀತಿಸು ೧-೯೬ ವ ರಜ-ಧೂಳು, ರಜೋಗುಣ ೧೦-೬೯
ರಾಜಕ-ರಾಜರ ಗುಂಪು ೩-೩೯, ೪-೮, ರಜತ-ಬೆಳ್ಳಿ ೧-೭೭ ವ, ೪-೧೦
೪೯ ವ ' ರಜಸ್ವರ-ಪರಾಗವುಳ್ಳ ೭-೨೨
ರಾಜಕೀರ-ಅರಗಿಳಿ ೫-೯೦ ರಟತ್ -ಧ್ವನಿ ಮಾಡುತ್ತಿರುವ ೧೦-೬೭
ರಾಜತ್-ಪ್ರಕಾಶಿಸುವ ೧-೩೭ ವ ರಣಾಜಿರ-ಯುದ್ಧರಂಗ ೧೦-೯ ರಣಾನಕ-ಯುದ್ದಭೇರಿ ೩-೬೭
ರಾಜಾಂತರ-ಒಬ್ಬ ರಾಜನ ಬಳಿಯಿಂದ ರಥಕಲ್ಪ-ರಥ ವಿಷಯಕವಾದ ಶಾಸ್ತ್ರ
ಮತ್ತೊಬ್ಬ ರಾಜನ ಬಳಿಗೆ ೩-೫೭ - ೧೨-೧೦೩ ವ
ರಾಜಾವರ್ತ-ಎಳನೀಲ ರತ್ನ ೩-೭೪ ವ, ರಥದಂ-ರಥದವನು ೧೦-೫೭
-೪-೭೫ವ ರಥಾಂಗ-ಚಕ್ರವಾಕಪಕ್ಷಿ ೩-೨೭, ೫-೬೦
ರಾಧೇಯ-ಕರ್ಣ ೧-೧೦೧ - -ಚಕ್ರಾಯುಧ ೯-೯೩ ವ
ರಾವ-ಶಬ್ದ ೩-೬೭ ರಥಿನೀ-ಸೈನ್ಯ ೧೨-೫೦
ರುಚಿ-ಕಾಂತಿ ೧-೮೩, ೩-೮೧ ರಪಣ-ಆಸ್ತಿ ೭-೩ ವ |
ರುಂದ್ರ-ವಿಸ್ತಾರವಾದ ೧-೧೩, ೪೪ ರಯ-ವೇಗ ೧-೫೧ ವ
ರುಧಿರ-ರಕ್ತ ೬-೫ ರಯ್ಯ-ರಮ್ಯ ೪-೫, ೬-೩
ರೂಕ್ಷ-ಕ್ರೂರ ೧೧-೮೬ ವ ರವ-ಶಬ್ದ ೩-೩೪
ರೂಪಪರಾವರ್ತನ-ವೇಷಾಂತರವನ್ನು ರವಳಿ-ವಾದ್ಯವಿಶೇಷ ೧೦-೩೨, ೩೫ ವ
ಪಡೆಯುವುದು ೮-೫೦ ರಶನಾ-ಡಾಬು ೪-೬೭
ರೂಪುಗರೆ-ರೂಪವನ್ನು ಮರೆಮಾಡು ರಶ್ಮಿಕಾಂತಿ ೧-೯೬
- ೮-೫೫ವ ರಸ-ವಿಷ, ರಸದಾನ-ವಿಷಕೊಡುವುದು
ಅಡಾಡು-ಮುಖವಿಕಾರಮಾಡಿ - ೬-೬೭ ವ |
ಹಿಯ್ಯಾಳಿಸು ೮-೬೮ ಅಡಿಸು ರಸತ್ತಾರುಗರ್-ಆನೆಯ ಮೇಲೆ ಕುಳಿತು,
ಗ ೫-೫೦ ಯುದ್ಧಮಾಡುವವರು ? ೧೨-೬೦
ರೋಬೋವಿವರ-ಭೂಮ್ಯಾಕಾಶಗಳ ಮಧ್ಯ ರಸಪ್ರಸಾದ-೧. (ಗಂಗೆಯ) ನೀರಿನ
ಪ್ರದೇಶ ೧೧-೧೪೮ ನೈರ್ಮಲ್ಯ ಪ್ರಸಾದ-ಪ್ರಸನ್ನತೆ ೧-೨ ರಸರಸಾಯನ-ರುಚಿಕರವಾದ ಆಹಾರ ಲಕ್ಕಣ-ಲಕ್ಷಣ (ಸಂ) ೭-೯೨, ೪-೧೬ ವ.
- ದುರ್ಯೊಧನನ ಮಗ ೧೦-೨೭ ವ ರಸಾ-ಪಾತಾಳ ೧೨-೨೦೩
, ಲಕ್ಷ-ಗುರಿ, ೨-೫೨, ೬೦ ರಸಾತಳ ೬-೪೧
ಲಗ್ನ-ಕೂಡಿದ ೧-೧೩೪ ರಸಾಯನ-ರುಚಿಕರವಾದುದು ೧೨-೨೧೭
ನ -ಚುಚ್ಚಿಕೊಂಡ ೪-೪೬ ರಸೆ-ಭೂಮಿ ೮-೮೬
ಲತಿಕಾ-ಬಳ್ಳಿ ೪-೬೫ -ಪಾತಾಳ ೯-೧೫
ಲಂಪಟ-ಆಸಕ್ತ ೧೨-೧೧೬ ವ
:
.
Page #783
--------------------------------------------------------------------------
________________
೭೭೭
ಶಬ್ದಕೋಶ ಮಲ್ಲೋಜು-ಎದುರಿಗೆ ಬರು ೭-೮೩ ಮೊಗವಡ-ಮುಖವಾಡ ೧೦-೫೧ ವ ಮೆಯ್ಕೆಯ್ದ-ಪ್ರತ್ಯೇಕ ಪ್ರತ್ಯೇಕವಾದ ೬-೨೬ವ ಮೊಗಸಾಲೆ-ಮುಖಶಾಲೆ ೪-೪೩ವ ಮೆಯ್ಕೆರ್ಚು-ಉಬ್ಬು ೧೦-೩೯ ವ ಮೊಗಸು-ಮುತ್ತಿಕೊಳ್ಳು ೧-೫೮ ಮೆಸ್ಕೋಗುಂ -? ೪-೮೭
ಮೊಗೆ-ತುಂಬು, ಮೇಲೆಬೀಳು ೮-೯೨ ಮಲ್ಪಡು-ಮೋಸಹೋಗು ೩-೪ ವ, ಮೊಗ್ಗ-ಸಾಧ್ಯವೇ ೬-೨೪, ೭-೪೪ ೬-೭೧ವ
ಮೊಚ್ಚಿಯ - ? ೯-೧೦೩ - ಮೋಸ ೧೩-೪೯
ಮೊಟ್ಟನೆ-ಮಟ್ಟವಾಗುವಂತೆ, ಮೇಖಲಾ-ಡಾ ೪-೩೬ ವ.
ನಿರ್ಮೂಲನವಾಗುವಂತೆ ೫-೯೪
ಮೊನೆ-ಮುಂಭಾಗ ೧೦-೫೮, ೫೯ ವ ಮೇಗಿಲ್ಲದೆ-ಅಭಿವೃದ್ಧಿಯಾಗದೆ ೩-೪೬ವ,
ಹರಿತವಾದ ಭಾಗ ೫-೮೮ ವ ೧೦೪ - ೭-೪ವ, ಇವ, ೧೧-೧೪೩ ವ
ಮೊನೆಗಾರ-ಶೂರ, ಯೋಧ ೨-೬೭ ಮೇಗು-ಮೇಲು ೧-೫೦ ಮೇಗು- ? ೫-೪೦
ಮೊಮ್ಮ-ಮೊಮ್ಮಗ ೧೦-೯ವ
ಮೊಜ-ಧರ್ಮ , ಕ್ರಮ, ನ್ಯಾಯ ೧-೭೩, ಮೇಚಕ-ಕಪ್ಪುಬಣ್ಣ ೧೩-೧೫ ವ, ೭೨
೨-೪೯ ಮೇಡು-ದಿಣ್ಣೆ, ಹಿಳಿಲು ೮-೧೦೪
ಮೊಲಗತ್ತಲೆ-ಚಂದ್ರನಲ್ಲಿರುವ ಮೇತ-ಮೇವು ೪-೩೮
ಮೊಲದಿಂದುಂಟಾದ ಕತ್ತಲೆ ಮೇರೆ-ಎಲ್ಲೆ ೯-೯೫ವ
೧೧-೧೪೮ ವ ಮೇಲುದು-ಮೇಲುಹೊದಿಕೆ ೧೨-೨೦೨: ಮೊಲಗು-ಶಬಮಾಡು ೨-೬೬ ಮೇವಳಿ-ಮೇಯುವಿಕೆ ೫-೪೬
ಮೊಯ್ದ-ಬಾಗು, ಕುಗ್ಗು ೧೧-೬೪ ಮೇಳ-ಮೇಳದವರು ೨-೯೫ ವ, ೪-೪೦ ಮೋಕ್ಷ-ಬಿಡುವಿಕೆ ೪-೫೯ ವ, ೧೪-೫೨ವ * ಜೊತೆ ೧೧-೧೫
ಮೋಘ-ವ್ಯರ್ಥ ೭-೩೫ ಮೇಳಗಾಳಗ-ಆಟಕ್ಕಾಗಿ ಆಡುವ ಯುದ್ದ ಮೋದು-ಹೊಡೆ ೨೦೭೩, ೧೧-೬೮ - ೧೩-೪೩
ಅಪ್ಪಳಿಸು ಮೇಳದಂಕ ? ೬-೭೨
ಮೋಪು-ಈರ್ಷೆ, ಅಸೂಯೆ ೧೨-೭೬ವ ಮೇಳಿಸು-ಸೇರು ೧-೯೬
ಮೌಹರ್ತಿಕ-ಜೋಯಿಸ ೧೪-೧೭ ವ ಮೈತ್ರ-ಮಿತ್ರಸಂಬಂಧವಾದ ೬-೩೦ ವ ಮೌಳಿ-ತಲೆ ೧-೧ ಮೈತ್ರಾಸನ ವೃತ್ತಿ-ಮಿತ್ರನೂ ಉದಾಸೀನನೂ
- ಯ ಆಗಿರುವ ಸ್ಥಿತಿ ೬-೩೦ವ
ಯಕ್ಷಕರ್ದಮ-ಪರಿಮಳ ದ್ರವಗಳ ಮಿಶ್ರಣ ಮೈತ್ರಾವರುಣ-ಯಜ್ಞಭಾಗದಲ್ಲಿ ವಹಿಸುವ
- ೩-೩೯ ವ * ಒಬ್ಬ ಪುರೋಹಿತ ೬-೩೩ ವ
ಯಜಮಾನ-ಯಜ್ಞಮಾಡುವವನು ೪-೨೬ವ ಮೈತ್ರಾಸನ ವೃತ್ತಿ-ಮಿತ್ರನೂ ಉದಾಸೀನನೂ ಯವ-ಗೋಧಿಯ ಜಾತಿಯ ಒಂದು ಧಾನ್ನ * ಆಗಿರುವ ಸ್ಥಿತಿ ೬-೩೦ವ
- ೫-೭ ವ | ಮೈತ್ರಾವರುಣ-ಯಜ್ಞಭಾಗದಲ್ಲಿ ವಹಿಸುವ
ಯಾನಪಾತ್ರ-ಹಡಗು ೧೨-೫೦ " ಒಬ್ಬ ಪುರೋಹಿತ ೬-೩೩ ವ ಯೂಧ-ಗುಂಪು ೧೧-೬೬ ಮೈಂದವಾ-ಒಂದು ರೀತಿಯ ಬಾಳೆ ಯೂಪ-ಯಜ್ಞಪಶುವನ್ನು ಕಟ್ಟುವ ಕಂಭ - ೫-೬ ವ, ೪೭ ವ |
೪-೫೯ ಮಕ್ಕಳಂ-ಹೆಚ್ಚಾಗಿ ೨-೭೭, ೪-೭೨ ಯೋಗಿನಿ-ಪಿಶಾಚಿ ೧೪-೨
Page #784
--------------------------------------------------------------------------
________________
೭೮೦
ಪಂಪಭಾರತ ವಾರ-ಸಮುದಾಯ ೨-೭೬
ವಿಟಪಿ-ಮರ ೩-೧೦ ವ ವಾರುಣಿ-ಪಶ್ಚಿಮದಿಕ್ಕು, ಮದ್ಯ ೩-೨೩ ವಿತಾನ-ಸಮೂಹ ೧-೧೪ ಮೇಲ್ಕಟ್ಟು ವಾರುವಕುದುರೆ-ಬಾಡಬಜಾತಿಯ ಕುದುರೆ ೧-೧೦೭ ೧೦-೮೯
ವಿತಾನಕ-ಗುಂಪು ೩-೧೦ ವಾಸವ-ಇಂದ್ರ ೮-೨೭ ವ
ವಿದಗ್ಗ-ಪಂಡಿತ ೧-೫೮ ವಾಸ್ತುವಿದ್ಯಾ-ಮನೆ ಕಟ್ಟುವ ಶಾಸ್ತ್ರ ವಿದಳಿತ-ಅರಳಿದ ೫-೫೬ ೨-೩೪ವ
ವಿದಾರಿಸಿ-ಸೀಳಿ೧-೬೮ ವ ವಾಲಿ-ಸುದ್ದಿ ೪-೬೧
ವಿರ್ದಾಡು-ಔತಣಮಾಡಿಸು ೯-೨೪. ವ್ಯಾಘಾತ-ಹೊಡೆತ ೫-೧೦೩ ವ ವಿದ್ಯಾಧರಕರಣ-ಗದಾಯುದ್ದದ ವರಸೆ ವ್ಯಾಜ-ನೆಪ ೧-೭೦
- ೧೩-೯೪ ವ ವ್ಯಾಬಾಧೆ-ಕಾಟ ೬-೧೫
ವಿದ್ರಾವಣ-ಓಡಿಸುವವನು ೨-೭೯ ವ, ವ್ಯಾಯಾಮ-ಅಂಗಸಾಧನೆ ೫-೫೭ ವ
೮-೧೧ ವ್ಯಾಲೆ-ಕೆಟ್ಟವಳು ೨-೧೫ ವ
ವಿದಿತ-ತಿಳಿದ ೩-೫೩ ವ ವ್ಯಾಳಗಜ, ವ್ಯಾಳದಂತಿ-ತುಂಟ ಆನೆ ವಿದ್ವಿಷ್ಟ-ಶತ್ರು ೨-೨೯ ವ, ೧೪-೩೭ ವ ೨-೩೯ ವ, ೭-೩, ೧೦-೯೩ವ
ವಿದ್ರುಮ-ಹವಳ ೪-೨೫ . ವ್ಯಾಳೋಳ-ಚಲಿಸುತ್ತಿರುವ ೫-೭೪,.. ವಿರ್ದು-ಬಿರ್ದು, ಔತಣ ೯-೨೪ ಪ್ರಾತ-ಸಮೂಹ ೧-೧೬
ವಿಂದ-ಬೃಂದ, ಗುಂಪು ೧೧-೧೪೬ ವ ವಿಕಟ-ದೊಡ್ಡದಾದ ೫-೬೨ ವ .
ವಿದ್ಯೋತ-ಹತ್ತಿ ಉರಿಯುತ್ತಿರುವ ೯-೯೫ . . ಕ್ರೂರ ೭-೮ ವಿಕರ್ಣ-ಬಾಣ ೮-೧೦೭, ೧೧-೪೭
ವಿಧಾತ್ರ-ಬ್ರಹ್ಮ೧-೫೮ , ೨-೩೯ ವ ವಿಕಲ್ಪ-ಭೇದ ೪-೪೫ ವ, ೫-೧೦೩ ವ
ಈ ವಿಧಾತೃಯೋಗ-ಬ್ರಹ್ಮ ಸಂಘಟನೆ, ದೈವ
. ವಿಕ್ರಾಂತ-ಪರಾಕ್ರಮ ೧-೮೦
ಯೋಗ ೨-೯೧ ವಿಕ್ಷೇಪ-ಬೀಸುವಿಕೆ, ಅಳ್ಳಾಡುವಿಕೆ ೪-೧೪,
ವಿಧೂತ-ಅಳ್ಳಾಡಿಸಲ್ಪಟ್ಟ ೪-೩೪ ಬೀರುವಿಕೆ ೭-೮ ವ.
ಏನಕ್ಷತ್ರಕ-ಹೆಚ್ಚಾದ ನಕ್ಷತ್ರಗಳುಳ್ಳ ೧೩-೩೮ : ಪ್ರೇರಣೆ ೧೩-೯೨ ವ
ವಿನತಾ-ವಿನತಾದೇವಿ ೧-೧೨೧ ವಿಕ್ಷೇಪಣ-ಒಲೆದಾಡುವಿಕೆ ೯-೯೫ ವ
ವಿನ್ಯಾಸ-ಇಡುವಿಕೆ ೧-೯, ೧೨೬ ವಿಗತ-ಕಳೆದುಹೋದ ೧-೧೪೦ ವ ,
ವಿನೂತ-ಶ್ರೇಷ್ಠವಾದ, ಹೊಸದಾದ ೧-೨ ವಿಗಳತ್-ಸೋರುತ್ತಿರುವ ೪-೧೮ ವ
ವಿಪನ್ನ-ವಿಪತ್ತನ್ನು ಹೊಂದಿದ, ಸತ್ತ ವಿಗಳಿತ-ಕೆಡವಿದ ೪-೧೮ ವ
೧೪-೨ ವಿಘಟಂ-ಒಡೆದವನು ೧-೧೩೧
ವಿಪುಳ-ವಿಸ್ತಾರವಾದ ೧-೧೪, ೧೧೫ ವ ವಿಘಟ-ವಿರೋಧವಾಗು ೨-೫೭ ವ
ವಿಬುಧ-ವಿದ್ವಾಂಸ, ದೇವತೆ ೧-೭ ವಿಘರ್ಣಿಸು-ಅಳ್ಳಾಡು ೧೦-೮
ವಿಭ್ರಮ-ವಿಲಾಸ, ೧-೬೬, ೧೨೦ ವಿಚ್ಚೆದುರ-ಒಡೆದುಹೋದ ೯-೫೯ ವಿಚ್ಚಿನ್ನ-ಬೇರೆಯಾಗುವಿಕೆ ೪-೪೫ ವ,
ವಿಭೂತಿ-ವೈಭವ, ಐಶ್ವರ್ಯ ೧-೧೦೬,
- ೨-೮೪ ೫-೧೦೩ ವ ವಿಜಿಗೀಷು-ಜಯಿಸಲಿಚ್ಚಿಸುವವನು ೪-೧೧
ವಿಮಾನ-ಅರಮನೆ ೪-೧೬ ವ -
ವಿಮೋಹ-ಭ್ರಾಂತಿ ೫-೧೦ ವ, ೯-೪೭
ವಿಮೋಹಿಸು ೧೦-೧೬ ವಿಜೃಂಭಮಾಣ-ಅರಳುತ್ತಿರುವ ೫-೧೦ವ
Page #785
--------------------------------------------------------------------------
________________
- ೭೭೯
ಶಬ್ದಕೋಶ ಲಂಬ-ಜೋಲುಬಿದ್ದಿರುವ ೩-೫೪
ವಟು-ಬ್ರಹ್ಮಚಾರಿ ೧-೧೦೦ ಲಂಬಣ-ಕುಚ್ಚು ೫-೬ ವ, ೯-೬೯ ವರ್ಣಕ-ವರ್ಣನೆ ೧-೧೧ ಲಯ-ನಾಶ ೭-೪ ವ.
- ಬಣ್ಣ ೧-೩೯ ವ ಲಯಕ್ರೀಡೆ-ಪ್ರಳಯ ಕಾಲದ ವಿನೋದ ವರ್ತಿ-ಇರುವ ೩-೩೧ ವ ೫-೮೫
ವಂದಿ-ಹೊಗಳುಭಟ್ಟ ೧-೯೯, ೨-೩ ವ | ಲಯತಾಂಡವ-ಪ್ರಳಯ ಕಾಲದ ಕುಣಿತ, ವರ್ಧಮಾನ-ಹೆಚ್ಚುತ್ತಿರುವ ೧೧-೧೧೭ ವ - ೪-೨೭
ವನಧಿ-ಸಮುದ್ರ ೧-೨೬ ಲಲನಾ-ಹಂಗಸು ೩-೩೩
ವನನಿಧಿ-ಸಮುದ್ರ ೧-೧೨೧ ಲಲಾಟ-ಹಣೆ ೧-೨, ೨-೩೯ ವ :
ವನಭ್ರತ್ -ಮೇಘ ೪-೬೯ ಲಲಾಮ-ತಿಲಕ ೧-೬೧. ಲಲ್ಲೆ-ಪ್ರೇಮ, ಸರಸ ೩-೮೩, ೭-೯೪ ವ
ವನ್ಯ-ಕಾಡಿನ ೧-೧೧೫ ಲಿಸು-ಮೆಚ್ಚಿಕೆಯ ಮಾತಾಡು ೯-೭೮
ವನೀಪಕ-ಯಾಚಕ ೨-೯೮, ೧೦-೫೮
ವಯಲ್ -ಬಯಲು ೧-೧೦೯ ಲಾಕ್ಷಾ-ಅರಗು ೨-೯೨ ವ, ೩-೩೨ ಲಾಂಗೂಲ-ಬಾಲ ೪-೧೪
ವರಣಮಾಲೆ-ಸ್ವಯಂವರಮಾಲೆ ೧-೧೦೬ ಲಾಜೆ-ಅರಳು ೩-೭೫ ವ
ವರುಣಾನಿ-ವರುಣನ ಹೆಂಡತಿ ೬-೩೨ ವ ಲಾವಗೆ-ಲಾವನಹಕ್ಕಿ ೫-೧೦೦ ವ
ವರೂಥಿನಿ-ಸೈನ್ಯ ೧೦-೯೦ ವ, ೧೧-೧೮ವ ಲಾಳಾ, ಲಾಳೆ-ಲಾಲಾ, ಜೋಲ್ಲು
ವಲ್ಕಲ-ನಾರುಬಟ್ಟೆ ೨-೪೫ ವ ೧೦-೭೦ ವ, ೪-೧೦೦
ವಲ್ಲರಿ-ಬಳ್ಳಿ ೩-೩೩ ಲೀಲಾಯಿತಂ-ಕ್ರೀಡೆಯಂತೆ ಆಚರಿಸಲಟ ವಸನ-ಬಟ್ಟೆ ೭-೫೪ ೩-೨೭
ವಸುಮತಿ-ಭೂಮಿ ೬-೬೮ ಲುಂಠ-ಅಪಹರಿಸುವ ೧-೬೮ ವ ವಷಟ್ಕಾರ-ವಷಟ್ ಎಂಬ ಶಬ್ಲೊಚ್ಚಾರಣೆ ಲುಳಿತ-ಚಲಿಸುತ್ತಿರುವ ೧-೫೩, ೩-೭೬ ಲೂನ-ಮುರಿಯಲ್ಪಟ್ಟ ೪-೧೮ ವ
ವಳನ-ಚಲನ ೪-೨೫ ಲೆಂಕ-ನೃತ್ಯ ೭-೪ ವ
ವಳಯ-ಮಂಡಲ ೨-೫೦ ಕಡಗ ೫-೧೬ ಲೋಲ-ಆಸಕ್ತಿಯುಳ್ಳವನು ೧-೬೮
ವಳಿತ್ರಯ-ಹೊಟ್ಟೆಯ ಮೇಲಿನ ಮೂರು ಅಳ್ಳಾಡುತ್ತಿರುವ ೪-೧೪
ಮಡಿಪು ೧-೧೪೧ ವ ಲೋಹವಕ್ಕರೆ-ಆನೆ ಕುದುರೆಗಳಿಗೆ ಹಾಕುವ ವ್ಯಗ್ರ-ವಿಶೇಷ ಆಸಕ್ತಿಯುಳ್ಳ ೧೩-೮ ವ * ಕಬ್ಬಿಣದ ಪಕ್ಷ ರಕ್ಷೆ ೧೦-೫೧ ವ, ವ್ಯಗ್ರಚಿತ್ತ-ದುಡುಕು ಮನಸ್ಸುಳ್ಳವನು
೭೮, ೯೨ ಲೋಹಿತ-ರಕ್ತ ೮-೧೦೬
ವ್ಯತಿಕರ-ಸಂಬಂಧ, ಸಂದರ್ಭ೯-೫೨ ವ ಲೋಳೆ-ಲೋಳಿ ೪-೧೦೦
- ಕೇಡು ೧೪-೫೨ ವ
ವ್ಯವಸಾಯಿ-ಉದ್ಯೋಗಿ ೨-೯೦ (ಶ್ಲೋ) ವಕ್ಷ-ಎದೆ ೨-೩೭
ವ್ಯಸನ-ಆಸಕ್ತಿ ೧೦-೪೧ ವ ವಕುಳ-ಪಗಡೆ ಗಿಡ ೨-೧೬, ೫-೧೦ ವ. ವ್ಯಳೀಕ-ಇಲ್ಲದ, ಸುಳ್ಳಾದ ೪-೬೪ ವ ವಕ್ರಿಸು-ಪ್ರತಿಭಟಿಸು ೧೩-೧೦೧ ವಾಗ್ನಿ-ಚೆನ್ನಾಗಿ ಮಾತನಾಡುವವನು ೩-೮೦ ವಜ್ರ-ಇಂದ್ರ ೯-೬೨
ವಾತ್ಕಾ-ಬಿರುಗಾಳಿ ೯-೯೭ * ವಜಶರ ೧೧-೪೩
ವಾಮಕ್ರಮ-ಎಡದ ಪಾದ ೯-೨೮ ವ ವಟ-ಆಲದ ಮರ ೪-೧೮ ವ
ವಾಯುಪಥ-ಆಕಾಶ ೧-೮೦
೨-೪೬
Page #786
--------------------------------------------------------------------------
________________
೭೮೨
ಪಂಪಭಾರತಂ ಶರದ-ಶರದೃತು ೨-೩೯
ಶೇಖರ-ತಲೆದೊಡವು ೩-೧೧ ವ ಶರಧಿ-ಬತ್ತಳಿಕೆ ೨-೭೮ ವ, ೪-೧೨ ವ. ಶೇಷಾಕ್ಷತ-ಆಶೀರ್ವಾದ ಮಾಡಿದ ಶರಸ್ತಂಬ-ಲಾಳದ ಕಡ್ಡಿ ೨-೩೩
ಮಂತ್ರಾಕ್ಷತೆ ೪-೧೦, ೧೪-೧೬ವ ಶರಾಸನ-ಬಿಲ್ಲು ೨-೩೩ ವ, ೫೨. ಶೈಲ-ಬೆಟ್ಟ ೪-೧೩ ಶರಾಸಾರ-ಬಾಣದ ಮಳೆ ೫-೫೦ ವ | ಶೋಣಿತಜಲ-ರಕ್ತ ೧೦-೪೮ ಶಲಭ-ಮಿಡಿತ ೧-೪೧
ಶೌಂಡ-(ಸಮರ್ಥ) ಅತ್ಯಾಸಕ್ತ ೬-೭೭ ಶಲ್ಯ-ಮುಳ್ಳು, ಚುಚ್ಚುವ ಆಯುಧ ಶ್ರತಂ-ಕೇಳಲ್ಪಡತಕ್ಕುದು ಕಾವ್ಯ ೧೪-೫೨
೧೨-೯೯ವ ಈಟಿ ೧೦-೧೧೧ ಶಶಾಂಕ-ಚಂದ್ರ ೬-೩ ವ, ೧೧-೩೯
ಷಟ್ಟರಣ-ದುಂಬಿ ೫-೯೦ ಶ್ರಯಣೀಯಂ-ಆಶ್ರಯಿಸಿದವನು ೧೪-೪೨
ಷಟ್ಟದ-ತುಂಬಿ ೮-೪೭ ಶ್ರವಣ - ಕಿವಿ ೧೨-೧೭೬
ಷಂಡ-ಗುಂಪು ೧-೩, ೪-೨೨ ಶಾಖ-ಮರ ೧-೧೧೬
ಷಡ್ವರ್ಗ-ಆರರ ಗುಂಪು ಶಾತಕುಂಭ-ಚಿನ್ನ ೧೧-೫೪ ವ | ಶಾಂತಿಕ-ಶಾಂತಿಕರ್ಮ ೧-೧೩೩ವ ಶಾರ್ದೂಲ-ಹುಲಿ ೯-೨೨
ಸಃ ಅವನು ೨-೯೦ (ಶ್ಲೋ) ಶಾಬ-ಮರಿ ೧-೭೦ |
ಸಕಳ, ಸಕಳವಟ್ಟೆ-ಶಕಲ (ಸಂ) ೭-೪೦ ಶಾಸನ-ಅಪ್ಪಣೆ ೧-೫೦
- ವ, ವಿವಿಧ ರೀತಿಯ ಬಟ್ಟೆ, ಶಾಳ-ಸಾಲ, ಕೋಟೆಯ ಗೋಡೆ ೧-೫೮ . ಸಕಳಕಳಾಧರ-ಚಂದ್ರ ೨-೫೯ ವ ಶಾಳಿ-ಬತ್ತದ ಪೈರು ೧-೫೨, ೫೪ ಸಕ್ಕ-ಶಲ್ಕ (ಸಂ) ಚಕ್ಕೆ ೧೦-೯೩ವ ಶ್ರಾಂತ-ಬಳಲಿದ ೩-೧೦ ವ, ೬-೭೭ ಸಕ್ತ-ಕೂಡಿದ ೫-೮೦ . ಶಿಖರಿ-ಬೆಟ್ಟ ೨-೩೯ ವ, ೬-೨೯.ವ ಸಂಕಟ-ಇಕ್ಕಟ್ಟವಾದ, ದಟ್ಟವಾದ ೪-೪೭, ಶಿಖ-ಅಗ್ನಿ, ಬೆಂಕಿ ೧-೨, ೫-೫ ,
೧೧-೧೪೬ ಶಿತ-ಹರಿತವಾದ ೧-೮೦, ೧೦-೯೯
ಸಂಕರ್ಷಣ-ಬಲರಾಮ ೧೩-೯೦ವ ಶಿತಿಕಂಠ-ಈಶ್ವರ ೧೧-೧೩೨ ವ
ಸಂಕ್ರಮಿಸು-ಸೇರಿಸು ೨-೬೪ ವ ಶಿರೀಷಕುಸುಮ-ಬಾಗೆಯ ಹೂವು ೪-೬೯
ಸಂಕಾಶ-ಸಮಾನ ೧೧-೩೯ ಶಿರೋರುಹ-ತಲೆಯ ಕೂದಲು
ಸಕ್ಕಿ-ಸಾಕ್ಷಿ (ಸಂ) ೯-೨೬ ೧೨-೨೨೧
- ೧೨-೩೩, ೪೫ ಶಿವಾ-ನರಿ ೧-೧೩೨, ೩-೧೧
ಸಂಕು-ಶಂಕು (ಸಂ) ಗೂಟದಂತಿರುವ ಶಿಶಿರ-ತಣ್ಣಗಿರುವ ೫-೫೩ ವ, ೧೩-೨
ಆಯುಧ ೧೦-೯೪ ಶಿಶಿರಋತು ೫-೩೧
ಸಂಕೇತ-ವ್ಯವಸ್ಥೆ ೩-೨ ವ ಶಿಳೀಮುಖ-ತುಂಬಿ, ಬಾಣ ೧೨-೮೭ :
ಸಗಣ-ಸಗಣಿ ೩-೨ ಶೀಕರ-ತುಂತುರು ೩-೧೦
ಸಂಗತ-ಕೂಡಿದ ೧-೨, ೩-೬೨ ಶುದ್ಧಾಂತ-ಅಂತಃಪುರ ೮-೫೫
ಸಂಗತಿ-ಕೂಡುವಿಕೆ ೧೪-೩೧ ಶುಂಭತ್ -ಒಡೆಯುತ್ತಿರುವ ೬-೨೨ ವ ಸಂಗರ-ಯುದ್ಧ ೧೨-೧೩೫ ಶ್ರುತ-ಶಾಸ್ತ್ರ, ವೇದ ೨-೪೬, ೧೪-೩೨ ಸಗಾಟಿಸು-ಸ್ನೇಹಮಾಡು ೪-೯೨ ಶೃಂಗಾಟಕ-ನಾಲ್ಕುದಾರಿ ಸೇರುವ ಸ್ಥಳ
ಸಂಗ್ರಾಮ-ಯುದ್ಧ೭-೯೫ ಒಂದು ರೀತಿಯ ಸೇನಾರಚನೆ |
ಸಂಗೀತ-ಹಾಡಲ್ಪಟ್ಟ ೧-೬೧ ೧೨-೧೬
Page #787
--------------------------------------------------------------------------
________________
' ಶಬ್ದಕೋಶ
೭೮೧ ವಿಯಚ್ಚಕ್ರ-ಆಕಾಶಮಂಡಲ ೧-೧೧೦ ' ವೃತ್ತಿ-೧ ಕೃಶಿಕ್ಕಾದಿವೃತ್ತಿ (ರಸಾನುಗುಣವಾದ ವಿಯತ್ತಳ-ಆಕಾಶಪ್ರದೇಶ ೧-೧೨೪ ವ, ಪದಗಳ ಜೋಡಣೆ ೨, ನಡತೆ ೨-೨೨
೧-೯ ವಿಲಿಪ್ತ-ಬಳಿದ ೩-೮೪
ವೃಷಧ್ವಜ-ಈಶ್ವರ ೧೨-೪೦ ವಿಲುಪ್ತ-ನಾಶಮಾಡಲ್ಪಟ್ಟ ೪-೧೮ವ : ವೃಷಸ್ಕಂಧ-ಎತ್ತಿನ ಹೆಗಲು ವಿಲುಳಿತ-ಒದರಿದ ೧೩-೫೫ ವ ವೇಣು-ಬದುರು ೯-೧೦೪ ವಿಲೋಕನ, ವಿಳೋಕನ-ನೋ ೫-೧೧, ವೇತಂಡ-ಆನೆ ೧೨-೮೬ ವ * ೪-೭೭
ವೇತ್ರಾಸನ-ಬೆತ್ತದ ಪೀಠ ೨-೫೨ ವ, ವಿಶದ-ಬೆಳ್ಳಗಿರುವ ೧-೪೧, ೬-೩ವ | ೬-೧೧ವ | ವಿಶಸನ-ಕೊಲೆ ೧೨-೬ ವ
ವೇಮಾಯಿ-ಅಜಾಗರೂಕನಾಗು, ಮೋಸ ವಿಶಸನರಂಗ-ಯುದ್ಧರಂಗ
ಹೋಗು ೩-೩೨ ವಿಶ್ವಥ-ಸಡಲಿಹೋದ ೫-೫೧
ವೇಲೆ-ಪ್ರವಾಹ, ಉಬ್ಬರ ೧-೧೪೬ ವಿಶ್ವ-ಸಮಸ್ತ, ಎಲ್ಲ ೧-೧೪೯, ೪-೧೦ವ ಈ ವೇಳೆ ೧೦-೨೪ ವ ವಿಶ್ವಂಭರಾ-ಭೂಮಿ ೪-೧೦ ವ ವೇಳಾ-ದಡ ೧-೧೪೨ ವ , ವಿಶ್ರಾಂತ-ನಿಂತ, ವ್ಯಾಪಿಸಿರುವ ೪-೪೨ ವೇಳೆಗೊಳ್ -ಸಮಯವನ್ನು ಹೊಂದು ವಿಶಿಖ-ಬಾಣ
ಕಟ್ಟನ್ನನುಸರಿಸು ೫-೩೩, ೧೩-೧೫ ವಿಶೀರ್ಣ-ಭಗ್ನವಾದ, ನಷ್ಟವಾದ ೨-೨೯ವ ವೈಕರ್ತನ-(ಸೂರ್ಯನ ಮಗ) ಕರ್ಣ , ಒಡೆದ ೧೨-೧೩೬
- ೮-೧೦೪, ೧೨-೧೩೫ ವ : ವಿಶೇಷಕರು-ಮುಖ್ಯಸ್ಥರು ೧೩-೩೩ ವ ವೈಜಯಂತಿ-ಧ್ವಜನ ೨-೩೯ ವ ವಿಷಧರ-ಸರ್ಪ ೨-೩೨ವ
ವೃತಾಳಿಕ-ರಾಜರನ್ನೆಚ್ಚರಿಸುವ ಗಾಯಕ ವಿಷಮ-ಕ್ರೂರ ೨-೩೨ ವ
೧೨-೧೦೬ ವಿಷಯ-ದೇಶ ೧-೧೦, ೫೧ ವ . ವೈಮಾನಿಕ-ವಿಮಾನದಲ್ಲಿ ಸಂಚರಿಸುವ
ಶಬ್ದಾದಿವಿಷಯಗಳು ರಾಜ್ಯ ೯-೧೩ ೧೨-೫ವ ವಿಷ್ಟರ-ಆಸನ ೧೦-೩೬ (ಸಿಂಹವಿಷ್ಟರ) ವೈಷ್ಣವ-ವಿಷ್ಣುಶಕ್ತಿ ೯-೬೦, ೧೩-೩೨ ವಿಷಾಣ-ಕೋಡು ೧೧-೭೮ |
ಮೋಮ-ಆಕಾಶ ೧-೧೫ ವಿಸಸನ, ವಿಶಸನ-ಕೊಲೆ, ಸಂಹಾರ, ೧-೧೧೭, ೯-೯೧
ಶಕಟ-ರಥ ೧೧-೧೬ ವ ವಿಸ್ಟುಲಿಂಗ-ಬೆಂಕಿಯ ಕಿಡಿ ೧೧-೧೯ ವ, ಶಕಳ-ಚೂರು, ತುಂಡು ೧೩-೫೧ ವ ೧೨-೮೫
ಶಂಕಾಂತರ-ಬೇರೆ ಸಂದೇಹ ೪-೩೯ ವಿಳಸನ-ಪ್ರಕಾಶಮಾನವಾದ ೧೨-೮೫ ಶಕ್ತಿತ್ರಯ-ಪ್ರಭು, ಮಂತ್ರ, ಉತ್ಸಾಹ ವಿಳಾಸಿನಿ-ಹೆಂಗಸು ೧-೫೮, ೧೪೯
ಎಂಬ ಮೂರು ಶಕ್ತಿಗಳು ೧-೧೪೧ ವಿಳೋಳ-ಚಲಿಸುತ್ತಿರುವ ೧-೩೯ .
ಶತಪತ್ರ-ಕಮಲ ೫-೫೬ ವೀಚಿ-ತೆರೆ, ಅಲೆ ೧-೫೧ ವ
ಶಫರ-ಮೀನು ೧-೯೦ ವ್ಯೂಹ-ಸೈನ್ಯ ೧೧-೧೭
ಶಬಳ-ಚಿತ್ರ, ವರ್ಣ ೪-೧೮ ವ ಸೇನಾರಚನೆ ೧೧-೮೫ ವ, ೮೭
ಶಮೀ-ಬನ್ನಿಯ ಮರ ೬-೩೩ವ ವೃತ್ತ-ನಡೆವಳಿ ೪-೧೧ ವ
ಶರ-ಬಾಣ ೧-೬೬
Page #788
--------------------------------------------------------------------------
________________
೭೮೪
ಪಂಪಭಾರತಂ ಸಮುದ್ಯತ್-ಮೇಲಕ್ಕೇಳುತ್ತಿರುವ ೫-೬, ಸಂಹತಿ-ಸಮೂಹ ೧೦-೫೦, ೧೪-೨ ವ ೯-೯೭
ಸಹಪಾಂಸುಕ್ರೀಡಿತ-ಒಟ್ಟಿಗೆ ಸಮುನಿಷತ್-ಪ್ರಕಾಶಿಸುತ್ತಿರುವ ೧-೫೧ ಧೂಳಿಯಾಟವಾಡಿದವರು ೨-೨೯ ಸಮೆ-ಮಾಡು, ನಿರ್ಮಿಸು ೧-೭೮, ೨-೫೯ ವ, ೬-೩೩ ವ
ಸಹೋತ್ಪನ್ನ-ಜೊತೆಯಲ್ಲಿ ಹುಟ್ಟಿದವನು ಸಯಂಬರ-ಸ್ವಯಂವರ (ಸಂ) ೩-೩೯ ಸಯ್ತು-ಸುಮ್ಮನೆ, ಸರಿಯಾಗಿ ೨-೮೭, ಸಾಗು- ? ೭-೯೦ ೧೧-೫೨
ಸಾಂದು-ಸುಂಗಧದ್ರವ್ಯ (ಪುನುಗು), ಸಯ್ದರ್-ಋಜುವಾಗಿರುವವರು ೯-೮೮ ೫-೬೦ ವ, ೧೪-೨೦ ಸಯ್ದವಂ-ಋಜುವಾಗಿರುವವನು ೧೩-೮೬ ಸಾಧನ-ಸೈನ್ಯ ೧-೧, ೬-೩೨ ಸಯ್ತು-ಪುಣ್ಯ ೩-೨೬ ವ, ೫-೯೩ ಸಾಧ್ವಸ-ಸಡಗರ, ಗಾಬರಿ ೫-೧೫ ಸರ-ಸ್ವರ, ದನಿ ೨-೨೨ ವ
ಸಾಧುವಾದ-ಪ್ರೋತ್ಸಾಹಕರವಾದ ಮಾತು ಶರ, ಬಾಣ, ೨-೫೨ ಸರದ-ಶರತ್ಕಾಲ ೧೦-೫೬
ಸಾಯಕ-ಬಾಣ ೧-೭೪ ಸರವಿ-ಹುಲ್ಲಿನ ಹಗ್ಗ ೧೦-೧೭
ಸಾರಸ-ನೀರಹಕ್ಕಿ ೫-೮೦ ಸರಳ-ಧೂಪದ ಗಿಡ ೫-೫೨
ಸಾರಿಕೆ-ಶಾರಿಕಾ (ಸಂ) ಹೆಣ್ಣುಗಳಿ ೪-೮೩, ಸರ್ವಸ್ವ-ಸಮಸ್ತವಸ್ತು, ಆಸ್ತಿ ೧-೫೫
- ೫-೫೮ ಸ್ಮರ-ಮನ್ಮಥ ೪-೩೮
ಸಾಯಿ-ಕೂಗಿಹೇಳು ೧೦-೩೪ ವ ಸರಿಗೆ-ತಂತಿ ೬-೮
ಸಾರೆ-ಸಮೀಪ ೩-೨೪ ಸರಿತ್ತುತ-ನದಿಯಮಗ, ಭೀಷ್ಮ ೧-೭೬ ಸಾರೆವರೆ ೬-೬ . ಸರೋಜನಿಲಯಂ-ಬ್ರಹ್ಮ೨-೩೮
ಸಾಲ-ಕೋಟೆ ೧-೬೮ ಸಲಗು-ಶಲಾಕಾ (ಸಂ) ಸಲಾಕೆ ೪-೮ . ಸಾಲಭಂಜಿಕೆ-ಸಾಲಾಗಿರುವ ಬೊಂಬೆ ಸಲವು-ಪ್ರವೇಶ ೫-೮೧ ಸಲ್ಲಕೀ-ಆನೆಬೇಲದ ಮರ ೧-೧೧೫, .ಸ್ಥಾಯಿ-ನಿಲ್ಲುವುದು ೯-೮೪ ಆಶಿಸುವವನು ೪-೧೮ವ
೨-೯೦ ಶ್ಲೋ ಸವಕಟ್ಟು-ಏರ್ಪಾಡು ೩-೨೬ ವ ಸ್ವಾಮ್ಯವಿಕ್ರಾಂತ-ದಣಿಯ ಸೊತ್ತನ್ನು ಸವಂಗ-ತೊಟ್ಟುಕೊಳ್ಳುವ ಸಾಮಗ್ರಿ - ಆಕ್ರಮಿಸುವವನು ೨-೯೦ ಶ್ಲೋ ೯-೧೦೩
ಸ್ವಾಹಾಂಗನಾನಾಥ-ಅಗ್ನಿ ೫-೧೦೪ ವ ಸವತ್ಸ-ಕರುವಿನಿಂದ ಕೂಡಿದ ೧೨-೧೦೮ ವ ಸಿಗ್ಗು-ನಾಚಿಕೆ ೧-೭೬ ವ, ೮-೫೭ ವ ಸಂವಳಯಿತ-ಸುತ್ತಲ್ಪಟ್ಟ ೪-೨೫
ಸಿಡಿಂಬು, ಸಿಡುಂಬು-ಬಿದಿರುಮೆಳೆ, ಸಂವ್ಯಾನ-ಉತ್ತರೀಯ ೧೨-೧೦೮ ವ
ಪೊದೆ, ೧೧-೪೫, ೨೨-೧೬೭ ಸಂಶಿಷ್ಟ-ಹತ್ತಿಕೊಂಡಿರುವ ೧೨-೧೩೭ ಸಿಂದುರ-ಒಂದು ಜಾತಿಯ ಹೂವು ಸಂಸಕ್ತ-ಕೂಡಿದ ೫-೮೦
೫-೩೦ ಸಸಿದು-ಎಕ್ಕಿ, ಬಿಡಿಸಿ ೩-೫
ಸಿದ್ದಾರ್ಥ-ಬಿಳಿಯ ಸಾಸಿವೆ ೩-೨ವ ಸಂಸ್ತೂಯಮಾನ-ಹೊಗಳಲ್ಪಡುವ ಸಿಂಧುಪುತ್ರ-ಭೀಷ್ಮ ೧-೮೦ - ೧-೧೪೮ ವ
ಸಿಂಧುರ-ಆನೆ ೨-೬೬ ಸಂಸ್ಕೃತಿ-ಸಂಸಾರ ೨-೨೭
ಸಿಪ್ಪು-ಚಿಪ್ಪು ೪-೮೭ ವ, ೬-೩೬, ಸಹಕಾರ-ಸಿಯಾವು ೨-೧೩, ೫-೨೨
- ೧೦-೯೩ವ
Page #789
--------------------------------------------------------------------------
________________
ಶಬ್ದಕೋಶ
೭೮೩ ಸ್ಥಗಿತ-ಮುಚ್ಚಿದ ೪-೨೩, ೧೨-೧೫೬ ಸನ್ನಹಿತ-(ಕಟ್ಟಲ್ಪಟ್ಟ) ಕೂಡಿದ ೧-೪ ಸಂಚಿತ-ಕೂಡಿಟ್ಟ ೩-೩೬
ಸನಿ-ಶನಿ (ಸಂ) ೪-೯೮ ಸ್ವಚ್ಚಂದ ಮಿಟ್ಟು-ಶ್ವೇಚ್ಛಾಮರಣವುಳ್ಳವನು ಸನ್ನಿಕಾಶ-ಸಮಾನ ೭-೮ - ೧೧-೪೭ ವ
ಸನ್ನಿದ-ಸನ್ನಿಹಿತ (ಸಂ) ಸಮೀಪ ೧೦-೩೧ ಸಂಛಾದಿತ-ಆವರಿಸಿದ ೧೪-೨೧ವ ಸಪ್ರಸವಿ-ಸೂರ್ಯ ೭-೭ ಸನ-ಕುಲಸ್ತೀ, ಧರ್ಮಪತ್ನಿ ೯-೪೬,
ಸರ್ಪಯೋನಿ-ಸರ್ಪ ೧೨-೭೧ - ೧೧-೧೨೨ವ
ಸಪಾದಲಕ್ಷಕ್ಷಿತಿ-ಒಂದೂಕಾಲು ಲಕ್ಷ ಸೀಮೆ ಸಟ-ಜಡೆ ೧೨-೭
- ೧-೧೬ ಸಟ್ಟುಗ-ಸೌಟು ೮-೫೩ವ
ಸಪ್ತಾಂಗ-ಸ್ವಾಮಿ, ಅಮಾತ್ಯ, ಸುಹೃತ, ಸಡಹುಡನಪ್ಪ-ಚಡಪಡಿಸುತ್ತಿರುವ ?
ಕೋಶ, ರಾಷ್ಟ, ದುರ್ಗ, ಬಲ ಈ - ೯-೧೦೩
ಏಳು ರಾಜ್ಯಾಂಗಗಳು ೪-೮ ಸಣ್ಣಿಸು, ಅರೆ-ಸಣ್ಣಗೆ ಮಾಡು
ಸಪ್ತಾರ್ಚಿ-ಅಗ್ನಿ ೩-೭೫ ವ, ೫-೮೬ (ಚೂರ್ಣಿಕರಣ) ಕೃಶಮಾಡು ಸಪ್ಪುಳ್ -ಧ್ವನಿ, ಶಬ್ದ ೩-೩೩ ವ ೧೧-೧೪೭
ಸಬ-ಶವ, ಹೆಣ ೮-೧೦೪ ಸತ್ಯತ- ಉಪಕಾರ ೯-೮೪
ಸಬ್ಬವ-ಪರಿಹಾಸ ೨-೯೫ ವ, ೩-೮೦ ಸತ್ಯ-ಬಲ ೩-೨೮
ಸಂಬಳಿಗೆ-ಸಂಪುಟಕ (ಸಂ) ಹೊಳು (ಸತ್ವಗುಣ ೧೦-೬೯)
- ೮-೧೬ ಸಂತತಿಚ್ಛೇದ-ವಂಶವನ್ನು ಕತ್ತರಿಸುವುದು ಸಂಭಕ-ನಿಶ್ಚಲಭಾವ ೪-೫೯ ವ ೩-೨೫ ವ
ಸಂಭವ-ಹುಟ್ಟುವ ಸ್ಥಳ ೧-೬೦ ವ ಸಂತರ್ಪಿನಂ-ತೃಪ್ತಿಯಾಗುವವರೆಗೂ ಸಂಭ್ರಮ-ಸಡಗರ ೩-೪ ವ | ೮-೨೧.
ಸಂಭ್ರತ-ತುಂಬಿದ ೬-೧೧ ವ ಸಂತಾನ-ಸಮೂಹ ೧-೧೧೯, ೪-೧೮ ವ ಸಮಕಟ್ಟು-ಯೋಗ್ಯತೆ ೫-೭೬, ೬-೪೮ ಸತ್ತಿಗೆ-ಛತ್ರಿಕಾ (ಸಂ) ಕೊಡೆ ೯-೧೦೪
ಏರ್ಪಾಡು ೭-೩೫, ೧೨-೧೮೨ ಸ್ಕಂದ-ವಿಭಾಗ ೧೪-೩೨
ಹೋಲಿಕೆ ೫-೭೭ ಸದ್ದ-ಶಬ್ದ (ಸಂ) ೧೨-೨೧೮
ಸಮಕ್ಷ-ಎದುರು ೩-೭೪ ವ 'ಸಂದಣಿ-ಗುಂಪು ೧೦-೫೧
ಸಮಕೋಳಿಸು-ಸರಿಮಾಡು ೧೩-೭೦ ವ ಸಂದಣಿಸು ೩-೭೦
ಸಮಗ್ರ-ತುಂಬಿಕೊಂಡಿರುವ ೧-೬೮ ಸ್ಪಂದನ-ಅದಿರುವುದು ೪-೩೩ ವ
ಸಮಚತುರಶ್ರ-ಚಚ್ಕ ೨-೬೫ ವ ಸದಾನಿ-ದಾನಗಳಿಂದ ಕೂಡಿದ ೧-೫೮
ಸಮಲ-ಮಟ್ಟಮಾಡು ೧೩-೯೨ ಸದ್ದಾಂತ-ಸುತ್ತುತ್ತಿರುವ ೩-೫೭
ಸಮಾಗಮ-ಸೇರುವಿಕೆ ೧೪-೬೨ ಸದ್ಭಾವ-ಅಭಿಪ್ರಾಯ ೨-೯೦
ಸಮಾನ ಪ್ರತಿಪತ್ತಿ-ಸಮಾನವಾದ ಗೌರವ ಸಂದೀ-ಸುರಿಸುತ್ತಿರುವ ೯-೬೭
೬-೩೩ ವ ಸಂದೆಯ-ಸಂದೇಹ (ಸಂ) ೨-೪೯
ಸಮಾಹಿತ-ಸಮಾಧಾನವನ್ನು ಪಡೆದ ಸಂಧಾರಿತ-ತೊಡಿಸಿದ ೮-೧೨
೧೪-೧೦ವ ಸಂಧಿ-ಕೀಲು ೮-೭೮ ವ|
ಸಮಿತಿ-ಸಮೂಹ ೧-೧೨೨, ೧೦-೭೯ ಸನ್ನಣ-ಸನ್ನಾಹ (ಸಂ) ಯೋಧರ
ಸಮೀರ-ಗಾಳಿ ೧೨-೧೦೫ ಯುದ್ಧಕವಚ ೧೦-೪೯, ೧೧-೮೨
ಸಮೀರಣ-ಗಾಳಿ ೩-೫೭ ಸಮುತ್ಕಾರಿತ-ಹೊರಡಿಸಲ್ಪಟ್ಟ ೧೩-೫೧ವ
ವ
Page #790
--------------------------------------------------------------------------
________________
೭೮೬
ಪಂಪಭರತಂ ಸೂಟಿನೆ-ಆಗಲೇ ಆ ಸಲವೇ ೫-೮೨ ಸೋಲ-ಆಸಕ್ತಿ, ಮೋಹ ೧-೪ ಸೂಚ್ಚಿಡೆ-ಸರದಿಯನ್ನು ಹೊಂದು ೧೦-೨೩ ಸೋಲುವಿಕೆ ೬-೭೨ ವ ಸೂಚಾಯ್ತಿ-ಸೇವಕಿ ೧-೮೫ ವ
ಸೋವತಂ-ಬಲಿ ೧೩-೪೧ ವ ಸೂ-ಸಮಯವೇ, ನ್ಯಾಯವೇ ೫-೭೪ ಸೋವಳಿ-ಅಟ್ಟುವಿಕೆ ೫-೪೬ ಸೂಟ್ಸಿ-ಬಾರಿ ಬಾರಿಗೂ ೧೧-೯೫ ಸೋವು-ಅಟ್ಟು ೨-೧೭, ೧೩-೫೭ ಸೃತ-ಸೋರಿದ ೭-೫೮
ಸೋಭ-ತಡೆ ೪-೫೯ ವ ಸೆಜ್ಜೆ-(ಶಯ್ಯಾ) (ಸಂ) ಹಾಸಿಗೆ ೩-೮೧ವ
ಸೋತ-ಪ್ರವಾಹ ೭-೭೩, ೧೪-೫೨ ಸೆಂಡು-ಚೆಂಡು ೨-೩೦, ೩-೩೦ ವ
'ಸೌರಭ-ಸುವಾಸನೆ ೪-೧೦೭ ಸೆಡೆ -ಸ೦ಕೋಚ ಪಡು, ಭಯಪಡು,
ಸೌಷ್ಠವ-ಸೊಗಸು ೪-೫೮
ಸರ-ಪರಿಮಳ ೫-೬೦ವ ೩-೮೧ವ, ೯-೧೮, ೧೧-೧೪೯ ಸೆಣಸು-ಹೋರಾಡುವಿಕೆ ೪-೧೧ -
ಸೌಳಗೆ-ಸೀಳುವ ಅನುಕರಣ ೮-೧೬ ಸೆರಗು- ಭಯ ೧-೧೦೨, ೮-೧೭,
೧೧-೨೧, ೪೨, ಸೆರಗ ಬೆರಗಂ ಹವ್ಯತೇ-ಕೊಲ್ಲಲ್ಪಡುತ್ತಾನೆ ೨-೯೦ ಶ್ಲೋ ೮-೬, ೭-೧೦೮ .
ಹರ್ಮ್ಮ-ಉಪ್ಪರಿಗೆ ೩-೧೮ ವ ಸಂಪು-ಆತಿಥ್ಯ, ಉತ್ಸವ ೪-೪೪
ಹಯವಲನ-ಕುದುರೆಯ ನಡಗೆಯ ಭೇದ ಸೆರೆ-ರಕ್ತನಾಳ ೨-೩೯ ವ.
೫-೫೧. ಸೆ-ಬಂಧನ ೧೧-೧೩೩ ವ
ಹರಿ-ಕುದುರೆ ೧-೧೯, ೨೯ ಸೆಗಳ್-ಸೆರೆಬಿದ್ದವರು ೬-೫೬ ವ
ಸಿಂಹ-೪-೪೯ ವ ಸೆಕೋಲ್-ಪಕ್ಕಗಳ ತುದಿ ೧೦-೫೭
ಕೃಷ್ಣ ೯-೮, ವಿಷ್ಣು ೪-೪೪ ವ ವ, ೫೯
ಹರಿಚಂದನ-ಶ್ರೀಗಂಧ ೧೪-೧೦ವ ಸೆಳುಗುರ್ -ಕೋಮಲವಾದ ಉಗುರು
ಹಳ-ನೇಗಿಲು ೬-೨೯
ಹಳಿ-ಬಲರಾಮ ೧೩-೭೫ ೪-೭೫ ವ
ಹಾರ-ಹೊಂದಿರುವ ೧-೫೮ವ ಸೇಕ-ಚಿಮುಕಿಸುವುದು ೫-೧೦ ವ
ಹಾರಿ-ಮನೋಹರ ೧-೫೮ ಸೇತುಬಂಧ-ರಾಮಸೇತು ೪-೮ವ
ಹಾವ-ಶೃಂಗಾರಚೇಷ್ಟೆ ೪-೧೨ ಸೇದೆ-ಬಳಲಿಕೆ ೯-೪೨
ಹಿಂತಾಳ-ಒಂದು ಬಗೆಯ ತಾಳೆ ಗಿಡ ೫-೧೬ ಸೇಸೆ-ಮಂತ್ರಾಕ್ಷತೆ ೨-೯೩ ವ, ೫-೫೨
ಹಿಮಕರ-ಚಂದ್ರ ೧-೮೩ ಸೈತು-ಸೇರಿಸಿಕೊಂಡು ೭-೫೮ |
ಹಿಮಕೃತ್ -ಚಂದ್ರ ೯-೮೮ ಸುಮ್ಮನೆ - ೧೦-೩೪
ಹಿಮಾಂಶು-ಚಂದ್ರ ೩-೮೧ ಸೈದರ್ -ನಿಷ್ಕಪಟಿಗಳು ೧೩-೯
ಹುತ-ಹೋಮಮಾಡಲ್ಪಟ್ಟ ೩-೭೪ ವ ಸೊಡರ್-ದೀಪ ೧೦-೪೭
ಹುತವಹ-ಅಗ್ನಿ ೩-೭೪ ವ ಸೊನ-ಮರದಿಂದ ಸೋರುವ ದ್ರವ ೨-೧೨ವ ಹೃದಯಬಂಧ-ಎದೆಯ ಕಟ್ಟು ೬-೨೭ ವ ಸೊಪ್ಪು-ದನಿ, ಶಬ್ದ ೧೩-೬೩ ವ ಹೇತಿ-ಆಯುಧ ೧೦-೨೮, ೧೨-೧೩೫ ಸೊಲ್ಟಿನಂ - ಹೇಳುವಂತೆ ೧-೨೫ ಹೇಷಿತ-ಕುದುರೆಯ ಕೆನೆಯುವಿಕೆ ೩-೩೮ ಸೋಂಕಿಲ್ -ಮಡಿಲು ೧-೯೬
ಹೇಳಾ-ಕ್ರೀಡೆ, ಆಟ ೮-೮೩ ವ ಸೋಗಿಲ್ -ಮಡಿಲು ೧-೧೪೦
ಹೋತೃ-ಋತ್ವಿಕ್ಕು, ಹೋಮ ಮಂತ್ರವನ್ನು ಸೋಗೆ-ಗಂಡುನವಿಲು ೨-೪೧ ವ
ಹೇಳುವವನು ೬-೩೩ ವ ಮಡಿಲು - ೨-೪೧ವ ಸೋದನದೀವಿಗೆ - ಶೋಧನದೀಪಿಕಾ
(ಸಂ) ೪-೫೨
Page #791
--------------------------------------------------------------------------
________________
ಶಬ್ದಕೋಶ
ಸಿರಿಕಂಡ-ಶ್ರೀಗಂಧ ೪-೨೧, ೫-೩೦ ಸಿಲ್ಕು-ಸಿಕ್ಕು ೪-೭೦
ಸಿವಿಗೆ-ಶಿಬಿಕಾ (ಸ) ಪಲ್ಲಕ್ಕಿ ೩-೪೮ ವ,
6-000
ಸ್ನಿಗ್ಧಂ-ಸ್ನೇಹದಿಂದ ಕೂಡಿದುದು ೪-೭೭ ಸೀಗುರಿ-ಸೂರೆಪಾನ (ಬಿಸಿಲನ್ನು
ಮರೆಮಾಡುವ ಉಪಕರಣ) ೩-೪೮ ವ, ೪-೪೦ ಸೀಂಟು-ಒರಸು ೧೨-೬೪
ಸೀಂತಂತೆ-ಸೀತಹಾಗೆ ೭-೯೪ ವ
ಸೀತು-ಸಿಯ್ಯಾದುದು ೪-೮೮
ಸೀತೆ-ಸೀತಾದೇವಿ, ಉತ್ತ ಭೂಮಿ ೯-೪೯ ಸೀದು-ಸೀಧು (ಸಂ) ಮದ್ಯ ೪-೮೮ ಸೀಧು-ಮದ್ಯ ೫-೧೦ ವ ಸೀಮ-ಎಲ್ಲೆ ೧೪-೪೦
ಸೀಮಂತಿನೀ-ಹೆಂಗುಸು ೫-೨೫
ಸೀರಪಾಣಿ-(ಸೀರ - ನೇಗಿಲು) ಬಲರಾಮ
೪-೩೨
ಸೀರು-ಹೇನಿನ ಮೊಟ್ಟೆ (ಅತ್ಯಲ್ಪ) ೫-೯೭ ಸೀ-ಭಯಂಕರವಾದ, ರೇಗಿದ,
ಕೋಪಗೊಂಡ, ೪-೯೮
ಸೀಡು-ಜೀರುಂಡೆ ೩-೯
ಸೀಂಬುಳಾಡು-ಎರಚಾಡು ೮-೩೧ ವ
ಸೀರೆ-ಬಟ್ಟೆ ೩-೩೩
ಸುಕ-ಸುಖ (ಸಂ) ೧-೧೩೪ ಸುಗಿ-ಹೆಸರು ೧-೮೦
ಸುಟ್ಟಿ ತೋಟ-ಬೆರಲಿನಿಂದ ಗುರುತಿಸಿ ತೋರಿಸು ೨-೩೯ ವ, ೩-೭೧ ವ ಸುಂಟಿಗೆ-ಸುಟ್ಟ ಮಾಂಸ ೧೨-೨೪ ಸುಟ್ಟುರೆ-ಸುಂಟರಗಾಳಿ, ಪ್ರವಾಹ,
೮-೧೦೫, ೧೦-೭೦ ವ ಸುತಿ-ಶ್ರುತಿ (ಸಂ) ೭-೮೮ ಸುತ್ತಿದೆದ-ಸುತ್ತಿಕೊಂಡಿರುವ ೧-೫೭ ಸುದ್ದಿಗೆ- (ಶುದ್ಧಕ) ಅಕ್ಷರ ೨-೩೪ ಸುಧಾ-ಸುಣ್ಣ ೩-೧೮ ವ, ೪-೫೨ ವ ಸುಧಾಸೂತಿ-ಚಂದ್ರ ೪-೫೦ ಸುಪ್ಪಲ್-ಭಕ್ಷ್ಯವಿಶೇಷ ೧೨-೧೬೦ ಸುಪುಷ್ಟಪಟ್ಟ-ಶಿರೋವೇಷ್ಟನ ೧-೧
ಸುಭಗೆ-ಸೌಭಾಗ್ಯವತಿ ೧-೧೪೩
ಸುಯ್-ಉಸಿರು ೫-೧೦
ಸುಯ್ಯತಾಣ, ಸುಯ್ಯಾಣ-ಕಸೂತಿಯ ಕೆಲಸ ೧೪-೧೫, ೩-೪೦ ವ ಸುರಗಿ-ಧುರಿಕಾ (ಸಂ) ಸಣ್ಣ ಕತ್ತಿ ೧೨-೧೫೩ ಸುರಧನು-ಕಾಮನ ಬಿಲ್ಲು ೧-೧೩ ವ ಸುರಭಿ-ಕಾಮಧೇನು ೧-೨೯ ಹಸು
೭೮೫
೧-೧೧೫ವ ೧೨-೧೦೮ ವ, ಸುವಾಸನೆ ೧-೫೯, ೧೪-೨೦ ವ ಸುರಯಿ-ಪುನ್ನಾಗ, ಸುರಗಿಗಿಡ ೩-೨೨ ಸುರಸಿಂಧು-ದೇವಗಂಗೆ ೭-೧೫
ಸುರಿಗಿದೆ-ಕತ್ತಿಯಿಂದ ಇರಿ ೧೦-೮೮,
೧೨-೧೪೮
ಸುರಿಗೆ-ಕತ್ತಿ ೧೨-೧೫೩
ಸುರುಳ್ ಸುತ್ತಿಕೊಳ್ ೧೨-೪೮ ವ ಸುಲಿ-ಶುಭ್ರವಾಗಿ ಮಾಡು ೨-೨೪ ವ, ೧೦-೪೪ ವ, ಶುಭ್ರವಾದ
0-022
ಸುಷ್ಟು-ಚೆನ್ನಾಗಿರುವ ೧೧-೫೨ ಸುಸಿಲ್-ರತಿ ೪-೩೧
ಸುಹೃತ್-ಸ್ನೇಹಿತ ೩-೩೩ ಸುಜೆ-ಸಂಚು ಹಾಕು ೬-೭೨ ವ ಸುರಿತ-ಪ್ರಕಾಶಮಾನವಾದ ೩-೧ ಸೂಕರಿ-ಹೆಣ್ಣು ಹಂದಿ ೧೧-೭೩ ಸೂಚ-ಹುಲ್ಲಿನ ಊಬು ೫-೪೪ ಸೂಡು-ಕಂತೆ ೧೩-೪೧ ವ
ಹೂವನ್ನು ಧರಿಸು ೧-೧೦೬,
೩-೬೪
ಸೂತ-ಅಂಬಿಗ, ಬೆಸ್ತರವನು ೯-೬೫,
ಸಾರಥಿ ೧೧-೬೫ ಸೂತಕ-ಜನನ ೧-೯೬ ವ
ಸೂರುಳ್-ಪ್ರತಿಜ್ಞೆ ೪-೯೧, ೭-೭೫ ಸೂಗೊಡು-ಯಥೇಚ್ಛವಾಗಿ ಕೊಡು
೬-೪೦
ಸೂಸಕ-ಆಭರಣದ ಗೊಂಚಲು ೨-೪೧ ವ ಸೂಯ್-ಬಾರಿ ; ಆವೃತ್ತಿ ೨-೨೬ ಸೂ ಸೂನೆ-ಬಾರಿ ಬಾರಿಗೂ ೬-೩೮
Page #792
--------------------------------------------------------------------------
________________ * 82 ಅಖಿಲ ಭಾರತ 4444, 4-## ಪ್ರಿಯ ಕನ್ನಡ ಬಂಧುಗಳೆ, ೧೯೧೫ರಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವವನ್ನು ಪೂರೈಸಿದೆ. ಸ್ಥಾಪನೆಗೊಂಡಂದಿನಿಂದ ಇಂದಿನವರೆಗೂ ಕನ್ನಡ - ಕನ್ನಡಿಗ - ಕರ್ನಾಟಕದ ಒಳಿತಿಗೆ ಶ್ರಮಿಸುತ್ತಾ, ಕನ್ನಡಿಗರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಎಚ್ಚರ ಮೂಡಿಸುವಲ್ಲಿ ಪರಿಷತ್ತಿನ ಪ್ರಕಟಣೆಗಳು ಮಹತ್ವದ ಪಾತ್ರ ವಹಿಸುತ್ತಾ ಬಂದಿವೆ. ನಮ್ಮ ಪ್ರಕಟಣೆಗಳು ಓದುಗರ ಜೇಬಿಗೆ ಭಾರವೆನಿಸುವಂಥವಲ್ಲ, ಆದಷ್ಟೂ ಕಡಿಮೆ ಬೆಲೆಯಲ್ಲಿ ಮೌಲಿಕ ಕೃತಿಗಳನ್ನು ಸಹೃದಯರಿಗೆ ಕೊಡಬೇಕೆನ್ನುವ ನೀತಿಗೆ ಪರಿಷತ್ತು ಈಗಲೂ ಬದ್ದವಾಗಿದೆ. ಕನ್ನಡಿಗರನ್ನು ಪ್ರಜ್ಞಾವಂತರಾಗಿ, ಅಭಿಮಾನ ಧನರಾಗಿ, ವಿಶ್ವಮಾನವರಾಗಿ ರೂಪಿಸಲು ಪರಿಷತ್ತು ಪ್ರಕಟಿಸುವ ಸಾಹಿತ್ಯವು ಪೂರಕವಾಗಿರಬೇಕೆನ್ನುವ ಆಶಯ ನನ್ನದು. ಪರಿಷತ್ತು ಈಗಾಗಲೇ ಪ್ರಕಟಿಸಿ ಅತ್ಯಂತ ಜನಪ್ರಿಯವಾಗಿರುವ ಮರುಮುದ್ರಣ ಮಸ್ತಕಗಳು ಹಾಗೂ ಹೊಸ ಪುಸ್ತಕಗಳನ್ನು ರಾಯಚೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ೮೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮುದ್ರಣಗೊಳಿಸಿ ಕನ್ನಡಿಗರ ಕೈಗೊಪ್ಪಿಸುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ. ಸಹೃದಯರು ಈ ಪುಸ್ತಕಗಳನ್ನು ಎಂದಿನ ಪ್ರೀತ್ಯಾದರಗಳಿಂದ ಬರಮಾಡಿ ಕೊಳ್ಳುವರೆಂಬ ಭರವಸೆ ನನಗಿದೆ. ಡಾ. ಮನು ಬಳಿಗಾರ್ ಅಧ್ಯಕ್ಷರು ಕನ್ನಡ ) ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-೫೬೦೦೧೮