Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 47
________________ 39 ಅಂತಃಕರಣದ ಸ್ವರೂಪ ರಾಗ-ದ್ವೇಷಗಳಿಂದ ಮುಕ್ತರಾಗಲು ಧ್ಯಾನ ಮಾಡಬೇಕಾಗಿಲ್ಲ, ಕೇವಲ ವಿತರಾಗ ವಿಜ್ಞಾನವನ್ನು ತಿಳಿಯಬೇಕಾಗಿದೆ. ಅಹಂಕಾರವು ವಿಲಯವಾಗುವುದು ಹೇಗೆ? ನಿಮಗೆ ಅಶಾಶ್ವತ (Temporary) ಸಮಾಧಾನ ಬೇಕೋ ಅಥವಾ ಶಾಶ್ವತ (Permanent) ಸಮಾಧಾನ ಬೇಕೋ? ಪ್ರಶ್ಯಕರ್ತ: ಶಾಶ್ವತವಾದ (Permanent) ಸಮಾಧಾನ ಬೇಕು. ದಾದಾಶ್ರೀ: ಹಾಗಿದ್ದರೆ 'ನಾನು ಚಂದುಭಾಯ್' ಎಂದುಕೊಂಡು ಎಲ್ಲಿಯವರೆಗೆ ನಡೆಸುವಿರಿ? ಅದರ ವಿಶ್ವಾಸದ ಮೇಲೆ ಎಷ್ಟು ಸಮಯದವರೆಗೆ ನಡೆಸುವಿರಿ? ಈ ಹೆಸರನ್ನು ಹೇಗೆ ನಂಬುವುದು? ದೇಹವನ್ನು ಹೇಗೆ ನಂಬುವುದು? ನಾವು ಸ್ವತಃ ಯಾರು, ಎನ್ನುವುದರ ಶೋಧನೆಯನ್ನು ನಡೆಸಬೇಕಲ್ಲವೇ? ಅದನ್ನು ತಿಳಿದುಕೊಳ್ಳಬೇಕಲ್ಲವೇ? ಈ ಜ್ಞಾನವನ್ನು ಪಡೆದುಕೊಳ್ಳುವುದರಿಂದ ವ್ಯವಹಾರ ವೈವಾಟು ಈಗ ನಡೆಯುವುದಕ್ಕಿಂತಲೂ ಉತ್ತಮವಾಗಿ ನಡೆಯುತ್ತದೆ. ಅಲ್ಲದೆ, ಈಗ ನಡೆಸುತ್ತಿರುವ ವ್ಯವಹಾರದಲ್ಲಿ ಬಹಳಷ್ಟು ನಷ್ಟವು ಉಂಟಾಗುತ್ತಿದೆ, ಇದನ್ನು ಮಾಡುತ್ತಿರುವವರು ಯಾರು? ಪ್ರಶ್ಯಕರ್ತ: ಈ ಅಹಂಕಾರವೇ (Egoism) ನಷ್ಟವನ್ನು ಉಂಟುಮಾಡುವುದಾಗಿದೆ ಎಂದು ಪ್ರತಿಯೊಂದು ಹಂತದಲ್ಲೂ ಅನುಭವಕ್ಕೆ ಬರುತ್ತದೆ. ದಾದಾಶ್ರೀ: ಹೌದು, ಅದಕ್ಕಾಗಿಯೇ ನಾವು ಅಹಂಕಾರವನ್ನು ತೆಗೆದುಬಿಡುತ್ತೇವೆ. ನಂತರ ಈ ನಷ್ಟ ಪಡಿಸುವವನು ಹೊರಟುಹೋಗುತ್ತಾನೆ ಹಾಗೂ ಅವನೊಂದಿಗೆ ಎಲ್ಲಾ ನಿರ್ಬಲತೆಯು (weakness) ಕೂಡಾ ಹೊರಟುಹೋಗುತ್ತವೆ. ಎಲ್ಲಾ ನಿರ್ಬಲತೆಗಳು (weakness) ಅಹಂಕಾರದಿಂದಾಗಿದೆ. ಆದುದರಿಂದ ಈ ಅಹಂಕಾರವು ಹೊರಟುಹೋದರೆ ಮತ್ತೆ ನಿರ್ಬಲತೆಯೂ (weakness) ಹೊರಟುಹೋಗುತ್ತದೆ. ನಂತರ 'ಚಂದುಭಾಯ್ ಯಾರು? ಹಾಗೂ ನೀನು ಯಾರು?' ಎನ್ನುವುದರ ಭೇದವು ತಿಳಿಯಲ್ಪಡುತ್ತದೆ. ಪ್ರಶ್ಯಕರ್ತ: ಆತ್ಮಸಾಕ್ಷಾತ್ಕಾರ (Self-Realisation) ಸಮೀಪಕ್ಕೆ ಹೋಗಬೇಕಾದರೆ 'ಅಹಂ' ನಷ್ಟವಾಗಬೇಕಲ್ಲವೇ?

Loading...

Page Navigation
1 ... 45 46 47 48 49 50 51 52 53 54