SearchBrowseAboutContactDonate
Page Preview
Page 198
Loading...
Download File
Download File
Page Text
________________ ೫೦ ತೃತೀಯಾಶ್ವಾಸಂ | ೧೯೩ ಪೆಂಡವಾಸದೊಳೊಂಡಿರ್ ಬಳಸಿ ಬರೆ ತಳ್ಳು ಪಿಡಿದ ಕನಕ ಪದದ ಸೀಗುರಿಗಳ ನೆಲೆಡೆವಳಿಯದೆ ಬರೆ ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ ನೆಲೆಯ ಪಣ್ಣಿದ ಮದಾಂಧ ಗಂಧಸಿಂಧುರಂಗಳನೇಕೆ ಬರೆ ಮುಂದೆ ಪರಿವ ಧವಳಚ್ಚತ್ರ ಚಂದ್ರಾದಿತ್ಯ ಪಾಳಿಕೇತನಾದಿ ರಾಜ್ಯ ಚಿಹ್ನಂಗಳುಂ ಮೋಲಗುವ ಮಂಗಳರ್ಯಂಗಳೆಸೆಯ ಪಂಪನಿಗೆ ದೌಪದಿ ಶೃಂಗಾರಸಾಗರಮ ಮೆರೆದಪ್ಪಿ ಬರ್ಪಂತೆ ಬರೆಕ೦ll ಪರೆದುಗುವ ಪಂಚ ರತ್ನದ ಪರಳುದಿರ್ದೆಸೆಯ ಸೌಧದೋಳೆ ಕೆದಟದ ಕ | ಪುರವಳ್ಳುಗಳೆಸೆಯ ಸಯಂ ಬರ ಸಾಲೆಯನೆಸೆವ ಲೀಲೆಯಿಂ ಪುಗುತಂದ | ವl ಆಗಲ್ಕ೦ll ನುಡಿವುದನೆ ಮಣಿದು ಪೆಜತಂ ನುಡಿಯ ಕೆಲರ್ ನೋಡದಂತೆ ನೋಡೆ ಕೆಲರ್ ಪಾ | ವಡರ್ದವೂಲಿ ಕೆಲರೊಯ್ಯನೆ ತುಡುಗೆಯನೂಸರಿಸೆ ಕೆಲರುದಾವನಿಪರ್ || ಒಡನೆ ನೆರದರಸುಮಕ್ಕಳ ನಿಡುಗಲ್ಗಳ ಬಳಗಮನಿಗೆ ತನ್ನಯ ಮಯ್ಯೋಳ್ | ನಡೆ ಬಳಸಿ ಪಲರುಮಂಬಂ ತುಡ ನಡುವಿರ್ದೊಂದು ಪುಲ್ಲಯಿರ್ಪಂತಿರ್ದಳ್ || ೫೧ . ಗುಂಪುಗೂಡಿ ಬಳಸಿ ಬರುತ್ತಿರಲು ಮುಂದೆ ಹೋಗುತ್ತಿರುವ ಕ್ರಮಬದ್ದವಾದ ಹೆಣ್ಣಾನೆಯನ್ನು ಹತ್ತಿಕೊಂಡು ರಾಣಿವಾಸದ ಸಭ್ಯಸ್ತ್ರೀಯರು ಸುತ್ತ ಬರುತ್ತಿರಲು ಎತ್ತಿ ಹಿಡಿದ ಸೀಗುರಿಗಳು ನೆರಳು ವಿಚ್ಛತ್ತಿಯಿಲ್ಲದೆ ಜೊತೆಯಲ್ಲಿಯೇ ಬರುತ್ತಿರಲು ದ್ರುಪದನೂ ಧೃಷ್ಟದ್ಯುಮ್ಮನೂ ಮುತ್ತು ಮಾಣಿಕ್ಯಾಭರಣಗಳಿಂದ ಪೂರ್ಣವಾಗಿ ಅಲಂಕಾರಮಾಡಿದ ಮದ್ದಾನೆಗಳನ್ನೇರಿ ಬರುತ್ತಿರಲು ಮುಂಭಾಗದಲ್ಲಿ ಹರಿದುಹೋಗುತ್ತಿದ್ದ ಬಿಳಿಯ ಕೊಡೆ, ಚಂದ್ರ, ಸೂರ್ಯ, ಧ್ವಜಸಮೂಹವೇ ಮೊದಲಾದ ರಾಜ್ಯಚಿಹ್ನಗಳೂ ಶಬ್ದಮಾಡುತ್ತಿದ್ದ ಮಂಗಳವಾದ್ಯಗಳೂ ಪ್ರಕಾಶಿಸುತ್ತಿರಲು ಹಿಂಭಾಗದಲ್ಲಿ ಬ್ರೌಪದಿಯು ಶೃಂಗಾರಸಾಗರವೇ ಎಲ್ಲೇ ಮೀರಿ ಬರುವಂತೆ ಬಂದಳು. ೪೯. ಎಲ್ಲೆಲ್ಲಿಯೂ ಹರಡಿದ್ದ ಪಂಚರತ್ನದ ಹರಳುಗಳೂ ಪಚ್ಚಕರ್ಪೂರದ ಹಳುಕುಗಳೂ ಪ್ರಕಾಶಿಸುತ್ತಿರಲು ಸ್ವಯಂವರಶಾಲೆಯನ್ನು ಸರಳವಿಲಾಸದಿಂದ ಪ್ರವೇಶಿಸಿದಳು. ವ|| ಆಗ ೫೦. (ಅವಳನ್ನು ನೋಡಿ ದಿಗ್ಗಾಂತರಾಗಿ) ಕೆಲವರು ಹೇಳಬೇಕಾದುದನ್ನು ಮರೆತು ಬೇರೆಯದನ್ನು ನುಡಿದರು, ಕೆಲವರು ನೋಡದಂತೆ ಬ್ರೌಪದಿಯನ್ನು ನೋಡುತ್ತಿದ್ದರು, ಮತ್ತೆ ಕೆಲವರು ಹಾವನ್ನು ಎದುರಿಸಿದವರಂತಿದ್ದರು ಮತ್ತೆ ಕೆಲವು ರಾಜಶ್ರೇಷ್ಠರು ಆಭರಣಗಳನ್ನು ಓರೆಮಾಡುತ್ತಿದ್ದರು. ೫೧, ಒಟ್ಟಿಗೆ ಅಲ್ಲಿ ನೆರೆದಿದ್ದ ರಾಜಕುಮಾರರ ನೀಳವಾದ ಕಣ್ಣುಗಳ ಸಮೂಹವು ತನ್ನ ಶರೀರದ ಮೇಲೆ ಎರಗಿ ನಾಟಿಕೊಳ್ಳಲು ಸುತ್ತಲೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy