SearchBrowseAboutContactDonate
Page Preview
Page 22
Loading...
Download File
Download File
Page Text
________________ - 14 ಅಂತಃಕರಣದ ಸ್ವರೂಪ ಪ್ರಶ್ಯಕರ್ತ: ನಂತರ ಈ ಮನಸ್ಸು ಯಾವುದರೊಂದಿಗೆ ವಿಲೀನವಾಗುತ್ತದೆ? ಯಾಕೆಂದರೆ ಮನಸ್ಸಿನಿಂದಾಗಿ ಈ ಜಗತ್ತಿದೆ ಅಲ್ಲವೇ? ದಾದಾಶ್ರೀ: ಮನಸ್ಸು ಹಾಗೆಯೇ ವಿಲೀನವಾಗಿ ಹೋಗುತ್ತದೆ (dissolve), ಅದನ್ನು ಮತ್ತೆ ಹುಟ್ಟುಹಾಕದಂತೆ ಇರಬೇಕಾಗುತ್ತದೆ. ಮನಸ್ಸು ನಿರಂತರ Discharge ಆಗುತ್ತಲೇ ಇರುತ್ತದೆ. ಆದರೆ, ನೀವು ಮತ್ತೆ Charge ಮಾಡುತ್ತಲೇ ಇರುವುದಾಗಿದೆ ಅಲ್ಲವೇ? ಅದಕ್ಕೆ, ನಾವು ಏನು ಮಾಡುತ್ತೇವೆ? 'Charge' ಅನ್ನು ನಿಲ್ಲಿಸಿಬಿಡುತ್ತೇವೆ. ನಂತರ ಕೇವಲ Discharge ಆಗುತಲಿರುತ್ತದೆ. ಈಗಿರುವ ನಿಮ್ಮ ಮನಸ್ಸು Charge ಮಾಡಿಕೊಳ್ಳುತ್ತಲೂ ಇದೆ ಹಾಗು Discharge ಆಗುತ್ತಲೂ ಇದೆ. ಪ್ರಶ್ಯಕರ್ತ: ಹೀಗಿರುವಾಗ, ಜನ್ಮ-ಮರಣದ ಚಕ್ರದಿಂದ ಮುಕ್ತರಾಗಲು ಹೇಗೆ ಸಾಧ್ಯ? ದಾದಾಶ್ರೀ: ಮನಸ್ಸು ಸಂಪೂರ್ಣ Discharge ಆದ ನಂತರ ಮತ್ತೆ ಹೊಸದಾಗಿ Charge ಮಾಡದೇ ಇದ್ದಾಗ ಜನ್ಮ-ಮರಣದ ಚಕ್ರವು ನಿಂತು ಹೋಗುತ್ತದೆ. ಚಿತ್ತದ ಸ್ವರೂಪ ಮನಸ್ಸಿನ ಬಗ್ಗೆ ಸ್ವಲ್ಪ ಮಟ್ಟಿಗೆ ಅರ್ಥವಾಯಿತಲ್ಲವೇ? ಇನ್ನು ಈ ಚಿತ್ರ ಅಂದರೆ ಏನು? ಇದು ಹೇಗೆ ಉಂಟಾಗಿದೆ? ಪ್ರಶ್ಯಕರ್ತ: ಇದು ಮನಸ್ಸಿನ ವಿಭಾಗವೇ ಆಗಿದೆ. ಒಂದೇ ವಿಷಯದ ಬಗ್ಗೆ ಹೆಚ್ಚು ವಿಚಾರ ಮಾಡುವುದು ಹಾಗು ಚಿಂತನೆ ನಡೆಸುವುದನ್ನು, ಚಿತ್ತ ಎಂದು ಹೇಳಲಾಗುತ್ತದೆ ಅಲ್ಲವೇ? ದಾದಾಶ್ರೀ: ಅಲ್ಲ, ಅಲ್ಲ... ಚಿತ್ತ ಹಾಗು ಮನಸ್ಸಿಗೆ ಯಾವ ಕೊಂಡು-ತೆಗೆದುಕೊಳ್ಳುವ ವ್ಯವಹಾರವೇ ಇಲ್ಲ. ನಿಮ್ಮ ಮಾತು ಮತ್ತೊಂದು ದಿಕ್ಕಿಗೆ ಹೋಗುತ್ತಿದೆ. ಈ ಚಿತ್ರವು ಯಾವ ವಸ್ತುವಿನ ಸಂಯೋಜನೆಯಿಂದ ಉಂಟಾಗಿದೆ (composition)? ಜ್ಞಾನ-ದರ್ಶನದ ಸಂಯೋಜನೆಯಿಂದ ಚಿತ್ತವು ಉಂಟಾಗಿದೆ. ಜ್ಞಾನ ಹಾಗು ದರ್ಶನ ಎರಡು ಬೇರೆ ಬೇರೆಯಾಗಿದೆ. ಈ ಎರಡರ ಮಿಶ್ರಣವಾದಾಗ ಅಲ್ಲಿ ಅದನ್ನು ಚಿತ್ತ ಎಂದು ಕರೆಯಲಾಗುತ್ತದೆ. ಜ್ಞಾನ ಹಾಗು ದರ್ಶನದಲ್ಲಿನ ವ್ಯತ್ಯಾಸವೇನು? ನೀವು ಕಣ್ಣಿನಿಂದ ನೋಡುವುದನ್ನು ದರ್ಶನವೆಂದು ತಿಳಿಯುತಿರಲ್ಲವೇ? ಅದು ದರ್ಶನವಲ್ಲ. ದರ್ಶನವೆಂದು ಯಾವುದನ್ನು
SR No.034302
Book TitleAntahskaran Ka Swroop Kannada
Original Sutra AuthorN/A
AuthorDada Bhagwan
PublisherDada Bhagwan Aradhana Trust
Publication Year
Total Pages54
LanguageKannada
ClassificationBook_Other
File Size3 MB
Copyright © Jain Education International. All rights reserved. | Privacy Policy