SearchBrowseAboutContactDonate
Page Preview
Page 591
Loading...
Download File
Download File
Page Text
________________ ೫೮೬ | ಪಂಪಭಾರತಂ ಚಂ|| ಅನಲಶಿಖಾಕಳಾಪವನೆ ಭೋರ್ಗರೆದಾರ್ದುಗುಟ್ಟನ್ನಮಪ್ಪಗು ರ್ವಿನ ಶರಸಂಕುಳಂಗಳೊಳೆ ಭೋರ್ಗರೆದಾರ್ದಿಸ ಭೀಮನಚ್ಚ ನ | ಚಿನ ಘನ ಬಾಣಜಾಳಮದು ಭೋಂಕನೆ ನೋಡುವೊಡಾಳಜಾಳವಾ ಮೈನೆ ಕಡಿದೊಟ್ಟ ಸುಟ್ಟುವು ಪತಿಗಳು ಗುರುಪುತ್ರನಂಬುಗಳ್ || ೬೮ ವ|| ಅಂತು ಗುರುನಂದನಂ ಮರುನಂದನವಿರಚಿತ ನಿಶಾತ ವಿಶಿಖ ಪಂಜರಮನದು ಕಲಕುಲಂಮಾಡಿಯುಮನಿತಳ್ ಮಾಣದೆ ಕಂtರ ತೇರಂ ಕುದುರೆಯನೆಸಗುವ ಸಾರಥಿಯ ಪೂಡರ್ಪನಯು ಬಾಣದೊಳುಪಸಂ | ಹಾರಿಸಿ ತಟತಟ ತೋಳಗುವ ನಾರಾಚದಿನೆಚ್ಚನೂ ಭೀಮನ ನೊಸಲಂ || ಮಿಸುಗುವ ನೊಸಲಂ ನಟ್ಟ ರ್ವಿಸುವಿನೆಗಂ ತೂಗಿ ತೊನೆವ ನಾರಾಚಮದೇ | ನೆಸೆದುದೂ ತದ್ವದನಾಂಭೋ ಜ ಸೌರಭಾಕೃಷ್ಟ ಮಧುಪ ಮಾಲಾಕೃತಿಯಿಂ || ನಡೆ ನಾರಾಚದ ನೋವಿನ ನಡುಕಂ ಪಿರಿದಾಯ್ತು ಸರ್ಪಯೋನಿಯ ಸೆರೆಯಂ | ಬಿಡಿಸಿದವೊಲೆಚ್ಚು ಪಾಯ್ದ ತೊಡನೊಡನೆ ಕದು ಕೃಷ್ಣ ರುಧಿರ ಜಿಘಂ || ನಕ್ಕು ಇವನೂ ನಮ್ಮನ್ನು ಬಳಸುತ್ತಾನಲ್ಲವೆ ಎಂದು-೬೮. ಅಗ್ನಿಜ್ವಾಲೆಯ ಸಮೂಹವನ್ನೇ ಭೋರೆಂದು ಶಬ್ದಮಾಡಿ ಉಗುಳುವಂತಹ ಭಯಂಕರವಾದ ಬಾಣಸಮೂಹದಿಂದಲೇ ಆರ್ಭಟಿಸಿ ಶಬ್ದಮಾಡಿ ಅಶ್ವತ್ಥಾಮನನ್ನು ಹೊಡೆದನು. ಅವುಗಳಿಂದ ಭೀಮನು ಹೊಡೆದ (ಸಾರವತ್ತಾದ) ಆ ಬಾಣಸಮೂಹವು ನೋಡುತ್ತಿರುವ ಹಾಗೆಯೇ ನಿಸ್ಸಾರವಾದ ಹಂದರವಾಯ್ತು ಎನ್ನುವ ಹಾಗೆ ಅಶ್ವತ್ಥಾಮನ ಬಾಣಗಳು ಭೀಮನ ಬಾಣಗಳನ್ನು ಕಡಿದು ರಾಶಿ ಮಾಡಿ ಸುಟ್ಟು ಹಾಕಿದವು. ವ|| ಹಾಗೆ ಅಶ್ವತ್ಥಾಮನು ಭೀಮನಿಂದ ರಚಿತವಾದ ಹರಿತವಾದ ಬಾಣಜಾಲವನ್ನು ನಾಶಪಡಿಸಿ ಚದುರಿಸಿ ಅಷ್ಟಕ್ಕೇ ಬಿಡದೆ ೬೯. ಅವನ ತೇರನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯ ಶಕ್ತಿಯನ್ನೂ - ಅಯ್ದುಬಾಣಗಳಿಂದ ನಾಶಮಾಡಿ ತಳತಳನೆ ಹೊಳೆಯುವ ಬಾಣದಿಂದ ಭೀಮನ ಮುಖವನ್ನು ನಾಟುವ ಹಾಗೆ ಹೊಡೆದನು. ೭೦, ಹೊಳೆಯುವ ಹಣೆಯಲ್ಲಿ ನಾಟಿಕೊಂಡು ವ್ಯಾಪಿಸುತ್ತ ಆ ಕಡೆಗೂ ಈ ಕಡೆಗೂ ತೂಗಾಡುತ್ತಿರುವ ಆ ಬಾಣವು ಭೀಮನ ಮುಖಕಮಲದ ವಾಸನೆಯಿಂದ ಆಕರ್ಷಿತವಾದ ದುಂಬಿಗಳ ಸಮೂಹದ ಆಕಾರದಿಂದ ವಿಶೇಷ ಸುಂದರವಾಗಿದ್ದಿತು. ೭೧. ಬಾಣದ ನೋವಿನ ತುಡಿತವು ಹೆಚ್ಚಾಯಿತು. ವಿಸರ್ಪಿಣಿಯೆಂಬ ರೋಗವುಳ್ಳವನ ರಕ್ತನಾಳವನ್ನು ಕತ್ತರಿಸಿದಂತೆ ಸ್ವಲ್ಪ ಬೆಚ್ಚಗಿರುವ ಕಪ್ಪಾದ ರಕ್ತಸಮೂಹವು ಒಡನೆಯೇ ಸೂಸಿ ಹರಿಯಿತು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy