SearchBrowseAboutContactDonate
Page Preview
Page 14
Loading...
Download File
Download File
Page Text
________________ ಅಂತಃಕರಣದ ಸ್ವರೂಪ ಜನ್ಮದಲ್ಲಿ ಲಂಚವನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಅಂದರೆ, ಇಲ್ಲಿ ಯಾರು ಲಂಚವನ್ನು ತೆಗೆದುಕೊಂಡಿದ್ದಾರೋ, ಅವರು ಊರ್ಧ್ವಗತಿಯಲ್ಲಿ ಸಾಗುತ್ತಾರೆ ಹಾಗೂ ಯಾರು ಈಗ ಲಂಚ ತೆಗೆದುಕೊಳ್ಳದೆ ಇದ್ದಾರೋ, ಅವರು ಅಧೋಗತಿಗೆ ಹೋಗುತ್ತಾರೆ. ಇದೆಲ್ಲವೂ ಅವರವರ ಅಭಿಪ್ರಾಯದ ಅನುಸಾರವಾಗಿದೆ. ಮನಸ್ಸಿನ ತಂದೆ,ತಾಯಿ ಯಾರು? ಪ್ರಶ್ಯಕರ್ತ: ಅಭಿಪ್ರಾಯವೇ ಎಲ್ಲದರ ಮೂಲವಾಗಿದೆ ಅಲ್ಲವೇ? ದಾದಾಶ್ರೀ: ಹೌದು! ಅಭಿಪ್ರಾಯಗಳಿಂದಾಗಿಯೇ ಈ ಜಗತ್ತು ಎದ್ದು ನಿಂತಿರುವುದು. ಅಭಿಪ್ರಾಯದಿಂದಾಗಿ, ಅವನು ಕಳ್ಳ, ಇವನು ನೀಚ, ಅವನು ದುಷ್ಟ, ಹೀಗೆಲ್ಲಾ ಹೇಳುತ್ತಾರೆ. ಮನಸ್ಸು ಕೂಡ ಅಭಿಪ್ರಾಯದಿಂದಾಗಿದೆ. ಮನಸ್ಸಿನ ತಂದೆ (Father) ಅಭಿಪ್ರಾಯವಾಗಿದೆ. ಮನಸ್ಸಿನ ತಂದೆ ಹಾಗು ತಾಯಿಯ ಬಗ್ಗೆ ಯಾರೂ ತಿಳಿಸಿಲ್ಲ. ನಮಗೆ ಯಾವ ಅಭಿಪ್ರಾಯವೂ ಇಲ್ಲ. ಯಾರಾದರೂ ನಮ್ಮ ಕಿಸೆಯಿಂದ 200 ರೂಪಾಯಿಯನ್ನು ತೆಗೆದುಕೊಂಡು ಹೋಗುವುದನ್ನು ನಾವು ಗಮನಿಸಿದರೂ ಸಹ, ಮರುದಿನ ಆ ವ್ಯಕ್ತಿಯು ನಮ್ಮ ಎದುರಿಗೆ ಬಂದಾಗ, 'ಅವನು ಕಳ್ಳನೆಂದು' ನಮಗೆ ಭಾಸವಾಗುವುದಿಲ್ಲ. ನಾವು ಪೂರ್ವಗ್ರಹವನ್ನು ಇಟ್ಟುಕೊಳ್ಳುವುದಿಲ್ಲ. ಅವನನ್ನು 'ಕಳ್ಳನೆಂದು' ಹೇಳಿದರೆ ಭಗವಂತನ ಮೇಲೆ ಆರೋಪವನ್ನು ಹೊರೆಸಿದಂತಾಗುತ್ತದೆ. ಏಕೆಂದರೆ, ಅವನೊಳಗೂ ಭಗವಂತ ವಾಸವಾಗಿದ್ದಾನೆ. ಪ್ರಶ್ಯಕರ್ತ: ಅಭಿಪ್ರಾಯವು ಹೇಗೆ ಉಂಟಾಗುತ್ತದೆ? ದಾದಾಶ್ರೀ: ಅಭಿಪ್ರಾಯವು ನಮ್ಮ ತಪ್ಪು ಕಲ್ಪನೆಯಾಗಿದೆ (Wrong Belief), ಆ ವ್ಯಕ್ತಿಯು ಕಳ್ಳನೆಂಬ ವಿಚಾರವನ್ನು ಕೇಳುತ್ತಲೇ, ನಾವು ನಿಜವೆಂದು ನಂಬುತ್ತೇವೆ; ಅದರಂತೆಯೇ ನಮ್ಮಲ್ಲಿ ಅಭಿಪ್ರಾಯವು ಮೂಡಿಬಿಡುತ್ತದೆ. ಯಾರ ಬಗ್ಗೆಯೂ ಅಭಿಪ್ರಾಯವನ್ನು ಇಟ್ಟುಕೊಳ್ಳಬಾರದು. ಅವರು ಸಾಹುಕಾರರೇ ಆಗಿರಲಿ, ಒಳ್ಳೆಯ ವ್ಯಕ್ತಿಯೇ ಆಗಿದ್ದರೂ, ಅವರ ಬಗ್ಗೆ ಕೂಡಾ ಅಭಿಪ್ರಾಯವನ್ನು ಇಟ್ಟುಕೊಳ್ಳಲು ಹೋಗಬಾರದು. ಪ್ರಶ್ಯಕರ್ತ: ಮನಸ್ಸನ್ನು ಹೇಗೆ ನಿಯಂತ್ರಣದಲ್ಲಿ (Control) ಇಡುವುದು? ದಾದಾಶ್ರೀ: ಮನಸ್ಸನ್ನು Control ಮಾಡುವ ಅಗತ್ಯವೇ ಇಲ್ಲ. ಎಲ್ಲಾ ಜನರು ಏನು
SR No.034302
Book TitleAntahskaran Ka Swroop Kannada
Original Sutra AuthorN/A
AuthorDada Bhagwan
PublisherDada Bhagwan Aradhana Trust
Publication Year
Total Pages54
LanguageKannada
ClassificationBook_Other
File Size3 MB
Copyright © Jain Education International. All rights reserved. | Privacy Policy