Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 16
________________ ಅಂತಃಕರಣದ ಸ್ವರೂಪ ದಾದಾಶ್ರೀ: ಈ ಎರಡೂ ನಿಜವೆ. ಮನಸ್ಸು, ಶರೀರದೊಂದಿಗೆ ಇರುವುದನ್ನು ನಾವು 'ದ್ರವ್ಯ ಮನಸ್ಸು' ಎಂದು ಕರೆಯುತ್ತೇವೆ ಹಾಗೂ ಮನಸ್ಸು, ಆತ್ಮದೊಂದಿಗೆ ಇದ್ದರೆ, ಅದನ್ನು 'ಭಾವ-ಮನಸ್ಸು' ಎಂದು ಕರೆಯುತ್ತೇವೆ. ನಾವು 'ಭಾವ-ಮನಸ್ಸನ್ನು' Operation (ಆತ್ಮಸಾಕ್ಷಾತ್ಕಾರ) ಮಾಡಿ ತೆಗೆದು ಬಿಡುತ್ತೇವೆ. ಯಾವುದು ಆತ್ಮದೊಂದಿಗಿರುವ ಮನಸ್ಸಿದೆಯೋ, ಅದರ ತಂದೆ ಮತ್ತು ತಾಯಿಯ ಹೆಸರೇನು? ಅಭಿಪ್ರಾಯವೇ ಮನಸ್ಸಿನ ತಂದೆ ಹಾಗು ಭಾಷೆಯೇ ಮನಸ್ಸಿನ ತಾಯಿ (Opinion is the Father and Language is the Mother of the Mind.). ಪ್ರಶ್ಯಕರ್ತ: ಹಾಗಾದರೆ, ಆತ್ಮದ ತಂದೆ ಹಾಗು ತಾಯಿ ಯಾರು (Then Who is the Father and Mother of the Soul)? ದಾದಾಶ್ರಿ: ತಂದೆಯು ಇಲ್ಲ, ತಾಯಿಯು ಇಲ್ಲ, ಜನನವೂ ಇಲ್ಲ, ಮರಣವು ಕೂಡಾ ಆತ್ಮಕ್ಕೆ ಇಲ್ಲ. ಎಲ್ಲಿ ಹುಟ್ಟು-ಸಾವು ಇದೆಯೋ, ಅಲ್ಲಿ ಮಾತ್ರ ತಂದೆ ಹಾಗು ತಾಯಿ ಇರುತ್ತಾರೆ (No Father, No Mother, No Birth, No Death Of The Soul. Where there is Death and Birth, Then there is Father and Mother). ಮನಸ್ಸನ್ನು ನಿಲ್ಲಿಸಬೇಕಿದ್ದರೆ ಅಭಿಪ್ರಾಯವನ್ನು ಇಟ್ಟುಕೊಳ್ಳಬೇಡಿ, ಆಗ ಮನಸ್ಸು ನಾಶವಾಗುತ್ತದೆ. ಪ್ರಶ್ಯಕರ್ತ: ನೀವು ಹೇಳಿದ ಹಾಗೆ ಮನಸ್ಸನ್ನು ನಾಶಗೊಳಿಸಿದರೆ, ನಮಗೆ ಮಾರ್ಗದರ್ಶನ ಮಾಡುವವರು ಯಾರು? ಮನಸ್ಸೇ ಇಲ್ಲವಾದಾಗ ಮಾರ್ಗದರ್ಶನ ಎಲ್ಲಿಂದ ಸಿಗುತ್ತದೆ? ನಮಗೆ ಮಾರ್ಗದರ್ಶನ (guide) ಮಾಡಲು ಮನಸ್ಸು ಬೇಕಲ್ಲವೇ? ದಾದಾಶ್ರೀ: ಆತ್ಮದೊಂದಿಗೆ ಇರುವ ಮನಸ್ಸು (Mind with Soul) 'ಭಾವ ಮನಸ್ಸು' ಅದನ್ನು ನಿರ್ಮೂಲನೆ ಮಾಡಲಾಗಿದೆ, ಆದರೆ ದೇಹದೊಂದಿಗಿರುವ ಮನಸ್ಸು (Mind with Body) 'ದ್ರವ್ಯ ಮನಸ್ಸು' ಹಾಗೆಯೇ ಇರುತ್ತದೆ. ದ್ರವ್ಯ ಮನಸ್ಸು, 'Discharge' ಆಗುವಂತಹ ಮನಸ್ಸು, ಅದು ಮಾತ್ರ ಉಳಿದಿರುತ್ತದೆ. ಹೊಸದಾಗಿ 'Charge' ಆಗುವುದು ಇರುವುದಿಲ್ಲ. ಶರೀರದ ಜೊತೆಯಲ್ಲಿ ಇರುವ ಮನಸ್ಸು, ಸ್ಕೂಲ ಮನಸ್ಸು. ಅದು ಕೇವಲ ವಿಚಾರವನ್ನಷ್ಟೇ ಮಾಡುತ್ತದೆ. ಮಾವಿನ ಹಣ್ಣು ತಿನ್ನುವಾಗ ಅದು ಹುಳಿಯಾಗಿದ್ದರೆ ಅದನ್ನು ಪಕ್ಕಕ್ಕೆ ಇಟ್ಟುಬಿಡಿ,

Loading...

Page Navigation
1 ... 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54