SearchBrowseAboutContactDonate
Page Preview
Page 38
Loading...
Download File
Download File
Page Text
________________ ಎರಡನೆಯ ಅವತಾರ ಎಳದುಂಬಿ ಸುರಿದು ಸುಟ್ಟುರೆ ಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮು ಚಳಿಸಿದುವು ನೀಲಮುತ್ತಿನ ಬೆಳಗಿನ ಕುಡಿ ರಾಗರಸದಿನಂಕುರಿಸುವವೊಲ್ ಅಮೃತಮತಿ ಸಹಿತನಾ ಚಂ ದ್ರಮತಿಯ ಸುತನಂತು ಮೆಆವ ಧವಳಾರದೊಳ ಭ್ರಮುವೆರಸಭಗಜಂ ವಿ ಭ್ರಮದಿಂದಂ ಸಜ್ಜರಕ್ಕೆ ಬಂದವೊಲೆಸೆಗುಂ ವರಮಂಚ ಮಣಿರುತ್ತಿದ್ಧತ ಮರಾಳಿ ಕಾತೂಳತಳದೊಳ್ ತಾಮೆಸೆದ‌ ಸುರಚಾಪಚ್ಚವಿ ಸುತ್ತಿದ ಶರದಭ್ರದೊಳೆಸೆವ ಖಚರದಂಪತಿಗಳವೊಲ್ ನಡೆ ಸೋಂಕಿದ ಕಡೆಗಣ್ಣಳ ಕುಡಿವೆಳಗಿಂ ಬಿಡುವ ಬೆಮರೊಳಂ ಪದದೊಳಮೇಂ ತಡವಾದರೂ ಕೌಮುದಿ ಕ ಣ್ಣಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್ 22 ಕರಗಿ OG ೨೧ GG ೨೩ ಕರಿಯ ಬಣ್ಣದ್ದಾಗಿತ್ತು. ೨೦. ಅಲ್ಲೆಲ್ಲ ಕಸ್ತೂರಿಯ ಪುಡಿ, ಕರ್ಪೂರದ ದೂಳು ಹಬ್ಬಿಕೊಂಡಿತ್ತು. ಪರಿಮಳಕ್ಕೆ ಎರಗುವ ಎಳೆಯ ತುಂಬಿಗಳು ಅಲ್ಲಿ ಸುತ್ತೂ ಸುಳಿಯುತ್ತಿದ್ದುವು. ಆಗ ಏಳುತ್ತಿದ್ದ ಸುಳಿಗಾಳಿಯಲ್ಲಿ ಆ ಪುಡಿದೂಳೆಲ್ಲ ಮೇಲೆ ಹಾರುತ್ತಿತ್ತು. ಇದನ್ನು ಕಾಣುವಾಗ ನೀಲ ಮುತ್ತಿನ ಬೆಳಕಿನ ಕುಡಿ ಪ್ರೇಮರಸದಿಂದ ಮೊಳಕೆಯೊಡೆಯುತ್ತಿರುವಂತೆ ಭಾಸವಾಗುತ್ತಿತ್ತು. ೨೧. ಹೀಗೆ ಶೋಭಿಸುವ ಆ ಧವಳಾಗಾರದಲ್ಲಿ ಚಂದ್ರಮತಿಯ ಮಗ ಯಶೋಧರನು ಅಮೃತಮತಿಯೊಂದಿಗೆ ಸೇರಿಕೊಂಡನು. ಅಭ್ರಮುವನ್ನು ಕೂಡಿಕೊಂಡು ಐರಾವತವು ಬಹು ಸಂಭ್ರಮದಿಂದ ಶಯ್ಯಾಗಾರಕ್ಕೆ ಬಂದಂತೆ ಈ ದಂಪತಿಗಳು ಕಾಣುತ್ತಿದ್ದರು. ೨೨. ರತ್ನಖಚಿತವಾದ ಚೆಲುವಿನ ಮಂಚದ ಕಾಂತಿ ಹಂಸತೂಲಿಕಾತಲ್ಪವನ್ನು ಇನ್ನಷ್ಟು ಸೊಗಸುಗೊಳಿಸಿತ್ತು. ಅದರ ಮೇಲೆ ಅವರಿಬ್ಬರೂ ಕುಳಿತಾಗ ಕಾಮನ ಬಿಲ್ಲಿನ ಕಾಂತಿ ಪಸರಿಸಿಕೊಂಡಿರುವ ಮೇಘಮಾಲೆಯ ಶರತ್ಕಾಲದ ನಿರ್ಮಲ ಮೇಲೆ ಮೆರೆಯುವ ಗಂಧರ್ವ ದಂಪತಿಗಳಂತೆ ಶೋಭಿಸುತ್ತಿದ್ದರು. ೨೩. ಒಬ್ಬರು ಇನ್ನೊಬ್ಬರನ್ನು ಒಲುಮೆಯಿಂದ ನೋಡುತ್ತಿದ್ದರು. ಅವರಿಬ್ಬರ ಕಟಾಕ್ಷದ ಬೆಳಕಿನ ಕುಡಿ ಪರಸ್ಪರರಿಗೆ ಅವರಿಬ್ಬರೂ ಬೆವರತೊಡಗಿದರು. ಚಂದ್ರಕಾಂತ ತಿಂಗಳ ಸೋಂಕಿ, ಮಣಿಯ ಬೊಂಬೆಗೆ ತಾಗಿದಾಗ ಅದು ಬೆಳಕು ನೀರು ಸುರಿಸುವಂತೆ.
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy