Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 15
________________ ಅಂತಃಕರಣದ ಸ್ವರೂಪ ಮಾಡುತ್ತಾರೆ? ಯಾವುದನ್ನು Control ಮಾಡಬೇಕಾಗಿಲ್ಲವೋ, ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ ಮತ್ತು ಯಾವುದನ್ನು ನಿಯಂತ್ರಿಸಬೇಕು ಎಂಬುದನ್ನು ತಿಳಿದುಕೊಂಡಿಲ್ಲ. ಇದರಲ್ಲಿ ಬಡಪಾಯಿ ಮನಸ್ಸಾದರೂ ಏನು ಮಾಡುತ್ತದೆ? ನಮ್ಮ ಬಳಿಗೆ ಪ್ರತಿನಿತ್ಯ ಒಬ್ಬ ಲೇಖಕರು ಬರುತ್ತಿದ್ದರು, ಅವರು ನಮ್ಮನ್ನು ಏನು ಕೇಳಿದರೆಂದರೆ, 'ನನ್ನ ಮನಸ್ಸಿನ ಶಸ್ತ್ರಚಿಕಿಸ್ಥೆ (Operation) ಮಾಡಿಬಿಡಿ' ಎಂದು. ಆಗ ನಾನು, 'ಕೊಡಿ ಈಗಲೇ ಮಾಡಿಬಿಡುತ್ತೇನೆ. ಆದರೆ ನಮಗೆ ಸಾಕ್ಷಿಗಾರನ ಹಸ್ತಾಕ್ಷರ (Witness) ಬೇಕಾಗುತ್ತದೆ. ಎಂದು ಹೇಳಿದೆ. ಅವರು ಕೇಳಿದರು, 'Witness ಯಾಕೆ ಬೇಕು?' ನಾನು ಹೇಳಿದೆ, 'ಶಸ್ತ್ರಚಿಕಿಸ್ಥೆ ಮಾಡಿದ ಮೇಲೆ ಏನಾದರು ತೊಂದರೆಯಾದರೆ ನನ್ನ ಕುತ್ತಿಗೆ ಹಿಡಿಯುತ್ತೀರಿ. ಅದಕ್ಕೆ ಅವರು, 'ಅರೇ, ಅದರಿಂದ ಏನು ತೊಂದರೆಯಾಗುತ್ತದೆ? ಮನಸ್ಸು ಹೊರಟುಹೋದ ಮೇಲೆ ಎಷ್ಟೊಂದು ಆನಂದ ಮತ್ತು ಎಷ್ಟೊಂದು ಮೋಜು-ಮಜಾ ಮಾಡಬಹುದಲ್ಲ?' ಎಂದರು. ನಾನು ಹೇಳಿದೆ, 'ಹಾಗಲ್ಲ, ನಾನು ಮೊದಲೇ ಹೇಳಿಬಿಡುತ್ತೇನೆ ಏನೆಂದರೆ, ನಾನು ಮನಸ್ಸನ್ನು Operation ಮಾಡಿ ತೆಗೆದುಬಿಟ್ಟರೆ, ಆಮೇಲೆ ನೀವು Absent-Minded (ಮನಸ್ಸೇ ಇಲ್ಲದವರ) ಹಾಗೆ ಆಗಿಬಿಡುತ್ತೀರಿ, ಇದು ನಿನಗೆ ಒಪ್ಪಿಗೆಯೇ?' ಆಗ ಅವರು, 'ಇಲ್ಲ ನನಗೆ Absent-Minded ಆಗುವುದುಬೇಡ' ಎಂದು ಹೇಳಿದರು. ಅವರಿಗೆ, ನಾವು ಎನ್ನನ್ನು ಹೇಳಬಯಸುತ್ತಿದ್ದೇವೆ ಎನ್ನುವುದು ಈಗ ಅರ್ಥವಾಯಿತು. ಮನಸ್ಸನ್ನು ಅಂತ್ಯ ಮಾಡಬೇಕಾದ ಅವಶ್ಯಕತೆ ಏನೂ ಇಲ್ಲ. ಮನಸ್ಸಿಗೆ ಯಾವ ರೀತಿಯಲ್ಲೂ ತೊಂದರೆ ಕೊಡುವುದು ಬೇಡ, ಅದನ್ನೆಂದೂ ಅಲುಗಾಡಿಸುವುದು ಬೇಡ, ಮನಸ್ಸನ್ನು ಯಾವಾಗ ಅಲುಗಾಡಿಸಬೇಕೆಂದರೆ, ಅದು ತಳಮಳಗೊಂಡಾಗಷ್ಟೇ ಅದನ್ನು ಏಕಾಗ್ರತೆಗೆ ತರಲು ಪ್ರಯತ್ನಿಸಬೇಕಾಗುತ್ತದೆ. ಯಾವ ಆತಂಕವೂ ಇಲ್ಲದಾಗ ಏಕಾಗ್ರತೆಗೆ ತರಬೇಕಾದ ಅವಶ್ಯಕತೆಯೇ ಇಲ್ಲ. ಆತ್ಮಕ್ಕೆ ಮರಣವೇ ಇರುವುದಿಲ್ಲ, Relative ನಾಶವಾಗುತ್ತದೆ. ಮನಸ್ಸು, Real ಆಗಿದೆಯೋ ಅಥವಾ Relative ಆಗಿದೆಯೋ? ಪ್ರಶ್ಯಕರ್ತ: ಮನಸ್ಸು, ದೇಹದೊಂದಿಗಿರುವಾಗ 'Relative' ಆಗಿದೆ ಹಾಗೂ ಅದು ಆತ್ಮದೊಂದಿಗೆ ಇದ್ದಾಗ, 'Real' ಆಗಿದೆ.

Loading...

Page Navigation
1 ... 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54