SearchBrowseAboutContactDonate
Page Preview
Page 186
Loading...
Download File
Download File
Page Text
________________ (७) सप्तभाषी आत्मसिद्धि 144 SAPTABHASHI ATMASIDDHI ತಾಗ್ ವಿರಾಗ್ ನ ಚಿತಮಾಂ, ಥಾಯ್ ನ ತೇನೇ ಜ್ಞಾನ್ | ಅಟ್ಕೇ ತ್ಯಾಗ್ ವಿರಾಗಮಾಂ, ತೋ ಭೂಲೇ ನಿಜ್ಭಾನ್ ||7|| ಯಾರ ಚಿತ್ರದಲ್ಲಿ ತ್ಯಾಗವೈರಾಗ್ಯ ಮೊದಲಾದ ಸಾಧನಗಳು ಉತ್ಪನ್ನವಾಗಿರುವುದಿಲ್ಲವೋ ಅವನಿಗೆ ಜ್ಞಾನವೂ ಆಗುವುದಿಲ್ಲ. ಇನ್ನು ಯಾವನು ತ್ಯಾಗ ವೈರಾಗ್ಯಗಳಲ್ಲಿಯೇ ತೃಪ್ತಿಯನ್ನು ಹೊಂದಿ ಆತ್ಮಜ್ಞಾನದ ಆಕಾಂಕ್ಷೆಯನ್ನು ಮಾಡುವುದಿಲ್ಲವೋ ಅವನು ತನ್ನನ್ನು ತಾನೇ ಮರೆತು ಬಿಡುತ್ತಾನೆ. ಅಜ್ಞಾನದಿಂದ ಕೂಡಿದ ಈ ತ್ಯಾಗ-ವೈರಾಗ್ಯಗಳಿಂದ ಪೂಜೆ-ಸತ್ಕಾರಗಳು ಲಭಿಸಲು, ಅವುಗಳಲ್ಲಿಯೇ ಅವನು ಮನಸೋತು ಆತ್ಮಸಂಪಾದನೆಯನ್ನೇ (ಆತ್ಮಜ್ಞಾನಪ್ರಾಪ್ತಿಯನ್ನು) ಮರೆತುಬಿಡುತ್ತಾನೆ. ಬ್ಯಾಂ ಹ್ಯಾಂ ಜೆ ಜೇ ಯೋಗ್ಯ ಛೇ, ತಹಾಂ ಸಮ್ಜವುಂ ತೇಹ್ | ತ್ಯಾಂ ತ್ಯಾಂ ತೇ ತೇ ಆಚರೇ, ಆತ್ಮಾರ್ಥೀ ಜನ್ ಏಜ್ 118|| ಎಲ್ಲೆಲ್ಲಿ ಯಾವುದು ಯೋಗ್ಯವಾಗಿದೆಯೋ ಅಲ್ಲಲ್ಲಿ ಅದನ್ನು ತಿಳಿದುಕೊಂಡು ಆಗಾಗ ಅದನ್ನು ಆಚರಣೆಯಲ್ಲಿ ತರುತ್ತ ಹೋಗಬೇಕು. ಇದು ಆತ್ಮಾರ್ಥಿ ಪುರುಷನ ಲಕ್ಷಣ. ಸೇವೇ ಸದ್ಗುರು ಚರ್ಣನೇ, ತ್ಯಾಗೀ ದಈ ನಿಜ್ ಪಕ್ಷ | ಪಾಮೇ ತೇ ಪರಮಾರ್ಥನೇ, ನಿಜ್ ಪದ್ನೋ ಲೇ ಲಕ್ಷ 119|| ತನ್ನ ಪಕ್ಷವನ್ನು ಬಿಟ್ಟು ಯಾವನು ಸದ್ಗುರುವಿನ ಚರಣಸೇವೆಯನ್ನು ಮಾಡುವನೋ ಅವನು ಪರಮಾರ್ಥವನ್ನು ಹೊಂದುವನು. ಅವನಿಗೆ ಆತ್ಮ ಸ್ವರೂಪದ ಲಕ್ಷವು ಆಗುವುದು. ಆತ್ಮಜ್ಞಾನ್ ಸಮ್ ದರ್ಶಿತಾ, ವಿಚರೇ ಉದಯ್ ಪ್ರಯೋಗ್ | ಅಪೂರ್ವವಾಣೀ ಪರಮ್ ಶ್ರುತ್‌, ಸದ್ಗುರು ಲಕ್ಷಣ್ ಯೋಗ್ಯ 11 OIL ಉತ್ತಮ ಸದ್ಗುರುವು ಯಾವಾಗಲೂ ಆತ್ಮಜ್ಞಾನದಲ್ಲಿ ಸ್ಥಿತನಾಗಿರುತ್ತಾನೆ. ಅವನು ಪರಭಾವದ ಇಚ್ಛೆ ಇಲ್ಲದವನಾಗಿರುತ್ತಾನೆ. ಹಾಗೆಯೇ ಅವನಿಗೆ ಶತ್ರು, ಮಿತ್ರ, ಹರ್ಷ, ಶೋಕ, ನಮಸ್ಕಾರ, ತಿರಸ್ಕಾರ ಮೊದಲಾದ ವಿಷಯಗಳಲ್ಲಿ ಸಮತೆಯು ಇರುತ್ತದೆ. ಕೇವಲ ಪೂರ್ವ ಕರ್ಮದ ಉದಯವೇ ಕಾರಣವಾಗಿ ಅವನ ವಿಚರಣ ಮೊದಲಾದ ಕ್ರಿಯೆಗಳು ನಡೆದಿರುತ್ತವೆ. ಅವನವಾಣಿಯು ಅಜ್ಞಾನಿಗಳ ವಾಣಿಯಿಂದ ಪ್ರತ್ಯಕ್ಷ ಭಿನ್ನವಾಗಿರುತ್ತದೆ. ಅವನು ಷಡ್ದರ್ಶನಗಳ ತಾತ್ಪರ್ಯವನ್ನು ತಿಳಿದಿರುತ್ತಾನೆ. ಇಂಥವನೇ ಸದ್ಗುರುವು, ಪ್ರತ್ಯಕ್ ಸದ್ಗುರು ಸಮ್ ನಹೀ, ಪರೋಕ್ಷ ಜಿನ್ ಉಪ್ಕಾರ್ | ಏವೋ ಲಕ್ಷ ಥಯಾ ವಿನಾ, ಉಗೇ ನ ಆತ್ಮ ವಿಚಾರ್ 111 111 ಎಲ್ಲಿಯವರೆಗೆ ಜೀವನಿಗೆ ಪೂರ್ವಕಾಲದಲ್ಲಿದ್ದ ಯಾವುದೇ ತೀರ್ಥಂಕರರ ಮಾತಿನ ಮೇಲೆಯೇ ಲಕ್ಷ ಇರುವುದೋ ಮತ್ತು ಅವರ ಉಪಕಾರವನ್ನೇ ಸ್ಮರಿಸುತ್ತಲಿರುವುದೋ, ಮತ್ತು “ ಯಾವುದರಿಂದ ಪ್ರತ್ಯಕ್ಷ ಆತ್ಮಭ್ರಾಂತಿಯ ಸಮಾಧಾನವು ಆಗುತ್ತಿರುವುದೋ ಅಂಥ ಸದ್ಗುರುವಿನ ಸಮಾಗಮವು ಲಭಿಸಿದಲ್ಲಿ ಪರೋಕ್ಷ ಜಿನಭಗವಾನರ ವಚನಗಳ ಅಪೇಕ್ಷೆಯಿಂದ ಮಹಾನ್ ಉಪಕಾರವಾಗುತ್ತದೆ. ಈ ಮಾತನ್ನು ತಿಳಿಯದೆ ಇರುವವರೆಗೆ ಜೀವನಿಗೆ ಆತ್ಮವಿಚಾರವು ಉತ್ಪನ್ನವಾಗುವುದಿಲ್ಲ. ಸದ್ದುರೂನಾ ಉಪದೇಶ್ ವಣ್, ಸಮ್ಜಾಯ್ ನ ಜಿನ್ರೂಪ್ | ಸಮ್ಚ್ಯಾ ವಣ ಉಪ್ಕಾರ್ ಶೋ?, ಸಮ್ಜೈ ಜಿನ್‌'ಸ್ವರೂಪ್ 111 211 ಸದ್ಗುರುವಿನ ಉಪದೇಶವಿಲ್ಲದೆ ಜಿನನ ಸ್ವರೂಪವು ತಿಳಿಯುವುದಿಲ್ಲ. ಆ ಸ್ವರೂಪವು ತಿಳಿಯದ ಹೊರತು ಉಪಕಾರವೇನು? ಯಾವಾಗ ಜೀವವು ಸದ್ಗುರುವಿನ ಉಪದೇಶದಿಂದ ಜಿನನ ಸ್ವರೂಪವನ್ನು ತಿಳಿಯುವುದೋ ಆಗ ಆ ಆತ್ಮವು ಜಿನನ ಸ್ವರೂಪ(ಅವಸ್ಥೆ)ವನ್ನು ಹೊಂದುವುದು. 0 GrHIROOJINA-BHARATI Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy