________________
ಅಷ್ಟಮಾಶ್ವಾಸಂ / ೪೦೫ ಮಚರದಿನೊರ್ವರೋರ್ವರ ನುಚ್ಚಳಿಸಿ ತಗುಳು ಗೋವರಾರ್ದಿಸಿ ಕೀಬಂ | ಕರ್ಚಿ ಪುಡಿಯೊಳ್ ಪೊರಳುವು ನೆಚ್ಚಿನ ಕಾಂಭೋಜವಾಜಿಗಳ ಕೆಲವಾಗಳ್ ||
೯೪ ವll ಅಂತು ಮತ್ತು ಮನದೊಳೊಡಂಬಟ್ಟಂತೆ ಮನಮನೆಡಗಲಿಸಿ ಪರಿವ ಜಾತ್ಯಶ್ವಂಗಳೆಲ್ಲ ಮಳೆಗಾಳಗದೊಳ್ ಸತ್ತೊಡಚಂ| ತುಲು ಪರಿವಾಗಳೆಮ್ಮ ಪಣನಂ ತುಟಿದುಂ ಪರಿಗುಂ ದಲೆಂದು ಚಿಃ
'ತುಜುಗೊಳೆ ಬಾಳೆಮೆಂದು ತುಜುಗೋಳ್ಳೆ ಸಾವುದು ಸೈಪಿದಂದು ಪಾ | ಯತಿಕಯ ಗೋವರಣಿ ಬರ ಪಾಯಿಸಿ ಘೋಟಿಯಿಲರ್
ತಳ ತಳೆದಿಕ್ಕಿ ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್ || ೯೫ : ವ|| ಆಗಳೊರ್ವ ಗೋವಳನನಿಬರ ಸಾವುಮಂ ಕಂಡು ಮನದೊಳಾದೇವ ಪೆರ್ಚೆಯುಂ ತುಲುವ ಪೋಗಿಂಗಾಜದ ವಿರಾಟಪುರಕ್ಕೆ ವಂದುತ್ತರಂಗೆ ಪೇಯ್ದಾಗಚಂ11 ಬೆಂಗಣ ಕಾಪೆನ್ನನೆ ಮಹೀಪತಿ ಪೂಣಿಸಿ ಪೋದನಾಂ ಗಡಂ
ತುಜುಗೂಳ ಮಾಸನನಿದಿರ್ಗ ರಾವಣ ಕೋಟಿಯುಮಾಂತುಮಂ ಗೆಲಲ್ | ನಗುಮ ತಮಿನೈನಗ ಸಾರಥಿಯಪ್ಪನನೀಗಲೆಂದು ಪೊ | ಚಳಿಗೆ ವಿರಾಟನಂದನನದಲ್ಲಮನಾಗಡ ವಿಕ್ರಮಾರ್ಜುನಂ ||
೯೬
ಸಮೀಪಕ್ಕೆ ಬಂದು ಬಾಣಪ್ರಯೋಗಮಾಡಲು ದನಕಾಯುವವರ ಅಂದಿನ ಯುದ್ಧವು ಸ್ವಲ್ಪ ಬಲಿಷ್ಠವೇ ಆಯಿತು. ೯೪, ಮತ್ಸರದಿಂದ ಒಬ್ಬರನ್ನೊಬ್ಬರು ಹಾರಿಸಿ ದನಕಾಯುವವರು ಆರ್ಭಟದಿಂದ ಹೊಡೆಯಲು (ಜಯಿಸಿಯೇ ತೀರುತ್ತೇವೆಂದು) ನಂಬಿದ್ದ ಕೆಲವು ಕಾಂಭೋಜದೇಶದ ಕುದುರೆಗಳು ಕಡಿವಾಣವನ್ನು ಕಚ್ಚಿಕೊಂಡೇ ಹುಡಿಯಲ್ಲಿ ಹೊರಳಿದುವು. ವll ಹಾಗೆ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಮನಸ್ಸನ್ನೂ ಮೀರಿ ಓಡುವ ಜಾತಿಕುದುರೆಗಳೆಲ್ಲ ಆ ಸಾಮಾನ್ಯಯುದ್ಧದಲ್ಲಿ ಸತ್ತವು. ೯೫. ದನಗಳು ಓಡುವಾಗ ನಮ್ಮ ಹೆಣವನ್ನು ತುಳಿದುಕೊಂಡು ಓಡುತ್ತವೆಯಲ್ಲವೇ ? ದನಗಳನ್ನು ಶತ್ರುಗಳು ಹಿಡಿದರೆ ನಾವು ಬದುಕಿರಲಾರೆವು. ತುರುಗಾಳಗದಲ್ಲಿ ಸಾಯುವುದು ನಮ್ಮ ಪುಣ್ಯವೇ ಸರಿ (ಅದೃಷ್ಟ ಎಂದು ಹಾಯ್ದು ಪ್ರಸಿದ್ಧರಾದ ಗೋಪಾಲಕರು ಪೌರುಷಪ್ರದರ್ಶನಮಾಡಿ ಬರಲು ಕುದುರೆಯ ರಾವುತರು ಕುದುರೆಗಳನ್ನು ಮುನ್ನುಗ್ಗಿಸಿ ಅವರನ್ನು ಬೆನ್ನಟ್ಟಿ ದೇವಾಲಯಕ್ಕೆ ದೊಡ್ಡಮರವನ್ನು ಕಡಿಯುವಂತೆ ಚೂರುಚೂರಾಗಿ ಕತ್ತರಿಸಿದರು. ವ|| ಆಗ ಒಬ್ಬ ಗೋಪಾಲಕನು ಅಷ್ಟುಮಂದಿಯ ಸಾವನ್ನು ಕಂಡು ಮನಸ್ಸಿನಲ್ಲಿ ಕೋಪವು ಹೆಚ್ಚಿಯೂ ಪಶುಗಳ ನಾಶವನ್ನು ಸಹಿಸಲಾರದೆಯೂ ವಿರಾಟನಗರಕ್ಕೆ ಬಂದು ಉತ್ತರನಿಗೆ ಆ ವಿಷಯವನ್ನು ತಿಳಿಸಿದನು. ೯೬. ನಗರದ ಹಿಂಗಾವಲಿಗೆ ರಾಜನು ನನ್ನನ್ನು ನಿಯಮಿಸಿ ಹೋದನು. ಆದರೂ ಪಶುಗಳನ್ನು ಸೆರೆಹಿಡಿಯವುದಕ್ಕೆ ನಾನು ಅವಕಾಶಕೊಡುವುದಿಲ್ಲ, ನನ್ನ ಇದಿರಾಗಿ ಕೋಟಿ ರಾವಣರು ಬಂದರೆ ತಾನೆ ನನ್ನನ್ನು ಗೆಲ್ಲಲು ಸಾಧ್ಯವೇ ? ಈ ನನಗೆ ಸಾರಥಿಯಾಗುವವನನ್ನು