________________
ಯಶೋಧರ ಚರಿತೆ
ಅಮೃತಮತಿಗೆ ತನ್ನ ವ್ಯಭಿಚಾರವು ರಾಜನಿಗೆ ಗೊತ್ತಾಯಿತೆಂದು ತಿಳಿದುಬಂದಾಗ ಅವನ ಕೋಲೆಗೂ ಮುಂದಾಗುತ್ತಾಳೆ; ವಿಷವಿಕ್ಕಿ ಕೊಲ್ಲುತ್ತಾಳೆ. ತನ್ನ ಕಾಮಕ್ಕೆ ಅಡ್ಡಿಯಾಗುವವನ ಮೇಲೆ ಕ್ರೋಧವುಂಟಾದುದು ಇದಕ್ಕೆ ಕಾರಣ. ಅನಂತರ ತನ್ನ ಅರಮನೆಯಲ್ಲೇ ಆ ಬದಗನನ್ನು ಇರಿಸಿಕೊಳ್ಳುತ್ತಾಳೆ. ಇದನ್ನು ಆಕೆಯ ಮಗ ಯಶೋಮತಿ ಏಕೆ ತಡೆಯಲಿಲ್ಲವೋ ತಿಳಿಯುವುದಿಲ್ಲ. ಅವನಿಗೆ ಗೊತ್ತಿಲ್ಲದೆ ಇದು ನಡೆದುದೂ ಅಲ್ಲ. ಸಾಮಾನ್ಯಜನರೂ ಅಮೃತಮತಿಯ ನೀಚವರ್ತನೆಯ ಕುರಿತು ಆಡಿಕೊಳ್ಳುತ್ತಿದ್ದರೆಂಬುದರಿಂದ ಇದು ಸಿದ್ದವಾಗುತ್ತದೆ. ಅದೂ ಅಲ್ಲದೆ, “ತೊನ್ನನ ಕೂಟದಿಂದ ನಿನಗೂ ತೊನ್ನು ಉಂಟಾಗಿದೆ; ಈ ರೋಗಕ್ಕೆ ಮದ್ಯಮಾಂಸಗಳು ವಿಷ'ವೆಂದು ಹೇಳಿದರೂ ಅವಳು ಮಗನ ಮಾತನ್ನು ಮನ್ನಿಸಲಿಲ್ಲವಂತೆ! ಎನ್ನುವಾಗ ಅವನಿಗೂ ಅವಳನ್ನು ತಡೆಯುವ ಅಥವಾ ಅವಳನ್ನು ದಂಡಿಸುವ ಸಾಮರ್ಥ್ಯವಿರಲಿಲ್ಲವೆ? ಅಥವಾ ಅವನೂ ಯಶೋಧರನಂತೆ 'ಮಾತೃದೇವನಾಗಿ ಉಳಿದುಕೊಂಡನೆ ? ಹೇಗೆ ಹೇಳುವುದು ?
ಅಂತೂ ಅಮೃತಮತಿ ಬರಿಯ ಕಾಮುಕ ಸ್ತ್ರೀ; ಅವಳಿಗೆ ಬದಗನ ಇಂಪಾದ ಹಾಡೇ ಮರುಳುಗೊಳಿಸುವ ಆಕರ್ಷಣೆಯಾಯಿತು. ಹಾಗೆ ಹುಚ್ಚಾದ ಅವಳು ತಾನಾಗಿ “ತಿಳಿ'ಯಾಗಲಿಲ್ಲ; ಉಳಿದವರು 'ತಿಳಿ'ಯಾಗಿಸಲು ಯತ್ನಿಸಲಿಲ್ಲ; ಯತ್ನಿಸಿದ್ದಿರ ಬಹುದಾದರೂ ಅವರಾರೂ ಸಫಲರಾಗಲಿಲ್ಲ. ಅವಳು ಕಾಮದ ಕೈಗೊಂಬೆಯಾಗಿ, ಅದಕ್ಕೆ ಅಡ್ಡಿಯಾಗಬಹುದಾಗಿದ್ದ ಗಂಡನನ್ನೂ ಅತ್ತೆಯನ್ನೂ ವಿಷವಿಕ್ಕಿ ಕೊಲ್ಲುವ ಕ್ರೋಧಕ್ಕೆ ಒಳಗಾಗಿ, ಬದುಕಿದ್ದಾಗಲೇ ಕುಷ್ಠದಿಂದ ಕೊಳೆತು, ಸತ್ತಮೇಲೆ ಧೂಮಪ್ರಭೆಯೆಂಬ ಐದನೆಯ ನರಕದಲ್ಲಿ ಮುಳುಗಿದಳು.
- ಬದಗನನ್ನು ಒಲಿದು ಅವಳು ಅವನನ್ನೆ ಅಂತ್ಯಕಾಲದವರೆಗೂ ಬಿಡದೆ ಆರಾಧಿಸಿದ ಕಾರಣ ಅವಳ ಪ್ರಣಯ ಶುದ್ಧಪ್ರಣಯವೆನ್ನಬಹುದೆ ? ಹಾಗೆ ಹೇಳಬಹು ದೆಂದಾದರೆ ಅಧರ್ಮದ ವರ್ತನೆಯೆಲ್ಲವನ್ನೂ ಸರಿಯೆಂದು ಸಮರ್ಥಿಸುವುದಕ್ಕೆ ಸಾಧ್ಯವಾಗದೆ ? ಹೋಗಲಿ. ಅವನಾದರೂ ಅವಳನ್ನು ಒಲಿದಿದ್ದನೆ? ಇಲ್ಲ; ಒದೆದಿದ್ದ! ವಾಲ್ಮೀಕಿರಾಮಾಯಣದ ಸುಂದರಕಾಂಡದಲ್ಲಿ ಈ ಮಾತು ಬರುತ್ತದೆ:
ಅಕಾಮಾಂ ಕಾಮಯಾನಸ್ಯ ಶರೀರಶುಪತವ್ಯತೇ | ಇಚ್ಛತಾಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ 11
. (ವಾಲ್ಮೀಕಿ ರಾಮಾಯಣ : ಸರ್ಗ ೨೨, ಶ್ಲೋ ೪೨) (ಕಾಮವಿಲ್ಲದವಳನ್ನು ಕಾಮಿಸುವುದರಿಂದ, ದೇಹಕ್ಕೆ ಸಂಕಟವೇ ಹೊರತು ಸುಖವಿಲ್ಲ. ತಾನಾಗಿ ಇಷ್ಟಪಟ್ಟು ಕಾಮಿಸಿ ಬಂದವಳನ್ನು ಆದರಿಸುವುದರಿಂದ ಸಂತೋಷವೂ ಹೆಚ್ಚು
ಅಮೃತಮತಿ ತಾನಾಗಿ ಕಾಮಿಸಿ ಬಂದಳೆಂದು ಅಷ್ಟವಂಕನು ಅವಳನ್ನು ಆದರಿಸಲಿಲ್ಲವೆಂದಾದಮೇಲೆ ಅವನಿಗೆ ಸಂತೋಷವೂ ಇದ್ದಿರಲಾರದು.