________________
ಅಂತಃಕರಣದ ಸ್ವರೂಪ ಅಭಿಪ್ರಾಯ ಮೂಡುವುದೋ, ಆಗ ಭಾಷೆಗೆ ಹೇಳಲೇಬೇಕಾಗಿ ಬರುತ್ತದೆ. ಅಭಿಪ್ರಾಯವು ಸ್ಥಗಿತವಾದರೆ ಆಗ ಮನಸ್ಸು ಕೊನೆಗೊಳ್ಳುತ್ತದೆ, ಎಂಬುದು ನಿಮ್ಮ ಅರಿವಿಗೆ ಬಂತಲ್ಲವೇ?
ಒಬ್ಬ ಜೈನ ಹುಡುಗನಿಗೆ, ನಿನಗೆ ಮಾಂಸಾಹಾರದ ವಿಚಾರ ಬರುತ್ತದೆಯೇ? ಎಂದು ಕೇಳಿದರೆ, ಅದಕ್ಕೆ ಅವನು, 'ಎಂದೂ ನನಗೆ ಬರುವುದೇ ಇಲ್ಲ' ಎಂದು ಹೇಳುತ್ತಾನೆ. ಹಾಗೆ ಇನ್ನೋರ್ವ ಮುಸ್ಲಿಂ ಹುಡುಗನಿಗೆ ಕೇಳಿದರೆ, 'ನಮಗೆ ಅದು ಪ್ರತಿ ನಿತ್ಯದ ಆಹಾರವಾಗಿದೆ' ಎನ್ನುತ್ತಾನೆ. ಜೈನ ಹುಡುಗ ಹಿಂದಿನ ಜನ್ಮದಲ್ಲಿ ಮಾಂಸಾಹಾರದ ಅಭಿಪ್ರಾಯವೇ ಮಾಡದ ಕಾರಣ ಅವನ ಮನಸ್ಸಿನಲ್ಲಿ ಆ ವಿಚಾರವೇ ಬರುವುದಿಲ್ಲ. ಅದೇ ರೀತಿ ಮುಸ್ಲಿಂ ಹುಡುಗನಿಗೆ, ಅವನ ಹಿಂದಿನ ಜನ್ಮದ ಅಭಿಪ್ರಾಯದ ಅನುಸಾರವಾಗಿ ಈಗಿನ ಮನಸ್ಸಾಗಿದೆ. ಈ ಜನ್ಮದಲ್ಲಿ ಇಂತಹ ಅಭಿಪ್ರಾಯಗಳನ್ನು ತೆಗೆದುಹಾಕಿದರೆ, ಮುಂದಿನ ಜನ್ಮದಲ್ಲಿ ಮನಸ್ಸು, ಅಂತಹ ವಿಚಾರಗಳಿಲ್ಲದೆ, ಸ್ವಚ್ಛವಾಗಿರುತ್ತದೆ.
ಒಂದು ವೇಳೆ, ಯಾರಿಗಾದರು ಹೊಡೆಯಲೇ ಬೇಕೆಂಬ ಅಭಿಪ್ರಾಯವು ನಿಮಗೆ ಇದ್ದರೆ, ಆಗ ಮನಸ್ಸು ಮುಂದಿನ ಜನ್ಮದಲ್ಲಿ ಏನು ಮಾಡುತ್ತದೆ? 'ಅವನಿಗೆ ಹೊಡೆಯಲೇ ಬೇಕು' ಎಂದು ಹೇಳುತ್ತದೆ. ಯಾವ ಅಭಿಪ್ರಾಯ ಇತ್ತೋ, ಅದರಂತೆ ಈಗಿನ ಮನಸ್ಸಿನಲ್ಲಿ ವಿಚಾರವು ಉಂಟಾಗುತ್ತದೆ ಮತ್ತು ಅದು ಈಗ, 'ಹೊಡೆಯಿರಿ, ಹೊಡೆಯಿರಿ' ಎಂದು ಹೇಳುತ್ತದೆ. ನಂತರ ನೀವೇನೆಂದು ದೂಷಿಸುವಿರಿ, 'ನಮ್ಮ ಮನಸ್ಸು ನಮ್ಮ ವಶದಲ್ಲಿ ಇರುವುದಿಲ್ಲ' ಎಂದು. ಮನಸ್ಸನ್ನು ಹೇಗೆ ವಶಪಡಿಸಲಾಗುತ್ತದೆ? ಸ್ವತಃ ನಿಮ್ಮ ಆಧಾರದಿಂದ ಮನಸ್ಸು ಉದ್ಭವಿಸಿದೆ. ನಮ್ಮ ಮಾತು ನಿಮಗೆ ಅರ್ಥವಾಗುತ್ತಿದೆಯೇ?
ಪ್ರಶ್ಯಕರ್ತ: ಈಗ ಯಾವ ಅಭಿಪ್ರಾಯವನ್ನು ಮಾಡಿದ್ದೇವೋ, ಅದರ ಪರಿಣಾಮ ಮುಂದಿನ ಜನ್ಮದಲ್ಲಿ ಬರುತ್ತದೆ. ಆದರೆ ಇದಕ್ಕೆ ಮೊದಲೇ ಮಾಡಿರುವಂತಹ ಅಭಿಪ್ರಾಯಗಳ ಬಗ್ಗೆ ಏನು ಮಾಡುವುದು?
ದಾದಾಶ್ರೀ: ಅದರ ಫಲಸ್ವರೂಪವಾಗಿಯೇ ಈಗಿನ ಮನಸ್ಸು. ಈಗಿನ ಮನಸ್ಸನ್ನು ನೀವು ಮೇಳೆಸಿ ನೋಡಿದರೆ ತಿಳಿಯುತ್ತದೆ, ಹಿಂದಿನ ಜನ್ಮದಲ್ಲಿ ಏನೆಲ್ಲಾ ಅಭಿಪ್ರಾಯಗಳನ್ನು ಮಾಡಲಾಗಿತ್ತು ಎಂದು ವಿಚಾರಗಳು ಬಂದಾಗ ಬರೆದಿಟ್ಟುಕೊಂಡು, ಯಾವುದೆಲ್ಲಾ ಅಭಿಪ್ರಾಯಗಳನ್ನು ಮಾಡಲಾಗಿತ್ತೆಂದು ನೋಡಿ ಹಾಗೂ ಈಗ ಅಂತಹ ಅಭಿಪ್ರಾಯಗಳನ್ನೆಲ್ಲಾ ಮುರಿದುಹಾಕುವುದರಿಂದ, ಮನಸ್ಸು ಅಂತ್ಯವಾಗಿ ಬಿಡುತ್ತದೆ. ನಮ್ಮ (ಜ್ಞಾನಿ) ಮನಸ್ಸು ಅಂತ್ಯಗೊಂಡಿದೆ.