________________
ಸಪ್ತಮಾಶ್ವಾಸಂ / ೩೬೫ ಕಂ|| ಕೋಕಿಳಕುಳಕಳ ಗಳನಿನ
ದಾಕುಳರವಮಿಂಪನಾಗಳುಂ ಪಡೆದುದು ನೋ | ಡೀಕೆಗಳ ಚಳಿತ ಲುಳಿತ
ಭೂಕುಟಿಯೇ ಪರಮ ಸುಖದ ಕೋಟಿಯನೀಗುಂ || ೯೪ ವಗ ಎಂದೆನಿತಾನುಂ ತಳದೊಳಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳಂ ನುಡಿದುಂ ಕಾಲ್ವಿಡಿದುಮಚಳಿತಧೈರ್ಯನ ಮನಮಂ ಚಳಿಯಿಸಲಾಟದಚ್ಚರಸೆಯರಗಂಗೊಂಡಂತಾಗೆಯುಂ ಗಂಧರ್ವರ್ ಗರ್ವಮನುಟಿದು ಪೋಗೆಯುಂ ಕಾಮದೇವನೇವಮಂ ಕೆಯ್ಯೋಂಡು ಸೀಂತಂತೆ ಮೊಗಮಾಡಿ ಪೋಗಿ ದೇವೇಂದ್ರನ ಮೊಗಮಂ ನೋಡಲ್ ನಾಣ್ಣಿರ್ದನಾಗಳಿಂದ ನರೇಂದ್ರತಾಪಸನ ಧೈರ್ಯಕ್ಕೆ ಮೆಚ್ಚಿ ಧರಾಮರವೇಷದೊಳಿಂದ್ರಕೀಲನಗೇಂದ್ರಮನೆಯ್ದವಂದುಮll ಸll ಕಣಿಯಂ ಶೌರ್ಯಾಭಿಮಾನಕ್ಕೆಡದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ ಬ
qಣಿಯಂ ಕಲ್ಲಾರ ಸಾರಾಮೃತ ಶಶಿ ವಿಶದಾಯವಂಶಕ್ಕೆ ಚೂಡಾ | ಮಣಿಯಂ ತೀವ್ರ ಪ್ರತಾಪ ದ್ಯುಮಣಿಯನೆರೆದರ್ಥಿವಜಂಗಕ್ಕೆ ಚಿಂತಾ ಮಣಿಯಂ ಸಾಮಂತಚೂಡಾಮಣಿಯನಣಿಯರಂ ಬಂದು ಕಂಡಂ
ಸುರೇಂದ್ರಂ || ೯೫
ಸುಖಕ್ಕೆ ಒಪ್ಪದವರಾರಿದ್ದಾರೆ, ಸ್ತ್ರೀಯರಲ್ಲಿ ನಮಗಿಂತ ಸೌಂದರ್ಯವತಿಯ ರಾದವರಾರು ? ನಾವೇ ಅಲ್ಲವೇ (ಪರಮ ಸೌಂದರ್ಯವತಿಯರಾದವರು) ನಾವೇ ಬಂದು ನಿನ್ನ ಕಾಲನ್ನು ಹಿಡಿಯುತ್ತಿದ್ದೇವೆ. ಈ ಮೃದುವಾದ ನಿನ್ನ ಕಾಲುಗಳು ನಾವು ಆಶ್ರಯಿಸುವುದಕ್ಕೆ ಯೋಗ್ಯವಾದುವಲ್ಲವೇ? ಬೂದಿಯನ್ನು ತೊಳೆದುಕೊ. ೯೪. ಇಗೋ ಕೋಗಿಲೆಗಳ ಸಮೂಹದ ಕಂಠದ್ವನಿ ಯಾವಾಗಲೂ ಮಾಧುರ್ಯವನ್ನು ಪಡೆದಿದೆ. ನೋಡು ಈ ಅಪ್ಸರೆಯರ ಚಲಿಸುತ್ತಿರುವ ವಕ್ರವಾದ ಹುಬ್ಬುಗಳ ತುದಿಗಳೇ ಸುಖದ ಪರಮಾವಧಿಯನ್ನುಂಟುಮಾಡುತ್ತವೆ. ವ|| ಎಂಬುದಾಗಿ ಎಷ್ಟೋ ರೀತಿಯ ಪ್ರೇಮದ, ಮುದ್ದಿನ, ಚೆಲ್ಲಾಟದ, ಹುರುಡಿನ, ಕೋಪದ, ನೆಪದ ಪ್ರತಿಮಾತುಗಳನ್ನು ಆಡಿ ಕಾಲು ಹಿಡಿದೂ ಸ್ಥಿರ ಚಿತ್ತನಾದ ಅರ್ಜುನನ ಮನಸ್ಸನ್ನು ಕದಲಿಸಲಸಮರ್ಥರಾದರು. ಅಪ್ಪರಸ್ತ್ರೀಯರು ವ್ಯಸನಗೊಂಡವರಂತೆ ಅಸಮಾಧಾನ ವನ್ನು ಹೊಂದಿದರು. ಗಂಧರ್ವರು ತಮ್ಮ ಅಹಂಕಾರವನ್ನು ತೊರೆದರು. ಮನ್ಮಥನು ಅವಮಾನವನ್ನು ಹೊಂದಿ ಸೀಂತ ಹಾಗೆ ಮುಖವನ್ನು ಮಾಡಿಕೊಂಡು ಹೋಗಿ ದೇವೇಂದ್ರನ ಮುಖವನ್ನು ನೋಡಲು ನಾಚಿಕೆಗೊಂಡನು. ಆಗ ಇಂದ್ರನು ರಾಜತಾಪಸನಾದ ಅರ್ಜುನನ ಧೈರ್ಯಕ್ಕೆ ಮೆಚ್ಚಿ ಬ್ರಾಹ್ಮಣವೇಷದಲ್ಲಿ ತಾನೇ ಇಂದ್ರಕೀಲಪರ್ವತಕ್ಕೆ ಬಂದನು. ೯೫, ಶೌರ್ಯಾಭಿಮಾನಿಗಳಿಗೆ ಗಣಿಯೂ ಯುದ್ದದಲ್ಲಿ ಪ್ರತಿಭಟಿಸಿದ ಶತ್ರುಸೈನ್ಯಕ್ಕೆ ಬಹು ಶೂರನೂ, ಕಲ್ಲಾರ ಪುಷ್ಪದಂತೆಯೂ ಸಾರವತ್ತಾದ ಅಮೃತದಂತೆಯೂ, ಚಂದ್ರಮಂಡಲದಂತೆಯೂ ಸ್ವಚ್ಛವಾಗಿರುವ ತನ್ನ ವಂಶಕ್ಕೆ ತಲೆಯಾಭರಣವೂ ತೀಕ್ಷ್ಮವಾದ ಪ್ರತಾಪದಲ್ಲಿ ಸೂರ್ಯನೂ ಬೇಡುವ