SearchBrowseAboutContactDonate
Page Preview
Page 23
Loading...
Download File
Download File
Page Text
________________ 20 ಶ್ರಾವಕಜನದುಪವಾಸಂ ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗಜೀವಸ್ತುಕಥನದಿಂದು ದ್ಭಾವಿಸಿ ಕವಿಭಾಳಲೋಚನಂ ವಿರಚಿಸಿದಂ ಇತಿಹಾಸವೆಂಬ ವಿಮಳಾ ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾನ್ವಿತವಾಗಿರೆ ಕಥೆ ಬುಧಸಂ ತತಿಗಕ್ಷಯಸುಖಮನೀವುದೊಂದಚ್ಚರಿಯೇ ಪರವುದು ದುರಿತತಮಿಸ್ಸಂ ಪೊರೆಯೇರುವುದಮಳದೃಷ್ಟಿಕುವಳಯವನಮಾಚರಿಪ ಜನಕ್ಕೆ ಯಶೋಧರ ಚರಿತ ಕಥಾಶ್ರವಣವೆಂಬ ಚಂದ್ರೋದಯದೊಳ್ ಶೀರ್ಷಾಭರಣಂ ಧರೆಗು ತ್ಕರ್ಷ ವಿಳಾಸನದ ಭೂಮಿ ಸಕಳಜನಕ್ಕಂ ಹರ್ಷಮನೀವುದು ಭಾರತ ವರ್ಷದಯೋಧ್ಯಾ ಸುವಿಷಯದೊಳ್ ರಾಜಪುರಂ ಮೇರು ನೃಪ ಪ್ರಾಸಾದಂ ವಾರಿಧಿ ನಿಜಪರಿಖೆ ವಜ್ರವೇದಿಕೆ ತತ್ತಾಕಾರಂ ಜಂಬೂದ್ವೀಪಾ ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ ಯಶೋಧರ ಚರಿತೆ ೨೪ ೨೫ ೨೬ 92 ೨೮ 20 ಆಶ್ಚರ್ಯಪಡಬೇಕಾದುದೇ ಇಲ್ಲ. ೨೪, ಜೀವದಯಾಷ್ಟಮಿ (ನವರಾತ್ರಿಯ ಅಷ್ಟಮಿ)ಯ ಸಂದರ್ಭದಲ್ಲಿ ಶ್ರಾವಕಜನರು ಉಪವಾಸವನ್ನು ಕೈಕೊಳ್ಳುತ್ತಾರೆ. ಅವರಿಗೆ ಕಿವಿಗಳ ಮುಖಾಂತರ ಪಾರಣೆಯಾಗುವ ಸಲುವಾಗಿ ಈ ಒಂದು ಕಥೆಯಿರಲಿ ಎಂಬೆಣಿಕೆಯಿಂದ ಜನ್ನನು ಈ ಕೃತಿಯನ್ನು ರಚಿಸಿದ್ದಾನೆ. ೨೫. ಇತಿಹಾಸವೆಂಬುದು ನಿರ್ಮಲವಾದ ಅಮೃತದ ವಾರಿಧಿ. ಅದರಲ್ಲಿ ಹುಟ್ಟಿದ ಕಲ್ಪವೃಕ್ಷದಂತೆ ಈ ಕಥೆ ರಸಾತ್ಮಕವಾಗಿ ಹುಟ್ಟಿದೆ. ಇದು ಬುಧಸಮುದಾಯಕ್ಕೆ ಅಪಾರವಾದ ಸುಖವನ್ನು ಕೊಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ೨೬. ಯಶೋಧರಚರಿತವನ್ನು ಆಲಿಸುವುದೆಂದರೆ ಚಂದ್ರೋದಯವಾದಂತೆ. ಆಗ ಕತ್ತಲೆಯಂತಿರುವ ಪಾಪವೆಲ್ಲ ತೊಲಗುತ್ತದೆ. ಧರ್ಮದಲ್ಲಿ ನಿಶ್ಚಲವಾದ ನಂಬುಗೆಯೇ ನಿರ್ಮಲವಾದ ಸಮ್ಯಷ್ಟಿ, ಜೀವದಯಾಷ್ಟಮಿಯನ್ನು ಆಚರಿಸುವ ಜನರಿಗೆ ಈ ಸಮ್ಯಗ್ದರ್ಶನವು ಈ ಕಥೆಯನ್ನು ಕೇಳಿದಾಗ ನೈದಿಲೆಗಳಂತೆ ತಾನಾಗಿಯೇ ವಿಕಾಸಗೊಳ್ಳುತ್ತದೆ. ೨೭. ಭರತಖಂಡದ ಅಯೋಧ್ಯಾ ದೇಶಕ್ಕೆ ರಾಜಪುರವೇ ರಾಜಧಾನಿ, ಅದು ಇಡೀ ಲೋಕಕ್ಕೆ ಒಂದು ಶಿರೋಭೂಷಣದಂತೆ ಶೋಭಿಸುತ್ತಿತ್ತು. ಅಲ್ಲಿ ಮೇಲು ಮಟ್ಟದ ಸೊಬಗು ನೆಲೆನಿಂತು ಎಲ್ಲ ಜನರಿಗೂ ಸಂತೋಷವನ್ನು ಕೊಡುತ್ತಿತ್ತು. ೨೮. ಅರಸನ ಅರಮನೆ ಮೇರುವಿನಂತೆ ಉನ್ನತವಾಗಿಯೂ ಭವ್ಯವಾಗಿಯೂ ಮೆರೆಯುತ್ತದೆ ಆ ನಗರದಲ್ಲಿ. ಕಡಲು ಅದಕ್ಕಿರುವ ಕಂದಕದಂತೆ ಶೋಭಿಸುತ್ತದೆ. ವಜ್ರವೇದಿಕೆಯೇ ಅದರ
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy