________________
ಅಂತಃಕರಣದ ಸ್ವರೂಪ ವಿಚಾರವನ್ನು ಮಾಡುತ್ತಿರುವಾಗಲೇ, ಚಿತ್ತವು ಅಲ್ಲಿಗೆ ಹೋಗಿಬಿಡುತ್ತದೆ. ಎಲ್ಲವನ್ನು ನೋಡುವುದನ್ನು 'ಚಿತ್ತ'ವೆಂದು ಕರೆಯಲಾಗುತ್ತದೆ, ಆದರೆ ಅದು ಅಶುದ್ದ ಚಿತ್ತವಾಗಿದೆ. ಅದು ಶುದ್ಧವಾಗಿ ಬಿಟ್ಟರೆ ಎಲ್ಲಾ ಕಾಮನೆಗಳು ಪೂರ್ಣಗೊಂಡು, 'ಸಚ್ಚಿದಾನಂದ' ಸ್ವರೂಪವಾಗಿಬಿಡುತ್ತದೆ.
ಸಚ್ಚಿದಾನಂದ ಅನ್ನುವುದು ಎಲ್ಲದರ ಸಾರವಾಗಿದೆ(extract), ಯಾವ ಆತ್ಮ ಅನ್ನುವುದಿದೆಯೋ ಅದು ಸಚ್ಚಿದಾನಂದವೇ ಆಗಿದೆ ಹಾಗೂ ಭಗವಂತ ಎಂದು ಯಾವುದನ್ನು ಹೇಳುತ್ತೇವೋ ಅದೂ ಸಹ ಸಚ್ಚಿದಾನಂದವೇ ಆಗಿದೆ. 'ಸಚ್ಚಿದಾನಂದ' ಎನ್ನುವಲ್ಲಿ 'ಸತ್' ಇದೆ. ಮನುಷ್ಯನು ಯಾವ ಜಗತ್ತಿನ ವಸ್ತುಗಳನ್ನು ಪಂಚೇಂದ್ರಿಯಗಳಿಂದ ನೋಡುತ್ತಾನೋ, ಅದು ಸತ್ ಅಲ್ಲ. ಯಾವುದು ಶಾಶ್ವತವಾಗಿದೆಯೋ (Permanent) ಅದನ್ನು 'ಸತ್' ಎಂದು ಹೇಳುತ್ತಾರೆ. ಈ ಎಲ್ಲಾ 'Relative'ಗಳು ತಾತ್ಕಾಲಿಕ ಹೊಂದಾಣಿಕೆಗಳಾಗಿವೆ (All This Relative are Temporary Adjustment) ಯಾವುದು Temporary ಇದೆಯೋ, ಅದನ್ನು ಸತ್ ಎಂದು ಹೇಳಲಾಗುವುದಿಲ್ಲ. ಚಿತ್ತ ಎಂದರೆ ಜ್ಞಾನ-ದರ್ಶನ; ಸತ್-ಚಿತ್ತ ಅಂದರೆ ನಿಜವಾದ ಜ್ಞಾನ ಹಾಗು ನಿಜವಾದ ದರ್ಶನವಾಗಿದೆ (Right Gnan and Right Darshan). ಯಾರು “Temporary'ಯನ್ನು ನೋಡುತ್ತಾರೋ, ಅದು ಅಶುದ್ಧ ಜ್ಞಾನ ಹಾಗು ಅಶುದ್ದ ದರ್ಶನವಾಗಿದೆ, ಅಂದರೆ ಅಶುದ್ದ ಚಿತ್ತವಾಗಿದೆ. ಚಿತ್ತ ಶುದ್ಧಿಯಾದರೆ ಕೆಲಸವಾದಂತೆ. ಚಿತ್ತ ಶುದ್ದಿ ಆಯಿತೆಂದರೆ, ಅದನ್ನೇ ಸತ್-ಚಿತ್ತವೆಂದು ಹೇಳಲಾಗುತ್ತದೆ; ಆ 'ಸತ್-ಚಿತ್ತದಿಂದಾಗಿ 'ಆನಂದ'ವು ಉಂಟಾಗುತ್ತದೆ. ಪ್ರಶ್ನಕರ್ತ: ಹಾಗಾದರೆ ಆನಂದದ ವ್ಯಾಖ್ಯಾನವೇನು? ದಾದಾಶ್ರೀ: ಜಗತ್ತಿನಲ್ಲಿನ ಸತ್ಯವೇನಿದೆ ಅದು 'ಸತ್' ಅಲ್ಲ. ವ್ಯವಹಾರದಲ್ಲಿ ನಡೆಯುವುದು ಲೌಕಿಕ ಸತ್ಯವಾಗಿದೆ. ವಾಸ್ತವಿಕತೆಯು ಅಲೌಕಿಕ ವಸ್ತುವಾಗಿದೆ. ಲೌಕಿಕದಲ್ಲಿ ವಾಸ್ತವಿಕತೆ ಇರುವುದಿಲ್ಲ. ವಾಸ್ತವಿಕತೆ ಎನ್ನುವುದು 'ಸತ್', ಅದು ಸತ್ಯವಲ್ಲ. 'ಸತ್' ಎಂದು ಯಾವುದನ್ನು ಹೇಳಲಾಗುತ್ತದೆಂದರೆ ಯಾವ ವಸ್ತು ನಿರಂತರವಾಗಿ ಹಾಗೂ ನಿತ್ಯವಾಗಿ ಇರುವುದೋ ಅದನ್ನು 'ಸತ್' ಎಂದು ಹೇಳಲಾಗುತ್ತದೆ. ಅನಿತ್ಯವನ್ನು ಸತ್ಯವೆಂದು ಹೇಳುತ್ತಾರೆ. ಜಗತ್ತಿನಲ್ಲಿನ ಸತ್ಯಅಸತ್ಯವು ಸಾಪೇಕ್ಷವಾಗಿದೆ. ನಿಮಗೆ ಯಾವುದು ಸತ್ಯ ಅನ್ನಿಸುತ್ತದೆಯೋ, ಅದು ಮತ್ತೊಬ್ಬರಿಗೆ ಅಸತ್ಯ ಎನ್ನಿಸಬಹುದು. ಆದರೆ, ಈ 'ಸತ್' ಎನ್ನುವುದು ಎಂದೂ ಬದಲಾಗುವುದೇ ಇಲ್ಲ. 'ಸತ್'