SearchBrowseAboutContactDonate
Page Preview
Page 195
Loading...
Download File
Download File
Page Text
________________ (७) सप्तभाषी आत्मसिद्धि 153 SAPTABHASHI ATMASIDDHI ಸದ್ಗುರು ಹೇಳಿದ್ದು: ದೇಹ್ ಮಾತ್ ಸಂಯೋಗ್ ಛೇ, ವಳೀ ಜಡ್‌ರೂಪೀ ದೃಶ್ಯ | ಚೇತನ್ ನಾಂ ಉತ್ಪತ್ತಿ ಲಮ್, ಕೋನಾ ಅನುಭವ್ ವಲ್ಡ್? 162|| ದೇಹವು ಪರಮಾಣುಗಳ ಸಂಯೋಗ ಮಾತ್ರವಾಗಿದೆ ಅಥವಾ ಸಂಯೋಗದಿಂದ ಆತನ ಸಂಬಂಧದಲ್ಲಿದೆ. ಮತ್ತು ದೇಹವು ಜಡವಾಗಿದೆ. ರೂಪುಳ್ಳದ್ದಾಗಿದೆ ಮತ್ತು ದೃಶ್ಯ ಅಂದರೆ ಬೇರೆಯವರಿಗೆ ಕಾಣುವಂತಹದಾಗಿದೆ. ಅಂದರೆ ಅದು ತನ್ನನ್ನು ತಾನು ತಿಳಿದುಕೊಳ್ಳದಿರುವುದರಿಂದ ಚೇತನದ ಉತ್ಪತ್ತಿ ಹಾಗೂ ನಾಶವನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ ?ಈ ದೇಹದ ಒಂದೊಂದು ಪರಮಾಣುವನ್ನು ನಿರೀಕ್ಷಿಸಿದರೂ ಅದು ಜಡವಾಗಿದೆ ಎಂದು ಕಂಡು ಬರುತ್ತದೆ. ಆದ್ದರಿಂದ ಆ ದೇಹದಿಂದ ಚೇತನದ ಉತ್ಪತ್ತಿಯಾಗಲಾರದು ಮತ್ತು ಯಾವುದರಿಂದ ಚೇತನದ ಉತ್ಪತ್ತಿಯಾಗಲಾರದೋ ಆ ದೇಹದಲ್ಲಿ ಚೇತನದ ನಾಶವೂ ಆಗಲಾರದು. ಅಲ್ಲದೆ ಆ ದೇಹವು ರೂಪೀ ಅಂದರೆ ಸ್ಫೂಲಾದಿ ಪರಿಣಾಮವುಳ್ಳದ್ದು; ಮತ್ತು ಚೇತನವು ದ್ರಷ್ಟಾ ಆಗಿದೆ. ಆದ್ದರಿಂದ ದೇಹದ ಸಂಯೋಗದಿಂದ ಚೇತನದ ಉತ್ಪತ್ತಿಯು ಹೇಗಾದೀತು ? ಮತ್ತು ಅದರಲ್ಲಿ ಚೇತನದಲಯ(ನಾಶವಾದರೂ ಹೇಗಾದೀತು ?ದೇಹದಲ್ಲಿಯೇ ಚೇತನದ ಉತ್ಪತ್ತಿಯು ಆಗುತ್ತದೆ ಮತ್ತು ಅದರಲ್ಲಿಯೇ ಚೇತನದಲಯ(ನಾಶ)ವೂ ಆಗುತ್ತದೆ. ಈ ವಿಷಯವು ಯಾರ ಅನುಭವದ ಅಧೀನದಲ್ಲಿದೆ?ಅಂದರೆ ಈ ಸಂಗತಿಯನ್ನು ಯಾರು ತಿಳಿದರು ? ಯಾಕೆಂದರೆ ತಿಳಿದುಕೊಳ್ಳುವ ಶಕ್ತಿಯುಳ್ಳ ಚೇತನದ ಉತ್ಪತ್ತಿಯು ದೇಹಕ್ಕಿಂತ ಮೊದಲು ಇಲ್ಲವೇ ಇಲ್ಲ ಮತ್ತು ನಾಶವಂತೂ ಅದಕ್ಕಿಂತ ಮೊದಲೇ ಆಗುತ್ತದೆ. ಅಂದಮೇಲೆ ಈ ಅನುಭವವು ಯಾರಿಗೆ ಆಯಿತು ? ಜೇನಾ ಅನುಭವ್ ವಶ್ಯ ಏ, ಉತ್ಪನ್ನ ಲಯ್ನುಂ ಜ್ಞಾನ್ || , ತೇ ತೇಥಿ ಜುದಾ ವಿನಾ, ಥಾಯ್ ನ ಕೇಮೇ ಭಾನ್ I63|| ದೇಹದ ಉತತಿ ಮತ್ತು ನಾಶದ ಜ್ಞಾನವು ಯಾವುದರ ಅನುಭವದಲ್ಲಿ ನಿಲ್ಲುತ್ತದೆಯೋ ಅದು ಈ ದೇಹದಿಂದ ಭಿನ್ನವಾಗಿರದಿದ್ದಲ್ಲಿ ಯಾವ ವಿಧದಿಂದಲೂ ದೇಹದ ಉತ್ಪತ್ತಿ ಮತ್ತು ನಾಶದ ಜ್ಞಾನವು ಆಗುವುದಿಲ್ಲ. ಯಾವುದು ಯಾವುದರ ಉತ್ಪತ್ತಿ ಮತ್ತು ನಾಶವನ್ನು ತಿಳಿಯುತ್ತದೆಯೋ ಅದು ಅದರಿಂದ ಭಿನ್ನವೂ ಆಗಿರುತ್ತದೆ. ಅಲ್ಲದೆ ತಿರುಗಿ ಅದು ಸ್ವಂತ ಉತ್ಪತ್ತಿ ಹಾಗೂ ನಾಶವೆಂದು ನಿಶ್ಚಯವಾಗಲಿಲ್ಲ. ಆದರೆ ಅದನ್ನು ತಿಳಿಯುವಂಥದೆಂದು ಮಾತ್ರ ನಿಶ್ಚಯವಾಯಿತು. ಅಂದ ಮೇಲೆ ಪುನಃ ಅವೆರಡೂ ಒಂದೇ ಹೇಗೆ ಆಗುತ್ತವೆ ? ಜೇ ಸಂಯೋಗೋ ದೇಖಿಯೇ, ತೇ ತೇ ಅನುಭವ್ ದೃಶ್ಯ! ಊಪ್ ಜೇ ನಹಿ ಸಂಯೋಗ್ ಥೀ, ಆತ್ಮಾ ನಿತ್ ಪ್ರತ್ಯಕ್ಷ 164II ಯಾವ ಯಾವ ಸಂಯೋಗಗಳನ್ನು ನಾವು ಕಾಣುತ್ತೇವೆಯೋ ಅವು ಅನುಭವಸ್ವರೂಪನಾದ ಆತ್ಮನ ದೃಶ್ಯಗಳಾಗಿವೆ. ಅಂದರೆ ಆತ್ಮನು ಅವುಗಳನ್ನು ತಿಳಿದುಕೊಳ್ಳುತ್ತಾನೆ. ಈ ಸಂಯೋಗಗಳ ಸ್ವರೂಪವನ್ನು ವಿಚಾರಿಸಿದರೆ ಅವುಗಳಲ್ಲಿ ಆತನನ್ನೂ ಉತ್ಪನ್ನ ಮಾಡುವ ಒಂದು ಸಂಯೋಗವು ಕಂಡು ಬರುವುದಿಲ್ಲ. ಆದ್ದರಿಂದ ಆತ್ಮನು ಸಂಯೋಗದಿಂದ ಹುಟ್ಟಿದವನಲ್ಲ. ಅರ್ಥಾತ್ ಆತ್ಮನು ಅಸಂಯೋಗಿಯಾಗಿದ್ದಾನೆ. ಸ್ವಾಭಾವಿಕ ಪದಾರ್ಥವಾಗಿದ್ದಾನೆ. ಆದ್ದರಿಂದ ಅವನು ಪ್ರತ್ಯಕ್ಷ ನಿತ್ಯವೆಂದು ತಿಳಿದುಬರುತ್ತದೆ. ಜಡ್ ಥೀ ಚೇತನ್ ಊಪಜೇ, ಚೇತನ್‌ ಥೀ ಜಡ್ ಥಾಯ್ | ಏವೋ ಅನುಭವ್ ಕೋಈನೇ, ಕ್ಯಾರೇ ಕದೀ ನ ಥಾಯ್ 165I ಜಡದಿಂದ ಚೇತನವು ಉತ್ಪತ್ತಿಯಾಗುತ್ತದೆ ಮತ್ತು ಚೇತನದಿಂದ ಜಡವು ಉತ್ಪನ್ನವಾಗುತ್ತದೆ ಹೀಗೆ ಯಾರಿಗೂ ಯಾವ ಕಾಲದಲ್ಲೂ ಅನುಭವವಾಗುವುದಿಲ್ಲ. ಕೋಈ ಸಂಯೋಗೋಥೀ ನಹೀ, ಜೇನೀ ಉತ್ಸತಿ ಥಾಯ್ | ನಾಶ್ ನ ತೇನೋ ಕೋಮಾಂ , ತೇಥೀ ನಿತ್ ಸದಾಯ್ 166ll ಯಾವುದರ ಉತ್ಪತ್ತಿಯು ಯಾವಸಂಯೋಗದಿಂದಲೂ ಆಗುವುದಿಲ್ಲವೋ ಅದರಲಯ(ನಾಶ)ವೂ ಯಾವುದರಲ್ಲಿಯೂ ಆಗುವುದಿಲ್ಲ. ಆದ್ದರಿಂದ ಆತ್ಮನು ತ್ರಿಕಾಲ “ ನಿತ್ಯ' ನಾಗಿದ್ದಾನೆ. • for O JINA-BHARATI • Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy