Book Title: Yasodhara Carita
Author(s): Janna
Publisher: Kannada Sahitya Parishattu
Catalog link: https://jainqq.org/explore/034021/1

JAIN EDUCATION INTERNATIONAL FOR PRIVATE AND PERSONAL USE ONLY
Page #1 -------------------------------------------------------------------------- ________________ ಮನುಷ್ಯ ಜಾತಿ | ತಾನೊಂದೆ ವಲಂ - ಜನ್ನ ಕವಿಯ ಯಶೋಧರ ಚಲತೆ ಗದ್ಯಾನುವಾದ: ತೆಕ್ಕುಂಜ ಗೋಪಾಲಕೃಷ್ಣಭಟ್ಟ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು-೫೬೦೦೧೮ Page #2 -------------------------------------------------------------------------- ________________ ಜನ್ನ ಕವಿಯ ಯಶೋಧರ ಚರಿತೆ ಗದ್ಯಾನುವಾದ ತೆಕ್ಕುಂಜ ಗೋಪಾಲಕೃಷ್ಣಭಟ್ಟ ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು- ೫೬೦೦೧೮ Page #3 -------------------------------------------------------------------------- ________________ Janna Kaviya YASHODHARA CHARITE - an epic poetry by Jannaoriginal with prose rendering by : Tekkunja Gopalakrishna Bhatta & Published by Kannada Sahitya Parishattu, Pampa Mahakavi Road, Chamarajapete, Bengaluru-560018 Pages: iv + 108 Price:Rs. 50-00; 2015 ಮೊದಲನೆಯ ಮುದ್ರಣ : ೧೯೭೬ ಈ ಆವೃತ್ತಿಯ ವರ್ಷ : ೨೦೧೫ ಪ್ರತಿಗಳು : ೨೦೦೦ ಬೆಲೆ : ಐವತ್ತು ರೂಪಾಯಿಗಳು © ಹಕ್ಕುಗಳನ್ನು ಕಾಯ್ದಿರಿಸಿದೆ. ಮುಖಪುಟ ವಿನ್ಯಾಸ : ಫ್ಲವರ್ ಗ್ರಾಫಿಕ್ ಪ್ರಕಟಣಾ ಸಮಿತಿ ಅಧ್ಯಕ್ಷರು ಶ್ರೀ ಪುಂಡಲೀಕ ಹಾಲಂಬಿ ಸಮ್ಮೇಳನಾಧ್ಯಕ್ಷರು - ಡಾ. ಸಿದ್ದಲಿಂಗಯ್ಯ ೮೧ನೇ ಅ.ಭಾ.ಕ.ಸಾ. ಸಮ್ಮೇಳನಾಧ್ಯಕ್ಷರು ಸದಸ್ಯರು ಶ್ರೀ ಬಿ.ಎಂ. ಸದಾಶಿವಪ್ಪ ಶ್ಯಾಗಲೆ ಶ್ರೀ ಎನ್. ನಾರಾಯಣ ಶ್ರೀ ನೀಲಾವರ ಸುರೇಂದ್ರ ಅಡಿಗ ಡಾ. ವಸುಂಧರಾ ಭೂಪತಿ ಡಾ. ಸೋ.ಮು. ಭಾಸ್ಕರಾಚಾರ್ ಡಾ. ರಾಜೇಂದ್ರ ಎಸ್. ಗಡಾದ ಶ್ರೀ ಎಸ್.ಜಿ. ಕೋಟಿ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಡಾ. ಮಳಲಿ ವಸಂತಕುಮಾರ್ ಡಾ. ಸುಜಾತಾ ಜಂಗಮಶೆಟ್ಟಿ ಡಾ. ಮಾನಸ ಶ್ರೀ ಸಿ.ಕೆ. ರಾಮೇಗೌಡ ಡಾ. ಎ.ವಿ. ನಾವಡ | ಡಾ. ರಾಜಶೇಖರ ಹತಗುಂದಿ ಶ್ರೀ ಬಿ.ಎನ್. ರಾಮಸ್ವಾಮಿ ಶ್ರೀ ಪಿ. ಮಲ್ಲಿಕಾರ್ಜುನಪ್ಪ ನಿರ್ದೇಶಕರು ಶ್ರೀ ಜೆ.ಎನ್. ಶಾಮರಾವ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಚಾಲಕ ಮುದ್ರಣ : ಬಿ.ಎಂ.ಶ್ರೀ. ಅಚ್ಚುಕೂಟ ಆಫ್‌ಸೆಟ್ ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - ೧೮ Page #4 -------------------------------------------------------------------------- ________________ ಅಧ್ಯಕ್ಷರ ನುಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮರುಮುದ್ರಣಗೊಳ್ಳುತ್ತಿರುವ ಮತ್ತು ಹೊಸದಾಗಿ ಮುದ್ರಿತವಾಗುತ್ತಿರುವ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಸಹೃದಯರು ಮೆಚ್ಚಿ ಸ್ವೀಕರಿಸಲು ಯೋಗ್ಯವಾಗುವಂತೆ ಆಕರ್ಷಕ ವಿನ್ಯಾಸಗಳಲ್ಲಿ ಸಿದ್ಧಪಡಿಸುವ ಆಶಯ ನಮ್ಮದು. ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ, ೧೯೧೫ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು, ಶತಮಾನೋತ್ರವನ್ನು ಆಚರಿಸಿಕೊಳ್ಳುತ್ತಲಿದೆ. ಕಳೆದ ೯೯ ವರ್ಷಗಳಿಂದಲೂ ಕನ್ನಡ ಗ್ರಂಥಗಳ ಪ್ರಕಟಣೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಪರಿಷತ್ತು ಸುಮಾರು ಒಂದು ಸಾವಿರದ ನಾಲ್ಕುನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುತ್ತದೆ. ಸರಿಸುಮಾರು ಒಂದು ಶತಮಾನದಷ್ಟು ಕಾಲಾವಧಿಯ ನಿರಂತರತೆ ಹಾಗೂ ಕೃತಿಗಳ ಮೌಲಿಕತೆಯ ದೃಷ್ಟಿಯಿಂದ ಇದೊಂದು ಅಪೂರ್ವ ದಾಖಲೆಯಾಗಿದೆ. ಕನ್ನಡ ಪ್ರಕಟಣಾ ಚರಿತ್ರೆಯಲ್ಲಂತೂ ಅನನ್ಯವೇ ಸರಿ. ಜನ್ನನ ಯಶೋಧರ ಚರಿತೆಯು ಪ್ರಾಚೀನ ಕನ್ನಡ ಕಾವ್ಯ ಪರಂಪರೆಯಲ್ಲಿ ಒಂದು ಅಪೂರ್ವ ಕೃತಿ. ಹಿಂಸೆ ಹಾಗೂ ಪ್ರೇಮದ ಅಪರೂಪದ ಕಲ್ಪನೆಯನ್ನು ಒಳಗೊಂಡ ಈ ಕಾವ್ಯವು ಕನ್ನಡ ವಿಮರ್ಶೆಯ ಲೋಕದಲ್ಲಿ ಬಹುಚರ್ಚಿತವಾದ ಕೃತಿಯಾಗಿದೆ; ಮತ್ತೆ ಮತ್ತೆ ಪುನರ್‌ಮೌಲ್ಯಮಾಪನಕ್ಕೆ ಒಳಗಾದ ಕಾವ್ಯವಾಗಿದೆ. ಓದುಗರಿಂದ ಬೇಡಿಕೆ ಇರುವ ದೃಷ್ಟಿಯಿಂದ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಮುದ್ರಣ ಮಾಡಿರುವ 'ಯಶೋಧರ ಚರಿತೆ' ಕೃತಿಯನ್ನು ಪುನರ್ ಮುದ್ರಿಸಲಾಗುತ್ತಿದೆ. ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದ ಬಿ.ಎಂ.ಶ್ರೀ. ಅಚ್ಚುಕೂಟದ ಸಿಬ್ಬಂದಿವರ್ಗಕ್ಕೆ ಹಾಗೂ ಈ ಕಾರ್ಯದಲ್ಲಿ ಸಹಕಾರ ನೀಡಿದ ಪ್ರಕಟಣ ಸಮಿತಿಯ ಎಲ್ಲಾ ಸದಸ್ಯರಿಗೆ ನನ್ನ ಕೃತಜ್ಞತೆಗಳು. ೮-೬-೨೦೧೫ ಪುಂಡಲೀಕ ಹಾಲಂಬಿ ಅಧ್ಯಕ್ಷರು Page #5 --------------------------------------------------------------------------  Page #6 -------------------------------------------------------------------------- ________________ ಉಪೋದ್ಘಾತ ೧. ಕವಿ 'ಯಶೋಧರ ಚರಿತೆ'ಯನ್ನು ಬರೆದ ಕವಿ ಜನ್ನ. ಕಮ್ರವಂಶದ ಕಾಶ್ಯಪಗೋತ್ರದ 'ಶಂಕರ' ಎಂಬವನು ಹೊಯ್ಸಳ ನಾರಸಿಂಹನಲ್ಲಿ ಕಟಕೋಪಾಧ್ಯಾಯನಾಗಿದ್ದನು. ಇವನಿಗೆ 'ಸುಮನೋಬಾಣ'ನೆಂಬ ಬಿರುದಿತ್ತು. ಈತನ ಹೆಂಡತಿ ಗಂಗಾದೇವಿ. ಇವರಿಗೆ, ಅನಂತನಾಥಜಿನನು ಹುಟ್ಟಿದ ಆಷಾಢಕೃಷ್ಣ ತ್ರಯೋದಶೀ ರೇವತಿ ನಕ್ಷತ್ರ* ಶಿವಯೋಗದಲ್ಲಿ ಜನ್ನನು ಹುಟ್ಟಿದನೆಂದು ಅವನೇ ಹೇಳಿಕೊಂಡಿದ್ದಾನೆ. ಈತನ ಹೆಂಡತಿ “ರಾಯ ದಂಡಾಧಿನಾಥಕೃತಾಂತಂ ಪೆಸರ್ವೆತ್ತ ಚಾಕಣನಪತ್ಯಂ ರೇಚಯಂ ಪೆತ್ತ ಪುತ್ರಿ” ಲಕುಮಾದೇವಿ. ಇವನ ಧಾರ್ಮಿಕಗುರು - ಕಾಣೂರ್ಗಣದ ಮಾಧವಚಂದ್ರ ಶಿಷ್ಯನಾದ ' ಗಂಡವಿಮುಕ್ತ ರಾಮಚಂದ್ರಮುನಿ. ಚಾಳುಕ್ಯ ಜಗದೇಕಮಲ್ಲನಲ್ಲಿ ಕಟಕೋಪಾಧ್ಯಾಯನಾಗಿಯೂ ಅಭಿನವ ಶರ್ವವರ್ಮ ನೆಂಬ ಬಿರುದುಳ್ಳವನಾಗಿಯೂ ಇದ್ದ ಎರಡನೆಯ ನಾಗವರ್ಮನು ಇವನ ಉಪಾಧ್ಯಾಯನಾಗಿದ್ದನು. ಸೂಕ್ತಿಸುಧಾರ್ಣವವನ್ನು ಬರೆದ ಮಲ್ಲಿಕಾರ್ಜುನನು ಈತನ ಸೋದರಿಯ ಪತಿ ; ಮತ್ತು ಶಬ್ದಮಣಿದರ್ಪಣವನ್ನು ಬರೆದ ಕೇಶಿರಾಜನು ಇವನ ಸೋದರಳಿಯ. - ಜನ್ನನೇ ಹೇಳಿಕೊಂಡಂತೆ ಅವನು ವೀರಬಲ್ಲಾಳನ ಆಸ್ಥಾನಕವಿಯಾಗಿದ್ದು ಅವನಿಂದ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದನು. ಮಾತ್ರವಲ್ಲ, ಬಲ್ಲಾಳನ ಮಗ ನರಸಿಂಹನಲ್ಲಿ ನಿಂದಿರೆ ದಂಡಾಧೀಶಂ ಕುಳ್ಳಿರೆ ಮಂತ್ರಿ ತೊಡಂಕೆ ಕವಿಯಾಗಿದ್ದನು ; ಇವನ ಧರ್ಮಶ್ರದ್ದೆ ಇವನಿಗೆ ಅನಂತನಾಥನ ಬಸದಿಯನ್ನು ಕಟ್ಟಿಸುವ ಹಾಗೂ ಪಾರ್ಶ್ವಜಿನೇಶ್ವರನ ಬಸದಿಯ ದ್ವಾರವನ್ನು ಮಾಡಿಸುವ ಪ್ರೇರಣೆಯನ್ನು ಕೊಟ್ಟಿದೆ. ಇವನದು ಇತ್ತ ಕಯ್ಯಲ್ಲದೆ ಒಡ್ಡಿದ ಕಯ್ಯಲ್ಲ, ಇದೂ ಅಲ್ಲದೆ ತಾನು ರನ್ನನಂತೆ ವೈಯಾಕರಣನೂ ಪೊನ್ನನಂತೆ ಅಸಹಾಯ ಕವಿಯೂ ಆಗಿದ್ದುದನ್ನು ಅವನು ಹೇಳಿಕೊಂಡಿದ್ದಾನೆ. ಜನ್ನನು ಚೆನ್ನರಾಯಪಟ್ಟಣದ ೧೭೯ ನೆಯ ಶಾಸನವನ್ನೂ (ಕ್ರಿ. ಶ. ೧೧೯೧) ತರೀಕೆರೆಯ ೪೫ನೆಯ ಶಾಸನವನ್ನೂ (ಕ್ರಿ.ಶ. ೧೧೯೭) ಬರೆದನೆಂದು ಆಯಾ * ಆಷಾಢ ಕೃಷ್ಣತ್ರಯೋದಶಿಯಂದು ರೇವತೀನಕ್ಷತ್ರ ಬರುವುದು ಹೇಗೋ ತಿಳಿಯದು. ಏಕೆಂದರೆ ಆಷಾಢಮಾಸದ ಪೌರ್ಣಮಿ ಪೂರ್ವಾಷಾಢ ಅಥವಾ ಉತ್ತರಾಷಾಢ ನಕ್ಷತ್ರಗಳಲ್ಲಿಯೇ ಹೆಚ್ಚಾಗಿ ಬರುತ್ತದೆ. ಅನಂತರ ಹದಿಮೂರು ದಿವಸಗಳಲ್ಲಿ ತ್ರಯೋದಶಿ ಬರುವಾಗ, ರೇವತೀನಕ್ಷತ್ರ ದಾಟಿ ಎಷ್ಟೋ ದಿನಗಳ ಅವಧಿ ಕಳೆದಿರುತ್ತದೆ. Page #7 -------------------------------------------------------------------------- ________________ ಯಶೋಧರ ಚರಿತೆ ಶಾಸನಗಳ ಅಂತ್ಯದ 'ಜನ್ನಯ್ಯನ ಕವಿತೆ' ಎಂಬ ಮಾತಿನಿಂದ ತಿಳಿದುಬರುತ್ತದೆ. ಅವನಿಗೆ ಸಾಹಿತ್ಯರತ್ನಾಕರ, ರಾಜವಿದ್ವತ್ಸಭಾಕಲಹಂಸ, ಕವಿ ವೃಂದಾರಕವಾಸವ, ಕವಿಕಲ್ಪಲತಾ ಮಂದಾರ ಮುಂತಾದ ಬಿರುದುಗಳಿವೆ. ಜನ್ನಮರರಸ, ಜನ್ನಯ್ಯ, ಜನ್ನಿಗ, ಜನಾರ್ದನ, ಜಾನಕಿ ಮುಂತಾದ ಹೆಸರುಗಳಿಂದ ತನ್ನನ್ನು ಕರೆದುಕೊಂಡಿದ್ದಾನೆ. ಈ ಮೇಲೆ ಹೇಳಿದ ಶಾಸನಗಳಲ್ಲದೆ, ಜನ್ನನು ಬರೆದುದು 'ಯಶೋಧರ ಚರಿತೆ' ಮತ್ತು 'ಅನಂತನಾಥ ಪುರಾಣ' ಎಂಬ ಗ್ರಂಥಗಳನ್ನು, ಸರತಂತ್ರವೆಂಬ ಗ್ರಂಥವನ್ನೂ ಬರೆದಿದ್ದಾನೆಂದು ವಿದ್ವಾಂಸರು ಹೇಳುತ್ತಾರೆ. ಇವುಗಳಲ್ಲಿ ಅನಂತನಾಥಪುರಾಣವು ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನ ಚರಿತವಾಗಿದೆ. ಹದಿನಾಲ್ಕು ಆಶ್ವಾಸಗಳುಳ್ಳ ಈ ಕೃತಿ 'ಅರುಹನ ಮೂರ್ತಿಯಂತಿರೆ ನಿರಾಭರಣ'ವಾಗಿ ಮೆರೆಯುವುದೆಂದು ಹೇಳಿದ್ದಾನೆ. ಆದರೆ ಅನೇಕ ಅಲಂಕಾರಗಳು ಕಾವ್ಯದಲ್ಲಿ ಬರುತ್ತವೆ. ಇದು ಮುಖ್ಯವಾಗಿ ಧಾರ್ಮಿಕಕಥೆಯಾಗಿದ್ದು, ಮಧ್ಯದಲ್ಲಿ ಬರುವ 'ಚಂಡಶಾಸನನ ಕಥೆ'ಯಿಂದ ಇದು ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಇದನ್ನು ಇವನು ಕ್ರಿ.ಶ. ೧೨೩೦ರಲ್ಲಿ ಬರೆದು ಮುಗಿಸಿದನೆಂದು ಈ ಗ್ರಂಥದ ಅಂತ್ಯದಲ್ಲಿ ಬರುವ ಈ ಕೆಳಗಣ ಪದ್ಯದಿಂದ ಗೊತ್ತಾಗುತ್ತದೆ: ಶಕಸಂವತ್ಸರಮಂದು ಸಾಸಿರದ ನೂರೈವತ್ತೆರನಂ ವಿಕೃತಾಬ್ದಂ ಬರೆ ಚೈತ್ರಶುದ್ಧದಶಮೀ ದೇವೇನೊಳ್ಳುಷ್ಕತಾ ರಕದೊಳ್ಯಾಡಿಸಿದಂ ಪ್ರತಿಷ್ಟೆಯನನಂತ ಶ್ರೀ ಪುರಾಣಕ್ಕೆ ಕ ಮೈಕುಲಾಂಭೋರುಹಭಾನು ಜನ್ನಮರಸಂ ಸಾಹಿತ್ಯರತ್ನಾಕರಂ (ಆ xiv ; ಪ ೮೪) ೨. ಕಾವ್ಯ - ಯಶೋಧರಚರಿತೆಯೇ ಪ್ರಕೃತ ವಿಚಾರಕ್ಕೆ ಒಳಗಾಗಬೇಕಾದ ಗ್ರಂಥ. ಆದುದರಿಂದ ಇದರ ವಿಷಯವಾಗಿ ಸ್ವಲ್ಪ ವಿಸ್ತಾರವಾಗಿ ಪರಿಶೀಲಿಸೋಣ. ಯಶೋಧರಚರಿತೆಯ ವಿಷಯವಾಗಿ ಆರ್. ನರಸಿಂಹಾಚಾರ್ಯರು ಬರೆದ “ಕವಿಚರಿತೆ'ಯ ಪ್ರಥಮಾವೃತ್ತಿಯಲ್ಲಿ ಈ ಮಾತುಗಳಿವೆ: “ಇದು ವರ್ಣಕ ಪ್ರಬಂಧಕವು; ಇದರಲ್ಲಿ ಗದ್ಯಭಾಗವೇ ಇಲ್ಲ ; ಸುಮಾರು ಎಂಟು ಹತ್ತು ವೃತ್ತಗಳು ಹೊರತು ಉಳಿದುವೆಲ್ಲಾ ಕಂದ ಪದ್ಯಗಳೇ ಆಗಿವೆ. ಈ ಗ್ರಂಥವು ನಾಲ್ಕು ಅವತಾರಗಳಾಗಿ ಭಾಗಿಸಲ್ಪಟ್ಟಿದೆ ; ಇದರಲ್ಲಿ ಒಟ್ಟು ಕಂದ ವೃತ್ತಗಳು ಸಹ ೩೧೧ ಇವೆ ........ ಇದೇ ಕಥೆಯನ್ನು ಈ ಕವಿಯ ಕಾಲಕ್ಕೆ ಹಿಂದೆ ಇತರ ಕವಿಗಳು ಸಂಸ್ಕೃತದಲ್ಲಿಯೂ ಪ್ರಾಕೃತದಲ್ಲಿಯೂ ಕನ್ನಡದಲ್ಲಿಯೂ ಬರೆದಿದ್ದರು.. ಗ್ರಂಥಾವತಾರದಲ್ಲಿ ಇಪ್ಪತ್ತನೆಯ ತೀರ್ಥಂಕರನಾದ ಮುನಿಸುವ್ರತನನ್ನು ಸ್ತುತಿಸಿ ಬಳಿಕ ಸಿದ್ಧಾದಿಗಳನ್ನೂ ವೀರಸೇನ, ಜಿನಸೇನ, ಸಿಂಹನಂದಿ, ಕೊಂಡಕುಂದ, ಸಮಂತ Page #8 -------------------------------------------------------------------------- ________________ ಉಪೋದ್ಘಾತ ಭದ್ರ, ಗುಣಭದ್ರ, ಪೂಜ್ಯಪಾದ ಎಂಬಿವರುಗಳನ್ನೂ ಹೊಗಳಿದ್ದಾನೆ. ಅನಂತರ - ಹುಲಿ ಪಾಯೆ ಗುರುಗಳ್' 'ಸಳ ಹೊಯ್' ಎಂದು ಕುಂಚದ ಸೆಳೆಯಂ ಕೊಡಲು ಹುಲಿಯನಟ್ಟಿ ಹೊಯ್ಸಳನಾದನು. ಅವನ ಮಗ ವಿನಯಾದಿತ್ಯ ; ಆತನ ಪುತ್ರ ಎರೆಯಂಗ ಅವನ ಸುತ ಬಿಟ್ಟಿದೇವ ; ಆತನ ಮಗ ನರಸಿಂಹ ; ಅವನ ಪುತ್ರ ವೀರಬಲ್ಲಾಳ - ಎಂದು ಹೊಯ್ಸಳರಾಜರ ಪರಂಪರೆಯನ್ನು ಹೇಳಿ, ವೀರಬಲ್ಲಾಳನು ತನಗೆ ಸ್ವಾಮಿಯಾದುದರಿಂದ ಅವನನ್ನು ವಿಶೇಷವಾಗಿ ಸ್ತುತಿಸಿದ್ದಾನೆ. ಗ್ರಂಥಾಂತ್ಯದಲ್ಲಿಯೂ 'ಅಸಹಾಯಶೂರನ ಭುಜಕ್ಕೆ ಜಯಂ ಸಮಸ' ಎಂದು ವೀರಬಲ್ಲಾಳನನ್ನು ಆಶೀರ್ವದಿಸಿದ್ದಾನೆ”. 2 ಯಶೋಧರಚರಿತೆಯನ್ನು ಜನ್ನನು ಬರೆದು ಮುಗಿಸಿದುದು ಕ್ರಿ.ಶ. ೧೨೦೯ರಲ್ಲಿ ಎಂದು ಈ ಕೆಳಗಣ ಪದ್ಯದಿಂದ ತಿಳಿದುಬರುತ್ತದೆ : ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ ಕಾಗಿರೆ ಶುಕ್ಲದಾಶ್ವಯುಜ ಕೃಷ್ಣದ ಪಂಚಮಿ ಪುಷ್ಕತಾರೆ ಪೂ ರ್ಣಾಗುರುವಾಗ ಭೂತಳದೊಳೀ ಕೃತಿ ಪೆತ್ತುದು ಸುಪ್ರತಿಷ್ಠೆಯಂ ಚಾಗದ ಭೋಗದಗ್ಗಳಿಕೆಯಂ ಮೆದಂ ಕವಿಭಾಳಲೋಚನಂ (ಯಶೋಧರ ಚರಿತೆ: ೪-೮೬) ಇದಿಷ್ಟು ಯಶೋಧರಚರಿತೆಯ ಬಾಹ್ಯ ಪರಿಚಯ ಮಾತ್ರ. ಇನ್ನು, ಕೃತಿಯ ಒಳಗನ್ನು ನೋಡಬಹುದು. 'ಕವಿಚರಿತೆ'ಯಲ್ಲಿ ಮಾರಿದತ್ತನೆಂಬ ರಾಜನು ಮಾರಿಗೆ ಬಲಿಕೊಡುವುದಕ್ಕಾಗಿ ಇಬ್ಬರು ಕುಲೀನರಾದ ಹುಡುಗರನ್ನು ಹಿಡಿದು ತರಿಸಿದಾಗ ಅವರು ಹೇಳಿದ ಪೂರ್ವಕಥೆಯಿಂದ ಪರಹಿಂಸಾಸಕ್ತಿಯನ್ನು ಬಿಟ್ಟು ಅವರನ್ನು ಬಿಡುಗಡೆ ಮಾಡಿ ತಪಂಬಟ್ಟನು - ಎಂಬುದೇ ಇದರ ಕಥಾಸಾರ” ಎಂಬ ಮಾತಿದೆ. ಕೃತಿಯಲ್ಲಿ “ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯಂ ಪೆಟ್ಟು ಧರ್ಮಕ್ಕೆ ತಂದೀ ಶುಭಕಥನ” ಎಂಬ ಮಾತು ಇದಕ್ಕೆ ಆಧಾರ. ಆದರೆ ಕೃತಿಗೆ 'ಯಶೋಧರಚರಿತೆ' ಎಂಬ ಹೆಸರಿರುವುದರಿಂದ ಯಶೋಧರನು ಸಂಕಲ್ಪ ಹಿಂಸೆ ಯಿಂದ ಏನೇನು ಕಷ್ಟಗಳನ್ನು ಯಾವ ಯಾವ ಜನ್ಮದಲ್ಲಿ ಹೇಗೆ ಹೇಗೆ ಅನುಭವಿಸ ಬೇಕಾಯಿತು ಎಂಬ ವಸ್ತುವೇ ಇದರಲ್ಲಿ ಪ್ರಧಾನವೆಂಬುದನ್ನು ಅಂಗೀಕರಿಸ ಬೇಕಾಗುತ್ತದೆ. ಕಥೆಯಲ್ಲಿ ಕುತೂಹಲವನ್ನುಂಟು ಮಾಡುವುದಕ್ಕಾಗಿ ಯಶೋಧರನು ಅಭಯರುಚಿಯಾಗಿದ್ದ ಜನ್ಮದ ಅವಧಿಯಲ್ಲಿ ನಡೆದ ಘಟನೆಯಿಂದ ಕೃತಿಯನ್ನು ತೊಡಗಿಸಿದ್ದಾನೆ, ಅಷ್ಟೆ. ಕಥೆಯ ಸಂಕ್ಷೇಪಸ್ವರೂಪವನ್ನು ಮೊದಲು ಕವಿ ನೋಡೋಣ. ೩. ಕಥಾಸಾರ ಅಯೋಧ್ಯಾ ದೇಶದ ರಾಜಪುರದ ಮಾರಿದತ್ತರಾಜನು ಒಂದು ವಸಂತದಲ್ಲಿ ಎಂದಿನಂತೆ ಚಂಡಮಾರಿದೇವತೆಯ ತೃಪ್ತಿಗಾಗಿ ನರಬಲಿ ಕೊಡುವುದಕ್ಕಾಗಿ ಇಬ್ಬರು Page #9 -------------------------------------------------------------------------- ________________ ಯಶೋಧರ ಚರಿತೆ ಎಳೆಯರನ್ನು ಹಿಡಿತರಿಸುತ್ತಾನೆ. ಅವನ ಪ್ರಜೆಗಳು ಸಾವಿರಾರು ಸಂಖ್ಯೆಯ ಪ್ರಾಣಿಗಳನ್ನು ತಂದಿದ್ದಾರೆ. ಆ ಸನ್ನಿವೇಶದಲ್ಲಿ ಅಲ್ಲಿಗೆ ತರಲ್ಪಟ್ಟ ಮರ್ತ್ಯಯುಗಲಕವು ನಿಶ್ಚಿಂತೆಯಿಂದ ಮಾರಿಯ ಮನೆಯನ್ನು ಹೊಕ್ಕು, ಪದ್ಧತಿಯಂತೆ, ಅರಸನನ್ನು ಹರಸಬೇಕೆಂದಿದ್ದಾಗ, ಅವರಲ್ಲಿ ಒಬ್ಬನಾದ ಅಭಯರುಚಿಕುಮಾರನು “ನಿರ್ಮಲ ಧರ್ಮದಿಂದೆ ಪಾಲಿಸು ಧರೆಯಂ” ಎನ್ನುತ್ತಾನೆ. ಅವರ ರೂಪಧೈರ್ಯಗಳು ರಾಜನನ್ನು ಬೆರಗುಗೊಳಿಸುತ್ತವೆ. ಆಗ ಮಾರಿದತ್ತನಿಗೆ ಅವರ ವಿಷಯವನ್ನು ತಿಳಿಯುವ ಕುತೂಹಲವುಂಟಾಯಿತು. ಅವನು ಅವರನ್ನು ಪ್ರಶ್ನಿಸಿದಾಗ ಅಭಯರುಚಿ ತಮ್ಮ ಜನ್ಮಾಂತರದ ಕಥೆಯನ್ನು ಹೇಳುತ್ತಾನೆ. ಉಜ್ಜಯಿನಿಯ ಯಶೌಘರಾಜನಿಗೆ ತನ್ನ ಮಡದಿ ಚಂದ್ರಮತಿಯಲ್ಲಿ ಹುಟ್ಟಿದವನೇ ಯಶೋಧರ, ಅವನ 'ಮನಃಪ್ರಿಯೆ' ಅಮೃತಮತಿ, ಯಶೌಘನು ವೃದ್ದಾಪ್ಯಕ್ಕಡಿಯಿಟ್ಟಾಗ ಮಗನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗುತ್ತಾನೆ. ಯಶೋಧರ ಅಮೃತಮತಿಯರು ಪರಸ್ಪರಾನುಬದ್ದರಾಗಿ ಕಾಲ ಕಳೆಯುತ್ತಾರೆ. ಒಂದು ರಾತ್ರಿ ಅವರಿಬ್ಬರೂ ಮಂಚದ ಮೇಲೆ ಮಲಗಿದ್ದಾಗ, ನಟ್ಟಿರುಳು ಅಮೃತಮತಿಗೆ ಪಕ್ಕದ ಗಜಶಾಲೆಯ ಮಾವಟಿಗನ ಹಾಡಿನ ಇಂಚರ ಕೇಳುತ್ತದೆ. ಅವಳು ಕೂಡಲೇ ಆತನಿಗೆ ತನ್ನ ಮನಸ್ಸನ್ನು 'ಪಸಾಯದಾನಂಗೊಟ್ಟಳು. ಅವನನ್ನು ನೋಡುವ, ಆಮೇಲೆ ಕೂಡುವ ಚಿಂತೆ ಅವಳಿಗೆ ಕಡಲ್ವರಿಯಿತು. ಬೆಳಗಾದ ಮೇಲೆ ತನ್ನ ಕೆಳದಿಯನ್ನು ಆತನ ಬಳಿಗೆ ಕಳುಹಿಸುತ್ತಾಳೆ. ಅವಳು ಅಷ್ಟವಂಕನನ್ನು ಕಂಡು ಹೇಸಿ ಫಕ್ಕನೆ ಮರಳುತ್ತಾಳೆ. ಅತ್ಯಾತುರದಿಂದಿದ್ದ ಅಮೃತಮತಿಯೊಡನೆ 'ಇಂತಹ ಕಾಮದೇವನನ್ನು ಹೇಗೆ ಹುಡುಕಿ ಒಲಿದೆಯೋ !' ಎಂದು ವ್ಯಂಗ್ಯವಾಗಿ ನುಡಿಯುತ್ತಾಳೆ. ಅಮೃತಮತಿಯ ಕಾಮ ಕೆರಳಿ, ವ್ಯಂಗ್ಯ ತಿಳಿಯದೆ, ಆತನ ರೂಪವನ್ನು ತಿಳಿಯಬಯಸುತ್ತಾಳೆ. ಅಷ್ಟಾವಕ್ರನ ವಿಕಾರಗಳ ವರ್ಣನೆಯನ್ನು ಕೇಳಿ, ಕಾಮದ ಕೋಟಲೆಯಿಂದ 'ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್' ಎಂದು ಸಮಾಧಾನ ತಂದುಕೊಳ್ಳುತ್ತಾಳೆ. ಅನಂತರ ದೂತಿಗೆ ಲಂಚವಿತ್ತು ಮಾವಟಿಗನ ಒಡನಾಟವನ್ನು ದಕ್ಕಿಸಿಕೊಂಡು, ಕ್ರಮಕ್ರಮವಾಗಿ ಯಶೋಧರನಿಂದ ದೂರವಾಗುತ್ತಾಳೆ. ಇದರ ಸೋವು ಸಿಕ್ಕಿದ ಯಶೋಧರನು ಪರೀಕ್ಷಿಸಿ ನೋಡಲು ಮುಂದಾಗುತ್ತಾನೆ. ಅಮೃತಮತಿ ಜಾರನಲ್ಲಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸಿ ಗುಟ್ಟನ್ನು ತಿಳಿಯುತ್ತಾನೆ. ಆಗ ಅವಳನ್ನೂ ಅವಳ ನಲ್ಲನನ್ನೂ ಎರಡು ಭಾಗ ಮಾಡಬೇಕೆಂಬ ಎಣಿಕೆ ಮೂಡಿ, ಕೂಡಲೇ ಕೃತಿ ಬಂದು, ಕೊಲ್ಲದೆ ಅವನು ಮರಳುತ್ತಾನೆ. ಮರುದಿನ ತನ್ನ ಗುಟ್ಟು ರಟ್ಟಾದುದು ಅಮೃತಮತಿಗೂ ಗೊತ್ತಾಗುತ್ತದೆ. - ಯಶೋಧರನು ಕದಡಿದ ಮನಸ್ಸಿನಿಂದ ತಾಯಿಯ ಬಳಿಗೆ ಹೋಗಿ ಹಿಂದಿನ ರಾತ್ರಿಯ ಘಟನೆಯನ್ನು ಕನಸಿನ ರೂಪದಿಂದ ತಿಳಿಸುವನು. ಆ ತಾಯಿ, ಚಂದ್ರಮತಿ, Page #10 -------------------------------------------------------------------------- ________________ ಉಪೋದ್ಘಾತ ಪ್ರಾಣಿಬಲಿಯನ್ನು ಕೊಟ್ಟು ಶಾಂತಿ ಮಾಡುವಂತೆ ಮಗನನ್ನು ಒತ್ತಾಯಿಸುವಳು. ಕಟ್ಟಕಡೆಗೆ ಹಿಟ್ಟಿನ ಕೋಳಿಯನ್ನು ಬಲಿಕೊಡುವ ನಿರ್ಧಾರಕ್ಕೆ ಇಬ್ಬರೂ ಬರುತ್ತಾರೆ. ಹಾಗೆ ಬಲಿಕೊಡುತ್ತಿದ್ದಾಗ ಹಿಟ್ಟಿನ ಕೋಳಿಯಲ್ಲಿ ಸೇರಿದ್ದ ಬೆಂತರವೊಂದು ಕೋಳಿಯಂತೆ ಕೂಗುತ್ತದೆ. ದೊರೆಗೆ ದಿಗಿಲಾಗುತ್ತದೆ. ಅವನು ಮನೆಗೆ ಬಂದು, ಮಗ ಯಶೋಮತಿಗೆ ಪಟ್ಟಕಟ್ಟಿ ತಪಸ್ಸಿಗೆ ಹೊರಡಲು ಸಿದ್ಧವಾಗುತ್ತಾನೆ. ಅದನ್ನು ತಿಳಿದ ಅಮೃತಮತಿ ಅವನನ್ನೂ ಅತ್ತೆಯನ್ನೂ ಔತಣಕ್ಕೆ ಬರಿಸಿ, ಅವರಿಬ್ಬರನ್ನೂ ವಿಷವಿಕ್ಕಿ ಕೊಲ್ಲುತ್ತಾಳೆ. ∞ ಹಾಗೆ ಸತ್ತ ಈ ಇಬ್ಬರೂ ಹಲವು ಸಲ ಜನ್ಮವೆತ್ತಿ, ಕಡೆಗೆ ಯಶೋಮತಿಗೆ ಅಭಯರುಚಿ ಅಭಯಮತಿಗಳೆಂಬ ಅವಳಿ ಮಕ್ಕಳಾಗಿ ಹುಟ್ಟುತ್ತಾರೆ. ಅವರು ಎಳವೆಯಲ್ಲಿ ದೀಕ್ಷೆವಹಿಸಿ ಸುದತ್ತಾಚಾರ್ಯರ ಶಿಷ್ಯರಾಗುತ್ತಾರೆ. ಚರಿಗೆಗೆ ಹೊರಟಾಗ ಮಾರಿದತ್ತನ ತಳಾರನಾದ ಚಂಡಕರ್ಮನು ಅವರನ್ನು ಹಿಡಿದು, ಚಂಡಮಾರಿ ದೇವತೆಯ ಮನೆಗೊಯ್ದಾಗ ಅಭಯರುಚಿ ಈ ಕಥೆಯನ್ನು ಹೇಳುತ್ತಾನೆ. ಮಾರಿದತನ ಮನಸ್ಸು ಮಾರ್ಪಟ್ಟು ದೀಕ್ಷೆ ವಹಿಸುತ್ತಾನೆ. ಇವನು ಸತ್ತು, ಮುಂದೆ ಮೂರನೆಯ ಸ್ವರ್ಗದಲ್ಲಿ ದೇವನೆ ಆಗುತ್ತಾನೆ. ಅಭಯರುಚಿ ಅಭಯಮತಿಗಳೂ ಕಾಲಾಂತರದಲ್ಲಿ ಈಶಾನ ಕಲ್ಪದಲ್ಲಿ ಹುಟ್ಟುತ್ತಾರೆ. ಅಮೃತಮತಿ ಧೂಮಪ್ರಭೆಯೆಂಬ ನರಕದಲ್ಲಿ ತೊಳಲುತ್ತಾಳೆ. ೪. ಪರಿಶೀಲನ ಇದಿಷ್ಟು ಕಥೆಯನ್ನು ಸ್ಕೂಲವಾಗಿ ನೋಡುವಾಗ ಕಾಣದ ಸಮಸ್ಯೆಗಳು ಸೂಕ್ಷಾವಲೋಕನ ಸಂದರ್ಭದಲ್ಲಿ ತಲೆಯೆತ್ತುತ್ತವೆ. ಎಲ್ಲವಕ್ಕಿಂತಲೂ ಪ್ರಮುಖ ವಾದುದು ಅಮೃತಮತಿಯ ವರ್ತನೆಯ ಸಮಸ್ಯೆ. ಯಶೋಧರನು ಕಬ್ಬಿನ ಬಿಲ್ಲಿಗೂ ನನೆಯ ನಾರಿಗೂ ಜನಮೋಹನ ಬಾಣವು ಹುಟ್ಟುವಂತೆ ಹುಟ್ಟಿದವನು ಮಾತ್ರವಲ್ಲದೆ, ಎಳವೆಯಿಂದಲೇ ಸೌಂದರ್ಯದ ಮೂರ್ತಿಯಾಗಿ ರೂಪುಗೊಂಡವನು. ತಾರುಣ್ಯದಲ್ಲಿ ಎಳೆಯ ಬೆಟ್ಟಿಂಗಳು, ಪುಷ್ಪಬಾಣ, ಮಲಯಮಾರುತ ಇವುಗಳ ಆಕರ್ಷಕತೆಯನ್ನು ಪಡೆದವನು. ಇಂಥವನ ಮನಃಪ್ರಿಯೆ ಅಮೃತಮತಿ, “ಕನ್ಯಾ ವರಯತೇ ರೂಪಂ' ಎಂಬ ಮಾತಿನಂತೆ ಅಮೃತಮತಿ ಯಶೋಧರನ ರೂಪವನ್ನು ಮೆಚ್ಚಿ ಅವನನ್ನು ವರಿಸಿದಳೆಂದಾದರೆ, ಅವನ ಸೌಂದರ್ಯಕ್ಕೆ ಅದೊಂದು ಪ್ರಶಸ್ತಿಯೇ ಸರಿ. ಅವನು ಸ್ವತಃ ರಾಜನಾಗಿದ್ದನೆಂದ ಮೇಲೆ ಅಧಿಕಾರ ಐಶ್ವರ್ಯಗಳೂ ಅವನಿಗೆ ಬೇಕಾದಷ್ಟಿದ್ದುವು ಎಂದು ಬೇರೆ ಹೇಳಬೇಕಾಗಿಲ್ಲ. ಅರಸುತನದಲ್ಲಿ ಕೂಡ ಅವನು ದುರ್ಬಲನೂ ಅಲ್ಲ: ಹೇಡಿಯೂ ಅಲ್ಲ. ಅವನ ಅಸಿಲತೆ (ಖಡ್ಗ) ರಣಭೌತವಾಗಿತ್ತೆಂದು ಅವನೇ ಹೇಳುತ್ತಾನೆ. ಅದು ಅವನ ಹಿರಿಯರಿಂದ ಬಂದುದೆಂದಾಗಿದ್ದರೆ ಅವನು ಅದರ ಮೇಲೆ ಅಷ್ಟೊಂದು Page #11 -------------------------------------------------------------------------- ________________ ಯಶೋಧರ ಚರಿತೆ ಅಭಿಮಾನವಿರಿಸಿಕೊಳ್ಳುತ್ತಿದ್ದನೆ? ಅಂತೂ ಯಾವ ಬಗೆಯ ನ್ಯೂನತೆಯೂ ಇಲ್ಲದ ಯಶೋಧರ ಯಾವ ದುರ್ಗುಣವನ್ನೂ ಪಡೆದಿದ್ದನೆಂದಿಲ್ಲ. ಇಂತಹ ಯಶೋಧರನ ಪತ್ನಿ ಅಮೃತಮತಿ. ಆಕೆ ಆತನಿಗೆ ಮನಃಪ್ರಿಯೆ. ಆದರೆ ಅವಳಿಗೆ ಅವನು ಮನಃಪ್ರಿಯನಾಗಿದ್ದನೆ ? ಕವಿಯ ಈ ಒಂದು ಮಾತು ಇಲ್ಲಿ ವಿಚಾರಣೀಯ: ಅಮೃತಮತಿ ಗಡ ಯಶೋಧರ ನ ಮನಃಪ್ರಿಯೆ ಆಕೆ ದೀವಮಾಗೆ ಪುಳಿಂದಂ ಸುಮನೋಬಾಣಂ ತದ್ರೂ ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ. ಇದರ ಪ್ರಕಾರ, ಯಶೋಧರನು ಅಮೃತಮತಿಯಿಂದ ಆಕರ್ಷಿತನಾಗಿದ್ದನು. ಏಕೆ ? ಕಾಮನ ಪ್ರಭಾವದಿಂದ ಎಂಬುದು ಸ್ಪಷ್ಟ, ಎಂದರೆ ಯಶೋಧರನಲ್ಲಿ ಕಾಮುಕತೆಯಿತ್ತೆಂದು ಸಾಧಿಸುವಂತಿದೆ ಈ ಮಾತು. ಹಾಗೆಯೇ ಅಮೃತಮತಿ ಆತನನ್ನು ಒಲಿದಿದ್ದಳೆ? ಬೇಟೆಗಾರನ ದೀವಕ್ಕೆ ತನ್ನಿಂದಾಗಿ ಗೋರಿಗೊಳ್ಳುವ ಪ್ರಾಣಿಯಲ್ಲಿ ಪ್ರೀತಿ ಆಸಕ್ತಿ ಉಳಿಯುವುದೇ ? ಮಾತ್ರವಲ್ಲ, ಬೇಟೆಗಾರನು ಅದೇ ದೀವವನ್ನು ಇನ್ನೊಂದು ಪ್ರಾಣಿಯನ್ನಾಕರ್ಷಿಸುವುದಕ್ಕೆ ಬಳಸುತ್ತಾನೆ. ಆ ಪ್ರಾಣಿಯೂ ಹಾನಿಗೊಳಗಾಗುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಪರಿಭಾವಿಸಿದರೆ, ಯಶೋಧರನು ಅಮೃತಮತಿಯಲ್ಲಿ ಆಸಕ್ತನಾಗಿದ್ದನೇ ಹೊರತು, ಅಮೃತಮತಿ ಅವನಲ್ಲಿ ಅನುರಕ್ತಿಯಾಗಿದ್ದಳು ಎನ್ನುವಂತಿಲ್ಲ. ಆದರೆ ಮುಂದೆ ಅಮೃತಮತಿಸಹಿತಮಾ ಚಂ ದ್ರಮತಿಯ ಸುತನಂತು ಮೇಜಿನ ದವಳಾರದೊಳ ಭಮುವೆರಸಭಗಜಂ ವಿ ಭ್ರಮದಿಂದ ಸೆಜ್ಜರಕ್ಕೆ ಬಂದವೊಲೆಸೆಗುಂ ಎಂಬ ಪದ್ಯ ಬರುತ್ತದೆ. ಸಾಲದುದಕ್ಕೆ 'ಖಚರದಂಪತಿಗಳವೊಲ್ ತಾಮೆಸೆದರ್' ಎಂದೂ 'ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌' ಎಂದೂ ಆ “ಹೃದಯಪ್ರಿಯ'ರ ವಿಷಯ ಮಾತು ಬರುತ್ತದೆ. ಇವುಗಳಿಂದ ಅವರಿಬ್ಬರೂ ಪರಸ್ಪರ ಪ್ರೇಮಬದರಾಗಿದ್ದರೆಂದು ವಾದಿಸಬಹುದಾದರೂ, ಮುಂದಣ ಘಟನೆಯನ್ನು ಎಣಿಸುವಾಗ ಅವೆಲ್ಲ ಬರಿಯ ಆಲಂಕಾರಿಕ ವಾಕ್ಯಗಳೆಂದು ಮಾತ್ರ ಹೇಳಬೇಕಾಗುತ್ತದೆ. ಏಕೆಂದರೆ ಕರುಮಾಡದ ಪಕ್ಕದಲ್ಲಿದ್ದ ಪಟ್ಟದಾನೆಯ ಬದಗನು ವಿನೋದಕ್ಕೆ ಹಾಡುತ್ತಿದ್ದಾಗ, ಅದನ್ನು ಕೇಳಿ ಅಮೃತಮತಿ ತನ್ನ ಮನಸ್ಸನ್ನು ತೊಟ್ಟನೆ-ಏನೂ ವಿಚಾರಮಾಡದೆ-ಪಸಾಯದಾನ ಕೊಟ್ಟಳಂತೆ! ಅವಳ ಮನಸ್ಸು ಮಾವನ್ನು ಮೆಚ್ಚದ ಮನಸ್ಸಾಗಿತ್ತು ; ಅದು ಬೇವನ್ನೆ ಬಯಸುತ್ತಿತ್ತು. ಪಂಚೇಂದ್ರಿಯಗಳಲ್ಲಿ ಶ್ರವಣೇಂದ್ರಿಯವೊಂದರ ಆಕರ್ಷಣೆ ಅವಳಿಗೆ ತೀವ್ರವಾಯಿತು. ಅನಂತರವೇ “ನೋಡುವ ಕೂಡುವ ಚಿಂತೆ ಕಡಲ್ವರಿದುದು. ಯಾವುದಾದರೊಂದು ವ್ಯಕ್ತಿಯ ಹೆಸರು Page #12 -------------------------------------------------------------------------- ________________ ಉಪೋದ್ಘಾತ ಕೇಳಿದಾಗ, ಅವನ ಹಿರಿಮೆಯನ್ನೋ ಕೀಳೆಯನ್ನೋ ಕೇಳಿದಾಗ, ನಾವೂ ಅವನ ಸ್ವರೂಪವನ್ನು ಕಲ್ಪಿಸಿಕೊಳ್ಳುವುದಿಲ್ಲವೆ? ಅದೇ ರೀತಿಯಲ್ಲಿ ಅವಳೂ ಇಂಪಾದ ಹಾಡು ಹಾಡುವವನು ಅತ್ಯಂತ ಸುಂದರವಾಗಿದ್ದಿರಬಹುದೆಂದು ಕಲ್ಪಿಸಿರಬಹುದು. ಅಮೃತಮತಿಯ ಕೆಳದಿ ಅವನನ್ನು ನೋಡಿ ಬಂದು ಆ ರೂಪಾಧಮನ ವರ್ಣನೆಯನ್ನು ಮಾಡಿದಾಗ, ಅಮೃತಮತಿ ಒಮ್ಮೆ ವಿಹ್ವಲೆಯಾದಳು ನಿಜ, ಆದರೆ “ಮೆಚ್ಚಿದವರಿಗೆ ಮಸಣ ಸುಖ' ಎಂಬಂತೆ ಅವಳು 'ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್' ಎನ್ನುತ್ತಾಳೆ. ಇನ್ನೂ ಮುಂದುವರಿಸಿ 'ಒಲವಾದೊಡೆ ರೂಪಿನ ಕೋಟಲೆ ಯೇವುದೊ' ಎನ್ನುತ್ತಾಳೆ. ಇದರಿಂದ ಕೂಡ ಯಶೋಧರನ ರೂಪದಲ್ಲಿ ಅವಳಿಗೆ ಒಲವಾಗಿರಲಿಲ್ಲ, ಏಕೆಂದರೆ ಅವನಲ್ಲಿ ಪೊಲ್ಲಮೆಯೆ ಇಲ್ಲ ಎಂದೇ ಹೇಳಿದಂತಾಗುತ್ತದೆ. ಹಾಗೆಂದು ಅವಳಿಗೆ ಆ ವಿಕಟಾಂಗನಲ್ಲಿ ರತಿಫಲಾಸ್ವಾದನದಲ್ಲಿ ರುಚಿಯಾಯಿತಂತೆ! ಅವಳಿಗೆ ಬರಿಯ ಕಾಮತೃಪ್ತಿಯ ಕಡೆಗೆ ಒಲವಿದ್ದಿತೇ ಹೊರತು ರೂಪ-ಗುಣಗಳ ಕಡೆಗೆ ಒಲವಿರಲಿಲ್ಲ. ಆ ತೃಪ್ತಿ ಅಷ್ಟವಂಕನಿಂದ ದೊರೆಯುವ ನಿರೀಕ್ಷೆ ಅವಳದು. ಅಷ್ಟವಂಕನು ಎಷ್ಟು ಕುರುಪಿಯೊ ಮತ್ತು ಎಷ್ಟು ಕುಶ್ಚಿತನೊ ಅಷ್ಟೇ ಕ್ರೂರನೂ ಹೌದು. ಅಮೃತಮತಿ ಈ ಜಾರನಲ್ಲಿಗೆ ಬಂದಾಗ ಒಮ್ಮೆ ವಿಲಂಬವಾದುದಕ್ಕೆ ಆತನು ಅವಳ ಸ್ಥಾನ-ಮಾನ-ರೂಪ-ಯೌವನ ಮುಂತಾದ ಯಾವುದನ್ನೂ ಲೆಕ್ಕಿಸದೆ-ಅವಳ ಮೇಲೆ ಒಂದಿಷ್ಟು ಒಲವಿಲ್ಲದೆ-ಅವಳ ಸೌಕುಮಾರ್ಯವನ್ನು ಗಣನೆಗೆ ತಾರದೆ ಅವಳ “ಕುರುಳಳನೆಳೆದು ಬೆನ್ನ ಮಿಳಿಯಂ ಕಳಹಂಸೆಗೆ ಗಿಡಿಗನೆರಗಿದಂತಿರೆ' ಬಡಿದನು. ಇಷ್ಟೇ ಅಲ್ಲ, ತೋರಮುಡಿವಿಡಿದು ಕುಡಿಯಂ ನಾರಂ ತಗೆವಂತೆ ತದೆದು, ಬೀಟೆಯ ಕಾಲಿಂದ ಬಾರೇಳೆ' ಬದಗನೊದೆದನು. ಇಂತಹ ಕ್ರೂರವೂ ದಯಾಶೂನ್ಯತೆಯೂ ಅವನ ಆಕಾರಕ್ಕೆ, ಸಂಸ್ಕಾರಕ್ಕೆ, ಹುಟ್ಟಿಗೆ ತಕ್ಕುದಾದದ್ದೇ. ಆದರೆ ಅವಳು ಆಗಲೂ ಕೇರೆ ಪೊರಲ್ವಂತೆ ಅವನ ಕಾಲಮೇಲೆ ಪೊರಳಳು. ಅವಳಿಗೆ ಯಶೋಧರನು 'ಅರಸೆಂಬ ಪಾತಕನಾಗಿ ಬಿಟ್ಟಿದ್ದಾನೆ. ಗಜವೆಡಂಗನಾದ ಅಷ್ಟವಂಕನ ದನಿ ಅವಳ ಕಿವಿಗೆ ಸವಿಯಾಗಿಯೂ ಅವನ ರೂಪು ಅವಳ ಕಣ್ಣಿಗೆ ಸವಿಯಾಗಿಯೂ ಇವೆಯೆನ್ನುತ್ತಾಳೆ. ಅವನ ಕರ್ಣಾನಂದಕರವಾದ ಗೀತಕ್ಕೆ ಅವಳು ಸೋತುಹೋದುದು ನಿಜವಾದರೂ, ಆಮೇಲೆ ಅವನ ಗೀತವನ್ನು ಅವಳು ಕೇಳಿದುದಾಗಲಿ, ಅವನು ಹಾಡಿದುದಾಗಲಿ ಇಲ್ಲವೇ ಇಲ್ಲ. ಎಂದಮೇಲೆ ಆಕೆ ಯಶೋಧರನಲ್ಲಿ ಅನುರಕ್ತಿಯಾಗಿ ಇರಲೇ ಇಲ್ಲ; ಅವಳು ಮೊದಲು ಮೋಹಗೊಂಡುದು ಬದಗನ ಹಾಡಿನ ಸಕೃಚ್ಛವಣಕ್ಕೆ; ಅನಂತರ ಅವನ ವಕ್ರಾಕಾರವನ್ನು ಕಣ್ಣಿಗೆ ಸವಿಯೆಂದು ಸಮಾಧಾನ ತಂದುಕೊಂಡುದು ಎಂಬುದನ್ನು ತಿಳಿಯಬಹುದು. ಯಶೋಧರನಿಗೂ ಪೆಣ್ (ಅಮೃತಮತಿ) ತಪ್ಪಿ ನಡೆದಳೆಂದು ಕಂಡಿತಲ್ಲದೆ ಅಷ್ಟವಂಕನಲ್ಲಿ ಅವನು ಅಪರಾಧವನ್ನು ಕಾಣಲಿಲ್ಲ. ಒಮ್ಮೆ ಅವರಿಬ್ಬರನ್ನೂ ಎರಡು ಭಾಗ ಮಾಡಬೇಕೆಂದು ಕತ್ತಿಯೆತ್ತಿದ್ದನಾದರೂ ಅದು ಬರಿಯ ರೋಷದಿಂದ. Page #13 -------------------------------------------------------------------------- ________________ ಯಶೋಧರ ಚರಿತೆ ಅಮೃತಮತಿಗೆ ತನ್ನ ವ್ಯಭಿಚಾರವು ರಾಜನಿಗೆ ಗೊತ್ತಾಯಿತೆಂದು ತಿಳಿದುಬಂದಾಗ ಅವನ ಕೋಲೆಗೂ ಮುಂದಾಗುತ್ತಾಳೆ; ವಿಷವಿಕ್ಕಿ ಕೊಲ್ಲುತ್ತಾಳೆ. ತನ್ನ ಕಾಮಕ್ಕೆ ಅಡ್ಡಿಯಾಗುವವನ ಮೇಲೆ ಕ್ರೋಧವುಂಟಾದುದು ಇದಕ್ಕೆ ಕಾರಣ. ಅನಂತರ ತನ್ನ ಅರಮನೆಯಲ್ಲೇ ಆ ಬದಗನನ್ನು ಇರಿಸಿಕೊಳ್ಳುತ್ತಾಳೆ. ಇದನ್ನು ಆಕೆಯ ಮಗ ಯಶೋಮತಿ ಏಕೆ ತಡೆಯಲಿಲ್ಲವೋ ತಿಳಿಯುವುದಿಲ್ಲ. ಅವನಿಗೆ ಗೊತ್ತಿಲ್ಲದೆ ಇದು ನಡೆದುದೂ ಅಲ್ಲ. ಸಾಮಾನ್ಯಜನರೂ ಅಮೃತಮತಿಯ ನೀಚವರ್ತನೆಯ ಕುರಿತು ಆಡಿಕೊಳ್ಳುತ್ತಿದ್ದರೆಂಬುದರಿಂದ ಇದು ಸಿದ್ದವಾಗುತ್ತದೆ. ಅದೂ ಅಲ್ಲದೆ, “ತೊನ್ನನ ಕೂಟದಿಂದ ನಿನಗೂ ತೊನ್ನು ಉಂಟಾಗಿದೆ; ಈ ರೋಗಕ್ಕೆ ಮದ್ಯಮಾಂಸಗಳು ವಿಷ'ವೆಂದು ಹೇಳಿದರೂ ಅವಳು ಮಗನ ಮಾತನ್ನು ಮನ್ನಿಸಲಿಲ್ಲವಂತೆ! ಎನ್ನುವಾಗ ಅವನಿಗೂ ಅವಳನ್ನು ತಡೆಯುವ ಅಥವಾ ಅವಳನ್ನು ದಂಡಿಸುವ ಸಾಮರ್ಥ್ಯವಿರಲಿಲ್ಲವೆ? ಅಥವಾ ಅವನೂ ಯಶೋಧರನಂತೆ 'ಮಾತೃದೇವನಾಗಿ ಉಳಿದುಕೊಂಡನೆ ? ಹೇಗೆ ಹೇಳುವುದು ? ಅಂತೂ ಅಮೃತಮತಿ ಬರಿಯ ಕಾಮುಕ ಸ್ತ್ರೀ; ಅವಳಿಗೆ ಬದಗನ ಇಂಪಾದ ಹಾಡೇ ಮರುಳುಗೊಳಿಸುವ ಆಕರ್ಷಣೆಯಾಯಿತು. ಹಾಗೆ ಹುಚ್ಚಾದ ಅವಳು ತಾನಾಗಿ “ತಿಳಿ'ಯಾಗಲಿಲ್ಲ; ಉಳಿದವರು 'ತಿಳಿ'ಯಾಗಿಸಲು ಯತ್ನಿಸಲಿಲ್ಲ; ಯತ್ನಿಸಿದ್ದಿರ ಬಹುದಾದರೂ ಅವರಾರೂ ಸಫಲರಾಗಲಿಲ್ಲ. ಅವಳು ಕಾಮದ ಕೈಗೊಂಬೆಯಾಗಿ, ಅದಕ್ಕೆ ಅಡ್ಡಿಯಾಗಬಹುದಾಗಿದ್ದ ಗಂಡನನ್ನೂ ಅತ್ತೆಯನ್ನೂ ವಿಷವಿಕ್ಕಿ ಕೊಲ್ಲುವ ಕ್ರೋಧಕ್ಕೆ ಒಳಗಾಗಿ, ಬದುಕಿದ್ದಾಗಲೇ ಕುಷ್ಠದಿಂದ ಕೊಳೆತು, ಸತ್ತಮೇಲೆ ಧೂಮಪ್ರಭೆಯೆಂಬ ಐದನೆಯ ನರಕದಲ್ಲಿ ಮುಳುಗಿದಳು. - ಬದಗನನ್ನು ಒಲಿದು ಅವಳು ಅವನನ್ನೆ ಅಂತ್ಯಕಾಲದವರೆಗೂ ಬಿಡದೆ ಆರಾಧಿಸಿದ ಕಾರಣ ಅವಳ ಪ್ರಣಯ ಶುದ್ಧಪ್ರಣಯವೆನ್ನಬಹುದೆ ? ಹಾಗೆ ಹೇಳಬಹು ದೆಂದಾದರೆ ಅಧರ್ಮದ ವರ್ತನೆಯೆಲ್ಲವನ್ನೂ ಸರಿಯೆಂದು ಸಮರ್ಥಿಸುವುದಕ್ಕೆ ಸಾಧ್ಯವಾಗದೆ ? ಹೋಗಲಿ. ಅವನಾದರೂ ಅವಳನ್ನು ಒಲಿದಿದ್ದನೆ? ಇಲ್ಲ; ಒದೆದಿದ್ದ! ವಾಲ್ಮೀಕಿರಾಮಾಯಣದ ಸುಂದರಕಾಂಡದಲ್ಲಿ ಈ ಮಾತು ಬರುತ್ತದೆ: ಅಕಾಮಾಂ ಕಾಮಯಾನಸ್ಯ ಶರೀರಶುಪತವ್ಯತೇ | ಇಚ್ಛತಾಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ 11 . (ವಾಲ್ಮೀಕಿ ರಾಮಾಯಣ : ಸರ್ಗ ೨೨, ಶ್ಲೋ ೪೨) (ಕಾಮವಿಲ್ಲದವಳನ್ನು ಕಾಮಿಸುವುದರಿಂದ, ದೇಹಕ್ಕೆ ಸಂಕಟವೇ ಹೊರತು ಸುಖವಿಲ್ಲ. ತಾನಾಗಿ ಇಷ್ಟಪಟ್ಟು ಕಾಮಿಸಿ ಬಂದವಳನ್ನು ಆದರಿಸುವುದರಿಂದ ಸಂತೋಷವೂ ಹೆಚ್ಚು ಅಮೃತಮತಿ ತಾನಾಗಿ ಕಾಮಿಸಿ ಬಂದಳೆಂದು ಅಷ್ಟವಂಕನು ಅವಳನ್ನು ಆದರಿಸಲಿಲ್ಲವೆಂದಾದಮೇಲೆ ಅವನಿಗೆ ಸಂತೋಷವೂ ಇದ್ದಿರಲಾರದು. Page #14 -------------------------------------------------------------------------- ________________ ಉಪೋದ್ಘಾತ ವಾಮಃ ಕಾಮೋ ಮನುಷ್ಯಾಣಾಂ ಯಸಿನ್ ಕಿಲ ನಿಬಧ್ಯತೇ | ಜನೇ ತಸ್ಮಿನ್ ಸೃನುಶಃ ಸ್ನೇಹಶ್ಚ ಕಿಲ ಜಾಯತೇ || (ವಾಲ್ಮೀಕಿರಾಮಾಯಣ : ಸುಂದರಕಾಡ, ಸರ್ಗ ೨೨, ಶ್ಲೋ ೪೨) (ಮನುಷ್ಯರಿಗೆ ಕಾಮವೆಂಬುದು ಬಹಳ ವಕ್ರವಾದುದು. ಆ ಕಾಮವು ಯಾರಲ್ಲಿ ಪ್ರವರ್ತಿಸುವುದೋ ಆ ಜನ್ಮದಲ್ಲಿ ದಯೆಯೂ ಸ್ನೇಹವೂ ಹುಟ್ಟಿಬಿಡುವುದು) ಎಂಬ ಮಾತಿನಂತೆ ಆ 'ಜಾರ'ನಿಗೆ ಅವಳಲ್ಲಿ ದಯೆಯೂ ಇರಲಿಲ್ಲ: ಸ್ನೇಹವೂ ಇರಲಿಲ್ಲ. ಇಷ್ಟರಿಂದ ಸಿದ್ಧವಾಗುವುದು ಒಂದೇ ಒಂದು : ಅಮೃತಮತಿ ಬರಿಯ ಕಾಮುಕಸ್ಲಿ; ಜಾರೆ; ಜಾರಿದವಳು; ತಾನಾಗಿಯೇ ಜಾರುವುದಕ್ಕೆ ಹೋದವಳು; ಅದನ್ನೇ ಮೆಚ್ಚಿದವಳು. ಅವಳ ವರ್ತನೆ ಸರ್ವಥಾ ನಿಂದನೀಯ; ಸರ್ವಾತ್ಮನಾ ಖಂಡನೀಯ! ಈ ಕೃತಿಯಲ್ಲಿ ಬರುವ ಬೇರೆ ಕೆಲವು ಸಮಸ್ಯೆಗಳನ್ನು ಇನ್ನು ನೋಡಬಹುದು: ಯಶೋಧರ ಮತ್ತು ಚಂದ್ರಮತಿ ಸಂಕಲ್ಪ ಹಿಂಸೆಯಿಂದ ಆರು ಬಾರಿ ತಿರದ್ಯೋನಿಯಲ್ಲಿ ಜನ್ಮವೆತ್ತಿ ಸತ್ತು, ಕೋಳಿಯ (ಆರನೆಯ) ಜನ್ಮದಲ್ಲಿದ್ದಾಗ ವ್ರತವನ್ನು ಧರಿಸಿದ ಕಾರಣದಿಂದ ಮನುಷ್ಯಜನವನ್ನು ಪಡೆಯುತ್ತಾರೆ; ಅಭಯರುಚಿ ಅಭಯಮತಿಗಳಾಗಿ ಹುಟ್ಟುತ್ತಾರೆ. ಎಳವೆಯಲ್ಲೇ ಅವರು ಸುದತ್ತಾಚಾರ್ಯರ ಶಿಷ್ಯರಾಗಿ, ಮರಣಾನಂತರ ಈಶಾನಕಲ್ಪದಲ್ಲಿ ಜನಿಸುತ್ತಾರೆ. ಈಶಾನಕಲ್ಪವೆಂದರೆ, ಜೈನರ ಪ್ರಕಾರ, ಹದಿನಾರು ಸ್ವರ್ಗಗಳಲ್ಲಿ ಎರಡನೆಯದು. ಮೂರನೆಯ ಸ್ವರ್ಗವು ಇದಕ್ಕಿಂತ ಮೇಲಿರಬೇಕು ತಾನೆ. ಹಲವುಪ್ರಾಣಿಗಳನ್ನು ಪ್ರತಿವರ್ಷವೂ ಹಿಂಸೆ ಮಾಡುತ್ತಿದ್ದ ಮಾರಿದತ್ತನು ಅಭಯರುಚಿ ಹೇಳಿದ 'ಯಶೋಧರಚರಿತೆ'ಯನ್ನು ಕೇಳಿದ ಮೇಲೆ ಉಗ್ರತಪವನ್ನಾಚರಿಸಿ, ಸಮಾಧಿ ಮರಣದ ಬಳಿಕ ಈ ಮೂರನೆಯ ಸ್ವರ್ಗದಲ್ಲಿ ದೇವನೆ ಆಗುತ್ತಾನೆ. ಸಂಕಲ್ಪ ಹಿಂಸೆಯಿಂದ-ಕೊಲ್ಲಬೇಕೆಂದು ಎಣಿಸಿಕೊಂಡುದರಿಂದ ಬೇರೆ ಬೇರೆ ಜನ್ಮಗಳನ್ನು ಪಡೆದು, ನವೆದು, ಕಟ್ಟಕಡೆಗೆ ದೊರೆಯುವುದು ಎರಡನೆಯ ಸ್ವರ್ಗ; ನಿರಂತರ ಹಿಂಸೆಯ ಬಳಿಕ ದೊರೆಯುವುದು ಮೂರನೆಯ ಸ್ವರ್ಗ! ಅದೂ ಹಲವು ಜನ್ಮಗಳನ್ನು ಪಡೆಯದೆ, ಎನ್ನುವಾಗ ಸಂಕಲ್ಪಹಿಂಸೆಯೇ ದೊಡ್ಡ ಪಾಪ; ನಿಜವಾದ ಹಿಂಸೆ ಅಷ್ಟು ದೊಡ್ಡ ಪಾಪವಲ್ಲ ಎಂದು ತೋರಲಾರದೆ ? ಇದಕ್ಕೆ ಸಮಾಧಾನ ಹೇಳುವುದಾದರೆ 'ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ' (ಮನುಷ್ಯರ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ) ಎಂಬ ಸೂಕ್ತಿಯನ್ನವಲಂಬಿಸಬೇಕು. ಮಾರಿದತ್ತ ಮಾಡುತ್ತಿದ್ದ ಹಿಂಸೆ ಹಿಂಸೆಯೆಂಬ ಎಣಿಕೆಯಿಂದ ಮಾಡಿದುದಲ್ಲ; ದೇವಿಯ ಅರ್ಚನೆ ಎಂಬ ಭಾವನೆಯಿಂದ. ಯಶೋಧರನಾದರೂ, ಜೀವದಯೆ,ಜೈನಧರ್ಮಂ” ಎಂಬುದನ್ನು ತಿಳಿದೂ, ಹಿಟ್ಟಿನ ಕೋಳಿಯನ್ನು ಕೊಲ್ಲುವುದಕ್ಕೆ ಮನಸು ಮಾಡಿ ಅಪರಾಧವನ್ನು ಪಾಪವನ್ನು ಮಾಡಿದನು ಎನ್ನಬೇಕು. Page #15 -------------------------------------------------------------------------- ________________ ಯಶೋಧರ ಚರಿತೆ ಹಾಗೆಂದು ಯಶೋಧರನು ಬೇರೆ ಹಿಂಸೆಯನ್ನೆ ಮಾಡಿಲ್ಲವೆ? ಅವನ ಅಸಿಲತೆ ರಣಭೌತವಾಗಿತ್ತು. ವಿಜಿಗೀಷು ವೃತ್ತಿ ರಾಜಧರ್ಮವಾದುದರಿಂದ ಅವನು ಆ ರೀತಿ ಶತ್ರುಗಳನ್ನು ಕೊಂದಿದ್ದಾನೆಂದೂ, ಅದು ಅಪರಾಧವಾಗುವುದಿಲ್ಲವೆಂದೂ ಇಲ್ಲಿ ಹೇಳಬಹುದೆ ? ಹಾಗೆಯೇ ಅವನ ಮಗ ಯಶೋಮತಿ ಬೇಟೆಯ ನೆವದಿಂದ ಎಷ್ಟು ಜೀವಹಿಂಸೆ ಮಾಡಿಲ್ಲ? ಅವನಿಗೇನು ಗತಿಯೊದಗಿತೋ ತಿಳಿಯದು. ಯಶೋಧರನು ಎರಡನೆಯದಾದ ಈಶಾನಕಕ್ಕೆ ಮಾತ್ರ ಅರ್ಹನಾದುದಕ್ಕೆ ಅವನು ಸತ್ಯವ್ರತವನ್ನು ಪರಿಪಾಲಿಸದಿದ್ದುದೂ ಕಾರಣವಾಗಿರಬಹುದೆ? ಅಮೃತಮತಿ ಅಷ್ಟವಂಕನಲ್ಲಿ ಕಾಮುಕತೆಯಿಂದ ವ್ಯಭಿಚಾರಿಯಾದಳೆಂಬುದನ್ನು ಅವನು ತನ್ನ ತಾಯಿಗೆ ಹೇಳುವಾಗ ಕನಸಿನ ನೆವದಿಂದ ಮರಸಿ ಹೇಳಿದನು. ಇದರಿಂದಾಗಿ ಅವನಿಗೆ ಈಶಾನಕಲ್ಪದಲ್ಲಿ ಜನವೊದಗಿತೋ ಏನೋ. ಯಾವ ಸಂದರ್ಭಗಳಲ್ಲಿ ಸುಳ್ಳು ಹೇಳಬಹುದೆಂಬುದನ್ನು ಈ ಕೆಳಗಣ ಶ್ಲೋಕ ತಿಳಿಸುತ್ತದೆ : ವಿವಾಹಕಾಲೇ ರತಿಸಂಪ್ರಯೋಗೇ ಪ್ರಾಣಾಯೇ ಸರ್ವಧನಾಪಹಾರೇ ವಿಪ್ರಸ್ಕಚಾರ್ಥಹ್ಮನೃತಂ ವದೇತ ಪಂಚಾಮೃತಾನ್ಯಾಹುರಪಾತಕಾನಿ | (ವಿವಾಹಕಾಲದಲ್ಲಿ, ಸಂಭೋಗ ಸಮಯದಲ್ಲಿ, ಪ್ರಾಣಾಪಾಯವು ಒದಗಿದಾಗ, ಸರ್ವಸ್ವವೂ ಅಪಹಾರವಾಗುತ್ತಿರುವಾಗ, ವಿಪ್ರರಿಗೋಸ್ಕರವಾಗಿ ಅವೃತವನ್ನು ಹೇಳಬಹುದು. ಬಲ್ಲವರು ಈ ಐದು ಅನೃತಗಳು ಪಾಪವಲ್ಲ ಎಂದು ಹೇಳುತ್ತಾರೆ) ನೀಷು ನರ್ಮವಿವಾಹೇಚ ವೃತ್ಯರ್ಥೇ ಪ್ರಾಣಸಂಕಟೇ ಗೋಬ್ರಾಹ್ಮಣಾರ್ಥೇ ಹಿಂಸಾಯಾಂ ನಾನೃತಂ ಸ್ಕಾಜುಗುಪ್ಪಿತಂ (ಹೆಂಗುಸರಲ್ಲಿ, ನರ್ಮವಿವಾಹದಲ್ಲಿ ವೃತ್ತಿಗಾಗಿ, ಪ್ರಾಣಸಂಕಟದಲ್ಲಿ, ಗೋಬ್ರಾಹ್ಮಣರ ಸಲುವಾಗಿ, ಹಿಂಸೆಯಲ್ಲಿ ಸುಳ್ಳು ಜುಗುಪ್ಪೆಗೆ ಒಳಗಾಗುವುದಿಲ್ಲ.) ಯಶೋಧರನಿಗೆ ಈ ಕಾರಣಗಳಲ್ಲಿ ಯಾವುದಾದರೊಂದು ಅನುಕೂಲವಾಗಿ ಅವನನ್ನು ಪಾಪಕ್ಕೆ ಪಕ್ಕಾಗದಂತೆ ಮಾಡಿದೆಯೆನ್ನೋಣವೇ? ಹಾಗಿದ್ದರೆ ಒಂದಿಲ್ಲೊಂದು ಕಾರಣವನ್ನು ನಮ್ಮ ನಮ್ಮ ಅನುಕೂಲತೆಗೆ ಹೊಂದಿಸಿಕೊಂಡು ಸುಳ್ಳು ಹೇಳುವುದನ್ನು ಅಂಗೀಕರಿಸಬಹುದು. ಇನ್ನೂ ಒಂದು ಕಾರಣವನ್ನು ಊಹಿಸಬಹುದು : ಯಶೋಧರನು ನವಿಲಿನ ಜನ್ಮದಲ್ಲಿದ್ದಾಗ ಅಷ್ಟವಂಕನ ಕಣ್ಣನ್ನು ಕುಕ್ಕಿ ಪಾಪಕ್ಕೆ ಪಕ್ಕಾಗಿದ್ದಾನೆ. ಇದು ಅವನಿಗೆ ಅರಿವಿಲ್ಲದೆ ಆದುದಲ್ಲ; ಭವರೋಷದಿಂದ, ಎಂದರೆ ಯಶೋಧರನಾಗಿದ್ದಾಗ ಬಂದ ಧೃತಿ ಅವನಿಗೆ ನವಿಲಾಗಿದ್ದಾಗ ಬರಲಿಲ್ಲ, ಇಲ್ಲಿ ಹಿಂಸಾಬುದ್ದಿಯೇ ಉಳಿಯಿತು. Page #16 -------------------------------------------------------------------------- ________________ ಉಪೋದ್ಘಾತ “ಜೀವದಯೆ ಜೈನಧರ್ಮಂ” ಎಂಬುದರಲ್ಲಿ ಗಟ್ಟಿಮಾಡಿಕೊಂಡಿದ್ದವನಿಗೆ ತಾಯಿಯ ಹಿಂಸಾಬುದ್ದಿಯನ್ನು ನಿವಾರಿಸಲಾಗಲಿಲ್ಲವೆ ? ಆಗಿತ್ತು ಎನ್ನೋಣ. ಏಕೆಂದರೆ ಅವಳು ಹಿಟ್ಟಿನ ಕೋಳಿಯನ್ನು ಬಲಿಯಿತ್ತರೆ ಸಾಕು ಎಂಬಲ್ಲಿಯವರೆಗೆ ಬಂದಿದ್ದಳು. ಆದರೆ ಯಶೋಧರನ ಮಗ ಯಶೋಮತಿಗೆ ಹಿಂಸಾ ಬುದ್ದಿಯೇ ಇರುವುದನ್ನು ಕಾಣುವಾಗ ಅವನು ಇತರರನ್ನು ತಿದ್ದುವುದರಲ್ಲಿ ಸಮರ್ಥನಾಗಿದ್ದನೆನ್ನುವುದಕ್ಕೆ ಆಧಾರ ಸಾಕಾಗದು. ಅಥವಾ “ಮಾತೃದೇವ'ನಾಗಿ ತಾಯಿಯ ಮಾತಿಗೆ ಅನುಮೋದನೆಯಿತ್ತನೆಂದರೆ 'ಗುರೋರಪ್ಯವಲಿಪ್ತಸ್ಯ ಕಾತ್ಯಾಕಾರಮಜಾನತಃ | ಉತ್ಪಥಂ ಪ್ರತಿಪನ್ನಸ್ಯ ಕಾಡ್ಯಂ ಭವತಿ ಶಾಸನಂ' 11* (ಕಾರಾಕಾರಗಳನ್ನು ತಿಳಿಯದ ಹಾಗೂ ಸನ್ಮಾರ್ಗವನ್ನು ಮೀರಿದ ಗರ್ವಿಷ್ಠನಾದ ಗುರುವಿಗೂ ಶಿಕ್ಷೆಯನ್ನು ಮಾಡಬೇಕು) ಎಂಬುದಕ್ಕೆ ಬೆಲೆಯೇ ಇಲ್ಲವೆಂದಾಗುತ್ತದೆ. ಕಾರಾಕಾರ ವಿವೇಚನೆಯಿಲ್ಲದೆ, ತಾಯಿ ಹೇಳಿದ್ದಾಳೆಂದು ಅವನು ನಡೆದುದು ಅವನ ದೌರ್ಬಲ್ಯದ ಅಥವಾ ಅವಿಚಾರಿತಕೃತ್ಯದ ದ್ಯೋತಕವಾಗುತ್ತದೆ. 'ಯಶೋಧರ ಚರಿತೆ'ಯಲ್ಲಿ ಬರುವ ಇನ್ನೊಂದು ತೊಡಕು ಹೀಗಿದೆ: ಯಶೋಧರನೂ ಚಂದ್ರಮತಿಯೂ ಕೋಳಿಗಳಾಗಿ ಆರನೆಯ ಜನ್ಮದಲ್ಲಿದ್ದ ಕಾಲದಲ್ಲಿಯೇ ಚಂಡಕರ್ಮನು ವ್ರತವನ್ನು ಧರಿಸಿದನು. ಕುಕ್ಕುಟಜನವನ್ನು ಕಳೆದು, ಅಭಯರುಚಿ ಅಭಯಮತಿಗಳಾಗಿ ಹುಟ್ಟಿ ಕೆಲವು ವರ್ಷಗಳು ಸಂದಮೇಲೆ ಮಾರಿದತ್ತನು ನಡೆಯಿಸುತ್ತಿದ್ದ ಮಾರಿದೇವತೆಯ ಬಲಿಗಾಗಿ ಆ ಮನುಷ್ಯಯುಗಲವನ್ನು ಅದೇ ಚಂಡಕರ್ಮನು ತರುತ್ತಾನೆ. ಇದರಿಂದ ಅವನು ವ್ರತಭಂಗದ ಪಾಪಕ್ಕೂ ಒಳಗಾಗುವುದಿಲ್ಲವೇ ? ಅವನಿಗೇನು ಗತಿಯಾಯಿತೆಂದು ಕೃತಿಯಲ್ಲಿಲ್ಲ.* ಮಾರಿದತ್ತರಾಜ ತನ್ನ ಸೋದರಳಿಯ-ಸೊಸೆಯರ ಗುರುತೂ ಇಲ್ಲದವನಂತೆ ಕಾವ್ಯದಲ್ಲಿ ಚಿತ್ರಿತನಾಗಿದ್ದಾನೆ. ಇದು ಸುಸಂಗತವೆನ್ನಿಸೀತೆ ? ರಾಜ್ಯಕಾರದಲ್ಲಿ ಮಗ್ನನಾಗಿದ್ದ ಕಾರಣ ಅವನಿಗೆ ತನ್ನ ಸೋದರಿಯ ಮಕ್ಕಳ ವಿಷಯವೂ ಗೊತ್ತಾಗಿರಲಿಲ್ಲ ಎನ್ನಬಹುದೇ ? ಅವನಿಗೂ ಯಶೋಮತಿಗೂ ವಿರಸತೆಯುಂಟಾಗಿ ಹಾಗಾಯಿತೆ ? ಕುಸುಮಾವಳಿಗಾದರೂ ತನ್ನ ಸೋದರ ಮಾರಿದತ್ತನ ಮೇಲೆ ದ್ವೇಷವಿತ್ತೆ? ಇವೆಲ್ಲ ಪ್ರಶ್ನೆಗಳಿಗೆ ಸರಿಯಾದ ಸಮಾಧಾನವೇನಿದೆಯೊ ಹೇಳಬರುವುದಿಲ್ಲ. * ವಾಲ್ಮೀಕಿರಾಮಾಯಣ-ಅಯೋಧ್ಯಾಕಾಂಡ; ಸರ್ಗ ೨೧.-ಶೇ ೧೩. * ಈ ಸಮಸ್ಯೆಗೆ ಸಮಾಧಾನ ಹೇಳಬೇಕಾದರೆ ಮಾರಿದತ್ತನ ಬಳಿಯಿದ್ದ ಚಂಡಕರ್ಮನೂ ಯಶೋಮತಿಗೆ ಕೋಳಿಗಳನ್ನು ಕಾಣಿಕೆಕೊಟ್ಟ ಚಂಡಕರ್ಮನೂ ಬೇರೆ ಬೇರೆ ವ್ಯಕ್ತಿಗಳೆಂದು ತಿಳಿದುಕೊಳ್ಳಬೇಕು. ತಳಾರಿಕೆಯನ್ನು ವಹಿಸಿದವರಿಗೆಲ್ಲ 'ಚಂಡಕರ್ಮ' ಎಂಬ ಹೆಸರನ್ನು ಪ್ರಯೋಗಿಸುವ ಪದ್ಧತಿ ಇತ್ತೋ ಏನೋ. ನಮ್ಮೂರಲ್ಲಿ 'ಭೂತ'ದ ಪಾತ್ರಿಯಾಗುವವನಿಗೆ ಪರಂಪರೆಯಿಂದ ಒಂದೇ ಹೆಸರಿರುವುದು ಪದ್ಧತಿ. ಕೃತಿಯಲ್ಲಿ ಇಬ್ಬರು ಚಂಡಕರ್ಮರಿದ್ದರೆಂದು ಸ್ಪುಟವಾಗಿ ಎಲ್ಲಿಯೂ ಹೇಳಿಲ್ಲವಾದರೂ ಪ್ರಕರಣದಿಂದ ಹಾಗೆ ತಿಳಿದುಕೊಂಡರೆ ತಪ್ಪಾಗದು. Page #17 -------------------------------------------------------------------------- ________________ ಯಶೋಧರ ಚರಿತೆ ಈ ವಿಷಯಗಳಾವುವನ್ನೂ ಲೆಕ್ಕಿಸದೆ ಕಾವ್ಯವನ್ನು ಓದುತ್ತಾ ಹೋಗುವುದಾದರೆ, ಅದು ನಮ್ಮನ್ನು ಸೆಳೆಯುತ್ತದೆ. ಜನ್ಮಾಂತರದ ಕಥೆಗಳಿದ್ದರೂ ಯಾವ ತೊಡಕೂ ಇಲ್ಲದೆ ಕಥೆ ಮುಂದೆ ಸಾಗುತ್ತದೆ. ಸಂದರ್ಭೋಚಿತವಾದ ವರ್ಣನೆ, ಸುಂದರವಾದ ಶೈಲಿ ಆಕರ್ಷಕವಾಗಿವೆ. ಕೃತಿ ಸರಳವಾಗಿ ನಿರರ್ಗಳವಾಗಿ ಚೇತೋಹಾರಿ ಯಾಗಿ ಮುಂದುವರಿಯುತ್ತದೆ. ಜನ್ನನಿಗೆ ಇದರಿಂದ ಒಂದು ಉನ್ನತಸ್ಥಾನ | ದೊರೆಯುತ್ತದೆ. - ಕೆ. ವೆಂಕಟರಾಮಪ್ಪ Page #18 -------------------------------------------------------------------------- ________________ ಒಂದನೆಯ ಅವತಾರ ಪುರದವಾದಿಗಳೆಲ್ಲಿಸಿದ ಪರಮವಧುವನೊಲಿಸಿ ಪರವನಿತಾ ನಿರಪೇಕ್ಷಕನೆನಿಸಿದ ದೇ... ಇವರ ದೇವಲ ಕುಡುಗಿ ಸುವ್ರತ ಸುಪಯು ಶಿವಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನವೆಂಬ ತುಂಬಿಯೆಯಕಮನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ ಎನಗೆ ನಿಜಮಹಿಮೆಯಂ ನೆ೬ನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್ ಜಿನಸೇನಾಚಾರ್ಯರ್ ಸಿಂಹಣಂದಿಗಳ ಸಂದ ಕೊಂಡಕುಂದಾಚಾರ್ಯರ್ ಗಣಧರ ಸ್ವಾಮಿಗಳೋ ಗುಣದಿಂದಾಮಣಿಯೆಮೆಣಗಿ ಶುಭರೆಮೆಮ್ಮ ತಣಿಪುಗೆ ಸಮಂತಭದ್ರರ ಗುಣಭದ್ರರ ಪೂಜ್ಯಪಾದರಾಖ್ಯಾನಂಗಳ್ ೧. ಪುರುದೇವ (ಆದಿತೀರ್ಥಂಕರ)ನೇ ಮುಂತಾದವರು ಒಲಿಸಿಕೊಂಡಿದ್ದ ಮುಕ್ತಿವಧುವನ್ನೇ ಸುವ್ರತನು ಕೂಡ ಒಲಿಸಿಕೊಂಡನು. ಆದರೂ ಈತನಿಗೆ 'ಪರವನಿತಾ ನಿರಪೇಕ್ಷಕ' ಎಂಬ ಒಳ್ಳೆಯ ಹೇಸರೇ ಬಂತು ! ಅವನು ದೇವರ ದೇವನೂ ಹೌದು. ಇಂತಹ ಸುವ್ರತನು ನಮಗೆ ಸುವ್ರತವನ್ನು ದಯಪಾಲಿಸಲಿ.” ೨. ಜಿನ, ಸಿದ್ದ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧುಗಳೆಂಬ ಪಂಚ ಪರಮೇಷ್ಠಿಗಳ ಪಾದಗಳೇ ಕಮಲವನಗಳು. ಅವು ಭಕ್ತಿಯೆಂಬ ಪರಿಮಳವನ್ನು ಪಸರಿಸಿ ಈ ಮನಸ್ಸೆಂಬ ಭ್ರಮರವನ್ನು ತಮ್ಮ ಮೇಲೆ ಎರಗುವಂತೆ ಮಾಡಲಿ. ೩. ನನಗೆ ವೀರಸೇನಾಚಾರ್ಯರೂ ಜಿನಸೇನಾಚಾರ್ಯರೂ ಸಿಂಹಣಂದಿಗಳೂ, ಪ್ರಸಿದ್ದರಾದ ಕೊಂಡಕುಂದಾಚಾರ್ಯರೂ ಸ್ನೇಹಪೂರ್ವಕವಾಗಿ ತಮ್ಮ ಮಹಿಮೆಯನ್ನು ಸರಿಯಾಗಿ ಉಂಟುಮಾಡಲಿ. ೪. ಅವರು ಗಣಧರರಾಗಲಿ, ಸ್ವಾಮಿಗಳಾಗಲಿ, ಅವರ ಗುಣಗಳನ್ನು ನಾವು ತಿಳಿದುಕೊಂಡಿಲ್ಲ. ಆದರೆ ಅವರಿಗೆ ನಮಸ್ಕರಿಸಿ ನಾವು ಪುನೀತರಾಗುವುದಂತೂ ನಿಶ್ಚಯ. ಅಂತಹ ಸಮಂತಭದ್ರರ, ಗುಣಭದ್ರರ, ಪೂಜ್ಯಪಾದರ ಆಖ್ಯಾನ(ಕತೆ)ಗಳು ನಮ್ಮನ್ನು ತಣಿಸಲಿ. Page #19 -------------------------------------------------------------------------- ________________ ೧೪ ಕ್ಷಿತಿಯೊಳ್ ಸಂಸ್ಕೃತದಿಂ ಪ್ರಾಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂ ಕೃತಿಮಾಡಿದರವರ್ಗಳ ಸನ್ ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್ ಭಾವಕನತಿರಸಿಕಂ ಸಂ ಭಾವಿತನಭಸ್ತಶಾಸ್ತ್ರನನ್ವಿತನೆನಿಪಾ ದೇವಂಗೆ ವಿಷಯಮಲ್ಲದೆ ದೇವಾನಾಂಪ್ರಿಯರ್ಗೆ ವಿಷಯಮೇ ಸತ್ಯಾವಂ ಕೇಳಲೊಡಂ ಶಬ್ದಾರ್ಥಗುಣಾಳಂಕೃತಿ ರೀತಿಭಾವರಸವೃತ್ತಿಗಳಂ ಮೇಳವಿಸ[] ಬಲ್ಲಂ ಬಲಾಳಂ ಸಾಹಿತ್ಯಕಮಳಮತ್ತಮರಾಳಂ ಸಳನೆಂಬ ಯಾದವಂ ಹೊಯ್ ಸಳನಾದಂ ಶಶಕಪುರದ ವಾಸಂತಿಕೆಯೊಳ್ ಮುಳಿದು ಪುಲಿ ಪಾಳ್ವುದುಂ ಹೊಯ್ ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ ಯಶೋಧರ ಚರಿತೆ 89 2. ಆ ೫. ಸಂಸ್ಕೃತದಲ್ಲಿ ಪ್ರಾಕೃತದಲ್ಲಿ ಕನ್ನಡದಲ್ಲಿ ಈ ಕೃತಿಯನ್ನು ಈ ಲೋಕದಲ್ಲಿ ಯಾರು ಈ ಮೊದಲು ರಚಿಸಿದರೋ ಅವರ ಸನ್ಮತಿ ನಮಗೆ ಸರಸ ಪದಪ್ರಯೋಗ ಪದ್ಧತಿಯಲ್ಲಿ ನೆರವನ್ನೀಯಲಿ, ಅವರ ಸಮ್ಮತಿಗಳಿಂದ ರಸವತ್ಥಯೋಗ ಸಿದ್ಧಿಗೊಳ್ಳಲಿ. ೬. ನಾಂದಿಯಾಯಿತು. ಇನ್ನು ಮೇಲೆ ದೇವತಾ ಸ್ವರೂಪಿಗಳಾದ ಕವಿವೃಂದದಲ್ಲಿ ದೇವೇಂದ್ರನಂತಿರುವ ಹಾಗೂ ಕಲ್ಪಲತೆಗಳಂತಿರುವ ಕವಿಗಳಲ್ಲಿ ಮಂದಾರದಂತೆ ಮೇಲೆ ಪಡೆದ ನಾನು ಕೈಕೊಳ್ಳಬೇಕಾದ ಕಾರ್ಯವೆಂದರೆ ಬಲ್ಲಾಳದೇವನ ವಂಶವರ್ಣನೆ, ೭. ಕಲ್ಪನಾಶೀಲನೂ, ಅತಿರಸಿಕನೂ, ಸಂಭಾವಿತನೂ, ಶಾಸ್ತ್ರಗಳನ್ನು ಅಭ್ಯಾಸ ಮಾಡಿದವನೂ ಎಲ್ಲ ಗುಣಗಳುಳ್ಳವನೂ ಆದ ಆ ದೇವನಿಗೆ ಹೊರತು ಸತ್ಕಾವ್ಯವು 'ದೇವಾನಾಂ ಪ್ರಿಯ(ಬೆಪ್ಪನಿಗೆ ಗ್ರಾಹ್ಯವಾಗುವುದೆ ? ೮. ಕಾವ್ಯವನ್ನು ಕೇಳಿದ ಮಾತ್ರಕ್ಕೆ ಅವನು ಕಾವ್ಯದ ಶಬ್ದ, ಅರ್ಥ, ಗುಣ, ಅಲಂಕಾರ, ರೀತಿ, ರಸ, ಭಾವ, ವೃತ್ತಿ ಎಂಬ ಕಾವ್ಯಸಂಬಂಧಿ ವಿಷಯಗಳನ್ನೆಲ್ಲ ಒಂದಕ್ಕೊಂದು ಹೊಂದಿಸಬಲ್ಲವನಾಗಿದ್ದಾನೆ. ಈ ಕಾರಣದಿಂದ ಅವನು ಸಾಹಿತ್ಯಕಮಲ ಮತ್ತಮರಾಳ [ಸಾಹಿತ್ಯವೆಂಬ ತಾವರೆಗಳಿಂದ ಮದವೇರಿಸಿಕೊಳ್ಳುವ ರಾಜಹಂಸ) ಎಂಬ ಬಿರುದನ್ನು ಪಡೆದಿದ್ದಾನೆ. ೯. ಶಶಕಪುರದ ವಾಸಂತಿಕೆಯಲ್ಲಿ ಹುಲಿಯೊಂದು ರೋಷದಿಂದ ಒಳನುಗ್ಗುತ್ತಿತ್ತು. ಆಗ ಯದುವಂಶದ ಸಳನೆಂಬುವನನ್ನು ಉದ್ದೇಶಿಸಿ, ತನ್ನ ಕುಂಚದ ಬೆತ್ತವನ್ನಿತ್ತು ಗುರುಗಳು 'ಹೊಯ್ ಸಳ' ಎಂದರು. ಆದುದರಿಂದ ಹೊಯ್ಸಳನಾದನು.* Page #20 -------------------------------------------------------------------------- ________________ a ವಿಮಶ್ರಪಾಲಂ , ಒಂದನೆಯ ಅವತಾರ ವಿನಯಾದಿತ್ಯನ ಹೊಯ್ಸಳ ಜನಪತಿಗಳ ಕೀರ್ತಿಪುಂಡರೀಕಿನಿಗುಲನಮನೊಡರ್ಚಿದನತೆಯಂಗನ್ನಪಾಲನ ತಂದೆ ಬಿಟ್ಟಿದೇವಂಗಜ್ಜಂ ಅರಸಾದಂ ಸಂವರಣೆಗೆ ಪರರಾಷ್ಟಂ ಗಂಗವಾಡಿ ತೊಂಬತ್ತಲುಸಾಸಿರಮಂ ಬ್ರಾಹ್ಮಣದತ್ತಿಗೆ ವರಸಪ್ತಮಚಕ್ರವರ್ತಿ ವಿಷ್ಣುನೃಪಾಲಂ | ಈವಿಚಿವ ಕಾವ ಗುಣದಿಂದಾ ವಿಷ್ಣುವಿನೊರೆಗೆ ದೊರೆಗೆವರಲುಟಿದ ಧರಿಶ್ರೀವಲ್ಲಭರೇನೇಚಲ ದೇವಿಗಮೆಅಲೆಯಂಗ ನೃಪತಿಗಂ ಪುಟ್ಟಿದರೇ ಧೀರನಿಧಿ ಬಿಟ್ಟಿದೇವನೊ- - ಟೋರಗೆ ಬಲ್ಲಾಳನಿಂತು ನರಸಿಂಹಸುತಂಗಾರೆಣೆ ಗಗನಂ ಗಗನಾಕಾರಮೆನಲ್ ತಮ್ಮೊಳಣೆ ಪಿತಾಮಹ ಪೌತ್ರರ್ , ಆಯಾಟಿಗೆ ಬಲ್ಲಾಳನ . ದಾಚೆಯ ದಾವಣಿಯ ತುರಗದ ಖುರಹತಿಯಂ ಪೇಟಿ ಪಸರಿಲ್ಲದಂತಿರೆ | ಪಾಲಾದುವು ವೈರಿದುರ್ಗಮೆನಿತೊಳವನಿತುಂ ೧೦. ವಿಕ್ರಮಾದಿತ್ಯನು ಹೊಯ್ಸಳರಾಜರ ಕೀರ್ತಿಯೆಂಬ ಕಮಲಸರೋವರವನ್ನು ಅರಳಿಸಿದನು. ಈತನು ಎರೆಯಂಗ ಎಂಬ ರಾಜನ ತಂದೆ, ಬಿಟ್ಟಿದೇವನಿಗೆ ಈತನು ಅಜ್ಜ..೧೧. ಮುಂದೆ ವಿಷ್ಣುನೃಪಾಲ [ಬಿಟ್ಟಿದೇವ) ನು ರಾಜನಾದನು. ಪರರಾಷ್ಟ್ರವಾದ ಗಂಗವಾಡಿ ತೊಂಬತ್ತಾರು ಸಾವಿರವು ಅವನ ಅಂಕೆಗೊಳಗಾಯಿತು: ಬಹು ಪ್ರದೇಶ ವನ್ನು ಬ್ರಾಹ್ಮಣದತ್ತಿಗೆ ವಿನಿಯೋಗಿಸಿದ ಆತನು ಹೊಯ್ಸಳರಲ್ಲಿ ಏಳನೇ ಚಕ್ರವರ್ತಿ ಯಾಗಿದ್ದನು. ೧೨. ದಾನಕೊಡುವ, ಹೋರಾಡುವ ಹಾಗೂ ರಕ್ಷಿಸುವ ಗುಣದಿಂದ ಆ ವಿಷುವಿನ ಸಮಕ್ಕೆ ಬರಲು ಉಳಿದ ಯಾವ ಭೂಪತಿಗಳಿಗೂ ಸಾಧ್ಯವಾಗಲಿಲ್ಲ. ಉಳಿದವರೇನು ಏಚಲದೇವಿಗೂ ಎರೆಯಂಗಭೂಪತಿಗೂ ಮಕ್ಕಳಾಗಿದ್ದರೆ ?೬ ೧೩. ಧೀರನಿಧಿಯಾದ ಬಿಟ್ಟಿದೇವನಿಗೆ ಸಮಾನನಾದವವನೇ ಬಲ್ಲಾಳನು. ಈತನು ನರಸಿಂಹನ ಮಗ. ಈತನಿಗೆ ಸರಿಸಮಾನರಾದವರು ಬೇರೆ ಯಾರೂ ಇಲ್ಲ. ಈ ಅಜ್ಜ ಮೊಮ್ಮಕ್ಕಳು 'ಆಕಾಶವು ಆಕಾಶದಂತೆ' ಎನ್ನುವ ಹಾಗೆ ಪರಸ್ಪರ ಎಣೆಯಾಗಿದ್ದಾರೆ. ೧೪. ಬಲ್ಲಾಳನು ಹಗೆಗಳ ಹಟಮಾರಿತನವನ್ನು ಕಂಡಾಗ ಅವರ ದುರ್ಗಗಳನ್ನು ಆಕ್ರಮಿಸುತ್ತಿದ್ದನು. ಆಗ ಆತನ ಕಡೆಯ ವೀರಭಟರ ಹೊಡೆತಗಳಿಂದಲೂ, ಲಾಯ ದಲ್ಲಿ ಕಟ್ಟಿಹಾಕಿ ಸಾಕಿದ ಅಶ್ವಸೈನ್ಯದ ಗೊರಸಿನ ಪೆಟ್ಟಿನಿಂದಲೂ ಶತ್ರುಗಳ ಕೋಟೆಗಳೆಲ್ಲ Page #21 -------------------------------------------------------------------------- ________________ ೧೬ ಆರೆಣೆಯೆಂಬೆನಂಬದ ಬೀರಮನೀ ಜಗಮನಾವಗಂ ಸುತ್ತಿದ ಮುನೀರೆಂಬುದು ಬಿರುದಿನ ಬೆ ಳ್ಳಾರೆನಿಸಿದುದದಟರಾಯ ಕೋಳಾಹಳನಾ ಚಲದ ಬಲದೆಸಕದಿಂ ಸಲೆ ನಿಲೆ ನಾಲ್ಕುಂ ದೆಸೆಯ ಮೂರುವರೆ ರಾಯರ ಮುಂ ದಲೆಯೊಳಗುಂದಲೆಯನೆ ನಿಂ ದಲೆವುದು ತೇಜಂ ಪ್ರತಾಪಚಕ್ರೇಶ್ವರನಾ ನೆಗಲ್ಲಿ ನೃಪರೊಳಗೆ ಮುಂ ಕವಿ ತೆಗೆ ಮುಂಜಂ ಭೋಜನುತ್ಸಲಂ ಶ್ರೀಹರ್ಷ೦ ಮಿಗಿಲವರಿಂ ಬಲ್ಲಾಳಂ ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ ಆ ನೃಪನ ಸಭೆಯೊಳಖಿಳಕ ಳಾನಿಪುಣರ ನಟ್ಟನಡುವೆ ಬೊಟ್ಟೆ ಗೆಲಲ್ ತಾನೆ ಚತುರ್ವಿಧಪಂಡಿತ ನೇನೆಂಬುದೊ ಸುಕವಿ ಭಾಳಲೋಚನನಳವಂ ಯಶೋಧರ ಚರಿತೆ ೫ ೧೬ 02 ೧೮ ಹೇಳ ಹೆಸರಿಲ್ಲದಂತೆ ಹಾಳಾಗಿ ಹೋದವು. ೧೫. ಇಡೀ ಭೂಮಂಡಲವನ್ನು ಸದಾ ಸುತ್ತಿಕೊಂಡಿರುವ ಸಾಗರವೂ, ಮಹಾವೀರನಾದ ಬಲ್ಲಾಳನ ಕೀರ್ತಿಯ ಧವಳ ಪ್ರವಾಹದಂತೆ ಕಾಣುತ್ತಿತ್ತು. ಅವನು ಸಾಗರಾಂತಧರಿತ್ರಿಯನ್ನೂ ತನ್ನ ಸ್ವಾಧೀನ ಪಡಿಸಿಕೊಂಡವನು ; ಅರಸರಿಗೆಲ್ಲ ಅಂಜಿಕೆಯನ್ನುಂಟುಮಾಡಿದವನು. ೧೬. ಅವನ ಚಲದ ಬಲದ ಎಸಕ ಅದ್ಭುತವಾಗಿದೆ. ಪ್ರತಾಪ ಚಕ್ರೇಶ್ವರನಾದ ಆತನ ತೇಜಸ್ಸು ನಾಲ್ಕೂ ದಿಕ್ಕುಗಳಲ್ಲಿ ಸ್ಥಿರಸ್ಥಾನವನ್ನು ಪಡೆದುಕೊಂಡಿದೆ. ಅಲ್ಲಿನ ಮೂರೂ ಮತ್ತು ಇತರ ಕೆಲವು ರಾಜರ ಮುಂದಲೆಯಲ್ಲಿ ಅದು ವಿಶೇಷವಾಗಿ ನೆಲೆನಿಂತು ಅವರಿಗೆ ತೀವ್ರವಾದ ಬಾಧೆಯನ್ನುಂಟುಮಾಡುತ್ತದೆ. ೧೭. ಹಿಂದೆ ಕವಿತೆಗೆ ಹೆಸರುಗೊಂಡವರೆಂದರೆ ಮುಂಜ, ಭೋಜ, ಉತ್ಪಲ ಮತ್ತು ಶ್ರೀಹರ್ಷ ಎಂಬ ರಾಜರು. ಈ ಬಲ್ಲಾಳನು ಅವರಿಗಿಂತ ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐಮಡಿ ಮಿಗಿಲಾಗಿದ್ದಾನೆ. ೧೮. ಈ ರಾಜನ ಆಸ್ಥಾನದಲ್ಲಿ ಅನೇಕ ಕಲಾನಿಪುಣರಿದ್ದಾರೆ. ಅವರೆಲ್ಲರ ಮಧ್ಯದಲ್ಲಿ ಬೆರಳೆತ್ತಿ ನಿಂತು ಅವರನ್ನೆಲ್ಲ ಗೆಲ್ಲುವುದಕ್ಕೆ ಅತಿ ಸಮರ್ಥನಾದವನೇ ಜನ್ಮ ಅವನು ಚತುರ್ವಿಧ ಪಂಡಿತನೆಂದಾದ ಮೇಲೆ ಅವನ ಅಳವನ್ನು ಏನೆನ್ನಲಿ ? ಅವನು ಸುಕವಿಭಾಳಲೋಚನನಾಗಿದ್ದಾನೆ. Page #22 -------------------------------------------------------------------------- ________________ ಒಂದನೆಯ ಅವತಾರ ನವ ವೈಯಾಕರಣಂ ತರ್ಕವಿನೋದಂ ಭರತ ಸುರತ ಶಾಸ್ತವಿಳಾಸಂ ಕವಿರಾಜಶೇಖರಂ ಯಾದವರಾಜಚ್ಛತ್ರನಖಿಳಬುಧಜನಮಿತ್ರಂ ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣಿನಾಗರಂ ಪೆಂಪಿನ ಸಂಪದಮಾಯದಾಯುವಾರೆಂಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ ಕನ್ನರನಾದರದಿಂ ಕುಡೆ | ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ ಮನ್ನಿಸಿ ಬಲ್ಲಾಳಂ ಕುಡೆ ಜನ್ನ ಕವಿಚಕ್ರವರ್ತಿವೆಸರು ಪಡೆದರ್ ಶ್ರೀಮತ್ಯಾಣೂರ್ಗಣ ಚಿ೦ತಾಮಣಿಗಲ್ ರಾಮಚಂದ್ರ ಗಂಡವಿಮುಕ್ತರ್ ತಾಮೆ ಗಡ ಗುರುಗಳೆನಿಪ ಮಹಾ ಮಹಿಮೆಗೆ ನೋಂತ ಭಟ್ಕಚೂಡಾರತ್ನಂ ವಾಣೀ ಪಾರ್ವತಿ ಮಾಡಿದ ಜಾಣೆಂತುಟೋ ಭಾಳಲೋಚನಂ ಕವಿಸುಮನೋಬಾಣನ ಮಗನೆಂದಖಿಳ ಕೋಣಿಗೆ ಹೆಸರಾಯ್ತು ಕೂರ್ಮಗಿದು ಕೌತುಕಮೇ ១. ೧೯. ವ್ಯಾಕರಣದಲ್ಲಿ ನಿಷ್ಣಾತನಾಗಿ ನವವೈಯಾಕರಣನೆನ್ನಿಸಿದ್ದರೆ, ತರ್ಕದಲ್ಲಿ ವಿನೋದ ಗೊಳ್ಳುವ ವಿದ್ವತ್ತೆಯನ್ನು ಪಡೆದಿದ್ದಾನೆ. ನಾಟ್ಯಶಾಸ್ತ್ರ, ಕಾಮಶಾಸ್ತ್ರಗಳಲ್ಲಿ ಚೆನ್ನಾದ ತಿಳುವಳಿಕೆ ಪಡೆದು ಬೆಡಗನ್ನು ಕಾಣಿಸಬಲ್ಲ ಜನ್ನನು ಕವಿ ರಾಜಶೇಖರನಾಗಿದ್ದಾನೆ. ಯಾದವ ರಾಜತ್ರನಾಗಿ೧೦ ಎಲ್ಲ ವಿದ್ವಾಂಸರ ಗೆಳೆಯನೆನ್ನಿಸಿದ್ದಾನೆ. ೨೦. ಚಾತುರ್ಯದ ನಿಧಿಯಾಗಿ ಛಲದ ನೆಲೆಯಾಗಿ, ತ್ಯಾಗದ ಸಾಗರವಾಗಿ, ಸಾಹಸದ ಆಗರವಾಗಿ, ಪೆಂಪಿನ ಸಂಪತ್ತು ಎನ್ನಿಸಿ ಆಯದ ಬಾಳುವೆಯುಳ್ಳವನೇ ಜನ್ನನು. ಅವನು ಕಮ್ಮೆಕುಲದ ಆಭರಣದ ರತ್ನವಾಗಿದ್ದಾನೆ. ೨೧. ಹಿಂದೆ ಪೊನ್ನನಿಗೆ ಕನ್ನರನು ಆದರದಿಂದ ಕವಿ ಚಕ್ರವರ್ತಿ ಎಂಬ ಬಿರುದನ್ನಿತ್ತನು. ಆಮೇಲೆ ತೈಲಪನು ಮನಸ್ಸು ಮೆಚ್ಚಿ ರನ್ನನಿಗೆ ಕವಿ ಚಕ್ರವರ್ತಿಯೆಂಬ ಬಿರುದನ್ನು ಕೊಟ್ಟನು. ಜನ್ನನಿಗೆ ಬಲ್ಲಾಳನು ಮನ್ನಣೆಮಾಡಿ ಈ ಕವಿ ಚಕ್ರವರ್ತಿಯೆಂಬ ಬಿರುದನ್ನು ಕೊಟ್ಟಿದ್ದಾನೆ. ೨೨. ಈತನ ಗುರುಗಳು ರಾಮಚಂದ್ರ ಗಂಡವಿಮುಕ್ತರು. ಇವರು ಕಾಣೂರ್ಗಣದ ಚಿಂತಾಮಣಿಗಳಾಗಿದ್ದವರು. ಇಂತಹ ಗುರುಗಳ ಪ್ರಭಾವದಿಂದಲೇ ಜನ್ನನು ಮಹಾಮಹಿಮೆಯನ್ನು ಪಡೆದನು ; ಎಲ್ಲ ಭವ್ಯರಲ್ಲಿ ಕಲೆಯ ರತ್ನದಂತೆ ಮೆರೆದನು. ೨೩. ವಾಣಿಯೂ ಪಾರ್ವತಿಯೂ ಸೇರಿ ಒಂದು ಪವಾಡವನ್ನೇ ಮಾಡಿದರು: ಕವಿ ಸುಮನೋಬಾಣನಿಗೆ ಮಗನಾಗಿ ಕವಿ ಭಾಳ ಲೋಚನನೆಂಬವನಿದ್ದಾನೆ ಎಂಬಂತೆ ಲೋಕಕ್ಕೆಲ್ಲ ಹೆಸರು ಹಬ್ಬಿಸಿದರು. ಅವರು ಪ್ರೀತಿಯಿಂದ ಈ ರೀತಿ ಮಾಡಿದ್ದಾರೆಂದರೆ Page #23 -------------------------------------------------------------------------- ________________ 20 ಶ್ರಾವಕಜನದುಪವಾಸಂ ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗಜೀವಸ್ತುಕಥನದಿಂದು ದ್ಭಾವಿಸಿ ಕವಿಭಾಳಲೋಚನಂ ವಿರಚಿಸಿದಂ ಇತಿಹಾಸವೆಂಬ ವಿಮಳಾ ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾನ್ವಿತವಾಗಿರೆ ಕಥೆ ಬುಧಸಂ ತತಿಗಕ್ಷಯಸುಖಮನೀವುದೊಂದಚ್ಚರಿಯೇ ಪರವುದು ದುರಿತತಮಿಸ್ಸಂ ಪೊರೆಯೇರುವುದಮಳದೃಷ್ಟಿಕುವಳಯವನಮಾಚರಿಪ ಜನಕ್ಕೆ ಯಶೋಧರ ಚರಿತ ಕಥಾಶ್ರವಣವೆಂಬ ಚಂದ್ರೋದಯದೊಳ್ ಶೀರ್ಷಾಭರಣಂ ಧರೆಗು ತ್ಕರ್ಷ ವಿಳಾಸನದ ಭೂಮಿ ಸಕಳಜನಕ್ಕಂ ಹರ್ಷಮನೀವುದು ಭಾರತ ವರ್ಷದಯೋಧ್ಯಾ ಸುವಿಷಯದೊಳ್ ರಾಜಪುರಂ ಮೇರು ನೃಪ ಪ್ರಾಸಾದಂ ವಾರಿಧಿ ನಿಜಪರಿಖೆ ವಜ್ರವೇದಿಕೆ ತತ್ತಾಕಾರಂ ಜಂಬೂದ್ವೀಪಾ ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ ಯಶೋಧರ ಚರಿತೆ ೨೪ ೨೫ ೨೬ 92 ೨೮ 20 ಆಶ್ಚರ್ಯಪಡಬೇಕಾದುದೇ ಇಲ್ಲ. ೨೪, ಜೀವದಯಾಷ್ಟಮಿ (ನವರಾತ್ರಿಯ ಅಷ್ಟಮಿ)ಯ ಸಂದರ್ಭದಲ್ಲಿ ಶ್ರಾವಕಜನರು ಉಪವಾಸವನ್ನು ಕೈಕೊಳ್ಳುತ್ತಾರೆ. ಅವರಿಗೆ ಕಿವಿಗಳ ಮುಖಾಂತರ ಪಾರಣೆಯಾಗುವ ಸಲುವಾಗಿ ಈ ಒಂದು ಕಥೆಯಿರಲಿ ಎಂಬೆಣಿಕೆಯಿಂದ ಜನ್ನನು ಈ ಕೃತಿಯನ್ನು ರಚಿಸಿದ್ದಾನೆ. ೨೫. ಇತಿಹಾಸವೆಂಬುದು ನಿರ್ಮಲವಾದ ಅಮೃತದ ವಾರಿಧಿ. ಅದರಲ್ಲಿ ಹುಟ್ಟಿದ ಕಲ್ಪವೃಕ್ಷದಂತೆ ಈ ಕಥೆ ರಸಾತ್ಮಕವಾಗಿ ಹುಟ್ಟಿದೆ. ಇದು ಬುಧಸಮುದಾಯಕ್ಕೆ ಅಪಾರವಾದ ಸುಖವನ್ನು ಕೊಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ೨೬. ಯಶೋಧರಚರಿತವನ್ನು ಆಲಿಸುವುದೆಂದರೆ ಚಂದ್ರೋದಯವಾದಂತೆ. ಆಗ ಕತ್ತಲೆಯಂತಿರುವ ಪಾಪವೆಲ್ಲ ತೊಲಗುತ್ತದೆ. ಧರ್ಮದಲ್ಲಿ ನಿಶ್ಚಲವಾದ ನಂಬುಗೆಯೇ ನಿರ್ಮಲವಾದ ಸಮ್ಯಷ್ಟಿ, ಜೀವದಯಾಷ್ಟಮಿಯನ್ನು ಆಚರಿಸುವ ಜನರಿಗೆ ಈ ಸಮ್ಯಗ್ದರ್ಶನವು ಈ ಕಥೆಯನ್ನು ಕೇಳಿದಾಗ ನೈದಿಲೆಗಳಂತೆ ತಾನಾಗಿಯೇ ವಿಕಾಸಗೊಳ್ಳುತ್ತದೆ. ೨೭. ಭರತಖಂಡದ ಅಯೋಧ್ಯಾ ದೇಶಕ್ಕೆ ರಾಜಪುರವೇ ರಾಜಧಾನಿ, ಅದು ಇಡೀ ಲೋಕಕ್ಕೆ ಒಂದು ಶಿರೋಭೂಷಣದಂತೆ ಶೋಭಿಸುತ್ತಿತ್ತು. ಅಲ್ಲಿ ಮೇಲು ಮಟ್ಟದ ಸೊಬಗು ನೆಲೆನಿಂತು ಎಲ್ಲ ಜನರಿಗೂ ಸಂತೋಷವನ್ನು ಕೊಡುತ್ತಿತ್ತು. ೨೮. ಅರಸನ ಅರಮನೆ ಮೇರುವಿನಂತೆ ಉನ್ನತವಾಗಿಯೂ ಭವ್ಯವಾಗಿಯೂ ಮೆರೆಯುತ್ತದೆ ಆ ನಗರದಲ್ಲಿ. ಕಡಲು ಅದಕ್ಕಿರುವ ಕಂದಕದಂತೆ ಶೋಭಿಸುತ್ತದೆ. ವಜ್ರವೇದಿಕೆಯೇ ಅದರ Page #24 -------------------------------------------------------------------------- ________________ ಒಂದನೆಯ ಅವತಾರ ಅದರೊಳಗೆ ಮೇಲೆದ ಮಣಿ ಮಾಡವ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊ ತದ ಬೆಳಗು ಚಂದನಾಲೇಪದ ಪದನಂ ಕುಡುವುದುರಿವ ರವಿಗೆಡವಗಲೊಳ್ ಕಾರಿರುಳೊಳಮೇಳವಿಸಿಲಂ ಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂ ಹೀರೆಯ ಹೂವಿನ ಬಣ್ಣದ ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್ ನೆಲೆಮಾಡದೊಳೆಡೆಯಾಡುವ ಕಲಹಂಸಾಲಸವಿಳಾಸವತಿಯರ ಮುಖಮಂಡಲಕೆ ಸರಿಯಾಗಲಾಚಿದೆ ಸಲೆ ಮಾಟ್ಟಿಂ ಚಂದ್ರನಿಂತು ಚಾಂದ್ರಾಯಣಮಂ ಪಗಲನಿರುಳ್ ನಿಜರುಚಿಯಿಂ ಮಿಗಿಸುವ ಜಿನಭವನದರುಣಮಣಿ ಕಲಶಂಗಳ್ ನಗುವುವು ಕೇತುಗಳಿಂ ಕೇತಂಗಳೊಳ್ ಕೆಳಗೊಂಡು ನಿಂದು ರವಿಮಂಡಲಮಂ ಪ್ರಾಕಾರವಾಗಿ ಪ್ರಕಾಶಿಸುತ್ತದೆ. ಒಟ್ಟಿನಲ್ಲಿ ರಾಜಪುರವು ಜಂಬೂದ್ವೀಪದ ಸಾರವನ್ನೆಲ್ಲ ಇಲ್ಲಿಯೇ ಶೇಖರಿಸಿಟ್ಟಿದ್ದಾರೆಂಬಂತೆ ಶೋಭಿಸುತ್ತದೆ. ೨೯. ಆ , ನಗರದಲ್ಲಿ ಮೆರೆಯುತ್ತವೆ ಮಣಿಮಾಡಗಳು, ಅವುಗಳ ಲೋವೆಗಳಲ್ಲಿ ಹೊಸಮುತ್ತಿನ ಸಮುದಾಯವನ್ನೇ ಕೋದು ಅಲಂಕರಿಸಿದ್ದಾರೆ. ಅದರಿಂದ ಹಬ್ಬುತ್ತದೆ ತಂಪಾದ ಬೆಳಕು. ಈ ಬೆಳಕು ಆಕಾಶದಲ್ಲಿ ಹಗಲು ಸಂಚರಿಸುವ ಸೂರ್ಯನಿಗೆ ಶ್ರೀಗಂಧದ ತಂಪಾದ ಲೇಪನವನ್ನು ಲೇಪಿಸುವಂತಿದೆ. ೩೦. ಕಗ್ಗತ್ತಲೆಯಲ್ಲೂ 'ಬೀದಿಯಲ್ಲೆಲ್ಲ ಎಳೆಬಿಸಿಲಿನ ಪ್ರವಾಹವೇ ಹಬ್ಬಿದಂತೆ ತೋರುತ್ತದೆ. ಹೀರೆಯ ಹೂವಿನ ಬಣ್ಣದ ಚಿನ್ನದ ಕುಸುರಿಕೆಲಸದ ಉಪ್ಪರಿಗೆಗಳಿಂದ ಈ ಶುಭ್ರಕಾಂತಿ, ಪಸರಿಸುತ್ತವೆ. ೩೧. ಅತ್ಯುನ್ನತವಾದ ಆ ಉಪ್ಪರಿಗೆಗಳಲ್ಲಿ ಬೆಡಗಿಯರು ರಾಜಹಂಸಗಳಂತೆ' ಮೆಲ್ಲನೆ ಅತ್ತಿಂದಿತ್ತ ಸಂಚರಿಸುತ್ತಾ ಇದ್ದಾರೆ. ಅವರ ಮುಖಮಂಡಲಕ್ಕೆ ಸಮನಾಗಲಾರದೆ ಹೋದುದರಿಂದಲೇ ಚಂದ್ರನು ಚಾಂದ್ರಾಯಣವ್ರತವನ್ನು ಆಚರಿಸುತ್ತಾನೆ.೧೧ ೩೨. ಅನೇಕ ಜಿನಭವನಗಳು ಆ ನಗರವನ್ನು ಅಲಂಕರಿಸಿವೆ. ಅವುಗಳ ಕಲಶಗಳು ಕೆಂಪು ಹರಳುಗಳಿಂದ ನಿರ್ಮಿತವಾಗಿರುವುದರಿಂದ ರಾತ್ರಿಯ ಹೊತ್ತಿನಲ್ಲೂ ಅರುಣೋದಯದ ಹೊಂಬಣ್ಣವನ್ನು ಮೀರಿಸಿ ಬೆಳಗುತ್ತವೆ. ಜಿನಮಂದಿರಗಳ ಧ್ವಜಗಳು ಬಹಳ ಮೇಲೆ ಏರಿ ನಿಂತು ಕೇತುಗ್ರಹಗಳ ಮೈತ್ರಿಯನ್ನು Page #25 -------------------------------------------------------------------------- ________________ ಯಶೋಧರ ಚರಿತೆ ಅದು ಪಿರಿಯ ಸಿರಿಯ ಬಾವಿದಲದು ಚಾಗದ ಭೋಗದಾಗರಂ ಸಕಲಸುಖಕದು ಜನ್ಮಭೂಮಿಯೆನಿಸಿದು ದದನಾಳ್ವಂ ಮಾರಿದತ್ತನೆಂಬ ನೃಪಾಲಂ ಆ ಪುರದ ತೆಂಕವಂಕದೊ ಛಾಪೊತ್ತುಮನೇಕ ಜೀವಹತಿ ತನಗೆ ಸುಖೋದೀಪನಮೆನಿಸುವ ಪಾಪಕ ಳಾಪಂಡಿತ ಚಂಡಮಾರಿದೇವತೆಯಿರ್ಪಲ್ ತನಗರಸುವೆರಸು ಪುರಜನ ಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾರ್ಚನೆವೆರಸು ಜಾತ್ರೆ ನೆರೆಯದೆ ಡನಿತುಮನೊರ್ಮೊದಲೆ ವಿಳಯದೊಳ್ ನೆರವಿಸುವಳ್ ಆ ದೇವಿಯ ಜಾತ್ರೆಗೆ ಮೊಳೆ ವೋದೆಳವೆತ ಸಿರದ ಗಾಳಮುರಿಯುಯ್ಯಲೆ ಕೈ ವೊದಗುಕೆ ಕೋಕಿಲಧ್ವನಿ ಮೂದಲೆಯುಲಿಯಾಗೆ ಬಂದುದಂದು ಬಸಂತಂ ಸಿಸಿರಮನೆ ಪಡೆದು ಪರಕೆಗೆ ವಸಂತನಲರ್ವೊದ ಮಾವಿನಡಿಮಂಚಿಕೆಯೊಳ್ ಕುಸುರಿದದಡಗಿನಂತಿ ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳಳ್ ೩೭ ಪಡೆದು ಸೂರ್ಯಮಂಡಲವನ್ನೇ ಅಪಹಾಸ್ಯ ಮಾಡುತ್ತವೆ.೧೪ ೩೩. ರಾಜಪುರವು ಹೀಗೆ ಸಕಲ ಸಂಪತ್ಸಮೃದ್ಧಿಗೂ ಜನ್ಮಭೂಮಿಯಾಗಿ ತ್ಯಾಗದ ತವರು, ಭೋಗದ ಭವನ ಎಂಬಂತಿತ್ತು. ಅದನ್ನು ಆಳುವವನು ಮಾರಿದತ್ತ ಎಂಬ ಅರಸ. ೩೪. ಆ ರಾಜಪುರದ ದಕ್ಷಿಣ ಪಾರ್ಶ್ವದಲ್ಲಿ ನೆಲಸಿದ್ದಾಳೆ ಚಂಡಮಾರಿ ಎಂಬ ಹೆಸರಿನ ದೇವತೆ. ಯಾವಾಗಲೂ ಅನೇಕ ಜೀವಿಗಳ ಹತ್ಯೆಯೇ ಅವಳಿಗೆ ಸುಖೋದ್ದೀಪನ ಎನಿಸಿದೆ. ಪಾಪದ ಕಲೆಯಲ್ಲಿ ಒಳ್ಳೆಯ ಪಾಂಡಿತ್ಯ ಅವಳದು. ೩೫, ಆ ನಗರದ ಜನರೆಲ್ಲರೂ, ತಮ್ಮ ರಾಜನನ್ನು ಮುಂದುಮಾಡಿಕೊಂಡು, ಆಶ್ವಯುಜ ಮತ್ತು ಚೈತ್ರ ಮಾಸಗಳಲ್ಲಿ ಅಲ್ಲಿ ಜಾತ್ರೆ ಸೇರಬೇಕು ; ಎಲ್ಲ ಬಗೆಯ ಪೂಜೆಗಳನ್ನೂ ಮಾಡಬೇಕು. ಹಾಗೆ ನೆರವೇರಿಸದಿದ್ದಲ್ಲಿ ಆ ದೇವತೆ ಅಷ್ಟು ಮಂದಿಯನ್ನೂ ಒಮ್ಮೆಲೇ ಸಂಪೂರ್ಣ ಧ್ವಂಸಗೊಳಿಸಿಯಾಳು. ೩೬. ಒಮ್ಮೆ ಚೈತ್ರಮಾಸವು ಬಂದಿತು. ಮೂಡಿ ಬಂದ ಬಾಲ ಚಂದ್ರನೇ ದೇವಿಯ ಅರ್ಚನೆಗಾಗಿ ಬಳಸುವ ತಲೆಯ ಗಾಳದಂತಿರಲು, ಚಿಗುರಿದ ಅಶೋಕದ ಮರವು ಬೆಂಕಿಯ ಉಯ್ಯಾಲೆಯಾಗಿರಲು, ಕೋಗಿಲೆಗಳ ಕೂಗುವ ಧ್ವನಿಯೇ ಮೂದಲೆಯ ಮಾತಾಗಿರಲು ವಸಂತ ಋತುವು ಬಂದಿತು.೧೫ ೩೭. ಆ ದೇವಿಗೆ ಹರಕೆಯೊಪ್ಪಿಸುವುದಕ್ಕಾಗಿ ಶಿಶಿರವನ್ನೇ ಹಿಡಿದು ಹೂಬಿಟ್ಟ ಮಾವಿನ ಮರದ ಅಡಿ ಮಂಚಿಕೆಯಲ್ಲಿ ಅವನನ್ನು ಕೊಚ್ಚಿ ಕೊಚ್ಚಿ ಕತ್ತರಿಸಿ ಹಾಕಿದ ಮಾಂಸದ Page #26 -------------------------------------------------------------------------- ________________ ಒಂದನೆಯ ಅವತಾರ ಮಾರಿ ಮಲಯಾಳಂ ನವ ನೀರಜವನವೆಂಬ ಕೆಂಡದೊಳ್ ದಂಡನಮ ಸ್ಮಾರದೆ ಬಂದಪನಿತ್ತವ ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್ ಅಂತು ದೊರೆವೆತ್ತು ಬಂದ ವ ಸಂತದೊಳಾ ಮಾರಿದತ್ತನುಂ ಪುರಜನಮುಂ ತಂತಮಗೆ ಚಂಡಮಾರಿಗೆ ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್‌ ೪೨ ಸುರಿಗಿಳೆದರ್ಚನೆಯಾಡುವ ಪರಕೆಯನೊಪ್ಪಿಸುವ ಲಕ್ಕಲೆಕ್ಕದ ಲೆಂಕ ರ್ವೆರಸು ಬಲವಂದು ದೇವಿಯ ಚರಣಂಗಳೆಲಗಿ ರಂಗಮಂಟಪದೆಡೆಯೊಳ್ ನಿಂದು ನರಪತಿ ತಳಾಟಿಂ ಗೆಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ ಕೊಂದರ್ಚಿಸುವೆಂ ಪೂಜೆಯೋ ಛಂದಿನ ಪರಿ ತಪ್ಪ ದೇವಿ ತಪ್ಪದೆ ಮಾಣ ತಡವಾದಪುದು ಪೌರರ್ ಕುಡವೇಅದು ಪಲವು ಜೀವರಾಶಿಯ ಬಲಿಯಂ ನಡೆಯೆನೆ ಹಸಾದಮಾಗಳೆ ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ ರಾಶಿಯೆಂಬಂತೆ ಆ ವನದಲ್ಲಿ ಉದುರಿಬಿದ್ದ ಮುತ್ತುಗದ ಮೊಗ್ಗೆಗಳು ಕೆಂಪಾಗಿ ತೋರುತ್ತಿದ್ದುವು.೧೬ ೩೮. ವನದಲ್ಲಿ ಅರಗಿಳಿಗಳು ಗಟ್ಟಿಯಾಗಿ ಉಲಿಯುತ್ತಿದ್ದುವು : “ಎಲೆ ಮಾರಿದೇವತೆಯೇ, ಮಲಯಮಾರುತನು ಹೊಸ ತಾವರೆಗಳ ಸಮೂಹವೆಂಬ ಕೆಂಡದಲ್ಲಿ ದೀರ್ಘದಂಡನಮಸ್ಕಾರ ಮಾಡುತ್ತಾ ಬರುತ್ತಿದ್ದಾನೆ. ಈ ಕಡೆ ಗಮನವಿಡು”೧೭, ೩೯, ಆ ರೀತಿಯಲ್ಲಿ ಒದಗಿಬಂದ ವಸಂತಕಾಲದಲ್ಲಿ ಮಾರಿದತ್ತ ರಾಜನೂ ನಗರದ ಜನರೂ ಎಲ್ಲರೂ ಒಂದಾಗಿ ಚಂಡಮಾರಿದೇವತೆಗೆ ಸಂತೋಷ ವಾಗುವಂತೆ ಜಾತ್ರೆಯನ್ನು ನೆರವೇರಿಸಲು ಅಲ್ಲಿ ಸೇರಿದರು. ೪೦. ಖಡ್ಗದಿಂದ ಇರಿದು ಕೊಂಡು ಅರ್ಚನೆಯನ್ನು ಸಲ್ಲಿಸುವ೧೮ ಹಾಗೂ ಬೇರೆ ರೀತಿಯಲ್ಲಿ ಹರಕೆಯನ್ನೊಪ್ಪಿ ಸುವ ಲಕ್ಕೋಪಲಕ್ಷ ದೇವೀ ಭಜಕರು ಅಲ್ಲಿ ಸಿದ್ಧರಾದರು. ಅವರನ್ನೆಲ್ಲ ಕೂಡಿಕೊಂಡು ಮಾರಿದತ್ತನು ದೇವಿಯ ಗುಡಿಗೆ ಪ್ರದಕ್ಷಿಣೆ ಬಂದನು, ನಮಸ್ಕರಿಸಿದನು. ಅನಂತರ ದೇವಾಲಯದ ರಂಗಮಂಟಪದಲ್ಲಿ ನಿಂತುಕೊಂಡನು. ೪೧. ತನ್ನ ತಳಾರನನ್ನು ಕರೆದು, “ನೀನು ಈಗಲೇ ಮನುಷ್ಯಯುಗ್ರವನ್ನು ಬರಿಸು. ಎಂದಿನಂತೆ ಮೊದಲು ನಾನೇ ಅವರನ್ನು ಬಲಿಕೊಟ್ಟು ಅರ್ಚಿಸಬೇಕಾಗಿದೆ. ಪದ್ಧತಿ ಪ್ರಕಾರ ನಡೆದುಕೊಳ್ಳದಿದ್ದರೆ ದೇವಿಗೆ ಸಿಟ್ಟಾದೀತು. ಪರಿಣಾಮವಾಗಿ ಅವಳೂ ನಮ್ಮವಿಷಯದಲ್ಲಿ ತಪ್ಪಿ ನಡೆಯದಿರ ಲಾರಳು. ಆದುದರಿಂದ ತ್ವರೆಮಾಡು. ೪೨. ಉಳಿದ ನಾಗರಿಕರೆಲ್ಲರೂ ಅನೇಕಾನೇಕ ಜೀವರಾಶಿಯ ಬಲಿಯನ್ನು ಕೊಡಲಿದ್ದಾರೆ, ತಡಮಾಡದಿರು ಎಂದು ಅಪ್ಪಣೆಯಿತ್ತನು. Page #27 -------------------------------------------------------------------------- ________________ ೨೨ ಕಿರುವರೆಯದ ಶುಭಲಕ್ಷಣ ದಣಿಕೆಯ ಸತ್ಕುಲದ ಮರ್ತ್ಯಯುಗಲಕಮಂ ತಾ ನಱಸಲ್ ಬಳರಿಯ ಬನದಿಂ ಪೊಱಮಟ್ಟಂ ಚಂಡಕರ್ಮನೆಂಬ ತಳಾಂ ಇತ್ತಲ್ ಬಟಕ್ಕ ಪಂಚಶ ತೋತ್ತಮ ಯತಿಸಮಿತಿವೆರಸು ಗಮನಪ್ರಾಯ ಶ್ಚಿತ್ತನಿಮಿತ್ತಂ ಬಂದು ಸು ದತ್ತಾಚಾರ್ಯರ್ ಪುರೋಪವನಮಂ ಸಾರ್ದಮ್ ಅವರ ಗುಣಮವರ ಸಂಯಮ ಮವರ ತಪಶ್ಚರಣವೆಂಬುದವರಿವರಳವ ಅವರ ಪೆಸರ್ಗೊಂಡ ನಾಲಗೆ ಸವಿದವೆಯದು ಬಟಕ ತಾಯ ಮೊಲೆವಾಲ್ವನಿಯಂ ಮುನಿಸಮುದಾಯಸಮೇತಂ ವಿನೇಯಜನವನಜವನದಿವಾಕರನಂತಾ ಮುನಿಪನುಪವಾಸಮಂ ಪ ರ್ವನಿಮಿತ್ತಂ ಕಳೆದು ಬಳಕ ಬಾಲಕಯುಗಮಂ ಚರಿಗೆಗೆ ಬೀಳ್ಕೊಡೆ ಗುರುಗಳ ಚರಣಕ್ಕಾ ಯುಗಳಮೆಆಗಿ ಪೋಣಮಟ್ಟಾಗಳ ತರುಣವನಹರಿಣಯುಗಮಂ ತರಕ್ಷು ಪಿಡಿವಂತೆ ಚಂಡಕರ್ಮ೦ ಪಿಡಿದಂ ಯಶೋಧರ ಚರಿತೆ A ೪೪ ೪೫ ೪೬ ೪೭ ತಳಾರ ಚಂಡಕರ್ಮನು ಅಪ್ಪಣೆ ಎಂದು ಉತ್ತರವನ್ನೇನೋ ಕೊಟ್ಟನು. ಒಡನೆಯೇ ತನ್ನ ಕಿಂಕರರು ಈಗಾಗಲೇ ಬಲಿಪಶುಗಳನ್ನು ತಂದಿರಲೇಬೇಕು ಎಂದು ಭಾವಿಸಿ, ೪೩. ಎಳೆಯ ವಯಸ್ಸಿನ, ಶುಭಲಕ್ಷಣವುಳ್ಳ ಬುದ್ದಿವಂತರಾದ ಒಳ್ಳೆಯ ವಂಶದಲ್ಲಿ ಹುಟ್ಟಿದ ಮಾನವ ಜೋಡಿಯನ್ನು ಹುಡುಕುತ್ತಾ ಆ ಮಾರಿಯ ಬನದಿಂದ ಹೊರಟನು. ೪೪. ಇತ್ತ ಸುದತ್ತಾಚಾರ್ಯರೆಂಬ ಗುರುಗಳು ಐನೂರು ಮಂದಿ ಶಿಷ್ಯರನ್ನು ಕೂಡಿಕೊಂಡು ಆ ರಾಜಧಾನಿಯ ಉಪವನಕ್ಕೆ ಬಂದು ಗಮನ ಪ್ರಾಯಶ್ಚಿತ್ತಕ್ಕಾಗಿ ಅಲ್ಲಿಯೇ ತಂಗಿದ್ದರು. ೪೫. ಅವರ ಗುಣ, ಅವರ ಮನೋನಿಗ್ರಹ, ಅವರ ತಪಶ್ಚರಣ ಎಂಬವುಗಳು ಅಂತಿಂಥ ಸಾಮಾನ್ಯರಿಗೆ ಅಳವಡುವಂತಹವಲ್ಲ, ಅವರ ಹೆಸರನ್ನು ಹೇಳಿದರೆ ಸಾಕು, ಆ ನಾಲಗೆಗೆ ತಾಯಿಯ ಮೊಲೆಹಾಲು ಕೂಡ ಸವಿಯಾಗ ಲಾರದು. ೪೬. ತಾವರೆಗಳನ್ನರಳಿಸುವ ಸೂರ್ಯನಂತೆ ಸುದತ್ತಾಚಾರ್ಯರು ಶಿಷ್ಯ ವೃಂದದ ವಿಕಾಸಕ್ಕೆ ಕಾರಣವಾಗಿದ್ದರು. ಅವರು ಈ ಮುನಿಗಳ ಸಮುದಾಯವನ್ನು ಕೂಡಿಕೊಂಡು, ವ್ರತದ ಅಂಗವಾಗಿ ಉಪವಾಸವನ್ನು ಮಾಡಿದರು. ಅನಂತರ ಇಬ್ಬರು ಮಕ್ಕಳನ್ನು ಕರೆದು ಭಿಕ್ಷೆಯೆತ್ತಿ ತರುವಂತೆ ಕಳುಹಿಸಿಕೊಟ್ಟರು. ೪೭. ಆ ಬಾಲಕರು ಗುರುಗಳ ಪಾದಕ್ಕೆ ನಮಸ್ಕರಿಸಿ ಅಲ್ಲಿಂದ ಹೊರಟರು. ಅಷ್ಟರಲ್ಲೇ ಎರಡು ಎಳೆಯ ಜಿಂಕೆ ಮರಿಗಳನ್ನು ಹುಲಿಯು ಹಿಡಿಯುವಂತೆ, ಅವರನ್ನು ಚಂಡಕರ್ಮನು ಹಿಡಿದನು. Page #28 -------------------------------------------------------------------------- ________________ ಒಂದನೆಯ ಅವತಾರ ಅಭಯರುಚಿಯಭಯಮತಿಯೆಂ ಭುಭಯಮನಾ ಪಾಪಕರ್ಮನುಯ್ಕೆಡೆಯೊಳ್ ಮ ತೃಭಯರುಚಿ ತಂಗೆಗೆಂದದ ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೋಳ್' ನಿಯತಿಯನಾರ್ ಮೀಟಿದಪರ್ ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್ ಸಯವಿದೆ ಪತ್ನ ಪರೀಷಹ ಜಯಮ ತಪಂ ತಪಕೆ ಬೇತೆ ಕೊಡೆರಡೊಳವೇ ಅಣ್ಣನ ಮಾತಂ ಮನದೊಳ್ ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ ವುಣ್ಣದೆ ಪೋಕುಮೆ ಭಯಮೇ ಕಣ್ಣ ಭವಪ್ರಕೃತಿವಿಕೃತಿ ನಾವಣೆಯದುದೇ ಎನಿತೋಳವಪಾಯಕೋಟಿಗ ಇನಿತರ್ಕಂ ಗೇಹಮಲೆ ದೇಹಮಿದಂ ನೆ ಟ್ಟನೆ ಪೊತ್ತು ಸುಖಮನಯಿಸುವ ಮನುಜಂ ಮೊರಡಿಯೊಳೆ ಮಾದುಪಲಿಮನಸದಿರಂ ೪೮. ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರು ಮಕ್ಕಳನ್ನು ಪಾಪ ಕಾರ್ಯಪ್ರವೃತ್ತನಾದ ಚಂಡಕರ್ಮನು ಹಿಡಿದೊಯ್ಯತೊಡಗಿದನು. ಇಬ್ಬರಿಗೂ ಆತನ ಉದ್ದೇಶದ ಅರಿವಾಯಿತು. ಅಭಯರುಚಿ ತಂಗಿಯೊಡನೆ “ಎಲೆ ತಂಗಿ, ನಮಗೆ ಮೃತ್ಯುವೇ' ಸನ್ನಿಹಿತವಾಗಿದೆಯೆಂದು ಹೆದರಿಕೊಳ್ಳಬೇಡ” ಎಂದು ಮಾತಿಗಾರಂಭಿಸಿದನು. ೪೯, ವಿಧಿನಿಯಮವನ್ನು ಮೀರುವವರು ಯಾರಿದ್ದಾರೆ ? ಅದಕ್ಕಾಗಿ ಅಂಜಿದರೆ ಪ್ರಯೋಜನವಾದರೂ ಏನಿದೆ ? ಏನಾದರೂ ಸಂಘಟಿಸಿ ತೆಂದಾದರೆ ಅದನ್ನು ಸಹಿಸಿಕೊಳ್ಳುವುದೇ ನ್ಯಾಯವಾದ ದಾರಿ. ಒದಗಿಬರುವ ಪರೀಷಹಗಳನ್ನು ಜಯಿಸುವುದನ್ನೇ ತಪಸ್ಸು ಎಂಬ ಹೆಸರಿನಿಂದ ಕರೆಯುತ್ತಾರೆ. ತಪಸ್ಸಿಗೆ ಬೇರೆ ಎರಡು ಕೋಡುಗಳಿವೆಯೆ ?೨೨ ೫೦. ಅಣ್ಣನ ಮಾತನ್ನು ಅಭಯಮತಿ ಚೆನ್ನಾಗಿ ಗ್ರಹಿಸಿಕೊಂಡಳು. ಅವಳೂ ಮಾತಾಡತೊಡಗಿದಳು : “ಅಣ್ಣಾ, ಮಾಡಿದುದರ ಫಲವನ್ನು ನಾವು ಉಣ್ಣದೆ ಹೋದೇವೆಯೆ ? ಅದಕ್ಕಾಗಿ ಭಯಪಡುವುದೇಕೆ ? ಜನ್ಮವೆತ್ತಿದ ಮೇಲೆ ಸಹಜವಾಗಿ ಏನೆಲ್ಲ ವಿಕಾರಗಳು ಬರುತ್ತವೆಯೆಂಬುದು ನಮಗೆ ಗೊತ್ತಿಲ್ಲವೆ ? .