SearchBrowseAboutContactDonate
Page Preview
Page 314
Loading...
Download File
Download File
Page Text
________________ ಷಷ್ಠಾಶ್ವಾಸಂ | ೩೦೯ ಜರೆಂಬ ರಕ್ಕಸಿ ಕಂಡು ತಿನಲೆಂದೆರಡು ಪೊಲುಮನೊ೦ದು ಕೆಳ ಪಿಡಿದೊಡೂಂದೊಂದು ಸಂದಿಸಿ ಮಾನಸರೂಪುಗೊಂಡೊಡೆ ಚೋದ್ಯಂಬಟ್ಟು ಜರಾಸಂಧನೆಂದು ಹೆಸರನಿಟ್ಟು ಬೃಹದ್ಬಳಂಗೆ ಕೊಟ್ರೊಡೆ ಜರಾಸಂಧನುಂ ಸಾಲ್ವಲನುಮೆಂಬ ದೈತ್ಯನುಮೊಂದಾಗಿ ಮೂವತ್ತೆರಡಕ್ಕೋಹಿಣಿಬಲಂಬೆರಸು ಮಧುರಾಪುರಕ್ಕೆ ವಂದನ್ನು ಮುತ್ತಿ ಕೊಂಡೊಡುಪಾಯ ಬಲದೊಳೆ ಸಾಲ್ವಲನಂ ಕೊಂದು ಜರಾಸಂಧಂಗಳ್ಳಿ ಮಧುರಾಪುರಮಂ ಬಿಸುಟ್ಟು ಪೋಗಿ ದ್ವಾರಾವತಿಯಂ ಸಮುದ್ರಮ ನಿರ್ಗಾದಿಗೆಯಾಗಿ ಮಾಡಿದೆನೆನ್ನುಂ ಯಾದವರ ಸಜಗಳೆಲ್ಲಾತನಲ್ಲಿರ್ದರಾತನುಂ ಭೀಮನ ಕೆಯೊಳಲ್ಲದೆ ಸಾಯನೆಂಬುದಾದೇಶಮದಲೆನೆಮಿಚ್ಛೆಯುಂ ಸಮಸ ಬಲಂಬೆರಸು ಭೀಮಾರ್ಜುನರಂ ಪೇಜುದೆಂದು ಧರ್ಮಪುತನನೊಡಂಬಡಿಸಿ ನುಡಿದು ಮಧುರಾಪುರಮನೆಯ್ದ ಬೃಹದ್ದಳತನೂಜನಲ್ಲಿಗೆ ಧರ್ಮಯುದ್ಧಮಂ ಬೇಡಿಯಟ್ಟಿದೊಡಮ! ಕಲಿ ಮಾರ್ಕೊಳ್ಳದೆ ಕೊಟ್ಟು ಮೆಯ್ಯೋಳೆ ಸಿಡಿಲ್ ತಾಪಂತೆವೋಲ್ ತಾಗೆ ಮ ↑ಲಿ ಭೀಮಂ ಪಂಪಿಂಗದಾಂತು ಪಲವುಂ ಬಂಧಂಗಳಿಂ ತು ತ | - ತುಲಶೈಲಂ ಕುಲಶೈಲದೊಳ್ ಕಲುಷದಿಂ ಪೋರ್ವಂತೆವೋಲ್ ಪೋರ್ದು ನ ↑ಲ ಕಾವಂ ತುದಿಗೆಯ ಸೀಳೊ ತೆಜದಿಂ ಸೀಳಂ ಜರಾಸಂಧನಂ || ೨೭ ವಗ ಅಂತು ದೃಢ ಕಠಿನ ಹೃದಯ ಬಂಧನಂ ಜರಾಸಂಧನಂ ಕೊಂದುಮಾತನ ಮಗಂ ಕ್ಷೇಮಧೂರ್ತಿಯಂ ರಾಜ್ಯದೊಳ್ ನಿಟಿಸಿ ಜರಾಸಂಧನೇಳುವ ರಥಮಂ ತರಿಸಿ ರಾಕ್ಷಸಿಯು ಅವನ್ನು ತಿನ್ನಲೆಂದು ಎತ್ತಿಕೊಂಡು ಎರಡು ಹೋಳುಗಳನ್ನು ಒಂದೇ ಕಯ್ಯಲ್ಲಿ ಹಿಡಿಯಲಾಗಿ ಒಂದು ಮತ್ತೊಂದರಲ್ಲಿ ಸೇರಿಕೊಂಡು ಮನುಷ್ಯರೂಪವನ್ನು ತಾಳಲು ಆಶ್ಚರ್ಯಪಟ್ಟು ಜರಾಸಂಧನೆಂದು ನಾಮಕರಣಮಾಡಿ ಬೃಹದ್ಬಳನಿಗೆ ಕೊಟ್ಟಳು. ಜರಾಸಂಧನೂ ಸಾಲ್ವಲನೆಂಬ ರಾಕ್ಷಸನೂ ಒಂದಾಗಿ ಮೂವತ್ತೆರಡ ಕ್ಷೌಹಿಣೀ ಸೈನ್ಯದಿಂದ ಕೂಡಿ ಮಧುರಾಪಟ್ಟಣಕ್ಕೆ ಬಂದು ನನ್ನನ್ನು ಮುತ್ತಿಕೊಂಡರು. ಉಪಾಯಬಲದಿಂದ ಸಾಲ್ವಲನನ್ನು ಕೊಂದು ಜರಾಸಂಧನಿಗೆ ಹೆದರಿ ಮಧುರಾಪಟ್ಟಣವನ್ನು ಬಿಟ್ಟು ದ್ವಾರಾವತಿಗೆ ಹೋಗಿ ಸಮುದ್ರವನ್ನೇ ನೀರಿನ ಕಂದಕವನ್ನಾಗಿ ಮಾಡಿಕೊಂಡು ಅಲ್ಲಿಯೇ ನೆಲೆಸಿದೆ. ಇನ್ನೂ ಸೆರೆಯಾಗಿರುವ ಬಂಧಿತರಾದ ಯಾದವರು ಆತನಲ್ಲಿದ್ದಾರೆ. ಅವನು ಭೀಮನ ಕಯ್ಯಲ್ಲಲ್ಲದೆ ಸಾಯುವುದಿಲ್ಲವೆಂಬುದು ಭವಿಷ್ಯವಾಣಿಯ ಆದೇಶ. ನಮ್ಮ ಇಷ್ಟಾರ್ಥವೂ ಅದೇ. ಸಮಸ್ತಸೈನ್ಯದಿಂದ ಕೂಡಿ ನಡೆಯಬೇಕೆಂದು ಭೀಮಾರ್ಜುನರಿಗೆ ತಿಳಿಸು' ಎಂದು ಧರ್ಮರಾಜನನ್ನೊಪ್ಪಿಸಿ ನುಡಿದು ಮಧುರಾಪಟ್ಟಣವನ್ನು ಸೇರಿ ಬೃಹದ್ಬಳ ಪುತ್ರನಾದ ಜರಾಸಂಧನಲ್ಲಿಗೆ ಧರ್ಮಯುದ್ಧವನ್ನಪೇಕ್ಷಿಸಿ ಹೇಳಿ ಕಳುಹಿಸಿದನು. ೨೭. ಶೂರನಾದ ಆ ಜರಾಸಂಧನು ಪ್ರತಿಮಾತಾಡದೆ ಧರ್ಮಯುದ್ದಕ್ಕೆ ಒಪ್ಪಿ ಶರೀರದ ಮೇಲೆ ಸಿಡಿಲು ಬೀಳುವ ಹಾಗೆ ಬಿದ್ದನು. ಶೂರನಾದ ಭೀಮನು ಹಿಂದಕ್ಕೆ ಸರಿಯದೆ ಎದುರಿಸಿ ಹಲವು ಪಟ್ಟಗಳಿಂದ ಕೂಡಿ ಕುಲಪರ್ವತವು ಕುಲಪರ್ವತದೊಡನೆ ಕೋಪದಿಂದ ಯುದ್ದಮಾಡುವ ಹಾಗೆ ಕಾದಿ ಕನ್ನೈದಿಲೆಯ ದಂಟನ್ನು ತುದಿಯವರೆಗೆ ಸೀಳುವ ಹಾಗೆ ಜರಾಸಂಧನನ್ನು ಸೀಳಿದನು. ವ|| ಹಾಗೆ ಬಲಿಷ್ಠವೂ ಒರಟೂ ಆದ ಹೃದಯಬಂಧವನ್ನುಳ್ಳ ಜರಾಸಂಧನನ್ನು ಕೊಂದು ಆತನ ಮಗ ಕ್ಷೇಮಧೂರ್ತಿಯನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy