________________
ಏಕಾದಶಾಶ್ವಾಸಂ | ೫೧೩ ಸೈಂಧವನೊಳ್ ಘಟೋತ್ಕಚಂ ಕೃಪನೊಳ್ ಭೀಮಸೇನಂ ಕೌರವನೊಳ್ ಕಳಿಂಗರಾಜಂ ಪಾಂಚಾಳರಾಜನೊಳ್ ಅತಿರಥಮಥನಂ ದ್ರೋಣಾಚಾರ್ಯರೊಳ್ ಅವರವರೊಳದಿರದಾಂತಾಗಳ್
ಚoll
ನಡುವಿಡುವುರ್ಚುವಾರ್ದರಿವ ನೇರ್ವ ಪಳಂಚುವ ಪೋರ್ವ ಬಾಣದಿಂ ದುಡಿದು ಸಿಡಿಲ್ಲು ಸೂಸಿಯೆ ಕುಲ್ಲು ಬಹಲ್ಲು ಸಡಿಲ್ಲು ಜೊಲ್ಲು ನೇ || ಲುಡಿದ ನೊಗಂ ಧ್ವಜಂ ಪಲಗೆ ಕೀಲ್ ಕವರಚ್ಚು ತುರಂಗಮಂ ರಥಂ ಕಿಡೆ ಕವರಿಂದಗುರ್ವನೊಳಗೊಂಡಿರ ತಳಿದರ್ ಮಹಾರಥರ್
ವ|| ಅಂತು ಕಿಡಿಗುಟ್ಟಿದಂತೆ ತಳಿಗೆಯೆ ಜಗದೇಕಮಲ್ಲಂಗ ಮಾರ್ತಲೆಯಲಾಗಿದೆ ಕುರುಬಲಮೆಲ್ಲಮೆಲ್ಲನುಲಿದೋಡಿ ಭೀಷರ ಮಯಂ ಪೊಕ್ಕಾಗಳ್
ಕಂ ಧವಳ ಹಯಂ ಧವಳ ರಥಂ
೩೮
ಧವಳೊಷಂ ಶಶಾಂಕ ಸಂಕಾಶ ಯಶೋ | ಧವಳಿತ ಭುವನಂ ತಾಗಿದ
ನವಯವದಿಂ ಬಂದು ಧರ್ಮತನಯನ ಬಲದೊಳ್ ||
೩೯
ವ|| ಅಂತು ತಾಗಿದ ಸಿಂಧುನಂದನನ ಕೋಪಶಿಖಿ ಶಿಖಾಕಳಾಪಂಗಳೊಳ್ ಪುಡುಪುಡನ ಸಾಯಲೆಂದು ಪಾಯ್ದ ಪತಂಗಂಗಳಂತೆ ಸೋಮಕ ಶ್ರೀಜಯ ಪ್ರಮುಖ ನಾಯಕರೊಂದಕ್ಕೋಹಿಣೀ ಬಲಂಬೆರಸು ಭರಂಗೆಯಾಂತೊಡೆ
ಅಭಿಮನ್ಯುವು ಅಶ್ವತ್ಥಾಮನೊಡನೆಯೂ ಸಹದೇವನು ಶಕುನಿಯೊಡನೆಯೂ ನಕುಲನು ಚಿತ್ರಸೇನನೊಡನೆಯೂ ಚೇಕಿತಾನನು ಸೈಂಧವನೊಡನೆಯೂ ಘಟೋತ್ಕಚನು ಕೃಪನೊಡನೆಯೂ ಭೀಮಸೇನನು ದುರ್ಯೋಧನನೊಡನೆಯೂ ಕಳಿಂಗರಾಜನು ದ್ರುಪದನೊಡನೆಯೂ ಅರ್ಜುನನು ದ್ರೋಣಾಚಾರ್ಯರೊಡನೆಯೂ ಪರಸ್ಪರ ಹೆದರದೆ ಪ್ರತಿಭಟಿಸಿದರು. ೩೯. (ಬಾಣಗಳನ್ನು) ನಾಟುವ, ಬೀಸಿ ಎಸೆಯುವ, ಚುಚ್ಚುವ, ಶಬ್ದಮಾಡಿ ಕತ್ತರಿಸುವ, ತುಂಡುಮಾಡುವ, ಪ್ರತಿಭಟಿಸಿ ತಗಲುವ ಹೋರಾಡುತ್ತಿರುವ, ಬಾಣಗಳಿಂದ ಮುರಿದು ಸಿಡಿದು ಚೆಲ್ಲಿ ಶಿಥಿಲವಾಗಿ ಜೋತು ಬಿದ್ದು ನೇತಾಡಿ ತುಂಡರಿಸಿದ ನೊಗ, ಬಾವುಟ, ಹಲಗೆ, ಕೀಲು, ಕವಲುಮರ, (ತೇರಿನ) ಅಚ್ಚು, ಕುದುರೆ, ತೇರು ಇವುಗಳು ನಾಶವಾಗಲು ಮಹಾರಥರು ಒಟ್ಟುಗೂಡಿ ಭಯಂಕರವಾಗಿ ಯುದ್ಧಮಾಡಿದರು. ವ| ಬೆಂಕಿಯ ಕಿಡಿಯು ಚೆಲ್ಲುವ ಹಾಗೆ : ಜಗದೇಕಮಲ್ಲನಾದ ಅರ್ಜುನನು ಯುದ್ಧಮಾಡುತ್ತಿರಲು ಅವನನ್ನು ಪ್ರತಿಭಟಿಸಲಾರದೆ ಕೌರವಸೈನ್ಯವೆಲ್ಲವೂ ಮೆಲ್ಲನೆ ಕೂಗಿಕೊಂಡು ಓಡಿ ಭೀಷ್ಮರ ಮರೆಯನ್ನು ಸೇರಿತು. -೩೯. ಬಿಳಿಯ ಕುದುರೆ, ಬಿಳಿಯ ತೇರು, ಬಿಳಿಯ ತಲೆಯುಡಿಗೆ, ಚಂದ್ರನಿಗೆ ಸಮಾನವಾದ (ಶುಭ್ರಕಾಂತಿಯಿಂದ ಕೂಡಿದ) ಯಶಸ್ಸಿನಿಂದ ಲೋಕವನ್ನೇ ಬಿಳುಪಾಗಿ ಮಾಡಿದ (ಕೀರ್ತಿ ಇವುಗಳಿಂದ ಕೂಡಿದ) ಭೀಷ್ಮನು ಅಶ್ರಮದಿಂದ ಧರ್ಮರಾಜನ ಸೈನ್ಯದೊಡನೆ ಬಂದು ತಾಗಿದನು. ವll ಭೀಷ್ಮನ ಕೋಪಾಗ್ನಿಜ್ವಾಲೆಯ ರಾಶಿಯಲ್ಲಿ `ಬಿಸಿಬಿಸಿಯಾಗಿ ಬೆಂದು ನಾಶವಾಗಿ ಸಾಯಬೇಕೆಂದು ಹಾಯುವ 'ದೀಪದ ಹುಳುಗಳ ಹಾಗೆ ಸೋಮಕ ಶ್ರೀಜಯನೇ ಮೊದಲಾದ ನಾಯಕರು ಒಂದಕ್ಕೋಹಿಣೀ