೫೧. ಅಪಾಯ ಕೋಟಿಗಳು ಎಷ್ಟೆಷ್ಟಿವೆಯೋ ಅಷ್ಟಕ್ಕೆಲ್ಲ ಈ ದೇಹವೇ ಮನೆಯಲ್ಲವೆ . ? ಈ ದೇಹವನ್ನು ಧರಿಸಿಕೊಂಡ ಮೇಲೆ ಇದರಲ್ಲಿ ಸುಖವನ್ನು ಹುಡುಕುವುದೂ ಒಂದೇ ; ಕಲ್ಲು ಗುಡ್ಡದಲ್ಲಿ ಪಕ್ವವಾದ ಮಾದಳದ Page #29 -------------------------------------------------------------------------- ________________ ೨೪ ಯಶೋಧರ ಚರಿತೆ ಬೇಡಿದ ಕಾಡೊಳ್ ಮಲಿಯಾ ಡಾಡುವಮಿದ ಪೊಜಯನೆನಗಂ ನಿನಗಂ ಮೂಡುವ ಮುಖಗುವ ದಂದುಗ ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ ೫೨ ಇಂತಿಂತೊರ್ವರನೊರ್ವರ್ ಸಂತೈಸುತ್ತಂ ನೃಪೇಂದ್ರತನುಜಾತ‌ ನಿ. ಶೃಂತಂ ಪೊಕ್ಕರ್ ಪಸಿದ ಕೃ~ ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ ೫೩ ತಳಮನುಡಿದಿಡುವ ಕಣ್ಣಂ ಕಳೆದೇಪ ಕರುಳ ತೋರಣಂಗಟ್ಟುವ ಕಾ •ಳನುರಿಪಿ ನೆತ್ತರಾ ಕೂ ಆ್ಯಳನಡುತಿಹ ವೀರರತ್ತ ನೋಡಮದಅಕೊಳ್ ೫೪ ತಾಳುಗೆಯನುರ್ಚಿ ನೆತ್ತಿಯ ಗಾಳಂ ಗಗನದೊಳೆಬಿಲ್ವ ವಾರಿಯ ಬೀರರ್ ಪಾಳಿಯೊಳೆಸೆದರ್ ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೇಜದಿಂ ೫೫ ಹಣ್ಣನ್ನು ಹುಡುಕುವುದೂ ಒಂದೇ ! ೫೨. ಯಾವ ಕಾಡಿಗೆ ಮಳೆ ಬೇಕಿತ್ತೋ, ಅಲ್ಲಿಗೇ ಮಳೆ ಬಂದಂತಾಯಿತು. ಈ ದೇಹದ ಹೊರೆಯನ್ನಂತೂ ಕಳೆದು ಬಿಡೋಣ. ನನಗೂ ನಿನಗೂ ಈ ಮೂಡುವ ಮುಳುಗುವ ಕೋಟಲೆಯೆಂಬುದು ಆಡಿದ ಹೊಲ, ಉಂಡ ಮದ್ದು, ಕಂಡ ವಿಚಾರ !? ೨೩ ೫೩. ಅಣ್ಣ ತಂಗಿಯನ್ನೂ, ತಂಗಿ ಅಣ್ಣನನ್ನೂ ಈ ರೀತಿ ಪರಸ್ಪರ ಸಂತೈಸಿಕೊಳ್ಳುತ್ತಿದ್ದರು. ರಾಜಕುಮಾರರಾದ ಇವರು ಹೀಗೆ ಸಾಂತ್ವನವಚನಗಳನ್ನಾಡುತ್ತಾ ಮುಂಬರಿದು ನಿಶ್ಚಿಂತೆಯಿಂದ ಆ ಮಾರಿಯ ಮನೆಯನ್ನು ಪ್ರವೇಶಿಸಿದರು. ೫೪, ಮಾರಿಗುಡಿ ಯಮನ ಅಡಿಗೆಯ ಮನೆಯಂತಿತ್ತು. ಅಂಗೈಗಳನ್ನೂ ಅಂಗಾಲುಗಳನ್ನೂ ಕತ್ತರಿಸಿ ಇಡುವ ವೀರರು ಕೆಲವರು, ಕಣ್ಣನ್ನು ಕಿತ್ತು ದೇವಿಗೆ ಏರಿಸುವ ವೀರರು ಕೆಲವರು, ಕರುಳನ್ನು ಹೊರಕ್ಕೆಳೆದು ತೋರಣವಾಗಿ ಕಟ್ಟುವವರು ಕೆಲವರು, ಕಾಲುಗಳನ್ನು ಉರಿಸಿ ರಕ್ತದಿಂದ ಅನ್ನವನ್ನು ಬೇಯಿಸುವ ಕೆಲವರು ಅಲ್ಲಿ ಸುತ್ತಮುತ್ತಲೂ ತುಂಬಿಕೊಂಡಿದ್ದರು. ೫೫. ಬಾಯಿಯನ್ನು ಬಗಿದು ಅಂಗುಳು ಕಾಣುವಂತೆ ಮಾಡಿ, ಅಲ್ಲಿಗೆ ಗಾಳವನ್ನು ಚುಚ್ಚಿ, ಆ ಗಾಳವನ್ನು ನೆತ್ತಿಯಲ್ಲಿ ಹೊರಬರುವಂತೆ ಮಾಡಿ, ಎತ್ತರದಲ್ಲಿ ತೂಗಾಡಿಸುವ ವೀರಪುರುಷರು ಸಾಲುಸಾಲಾಗಿ ಕಾಣಿಸುತ್ತಿದ್ದರು. ಹೊಲಗಳಲ್ಲಿ ಪಕ್ಷಿಗಳನ್ನು ಬೆಚ್ಚಿಸಿ ಓಡಿಸುವುದಕ್ಕಾಗಿ ಬೆರ್ಚುಗಳನ್ನು ಕಟ್ಟಿ ನಿಲ್ಲಿಸಿದಂತೆ ಇಲ್ಲಿ ಈ ವೀರರು ಪಾಪದ Page #30 -------------------------------------------------------------------------- ________________ ಎರಡನೆಯ ಅವತಾರ ಆ ಕಥೆ ಮತ್ತೆಂತೆಂದೊಡಿ ತಾಕಾಂತೆಗವಂತಿವಿಷಯಮಾಸದಿಲ್ ಶೋ ಭಾಕರಮಾಯದಜತೋಳ್ ನಾ ಸಾಕುಟ್ಕಳದಂತೆ ಮೇಲಿತೆವುದುಜೇನಿಪುರಂ ಆ ಪುರದರಸಂ ನತಭೂ ಮಿಪಾಲರ ಮಕುಟಮಸ್ತಕದೆ ನಿಜತೇಜೋ ರೂಪಕಮೆ ಪದರಾಗದ ದೀಪದವೊಲ್ ಮಜೀವಿನಂ ಯಶೌಘಂ ಮೆಳವಂ ದೊರೆವಡೆದ ಯಶೌಘನ ಭೂ ವರತಿಲಕನ ಕಣ್ಣಳಂಗರಕ್ಕರ್‌ ಮನಮಾ ಭರಣಂ ರಾಜ್ಯಶ್ರೀ ಸಹ ಚರಿಯೆನೆ ಸಂದತ್ತು ಚಂದ್ರಮತಿಗರಸಿತನಂ ಭರದಿಂದವರ್ಗಳ ಬೇಂಟಮ ನಿರುಳಿಂದು ಪಗಲ್ ವಸಂತನಿರುಳುಂ ಪಗಲುಂ ಸುರಭಿಶರನಂಗಜಾತಂ ಗರಟಿಗೆ ಮೆಯಾಪು ಮೇಲೆಯೆ ಬಿಡದೋಲಗಿಪರ್ ಅನಿತೆಸೆವ ಚಂದ್ರಮತಿಗಂ ಜನಪತಿಗಂ ಪುಟಿದಂ ಯಶೋಧರನೆಂಬಂ ಜನಮೋಹಬಾಣಂ ಕ ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್ ೧. ಆ ಕಥೆಯು ಹೀಗಿದೆ: ಭೂದೇವಿಯ ಮುಖದಂತೆ ಅವಂತಿದೇಶವು ಶೋಭಿಸುತ್ತಿದೆ. ಅದರಲ್ಲಿ ಮುಗುಳುಮೂಗಿನಂತೆ ಮೆರೆಯುತ್ತದೆ ಉಜ್ಜಯನಿಪುರ. ೨. ಆ ನಗರಕ್ಕೆ ಅರಸನಾಗಿ ಯಶೌಘನು ಮೆರೆಯುತ್ತಿದ್ದನು. ಅನೇಕ ಭೂಪಾಲಕರು ಅವನಿಗೆ ನಮಸ್ಕರಿಸುವಾಗ ಅವರ ಕಿರೀಟವುಳ್ಳ ತಲೆಗಳಲ್ಲಿ ಯಶೌಘನ ತೇಜಸ್ಸೇ ಪದ್ಯರಾಗದ ದೀಪದಂತೆ ಬೆಳಗುತ್ತಿತ್ತು. ೩. ಹೆಸರುಗೊಂಡ ರಾಜರಲ್ಲಿ ತಿಲಕಪ್ರಾಯನಾದ ಯಶೌಘನ ರಾಣಿ ಚಂದ್ರಮತಿ. ಆತನ ಕಣ್ಣುಗಳೇ ಅಂಗರಕ್ಷಕರಂತೆ ಅವಳನ್ನು ಕಾಪಾಡುತ್ತವೆ. ಆತನ ಮನಸ್ಸು ಆಕೆಗೆ ಆಭರಣವಾಗಿದೆ. ರಾಜ್ಯಲಕ್ಷ್ಮಿ ಯೇ ಅವಳ ಒಡನಾಡಿಯಾಗಿದ್ದಾಳೆ ಎಂದ ಮೇಲೆ ಅವಳಿಗೂ ಅರಸಿತನವು ಸರಿಯಾಗಿ ನೆಲೆಗೊಂಡಿದೆ. ೪. ರಾತ್ರಿಯ ಹೊತ್ತು ಚಂದ್ರನೂ, ಹಗಲಿನ ಹೊತ್ತು ವಸಂತನೂ ಸರದಿ ಪ್ರಕಾರ, ಅಂಗರಕ್ಷಕರಾಗಿದ್ದು ಅವರ ಅನುರಾಗವನ್ನು ಕಾಪಾಡುತ್ತಿದ್ದಾರೆ. ಹಗಲೂ ರಾತ್ರಿಯೂ ಕಾಮನೇ ಅವರ ಅನುರಾಗದ ಸೇವೆಯನ್ನು ಮಾಡುತ್ತಿದ್ದಾನೆ. ೫. ಅಷ್ಟೊಂದು ಪ್ರೇಮದಿಂದ ಶೋಭಿಸುತ್ತಿದ್ದ ಚಂದ್ರಮತಿ ಯಶೌಘನಿಗೂ ಯಶೋಧರನೆಂಬುವನು ಮಗನಾಗಿ ಹುಟ್ಟಿದನು, ಕಬ್ಬಿನ ಬಿಲ್ಲಿಗೂ ನನೆಯ ಹಗ್ಗಕ್ಕೂ Page #31 -------------------------------------------------------------------------- ________________ ಯಶೋಧರ ಚರಿತೆ ಕಿತ್ತ ಕರವಾಳಮನಗಂ ಮೃತ್ಯುವಿನಂತಿರ್ದ ಮಾರಿಗಂ ಬೆದಂದೆ ನಿಂ ದರ್ತಿಯನೆ ನುಡಿದರಿವರ ನೆ ಗು ಕರಂ ಪಿರಿದು ಧೀರರಕಟ ಕುಮಾರರ್ ಜವಳಿವೆತಿ ಮನುಜರೂಪದಿ ನವನಿಯೊಳೊಗೆದಂತೆ ಕಾಂತಿ ಮೆಅಲೆದಪುದಿಂದಿಂ ತಿವರ್ಗಳ ಚೆಲ್ವಿಕೆ ಕಣ್ಣಳ ತವರಾಜಮನಿಂದು ಕಂಡೆನೀ ಬಾಲಕರಂ ಆವ ಕುಲಮಾರ ತನಯರಿ ದಾವಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ ಕ್ಷಾವೃತ್ತಿಯಂದು ಬೆಸಗೊಳೆ ಭೂವರ ಕೇಳೆಂದು ಕುವರನಂದಿಂತೆಂದಂ ೬೫ ಧರ್ಮಪರರ್ಗಲ್ಲದೆಮ್ಮಯ ನಿರ್ಮಲಚಾರಿತ್ರಮಿಂಬುಕಯ್ಯದು ನಿನಗಾ ಧರ್ಮದ ಪೊದ ಪೊಲಂಬದು. ನರ್ಮದೆಯಿಂ ಗೆಂಟನೇಕೆ ಕೇಳಪೆಯಮ್ಮ ಆ ಮಾತನ್ನೆಗಮಿರ್ಕೆಲೆ ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ ಡಾಮೂಲಚೂಲಮಮಗೆ ತ ರಾಮಲಕಂ ಭವನಿಬದ್ಧಮಬಲಿಸಿತೆಂ ಮೊದಲೆಲ್ಲ ಈ ದೇವಾಲಯದ ಒಳಗೆ ಹೊಕ್ಕ ಎಲ್ಲರಿಗೂ ಜೀವವೇ ಹೋದಂತಾಗುತ್ತಿತ್ತು. ಈ ರೀತಿ ಅಂಜದಿರುವವರನ್ನು ನಾನಿದುವರೆಗೂ ಕಂಡಿಲ್ಲ ! ೬೧. ಹಿರಿದ ಖಡ್ಗಕ್ಕೂ, ನಿಂತ ನನಗೂ, ಮೃತ್ಯು ಸ್ವರೂಪಿಯಾದ ಮಾರಿಗೂ ಒಂದಿಷ್ಟೂ ಹೆದರದೆ, ಧೈರ್ಯದಿಂದ ನಿಂತುಕೊಂಡು ಪ್ರೀತಿಯ ಮಾತನ್ನೇ ಇವರು ಆಡಿದ್ದಾರೆ. ಇವರ ನಡತೆ ಬಹಳ ಹಿರಿದು ! ನಿಜವಾಗಿಯೂ ಈ ಕುಮಾರರು ಧೀರರೇ ಸರಿ ! ೬೨. ಜೋಡಿ ಚಂದ್ರರು ಮನುಷ್ಯರೂಪವನ್ನು ಧರಿಸಿ ಈ ಭೂಲೋಕದಲ್ಲಿ ಹುಟ್ಟಿ ಬಂದಂತೆ ಇವರ ಕಾಂತಿ ಮೆರೆಯುತ್ತಾ ಇದೆ. ನಿಜವಾಗಿಯೂ ಇವರ ಸೌಂದರ್ಯವು ಕಣ್ಣಿಗೆ ತವರಾಜದಂತೆ ಮಧುರವಾಗಿದೆ. ಈ ಬಾಲಕರನ್ನು ಇಂದು ನಾನು ಕಂಡೆನು. ೬೩. ಮಕ್ಕಳೇ, ನಿಮ್ಮ ಕುಲವಾವುದು ? ಯಾರ ಮಕ್ಕಳು ನೀವು ? ಎಲ್ಲಿಂದ ಬಂದಿರಿ ? ಈ ಎಳೆಯ ವಯಸ್ಸಿನಲ್ಲಿ ಈ ಭಿಕ್ಷಾವೃತ್ತಿಯನ್ನು ಕೈಕೊಂಡುದೇಕೆ ?” ಎಂದು ಮಾರಿದತ್ತನು ಕೇಳಿದನು. ೬೪. “ಅರಸನೇ ಕೇಳು” ಎಂದು ಉಪಕ್ರಮಿಸಿದನು 'ಅಭಯರುಚಿ, “ನಮ್ಮ ಚಾರಿತ್ರ್ಯ ನಿರ್ಮಲವಾದುದು. ಅದು ಧರ್ಮಪರರಾದವರಿಗೆ ಮಾತ್ರ ರುಚಿಸಬಹುದಲ್ಲದೆ ಇತರರಿಗೆ ಮೆಚ್ಚಲಾರದು. ನಿನ್ನ ಮಟ್ಟಿಗೆ ಹೇಳುವುದಾದರೆ, ಆ ಧರ್ಮದ ದಾರಿಯು ನರ್ಮದೆಗಿಂತಲೂ ದೂರ,೨೫ ನಮ್ಮನ್ನು ಕೇಳುವುದೇಕೆ ? ೬೫. ಆ ಮಾತು ಹಾಗಿರಲಿ, ಎಲೆ ಭೂಪತಿ, ನಿನಗೆ Page #32 -------------------------------------------------------------------------- ________________ ಒಂದನೆಯ ಅವತಾರ. ಗುಣಿಗಳ ಗುಣರತ್ಮವಿಭೂ ಷಣಮೆಸೆವುದೆ ವಿಕಳಹೃದಯರಾದರ್ಗೆ ನೃಪಾ ಗ್ರಣಿ ಪೇಟಿಕ್ ತುಪ್ಪದ ದ ರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬ ಇಂತೆಂಬುದುಮಾ ಕುವರನ ದಂತಪ್ರಭೆಯೆಂಬ ಶೀತಕರನುದಯದಘ ಧ್ವಾಂತೌಘಮಧುಪಮಾಲಿಕೆ ಯಂ ತೊಲಗಿಸಿ ಮುಗಿದುದವನ ಕರಸರಸಿರುಹಂ ಧನಮಂ ಕಂಡ ದರಿದ್ರನ ಮನದವೊಲೆಗಿದುವು ಪರಿಜನಂಗಳ ನೊಸಲಾ ವಿನಯನಿಧಿಗಾ ಕುಮಾರಕ ನನುರಾಗದೆ ಮಾರಿದತ್ತವಿಭುಗಿಂತೆಂದಂ ಭಲರೆ ನೃಪೇಂದ್ರಾ ದಯೆಯೊಳ್ ನೆಲೆಗೊಳಿಸಿದೆ ಮನಮನಮಮ ನೀನ್ ಕೇಳುದು ಸ ಉಲಮಾಯು ಧರ್ಮಪಥದೊಳ್ ಸಲೆ ಸಂದಪ ಕಾಲಲಬ್ಬಿ ಪೊಲಗೆಡಿಸುವುದೇ ಎಂತು ಬೆಸಗೊಂಡೆ ಬೆಸಗೊಂ ಡಂತಿರೆ ದತ್ತಾವಧಾನನಾಗು ಜಯಶ್ರೀ ಕಾಂತಿಯುಮಂ ಪರಮಶ್ರೀ ಕಾಂತೆಯುಮಂ ನಿನಗೆ ಕುಡುಗುಮೀ ಸತ್ಕಥನಂ - ೭೦ ಯಾವುದು ಪಥ್ಯವೆನಿಸುವುದೋ ಅದನ್ನು ನೀನು ನೆರವೇರಿಸಬಹುದು. ನಮಗಂತೂ ಬುಡದಿಂದ ತುದಿಯವರೆಗೆ ಎಲ್ಲ ವಿಷಯವೂ ಅಂಗೈನೆಲ್ಲಿಯಾಗಿದೆ. ಭವಬಂಧನವೇ ನಮ್ಮನ್ನು ಬಗೆ ಬಗೆಯ ದುಃಖಗಳಿಗೆ ಈಡುಮಾಡಿದೆ. ೬೬. ಮಹಾರಾಜ, ಗುಣವಂತರ ಗುಣ ರತ್ನಾಭರಣಗಳು, ಕೆಟ್ಟ ಹೃದಯವುಳ್ಳವರಿಗೆ ಸೊಗಸಾಗಿ ಕಾಣಲಾರವು. ಕನ್ನಡಿಗೆ ಜಿಡ್ಡು ತಾಗಿದ್ದರೆ ಅದರಲ್ಲಿ ಪ್ರತಿಬಿಂಬವು ಉಜ್ವಲವಾಗಿ ಕಾಣುವುದೆ ? ಎಂದು ಹೇಳಿದನು ಅಭಯರುಚಿ. ೬೭. ಒಡನೆಯೇ ಮಾರಿದತ್ತನ ಕರಕಮಲವು ಮುಚ್ಚಿಕೊಂಡಿತು. ಅಭಯರುಚಿ ಕುಮಾರನು ಮಾತಾಡುತ್ತಿದ್ದಾಗ ಅವನ ಹಲ್ಲಿನ ಕಾಂತಿ ಹಬ್ಬಿ ಚಂದ್ರೋದಯವಾಗುವಂತಾಯಿತು. ಆಗ ಪಾಪದ ಕತ್ತಲೆಯ ಮೊತ್ತವೆಲ್ಲ ಎತ್ತೆತ್ತಲೋ ಮಾಯವಾಯಿತು. ತಾವರೆ ಮುಚ್ಚಿಕೊಳ್ಳುವಾಗ ಭ್ರಮರಗಳು ಎದ್ದು ಹೋಗುವಂತೆ ಮಾರಿದತ್ತನ ಪಾಪಗಳು ತೊಲಗಿದವು.೨೬ ೬೮. ಧನವನ್ನು ಕಂಡಾಗ ದರಿದ್ರನ ಮನಸ್ಸು ಅದಕ್ಕೆರಗುತ್ತದೆ. ಹಾಗೆಯೇ ರಾಜನ ಸೇವಕ ಜನರೆಲ್ಲರ ಲಲಾಟಗಳೂ ಆ ವಿನಯನಿಧಿಯಾದ ಅಭಯರುಚಿಗೆ ಮಣಿದವು. ಆಗ ಆ ಕುಮಾರನು ಮಾರಿದತ್ತನಿಗೆ ಪ್ರೀತಿಪೂರ್ವಕವಾಗಿ ಹೀಗೆಂದನು. ೬೯. “ಶಹಭಾಸ್ ರಾಜೇಂದ್ರ ! ನಿನ್ನ ಮನಸ್ಸನ್ನು ಈಗಲೀಗ ದಯೆಯಲ್ಲಿ ನೆಲೆಗೊಳಿಸಿದೆ. ಅಹಹಾ ! ನೀನು ಪ್ರಶ್ನೆ ಮಾಡಿದುದು ಒಳ್ಳೆಯದಕ್ಕೆ ಆಯಿತು. ಇನ್ನು ಮುಂದೆ ನೀನು ಧರ್ಮಮಾರ್ಗದಲ್ಲಿ ಸರಿಯಾಗಿ ಸಾಗಲಿರುವೆ. ಕಾಲಲಬಿ ದಾರಿತಪ್ಪಿಸುವುದೇ ?೨೭ ೭೦. ಮಹಾರಾಜಾ, Page #33 -------------------------------------------------------------------------- ________________ ಯಶೋಧರ ಚರಿತೆ ಶ್ರೀಮತೀರ್ಥಾಧಿಪನ ವದನಾಂಭೋಜದಿಂ ಸರ್ವಭಾಷಾ ಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೊಮಾರ್ಗದಿಂ ಮ ತಾಮುಂ ಕಂಡುಂಡುದ ಕಥೆಯಂ ಪೇಷೆಂ ಕೇಳಿಮೆಂದಾ ಭೂಮೀಶಂಗಂದಭಯರುಚಿಯಿಂತೆಂದು ಪೇಜಲ್ ತಗುಬ್ಬಿಂ ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ಯಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ರಭುಸಭೆಗೆಸೆದಿರ್ಕು೦ ಮಂಗಳಂ ಶ್ರೀವಿಲಾಸಂ ನೀನು ಹೇಗೆ ಕೇಳಿದೆಯೋ ಅದೇ ರೀತಿಯಲ್ಲಿಯೇ ಮನಸ್ಸು ಕೊಟ್ಟು ಆಲಿಸು. ನಾನು ಹೇಳಲಿರುವ ಒಳ್ಳೆಯ ಕಥೆ ನಿನಗೆ ಜಯಶ್ರೀಯನ್ನೂ ಮುಕ್ತಿಕಾಂತೆಯನ್ನೂ ಕೊಡುವುದರಲ್ಲಿ ಸಂದೇಹವಿಲ್ಲ. ೭೧. ಶ್ರೀಮತೀರ್ಥಂಕರನ ಮುಖಕಮಲದಿಂದ ಹೊರಟಿತು ಮಂಗಲವಚನ. ಅದು ಎಲ್ಲ ಭಾಷೆಗಳಿಗೂ ಸಮಾನವಾದುದು. ಆ ವಚನಮಾರ್ಗವಾಗಿಯೇ, ನಾವು ಕಂಡು ಉಂಡುದರ ಕಥೆಯನ್ನು ಹೇಳುತ್ತೇವೆ, ಕೇಳಿರಿ” ಎನ್ನುತ್ತ ಅಭಯರುಚಿಕುಮಾರನು ಮಾರಿದತ್ತ ರಾಜನಿಗೆ ಕಥೆಯನ್ನು ಹೇಳಲಾರಂಭಿಸಿದನು. ೭೨. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿಕುಮಾರನು ಪುಣ್ಯದ ವಿಷಯವನ್ನು ಕೇಳಿ ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭುಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ.೨೮ Page #34 -------------------------------------------------------------------------- ________________ ಎರಡನೆಯ ಅವತಾರ ಆ ಕಥೆ ಮತ್ತೆಂತೆಂದೊಡಿ ಳಾಕಾಂತೆಗವಂತಿವಿಷಯಮಾಸ್ಪದವೊಲ್ ಶೋ ಭಾಕರಮಾದಳ್ ನಾ ಸಾಕುಟ್ಕಳದಂತೆ ಮೆರೆವುದುಜೇನಿಪುರಂ ಆ ಪುರದರಸಂ ನತಭೂ ಮೀಪಾಲರ ಮಕುಟಮಸ್ತಕದೆ ನಿಜತೇಜೋ ರೂಪಕಮೆ ಪದರಾಗದ ದೀಪದವೊಲ್ ಮಜೀವಿನಂ ಯಶಘಂ ಮೆಜಿವಂ ದೊರೆವಡೆದ ಯಶಘನ ಭೂ ವರತಿಲಕನ ಕಣ್ಣಳಂಗರಕ್ಕರ್‌ ಮನಮಾ ಭರಣಂ ರಾಜ್ಯಶ್ರೀ ಸಹ ಚರಿಯೆನೆ ಸಂದತ್ತು ಚಂದ್ರಮತಿಗರಸಿತನಂ ಭರದಿಂದವರ್ಗಳ ಬೇಂಟಮ್ ನಿರುಳಿಂದು ಪಗಲ್ ವಸಂತನಿರುಳುಂ ಪಗಲುಂ ಸುರಭಿಶರನಂಗಜಾತಂ ಗರಟಗೆ ಮೆಯಾಪು ಮೇಜಿತೆಯೆ ಬಿಡದೋಲಗಿಪರ್ ಅನಿತೆಸೆವ ಚಂದ್ರಮತಿಗಂ ಜನಪತಿಗಂ ಪುಟ್ಟಿದಂ ಯಶೋಧರನೆಂಬಂ ಜನಮೋಹಬಾಣಂ ಕ ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೋಲ್ ೧. ಆ ಕಥೆಯು ಹೀಗಿದೆ: ಭೂದೇವಿಯ ಮುಖದಂತೆ ಅವಂತಿದೇಶವು ಶೋಭಿಸುತ್ತಿದೆ. ಅದರಲ್ಲಿ ಮುಗುಳುಮೂಗಿನಂತೆ ಮೆರೆಯುತ್ತದೆ ಉಜ್ಜಯನಿಪುರ, ೨, ಆ ನಗರಕ್ಕೆ ಅರಸನಾಗಿ ಯಶೌಘನು ಮೆರೆಯುತ್ತಿದ್ದನು. ಅನೇಕ ಭೂಪಾಲಕರು ಅವನಿಗೆ ನಮಸ್ಕರಿಸುವಾಗ ಅವರ ಕಿರೀಟವುಳ್ಳ ತಲೆಗಳಲ್ಲಿ ಯಶೌಘನ ತೇಜಸ್ಸೇ ಪದ್ಯರಾಗದ ದೀಪದಂತೆ ಬೆಳಗುತ್ತಿತ್ತು. ೩. ಹೆಸರುಗೊಂಡ ರಾಜರಲ್ಲಿ ತಿಲಕಪ್ರಾಯನಾದ ಯಶೌಘನ ರಾಣಿ ಚಂದ್ರಮತಿ, ಆತನ ಕಣ್ಣುಗಳೇ ಅಂಗರಕ್ಷಕರಂತೆ ಅವಳನ್ನು ಕಾಪಾಡುತ್ತವೆ. ಆತನ ಮನಸ್ಸು ಆಕೆಗೆ ಆಭರಣವಾಗಿದೆ. ರಾಜ್ಯಲಕ್ಷ್ಮಿ ಯೇ ಅವಳ ಒಡನಾಡಿಯಾಗಿದ್ದಾಳೆ ಎಂದ ಮೇಲೆ ಅವಳಿಗೂ ಅರಸಿತನವು ಸರಿಯಾಗಿ ನೆಲೆಗೊಂಡಿದೆ. ೪. ರಾತ್ರಿಯ ಹೊತ್ತು ಚಂದ್ರನೂ, ಹಗಲಿನ ಹೊತ್ತು ವಸಂತನೂ ಸರದಿ ಪ್ರಕಾರ, ಅಂಗರಕ್ಷಕರಾಗಿದ್ದು ಅವರ ಅನುರಾಗವನ್ನು ಕಾಪಾಡುತ್ತಿದ್ದಾರೆ. ಹಗಲೂ ರಾತ್ರಿಯೂ ಕಾಮನೇ ಅವರ ಅನುರಾಗದ ಸೇವೆಯನ್ನು ಮಾಡುತ್ತಿದ್ದಾನೆ. ೫. ಅಷ್ಟೊಂದು ಪ್ರೇಮದಿಂದ ಶೋಭಿಸುತ್ತಿದ್ದ ಚಂದ್ರಮತಿಗೂ ಯಶೌಘನಿಗೂ ಯಶೋಧರನೆಂಬುವನು ಮಗನಾಗಿ ಹುಟ್ಟಿದನು, ಕಬ್ಬಿನ ಬಿಲ್ಲಿಗೂ ನನೆಯ ಹಗ್ಗಕ್ಕೂ Page #35 -------------------------------------------------------------------------- ________________ 0. ಯಶೋಧರ ಚರಿತೆ ನೋಡುವ ಕಣ್ಣಳ ಸಿರಿ ಮಾತಾಡುವ ಬಾಯ್ಸಳ ರಸಾಯನಂ ಸಂತಸದಿಂ ಕೂಡುವ ತೋಳಳ ಪುಣ್ಯಂ ನಾಡಾಡಿಯ ರೂಪ ಕುವರ ವಿದ್ಯಾಧರನಾ ಎಳವೆಟ್ಟಿಂಗಳ್ ನಾಗಣೆ ಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂಹಳಮಾದಪುದೆನ್ನದ ಕಸ್ಕೊಳವೆ ಯಶೋಧರಕುಮಾರನಂ ಕಾಣಲೊಡಂ ಪರಪರ ರಾಜ್ಯಲಕ್ಷ್ಮಿ ಯ ಕುರುಳಾಕರ್ಷಣ ನೀಳ ತೋಳ್ ಮೆಅಶವುದು ಪೇ ರುರದೊಳ್ ನೆಲಸಿದ ಲಕ್ಷ್ಮಿ ಕರಿಣಿಗೆ ಬಾಳಿಸಿದ ರನ್ನದಮಳಂಬದವೊಲ್ ಅಮೃತಮತಿ ಗಡ ಯಶೋಧರ ನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂ ಸುಮನೋಬಾಣಂ ತದ್ರೂ ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕು೦ ಕವಚಹರನಾದ ತನಯನೂ ಭವನೀಭರಮೆಂಬ ಕನಕಮಣಿಮಂಡನ ಭಾ ರವನಿಟಿಪಿ ನೀಡುಮೋಲಾ ಡುವನಂಗಜರಾಗಶರಧಿಯೊಳಗೆ ಯಶೌಘಂ ಜನಮೋಹನ ಬಾಣವು ಹುಟ್ಟುವಂತೆ೩೦, ೬. ಕುಮಾರ ಯಶೋಧರನು ಸೌಂದರ್ಯದಲ್ಲಿ ಅಸಾಮಾನ್ಯವಾಗಿ ವಿದ್ಯಾಧರನಂತೆ ಅತ್ಯಾಕರ್ಷಕನಾಗಿದ್ದನು. ಅವನನ್ನು ನೋಡುವುದೆಂದರೆ ಕಣ್ಣುಗಳಿಗೆ ಭಾಗ್ಯ. ಅವನೊಡನೆ ಮಾತಾಡುವುದು ಬಾಯಿಗೆ ಅತ್ಯಂತ ಮಧುರವಾದ ರಸಾಯನ. ಅವನನ್ನು ಎತ್ತಿ ಮುದ್ದಾಡುವುದು ತೋಳುಗಳ ಪುಣ್ಯ. ೭. ಅವನನ್ನು ಕಾಣುವಾಗ ಇದೇನು ಬಾಲ ಚಂದ್ರನೋ ಮನ್ಮಥನ ಬಾಣವೋ ಅಥವಾ ಮಲಯಮಾರುತನೋ ಎಂಬ ಕುತೂಹಲವುಂಟಾಗುತ್ತಿತ್ತು, ನೋಡಿದ ಎಲ್ಲರಿಗೂ. ೮. ಅವನ ತೋಳುಗಳೆರಡೂ - ದೀರ್ಘವಾಗಿ ನೀಡಿಕೊಂಡಿದ್ದವು, ಶತ್ರುರಾಜರ ರಾಜ್ಯಲಕ್ಷ್ಮಿ ಯ ಮುಡಿಯನ್ನು ಹಿಡಿದೆಳೆಯುವ ಕಾರ್ಯದಲ್ಲಿ ಅವು ತೊಡಗಿದುದರಿಂದ ಅವನ ವಿಶಾಲವಾದ ಎದೆಯಲ್ಲಿ ನೆಲಸಿದ ಲಕ್ಷ್ಮಿ ಕರಿಣಿ (ಲಕ್ಷ್ಮಿ ಯೆಂಬ ಹೆಣ್ಣಾನೆಯನ್ನು ಬೇರೆಡೆಗೆ ಹೋಗದಂತೆ ತಡೆಯಲು ಇಕ್ಕಡೆಗಳಲ್ಲೂ ಎರಡು ರತ್ನದ ಕಂಬಗಳನ್ನು ನೆಟ್ಟಂತೆ ಅವನ ಬಾಹುಗಳು ಮೆರೆಯು ತ್ತಿದ್ದವು. ೯. ಯಶೋಧರನ ಮನದನ್ನೆಯೇ ಅಮೃತಮತಿ, ಬೇಟೆಗಾರನಾದ ಕಾಮನಿಗೆ ಆ ಭೂಪತಿಯನ್ನು ಆಕರ್ಷಿಸಿ ಸೆರೆಹಿಡಿಯುವ ಮನಸ್ಸಾಯಿತು. ಅವನು ಅಮೃತಮತಿ ಯನ್ನೇ ದೀವವನ್ನಾಗಿ ಮಾಡಿ೩೧ ಮೋಹಗೊಳ್ಳುವಂತೆ ಮಾಡಿದನು. ಯಶೋಧರನು ಅಮೃತಮತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದನು. ೧೦. ಕವಚವನ್ನು ಧರಿಸಿಕೊಂಡು ಮುಂದಾಗುವ ವಯಸ್ಸು ಮಗನಿಗೆ ಬಂದುದನ್ನು ಕಂಡ ಯಶೌಘನು ರಾಜ್ಯಭಾರತಿಯ Page #36 -------------------------------------------------------------------------- ________________ ಎರಡನೆಯ ಅವತಾರ ಅಗುಬಡಪುವ ಕಾಲದ ಗರ ಟಿಗೆಯೋಳ್ ಪಚಿತಚೋರನಂ ತೋಳುವ ದೀ ವಿಗೆಯೆನೆ ಸಂಮುಖಮಾಯೊ ಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ ನರೆಯೆಂಬ ಹೊಲಸು ಮೊಗಮೆಂ ಬರಮನೆಯಂ ಪೊಕೊಡಂಗನಾಲೋಕನಮೆಂ ಬರಸೆಂತಿರ್ದಷನೆಂದಾ ನರನಾಥಂ ತೋಱದನಖಿಳವಿಷಯಾಮಿಷಮಂ ಧರಣೀಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ ಧರಣೀಗಣಿಕೆ ಯಶ್‌ಘನ ವಿರಹದ ಪರಿತಾಪಮಂ ಯಶೋಧರನ ಯಶೋ ಹರಿಚಂದನಚರ್ಚೆಯಿನು ದುರ ದಾನಾಸಾರಸೇಕದಿಂ ಮಗ್ಗಿಸಿದ ಬಂಗಾರದ ರತ್ನಾಭರಣವನ್ನು ಅವನ ಮೇಲೆ ಹೊರಿಸಿ ತಾನು ಮನ್ಯಥಾನುರಾಗದ ಕಡಲಲ್ಲಿ ಓಲಾಡುವುದಕ್ಕೆ ಅವಕಾಶಮಾಡಿಕೊಂಡನು. ೧೧. ಕಳ್ಳನು ಕನ್ನವನ್ನು ಕೊರೆದು ಸಿಕ್ಕಿ ಬೀಳುವ ಸಂದರ್ಭವು ಬಂದಿತು ; ಆಗ ಅವನನ್ನು ಅನಿರೀಕ್ಷಿತವಾಗಿ ಕಾಣಿಸಿ ಕೊಡುವುದು ಒಂದು ಸಣ್ಣ ದೀಪದ ಬೆಳಕು, ಶೃಂಗಾರರಸಮಗ್ನನಾಗಿ ತಪ್ಪುದಾರಿ ಹಿಡಿದಿದ್ದ ಯಶೌಘನೂ ಸರಿದಾರಿಗೆ ಬರುವ ಸುಸಂದರ್ಭವು ತನ್ನಿಂದ ತಾನೇ ಬಂದಂತೆ, ಒಂದು ದಿನ ಅವನು ರಾಜಸಭೆಯಲ್ಲಿ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿದಾಗ ತನ್ನ ಕೂದಲು ನರೆತುದು ಕಾಣಿಸಿತು. ೧೨. ವಿಚಾರದ ಬೆಳಕಿನಲ್ಲಿ ಅವನು ಬೇರೊಂದನ್ನೇ ಕಂಡನು. “ಅರಮನೆಯಂತಿರುವ ತನ್ನ ಮುಖದೊಳಕ್ಕೆ ನರೆಯೆಂಬ ಕಾಡು ಪಾರಿವಾಳವು ಹೊಕ್ಕು ಅಮಂಗಲವನ್ನುಂಟುಮಾಡಿದೆ. ಈ ಅರಮನೆಯಲ್ಲಿ ಕಾಮಿನೀದರ್ಶನ ಎಂಬ ಅರಸನು ಉಳಿಯುವುದಾದರೂ ಹೇಗೆ ?” ಈ ಯೋಚನೆ ಬಂದ ಒಡನೆ ಯಶೌಘನು ಎಲ್ಲ ಇಂದ್ರಿಯಾಕರ್ಷಣೆಗಳನ್ನೂ ಪರಿತ್ಯಾಗ ಮಾಡಿದನು. ೧೩. ಆದುದರಿಂದ ಭೂಮಿಯ ಭಾರವನ್ನು ವಹಿಸಿಕೊಳ್ಳುವಂತೆ ಯಶೋಧರನನ್ನು ಒಪ್ಪಿಸಿದನು. ಈಗ ಯಶೌಘನಿಗೆ ಕಂಬಕ್ಕೆ ಕಟ್ಟಿ ಹಾಕಿದ ಆನೆಗೆ ಬಿಡುಗಡೆ ದೊರೆತಂತೆ ಸಂತೋಷವಾಯಿತು. ಅವನು ತಪೋವನಕ್ಕೆ ತೆರಳಿದನು. ಅವನನ್ನು ಹಿಂಬಾಲಿಸಿ ಬೇರೆ ನೂರ್ವರು ರಾಜರೂ ಹೊರಟು ಹೋದರು. ೧೪. ಯಶೌಘನು ಹೊರಟುಹೋದುದರಿಂದ ಭೂದೇವಿಗೆ ವಿರಹದ ಸಂತಾಪ ಹೆಚ್ಚಿ ಕೊಂಡಿತು. ಈ ಉರಿಯನ್ನು ಉಪಶಮಿಸುವುದಕ್ಕಾಗಿ ಅವಳು ಯಶೋಧರನ ಕೀರ್ತಿ ಯೆಂಬ ಹರಿಚಂದನದ ಲೇಪವನ್ನು ಬಳಿದುಕೊಂಡಳು ; ಮಾತ್ರವಲ್ಲ, ಯಶೋಧರನು ನಿರಂತರವೂ ದಾನ ಮಾಡುವಾಗ ಹೊಯುವ ನಿರಂತರವಾದ ನೀರ ಮಳೆಯಿಂದಲೂ Page #37 -------------------------------------------------------------------------- ________________ & ೨ ಯಶೋಧರ ಚರಿತೆ ಗುರು ಬಿಟ್ಟ ರಾಜ್ಯಲಕ್ಷ್ಮಿ ಗೆ | ವರನಾದೆ ಕಷ್ಟಮೆಲೆ ಯಶೋಧರ ನಿನೊಳ್ ನೆರೆದಿರ್ಪುದಲ್ಲದೆಂಬಂ ತಿರೆ ಪೋದಳ್ ಕೀರ್ತಿಕಾಂತೆ ದೆಸೆಯಂತುವರಂ ಅಳುರ್ವ ನಿಜವಿಜಯ ತೇಜೋ ಬಳದಿಂ ಪರಪರ ಗಂಡಗಾಳಿಕೆಯನಂ ಕಳೆದ ನೃವತಿ ವಸುಂಧರೆ | ಪೊಳಪಂ ತಳೆದೆಯೆ ರಾಗಮಂ ಬೀಜುವಿನಂ ಅಳವಡೆ ಭುಜದೋಳ್ ಮೃಗಮದ ತಿಳಕದವೋಲ್ ಸಕಲಧರಣಿ ಯೌವನ ಭೂಪಾ ವಳಿಯೆನೆ ತಿರ್ದುವನಾ ನೃಪ ಕುಳಶೇಖರನಮೃತಮತಿಯ ಮುಖದರ್ಪಣದೊಳ್ ಅವನಿಪನೊರ್ಮೆ ಸಭಾಮಣಿ ಭವನದಿನಂಬರ ತರಂಗಿಣೀ ಪುಳಿನಮನೇ ಅವ ಹಂಸನಂತೆ ಶಯಾ ಧವಳ ಪ್ರಾಸಾದತಳಮನೇಲಿದನರಸಾ ಪರಿಮಳದ ತೂಬನೆತ್ತಿದ ನರಲಂಬಂ ಜನಮನೋವನಕ್ಕೆನೆ ಕಾಳಾ ಗರುಧೂಮಲತಿಕೆ ಜಾಲಾಂ ದರದಿಂದೊಗೆದುದು ಕಪೋತ ಪಕ್ಷಚ್ಚುರಿತಂ ನೆರವು ಪಡೆದಳು. ೧೫. “ಅಯ್ಯೋ, ಕಷ್ಟವೇ ! ತಂದೆ ತೊಲಗಿಸಿ ಬಿಟ್ಟ ರಾಜ್ಯಲಕ್ಷ್ಮಿಯನ್ನು ನೀನು ಕೈಹಿಡಿದೆಯಲ್ಲಾ ! ನಿನ್ನಂಥವನ ಒಡನಾಟವು ನನಗೆ ಸಲ್ಲದು” ಎಂಬಂತೆ ಯಶೋಧರನನ್ನು ಬಿಟ್ಟು ದಿಗಂತದವರೆಗೂ ಹೋದಳು, ಅವನ ಕೀರ್ತಿ ಕಾಮಿನಿ.೭೬ ೧೬. ಅವನ ವಿಜಯದ ತೇಜಸ್ಸು ಎಲ್ಲ ಕಡೆಗೂ ಪಸರಿಸಿತು. ಇದರ ಬಲದಿಂದ ಅನ್ಯ ನರಪತಿಗಳ ಗಂಡಗಾಳಿಕೆಯೆಲ್ಲ ಕಳೆದು ವಸುಂಧರೆ ಉಜ್ವಲತೆಯನ್ನು ತಾಳಿಕೊಂಡಳು ; ಯಶೋಧರನಲ್ಲಿ ಬಹಳ ಅನುರಾಗವನ್ನು ಬೀರಿದಳು. ೧೭. ಇಡೀ ಭೂಮಂಡಲವು ಅವನ ಹೆಗಲೇರಿತು. ಆದರೆ ಆ ರಾಜಕುಲ ಶೇಖರನಿಗೆ ಅದು ಕಸ್ತೂರಿಯ ತಿಲಕದಂತೆ ಅಲಂಕಾರಪ್ರಾಯವಾಗಿತ್ತೇ ಹೊರತು, ಹೊರೆಯಾಗಿರಲಿಲ್ಲ. ತಾರುಣ್ಯದ ಆಭರಣದಂತೆ ಒದಗಿದ ಭೂಮಿಯನ್ನು ಅವನು ಅಮೃತಮತಿಯ ಮುಖದರ್ಪಣದಲ್ಲಿ ತಿದ್ದಿಕೊಳ್ಳುವನು. ೧೮. ಒಮ್ಮೆ ಅರಸ ಯಶೋಧರನು ರತ್ನಖಚಿತವಾದ ಸಭಾಮಂದಿರದಲ್ಲಿದ್ದವನು, ಅಲ್ಲಿಂದೆದ್ದು ಆಕಾಶ ಗಂಗೆಯ ಪುಲಿನಸ್ತಳಕ್ಕೆ ಏರಿ ಹೋಗುವ ಹಂಸದಂತೆ ಶುಭ್ರವಾದ ಪ್ರಾಸಾದವನ್ನೇರಿ ತನ್ನ ಶಯ್ಯಾಗೃಹವನ್ನು ಪ್ರವೇಶಿಸಿದನು. ೧೯. ಕಾಮನು ಜನಮನೋವನಕ್ಕೆ ಪರಿಮಳದ ತೂಬನ್ನು ತೆರೆದು ಬಿಟ್ಟನೋ ಎಂಬಂತೆ ಕಾಳಾಗರುವಿನ ಹೊಗೆಬಳ್ಳಿ ಕಿಟಕಿಯಿಂದ ಹೊರಹಬ್ಬುತ್ತಾ ಇತ್ತು ಆ ಶಯ್ಯಾಗೃಹದಿಂದ. ಆ ಹೊಗೆಯು ಪಾರಿವಾಳದ ರೆಕ್ಕೆಯಂತೆ Page #38 -------------------------------------------------------------------------- ________________ ಎರಡನೆಯ ಅವತಾರ ಎಳದುಂಬಿ ಸುರಿದು ಸುಟ್ಟುರೆ ಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮು ಚಳಿಸಿದುವು ನೀಲಮುತ್ತಿನ ಬೆಳಗಿನ ಕುಡಿ ರಾಗರಸದಿನಂಕುರಿಸುವವೊಲ್ ಅಮೃತಮತಿ ಸಹಿತನಾ ಚಂ ದ್ರಮತಿಯ ಸುತನಂತು ಮೆಆವ ಧವಳಾರದೊಳ ಭ್ರಮುವೆರಸಭಗಜಂ ವಿ ಭ್ರಮದಿಂದಂ ಸಜ್ಜರಕ್ಕೆ ಬಂದವೊಲೆಸೆಗುಂ ವರಮಂಚ ಮಣಿರುತ್ತಿದ್ಧತ ಮರಾಳಿ ಕಾತೂಳತಳದೊಳ್ ತಾಮೆಸೆದ‌ ಸುರಚಾಪಚ್ಚವಿ ಸುತ್ತಿದ ಶರದಭ್ರದೊಳೆಸೆವ ಖಚರದಂಪತಿಗಳವೊಲ್ ನಡೆ ಸೋಂಕಿದ ಕಡೆಗಣ್ಣಳ ಕುಡಿವೆಳಗಿಂ ಬಿಡುವ ಬೆಮರೊಳಂ ಪದದೊಳಮೇಂ ತಡವಾದರೂ ಕೌಮುದಿ ಕ ಣ್ಣಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್ 22 ಕರಗಿ OG ೨೧ GG ೨೩ ಕರಿಯ ಬಣ್ಣದ್ದಾಗಿತ್ತು. ೨೦. ಅಲ್ಲೆಲ್ಲ ಕಸ್ತೂರಿಯ ಪುಡಿ, ಕರ್ಪೂರದ ದೂಳು ಹಬ್ಬಿಕೊಂಡಿತ್ತು. ಪರಿಮಳಕ್ಕೆ ಎರಗುವ ಎಳೆಯ ತುಂಬಿಗಳು ಅಲ್ಲಿ ಸುತ್ತೂ ಸುಳಿಯುತ್ತಿದ್ದುವು. ಆಗ ಏಳುತ್ತಿದ್ದ ಸುಳಿಗಾಳಿಯಲ್ಲಿ ಆ ಪುಡಿದೂಳೆಲ್ಲ ಮೇಲೆ ಹಾರುತ್ತಿತ್ತು. ಇದನ್ನು ಕಾಣುವಾಗ ನೀಲ ಮುತ್ತಿನ ಬೆಳಕಿನ ಕುಡಿ ಪ್ರೇಮರಸದಿಂದ ಮೊಳಕೆಯೊಡೆಯುತ್ತಿರುವಂತೆ ಭಾಸವಾಗುತ್ತಿತ್ತು. ೨೧. ಹೀಗೆ ಶೋಭಿಸುವ ಆ ಧವಳಾಗಾರದಲ್ಲಿ ಚಂದ್ರಮತಿಯ ಮಗ ಯಶೋಧರನು ಅಮೃತಮತಿಯೊಂದಿಗೆ ಸೇರಿಕೊಂಡನು. ಅಭ್ರಮುವನ್ನು ಕೂಡಿಕೊಂಡು ಐರಾವತವು ಬಹು ಸಂಭ್ರಮದಿಂದ ಶಯ್ಯಾಗಾರಕ್ಕೆ ಬಂದಂತೆ ಈ ದಂಪತಿಗಳು ಕಾಣುತ್ತಿದ್ದರು. ೨೨. ರತ್ನಖಚಿತವಾದ ಚೆಲುವಿನ ಮಂಚದ ಕಾಂತಿ ಹಂಸತೂಲಿಕಾತಲ್ಪವನ್ನು ಇನ್ನಷ್ಟು ಸೊಗಸುಗೊಳಿಸಿತ್ತು. ಅದರ ಮೇಲೆ ಅವರಿಬ್ಬರೂ ಕುಳಿತಾಗ ಕಾಮನ ಬಿಲ್ಲಿನ ಕಾಂತಿ ಪಸರಿಸಿಕೊಂಡಿರುವ ಮೇಘಮಾಲೆಯ ಶರತ್ಕಾಲದ ನಿರ್ಮಲ ಮೇಲೆ ಮೆರೆಯುವ ಗಂಧರ್ವ ದಂಪತಿಗಳಂತೆ ಶೋಭಿಸುತ್ತಿದ್ದರು. ೨೩. ಒಬ್ಬರು ಇನ್ನೊಬ್ಬರನ್ನು ಒಲುಮೆಯಿಂದ ನೋಡುತ್ತಿದ್ದರು. ಅವರಿಬ್ಬರ ಕಟಾಕ್ಷದ ಬೆಳಕಿನ ಕುಡಿ ಪರಸ್ಪರರಿಗೆ ಅವರಿಬ್ಬರೂ ಬೆವರತೊಡಗಿದರು. ಚಂದ್ರಕಾಂತ ತಿಂಗಳ ಸೋಂಕಿ, ಮಣಿಯ ಬೊಂಬೆಗೆ ತಾಗಿದಾಗ ಅದು ಬೆಳಕು ನೀರು ಸುರಿಸುವಂತೆ. Page #39 -------------------------------------------------------------------------- ________________ ಯಶೋಧರ ಚರಿತ ತನುಸೋಂಕಾಲಿಂಗನ ಚುಂ ಬನದೆ ಸುರತದಿಂ ಸವಿ ರತಪ್ರೌಢಿಯಿನಾ ತನುವಂ ಮಯಿಸೆ ಅಳೆಯದೆ ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌ ಸುರತ ಸುಖಪಾರವಶ್ಯಂ ತರೆ ನಿದ್ರಾಭರಮನಿರ್ವರುಂ ಶಿಥಿಲತನೂ ಪರಿರಂಭಣದಚ್ಚಳಿಯದೆ ಪರಿವೇಷ್ಟಿತ ಬಾಹುವಳಯದೊಳ್ ಕಣ್ಣಯ್ಯರ್ ಪುರ್ವೆ೦ಬ ಜವಳಿಗಟ್ಟಿನ ಕರ್ವಿನ ಬಿಲ್ಲಿಂಗೆ ಬಿಗಿದ ಮಧುಕರಮಾಲಾ ಮೌರ್ವಿಯನೆ ಮುಗಿದ ಕಣ್ಣಳ ಪರ್ವುಗೆಯೊಳ್ ಮೆದುದವರ ತಳಮದುಜುಗಲ್ ಹೃದಯ ಪ್ರಿಯರಂತೊಅಗಿದ ಪದದೊಳ್ ಗರಟಗೆಯ ಜಾವದುಕ್ಕಡದುಲಿ ಮ ಗ್ಗಿದ ಪೊತ್ತು ಸೂಟ್ ಕರುಮಾ ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ ಬಿನದಕ್ಕೆ ಮಾಡುತ್ತಿರೆ ನು ಇನಿ ನಿದ್ರೆಗೆ ಕತಕಬೀಜಮಾಯ್ತನೆ ಮೃಗಲೋ ಚನೆ ತಿಳಿದಾಲಿಸಿ ಮುಟ್ಟಿದ ಮನಮನೆ ತೊಟ್ಟನೆ ಪಸಾಯದಾನಂಗೊಟ್ಟಲ್ ೨೮ ೨೪, ಒಬ್ಬರ ದೇಹ ಇನ್ನೊಬ್ಬರ ದೇಹಕ್ಕೆ ತಾಗಿತು ; ಪರಸ್ಪರ ಆಲಿಂಗಿಸಿಕೊಂಡರು ; ಚುಂಬಿಸಿದರು. ಕಂಠಧ್ವನಿ ಸವಿಯಾಗಿ ಕೇಳತೊಡಗಿತು. ಇಂತಹ ಸಮಾಗಮ ಪ್ರೌಢಿಮೆ ಯಿಂದ ಅವರಿಬ್ಬರೂ ಮೈಮರೆತರು. ಅವರಿಗೆ ಯಾವುದರ ಅರಿವೂ ಇಲ್ಲವಾಯಿತು. ಕಾಮನು ಕುಣಿಸುವ ಯಂತ್ರದಂತೆ ಅವರಿಬ್ಬರೂ ಒಂದುಗೂಡಿದರು. ೨೫. ಸಂಭೋಗ ಸುಖವು ಅವರಿಗೆ ಪರವಶತೆಯನ್ನುಂಟುಮಾಡಿತು. ಆಗ ಅವರು ಶರೀರಾಲಿಂಗನದ ಬಿಗಿ ತಪ್ಪಿದರೂ, ಅಚ್ಚಳಿಯದೆ ಪರಸ್ಪರರ ತೋಳುಗಳು ಹೆಣೆದುಕೊಂಡು ನಿದ್ರಾ ಮುದ್ರಿತರಾದರು. ೨೬. ಗಾಢನಿದ್ರೆಯಲ್ಲಿ ಮುಳುಗಿದ ಅವರ ಕಣ್ಣುಗಳು ಮುಚ್ಚಿ ಕೊಂಡಿದ್ದಾಗ ಅವರ ಹುಟ್ಟು ಎರಡು ಕಬ್ಬುಗಳನ್ನು ಕೂಡಿಸಿ ಕಟ್ಟಿದ ಬಿಲ್ಲಿನಂತೆ ಭಾಸ ವಾಗುತ್ತಿತ್ತು. ಹೀಗೆ ಕಟ್ಟಿದ ಬಿಲ್ಲಿಗೆ ಹೆದೆಯನ್ನಾಗಿ ಭ್ರಮರ ಮಾಲೆಯನ್ನು ಬಿಗಿದಂತೆ ಅವರ ರೆಪ್ಪೆಯ ರೋಮಗಳು ಮೆರೆಯುತ್ತಿದ್ದವು. ೨೭. ಪ್ರಣಯಿಗಳಿಬ್ಬರೂ ಮಲಗಿದ ಹೊತ್ತು. ಜಾವದ ಉಕ್ಕಡಗಳಲ್ಲಿ ಅತ್ತಿತ್ತ ಸುತ್ತುತ್ತಿರುವ ಯಾಮಿಕರ ಸದ್ದೆಲ್ಲಾ ಅಡಗಿತು. ಆಗ ಆ ಅರಮನೆಯ ಪಕ್ಕದಲ್ಲಿದ್ದ ಪಟ್ಟದಾನೆಯ ಮಾವುತನು, ತನ್ನ ಸರದಿ ಬಂದಂತೆ ತನ್ನ ಮನಸ್ಸಂತೋಷಕ್ಕಾಗಿ ಹಾಡತೊಡಗಿದನು. ೨೮. ಅವನ ಹಾಡಿನ ಇಂಪಾದ ಧ್ವನಿ ಅಮೃತಮತಿಯ ನಿದ್ದೆಗೆ ಕತಕಬೀಜ (ತಿಳಿಗೊಳಿಸುವ ಬೀಜ ; ಚಲ್ವಿಜ ಎಂದು ಹೇಳುತ್ತಾರೆ) ವಾದಂತಾಯಿತು. ಅವಳು ನಿದ್ದೆ ತಿಳಿದೆದ್ದಳು ; ಹಾಡನ್ನು ಕಿವಿಗೊಟ್ಟು ಕೇಳಿದಳು. ಅದು ಅವಳ ಮನಸ್ಸನ್ನು ಮುಟ್ಟಿತು. ಕೂಡಲೇ ಆ ಮನಸ್ಸನ್ನು ಮೆಚ್ಚಿನ Page #40 -------------------------------------------------------------------------- ________________ ಎರಡನೆಯ ಅವತಾರ ಗಹಗಹಿಕೆವಡೆದ ವಹಿಣಿಯ ಸುಹಾಹೆ ಝಂಪೆಯದೊಳಮರೆ ಠಾಯದೊಳಂ ನಿ ರ್ವಹಿಸಿ ನೆಲೆಗೊಳಿಸಿ ಬನ್ನಿಕೆ ಮಹಚಾಳೆಯಲ್ಲಿ ಮೂರ್ತಿವಡೆದುದು ರಾಗಂ ಮಾಳಿಗೆಯೊಳಗಣ ಸೊಡರ್ಗುಡಿ ಡಾಳಂಬಡೆದಂತೆ ರಂಗರಕ್ತಿಯೊಳಮರ್ದು೦ ಪಾಳಿಕೆವಡೆದು ಬಜಾವಣೆ ಮಾಳವಸಿರಿಯೆಂಬ ರಾಗಮಂ ಚಾಳಿಸಿದಂ, ತಾಳದ ಲಯಮಂ ನೆನೆಯದೆ ಕೇಳಲೊಡಂ ಠಾಯೆ ಜಾತಿಯೋ ಗ್ರಾಹಯುತಂ ಕೇಳಲೊಡಂ ಗೀತಮನೆಂ ದಾಳತಿಯೊಳ್ ಮೆಳೆದು ಪಾಡಿದಂ ರೂಪಕಮಂ ಅಂತೆಸೆಯೆ ಪಾಡುತಿರೆ ತ ದ್ದಂತಿಪನತಿನೂತ್ನಗೀತ ಪಾತನ ವಿಕಲ ಸ್ವಾಂತೆಗೆ ನೋಡುವ ಕೂಡುವ ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ ಉಡುಗೊರೆಯನ್ನಾಗಿ ತೆತೇಬಿಟ್ಟಳು. ೨೯. ಅತ್ಯಾನಂದಗೊಂಡ ಬೆಡಗಿನ ಒಳ್ಳೆಯ ಧ್ವನಿ ಝಂಪೆಯ (ಇದು ಮಾತ್ರೆಗಳ ನಡೆಯುಳ್ಳ ದೇಶೀತಾಳ ವಿಶೇಷ)ದಲ್ಲಿ ಸೇರಿಕೊಂಡಿತು. ಅಲ್ಲಿಂದ ಅದು ಪ್ರಬಂಧ ವಿಶೇಷದಲ್ಲಿ ಮುಂದುವರಿಯಿತು. ಆಮೇಲೆ ವೈಶಿಷ್ಟದ ನರ್ತನಗತಿಯಲ್ಲಿ ಹರಿದು, ಒಂದು ಬಗೆಯ ಕೃತಕದ ನೆಗೆತದಲ್ಲಿ ಆ ರಾಗವು ರೂಪುವಡೆಯಿತು. ೩೦. ಅದೇ ಮಾಳವ ಶ್ರೀಯೆಂಬ ದೇಶೀರಾಗ, ಮಾಳಿಗೆಯೊಳಗಿನ ದೀಪದ ಜ್ವಾಲೆ ಹೆಚ್ಚು ಪ್ರಕಾಶಪಡೆದಂತೆ ಈ ರಾಗವು ರಂಗಶೃಂಗಾರವನ್ನು ಪಡೆಯಿತು. ಅದು ಅಂತೆಯೇ ಸುರಕ್ಷಿತವಾಗಿ ಮುಂಬರಿದು ಸರಿಯಾದ ರೀತಿಯಲ್ಲಿ ನಡೆಯಿತು. ೩೧. ತಾಳದ ಲಯವನ್ನೂ ಎಣಿಸಿಕೊಳ್ಳದೆ ಕೇಳುವಾಗಲೇ ಪ್ರಬಂಧವು ಆಯಾ ಜಾತಿಯ ತಾಳಗತಿಗಳಲ್ಲಿ ತಾನಾಗಿ ಸೇರಿಕೊಂಡೇ ಕೇಳುತ್ತಿತ್ತು. ಈ ರೀತಿಯಲ್ಲಿ ಅವನು ಆ ಹಾಡನ್ನು, ಅದಕ್ಕೆ ಸರಿಯಾದ ರೂಪವನ್ನು ಕೊಟ್ಟು, ಹಾಡುತ್ತಾ ಇದ್ದನು. ೩೫ ೩೨. ಆ ಮಾವುತನು ಆ ರೀತಿ ಅತಿಮಧುರವಾಗಿ ಹಾಡುತ್ತಿದ್ದಾಗ, ಅವನ ಅತಿನೂತನ ವಾದ ಹಾಡು ಕಿವಿಗೆ ಬೀಳುತ್ತಲೇ ಇತ್ತು. ಅಮೃತಮತಿಯ ಮನಸ್ಸು ಆಗ ಕದಡಿ ಹೋಯಿತು. ಅವಳಿಗೆ ಕಣ್ಣಲ್ಲೇ ಬೆಳಗಾಯಿತು. ಬೆಳಗಾಗುವವರೆಗೂ ಅವನನ್ನು ಹೇಗೆ ನೋಡಲಿ, ಹೇಗೆ ಕೂಡಿಕೊಳ್ಳಲಿ ಎಂಬ ಚಿಂತೆಯೇ ಕಡಲಂತೆ ಉಕ್ಕಿ ಹರಿಯಿತು. Page #41 -------------------------------------------------------------------------- ________________ まと ಮನದನ್ನಳಪ್ಪ ಕೆಳದಿಗೆ ಮನಮಂ ಮುಂದಿಟ್ಟು ಬಟ್ಟೆಕ ಕಡೆಪಿದೊಡ್ಡವಳಾ ತನ ರೂಪುಗಂಡು ಕಣ್ಣಂ ಮನಕ್ಕಮುದ್ದಾರವೆತ್ತು ಭೋಂಕನೆ ಮಗುಳ್ಳಳ್ ಅಮೃತಮತಿಯೆತ್ತ ರೂಪಾ ಧಮನಷ್ಟಾವಂಕನತ್ತ ಚಿತ್ರಮಪಾತ್ರೆ ರಮತೇ ನಾರೀ ಎಂಬುದು ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ ಎನುತುಂ ಬಂದು ವಿಷಣ್ಣಾ ನನೆಯಂ ಮಾರ್ಗಾವಲಗ್ನನೇತ್ರೆಯನುಚ್ಛಾ ಸನಿತಪ್ತಾಧರರುಚಿಯಂ ಮನುಜೇಂದ್ರಾಂಗನೆಯನೆಯೇ ಕಂಡಂತೆಂದಲ್ ' ವ ಕಂತುವಿನ ಕಯ್ಯ ಕೂರಸಿ ಯಂತಿರೆ ಗರಗರಿಕೆವಡೆದು ಪೊಳೆವಸಯಳೆ ನೀ ನಿಂತಪ್ಪ ಕಾಮದೇವಂ ಗೆಂತೆಂತಾಯ್ತಲ್ಲಿಸಿ ಕೂರ್ತೆಯೆಂದಾನ ಯಂ ಯಶೋಧರ ಚರಿತೆ 2,2 ೩೪ 2.9 ೩೬ ೩೩. ಬೆಳಗಾದ ಕೂಡಲೇ ಅವಳು ತನ್ನ ನಚ್ಚುಮೆಚ್ಚಿನ ಗೆಳತಿಯನ್ನು ಕರೆದಳು. ಅವಳೊಡನೆ ತನ್ನ ಅಂತರಂಗದ ಬಯಕೆಯನ್ನೆಲ್ಲ ಬಯಲು ಮಾಡಿದಳು. ಮಾವುತನ ಬಳಿಗೆ ಆಕೆಯನ್ನು ಕಳುಹಿಸಿಕೊಟ್ಟಳು. ಒಡತಿಯ ಅಪ್ಪಣೆಯ ಪ್ರಕಾರ ಅವಳು ಮಾವುತನ ಬಳಿಗೆ ನಡೆದಳು. ಅವನನ್ನು ದೂರದಿಂದ ಕಂಡುದೇ ತಡ, ಅವಳ ಕಣ್ಣಿಗೂ ಮನಸ್ಸಿಗೂ ಓಕರಿಕೆಯುಂಟಾಯಿತು. ಅವಳಿಗೆ ಅಲ್ಲಿ ನಿಲ್ಲುವುದಕ್ಕೆ ಸಾಧ್ಯವಾಗದೆ ಕೂಡಲೆ ಹಿಂತಿರುಗಿದಳು. ೩೪. “ಅಯ್ಯೋ ದೇವರೇ ! ಅಮೃತಮತಿಯಲ್ಲಿ, ರೂಪಾಧಮನಾದ ಅಷ್ಟಾವಂಕನೆಲ್ಲಿ ? 'ಚಿತ್ರಂ ! ಆಪಾತ್ರೆ ರಮತೇ ನಾರಿ' (ಆಶ್ಚರ್ಯ! ಹೆಂಗಸು ಅಯೋಗ್ಯನೊಡನೆ ರಮಿಸುತ್ತಾಳೆ!) ಎಂಬ ಮಾತು ಸಂಭವಿಸಿತಲ್ಲ ! ಆ ಸುಟ್ಟ ವಿಧಿಗೆ ಕಣೋ ಇಲ್ಲವೋ !” ೩೫. ಎಂದೆಲ್ಲ ಯೋಚನೆ ಅವಳ ತಲೆಯಲ್ಲಿ ಸುಳಿಯಿತು. ಇದನ್ನೇ ಹೊತ್ತು ಅವಳು ಮರಳಿದಳು. ಇಲ್ಲಿ ನೋಡುವುದೇನು ? ಆ ರಾಜೇಂದ್ರನ ಪತ್ನಿ ಅಮೃತಮತಿ ಮುಖ ಬಾಡಿಸಿಕೊಂಡೇ ಇದ್ದಾಳೆ. ತನ್ನ ಗೆಳತಿ ಯಾವಾಗ ಮರಳಿಯಾಳು ಎಂದು ಅವಳು ಬರುವ ದಾರಿಯಲ್ಲೇ ಕಣ್ಣಿಟ್ಟು ಕೊಂಡಿದ್ದಾಳೆ. ಬಿಡುವ ಬಿಸಿಯುಸಿರು ತಾಗಿ ತುಟಿಯ ಸಹಜವಾದ ಕೆಂಬಣ್ಣವೆಲ್ಲ ಕಳೆದುಹೋಗಿದೆ. ಹೀಗೆ ಉತ್ಕಂಠಿತೆಯಾಗಿದ್ದ ಒಡತಿಯನ್ನು ಸಮೀಪಿಸಿ ಅವಳು ಹೇಳಿದಳು. ೩೬. ಕಾಮನ ಕೈಯ ಖಡ್ಗದಂತೆ ಬಹಳ ಚೆಲುವನ್ನು ಪಡೆದು ಶೋಭಿಸುವ ತನುಗಾತ್ರಿ ನೀನು. ಇಂತಹ ನೀನು, ಈ ಬಗೆಯ ಕಾಮದೇವನನ್ನು ಹೇಗೆ ಶೋಧನೆ ಮಾಡಿದೆ ! ಹೇಗೆ ಒಲಿದೆ ? Page #42 -------------------------------------------------------------------------- ________________ ಎರಡನೆಯ ಅವತಾರ ಈ ದೊರೆಯನೆಂದು ಅಲ್ ಮೇದಿನಿಯೊಳಗಾತನಲ್ಲದಿಲ್ಲೆನೆ ಪೇಮ್ ಪ್ರೇಮ್ ಕಾದಲನಂತಿರೆ ಚೆಲ್ವನೆ ದೂದವಿ ನೀನೆನ್ನ ಕೊಂದೆಯೆಂದೊಡೆ ಪೇಟ್ಟಿಲ್ ಪಡೆದಲೆ ಕುಳೆನೊಸಲಣಿಗ ಅವಾಯ್ ಹಪ್ಪಳಿಕೆಮೂಗು ಮುರುಟಿದ ಕಿವಿ ಬಿ ಬೀಜುವಲ್ ಕುಸಿಗೊರಲಿಟಿದೆರ್ದೆ ಪೊಅಂಟ ಬೆನ್ ಬಾತ ಬಸಿಡಂಗಿದ ಜಘನಂ ಕರೆದೊವಲ ಪವಿತೆಯ ಕುಚೆಯಂ ತೆಂದಂದದ ಮೆಯ ನಾತಮಾತನ ಕಳ್ ಕುಜುಗಣ್ಣು ಕೂನಬೆನ್ ಕಾಲ್ ಮತೆಯಿಸುವುದು ಟೊಂಕಮುಜೆದ ಕತೆಯ ಕಾಲಂ ಮುದುಗರಡಿಯ ಮುದುದೋವಲಂ ದದ ಕರಿಯಂ ತಾಳಕಾಯ ಮೋಳಿಗೆಯೊಂದಂ ದದ ಮುರುಡನಷ್ಟವಂಕಂ ಮೊದಲೋಣಗಿದ ಕೂನಗೊರಡಿನಂದದ ಕೊಂಕಂ ನನಗೆ ಇದಾವುದೂ ಗೊತ್ತಾಗುವುದಿಲ್ಲ! ೩೭. ಅವನು ಯಾವ ರೀತಿಯಲ್ಲಿದ್ದಾನೆಂದು ಹೋಲಿಸಿ ತೋರಿಸೋಣವೆಂದರೆ ಜಗತ್ತಿನಲ್ಲಿ ಅವನಂತೆ ಬೇರೆ ಯಾರೂ ಇರುವುದಕ್ಕೆ ಸಾಧ್ಯವಿಲ್ಲ !” ಗೆಳತಿಯ ಕೊಂಕುಮಾತಿನ ಅರ್ಥ ಅಮೃತಮತಿಗಾಗಲಿಲ್ಲ. ಅವಳ ಕುತೂಹಲ ಮತ್ತಷ್ಟು ಕೆರಳಿತು ; “ಹೇಳು, ಹೇಳು ! ನನ್ನ ಕಾದಲನು ಅಷ್ಟು ಸುಂದರನೆ ? ಎಲೆ ದೂತಿ, ಬೇಗನೇ ಹೇಳು, ಹೇಳದೆ ನೀನು ನನ್ನನ್ನು ಕೊಲ್ಲುತ್ತೀಯಲ್ಲ!” ಎಂದು ತ್ವರೆಪಡಿಸಿದಳು. ೩೮. “ಅವನ ತಲೆಗೂದಲು ಅಲ್ಲಲ್ಲಿ ಕಿತ್ತು ಹೋಗಿದೆ. ಹಣೆ ಹೊಂಡ ಬಿದ್ದಿದೆ. ಕಣ್ಣು ಕೊಳೆತು ಹೋಗಿದೆ. ಬಾಯಿ ಜೊಲ್ಲು ಸುರಿಸುತ್ತಲೇ ಇದೆ. ಚಪ್ಪಟೆಯಾದ ಮೂಗು, ಮುರುಟಿದ ಕಿವಿ, ಬಿರಿದ ಹಲ್ಲು, ಕೊರಳು ಕುಗ್ಗಿ, ಎದೆ ಒಳ ನುಗ್ಗಿ ಬೆನ್ನು ಹೊರಚಾಚಿದೆ. ಹೊಟ್ಟೆ ಬಾತುಕೊಂಡಿದೆ ; ಜಘನವು ಅಡಗಿಯೇ ಹೋಗಿದೆ. ೩೯. ಕರೆ ಮೆತ್ತಿದ ಚರ್ಮ, ಹಳೆಯ ಹೊಂಡವನ್ನು ಹೊರ ತೆಗೆದಂತಹ ವಾಸನೆ ಅವನ ದೇಹದಿಂದ ಹಬ್ಬುತ್ತಾ ಇದೆ. ಅವನ ಕೈಗಳೂ, ಚಿಕ್ಕ ಕಣ್ಣುಗಳೂ, ಗೂನುಬೆನ್ನೂ ಕಾಲುಗಳೂ ಸೊಂಟ ಮುರಿದ ಕತ್ತೆಯ ಕಾಲನ್ನೂ ಮೀರಿಸುವಂತಿವೆ. ೪೦. ಮುದಿಕರಡಿಯ ಹಳೆಯ ಚರ್ಮದಂತೆ ಕಪ್ಪು ಕರಿಯಾಗಿದೆ ಅವನ ದೇಹದ ಬಣ್ಣ, ತಾಳೆಯ ಮರದಂತೆ ಒರಟೊರಟಾದ ಶರೀರ, ಕಟ್ಟಿಗೆಯ ಕಟ್ಟಿನಂತೆ ಅಂಕು ಡೊಂಕಾಗಿ ಅಷ್ಟವಕ್ರವಾಗಿದೆ. ಎಂದೋ ಒಣಗಿಹೋದ ವಕ್ರವಾದ Page #43 -------------------------------------------------------------------------- ________________ ೩೮ ಯಶೋಧರ ಚರಿತೆ ಎಂದೊಡೆ ದೂದವಿಗಳಿಂ ತೆಂದಲ್ ಗರಗರಿಕೆ ಕೊರಲೋಳೀಕ್ಷಣದೋಳ್ ವಾ ರ್ಬಿಂದು ಮಿಡುಕೆರ್ದೆಯೊಳೊದವೆ ಪು ಇಂದನ ಕಣೆ ನಟ್ಟು ನಿಂದ ವನಹರಿಣಿಯವೊಲ್ ಕರಿದಾದೊಡೆ ಕತ್ತುರಿಯಂ ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ ಸರಚಾಪಮನಿಳಿಕಯ್ಯರೆ ಮರುಳೇ ಪೊಲ್ಲಮೆಯ ಲೇಸು ನಲ್ಲರ ಮೆಯೊಳ್ ಒಲವಾದೊಡೆ ರೂಪಿನ ಕೋ ಟಲೆಯವುದೋ ಕಾರ್ಯಮಾಗೆ ಕಾರಣದಿಂದಂ ಫಲಮೇನಿಂದೆನಗಾತನೆ ಕುಲದೈವಂ ಕಾಮದೇವನಿಂದ್ರಂ ಚಂದ್ರ ಎಂದಾಕೆಗೆ ಲಂಚಮನಿ ತೆಂದುದನೆಂದೆರವಿಗೊಂಡು ಕಟಿಪುವುದುಮವಳ್ ಸಂದಿಸಿದೊಡಮ್ಮತಮತಿ ರಾ ತಿಂದಿವಮಾತನೊಳೆ ಸಲಿಸಿದ ತೆಂಪುಗಳು ಒಂದು ಮರದ ಕೊರಡಿನಂತಿದೆ.” ೪೧. ದೂತಿ ಹೇಳಿದ ಇಷ್ಟು ವಿಸೃತವಾದ ವಿವರಣೆಯನ್ನು ಕೇಳುತ್ತಾ ಇದ್ದಂತೆ ಅಮೃತಮತಿಯ ಗಂಟಲು ಗರಗರ ಎಂದು ಸದ್ದುಮಾಡಿತು, ಕಣ್ಣಲ್ಲಿ ನೀರು ತುಂಬಿ ಕೊಂಡಿತು. ಎದೆ ನಡುಗಿತು. ಕಾಡಿನ ಜಿಂಕೆಗೆ ಬೇಡನ ಬಾಣ ನಾಟಿದಂತೆ ಅವಳೊಮ್ಮೆ ಸ್ತಂಭೀಭೂತಳಾದಳು. ಬಳಿಕ ಮೆಲ್ಲನೆ ಮಾತಿಗಾರಂಭಿಸಿದಳು. ೪೨, “ಕಸ್ತೂರಿಯ ಬಣ್ಣ ಕಪ್ಪು. ಅದನ್ನು ಆ ಬಣ್ಣದಿಂದಾಗಿ ಕಡೆಗಾಣಿಸುವವರಿದ್ದಾರೆಯೆ ? ಗಂಟುಗಂಟಾಗಿ ಇದೆಯೆಂದು ಗಂಧದ ಕೊರಡನ್ನು ತಿರಸ್ಕರಿಸುತ್ತಾರೆಯೆ ? ಕಾಮನ ಬಿಲ್ಲು ಕೊಂಕಾಗಿದ್ದರೂ ಅದನ್ನು ಯಾರೂ ಹೀನಯಿಸುವುದಿಲ್ಲವಲ್ಲ ! ಹುಚ್ಚ, ನಮ್ಮ ಮೆಚ್ಚಿನವರ ಮೆಯ್ಯಲ್ಲಿ ದೋಷವಿದ್ದರೆ ಅದೇ ಅವರ ಮೇಲೆಯೆನ್ನಿಸುತ್ತದೆ. ೪೩. ಅದೂ ಅಲ್ಲದೆ, ಮನಸ್ಸು ಮೆಚ್ಚಿದೆಯೆಂದಾದರೆ ಮತ್ತೆ ರೂಪದ ಪ್ರಶ್ನೆಯೇ ಏಳುವುದಿಲ್ಲ. ಕಾರ್ಯವಾದ ಮೇಲೆ ಕಾರಣದಿಂದೇನು ಪ್ರಯೋಜನ ? ಇಂದು ನನಗೆ ಅವನೇ ಕುಲದೈವ. ಅವನೇ ಕಾಮದೇವ, ಅವನೆ ಇಂದ್ರ, ಅವನೆ ಚಂದ್ರ !?” ೪೪. ಅಮೃತ ಮತಿ ಅವಳಿಗೆ ಲಂಚವನ್ನಿತ್ತಳು ; ತನ್ನ ವಶವರ್ತಿನಿಯಾಗುವಂತೆ ಮಾಡಿಕೊಂಡಳು. ಅವಳೊಡನೆ ಹೇಳಬೇಕಾದುದನೆಲ್ಲ ಹೇಳಿದಳು. ಅವಳಿಂದ ಸಮತಿಯ ಮಾತನ್ನೂ ಪಡೆದಳು. ಅವಳನ್ನು ತನ್ನಿನಿಯನಲ್ಲಿಗೆ ಕಳುಹಿಸಿಕೊಟ್ಟಳು. ದೂತಿಯು ಕಾರ್ಯವನ್ನು ಕೈಗೂಡಿಸಿದಳು; ಇಬ್ಬರನ್ನೂ ಒಂದುಗೂಡಿಸಿದಳು. ಅಂದಿನಿಂದ ಅಮೃತಮತಿ ಹಗಲೂ ಇರುಳೂ ಬಿಡುವಿದ್ದಾಗಲೆಲ್ಲ Page #44 -------------------------------------------------------------------------- ________________ ಎರಡನೆಯ ಅವತಾರ ಆ ವಿಕಟಾಂಗನೋಳಂತಾ ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್ ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದದ್ದಂತೆ ಪತಿಯೊಳಿಳಿದಾಯ್ತು ಮನಂ ನೋಡುವ ಮಾತಾಡುವ ಬಾ ಯೂಡುವ ಪದನಮೃತಮತಿಗೆ ಪೂರ್ವಸ್ಥಿತಿಯಂ ಪಾಡಡೆಯುತ್ತಿರೆ ನೋಡಲ್ ವೇಡಿ ಯಶೋಧರನದೊರ್ಮೆ ಶಯಾತಳದೊಳ್ ಮದೋಆಗಿದನಂತೆವೊಲಿಗೆ ಪಮೆ ಪಗಲ್ ಮುಗಿಯೇ ಸಿಲ್ಕಿ ಕೈರವದಿನಿರುಳ್ ಪೊಱಮಡುವಂತರಸನ ತೋ ಕೈತೆಯಿಂ ನುಸುಳರಸಿ ಜಾರನಲ್ಲಿಗೆ ಪೋದಳ ಬೆನ್ನೊಳೆ ಪೋದಂ ದೋಷದ ಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರ ಚನ್ನದಿನುರ್ಚಿದ ಬಾಳ್ವೆರ ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ ಮುಳಿದಾಕೆ ತಂದ ಮಾಲಾ ಮಳಯಜ ತಾಂಬೂಲಜಾಲಮಂ ಕೆದಣಿ ಕುರು ಛಳನೆದು ಬೆನ್ನ ಮಿಳಿಯಿಂ ಕಳಹಂಸೆಗೆ ಗಿಡಗನೆ ಆಗಿದಂತಿರೆ ಬಡಿದಂ ೩೯ ೪೫ ೪೬ ೪೭ ೪೮ ೪೯ ಆತನೊಡನಾಟದಲ್ಲಿಯೇ ಕಾಲ ಕಳೆಯತೊಡಗಿದಳು. ೪೫. ಸೌಂದರ್ಯದ ಅಧಿದೇವತೆಯಂತಿದ್ದ ಅಮೃತಮತಿಗೆ ಆ ವಿಕಟಾಂಗನ ಒಡನಾಟದಲ್ಲಿಯೂ ಕೂಟದಲ್ಲಿಯೂ ಬಹಳ ಸವಿಯೇ ಕಂಡಿತು. ಬೇವನ್ನು ಮೆಚ್ಚಿದ ಕಾಗೆಗೆ ಮಾವು ಮೆಚ್ಚಿಗೆಯಾದೀತೆ ? ಅಮೃತಮತಿಗೂ ಯಶೋಧರನಲ್ಲಿ ಮನಸ್ಸು ಮುರುಟಿ ಹೋಯಿತು. ೪೬. ತನ್ನ ಪತಿಯನ್ನು ನೋಡುವ ಹೊತ್ತಿಗೆ, ಅವನೊಡನೆ ಮಾತಾಡುವ ಸಂದರ್ಭದಲ್ಲಿ, ಮುದ್ದಿಸುವ ಸನ್ನಿವೇಶದಲ್ಲಿ ಅಮೃತಮತಿ ಮೊದಲಿನಂತಿಲ್ಲವಾದಳು. ಇದನ್ನು ಗಮನಿಸಿದ ಯಶೋಧರ, ಚೆನ್ನಾಗಿ ಪರಾಂಬರಿಸಬೇಕೆಂಬೆಣಿಕೆ ಅವನ ಮನಸ್ಸಿನಲ್ಲಿ ಮೊಳೆಯಿತು. ೪೭. ಅವನು ಒಮ್ಮೆ ಹಾಸಿಗೆಯಲ್ಲಿ ಮೆಯರೆದು ನಿದ್ರಿಸಿದಂತೆ ನಟಿಸಿದನು. ಆಗ ಅಮೃತಮತಿಯು ನೈದಿಲೆಯೊಳಗೆ ಸಿಕ್ಕಿಬಿದ್ದ ಹೆಣ್ಣು ತುಂಬಿ, ಹಗಲು ಕಳೆದಾಗ ಅದರೊಳಗಿಂದ ಹೊರಹೊರಡುವಂತೆ ಪತಿಯ ಬಾಹು ಬಂಧನದಿಂದ ಬಿಡಿಸಿಕೊಂಡು ತನ್ನ ಜಾರನಲ್ಲಿಗೆ ಹೋದಳು. ೪೮. ಯಶೋಧರನೂ ಎದ್ದನು. ದೋಷವನ್ನು ಹಿಂಬಾಲಿಸಿಕೊಂಡು ಹೋಗುವ ದಂಡನೆಯಂತೆ ಕೈಯಲ್ಲಿ ಹಿರಿದ ಖಡ್ಗವನ್ನು ಹಿಡಿದುಕೊಂಡು, ಅವನು ಯಾರ ಕಣ್ಣಿಗೂ ಬೀಳದಂತೆ ಅವಳ ಹಿಂದೆಯೇ ಹೋದನು. ಅತ್ತ ಆ ಅಲ್ಪಮನುಷ್ಯನು ರಾಣಿ ಸಕಾಲಕ್ಕೆ ಅವನ ಬಳಿ ಬಾರದುದಕ್ಕೆ ಸಿಟ್ಟಿನಿಂದ ಉರಿಯುತ್ತಿದ್ದನು. ೪೯. ಆಕೆ ತಂದ ಹೂ ಗಂಧ ತಾಂಬೂಲ ಮುಂತಾದುವುಗಳನ್ನೆಲ್ಲ ಚೆಲ್ಲಿ ಕೆದರಿದನು, ಅವಳ ಕೂದಲನ್ನು ಹಿಡಿದೆಳೆದು, ಗಿಡುಗನು Page #45 -------------------------------------------------------------------------- ________________ ೪೦ ಯಶೋಧರ ಚರಿತೆ ತೋರಮುಡಿವಿಡಿದು ಕುಡಿಯಂ ನಾರಂ ತದೆದಂತೆ ತದೆದು ಬೀಟೆಯ ಕಾಲಿಂ ಬಾರೇತೆ ಬದಗನೊದೆದೊಡೆ ಕೇರೆ ಪೊರಳ್ಳಂತೆ ಕಾಲಮೇಲೆ ಪೊರಟ್ಟಲ್ ತಡವಾದುದುಂಟು ನಲ್ಲನೆ ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ ತೊಡೆಯೇಜೆಸಿ ಕೇಳಿಕೆಯಾ ದೊಡೆ ನೋಡುತ್ತಿರ್ದೆನುಂತೆ ನಿಲಲುವೆನೇ ಕಿವಿಸವಿ ದನಿ ಕಣವಿ ರೂ ಪವಧರಿಸೆಲೆ ಗಜವೆಡಂಗ ನೀನುಚಿದೊಡೆ ಸಾ ವವಳೆನಗೆ ಮಿಕ್ಕ ಗಂಡರ್ ಸವಸೋದರರೆಂದು ತಿಳಿಸಿದ ನಂಬುಗೆಯಂ ಆಗಳ್ ಬಾಳ್ ನಿಮಿರ್ದುದು ತೊಲ್ ತೂಗಿದುದು ಮನಂ ಕನತ್ಕುದಿರ್ವರುಮನೆರ ಅತ್ಯಾಗ ಮಾಡಲ್ ಕೃತಿ ಬಂ ದಾಗಳ್ ಮಾಣೆಂಬ ತೆಲಿದೆ ಪೇಸಿದನರಸಂ ಪರಪರನಲ್ಲದೀ ಪುಟ ಕರನಳೆವುದೆ ಮದ್ದುಜಾಸಿಯಿದು ಕೈಯಿಕ್ಕಲ್ ಕರಿ ಕರಿಗಲ್ಲದಿಯಿಂಸೆಗೆ | ಪರಿವುದೆ ಹರಿ ಕರಿಯನಲ್ಲದಿವುದೆ ನರಿಯಂ ೫೪ ರಾಜಹಂಸದ ಮೇಲೆರಗುವಂತೆ, ಅವಳ ಬೆನ್ನಿಗೆ ಚರ್ಮದ ಬಾರಿನಿಂದ ಬಲವಾಗಿ ಬಾರಿಸಿದನು. ೫೦. ಅವಳ ತುಂಬುಗೂದಲ ತುರುಬು ಹಿಡಿದು, ಕುಡಿಯನು ನಾರನ್ನು ಜಜ್ಜುವಂತೆ ಅವಳನ್ನು ಜಜ್ಜಿದನು. ಇಷ್ಟೂ ಸಾಲದೆಂಬಂತೆ ಅವಳ ಚರ್ಮವು ಏಳುವಂತೆ ಬಿರಿದ ಕಾಲಿನಿಂದ ಒದ್ದನು. ಆದರೂ ಅವಳು ಅವನ ಕಾಲ ಮೇಲೆ ಬಿದ್ದು ಕೇರೆ ಹೊರಳುವಂತೆ ಹೊರಳಿದಳು. ೫೧. “ನಲ್ಲನೆ, ತಡವಾದುದು ನಿಜ, ಇಷ್ಟಬಂದಂತೆ ಬಡಿ. ಆದರೆ ನನ್ನ ಮೇಲೆ ಕೋಪಿಸುವುದು ಮಾತ್ರ ಬೇಡ. ನಾನು ನಿಷ್ಕಾರಣವಾಗಿ ತಡೆದು ನಿಂತೆನೇ ? ಅರಸನೆಂಬ ಆ ಪಾಪಿ ನನ್ನನ್ನು ತೊಡೆಯೇರಿಸಿಕೊಂಡು ಶೃಂಗಾರಚೇಷ್ಟೆಗೆ ತೊಡಗಿದ. ನಾನು ನೋಡುತ್ತ ಸುಮ್ಮನಿರಬೇಕಾಯಿತು. ೫೨. ಗಜವೆಡಂಗ, ನನಗೆ ನಿನ್ನ ದನಿ ಕಿವಿಗೆ ಸವಿ, ನಿನ್ನ ರೂಪ ನನ್ನ ಕಣ್ಣಿಗೆ ಸವಿ, ನೀನೂ ನನ್ನ ಕೈ ಬಿಟ್ಟರೆ ನನಗೆ ಮರಣವೇ ಶರಣು ! ಬೇರೆ ಗಂಡಸರೆಲ್ಲ, ನನಗೆ ಸಹೋದರಸಮಾನರೇ ಸರಿ, ನಂಬು” ಎಂದು ಹಲವು ರೀತಿಯಲ್ಲಿ ಅವನಿಗೆ ವಿಶ್ವಾಸವುಂಟಾಗುವಂತೆ ಸಮಾಧಾನ ಹೇಳಿದಳು. ೫೩. ಒಡನೆಯೇ ಅರಸನ ಕೈಯ ಖಡ್ಗವು ಮೇಲೆದ್ದಿತು : ತೋಳು ತೂಗಿತು. ಮನಸ್ಸು ಕಿಡಿ ಕಾರಿತು. ಒಂದೆ ಪೆಟ್ಟಿಗೆ ಇಬ್ಬರನ್ನೂ ಇಬ್ಬಾಗ ಮಾಡುವ ಎಣಿಕೆ ಮಸಗಿತು. ಅಷ್ಟರಲ್ಲಿ ಫಕ್ಕನೆ ಸಂಯಮ ತಲೆದೋರಿ, “ಛೇ! ಬೇಡ!” ಎಂದು ಅರಸನ ಮನಸ್ಸು ಹೇಸಿಕೊಂಡಿತು. ೫೪. “ನನ್ನ ತೋಳಿನ ಈ ಕರವಾಲವು ವೈರಿನರೇಂದ್ರರನ್ನು ಇರಿಯಬೇಕೇ ಹೊರತು, ಈ ಕ್ಷುದ್ರರನ್ನು ಇರಿಯಲಾಗದು. ಆನೆ ಆನೆಯನ್ನೆದುರಿಸ Page #46 -------------------------------------------------------------------------- ________________ ಎರಡನೆಯ ಅವತಾರ ಅಸಿಲತೆ ರಣರೌತಮದೀ ಮಸಿಮುಸುಡನ ಜೀವಕಪ್ಪಿನಂ ಕಂದಿದೊಡೆ ಸೈಸೆಯನಡರ್ದನ್ನ ಕೀರ್ತಿ ಪ್ರಸರದ ಕುಡಿ ಕಯ್ಕೆಸೊರೆಯ ಕುಡಿಯವೊಲಕ್ಕುಂ ಅಳಿಪುಡೆ ನೋಡಿದೊಡ ನಟಿವುದೆ ಪೆಣ್ ತಪ್ಪಿ ನಡೆಯೆ ಚಿಃ ಕಿಸುಗುಳಮೆಂ ದುಡಿವುದೆ ಗೆಲ್ಲಂಗೊಂಡಾ ಪುಟು ಪುಟ್ಟುವ ನರಕದೊಳಗೆ ಬೀಟ್ಟಿನ ಚದುರಂ ೫೬ ಎಂದು ನೆನೆದಿಕೆಯಲೊಲ್ಲದೆ ಬಂದರಸಂ ಮುನ್ನಿನಂತೆ ಪವಡಿಸೆ ತಾನುಂ ಬಂದು ಮದರಸನೋಜಿಗಿದ ನಂದೊಯ್ಯನೆ ಸಾರ್ದು ಪೆಗೆ ಪಟ್ಟಿರ್ಪಾಗಳ ೫೭ ೫೮ ಮುಟ್ಟಿದೊಡೆ ಸುಖದ ಸೋಂಕಂ ಪುಟ್ಟಿಸುವಾ ವಾಮೆಯಾದೊಡೆ ಮುನ್ನಂ ಬಟ್ಟಿದುವೆನಿಸುವ ಮೊಲೆ ನಿ ರ್ವೆಟ್ಟಿದುವಾದುವು ನೃಪಂಗೆ ಬೆನ್ನೋಂಕಲೊಡಂ ಬೇಕಲ್ಲದೆ ಇರುವೆಯನ್ನೆದುರಿಸಬಹುದೆ? ಕೇಸರಿ ಇರಿಯುವುದು ನರಿಯನ್ನಲ್ಲ; ಕರಿಯನ್ನು! ೫೫. ರಣರಂಗದಲ್ಲಿ ವೀರಪುಂಗವರ ರಕ್ತದಲ್ಲಿ ಮಿಂದು ಮಡಿಯಾದ ಈ ಅಸಿಲತೆ ಈ ಕರಿಮುಸುಡನ ಕೊಳಕನ ಜೀವದ ಕೆಸರಿನಿಂದ ಕಾಂತಿ ಕಳೆದು ಕೊಳ್ಳಬೇಕೆ ? ಹಾಗೆ ಆದರೆ ಎಂಟು ದಿಕ್ಕುಗಳ ತುದಿಯವರೆಗೂ ಹಬ್ಬಿದ ನನ್ನ ಕೀರ್ತಿಯ ಕುಡಿಯು ಕಹಿಸೋರೆಯ ಕುಡಿಯಂತಾಗದೆ ? ೫೬. ಅವಳಿಗೆ ಅನ್ಯನಲ್ಲಿ ಆಸೆಯುಂಟಾಗಿದೆಯೆಂಬುದನ್ನು ನಾನು ಈಗ ಕಂಡಿದ್ದೇನೆ. ಆದ ಕಾರಣ ಅವಳನ್ನು ಕತ್ತರಿಸಿ ಬಿಸಾಡಿದರೆ ಅವಳ ಆಸೆ ಕೊನೆಗೊಳ್ಳುವುದೇ ? ಹೆಣ್ಣು ತಪ್ಪಿ ನಡೆದಾಗ ಅವಳನ್ನು “ಚಿಃ ! ಹೊಲಸು!” ಎಂದು ಹಾಗೆಯೇ ಬಿಟ್ಟುಬಿಡುವುದೆ ? ಹಾಗೆ ಗೆಲುವು ಪಡೆದು ಹುಳು ಹುಟ್ಟುವ ನರಕದಲ್ಲಿ ಬೀಳಬೇಕಾದೀತು. ಇದು ಚಾತುರ್ಯವಲ್ಲ!” ೫೭. ಹೀಗೆ ಆಲೋಚಿಸಿ ಖಡ್ಗಪ್ರಹಾರದ ಯೋಚನೆ ಸಲ್ಲದೆಂದೇ ನಿರ್ಧರಿಸಿ ಅವನು ಅಲ್ಲಿ ನಿಲ್ಲದೆ ಅರಮನೆಗೆ ಮರಳಿ ಮೊದಲಿನಂತೆ ಹಾಸಿಗೆಯಲ್ಲಿ ಬಿದ್ದು ಕೊಂಡನು. ಸ್ವಲ್ಪ ಹೊತ್ತಿನಲ್ಲಿ ಅಮೃತಮತಿಯೂ ಹಿಂತಿರುಗಿದಳು. ರಾಜನು ಗಾಢನಿದ್ರೆಯಲ್ಲಿದ್ದಾನೆಂದೇ ಭಾವಿಸಿ, ಮೆಲ್ಲನೆ ಸಮೀಪಿಸಿ ಮಲಗಿದಳು. ೫೮. ಅವನ ಬೆನ್ನಿಗೆ ಅವಳ ಸ್ಪರ್ಶವುಂಟಾಯಿತು. ಮೊದಲು ಅವಳ ಸ್ಪರ್ಶಮಾತ್ರದಿಂದಲೇ ಅವನು ಸುಖವನ್ನನುಭವಿಸುತ್ತಿದನು. ಈಗ ವಾಮೆಯು ಪ್ರತಿಕೂಲೆಯಾಗಲು ಮೊದಲು ವೃತ್ತಪೀನವಾಗಿದ್ದ ಸ್ತನಗಳು ಈಗ ಅವನಿಗೆ ಜೋಲುವ ಮೊಲೆಗಳೆನ್ನಿಸಿದುವು. Page #47 -------------------------------------------------------------------------- ________________ ಯಶೋಧರ ಚರಿತೆ ಬದಗುಳಿಗನ ತೋಳುಟ್ಟಿದ ಸುದತಿಯೊಳಿಂಬಾಗದಂತೆ ಕೆಟ್ಟುದು ಪುತಿ ಮು ಟ್ಟಿದ ದುಗ್ಗದಂತೆ ನೀರ್ಮು ಟ್ಟಿದ ಜೇನೆಯ್ಯಂತೆ ಪತಿಗೆ ಶಯಾತಳದೊಳ್ ಆ ಗಂಡನನಪ್ಪಿದ ತೋಳ್ ಪೊಗಂಡನನಪುವಂತೆ ಮಾಡಿದ ಬಿದಿಯಂ ಮೂಗಂ ಕೊಟ್ಟಿಗೆಯೊಳ್ ಪೋಗೊರಸದೆ ಕಂಡೆನಾದೊಡೇಂ ಬಿಟ್ಟವೆನೇ ಎನೆ ಕೇಳು ಮಾರಿದತ್ತಾ ವನಿಪನವಂಗಭಯರುಚಿ ಬಿಕ್ಕಿಂತೆಂದಂ ಮನಸಿಜನ ಮಾಯೆ ವಿಧಿವಿಲ್ಲ ಸನದ ನೆರಂಬಡೆಯೆ ಕೊಂದು ಕೂಗದೆ ನರರಂ ಪದವಿಯ ರೂಪಿನ ಸೊಬಗಿನ ಮದಮಂ ಮಾಡುವರ ಮೂಗಿನೊಳ್ ಪಾತ್ರಮನಾ ಡದೆ ಮಾಣದನಂಗನ ಕೃತಿ ಸುದತಿಯರ ವಿಕಾರವೆಂಬ ವಿದ್ಯಾಬಲದಿಂ ಆ ರಾಜಕುಮಾರ ಬಟ್ ಕಾರೂಪಿನ ಪೆಂಡಿರಿಂತು ಕಟಿಪಾದೊಡೆ ಚಿಃ ಕೂರಿಸುವ ಕೂರ್ಪ ಮಾತಂ | ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂದಂ ೬೩ ೫೯. ಹಾಲಿಗೆ ಹುಳಿ ತಾಗಿದರೆ, ಜೇನಿಗೆ ನೀರು ಬೆರೆತರೆ ಸವಿಯುಳಿಯುತ್ತದೆಯೆ ? ಯಶೋಧರನಿಗೂ ಹಾಸಿಗೆಯಲ್ಲಿದ್ದಾಗ, ಅತ್ಯಂತ ಕುತ್ತಿತನೊಬ್ಬನ ತೋಳು ತಗುಲಿದ ತನ್ನ ಪತ್ನಿಯಲ್ಲಿ ಒಂದಿಷ್ಟೂ ಸವಿಯುಳಿಯದೆ ಹೋಯಿತು. ೬೦. ಇಷ್ಟು ಹೇಳು ತ್ತಿದ್ದಂತೆಯೇ ತನ್ಮಯತೆಯಿಂದ ಕೇಳುತ್ತಿದ್ದ ಮಾರಿದತ್ತನು ಉದ್ರಿಕ್ತನಾದನು. ಅಂತಹ ಗಂಡನನ್ನು ಅಪ್ಪಿಕೊಂಡಿದ್ದ ತೋಳು ಪೋಗಂಡ (ವಿಕೃತ ಮನುಷ್ಯನನ್ನು ಅಪ್ಪುವಂತೆ ಮಾಡಿದುದು ಆ ವಿಧಿ. ಅದರ ಮೂಗನ್ನು ಕೊಯ್ದು ಇಟ್ಟಿಗೆಯಲ್ಲಿ ಹಾಕಿ ತಿಕ್ಕದೆ ಬಿಟ್ಟೇನೆ” ಎಂದು ಉದ್ಗರಿಸಿದನು. ೬೧. ಇದನ್ನು ಕೇಳಿ, ಅಭಯರುಚಿ ಕುಮಾರನು ಅವನಿಗೆ ವಿಧಿಯ ಸ್ವಭಾವವನ್ನು ವಿವರಿಸಿದನು. “ವಿಧಿವಿಲಾಸದ ನೆರವು ದೊರೆತಾಗ ಮನಸಿಜನ ಮಾಯೆ ಮನುಷ್ಯರನ್ನು ಸರ್ವನಾಶಗೊಳಿಸಿ ಜಯಘೋಷವನ್ನು ಮಾಡುತ್ತದೆ. ೬೨. ಈ ಆಟಕ್ಕೆ ದೊರೆಯುವ ರಂಗಸ್ಥಳವೆಂದರೆ ಅಧಿಕಾರಮದ, ರೂಪಮದ ಮತ್ತು ಸೌಭಾಗ್ಯ ಮದವುಳ್ಳವರ ಮೂಗು. ಈ ರೀತಿ ದುರಭಿಮಾನ ಪಡುವವರ ಕಣ್ಣ ಎದುರಿನಲ್ಲಿಯೇ ಕಾಮನು ಕಾಮಿನಿಯರ ಮುಖಾಂತರ ಬಗೆ ಬಗೆಯ ನಾಟಕಗಳನ್ನು ಆಡಿಸುತ್ತಾನೆ”೩- ೬೩. ಮಾರಿದತ್ತನಿಗೆ ಮನಸ್ಸು ತಡೆಯಲಿಲ್ಲ. “ಅಂತಹ ರೂಪವತಿಯಾದ ಪತ್ನಿಯೂ ಹಾಗೆ ತ್ಯಾಜ್ಯಳಾದಳೆಂದರೆ, ಪತ್ನಿಯನ್ನು ಪ್ರೀತಿಸುವ, ಅಥವಾ ಅವರಿಂದ ಪ್ರೀತಿಯನ್ನು ಪಡೆಯುವ ಮಾತು ಮಾರಿಗೇ ತೃಪ್ತಿ ! ಅಂಥವರ ಐಶ್ವರ್ಯವನ್ನೆಲ್ಲ ರಾಶಿ ಮಾಡಿ ಬೆಂಕಿಗೆ ಹಾಕಬೇಕು! ಆಃ!* Page #48 -------------------------------------------------------------------------- ________________ ಎರಡನೆಯ ಅವತಾರ ಒಲಿಸಿದ ಪೆಣ್ ಪುರೊಳ್ ಸಂ ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾ ಸಲಿಸಿ ಸಲೆ ನೆರೆವ ಮುಕ್ತಿಯ ನೋಲಿಸುವೆನಿನೊಲ್ಲೆನುಳೆದ ಪೆಂಡಿರ ನಣಂ ಎಂದಿಂತು ಬಹುವಿಕಲ್ಪದ ದಂದುಗದೊಳೆ ಬೆಳಗುಮಾಡಿ ಮೆಯುರಿದೆರ್ದಂ ಬಂದು ತೊಡೆವೊಯ್ದು ಬೋಧಿಸಿ ದಂದದಿನೆಸಗಿತ್ತು ಸುಪ್ರಭಾತಾದ್ಯಂ ಕೃತನಿತ್ಯದಾನನಾವೀಕ್ಷಿತಚ್ಛತನಾಷ್ಟ್ರ ಕಪಿಳನೊಯ್ಯನೆ ಸಾರ್ದ೦ ಕತಿಪಯ ಪರಿಚಿತಪರಿಜನ ಚತುರವಚಃಪ್ರಚಯರುಚಿಯನರಸಿಯನರಸಂ ಲಂಪಣನವೊಲೇನಾನುಮ ಲಂಪಿನ ನಗೆನುಡಿಯ ನೆವದೆ ನೆಯ್ದಿಲ ಪೂವಿಂ ದಂ ಪೊಯ್ಕೆ ಮೂರ್ಛವೋದಟ್ ಸಂಪಗೆಯಲರ್ಗ೦ಪು ಪೊಯ್ದು ತುಂಬಿಯ ತೆದಿಂ ಅಕಟಕಟ ನೋಂದಳೆತಿರೆ | ಸುಕುಮಾರಿಯನೆನುತುಮಿನಿತು ಕೊಂಕಿಂ ನುಡಿದಂ ಪ್ರಕುಪಿತಚಿತ್ತಂ ಭೂ ನಾ ಯಕನೇನಣಕಕ್ಕೆ ಸವಣನುಂ ಸೈರಿಪನೇ ೬೪. ನಾನು ಒಲಿಸಿಕೊಂಡ ಹೆಂಡತಿ ಚಂಚಲೆಯಾಗಿ ಅನ್ಯಾಸಕ್ತಳಾದಳೆಂದಮೇಲೆ, ಏನು ಸುಖ? ಇದರ ಬದಲಾಗಿ ಮುಕ್ತಿಯನ್ನೇ ಒಲಿಸಿಕೊಂಡರೆ ನನಗೆ ಪರಮಸುಖದ ಸಂಪತ್ತೂ ದೊರೆಯುತ್ತದೆ ; ಆ ಮುಕ್ತಿಯ ಒಲವೂ ನನ್ನ ಮೇಲೆ ಸ್ಥಿರವಾಗಿರುತ್ತದೆ. ಹೀಗೆಂದಾದ ಮೇಲೆ ಉಳಿದ ಸ್ತ್ರೀಯರ ಯಾವ ಬಗೆಯ ನಂಟೂ ನನಗೆ ಬೇಕಾಗಿಲ್ಲ”. ೬೫. ಎಂದೆಲ್ಲ ಹಲವು ಬಗೆಯಾಗಿ ವಿಚಾರ ಮಾಡಿದ ಯಶೋಧರನು ಅದರಲ್ಲಿ ತೊಳಲಾಡಿ ಕಣ್ಣಲ್ಲೆ ಬೆಳಗುಮಾಡಿದನು. ಸುಪ್ರಭಾತದ ಮಂಗಲವಾದ್ಯಗಳು ಮೊಳಗಿದವು. ಆ ಧ್ವನಿ ಅವನನ್ನು ತೊಡೆತಟ್ಟಿ ಎಬ್ಬಿಸುವಂತಿತ್ತು. ೬೬. ಅವನು ಮೆಯುರಿದು ಎದ್ದನು. ನಿತ್ಯದಂತೆ ದಾನವನ್ನಿತ್ತನು. ತುಪ್ಪದಲ್ಲಿ ತನ್ನ ಮುಖವನ್ನು ನೋಡಿಕೊಂಡನು. ಕಪಿಲೆ ಹಸುವನ್ನು ಮೆಯುಟ್ಟಿ ಮುಂಬರಿದನು ; ರಾಣಿಯ ಸಮೀಪವನ್ನು ಸೇರಿದನು. ಅವಳು ಕೆಲವು ಮಂದಿ ಪರಿಚಿತ ಸೇವಕ ಜನರ ಚತುರವಚನಗಳನ್ನು ಕೇಳುತ್ತಾ ಮೆಚ್ಚುಗೆಯನ್ನು - ಪ್ರಕಟಿಸುತ್ತಿದ್ದಳು. ೬೭. ಯಶೋಧರನು ಕಾಮಾಸಕ್ತನೆನ್ನುವಂತೆ ಬಳಿಸಾರಿ ಏನೇನೋ ಶೃಂಗಾರದ ಚಾಟುವಚನಗಳನ್ನಾಡಿ, ಅದೇ ನೆವದಿಂದ ಅವಳನ್ನು ನೆಯ್ದಲ ಹೂವಿನಿಂದ ಹೊಡೆದನು. ಒಡನೆಯೇ ಅಮೃತಮತಿ ಮೂರ್ಛಾಕ್ರಾಂತೆಯಾದಳು. ಸಂಪಗೆಯ ಹೂವಿನ ಕಂಪು ತಾಗಿತೊಡನೆಯೆ ತುಂಬಿ ಮೆಯರೆಯುತ್ತದಷ್ಟೆ. ಅವಳ ನಟನೆಯಿಂದ ಯಶೋಧರನು ರೋಷಾವಿಷ್ಟನಾದನು. ೬೮, ಅದನ್ನು ವಕ್ರವಾರದ ಮಾತಿನ ರೂಪದಲ್ಲಿ ಕಾಣಿಸಿದನು : “ಅಯ್ಯಯ್ಯೋ! ಬಹಳ ಬಹಳ ನೋವಾಯಿತು ! Page #49 -------------------------------------------------------------------------- ________________ ಯಶೋಧರ ಚರಿತೆ ೭೧ ದೈವದಿನೆಂತಕ್ಕಂದಿನ ಸಾವೊಸರಿಸಿದುದು ಕರ್ಣಭೂಷಾವಳಿ ಭೂ ಪಾವಳಿಯಾಗದೆ ಸೆಳೆದೊಡೆ ಸಾವಲ್ಲಿಗೆ ಕಯ್ಯುವಾಯ್ತು ನೆಲ ಕುಸುಮಂ ಪೋದಿರುಳಿನ ಕಿಡನುಂ ಮೂದಲೆಯಾಗಿಂತು ನುಡಿದೊಡದುದನಚಿದಾ ಪಾದರಿ ಬೇಸತ್ತವೊಲಿರೆ ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರ ಮಗನ ಮೊಗಮಂ ನೀಡುಂ ನೋಡುತ್ತುಮುಳುರ್ಕೆಯಿಂ ದುಗುವ ಮೊಲೆವಾಲ್ ಪುಣ್ಯಸ್ಮಾನಾಂಬುವಾಗೆ ಪದಾಬ್ಬದಿಂ ನೆಗಪಿ ಪಲವಪ್ಪಾಶೀರ್ವಾದಂಗಳಿಂದಮರ್ದಪ್ಪಿ ಜೊ ಲುಗುವ ಕುರುಳಂ ತಿರ್ದುತ್ತುಮಿಂತೆಂದಳಂದಿನ ಭಂಗಿಯಂ ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ಯಂ ಪೇಯ್ದು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ ೭೨ ಈಕೆ ಅತ್ಯಂತ ಸುಕುಮಾರಿ, ಎತ್ತಿ ಉಪಚರಿಸಿರಿ!” ಎಂದು ಕೊಂಕಾಗಿ ನುಡಿದನು. ಅಣಕಾಟವನ್ನು ಸವಣನಾದರೂ ಸಹಿಸಿಕೊಂಡಾನೇ! ೬೯. ದೈವಾನುಗ್ರಹದಿಂದ ಇಂದು ಬರಬಹುದಾಗಿದ್ದ ಮರಣವು ತೊಲಗಿ ಹೋಯಿತು ! ಕಿವಿಯ ಆಭರಣವಾದ ನೆಯ್ದಿಲ ಹೂ ಇಂದು ಕರ್ಣಾಭರಣವಾಗದೆ, ಸಾಯುವ ಸಂದರ್ಭವು ಸನ್ನಿಹಿತವಾದ ಕಾರಣ, ಸೆಳೆದ ಒಂದು ಆಯುಧದಂತಾಯಿತಲ್ಲ ! ೭೦. ಹಿಂದಣ ರಾತ್ರಿ ಸಂಭವಿಸಿದ ಹೊಲಸಿನ ಕೆಲಸವನ್ನು ಯಶೋಧರನು ಈ ರೀತಿ ಮೂದಲೆಯ ಮಾತಾಗಿ ತಿಳಿಸಿದನು. ಜಾರೆಯಾದ ಅಮೃತಮತಿಗೆ ಇದು ಗೊತ್ತಾಗದಿರಲಿಲ್ಲ. ಆಗ ಅವಳು ಒಮ್ಮೆ ಬೇಸತ್ತಳು. ಚೇತರಿಸಿಕೊಳ್ಳುವಾಗ ಯಶೋಧರನು ಅಲ್ಲಿರಲಿಲ್ಲ. ಅವನು ಮನಸ್ಸು ಕದಡಿದುದರಿಂದ ಅಲ್ಲಿ ನಿಲ್ಲಲಾರದೆ ತಾಯಿಯ ಬಳಿಗೆ ತೆರಳಿದ್ದನು. ೭೧. ಮಗನು ಬಂದಾಗ ಚಂದ್ರಮತಿ ಅವನ ಮುಖವನ್ನೇ ಗಮನವಿಟ್ಟು ನೋಡಿದಳು. ಪುತ್ರವಾತ್ಸಲ್ಯದ ಆಧಿಕ್ಯದಿಂದ ಅವಳ ಮೊಲೆಹಾಲು ತಾನಾಗಿಯೆ ಉಕ್ಕಿ ಹರಿಯಿತು. ಅದುವೇ ಯಶೋಧರನಿಗೆ ಪವಿತ್ರ ಸ್ನಾನಜಲ ವಾಯಿತು. ತಾಯಿಯ ಪಾದಗಳಿಗೆರಗಿದ ಮಗನನ್ನು ಮೇಲಕ್ಕೆತ್ತಿ ತಾಯಿ ಚಂದ್ರಮತಿ ಹಲವು ರೀತಿಯಲ್ಲಿ ಅವನನ್ನು ಹರಸಿದಳು ; ಪ್ರೀತಿಯಿಂದ ಅಪ್ಪಿಕೊಂಡಳು. ಅತ್ತಿತ್ತ ಕೆದರಿ ಹೋದ ಮುಂಗುರುಳನ್ನು ಹಿಂದಕ್ಕೆ ನೇವರಿಸುತ್ತ ಅವಳು ಮಗನ ಅಂದಿನ ರೀತಿಯನ್ನು ಆಡಿ ತೋರಿಸಿದಳು. ೭೨. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿಕುಮಾರನು ಸರಿಯಾದ (ಪುಣ್ಯದ) ವಿಷಯವನ್ನು ಹೇಳಿ, ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭುಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ. Page #50 -------------------------------------------------------------------------- ________________ ಮೂರನೆಯ ಅವತಾರ ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರವಾಗಿರೆ ತಾಳಿದ ರಾರೊ ಯಶೋಧರನೃಪೇಂದ್ರ ನೀನಲ್ಲದವರ್ ನಿನಗೆ ಶುಭವೆಂದ ವಂದಿಯ ಮನೆಯಂಗಣದೊಳಗೆ ಪಣು ಪರ್ವಿದ ಮಂದಾ ರ ನಮೇರು ಪಾರಿಜಾತದ ಬನದೊಳ್ ಸಿರಿ ಮೆರೆವುದಕ್ಕೆ ವನಕೇಳಿಗಳಂ ಮನಸಿಜ ಕಲ್ಪಲತಾನಂ ದನಮೆನೆ ಬಿಂಕಕ್ಕೆ ಕೊಂಕಿದಬಲಾಜನಮಂ ನನೆಕೊನೆವೋಗಿಸುತಿರ್ಪುದು ಮನುಜ ಮನೋಭವ ಭವದ್ಗೀಳಾಸವಸಂತಂ ಬಳೆಗೋದುದು ಕೀರ್ತಿದಿಶಾ ಕಳಭಂಗಳ ನಿಗವಂಗಳೊಳ್ ರಿಪುಕಾಂತಾ ವಳಿಯೊಳ್ ಭವತಾಪಂ ಬಳೆಗಳೆಲಸ ತಾನದಕ್ಕೆ ಮಚ್ಚರಿಸುವವೋಲ್ ಉದಧಿಪರಿಯಂತಮಿಳೆಯೊಳ ಗೊದವಿದ ನಿನ್ನಾಜ್ಞೆ ಮಣಿಕಿರೀಟಂಗಳನೀ ಅದೆದುರುಳೆ ನೂಂಕಿ ಕುಳ್ಳಿ ರ್ದುದು ನೆತ್ತಿಯ ಮೇಲೆ ಸಕಲಭೋಪಾಲಕರಾ ೧. “ಯಶೋಧರ, ವಿಸ್ತಾರವಾದ ಎದೆಯಲ್ಲಿ ನಿತ್ಯವಸಂತವನ್ನು ನೆಲೆ ಗೊಳಿಸಿ, ಅಲ್ಲಿ ಶ್ರೀವನಿತೆಗೆ ಆಣಿಮುತ್ತಿನ ಹಾರವನ್ನು ಉಯ್ಯಾಲೆಯಾಗಿ ಮಾಡಿ, ಅದರಲ್ಲಿ ಅತ್ತಿತ್ತ ತೊನೆದಾಡುವಂತೆ ಮಾಡುವ ಭೂಪತಿಗಳು ನೀನಲ್ಲದೆ ಇನ್ನಾರಿದ್ದಾರೆ.೪೦ ೨. ನಿನಗೆ ಮಂಗಲಾಶಂಸನ ಮಾಡುತ್ತಿದ್ದಾರೆ ಎಂದಿಗಳು. ಅವರ ಮನೆಯಂಗಳದಲ್ಲಿ ಲಕ್ಷ್ಮಿದೇವಿ ವನಕ್ರೀಡೆಯನ್ನಾಡುತ್ತಾ ಇದ್ದಾಳೆ. ಇದಕ್ಕೆ ಅಲ್ಲಿ ಫಲವತ್ತಾಗಿ ಹಬ್ಬಿ ಬೆಳೆದ ಮಂದಾರ, ನಮೇರು (ಸುರಗಿ) ಪಾರಿಜಾತ ಮುಂತಾದ ಮರಗಳೇ ಒಂದು ತೋಪಾಗಿ ಪರಿಣಮಿಸಿವೆ.೪೧ ೩. ಮನುಷ್ಯರಲ್ಲಿ ನೀನೇ ಮನೋಭ ವನಾಗಿದ್ದೀಯೆ ಕಾಮನ ಕಲ್ಪವಲ್ಲಿವಿತಾನದ ನಂದನದಂತಿರುವ ಅಬಲಾಜನರು, ನಿನ್ನ ವಿಲಾಸವಸಂತದಲ್ಲಿ, ಬೆಡಗಿನ ಬಿಂಕದಿಂದ ಬಾಗಿಕೊಂಡಿದ್ದು, ನನೆಕೊನೆವೋಗು ತ್ತಿದ್ದಾರೆ.೪೨ ೪. ನಿನ್ನ ಪ್ರತಾಪ ಶತ್ರುಪತ್ನಿಯರ ಕೈಗಳಲ್ಲಿರುವ ಬಳೆಗಳನ್ನು ಕಂಡು ಅಸೂಯೆಯಿಂದ ಅವುಗಳನ್ನು ಕಳಚಿ, ಕೀರ್ತಿದಿಶಾಕಳಭಗಳ ದಾಡೆಗಳಿಗೆ ಆ ಬಳೆಗಳನ್ನು ತೊಡಿಸುತ್ತಾ ಇದೆ.೪೩ ೫. ನಿನ್ನ ಆಜ್ಞೆ ಕಡಲತಡಿಯವರೆಗೂ ವ್ಯಾಪಿಸಿದೆ. ಅಷ್ಟೇ ಅಲ್ಲ, ಎಲ್ಲ ಭೂಪಾಲಕರ ರತ್ನಕಿರೀಟಗಳನ್ನೆಲ್ಲ ಸೆಳೆದು, ತುಳಿದು ಉರುಳಿಸಿ, ತಳ್ಳಿ ಅವರ ನೆತ್ತಿಯ ಮೇಲೆಯೇ ಕುಳಿತುಕೊಂಡಿದೆ. Page #51 -------------------------------------------------------------------------- ________________ ೪೬ ಕೊಜತೆ ನಿನಗಿಲ್ಲದೇಕೆಂ ದತಿಯಂ ನೀರೋಡಿ ನಿನ್ನ ತನುವಿನ ಬಣ್ಣಂ ಬಲುಗೊಳದವೊಲಾಯ್ತಕ್ಷಿಸಿ ಮಡುಗಿದುದು ನೀರ ಮೀಸ್ಟೋಲಿಂದೆನ್ನ ಮನಂ ಮಂದಸ್ಮಿತ ವರ ಕೌಮುದಿ ನಿಂದುದು ಮೃಗನಾಭಿ ತಿಲಕಲಕ್ಷ ದ ಪೊಳಪಿ ಇಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲವದನಂ ಎಂದು ಬೆಸಗೊಂಡ ತಾಯ್ಕೆ ಮ ನಂದೋದ ನವದಿನರಸನಿಂತುಸಿರ್ದ೦ ಸುಮ್ ಕಂದಿಸಿದಧರಕ್ಕೆ ಸುಧಾ ಬಿಂದುಗಳಂ ತಳೆಯೆ ದಂತಕಾಂತಿಪ್ರಸರಂ ದೇವಿಯರ ಪರಕೆಯಿಂದನ ಗಾವುದeಳ್ ಕೊಂತೆಯಿಲ್ಲ ಪೋದಿರುಳೊಳ್ ಪೊಂ ದಾವರೆಗಳದಂಚೆ ಕ ಲಾವರೆಗೊಳದೊಳಗೆ ನಲಿವ ಕನಸ ಕಂಡಂ ಗೋದಾಮಗಂಡ ನವಿಲಂ ತಾದುದು ಕಾರ್ಗಂಡ ಹಂಸನವೊಲಾದುದಲ‌ ವೋದ ಲತೆಗಂಡ ವಿರಹಿವೊ ಲಾದುದು ದುರ್ನಯದ ಕಾಣೆಗೆನ್ನಯ ಚಿತ್ತು ಯಶೋಧರ ಚರಿತೆ ೬ 2 లా € 00 ೬. ನಿನಗೆ ಯಾವ ಬಗೆಯ ಕೊರತೆಯೂ ಈವರೆಗಿಲ್ಲ. ಆದರೆ ನಿನ್ನ ದೇಹಕಾಂತಿ ನೀರು ಕಳೆದುಕೊಂಡು ಒಣಕೆರೆಯಂತಾಗಿದೆ. ಇದೇಕೆಂದು ನನಗೆ ತಿಳಿಯುವುದಿಲ್ಲ. ನಿನ್ನನ್ನು ನೋಡುವಾಗ, ಇಂದು ನನ್ನ ಮನಸ್ಸು ನೀರಾರಿದ ಕೊಳದ ಮೀನಿನಂತೆ ಮರುಕಕ್ಕೊಳಗಾಗಿದೆ. ೭. ಕಂದ, ತಿಂಗಳ ಬೆಳಕಿನಂತಹ ನಿನ್ನ ಮುಗುಳುನಗೆ ಇಂದು ಇಲ್ಲವಾಗಿದೆ. ಕಸ್ತೂರಿತಿಲಕದ ಗುರುತೇ ಶೋಭಿಸುವುದಿಲ್ಲವೇಕೆ ? ನಿನ್ನ ಮಂಗಲ ಮುಖವು ಹಗಲು ಮೂಡಿದ ಚಂದ್ರನಂತಾಗಿದೆಯಲ್ಲ ! ಇದೇಕೆ, ಮಗು ?” ೮. ಹೀಗೆ ಕೇಳಿದ ತಾಯಿಗೆ ತನ್ನ ಮನಸ್ಸಿನಲ್ಲಿರುವುದನ್ನು ತೋರಿಸದೆ ಬೇರೊಂದು ನೆಪವನ್ನು ಹೀಗೆ ಹೇಳಿದನು. ನಿಟ್ಟುಸಿರಿನಿಂದ ಕಂದಿದ ತುಟಿಗಳಿಗೆ ಹಲ್ಲಿನ ಕಾಂತಿಯು ಅಮೃತದ ಬಿಂದುಗಳನ್ನು ತಳಿಯಿತು. ೯. “ಅಮ್ಮಾ ದೇವಿಯರಾದ ನಿಮ್ಮ ಆಶೀರ್ವಾದಬಲದಿಂದ ನನಗೇನೂ ಕೊರತೆಯಿಲ್ಲ ತಾಯಿ! ಆದರೆ ನಿನ್ನೆ ರಾತ್ರಿ ಒಂದು ವಿಚಿತ್ರವಾದ ಕನಸನ್ನು ಕಂಡೆನಮ್ಮ! ಅದರಲ್ಲಿ ಸ್ವರ್ಣ ವರ್ಣದ ತಾವರೆಗಳ ಕೊಳದಲ್ಲಿ ವಿಹರಿಸುತ್ತಿದ್ದ ಒಂದು ಹಂಸ ಕೊಳಕು ಕೋವಳೆಯ ಕೊಳದಲ್ಲಿ ಸಂತೋಷದಿಂದ ವಿಹರಿಸುವುದನ್ನು ಕಂಡೆ. ೧೦. ಇಂತಹ ಹೊಲಸಿನ ಘಟನೆಯನ್ನು ಕಂಡ ಬಳಿಕ ನನ್ನ ಮನಸ್ಸು ಗೋದಾಮೆಯನ್ನು ಕಂಡ ನವಿಲಿನಂತೆ ಆಯಿತು, ಮಳೆಗಾಲವನ್ನು ಕಂಡ ಹಂಸದಂತೆ ತಳಮಳಿಸಿತು. ಮಾತ್ರವಲ್ಲ, ಹೂಬಿಡದ ಲತೆಗಳನ್ನು ಕಂಡ ವಿರಹಿಯಂತೆ Page #52 -------------------------------------------------------------------------- ________________ ಮೂರನೆಯ ಅವತಾರ ವನಿತೆಯ ಕೇಡಂ ಜನಪತಿ ಕನಸಿನ ನೆವದಿಂದೆ ಮಆಸೆ ತಲ್ಲಣದಿಂ ತಾಮ್ ನೆನೆದಳ್ ಪೊಲ್ಲಮೆಯಂ ವಂ ಚನೆಯೆಲ್ಲಿಯುಮೊನ್ನು ಮಾಡಲಾಳದು ಕಡೆಯೊಳ್ ಅಡಸಿದ ನಲ್ಗಳ ತಪ್ಪಂ ತಡವಿಕ್ಕಿದೊಡೇಲುಭವದ ಕೇಡಡಸುವ ಕಿಮ್ ನುಡಿಯಂ ನುಡಿದ ತಾಯೋಂ ದಡಸಿದೊಡೇವಿಡಸಿತೆಂಬ ನುಡಿ ತಪ್ಪುಗುಮೆ ದೇವ ಕನಸಿದು ಕರಂ ದೋ ಷಾವಹಮಿಳಿಕೆಯ್ಯಲಾಗ ನಿನ್ನಸಿಮುಖದಿಂ ದಾವಣಿಗುಳೆಯಂ ತಲೆದೊಡೆ ದೇವಿ ಶುಭೇತರವಿನಾಶಮಂ ದಯೆಗೆಯುಂ ಮುಂತಣಿವೆ ತಾಯ ವಚನದೊ ಳಂತು ಶುಭೇತರವಿನಾಶಶಬ್ದಮಿಳೇಶಂ ಶಾಂತಂ ಪಾಪಮೆನುತುಂ ಶಾಂತಮನಂ ಪೇಸಿ ಮುಚ್ಚಿಕೊಂಡಂ ಕಿವಿಯಂ ಮೇಗ ಬಗೆವೊಡೆ ವದ್ದೆ ಹಿತ ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಲ್ ಈಗಳೂ ಮೇಯ್ ಆಗಳ್ ಮೇಖ್ ಸಾಗುದುರೆಗೆ ಪುನಡಕಿ ಕೆಡುವನೆ ಚದುರಂ ೧೫ ಸಂತಾಪಗೊಂಡಿತು”೪೭, ೧೧. ಕೈಹಿಡಿದವಳ ದುರ್ವತ್ರನೆಯನ್ನು ನೇರವಾಗಿ ಹೇಳದೆ ಯಶೋಧರನು ಅದಕ್ಕೆ ಕನಸಿನ ರೂಪವನ್ನು ಕೊಟ್ಟು ಹೇಳಿದನು. ಅದನ್ನು ಕೇಳಿದಾಗ ಚಂದ್ರಮತಿಗೆ ತಲ್ಲಣವಾಯಿತು. ಅವಳು ಅದರಿಂದ ಕೆಟ್ಟದ್ದನ್ನೇ ನಿರೀಕ್ಷಿಸು ವಂತಾಯಿತು. ವಂಚನೆಯಿಂದ ಎಲ್ಲಿಯಾದರೂ ಯಾವಾಗಲಾದರೂ ಕಡೆಗಾದರೂ ಒಳ್ಳೆಯದಾದೀತೆ ? ೧೨. ತನ್ನ ನಲ್ಲೆಯೆನ್ನಿಸಿದವಳ ತಪ್ಪನ್ನು ಅವನು ಮರೆಮಾಡಿ ತಡೆದಿಟ್ಟನು. ಇದರ ಪರಿಣಾಮವಾಗಿ ಅವನ ತಾಯಿ ಮುಂದೆ ಏಳೇಳು ಜನ್ಮಗಳ ಪರಿಯಂತವೂ ಕೆಡುಕಾಗುವ ಕೆಟ್ಟಮಾತನ್ನೇ ಹೇಳಿದಳು. ಒಂದು ಸೇರಿದರೆ ಏಳು ಸೇರಿಕೊಳ್ಳುತ್ತದೆ ಎಂಬ ಮಾತು ತಪ್ಪದಷ್ಟೆ! ೧೩. “ಅಪ್ಪಾ ಈ ಕನಸು ಬಹಳ ಕೆಡುಕುಂಟಾಗುವುದನ್ನೇ ಸೂಚಿಸುತ್ತದೆ. ಆದುದರಿಂದ ಇದನ್ನು ಕಡೆಗಣಿಸಬಾರದು. ನಿನ್ನ ಖಡ್ಗಧಾರೆಯಿಂದ, ಕಟ್ಟಿದ ಕುರಿಯನ್ನು ಕತ್ತರಿಸಿ ಅರ್ಪಿಸಿದೆಯೆಂದಾದರೆ ಚಂಡಿಕಾದೇವಿ ಅಮಂಗಲವನ್ನೆಲ್ಲ ಧ್ವಂಸ ಮಾಡಿ ದಯೆಯನ್ನೂ ತೋರಿಸಿಯಾಳು” ಎಂದು ಸಲಹೆಯಿತ್ತಳು. .೧೪. ತಾಯಿಯ ಮಾತಿನಲ್ಲಿ ಅಮಂಗಲದ ವಿನಾಶದ ನುಡಿ ಬಂದುದು ಅವನಿಗೆ ಮುಂದೆ ಬರುವ ಅಮಂಗಲವನ್ನೇ ಸೂಚಿಸಿದಂತೆ ಭಾಸವಾಯಿತು.೪೮ ಅವನು 'ಶಾಂತಂ ಪಾಪಂ! ಶಾಂತಂ ಪಾಪಂ!” ಎನ್ನುತ್ತ ಕಿವಿ ಮುಚ್ಚಿಕೊಂಡನು. ೧೫. “ಅಮ್ಮಾ ! ಮೇಲೆಯನ್ನು ಬಯಸುವುದಾದರೆ, ಕೊಲೆ ಮನುಷ್ಯನಿಗೆ ಹಿತನವನ್ನುಂಟುಮಾಡಲಾರದು. ಮನುಷ್ಯನ ಬಾಳುವೆ ಶಾಶ್ವತ Page #53 -------------------------------------------------------------------------- ________________ ೪೮ ಯಶೋಧರ ಚರಿತೆ ಎಂದೊಡೆ ಮುನಿದಂಬಿಕೆಯಿಂ ತೆಂದಳ್ ನಿಜಮಪ್ಪ ಮೋಹದಿಂ ಸಲುಗೆಯಿನೆ ಝಂದಳ್ ನಾಡೆ ನೃಪೇಂದ್ರನ ಮುಂದಣ ಗತಿಗಪ್ಪ ಬಟ್ಟೆಯಂ ಕಟ್ಟುವವೊಲ್ ಪರಿಹರಿಸೆಯಮ್ಮ ನುಡಿಯಂ ಗುರುವಚನಮಲಂಘನೀಯಮೆನ್ನದೆ ನೀನಾ ದರದಿಂ ಕೈಕೊಳ್ ಧರ್ಮದೊ ಆರಸುಗಳೇಂ ಶಾಂತಿಯೆಂದೊಡನುಸರಿಸರ ಪ್ರೇಮ್ ಇವು ಧರ್ಮಮೆಂದು ಬಗೆವೊಡ ಮವಿವೇಕದೆ ಶಾಂತಿಮಾಡೆ ಭೇತಾಳಂ ಮೂ ಡುವ ತೆಱದೆ ಹಿಂಸೆಯಿಂ ಮೂ ಡುವ ಮುಂತಣ ಕೇಡನೆಂತು ಕಟಿವೆಂ ಬಲೆಯಂ ಜೀವದಯೆ ಜೈನಧರ್ಮ೦ ಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂ. ಭಾವಿತಮೆ ತಪಿನುಡಿದಿರ್ ಕಾವರೆ ಕಣೆಗೊಳೊಡಬೈ ಬಾರಿವರೊಳರೇ ಆದೊಡೆ ಪಿಟ್ಟಿನ ಕೋಟೆಯ ನಾದೊಡಮಿಂದೊಂದನಿಕ್ಕವೇಟ್ಟುದು ಮಿಕ್ಕಂ ದಾ ದೇವಿಗೆನ್ನನಿಕ್ಕಿಯು ಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ ವಾಗಿರುತ್ತದೆಯೆ ? ಬುದ್ದಿವಂತನಾದವನು ಈಗಲೋ ಇನ್ನಷ್ಟು ಹೊತ್ತಿನಲ್ಲೋ ಸಾಯುವ ಕುದುರೆಗೆ ಹುಲ್ಲು ಹಾಕಿ ಹಾಳಾಗುತ್ತಾನೆಯೆ”? ಎಂದು ತಾಯಿಗೆ ಸಮಾಧಾನ ಹೇಳಿದನು ಯಶೋಧರ. ೧೬. ಈ ಮಾತನ್ನು ಕೇಳಿದೊಡನೆಯೇ ತಾಯಿಯ ಮುನಿಸು ಮಸಗಿತು. ಆದರೂ ಅವಳು ಮೋಹದಿಂದಲೂ ಸಲುಗೆ ಯಿಂದಲೂ ಯಶೋಧರನ ಬಳಿಗೆ ಬಂದು ಹೀಗೆ ನುಡಿದಳು, ಅವನ ಮುಂದಿನ ಸದ್ಧತಿಯ ದಾರಿಗೆ ಪ್ರತಿಬಂಧಕ ಹಾಕುವಂತೆ. ೧೭. “ನಮ್ಮ ಮಾತನ್ನು ನಿರಾಕರಿಸುವೆಯಾ? ಗುರುವಚನವು ಅಲಂಘನೀಯವೆನ್ನುವುದೂ ಗೊತ್ತಿಲ್ಲವೆ ನಿನಗೆ ? ನನ್ನ ಮಾತನ್ನು ಆದರದಿಂದ ಅಂಗೀಕರಿಸು. ಧರ್ಮದಿಂದಲೇ ಶಾಂತಿ ಎಂಬುದನ್ನು ಅರಸರು ಅನುಸರಿಸುವುದಿಲ್ಲವೆ? ಹೇಳು” ಯಶೋಧರನು ನುಡಿದನು. ೧೮. “ಇವು ಧರ್ಮ ಎಂದು ಬಗೆದರೂ ಅವಿವೇಕದಿಂದ ಇಂತಹ ಶಾಂತಿಯನ್ನು ಮಾಡಿದರೆ ಸರಿಯಾದೀತೆ ? ಹಿಂಸೆಯನ್ನು ಮಾಡಿದರೆ ಮುಂದೆ ಬೇತಾಳಾಕಾರದಿಂದ ಕೇಡೇ ಮೂಡಿಬಂದೀತು! ಅದನ್ನು ಆಮೇಲೆ ತೊಲಗಿಸುವುದಾದರೂ ಹೇಗೆ ? ೧೯. ಜೀವದಯೆಯೇ ಜೈನಧರ್ಮ. ಪ್ರತಿಯೊಂದು ಜೀವಿಗೂ ಹಿತವಾಗಬೇಕೆಂದು ನಂಬುವವರಿಗೆ ಹಿಂಸೆಯ ಮೋಹವಾದರೂ ಎಣಿಕೆಗೆ ಬಂದೀತೆ ? ನಿಮ್ಮ ಮಾತು ಸರಿಯೆನ್ನಿಸಲಾರದಮ್ಮ! ಕಾಯುವವರೇ ಕಣೆ ಹಿಡಿಯುವುದಾದರೆ ತಡೆಯುವವ ರಾರಿದ್ದಾರೆ ?” ತಾಯಿ ಮತ್ತೆ ಹೇಳಿದಳು : ೨೦. “ಆದರೆ ಹಿಟ್ಟಿನ ಕೋಳಿಯನ್ನಾದರೂ Page #54 -------------------------------------------------------------------------- ________________ ಮೂರನೆಯ ಅವತಾರ ಎನೆ ತಾಯ ಮೋಹದಿಂದಂ ಜನವನೊಡಂಬಟ್ಟು ಮನದೊಳಿಂತೆಂದಂ ಭಾ ವನೆಯಿಂದಮಪುದಾಸ್ತವ ಮೆನಗಿನ್ನೆಂತಪ್ಪ ಪಾಪಮಿದಿರ್ವಂದಪುದೊ ಮಾಡದೊಡೆ ತಾಯೆ ಮರಣಂ ಮಾಡಿದೊಡನೊಂದು ಗತಿಗೆ ಕೇಡಿಂದೇನಂ ಮಾಡುವೆನೆಂದಾಂದೋಳಮ ನಾಡೆ ಮನಂ ತಮಮನಪ್ಪುಕೆಯ್ದನಿಳೇಶಂ ಆ ನೃಪತಿ ಬಳಿಕ ತಾಯುಂ ತಾನುಂ ಚಂಡಿಕೆಯ ಪೂಜೆಗೆಂದೆಂದಂ ನಾನಾ ವಿಧದರ್ಚನೆಯಿಂ ಮಾನೋಮಿಯ ಮುಂದೆ ಬಂದ ಭಮಾಷ್ಟಮಿಯೊಳ್ ಕರಮೆಸೆಯ ಸಮೆದು ಬಂದುದು ಚರಣಾಯುಧಮದಲ್ಲಿ ಚಿತ್ರಪರಿಶೋಭೆಗೆ ಬೆಂ ತರನೊಂದಾಶ್ರಯಿಸಿರ್ದುದು ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ ತಲೆಯಿಂ ಕುಕೂಕೂ ಎಂ. ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ ಲ್ಕುಲಿಯೆನೆ ಪಿಟ್ಟಿನ ಕೋಟೆಯ ತಲೆಯಂ ಪಿಡಿವಂತಿರಟ್ಟೆ ಪಾಡಿದುದಿನಿಸಂ ಇಂದು ಬಲಿ ಕೊಡಲೇಬೇಕು, ಕಂದ! ಇದನ್ನು ನೀನು ಮೀರಿದೆಯೆಂದಾದರೆ, ಆ ದೇವಿಗೆ ನನ್ನನ್ನೇ ಆಹುತಿಯನ್ನಾಗಿ ಕೊಡುತ್ತೇನೆ. ಇದರಿಂದಲಾದರೂ ಇಂದು ಬಂದ ಈ ದುರಿತವನ್ನು ಪರಿಹರಿಸದೆ ಇರಲಾರೆ, ಮಗನೆ!” ೨೧. ಇಷ್ಟು ಹೇಳಿದಾಗ ಯಶೋಧರನಿಗೆ ತಾಯಿಯ ಮಾತನ್ನು ನಿರಾಕರಿಸುವುದಾಗಲಿಲ್ಲ. ಅವನು ಮಾತೆಯ ಮೇಲಿನ ಮೋಹದಿಂದಾಗಿ ಅವಳ ಮಾತಿಗೆ ಒಪ್ಪಿಗೆಯನ್ನಿತ್ತನು. ಮನಸ್ಸು ಮಾತ್ರ ವಿಚಾರಪರವಾಯಿತು. ಆಸ್ರವವುಂಟಾಗುವುದು ಮನಸ್ಸಿನ ಎಣಿಕೆಯಿಂದಲೇ, ಇನ್ನು ನನಗೆ ಎಂತಹ ಪಾಪ ಎದುರಾಗುವುದೋ! ೨೨. ತಾಯಿ ಹೇಳಿದಂತೆ ಮಾಡದಿದ್ದರೆ ಮಾತೆಯ ಮರಣವನ್ನು ಕಾಣಬೇಕಾಗುತ್ತದೆ ; ಮಾಡಿದರೆ ನನಗೆ ಸದ್ಧತಿಗೆ ಕೇಡುಂಟಾಗುತ್ತದೆ. ಏನು ಮಾಡಲಿ! ಎಂದು ಯಶೋಧರನ ಮನಸ್ಸು ಹಿಂದೆ ಮುಂದೆ ಉಯ್ಯಾಲೆಯಾಡಿತು. ಕಟ್ಟಕಡೆಗೆ ಅರಸನು ಅಜ್ಞಾನದ ದಾರಿಯನ್ನೇ ಅವಲಂಬಿಸಿದನು. ೨೩. ಅವನೂ ಚಂದ್ರಮತಿಯೂ ಮಹಾನವಮಿಯ ಹಿಂದಣ ಭೌಮಾಷ್ಟಮಿಯ೫೦ ದಿನ ಹಲವು ವಿಧದ ಅರ್ಚನೆಯಿಂದ ಚಂಡಿಕಾದೇವಿಯ ಪೂಜೆಯನ್ನು ನೆರವೇರಿಸುವುದಕ್ಕಾಗಿ ಬಂದರು. ೨೪, ಬಲಿ ಕೊಡುವುದಕ್ಕಾಗಿ ಹಿಟ್ಟಿನ ಒಂದು ಕೋಳಿಯನ್ನು ಬಹಳ ಸೊಗಸಾಗಿ ನಿರ್ಮಾಣ ಮಾಡಲಾಯಿತು. ಅದರ ವಿಶೇಷವಾದ ಚೆಲುವು ಒಂದು ಪಿಶಾಚಿಯನ್ನು ಆಕರ್ಷಿಸಿತು. ಅದು ಆ ಕೋಳಿಯೊಳಗೆ ಸೇರಿಕೊಂಡಿತು. ಸಕಾಲಕ್ಕೆ, ಚಂದ್ರಮತಿ ಗಟ್ಟಿಯಾಗಿ ಮಗನನ್ನು ಆಶೀರ್ವದಿಸುತ್ತಿದ್ದಂತೆ ರಾಜನು ಆ ಕೋಳಿಯನ್ನು ಕಡಿದಿಕ್ಕಿದನು. ೨೫. ತಕ್ಷಣದಲ್ಲಿಯೇ, ಆ ಹಿಟ್ಟಿನ ಕೋಳಿಯೂ ಕೊಕ್ಕೋಕೋ ಎಂದು ಕೂಗಿತು. ಮುಂದೆ ಬರಲಿರುವ ಕಷ್ಟಗಳನ್ನೇ ಹೀಗೆ Page #55 -------------------------------------------------------------------------- ________________ 980 ಯಶೋಧರ ಚರಿತೆ ಪೊಡೆಯ ಕೃಕವಾಕು ನಿನದಂ ಬಿಡದುಣುತಿರಲೆ ಕಯ್ಯ ಬಾಲ್ ಬೀಳ್ತರೆ ಪೊಯ್ ವಡೆದಂತೆ ಪಂದೆಯಂ ಪಾವಡರ್ದಂತಾಗಿರೆ ಯಶೋಧರಂ ಬೆಳಗಾದಂ ಏಕೆ ಕನಸೆಂದು ನುಡಿದೆನಿದೇಕಂಬಿಕೆ ಬಲಿಯನೊಡ್ಡಿದಲ್ ಕೂಗಿದುದೇಕೀ ಕೃತಕತಾಮ್ರಚೂಡನಿದೇಕೆಂದಾರಟೆವರಯ್ಯ ವಿಧಿವಿಳಸನಮಂ ಅಮೃತಮತಿಯೆಂಬ ಪಾತಕಿ ಯ ಮಾಯೆ ಬನಮಾಯ ಚಂದ್ರಮತಿಮಾತೆಯ ಮಾತೆಮಗೆ ಬಲೆಯಾಯ್ತು ಹಿಂಸನ ಮಮೋಘಶರಮಾಯ್ತು ಕೆಡೆದುದಾತ್ಮಕುರಂಗಂ ಎಂದು ಮನಂ ಮಲಗುವಿನಂ. ನೊಂದಲ್ಲಿಂ ತಳರ್ದು ಮನೆಗೆ ಉಜ್ಜಿಗಮೆ ದೊದ್ವಂದದೆ ಬಂದೀ ರಾಜ್ಯದ ದಂದುಗಮೇಕೆಂದು ತೊಜತೆಯಲುದ್ಯತನಾದಂ ಪರಿವಾರಮಂ ಪ್ರಧಾನರನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋಧರನಿಂತು ತಪಕೆ ನಡೆಯರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್ ೩೦ ಕೂಗಿ ಕರೆಯುವುದೋ . ಎಂಬಂತಿತ್ತು ಆ ಆಕ್ರಂದನ, ತುಂಡಾದ ತಲೆಯನ್ನು ಬಿಡಲಾರೆನೆನ್ನುವಂತೆ ಆ ಕೋಳಿಯ ಶರೀರವು ಸ್ವಲ್ಪ ದೂರಕ್ಕೆ ಹಾರಿತು. ೨೬. ಖಡ್ಗ ಪ್ರಹಾರವಾದ ಕೂಡಲೇ ಕೋಳಿಯ ಕೂಗು ಕೇಳಿಸಿದುದೇ ತಡ, ರಾಜನ ಕೈಯ ಕತ್ತಿ ಕೆಳಕ್ಕುರುಳಿತು. ತನ್ನನ್ನೇ ಯಾರೋ ಕಡಿದಂತೆಯೂ, ಹೇಡಿಯ ಮೇಲೆ ಹಾವು ಹರಿದಂತೆಯೂ ಅವನು ಬೆರಗಾದನು. ೨೭. “ಅಯ್ಯೋ! ಕನಸೆಂದು ನಾನೇಕೆ ಹೇಳಿದೆ? ನನ್ನ ತಾಯಿಯಾದರೂ ಆ ರೀತಿ ಬಲಿಕೊಡಿಸಿದುದೇಕೆ ? ಈ ಕೃತಕವಾದ ಕೋಳಿ ಹೀಗೇಕೆ ಕೂಗಿಕೊಂಡಿತು ? ಹೀಗಾದುದೇಕೆಂಬ ವಿಧಿವಿಲಾಸವನ್ನು ಯಾರು ಅರಿಯುವರು? . ೨೮: “ಅಮೃತಮತಿಯೆಂಬ ಪಾತಕಿಯ ಮಾಯೆಯೇ ವನವಾಯಿತು. ತಾಯಿಯಾದ ಚಂದ್ರಮತಿಯ ಮಾತೇ ನನಗೊಂದು ಬಲೆಯಾಗಿ ಪರಿಣಮಿಸಿತು. ಹಿಂಸೆಯೇ ಅಮೋಘವಾದ ಬಾಣವಾಯಿತು. ಆತ್ಮವೆಂಬ ಜಿಂಕೆಯು ಇದಕ್ಕೆ ಬಲಿಬಿದ್ದಿತು.”೫೧ - ೨೯. ರಾಜನ ಮನಸ್ಸು ಮರುಕಕ್ಕೆ ಒಳಗಾಗಿ ಸಂಕಟಗೊಂಡಿತು. ಅಲ್ಲಿಂದ ಹೊರಟು ಅವನು ಮನೆ ಸೇರಿದನು. ಅಲ್ಲಿಯೂ ಉದ್ವೇಗವು ತಗ್ಗಲಿಲ್ಲ. ಅವನು ತನಗೆ ಈ ರಾಜ್ಯಭಾರದ ಹೊರೆಯೇಕೆ ಎಂದು ಎಣಿಸಿಕೊಳ್ಳುತ್ತಾ ಅದನ್ನು , ಬಿಟ್ಟು ಬಿಡುವ ನಿರ್ಧಾರವನ್ನು ಕೈಕೊಂಡನು. ೩೦. ಪರಿವಾರವನ್ನೂ ಪ್ರಧಾನರನ್ನೂ ಇರಿಸಿಕೊಂಡು, ತನ್ನ ಮಗನಾದ Page #56 -------------------------------------------------------------------------- ________________ ಮೂರನೆಯ ಅವತಾರ ದೇವರ ಬಲೆಯೊಳೆ ಬರ್ಪಂ ಪೂವಿನ ಸೌರಭದ ಮಾಪಿಳ್ಳೆಯಿಂ ಗಮನಪ್ರಸ್ವಾವನೆಯೊಳಿಂದು ನೀಮುಂ ದೇವಿಯುಮಾರೊಗಿಸಲಕ್ಕೆ ಎನ್ನರಮನೆಯೊಳ್ ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣೆ ನಂಜಿನ ಲಡ್ಡುಗೆಯಂ ಮಾಡಿದು ದನುಣ್ ಮಹಾರಾಜ ಎಂಬಿನಂ ಸವಿದುಂಡಂ ಅರಸನ ಮೂದಲೆ ಮನದೊಳಗಿರೆ ಮೇಳಿಸಿಕೊಂಡು ಬಂದು ಪಾತಕಿ ಕೊಂದ ಬೆರಗಿಂ ಗಂಡನನಾ ಸೀಚರಿತಮಂ ಕಳೆಯಲರಿದು ಪೆಂಡಿರ ಕೃತಕಂ ಆ ಪಕ್ವಾನ್ನಮೆ ಮೃತಿಗು~ ದೀಪನಪಿಂಡದವೊಲಾಗೆಯಘದಿಂ ಬೀಜಾವಾಪಮನೆ ಜಲತೆಗೆ ಕಲಾಪಿಯುದರದಲ್ಲಿ ವಿಂಧ್ಯದೊಳೊಗೆದಂ ಅಂತೊಗದು ಮೊಟ್ಟೆಯೊಡೆದ ಲಿಂ ತೊಲಗದು ತುಪ್ಪುಳೆಡದು ಕಾಲ್ಬಲಿಯದು ಕಇಂ ತೆಳತಿಯದೆಂಬ ಪದಕೆ ಕೃತಾಂತನ ಹರಿಯಂತೆ ಕವಿದು ಬೇಂಟೆಯೊಳೊರ್ವ೦ ೩೫ ಯಶೋಮತಿಗೆ ರಾಜ್ಯವನ್ನೊಪ್ಪಿಸಿ ತಪಸ್ಸಿಗೆ ಹೊರಡಬೇಕೆಂದು ಸಂಕಲ್ಪಿಸಿದನು. ಅಷ್ಟರಲ್ಲಿ ಮೃತ್ಯುವೇ ಎದುರು ಬಂದಂತೆ ಅಮೃತಮತಿ ಅಲ್ಲಿಗೆ ಬಂದಳು. ೩೧. “ದೇವಾ, ನಾನೂ ನಿಮ್ಮೊಂದಿಗೆ ತಪೋವನಕ್ಕೆ ಬರುತ್ತೇನೆ. ಹೂವನ್ನು ಬಿಟ್ಟು ಪರಿಮಳವಿರುವುದೆ ? ಆದರೆ ಹೋಗುವ ಮುನ್ನ ಈ ದಿನ ನೀವೂ ದೇವಿಯರಾದ ಅತ್ತೆಯೂ ನನ್ನ ಅರಮನೆಗೆ ದಯಮಾಡಿಸಿ ಊಟಮಾಡಿ ತೆರಳಬೇಕು” ಎಂದು ಒತ್ತಾಯಿಸಿದಳು. ೩೨. ಯಶೋಧರನಿಗೆ ಮನಸ್ಸಿಲ್ಲವಾದರೂ ಹೇಗೋ ಒಪ್ಪಿ ಕೊಂಡನು. ತಾಯಿಯನ್ನು ಕೂಡಿಕೊಂಡು ಅಮೃತಮತಿಯ ಅರಮನೆಗೆ ಬಂದನು. ಅಲ್ಲಿ ಅವನೂ ಅವನ ತಾಯಿಯೂ ಆಕೆ ಉಣಬಡಿಸಿದ ವಿಷದ ಲಡ್ಡುಗೆಯನ್ನು ಸವಿದುಂಡರು. ೩೩. ಅರಸನ ಅಣಕದ ಮಾತು ಅಮೃತಮತಿಯ ಚಿತ್ತದಲ್ಲಿ ಕೀಲಿಸಿ ನಿಂತಿತು. ಆದರೂ ಬಾಹ್ಯದಲ್ಲಿ ಬೆಡಗನ್ನು ತೋರಿಸುತ್ತಾ ಬಂದು ಆ ಪಾಪಿ ಮರ್ಯಾದೆ ಮೀರಿ ತನ್ನ ಗಂಡನನ್ನೇ ಕೊಂದಳು, ಹೆಂಗಸಿನ ವರ್ತನೆ ಎಷ್ಟು ಆಶ್ಚರ್ಯಕರ ! ಸ್ತ್ರೀಯರ ಕಪಟವೃತ್ತಿಯನ್ನು ಕಳೆಯುವುದಕ್ಕೆ ಸಾಧ್ಯವಿಲ್ಲವಲ್ಲ ! ೩೪. ಯಶೋಧರನಿಗೆ ಅಲ್ಲಿ ಉಂಡ ಊಟವೇ ಮರಣಕ್ಕೆ ಉದ್ದೀಪನಪಿಂಡದಂತಾಯಿತು ; ಮಾತ್ರವಲ್ಲ, ಜನ್ಮಲತೆಗೆ ಅವನೆಸಗಿದ ಪಾಪವೇ ಬೀಜವಾಗಿ ಪರಿಣಮಿಸಿತು. ಅವನು ಅಲ್ಲಿ ಸತ್ತು ವಿಂಧ್ಯದಲ್ಲಿ ಒಂದು ಹೆಣ್ಣು ನವಿಲಿನ ಹೊಟ್ಟೆಯಲ್ಲಿ ಹುಟ್ಟಿ ಬಂದನು: ೩೫. ಹೀಗೆ ಹುಟ್ಟಿ, ಮೊಟ್ಟೆಯೊಡೆದು ಮರಿಯಾಯಿತು ಆ ಜೀವ. ಅಲ್ಲಿಂದ ಮುಂದೆ ಹರಿಯುವಷ್ಟೂ ಅದಕ್ಕೆ ಶಕ್ತಿಯುಂಟಾಗಿರಲಿಲ್ಲ ; ಎಳೆಯ ಗರಿಗಳೂ ಮೂಡಿರಲಿಲ್ಲ ; ಕಾಲುಗಳಿಗೆ Page #57 -------------------------------------------------------------------------- ________________ 88.5 ಬೇಡಂ ಪಿಳುಕೊತ್ತಿನ ತಾಮ್ ಓಡಲ್ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂ ಬೇಡಿತಿಗೆ ಸಲಹಲಿತ್ತೊಡೆ ಗೂಡಿನೊಳದು ಬಳೆದು ತಳೆದುದಂಗಚ್ಛವಿಯಂ ನವರತ್ನದ ಪಂಜರದೊಳ್ ದಿವಿಜ ಶರಾಸನದ ಮಲೆಯನಿರಿಸಿದವೋಲೆತುವ ಸೋಗೆಯ ಸುತ್ತಿನೊಳಾ ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗುಂ ಕರಹಟದೊಳ್ ಬೇಂಟೆಯ ಕು ಕುರಿಯಾದಳ್ ಸತ್ತು ಚಂದ್ರಮತಿಯುಂ ಬಟೆಕಾಯೆರಡುಮುಪಾಯನ ಘಟನೆಯಿ ನರಮನೆಯಂ ಸಾರ್ದುವಾ ಯಶೋಧರಸುತನಾ ತವಗಂಜುವವರ್ಗೆ ತಾವಂ ಜುವರೆಂಜಲನಾಯ್ಡುತಿಂಬರೆಂಜಲ ತಾವ್ ತಿಂ ಬವನಿಪರಾದಲ್ಲಿಯೆ ನಾಯ್ ನವಿಲ ನಿತಾಯ್ತು ನೋಡ ಪಾಪದ ಫಲದಿಂ ನವಿಲಮೃತಮತಿಯ ಸೆಜ್ಜೆಯ ದವಳಾರದೊಳಾಡುತ್ತಿರ್ದು ಬದಗನುಮಂ ತ ನ್ನವಳೊಡಗೂಡಿರೆ ನಿಟ್ಟಿಸಿ ಭವರೋಷದಿನಿಯದುದಷ್ಟವಂಕನ ಕಣ್ಣಂ ಯಶೋಧರ ಚರಿತೆ &と 22 ೩೮ 2,6 ೪೦ ಬಲವೂ ಬಂದಿರಲಿಲ್ಲ ; ಮರಿ ಸರಿಯಾಗಿ ಕಣ್ಣು ತೆರೆಯಲೂ ಇಲ್ಲ. ಈ ಅವಸ್ಥೆಯಲ್ಲಿದ್ದಾಗ ಯಮನ ದೂತನಂತೆ ಬೇಡನೊಬ್ಬನು ಬೇಟೆಯಾಡುತ್ತ ಆ ಕಾಡನ್ನು ಮುತ್ತಿದನು. ೩೬. ಬಂದವನೇ ಆ ಬೇಟೆಗಾರನು ಮರಿಯೊಡನಿದ್ದ ತಾಯಿಯನ್ನು ಓಡಿಸಿಬಿಟ್ಟನು ; ಮರಿಯನ್ನು ಮಾತ್ರ ಬಿಡಲಿಲ್ಲ. ಅದನ್ನು ಹಿಡಿದು ತಂದು ತನ್ನ ಹೆಂಡತಿಯ ಕೈಗಿತ್ತು ಸಾಕುವಂತೆ ಹೇಳಿದನು. ಅವಳು ಅದನ್ನು ಗೂಡಿನೊಳಗಿಟ್ಟು ಪೋಷಿಸತೊಡಗಿದಳು. ಕ್ರಮೇಣ ಬೆಳೆದು ಅದಕ್ಕೆ ಸಹಜವಾದ ದೇಹಶೋಭೆ ಕಾಣಿಸಿ ಕೊಂಡಿತು. ೩೭. ಕಾಲಾಂತರದಲ್ಲಿ ಆ ನವಿಲು ಬೆಳೆದು ನವರತ್ನದ ಪಂಜರದೊಳಗೆ ಇರಿಸಿದ ಕಾಮನ ಬಿಲ್ಲಿನ ಮರಿಯಂತೆ ತನ್ನ ಸೋಗೆಯನ್ನೆತ್ತುತ್ತ ಸುತ್ತಲೂ ಕುಣಿದಾಡ ತೊಡಗಿತು. ಅದರ ಚೆಲುವು ಲೋಕವನ್ನೆಲ್ಲ ಸೋಲಿಸಿತು. ೩೮. ಸತ್ತ ಚಂದ್ರಮತಿಯು ಕರಹಟದಲ್ಲಿ ಒಂದು ಬೇಟೆಯ ನಾಯಿಯಾಗಿ ಹುಟ್ಟಿಕೊಂಡಳು. ಈ ನಾಯಿಯನ್ನೂ ಆ ನವಿಲನ್ನೂ ಅವರವರು ಬೇರೆ ಬೇರೆಯಾಗಿ ತಂದು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಿದರು. ಹೀಗೆ ತಾಯಿ ಮಕ್ಕಳು ಅರಮನೆಯನ್ನೇ ಸೇರಿಕೊಂಡರು. ೩೯. ತಮಗೆ ಅಂಜುತ್ತಿದ್ದವರಿಗೇ ತಾವು ಅಂಜುವ ಪರಿಸ್ಥಿತಿ ಅವರಿಬ್ಬರಿಗೂ ಈಗ ಬಂದೊದಗಿತು. ತಮ್ಮ ಎಂಜಲನ್ನು ತಿನ್ನುತ್ತಿದ್ದವರ ಎಂಜಲನ್ನು ತಾವು ತಿನ್ನಬೇಕಾಯಿತು. ಎಲ್ಲಿ ಅರಸು ತನವನ್ನು ಮೆರೆದರೊ ಅಲ್ಲಿಯೇ ಅವರಿಬ್ಬರೂ ನಾಯಿ ನವಿಲುಗಳಾಗಿ ಇರ ಬೇಕಾಯಿತು. ಅರಸ, ಪಾಪದ ಫಲವನ್ನು ನೋಡು ! ೪೦. ಒಮ್ಮೆ ಅಮೃತಮತಿಯ ಧವಳ ಶಯ್ಯಾಗಾರದಲ್ಲಿ ನವಿಲು ಆಡುತ್ತಾ ಇತ್ತು. ಅಲ್ಲಿಗೆ ಮಾವುತ ಅಷ್ಟವಂಕನು Page #58 -------------------------------------------------------------------------- ________________ ಮೂರನೆಯ ಅವತಾರ ಆನ್ ಬೆಂದೆನೆಂದು ನವಿಲಂ ಪಾಣೋ ಕನಡಸಿ ಪೊಯೆ ಮೇಗಣ ನೆಲೆಯಿಂ ದಂ ಬಿರ್ದುದು ಪಚ್ಚೆಯ ಪದಕಂ ಬೀಳ್ಕೊಂತಿರೆ ಸುಧಾಂಶುಬಿಂಬದ ಕೊರಲಿಂ ಅರಸನುಮಾಗಳೆ ನೆತ್ತದ ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂದರೆ ಮತ್ತು ಪಿಡಿದುದಂಬಾ ಚರಿ ಕುಕ್ಕುರಿ ನೊಂದು ಬಿಟ್ಟಿ ನಂದನಚರನಂ ಮತ್ತೆ ನೃಪಂ ನಾಮ್ ತಿಂದುದು ನೃತ್ಯಚಮತ್ಕಾರನಂ ಮಯೂರನನೆಂದಾ ನೆತ್ತದ ಮಣೆಯಿಂದಿದೊಡೆ ನೆತ್ತಿ ಪಿಸುಳತ್ತು ಸತ್ತುವಂತಾ ಎರಡುಂ ಮಲಗಿದನಿಳೇಶನಾ ಎರ ಡು ಸಾವಿಂ ತಂದೆ ತಾಯ್ದಿರದಂತಿರೆ ಕ ಇಳಯದೊಡಂ ಕರುಳಯದೆ ಮುಗಿಸದಿರ್ಪುದೆ ಭವಾಂತರವ್ಯಾಮೋಹಂ ಆ ವಿಂಧ್ಯನಗದೊಳಾ ನಾಯ್ ಪಾವಾಯ್ತಾ ನವಿಲುಮೆಯ್ಯಮ್ಮಗಮಾಯ್ತಾ ಎಮ್ ಪಾವಂ ಪಗೆಮಿಗೆ ತಿಂದುದು ಮೇವಂತಿಗೆ ಪುಲ್ಲಸರವಿಯಂ ಪುಲಿ ಗೋಣಂ 92 లం ೪೨ ೪೩ ೪೪ ೪೫ ಬಂದನು. ಅಮೃತಮತಿ ಎಂದಿನಂತೆ ಅವನ ಸಮಾಗಮಕ್ಕೆ ಸಂದಳು. ಇದನ್ನು ಕಂಡ ಕೂಡಲೆ ನವಿಲು ಪೂರ್ವಜನ್ಮದ ರೋಷದಿಂದ ಅಷ್ಟವಂಕನ ಕಣ್ಣನ್ನು ಕುಕ್ಕಿಬಿಟ್ಟಿತು. ೪೧. “ಅಯ್ಯೋ, ಸತ್ತೆ ನಾನು !” ಎನ್ನುತ್ತ ಆ ಕುಲಟೆಯು ನವಿಲ ಕಡೆಗೆ ನುಗ್ಗಿ ಅದನ್ನು ಹೊಡೆಯಲು ಚಂದ್ರಬಿಂಬದ ಕುತ್ತಿಗೆಯಿಂದ ಪಚ್ಚೆಯ ಪದಕವೊಂದು ಕೆಳಗುರುಳುವಂತೆ ಉಪ್ಪರಿಗೆಯಿಂದ ಕೆಳಕ್ಕೆ ಬಿದ್ದು ಸತ್ತಿತು. ೪೨. ಅದೇ ಸಮಯಕ್ಕೆ ನೆತ್ತವನ್ನಾಡುವ ಆವೇಶದಲ್ಲಿದ್ದ ಯಶೋಮತಿ “ತೆಕ್ಕೊ !” ಎಂದು ದಾಳವನ್ನು ಇಕ್ಕಿದನು. ಬೀಳುವ ನವಿಲನ್ನು ತೆಗೆದುಕೊಳ್ಳುವಂತೆ ರಾಜನು ಹೇಳುವನೆಂದು ಗ್ರಹಿಸಿ ನಾಯಿಯು ಬೀಳುತ್ತಿದ್ದ ನವಿಲನ್ನು ಹಿಡಿದುಕೊಂಡಿತು. ೪೩. ಚಮತ್ಕಾರದ ನರ್ತನವನ್ನು ಮಾಡುವ ಮಯೂರವನ್ನು ಈ ನಾಯಿ ತಿಂದಿತು. ಎಂದು ತಡೆಯಲಾರದ ಸಿಟ್ಟು ಬಂತು ರಾಜನಿಗೆ. ಅವನು ಆ ನೆತ್ತದ ಮಣೆಯಿಂದಲೇ ನಾಯಿಯ ತಲೆಯನ್ನು ಬಡಿದನು. ಅದರ ನೆತ್ತಿ ಒಡೆದು ಹಿಸಿಯಿತು. ಅದೂ ಸತ್ತಿತು. ೪೪. ನವಿಲೂ ನಾಯಿಯೂ ಸತ್ತುದನ್ನು ಕಂಡಾಗ ರಾಜನಿಗೆ ತಂದೆತಾಯಿಗಳು ತೀರಿಕೊಂಡರೆ ಆಗುವಷ್ಟು ದುಃಖ ವುಂಟಾಯಿತು. ಕಣ್ಣು ಅರಿಯದಿದ್ದರೂ ಕರುಳು ಅರಿಯುವುದಿಲ್ಲವೆ? ಜನ್ಮಾಂತರದ ವ್ಯಾಮೋಹವು ಈ ರೀತಿ ಮರುಗಿಸದೆ ಇರುವುದಿಲ್ಲ. ೪೫, ಸತ್ತ ನಾಯಿ ವಿಂಧ್ಯ ಪರ್ವತದಲ್ಲಿ ಹಾವಾಗಿ ಹುಟ್ಟಿಕೊಂಡಿತು. ನವಿಲೂ ಕೂಡ ಅಲ್ಲಿಯೇ ಮುಳ್ಳುಹಂದಿಯಾಗಿ ಜನ್ಮ ಪಡೆಯಿತು. ಈ ಮುಳ್ಳು ಹಂದಿ Page #59 -------------------------------------------------------------------------- ________________ ೫೪. ಯಶೋಧರ ಚರಿತೆ ಉರಗಿಯನೆಮ್ ಪಿಡಿದೊಡದಂ ಕುರಂಗರಿಪು ಬೆಕ್ಕು ಕೊಕ್ಕನಂ ತವ ಪಿಡಿವಂ ತಿರೆ ಪಿಡಿದುದು ಪರಚಿಂತಾ ಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ ಮೀನಾದುದೆಯ್ಯಮ್ಮಗಮುಜೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್ ತಾನಲ್ಲಿ ಮೊಸಳೆಯಾದ ತಾ ನಾಗನುಮಾಗಿ ಬೆಳೆಯ ಮತ್ತೊಂದು ದಿನಂ ನದಿ ಕಣ್ಣೆದಂತೆ ಪೊಳಂ ಕಿದ ಮೀನಂ ಮೊಸಳೆ ಪಾಯ ನರಪತಿಯ ವಿನೋದದ ಗುಜ್ಯ ಸಿಕ್ಕೆ ಪಿಡಿದತದನಧಿಪತಿ ಜಾಲಗಾಲಿರಿಂ ತೆಗೆಯಿಸಿದಂ ಪಲವಂದದ ನಿಗ್ರಹದಿಂದ ಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಟಿಕ್ಕಾ ಪೊಲಗೇರಿಯಾಡಿನೊಡಲೊಳ್ ನೆಲಸಿ ಬಲಿಕೊಯ್ಯನೊಗೆದುದಾಡಿನ ರೂಪಿಂ ೫೦ ಮತ್ತೊರ್ಮೆ ಜಾಲದೊಳ್ ಸಿಕಿತ್ತೆಯಾಗಿರ್ದ ಮೀನದ ಶ್ರಾದಕ್ಕತ್ಯುತ್ತಮ ಲೋಹಿತಮತ್ಮ ಮ ನುತ್ತಮಮಂದೊಂದು ಕಡೆಯಿನಡಿಸಿದನರಸಂ ಹೆಚ್ಚಿದ ಹಗೆಯಿಂದ ಹಾವನ್ನು ಕೊಂದು ತಿಂದಿತು. ಎತ್ತು ಹುಲ್ಲ ಹಗ್ಗವನ್ನು ಮೇಯುವುದು ಇದೇ ರೀತಿ. ೪೬. ಹಾವನ್ನೇನೋ ಮುಳ್ಳು ಹಂದಿ ನುಂಗಿತು. ಅದನ್ನು ಮಾತ್ರ ಹುಲಿ ಹಿಡಿಯಿತು. ಬೆಕ್ಕು ಕೊಕ್ಕರೆಯನ್ನು ಹಿಡಿಯುವುದೂ ಹೀಗೆಯೆ, ಪರರಿಗೆ ದುಃಖವುಂಟು ಮಾಡುವವನನ್ನು ವಿಧಿ ತನ್ನ ಬಳಿಗೆ ಕರೆಯುವುದು ಸಹಜವೇ ಆಗಿದೆ. ೪೭. ಮುಳ್ಳು ಹಂದಿ ಉಜ್ಜಯನಿಯಲ್ಲಿ ಶೋಭಿಸುತ್ತಿದ್ದ ಸಿಂಪಾನದಿಯಲ್ಲಿ ಮೀನಾಗಿ ಹುಟ್ಟಿತು. ಹಾವಾಗಿದ್ದುದು ಅದೇ ಹೊಳೆಯಲ್ಲಿ ಮೊಸಳೆಯ ಜನ್ಮವನ್ನು ಪಡೆದು ಬೆಳೆಯುತ್ತಾ ಇತ್ತು. ೪೮. ಒಂದಾನೊಂದು ದಿನ ನದಿ ಕಣ್ಣು ಮಿಟುಕಿಸಿತೆಂಬಂತೆ ಆ ಮೀನು ಪಳಕ್ಕನೆ ಮೇಲೆ ಚಿಮ್ಮಿತು. ಅದನ್ನು ಕಂಡು ಮೊಸಳೆ ಅದರ ಕಡೆಗೆ ನುಗ್ಗಿತು. ಆಗ ಅಲ್ಲಿದ್ದ ಯಶೋಮತಿಯ ವಿದೂಷಕನಾದ ಕುಳ್ಳನು ಅದಕ್ಕೆ ಸಿಕ್ಕಿಕೊಂಡನು. ರಾಜನು ಬಲೆಗಾರರಿಂದ ಆ ಮೊಸಳೆಯನ್ನು ಹೊರಕ್ಕೆಳೆಯಿಸಿದನು. ೪೯. ಹಲವು ಬಗೆಯ ಚಿತ್ರಹಿಂಸೆಗಳಿಂದ ಆ ಮೊಸಳೆಯನ್ನು ಕೊಲ್ಲಲಾಯಿತು. ಹೀಗೆ ಸತ್ತ ಮೊಸಳೆ ಅದೇ ಊರಿನ ಹೊಲಗೇರಿಯಲ್ಲಿ ಒಂದು ಆಡಿನ ಬಸಿರನ್ನು ಸೇರಿಕೊಂಡು, ಅಲ್ಲಿಯೇ ಬೆಳೆದು ಆಡಿನ ರೂಪದಿಂದ ಇಳೆಗಿಳಿಯಿತು. ೫೦, ಮತ್ತೊಂದು ದಿನ, ಮುಳ್ಳು ಹಂದಿಯಾಗಿದ್ದುದು ಮೀನಾಗಿ ಹುಟ್ಟಿದ್ದು, ಬಲೆ ಬೀಸಿದಾಗ ಅದಕ್ಕೆ ಸಿಕ್ಕಿಕೊಂಡಿತು. ಅದನ್ನು ಕಂಡ ರಾಜನು ಅದುವೇ ಶ್ರಾದಕ್ಕೆ ಶ್ರೇಷ್ಠವಾದ ಕೆಂಪು ಮೀನೆಂದು Page #60 -------------------------------------------------------------------------- ________________ ಮೂರನೆಯ ಅವತಾರ ಉಳಿದ ಕಡೆ ಜೀವಮೇಜು ಟೆಯುತ್ತಿರೆ ನೀರೊಳಿರಿಸಿ ಜೀವಶ್ರಾದ್ಧಕುಣಿದಿರ್ದ ಮಾಜನಂಗಳ್ ಕಳೆಯುಂಡಾಪೋಶಿಪಲ್ಲಿ ನೆನೆದುದು ತನ್ನ ಮೀನಾಗಿ ಸಾಯುತಿರ್ದಪನಾನೀ ಪಾರ್ವರ್ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳಪರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ ಎನುತುಂ ಜಾತಿಸರನಪ್ರನಿಮೇಷಂ ಜೀವಿತಾಂತ್ಯದೊಳ್ ಮುನ್ನೆಗೆದಾಡಿನ ಬಸಿಲ್ ಬಂದುದು ಪೋರಿತಿನ ರೂಪಿಂ ಬೆಳೆದು ಬಟಿಕ ಮದನೋನ್ಮತಂ ಬೆದೆಯಾದ ತಾಯನೇಟಿಇದು ಸೋರ್ಕಿದ ಗೂಳಿ ತಾಯನೇಚಿತ್ತೆಂಬಂದದೆ ಮತ್ತದೊಂದು ಬಸ್ತಕಮದನಿಕೆಯಲ್ ಸತ್ತು ಪೊಕ್ಕುದಜೆಯೊಳ್ ಜೀವಂ ಅಲ್ಲಿಯೆ ಪೋಂತಪುದುಮದು ಮೆಲ್ಲನೆ ತನೆ ತೀವಿ ಸುಳೆಯೆ ಕಂಡೊರ್ಮೆ ಮಹೀ ವಲ್ಲಭನುಂ ಬೇಂಟೆಯೊಳಡಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ ೫೫ ಗ್ರಹಿಸಿಕೊಂಡು ಅದನ್ನು ಒಂದು ಕಡೆಯಿಂದ ಅಡುಗೆ ಮಾಡಿಸಿದನು.೨ ೫೧. ಜೀವಶ್ರದ್ದಾಕ್ಕಾಗಿ ಅದನ್ನು ನೀರಿನಲ್ಲಿರಿಸಿ ಬೇಯಿಸುತ್ತಾ ಇದ್ದಾಗ ಅದರ ಜೀವ ಏರುತ್ತಲೂ ಇಳಿಯುತ್ತಲೂ ಇತ್ತು. ಶ್ರಾದಕ್ಕೆ ಬಂದ ಮಹಾಜನಗಳು ಹೊಟ್ಟೆ ತುಂಬ ಊಟ ಮಾಡಿ ಉತ್ತರಾಪೋಷಣವನ್ನು ತೆಗೆದುಕೊಳ್ಳುತ್ತಿದ್ದರು. ಆಗ ಆ ಮೀನು ತನ್ನ ವಿಷಯವನ್ನು ನೆನೆದುಕೊಂಡಿತು : ೫೨. “ನಾನಿಲ್ಲಿ ಮತ್ತ್ವ ಜನವನ್ನು ಪಡೆದು ಸಾಯುತ್ತಾ ಇದ್ದೇನೆ ; ಈ ಬ್ರಾಹ್ಮಣರು ಯಶೋಧರನು ಸ್ವರ್ಗದಲ್ಲಿ ಸುಖವಾಗಿರಲಿ !” ಎಂದು ಒದರುತ್ತಾ ಇದ್ದಾರೆ ! ಅವರ ಮಾತನ್ನು ಈ ಭೂಪತಿಯೂ ನಂಬಿಕೊಂಡಿ ದ್ದಾನೆ. ಅಯೋ ವಿಧಿಯೇ !” ೫೩. ಪೂರ್ವಜನ್ಮದ ಸ್ಮರಣೆಯಿಂದ ಮೀನು ಈ ರೀತಿ ತನ್ನಲ್ಲೇ ಹೇಳಿಕೊಳ್ಳುತ್ತಾ ಜೀವವನ್ನು ಕಳೆದುಕೊಂಡಿತು. ಚಂದ್ರಮತಿ ಈ ಮೊದಲೇ ಆಡಾಗಿ ಜನಿಸಿದ್ದಳಷ್ಟೇ. ಆ ಮೀನು ಆ ಆಡಿನ ಗರ್ಭದಲ್ಲಿ ಹೋತವಾಗಿ ಹುಟ್ಟಿತು, ಬೆಳೆಯಿತು. ಸಾಕಷ್ಟು ಪ್ರಾಯವಾದಾಗ ಈ ಹೋತವು ಕಾಮದಿಂದ ಸೊಕ್ಕಿತು. ೫೪. ತಾಯಿಗೂ ಬೆದೆಯ ಕಾಲವಾಗಿತ್ತು. ಸೊಕ್ಕಿದ ಹೋತವು ಅದಕ್ಕೇ ಹತ್ತಿತು. “ಸೊಕ್ಕಿದ ಗೂಳಿ ತಾಯನ್ನು ಹತ್ತಿತು” ಎಂಬಂತಾಯಿತು ನಡೆದ ಘಟನೆ ! ಆಗ ಇನ್ನೊಂದು ಹೋತವು ಬಂದು ಈ ಹೊತಕ್ಕೆ ಹಾದು ಇದರ ಜೀವವನ್ನೆ ತೆಗೆಯಿತು. ಸತ್ತ ಈ ಆಡು ತಾಯಿಯ ಬಸಿರನ್ನೇ ಸೇರಿಕೊಂಡಿತು. ೫೫. ಅಲ್ಲಿ ಹೋತವಾಗಿ ಬೆಳೆಯುತ್ತಾ ಇತ್ತು. ಬಸಿರು ಮೆಲ್ಲಮೆಲ್ಲನೆ ತುಂಬಿ ಬೆಳೆಯಿತು. ತಾಯಿ ಆಡು ಮೆಲ್ಲನೆ ಸಂಚರಿಸುತ್ತಾ ಇತ್ತು. Page #61 -------------------------------------------------------------------------- ________________ ೫೬ ಯಶೋಧರ ಚರಿತೆ ಇಸೆ ಪಸುಮಟೆ ಯೋನಿಮುಖ ಪ್ರಸವಕ್ಕಲಸಿದವೊಲೇಜ ಬಾಯಿಂ ತಾಯೊ೦ದಸುವೆರಸು ಬಿರ್ದುದಂ ರ ಕ್ರಿಸಲಿಂ ಮಾದರಂಗೆ ಕರುಣದಿನರಸಂ ೬ ಒರ್ಮೆ ಯಶೋಮತಿ ಮೃಗಯಾ ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂದೆರ್ಮೆಯ ಪೋರಿಯನಿಕ್ಕಿದನೂರ್ಮಾರಿಗೆ ಮತ್ತಮದನೆ ಮಹಳಕಿತ್ತಂ ೫೭ ಅದಜಡಗು ಮುಗ್ಗಿ ಪುಟು ಪತಿದೊಡಾಜಲ್ ಪರಪೆ ಕಾಗೆಯುಂ ನಾಯುಂ ಮುಟ್ಟಿದೊಡದನೆ ಶುದ್ಧಮಂ ಮಾಬೀದನಿಂತೆಂದೊದಿದರ್ ಪುರೋಹಿತರೆಲ್ಲಂ eses ಶುಚಿರಜರಜಸಿ ಭವೇನ್ಮಾಸ್ ಪಚನೇ ಶೃಕ್ಷ ಪ್ರದೋಷವೆಂಬುದು ವೇದ ಪ್ರಚುರಮೆನೆ ಕೇಳು ನೃಪನಾ ವಚನಮುಮಂ ನಂಬಿ ನೆರೆದ ಪೊಲೆಯರ ಪೋಂತಂ ೫೯ ಯಶೋಮತಿ ಬೇಟೆಗೆ ಹೋಗಿದ್ದನು. ಅವನಿಗೆ ಅಲ್ಲಿ ಒಂದು ಪ್ರಾಣಿಯೂ ಸಿಕ್ಕಲಿಲ್ಲ. ಮಾಂಸ ಬೇಕಾಗಿದ್ದುದರಿಂದ ಎದುರು ಕಾಣಸಿಕ್ಕಿದ ಗರ್ಭಿಣಿಯಾದ ಆಡನ್ನೆ ಬಾಣ ಬಿಟ್ಟು ಕೊಂದಿಕ್ಕಿದನು. ೫೬. ಯೋನಿಯ ಮುಖಾಂತರ ಜನ್ಮತಾಳುವುದು ಉಚಿತವಲ್ಲವೆಂಬಂತೆ ಆ ಎಳೆಯ ಹೋತವು ಬಾಣ ತಾಗಿದ ತಾಯಿಯ ಗಾಯದ ಮುಖಾಂತರ ಕೆಳಕ್ಕೆ ಜಗುಲಿತು. ಅದರ ತಾಯಿಯ ಜೀವವೂ ತೊಲಗಿತು. ರಾಜನಿಗೆ ಆಡಿನ ಮರಿಯ ಮೇಲೆ ಕರುಣೆಯುಂಟಾಯಿತು. ಅವನು ಅದನ್ನು ರಕ್ಷಿಸುವಂತೆ ಮಾದರನೊಬ್ಬನಿಗೆ ಒಪ್ಪಿಸಿದನು. ೫೭. ಯಶೋಮತಿಗೆ ಮತ್ತೊಮ್ಮೆ ಬೇಟೆಯಾಡುವ ಅಭಿಲಾಷೆ ತೀವ್ರವಾಯಿತು. ಅವನು ಮಾರಿಗೆ ಹರಕೆ ಹೇಳಿ ಮುಂಬರಿದನು. ಅಲ್ಲಿ ಅವನಿಗೆ ಜಿಂಕೆಯೊಂದು ಸಿಕ್ಕಿತು. ಅನಂತರ ಅವನು ಒಂದು ಕೋಣವನ್ನು ಕೊಂದು ಊರ ಮಾರಿಗೆ ಬಲಿಕೊಟ್ಟನು. ಅದನ್ನೆ ಮಹಾಲಯಕ್ಕಾಗಿ ಕೊಟ್ಟನು. ೫೮. ಆದರೆ ಅದರ ಮಾಂಸವು ಮುಗ್ಗಿ ಅದರಲ್ಲಿ ಹುಳು ಹುಟ್ಟಿಕೊಂಡಿತು. ಆದುದರಿಂದ ಅದನ್ನು ಒಣಗಿಸುವುದಕ್ಕಾಗಿ ಬಿಸಿಲಲ್ಲಿ ಹರಡಲಾಯಿತು. ನಾಯಿ ಕಾಗೆಗಳು ಬಂದು ಆ ಮಾಂಸವನ್ನು ಮುಟ್ಟಿ ಶುದ್ದಿ ಕೆಡಿಸಿದುವು. ಶುದ್ದೀಕರಣ ವಿಧಾನವನ್ನು ಪುರೋಹಿತರು ತಿಳಿಸಿದರು. ೫೯. “ನಾಯಿ ಮುಟ್ಟಿದ ದೋಷವುಂಟಾದಲ್ಲಿ ಮಾಂಸ ಪಚನಮಾಡುವಾಗ ಆಡಿನ ರಜಸ್ಸನ್ನು ಹಾಕಿದರೆ ಅದು ಶುದ್ಧವಾಗುತ್ತದೆ, ಎಂದು ವೇದದಲ್ಲಿ ಸ್ಪಷ್ಟವಾಗಿ ಇದೆ”. ಈ ಮಾತನ್ನು ಕೇಳಿದ ರಾಜನು ಇದನ್ನು Page #62 -------------------------------------------------------------------------- ________________ ೫೮ ಯಶೋಧರ ಚರಿತೆ ಇತ್ತಲ್ ನೃಪನಂದೆಚೊಡೆ ಸತಾಡು ಕಳಿಂಗದಲ್ಲಿ ಕೋಣನ ಮೆಯ್ಯಂ ಪೆರೆ ಬೆನ್ ಮುಆವಂತಿರೆ ಪಿತ್ತಳೆಯಂ ಪೇಟೆ ತಂದು ಬಿಟ್ಟ೦ ಪರದಂ ನೀರಡಸಿ ಕುಡಿದು ಸಿಂಪೆಯ ನೀರೊಳಗರೆಮುಲುಗಿ ಮಗ್ಗುಲಿರ್ದುದು ಮುನೀರಂ ನೀಲಾಚಲದಿಂ ಸಾರಂಗಟ್ಟಿದವೊಲಿರೆ ಬುಲ್ಲು ಲುಲಾಯಂ ಆಯೆಡೆಗೆ ನೀರುಣಲ್ಲರೆ ಜಾಯಿಲಮರಸನ ಪಸಾಯಿತಂ ಕೊಡೆರಡುಂ ಕೊಯೆ ಸೆಳೆದತ್ತಮಹಿಷ ನ್ಯಾಯಂ ನಿಲೆ ಕೊಂದುದಂತದಂ ಕೇಳರಸಂ ಕಡೆಯೋಳ್ ಕೋಣನ ಪೊರ್ಕುಳಿ ಗಿಡುವಿಗೆ ಮಿತ್ತೆಂಬ ತಂದೆ ಪರದನ ಬೀಡಂ ಬಿಡೆ ಸೂರೆಗೊಂಡು ತನ್ನಂ ಪಿಡಿತರಿಸಿ ವಿಚಿತ್ರಮಪ್ಪ ಕೋಲೆಯಂ ಕೊಂದಂ ಸೊಡರಿಂ ಮುಡುಪಿಂದಂ ಪಿಂತಣ ಮುಂತಣ ಕಾಲ್ಕಳಲ್ಲಿ ಬೆಟ್ಟಿಸಿ ದಸಿಯಂ ನೆಣಮುರ್ಚೆ ಬೆಂಕಿಯಿಂ ಕೆಳ ಗಣ ಮೆಯ್ಲಿಂದುರುಪಿ ಬರಿಯ ಬಾಡಂ ತೆಗೆದು ೬೯ ಅವನ ಕಷ್ಟಗಳಿಗೆ ಕೋಡು ಮೂಡಿದಂತೆ೫೩ ಈ ಯೋಚನೆಯೂ ಅವನಿಗೆ ತಲೆದೋರಿತು ; ಸಂಕಟ ಹೆಚ್ಚಿತು. ೬೫. ಇತ್ತ ಯಶೋಮತಿಯ ಬಾಣದ ಪೆಟ್ಟಿನಿಂದ ಸತ್ತ ಆಡು ಕಳಿಂಗದಲ್ಲಿ ಕೋಣನ ದೇಹವನ್ನು ಪಡೆಯಿತು. ಅದು ಒಬ್ಬ ವ್ಯಾಪಾರಿಯ ವಶವಾಯಿತು. ಒಂದು ದಿನ ಅವನು ಅದರ ಬೆನ್ನ ಮೇಲೆ ಹೊರಲಾರದಷ್ಟು ಹಿತ್ತಾಳೆಯ ಹೊರೆಯನ್ನು ಹೇರಿ ತಂದು ಬಳಿಕ ಹೊರೆಯಿಳಿಸಿ ದಡದಲ್ಲಿ ಅದನ್ನು ಬಿಟ್ಟನು. ೬೬. ಅದಕ್ಕೆ ಬಾಯಾರಿಕೆ ತೀವ್ರವಾಯಿತು. ಹತ್ತಿರದಲ್ಲೇ ಇದ್ದ ಸಿಂಪಾನದಿಯ ನೀರನ್ನು ಕುಡಿದು ಅದು ಅಲ್ಲೇ ನೀರಲ್ಲಿ ಅರ್ಧ ಮುಳುಗಿ ಮಲಗಿಕೊಂಡಿತು. ಆಯಾಸ ಗೊಂಡ ಕೋಣವು ಕಡಲಿಗೆ ನೀಲಾಚಲದ ಕಟ್ಟೆ ಕಟ್ಟಿದಂತೆ ಕಾಣುತ್ತಿತ್ತು. ೬೭. ಅರಸನ ಅಚ್ಚುಮೆಚ್ಚಿನ ನಾಯಿಯೂ ಅಲ್ಲಿಗೆ ನೀರು ಕುಡಿಯಲು ಬಂತು ಈ ಕೋಣವು ಅದನ್ನು ತನ್ನೆರಡೂ ಕೋಡುಗಳಿಂದ ತಿವಿದು ಕೊಂದೇಬಿಟ್ಟಿತು. ಇದು ಅಶ್ವಮಹಿಷ ನ್ಯಾಯದಂತೆ ಪರಿಣಮಿಸಿತು. ರಾಜನಿಗೆ ಈ ಸುದ್ದಿ ತಿಳಿಯಿತು. ೬೮. ಕೋಣನ ಕದನ ಕುತೂಹಲವು ಗಿಡಕ್ಕೆ ಮೃತ್ಯು ಎಂಬಂತೆ ರಾಜನು ಆ ವ್ಯಾಪಾರಿಯ ಬೀಡನ್ನೆಲ್ಲ ಸೂರೆ ಮಾಡಿದನು. ಆ ಕೋಣವನ್ನು ಹಿಡಿತರಿಸಿದನು ; ವಿಚಿತ್ರವಾದ ರೀತಿಯಲ್ಲಿ ಅದನ್ನು ಕೊಂದನು. ೬೯. ಅದರ ಹಿಂದಣ ಮತ್ತು ಮುಂದಣ ಕಾಲುಗಳಿಗೆ ದಸಿಯನ್ನು ನಾಟಿಸ ಲಾಯಿತು. ಅದರ ನೆರವಿನಿಂದ ಅಡಿಮೇಲಾಗಿ ತೂಗಾಡಿಸಿ ಕೆಳಬದಿಯಿಂದ ದೀಪದ ಜ್ವಾಲೆಯನ್ನು ಕೋಣನ ಹೆಗಲಿನ ಭಾಗಕ್ಕೆ ಹಿಡಿದು ಅಷ್ಟು ಭಾಗವನ್ನು ಮಾತ್ರ ಉರಿಸಲಾಯಿತು. ಅಲ್ಲಿಂದ ಕೊಬ್ಬು ಹೊರಗೆ ಸ್ರವಿಸತೊಡಗಿತ್ತು. ಅಂತಹ Page #63 -------------------------------------------------------------------------- ________________ ಮೂರನೆಯ ಅವತಾರ ಆಸನದಿಂ ಬಾಯಿಂ ಪೊಯ್ ಸಾಸವೆ ಮೆಣಸುಪುಗೂಡಿ ನಿಲವಿನ ಸೂಡಿಂ ಲೇಸಾಗಿ ಬೆಂದ ಬಾಡಂ ಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿದಂ ಅದು ಸತ್ತು ಸವೆದೋಡಾ ಮಾಂ ಸದ ಸವಿಗಂಡರಸಿ ಬಾಣಸಿನ ಮನೆಯೋಳ್ಕ ಟ್ಟಿದ ಪೊಂತಂ ತಿಂಗು ಮಾಡಿದಳದನರಿವಲ್ಲಿ ತೊತ್ತಿರೆಂಗುಂ ತಮ್ಮೊಳ್ ಬಸಿದಪುದು ಮೆಯ್ಯ ಕೀವುಂ ರಸಿಗೆಯುಮೊಡಲಟಿದುದಾದೊಡಂ ಮಾಣಲೆ ನಾಮ್ ಬಸನಿಗತನಮಂ ಮಾಣೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ ಮದನನ ಮಾಜಿಂಕದ ಚೆಂದದ ಗಂಡನನಮ್ಮತದನ್ನಳತೆಯನಿವವದೆ ಕೊಂದಳ್ ಪಾಪಂ ತಿನೋದು ಪಾತಕಿ ಪುಲೆತೊಡಲ್ಲದೇಂ ಸತ್ತವಳೇ ತೊನ್ನನ ಕೂಟದಿನಾದುದು ತೊನ್ನಿ ರೋಗಕ್ಕೆ ಬಾಡು ಕಳ್ ವಿಷಮೆನೆಯುಂ ಮನ್ನಿಸಳೆ ಮಗನ ಮಾತನಿದೇಂ ನಾಯಕನರಕಮೀಕೆಗೊಚ್ಚತಮಾಯೋ ೭೪ ಕೊಬ್ಬು ತುಂಬಿದ ಮಾಂಸವನ್ನು ಮಾತ್ರ ಅಲ್ಲಿಂದ ತೆಗೆಯಲಾಯಿತು. ೭೦. ಅದರ ಹಿಂಬದಿಯಿಂದಲೂ ಮುಂದಣ ಬಾಯಿಯಿಂದಲೂ ಸಾಸಿವೆ ಮೆಣಸು ಉಪ್ಪು ಬೆರಸಿ ಒಳಗೆ ತಳ್ಳಲಾಯಿತು. ಅನಂತರ ಅದನ್ನು ಒಂದೇ ರೀತಿಯ ಉರಿಯಿಂದ ಬೇಯಿಸಲಾಯಿತು. ಈ ಬೆಂದ ಮಾಂಸವನ್ನು ಮುಚ್ಚಿಟ್ಟು ಅಮೃತಮತಿಗೆ ಕಳುಹಿಸಿದನು, ಯಶೋಮತಿ, ೭೧. ಅಂತೂ ಅದು ಸತ್ತಿತು ; ಹೋಯಿತು. ಅದರ ಮಾಂಸವನ್ನು ಉಂಡು ಸವಿಗಂಡ ಅಮೃತಮತಿ ಅಡಿಗೆಯ ಮನೆಯ ಬಳಿ ಕಟ್ಟಿದ್ದ ಹೋತವನ್ನು ತಿನ್ನುವುದಕ್ಕೆ ಉಪಯೋಗಿಸಿದಳು. ಅದನ್ನು ಕೊಚ್ಚಿ ಕೊಲೆ ಮಾಡುತ್ತಿದ್ದಾಗ ಅವಳ ದಾಸಿಯರು ತಂತಮ್ಮೊಳಗೆ ಆಕೆಯನ್ನು ಕುರಿತು ಮಾತಾಡತೊಡಗಿದರು. ೭೨. ಇವಳ ಮೆಯ್ಯಂದ ಕೀವೂ ರಸಿಕೆಯೂ ಸುರಿಯುತ್ತ ಇದೆ. ದೇಹವು ಪೂರ್ಣ ಹಾಳಾಗಿ ಹೋಗಿದೆ. ಆದರೂ ಈ ನಾಯಿಬುದ್ದಿಯನ್ನು ನಿಲ್ಲಿಸಲಿಲ್ಲ. ಈ ಹೊಲಸು ನಾರುವವಳನ್ನು ಕೊಂಡೊಯ್ಯುವುದಕ್ಕೆ ಯಮನೂ ಹೇಸಿದನೊ ಏನೊ. ೭೩. ಮದನನ ಪ್ರತಿ ರೂಪದಂತೆ ಸುಂದರನಾಗಿದ್ದನು, ಈಕೆಯ ಗಂಡ ; ಇವಳ ಅತ್ತೆ ಅಮೃತದಂತಿದ್ದಳು. ಇವಳಿಗೆ ಅವರಿಬ್ಬರೂ ಮೆಚ್ಚಲಿಲ್ಲ: ಇಬ್ಬರನ್ನೂ ಕೊಂದುಹಾಕಿದಳು. ಇವಳನ್ನು ಈಕೆಯ ಪಾಪವೂ ನುಂಗುವುದಿಲ್ಲವಲ್ಲ! ಈ ಪಾತಕಿ ಹುಳುತುಂಬಿಯೇ ಸಾಯಬೇಕಲ್ಲದೆ ಅನ್ಯಥಾ ಇವಳಿಗೆ ಮರಣ ಬಾರದು. ೭೪. “ಕುಷ್ಠರೋಗಿಯ ಸಂಪರ್ಕ ಮಾಡಿದ ಇವಳಿಗೆ ಅದೇ ಕುಷವು ಅಂಟಿಕೊಂಡಿದೆ. ಈ ರೋಗಕ್ಕೆ ಮಾಂಸವೂ ಮದ್ಯವೂ ವಿಷವೆಂದು ಮಗ ಹಲವು ಬಾರಿ Page #64 -------------------------------------------------------------------------- ________________ ೬೦ ಎಂಬ ನುಡಿಗಳುಮೋಪಳ್ ಪಾನ ಕೂಡಿದ ನಣ್ಣುಗಂಡುಂ ತಮದಿಂ ದಂ ಬೆಂದು ಸತ್ತುದರೆಗೊ ಯುಣ್ಣುದಂ ನೊಂದು ಸತ್ತುದಿಲ್ಲಜಪೋತಂ ಆ ರೌದ್ರಹತಿಗೆ ತವೆ ಸಂ ಸಾರಂ ತತ್ಪುರದ ಪೋಗೆ ಪುಟ್ಟಿದುವಂತಾ ಸೈರಿಭಮುಂ ಪೋಂತುಂ ಪೊಲ ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಳ್ ಕರಮೇಯುಳ್ಳ ಒಳ್ಳೆಗ ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾದರನಿತ್ತು ಚಂಡಕರ್ಮ೦ ಗರಸನವಂ ನೋಡಿ ಸಲಹು ನೀನೆಂದಿತ್ತಂ ಯಶೋಧರ ಚರಿತೆ ವಿಸರುಹದಂತೆ ಕೇಸರಮನಾಂತುದು ಮೆಯ್ಯಲಿಯಂತಿರಾರೆ ಕೂ ರ್ಪೆಸೆದುದು ಚಾಗಿಯಂತೆ ನೆ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದ ರಂಜಿಸಿದುದು ಪುಂಜನಗ್ಗದ ಸುವಸ್ತುವಿನಂತಿಗೆ ತಳ್ಳು ಹೇಂಟೆಯೊಳ್ 28 22 ನ 2.es ಹೇಳಿನೋಡಿದನು. ಆದರೂ ಇವಳು ಅವುಗಳನ್ನು ಬಿಡಲೊಲ್ಲಳು. ಇವಳಿಗೆ ಅತ್ಯಂತ ದುರ್ಘಟವಾದ ನರಕದ ಮೇಲೆಯೇ ಮೆಚ್ಚಿಗೆಯಾಗಿರಬೇಕು.” ೭೫. ಈ ಮಾತನ್ನೆಲ್ಲ ಆ ಎಳೆಯ ಹೋತ ಕೇಳಿತು. ಅದು, ತನ್ನ ಹೆಂಡತಿಯೆನ್ನಿಸಿದ್ದವಳು ಜಾರನನ್ನು ಕೂಡಿಕೊಂಡಿದ್ದ ರೀತಿಯನ್ನು ಕಂಡಿತು. ಈ ಎರಡು ಬಗೆಯ ಕತ್ತಲು ಕವಿದು, ಸಂತಾಪದಿಂದ ಬೆಂದು, ಆ ಹೋತ ತನ್ನ ಪ್ರಾಣವನ್ನು ಕಳೆದುಕೊಂಡಿತಲ್ಲದೆ, ತನ್ನನ್ನು ಅರ್ಧ ಕಡಿದು ಮಾಂಸ ತೆಗೆದು ಉಣ್ಣುವುದರಿಂದಾಗಿ ನೊಂದು ಸತ್ತುದೇ ಅಲ್ಲ. ೭೬. ಭಯಂಕರವಾದ ಹತ್ಯೆಗೆ ಒಳಗಾಗಿ ಆ ಕೋಣವೂ ಹೋತವೂ ತಮ್ಮ ಜನ್ಮವನ್ನು ನೀಗಿಕೊಂಡವು. ಅವೆರಡೂ ಆ ನಗರದ ಹೊರವಳಯದ ಹೊಲೆಗೇರಿಯ ಮಾದರ ಮನೆಯ ಕೋಳಿಯ ಗರ್ಭದಲ್ಲಿ ಜನ್ಮ ತಾಳಿದುವು. ಮಾದರವನಿಗೆ ಈ ಎರಡೂ ಕೋಳಿಗಳ ಬೆಳವಣಿಗೆಯನ್ನು ಕಂಡು, ಇವುಗಳನ್ನು ಅರಸನಿಗೆ ಒಪ್ಪಿಸುವುದು ವಿಹಿತವೆಂದು ತೋರಿತು. ೭೭. ಅವನು ಬಲಿತ ಆ ಎರಡನ್ನೂ ಯಶೋಮತಿಗೆ ಸಲ್ಲಿಸಿದನು. ಅರಸನು ಅವುಗಳನ್ನು ನೋಡಿ, ಚಂಡಕರ್ಮನಿಗೆ ಅವುಗಳನ್ನು ಕೊಟ್ಟು ಸಾಕುವಂತೆ ಹೇಳಿದನು. 2.05. ಹುಂಜವು ತಾವರೆಯಂತೆ ಕೇಸರವನ್ನು ಪಡೆದುಕೊಂಡಿತು. ವೀರನಂತೆ ಅದರ ಕೂಗಿಗೆ ಕೂರ್ಪುಂಟಾಯಿತು. ತ್ಯಾಗಿಯಂತೆ ಅದರ ಕೊಟ್ಟು ಶೋಭಿಸಿತು. ರಾಧೆಯಂತೆ ತಲೆ ಮುಡಿ ಎತ್ತರದಲ್ಲಿ ಕೊಂಕುಗೊಂಡಿತು. ಚಂದ್ರನಂತೆ ಅದು ಒಳ್ಳೆಯ ಪಕ್ಷಗಳಿಂದ ಸೊಗಯಿಸಿತು. ಹೇಂಟೆಯನ್ನು ಸೇರಿ Page #65 -------------------------------------------------------------------------- ________________ ಮೂರನೆಯ ಅವತಾರ ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ಯಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ ಸುವಸ್ತುವಿನಂತೆ ಮನೋಹರವಾಯಿತು.೫೫ ೭೯. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ ಕುಮಾರನು ಸರಿಯಾದ (ಪುಣ್ಯದ) ವಿಷಯನ್ನು ಹೇಳಿ ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭುಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ. Page #66 -------------------------------------------------------------------------- ________________ ನಾಲ್ಕನೆಯ ಅವತಾರ ರತಿವೆರಸು ಮನಸಿಜಂ ಬನದತಿಶಯಮಂ ನೋಡಲೆಂದು ಬರ್ಪಂತೆ ಯಶೋಮತಿ ಕುಸುಮಾವಳಿವೆರಸುನೃತಪೀತಚ್ಛತ್ರನಂದನಂ ನಡೆತಂದಂ ಬಾಳಲರ್ಗುಡಿ ಪಿಕರುತಿ ಬಾಯೌಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ ಪಾಳಂ ಬರೆ ಶೋಧಿಪ ವನಪಾಳನವೊಲ್ ಮುಂದೆ ಬಂದುದಂದು ವಸಂತಂ ತಳಿರ್ಗಳ ಚಾಳೆಯಮೆಳಲತೆಗಳ ಲುಳಿ ತಿಳಿಗೊಳದ ತೆರೆಯ ತಾಳಂ ಪೊಸವೂಗಳ ನೋಟಮಾಗೆ ನೃಪನಂ ಮಳಯಾನಿಳನೆಂಬ ನಟ್ಟುವ ಕೇಳಿಸಿದಂ ಅಗೆವೊಯ್ದ ಚಂದ್ರಮಂಡಲದಗೆಗಳವೊಲ್ ಕಾರಮುಗಿಲ ಕಿರಿಗಳವೊಲ್ ಸೊಗಯಿಸಿದುವು ಬೆಳೊಡೆ ಕಂ ಬಗಂಬದೊಳ್ ಕೊಂಬುಗೊಂಬಿನೊಳ್ ಪೆರಿಡಿಗಳ್ ೧. ಕಾಮನೂ ರತಿಯೂ ಜತೆಗೂಡಿ ವನದ ಅತಿಶಯವೇನೆಂದು ನೋಡಲು ಬರುವಂತೆ, ಒಮ್ಮೆ ಯಶೋಮತಿ ತನ್ನ ಪತ್ನಿಯಾದ ಕುಸುಮಾವಳಿಯನ್ನೂ ಕೂಡಿಕೊಂಡು ಉದ್ಯಾನವನಕ್ಕೆ ಬಂದನು. ತಲೆಯ ಮೇಲೆ ಉನ್ನತವಾಗಿ ಮೆರೆಯುತ್ತಿದ್ದ ಬಂಗಾರದ ಛತ್ರದಡಿಯಲ್ಲಿ ಸಂತೋಷದಿಂದ ಅವನು ಬಂದನು. ೨. ವಸಂತಕಾಲವೂ ಆಗ ಆಗಮಿಸಿತು. ಹೂವಿನ ಕುಡಿಗಳೇ ಕೈಯ ಕತ್ತಿಯಾಗಿ, ಕೋಗಿಲೆಯ ಕೂಗೇ ವಾಗ್ವಿನೋದವಾಗಿ, ಮಾವಿನ ಚಿಗುರ ಕೆಂಪೇ ದೀಪವಾಗಿ, ಅರಸನು ಬರುವಾಗ ವನವನ್ನೆಲ್ಲ ಸರಿಪಡಿಸುವ ವನಪಾಲಕನಂತೆ ವಸಂತವು ಬಂದಿತು. ೩. ಬೆನ್ನಲ್ಲೇ ಮಲಯಮಾರುತನು ನಟ್ಟುವನಾಗಿ ಕಾಣಿಸಿಕೊಂಡನು. ಚಿಗುರುಗಳ ನೆಗೆತ, ಎಳಲತೆ ಗಳ ಅಲುಗಾಟ, ನಿರ್ಮಲ ಸರೋವರದ ತೆರೆಗಳ ತಾಳ, ಹೊಸಹೂಗಳ ಸುಂದರ ದೃಶ್ಯ ಇವುಗಳಿಂದ ಅವನು ರಾಜನ ಮನಸ್ಸನ್ನು ವಿನೋದಗೊಳಿಸಿದನು. ೪. ಉದ್ಯಾನದ ಪ್ರತಿಯೊಂದು ಕಂಬದಲ್ಲಿಯೂ ಬೆಳೊಡೆ ಸೊಗಸಾಗಿ ತೋರುತ್ತಿತ್ತು. ಅದನ್ನು ಕಾಣುವಾಗ ಚಂದ್ರಮಂಡಲದ ಅಗೆಗಳನ್ನು ಅಲ್ಲಲ್ಲಿ ನೆಟ್ಟಿಟ್ಟಂತೆ ಹೃದಯಂಗಮ ವಾಗಿತ್ತು. ಹಾಗೆಯೇ ಮಳೆಗಾಲದ ಮೋಡಗಳಿಂದ ಮಳೆಹನಿಗಳು ಉದುರಿದಂತೆ ಪ್ರತಿಯೊಂದು ಮರದ ಕೊಂಬೆಯಲ್ಲೂ ದೊಡ್ಡ ದೊಡ್ಡ ಮಿಡಿಗಳು ಶೋಭಿಸುತ್ತಿದ್ದವು. Page #67 -------------------------------------------------------------------------- ________________ ನಾಲ್ಕನೆಯ ಅವತಾರ ಎಲೆ ಸುಲಿದೆಡೆಗಳ್ ಕಣ್ ಕಸೆಲೆಯೆಡೆ ಗೆಂಟೊಡೆದು ಮೊನಸಿ ನನೆಕೊನೆದು ಮುಗುಛಲರ್ದು ಮಣಿದುಂಬಿಗಂ ತೆಂ~ ಬೆಲರ್ಗ೦ ಮುದ್ದಾದುವಲ್ಲಿ ಪೊಸಮಲ್ಲಿಗೆಗಳ್ ಪೊಂಬಾಟಿ ಚಾಮರಂ ಚಂದ್ರಂ ಬೆಳೊಡೆ ಕೇಳಿಶಿಖರಿ ಸಿಂಹಾಸನಮಾ~ ಯೆಂಬಿನೆಗಮಂಗಜಂ ಮಾವೆಂಬ ಕುಮಾರಂಗೆ ಪಟ್ಟಮಂ ಕಟ್ಟಿಸಿದಂ ಕಡೆಗಣ್ಣಲ್ ಕೇದಗೆಯಂ ಪಡೆದುವು ಮಲ್ಲಿಗೆಗೆ ಸೆಳುಗುರ್ ಸಂಪಗೆಯಂ ಪಡೆದುವು ಪಾದರಿಗೆನೆ ಸಂಗಡರಿಂದಲರ್ಗೊಯ್ಯ ವಾರವನಿತೆಯರೆಸೆದರ್‌ ಮಳಯಜದ ಮೋಲೆಯ ಕುಂಕುಮದಳಕದ ಕತ್ತುರಿಯ ಬಣ್ಣವಣಿಗೆ ಕೊಳದೊಳ್ ತಳರ್ದಿರೆ ಜಲರುಹಮುಖಿಯರ್' ಜಳಕೇಳಿಯ ನೆವದಿ ದೂಳಿಚಿತ್ರಂ ಬರೆದರ್‌ ತೆರೆಮುಗಿಲನಡರ್ವ ವಿದ್ಯಾಧರಿಯೆಂಬಿನಮೊರ್ವಳೇಟೆ ಕೃತಕಾದ್ರಿಯನೇಂ ದೊರೆಯಾದಳೊ ರತಿನಾಥನ ಕರುಮಾಡದ ಮದನಮೋಹಿನೀ ಪುತ್ರಿಕೆವೊಲ್ ೫. ಎಲೆಯುದುರಿದ ಸ್ಥಳಗಳಲ್ಲಿ ಕಣ್ಣು ಕಣ್ಣುಗಳಲ್ಲಿ, ಎಲೆಯ ಎಡೆಯಲ್ಲಿ ಮಲ್ಲಿಗೆಯ ಬಳ್ಳಿ ಗಂಟೊಡೆಯಿತು. ಅದೇ ಗಂಟು ಮೊನಚಾಗಿ ನನೆಕೊನೆವೋಯಿತು. ಆ ಬಳಿಕ ಮುಗುಳು ಕಾಣಿಸಿಕೊಂಡು ಅದೇ ಅರಳತೊಡಗಿತು. ಈ ಹೊಸಹೂಗಳು ಮರಿ ದುಂಬಿಗಳಿಗೂ ದಕ್ಷಿಣಾನಿಲಕ್ಕೂ ಮುದ್ದಾದವು. ೬. ಮಾವೆಂಬ ರಾಜಕುಮಾರನಿಗೆ ಕಾಮನು ಪಟ್ಟ ಕಟ್ಟಿಸಿದನು. ಆಗ ಹೊಂಬಾಳೆ ಚಾಮರವಾಗಿ ಬೀಸಿತು. ಎತ್ತಿದ ಬೆಳ್ಕೊಡೆಯಾಗಿ ಚಂದ್ರನು ಶೋಭಿಸಿದನು. ನರ್ತಿಸುವ ನವಿಲೇ ಸಿಂಹಾಸನವಾಗಿ ಪರಿಣಮಿಸಿತು. ೭. ಅಲ್ಲಿ ವಾರವನಿತೆಯರು ಹೂ ಕೊಯ್ಯುವ ಸೊಗಸೇ ಸೊಗಸು. ಅವರ ಕಡೆಗಣ್ಣುಗಳು ಮಲ್ಲಿಗೆಗೆ ಕೇದಗೆಯನ್ನು ಜತೆಗೊಳಿಸಿದವು, ಪಾದರಿಗೆ ಅವರ ಸೆಳ್ಳುಗುರು ಸಂಪಗೆಯನ್ನು ಒಂದುಗೂಡಿಸಿತು. ೮. ಕೆಲವರು ಕಮಲಮುಖಿಯರು ಅಲ್ಲಿ ನೆವಕ್ಕೆ ನೀರಾಟವಾಡುತ್ತಾ ಇದ್ದರು. ನಿಜವಾಗಿ ನೋಡಿದರೆ ಅವರು ಕುಚಗಳಿಗೆ ಲೇಪಿಸಿಕೊಂಡ ಗಂಧ, ಮುಂಗುರುಳಿಗೆ (ಬೈತಲೆಗೆ) ಹಚ್ಚಿದ ಕುಂಕುಮ, ಕೆನ್ನೆಗೆ ಹಾಕಿದ ಕಸ್ತೂರಿಯ ಚಿತ್ರಾಲಂಕಾರ - ಇವುಗಳ ಬಗೆಬಗೆಯ ಬಣ್ಣಗಳಿಂದ ನೀರ ಮೇಲೆ ರಂಗವಲ್ಲಿಯನ್ನು ಬಿಡಿಸುವಂತೆ ಭಾಸವಾಗುತ್ತಿತ್ತು. ೯. ತೆರೆದ ಮುಗಿಲನ್ನೇರಿ ಹೋಗುವ ವಿದ್ಯಾಧರಿಯಂತೆ ಒಬ್ಬಳು ಅಲ್ಲಿದ್ದ ಕೃತಕಗಿರಿಯನ್ನೇರಿದಳು. ಆಗ ಅವಳು ಕಾಮೇಶ್ವರನ ಅರಮನೆಯ ಮದನಕ್ಕೆ ಬೊಂಬೆಯಂತೆ ಬಹಳ ಚೆಲುವಾಗಿ ತೋರುತ್ತಿದ್ದಳು. Page #68 -------------------------------------------------------------------------- ________________ ೬೪ ಬೆಳತಿಗೆವಸದನಮೆಸೆದಿರೆ ತಳಿರ್ಜೊಂಪದೊಳುಯ್ಯಲಾಡಿ ಮೆದಳದೊರ್ವಳ್ ಜಳಜದ ಮಣಿಮಂಡಪದೊಳ ಗಳವೆಯಂ ತೂಗಿ ತೊಟ್ಟಿಲೊಳ್ ಸಾರ್ಚಿದವೊಲ್ ಕೊಳದೊಳಗೋಲಾಡಿ ತಳಿರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾವಳಿಯೊಳ್ ರತಿರಾಗದಿನೋಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ ಗರಟಿಗೆಗಿತ್ತಲ್ ತದ್ದನ ಪರಿಸರದೊಳ್ ಬರುತಮಿರ್ದಕಂಪನರೆಂಬರ್ ತರುಮೂಲದೊಳಿರೆ ನಿಧಿಯಂ ಕುರುಡಂ ಕಾಂತೆ ಚಂಡಕರ್ಮಂ ಕಂಡಂ ಮನುಮಿರೆ ಪುರ್ವಿನ ಮೊದಲೊಳ್ ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್ ಕುನಿದಿರೆ ಪದ್ಮಾಸನದೊಳ್ ತನುವಿಗೆ ಯೋಗೀಂದ್ರನಾತಚಿಂತೆಯೊಳಿರ್ದಂ ಎಳಗಿದನಾತಂ ಗೌರವ ಮತಿಯದೆಯುಂ ದೀಪವರ್ತಿ ನಿಧಿಗಾಣುದುಮೊಲೆಣಗುವ ತೆಲದಿಂ ಮುನಿ ಕಣೆದೊಯ್ಯನೆ ನೋಡಿ ಪರಸೆ ಬಡೆಕಿಂತೆಂದಂ ಯಶೋಧರ ಚರಿತೆ 00 Go GO 02 ೧೪ ೧೦. ಇನ್ನೊಬ್ಬಳು ಬಿಳಿಯ ಬಟ್ಟೆಯನ್ನುಟ್ಟುಕೊಂಡು ಚಿಗುರ ಚಪ್ಪರದಲ್ಲಿ ಉಯ್ಯಾಲೆ ಯಾಡುತ್ತಾ ಮೆರೆಯುತ್ತಿದ್ದಳು. ಆಗ ತಾವರೆಯ ರತ್ನಮಂಟಪದಲ್ಲಿ ಬಾಲಚಂದ್ರನನ್ನು ತೊಟ್ಟಿಲಲ್ಲಿಟ್ಟು ತೂಗುವಂತೆ ಚೆಲುವು ಚೆಲ್ಲುತ್ತಿತ್ತು. ೧೧. ಯಶೋಮತಿಯೂ ಕುಸುಮಾವಳಿಯೊಂದಿಗೆ ಸರೋವರದಲ್ಲಿ ಓಲಾಡಿದನು ; ಚಿಗುರಿದ ಎಳೆಯ ಮಾವಿನ ಮರದಲ್ಲಿ ಉಯ್ಯಾಲೆಯಾಡಿದನು. ಪ್ರೇಮಾನುರಾಗದಿಂದ ಓಕುಳಿಯಾಡಿದನು. ಅನಂತರ ಒಂದು ಕಡೆ ವಿಲಾಸಗೋಷ್ಠಿಯಲ್ಲಿ ಕುಳಿತುಕೊಂಡನು. ೧೨. ಚಂಡಕರ್ಮನು ಎಂದಿನಂತೆ ತಿರುಗಾಡುತ್ತಾ ಆ ಉದ್ಯಾನದ ಕಡೆಗೆ ಬಂದನು. ಅವನಿಗೆ ಅಲ್ಲಿ ಮರವೊಂದರ ಬುಡದಲ್ಲಿ, ಅಕಂಪನರೆಂಬುವರು ಕುಳಿತುಕೊಂಡಿದ್ದುದು ಕಾಣಿಸಿತು. ಅವನಿಗೆ ಆಗ ಕುರುಡನು ಕೊಪ್ಪರಿಗೆಯನ್ನು ಕಂಡಂತಾಯಿತು. ೧೩. ಅವರು ಮನಸ್ಸನ್ನು ಕೇಂದ್ರೀಕರಿಸಿ ಹುಬ್ಬುಗಳ ನಡುವೆ ನಿಲ್ಲಿಸಿದ್ದರು. ಆ ಮನಸ್ಸಿನಲ್ಲಿ ವಾಯುಗಳನ್ನು ನಿಲ್ಲಿಸಿದ್ದರು. ಆ ವಾಯುವಿನಲ್ಲಿ ಇಂದ್ರಿಯಗಳನ್ನೆಲ್ಲ ನಿಲ್ಲಿಸಿದ್ದರು. ಅವರು ಪದ್ಮಾಸನ ಹಾಕಿ ಆತ್ಮಾನುಸಂಧಾನದಲ್ಲಿ ಮಗ್ನರಾಗಿದ್ದ ಯೋಗಿವರ್ಯರಾಗಿದ್ದರು. ೧೪. ಗೌರವವೆಂದರೇನೆಂದರಿಯದಿದ್ದರೂ ಚಂಡಕರ್ಮನು ತನ್ನಿಂದ ತಾನೇ ಅವರೆದುರು ತಲೆಬಾಗಿಸಿದನು. ನಿಧಿಯನ್ನು ಕಂಡ ಕೂಡಲೆ ದೀಪದ ಕುಡಿ ಆ ಕಡೆ ಬಾಗಿಕೊಳ್ಳುವುದಷ್ಟೆ! ಚಂಡಕರ್ಮನು ನಮಸ್ಕರಿಸಿದ ಹೊತ್ತಿಗೆ ಆ ಮುನಿಗಳು ಕಣ್ಣು ತೆರೆದರು! ಮಣಿದವನನ್ನು ನೋಡಿ ಹರಸಿದರು. ಚಂಡಕರ್ಮನು Page #69 -------------------------------------------------------------------------- ________________ ನಾಲ್ಕನೆಯ ಅವತಾರ ಎಲೆ ದೇವರೆ ಪುತ್ತುಂ ಬ ತಲೆಯುಂ ಬಜೆದಿಲ್ಲದೆಂಬರದು ಕಾರಣದಿಂ ನೆಲೆಯಾಂದೆಗನಚ್ಚಿಯವೋ ಲೆಲೆಮಿಡುಕದೆ ನೆನೆಯುತಿರ್ದಿರೇನಂ ಮನದೊಳ್ ಅವಧಾರಿಸಿ ಕೇಳ್ವುದುಮದ ರವಧಿಯಿನಾಸನ್ನಭವನೆಂಬುದನದಿಂತವರಿಂತು ನುಡಿದರಾತ್ಮನ ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ ಆವೆಡೆಯೊಳಿರ್ದನಾತಂ ಗಾವುದು ಕುಲಪೆಂದೊಡಂಗಿಯಂಗದೊಳೆಲ್ಲಂ ತೀವಿರ್ಪ೦ ಭೂತಚತು ಸ್ವಾವಯವದಿನನ್ಯನಾತನತಿ ಚೈತನ್ಯಂ ಎಂದೊಡೆ ತಳಾಱನಾಯಕ ನೆಂದಂ ನೀಮೆಂದ ಮಾತು ಪೊಲ್ಲದು ನೋಡ ಲೆಂದು ಪಲರಂ ವಿಚಾರಿಸಿ ಕೊಂದಂ ತನುವಲ್ಲದಾತನಂ ಕಂಡತಿಯೆಂ ಕಡಿದು ಕಿಟೆಕಿದನೆಲುವಂ ಪುಡಿಗುಟ್ಟಿಸಿ ತೊವಲನುಗಿದು ಕರುಳ ತೊಡಂಕಂ ಬಿಡಿಸಿ ನಡೆ ನೋನೊಳಗೆ ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂ 289 ೧೫ ೧೬ 02 ೧೮ ೧೯ ? ಮಾತಿಗುಪಕ್ರಮಿಸಿದನು. ೧೫. “ದೇವರೇ, ಹುತ್ತವೂ ಬತ್ತಲೆಯೂ ಬರಿದಿಲ್ಲ ಎನ್ನುತ್ತಾರೆ. ಆದ ಕಾರಣ ನೀವು ಒಂದು ಕಡೆ ಕುಳಿತ ಗೂಗೆಯ ನಿಶ್ಚಲವಾದ ಕಣ್ಣುಗಳಂತೆ ಒಂದಿಷ್ಟೂ ಅಲುಗಾಡದೆ ಕುಳಿತುಕೊಂಡು ಮನಸ್ಸಿನಲ್ಲಿ ಏನೇನೋ ನೆನೆಯುತ್ತಿದ್ದಿರಲ್ಲ! ಏನನ್ನು ?” ೧೬. ಅಕಂಪನರಿಗೆ ಅವನು ಆಸನ್ನಭವ್ಯನೆಂಬುದು ತಮ್ಮ ಅವಧಿಜ್ಞಾನದಿಂದ ಗೊತ್ತಾಯಿತು. ಆದುದರಿಂದ ಅವರು “ಯಾವ ವಿಕಲ್ಪವೂ ಇಲ್ಲದೆ ಆತ್ಮನನ್ನು ನೆನೆಯುತ್ತಾ ಇದ್ದೆ” ಎಂದರು. ಚಂಡಕರ್ಮ ಮತ್ತೆ ಪ್ರಶ್ನೆ ಹಾಕಿದನು. ೧೭. ಆತ್ಮನೆಲ್ಲಿದ್ದಾನೆ ? ಆತನಿಗೆ ಗುರುತೇನು ?” “ದೇಹಧಾರಿಯಾಗಿರುವವರೆಲ್ಲರ ಅವಯವಗಳಲ್ಲಿಯೂ ಆತ್ಮನು ವ್ಯಾಪಿಸಿಕೊಂಡಿದ್ದಾನೆ. ಮಣ್ಣು, ನೀರು, ಗಾಳಿ ಮತ್ತು ಬೆಂಕಿಯೆಂಬ ನಾಲ್ಕು ಬಗೆಯ ಭೂತಗಳಿಂದಾದ ದೇಹಕ್ಕಿಂತ ಬೇರೆಯಾಗಿರುವವನು ಆತ್ಮ ಅವನ ಚೈತನ್ಯವು ಅಪರಿಮಿತ.” ೧೮. ನಿಮ್ಮ ಮಾತು ಒಪ್ಪತಕ್ಕದ್ದಲ್ಲ. ಆತ್ಮನನ್ನು ಕಾಣಬೇಕೆಂದು ಹಲವರನ್ನು ವಿಚಾರಿಸಿದೆ ; ಹಲವು ಪ್ರಾಣಿಗಳನ್ನು ಕೊಂದು ನೋಡಿದೆ. ಎಲ್ಲ ಸಂದರ್ಭದಲ್ಲಿಯೂ ದೇಹವನ್ನು ಕಂಡೆನಲ್ಲದೆ ಆತನನ್ನು ಕಾಣಲೇ ಇಲ್ಲ. ೧೯. ಆತ್ಮನಲ್ಲಿ ಅಡಗಿದ್ದಾನೆಂದು ನೋಡಬೇಕೆಂದು ಒಂದು ಜೀವಿಯ ದೇಹವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಎಲುಬನ್ನು ಹುಡಿಮಾಡಿ, ಚರ್ಮವನ್ನು ಸುಲಿದು ಕರುಳ ಸಿಕ್ಕನ್ನೆಲ್ಲ ಬಿಡಿಸಿ ಒಳಗೆಲ್ಲ ಪರೀಕ್ಷೆ ಮಾಡಿ ನೋಡಿದೆ. ಎಲ್ಲಿಯೂ Page #70 -------------------------------------------------------------------------- ________________ ೬೬ ಕುದಿರೊಳ್ ಕಳ್ಳನನಿಕ್ಕಿಸಿ ಸೊದೆಯಿಟ್ಟರೆ ಬಳಿದು ಬಳಕ ತಂದೊಳಗಂ ನೋಡಿದೆನಾತ್ಮನಿಲ್ಲ ತನುವಿ ರ್ಪುದು ಬೇಕೆಂಬಾತನಂ ನೆಲಂ ನುಂಗಿದುದೋ ತೂಗಿಸಿ ತೊಲೆಯೊಳ್ ಬಾಯಂ ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ ತೂಗಿದೊಡೆ ಕುಂದದಾತ್ಮವಿ ಭಾಗಂ ಬೇರೆಲ್ಲ ಜೀವನೆಂತುಂ ದೇಹಂ ಎಂದೊಡೆ ದಂಢಧರಂಗಿಂ ತಂದರ್ ಗುರುಗಳ ವಿಮೋಹಮೃಗಮಂ ಮಿಥ್ಯಾ ಕಂದರದೊಳ್ ಬೆದಟ್ಟುವ ದುಂದುಭಿರವದಂತಿರೊಗೆಯೆ ಗಂಭೀರರವಂ ತಲೆದೊಡೆ ಕಡಿದೊಡೆ ಸೀಳ್ಕೊಡೆ ಪೊಲಮಡುವುದೆ ಕಿಚ್ಚು ಕಾಷ್ಠದಿಂ ಪೊಸೆಯಲೊಡಂ ಪೊಮಡುವುದಂತೆ ಜೀವಂ ಪೆಜತೊಡಲಿಂ ತೋಲುಗುಂ ವಿವೇಕಕ್ರಿಯೆಯಿಂ ಕುದಿರೊಳಗಿರ್ದೂದಿದ ಶಂ ಖದ ದನಿ ನಿಶ್ಚಿದ್ರಮಾದೊಡಂ ಪೊಣದ ಶಂ ಖದಿನನಮಲ್ಲದೇಂ ಪೊ ಣಿದ ನಾದಂ ಕಾಯದಿಂದ ಜೀವನುಮನ್ಯಂ ಯಶೋಧರ ಚರಿತೆ OG ೨೧ وو ೨೩ ೨೪ ದೊರೆಯಲಿಲ್ಲ. ಆತ್ಮನಿದ್ದಾನೆಂದಾದರೆ ಅವನೆಲ್ಲಿಗೆ ಹೋದನು ? ೨೦. ಒಬ್ಬ ಕಳ್ಳನನ್ನು ಹಗೇವಿನಲ್ಲಿ ತಳ್ಳಿ ಮೇಲೆಲ್ಲ ಸುಣ್ಣವನ್ನು ಸುರಿದು ಬಳಿದು ಆಮೇಲೆ ತೆರೆದು ನೋಡಿದೆ. ಒಳಗೆ ಎಲ್ಲಿಯೂ ಆತ್ಮನಿಲ್ಲ ; ದೇಹ ಮಾತ್ರ ಎಲ್ಲಿಗೂ ಹೋಗಲಿಲ್ಲ. ದೇಹಕ್ಕಿಂತ ಭಿನ್ನನೆನ್ನಿಸಿದ ಆ ಆತ್ಮವನ್ನು ನೆಲವು ನುಂಗಿತೇ ? ೨೧. ಇನ್ನೊಬ್ಬ ಕಳ್ಳನನ್ನು ತಕ್ಕಡಿ ಯಲ್ಲಿಟ್ಟು ತೂಗಿದೆ. ಅನಂತರ ಅವನ ಮೂಗು ಬಾಯಿಗಳನ್ನು ಬಲವಾಗಿ ಒತ್ತಿಟ್ಟು ಕೊಲೆ ಮಾಡಲಾಯಿತು. ಅನಂತರ ಅವನ ದೇಹವನ್ನು ತೂಗಿ ನೋಡಿದಾಗ ತೂಕ ವೇನೂ ಕಡಿಮೆಯಾಗಲಿಲ್ಲ. ಎಂದ ಮೇಲೆ ಆತ್ಮವೆಂಬ ಪ್ರತ್ಯೇಕ ವಿಭಾಗವೇ ಇಲ್ಲ.ದೇಹ ಮಾತ್ರ ಇರುತ್ತದೆ.” ೨೨. ತಳಾರನಾದ ಚಂಡಕರ್ಮನ ಮಾತನ್ನೆಲ್ಲ ಕೇಳದ ಮೇಲೆ ಗುರುಗಳು ಮಾತಿಗಾರಂಭಿಸಿದರು. ಅವರ ಗಂಭೀರಧ್ವನಿ ಮಿಧ್ಯೆಯೆಂಬ ಕಂದರದಲ್ಲಿದ್ದ ವಿಮೋಹ (ಅಜ್ಞಾನ)ವೆಂಬ ಮೃಗವನ್ನು ಹೆದರಿಸಿ ಓಡಿಸುವ ದುಂದುಭಿಯ ಧ್ವನಿಯಂತೆ ಮೊಳಗಿತು. ೨೩. ಕಟ್ಟಿಗೆಯೊಂದನ್ನು ತೆಗೆದುಕೊಂಡು ಕೊಚ್ಚು ; ಕಡಿ ; ಸೀಳು, ಹೇಗೆ ಮಾಡಿದರೂ ಅದರಿಂದ ಬೆಂಕಿ ಹೊರಡುವುದಿಲ್ಲ. ಅದನ್ನು ತಿಕ್ಕಿದಾಗ ಮಾತ್ರ ಅದರಿಂದ ಅಗ್ನಿ ಉದ್ಭವಿಸುತ್ತದೆ. ಹಾಗೆಯೇ ಜೀವವೇ ಬೇರೆ. ಅದು ವಿವೇಕ ಕ್ರಿಯೆಯಿಂದ ದೇಹಕ್ಕಿಂತ ಭಿನ್ನವೆಂದು ಕಂಡುಬರುತ್ತದೆ. ೨೪, ಹಗೇವಿನೊಳಗೆ ಇದ್ದುಕೊಂಡು ಶಂಖವನ್ನು ಊದಿದರೆ, ಆ ಶಂಖದ ಧ್ವನಿ ಹಗೇವಿನಲ್ಲಿ ಯಾವ ಬಿರುಕಿಲ್ಲದಿದ್ದರೂ, ಹೊರಗೆ ಹೊಮ್ಮುವುದಿಲ್ಲವೆ ? ಆ ಧ್ವನಿ ಶಂಖದಿಂದ ಬೇರೆಯ ಅಲ್ಲವೆ ? ಹಾಗೆಯೇ Page #71 -------------------------------------------------------------------------- ________________ ನಾಲ್ಕನೆಯ ಅವತಾರ ತೀವಿದ ತಿದಿಯಂ ತೂಗಿಯುಮಾ ವಾಯುವನಿಟಿಪಿ ತೂಗಿಯುಂ ಸರಿ ತಿದಿಯಿಂದಾ ವಾಯು ಬೇರೆ ತನುವಿಂ ಜೀವಂ ಬೇಕೆಂದು ಮಗನೆ ಭಾವಿಸಿ ನೋಡಾ ಏದೊರೆಯನಾತ್ಯನೆಂದೊಡನಾದಿಯನಂತಂ ನಿರತ್ಯಯಂ ಚಿನ್ಮಯ ನಿಃ ಪ್ರಾದೇಶಿಕನೆಂದಾತನುಪಾದೇಯಂ ಮುಕ್ತಿಮುಕ್ತನುಂ ಪರಮಾತ್ಮ ಕಲ್ಲೋಳ್ ಪೊನ್ ಪಾಲೊಳ್ ಕೃತಮಿಲ್ಲೆನವೇಡುಂಟು ದೇಹದೊಳಗಾನದೇಕಿಲ್ಲ ಕುರುಡಂಗೆ ತೋಚಿದೆಡಿಪ್ಪುದೆ ವಸ್ತು ಭೇದಿಸಂಗಾತನೊಳಂ ಮಾಡುವನಾತ್ಮಂ ನೆಟ್ಟನೆ ಮಾಡಿತನುಣ್ಣಾತನಾತ್ಯನಘಜಲಧಿಯೊಳೊಲಾಡುವೊಡಂ ಗುಣಗಣದೊಳ್ ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ ಆತನು ದೇಹಕ್ಕಿಂತ ಪ್ರತ್ಯೇಕವಾಗಿಯೇ ಇದ್ದಾನೆ. ೨೫. ತಿದಿಯೊಳಗೆ ಗಾಳಿ ತುಂಬಿಸಿ ತೂಗಿ ನೋಡಿದರೂ, ಅದರೊಳಗಿನ ಗಾಳಿ ತೆಗೆದು ತೂಕ ಮಾಡಿದರೂ ತೂಕದಲ್ಲಿ ಏನೂ ವ್ಯತ್ಯಾಸವಿರುವುದಿಲ್ಲ. ಗಾಳಿ ಬೇರೆ, ತಿದಿ ಬೇರೆ ಎಂಬುದು ಖಂಡಿತವಷ್ಟೆ. ಹಾಗೆಯೇ ದೇಹವೇ ಬೇರೆ, ಜೀವವೇ ಬೇರೆ ಎಂಬುದನ್ನು ಚೆನ್ನಾಗಿ ಯೋಚಿಸಿ ನೋಡು, ಮಗನೆ! ೨೬. ಇನ್ನು, ಆತ್ಮನ ಸ್ವರೂಪವೇನು ಬಲ್ಲೆಯಾ? ಅವನಿಗೆ ಆದಿಯಿಲ್ಲ ಅಂತ್ಯವಿಲ್ಲ, ನಾಶವಿಲದ ಚಿನ್ಮಯನಾಗಿದ್ದಾನೆ ಅವನು. ಯಾವ ಒಂದು ಪ್ರದೇಶಕ್ಕೂ ಸೇರಿದವನಲ್ಲ; ಸರ್ವತ್ರ ಉಪಾದೇಯನಾಗಿದ್ದಾನೆ, ಮುಕ್ತಿಯಿಂದ ಮುಕ್ತನಾದಾಗ ಅವನು ಪರಮಾತ್ಮನಾಗುತ್ತಾನೆ. ೨೭. ಕಲ್ಲಿನಲ್ಲಿ ಹೊನ್ನಿಲ್ಲ, ಹಾಲಿನಲ್ಲಿ ತುಪ್ಪವಿಲ್ಲ ಎನ್ನುವುದು ಸಲ್ಲ ; ಅವು ಇವೆ. ಹಾಗೆಯೇ ದೇಹದಲ್ಲಿ ಆತ್ಮನಿಲ್ಲ ಎಂದು ಹೇಳುವುದೇಕೆ ? ಕುರುಡನಿಗೆ ಯಾವು ವಸ್ತುವೂ ಕಾಣದಿದ್ದಲ್ಲಿ ಆ ವಸ್ತುವೇ ಇಲ್ಲವೆಂದು ಹೇಳಲಾದೀತೆ? ಈ ವ್ಯತ್ಯಾಸವನ್ನು ಭೇದಿಸಿಕೊಳ್ಳಬಲ್ಲವನಿಗೆ ಆತ್ಮನು ಇದ್ದಾನೆ ಎಂಬುದು ಗೊತ್ತಾಗುತ್ತದೆ. ೨೮. ಎಲ್ಲವನ್ನೂ ಮಾಡುವವನು ಆತ್ಮನು. ಮಾಡಿದುದರ ಫಲವನ್ನುಣ್ಣುವವನೂ ಅವನೇ. ಪಾಪದ ಕಡಲಲ್ಲಿ ಓಲಾಡುವುದಿದ್ದರೂ, ಗುಣ (ಪುಣ್ಯ) ಸಾಗರದಲ್ಲಿ ಸೇರಿಕೊಳ್ಳುವುದಿದ್ದರೂ, Page #72 -------------------------------------------------------------------------- ________________ ೬೮ ಯಶೋಧರ ಚರಿತೆ ಪರಮಾತ್ಮನನ್ನನೆಂದೊಡೆ ಚರಮಾಂಗಪ್ರಮಿತನಖಿಲಲೋಕ ಸಮಾನಂ ನಿರವಯವಂ ನಿತ್ಯಂ ನಿರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ ಕೇವಲ ವಿಬೋಧನೇತ್ರನೆ ದೇವನೆ ಪರಮಾತ್ಮನಾಗಮಂ ತದ್ವಚನಂ ಜೀವದಯೆ ಧರ್ಮಮೆಂಬೀ ಭಾವನೆಯಂ ನೆಲೆಯೆ ನಂಬುವುದು ಸತ್ಯಕ್ಷಂ ಕೊಲೆಯಾಗದು ಪುಸಿಯಾಗದು ಕಳಲಾಗದು ಪುರ ಪೆಂಡಿರೊಳ್ ತನ್ನ ಮನಂ ಸಲಲಾಗದು ತೀರದುದಕಲವರಲಾಗದು ಪರಿಯಂ ಬಯಸುವವಂ ಇವು ಮೊತ್ತಮೊದಲಣುವ್ರತಮಿವು ಮಸುಳದೆ ನಡೆದೊಡ್ಡೆಹಿಕಾಮುಕಮಂಬಿವತೋಳ್ ಸಮಸುಖಿಯಪ್ಪಂ ಭವಭವದೊಳ್ ದುಃಖಿಯಪ್ಪನಿವು ಮಸುಳ್ಳಾತಂ ಮಾಡಿದ ಕೋಟೆಯನಚಿದರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬ‌್ರ ಗೂಡಿನ ಕೋಟೆಗಳಾದರ್ ನೋಡಮ್ ಮತ್ತೊರ್ಮೆ ಬಲಿ ತಿರ್ಯಗ್ಧತಿಯೊಳ್ ೩೩ ಜನಸಮುದ್ರವನ್ನು ದಾಟುವುದಿದ್ದರೂ ಆತನಿಂದ ಮಾತ್ರ ಸಾಧ್ಯ. ೨೯, ಹಾಗಾದರೆ ಪರಮಾತ್ಮನು ಹೇಗಿರುತ್ತಾನೆ ಎನ್ನುವುದಾದರೆ ಅವನು ಕಟ್ಟಕಡೆಗೆ (ಚರಮ) ದೇಹವನ್ನು ಧರಿಸಿ ಅನಂತರ ಪುನಃ ದೇಹವನ್ನು ಧರಿಸದವನು. ಎಲ್ಲ ಲೋಕಗಳಿಗೆ ಸಮಾನನಾಗಿರುತ್ತಾನೆ ಅವನು, ಅವಯವಗಳೇ ಇಲ್ಲದವನಾಗಿ ನಿತ್ಯನಾಗಿ ಯಾವ ಪಾಪಕ್ಕೂ ಪಕ್ಕಾಗದವನಾಗಿ ಅನಂತಜ್ಞಾನ, ಅನಂತದರ್ಶನ, ಅನಂತ ಸೌಖ್ಯ ವುಳ್ಳವನಾಗಿರುತ್ತಾನೆ. ೩೦. ಕೇವಲಜ್ಞಾನವೇ ಕಣ್ಣಾಗಿರುವ ಆ ದೇವನೆ ಪರಮಾತ್ಮನು. ಅವನ ಮಾತೇ ಆಗಮ, ಜೀವದಯೆಯೇ ಧರ್ಮ ಎನ್ನುವ ಭಾವನೆಯನ್ನು ಚೆನ್ನಾಗಿ ನಂಬುವುದನ್ನು ಸಮ್ಯಕ್ಷ ಎನ್ನುತ್ತಾರೆ. ೩೧. ಮೇಲುಲೋಕವನ್ನು ಬಯಸುವವನು ಕೊಲೆ ಮಾಡಬಾರದು, ಸುಳ್ಳು ಹೇಳಬಾರದು, ಪರಸ್ತ್ರೀಯರ ಮೇಲೆ ಮನಸ್ಸು ಮಾಡಬಾರದು, ಎಂದೂ ಕಳವು ಮಾಡಬಾರದು, ಆಗದುದಕ್ಕೆ, ಆಸೆಪಡಬಾರದು. ೩೨. ಇವೇ ಮೊತ್ತ ಮೊದಲಿನ ಅಣುವ್ರತಗಳೆನ್ನಿಸಿವೆ. ಇವುಗಳಿಗೆ ಮಾಲಿನ್ಯವುಂಟಾದಂತೆ ಆಚರಿಸಿದವನು ಇಹಪರ ಲೋಕಗಳ ಸುಖಗಳನ್ನು ಯಾವ ಏರಿಳಿತವೂ ಇಲ್ಲದೆ ಅನುಭವಿಸುತ್ತಾನೆ. ಇವುಗಳಿಗೆ ಮಲಿನತೆಯುಂಟಾದಲ್ಲಿ, ಅಂಥವನು ಜನ್ಮಜನ್ಮಾಂತರಗಳಲ್ಲಿಯೂ ದುಃಖಭಾಜನನಾಗುತ್ತಾನೆ. ೩೩. ಕೃತಕವಾಗಿ ಒಂದು ಕೋಳಿಯನ್ನು ತಯಾರಿಸಿ ಅದನ್ನು ಕೊಂದ ಯಶೋಧರ ಮತ್ತು ಚಂದ್ರಮತಿ ಎಂಬಿಬ್ಬರೂ ಸತ್ತ ಮೇಲೆ ಜನ್ಮಾಂತರಗಳನ್ನೆತ್ತಿ ಈಗ ಮತ್ತೊಮ್ಮೆಗೂಡಿನ ಕೋಳಿಗಳಾಗಿ Page #73 -------------------------------------------------------------------------- ________________ ನಾಲ್ಕನೆಯ ಅವತಾರ ಇತಹಾನಿ ಹಿಂಸೆಯೋಂದೀ ಗತಿಗಿಕ್ಕಿದುದುಳೆದ ನಾಲ್ಕುಮಾದೊಡೆ ಬಡೆಕೇಂ ಚತುರಂಗಬಲ ಸಮೇತಂ ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ ಅದಳೆಂ ತನ್ನಂತಿರೆ ಬಗೆವುದು ಪೆರಂ ಪ್ರಾಣಿಹಿಂಸೆಯಂ ಮಾಡಲ್ವೆಡ ದಯಾಮೂಲಂ ಧರ್ಮ೦ ಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ ಗುರುವಿಂತು ಬೆಸಸೆ ಜಾತಿಸರಂಗಳಾಗಿರ್ದು ಪಕ್ಕಿಗಳ್ ಕೇಳೆರ್ದೆಯೊಳ್ ಪರಮೋತ್ಸವದಿಂ ತಮಂ ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂ ಕಲೆ ನಿಜಹರ್ಷಬಾಷದ ಮತೆವನಿ ಧರ್ಮಾನುರಾಗ ಮೇಘಧ್ವನಿವೋಲ್ ಮೋಳಿಗುವಿನಮೇಜಿಂಕೆಯ ಪೊಯಿಲ್ ಫಟೆಲನೆ ಕೂಗಿದುವು ಕೇಳತ್ತ ನೃಪಾಲಂ ಸ್ವರವೇದವಿದ್ಯೆಯಂ ತನರಸಿಗೆ ಮೇಯಿ ದೇವಿ ನೋಡೆನುತೆಚೆಂ ಸರಿಯಿಸೆ ಕೆಡೆದುವವಂತೆರಡರ್ಕಾಯುಃ ಪ್ರಮಾಣವೊಂದಾದುದೆನಲ್ ಹುಟ್ಟಿದ್ದಾರೆ. ಈ ಮೊದಲು ಅನೇಕ ಪ್ರಾಣಿಜನವನ್ನು ಪಡೆದು ಬೇಕಾದಷ್ಟು ಬಳಲಿದ್ದಾರೆ. ೩೪. ಅಹಿಂಸೆ ಎಂಬ ಒಂದು ವ್ರತಕ್ಕೆ ಈ ಬಗೆಯ ಅಪಚಾರ ಸಂಭವಿಸಿದುದರಿಂದ ಅವರಿಗೆ ಈ ಗತಿಯೊದಗಿತು. ಉಳಿದ ನಾಲ್ಕು ವ್ರತಗಳಿಗೂ ಭಂಗವುಂಟಾದರೆ ಇನ್ನೇನಾಗದು ? ಶೂರನೊಬ್ಬನು ಚತುರಂಗಬಲ ಸಮೇತನಾಗಿ ಬಂದರೆ ಏನು ಮಾಡಲಾರ ? ೩೫. ಆದುದರಿಂದ ಪರರನ್ನು ತನ್ನಂತೆ ಬಗೆಯಬೇಕು. ಪ್ರಾಣಿಹಿಂಸೆಯನ್ನು ಮಾಡಬಾರದು. ಧರ್ಮವು ದಯಾಮೂಲವಾದುದು, ಮಗು ! ನೆಮ್ಮದಿಯಿಂದ ಕೇಳು : ಇದು ಇಹಪರಲೋಕಗಳ ಭವಕ್ಕೂ ಹಿತನ್ನುಂಟು ಮಾಡುತ್ತದೆ”. ೩೬. ಗುರುಗಳು ಕೊಟ್ಟ ಉಪದೇಶವನ್ನು ಕೇಳುತ್ತಿದ್ದಂತೆ ಪೂರ್ವಜನ್ಮದ ಸರಣೆಯುಂಟಾದ ಆ ಕೋಳಿಗಳೆರಡೂ ಅಂತರಂಗದಲ್ಲಿ ಆನಂದಗೊಂಡು ಈ ವ್ರತವನ್ನು ಕೈಕೊಂಡವು. ಚಂಡಕರ್ಮನೂ ವ್ರತವನ್ನು ಅಂಗೀಕರಿಸಿದನು. ೩೭. ತಮಗುಂಟಾದ ಆನಂದಬಾಷ್ಪವು ಮಳೆಹನಿಯಾಗಿ ಕೆಳಕ್ಕುದುರಿತು. ಆಗ ಧರ್ಮಾನುರಾಗವೆಂಬ ಮೋಡಗಳು ಗುಡುಗಿದವೋ ಎಂಬಂತೆ ಆ ಕೋಳಿಗಳೆರಡರ ರೆಕ್ಕೆಗಳು ಶಬ್ದ ಮಾಡಿದವು ಮತ್ತು ಸಂತೋಷಾಧಿಕ್ಯದಿಂದ ಕೆಲೆದವು. ಈ ಕೂಗು ರಾಜನ ಕಿವಿಗೆ ಬಿದ್ದಿತು. ೩೮. ಅವನು ತನ್ನ ಸ್ವರವೇದ (ಶಬ್ದವೇಧಿ) ವಿದ್ಯೆಯನ್ನು ತನ್ನ ರಾಣಿಗೆ ತೋರಿಸಿ ಮೆರೆಯಲು ಮನಸ್ಸು ಮಾಡಿದನು. 'ದೇವಿ ನೋಡು !' ಎಂದು ಹೇಳುತ್ತಾ ಅವನು ಒಂದು ಬಾಣವನ್ನು ಪ್ರಯೋಗಿಸಿದನು. ಆ ಬಾಣವು ಎರಡೂ Page #74 -------------------------------------------------------------------------- ________________ 20 ದೊರೆಕೊಳೆ ಸಮಾಧಿಮರಣಂ ಚರಣಾಯುಧಯುಗಳಮಲೆದು ಕುಸುಮಾವಳಿಯಂ ಬರಸಿಯ ಬಸಿರೊಳ್ ಬಂದವು ನರಯುಗಳಕವಾಗಿ ನಚ್ಚನಚೊತ್ತಿದವೊಲ್ ಅಭಿಯರುಚಿಯಭಯಮತಿಯಂ ಬಭಿಧಾನದೆ ಚಂದ್ರಮತಿ ಯಶೋಧರರಮಳಿ ಶುಭಲಕ್ಷಣಮೊಪ್ಪುತ್ತಿರೆ ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕು೦ ನುಣುರುಳ ಪೊಳೆವ ಕಪ್ಪು ಕಣ್ಣಗಳಮಾದ ಮೆಯ್ಯ ಬೆಳಗೆಸೆವಿನಮಾ ಪೆಣ್ಣಂಡು ರಾಜ್ಯಲಕ್ಷ್ಮಿ ಯ ಕಣ್ಣಳ ದೊರೆಯಾಗಿ ಸಮನೆ ಬಳೆವಿನಮಿತ್ತಲ್ ಬೇಂಟೆಗೆ ನಡೆಯೆ ಯಶೋಮತಿ ಗೆಂಟಳಾರಣ್ಯವಾಸಿಗಳ್ ನಿಲೆ ಕಂಡಾಬೇಂಟೆ ಪರಿಯದೊಡೆ ಬಿನದದ ಕಂಟಕನೀ ಸವಣನೆನುತೆ ಬರುತಂ ಮುನಿದಂ ಮುನಿದಯ್ಯುಂ ಕುನ್ನಿಗಳನಿತುಮನೊರ್ಮೊದಲೆ ತೋಟೆ ಕೊಳ್ಳೋಳಿಗೆ ಮಹಾ ಮುನಿ ತಳರದೆ ಮೇರುವೊಲಿರೆ ವನಮೃಗದವೊಲುರ್ಕನಡೆದು ಸುಟಿದುವು ನಾಲ್ಕ ಯಶೋಧರ ಚರಿತೆ 26 ೪೦ ೪೧ ೪೨ ೪೩ ಕೋಳಿಗಳನ್ನು ಒಮ್ಮೆಲೆ ಕೊಂದಿಕ್ಕಿತು, ಎರಡಕ್ಕೂ ಆಯುಸ್ಸು ಒಂದೇ ಆಗಿತ್ತೆಂಬಂತೆ. ೩೯. ಕೋಳಿಗಳೆರಡಕ್ಕೂ ದೊರೆತುದು ಸಮಾಧಿ ಮರಣ.* ೫೮ ಹೀಗೆ ಸತ್ತು ಅವೆರಡೂ ಕುಸುಮಾವಳಿಯ ಗರ್ಭದಲ್ಲಿ ಆ ದಂಪತಿಗಳ ಪ್ರೇಮವನ್ನೇ ಅಚೊತ್ತಿದಂತೆ ಅವಳಿಮಕ್ಕಳಾಗಿ ಜನಿಸಿದವು. ೪೦. ಅಭಯರುಚಿ, ಅಭಯಮತಿ ಎಂಬ ಹೆಸರಿನಿಂದ ಹೀಗೆ ಯಶೋಧರ ಚಂದ್ರಮತಿಯರು ಹುಟ್ಟಿದರು. ಈ ಮಕ್ಕಳು ಒಳ್ಳೆಯ ಲಕ್ಷಣವುಳ್ಳವರಾಗಿ ಸ್ವಾಭಾವಿಕ ರೀತಿಯಲ್ಲಿ ಬೆಳೆಯತೊಡಗಿದರು. ೪೧. ಚೆಲುವಾದ ಕೂದಲ ಕಪ್ಪುಕಾಂತಿಯೂ ಕಣ್ಣಿಗೆ ಮೆಚ್ಚಿನ ದೇಹದ ಬಿಳುಪೂ ಆ ಹೆಣ್ಣು ಗಂಡು ಮಕ್ಕಳಲ್ಲಿ ಶೋಭಾವಹವಾಗಿದ್ದು ರಾಜ್ಯಲಕ್ಷ್ಮಿಯ ಕಣ್ಣುಗಳಂತೆ ಅವರು ಬೆಳೆಯು ತಿದ್ದರು. ೪೨. ಒಂದು ದಿನ ಯಶೋಮತಿ ಮೃಗಯಾವಿಹಾರಕ್ಕೆ ತೆರಳಿದನು. ದೂರದಲ್ಲಿ, ಕಾಡಿನಲ್ಲಿ ವಾಸಿಸುವ ತಪಸ್ವಿಗಳೊಬ್ಬರಿದ್ದರು. ಅವರನ್ನು ನೋಡಿದ ಬಳಿಕ ಒಂದೇ ಒಂದು ಪ್ರಾಣಿಯೂ ಬೇಟೆಗೆ ದೊರೆಯಲಿಲ್ಲ. ಈ ಬೇಟೆಯ ವಿನೋದಕ್ಕೆ ಕಂಟಕ ಪ್ರಾಯರಾದವರೇ ಈ ಸವಣರು ಎಂದು ಅರಸನಿಗೆ ಬಹಳ ಸಿಟ್ಟು ಬಂತು. ೪೩. ಕ್ರೋಧದಿಂದ ರಾಜನು ತನ್ನ ಐನೂರು ನಾಯಿಗಳನ್ನು ಒಮ್ಮೆಲೆ ಭೂ ಬಿಟ್ಟನು. ಅವರು ಮಾತ್ರ ಕದಲಲೇ ಇಲ್ಲ. ಮೇರುವಿನಂತೆ ನಿಶ್ಚಲರಾಗಿ ಅವರಿದ್ದಾಗ ನಾಯಿಗಳು Page #75 -------------------------------------------------------------------------- ________________ ನಾಲ್ಕನೆಯ ಅವತಾರ ಆ ಯತಿಗಾಯತಿಗಿಡೆ ಕೆಳೇಯಕತತಿ ನೃಪತಿ ಕೆಳರ್ದು ಮುಳಿದುರ್ಚಿದ ಕೆ. ಕ್ಷೇಯಕದೆ ಪೊಯ್ಯಲೆಯ ವಿ ನೇಯಂ ಕಲ್ಯಾಣಮಿತ್ರನೆಂಬಂ ಪರದಂ ಕೆಮ್ಮನೆ ಬಾಳಂ ಕಿಜ್ಜಯ್ ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ತೆದಾನ್ ಮಾಣಿಸದೊಡೆ ಕೋಟಲೆಯಂ ಮಾಡವೆ ದೇವ ನಿನಗೆ ದುರಿತಶತಂಗಳ್ ಪೊಡವಡಲೆತ್ತುವ ಕೈಗಳ್ ಪೊಡೆಯಲೆತ್ತುಗುಮೆ ಮೂಜುಲೋಕದ ಕೈಗನೃಡಿ ಸಾಮರ್ಥ್ಯದ ಸದ್ಗುಣದೊಡೆಯರೊಳದು ತಕ್ಕುದಲ್ಲದತ್ತಿಡು ಬಾಳಂ ಆ ರುಷಿಯ ಚರಣಕಮಲಮನಾರಾಧಿಸಲೆಂದು ಬಂದು ಕಂಡೆಡೆವೊಕ್ಕುರ್ವಿರಮಣ ದುರ್ಬಲಸ್ಯ ಬಲೋ ರಾಜಾ ಎನ್ನದಿವರ್ಗೆ ಮುಳಿವುದೆ ಮರುಳೇ ಇವರಾರೆಂದಿರ್ದಪೆ ನೀನ್ ಭುವನತ್ರಯತಿಳಕರಮಳಸದ್ಯೋಧ ಸುಧಾರ್ಣವ ಪೂರ್ಣಚಂದ್ರರವನತ ದಿವಿಜನರೊಗರನನ್ಯಸಾಮಾನ್ಯಗುಣರ್ ೪೮ ತಮ್ಮ ಕೆಚ್ಚನ್ನೆಲ್ಲ ಕಳೆದುಕೊಂಡು ಕಾಡಿನ ಜಿಂಕೆಗಳಂತಾಗಿ ಅಲ್ಲೆ ಸುತ್ತ ಸುಳಿದವು. ೪೪. ಮುನಿಯ ಮುಂದೆ ನಾಯಿಗಳೂ ತಮ್ಮ ಬಿರುಸನ್ನು ಕಳೆದುಕೊಂಡಾಗ ಅರಸನು ಮತ್ತಷ್ಟು ಕೆರಳಿದನು. ರೋಷದಿಂದ ಖಡ್ಗವನ್ನು ಜಳಪಿಸಿ ಕಡಿದೊಗೆಯು ಮುಂದಾದನು. ಅಷ್ಟರಲ್ಲಿ ಅವನೊಂದಿಗಿದ್ದ ಕಲ್ಯಾಣಮಿತ್ರನೆಂಬ ನಯವಂತನಾದ ವ್ಯಾಪಾರಿಯು, ೪೫, “ಸುಮ್ಮನೆ ಕತ್ತಿಯನ್ನು ಹಿರಿದಿರಲ್ಲ! ಪಾಪ ಮಾಡುವವರನ್ನು ಆ ಅಕೃತ್ಯದಿಂದ ತೊಲಗಿಸದಿದ್ದರೆ, ಅಂತಹ ಮಿತ್ರನು ಮಿತ್ರನೇ ಅಲ್ಲ! ಆದುದರಿಂದ ನಾನೀಗ ನಿಮ್ಮನ್ನು ತಡೆಯಲೇಬೇಕಾಗಿದೆ. ಇಲ್ಲವಾದರೆ ಮುಂದೆ ನೂರಾರು ಕೇಡುಗಳು ನಿಮ್ಮನ್ನು ಬಾಧಿಸದೆ ಇರಲಾರವು” ಎಂದು ಹೇಳಿದನು. ೪೬. “ರಾಜಾ, ನಮಸ್ಕಾರ ಮಾಡುವುದಕ್ಕಾಗಿ ಎತ್ತಬೇಕಾದ ಕೈಗಳನ್ನು ಕಡಿದಿಕ್ಕುವುದಕ್ಕಾಗಿ ಎತ್ತುತ್ತಾರೆಯೆ? ಅವರು ಮೂರು ಲೋಕದ ಕೈಗನ್ನಡಿ, ಸಾಮರ್ಥ್ಯದ ಒಡೆಯರು, ಸದ್ಗುಣಗಳ ಬೀಡು. ಅವರಲ್ಲಿ ಈ ಅಕೃತ್ಯವು ತಕ್ಕುದಲ್ಲ, ನಿಮ್ಮ ಕತ್ತಿಯನ್ನು ಅತ್ತ ಇಡಿರಿ. ೪೭. ಆ ಋಷಿಗಳ ಚರಣಕಮಲವನ್ನು ಆರಾಧಿಸುವ ಸಲುವಾಗಿ ಬರುವುದೂ, ಬಂದು ಅವರನ್ನು ಕಂಡು, ಸಮೀಪಿಸಿ, 'ದುರ್ಬಲರಿಗೆ ಬೆಂಬಲವಾಗಿ ರಾಜನೇ ಇದ್ದಾನೆ' ಎಂದು ಅವರೊಡನೆ ಬಿನ್ನವಿಸುವುದೂ ಕರ್ತವ್ಯವಾಗಿರುವಾಗ ಅವರ ಮೇಲೆ ಸಿಟ್ಟುಗೊಳ್ಳುವುದೆ ? ನಿಮಗೇನು ಹುಚ್ಚೆ? ೪೮. ಇವರು ಯಾರೆಂದು ಗೊತ್ತಿದೆಯೆ ನಿಮಗೆ? ಮೂರು ಲೋಕಕ್ಕೆ ತಿಲಕಪ್ರಾಯರಾದ ಇವರು ನಿರ್ಮಲವಾದ ಸಮ್ಯಜ್ಞಾನವೆಂಬ ಅಮೃತ ಸಾಗರಕ್ಕೆ ಪೂರ್ಣಚಂದ್ರರಾಗಿದ್ದಾರೆ. ದೇವತೆಗಳೂ ಮನುಷ್ಯರೂ ಉರಗರೂ ಇವರಿಗೆ Page #76 -------------------------------------------------------------------------- ________________ ಯಶೋಧರ ಚರಿತೆ ಅಣಿಯದೆ ಗೆಯೇಂ ಕ್ಷಮೆಯೆಂ ದೆಗೆನೆ ನೃಪನೆಂದನಾವ ಜಾತಿಯದಾರೆಂ ದಜೆಯದೆ ಮಿಂದುಂ ಮುದುಕಿಯುಮಯದ ಮಣಕಿನ ಬಣಂಬೆಗಾನಗುವೆನೇ ಒಂದು ಮೃಗಂ ಬೀಡಿದು ನೋಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಟಿದೆಂದೊಡೆ ಪರದಂ ಪಾಪಂ ಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ ತನುವಾರ್ಗಮಶುಚಿ ಶುದ್ಧಾತನೆ ಶುಚಿ ಕಾಗೆಯವೊಲೇನೊ ಮಿಂದವನೇಂ ಶುಧನೆ ಸಂಸ್ಕಾರಶತೇನಾಪಿ ನ ಗೂಥಃ ಕುಂಕುಮಾಯತೇ ಎಂದಣಿಯಾ ಗಂಗಕುಲಚಕ್ರವರ್ತಿ ಕಳಿಂಗಧರಾಧೀಶರಿವರಸಾರಂ ಸಂಸಾರಂ ಗಡಮೆಂದಡೆದಲೆದು ತಪಂಗೆಯ್ದರ್ ನಾಮದಿಂ ಸುದತ್ತಾಚಾರಲ್ ೫೨ ಮಣಿಯುತ್ತಾರೆ. ಇತರರಲ್ಲಿ ಇರಲಾರದಷ್ಟು ಸದ್ಗುಣಗಳನ್ನು ಇವರು ಪಡೆದಿದ್ದಾರೆ. ೪೯. 'ನಾನು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸಿಬೇಕು' ಎಂದು ಹೇಳಿ ಅವರ ಪಾದಗಳಿಗೆ ವಂದಿಸಬೇಕು ನೀವು” ಎಂದು ವರ್ತಕನು ತಿಳಿಸಿದನು. ಆಗ ಅರಸನು ಅವನು ಯಾವ ಜಾತಿಯವನು, ಯಾರವನು ಎಂದು ಮುಂತಾಗಿ ತಿಳಿದುಕೊಳ್ಳದೆ, ಸ್ನಾನಮಾಡಿಯಾಗಲಿ ನೀರಲ್ಲಿ ಮುಳುಗಿಯಾಗಲಿ ಗೊತ್ತೇ ಇಲ್ಲದ ದುರ್ವಾಸನೆಯ ಮುದ್ದೆಗೆ ನಾನು ಮಣಿಯಬೇಕೆ ?” ಎಂದು ಪ್ರಶ್ನಿಸಿದನು ೫೦. ಇದೂ ಅಲ್ಲದೆ “ಕೆಟ್ಟನಾತದವನನ್ನು ಕಂಡ ಕಾರಣ ಇಂದಿನ ಬೇಟೆಯಲ್ಲಿ ಒಂದೇ ಒಂದು ಮೃಗ ಕೂಡ ಬೀಳಲಿಲ್ಲ !” ಎಂದು ಧಿಕ್ಕರಿಸಿದನು. “ಸ್ವಾಮಿ ಪುಣ್ಯಮೂರ್ತಿಯನ್ನು ಕಂಡರೆ ಪಾಪ ಬಂದು ಸೇರಲಾರದಲ್ಲ! ಹಾಗಾಗಿಯೆ ನಿಮಗೆ ಬೇಟೆ ದೊರೆಯಲಿಲ್ಲ” ಎಂದು ಕಲ್ಯಾಣಮಿತ್ರನು ಸಮಾಧಾನ ಹೇಳತೊಡಗಿದನು. ೫೧. “ದೇಹವೆಂಬುದು ಎಲ್ಲರಿಗೂ ಸದಾ ಕೊಳಕಾಗಿಯೇ ಇರುತ್ತದೆ. ಆತನು ಮಾತ್ರ ನಿರ್ಮಲನಾಗಿರುತ್ತಾನೆ. ಕಾಗೆ ಸ್ನಾನಮಾಡಿತೆಂದು ನಿರ್ಮಲವೆನ್ನಿಸುತ್ತದೆಯೆ ? ಸ್ನಾನಮಾಡಿದವರೆಲ್ಲ ಪರಿಶುದ್ಧ ರಾಗುವರೆ ? ನೂರಾರು ಸಂಸ್ಕಾರಗಳನ್ನು ಮಾಡಿದರೂ ಅಮೇಧ್ಯವು ಕುಂಕುಮ ವಾದೀತೆ ? ಯೋಚಿಸಿರಿ! ೫೨. ಇವರು ಗಂಗಕುಲದ ಚಕ್ರವರ್ತಿಗಳಾಗಿದ್ದವರು ; ಕಳಿಂಗದೇಶದ ಅಧಿಪತಿಗಳಾಗಿದ್ದರು. ಈ ಸಂಸಾರವೆಂಬುದು ಸಾರವಿಲ್ಲದ್ದು ಎಂಬುದು ಖಚಿತವಾದಾಗ ಇವರು ತಪಸ್ಸಿಗೆ ತೆರಳಿದರು. ಇವರ ಹೆಸರು ಸುದತ್ತಾಚಾರ್ಯರು”. Page #77 -------------------------------------------------------------------------- ________________ ನಾಲ್ಕನೆಯ ಅವತಾರ ಎಂಬುದುಮರಸಂ ಮುನಿವರರಂ ಬಲಗೊಂಡೆಂಗಿ ನೆಗಟ್ಟಿ ಪೊಲ್ಲಮೆಗೆ ತದೀ~ ಯಾಂಬುಜಪದಮಾ ತನ್ನ ಶಿರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ ಅದನವರವಧಿಯಿನುದಾಗದು ಬೇಡೆನೆ ನೃಪತಿ ಮತ್ತೆ ವಿಸ್ಮಯದಿಂ ಕೇಳ್ಳುದುಮುಸಿರ್ದರ್ ಭವದೊಳ್ ಬ ರ್ದಿದ ಮಾತರಪಿತರರಂ ಪಿತಾಮಹರಿರವಂ ವೀರತಪಸ್ವಿ ಯಶಘಮಹಾರಾಜಂ ನೋನ್ನು ಕಳೆದು ಸುರವರವನಿತಾ ಸ್ಮರಕಟಾಕ್ಷ ನಿರೀಕ್ಷಣ ಕೈರವಶೀತಾಂಶುದೇವನಾದಂ ದಿವದೊಳ್ ಅಮೃತಮತಿ ಅಷ್ಟವಂಕಂ- . ಗೆ ಮರುಳೊಂಡತ್ತೆ ಗಂಡನಂ ವಿಷದಿಂ ಕೊಂ ದು ಮುದಿರ್ತು ಕುಷ್ಟಿಕೊಳೆ ಪಂಚಮ ನರಕದೊಳಳರಸ ಧೂಮಪ್ರಭೆಯೊಳ್ ಜನಕಂ ಯಶೋಧರಂ ಪಿಟಿನ ಕೋಟೆಯನಡೆದು ಕಟೆದು ನವಿಲೆಯಿನಾಡಿನ ಪೋರಿ ಪೊಂತು ಕುಕ್ಕುಟಮೆನೆ ಪುಟ್ಟದನೀಗಳಭಯರುಚಿಯಾಗಿರ್ದಂ ೫೭ ೫೩. ಇಷ್ಟು ಹೇಳಿದಾಗ ಯಶೋಮತಿಯ ಮನಸ್ಸು ಬದಲಾಯಿತು. ಅವನು ಆ ತಪಸ್ವಿಗಳಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಸಲ್ಲಿಸಿ ತಾನು ಮಾಡಿದ ಅಕೃತ್ಯಕ್ಕಾಗಿ ಅವರ ಪಾದಕಮಲವನ್ನು ತನ್ನ ಶಿರಃಕಮಲದಿಂದ ಪೂಜಿಸಲು ನಿರ್ಧಾರಮಾಡಿದನು. ೫೪. ರಾಜನ ವಿಷಯವನ್ನೆಲ್ಲ ಸುದತ್ತಾಚಾರ್ಯರು ಅವಧಿಜ್ಞಾನದಿಂದ ಅರಿತುಕೊಂಡರು. “ಆಗದು, ಬೇಡ” ಎಂದು ಅವರು ತಡೆದಾಗ ರಾಜನಿಗೆ ಆಶ್ಚರ್ಯವಾಯಿತು. ಅದೇಕೆ ಹಾಗೆ ?” ಎಂದು ಪ್ರಶ್ನಿಸಿದನು. ಅವರು ಆತನ ತೀರಿಹೋದ ತಂದೆತಾಯಿಗಳ ಮತ್ತು ಅಜ್ಜಅಜ್ಜಿಯರ ಸ್ಥಿತಿಗತಿಗಳನ್ನು ವಿವರಿಸತೊಡಗಿದರು. ೫೫. “ನಿನ್ನ ಅಜ್ಜ ಯಶೌಘ ಮಹಾರಾಜನು ವೀರತಪಸ್ವಿಯಾಗಿ ವ್ರತಗಳನ್ನು ಆಚರಿಸಿದನು. ತೀರಿಕೊಂಡ ಮೇಲೆ ಅವನು ಸ್ವರ್ಗದಲ್ಲಿ ಉತ್ತಮ ದೇವತಾಸ್ತ್ರೀಯರ ಮಂದಹಾಸದ ಕಟಾಕ್ಷ ವೀಕ್ಷಣದ ಕನ್ನೈದಿಲೆಗಳಿಗೆ ಚಂದ್ರನಾಗಿದ್ದುಕೊಂಡು ದೇವನಾಗಿದ್ದಾನೆ. ೫೬. ಅಮೃತಮತಿ ಅಷ್ಟವಂಕನಿಗೆ ಹುಚ್ಚಾಗಿ ತನ್ನ ಅತ್ತೆ ಚಂದ್ರಮತಿಯನ್ನೂ ಗಂಡ ಯಶೋಧರನನ್ನೂ ವಿಷವಿಕ್ಕಿ ಕೊಂದಳು. ಅವಳು ಆಮೇಲೆ ಕ್ರಮ ಕ್ರಮವಾಗಿ ಕ್ಷೀಣಿಸುತ್ತ ಬಂದು ಕುಷ್ಠರೋಗಕ್ಕೆ ಗುರಿಯಾದಳು. ಸತ್ತ ಮೇಲೆ ಅವಳು ಧೂಮಪ್ರಭೆಯೆಂಬ ಪಂಚಮನರಕದಲ್ಲಿ ಮುಳುಗಿ ನವೆಯುತ್ತಾ ಇದ್ದಾಳೆ. ೫೭. ನಿನ್ನ ತಂದೆಯಾದ ಯಶೋಧರನು ಹಿಟ್ಟಿನ ಕೋಳಿಯನ್ನು ಕೊಂದು, ಸತ್ತ ಮೇಲೆ ನವಿಲು, ಮುಳ್ಳುಹಂದಿ, ಮೀನು, ಆಡು, ಹೋತ, ಕೋಳಿ ಎಂದು ಜನ್ಮಾಂತರಗಳನ್ನು ಪಡೆದು Page #78 -------------------------------------------------------------------------- ________________ ೭೪ ನಿರವಿಸಿದ ಚಂದ್ರಮತಿಯಂ ಬರಸಿಯ ನಾಯುರಗಿ ಮೊಸಳೆ ಆಡು ಲುಲಾಯಂ ಚರಣಾಯುಧವಧುವಾದ ಗುರುವಚನದಿಗಳಭಯಮತಿಯಾಗಿರ್ದಳ್ ನಿನಗಂ ಕುಸುಮಾವಳಿಗಂ ಜನಿಯಿಸಿದವಳೆಂಬುವಭಯರುಚಿಮತಿಗಳ್ ಮುನಿನ ಜನಮನಿತುಮಂ ನೆ ಟ್ಟನೆ ಬಲ್ಲ‌ ಕೇಳು ನಂಬು ನೀನ್ ಧರಣಿಪತೀ ನೀನಡೆವೆ ಕೊಂದ ಘೋರಮನಾನಿಗ್ರಹವಧೆಯಿನಂದು ಸತ್ತವರಳವರ್ ಮೀನುಂ ಮೊಸಳೆಯುಮಾಡಂತಾ ನೆಗಟ್ಟಿ ಜಪೋತಮಹಿಷವಾದಂದರಸಾ ಕೋಟೆಯ ಕೂಗೆಲ್ ನೀನ್ ಸೂಆದವನೆಸೆವುದೆತ್ತಲಾ ಖಗಯುಗಳಂ ಬೀಲೊಡನಾದ ಮಾನಸ ನೋಡ ಧರ್ಮಮೊದವಿದ ಪದನಂ ವಾಲೆ ಎನೆ ಮುನಿವಚನದೊಳಂ ನಂ ದನರೊಳಮಾಗಳೆ ಯಶೋಮತಿಕ್ಷಿತಿಪಂ ತೆಳ್ಳನೆ ತಿಳಿದು ಭಾಪು ಸುಂಕಲ್ಪನವಧೆಗಿನಿತಾಯ್ತು ದಿಟದಿನೇನೇನಾಗ‌ ಯಶೋಧರ ಚರಿತೆ ೫೮ XE と。 ೬೧ وع ಅಭಯರುಚಿಯಾಗಿದ್ದಾನೆ. ೫೮. ಆ ಚಂದ್ರಮತಿಯೆಂಬ ಅರಸಿ ಕ್ರಮವಾಗಿ ನಾಯಿ, ಹಾವು, ಮೊಸಳೆ, ಆಡು, ಕೋಣ, ಹೇಂಟೆಯಾಗಿ ಹುಟ್ಟಿದ್ದಳು. ಈಗ ಗುರುವಿನ ವಚನವನ್ನು ಕೇಳಿದುದರಿಂದಾಗಿ ಅಭಯಮತಿಯಾಗಿ ಜನಿಸಿದ್ದಾಳೆ. ೫೯, ನಿನಗೂ ಕುಸುಮಾವಳಿಗೂ ಹುಟ್ಟಿದ ಅಭಯರುಚಿ, ಅಭಯಮತಿಗಳೆಂಬ ಅವಳಿಮಕ್ಕಳು ಹಿಂದಿನ ಇನ್ನೂ ಜನ್ಮಗಳನ್ನು ಚೆನ್ನಾಗಿ ಬಲ್ಲರು. ಅವರನ್ನೇ ಕೇಳು. ನಿನಗೆ ವಿಶ್ವಾಸವಾದೀತು. ೬೦. ನೀನು ಕೊಂದ ಆ ಘೋರಕಾರದ ವಿಷಯ ನಿನಗೇ ಗೊತ್ತಿದೆ. ನಿನ್ನ ಭೀಕರ ಹಿಂಸಾಘಾತದಿಂದ ಮೀನು, ಮೊಸಳೆ, ಆಡು, ಹೋತ, ಕೋಣ ಎಂಬ ಜನ್ಮಗಳಲ್ಲಿದ್ದು ಸತ್ತವರೂ ತಿಳಿದಿದ್ದಾರೆ. ೬೧. ಕೋಳಿಗಳ ಕೂಗೆಲ್ಲಿ ? ಆ ಸ್ವರವನ್ನಾಲಿಸಿ ಮಾಡಿದ ಬಾಣಪ್ರಯೋಗವೆಲ್ಲಿ ? ಆ ಕೋಳಿಗಳು ಸತ್ತ ಮೇಲೆ ಅವುಗಳಿಗೆ ದೊರೆತುದು ಮಾನವಜನ್ಮ ಇದರಿಂದ ಧರ್ಮವು ಎಂತಹ ಸ್ಥಿತಿಯನ್ನೊದಗಿಸುವು ದೆಂಬುದು ಪ್ರತ್ಯಕ್ಷವಾಗುವುದಿಲ್ಲವೆ ?” ೬೨. ಮುನಿಗಳ ಈ ಮಾತನ್ನು ಕೇಳಿ, ಮಕ್ಕಳಿಂದಲೂ ಈ ವಿಷಯವನ್ನು ವಿಚಾರಿಸಿ ಸರಿಯಾಗಿ ತಿಳಿದುಕೊಂಡ ಯಶೋಮತಿ, “ಸಂಕಲ್ಪವಧೆಯಿಂದಲೇ ಇಷ್ಟು ಕಷ್ಟಗಳನ್ನು ಅನುಭವಿಸು ವಂತಾಯಿತು. ಇನ್ನು ಕೈಯಾರೆ ಕೊಲೆ ಮಾಡಿದರೆ ಇನ್ನೇನಾಗಲಿಕ್ಕಿಲ್ಲ ?” Page #79 -------------------------------------------------------------------------- ________________ ನಾಲ್ಕನೆಯ ಅವತಾರ ಎನಿತೊಳವು ಜೀವರಾಶಿಗ ಳನಿತುಮನೋರಂತೆ ಕೊಂದು ತಿಂದು ತಣಿವಿಲೆನೆ ಬರ್ದೆನಿಂದುವರಮಿನೆನಗಿನ್ನೆಂತಪ್ಪ ನರಕಮಿದಿರ್ವಂದಪುದೋ ಎಂದು ಸುದತ್ತಾಚಾರ್ಯರ ಮುಂದಣಿನರಮನೆಗೆ ಪೋಗದುರ್ವಿಭರಮಂ ನಂದನನೊಳಭಯರುಚಿಯೊಳ್ ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ ಶ್ರೀಜಿನದೀಕ್ಷೆಗೆ ತನುವಂ ಯೋಜಿಸೆ ಕಲ್ಯಾಣಮಿತ್ರನುಂಬೆರಸು ಯಥಾ ರಾಜಾ ತಥಾ ಪ್ರಜಾ ಎಂ ಬೋಜೆಯಿನಂದರಸುಗಳ ಪಲರ್ ತಳಸಂದ‌ ಆಗ ತಂದೆಯ ತಪದು ದ್ಯೋಗಂ ತಡವಾಗದಂತೊಡಂಬಟ್ಟು ಮಹಿ ಭೋಗಕ್ಕನುಜ ಯಶೋಧರ ನಾಗಿರೆ ಬಕಭಯರುಚಿಯುಮನುಜೆಯ ಸಹಿತಂ ತಮದಿಂದಂ ಪೊಱಮಟ್ಟು ತಮಚಾರಿತ್ರದೊಳೆ ನೆರೆದು ಮೆಯ್ದಿಕ್ಕಿದ ಸಂಯಮದ ಸುದತ್ತಾಚಾರ್ಯರ ಸಮುದಾಯದೊಳಿರ್ದು ತತ್ವಪರಿಣತನಾದು 2.99 ೬೪ ೬೫ ೬೬ 22 ಎಂದುಕೊಂಡನು. ೬೩. ನಾನು ಇದುವರೆಗೆ ಎಷ್ಟೆಷ್ಟು ಪ್ರಾಣಿಗಳಿವೆಯೋ ಅಷ್ಟಷ್ಟನ್ನು ಒಂದೇ ಸವನೆ ಕೊಲ್ಲುತ್ತಾ ಬಂದು ಅವುಗಳನ್ನು ತಿಂದಿದ್ದೇನೆ. ಆದರೂ ತೃಪ್ತಿ ಯುಂಟಾಗದೆ ಇದುವರೆಗೂ ಬಾಳಿದೆ. ನನಗೆ ಇನ್ನೆಂತಹ ನರಕವು ಕಾದಿದೆಯೋ ? ವಿಧಿಯೆ !” ೬೪, ಈ ಯೋಚನೆ ಬಂದ ಮೇಲೆ ಯಶೋಮತಿ ಅರಮನೆಗೂ ಹೋಗಲಿಲ್ಲ. ರಾಜ್ಯಭಾರವನ್ನೆಲ್ಲ ಮಗನಾದ ಅಭಯರುಚಿಗೆ ಒಪ್ಪಿಸಿ ತಾನು ಜೈನದೀಕ್ಷೆಯನ್ನು ವಹಿಸಿಕೊಂಡನು. ೬೫. ಕಲ್ಯಾಣಮಿತ್ರನೂ ದೀಕ್ಷೆಯನ್ನು ಕೈಕೊಂಡನು. ಆಗ “ರಾಜನಂತೆ ಪ್ರಜೆ” ಎಂಬ ಮಾತನ್ನು ಸಾರ್ಥಕಪಡಿಸುವಂತೆ ಅನೇಕ ನರಪತಿಗಳೂ ದೀಕ್ಷಾಬದ್ಧರಾಗಲು ನಿರ್ಧರಿಸಿದರು. ೬೬. ತಂದೆಯ ತಪಸ್ಸಿನ ಉದ್ಯೋಗಕ್ಕೆ ತಡೆಯಾಗಬಾರದು ಎಂದು ಅಭಯರುಚಿ ರಾಜ್ಯಭಾರವನ್ನು ವಹಿಸಲು ಸಮ್ಮತಿಯಿತ್ತನು. ಆಮೇಲೆ ಅವನು ತನ್ನ ತಮ್ಮ ಯಶೋಧರನಿಗೆ ರಾಜ್ಯ ಭೋಗವನ್ನೊಪ್ಪಿಸಿ ತಂಗಿಯೊಂದಿಗೆ ತಪಸ್ಸಿಗೆ ಹೊರಟನು. ೬೭, ಅಜ್ಞಾನಾಂಧ ಕಾರದಿಂದ ಹೊರಬಂದು ಉತ್ತಮ ಚಾರಿತ್ರದಲ್ಲಿ ಸೇರಿಕೊಂಡು ಸಂಯಮವಶನಾಗಿ ಸುದತ್ತಾಚಾರ್ಯರ ಶಿಷ್ಯವೃಂದದಲ್ಲಿ ಸೇರಿದನು ; ತತ್ವದಲ್ಲಿ ಪರಿಣತಿಯನ್ನು ಪಡೆದನು. Page #80 -------------------------------------------------------------------------- ________________ 2 . ಯಶೋಧರ ಚರಿತೆ ಆನಭಯರುಚಿಕುಮಾರನೆ ಈ ನೆಗಟ್ಟಿರ್ದಭಯಮತಿಯುಮೀ ಅಕ್ಕನೆ ದಲ್ ನಾನಾ ವಿಧ ಕರ್ಮದಿನಿ ನೈನಂ ನೀನ್ ಕೇಳ್ವೆ ಮಾರಿದತ್ತನೃಪೇಂದ್ರಾ ಗುರುವಿಂದು ಬೆಸಸೆ ಭಿಕ್ಷೆಗೆ. ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನ ಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದವೆಂ ಸಂಕಲ್ಪಹಿಂಸೆಯೊಂದಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ ಶಂಕತೆಯಿನಿನಿತು ದೇಹಿಗಳಂ ಕೊಂದವೆ ನರಕದೊಳ್ ನಿವಾರಣೆವಡೆವಯ್ ಎಂದ ನುಡಿ ನೆರೆದ ಜೀವಕದಂಬಂಗಳಭಯವೆಂಬ ಡಂಗುರದವೊಲೋಪ್ಟಂಬಡೆಯೆ ಮಾರಿದತ್ತನ್ನಪಂ ಬಿಲ್ಲುಂ ಬೆಳಗುಮಾದನುದ್ವೇಗಪರಂ ಆ ಚಂಡಮಾರಿ ಲೋಚನ ಗೋಚರತನುವಾಗಿ ಕುವರನಂ ಬಂದಿಸಿ ನೀನಾಚಾರ್ಯನೆಯೆಂದಿಂತಿರೆ ಸೂಚಿಸಿದಳ್ ನೆರೆದ ಜಾತ್ರೆ ನೆತೆ ಕೇಳ್ತಿನೆಗಂ ೬೮. ಆ ಅಭಯರುಚಿ ಕುಮಾರನೇ ನಾನು ; ಹೆಸರುಗೊಂಡ ಅಭಯಮತಿಯೇ ಈಕೆ. ನಾನಾವಿಧ ಕರ್ಮಗಳಿಂದ ನಾವು ಹೀಗಾಗಿದ್ದೇವೆ. ಮಾರಿದತ್ತ, ನಿನಗಿನ್ನು ಏನು ಕೇಳಲಿಕ್ಕಿದೆ ? ೬೯. ಇಂದು ಗುರುಗಳ ಅಪ್ಪಣೆಯಂತೆ ಭಿಕ್ಷೆಗೆ ಬರುತ್ತಾ ಇದ್ದೆವು. ಆಗ ನಮ್ಮನ್ನು ಹಿಡಿದು ತಂದಿದ್ದಾರೆ. ಇದಕ್ಕಾಗಿ ಹೆದರುವುದರಲ್ಲಿ ಅರ್ಥವಿಲ್ಲ. ಆದರೆ ನಿನ್ನ ಕೇಡನ್ನು ಎಣಿಸಿಕೊಳ್ಳುವಾಗ ನಿನ್ನ ವಿಷಯದಲ್ಲಿ ಕರುಣೆಯುಂಟಾಗುತ್ತದೆ ; ಭಯವೂ ಹುಟ್ಟುತ್ತದೆ. ೭೦. ಸಂಕಲ್ಪ ಹಿಂಸೆಯೊಂದರಿಂದಲೇ ನಾನು ಜನ್ಮಜನ್ಮಾಂತರಗಳ ಈ ದುಃಖಗಳನ್ನೆಲ್ಲ ಅನುಭವಿಸಿದೆ. ನೀನು ನಿಶ್ಚಿಂತೆಯಿಂದ ಇಷ್ಟು ಜೀವಿಗಳನ್ನು ಕೊಲ್ಲುತ್ತಾ ಇದ್ದೀಯಲ್ಲ ! ನಿನಗೆ ನರಕದಿಂದ ವಿಮೋಚನೆಯುಂಟೆ ?” ೭೧. ಅಭಯರುಚಿ ಆಡಿದ ಈ ಮಾತು ಅಲ್ಲಿ ಸೇರಿದ ಜೀವಸಮುದಾಯಕ್ಕೆಲ್ಲ ಅಭಯವೀಯುವ ಡಂಗುರದಂತೆ ಗಂಭೀರವಾಗಿ ಕೇಳಿತು. ಮಾರಿದತ್ತರಾಜನಂತೂ ಉದ್ವೇಗಕ್ಕೆ ಗುರಿ ಯಾಗಿ ಬಹಳ ಬೆರಗಿನಿಂದಿದ್ದನು. ೭೨. ಅದೇ ಸಮಯಕ್ಕೆ ಚಂಡಮಾರಿ ದೇವತೆಯು ಪ್ರತ್ಯಕ್ಷಳಾದಳು. ಅವಳು ಅಭಯರುಚಿಗೆ ವಂದಿಸಿ ಅವನೇ ಆಚಾರ್ಯನೆಂದು ತೋರಿಸಿಕೊಟ್ಟಳು. ಜಾತ್ರೆ ಸೇರಿದ ಜನರೆಲ್ಲ ಕೇಳುವಂತೆ ಅವಳು ಸೂಚನೆಯನ್ನಿತ್ತಳು : Page #81 -------------------------------------------------------------------------- ________________ ನಾಲ್ಕನೆಯ ಅವತಾರ ಪ್ರಜೆಯೆಲ್ಲಂ ಜಲಗಂಧ ಸ್ವಜ ತಂಡುಲ ಧೂಪ ದೀಪ ಚರು ತಾಂಬೂಲ ವಜದಿಂ ಪೂಜಿಸುವುದು ಜೀವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ ಎಂದು ತಿರೋಹಿತೆಯಾದೊಡೆ ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ~ ನಂದನರಂ ತನ್ನನುಜೆಯ ನಂದನರಂ ಮಾರಿದತ್ತವಿಭು ಲಾಲಿಸಿದಂ ಗುಡುಗುಡನೆ ಸುರಿವ ಕಣ್ಣನಿ-. ಯೊಡವಂದಶುಭಕ್ಕೆ ಮಂಗಳಸ್ನಾನಮಂದೊಡರಿಸೆ ಸೋದರಶಿಶುಗಳನೊಡಲೊಳ್ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ ತಾನಂದುವರೆಗಮೊದವಿಸಿದೇನಂಗಳಲ್ಲಿ ಕುಸುಮದತ್ತಂಗೆ ಧರಿಶ್ರೀನಾಥಪದವಿಯಂ ಕೋಟ್ರ್ಯಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ ಕೆಲಕಾಲಮುಗ್ರತಪಮಂ ಸಲಿಸಿ ಸಮಾಧಿಯೊಳೆ ಮುಡಿಪಿ ಮೂಆನೆಯ ದಿವಂ ನೆಲೆಯಾಗೆ ಮಾರಿದತ್ತಂ | ಕಲಿಯಂ ಮೂದಲಿಸಿದಂತ ದೇವನೆ ಆದಂ ೭೩. ಪ್ರಜೆಗಳೇ ಕೇಳಿ. ನೀವು ಇನ್ನು ಮುಂದೆ ನೀರು, ಗಂಧ, ಮಾಲೆ, ಅಕ್ಕಿ, ಧೂಪ, ದೀಪ, ಚರು, ತಾಂಬೂಲ ಎಂಬವುಗಳಿಂದಲೇ ನನ್ನ ಪೂಜೆಯನ್ನು ಮಾಡಬೇಕು. ಎಲ್ಲಿಯಾದರೂ ಪ್ರಾಣಿಗಳನ್ನು ಬಲಿಕೊಟ್ಟಿರೆಂದಾದರೆ ನಿಮ್ಮ ಮೇಲೆ ಕೋಪಿಸಿ ಕೊಂಡೇನು.” ೭೪, ಇಷ್ಟನ್ನು ಉದ್ಯೋಷಿಸಿ ಚಂಡಮಾರಿ ಮಾಯವಾದಳು. ಆಗ ಮಾರಿದತ್ತ ರಾಜನು ಎಲ್ಲ ಪ್ರಾಣಿಗಳ ಬಂಧನವನ್ನೂ ಬಿಡಿಸಿದನು. ತನ್ನ ತಂಗಿಯ ಮಕ್ಕಳಾದ ಹಾಗೂ ಎಲ್ಲ ಜನರಿಗೆ ಆನಂದವುಂಟುಮಾಡುವ ಅಭಯರುಚಿ ಅಭಯಮತಿಗಳನ್ನು ಅವನು ಮುದ್ದಾಡಿದನು. ೭೫, ಅರಸನ ಕಣ್ಣುಗಳಿಂದ ಎಡೆಬಿಡದೆ ಕಂಬನಿ ಸುರಿಯುತ್ತಿತ್ತು. ಬಂದೊದಗಿದ ಅಶುಭವನ್ನು ಪರಿಹರಿಸುವುದಕ್ಕಾಗಿ ಮಂಗಳ ಸ್ನಾನ ಮಾಡುವಂತೆ ಅಶ್ರುಸ್ನಾನವಾಯಿತು. ತನ್ನ ಸೋದರಳಿಯ ಮತ್ತು ಸೋದರ ಸೊಸೆಯನ್ನು ತನ್ನ ಒಡಲಲ್ಲಿ ಅಡಗಿಸವನೋ ಎಂಬಂತೆ ಅವನ್ನು ಗಾಢವಾಗಿ ಆಲಿಂಗಿಸಿ ದನು. ಉಸಿರು ಬಿಸಿಯಾಗಿ ಹೊಮ್ಮುತ್ತಿತ್ತು. ೭೬, ಅದುವರೆಗೂ ಮಾಡಿದ ಪಾಪಕೃತ್ಯ ಗಳಿಂದಾಗಿ ಅವನು ಅಳುಕಿ ಹೋದನು. ಆದುದರಿಂದ ಅವನು ಮಗ ಕುಸುಮದತ್ತನಿಗೆ ಅರಸು ಪಟ್ಟವನ್ನು ಕಟ್ಟಿ ದೀಕ್ಷೆಯನ್ನು ಕೈಕೊಂಡನು. ೭೭. ಕೆಲವು ಕಾಲದವರೆಗೂ ಅವನು ಉಗ್ರವಾದ ತಪಸ್ಸಿನಲ್ಲಿ ಮಗ್ನನಾದನು. ಅನಂತರ ಸಮಾಧಿ ಮರಣವನ್ನು ಪಡೆದು ಮೂರನೆಯ ಸ್ವರ್ಗದಲ್ಲಿ ಕಲಿಯನ್ನು ಮೂದಲಿಸಿದಂತೆ ದೇವನೆ ಅದನು. Page #82 -------------------------------------------------------------------------- ________________ ೭೮ ಯಶೋಧರ ಚರಿತೆ ಅಮಳಳ್ ಬಳೆಕ ಸುದತ್ತರ ಸಮುದಾಯದೊಳಾಗಮೋಕ್ತಿಯಿಂ ನಡೆದು ತಪಂ ತಮಗಮರೆ ನೋನ್ನು ಮುಡಿಪಿದ ಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್ ಮತ್ತಂ ಧರ್ಮವಿಹಾರನಿಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾದುಮಗತಿಯಂ ಕೇಳು ಸುದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ ಜೀವದಯೆ ಎಂಬುದೆಮ್ಮಯ ಮಾವನ ಹೆಸರಿರ್ದ ನಾಡೋಳಿರದಾತಂಗಂ ದೇವಗತಿಯಾಯ್ತು ಸೋದರರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ ಎಂದು ಮನಸಂದು ಜಿನಮತ ನಂದನದೊಳ್ ದಾನಲತೆ ದಯಾರಸದೆ ಜಗಂ ಪಂದರೆನೆ ಪರ್ವಿ ಪೊಸಜಸದಿಂದಂ ಮರಲ್ಲಿರೆ ಯಶೋಧರಂ ಬೆಳೆಯಿಸಿದಂ ಸಜ್ಜನ ಚೂಡಾಮಣಿ ತಮಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾಗುಜಳಿಕೆವಡೆದ ಪೆರ್ಮೆಯೊ ಭುಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ ೭೮. ಅನಂತರ ಅಭಯರುಚಿ ಅಭಯಮತಿಗಳು ಸುದತ್ತರ ಶಿಷ್ಯ ಸಮುದಾಯದಲ್ಲಿದ್ದರು. ಅಲ್ಲಿ ಶಾಸ್ತ್ರವಚನದಂತೆ ನಡೆದರು. ಇಬ್ಬರೂ ತಪೋಮಗ್ನ ರಾಗಿ ವ್ರತಗಳನ್ನಾಚರಿಸಿ ದೇಹಾವಸಾನವಾದಾಗ ಈಶಾನಕಲ್ಪದಲ್ಲಿ ಹುಟ್ಟಿದರು. ೭೯. ಮತ್ತೊಮ್ಮೆ ಸುದತ್ತಾಚಾರ್ಯರು ಧರ್ಮವಿಹಾರಕ್ಕಾಗಿ ಅಲ್ಲಿಗೆ ಬಂದಿದ್ದರು. ಆಗ ಯಶೋಧರನು ತಮ್ಮವರಿಗೊದಗಿದ ಉತ್ತಮಗತಿಯನ್ನು ಕೇಳಿ ತಿಳಿದನು; ಗುರುಗಳ ಪಾದಕಮಲವನ್ನು ಪೂಜಿಸಿದನು. ೮೦. “ನಮ್ಮ ಮಾವನಿದ್ದ ಊರಿನಲ್ಲಿ ಜೀವದಯೆ ಎಂಬುದರ ಹೆಸರೇ ಇರಲಿಲ್ಲ. ಅಂಥವರಿಗೂ ದೇವಗತಿಯಾಯಿತು. ನನ್ನ ಅಣ್ಣ ಅಕ್ಕಂದಿರಿಗೂ ಅಂತಹ ವೈಭವವು ಸಂಭವಿಸಿತು ಎಂದ ಮೇಲೆ ಧರ್ಮದಿಂದ ಆಗದುದೇನಿದೆ?” ಎಂದು ಎಣಿಸಿ ಧರ್ಮಕ್ಕೆ ಮನಸ್ಕೊಪ್ಪಿಸಿದನು. ೮೧. ಜಿನಮತ ನಂದನದಲ್ಲಿ ಅವನು ದಾನಲತೆಯನ್ನು ಬೆಳೆಯಿಸಿ ಅದಕ್ಕೆ ದಯಾರಸವನ್ನೆರೆದು ಅದನ್ನು ಜಗತ್ತಿನ ಚಪ್ಪರದಲ್ಲಿ ಹಬ್ಬಿಸಿದನು*೯, ಅದರಲ್ಲಿ ಹೊಸಕೀರ್ತಿ ಹೂವಾಗಿ ಅರಳಿತು. ೮೨. ಯಶೋಧರನು ಸಜ್ಜನ ಚೂಡಾಮಣಿಯೆನ್ನಿಸಿ ತನ್ನ ಪುಣ್ಯದಿಂದ ತನ್ನ ಅಜ್ಜ ಯಶೌಘನಿಗಿಂತಲೂ ಸಾವಿರಪಾಲು ಉಜ್ವಲತೆಯನ್ನು ಪಡೆದು ಉಜ್ಜಯನಿಯಲ್ಲಿ Page #83 -------------------------------------------------------------------------- ________________ ನಾಲ್ಕನೆಯ ಅವತಾರ ತಾರಾತಾರ ಧರಾಧರ ತಾರಾ ದರತಾರಹಾರ ನೀಹಾರ ಪಯಃ ಪೂರ ಹರಹಸನ ಶಾರದ ನೀರದ ನಿರ್ಮಲಯಶೋಧರಂ ಕವಿತಿಲಕಂ ೮೩ ಕ್ಷಯಮಂ ಪಿಟ್ಟಿನ ಕೋಟಿಗಿತ್ತು ನವಿಲಂ ನಾಯಾದರೆಯುಂ ವಿಷಾಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೊಂತುಮಾಡಾದರಲಿಯೆ ಪೋಂತುಂ ಪುಲುಗೋಣರಾದರೆರಡುಂ ಬಲ್ಗೊಲೆಯಾದ‌ ತಪಸ್ವಿಯ ಮಾತಿಂದಮಳಾದರ ಮಗನುಂ ತಾಯುಂ ಯಶೌಘಪ್ರಿಯರ್ ೮೪ ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ತಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ ೮೫ ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತೃರಮುತ್ತರೋತ್ತರಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂರ್ಣಾ ಗುರುವಾಗೆ ಭೂತಳದೊಳೀ ಕೃತಿ ಪತ್ತುದು ಸುಪ್ರತಿಷ್ಠೆಯಂ ಚಾಗದ ಭೋಗದಗ್ಗಳಿಕೆಯಂ ಮೆಚಿದಂ ಕವಿಭಾಳಲೋಚನಂ ೮೬ ಸುಖವಾಗಿ ರಾಜ್ಯಭಾರ ಮಾಡುತ್ತಿದ್ದನು. ೮೩. ಬೆಳ್ಳಿ, ಬೆಳ್ಳಿಯ ಬೆಟ್ಟ (ಕೈಲಾಸ), ನಕ್ಷತ್ರ (ಚಂದ್ರ), ಶಂಖ, ಮುತ್ತಿನಹಾರ, ಮಂಜು, ಹಾಲಹೊಳೆ, ಹರನ ನಗು, ಶರತ್ಕಾಲದ ಮೋಡ ಇವುಗಳಂತೆ ನಿರ್ಮಲ ಯಶೋಧರನು ಕವಿತಿಲಕನು೬೦, ೮೪. ಯಶೌಘನಿಗೆ ಮೆಚ್ಚಿನವರಾದ ಯಶೋಧರನೂ ಚಂದ್ರಮತಿಯೂ ಹಿಟ್ಟಿನ ಕೋಳಿಯನ್ನು ಕೊಂದು ನವಿಲೂ ನಾಯಿಯೂ ಅದರು. ಅನಂತರ ಮುಳ್ಳುಹಂದಿಯೂ ಸರ್ಪವೂ ಆದರು. ಹಗೆ ಸುತ್ತಿ ಸತ್ತು ಮೀನು ಮೊಸಳೆಗಳಾಗಿ, ಬಳಿಕ ಹೋತ ಆಡುಗಳಾಗಿ, ಆಮೇಲೆ ಹೋತ ಕೋಣಗಳಾಗಿ ಜನ್ಯಪಡೆದರು. ಮುಂದೆ ಎರಡು ಕೋಳಿಗಳಾಗಿ ಹುಟ್ಟಿದರು. ತಪಸ್ವಿಗಳಾದ ಸುದತ್ತಾಚಾರ್ಯರ ಮಾತನ್ನು ಕೇಳಿದುದರಿಂದ ಈ ಮಗನೂ ತಾಯಿಯೂ ಅವಳಿ ಮಕ್ಕಳಾಗಿ ಜನ್ಮವೆತ್ತಿದರು. ೮೫. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ ಕುಮಾರನು ಪುಣ್ಯದ ವಿಷಯವನ್ನು ಹೇಳಿ ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭು ಸಭೆಗೆ ಮಂಗಲಕರವಾದ ಸಂಪದ್ವಿಲಾಸವು ಶೋಭಿಸುತ್ತದೆ. ೮೬. ಶ್ರೀ ಗಿರಿದುರ್ಗಮಲ್ಲ ರಾಜನ ರಾಜ್ಯದ ವತ್ಸರವು ಉತ್ತರೋತ್ತರ ಉತ್ಕರ್ಷಕ್ಕಾಗಿ ಇರುವಾಗ ಶುಕ್ಲ ಸಂವತ್ಸರದ ಆಶ್ವೇಜ ಕೃಷ್ಣ ಪಂಚಮಿ ಪುಷ್ಯನಕ್ಷತ್ರದ ಗುರುವಾರ ಈ ಕೃತಿ ಒಳ್ಳೆಯ ಪ್ರತಿಷ್ಠೆಯನ್ನು ಪಡೆಯಿತು. ಈ ಲೋಕದಲ್ಲಿ ತ್ಯಾಗದ ಭೋಗದ ಅಗ್ಗಳಿಕೆಯನ್ನು ಕವಿಭಾಳಲೋಚನನು Page #84 -------------------------------------------------------------------------- ________________ ಯಶೋಧರ ಚರಿತೆ ಪರಮ ಜಿನೇಂದ್ರಶಾಸನವಸಂತದೊಳೀ ಕೃತಿಕೋಕಿಲಸ್ವನಂ ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಲೆ ಸಂತತಂ ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೋಲ್ ಸಿರಿ ನೆರೆದಿರ್ಕೆ ನಾಲ್ವಿಭು ಜನಾರ್ದನದೇವನ ವಕ್ತಪದದೊಳ್ ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂ ಜನ್ನ ಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರಂ ಸಂಪೂರ್ಣ೦ ಮೆರೆದನು. ೮೭. ಶ್ರೇಷ್ಠನಾದ ಜಿನೇಂದ್ರನ ಶಾಸನ (ಧರ್ಮ)ವೆಂಬ ಸಂವತ್ಸರದಲ್ಲಿ ಈ ಕಾವ್ಯವೆಂಬ ಕೋಗಿಲೆಯ ಧ್ವನಿ ಪಸರಿಸಲಿ ! ಅಸಹಾಯ ಶೂರನ (ಬಲ್ಲಾಳನ) ಬಾಹುವಿಗೆ ಜಯವೊದಗಲಿ ! ನಾಡೊಡೆಯನಾದ ಜನಾರ್ದನ ದೇವ (ಜನನ ಮುಖ ಕಮಲದಲ್ಲಿ ಯಾವಾಗಲೂ ಸರಸ್ವತಿಯು ಪರಿಮಳದಂತೆ ನೆಲಸಿರಲಿ ! ವಿಕಾಸದ ಚೆಲುವಿನಂತೆ ಲಕ್ಷ್ಮಿ ಸೇರಿಕೊಂಡಿರಲಿ ! Page #85 -------------------------------------------------------------------------- ________________ ಟಿಪ್ಪಣಿಗಳು ೧. ಮಹಾಕವಿಗಳ ಮಾತಿನ ಸುಂದರ ರೀತಿಗೆ ಇದೊಂದು ಉದಾಹರಣೆ. ಆದಿ ತೀರ್ಥಂಕರನಿಂದ ತೊಡಗಿ ಮಲ್ಲಿತೀರ್ಥಂಕರನವರೆಗಿನ ಹತ್ತೊಂಬತ್ತು ಮಂದಿಯೂ ಒಲಿಸಿಕೊಂಡುದು ಒಬ್ಬಳನ್ನೇ-ಮುಕ್ತಿ ಎಂಬ ವಧುವನ್ನೇ. ಒಬ್ಬರಾದ ಮೇಲೆ ಒಬ್ಬರಂತೆ ಅವಳನ್ನು ಒಲಿಸಿದವರು ಬೇರೆ ಬೇರೆಯಾಗಿದ್ದು ಅವಳು ಯಾವಾಗ ಇತರರಿಗೆ ಪರವನಿತೆಯೆನ್ನಿಸಿಕೊಂಡೇ ಇದ್ದಳು. ಹಾಗಿದ್ದರೂ ಸುವ್ರತನೆಂಬ ಇಪ್ಪತ್ತನೆಯ ತೀರ್ಥಂಕರನೂ ಅವಳನ್ನೇ ಒಲಿಸಿಕೊಂಡನು. ಅವನಿಗೆ ಇದರಿಂದ ಕೆಟ್ಟ ಹೆಸರು ಬಾರದೆ ಪರವನಿತೆಯಲ್ಲಿ ಒಂದಿಷ್ಟೂ ಅಪೇಕ್ಷೆಯಿರಿಸಿಕೊಳ್ಳದವನು ಎಂಬ ಪ್ರಶಂಸೆಯೇ ದೊರೆಯಿತಂತೆ! ಅವನು ದೇವರ ದೇವನೂ ಆಗಿದ್ದನಂತೆ. ಆ ರೀತಿ ಮಹಿಮಾವಂತನಾದ, ಸಾರ್ಥಕನಾಮನಾದ ಸುವ್ರತನನ್ನು, ಒಳ್ಳೆಯ ವ್ರತವನ್ನೇ ನಮಗೆ ದಯಪಾಲಿಸಲಿ ಎಂದು ಕವಿ ಚಮತ್ಕಾರವಾಗಿ ಪ್ರಾರ್ಥಿಸುತ್ತಾನೆ. ಹಲವರೊಲಿಸಿದ ಹೆಣ್ಣನ್ನು ಸುವ್ರತನೂ ಒಲಿಸಿಕೊಂಡರೂ ಪರರ ಹೆಣ್ಣನ್ನು ಬಯಸದವನೆಂಬ ಪ್ರಸಿದ್ಧಿಗೆ ಪಾತ್ರನಾದನೆಂದು ಹೇಳುವಲ್ಲಿ ವಿರೋಧವು ತೋರಿಬರುತ್ತದೆ. ಆದರೆ ಆ ಹೆಣ್ಣು ಮತ್ತಾರೂ ಅಲ್ಲ, ಮುಕ್ತಿ ಎನ್ನುವಾಗ ಈ ವಿರೋಧವು ಪರಿಹಾರಗೊಳ್ಳುತ್ತದೆ. ಈ ಉಕ್ತಿ ಚಮತ್ಕಾರದಲ್ಲಿ, ಎಲ್ಲ ತೀರ್ಥಂಕರರೂ ಮೋಕ್ಷವನ್ನು ಪಡೆದವರೆಂದೂ, ಅವರು ದೇವತೆಗಳಿಗೆಲ್ಲ ದೇವರಾಗಿದ್ದರೆಂದೂ, ಇದಕ್ಕೆಲ್ಲ ಅವರ ಪರವನಿತಾನಿರಪೇಕ್ಷಕಗುಣವೇ ಕಾರಣವೆಂದೂ ಸೂಚಿತವಾಗಿದೆ. ಪರಸ್ತ್ರೀಕಾಮುಕತೆಯನ್ನು ಪರಿಹರಿಸಿಕೊಂಡವರು ಪರಮಪದವನ್ನು ಪಡೆಯಬಹುದೆಂದು ಇದರಿಂದ ಧ್ವನಿತವಾಗುತ್ತದೆ. ಈ ಕತೆಯಲ್ಲಿ ಒಲೆಯ ವಿಷಯವಿರುವುದರಿಂದ ಕವಿ 'ಒಲಿಸು' ಎಂಬ ಶಬ್ದವನ್ನು ಆರಂಭದಲ್ಲಿಯೇ ಪ್ರಯೋಗಿಸಿದ್ದಾನೆನ್ನಬಹುದು. 'ಯಶೋಧರ ಚರಿತೆ' ಎಂಬುದು 'ಜೀವದಯಾಷ್ಟಮಿ' ಎಂಬ ವ್ರತದ ಸಂದರ್ಭಕ್ಕೊಪ್ಪುವ ಕತೆಯಾದುದರಿಂದ ಜನ್ನಕವಿ ಆರಂಭದಲ್ಲಿ ಸುವ್ರತಜಿನನನ್ನು ಪ್ರಾರ್ಥಿಸಿ, ಅವನು ಎಲ್ಲರಿಗೆ ಆ ವ್ರತವನ್ನು ಅನುಗ್ರಹಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಇದೊಂದು ಸುಂದರ 'ಕಂದ'. ೨. ಅರ್ಹಂತ, ಸಿದ್ದ, ಆಚಾರ್ಯ, ಉಪಾಧ್ಯಾಯ, ಸಾಧು ಎಂಬ ಪಂಚಪರಮೇಷ್ಠಿಗಳನ್ನು ಕಾರಾ (ವ್ಯಾರಂಭದಲ್ಲಿ ನಮಸ್ಕರಿಸುವುದು ಜೈನಪದ್ಧತಿ. ೩. ಇಲ್ಲಿ ಜನ್ನನು ತನಗಿರುವ ಕವಿವೃಂದಾರಕವಾಸವ, ಕವಿಕಲ್ಪಲತಾಮಂದಾರ ಎಂಬ ಬಿರುದುಗಳನ್ನು ಸೂಚಿಸುತ್ತಾನೆ. ತನ್ನ ಪೋಷಕನಾದ ಬಲ್ಲಾಳದೇವನ ಮೇಲಿರುವ Page #86 -------------------------------------------------------------------------- ________________ ೮೨ ಯಶೋಧರ ಚರಿತೆ ಭಕ್ತಿಗೌರವಗಳನ್ನು ಇಲ್ಲಿ ಕವಿ ಸೂಚ್ಯವಾಗಿ ತಿಳಿಸುತ್ತಾನೆ, ಕಥಾರಂಭಕ್ಕಿಂತಲೂ ಬಲ್ಲಾಳದೇವನ ವಂಶವರ್ಣನವೇ ಮೊದಲ ಕರ್ತವ್ಯ ಎಂಬ ಮಾತಿನಲ್ಲಿ. ೪. ಬಲ್ಲಾಳದೇವನ ವಂಶಾನುಕ್ರಮವನ್ನು ಹೇಳುವ ಮೊದಲು ಉತ್ತಮ ಕಾವ್ಯವು ಯಾರಿಗೆ ಮೆಚ್ಚಿಗೆಯಾಗುತ್ತದೆ, ಯಾರಿಗೆ ಮೆಚ್ಚಿಗೆಯಾಗುವುದಿಲ್ಲ ಎಂಬುದನ್ನು ಕವಿ ತಿಳಿಸುತ್ತಾನೆ. ಕಾವ್ಯದ ಸವಿಯನ್ನುಣ್ಣಬೇಕಾದರೆ ಅವನಲ್ಲಿ ಕಲ್ಪನಾಶಕ್ತಿ, ರಸಿಕತೆ, ಸಂಭಾವಿತತೆ, ಹಾಗೂ ಶಾಸ್ತಜ್ಞಾನ ಮುಂತಾದುವೆಲ್ಲ ಕೂಡಿರಬೇಕೆಂದು ಹೇಳುತ್ತಾನೆ. ಅಂಥವನು ದೇವನೆನ್ನಿಸುತ್ತಾನೆ ಎಂಬುದು ಒಂದರ್ಥವಾದರೆ, ಬಲ್ಲಾಳದೇವನೇ ಆ ಯೋಗ್ಯತೆಯುಳ್ಳವನು ಎಂಬುದು ಇನ್ನೊಂದರ್ಥ. 'ದೇವಾನಾಂ ಪ್ರಿಯ' ಎಂಬುದೊಂದು ವಿಶಿಷ್ಟ ಪ್ರಯೋಗ. ಅಶೋಕ ಚಕ್ರವರ್ತಿ ತನ್ನನ್ನು ದೇವಾನಾಂ ಪ್ರಿಯ ಎಂದು ದೇವತೆಗಳಿಗೆ ಪ್ರೀತಿಪಾತ್ರನಾದವನು ಎಂಬ ಒಳ್ಳೆಯ ಅರ್ಥದಲ್ಲಿ ಪ್ರಯೋಗಿಸಿದ್ದನಾದರೂ, ಅದಕ್ಕೆ ಅನಂತರ ಕ್ರಮೇಣ ಅರ್ಥ ವ್ಯತ್ಯಾಸವುಂಟಾಗಿ ಮೂಢ ಎಂಬರ್ಥ ಬಂದಿದೆ. 'ದೇವರಿಗೇ ಪ್ರೀತಿ' ಎಂದು ಬಳಕೆಯಲ್ಲಿರುವ ಮಾತಿಗೆ ಮನುಷ್ಯನೊಬ್ಬನಿಗೂ ಪ್ರೀತಿಪಾತ್ರನಲ್ಲದವನು ಎಂಬರ್ಥವೇ ಹೊಳೆಯುತ್ತದೆ. ೫. ಡಾ. ಎಚ್. ತಿಪ್ಪೇರುದ್ರಸ್ವಾಮಿ ಇವರ 'ಕರ್ಣಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ' ಎಂಬುದರಲ್ಲಿ ಹೀಗಿದೆ: ಗಂಗವಾಡಿಯ ಉತ್ತರಭಾಗದ ಒಂದು ಮೂಲೆಯಲ್ಲಿ ಒಬ್ಬ ನಾಯಕ ತಲೆಯೆತ್ತಿದ. ಅವನನ್ನೇ 'ಸಳ' ಎಂದು ಕರೆಯಲಾಗಿದೆ. 'ಸಸವೂರು' ಅಥವಾ 'ಶಶಕಪುರ' ಎಂಬುದು ಅವನ ಕಾದ್ಯಕ್ಷೇತ್ರದ ಕೇಂದ್ರವಾಗಿದ್ದಂತೆ ತೋರುತ್ತದೆ. ಇದು ಈಗಿನ ಕಡೂರಿನ ಸುತ್ತುಮುತ್ತಲಿನ ಭಾಗವಾಗಿದ್ದಿರಬಹುದು. - ಶಶಕಪುರದ ಹತ್ತಿರ ವಾಸಂತಿಕಾ ದೇವಾಲಯವಿತ್ತು. ಅಲ್ಲಿಗೆ ಒಮ್ಮೆಸಳ ಹೋದಾಗ ಅಲ್ಲಿ ಒಬ್ಬ ಜೈನಗುರು ಧ್ಯಾನಾಸಕ್ತರಾಗಿದ್ದರು. ಅವರ ದರ್ಶನವನ್ನು ಪಡೆಯುತ್ತಿರಲು ಅಷ್ಟರಲ್ಲಿ ಹುಲಿಯೊಂದು ಅಲ್ಲಿಗೆ ಬಂದು ಮೇಲೆ ಬೀಳಲು ಉದ್ಯುಕ್ತವಾಯಿತು. ಅದನ್ನು ಕಂಡ ಯತಿ 'ಹೊಯ್ ಸಳ' ಅಂದರೆ 'ಎಲೈ ಸಳನೇ ಹೊಡೆ' ಎಂದನು. ಆ ಕೂಡಲೇ ಸಳನು ಕೈಲಿದ್ದ ಆಯುಧದಿಂದ ಹುಲಿಯನ್ನು ಹೊಡೆದು ಕೊಂದುಹಾಕಿದನು. ಅವನ ಧೈರ್ಯಕ್ಕೆ ಮೆಚ್ಚಿ ಜೈನಯತಿ ವಾಸಂತಿಕಾದೇವಿಯ ಅನುಗ್ರಹವು ಆತನಿಗೆ ಲಭಿಸುವಂತೆ ಮಾಡಿದನು; ಮತ್ತು ಸುತ್ತುಮುತ್ತಲ ಪ್ರದೇಶಕ್ಕೆಲ್ಲ ರಾಜನಾಗುವಂತೆ ಆಶೀರ್ವದಿಸಿದನು. ಸಳನಿಗೆ ಅಲ್ಲಿಂದ ಮುಂದೆ ಪೊಯ್ಸಳ ಅಥವಾ ಹೊಯ್ಸಳನೆಂದೂ ಆತನ ವಂಶಕ್ಕೆ ಹೊಯ್ಸಳ ವಂಶವೆಂದೂ ಹೆಸರಾಯಿತು. (ಪು. ೧೨೬-೧೨೭) ಇಲ್ಲಿ ಜನ್ನ ಸಳನು ಯತಿಯ ಕುಂಚದ ಸೆಳೆಯಿಂದ ಹೊಯ್ದನು ಎಂದಿದ್ದಾನೆ. Page #87 -------------------------------------------------------------------------- ________________ ಟಿಪ್ಪಣಿಗಳು ೬. ಎರೆಯಂಗನಿಗೂ ಏಚಲದೇವಿಗೂ ಮಗನಾದ ಕಾರಣವೇ ವಿಷ್ಣು ನೃಪಾಲನು ಉದಾರನೂ, ವೀರನೂ, ರಕ್ಷಕನೂ ಆಗಿದ್ದನೆಂದು ತಾತ್ಪರ್ಯ. ಒಳ್ಳೆಯ ತಾಯಿ ತಂದೆಗಳಿಂದ ಮಕ್ಕಳಿಗೂ ಒಳ್ಳೆಯ ಗುಣಗಳು ಬರುತ್ತವೆ ಎಂದು ಸೂಚಿತವಾಗಿದೆ. ೭. ಪ್ರತಾಪ ಎಂದರೆ ಬಹಳ ಉರಿ. ಪ್ರತಾಪಚಕ್ರೇಶ್ವರ ಎಂದರೆ ಸೂರ್ಯ. ೮೩ ೮. ಮೂರುವರೆ ರಾಯರು- ನಾಲ್ಕೂ ದಿಕ್ಕುಗಳಲ್ಲಿ ಇರುವ ಪ್ರಮುಖ ರಾಜರು ನಾಲ್ವರು. ಒಂದುದಿಕ್ಕಿನಲ್ಲಿ ಬಲ್ಲಾಳನೇ ಇದ್ದಾನೆ. ಉಳಿದ ಮೂರು ದಿಕ್ಕುಗಳಲ್ಲಿ ಮೂವರು ರಾಜರಿದ್ದಾರೆ. ಇವರಲ್ಲದೆ ಅರೆ ಎಂದರೆ ಕೆಲವು (ಅರೆ ಎಡೆ ಹಸ್ತಿ ಶಿಕ್ಷಣ ವಿಚಕ್ಷಣ‌ ಎಂಬಲ್ಲಿ ಬರುವ ಅರೆ ಎಂಬುದಕ್ಕೆ ಕೆಲವು ಎಂಬುದೇ ಅರ್ಥ) ರಾಜರು ಬೇರೆ ಇದ್ದಾರೆ. ಇವರು ಹೆಸರಿಗೆ ಮಾತ್ರ ರಾಜರು. ೯. ಶ್ರೇಷ್ಠ ಕವಿಗಳಲ್ಲಿ ಪರಮೇಶ್ವರನಂತಿದ್ದಾನೆ. ಎಷ್ಟು ಮಂದಿ ಕಲಾನಿಪುಣರು ತಮ್ಮ ನೈಪುಣ್ಯವನ್ನು ತೋರಿಸಿದರೂ, ಜನ್ನನು ಬೆರಳೆತ್ತಿ ನಿಂತು ಅವರನ್ನು ಮೀರಿಸಬಲ್ಲವನಾಗಿದ್ದನೆಂದು ಭಾವ. ೧೦. ಯಾದವ ರಾಜಚ್ಛತ್ರ-ಯಾದವರಾಜರ ಛತ್ರದ ಕೆಳಗೆ ಇರುವವನು; ಅವರ ಆಶ್ರಿತನು. ೧೧. ಸುಮನೋಬಾಣನೆಂದರೆ ಕಾಮ; ಭಾಳಲೋಚನನೆಂದರೆ ಶಿವ. ಶಿವನು ಕಾಮನನ್ನು ಸುಟ್ಟನೆಂದು ಪೌರಾಣಿಕ ಕಥೆ. ಆದರೆ ಇಲ್ಲಿ ಸುಮನೋಬಾಣನಿಗೆ ಭಾಳಲೋಚನನು ಮಗನಾಗಿರುವುದು ವಾಣೀ ಪಾರ್ವತಿಯರ ಪ್ರೀತಿಯ ಪ್ರಭಾವದಿಂದ ಎಂದು ತಾತ್ಪರ್ಯ. ೧೨. ಬುಧ ಎಂಬುದಕ್ಕೆ ವಿದ್ವಾಂಸನೆಂದೂ ದೇವನೆಂದೂ ಅರ್ಥವಿದೆ. ಅಮೃತದ ಕಡಲನ್ನು ಕಡೆದಾಗ ಅದರಿಂದ ಕಲ್ಪವೃಕ್ಷವೇ ಮುಂತಾದ ಸುವಸ್ತುಗಳು ಮೇಲಕ್ಕೊಗೆದುವು. ದೇವತೆಗಳು ಅವುಗಳನ್ನು ಪಡೆದು ನಿರಂತರ ಸುಖವನ್ನು ಪಡೆಯುತ್ತಾರೆ. ಹಾಗೆಯೇ ಈ ಕಥೆ ಇತಿಹಾಸವೆಂಬ ಕಡಲಲ್ಲಿ ಹುಟ್ಟಿದೆ; ಕಲ್ಪವೃಕ್ಷದಂತಿದೆ; ರಸವತ್ತಾಗಿದೆ. ಇದರಿಂದ ಬಲ್ಲವರು ಸುಖವನ್ನು ಪಡೆಯುತ್ತಾರೆ. ೧೩. ಚಾಂದ್ರಾಯಣ-ಇದು ಒಂದು ವ್ರತದ ಹೆಸರು. ಚಂದ್ರನ ವೃದ್ಧಿಕ್ಷಯಗಳ ಪ್ರಕಾರ ಆಹಾರ ಸೇವನೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುವುದು ಇದರಲ್ಲಿರುವ ಕ್ರಮ. ೧೪. ಅರುಣೋದಯವಾಗುವಾಗ ಹಬ್ಬುವ ಹೊಂಬಣ್ಣದಂತೆ ಜಿನಾಲಯದ ಮಾಣಿಕ್ಯದ ಕಲಶಗಳು ರಾತ್ರಿಯಲ್ಲೂ ಹೊಂಬಣ್ಣವನ್ನು ಹಬ್ಬಿಸಿ ರಾತ್ರಿಯನ್ನು ಹಗಲಿಗಿಂತಲೂ ಮಿಗಿಲಾಗಿ ಬೆಳಗಿಸುತ್ತವೆ. ಹಾಗೆಯೇ ಅಲ್ಲಿನ ಉನ್ನತವಾದ ಧ್ವಜ (ಕೇತು)ಗಳು ಬಹಳ ಮೇಲಕ್ಕೇರಿ ಕೇತುಗ್ರಹದ ಒಡನಾಟವನ್ನು ಪಡೆದು ಸೂರ್ಯಮಂಡಲವನ್ನು ಅಪಹಾಸ್ಯ ಮಾಡುತ್ತವೆ. ಸೂರ್ಯನನ್ನು ಕೇತು ನುಂಗುವುದೆಂದು Page #88 -------------------------------------------------------------------------- ________________ ೮೪ ಯಶೋಧರ ಚರಿತೆ ಕಲ್ಪನೆ. ಅಂತಹ ಕೇತುವಿನೊಡನೆ ಈ ಕೇತುಗಳು ಮೈತ್ರಿಯನ್ನು ಪಡೆದಿವೆ ಎಂದರೆ ಇಲ್ಲಿನ ಧ್ವಜಗಳು ಬಹಳ ಎತ್ತರದಲ್ಲಿ ಶೋಭಿಸುತ್ತವೆ ಎಂದು ತಾತ್ಪರ್ಯ. ೧೫. ವಸಂತದ ಚೈತ್ರಮಾಸವು ಬಂದಾಗ ಶುಕ್ಲಪಕ್ಷದಲ್ಲಿ ಚಂದ್ರನು ಮೂಡಿಕೊಂಡು ಬರುತ್ತಾನೆ; ಅಶೋಕದ ಮರವು ಚಿಗುರಿ ಕೆಂಬಣ್ಣವನ್ನು ಹಬ್ಬಿಸುತ್ತದೆ; ಕೋಗಿಲೆಗಳು ಕೂಗತೊಡಗುತ್ತವೆ. ಪ್ರಕೃತಿಯ ಈ ಸ್ಥಿತಿಯನ್ನೇ ಕವಿ ಆಲಂಕಾರಿಕವಾಗಿ ಬಣ್ಣಿಸುತ್ತಾನೆ. ದೇವತೆಯ ತೃಪ್ತಿಗಾಗಿ ಪ್ರಾಣಿಗಳನ್ನು ಬಲಿಕೊಡುವಾಗ ಕೆಲವನ್ನು ತಲೆಗೆ ಗಾಳಹಾಕಿ ತೂಗಾಡಿಸುವುದು, ಕೆಲವನ್ನು ಬೆಂಕಿಯಲ್ಲಿ ಹಾಕಿ ಸುಡುವುದು (ಇದಕ್ಕಾಗಿ ಬೆಂಕಿಯನ್ನು ಸಿದ್ಧಪಡಿಸುವುದು) ಗಟ್ಟಿಯಾಗಿ ಆರ್ಭಟಿಸುವುದು ನಡೆಯುತ್ತವೆ. ಇವುಗಳನ್ನು ಅನುಕ್ರಮವಾಗಿ ಇಲ್ಲಿ ಸೂಚಿಸಲಾಗಿದೆ. ೧೬. ವಸಂತದಲ್ಲಿ ಮುತ್ತುಗಗಳು ಹೂಬಿಡುತ್ತವೆ; ಮಾವಿನ ಮರಗಳೂ ಹೂ ಬಿಡುತ್ತವೆ. ಮಾವಿನ ಮರಗಳ ಬಳಿಯಲ್ಲೇ ಮುತ್ತುಗದ ಹೂಗಳು ಉದುರಿಬಿದ್ದುದನ್ನು ಕಾಣುವಾಗ ವಸಂತನು ತನ್ನ ಹಿಂದೆ ಅರಸುತನ ಮಾಡುತ್ತಿದ್ದ ಶಿಶಿರ (ಚಳಿಗಾಲ)ವನ್ನೆ ಹಿಡಿದು, ಆ ಶಿಶಿರನ ಅಂಗಾಂಗಗಳನ್ನು ಕೊಚ್ಚಿ ಆ ಮಾಂಸವನ್ನು ಈ ರೀತಿ ಹರಕೆಯೊಪ್ಪಿಸಿದನೋ ಎಂಬಂತೆ ಭಾಸವಾಗುತ್ತದೆ ಎಂದು ಕವಿ ಇಲ್ಲಿ ಉತ್ತೇಕ್ಷಿಸುತ್ತಾನೆ. ೧೭. ಚೈತ್ರದಲ್ಲಿ ಗಿಳಿಗಳು ಕೂಗುವುದೂ, ತೆಂಕಣಗಾಳಿ ಬೀಸುವುದೂ ತಾವರೆಗಳು ಅರಳುವುದೂ ಸಹಜ. ಈ ತಾವರೆಗಳು ಕೆಂಪು ಬಣ್ಣದವುಗಳಾಗಿದ್ದು ಉರಿಯುವ ಕೆಂಡಗಳಂತೆ ತೋರುತ್ತವೆ. ದೇವಿಯ ಸೇವೆಯನ್ನು ಮಾಡುವಲ್ಲಿ ಕೆಂಡದ ಮೇಲೆ ನಡೆಯುವುದೇ ಮುಂತಾದ 'ಕೆಂಡಸೇವೆ'ಗಳು ರೂಢಿಯಲ್ಲಿವೆ. ಈ ದಕ್ಷಿಣಾನಿಲನು ತಾವರೆಗಳ ಕೊಳಗಳನ್ನು ಹಾದು ಬರುವುದನ್ನು ಕವಿ ಈ ರೀತಿ ವರ್ಣಿಸಿದ್ದಾನೆ. : ೧೮. ಕತ್ತಿಯಿಂದ ಕಡಿದುಕೊಳ್ಳುವುದು, ಬೆಂಕಿಯಲ್ಲಿ ನಲಿದಾಡುವುದು ಮುಂತಾದುವು ಕರಾವಳಿಯ ದೈವಾರಾಧನೆಗಳಲ್ಲಿವೆ. ೧೯. ಗಮನ ಪ್ರಾಯಶ್ಚಿತ್ತ-ನಡೆದುಕೊಂಡು ಹೋಗುವಾಗ ಕಣ್ಣಿಗೆ ಕಾಣದ ಪ್ರಾಣಿಗಳು ತಮ್ಮ ಕಾಲಡಿಗೆ ಬಿದ್ದು ಸತ್ತಿರಬಹುದೆಂದೂ ಈ ಹಿಂಸೆಯ ಪಾಪ ತಮ್ಮಿಂದ ತಿಳಿಯದೆ ನಡೆದಿರಬಹುದಾದರೂ ಇದಕ್ಕೆ ಪ್ರಾಯಶ್ಚಿತ್ತವಾಗಿ ಉಪವಾಸವನ್ನು ಕೈಕೊಳ್ಳಬೇಕೆಂದೂ ಇದೆ. ಇದಕ್ಕೆ ಗಮನ ಪ್ರಾಯಶ್ಚಿತ್ತ ಎಂದು ಹೆಸರು. ೨೦. ಸುದತ್ತಾಚಾದ್ಯರ ನಾಮೋಚ್ಛಾರ ಮಾಡಿದರೆ ಆ ವ್ಯಕ್ತಿಗೆ ಮುಂದೆ ಜನ್ಮವನ್ನು ಪಡೆದು ತಾಯಿಯ ಮೊಲೆಹಾಲನ್ನು ಕುಡಿಯುವ ಪ್ರಸಂಗವೇ ಇಲ್ಲದೆ ಮೋಕ್ಷ ಪ್ರಾಪ್ತಿಯಾಗುವುದು ಎಂದು ಒಂದರ್ಥವಾದರೆ, ಎಳೆಯ ಮಗು ಸಹ ಸುದತ್ತಾಚಾರ್ಯರ ಹೆಸರು ಹೇಳಿದರೆ ಆ ನಾಮೋಚ್ಛಾರದ ಸವಿಯಿಂದಾಗಿ ತಾಯಿಯ ಮೊಲೆಹಾಲನ್ನೂ ಬಯಸಲಾರದು ಎಂಬುದು ಇನ್ನೊಂದರ್ಥ. Page #89 -------------------------------------------------------------------------- ________________ ೮೫. ಟಿಪ್ಪಣಿಗಳು ೨೧. ಪರೀಷಹ-ತಾನಾಗಿಯೇ ಬರುವ ಇಪ್ಪತ್ತೆರಡು ಬಗೆಯ ಕ್ಲಶಗಳು. ಅವುಗಳು ಈ ಕೆಳಗೆ ಕೊಟ್ಟವುಗಳು: ಶೀತ, ಉಷ್ಣ, ಕ್ಷುತ್‌, ಪಿಪಾಸೆ, ಅರತಿ, ಕ್ರಿಮಿಬಾಧೆ, ನಗ್ನತ್ವ, ಚರ್ಯೆ, ನಿಷಧ್ಯಾ, ಸ್ತ್ರೀ, ಶಯ್ಯಾರೋಗ, ಅಲಾಭ, ಯಾಜ್ಞಾ, ಆಕ್ರೋಶ, ವಧೆ, ತೃಣ, ಸ್ಪರ್ಶ, ಮಲ, ಪ್ರಜ್ಞೆ, ತಿರಸ್ಕಾರ, ಪುರಸ್ಕಾರ, ಅಜ್ಞಾನ, * ೨೨. ಕೋಡು ಬರುವುದು ಪ್ರಾಣಿಗಳು ಬೆಳೆದಾಗ, ಹಾಗೆಯೇ ಕೋಡು ಬರು ಎಂಬುದಕ್ಕೆ ಮಹತ್ವವುಂಟಾಗು, ಎಂಬುದು ಭಾವಾರ್ಥ. ೨೩. ಹೊಲದಲ್ಲಿ ಆಡಿದಂತೆ ಒಮ್ಮೆ ಸಂತೋಷವು ಕಾಣುವುದು, ಒಮ್ಮೊಮ್ಮೆ ಮದ್ದು ಸೇವಿಸಿದಂತೆ ಕಹಿಯಾಗುವುದೂ ಪ್ರತ್ಯಕ್ಷವಾಗಿದೆಯೆಂದೂ ಅಭಿಪ್ರಾಯ. ೨೪. ಮೂರಿ ಎಂಬುದಕ್ಕೆ ಗೂಳಿ, ಕೋಣ, ಬಾಯಿ ಎಂದೂ, ಕತ್ತಿಯೆಂದೂ ಅರ್ಥಮಾಡುತ್ತಾರೆ. ಅದಕ್ಕೆ ಉತ್ಪಾತ ಎಂಬರ್ಥವೂ ಆಗಬಹುದೆಂದು ಹೇಳುವವರೂ ಇದ್ದಾರೆ. - ೨೫. ಭರತಖಂಡದ ಮಧ್ಯರೇಖೆ ನರ್ಮದಾನದಿ. ಈ ನದಿಯ ಉತ್ತರಕ್ಕೆ ಆರ್ಯಾವರ್ತವಿದ್ದರೆ, ದಕ್ಷಿಣಕ್ಕೆ ದಕ್ಷಿಣಾಪಥವಿದೆ. ಧರ್ಮವು ಆರ್ಯಾವರ್ತದಲ್ಲಿದ್ದಂತೆ ದಕ್ಷಿಣಾಪಥದಲ್ಲಿಲ್ಲವೆಂಬ ಅಭಿಪ್ರಾಯವು ಹಿಂದೆ ಆರ್ಯಾವರ್ತದವರಲ್ಲಿದ್ದಿರಬಹುದು. ಅಯೋಧ್ಯೆಯಲ್ಲಿ ಈ ಘಟನೆ ನಡೆಯುವ ಸಂದರ್ಭದಲ್ಲಿ ಈ ಮಾತು ಬರುವುದರಿಂದ ಧರ್ಮಾಸಕ್ತಿ ಮಾರಿದತ್ತನಿಂದ ದೂರವಾಗಿದೆಯೆಂದು ತಾತ್ಪರ್ಯ. ಅಯೋಧ್ಯೆಯಿಂದ ನರ್ಮದೆ ಬಹಳ ದೂರದಲ್ಲಿರವುದರಿಂದ ಅರಸನು ಈ ರೀತಿ ಧರ್ಮದೂರನಾಗಿದ್ದಾನೆಂದು ಹೇಳುವುದೂ ಇರಬಹುದು. ೨೬. ಚಂದ್ರೋದಯವಾಗುವಾಗ ಕತ್ತಲೆಯೂ ತೊಲಗುತ್ತದೆ; ತಾವರೆಗಳಿಂದ ಭ್ರಮರಗಳೂ ತೋಲಗುತ್ತವೆ. ಏಕೆಂದರೆ ಅವು ಆಗ ಮುಚ್ಚಿಕೊಳ್ಳುತ್ತವೆ. ಇಲ್ಲಿ ರಾಜನಿಗೆ ಅಭಯರುಚಿಯ ಮಾತು ಕೇಳುತ್ತಿದ್ದಂತೆ ಪಾಪ ಪರಿಹಾರವಾಗಿ, ಅವನ ಕೈಗಳು ತಾವಾಗಿಯೇ ಮುಗಿದುಕೊಂಡುವು. ಅವನು ಅಭಯರುಚಿಗೆ ಕೈಮುಗಿದನು ಎಂದು ಭಾವ. ೨೭. ಕಾಲಲಬಿ-ಪಕ್ವತೆಯನ್ನು ಪಡೆಯುವ ಕಾಲ; ಒಳ್ಳೆಯ ಕಾಲ ಬಂದೊದಗುವುದು. ಆಗ ಸ್ವಾಭಾವಿಕವಾಗಿ ಕೆಡುಕುಂಟಾಗದು. ೨೮. ಭವ್ಯರು ಎಂದರೆ ರತ್ನತ್ರಯ (ಸಮ್ಯಗ್ನಾನ, ಸಮ್ಯಗ್ದರ್ಶನ ಮತ್ತು ಸಮ್ಯಕ್ಷಾರಿತ್ರ ) ದಿಂದ ಪರಿಣತನಾಗುವ ಜೀವಿ. ಇಲ್ಲಿ ಮಾರಿದತ್ತನು ಭವ್ಯ, ಅವನೇ ಪ್ರಭು ಎಂದರೆ ಅರಸನು. ಅವನು ಕೂಡಿಸಿದ ಸಭೆಯಾದುದರಿಂದ ಅದು ಭವ್ಯ ಪ್ರಭು ಸಭೆ. ಇಲ್ಲಿ ಇನ್ನೊಂದು ರೀತಿಯಲ್ಲೂ ಅರ್ಥ ಹೇಳುತ್ತಾರೆ; ಭವ್ಯರಿಗೆಲ್ಲ ಅರಸನಂತೆ ಶ್ರೇಷ್ಠನಾದವನು ಮಾರಿದತ್ತ. ಅವನ ಸಭೆಯೇ ಭವ್ಯಪ್ರಭುಸಭೆ. Page #90 -------------------------------------------------------------------------- ________________ ೮೬ ಯಶೋಧರ ಚರಿತೆ ೨೯. ಯಶೌಘನು ಚಂದ್ರಮತಿಯನ್ನು ಅಂಗರಕ್ಷಕರಂತೆ ನೋಡಿಕೊಳ್ಳುತ್ತಿದ್ದನೆಂದೂ ಅವನ ಸಂತುಷ್ಟ ಚಿತ್ತವೇ ಆಭರಣವೆಂಬಂತೆ ಅವಳು ಗ್ರಹಿಸುತ್ತಿದ್ದಳೆಂದೂ ಆಕೆಗೆ ರಾಜ್ಯಲಕ್ಷ್ಮಿ ಯೇ ಒಡನಾಡಿಯಾಗಿದ್ದಳೆಂದೂ ಇದರ ಭಾವ. ಇಲ್ಲಿ ಅರಸಿತನವನ್ನು ಮೆರೆಯಿಸುವಾಗ ರಾಣಿಗೆ ಬೇಕಾದ ಅಂಗರಕ್ಷಕರ, ಆಭರಣಗಳ, ಜತೆಗಾರರ ಪ್ರಸ್ತಾವವಿರುವುದನ್ನು ಆಲಂಕಾರಿಕವಾಗಿ ಹೇಳಲಾಗಿದೆ. ೩೦. ಕಾಮನಿಗೆ ಕಬ್ಬೇ ಬಿಲ್ಲೆಂದೂ ಆ ಬಿಲ್ಲಿಗೆ ಎಳೆಯ ಮೊಗ್ಗೆಗಳೇ ಕಟ್ಟಿದ ಹಗ್ಗವೆಂದೂ ಅದರಿಂದ ಹೊರಹೊಮ್ಮುವ ಬಾಣವು ಎಲ್ಲ ಜನರ ಮನಸ್ಸನ್ನೂ ಮೋಹಗೊಳಿಸುವುದೆಂದೂ ಪ್ರಸಿದ್ದಿಯಿದೆ. ಯಶೋಧರನು ಜನರಿಗೆಲ್ಲ ಅತ್ಯಂತ ಮೋಹಕನಾಗಿದ್ದನೆಂದು ಅಭಿಪ್ರಾಯ. ೩೧. ದೀವ ಎಂದರೆ ಒಂದು ಬಗೆಯಲ್ಲಿ ದೀಪ ಎಂಬುದರ ತದ್ಭವವೆನ್ನಬಹುದು. ದೀಪವು ಪತಂಗಗಳನ್ನು ಆಕರ್ಷಿಸುತ್ತದೆ; ಅನಂತರ ಕೊಲ್ಲುತ್ತದೆ. ಹಾಗೆಯೇ ಕಾಡಿನ ಪ್ರಾಣಿಗಳನ್ನು ಆಕರ್ಷಿಸಲು ಬೇರೆ ಪ್ರಾಣಿಗಳನ್ನು ಬಳಸುತ್ತಾರೆ. ಇದಕ್ಕೆ ದೀವಗಳೆಂದು ಹೆಸರು. ಇಲ್ಲಿ ಯಶೋಧರನು ಅಮೃತಮತಿಯಿಂದ ಆಕರ್ಷಿತನಾಗಿದ್ದಾನೆ; ಮುಂದೆ ಕೊಲೆಯಾಗುತ್ತಾನೆ ಎಂಬ ಸೂಚನೆಯಿದೆ. ೩೨. ಮನೆಗೆ ಉಡು ಅಥವಾ ಕಾಡು ಪಾರಿವಾಳ ಪ್ರವೇಶಿಸಿದರೆ ಆ ಮನೆಯಲ್ಲಿ ವಾಸಮಾಡುವವರಿಗೆ ಅನಿಷ್ಟವು ಸಂಭವಿಸುತ್ತದೆ ಎಂದು ಹಿಂದಿನಿಂದ ಜನ ನಂಬಿದ್ದಾರೆ. ಅದರಂತೆ ಆ ಮನೆಯನ್ನು ಬಿಟ್ಟು ತೊಲಗುತ್ತಾರೆ. ಇಲ್ಲಿ ಯಶೌಘನ ಮುಖವೆಂಬ ಅರಮನೆಗೆ ನರೆಯೆಂಬ ಕಾಡು ಪಾರಿವಾಳವು ಹೊಕ್ಕಿದೆ ಎಂದರೆ, ಅವನ ಮುಖದಲ್ಲಿ ನರೆಗೂದಲು ಕಾಣಿಸಿದೆ. ಆದುದರಿಂದ ಆ ಮುಖದಲ್ಲಿ ಹೆಂಗುಸರ ಕಡೆಗೆ ದೃಷ್ಟಿ ಹಾಯಿಸುವಿಕೆ ಎಂಬ ಅರಸನು ಉಳಿಯಲು ಸಾಧ್ಯವಿಲ್ಲ, ಎಂದರೆ ವಯಸ್ಸು ಮೀರಿದಾಗ ಇಂದ್ರಿಯಾಕರ್ಷಣೆಗೆ ಒಳಗಾಗುವುದು ಸರಿಯಲ್ಲ. ಹೀಗೆಣಿಸಿ ಯಶೌಘನು ಇಂದ್ರಿಯಾ ಕರ್ಷಣೆಗಳನ್ನು ತ್ಯಜಿಸಿದನು. ೩೩. ತಂದೆಯ ನಲ್ಲೆಯನ್ನು ಮಗನು ಕೂಡಿಕೊಂಡನೆಂದರೆ ಅವನು 'ತಾಯಿ ಗಂಡನೆನಿಸುತ್ತಾನೆ. ಅಂತಹ ಕೆಟ್ಟ ನಡತೆಯವನ ಒಡನಾಟದಲ್ಲಿರುವುದೂ ಕೆಟ್ಟದೇ. ಈ ಎಣಿಕೆಯಿಂದ ಯಶೋಧರನ ಕೀರ್ತಿ ದಿಗಂತಗಳವರೆಗೂ-ಬಹುದೂರ-ಹೋಯಿತಂತೆ. ೩೪. ಯಶೋಧರನು ತನ್ನ ತೇಜಃಪ್ರಭಾವದಿಂದ ಬೇರೆ ರಾಜರನ್ನು ಸೋಲಿಸಿದನು. ಆ ಅರಸನು ಭೂಮಿಗೆ ಪತಿಗಳೆನ್ನಿಸಿ (ಗಂಡಗಾಳಿಕೆಯಿಂದ) ಇದ್ದರು. ಹೀಗೆ ಹಲವರು ಪತಿಗಳಾಗಿದ್ದುದರಿಂದ ವಸುಂಧರೆ (ಭೂಮಿ) ನಿಸ್ತೇಜಳಾಗಿದ್ದಳು. ಅವನಿಗೀಗ ಯಶೋಧರನ ತೇಜಸ್ಸಿನಿಂದ ತೇಜಸ್ಸು ತುಂಬಿತು. ಅವಳು ಅವನಲ್ಲಿ ಅನುರಾಗವನ್ನು ತೋರಿಸಿದಳು. ಯಶೋಧರನು ವಸುಂಧರೆಗೆ ಒಬ್ಬನೇ ಪತಿಯೆನ್ನಿಸಿದನು. Page #91 -------------------------------------------------------------------------- ________________ ೮೬ ಟಿಪ್ಪಣಿಗಳು ೩೫. ಇಲ್ಲೆಲ್ಲ ಸಂಗೀತ ಶಾಸ್ತ್ರಕ್ಕೆ ಸಂಬಂಧಪಟ್ಟ ಪರಿಭಾಷೆಗಳಿವೆ. ಝಂಪೆ ಎಂಬುದು (ನೃತ್ಯ ಪ್ರಬಂಧದಲ್ಲಿ) ಕುಣಿತಕ್ಕೆ ಹೆಚ್ಚಾಗಿ ಉಪಯೋಗಿಸುವ ತಾಳ; ಐದು ಮಾತ್ರೆಗಳುಳ್ಳದು. (2 + 3 x 2 = 10; 2+2+3+ 3 = 10; 2+3+3+2=; 3+2x2= 10 ಮಾತ್ರೆಗಳು) ಠಾಯ ಎಂದರೆ ಪ್ರಬಂಧ ವಿಶೇಷ. ಚಾಳೆಯ ಎಂದರೆ ಒಂದು ಕುಣಿತದ ಗತಿ. ಮಾಳವ (ಶ್ರೀ) ಸಿರಿ ಎಂಬುದು ದೇಶೀರಾಗ; ಖರಹರಪ್ರಿಯ ಜನ್ಯವೆಂದು ಮಾರ್ಗ ಸಂಗೀತದಲ್ಲಿ ನಿರ್ದೆಶಿತವಾಗಿದೆ. ಲಾಲಿತ್ಯ ಪೂರ್ಣವಾದ ಹಾಸ್ಯ ಶೃಂಗಾರ ಮುಂತಾದ ಭಾವಗಳನ್ನು ಪ್ರಕಟಿಸುವುದರಿಂದ ಇದಕ್ಕೆ 'ರಕ್ತಿರಾಗ' ಎಂದು ಹೆಸರು. ಗ್ರಹ (ಗ್ರಾಹ) ಎಂದರೆ ತಾಳದಲ್ಲಿ ಗೀತ (ಪ್ರಬಂಧ) ಆರಂಭವಾಗುವ ವಿವಿಧ ರೀತಿಗಳು. ೩೬. ತಾಳಕಾಯ ಎಂಬುದಕ್ಕೆ 'ತಾಳೆಯ ಮರದ ಕಾಯಿಯ' ಎಂದು ಅರ್ಥ ಮಾಡಿದರೆ ಮೋಳಿಗೆ ಎಂಬುದಕ್ಕೆ ಕಾಯಿಗಳುಳ್ಳ ಗೊನೆ' ಎಂದು ಅರ್ಥ ಹೇಳಬಹುದು. ಆಗ ತಾಳೆಯ ಕಾಯಿಯ ಗೊನೆಯಂತೆ ಅವನು ಮುರುಡನಾಗಿದ್ದಾನೆ, ಎಂದು ಹೇಳಬೇಕು. ೩೭. ಕಣ್ಣಿಗೆ ಎದುರಾಗಿ ಮೊದಲಾಗಿ ಕಾಣಿಸಬಹುದಾದುದು ಮೂಗಿನತುದಿ. ಅಲ್ಲಿಯೇ ಕಾಮಿನಿಯರು ಪರಪುರುಷನೊಡನೆ ಕಾಮಕೇಳಿಯನ್ನು ಆಡುತ್ತಾರೆ. ಅಧಿಕಾರದ ಹಿರಿಮೆ, ರೂಪದ ಮೇಲೆ ಹಾಗೂ ಸೌಭಾಗ್ಯದ ಮಹತ್ವಗಳು ಕಾಮಿನಿಯರನ್ನು ತಮ್ಮ ವಶದಲ್ಲಿಟ್ಟುಕೊಳ್ಳುವ ಸಾಧನಗಳೆಂದು ದುರಹಂಕಾರ ಪಡುವವರೂ ಅವರಿಂದ ವಂಚಿತರಾಗುತ್ತಾರೆ ಎಂದು ತಾತ್ಪರ್ಯ. ೩೮. ಇಲ್ಲಿ ಬರುವ ಮಾತುಗಳನ್ನು ಯಶೋಧರನು ಆಡಿದನು ಎಂದು ಹೇಳುವವರು ಇದ್ದಾರೆ. ಆದರೆ 'ಮಾರಿಗೇ ತೃಪ್ತಿ' ಎಂಬಂತಹ ಮಾತು ಅವನಿಂದ ಬರುವುದಕ್ಕಿಂತ ಮಾರಿದೇವತೆಯ ಆರಾಧಕನಾದ ಮಾರಿದತ್ತನ ಬಾಯಿಂದ ಬರುವುದು ಒಳ್ಳೆಯದೆಂದು ತೋರುತ್ತದೆ. ೩೯. ತುಂಬಿ ಎಂಬುದು ಕಾಮುಕತೆಗೆ ಸಂಕೇತವಾಗಿದೆ. ಅಮೃತಮತಿ ಮಧುಕರಿಯಂತೆ ಕಾಮವೃತ್ತಿಯಲ್ಲಿದ್ದಾಗ, ಅವಳಿಗೆ ವಿರುದ್ದವಾಗಿ ಕಾಣಿಸಿದವನು ಯಶೋಧರ. ಅವನು ಸಂಪಗೆಯಂತೆ ಸುಂದರವಾಗಿದ್ದರೂ ಅವಳಿಗೆ ವಿಷಪ್ರಾಯನಾದನು ಎಂಬುದು ಭಾವ. ೪೦. ಯಶೋಧರನು ಧರಿಸಿಕೊಂಡಿರುವ ಮುತ್ತಿನ ಹಾರ ಅವನ ವಿಶಾಲವಾದ ಎದೆಯಲ್ಲಿ ಶೋಭಿಸುವುದೆಂದೂ, ಆ ಹಾರದಲ್ಲಿ ಲಕ್ಷ್ಮೀದೇವಿ ಉಯ್ಯಾಲೆಯಾಡುವಳೆಂದೂ ಹಾಗೆ ಉಯ್ಯಾಲೆಯಾಡಲು ಅನುಕೂಲವಾದ ವಸಂತವೇ ಆತನ ಉರಸ್ಥಳವೆಂದೂ ಇಲ್ಲಿ ಹೇಳಲಾಗಿದೆ. ಎಂದರೆ ಯಶೋಧರನ ಎದೆಯ ಮೇಲೆ ಸದಾ ಲಕ್ಷ್ಮೀಕಾಂತಿ, (ರಾಜ್ಯಲಕ್ಷ್ಮಿಅಥವಾ ಐಶ್ವರ್ಯಲಕ್ಷ್ಮಿ ಶೋಭಿಸುವಳೆಂದು ಭಾವ. Page #92 -------------------------------------------------------------------------- ________________ ಯಶೋಧರ ಚರಿತೆ ೪೧. ಯಶೋಧರನ ಸ್ತುತಿಪಾಠಕರ ಮನೆಯಂಗಳದಲ್ಲಿಯೂ ಲಕ್ಷ್ಮಿ ವಿಹರಿಸುತ್ತಾಳೆಂದರೆ ಯಶೋಧರನ ಔದಾರ್ಯದಿಂದ ಸ್ತುತಿಪಾಠಕರೂ ಐಶ್ವರ್ಯವಂತ ರಾಗಿದ್ದಾರೆಂದು ತಾತ್ಪರ್ಯ. ೮೮ ೪೨. ಯಶೋಧರನ್ನು ಕಾಮನಂತೆ ಸುಂದರ, ಅಬಲಾ ಜನರು ಕಾಮನ ಉದ್ಯಾನದಲ್ಲಿ ಬೆಳೆಯಿಸಿದ ಕಲ್ಪಲತೆಗಳು. ಯಶೋಧರನ ವಿಲಾಸ ಸಂದರ್ಭದಲ್ಲಿ ಸ್ವಭಾವತಃ ಚೆಲುವಿನ ಬಿಂಕದಿಂದ ಬಾಗಿರುವ ಹೆಂಗಸರು ಬಹಳ ಸಂತೋಷಗೊಳ್ಳುತ್ತಾರೆ. ಕಾಮನಂತೆ ಯಶೋಧರನಿದ್ದರೆ ಸ್ತ್ರೀಯರು ಅವನ ಪೋಷಣೆಯಲ್ಲಿ ವಿಲಾಸವತಿಯರಾಗಿ ಅವನ ವಿಲಾಸ ಸಂದರ್ಭದಲ್ಲಿ ಅತ್ಯಾನಂದದಿಂದ ಅವನೊಡನೆ ಕೂಡಿಕೊಳ್ಳುತ್ತಾರೆಂದು ಅಭಿಪ್ರಾಯ. ೪೩. ವೈರಿಗಳನ್ನು ಕೊಂದು ಅವರ ಹೆಂಡಿರು ಬಳೆತೊಡದಂತೆ ಮಾಡುವನೆಂದು ಇಲ್ಲಿ ಹೇಳಲಾಗಿದೆ. ಅವರು ಕಳಚಿದ ಬಳೆಗಳನ್ನು ಕೀರ್ತಿಯೆಂಬ ದಿಗ್ಗಜದ ಮರಿಯ ದಾಡೆಗೆ ತೊಡಿಸಲಾಗಿದೆ ಎಂದರೆ ಅವನ ಕೀರ್ತಿ ದಿಗಂತದವರೆಗೆ ಹಬ್ಬಿದೆ. ಆನೆಗಳ ದಾಡೆಗಳಿಗೆ ಬಳೆಗಳನ್ನು ಅಲಂಕಾರಕ್ಕಾಗಿ ತೊಡಿಸುವ ಪದ್ಧತಿ ಇಂದಿಗೂ ಇದೆ. ೪೪. ರಾಜರನ್ನೆಲ್ಲ ಸೋಲಿಸಿ ಅವರು ಯಶೋಧರನ ಆಜ್ಞೆಯನ್ನು ಶಿರಸಾ ವಹಿಸುವಂತೆ ಮಾಡಿದ್ದಾನೆಂದು ತಾತ್ಪರ್ಯ. ೪೫. ನೀರು ಎಂಬುದಕ್ಕೆ ಕಾಂತಿ ಎಂದೂ ಜಲವೆಂದೂ ಎರಡರ್ಥವಿರುವುದನ್ನು ಇಲ್ಲಿ ಸಮರ್ಪಕವಾಗಿ ಬಳಸಲಾಗಿದೆ. ಯಶೋಧರನ ದೇಹದ ನೀರು (= ಕಾಂತಿ) ಓಡಿದೆ; ಅದು ನೀರು (=ಜಲ) ಓಡಿದ (= ಒಣಗಿದ) ಕೊಳದಂತಾಗಿದೆ, ಎಂದು ಇಲ್ಲಿ ಅರ್ಥ. ೪೬. ಗೋದಾಮೆಯೆಂದರೆ ಏನೆಂದು ಸರಿಯಾಗಿ ಗೊತ್ತಿಲ್ಲ. ನವಿಲಿಗೆ ಆಗದ ಯಾವುದೋ ಪ್ರಾಣಿ. ಗೋಧಿಯ ಬಣ್ಣದ ಹಾವೇನಾದರೂ ಇರಬಹುದೋ ಏನೊ! ೪೭. ಹಂಸಗಳು ಮಳೆಯ ಬಿರುಸನ್ನು ತಡೆಯದೆ ಮಾನಸಸರೋವರಕ್ಕೆ ಹೋಗುತ್ತವೆಯಂತೆ. ಹಾಗೆಯೇ ವಿರಹಿಗಳಿಗೆ ಹೂಬಿಟ್ಟ ಬಳ್ಳಿಯನ್ನು ಕಂಡರೆ ಸಂತಾಪ ಹೆಚ್ಚಾಗುವುದಂತೆ. ೪೮. ಅಮಂಗಲವಿನಾಶ ಎಂಬುದಕ್ಕೆ ಅಮಂಗಲದ ಪರಿಹಾರವೆಂಬ ಒಂದು ಅರ್ಥವಾದರೆ ಅಮಂಗಲದಿಂದಾಗಿ ಬಂದೊದಗುವ ವಿನಾಶ ಎಂಬುದು ಇನ್ನೊಂದು ಅರ್ಥ. ಯಶೋಧರನಿಗೆ ಈ ಎರಡನೆಯ ಅರ್ಥವಾಯಿತು. ೪೯. ಆಸ್ರವ ಎಂದರೆ ಶುಭಾಶುಭಕರ್ಮಗಳ ಆಗಮನ ಎಂದರ್ಥ. ೫೦. ಭೌಮಾಷ್ಟಮಿ ಎಂದರೆ ಮಂಗಳವಾರದಿಂದ ಕೂಡಿದ ಅಷ್ಟಮಿ ಎಂಬರ್ಥವಾಗಬಹುದು. Page #93 -------------------------------------------------------------------------- ________________ c ಟಿಪ್ಪಣಿಗಳು ೫೧. ಕಾಡಿನ ಜಿ೦ಕೆಗೆ ಬಲೆ ಬೀಸಿ ಬಾಣವನ್ನು ಬಿಟ್ಟು ಅದನ್ನು ಕೆಡಹಾಕುವಂತಾಯಿತೆಂದು ಇಲ್ಲಿ ಹೇಳಲಾಗಿದೆ. ಪಾಪಿಗಳ ವಂಚನೆಯೇ ಕಣ್ಣುಕಾಣದ ಕಾಡು; ಆತ್ಮವೇ ಸಾಧುವಾದ ಜಿಂಕೆ, ಯಶೋಧರನ ಆತ್ಮತಾಯಿಯ ಮಾತಿನ ಬಲೆಗೆ ಬೀಳಬೇಕಾಯಿತು. ಅವನು ಕೈಕೊಂಡ ಹಿಂಸೆ ಬಾಣವಾಯಿತು, ಎಂದು ರೂಪಿಸಲಾಗಿದೆ. ೫೨. ಜೀವಶ್ರಾದ್ಧವೆಂದರೆ ಜೀವಂತವಾದ ಪ್ರಾಣಿಯನ್ನೇ ಅಡುಗೆ ಮಾಡಿ ಅದನ್ನು ಬಡಿಸಿ ಶ್ರಾದ್ಧಮಾಡುವುದು ಎಂಬರ್ಥವಿರಬಹುದು. ಇದೇ ಪ್ರಕರಣದಲ್ಲಿ ಮೂಲದಲ್ಲಿ 'ಉಳೆದ ಕಡೆ ಜೀವಮೇಯುತ್ತಿಲೆಯುತ್ತಿದೆ' ಎಂದಿರುವುದಕ್ಕೆ 'ಯಶೋಧರನ ಜೀವವು ಬೇರೊಂದು ಕಡೆ ಏರುತ್ತಾ ಇಳಿಯುತ್ತಾ ಇರಲು...' ಎಂದು ಅರ್ಥ ಹೇಳುತ್ತಾರೆ. ಆದರೆ ಯಶೋಧರನ ಜೀವವೇ ಇಲ್ಲಿ ಮೀನಿನ ರೂಪದಲ್ಲಿ ಒದ್ದಾಡುವುರಿಂದ ಹಾಗೆ ಹೇಳುವುದು ಉಚಿತವೆನಿಸದೆಂದು ತೋರುತ್ತದೆ. ೫೩. ಕಷ್ಟಗಳಿಗೆ ಕೋಡು ಮೂಡುವುದೆಂದರೆ ಕಷ್ಟಗಳು ಬೆಳೆದು ದೊಡ್ಡದಾಗುವುದು ಎಂದರ್ಥ. ೫೪. ನೀರು ಕುಡಿಯಲು ಬಂದುದು ಜಾಯಿಲಮರಸನ ಪಸಾಯಿತಂ' ಎಂದು ಮೂಲದಲ್ಲಿದೆ. ಇದಕ್ಕೆ ರಾಜನ ಜಾತ್ಯಶ್ವವು ನೀರು ಕುಡಿಯಲು ಬಂದುದು ಎಂದು ಅರ್ಥ ಹೇಳುತ್ತಾರೆ. ಆದರೆ ಜಾಯಿಲ ಎಂಬುದಕ್ಕೆ ಜಾತ್ಯತ್ವ ಎಂಬರ್ಥವಿರುವುದೆ ? ಮುಂದೆ 'ಅಶ್ವಮಹಿಷನ್ಯಾಯಂ ನಿಲೆ' ಎಂಬ ಮಾತು ಬರುತ್ತದೆ. ಇದಕ್ಕೆ 'ಕುದುರೆಗೂ ಕೋಣಕ್ಕೂ ಹುಟ್ಟುಹಗೆ ಎಂಬ ನ್ಯಾಯವುಳಿಯುವಂತೆ' ಎಂದು ಅರ್ಥ ಹೇಳಬೇಕಾಗಿದೆ. ಇಲ್ಲಿ ಒಂದು ಪ್ರಾಣಿ ಕೋಣವೇ ಆದುದರಿಂದ ಇನ್ನೊಂದು ಅಶ್ವವೇ ಆಗಿರಬೇಕೆಂಬ ಅನುಮಾನದಿಂದ ಹಾಗೆ ಅರ್ಥಮಾಡಿದುದಿರಬಹುದು. ಆದರೆ ಯಶೋಮತಿ ಬೇಟೆಗಾಗಿ ಐನೂರು ನಾಯಿಗಳನ್ನು ಸಾಕಿಟ್ಟುಕೊಂಡಿದ್ದನೆಂದು ಮುಂದೆ ಬರುವುದರಿಂದ ಇಲ್ಲಿ ಅರಸನ ಮೆಚ್ಚಿನ ನಾಯಿ ನೀರು ಕುಡಿಯಲು ಹೋಯಿತೆಂದೂ ಆಗ ಅಶ್ವಮಹಿಷ ನ್ಯಾಯದಂತೆ ಕೋಣವು ಅದನ್ನು ಕೊಂದಿತೆಂದೂ ಹೇಳಿದರೆ ದೋಷವೇನು ? ೫೫. ಕೇಸರವೆಂದರೆ ಪುಷ್ಪಪರಾಗ, ಹೂವಿನ ಮಧ್ಯದ ತಂತು, ಹೊಂಬಣ್ಣ ಎಂಬರ್ಥವಾಗುತ್ತದೆ. ಇಲ್ಲಿ ಕೋಳಿ ಹೊಂಬಣ್ಣದಿಂದ ಶೋಭಿಸಿತು ಎನ್ನುವುದು ವಿಹಿತವೆ? ಸಣ್ಣ ಗರಿಗಳು ಹೂವಿನ ತಂತುಗಳಂತಿದ್ದುವು ಎಂದರೂ ತಪ್ಪಲ್ಲ. ಕೂರ್ಪು ಎಂದರೆ ಪರಾಕ್ರಮ, ತೀಕ್ಷ ತೆ ಎಂಬರ್ಥಗಳಿವೆ. ತ್ಯಾಗಿ (ದಾನವನ್ನು ಕೊಟ್ಟು ಶೋಭಿಸುತ್ತಾನೆ; ಹುಂಜಕ್ಕೆ ಕೊಟ್ಟು (ತಲೆಯ ಜುಟ್ಟು) ಶೋಭಿಸುತ್ತದೆ. ರಾಧೆ ಒಂದು ಪಕ್ಕಕ್ಕೆ ಬಾಗಿದ ಮುಡಿ ಕಟ್ಟಿದಂತೆ ಕೋಳಿಯ ಜುಟ್ಟು ಒಂದು ಪಕ್ಕಕ್ಕೆ ಬಾಗಿದೆ. ಚಂದ್ರನು ಶುಕ್ಲಪಕ್ಷ ಮತ್ತು ಕೃಷ್ಣಪಕ್ಷಗಳಲ್ಲಿ ರಂಜಿಸಿದಂತೆ ಕೋಳಿ ಎರಡು ಪಕ್ಷ ಎಂದರೆ ರೆಕ್ಕೆಗಳಿಂದ ರಂಜಿಸುತ್ತದೆ. Page #94 -------------------------------------------------------------------------- ________________ ೯೦ ಯಶೋಧರ ಚರಿತೆ ಸುವಸ್ತುಗಳು ಹೇಂಟೆ (ಪೇಂಟೆ-ಪೇಟೆ)ಯಲ್ಲಿ ಸುವಸ್ತುಗಳು ಸೇರಿರುತ್ತದೆ. ಹಾಗೆಯೇ ಹುಂಜ ಹೇಂಟೆಯಲ್ಲಿ ಸೇರಿದೆ. ಈ ರೀತಿ ಶ್ಲೇಷೆಯಿಂದ ಹುಂಜವನ್ನು ವರ್ಣಿಸಿದ್ದಾನೆ ಕವಿ. ೫೬. ಹುತ್ತದೊಳಗೆ ಯಾವುದಾದರೂ ಹಾವು ಇರುವುದೆಂದು ಹೇಳಿಕೆ. ಹಾಗೆಯೇ ಸನ್ಯಾಸಿಗಳಲ್ಲಿ ಏನಾದರೂ ಮಹತ್ವವಿರುತ್ತದೆ ಎಂದು ಭಾವ. ೫೭. ಆಸನ್ನಭವ್ಯ ಎಂದರೆ ಭವ್ಯವಾಗುವ ಸ್ಥಿತಿಗೆ ಸಮೀಪಿಸಿದವನು. ಭವ್ಯ ಎಂಬುದಕ್ಕೆ ಟಿಪ್ಪಣಿಯ ೨೮ನೆಯ ಸಂಖ್ಯೆಯ ಮುಂದೆ ನೋಡಿಕೊಳ್ಳಬಹುದು. ಅವಧಿ ಜ್ಞಾನ ಎಂದರೆ ದ್ರವ್ಯ, ಕ್ಷೇತ್ರ, ಕಾಲ ಮತ್ತು ಭಾವ ಇವುಗಳಿಂದ ಮರ್ಯಾದಿತವಾದ ಪದಾರ್ಥಗಳನ್ನು ಮತ್ತು ಕರ್ಮಬದ್ಧ ಜೀವಗಳ ಅನೇಕ ಭವಗಳನ್ನು ತಿಳಿದುಕೊಳ್ಳುವ ಜ್ಞಾನ. - ೫೮, 'ರತ್ನತ್ರಯಗಳಲ್ಲಿ ಸ್ಥಿರವಾಗಿ ಪ್ರಾಣತ್ಯಾಗ ಮಾಡುವ ಕ್ರಮ' ಎಂದರೆ ಧ್ಯಾನ ಮಾಡುತ್ತಿರುವಂತೆ ಪ್ರಾಣ ಕಳೆದುಕೊಳ್ಳುವಿಕೆ. ೫೯. ಹೂದೋಟದಲ್ಲಿ ಬಳ್ಳಿಯನ್ನು ನೆಟ್ಟು ನೀರೆರೆದು ಚಪ್ಪರಕ್ಕೆ ಹಬ್ಬಿಸುವಂತೆ ಇಲ್ಲಿ ಯಶೋಧರನು ದಾನಮಾಡುತ್ತ ದಯಾಪರನಾಗಿ ಜನಮತದಲ್ಲಿ ಸಂತೋಷದಿಂದಿದ್ದು ಕೀರ್ತಿಕುಸುಮವನ್ನು ಅರಳಿಸಿದನು ಎಂದು ತಾತ್ಪರ್ಯ. ೬೦. ಯಶಸ್ಸು ಬೆಳ್ಳಗಿದೆಯೆಂದು ಕವಿಸಮಯ. ಈ ಯಶಸ್ಸಿಗೆ ಉಪಮಾನವಾಗಿ ಅನೇಕ ಶುಭವಸ್ತುಗಳ ಹೆಸರನ್ನು ಹೇಳಲಾಗಿದೆ. ತಾರಾ-ಬೆಳ್ಳಿ ಅಥವಾ ನಕ್ಷತ್ರ. ತಾರಧರಾಧರ (ತಾರ-ಬೆಳ್ಳಿ; ಧರಾಧರ-ಪರ್ವತ)-ಬೆಳ್ಳಿಯ ಬೆಟ್ಟ, ತಾರಾ ಎಂದು ಮಾತ್ರ ಇಟ್ಟುಕೊಂಡರೆ ಇಲ್ಲಿಯೂ ನಕ್ಷತ್ರ ಅಥವಾ ಬೆಳ್ಳಿ ಎನ್ನಬಹುದು. ತಾರಾಧರ ಎಂದಿದ್ದರೆ ಚಂದ್ರ ಎನ್ನಬಹುದು. ದರತಾರಹಾರ ಎಂದಾದರೆ ಸಣ್ಣ ಮುತ್ತಿನಮಾಲೆ ಎನ್ನಬಹುದು. ಈ ಭಾಗದಲ್ಲಿ ಬೇಕಾದಂತೆ ಅರ್ಥ ಹೇಳುವ ಸಾಧ್ಯತೆಯಿದೆ. ಕವಿಗೆ ಯಶೋಧರ ಎಂಬ ಹೆಸರೂ ಕವಿತಿಲಕ ಎಂಬ ಹೆಸರೂ ಇಲ್ಲಿ ಬರಬೇಕಾಗಿದೆ. ಆದುದರಿಂದ ಇಂತಹ ಪ್ರಯೋಗ ಇಲ್ಲಿದೆ. 'ಕವಿಶ್ರೇಷ್ಠನು ನಿರ್ಮಲ ಕೀರ್ತಿಯನ್ನು ಪಡೆದಿದ್ದಾನೆ' ಎಂದು ಹೇಳಬಹುದು. Page #95 -------------------------------------------------------------------------- ________________ ಶಬ್ದಕೋಶ (ಮೊದಲನೆಯ ಸಂಖ್ಯೆ ಅವತಾರವನ್ನೂ ಎರಡನೆಯದು ಪದ್ಯವನ್ನೂ ಸೂಚಿಸುತ್ತವೆ) ೩-೧೨ ಅಗುಂದಲೆ ಅಗುಮ್ ೧-೧೬ ೨-೧೧ ಅಡಸು ಬಹಳ, ಹೆಚ್ಚು ಅಗೆ, ತೊಡು ಅಡಿಮಂಚಿಕೆ ಸೇರು, ಮುತ್ತಿಕೊಳ್ಳು ಕೆಳಮಂಚ ೧-೩೭ ಆಗೆವೋಯ್ ೪-೪ ಚಿಗುರು ಅಡಿಸು ೩-೫೦ ಅಡಿಗೆ ಮಾಡಿಸು ಅಗ್ಗ. ೩-೭೮ ೧-೫೪ ಬೇಯಿಸು ೪-೪೨ ಅಗ್ಗಳ ಅಗ್ಗಳಿಕೆ ೪-೨೨ ಬಲವಾಗಿ ಭದ್ರಪಡಿಸು ಅಘ ೪-೮೭ ೧-೬೭ ೨-೨೦ ಅಡು ಶ್ರೇಷ್ಠ ಅಡೆಯೊತ್ತು ಶ್ರೇಷ್ಟ ಪಾಪ ಅಣಂ ಮೊಳಕೆಬರು ಅಣಕ ದೇಹಕಾಂತಿ ಅಣುವ್ರತ ಕಾಮ ೪-೩೨ ಸ್ವಲ್ಪವೂ ೨-೬೮ ಸೋಗು ಅಂಕುರಿಸು ಅಂಗಚ್ಛವಿ ಅಂಗಜಾತ ೩-೩೬ ೪-೩೨ ೨-೪ ಕಳವು, ಕೋಲೆ ಮುಂತಾದುವನ್ನು ಮಾಡದ ವ್ರತ ಅಂಗಿ ಅಚ್ಚರಿ ೧-೨೦ ಸಾಹಸ, ಪ್ರಯತ್ನ ಮಾಡು ೧-೧೫ ವೀರ, ಪರಾಕ್ರಮಿ ೩-೮ ತುಟಿ ಅಜಗರ್ಭಿಣಿ ಅಜಪೋತ ಆನಂಗ ೨-೬೨ ಕಾಮ ಅಜರಜಸಿ ೧-೧೪ ಅಜೆ ೪-೧೭ ಅಂಗಗಳುಳ್ಳವನು, ದೇಹಿ ಅಣ್ಣು ೧-೨೫ ಆಶ್ಚರ್ಯ ೪-೧೫ ಕಣ್ಣು, ಅಕ್ಷಿ ಅದಟ ೩-೫೫ ಬಸಿರಾದ ಆಡು ಅಧರ ೩-೬೧ ಆಡಿನ ಮರಿ ೩-೫೯ ಆಡಿನ ರಜಸ್ಸಿನಲ್ಲಿ ಅನಿತು ೩-೫೪ ಹೆಣ್ಣಾಡು ೩-೯ ಹಂಸೆ, ಹೆಣ್ಣು ಹಂಸ ಅನಿಮೇಷ ೩-೭೦ ಕಳುಹಿಸು ಅನುಜ ೩-೨೫ ತಲೆಯಿಲ್ಲದ ದೇಹ ಅನುಜೆ ೩-೧೫ ರಾಶಿಹಾಕು, ಅನ್ನೆಗಂ ಬಿಸಾಡು ಅನ್ವಯ ೧-೩೭ ಮಾಂಸ ಅಂತುವರಂ ೨-೫೫ ತಾಗು, ಮೇಲೇರು ಅಪ್ಪುಕಯ್ ಅಂಚೆ ೩-೫೩ ಮೀನು ಅಟ್ಟಿಸು ೪-೬೭ ತಮ್ಮ ಅಟ್ಟೆ ೪-೬೭ ತಂಗಿ ಆಡಕು ೧-೬೫ ಅಷ್ಟರಲ್ಲಿ ೧-೬ ವಂಶ ಅಡಗು ೨-೧೫ ಆವರೆಗೆ ಅಡರ್‌ ೩-೨೨ ಅಂಗೀಕರಿಸು Page #96 -------------------------------------------------------------------------- ________________ ಯಶೋಧರ ಚರಿತೆ ೪-೨೧ ಅಣ್ಣ ಅಭ್ಯ ೨-೭೧. ೧-೫೭ ಅರೆದು ಬಳಿ, ಚೆನ್ನಾಗಿ ಲೇಪಿಸು ೧-೪೩ . ಹುಡುಕು ಅಭಿಧಾನ ಅಭ್ರಗಜ ೪-೪೧ : ೨-೨೧ ೨-೩೬ ೧-೪೩ ತಿಳುವಳಿಕೆ, ಪ್ರಸಿದ್ದಿ ಅಭ್ರಮು ೨-೨೧ ೩-೬ ಆರಿದ ನೀರು ೪-೩೪ ನಾಶವಾಗು ತಾವರೆ ಅರೆಬಳಿ ತಾಯಿ, ಅಮ್ಮ (ಇಲ್ಲಿ ಮಾರಿ) ಹೆಸರು ಆಕಾಶದ ಆನೆ, ಐರಾವತ ಐರಾವತ ಅಜುನೀರ್‌ ದೊಡನಿರುವ ಅರ್ಕಾಡು ಹೆಣ್ಣಾನೆ ಸೇರಿಕೊಳ್ಳು ಅರ್ತಿ ಸೇರಿಕೊಳ್ಳು ಅರ್ದಳೊ ಗಟ್ಟಿಯಾಗಿ ಅಲಂಘನೀಯ ಆಲಂಗಿಸು ಅಲಂಪು ಸಮ್ಯಗ್ಧರ್ಶನ ಅಲರ್ ಜತೆ, ಎರಡು ಅಲರ್ಗಂಪು ಜತೆ ಕಂಬ, ಎರಡು ಕಂಬ ಅಲರ್ಗುಡಿ ೧-೬೧ ಅಮರ್ ೨-೨೯ ಪ್ರೀತಿ ಅಮರ್ದಪ್ಪು ೨-೭೨ ೩-೬೪ ಮುಳುಗಿದಳೋ ೩-೧೭ ದಾಟಬಾರದು ೨-೬೭ ಪ್ರೀತಿ, ಸಂತೋಷ ಅಮಳದೃಷ್ಟಿ ೧-೨೬ ೪-೫ ಅರಳು ೪-೪೦ ಅಮಲ್ಗಳ್ ಅಮಳಂಬ ೨-೬೭ ಹೂವಿನ ಪರಿಮಳ ೨-೮ ಹೂವಿನ ತುದಿ ಅಮೋಘ ೩-೪೬ ಹಾಳಾಗದ ಅಲರ್ವೊಗು - ೧-೩೭ ಹೂಬಿಡು ಅಲವರು ೪-೩೨ ಆಸೆಪಡು ಅಂಬರತರಂಗಿಣಿ ೨-೧೮ ಆಕಾಶದ ಹೊಳೆ, ದೇವಗಂಗೆ ಅಂಬಾಚರಿ ೩-೪೨ ಹಿಂದಣ ಜನ್ಮದಲ್ಲಿ ತಾಯಾಗಿದ್ದವಳು ಅಲಸು ೩-೫೬ ಆಯಾಸಗೊಳ್ಳು, ಅಸಹ್ಯಪಡು ೧-೧೬ ಸಂಚರಿಸು, ಪೀಡಿಸು ಅಲೆ ಅಂಬಿಕೆ ೩-೧೬ ತಾಯಿ ಅಂಬು ೩-೭೧ ನೀರು ಅವಧರಿಸು ೨-೫೬ ಲಕ್ಷ ಕೊಡು, ಕೇಳು ಅಂಬುಜ ೪-೫೪ ತಾವರೆ ಅವಧಾರಿಸು ೧-೩೮ ಗಮನಕೊಡು ಅಂಭೋಜ ೧-೭೧ ತಾವರೆ ಅವಧಿ ೪-೧೬ ಆರಲಂಬ ೨-೧೯ ಹೂವೇ ಬಾಣ ವಾಗಿರುವವನು, ಕಾಮ ಅವಧಿಜ್ಞಾನ, ಒಂದು ಬಗೆಯ ದಿವ್ಯಜ್ಞಾನ ಭೂಮಿ ಅವನಿ ೧-೬೨ ಆರಿ ೩-೬೧ ೨-೩೫ ಆವಲಗ್ನ ಸೇರಿದ ಅರಿದು ಕತ್ತರಿಸು ಅಸಾಧ್ಯ ಕೆಂಪುರಕ್ಕೆ ೩-೩೩ ಅರುಣಮಣಿ ೧-೩೨ ಅವಲೋಕಿಸು ೧-೫೭ ನೋಡು Page #97 -------------------------------------------------------------------------- ________________ ಶಬ್ದಕೋಶ ೯೩ ಅವಿಕಲ್ಪಂ ವಾದ್ಯ ಅಸಿಮುಖ ಅಸಿಯಲ್ ಗೂಗೆ ವುಳ್ಳವಳು ಅಸಿಲತೆ ಖಡ್ಡ ಅಸು ಆಸುಕೆ ಅಳಕ ಅಳವಡು ಅಳವು ಅಳಿಪು ಅಳುರ್ ಅಳುಕ್ಕೆ ೪-೧೬ ಖಚಿತವಾಗಿ ಆರೋಗ್ಯ ೨-೬೫ ೩-೧೩ ಖಡ್ಗದ ಬಾಯಿ ಆತ್ಮಜ ೩-೬೧ ಮಗ ೨-೩೬ ತೆಳುದೇಹ ಆಂದೆಗೆ ೪-೧೫ ಆಂದೋಳ ೩-೨೨ ಉಯ್ಯಾಲೆ ೨- ೫ ಲತೆಯಂತಹ ಆಪೋತ್ತುಂ ೧-೩೪ ಯಾವಾಗಲೂ ಆಪೋಶಿಸು ೩-೫೧ ಊಟಕ್ಕಿಂತ ೧-೫೬ ಜೀವ, ಪ್ರಾಣ ಮೊದಲು ಹಾಗೂ ೧-೩೬ ಅಶೋಕ ಊಟದ ಅನಂತರ ಮಂತ್ರಪೂರ್ವಕ ೪-೮ ಮುಂಗುರುಳು ವಾಗಿ ಅಂಗೈಯಲ್ಲಿ ೨-೧೭ ಸೇರಿಕೊಳ್ಳು ನೀರು ಹಾಕಿ ಕುಡಿ ೧-೧೮ ಸಾಮರ್ಥ್ಯ, ಶಕ್ತಿ ಆಮಿಷ ೨-೧೨ ಆಸೆ, ಭೋಗ ೨-೫೬ ಆಸೆ, ಪ್ರೀತಿ ಅಮುಕ ೪-೩೩ ಪರಲೋಕ ಮುಕ್ತಿ ೨-೧೬ ವ್ಯಾಪಿಸು, ಹಬ್ಬು ಆಮೂಲಚೂಲ ೧-೬೫ ಬುಡದಿಂದ ತುದಿಯವರೆಗೆ ೨-೭೧ ಹಬ್ಬುಗೆ ೧-೨೦ ಸಾಮರ್ಥ್ಯ, ೪-೭೬ ಯೋಗ್ಯತೆ, ಆದಾಯ ೧-೬೫ ದುಃಖಗೊಳಿಸು ಆಯತಿ ೪-೪೫ : ದರ್ಪ, ಶಕ್ತಿ ೩-೪೪ ಸಾಯು ೩-೭೮ ಕೂಗು, ಆರ್ಭಟಿಸು ೪-೩೩ ಕೊಲ್ಲು ಆರೊಗಿಸು ೩-೩೧ ಊಟಮಾಡು ೨-೩೮ ಹಾಳಾದ ಕಣ್ಣು ಆವಹನ ೩-೬೧ ಬರಿಸುವಿಕೆ ೧-೧೫ ಆವೀಕ್ಷಿತಘ್ನತ ೨-೬೬' ತುಪ್ಪನೋಡಿ ೨-೭೧. ಪ್ರೀತಿ, ಅಕ್ಕರೆ ಆಸನ ೩-೭೦ ಪೃಷ್ಠದ್ವಾರ, ಕುಂಡೆ ೪-೫೬ ಮುಳುಗಿದಳು ಆಸನ್ನಭವ್ಯ ೪-೧೬ ಜೈನಧರ್ಮ ಸ್ವೀಕಾರಕ್ಕೆ ಸಮೀಪಿಸಿದವನು ೧-೪ ಕಥೆ, ಹೇಳಿಕೆ ಆಸ್ಪೃಷ್ಟಕಪಿಳ ೨-೬೬ ಹಸುಮುಟ್ಟಿ ೩-೧೩ ಆಗದು ಮುಖ ೪-೩೦ ಶಾಸ್ತ್ರ ಆಸ್ತವ ೩-೨೧ ಕರ್ಮ ಸೇರುವಿಕೆ ೧-೨೦ ಆಶ್ರಯ, ನೆಲೆ ಆಸ್ವಾದನ ೨-೪೫ ಸವಿಯುವಿಕೆ ಹೆದರು ಆಯ ಅಲಿಸು ಅಟೆ ಆರ್ ಅಟಿ ಅಚೆಗಣ್ ಅಮಿಂಬ ಹೆಚ್ಚು ಅಡ್ಕರ್‌ ಅಳ್ ಆಖ್ಯಾನ ಆಗ ಆಗಮ ಆಗರ Page #98 -------------------------------------------------------------------------- ________________ ೯೪ ಯಶೋಧರ ಚರಿತೆ ಆಳತಿ ೨-೩೧ ಹಾಡುವಿಕೆ ಆಟೋಮ್ ೧-೧೪ ಮೊಂಡುತನ ಉಕ್ಕಡ ೨-೨೭ ಗಡಿಯ ಠಾಣೆ ಉಗಿ ೩-೨೦ ಕೆಡಹು, ಕೊಲ್ಲು ಉಗು ಇಕ್ಕು ಇನಿತು ಹೊರಕ್ಕೆ ತೆಗೆ ೨-೭೧. ಉಕ್ಕಿ ಬರು ೩-೨೪ ಗಟ್ಟಿಯಾಗಿ ಹೇಳು ೨-೨೦ ಮೇಲಕ್ಕೆ ನೆಗೆ ಇಂದು ಇನ್ನರ್ ೪-೮೩ ಸುಪ್ರಕಾಶ ಇಂಬಿಡು ೧-೫೪ ತುಂಡುಮಾಡು ೩-೨೭ ಉಂಟಾಗು ಇಂಬುಕಯ್ ೪-೭೦ ಇಷ್ಟು ಉಗ್ಗಡಿಸು ೨-೪ ಚಂದ್ರ .. ಉಚ್ಚಳಿಸು ೧-೬೦ ಇಂಥವರು ಉಜ್ಜಳಿಕೆ ೧-೨೮ ತುಂಬಿಸಿಡು, ಉಡಿ ಶೇಖರಿಸಿಡು ಉಣ್ಣು ೧-೬೪ ಮೆಚ್ಚು, ರುಚಿಸು ಉತ್ಕರ್ಷ ೧-೧೨ ಕುತ್ತು, ತಿವಿ ಉತ್ತರೋತ್ತರ ೨-೫೪ ಇರುವೆ ಉದಧಿ ೧-೩೫ ಆಶ್ವಿಜಮಾಸ ಉದರ ೩-೫೬ ಬಾಣವೆಸೆ ಉದ್ಧಾರ ಇಚೆ ಇಜಂಪೆ ೧-೨೭ ಮೇಲುಮಟ್ಟದ ೪-೮೭ ಹೆಚ್ಚಿನ ಮೇಲೆ ಸಮುದ್ರ ೩-೩೪ ಹೊಟ್ಟೆ, ಬಸಿರು ೨-೩೩ ಓಕರಿಕೆ, ಹೇಸಿಕೆ ಇಷ ಇಸು - ಇಳಾಕಾಂತೆ ೨-೧ ಭೂಮಿಯೆಂಬ ಸ್ತ್ರೀ ಉದ್ದೀಪನ ೩-೩೪ ಉರಿಸುವ ಇಳಿಕಯ್ ಇಳಿದಾಗು ೨-೪೨ ಹೀನಯಿಸು ಉದ್ದುರ ೨-೪೫ ಕಡಮೆಯಾಗು ಉದ್ಯತ ೩-೪೫ ಭೂಪತಿ, ರಾಜ ಉದ್ವೇಗ ೨-೪೫. ಕುಗ್ಗು ಉಸ್ಮಿಲನ ೨-೧೦ ಇಳಿಸು, ಹೊರಿಸು ಉಂತೆ ೨-೧೪ ತಡೆಯಿಲ್ಲದ ೩-೨೯ ಸಿದ್ಧ ೪-೭೨ ಮನಸ್ಸಿನ ತಳಮಳ ಇಳೇಶ ಇಟಿ ೧-೧೦ ಅರಳುವಿಕೆ ಇಪು ಸುಮ್ಮನೆ ಉಪಾದೇಯ ಈಕ್ಷಣ ೨-೪೧. ಕಣ್ಣು ಉಪಾಯನ ಈಡಾಡು ೧- ೨ ಕಳೆದೊಗೆ ಉಬ್ಬಿಗ ೪-೨೭ ಸ್ವೀಕಾರಯೋಗ್ಯ ೩-೩೮ ಕಾಣಿಕೆ ೩-೨೯ ಉದ್ವೇಗ, ತಳಮಳ ೧-೪೮ ಎರಡು ೩-೪೬ ಹೆಣ್ಣು ಹಾವು ಈ ದೊರೆಯನ್ ೧-೩೭ ಹೀಗಿರುವವನು ಉಭಯ ೪-೭೯ ಎರಡನೆಯ ಸ್ವರ್ಗ ಉರಗಿ ಈಶಾನಕಲ್ಪ ಈ ಎಳೆ ಉರುಪು ೩-೬೯ ಉರಿಸು Page #99 -------------------------------------------------------------------------- ________________ ಶಬ್ದಕೋಶ ಉರ್ಕು ಉರ್ಚು ಉರ್ವರೆ ಉರ್ವಿರಮಣ లులి ಊಳ್ ಎಚ್ಚನ್ ಎಡೆಯಾಡು ಎಡೆವಗಲ್ ಎಡೆವೋಗು ಎಣೆ ಎಣ್ಣೆಸೆ ಎನಿತು ಎನ್ನಂ ಎಮೆ ಎಕ ಎಳಗು ೪-೪೩ ೧-೫೫ ಹೊರಗೆಳೆ, ಕೀಳು ೧-೫೬ ಭೂಮಿ ಭೂಪತಿ ೪-೪೮ 9-92 ಎಲುವು ಊ ೩-೫೨ ಕೂಗು, ಬೊಗಳು 2-9999 ಬಾಣ ಎಸೆದನು 0-20 ೧೨೯ ೪-೪೮ 0-02 9-8888 20-0 ೪-೩೦ ೨-೨೬ ಪರಾಕ್ರಮ, ಕೆಚ್ಚು ಎಸಕ ಎಸಗು ಎಸೆ ಎಸೆ ಧ್ವನಿ ಎಳವೆತೆ ಎಲ್ ಎಯ್, ಎಯ್ಯಮೃಗ ೩-೪೫ ಮುಳ್ಳುಹಂದಿ ಎಯ್ತ‌ ೩-೧೬ ಬರು, ಸಮೀಪಿಸು ಎರಪಿಗೊಳ್ ೨-೪೪ ಬೇಡಿಕೆಯನ್ನು ಪಡೆ 5-0 ಅಲೆದಾಡು ಮಧ್ಯಾಹ್ನದ ಹಿಂದುಮುಂದು 0-e ಎರ್ಮೆಯಪೋರಿ ೩-೫೭ ನಡುವೆ ಬರು, ಸಮೀಪಿಸು ಸಮಾನ ಎಂಟುದಿಕ್ಕು ಎಷ್ಟು ಎಂಥವನು ಕಣ್ಣರೆಪ್ಪೆಯ ರೋಮ ನಮಸ್ಕಾರ ನಮಸ್ಕರಿಸು ಕೋಣ ೪-೧೯ ಎಲುಬು, ಮೂಳೆ ಏದೊರೆಯನ್ ಏನ ಏಪ್ ಏವುದು ಐಹಿಕ ಒಗೆ ಒಚ್ಚತ ಒಟ್ಟು ಒಡರಿಸು ಒಡರ್ಚು ಒಪ್ಪಂಬಡೆ ಒಯ್ಯನೆ ಒರೆಗೆ ದೊರೆಗೆ ೧-೧೬ ಕಾರ್ಯ, ಶೋಭೆ ೨-೬೫ ತೊಡಗು, ಹರಡು ಶೋಭಿಸು ಬಾಣಬಿಡು 7-98 ೪-೬೨ ೧-೩೬ 0-9899 ೩-೨೩ 9-92 8-22 ೩-೪೬ ಐ 3-22 ಪಾಪ ೩-೫೬ ಗಾಯ, ಹೊಡೆತ ೧-೪೯ ಏನು ಪ್ರಯೋಜನ ? ವ್ಯರ್ಥ 3 0-98 9-22 0-00 ೯೫ ೪-೭೨ 9-882 ಎಳೆಯ ಚಂದ್ರ ತೂಗಾಡು ಹುಟ್ಟು ೩-೭೪ ಮೆಚ್ಚಿಕೆ, ಸುಖಕರ ೨-೬೩ ರಾಶಿಹಾಕು 0-09 ಬರು ಯಾವ ಬಗೆಯವನು ಬಾ ಈ ಲೋಕಕ್ಕೆ ಸಂಬಂಧಿಸಿದುದು ಉಂಟುಮಾಡು ಉಂಟುಮಾಡು ಸೊಗಸಾಗು ಮೆಲ್ಲನೆ ಸರಿಸಮಾನತೆಗೆ Page #100 -------------------------------------------------------------------------- ________________ ೯೬ ಒಟವಾಯ್ ಯಶೋಧರ ಚರಿತೆ ೨-೨೫ ನಿದ್ರಿಸು ೪-೪೩ ಮುಳ್ಳು, ಅಡ್ಡಿ ೨-೨೮ ನೀರನ್ನು ಶುದ್ದೀಕರಿಸುವ ಬೀಜ ಒರ್ಮೊದಲೆ ಒಲವು ಒಲೆ ಒಸೆ ೨-೬೬ ಕೆಲವು ೨-೩೮ ಜೊಲ್ಲೊಸರುವ ಕಣ್ಣಯ್ . ಬಾಯಿ ಕಂಟಕ ೧-೩೫ ಒಮ್ಮೆಲೆ ಕತಕಬೀಜ ೨-೪೩ ಪ್ರೀತಿ, ಮೆಚ್ಚಿಕೆ ೩-೧ ತೂಗಾಡು ಕತಿಪಯ ೧-೨೧ ಮೆಚ್ಚು ಕದಂಬ ೩-೧೯ ಇದ್ದಾರೆ ಕನಲ್ ೧-೫೬ ಅರಚು, ಕೂಗು ಕಂತು ೧-೪೯ ಇದೆಯೆ ? ಕಂದು ೩-೧೧ ಒಳ್ಳೆಯದು ಕಪೋತಪಕ್ಷ ಚುರಿತ ೧-೬೭ ಪ್ರವಾಹ, ರಾಶಿ ಒಳ‌ ೪-೭೨ ಸಮೂಹ ಒಳಜು ೨-೫೩ ಉರಿ, ಕೋಪಿಸು ಒಳವೆ ೨-೩೬ ಕಾಮ ಒಟ್ಟು ೨-೫೫ ಕಾಂತಿ ಕುಗ್ಗು ಓಘ ೨-೧೯ ಪಾರಿವಾಳದ ರೆಕ್ಕೆಯ ಬಣ್ಣದಂತೆ ಕಂದುಬಣ್ಣ ಸೇರಿದ ಓಜೆ ೪-೬೬ ಓಪಲ್ ೩-೭೫ ರೀತಿ, ಕ್ರಮ ಪ್ರಿಯೆ, ನಲ್ಲೆ ಕಲ್ಲು ಸಮಾನತೆ ೨-೬೯ ಆಯುಧ ಓರಗೆ ೧-೧೩ ೧-೬೧ C ಬಹಳ, ಹೆಚ್ಚು ಓರಂತೆ : ೫ ೪-೬೪ ಒಂದೇ ಸಮನೆ ಕರಣತತಿ ೪-೧೩ ಇಂದ್ರಿಯ ಸಮೂಹ ಓಲಗಿಸು ೨-೪ ಸೇವೆಯೊಪ್ಪಿಸು ಕರವಾಳ್ ಓಲಾಡು ೪-೨೯ ಕರಹಟ ೧-೬೧ ಖಡ್ಗ ೩-೩೮ ಒಂದು ಊರ ಹೆಸರು ಈಜಾಡು, ತೊನೆದಾಡು ಪ್ರೀತಿಸು ಹಿಂಜರಿ ಓವು ಓಸರಿಸು ೩-೭೩ ೨-೬೯ ಕರುಮಾಡ ಕಟಾಕ್ಷ ಕಣ್ ಕಳೆದೋವಲ್ ೪-೫೬ ಕಡೆಗಣ್ಣ ನೋಟ ಕಲಾಪಿ ೪-೫ ಕುಡಿಯೊಡೆಯುವ ಕಲ್ಪಕುಜ ಸ್ಥಳ ; (ಬಳ್ಳಿಗಿಡ ಗಳಲ್ಲಿ) ೨-೧೩ ಆನೆ ೨-೨೭ ಉಪ್ಪರಿಗೆಮನೆ ೨-೩೯ ಕಪ್ಪುಚರ್ಮ ೩-೩೪ ಹೆಣ್ಣುನವಿಲು ೧-೨೫ ಕಲ್ಪವೃಕ್ಷ, ಕೇಳಿದುದನ್ನು ಕೊಡುವ ಮರ ೨-೧೦ ಕವಚ ತೊಡುವ ವಯಸ್ಸಿಗೆ ಬಂದವನು, ಪ್ರಾಯಕ್ಕೆ ಬಂದವನು ಕಣೆ ೨-೪೧ ಬಾಣ ಕವಚಹರ ಕಣೆಗೋಳ್ ೩-೧೯ ಬಾಣಹಿಡಿ, ಕೊಲ್ಲು Page #101 -------------------------------------------------------------------------- ________________ ಶಬ್ದಕೋಶ * ೯೭ ೩-೩೫ ಮುತ್ತು, ಆಕ್ರಮಿಸು ಕುಕ್ಕುಟ ೪-೫೩ ಕೊಳಿ ಕಳ್ ೩-೭೪ ಹೆಂಡ ಕುಕ್ಕುರಿ ಆನೆಯ ಮರಿ ಕುಂಚ ಕಳಭ ೩-೪ ೩-೩೮ ಹೆಣ್ಣು ನಾಯಿ ೧-೯ ಜೈನ ಸನ್ಯಾಸಿಯ ಕೈಯಲ್ಲಿರುವ ನವಿಲು ಗರಿಯ ಗುಚ್ಛ ಕಳಹಂಸ ೧-೩೧ ಉತ್ತಮ ಜಾತಿಯ ಹಂಸ ಕುಡಿಯ ೨-೫೦ ಒಕ್ಕಲಿಗ ಕಲ್ ೪-೩೮ ಕಳಚು, ಬೀಳು ಕುಲ್ದಾವರೆ . ೩-೯ ಹೀನವಾದ ತಾವರೆ ದ ತಾವರೆ ಕುದಿರ್ ೪-೨೧ ಹಗೇವು, ಕಣಜ ಕಲೆ ೩-೧೮ ತೊಲಗಿಸು ಕುನಿ ೪-೧೩ ಕುಗ್ಗು, ಬಾಗು ೪-೫೬ ಸಾಯು ಕುನ್ನಿ ೪-೪೪ ನಾಯಿ ಕಲೆಪು ೩-೨೮ ಜಿಂಕೆ ಕಲೆಯುಣ್ ಹುಲಿ ೨-೬೩ ಕುರಂಗ ೩-೫೧ ಮಿತಿಮೀರಿ ಕುರಂಗರಿಪು ಊಟಮಾಡು ಕುಜಗಣ್ ೩-೧೦ ನೋಟ, ಕಂಡುದು ೨-೩೭ ಪ್ರಿಯ, ನಲ್ಲ ಕುಜುಪು ೩-೪೬ ೨-೩೯ ಕಾಣೆ ಸಣ್ಣ ಕಣ್ಣು; ಹೀನವಾದ ಕಣ್ಣು ಗುರುತು ಕಾದಲ ೪-೧೭ ದೇಹ ಕುವಳಯ ೧-೨೬ ನೈದಿಲೆ ಕಾಯ ಕಾರ್ ಕಾವರ್‌ ೩-೧೦ ಮಳೆ(ಗಾಲ) ಕುಸಿಗೊರಲ್ ೩-೧೯ ಕಾಪಾಡುವವರು ಕುಸುರಿದಳೆ ಕಾಷ್ಠ ೪-೨೪ ಕಟ್ಟಿಗೆ ಕಾಳಾಗರು ೨-೧೯ ಕಪ್ಪುಗಂಧ ಕುಸುರಿವೆಸ ೧-೪೦ ಸೇವಕ ಕುಲೆ ಕಿಂಕರ ಕಿಚ್ಚು ಕಿತ್ತಡ ೩-೩೮ ಕುಗ್ಗಿದ ಕುತ್ತಿಗೆ ೧-೩೭ ಚಿಕ್ಕ ತುಂಡಾಗಿ ಕತ್ತರಿಸು ೧-೩೦ ಸೂಕ್ಷ್ಮವಾದ ಕೈಕೆಲಸ ೨-೩೯ ಹೊಂಡ, ಗುಂಡಿ ೨-೩೮ ಒಳನುಗ್ಗಿದ ಹಣೆ ೨-೪೦ ವಕ್ರ, ಬಾಗಿದುದು ೨-೩೬ ಹರಿತವಾದ ಕತ್ತಿ ೨-೬೩ ಪ್ರೀತಿಮಾಡಿಸು ಪ್ರೀತಿಸಿ ೪-೨೪ ೨-೭೦ ಬೆಂಕಿ - ಕುಲೆನೊಸಲ್ ಹೊಲೆಗೆಲಸ, ಕೂನ್ ಅಸಹ್ಯ ಕಾರ್ಯ ಕೂರಸಿ ಹೊಲಸು ವಸ್ತು ಕೂರಿಸು ಹೀನ ಕೂರ್ತು ಹೊರಸೆಳೆದೆ ಕೂರ್ತೆ ಕಿಸುಗುಳ ೨-೫೬ ಕಿಸುಗುಳಿ ೩-೭೨ ೧-೩ ಕನ್ ೪-೪೬ ೨-೩೬ ಕಿಮ್ ಪ್ರೀತಿಸಿದೆ ೩-೧೨ ೨-೬೩ ಕೆಟ್ಟಮಾತು ಕೂರ್ಪ ಕಿಟ್ಟುಡಿ ಪ್ರೀತಿಸುವ ಕೆಳ ಮಳೆ ಕೂರ್ಪು ೩-೭೮ ತೀಕ್ಷತೆ ಕಿರಿ Page #102 -------------------------------------------------------------------------- ________________ ಯಶೋಧರ ಚರಿತೆ ಕೂರ್ಮೆ ೧-೨೩ ಕೂಮ್ ೧-೫೪ ಪ್ರೀತಿ ಕೊಳ್ಕೊಳಿಸು ಅನ್ನ, ಆಹಾರ ಕೋಳಿ ಕೋಟಲೆ ಯಮ ಕೋದ ೪-೪೪ ಕೊಳ್ಳೆಂದು ಭೂ ಬಿಡು ೧-೫೬ ತೊಂದರೆ, ಕಾಟ ೧-೨೯ ರಂಧ್ರ ಕೊರೆದ, ಚುಚ್ಚಿದ ಕೃಕವಾಕು ೩-೨೬ ಕೃತಾಂತ ೧-೫೩ ಕೆಡೆ ೪-೪೫ ಕೆಮ್ಮನೆ ೪-೩೯ ಬೀಳು, ಬೀಳಿಸು ಕೌಕ್ಷೇಯಕ ೪-೪೭ ಸುಮ್ಮನೆ ಕೌತುಕ ಅಕ್ಕಪಕ್ಕ ೨-೩೩ ಗೆಳತಿ ಕೌಮುದಿ ೧-೨೩ ಕುತೂಹಲ, ವಿಸ್ಮಯ ಕೆಲಬಲ ಕೆಳದಿ ೨-೨೩ ತಿಂಗಳ ಬೆಳಕು ಕೆಳರ್ ೪-೪೫ ಕೆರಳು, ಕೋಪಿಸು ಕೌಳೇಯಕ ೪-೪೫ ನಾಯಿ ಕೆಳೆ - ೧-೩೨ ಸ್ನೇಹ ಕ್ಷಿತಿ ೧-೫ ಭೂಮಿ, ನೆಲ * ರಾಜ ಕೇಕಿ ೩-೩೭ ನವಿಲು ಕೃತಿಪ ೪-೪೫ ೧-೨೩ ಭೂಮಿ ಕೇತು ೧-೨೩ ಧ್ವಜ, ಕೇತುಗ್ರಹ ಕ್ಷೀಣಿ ಕೇವಲಬೋಧ ೧-೩೧ ಕೇವಲಜ್ಞಾನ ಕೇಸರ ೩-೭೮ ಹೂವಿನ ಎಳೆ, ಖಗ ಸಣ್ಣಗರಿ, ಹೊಂಬಣ್ಣ ಖಚರ ೪-೬೨ ಪಕ್ಷಿ ೨-೨೨ ಗಂಧರ್ವ ಕೇಳಿ ಆಟ ಖರಹತಿ ೧-೧೪ ಗೊರಸಿನ ಪೆಟ್ಟು ಕೇಳಿಕೆ ಕೇಳಿಶಿಖರಿ ೧-೧೩ ಆಕಾಶ ೨-೫೨ ಮಾವುತ ಕೇಳಿಸು ೨-೫೧ (ಕಾಮ) ಕ್ರೀಡೆ ೪-೬ ಕೃತಕಶೈಲ, ಆಟಕ್ಕಾಗಿ ಗಗನ ನಿರ್ಮಿಸಿದ ಬೆಟ್ಟ ಗಜವೆಡಂಗ ೪-೩ ವಿನೋದಗೊಳಿಸು ಗಣಿಕೆ ೧-೫ ಸಹಾಯಮಾಡು ಗಂಡಗಾಳಿಕೆ ೨-೫೪ ಕೈ ಹಾಕಬಾರದು ಹೊಡೆಯಲಾಗದು ಗರಗರಿಕೆ ೨-೧೪ ಸೂಳೆ ಕೈಗುಡು . ಕೈಯಿಕ್ಕಲ್ ೨-೧೬ ಪತಿತ್ವ, ಒಡೆತನ ೨-೩೬ ಚೆಲುವು ೨-೪೧ ಗರಗರ ಸದ್ದು ೨-೪೭ ನೈದಿಲೆ ಗರಗರಿಕೆ ಕೈರವ ಕೈವೋದ ೧-೩೬ ಚಿಗುರಿದ ಗರಟಿಗೆ ೨-೨೭ ಕಾವಲು ತಿರುಗು ಕೊಕ್ಕ ೨-೨೯ ಅತಿಸಂತೋಷ ೩-೪೬ ಒಂದು ಹಕ್ಕಿ ಗಹಗಹಿಕೆ ೨-೭೮ ಜುಟ್ಟು; ದಾನವಿತ್ತು ಗಳರವ ಕೊಟ್ಟು . * ೨-೨೪ ಗಂಟಲ ಧ್ವನಿ Page #103 -------------------------------------------------------------------------- ________________ ಶಬ್ದಕೋಶ ಗುಜ್ಜ ಗಮನ ಗುರುವಚನ ಗೂಥ ಗೂಳಿ ಗೆಡೆ ಗಂಟು ಗೆತ್ತು ಗೇಹ ಗೋದಾಮೆ ಗೋರಿಗೊಳಿಸು ಗ್ರಾಹ eld ಧೃತ ಕುಳ್ಳ, ಕುಂಟ ಹೋಗುವಿಕೆ ೩-೧೭ ಹಿರಿಯರ ಮಾತು ಅಮೇದ್ಯ, ಮಲ ಎತ್ತು, ಬಸವ ಒದರು, ಹರಟು ದೂರ ಭ್ರಮಿಸಿ, ತಿಳಿದು ಮನೆ ನವಿಲಿಗೆ ಅಹಿತವಾದ ಒಂದು ಪ್ರಾಣಿ (?) ಆಕರ್ಷಿಸು, ಕೊಲ್ಲು ಗ್ರಹ, ಹಾಡಿಗೂ ತಾಳಕ್ಕೂ ಇರುವ ವಿಶಿಷ್ಟ ಸಂಬಂಧ ೩-೪೮ 2-20 ೪-೫೨ ೩-೫೪ ೩-೬೨ ೧-೬೪ ೩-೪೨ ೧-೫೧ 2-00 9-6 9-20 * ೪-೨೮ ಚ ಚದು‌ ಚರಣಾಯುಧ ೩-೨೪ ಚರಮಾಂಗ ಪ್ರಮಿತ ಚರಿಗೆ ಚರು ಚರ್ಚೆ ಚಾಗ 2-90 ೪-೩೦ 0-82 9-29 80-6 0-90 ತುಪ್ಪ ಚಾತುರ್ಯ ಕೋಳಿ ಕೊನೆಯ ದೇಹವುಳ್ಳವನು ಭಿಕ್ಷಾಟನೆ ಹವಿಸ್ಸಿನ ಅನ್ನ ಲೇಪನ ತ್ಯಾಗ ಚಾಳಿಸು ಬಾಳೆಯ ಜಘನ ಜನಪತಿ ಜಂತ್ರ ಜವ ಜವಳಿವೆ ಜಸ ಜಳಜ ಜಾತಿ ಜಾತಿಸ್ಮರ ಜಾಯಿಲ ಜಾರ ಜಾಲಗಾರ ಜಾಲಾಂದರ ಜಿನ ಜೀವಜಾತ ಝಂಪೆ ಟೊಂಕ 9-20 ೨-೨೯ ಜ 60-0 ೨-೩೮ ಸೊಂಟದ ಹಿಂಬದಿ ೨-೨೪ 9-00 9-20 2-82 ೧-೫೮ ೧-೬೨ ಇಬ್ಬರು ಚಂದ್ರರು ೪-೮೨ ಕೀರ್ತಿ ತಾವರೆ 2-22 ೨-೪೭ ೩-೪೮ ೨-೧೯ 0-9 €6 ನಡೆಯಿಸು ; ಸೋಲಿಸು ಕೃತಕದ ನೆಗೆತ ಟ ರಾಜ 9-26 ಯಂತ್ರ ಯಮ ದೇಶೀಯಗಾನ ಪದ್ಧತಿ ಪೂರ್ವಜನ್ಮದ ಸ್ಮರಣೆಯುಳ್ಳ ನಾಯಿ ಹಾದರದವನು ಬಲೆಗಾರ, ಬೆಸ್ಕ ಕಿಟಕಿ ೪-೭೪ ಪ್ರಾಣಿಗಳ ಗುಂಪು ಝ ಅರ್ಹಂತ, ತೀರ್ಥಂಕರ ೨-೨೯ ಐದು ಮಾತ್ರೆಗಳುಳ್ಳ ತಾಳ (ನೃತ್ಯಕ್ಕೆ) ಸೊಂಟ Page #104 -------------------------------------------------------------------------- ________________ 000 ಠಕ್ಕುಗೊಳ್ ಠಾಯ (ಯೆ) ಡಾಳ ತಗುಳ್ ತಡವಾಗು ತಡವಿಕ್ಕು ತಣಿ ತಂಡುಲ ತತಿ ತದೆ ತದ್ದಂತಿಪ ತನಯ ತನು ತನೆ ತಪಶ್ಚರಣ ತಮ ತಮಿಸ್ರ ತರಕ್ಷು ತರುಮೂಲ ತಟ್ಟೆ ತಪ್ಪಿಸಲ್ ಬೆರಗಾಗು ೨-೨೯ ಪ್ರಬಂಧ ವಿಶೇಷ (ಸಂಗೀತದಲ್ಲಿ) ೧-೫೮ ಡ 9-20 CL ತ 0-20 9-92 2-09 ೩-೬೦ ೪-೭೪ ೪-೪೫ 9-80 ೨-೩೨ 0-22 2-6 ಜಜ್ಜು, ಬಡಿ ಆ ಮಾವುತ ಮಗ ದೇಹ 2-88 ಗರ್ಭ, ಬಸಿರು ೧-೪೫ ತಪಸ್ಸು ಮಾಡುವಿಕೆ ಅಜ್ಞಾನ, ಪಾಪ, ಕತ್ತಲು ಕತ್ತಲೆ ಹುಲಿ ಮರದ ಬುಡ ೩-೧೩ ಕತ್ತರಿಸು, ಕೊಲ್ಲು ೪-೬೫ ನಿರ್ಧರಿಸು ೩-೨೨ ೧-೨೬ 0-92 ಪ್ರಕಾಶ, ಕಾಂತಿ ೪-೧೨ ತೊಡಗು ಅನುರೂಪವಾಗು ಅಕ್ಕಿ ಸಮೂಹ ತಲ್ಲಣ ತವರಾಜ ತವೆ ತಳ ತಳ‌ ತಳಾಮಲಕ ತಡೆದಿಡು ತೃಪ್ತಿಗೊಳ್ಳು ತಳಿರ್ತ ತಳ್ಳ ತಾಮ್ರಚೂಡ ತಳಿ ತಳಿರ್ಜೊಂಪ ತಾರ ತಾರಹಾರ ತಾರಾ ತಾಳುಗೆ ತಾಳು ತಿಂಗುಳ ತಿಣ್ಣಂ ತಿದಿ ತಿರೋಹಿತೆ 2-00 ಯಶೋಧರ ಚರಿತ ಭಯ, ಹೆದರಿಕೆ ಒಂದು ಜಾತಿಯ ಸಕ್ಕರೆ ೧-೬೨ ೩-೭೬ ೧-೫೪ ಅಂಗೈ, ಅಂಗಾಲು ೩-೨೯ ಚಲಿಸು, ಹೊರಡು 0-48 2-0 9000 9-00 ೨-೨೬ 2-92 ೪-೮೪ ೪-೮೪ ೪-೮೪ 0-88 2-0 0-80 ನಾಶವಾಗಲು, ಸಾಯಲು ೪-೨೬ ಧರಿಸಿಕೊಳ್ಳು ೩-೭೧ ತಿನ್ನುವುದಕ್ಕೆ ಗುರಿ, ತಿನ್ನುದಕ್ಕೆ ಯೋಗ್ಯ ; ತಿನ್ನುವ ಕುರಿ 9-28 ಅಂಗೈಯ ನೆಲ್ಲಿ ಸ್ಪಷ್ಟವೆಂಬ ತಾತ್ಪರ್ಯ) ಚುಮುಕಿಸು ಚಿಗುರಿನ ಚಪ್ಪರ ಚಿಗುರಿದ ಸೇರಿದ ಕೋಳಿ ಬೆಳ್ಳಿ ಮುತ್ತಿನಸರ ನಕ್ಷತ್ರ ಬಾಯೊಳಿಗಿನ ಮೇಲುಬದಿ, ಅಂಗಳು ಬಹಳವಾಗಿ, ಚೆನ್ನಾಗಿ ಗಾಳಿಹಾಕುವ ಚರ್ಮದ ಚೀಲ ಅಡಗಿದವಳು Page #105 -------------------------------------------------------------------------- ________________ ಶಬ್ದಕೋಶ ತಿರ್ದು ೨-೧೭ ೧-೫೨ ಕಷ್ಟ, ಬಾಧೆ ೪-೨೪ ತಿರ್ಯಗ್ಧತಿ ತೀವು ಸರಿಪಡಿಸು, ದಂದುಗ ತಿದ್ದು ದರ್ಪಣ ಪ್ರಾಣಿಜನ್ಮ ದವಳಾರ ತುಂಬು ದಸಿ ಸಣ್ಣಗರಿ ದಾನಾಸಾರ ಸಮೂಹ ೧-೬೬ ಕನ್ನಡಿ ೩-೬೩ ಬಿಳಿಯ ಮನೆ ೩-೬೯ ಮೊನಚಾದ ಗೂಟ ೩-೫೫ ತುಪ್ಪುಖ್ ೩-೩೫ ೨-೧೪ ದಾನದ (ನೀರಿನ) ತುಮಿಗಲ್ ೨-೨೬ ಮಳೆ ೪-೫ ೪ -೯ ವಿ ದೀವ ೨-೯ ತೆಂಕವಂಕ ೧-೩೪ ದಕ್ಷಿಣದಿಕ್ಕು ದಾವಣಿ ೧-೧೪ ತೆತ್ತಿಸು ೧-೫೭ ನಾಟಿಸಿರಿಸು ದಾವಣಿಗುಡೆ ೩-೧೩ ಹಗ್ಗ ಬಿಗಿದ ಕುರಿ ತೆಂಬೆಲರ್ ತೆಂಕಣಗಾಳಿ ದಿವ ೩-೬ ೨ ಸ್ವರ್ಗ ತೆರೆಮುಗಿಲ್ ಪರದೆಯಂತಹ ದಿವಾಕರ ೧-೪೬ ಸೂರ್ಯ ಮೋಡ ; ಮೋಡದ ದಿವಿಜ ಶರಾಸನ ೩-೩೭ ಕಾಮನಬಿಲ್ಲು ಪರದೆ ದೀಪವರ್ತಿ ೪-೧೪ ದೀಪದ ಬತ್ತಿ, ತೆಂಪು ೨-೪೪ ಬಿಡುಹೊತ್ತು ದೀಪದ ಕುಡಿ ತೆಳ್ಳನೆ ೪-೬೩ ಸ್ವಚ್ಚವಾಗಿ ಬೇಟೆಯ ತೊಟ್ಟನೆ ೨-೨೮ ಕೂಡಲೆ, ಫಕ್ಕನೆ ಪ್ರಾಣಿಯನ್ನು ಆಕರ್ಷಿಸಲು ತೊಡಕು ೪-೨೦ ಸಿಕ್ಕು, ತೊಡಕು ಬಳಸುವ ಪ್ರಾಣಿ ತೊಡವು ೧-೨೦ ಆಭರಣ ದೀವಿಗೆ ದೀಪ ತೊತ್ತಿರ್ ೩-೭೧ ದಾಸಿಯರು ದುಗ್ಧ ೨-೫೯ ಹಾಲು ತೊನ್ನ ೩-೭೪ ಕುಷ್ಠರೋಗಿ ದುರಿತ ೧-೨೬ ಪಾಪ, ಕಷ್ಟ . ತೊಲೆ ೪-೨೨ ತಕ್ಕಡಿ ದುರ್ನಯ ೩-೧೦ ಕೆಟ್ಟ ನಡತೆ ತೊವಲ್ ೨-೪೦ ಚರ್ಮ, ತೊಗಲು ದೂದವಿ ೨-೩೨ ದೂತಿ ತೋರಮುತ್ತು - ೩-೧ ದೊಡ್ಡಮುತ್ತು ದೂಳಿಚಿತ್ರ ೪-೮ ರಂಗವಲ್ಲಿ ದೇಗುಲ ೧-೬೦ ದೇವಾಲಯ ದಂಡಧರ ೪-೨೩ ತಳಾರ ದೇಶಿಕ ಉಪಾಧ್ಯಾಯ ದತ್ತಾವಧಾನ ೧-೭೦ ಗಮನಕೊಟ್ಟವನು ದೊರೆ ೨-೩೭ ಸಮಾನ ದಂತಪ್ರಭೆ -೧-೬೭ ಹಲ್ಲ ಹೊಳಪು ದೊರೆವಡೆ ೨-೩ ಪ್ರಸಿದ್ಧನಾಗು ದಂತಿಪ ೨-೩೨ ಆನೆ ಸಾಕುವವನು ದೊರೆವೆತ್ತು ೧-೩೯ ಪ್ರಾಪ್ತವಾಗಿ, ಒದಗಿ Page #106 -------------------------------------------------------------------------- ________________ ಯಶೋಧರ ಚರಿತೆ ದ್ಯುತಿ ೧-೨೨ ಕಾಂತಿ ನರ್ಮಮನ ೩-೫೭ ವಿನೋದಕ್ಕೆ ಮನಸ್ಸು ಮಾಡಿದವನು ದೋಷಾವಹ ೩-೧೩ ಕೆಡಕುಂಟು ಮಾಡುವ ನಾಕ ನಾಗ ನಾಗ ೩-೫೨ ಸ್ವರ್ಗ ೩-೪೭ ಹಾವು ಧರಾಧರ ೨-೬ ಪರ್ವತ + ನಾಡಾಡಿ ೪-೮೪ ಸಾಮಾನ್ಯ ೧-೧೨ ೩-೧೬ ಭೂಮಿ ಚೆನ್ನಾಗಿ ಧರಿತ್ರೀ ಧರೆ ಧವಳ ೧-೨೭ ಭೂಮಿ - ನಾದ ೪-೨೫ ಧವಳಾರ ೨-೧೮ ೨-೨೧ ೨-೫೩ ಬಿಳಿ ನಾರಿ ಬಿಳಿಯ ಮನೆ ನಾಸಾಕುಟ್ಕಳ ಧೈರ್ಯ, ದೃಢತೆ ೨-೫ ಬಿಲ್ಲಿನ ಹಗ್ಗ ಮೊಗ್ಗೆಯಂತಹ ಮೂಗು ಧ್ವಾಂತ ೧-೬೭ ಕತ್ತಲೆ ನಾಲ್ಟಿಭು ೪-೮೮ ನಾಡ ಒಡೆಯ, , ರಾಜ ೩-೪ ಆನೆಯ ದಂತ ನಗ. ೩-೪೫ ನಿಗವ ಪರ್ವತದ ನಿಗ್ರಹ ೩-೪೯ ಪೀಡೆ, ಹಿಂಸೆ ನಚ್ಚು ಪ್ರೀತಿ' ೨-೩೫ ಒಣಗಿದ ತುಟಿ ನಂಜು ವಿಷ ನಟ್ಟುವ ನಡೆ ೩-೨೬ ಧ್ವನಿ, ಸದ್ದು ೨-೫೩ ಚಾಚು, ನೆಟ್ಟಗಾಗು ೩-೪೯ ವಿಧಿನಿಯಮ ೪-೨೭ ನಾಶವಿಲ್ಲದೆ ೧-೧ ಬಯಸದವನು ನಟ್ಟು ತೆನೆ ೪-೪೦ ನಿತಪ್ತಾಧರ ೩-೩೨ ನಿನದ ೪-೩ ನರ್ತಕ ನಿಮಿರ್ ೪-೨೦ ಚೆನ್ನಾಗಿ ನಿಯತಿ ೨-೬೪ ಸ್ನೇಹ, ಪ್ರೀತಿ ೨-೨ ಬಾಗಿದ, ನಮಿಸಿದ ನಿರತ್ಯಯ ೨-೫ ಎಳೆಯ ಮೊಗ್ಗು ನಿರಪೇಕ್ಷಕ ನಿರವಿಸು ೩-೭ ಹೂವಿನ ಬಾಣ ನಿರ್ವಟ್ಟಿದುವು ೩-೩ ಮೊಗ್ಗು ಬೆಳೆ , ರೋಮಾಂಚಗೊಳ್ಳು ನಿಲವಿನ ಸೂಡು ೩-೩ ಮಗ. ೩-೪೨ ಪೂರ್ವಜನ್ಮದಲ್ಲಿ ನಿಶ್ಚಿದ್ರ ಮಗನಾಗಿದ್ದವನು ನೀಡುಂ ೩-೨ ಸ್ವರ್ಗದ ನೀರಜ ಒಂದು ಮರ .ನೀರಡಸು ೪-೫೯ ಹೇಳು ನನೆಗಣೆ ಕ ನನೆಕೊನೆ ವೋಗು . ನಂದನ ೨-೫೮ ಗಟ್ಟಿಯಿಲ್ಲದುವು ೩-೭೦ ಒಂದೇ ರೀತಿಯ ಕಾವು ೪-೨ ಬಿರುಕಿಲ್ಲದ್ದು ೨-೧೦ ಬಹಳ ೧-೩೮ ತಾವರೆ ನಂದನಚರ ನಮೇರು .೩-೬೬ ಬಾಯಾರು Page #107 -------------------------------------------------------------------------- ________________ ೧೦೩ ಶಬ್ದಕೋಶ ನೀರೊಡು ೩-೬ ಒಣಕಳೆ ; ಒಣಗು ಪದಾಬ್ಬ ೪-೮೦ . ಪಾದಕಮಲ ನೀಲಾಚಲ ೪-೩೬ ಸಮಾಧಾನವಿರು ನೀಹಾರ ೨-೨ ಕೆಂಪುರತ್ನ ನೆಗಪು ೪-೮೨ ಚಪ್ಪರ ನೆಗಲ್ ೩-೬೬ ನೀಲಗಿರಿ ಪದುಳಿಸು ೪-೮೪ ಇಬ್ಬನಿ, ಮಂಜು ಪದ್ಯರಾಗ ೨-೭೧ ಮೇಲೆತ್ತು ಪಂದರ್‌ ೧-೬೧ ನಡತೆ ಪಂದೆ ೪-೫೪ ನಡೆದ, ಆಚರಿಸಿದ ಪಯಃಪೂರ ೧-೩ ನೇರಾಗಿ, ಸರಿಯಾಗಿ ಪರಿ ೩-೬೯ ಕೊಬ್ಬು, ಚರ್ಬಿ ಪರದ ೩-೨೬ ಹೇಡಿ ನೆಗಟ್ಟಿ ೪-೮೪ ಹಾಲ ಪ್ರವಾಹ ನೆಟ್ಟನೆ ೪-೩೨ ಪರಲೋಕ ನೆಣ ೩-೬೫ ವ್ಯಾಪಾರಿ ನೆತ್ತ ೩-೪೨ ಪಗಡೆಯಾಟ ಪರಪು ೩-೫೮ ಹರಡು ನೆರಂಬಡೆ ನೆರೆ ೧-೧ ಮೋಕ್ಷಲಕ್ಷ್ಮಿ ಪರಸ್ತ್ರೀ, ಅನ್ಯರ ಹೆಂಡತಿ ನೆರೆಯಿಸು ೧-೫೯ ೨-೬೧. ಸಹಾಯ ಪಡೆ ಪರಮಶ್ರೀ ೪-೬೮ ಕೂಡು, ಸೇರು ಪರವನಿತೆ ೧-೩೫ ಕೂಡಿಸು ಪರಸಿರೆ ೩-೫೯ ಪೂರ್ಣ, ಚೆನ್ನಾಗಿ ಪರಿವೆ ಉಪ್ಪರಿಗೆ ಮನೆ ೧-೩೦ ಒಪ್ಪುವಮನೆಯ ಪರಿಚ್ಛೇದಿಸು ಮೂಲೆ ಪರಿಜನ ಹರಸಿರಿ ಏ ನೆಟ್ # # # # # # # # # # # # # # # # # # # # # # ೧-೨೮ ಕಂದಕ ನೆಲೆಮಾಡ ೪-೫೪ ನಿರ್ಧರಿಸು ನೇರಾಣಿ ೧-೬೮ ಸೇವಕಜನ ನೋಸಲ್ ೧-೬೮ ಹಣೆ ಪರಿರಂಭಣ ೨-೨೫ ಆಲಿಂಗನ ನೋಂತ ೧-೨೨ ವ್ರತಮಾಡಿದ ಪರಿವೇಷ್ಟಿತ ೨-೨೫ ಪರೀಷಹ ೧-೪೯ ಸುತ್ತುಗಟ್ಟಲ್ಪಟ್ಟ ಇಪ್ಪತ್ತೆರಡು ಬಗೆಯ ಕೇಶಗಳು ೧-೬೬ ಚೆನ್ನಾಗಿ ಹೊಳೆ ಪಜ್ಜಳಿಸು ಪಂಚಶತ ಪರೆ ೧-೨೬ ತೊಲಗು . ೧-೪೪ ಐನೂರು ಪರೆಗೆ ಪಂಜರ ೩-೩೭ ಗೂಡು ೪-೮೮ ಹಬ್ಬಲಿ ೨-೪೭ ತುಂಬಿ, ಭ್ರಮರ ಪಅಮೆ ಪಟ್ಟಿರು ೨-೫೭ ಮಲಗಿರು ಪಡೆದಲೆ ೨-೩೮ ಪಣ್ಣು ಫಲಬಿಟ್ಟು ಕಿತ್ತು ಹೋದ ಕೂದಲ ತಲೆ ಪಥ್ಯ ೧-೬೫ ಹಿತಕರವಾದುದು ಪರ್ವ ೧-೪೬ ಹಬ್ಬ ಪದ ೧-೪೬ ಸಂದರ್ಭ ಪರ್ವ ಹಬ್ಬು ಪದನ್ ೧-೨೯ ಹದ ಪವಡಿಸು ೨-೫೨ ಮಲಗು Page #108 -------------------------------------------------------------------------- ________________ ಯಶೋಧರ ಚರಿತೆ ೩-೩೮ ಪಸಾಯದಾನ ೨-೨೮ ಮೆಚ್ಚಿ ಕೊಟ್ಟುದು ಪುಂಜ ಪಸಾಯಿತ ೩-೬೭ ಮೆಚ್ಚುಪಡೆದ ಪುಂಡರೀಕಿನಿ ಪಸುಮಳೆ ೩-೫೬ ಎಳೆಯ ಮರಿ ಪಳಿ, ಚಿಕುರ ಪುತ್ರಿಕೆ ನರೆತ ಮುಂಗುರುಳು ಪುರುದೇವ ಹುಂಜ, ಗಂಡು ಕೋಳಿ ತಾವರೆಕೊಳ ೧-೧೦ ೨-೨೩ ಬೊಂಬೆ ಪಾಡಿ ೨-೪೬ ಅಂದಕೆಡು ಪುರುಳ್ ೨-೧ ಮೊದಲ ತೀರ್ಥಂಕರ ೪-೭೦ ಸಾರ, ಅರ್ಥ ೧-೪೪ ನಗರದ ಉದ್ಯಾನ ೪-೧೩ ಹುಬ್ಬು ಹಾದರದವನು ಪುರೋಪವನ ಪಾ - ಪಾಣೆ ೩-೭೫ ೩-೪೧ . ಜಾರೆ, ಪುರ್ವು ಹಾದರದಾಕೆ ಪುಲಿಗೋಣ ಬೀಳಿಸುವಿಕೆ ೩-೪೫ ದೊಡ್ಡಕೊಣ ಪಾತನ ೨-೩೨ ೨-೧೮ ಮರಳರಾಶಿ ಪಾದರಿ ೨-೭೦ ೧-೯ ೨-೯ ಬೇಟೆಗಾರ ಪಾಯ್ ಪಾರಣೆ ೧-೨೪ ಜಾರೆ ಪುಳಿಂದ ಹಾಯು, ನುಗ್ಗು. ಪುಲೆತೊಡೆ ) ಉಪವಾಸದ + ಅಲ್ಲದೆ ಅನಂತರ ಪುಮಿಕರ್ ತೆಗೆದುಕೊಳ್ಳುವ ಆಹಾರ ಪೂರ ೩-೭೩ ಹುಳವಾಗದೆ ಹೀನರು ೨-೫೪. ೧-೩೦ ಪ್ರವಾಹ ಪಾರ್ವ ೩-೫೨ ಬ್ರಾಹ್ಮಣ ಪೆತ್ತ ೧-೪೯ ಪಡೆದ ೧-೫೫ ಸಾಲು, ಕ್ರಮ ಪೆತ್ತಿರು ೩-೬೫ ಪಡೆದಿರು ಪಾಳಿಕೆ ೨-೩೦ ರಕ್ಷಣೆ, ರೀತಿ ಪೆಂಪು ೧-೨೦ ಹಿರಿಮೆ ಪಿಕರುತಿ ೧-೨ ಕೋಗಿಲೆಯ ಕೂಗು ಪೆಜಿಗೆ ೨-೫೭ ಹಿಂದೆ ಪಿತಾಮಹ ೧-೧೩ ತಂದೆಯ ತಂದೆ ಪೆರ್ಬೆಸನ ೧-೫೭ ಅತ್ಯಾಶೆ ಪಿತ್ತಳೆ ೩-೬೫ ಹಿತ್ತಾಳೆ ಪೆರ್ಮಿಡಿ ೪-೪ ದೊಡ್ಡಮಿಡಿ ಏಸುಳ್ ೩-೪೩ ಹಿಸಿದುಹೊಗು ಪೆಳಲು ೧-೫೬ ಹೆದರು ೧-೫೭ ಹೆಚ್ಚು ಮಾಂಸ ೩-೬೫ ಹೊರೆಹೊರಿಸು ಪಿಳುಕು ೩-೩೬ ಮರಿ ಪೇರಡಗು ಪಿಳುಕೊತ್ತು ೩-೩೬ ಮರಿಯ ಬಳಿ ಪೇಜು ೩-೭೭ ಮರಿ ಪೀತಚ್ಛತ್ರ ೪-೧ ಬಂಗಾರದ ಕೊಡೆ ಪೊಡವಡು ಪೀತಚ್ಛತ್ರ ನಂದನ ೪-೧ ಹೊಂಗೊಡೆಯ ಪೊನ್ ಕೆಳಗೆ ಸಂತೋಷ ಪೊಂಪುಲೆ ದಿಂದಿರುವವನು ೪-೪೭ ವಂದಿಸು ೪-೨೮ ಹೊನ್ನು, ಲೋಹ ೪-೩೮ ಹಿಗ್ಗು, ಹೆಚ್ಚಳ Page #109 -------------------------------------------------------------------------- ________________ ೧೦೫ ೪-೮ (ಮುಖದ) ಚಿತ್ರ ಲೇಖನ ೨-೨೭ ಕ್ಷುದ್ರಸೇವಕ ೨-೫೯ ಹೀನಸೇವಕ ೪-೭೩ ನಮಸ್ಕರಿಸು ಶಬ್ದಕೋಶ ಪೊಂಬಾಟ ೪-೬ ಬಂಗಾರದ ಬಣ್ಣವಣ್ಣಿಗೆ (ಬಣ್ಣದ) ಬಾಳೆ ಪೊಯ್ ೧-೬೦ ಹೊಡೆ ಬದಗ. ಪೊರೆ ೨-೭೦ ಸಮೀಪ, ಹತ್ತಿರ ಬದಗುಳಿಗ ಪೊರೆಯೇಜು ೧-೨೬ ಹೆಚ್ಚುಗೊಳ್ಳು ಬಂದಿಸು ಪೊಲಂಬು ೧-೬೪ ಹೋಲಬು, ದಾರಿ ಬಯ್ದಿಕೆ ಪೊಲ್ಲದು ೪-೧೮ ಹೀನವಾದುದು ಪೊಲ್ಲಮೆ ೨-೪೨ ಕೆಡುಕು, ಹೊಲಸು ಬರ್ದಳೊ ಪೊಸೆ ೪-೨೪ ತಿಕ್ಕು, ಹೊಸ ಬರ್ದು ಪೊಳಂಕು ೩-೪೮ ಮೇಲೆ ನೆಗೆ ಬಲಗೊಳ್ ಪೋಗಂಡ ೨-೬೦ ವಿಕಾರದ ಮನುಷ್ಯ ಬಲ್ಲುಲಿ ಪೋಂತು ೩-೫೩ ಗಂಡಾಡು ಬಸನಿಗತನ ೨-೨೯ ಕುಣಿತದ ಒಂದು ಭಂಗಿ ೩-೬೪ ಬದುಕಿದಳೋ ಬದುಕು ೧-೪೦ ಪ್ರದಕ್ಷಿಣೆ ಬರು ೩-೨೫ ದೊಡ್ಡ ಶಬ್ದ ೩-೭೨ ದುರಭ್ಯಾಸವಿರುವಿಕೆ ೩-೭೨ ಸುರಿ, ಸ್ರವಿಸು ಪೋಕುಳಿ ೩-೬೮ ಹೋರಾಟ ಬಸಿ ಪೌತ್ರ ೧-೧೩ ಮಗನ ಮಗ ಬಸ್ತಕ ೩-೫೪ ಗಂಡಾಡು ಪ್ರಚಯ ೨-೬೬ ಸಮೂಹ ಬಳರಿ ೧-೪೩ ಮಾರಿಯ ಹೆಸರು ಪ್ರಚ್ಛನ್ನ ೨-೪೮ ಮರೆ ಬಳೆಗೋ ೩-೪ ಬಳೆ ಸಿಕ್ಕಿಸು ಪ್ರಸರ ೧-೫೭ ಸಮೂಹ ಬಲೆಯಂ ೩-೧೮ ಬಳಿಕ ಪ್ರಸವ ೧-೫೬ ಹೆರಿಗೆ ಬಾಡು ೩-೭೦ ಮಾಂಸ ಪ್ರಾಕಾರ ೧-೨೮ ಆವರಣದ ಗೋಡೆ ಬಾಣಸು ೧-೫೩ ಅಡಿಗೆಮನೆ ಪ್ರಾಸಾದ ೨-೪೬ ಮುತ್ತಿಡು ೧-೨೮ ಮಾಳಿಗೆ ಮನೆ ಬಾಯೂಡು ೨-೨೪ ಹಿರಿಮೆ ಬಾಯ್ಕಳಿಕೆ ಪ್ರೌಢ ೪-೨ ಆಜ್ಞೆ ಕೊಡುವಿಕೆ ಬಾರಿಪರ್‌ ೩-೧೯ ತಡೆಯುವವರು ಬಗೆ. ಬಜಾವಣೆ ೨-೭೦ ಮನಸ್ಸು ಬಾರೇಖ್ ೨-೩೦ ಬಾರಿಸುವಿಕೆ, ಬಾಷ್ಪ ವಾದನ ಬಾಸಣಿಸು ೨-೫೮ ಉರುಟಾದುವು ಬಾಹುವಳಯ ೩-೧೭ ದಾರಿ ೨-೫೦ ಚರ್ಮ ಕಿತ್ತುಬರು ೪-೩೮ ಕಣ್ಣೀರು ೩-೭೦ ಮುಚ್ಚು ಬಟ್ಟಿದುವು ೨-೨೫ ಬಟ್ಟೆ ಸುತ್ತು ಹಾಕಿದ ತೋಳು ಬಣಂಬೆ ಮೆದೆ, ರಾಶಿ Page #110 -------------------------------------------------------------------------- ________________ ೧೦೬ ಬಾಳಿ (ವೆ ?)ಸು ೨-೮ ಬಾದಲ್ 0-22 ಬಿಂಕ బిది ಬಿನದ 2-2 ೨-೩೪ ೨-೨೮ ಬಿಬ್ಬಿರುವಲ್ ೨-೩೮ ಬಿಲ್ಲುಂಬೆಳಗು 9-29 ಬೀಜಾವಾಪ ೩-೩೪ ಬೀಟೆ ಬೀಡೆ ಬೀರ ಬುಧ ಬೆಂಕ ಬೆಟ್ಟಿಸು ಬೆದಱಟ್ಟು ಬೆದೆಯಾಗು ಬೆಂತರ ಬೆರಗು ಬೆರ್ಚು ಬೆಸಗೊಳ್ ಬೆಸಸು ಬೆಳತಿಗೆವಸದನ ಬೆಳ್ಳಾರ್ ಬೇಂಟ ಬೊಟ್ಟು ಭಂಗಿ ಭವದ್ವಿಳಾಸ ಭವನಿಬದ್ಧ ಭವರೋಷ 9-880 0-82 ಭವ್ಯ ಭಾವಕ ಭಾವಿತ ಭೂವರ ಭೂಷಾವಳಿ ಭೇದಿಪ 0-08 ೧-೨೫ ೩-೬೯ ೩-೬೯ 9-92 2-89 ೩-೨೪ 2-22 0-88 C-42 9-22 ೪-೧೦ 0-08 9-8 0-00 ಭ 9-20 2-2 0-48 2-40 ಭವಾಂತರ ೩-೪೪ ಭವೇನ್ಮಾಸ್‌ ಪಚನೇ ೩-೫೯ 0-29 ಜೀವಂತವಾಗಿಡು ಹುಟ್ಟು ದರ್ಪ, ಠೀವಿ విధి ವಿನೋದ ಬಿರುಕುಬಿಟ್ಟ ಹಲ್ಲು (?) ಅತ್ಯಾಶ್ಚರ್ಯ ವಿದ್ವಾಂಸ, ದೇವತೆ ಬೆಂಕಿ ಬಿತ್ತನೆ ಮಗ್ಗುಲಿಕ್ಕು ಬಿರುಕು ಮಚ್ಚರಿಸು ಬಿರುಕು ಮಡಗು ವೀರ ಮಣಕು ಮಂಡನ ಮತ್ತಮರಾಳ ಮದನ ನಾಟಿಸು ಹೆದರಿಸಿ ಓಡಿಸು ಸಂಭೋಗ ಕಾಲಬರು ಪಿಶಾಚಿ ಒರಟುತನ ಬೆದರುಬೊಂಬೆ ಕೇಳು ಅಪ್ಪಣೆ ಕೊಡು, ಹೇಳು ಬಿಳಿಯ ಉಡುಗೆ ಧವಳ ಪ್ರವಾಹ ಅನುರಾಗ, ಪ್ರೇಮ ತೋರುಬೆರಳು ರೀತಿ ನಿನ್ನ ಬೆಡಗು ಜನ್ಮದ ಬಂಧನ ಪೂರ್ವಜನ್ಮದ ಕೋಪ ಬೇರೆ ಜನ್ಮ ಮಾಂಸ ಬೇಯಿಸುವಲ್ಲಿ ಆದೀತು ಜೈನಧರ್ಮದಿಂದ ಪರಿಣತನಾಗುವವನು ಭೋಂಕನೆ ಭೌಮಾಷ್ಟಮಿ 0-2 ವಿದ್ವಾಂಸ, ರಸಿಕ ೩-೧೯ ಎಣಿಕೆ 0-62 ರಾಜ ೨-೬೯ ಆಭರಣ ಸಮೂಹ ೪-೨೮ ಪ್ರತ್ಯೇಕಿಸಿಬಲ್ಲವನು ಮಕುಟ ಮಗುಳ್ ಮಗ್ಗಿಸು ಮಗು ಮದಿಲ್ ಮದ್ಭುಜಾಸಿ ಮಧುಕರ ಮಧುಪ ಮನೋಜ ಮನೋಭವ ಮಂದಸ್ಮಿತ ಮಯೂರ ಮರಲ್ ೩-೭೩ ಮದನೋನ್ಮತ್ತ ೩-೫೬. ಮಸುಳ್ ಮಸ್ತಕ ಮಹಳ ಮಹಿಷ ಮಹೀ ಮಹೀವಲ್ಲಭ ಮಾಜನ ಮಾಡ ಮಾಣ್ ಮಾದರ ಮಾದುಪಟ ಮಾನಸವಾಖ್ 9-22 ೨-೨೩ ಮಂಗಳವಾರವಾದ ಮ ೨-೨ 9-22 80-6 ಮಾನಿನಿ ಮಾನೋಮಿ ಮಾಂದಳಿ‌ ೨-೨೭ ೩-೬೬ ೩-೪ 9-22 9-980 0-8 3-4 ಇದು ದುರ್ವಾಸನೆ ಅಲಂಕಾರ ಸೊಕ್ಕಿದ ಹಂಸ ಕಾಮ ಕಾಮದಿಂದ ಸೊಕ್ಕಿದ ೧-೫೩ ಆವರಣದ ಗೋಡ ಮುಗುಳುನಗೆ ನವಿಲು ಹೂಬಿಡು ಹಂಸತೂಲಿಕಾ ಮರಾಳಿಕಾ ತೂಲತಳ - ತಲ್ಪ; ಹಂಸದ ತುಪ್ಪಳ ಹಾಸಿಗೆ ಮಲಯಾನಿಲ ೧-೩೮ ಮಲಯಪರ್ವತದ 2-2 2-2 2-92 ೪-೮೧ ೨-೫೪ ನನ್ನ ತೋಳಿನ ಖಡ್ಗ ೨-೨೬ ಜೇನ್ನೊಣ' ಭ್ರಮರ, ತುಂಬಿ 0-42 ೨-೨೪ ಕಾಮ ಕಾಮ ಯಶೋಧರ ಚರಿತ ಫಕ್ಕನೆ ಅಷ್ಟಮಿ GG-G ೪-೩೩ G-G ಕಿರೀಟ ಹಿಂತಿರುಗು ತಗ್ಗಿಸು, ಅಡಗಿಸು ತಗ್ಗು, ಇಲ್ಲವಾಗು ಮಲಗು ಅಸೂಯೆಪಡು 2-82 ೪-೬೧ ೪-೬೭ 2-8898 2-880 ೧-೨೯ 0-90 2-86 0-80 2-08 2-22 ೩-೨೩ 9-5 ಗಾಳಿ, ತಂಗಾಳಿ ಮಲಿನವಾಗು, ಕಾಂತಿಕಳೆ ತಲೆ ಮಹಾಲಯ ಕೋಣ ಭೂಮಿ ಭೂಪತಿ, ರಾಜ ಮಹಾಜನ, ಜನ ವೃಂದ ಮನೆ ತಡೆ, ಬಿಡು ಹೊಲೆಯ ಮಾದಳದ ಹಣ್ಣು ಮನುಷ್ಯಜೀವನ ಹೆಂಗುಸು ಮಹಾನವಮಿ ಮಾವಿನ ಚಿಗುರು Page #111 -------------------------------------------------------------------------- ________________ ಶಬ್ದಕೋಶ ೧೦೭ ಮಾಅಂಕ ಮಾ ಮಿಡುಕು ಮಿತ್ತು ಮಿಥ್ಯಾಕಂದರ ರಿಪು ೩-೪ ವೈರಿ, ಹಗೆ ಮುಕುರ ಮುಗು ಮುಡಿಪು ಮುಡುಪು ಮುತ್ತ ಮುದಿರ್ ಮುಂತಚಿಪು LOLACE ಮುನ್ನೀರು ಮುರುಡ ಮುಳಿ ಮುಚುಕು ಮೂದಲೆ ಮೂರಿ ಮೃಗನಾಭಿ ಮೃಗಮದ ಮೃಗಯಾ ಮೃಗಲೋಚನೆ ೩-೭೩ ಪಡಿಯಚ್ಚು, ರಜ ೨-೨೦ ರಜಸ್ಸು ; ದೂಳು ಪ್ರತಿರೂಪ ರಣಧತ ೨-೫೫ ಯುದ್ದದಲ್ಲಿ ೩-೩೧ ರೀತಿ ತೊಳೆಯಲ್ಪಟ್ಟುದು ೨-೪೧ ವ್ಯಥೆ, ನಡುಕ - ರತಿರಾಗ. ಕಾಮಾಸಕ್ತಿ ೩-೬೮ - ಮರಣ ರವ ೪-೨೩ ೪-೨೩ ಅಜ್ಞಾನದ ಗುಹೆ ರಾತ್ರಿಂದಿವಂ ೨-೪೪ ಇರುಳೂ ಹಗಲೂ ೨-೪೯ ಹಗ್ಗ, ಚರ್ಮ ದ ಹಗ್ಗ ರುಚಿ ೧-೩೨ ಕಾಂತಿ ಕನ್ನಡಿ ೩-೫೮ ಕೆಡು, ಹಳಸು ೩-೬೩ ಸಾಯು ೧-೪೦ ೩-೬೯ ಭುಜ, ಹೆಗಲು ೩-೭ ಗುರುತು, ಚಿಹ್ನೆ ೧-೩೭ ಮುತ್ತುಗ ಲಕ್ಷ್ಮಿ ಕರಿಣಿ | ೨-೮ ಲಕ್ಷ್ಮಿ ಯೆಂಬ ಹೆಣ್ಣಾನೆ ೪-೫೭ ಮುದುಡಿಹೋಗು ಲಂಪಣ ೨-೬೭ ಕಾಮುಕ ೩-೧೪ ಪೂರ್ವಸೂಚನೆ ಲಾಲಿಸು ೪-೭೫ ಮುದ್ದುಮಾಡು ಕೊಡು ಲುಲಾಯ ೩-೬೬ ಕೋಣ ೧-೧೫ ಸಮುದ್ರ ಚುರುಕಿನ ಚಲನೆ ೨-೪೦ ಅಂಕುಡೊಂಕಿನವನು ಲೆಂಕ ಸೇವಕ, ಭಜನೆ ೨-೪೮ ಕೋಪಗೊಳ್ಳು ಲೋವೆ ೧-೨೯ ಇಳಿಮಾಡು ೪-೫೮ ಮುಳುಗು ಲೋಹಿತಮತ್ಮ ೩-೫೦ ಕೆಂಪುಮೀನು ೨-೭೦ ಅಬ್ಬರಿಸುವಿಕೆ ೧-೫೮ ಕೋಣ (?) ಖಡ್ಡ (?) ೪-೮೮ ಮುಖ ಉತ್ಪಾತ (?) ವಚೋಮಾರ್ಗ ೧-೭೧. ಮಾತಿನ ಜಾಡು ೩-೭ ಕಸ್ತೂರಿ ವರ್ಷ ೪-೮೩ ೨-೧೭ ವತ್ಸರ ಕಸೂರಿ ವದನ ಬೇಟೆ ೧-೭೧ ಮುಖ ೩-೫೩ ವನಜ ೨-೨೮ ಜಿಂಕೆಯ ಕಣ್ಣಿನಂತೆ ತಾವರೆ ೧-೪೬ ವಂದಿ ಸ್ತುತಿಪಾಠಕ ಕಣ್ಣುಳ್ಳವಳು * ವೀರ ವಲ್ಲಭ ೧-೧೨ ೩-೭೮ ಪತಿ, ಒಡೆಯ ಅಂಗರಕ್ಷಣೆ ೨-೪ ವಸುಂಧರೆ ೨-೧೬ - ಭೂಮಿ ೩-೧೫ ಒಳ್ಳೆಯದು ವಹಿಣಿ ೨-೨೯ ಬೆಡಗು, ಪ್ರದರ್ಶನ ಭೂಮಿ ೨-೫೮ ೨-೩೭ ನಾಮೆ ಚೆಲುವೆ ೩-೩೩ ವಾಮೆ ಪ್ರತಿಕೂಲೆ ಜತೆಸೇರು ೨-೫೮ ಮೊನೆಕಾಣಿಸು ೪-೫ ೪-೭ ವಾರವನಿತೆ ವೇಶ್ಯಾಸ್ತ್ರೀ ೧-೫೫ ವಾರಿ ಖಡ್ಡ ) ೧-೫೦ ಕಲ್ಲುಗುಡ್ಡ ಮಾರಿ (?) ಹುಟ್ಟಿಬರು ೨-೪೦ (ಸೌದೆಯ) ಕಟ್ಟು ವಾರಿಧಿ ೧-೨೮ ಸಮುದ್ರ (ತಾಳೆಯ) ಗೊನೆ (?) ವಾರ್ಧಿ ೧-೨೫ ಕಡಲು ೨-೨೬ ಬಿಲ್ಲಿನ ಹಗ್ಗ ೨-೪೧ ವಾರ್ಬಿಂದು ನೀರಹನಿ ವಾಸವ ೧-೬ ಇಂದ ವಿಕಲಸ್ವಾಂತೆ ತಳಮಳದ ೧-೪೩ ಜತೆ, ಎರಡು ಮನವುಳ್ಳವಳು ೩-೫೬ ಸ್ತ್ರೀಯ ವಿಕಳ ಹೃದಯರ್ ೧-೬೬ ಹಾಳುಬುದ್ದಿಯವರು ಜನನೇಂದ್ರಿಯ ವಿನೇಯ ೧-೪೬ ಹೇಳಿದಂತೆ ನಡೆವ ವಿಪ್ರ ೩-೬೧ ಬ್ರಾಹ್ಮಣ ವಿಭೂಷಣ ೧-೬೬ ಆಭರಣ ೨-೩೦ ರಂಗದಲ್ಲಿ ವಿಮೋಹಮ್ಮಗ ೪-೨೩ ಮೋಹಗೊಳಿಸುವ ಸಂತೋಷದಾಯಕವಾದುದು ಮೃಗ ಮೆಯ್ಲಿ ಮೆಯಾಪು ಮೇಗು ಮೇದಿನಿ ಮೇಳಿಸು ಮೊನಸು ಮೊರಡಿ ಮೊಳೆವೋಗು ಮೋಳಿಗೆ ಮೌರ್ವಿ ಯ ಯುಗಳಕ ಯೋನಿ ರಂಗರಕ್ತಿ Page #112 -------------------------------------------------------------------------- ________________ ೧೦೮ ಯಶೋಧರ ಚರಿತೆ ೧-೨ ಶಾಸನ ಬೆತ್ತ ತಲೆ ವಿಷಣ್ಣಾನನೆ ೨-೩೫ ವಿಷಾದಗೊಂಡ ಸುಖೋದ್ದೀಪನ ೧-೩೪ ಸುಖ ಹೆಚ್ಚಿಸುವುದು ಮುಖವುಳ್ಳವಳು ಸುಟ್ಟುರೆ ೨-೨೦ ಸುಂಟರ ಗಾಳಿ ವಿಷಯ ೧-೨೭ ದೇಶ ಸುದತಿ ೨-೫೯ ಹೆಂಡತಿ, ಸ್ತ್ರೀ ವಿಷಯಾಮಿಷ ೨-೧೨ ಇಂದ್ರಿಯ ಸುಖದ ಸುಧಾ ೩-೮ ಅಮೃತ, ಹಾಲು ಸುಧಾಂಶು ೩-೪೧ ಚಂದ್ರ ವಿಷಾಹಿ ೪-೮೫ ವಿಷದ ಹಾವು ಸುಧಾರ್ಣವ ೪-೪೯ ಹಾಲುಕಡಲು ವಿಹರಿಸು ೩-೭೮ ತಾವರೆ - ಸುಪಕ್ಷ ೩-೭೮ ಒಳ್ಳೆಯಪಕ್ಷ, ವೃಂದಾರಕ ೧-೬ ದೇವತೆ ಒಳ್ಳೆಯ ರೆಕ್ಕೆ ವ್ರಜ ೪-೭೪ ಸಮೂಹ ಸುಮನೋಬಾಣ ೧-೨೩ ಕಾಮಬಾಣ ಸುರಚಾಪಚ್ಚವಿ ೨-೨೨ಕಾಮನಬಿಲ್ಲಿನ ಕಾಂತಿ ಸುರಭಿಕರ ೨-೪ ಹೂವಿನ ಶಯ್ಯಾ ೨-೧೮ ಹಾಸಿಗೆ ಬಾಣವುಳ್ಳವನು ಶರದಭ್ರ ೨-೨೨ ಶರತ್ಕಾಲದ ಸುರಿಗಿಟಿ ೧-೪೦ ಖಡ್ಗದಿಂದ ಕಡಿ ಮೋಡ ಸುವ್ರತ ಇಪ್ಪತ್ತನೆಯ ಶರಧಿ ೨-೧೦ ಸಮುದ್ರ ತೀರ್ಥಂಕರ ; ಶಾಂತಂಪಾಪಂ ೩-೧೪ ಪಾಪ ಒಳ್ಳೆಯ ವ್ರತ ಶಾಂತವಾಗಲಿ ಸೂಡು ೩-೭೦ ದಾಹ, ಕಾವು ಶಾರದನೀರದ ೪-೮೪ ಶರತ್ಕಾಲದ ಆಚಾರ್ಯ ಮೋಡ ಸೂಯ್ ೨-೨೭ ಸರದಿ ೪-೮೮ ಧರ್ಮ ೨-೨೧. ಮಲಗುವ ಮನೆ ಶೀತಕರ ೧-೬೭ ಚಂದ್ರ ೩-೪೦ ಹಾಸಿಗೆ ಶೀತಾಂಶು ೪-೫೬ ಚಂದ್ರ ೧-೯ ಶೀರ್ಷ ೧-೨೭ ಸೆಳುಗುರ್ ೪-೬ ಚೂಪಾದ ಉಗುರು ಶೋಧಿಪ ಸರಿಪಡಿಸುವ ಸೇಕ ೨-೧೪ ಸುರಿಯುವಿಕೆ ಶ್ರಾವಕಜನ ೧-೨೪ ಜೈನಗೃಹಸ್ಥ ಸೈರಿಭ ೩-೭೬ ಕೋಣ ಶಸೃಷ್ಟ ೩-೫೯ ನಾಯಿ ಮುಟ್ಟಿದ ಸೊಡರ್ ೩-೬೯ ದೀಪ, ಬೆಳಕು ಸೂದೆ ೪-೨೧ ಸುಣ್ಣ ಸೋಗೆ ೩-೩೭ ಸಂಯಮ ೧-೪೫ ಮನೋನಿಗ್ರಹ ಸೋಂಕು ೨-೨೪ ಸ್ಪರ್ಶ, ಮುಟ್ಟುವಿಕೆ ಸಂವರಣೆ ೧-೧೧ ರಾಜ್ಯಭಾರ ಸೌರಭ ೩-೩೧ ಪರಿಮಳ ಸಂಸಾರ ೩-೭೬ ಜನ್ಮ ಸ್ಮರಚಾಪ ೨-೪೨ ಕಾಮನಬಿಲ್ಲು ೩-೬೦ ಸ್ನೇರ ೪-೫೬ ಮುಗುಳುನಗೆ ಸಂತಸ ೨-೬ ಸಂತೋಷ ೪-೬೪ ಮಾಲೆ ಸಂದ ಪ್ರಸಿದ್ದ ೪-೮೮ ಶಬ್ದ, ಧ್ವನಿ ಸಮನಿಸು ೨-೩೪ ಉಂಟಾಗು ಸ್ವರವೇದವಿದ್ಯೆ ೪-೩೯ ಧ್ವನಿ ಕೇಳಿಗುರಿಗೆ ಸಮೆ ಮಾಡು ಬಾಣ ಬಿಡುವ ವಿದ್ಯೆ ೧-೭೨ ಸರಿಯಾದದ್ದು, ಪುಣ್ಯ ಸರವಿ ೩-೪೫ ಹಗ್ಗ ಹಪ್ಪಳಿಕೆಮೂಗು ೨-೩೮ ಚಪ್ಪಟೆಮೂಗು ಸರಸಿಜ ಹರಹಸನ -೮೪ ಶಿವನ ನಗೆ ಸರಸಿರುಹ ೨-೬೭ ತಾವರೆ ಹರಿ ೨-೫೪ ಸಿಂಹ ಸವಣ ೩-೬೮ ಜೈನಸನ್ಯಾಸಿ ಹರಿಚಂದನ ೨-೧೪ ಗಂಧ ಸಾಗುದುರೆ ೩-೧೫ ಸಾಯುವ ಕುದುರೆ ಹರಿಣ ೧-೪೭ ಜಿಂಕೆ ೩-೬೬ ಕಟ್ಟೆ, ಅಣೆಕಟ್ಟು ಹಸಾದ ೧-೪೨ ಅನುಗ್ರಹ (ಅಪ್ಪಣೆ) ಸಾರ್ಚು ಇರಿಸು ಹೇಂಟೆ ೩-೭೮ ಹೆಣ್ಣುಕೋಳಿ ಸಿಂಟ ೪-೫೧ ಕೆಟ್ಟನಾದವನು ಹೊಲಸು ೨-೧೨ ಒಂದು ಜಾತಿಯ ಸಿರ ಪಾರಿವಾಳ ೩೦ ಶಿಶಿರ, ಚಳಿಗಾಲ ನವಿಲಗರಿ ಸ್ವರ್ಗ Gಕ ದ C9C ೧ ಸಯ್ತು ತಾವರೆ ಸಾರ ೪-೧೦ ೩೬ C ತಲೆ Page #113 -------------------------------------------------------------------------- ________________ - ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮರುಮುದ್ರಣಗೊಳ್ಳುತ್ತಿರುವ ಮತ್ತು ಹೊಸದಾಗಿ - ಮುದ್ರಿತವಾಗುತ್ತಿರುವ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಸಹೃದಯರು ಮೆಚ್ಚಿ ಸ್ವೀಕರಿಸಲು ಯೋಗವಾಗುವಂತೆ ಆಕರ್ಷಕ ವಿನ್ಯಾಸಗಳಲ್ಲಿ ಸಿದ್ದಪಡಿಸಿದ ಮೇಲೆ ಅವುಗಳ ಮಾರಾಟದ ಪ್ರಮಾಣ ಹೆಚ್ಚುತ್ತಿರುವುದನ್ನು ಕಂಡು ನನಗೆ ಸಂತೋಷವಾಗಿದೆ. ಓದುಗರು ಬಯಸುವ ಪುಸ್ತಕಗಳನ್ನು ಅವರ ಕೈಗೆ ತಲಪುವಂತೆ ಮಾಡುವುದೇ ಮಸ್ತಕೋದ್ಯಮದ ಪ್ರಾಥಮಿಕ ಆಶಯ. ಈ ಉದ್ಯಮವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕಾಲಕಾಲಕ್ಕೆ ಬದಲಾಗುತ್ತಿರುವ ಓದುಗರ ಅಭಿರುಚಿಗೆ * ಸಂದಿಸುತ್ತ, ಆ ಕ್ಷೇತ್ರದಲ್ಲಿ ಬಹುವೇಗವಾಗಿ ಸಾಗುತ್ತಿರುವ ಪ್ರಕಾಶಕರ ನಡುವೆ ಕನ್ನಡ ಸರಸ್ವತಿಯ ಆರಾಧನೆ ಮಾಡುತ್ತಿದ್ದೇವೆಂದು ಭಾವಿಸುವುದರ ಜೊತೆಗೆ ಹೊಸಕಾಲದ ಅಗತ್ಯಕ್ಕೆ ಅನುಗುಣವಾಗಿ ಬದಲಾಗುವುದೇ ಜೀವಂತಿಕೆಯ ಲಕ್ಷಣ ಎಂದು * ಕನ್ನಡ ಸಾಹಿತ್ಯ ಪರಿಷತ್ತು ಪರಿಗಣಿಸಿದೆ. ಪುಂಡಲೀಕ ಹಾಲಂಬಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-೫೬೦೦೧೮ ರೂ. ೫೦/