SearchBrowseAboutContactDonate
Page Preview
Page 46
Loading...
Download File
Download File
Page Text
________________ 38 ಅಂತಃಕರಣದ ಸ್ವರೂಪ ಅದರ ಪರಿಣಾಮ ಸ್ವರೂಪವಾಗಿ ಉತ್ಪನ್ನವಾಗುವ ಧ್ಯಾನದಲ್ಲಿ ಅಹಂಕಾರವು ಇರುವುದಿಲ್ಲ ಅಲ್ಲವೇ? ದಾದಾಶ್ರೀ: ಹೌದು, ಶುಕ್ತಧ್ಯಾನದ ಪರಿಣಾಮವು ಯಾವಾಗ ಬರುವುದೋ, ಆಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಪ್ರಶ್ನೆಕರ್ತ: ಧೈಯವು ನಿಶ್ಚಯವಾದಾಗ, ಅದರಲ್ಲಿ ಅಹಂಕಾರದ ಪಾತ್ರವೇನಾದರು ಇದೆಯೇ? ದಾದಾಶ್ರೀಧೈಯವನ್ನು ಅಹಂಕಾರವೇ ನಿಶ್ಚಯ ಮಾಡುತ್ತದೆ. ಮೋಕ್ಷದ ಧೈಯ ಮತ್ತು ಧ್ಯಾತ ನಿರಹಂಕಾರಿಯಾದಾಗ, ಶುಕ್ತಧ್ಯಾನವು ಉಂಟಾಗುವುದು. ಪ್ರಶ್ನಕರ್ತ: ಧರ್ಮಧ್ಯಾನದ ಧೈಯದಲ್ಲಿ ಅಹಂಕಾರದ ಸೂಕ್ಷ್ಮ ಹಾಜರಿ ಇದೆಯೇ? ದಾದಾಶ್ರೀ: ಹೌದು, ಅಹಂಕಾರದ ಉಪಸ್ಥಿತಿ ಇಲ್ಲದೆ ಧರ್ಮಧ್ಯಾನವು ಉಂಟಾಗುವುದೇ ಇಲ್ಲ. ಪ್ರಶ್ನಕರ್ತ: ಆರ್ತ, ರೌದ್ರ ಹಾಗೂ ಧರ್ಮಧ್ಯಾನ, ಇವುಗಳನ್ನು ಪುದ್ಗಲ್ ಪರಿಣಾಮವೆಂದು ಹೇಳಬಹುದೆ? ದಾದಾಶ್ರೀ: ಹೌದು, ಅವುಗಳನ್ನು ಪುದ್ಗಲ್ ಪರಿಣಾಮವೆಂದು ಕರೆಯಲಾಗುತ್ತದೆ ಹಾಗೂ ಶುಕ್ತಧ್ಯಾನವು ಸ್ವಾಭಾವಿಕ ಪರಿಣಾಮವಾಗಿದೆ. ಪ್ರಶ್ನಕರ್ತ: ಹಾಗಾದರೆ, ಶುಕ್ತಧ್ಯಾನವು, ಆತ್ಮದ ಪರಿಣಾಮವಾಗಿದೆ ಅಲ್ಲವೇ? ದಾದಾಶ್ರೀ: ಹೌದು. ಪ್ರಶ್ಯಕರ್ತ: ಶುಕ್ತಧ್ಯಾನವಾಗಿದ್ದರೆ, ಅದರಿಂದ ಯಾವ ಕರ್ಮವಾಗುವುದೋ, ಅದು ಬಹಳ ಒಳ್ಳೆಯದ್ದಾಗಿರುತ್ತದೆ ಹಾಗೂ ಧರ್ಮಧ್ಯಾನವಾಗಿದ್ದರೆ, ಆಗ ಅದು ಸ್ವಲ್ಪ ಕಡಿಮೆ ಗುಣಮಟ್ಟದ ಕರ್ಮವಾಗಿರುತ್ತದೆ. ಇದು ಸರಿಯೇ? ದಾದಾಶ್ರೀ: ಶುಕ್ತಧ್ಯಾನವಾಗಿದ್ದರೆ, ಆಗ ಕ್ರಮ (ಕ್ರಮಿಕ್) ಮಾರ್ಗದಲ್ಲಿ ಕರ್ಮವು ಇರುವುದೇ ಇಲ್ಲ. ಇದು ಅಕ್ರಮ (ಅಕ್ರಮ್) ಮಾರ್ಗವಾಗಿರುವುದರಿಂದ, ಇಲ್ಲಿ ಕರ್ಮವು ಇರುತ್ತದೆ. ಆದರೆ ಇದರಲ್ಲಿ ತಾನು ಕರ್ತನಾಗದೆ, ಕೇವಲ ಕರ್ಮವನ್ನು ಬರಿದಾಗಿಸುವ ಭಾವದಿಂದ ನಡೆಯುವುದು. ಇಲ್ಲಿ (ಅಕ್ರಮ್ ಮಾರ್ಗದಲ್ಲಿ) ಕರ್ಮವನ್ನು ಮುಗಿಸದೆಯೇ 'ಜ್ಞಾನವು' ಪ್ರಾಪ್ತಿಯಾಗಿದೆ ಅಲ್ಲವೇ!
SR No.034302
Book TitleAntahskaran Ka Swroop Kannada
Original Sutra AuthorN/A
AuthorDada Bhagwan
PublisherDada Bhagwan Aradhana Trust
Publication Year
Total Pages54
LanguageKannada
ClassificationBook_Other
File Size3 MB
Copyright © Jain Education International. All rights reserved. | Privacy Policy