SearchBrowseAboutContactDonate
Page Preview
Page 196
Loading...
Download File
Download File
Page Text
________________ (७) सप्तभाषी आत्मसिद्धि 154 SAPTABHASHI ATMASIDDHI ಕ್ರೋಧಾದಿ ತರ್‌ತಮ್ಯತಾ, ಸರ್ಪಾದಿಕ ಮಾಂಯ್ | ಪೂರ್ವಜನ್ಮ ಸಂಸ್ಕಾರ್ ತೆ, ಜೀವ್ ನಿತ್ಯತಾ ತ್ಯಾಂಯ್ 167l ಹಾವು ಮೊದಲಾದ ಪ್ರಾಣಿಗಳಲ್ಲಿ ಕ್ರೋಧ ಮೊದಲಾದ ಪ್ರಕೃತಿಗಳ ವಿಶೇಷತೆಯು ಜನ್ಮತಃ ಕಾಣಲಾಗುತ್ತದೆ. ಈ ಗುಣಗಳ ಅಭ್ಯಾಸವನ್ನು ಆ ಪ್ರಾಣಿಗಳು ಈ ವರ್ತಮಾನಕಾಲದ ದೇಹದಲ್ಲಿ ಮಾಡಿರುವುದಿಲ್ಲ, ಆದರೂ ಆ ಗುಣಗಳು ಅವುಗಳಿಗೆ ಜನ್ಮದೊಡನೆ ಬಂದಿರುತ್ತವೆ. ಇದು ಪೂರ್ವಜನ್ಮದ ಸಂಸ್ಕಾರವಾಗಿದೆ. ಈ ಪೂರ್ವಜನ್ಮವು ಜೀವನ ನಿತ್ಯತೆಯನ್ನು ಸಿದ್ಧಮಾಡುತ್ತದೆ. ಆತ್ಮಾ ದ್ರವೇ ನಿತ್ಯ ಛೇ, ಪರ್ಯಾಯೇ ಪಲ್ಟಾಯ್ | ಬಾಳಾದಿ ವಯ್ ತ್ರನುಂ, ಜ್ಞಾನ್ ಏಕ್ ಥಾಯ್ I68|| ಆತ್ಮನು ವಸ್ತುರೂಪದಿಂದ ನಿತ್ಯನಾಗಿದ್ದಾನೆ. ಆದರೆ ಪ್ರತಿಸಮಯದಲ್ಲಿಯೂ ಜ್ಞಾನಾದಿ ಪರಿಣಾಮಗಳು ಬದಲಾಗುವುದರಿಂದ ಅವನ ಪರ್ಯಾಯದಲ್ಲಿಯೂ ಪರಿವರ್ತನವು ಉಂಟಾಗುತ್ತದೆ. ಹೇಗೆಂದರೆ ಸಮುದ್ರದಲ್ಲಿ ಪರಿವರ್ತನೆಯು ಆಗುವುದಿಲ್ಲ. ಆದರೆ ಕೇವಲ ತೆರೆಗಳಲ್ಲಿ ವ್ಯತ್ಯಾಸವಾಗುತ್ತದೆ. ಅದರಂತೆ ಉದಾಹರಣೆಗಾಗಿ ಈ ರೀತಿ ಹೇಳಬಹುದು. ಬಾಲ, ಯುವಾ, ವೃದ್ದಗಳೆಂದಿರುವ ಮೂರು ಅವಸ್ಥೆಗಳು ಆತನ ವಿಭಾವ ಪರಾಯಗಳಾಗಿವೆ. ಬಾಲ್ಯಾವಸ್ಥೆಯಲ್ಲಿರುವಾಗ ಆತನು ಬಾಲಕನೆನಿಸುತ್ತಾನೆ. ಆ ಬಾಲ್ಯಾವಸ್ಥೆಯನ್ನು ಬಿಟ್ಟು ಯಾವಾಗ ಆತನು ಯುವಾವಸ್ಥೆಯನ್ನು ಧರಿಸುತ್ತಾನೋ ಆಗ ಯುವಕನೆನಿಸುತ್ತಾನೆ. ಇನ್ನು ಯುವಾವಸ್ಥೆಯನ್ನು ಯಾವಾಗ ಬಿಟ್ಟು ವೃದ್ಧಾವಸ್ಥೆಯನ್ನು ಧರಿಸುವನೋ ಆ ಕಾಲಕ್ಕೆ ಅವನು ವೃದ್ದನೆನಿಸುತ್ತಾನೆ. ಈ ಮೂರು ಅವಸ್ಥೆಗಳಲ್ಲಿರುವ ಭೇದಗಳು ಪರ್ಯಾಯದ ಭೇದಗಳೇ ಆಗಿವೆ. ಆದರೆ ಈ ಮೂರೂ ಅವಸ್ಥೆಗಳಲ್ಲಿ ಆತ್ಮದ್ರವ್ಯದಲ್ಲಿ ಭೇದವು ಉಂಟಾಗುವುದಿಲ್ಲ. ಆತನ ನಿಜ ಪರಿವರ್ತನೆಯು ಇಲ್ಲ. ಆತ್ಮನು ಈ ಮೂರೂ ಅವಸ್ಥೆಗಳನ್ನು ತಿಳಿಯುತ್ತಾನೆ. ಅಲ್ಲದೆ ಅವನಿಗೇ ಈ ಮೂರೂ ಅವಸ್ಥೆಗಳ ಸ್ಥತಿಯೂ ಇರುತ್ತದೆ. ಆದ್ದರಿಂದ ಮೂರೂ ಅವಸ್ಥೆಗಳಲ್ಲಿ ಒಂದೇ ಆತ್ಮನು ಇದ್ದ ಮೇಲೆಯೇ ಹೀಗಿರುವ ಸಂಭವವಿದೆ. ಆತ್ಮನು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದರೆ ಹೀಗೆ ಅನುಭವವಾಗುವುದು ಎಂದೂ ಸಾಧ್ಯವಿದ್ದಿಲ್ಲ. ಅಥವಾ ಪ್ಲಾನ್ ಕ್ಷಣಿಕ್ ನುಂ, ಜೇ ಜಾಣೀ ವದ್ನಾರ್ | ವದ್ನಾರೋ ತೇ ಕ್ಷಣಿಕ್ ನಹೀ, ಕರ್ ಅನುಭವ್ ನಿರ್ಧಾರ್ 169lI ಹಾಗೆಯೇ ಒಂದು ಪದಾರ್ಥವು ಕ್ಷಣಿಕವಿದೆಯೆಂದು ಯಾರು ತಿಳಿಯುತ್ತಾರೋ ಮತ್ತು ಕ್ಷಣಿಕತ್ವವನ್ನು ಹೇಳುತ್ತಾರೋ ಹಾಗೆ ಹೇಳುವವರು ಅಂದರೆ ತಿಳಿಯುವವರು ಕ್ಷಣಿಕರಾಗಿರುವುದಿಲ್ಲ. ಯಾಕೆಂದರೆ ಪ್ರಥಮ ಕ್ಷಣದಲ್ಲಿ ಯಾರಿಗೆ ಅನುಭವ ಆಗಿದೆಯೋ ಅವನಿಗೇನೇ ಎರಡನೇ ಕ್ಷಣದಲ್ಲಿ ಆ ಅನುಭವವವಾಯ್ಕೆಂದು ಹೇಳಲು ಸಾಧ್ಯ. ಆ ಎರಡನೆಯ ಕ್ಷಣದಲ್ಲಿ ಸ್ವಯಂ ತಾನು ಇರದಿದ್ದರೆ ಎಲ್ಲಿಂದ ಹೇಳುತ್ತಾನೆ ? ಆದ್ದರಿಂದ ಈ ಅನುಭವದಿಂದಲೂ ಆತ್ಮನ ಅಕ್ಷಣಿಕತ್ವವನ್ನು ನಿಶ್ಚಯಿಸು. ಕ್ಯಾರೇ ಕೋಈ ವಸ್ತುನೋ, ಕೇವಲ್ ಹೋಮ್ ನ ನಾಶ್ | ಚೇತನ್ ಪಾಮೇ ನಾಶ್ ತೋ, ಕೇಮಾಂ ಭಳೇ ತಪಾಸ್ Il7oII ಯಾವ ವಸ್ತುವೂ ಯಾವ ಕಾಲದಲ್ಲಿಯೂ ಸಂಪೂರ್ಣ ನಾಶ ಹೊಂದುವುದಿಲ್ಲ. ಕೇವಲ ರೂಪಾಂತರವನ್ನು ಹೊಂದುತ್ತದೆ. ಆದ್ದರಿಂದ ಚೇತನವೂ ಸಹ ಸಂಪೂರ್ಣ ನಾಶವಾಗುವುದಿಲ್ಲ ಮತ್ತು ಅವಸ್ಥಾಂತರ ರೂಪವಾದ ನಾಶವನ್ನು ಹೊಂದುತ್ತಿದ್ದರೆ ಅದು ಯಾವುದರಲ್ಲಿ ಕೂಡಿಕೊಂಡು ಹೋಗುತ್ತದೆ ? ಸಂದೇಹ : ಶಿಷ್ಯನು ಕೇಳಿದ್ದು : ಕರ್ತಾ ಜೀವ್ ನ ಕರ್ಮನೋ, ಕರ್ಮ್ ಜ ಕರ್ತಾ ಕರ್ಮ್! ಅಥವಾ ಸಹಸ್ ಸ್ವಭಾವ್ ಕಾಂ, ಕರ್ಮ್ ಜೀವ್ನೋ ಧರ್ಮ್ 17 111 ಜೀವ ಕರ್ಮದ ಕರ್ತೃವಲ್ಲ, ಕರ್ಮವೇ ಕರ್ಮದ ಕರ್ತೃವಾಗಿದೆ ಅಥವಾ ಕರ್ಮವು ಅನಾಯಾಸವಾಗಿ (ಪ್ರಯತ್ನವಿಲ್ಲದೆ) ಆಗುತ್ತಿರುತ್ತದೆ. ಹೀಗಲ್ಲ. ಜೀವವೇ ಕರ್ಮದ ಕರ್ತೃವೆಂದು ಹೇಳುವುದಾದರೆ ಆದೂ ಜೀವನ ಧರ್ಮವೇ ಆಗುವುದು. ಅರ್ಥಾತ್ ಧರ್ಮವಾದ್ದರಿಂದ ಅದು (ಕರ್ಮ) ಎಂದಿಗೂ ನಿವೃತ್ತಿಯಾಗಲಾರದು. 0 forHTROJINA-BHARATI Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy